Friday 12 September 2014

Ratana sutta in kannada( the great ratana sutta for protection )

. ಚೂಳ ವಗ್ಗ
1. ರತನ ಸುತ್ತ
                (ಈ ಸುತ್ತವನ್ನು ಉಪದೇಶವನ್ನು ಭಗವಾನರು ವೈಶಾಲಿಯಲ್ಲಿ ಬೋಧಿಸಿದರು. ಆ ಸಮಯದಲ್ಲಿ ವೈಶಾಲಿಯಲ್ಲಿ ಜನರು ದುಭರ್ಿಕ್ಷ, ರೋಗ ಹಾಗು ಅಮನುಷ್ಯರಿಂದ ಪೀಡಿತರಾಗಿದ್ದರು. ಇದರಲ್ಲಿ ಬುದ್ಧ, ಧಮ್ಮ ಹಾಗು ಸಂಘದ ಗುಣ ವರ್ಣನೆಯಿದೆ.)

1.            ಈ ಪೃಥ್ವಿಯಲ್ಲಿರುವ ಹಾಗು ಆಕಾಶದಲ್ಲಿ ಸೇರಿರುವ ಎಲ್ಲಾ ಜೀವಿಗಳು ಪ್ರಸನ್ನರಾಗಲಿ ಹಾಗು ನಮ್ಮ ಈ ಸುಕಥನವನ್ನು (ಸುವಾಣಿ) ಆದರಪೂರ್ವಕವಾಗಿ ಕೇಳಲಿ.
2.            ಇದನ್ನು ಸರ್ವ ಜೀವಿಗಳು ಕೇಳಲಿ ಹಾಗು ಮಾನವರ ಮೇಲೆ ಮೈತ್ರಿ ತೋರಿಸಲಿ. ಅವರು ಸಹಾ ನಿಮಗೆ ಹಗಲು-ರಾತ್ರಿ ದಾನವನ್ನು ನೀಡುತ್ತಾರೆ. ಅದಕ್ಕಾಗಿ ನೀವು ಅಪ್ರಮತ್ತ (ಜಾಗರೂಕತೆ) ರಾಗಿ ರಕ್ಷಿಸಿರಿ.
3.            ಈ ಲೋಕದ ಅಥವಾ ಪರಲೋಕದ ಯಾವುದೇ ಧನವಿರಲಿ ಅಥವಾ ಸ್ವರ್ಗದ ಯಾವುದೇ ಉತ್ತಮ ರತ್ನಗಳಿರಲಿ ಅವ್ಯಾವುದು ಸಹಾ ಬುದ್ಧರ ಸಮಾನವಾಗಿ ಶ್ರೇಷ್ಠವಾಗಿಲ್ಲ. ಇದು ಬುದ್ಧರಲ್ಲಿರುವ ಅತ್ಯುತ್ತಮ ರತ್ನವಾಗಿದೆ (ಬುದ್ಧರ ಶ್ರೇಷ್ಠ ಅತ್ಯುತ್ತಮ ರತ್ನವಾಗಿದೆ). ಈ ಸತ್ಯ ವಚನದಿಂದ ಸ್ವಸ್ತಿಯಾಗಲಿ.
4.            ಯಾವ ಅತ್ಯುತ್ತಮ ಅಮೃತ, ವಿರಾಗಪದವಾದ ನಿಬ್ಬಾಣವನ್ನು ಸಮಾಹಿತದಿಂದ ಶಾಕ್ಯ ಮುನಿಯು ಅರಿತರೊ, ಆ ಶ್ರೇಷ್ಠ ಧರ್ಮದ ಸಮಾನವಾಗಿ ಬೇರೆ ಯಾವುದೂ ಶ್ರೇಷ್ಠವಲ್ಲ. ಆ ಧರ್ಮವು ಅತ್ಯುತ್ತಮ ರತ್ನವಾಗಿದೆ. ಈ ಸತ್ಯವಚನದಿಂದ ಸರ್ವರಿಗೂ ಸ್ವಸ್ತಿಯಾಗಲಿ.
