Thursday 25 September 2014

kim seela sutta in kannada

9. ಕಿಂ ಸೀಲ ಸುತ್ತ
(ನಿಬ್ಬಾಣ ಪ್ರಾಪ್ತಿಗಾಗಿ ಅಪೇಕ್ಷಿತ ಗುಣ)
1.            ಆಯುಷ್ಮಂತ ಸಾರಿಪುತ್ತ - ಯಾವ ಶೀಲ, ಯಾವ ಆಚರಣೆ ಮತ್ತು ಯಾವ ಕರ್ಮಗಳನ್ನು ಮಾಡುವುದರಲ್ಲಿ ತಲ್ಲೀನನಾದ ವ್ಯಕ್ತಿಯು ಅರ್ಹತ್ವವನ್ನು ಪ್ರಾಪ್ತಿಮಾಡುತ್ತಾನೆ?
2.            ಭಗವಾನ್ ಬುದ್ಧರು - ಆತನು ಹಿರಿಯರ ಸೇವೆ ಮಾಡಲಿ ಈಷರ್ೆಯನ್ನು ಹೊಂದದಿರಲಿ, ಉಚಿತ ಸಮಯದಲ್ಲಿ ಗುರುಗಳ ದರ್ಶನ ಮಾಡಲಿ, ಧರ್ಮಕಥೆ ಕೇಳಲು ಉಚಿತ ಸಮಯ ಅರಿಯಲಿ, ಹೇಳಿದ ಉಪದೇಶವನ್ನು ಆದರಪೂರ್ವಕವಾಗಿ ಕೇಳಲಿ.
3.            ಜಡತೆಯನ್ನು ಬಿಟ್ಟು, ವಿನೀತಭಾವದಿಂದ ಗುರುಜನರನ್ನು ದಶರ್ಿಸಿ, ಅರ್ಥ, ಧರ್ಮ, ಸಂಯಮ ಹಾಗು ಬ್ರಹ್ಮಚರ್ಯದ ಸ್ಮರಣೆ ಮಾಡಿ ಅದರ ಆಚರಣೆ ಮಾಡಲಿ.
4.            ಆತನು ಧಮ್ಮದಲ್ಲಿ ರಮಿಸಲಿ, ಧಮ್ಮದಲ್ಲಿ ನಿರತನಾಗಲಿ, ಧಮ್ಮದಲ್ಲಿ ಸ್ಥಿರನಾಗಲಿ, ಧಾಮರ್ಿಕ ವಿನಿಷ್ಕ್ರಿಯವನ್ನು ಅರಿಯುತ್ತಾ, ಧರ್ಮದೂಷಿಯೊಡನೆ ಚಚರ್ೆ ಮಾಡದಿರಲಿ, ವಾಸ್ತವಿಕ ಸದುಪದೇಶಗಳಿಂದ ಸಮಯವನ್ನು ವ್ಯಯಿಸಲಿ.
5.            ಆತನು ಅಟ್ಟಹಾಸ (ಹಾಸ್ಯ) ಕಾಡುಹರಟೆ, ವಿಲಾಪ, ದ್ವೇಷ, ಮಾಯಾ, ವಂಚನೆ, ಲೋಲುಪತೆ, ಹಿಂಸೆ, ಜಗಳಗಳ ಮಾತುಗಳು, ಕಟುನುಡಿ, ರಾಗ ಹಾಗು ಮೋಹವನ್ನು ತ್ಯಜಿಸಲಿ. ಮದರಹಿತ ಸಂಯಮಿಯಾಗಿ ಸಂಚರಿಸಲಿ.
6.            ಸುಭಾಷಿತ ಜ್ಞಾನದ ಸಾರವಾಗಿದೆ, ಅದು ಸಮಾಧಿ ವಿದ್ಯೆ ಹಾಗು ಜ್ಞಾನದ ಸಾರವಾಗಿದೆ. ಯಾವ ಮನುಷ್ಯ ಲೋಭಿ (ರಾಗಿ) ಹಾಗು ಪ್ರಮಾದವುಳ್ಳವನಾಗುತ್ತಾನೋ, ಆತನ ಪ್ರಜ್ಞೆ ಹಾಗು ಶ್ರುತ ಬೆಳವಣಿಗೆಯಾಗುವುದಿಲ್ಲ.
7.            ಯಾರು ಯಾವ ಆರ್ಯ (ಬುದ್ಧರು) ರಿಂದ ಉಪದೇಶಿತವಾದ ಧರ್ಮದಲ್ಲಿ ರತನಾಗಿದ್ದಾರೋ, ಅವರು ಮನದಿಂದ, ವಚನದಿಂದ ಹಾಗು ಶರೀರದಿಂದ ಉತ್ತಮರಾಗಿರುತ್ತಾರೆ. ಅವರು ಶಾಂತಿ, ಶಿಷ್ಟತಾ ಹಾಗು ಸಮಾಧಿಯಲ್ಲಿ ಸಂಲಗ್ನನಾಗಿ ಶ್ರುತ ಹಾಗು ಪ್ರಜ್ಞೆಯ ಸಾರವನ್ನು ಪ್ರಾಪ್ತಿಮಾಡಿದ್ದಾರೆ.

ಇಲ್ಲಿಗೆ ಕಿಂ ಸೀಲ ಸುತ್ತ ಮುಗಿಯಿತು.

No comments:

Post a Comment