Friday 31 October 2014

sabhiya sutta (6. ಸಭಿಯ ಸುತ್ತ)

6. ಸಭಿಯ ಸುತ್ತ
                (ಸಭಿಯ ಪರಿವ್ರಾಜಕನು ತತ್ಕಾಲಿನ ಆರು ಶಾಸ್ತರುಗಳ ಉತ್ತರಗಳಿಂದ ಸಂತುಷ್ಟನಾಗದೆ ಭಗವಾನರ ಬಳಿಗೆ ಹೋದನು ಮತ್ತು ಅವರ ಉತ್ತರಗಳಿಂದ ಪ್ರಸನ್ನನಾಗಿ ಭಿಕ್ಷುವಾದನು.)

                ಹೀಗೆ ನಾನು ಕೇಳಿದ್ದೇನೆ. ಒಮ್ಮೆ ಭಗವಾನರು ರಾಜಗೃಹದಲ್ಲಿ ವೇಣುವನದ ಕಲಂದಕ ನಿವಾಪದಲ್ಲಿ ವಾಸವಾಗಿದ್ದರು. ಆಗ ಸಭಿಯ ಪರಿವ್ರಾಜಕನ ಹಿತೈಷಿ ದೇವತೆಯು ಕೃಪೆಯಿಂದ ಕೆಲವು ಪ್ರಶ್ನೆಗಳನ್ನು ಹೇಳಿ ಹೀಗೆ ಹೇಳಿದಳು- ಸಭಿಯ ಯಾವ ಶ್ರಮಣ ಅಥವಾ ಬ್ರಾಹ್ಮಣ ಈ ಪ್ರಶ್ನೆಗಳಿಗೆ ಕೇಳಿದಾಗ ಉತ್ತರಿಸುವರೋ ಅವರ ಬಳಿ ಬ್ರಹ್ಮಚರ್ಯದ ಪಾಲನೆ ಮಾಡು.
                ಆಗ ಸಭಿಯ ಪರಿವ್ರಾಜಕನು ಆ ದೇವತೆಯಿಂದ ಪ್ರಶ್ನೆಗಳನ್ನು ಕಲಿತು, ಯಾರು ಶ್ರಮಣ ಬ್ರಾಹ್ಮಣ ಗಣದವರೋ, ಗಣಾಚಾರ್ಯರೋ, ಪ್ರಸಿದ್ಧರೋ, ಯಶಸ್ವಿ ತೀರ್ಥಂಕರರೋ, ಬಹಳ ಜನರಿಂದ ಉತ್ತಮರೆಂದು ಪರಿಗಣಿಸಲ್ಪಟ್ಟವರೋ, ಅಂತಹವರಾದ ಪೂರ್ಣಕಸ್ಸಪ, ಮಕ್ಕಲಿ ಗೋಸಾಲ, ಅಜಿತ ಕೇಸಕಂಬಳಿ, ಪ್ರಕೃಧ ಕಾತ್ಯಯಾನ, ಸಂಜಯ ಬೆಲಟ್ಟಪುತ್ತ, ನಿಗಂಠನಾಥಪುತ್ತ (ವರ್ಧಮಾನ ಮಹಾವೀರ) ಅವರ ಬಳಿಗೆ ಹೋಗಿ ಪ್ರಶ್ನೆಗಳನ್ನು ಕೇಳಿದನು. ಅವರುಗಳು ಸಭಿಯನ ಪ್ರಶ್ನೆಗಳಿಗೆ ಉತ್ತರಿಸಲು ಆಗಲಿಲ್ಲ. ಉತ್ತರ ನೀಡಲಾರದೆ ಕ್ರೋಧ, ದ್ವೇಷ ಮತ್ತು ಬೇಸರ ವ್ಯಕ್ತಪಡಿಸುತ್ತಿದ್ದರು. ಅವರಂತೂ ಸಭಿಯನಿಗೆಯೇ ಪ್ರಶ್ನೆಗಳನ್ನು ಕೇಳುತ್ತಿದ್ದರು.