5.            ಪರಮಶ್ರೇಷ್ಠ ಭಗವಾನ್ ಬುದ್ಧರು ಯಾವ ಸಮಾಧಿಯನ್ನು (ವಿಪಶ್ಶನ) ತತ್ಕಾಲದಿಂದ ಫಲಪ್ರದ ಎಂದು ಹೇಳಿದರೊ, ಆ ಸಮಾಧಿಯ ಸಮಾನವಾಗಿ ಬೇರಾವುದೂ ಇಲ್ಲ. ಇದು ಧಮ್ಮದ ಅತಿ ಉತ್ತಮ ರತ್ನವಾಗಿದೆ. ಈ ಸತ್ಯವಚನದಿಂದ ಸರ್ವರಿಗೂ ಸ್ವಸ್ತಿಯಾಗಲಿ.
6.            ಬುದ್ಧ ಭಗವಾನರಿಂದ ಪ್ರಶಂಸಿತರಾದ ಎಂಟು ಪ್ರಕಾರದ ವ್ಯಕ್ತಿಗಳು ಇದ್ದಾರೆ. ಇವರು ನಾಲ್ಕು ಜೊತೆ ಇರುವರು. ಆ ಬುದ್ಧರ ಶಿಷ್ಯರು ದಕ್ಷಿಣೆಗೆ, ದಾನಕ್ಕೆ ಯೋಗ್ಯರಾಗಿದ್ದಾರೆ. ಹಾಗೆ ಅವರಿಗೆ ದಾನ ನೀಡಿದ್ದು ಮಹಾಫಲವನ್ನು ಪ್ರಾಪ್ತಿಯಾಗಿಸುತ್ತದೆ. ಇದು ಸಂಘದ ಅತಿ ಉತ್ತಮ ರತ್ನವಾಗಿದೆ. ಈ ಸತ್ಯವಚನದಿಂದ ಸ್ವಸ್ತಿಯಾಗಲಿ.
7.            ಯಾವ ಗೋತಮ ಬುದ್ಧ ಭಗವಾನರ ಶಾಸನದಿಂದ ಸ್ಫೂತರ್ಿಹೊಂದಿ ತೃಷ್ಣಾರಹಿತರಾಗಿ, ದೃಢಮನಸ್ಕರಾಗಿ, ಪ್ರಾಪ್ತಿಮಾಡಲು ಕಡುಕಷ್ಟ ಸಾಧ್ಯವಾಗಿರುವುದನ್ನು ಪ್ರಾಪ್ತಿಮಾಡಿ, ಅಮರತ್ವ ಗಳಿಸಿ ವಿಮುಕ್ತಿ ರಸವನ್ನು ಅಸ್ವಾದಿಸಿದ್ದಾರೆ. ಇದು ಸಂಘದ ಅತ್ಯುತ್ತಮ ರತ್ನವಾಗಿದೆ. ಈ ಸತ್ಯವಚನದಿಂದ ಸರ್ವರಿಗೂ ಸ್ವಸ್ತಿಯಾಗಲಿ.
8.            ಯಾವ ಭೂಮಿಯು ಇಂದ್ರಕೀಲದಂತೆ ಅತಿ ದೃಢವಾಗಿ ಸ್ಥಾಪಿತವಾಗಿದೆಯೋ, ವಾಯುವಿನ ವೇಗಕ್ಕೆ ಕಂಪನಮಯವಾಗುವುದಿಲ್ಲವೊ, ಹಾಗೆಯೇ ಸತ್ಪುರುಷನು ಸಹಾ ನಾಲ್ಕು ಮಹಾನ್ ಸತ್ಯಗಳನ್ನು ಆಳವಾಗಿ ಅರಿತು ಜ್ಞಾನದರ್ಶನ ಮಾಡುತ್ತಾನೋ ಆತನು ಸಹಾ ಸಂಘದ ಉತ್ತಮರತ್ನ - ಈ ಸತ್ಯವಚನದಿಂದ ಸರ್ವರಿಗೂ ಸ್ತಸ್ತಿಯಾಗಲಿ.
