Saturday 30 August 2014

hemavata sutta in kannada (the discussion between lord Buddha and yakkhas.)

.
9. ಹೇಮವತ ಸುತ್ತ
(ಬುದ್ಧರ ಮಹಿಮೆ)
1. ಸಾತಾಗಿರ ಯಕ್ಷ - ಇಂದು ಪೂಣರ್ಿಮೆಯ ಉಪೋಸಥವಾಗಿದೆ, ದಿವ್ಯವಾದ ರಾತ್ರಿಯು ಉಪಸ್ಥಿತವಾಗಿದೆ, ಪರಮಶ್ರೇಷ್ಠ ಖ್ಯಾತಿಯುಳ್ಳ ಶಾಸ್ತರನ್ನು ನಾವು ದಶರ್ಿಸೋಣ.
2. ಹೇಮವತ ಯಕ್ಷ - ಏನು, ಅವರ ಮನಸ್ಸು ಸದಾ ಏಕಾಗ್ರವಾಗಿರುವುದೇ? ಏನು, ಅವರು ಸರ್ವಜೀವಿಗಳ ಬಗ್ಗೆ ಸಮಾನ ಮನೋಭಾವನೆ ಉಳ್ಳವರಾಗಿದ್ದಾರೆಯೇ? ಅವರು ಪ್ರಿಯ ಅಥವಾ ಅಪ್ರಿಯ ವಿಷಯಗಳಲ್ಲಿ ತಮ್ಮ ಚಿತ್ತವನ್ನು ವಶಮಾಡಿಕೊಂಡಿರುವರೇ?
3. ಸಾತಾಗಿರ ಯಕ್ಷ - ಅವರ ಮನಸ್ಸು ಏಕಾಗ್ರತೆಯಿಂದ ಸದಾ ಇರುತ್ತದೆ. ಅವರು ಸರ್ವಜೀವಿಗಳ ಬಗ್ಗೆ ಸಮಾನ ಭಾವನೆಯಿಂದಿರುವರು ಮತ್ತು ಅವರು ಪ್ರಿಯ ಹಾಗು ಅಪ್ರಿಯ ವಿಷಯಗಳಲ್ಲಿ ತಮ್ಮ ಚಿತ್ತ (ಮನಸ್ಸು)ವನ್ನು ವಶಮಾಡಿಕೊಂಡಿರುವರು.
4. ಹೇಮವತ ಯಕ್ಷ - ಅವರು ಕಳ್ಳತನ ಮಾಡುವುದಿಲ್ಲವೇ? ಸರ್ವಜೀವಿಗಳ ಬಗ್ಗೆ ಅವರು ಸಂಯಮದಿಂದಿರುವರೇ? ಅವರು ಅಲಕ್ಷದ (ಎಚ್ಚರಿಕೆ ಇಲ್ಲದಿರುವುದು) ಬಗ್ಗೆ ದೂರವಿರುವರೆ? ಅವರು ಧ್ಯಾನದಿಂದ ಹೊರತಾಗಿ ಇರುತ್ತಾರೆಯೇ?
5. ಸಾತಾಗಿರ ಯಕ್ಷ - ಅವರು ಕಳ್ಳತನ ಮಾಡುವುದಿಲ್ಲ. ಅವರು ಸರ್ವಜೀವಿಗಳ ಬಗ್ಗೆ ಸಂಯಮದಿಂದಿರುವರು. ಅವರು ಅಲಕ್ಷದಿಂದ ದೂರವಾಗಿ ಜಾಗರೂಕತೆಯಿಂದಿರುವರು. ಅವರು ಧ್ಯಾನದಿಂದ ಹೊರತಾಗಿ ಇರುವುದಿಲ್ಲ.
6. ಹೇಮವತ ಯಕ್ಷ - ಅವರು ಸುಳ್ಳು ಹೇಳುವುದಿಲ್ಲವೆ? ಅವರು ಕಟುವಚನ ಆಡುವುದಿಲ್ಲವೆ? ಅವರು ಚಾಡಿ ಹೇಳುವುದಿಲ್ಲವೆ? ಅವರು ಅತಿಯಾಗಿ ಮಾತನಾಡುವ ವಾಚಾಳಿಯೇ?
7. ಸಾತಾಗಿರ ಯಕ್ಷ - ಅವರು ಸುಳ್ಳು ಹೇಳುವುದಿಲ್ಲ. ಅವರು ಕಟುನುಡಿ ಆಡುವುದಿಲ್ಲ. ಅವರು ಚಾಡಿ ಹೇಳುವುದಿಲ್ಲ ಹಾಗು ಅವರು ಅತಿಯಾಗಿ ಮಾತನಾಡುವ ವಾಚಾಳಿಯು ಅಲ್ಲ.