                ಆಗ ಸಭಿಯನಿಗೆ ಮನದಲ್ಲಿ ಈ ರೀತಿ ಆಯಿತು- ಈ ಗೋತಮ ಶ್ರಮಣರು ಸಹಾ ಸಂಘವುಳ್ಳವರಾಗಿದ್ದಾರೆ, ಗಣವುಳ್ಳವರು, ಗಣಾಚಾರ್ಯರು, ಪ್ರಸಿದ್ಧರು, ಯಶಸ್ವಿಗಳು, ತೀರ್ಥಂಕರರು ಹಾಗು ಬಹು ಜನಗಳಿಂದ ಪರಮಶ್ರೇಷ್ಠರೆಂದು ಪರಿಗಣಿಸಲ್ಪಟ್ಟಿದ್ದಾರೆ. ಏಕೆ ನಾನು ಅವರಲ್ಲಿಗೆ ಹೋಗಿ ಈ ಪ್ರಶ್ನೆಗಳನ್ನು ಪ್ರಶ್ನಿಸಬಾರದು ಎಂದು ಯೋಚಿಸಿ ನಂತರ ಸಭಿಯನ ಮನದಲ್ಲಿ ಹೀಗೂ ಸಂಶಯ ಉತ್ಪತ್ತಿಯಾಯಿತು-
                ಯಾವ ಶ್ರಮಣ ಬ್ರಾಹ್ಮಣರು ವೃದ್ಧರಾಗಿದ್ದಾರೋ, ಜೀರ್ಣರಾಗಿದ್ದಾರೋ, ಅವಸ್ಥೆ ದಾಟಿದವರಾಗಿದ್ದಾರೊ, ಸ್ಥವಿರರು, ದೀರ್ಘ ಜೀವಿಗಳೂ, ಬಹಳ ದಿನಗಳಿಂದಲೂ ಪ್ರವಜ್ರ್ಯರಾಗಿರುವವರು, ಸಂಘದವರು, ಗಣದವರು, ಗಣಾಚಾರ್ಯರು, ಪ್ರಸಿದ್ಧರು, ಯಶಸ್ವಿಗಳು, ತೀರ್ಥಂಕರರು ಹಾಗು ಬಹು ಜನಗಳಿಂದ ಉತ್ತಮರೆಂದು ಪರಿಗಣಿಸಲ್ಪಟ್ಟವರೇ ಉತ್ತರ ನೀಡಲಾರದೆ ಹೋದರು. ಉತ್ತರ ನೀಡದೆ ಕ್ರೋಧ, ದ್ವೇಷ ಹಾಗು ಬೇಸರ ವ್ಯಕ್ತಪಡಿಸಿದರು. ಅವರಂತೂ ನನಗೆ ಪ್ರಶ್ನೆಗಳನ್ನು ಹಾಕುತ್ತಿದ್ದರು. ಹೀಗಿರುವಾಗ ಶ್ರಮಣ ಗೋತಮರು ನನ್ನ ಪ್ರಶ್ನೆಗಳಿಗೆ ಉತ್ತರಿಸುವರೇ? ಶ್ರಮಣ ಗೋತಮರಂತು ತರುಣರಾಗಿದ್ದಾರೆ. ಪ್ರವಜ್ರ್ಯವು ಸಹಾ ಹೊಸದಾಗಿದೆ.
                ಆಗ ಸಭಿಯ ಪರಿವ್ರಾಜಕನಿಗೆ ಹೀಗೂ ಸಂಶಯ ಉತ್ಪತ್ತಿಯಾಯಿತು- ಶ್ರಮಣರು ತರುಣರಾಗಿದ್ದಾರೆ ಎಂದು ತಿಳಿದು ಅವರ ಅನಾಧಾರಣೆ ಮಾಡಕೂಡದು. ಶ್ರಮಣರು ತರುಣರಾಗಿದ್ದಾರೆ, ಅವರು ಮಹಾ ವೃದ್ಧಿಶಕ್ತಿಯುಳ್ಳವರು ಹಾಗು ಮಹಾ ಪ್ರತಾಪಿಯೂ ಆಗಿದ್ದಾರೆ. ನಾನು ಏಕೆ ಅವರಲ್ಲಿಗೆ ಹೋಗಿ ಪ್ರಶ್ನಿಸಬಾರದು? ಎಂದು ನಿರ್ಧರಿಸಿ ಅಲ್ಲಿಗೆ ಸಭಿಯ ಪರಿವ್ರಾಜಕನು ರಾಜಗೃಹಕ್ಕೆ ಚಾರಿಕೆಯಿಂದ ಹೊರಟನು.
                ಆತನು ಅಲ್ಲಿಂದ ರಾಜಗೃಹದ ವೇಣುವನದ ಕಲಂದಕ ನಿವಾಪದಲ್ಲಿ ಭಗವಾನರು ಇರುವ ಕಡೆ ಹೋಗಿ, ಭಗವಾನರೊಂದಿಗೆ ಕುಶಲ ಕ್ಷೇಮ ಕೇಳಿದನು. ಕುಶಲ ಕ್ಷೇಮ ಕೇಳಿದ ನಂತರ ಸ್ಮರಣೆ ಮಾಡಬೇಕಾದ ವಿಷಯ ತೆಗೆದುಕೊಂಡು ಒಂದುಕಡೆ ಕುಳಿತನು. ಒಂದುಕಡೆ ಕುಳಿತ ಸಭಿಯ ಪರಿವ್ರಾಜಕನು ಭಗವಾನರೊಂದಿಗೆ ಗಾಥೆಗಳಿಂದ ಈ ರೀತಿ ಹೇಳಿದನು-
1.            ನಾನು ಸಂಶಯ ಹಾಗು ದ್ವಂದ್ವವುಳ್ಳವನಾಗಿ ಪ್ರಶ್ನೆ ಕೇಳಲು ತಮ್ಮ ಬಳಿಗೆ ಬಂದಿದ್ದೇನೆ. ಭಗವಾನರೇ, ನನ್ನ ಪ್ರಶ್ನೆಗಳಿಗೆ ಉತ್ತರವನ್ನು ಧಾಮರ್ಿಕ ರೀತಿಯಿಂದ ನೀಡಿ, ಆ ಪ್ರಶ್ನೆಗೆ ಸಮಾಧಾನ ನೀಡಿರಿ.