9.            ಯಾರು ಪರಮ ಗಂಭೀರ ಪ್ರಜ್ಞಾವಾನ್ ಬುದ್ಧರಿಂದ ಪ್ರಕಾಶಿಸಲ್ಪಟ್ಟ ಆರ್ಯ ಸತ್ಯಗಳನ್ನು ಮನನ ಮಾಡಿದ್ದಾರೋ ಅವರು ತೀರಾ ಎಚ್ಚರತಪ್ಪಿದ್ದರೂ ಎಂಟನೆಯ ಜನ್ಮ ಪಡೆಯುವುದಿಲ್ಲ. ಇದು ಸಂಘದ ಉತ್ತಮ ರತ್ನವಾಗಿದೆ. ಈ ಸತ್ಯವಚನದಿಂದ ಸರ್ವರಿಗೂ ಸ್ವಸ್ತಿಯಾಗಲಿ.
10-11. ವಿಶುದ್ಧಿ ಜ್ಞಾನ ಪ್ರಾಪ್ತಿಯ ಜೊತೆಗೆ ಆತನ ಮೂರು ಬಂಧನಗಳಾದ ತನ್ನ ಆತ್ಮ (ಅಸ್ತಿತ್ವ) ವೆಂಬ ಮಿಥ್ಯಾದೃಷ್ಟಿ, ಸಂದೇಹ ಮತ್ತು ಮೂಢಾಚರಣೆಗಳು ಕತ್ತರಿಸಿ ಹೋಗುತ್ತವೆ. ಹಾಗು ನಾಲ್ಕು ಅಪಾಯಗಳಿಂದ (ದುರ್ಗತಿ) ಮುಕ್ತನಾಗುತ್ತಾನೆ. ಹಾಗು ಆರು ಘೋರ ಪಾಪಕರ್ಮಗಳನ್ನು ಎಂದಿಗೂ ಆಚರಣೆ ಮಾಡುವುದಿಲ್ಲ. ಇದು ಸಹಾ ಸಂಘದ ಉತ್ತಮರತ್ನವಾಗಿದೆ. ಈ ಸತ್ಯವಚನದಿಂದ ಸರ್ವರಿಗೂ ಸ್ವಸ್ತಿಯಾಗಲಿ.
12.          ಆತನು ಶರೀರದಿಂದ, ವಚನದಿಂದ, ಅಥವಾ ಚಿತ್ತದಿಂದ ಪಾಪ ಮಾಡಿದರೂ ಆತನು ಅದನ್ನು ಮರೆಮಾಡಲು ಸಾಧ್ಯವಿಲ್ಲ. ಏಕೆಂದರೆ ನಿಬ್ಬಾಣದಶರ್ಿಯು ಬಚ್ಚಿಡಲು ಅಸಮರ್ಥನಾಗುತ್ತಾನೆ. ಇದು ಸಹಾ ಸಂಘದ ಉತ್ತಮ ರತ್ನವಾಗಿದೆ. ಈ ಸತ್ಯವಚನದಿಂದ ಸರ್ವರಿಗೂ ಸ್ವಸ್ತಿಯಾಗಲಿ.
13.          ವಸಂತ ಋತುವಿನ ಪ್ರಾರಂಭದಲ್ಲಿ ಹೇಗೆ ವನವು ಹಾಗು ವೃಕ್ಷಗಳು ಪುಷ್ಠಿಯಾಗುವವೋ, ಹಾಗೆಯೇ ಬುದ್ಧ ಭಗವಾನರು ಶ್ರೇಷ್ಠ ಧರ್ಮದ ಉಪದೇಶ ನೀಡಿದ್ದಾರೆ. ಇದು ಸಹಾ ಸಂಘದಲ್ಲಿ ಉತ್ತಮ ರತ್ನವಾಗಿದೆ. ಈ ಸತ್ಯವಚನದಿಂದ ಸರ್ವರಿಗೂ ಸ್ವಸ್ತಿಯಾಗಲಿ.