8. ಹೇಮವತ ಯಕ್ಷ - ಅವರು ಕಾಮಭೋಗದಲ್ಲಿ ಆಸಕ್ತಿ ತಾಳುವುದಿಲ್ಲವೆ? ಅವರ ಚಿತ್ತವು ನಿರ್ಮಲವಾಗಿದೆಯೇ? ಅವರು ಮೋಹವನ್ನು ತ್ಯಜಿಸಿರುವರೇ? ಅವರು ಧಮ್ಮಗಳಲ್ಲಿ ಚಕ್ಷುವಂತರೆ?
9. ಸಾತಾಗಿರ ಯಕ್ಷ - ಅವರು ಕಾಮಭೋಗಗಳಲ್ಲಿ ಆಸಕ್ತಿ ತಾಳುವುದಿಲ್ಲ. ಅವರ ಚಿತ್ತವು ನಿರ್ಮಲವಾಗಿದೆ. ಅವರು ಮೋಹವನ್ನು ತ್ಯಜಿಸಿದ್ದಾರೆ. ಬುದ್ಧರು ಧಮ್ಮಗಳಲ್ಲಿ ಚಕ್ಷುವಂತರಾಗಿದ್ದಾರೆ.
10. ಹೇಮವತ ಯಕ್ಷ - ಅವರು ವಿದ್ಯಾಸಂಪನ್ನರೇ? ಅವರು ವಿಶುದ್ಧ ಆಚರಣೆಯುಳ್ಳವರೆ? ಅವರ ಆಸವಗಳು ಕ್ಷೀಣವಾಗಿದೆಯೆ? ಅವರು ಪುನರ್ಜನ್ಮವನ್ನು ಪಡೆಯುವುದಿಲ್ಲವೆ?
11. ಸಾತಾಗಿರ ಯಕ್ಷ - ಅವರು ವಿದ್ಯಾಸಂಪನ್ನರಾಗಿದ್ದಾರೆ. ಅವರು ವಿಶುದ್ಧ ಆಚರಣೆಯುಳ್ಳವರಾಗಿದ್ದಾರೆ. ಅವರ ಆಸವಗಳು ಕ್ಷೀಣವಾಗಿದೆ. ಅವರಿಗೆ ಪುನರ್ಜನ್ಮ ಸಂಭವಿಸುವುದಿಲ್ಲ.
12. ಮುನಿಗಳ ಚಿತ್ತವು ಸಂಪನ್ನವಾಗಿದೆ, ಪ್ರಶಂಸಾರ್ಹರೂ, ವಿಜ್ಜಾಚರಣಸಂಪನ್ನರಾಗಿದ್ದಾರೆ.
13. ಮುನಿಗಳ ಚಿತ್ತ, ಕರ್ಮ ಹಾಗು ವಾಣಿಯು ಸಂಪನ್ನವಾಗಿವೆ. ನಾವು ಅವರ ವಿದ್ಯಾ ಆಚರಣೆ ಸಂಪನ್ನತೆಗೆ ಪ್ರಶಂಸಿಸುತ್ತೇವೆ.
14. ಹೇಮವತ ಯಕ್ಷ - ಮುನಿಯ ಚಿತ್ತವು, ಕ್ರಿಯೆಗಳು ಹಾಗು ವಾಣಿಯು ಸುಸಂಪನ್ನವಾಗಿದೆ. ವಿದ್ಯೆ ಹಾಗು ಆಚರಣೆಯಿಂದ ಕೂಡಿರುವರು. ನಡೆಯಿರಿ, ಅಂತಹ ಶ್ರೇಷ್ಠ ಗೋತಮರ ದರ್ಶನ ಭಾಗ್ಯ ಮಾಡೋಣ.
15. ಚಿಗರೆಯಂಥ ತೊಡೆಗಳುಳ್ಳ, ಕೃಶರೂ, ಧೀರರು, ಅಲ್ಪಹಾರಿಯೂ, ಚಂಚಲರಹಿತರೂ, ವನದಲ್ಲಿ ಧ್ಯಾನದಲ್ಲಿ ಲೀನರೂ ಆಗಿರುವಂತಹ ಗೋತಮ ಮುನಿಯನ್ನು ನಾವು ದಶರ್ಿಸೋಣ.