2.            ಭಗವಾನರು - ನೀನು ದೂರದಿಂದ ಪ್ರಶ್ನೆಗಳನ್ನು ಕೇಳುವ ಇಚ್ಛೆಯಿಂದ ಬಂದಿರುವೆ. ನಿನ್ನ ಕೇಳುವಿಕೆಯ ನಂತರ ಧಾಮರ್ಿಕ ರೀತಿಯಿಂದ ಅವುಗಳನ್ನು ಸಮಾಧಾನ ಮಾಡುವೆ.
3.            ಸಭಿಯ ನಿನ್ನ ಮನದಲ್ಲಿ ಯಾವುದೆಲ್ಲವೂ ಇದೆಯೋ ಅದನ್ನು ನನ್ನಲ್ಲಿ ಕೇಳು. ನಾನು ನಿನ್ನ ಆ ಪ್ರಶ್ನೆಗಳ ಅಂತ್ಯವನ್ನು ಮಾಡುತ್ತೇನೆ.
                ಆಗ ಸಭಿಯ ಪರಿವ್ರಾಜಕನಿಗೆ ಮನದಲ್ಲಿ ಈ ರೀತಿ ಆಯಿತು- ಇದು ಆಶ್ಚರ್ಯವಾಗಿದೆ! ಇದು ನಿಜಕ್ಕೂ ಅದ್ಭುತವಾಗಿದೆ! ಇಲ್ಲಿಯತನಕ ಅನ್ಯ ಶ್ರಮಣ ಬ್ರಾಹ್ಮಣರು ನನಗೆ ಸಮಯವನ್ನು ಸಹಾ ನೀಡುತ್ತಿರಲಿಲ್ಲ. ಆದರೆ ಶ್ರಮಣ ಗೋತಮರು ನನಗೆ ಪ್ರಶ್ನಿಸಲು ಸಮಯವನ್ನು ನೀಡಿದ್ದಾರೆ. ಹೀಗೆ ಯೋಚಿಸಿ ಪ್ರಸನ್ನ ಮನದಿಂದ ಪ್ರಮೋದಿತನಾಗಿ, ಹಷರ್ಿತನಾಗಿ, ಆನಂದ ಹಾಗು ಪ್ರಸನ್ನತೆಯಿಂದ ತುಂಬಿದವನಾಗಿ ಆತನು ಭಗವಾನರಿಗೆ ಪ್ರಶ್ನೆ ಕೇಳಿದನು.
4.            ಸಭಿಯ - ಯಾವ ಪ್ರಕಾರದ ಪ್ರಾಪ್ತಿ ಸಾಧಿಸಿರುವವನನ್ನು ಭಿಕ್ಷು ಎನ್ನುತ್ತಾರೆ? ಶಾಂತ ಹಾಗು ದಾಂತ (ದಮವಂತ) ಎಂದು ಯಾರಿಗೆ ಹೇಳುತ್ತಾರೆ? ಬುದ್ಧರೆಂದು ಯಾರಿಗೆ ಹೇಳುತ್ತಾರೆ? ಭಗವಾನರೇ, ನನ್ನ ಈ ಪ್ರಶ್ನೆಗಳಿಗೆ ಉತ್ತರಿಸಿರಿ.
5.            ಭಗವಾನರು - ಯಾರು ಸ್ವಯಂ ತನ್ನದೇ ರೀತಿಯಲ್ಲಿ ನಿಮರ್ಿತವಾದ ಮಾರ್ಗದಲ್ಲಿ ಶ್ರಮಿಸಿ ಸಂಶಯರಹಿತನಾಗಿರುವನೋ, ಪರಿನಿಬ್ಬಾಣವನ್ನು ಪ್ರಾಪ್ತಿಮಾಡಿರುವನೋ, ಯಾರು ಜನ್ಮ-ಮೃತ್ಯುಗಳನ್ನು ತ್ಯಾಗ ಮಾಡಿರುವನೋ, ಯಾರು ಬ್ರಹ್ಮಚರ್ಯವನ್ನು ಪೂರ್ಣ ಮಾಡಿರುವನೋ ಮತ್ತು ಯಾರ ಪುನರ್ಜನ್ಮ ಇಲ್ಲವಾಗಿದೆಯೋ ಆತನು ಭಿಕ್ಷು ಎಂದು ಕರೆಯಲ್ಪಡುತ್ತಾನೆ.