14.          ಪರಮಶ್ರೇಷ್ಠ ನಿಬ್ಬಾಣದ ದಾನಿಗಳು, ಸುಶ್ರೇಷ್ಠ ಧರ್ಮದ ಜ್ಞಾನಿಗಳು ಮಹಾ ಮಾರ್ಗದ ನಿದರ್ೆಶಕರು, ಶ್ರೇಷ್ಠ ಲೋಕೋತ್ತರ ಬುದ್ಧರು ಅತ್ಯುತ್ತಮ ಧರ್ಮದ ಉಪದೇಶ ನೀಡಿದ್ದಾರೆ. ಇದು ಸಹಾ ಸಂಘದ ಅತ್ಯುತ್ತಮ ರತ್ನವಾಗಿದೆ. ಈ ಸತ್ಯವಚನದಿಂದ ಸರ್ವರಿಗೂ ಸ್ವಸ್ತಿಯಾಗಲಿ.
15.          ಹಿಂದಿನದು (ಹಳೆಯ) ಕರ್ಮ (ಚಿತ್ತ) ಕ್ಷೀಣವಾಯಿತು. ಹೊಸದು ಎಂದಿಗೂ ಉದಯವಾಗುವುದಿಲ್ಲ. ಆತನ ಚಿತ್ತವು ಪುನರ್ಜನ್ಮದಿಂದ ಮುಕ್ತಿ ಪಡೆಯಿತು. ಆತನು ಕ್ಷಯಬೀಜನಾದನು, ಆತನ ತೃಷ್ಣೆಯು ಅಂತ್ಯಗೊಂಡಿತು. ಅವನು ಈ ಪ್ರದೀಪದಂತೆ ನಿಬ್ಬಾಣ ಪ್ರಾಪ್ತಿಮಾಡುವನು. ಇದು ಸಹಾ ಸಂಘದ ಅತ್ಯುತ್ತಮ ರತ್ನವಾಗಿದೆ. ಈ ಸತ್ಯವಚನದಿಂದ ಸರ್ವರಿಗೂ ಸ್ವಸ್ತಿಯಾಗಲಿ.
16.          ಈ ಸಮಯದಲ್ಲಿ ಪೃಥ್ವಿಯ ಅಥವಾ ಅಂತರಿಕ್ಷದ ಯಾವುದೇ  ಜೀವಿಗಳು ಇಲ್ಲಿ ನೆರೆದಿರಲಿ, ತಥಾಗತರು ಆ ಎಲ್ಲಾ ದೇವ ಮನುಷ್ಯರಿಂದ ಪೂಜಿತರಾಗಿದ್ದಾರೆ. ನಾವು ಬುದ್ಧರಿಗೆ ವಂದಿಸುತ್ತೇವೆ, ಸರ್ವರಿಗೂ ಸ್ವಸ್ತಿಯಾಗಲಿ.
17.          ಈ ಸಮಯದಲ್ಲಿ ಪೃಥ್ವಿಯ ಅಥವಾ ಅಂತರಿಕ್ಷದ ಯಾವುದೇ  ಜೀವಿಗಳು ಇಲ್ಲಿ ನೆರೆದಿರಲಿ, ತಥಾಗತರು ಆ ಎಲ್ಲಾ ದೇವ ಮನುಷ್ಯರಿಂದ ಪೂಜಿತರಾಗಿದ್ದಾರೆ. ನಾವು ಧಮ್ಮಕ್ಕೆ ವಂದಿಸುತ್ತೇವೆ, ಸರ್ವರಿಗೂ ಸ್ವಸ್ತಿಯಾಗಲಿ.
18.          ಈ ಸಮಯದಲ್ಲಿ ಪೃಥ್ವಿಯ ಅಥವಾ ಅಂತರಿಕ್ಷದ ಯಾವುದೇ  ಜೀವಿಗಳು ಇಲ್ಲಿ ನೆರೆದಿರಲಿ, ತಥಾಗತರು ಆ ಎಲ್ಲಾ ದೇವ ಮನುಷ್ಯರಿಂದ ಪೂಜಿತರಾಗಿದ್ದಾರೆ. ನಾವು ಸಂಘಕ್ಕೆ ವಂದಿಸುತ್ತೇವೆ, ಸರ್ವರಿಗೂ ಸ್ವಸ್ತಿಯಾಗಲಿ.

ಇಲ್ಲಿಗೆ ರತನ ಸುತ್ತ ಮುಗಿಯಿತು.

No comments:

Post a Comment