16. ಅರಣ್ಯದಲ್ಲಿ ಏಕಾಂಗಿಯಾಗಿ ಸಂಚರಿಸುವ ಸಿಂಹ ಅಥವಾ ಆನೆಯ ರೀತಿ ಹಾಗು ಕಾಯಗಳಲ್ಲಿ ಕಾಮನೆಯಿಲ್ಲದ ಗೋತಮರ ಬಳಿ ಹೋಗಿ ಮೃತ್ಯುಪಾಶದ ಮುಕ್ತಿಯ ಮಾರ್ಗ ಕೇಳೋಣ.
17. ಧಮ್ಮವನ್ನು ಬೋಧಿಸುವ, ಧಮ್ಮದ ಪವತ್ತನವನ್ನು ಮಾಡುವ, ಸರ್ವಧರ್ಮ ಪರಾಂಗತರಾದ, ವೈರರಹಿತ ಹಾಗು ಭಯರಹಿತರಾದ ಗೋತಮರನ್ನು ನಾವು ಕೇಳೋಣ.
ಭಗವಾನರಲ್ಲಿಗೆ ಬಂದು ಪ್ರಶ್ನಿಸುತ್ತಾನೆ -
18. ಹೇಮವತ ಯಕ್ಷ - ಲೋಕವು ಯಾವುದರಿಂದ ಉತ್ಪತ್ತಿಯಾಗಿದೆ? ಅದು ಯಾವುದರೊಂದಿಗೆ ಬೆರೆಯುತ್ತದೆ? ಲೋಕದ ಉಪಾದಾನ (ಆಸಕ್ತಿ) ಯಾವುದು? ಲೋಕವು ಯಾವುದರಿಂದ ಪೀಡಿತವಾಗಿದೆ?
19. ಬುದ್ಧ ಭಗವಾನರು - ಆರು ಕಾರಣ (ಇಂದ್ರಿಯ) ಗಳಿಂದ ಲೋಕದ ಉತ್ಪನ್ನವಾಗಿದೆ. ಅದರಿಂದ (ವಿಷಯ) ಬೆರೆಯುತ್ತದೆ. ಆರು ಪ್ರಕಾರದ ಉಪದಾನವಿದೆ, ಅದರಿಂದಲೇ ಲೋಕವು ಪೀಡಿತವಾಗಿದೆ.
20. ಹೇಮವತ ಯಕ್ಷ - ಅದು ಯಾವ ಉಪದಾನ? ಅದರಿಂದ ಲೋಕವು ಪೀಡಿತವಾಗುತ್ತದೆ. ನಮ್ಮ ಪ್ರಶ್ನೆಗೆ ಉತ್ತರಿಸಿ. ಹಾಗು ಅದರಿಂದ ಬಿಡುಗಡೆ ಹೇಗೆ? ಮತ್ತು ದುಃಖದಿಂದ ಮುಕ್ತಿ ಹೇಗೆ ಸಿಗುತ್ತದೆ?
21. ಬುದ್ಧ ಭಗವಾನರು - ಲೋಕದ ಐದು ಕಾಮಭೋಗಗಳಲ್ಲಿ ಹಾಗು ಆರನೆಯದಾದ ಚಿತ್ತದಲ್ಲಿ ಆಸಕ್ತಿ ತೊರೆದರೆ ದುಃಖದಿಂದ ಮುಕ್ತಿ ದೊರೆಯುತ್ತದೆ.
22. ಇದೇ ಲೋಕದ ನಿಸ್ಸಾರತೆಯಾಗಿದೆ. ನಾನು ನಿನಗೆ ಯತಾರ್ಥ ಸ್ವರೂಪದಿಂದ ತಿಳಿಸಿರುವೆನು. ನಾನು ಇದನ್ನೇ ನಿನಗೆ ಹೇಳುವೆನು, ಹೀಗೆಯೇ ದುಃಖದಿಂದ ಮುಕ್ತಿ ದೊರೆಯುವುದು.
23. ಹೇಮವತ ಯಕ್ಷ - ಇಲ್ಲಿ ಲೋಕ ಸ್ವರೂಪಿಯಾದ ಪ್ರವಾಹವನ್ನು ಯಾರು ದಾಟುತ್ತಾರೆ? ಯಾರು ಭವಸಾಗರವನ್ನು ದಾಟುತ್ತಾರೆ? ಆಧಾರವಿಲ್ಲದೆ ಹಾಗು ಅವಲಂಬನೆಯ ಆಳ ಸಮುದ್ರದಲ್ಲಿ ಯಾರು ಮುಳುಗುವುದಿಲ್ಲ.