6.            ಯಾರು ಸರ್ವ ಪ್ರಕಾರದ ಉಪೇಕ್ಷೆ ಸಿದ್ಧಿಸಿರುವನೋ (ಅಂಟಿಕೊಳ್ಳದವನು), ಸ್ಮೃತಿವಂತನೋ, ಇಡೀ ಲೋಕದಲ್ಲಿ ಯಾರಿಗೂ ಹಿಂಸೆ ಮಾಡದವನೋ, ಯಾರು ಲೋಕಸಾಗರವನ್ನು ದಾಟಿರುವನೋ, ಯಾರು ಶ್ರಮಣ ಹಾಗು ನಿರ್ಮಲನಾಗಿರುವವನೋ, ಯಾರ ಆಸಕ್ತಿಗಳು ಇಲ್ಲವಾಗಿವೆಯೋ ಆತನೇ ಶಾಂತನಾಗಿರುತ್ತಾನೆ.
7.            ಯಾರ ಇಂದ್ರಿಯಗಳು ಸರ್ವಲೋಕದಲ್ಲಿ ಆಂತರ್ಯದಲ್ಲಿ ಹಾಗು ಬಾಹ್ಯದಲ್ಲಿ ಸರ್ವ ರೀತಿಯಿಂದ ವಶವಾಗಿವೆಯೋ, ಯಾರು ಈ ಲೋಕ ಹಾಗು ಪರಲೋಕ ಅರಿತು ಸಮಯದ ಪ್ರತೀಕ್ಷೆಯಲ್ಲಿರುವರೋ, ಆತನೇ ಸಂಯಮಿ, ಆತನು ದಾಂತನು ಆಗಿದ್ದಾನೆ.
8.            ಯಾರು ಸಂಪೂರ್ಣ ತೃಷ್ಣೆಯನ್ನು ಮನನ ಮಾಡಿರುವರೋ, ಲೋಕದ ಉತ್ಪತ್ತಿ ಹಾಗು ಲಯವನ್ನು ಸ್ಪಷ್ಟವಾಗಿ ಅರಿತಿರುವರೋ, ತೃಷ್ಣಾ ಇತ್ಯಾದಿ ಮಲಗಳಿಂದ ರಹಿತರೋ, ವಿಶುದ್ಧರೋ, ಯಾರು ಪೂರ್ಣವಾಗಿ ಜನ್ಮ ಕ್ಷಯರೋ, ಅವರನ್ನು ಬುದ್ಧರೆಂದು ಹೇಳುವರು.
                ಆಗ ಸಭಿಯ ಪರಿವ್ರಾಜಕನು ಭಗವಾನರ ಕಥನವನ್ನು ಆನಂದಿಸುತ್ತಾ, ಅನುಮೋದಿಸುತ್ತಾ, ಪ್ರಸನ್ನ ಪ್ರಮೋದನಾಗಿ ಹಷರ್ಿತ ಆನಂದವುಳ್ಳವನಾಗಿ, ಆಹ್ಲಾದತೆಯಿಂದ ಭಗವಾನರೊಡನೆ ಮುಂದಿನ ಪ್ರಶ್ನೆ ಕೇಳಿದನು.
9.            ಸಭಿಯ - ಯಾವ ರೀತಿಯ ಪ್ರಾಪ್ತಿಯವನನ್ನು ಬ್ರಾಹ್ಮಣ ಎನ್ನುತ್ತಾರೆ? ಶ್ರಮಣ ಹಾಗು ಸ್ಮಾತಕನೆಂದು ಯಾರಿಗೆ ಹೇಳುತ್ತಾರೆ? ನಾಗನೆಂದು ಯಾರಿಗೆ ಹೇಳುತ್ತಾರೆ? ಭಗವಾನರೇ, ನನ್ನ ಪ್ರಶ್ನೆಗೆ ಉತ್ತರಿಸಿ.
10.          ಭಗವಾನರು - ಯಾರು ಸರ್ವ ಪಾಪಗಳನ್ನು ತೊರೆದು ನಿರ್ಮಲ, ಸಾಧು, ಏಕಾಗ್ರಚಿತ್ತನು, ಸ್ಥಿರತೆಯುಳ್ಳವನು, ಸಂಸಾರ ಪಾರಂಗತನು, ಕೇವಲಿಯು (ಜ್ಞಾನಿ), ಅನಾಸಕ್ತನು ಹಾಗು ಸ್ಮಿತನಾಗಿರುವನೋ ಆತನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.
11.          ಯಾರು ಪುಣ್ಯ ಹಾಗು ಪಾಪಗಳನ್ನು ದೂರೀಕರಿಸಿ ಶಾಂತನಾಗಿರುವನೋ, ಈ ಲೋಕವನ್ನು ಹಾಗು ಪರಲೋಕವನ್ನು ಸ್ಪಷ್ಟವಾಗಿ ಅರಿತು ಮಲರಹಿತನಾಗಿರುವನೋ, ಜನ್ಮ ಹಾಗು ಮೃತ್ಯುವಿನಿಂದ ಮೀರಿ ಹೋಗಿರುವನೋ, ಅಂತಹ ಸ್ಥಿರ ಹಾಗು ಸ್ಥಿತ ಚಿತ್ತವುಳ್ಳವನೇ ಶ್ರಮಣ ಎಂದು ಕರೆಯಲ್ಪಡುತ್ತಾನೆ.
12.          ಯಾರು ಸರ್ವ ಲೋಕದಲ್ಲಿ ಆಂತರ್ಯದಲ್ಲಾಗಲಿ, ಬಾಹ್ಯದಲ್ಲಾಗಲಿ ಸರ್ವ ಪಾಪಗಳನ್ನು ತೊಳೆದು ಶುದ್ಧನಾಗಿರುವನೋ ಮತ್ತು ಅವಗಮನದಲ್ಲಿ ಬಿದ್ದಿರುವ ದೇವತೆಗಳಲ್ಲಿ ಹಾಗು ಮಾನವರಲ್ಲಿ ಜನ್ಮ ಗ್ರಹಣ ಮಾಡುವುದಿಲ್ಲವೋ ಆತನೇ ಸ್ಮಾತಕ ಎಂದು ಕರೆಯಲ್ಪಡುತ್ತಾನೆ.
13.          ಯಾರು ಸಂಸಾರದಲ್ಲಿ ಯಾವ ರೀತಿಯ ಪಾಪವನ್ನು ಮಾಡುವುದಿಲ್ಲವೋ, ಯಾರು ಸರ್ವ ಬಂಧನವನ್ನು ಮುರಿದಿರುವನೋ, ಯಾರು ಎಲ್ಲಿಯೂ ಆಸಕ್ತಿ ಹೊಂದುವುದಿಲ್ಲವೋ, ಅಂತಹ ವಿಮುಕ್ತ ಸ್ಥಿರ ಸ್ಮಿತಾಚಿತ್ತನೇ ನಾಗನೆಂದು ಹೇಳಲ್ಪಡುತ್ತಾನೆ.
                ಆಗ ಸಭಿಯ ಪರಿವ್ರಾಜಕನು ಭಗವಾನರ ಕಥನವನ್ನು ಆನಂದಿಸುತ್ತಾ, ಅನುಮೋದಿಸುತ್ತಾ, ಪ್ರಸನ್ನ ಪ್ರಮೋದನಾಗಿ ಹಷರ್ಿತ ಆನಂದವುಳ್ಳವನಾಗಿ, ಆಹ್ಲಾದತೆಯಿಂದ ಭಗವಾನರೊಡನೆ ಮುಂದಿನ ಪ್ರಶ್ನೆ ಕೇಳಿದನು.
14.          ಸಭಿಯ - ಬುದ್ಧರೇ, ಯಾರಿಗೆ ಕ್ಷೇತ್ರಜಿತನೆಂದು ಕರೆಯುವರು? ಕುಶಲನು ಯಾರು? ಪಂಡಿತನೆಂದು ಯಾರಿಗೆ ಕರೆಯುವರು ಮತ್ತು ಮುನಿಯು ಯಾರು? ಭಗವಾನರೇ, ನನ್ನ ಪ್ರಶ್ನೆಗಳಿಗೆ ಉತ್ತರಿಸಿ.
15.          ಭಗವಾನರು - ಯಾರು ಸಂಪೂರ್ಣವಾಗಿ ಸ್ವಗರ್ಿಯ, ಮಾನವೀಯ ಮತ್ತು ಬ್ರಹ್ಮಲೋಕವನ್ನು ಗೆದ್ದು ಸರ್ವ ಲೋಕಗಳ ಬಂಧನದಿಂದ ಮುಕ್ತನಾಗಿರುವನೋ, ಅಂತಹ ಸ್ಥಿರ ಹಾಗು ಸ್ಥಿತಾಚಿತ್ತನೇ ಕ್ಷೇತ್ರಜಿತನೆಂದು ಕರೆಯಲ್ಪಡುತ್ತಾನೆ.
16.          ಯಾರು ಸಂಪೂರ್ಣವಾಗಿ ಸ್ವಗರ್ಿಯ, ಮಾನವೀಯ ಮತ್ತು ಬ್ರಹ್ಮಲೋಕದ ಒಳ್ಳೆಯ-ಕೆಟ್ಟ ಕರ್ಮಗಳನ್ನು ಜಯಿಸಿ, ಸರ್ವ ಕರ್ಮ ಬಂಧನಮುಕ್ತನೋ ಅಂತಹ ಸ್ಥಿರ ಹಾಗು ಸ್ಮಿತಚಿತ್ತನೇ ಕುಶಲನೆಂದು ಕರೆಯಲ್ಪಡುತ್ತಾನೆ.