24. ಬುದ್ಧ ಭಗವಾನರು - ಸದಾ ಶೀಲಭರಿತನಾಗಿ, ಪ್ರಜ್ಞಾವಂತನೂ, ಏಕಾಗ್ರಚಿತ್ತನೂ, ಚಿಂತನೆಯಲ್ಲಿ (ಧಾಮರ್ಿಕ) ಲೀನನೂ, ಸ್ಮೃತಿವಂತನೂ, ದುಷ್ಕರವಾದ ಪ್ರವಾಹವನ್ನು ದಾಟುತ್ತಾನೆ.
25. ಯಾರು ಕಾಮಭೋಗಗಳ ವಿಚಾರದಲ್ಲಿ ವಿರಕ್ತನೋ, ಸರ್ವ ಸಂಸಾರದ ಸಂಕೋಲೆಗಳಿಂದ ಪಾರಾಗಿರುವನೋ, ಯಾರಲ್ಲಿ ಭವದ ತೃಷ್ಣೆಯು ಕ್ಷೀಣವಾಗಿದೆಯೋ, ಆತನು ಮಾತ್ರ ಆಳವಾದ ಸಮುದ್ರದಲ್ಲಿ ಮುಳುಗುವುದಿಲ್ಲ.
26. ಹೇಮವತ ಯಕ್ಷ - ಗಂಭೀರವಾದ ಪ್ರಜ್ಞಾಸಂಪನ್ನರು, ನಿಬ್ಬಾಣದಶರ್ಿಗಳು, ಅಕಿಂಚನರೂ, ಕಾಮನೆಗಳಲ್ಲಿ ಅನಾಸಕ್ತರೂ, ಸರ್ವ ವಾಸನಾಮುಕ್ತರೂ, ದಿವ್ಯ ದಾರಿಯಲ್ಲಿ ಚಲಿಸುವವರು ಆದಂತಹ ಈ ಮಹಾ ಋಷಿಯನ್ನು ನೋಡಿ...
27. ಪರಮಶ್ರೇಷ್ಠ ಖ್ಯಾತಿಯುಳ್ಳವರು, ನಿಬ್ಬಾಣದಶರ್ಿಗಳು, ಪ್ರಜ್ಞಾ ಪ್ರಸಾದಕರೂ, ಕಾಮಭೋಗಗಳಲ್ಲಿ ಅನಾಸಕ್ತರೂ, ಸರ್ವಜ್ಞರೂ, ಪರಮ ಪ್ರಜ್ಞಾವಂತರೂ, ಆರ್ಯ ಪಥದಲ್ಲಿ ಪಥರಾಗಿರುವ ಈ ಮಹಾ ಋಷಿಯನ್ನು ನೋಡಿ...
28. ನಾವು ಇಂದು ಸರ್ವ ಉತ್ಕೃಷ್ಟವಾಗಿರುವುದನ್ನು ಕಂಡೆವು. ಇಂದು ಸುಪ್ರಭಾತದ ಉದಯವಾಯಿತು. ಏಕೆಂದರೆ ನಾವು ಇಂದು ಸಂಸಾರ ಸಾಗರವನ್ನು ದಾಟಿದ ಆಶ್ರವರಹಿತ ಸಮ್ಮಾಸಂಬುದ್ಧರ ದಿವ್ಯ ದರ್ಶನವನ್ನು ಮಾಡಿದ್ದೇವೆ.
29. ನಾನು ಸಾವಿರ ಋದ್ಧಿವಂತ ಯಶಸ್ವಿ ಯಕ್ಷನೂ ತಮ್ಮಲ್ಲಿ ಶರಣು ಹೋಗುತ್ತಿದ್ದೇನೆ. ತಾವು ನಮ್ಮ ಶಾಸ್ತರಾಗಿರುವಿರಿ.
30. ನಾವು ಇಂದಿನಿಂದ ಗ್ರಾಮದಿಂದ ಗ್ರಾಮಕ್ಕೆ, ಬೆಟ್ಟದಿಂದ ಬೆಟ್ಟಕ್ಕೆ ಸಂಚರಿಸುತ್ತಾ ಸಮ್ಯಕ್ ಸಂಬುದ್ಧರ ಹಾಗು ಅವರ ಸುಬೋಧನೆಯನ್ನು ಮಂಡಿಸುತ್ತಾ ಇರುವೆವು.
ಇಲ್ಲಿಗೆ ಹೇಮವತ ಸುತ್ತ ಮುಗಿಯಿತು.

No comments:

Post a Comment