17.          ಯಾರು ಶುದ್ಧ ಪ್ರಾಜ್ಞನು, ಆಂತರ್ಯದ ಹಾಗು ಬಾಹ್ಯದ ವಿಷಯಗಳಲ್ಲಿ ವಿಜಯಿಯಾಗಿ ಪಾಪ ಪುಣ್ಯಗಳಿಂದ ಮೀರಿ ಹೋಗಿರುವನೋ ಅಂತಹ ಸ್ಥಿತ ಹಾಗು ಸ್ಥಿರಚಿತ್ತನೇ ಪಂಡಿತನೆಂದು ಕರೆಯಲ್ಪಡುತ್ತಾನೆ.
18.          ಯಾರು ಇಡೀ ಸಂಸಾರದಲ್ಲಿ ಆಂತರ್ಯ ಹಾಗು ಬಾಹ್ಯದಲ್ಲಿ ಸತ್ ಹಾಗು ಅಸತ್ಗಳನ್ನು ಅರಿತು ದೇವ-ಮಾನವರಿಂದ ಪೂಜಿತನಾಗಿರುವನೋ ಮತ್ತು ಆಸಕ್ತರೂಪಿ ಜಲದಿಂದ ಆಚೆ ಇರುವನೋ, ಅವನೇ ಮುನಿ ಎನಿಸಿಕೊಳ್ಳುತ್ತಾನೆ.
                ಆಗ ಸಭಿಯ ಪರಿವ್ರಾಜಕನು ಭಗವಾನರ ಕಥನವನ್ನು ಆನಂದಿಸುತ್ತಾ, ಅನುಮೋದಿಸುತ್ತಾ, ಪ್ರಸನ್ನ ಪ್ರಮೋದನಾಗಿ ಹಷರ್ಿತ ಆನಂದವುಳ್ಳವನಾಗಿ, ಆಹ್ಲಾದತೆಯಿಂದ ಭಗವಾನರೊಡನೆ ಮುಂದಿನ ಪ್ರಶ್ನೆ ಕೇಳಿದನು.
19.          ಸಭಿಯ - ಯಾವ ಪ್ರಕಾರದ ಪ್ರಾಪ್ತಿಯವನನ್ನು ವೇದಜ್ಞ ಎನ್ನುವರು? ಅನುವಿಜ್ಞ ಯಾರು? ವೀರ್ಯವಂತನು ಯಾರು? ಅಜನಿಯ ಯಾರ ಹೆಸರಾಗಿದೆ? ಭಗವಾನರು ನನ್ನ ಪ್ರಶ್ನೆಗೆ ಉತ್ತರಿಸಿ.
20.          ಭಗವಾನರು - ಯಾರು ಇಲ್ಲಿ ಶ್ರಮಣ ಮತ್ತು ಬ್ರಾಹ್ಮಣರ ಸಂಪೂರ್ಣ ಸ್ಥಿತಿಗಳನ್ನು (ಅವಸ್ಥೆ) ಅರಿತಿರುವನೋ, ಯಾರು ಎಲ್ಲಾರೀತಿಯ ವೇದನೆಗಳಲ್ಲಿ ರಾಗರಹಿತನೋ, ಯಾರು ಸರ್ವ ವೇದನೆಗಳಿಂದ ದೂರವಿರುವನೋ, ಆತನೇ ವೇದಜ್ಞ ಎಂದು ಕರೆಯಲ್ಪಡುತ್ತಾನೆ.
21.          ಯಾರು ಆಂತರ್ಯದ ಮತ್ತು ಬಾಹ್ಯದ ರೋಗ ಮೂಲವಾದ ದೇಹ-ಮನಸ್ಸಿನ ಬಂಧನವನ್ನು ಅರಿತಿರುವನೋ ಮತ್ತು ಯಾರು ಸರ್ವ ರೋಗದ ಮೂಲ ಬಂಧನದಿಂದ ಮುಕ್ತನೋ ಅಂತಹ ಸ್ಥಿರ ಹಾಗು ಸ್ಥಿರಚಿತ್ತನೇ ಅನುವಿಜ್ಞನೆಂದು ಕರೆಯಲ್ಪಡುತ್ತಾನೆ.
22.          ಯಾರು ಸರ್ವ ಪಾಪಿಗಳಿಂದ ವಿರತನೋ, ನರಕದ ದುಃಖದಿಂದ ಮುಕ್ತನೋ, ಅಂತಹವನು ವೀರ್ಯವಂತನಾಗಿದ್ದಾನೆ. ಅಂತಹ ಸ್ಥಿತ ಹಾಗು ಸ್ಥಿರಚಿತ್ತನೇ ವೀರ್ಯವಂತನೂ, ಪರಾಕ್ರಮಿಯು ಹಾಗು ಧೀರನೂ ಎಂದು ಕರೆಯಲ್ಪಡುತ್ತಾನೆ.
23.          ಯಾರು ಆಂತರ್ಯದ ಹಾಗು ಬಾಹ್ಯದ ಸರ್ವ ಬಂಧನಗಳೂ ಕತ್ತರಿಸಿ ಹೋಗಿವೆಯೋ, ಯಾರು ಸರ್ವ ತೃಷ್ಣೆಗಳ ಮೂಲ ಬಂಧನದಿಂದ ಮುಕ್ತನೋ, ಅಂತಹ ಸ್ಥಿತ ಹಾಗು ಸ್ಥಿರಚಿತ್ತನೇ ಆಜನೀಯ (ಉತ್ತಮ) ಎಂದು ಹೇಳಲ್ಪಡುತ್ತಾನೆ.
                ಆಗ ಸಭಿಯ ಪರಿವ್ರಾಜಕನು ಭಗವಾನರ ಕಥನವನ್ನು ಆನಂದಿಸುತ್ತಾ, ಅನುಮೋದಿಸುತ್ತಾ, ಪ್ರಸನ್ನ ಪ್ರಮೋದನಾಗಿ ಹಷರ್ಿತ ಆನಂದವುಳ್ಳವನಾಗಿ, ಆಹ್ಲಾದತೆಯಿಂದ ಭಗವಾನರೊಡನೆ ಮುಂದಿನ ಪ್ರಶ್ನೆ ಕೇಳಿದನು.
24.          ಸಭಿಯ - ಯಾವ ಪ್ರಕಾರದ ಪ್ರಾಪ್ತಿಯವನನ್ನು ಶ್ರೋತ್ರಯ ಎನ್ನುತ್ತಾರೆ? ಆರ್ಯನು ಯಾರು? ಆಚಾರವಂತನು ಯಾರು? ಪರಿವ್ರಾಜಕ ಯಾರ ಹೆಸರು? ಭಗವಾನರೇ ನನ್ನ ಪ್ರಶ್ನೆಗಳಿಗೆ ಉತ್ತರಿಸಿ.
25.          ಭಗವಾನರು - ಈ ಸಂಸಾರದಲ್ಲಿ ಯಾವ ಸದೋಷ ಹಾಗು ನಿದರ್ೊಷ ಮಾತುಗಳಿವೆಯೋ ಅವುಗಳನ್ನು ಸರಿಯಾಗಿ ಅರಿತು ಯಾರು ವಿಜಯಿ, ಸಂಶಯರಹಿತ ಹಾಗು ವಿಮುಕ್ತನಾಗಿರುವನೋ ಮತ್ತು ಯಾರು ಸರ್ವ ಪ್ರಕಾರದಿಂದ ರಾಗರಹಿತನೋ ಆತನನ್ನು ಶ್ರೋತ್ರಿಯ ಎನ್ನುತ್ತಾರೆ.
26.          ಯಾವ ವಿಜ್ಞನು ಆಸವಗಳ ಆಲಯವನ್ನು ಅಂತ್ಯ ಮಾಡಿದ್ದಾನೋ, ಮತ್ತೆ ಜನ್ಮಿಸಲಾರನೋ, ಯಾರು ಸರ್ವ ತ್ರಿವಿಧ ಕಾಮಗಳನ್ನು ತ್ಯಜಿಸಿ ಮತ್ತು ಕಾಮಭೋಗದಲ್ಲಿ ಬೀಳಲಾರನೋ, ಆತನನ್ನು ಆರ್ಯ ಎನ್ನುತ್ತಾರೆ.
27.          ಯಾರು ಶೀಲಗಳ ಪಾಲನೆಯಲ್ಲಿ ನಿಪುಣನೋ, ಕುಶಲನೋ, ಸದಾ ಧರ್ಮವನ್ನು ಅರಿಯುವುವವನೋ, ಸರ್ವತ್ರ ಅನಾಸಕ್ತನೊ, ವಿಮುಕ್ತನೋ ಮತ್ತು ಯಾರಲ್ಲಿ ದ್ವೇಷಭಾವವಿಲ್ಲವೋ ಆತನೇ ಆಚಾರವಂತನಾಗಿದ್ದಾನೆ.
28.          ಯಾರು ಹಿಂದಿನ, ಇಂದಿನ ಮತ್ತು ಮುಂದಿನ ಕರ್ಮವನ್ನು ಮತ್ತು ಮಾಯಾ, ಅಭಿಮಾನ, ಲೋಭ, ಹಾಗು ಕ್ರೋಧವನ್ನು ದೂರೀಕರಿಸಿರುವನೋ, ವಿಚಾರಪೂರ್ವಕವಾಗಿ ಸಂಚರಿಸುವನೋ, ಯಾರು ದೇಹ-ಮನಸ್ಸಿನ ಅಂತ್ಯ ಮಾಡಿರುವನೋ, ಪ್ರಾಪ್ತಿ (ಶ್ರೇಷ್ಠ) ಮಾಡುವುದನ್ನು ಪ್ರಾಪ್ತಿ ಮಾಡಿರುವನೋ ಆತನೇ ಪರಿವ್ರಾಜಕನಾಗಿದ್ದಾನೆ.
                ಆಗ ಸಭಿಯನು ಭಗವಾನರ ಬೋಧನೆಗೆ ಅಭಿನಂದಿಸುತ್ತ, ಅನುಮೋದಿಸುತ್ತಾ, ಪ್ರಸನ್ನನಾಗಿ, ಪ್ರಮುದಿತನಾಗಿ, ಹಷರ್ಿತನಾಗಿ, ಆನಂದಿತನಾಗಿ ಮತ್ತು ಆಹ್ಲಾದವುಳ್ಳವನಾಗಿ ಆಸನದಿಂದ ಎದ್ದು ಉತ್ತರಾಸಂಗ (ಮೇಲ್ಭಾಗದ ಚೀವರ)ವನ್ನು ಒಂದು ಹೆಗಲಿಗೆ ಹೊದ್ದುಕೊಂಡು, ಎಲ್ಲಿ ಭಗವಾನರು ಇದ್ದರೋ ಅಲ್ಲಿ ಎರಡು ಹಸ್ತಗಳನ್ನು ಜೋಡಿಸಿ ವಂದಿಸಿದನು, ಪ್ರಣಾಮ ಮಾಡಿದನು. ನಂತರ ಭಗವಾನರ ಮುಂದೆ ಸಮಯೋಚಿತ ಗಾಥೆಗಳಿಂದ ಸ್ತುತಿ ಮಾಡಿದನು-
29.          ಸಭಿಯ - ಹೇ ಮಹಾಪ್ರಾಜ್ಞರೇ, ಯಾವೆಲ್ಲಾ ಶ್ರಮಣರ ಮಿಥ್ಯಾದೃಷ್ಟಿಗಳಿವೆಯೋ ಅವೆಲ್ಲವೂ ಕಲ್ಪನೆಯನ್ನು ಆಶ್ರಯಿಸಿದೆ, ಆದರೆ ತಾವು ಅವೆಲ್ಲಾ ಮಿಥ್ಯಾದೃಷ್ಟಿಗಳ ಪ್ರವಾಹವನ್ನು ದಾಟಿರುವಿರಿ.
30.          ತಾವು ದುಃಖದ ಅಂತ್ಯ ಮಾಡಿರುರಿರಿ, ದುಃಖವನ್ನು ಮೀರಿರುವಿರಿ, ತಾವು ಅರಹಂತರಾಗಿದ್ದೀರಿ. ಸಮ್ಯಕ್ ಸಂಬುದ್ಧರಾಗಿರುವಿರಿ, ಕ್ಷೀಣಾಸವರೂ ಆಗಿದ್ದೀರಿ. ಹೀಗೆ ನಾನು ಒಪ್ಪುತ್ತೇನೆ (ಶ್ರದ್ಧೆಯುಳ್ಳವನಾಗಿದ್ದೇನೆ). ಹೇ ಜೋತಿಷ್ಮಾನರೇ, ಮಹಾಪ್ರಾಜ್ಞರೇ, ದುಃಖಾಂತವನ್ನು ಮಾಡುವವರೇ, ತಾವು ನನ್ನ ಉದ್ದಾರ ಮಾಡಿರುವಿರಿ.
31.          ತಾವು ನನಗೆ ಸಂಶಯದಲ್ಲಿರುವುದನ್ನು ಅರಿತು ಸಂಶಯರಹಿತನನ್ನಾಗಿ ಮಾಡಿದಿರಿ. ಅದಕ್ಕಾಗಿ ತಮಗೆ ಕೃತಜ್ಞತಾಪೂರ್ವಕ ನಮಸ್ಕರಿಸುತ್ತೆನೆ. ಜ್ಞಾನದ ಮಾರ್ಗದಿಂದ ನಡೆದು ನಿಬ್ಬಾಣ ಪ್ರಾಪ್ತಿಗೈದ, ದ್ವೇಷರಹಿತರಾದ, ಆದಿತ್ಯ ಬಂಧು, ಮುನಿಯಾಗಿರುವ ತಾವು ಶಾಂತ ಸ್ವರೂಪಿಗಳಾಗಿದ್ದೀರಿ.
32.          ಚಕ್ಷುವಂತರೇ, ನನಗೆ ಮೊದಲು ಏನೆಲ್ಲಾ ಸಂಶಯಗಳಿದ್ದವೋ, ತಾವು ಅದನ್ನೆಲ್ಲಾ ಸಮಾಧಾನ ಮಾಡಿದಿರಿ. ಸಂಬುದ್ಧರೇ, ತಾವು ಸ್ವಯಂ ಮಹಾಮುನಿಗಳಾಗಿರುವಿರಿ. ತಮ್ಮಲ್ಲಿ ನಿವರಣಗಳೇ ಇಲ್ಲ.
33.          ತಮ್ಮ ಎಲ್ಲಾ ಉಪದ್ರವಗಳೂ ನಷ್ಟವಾಗಿವೆ, ವಿನಷ್ಟಗೊಂಡಿದೆ. ತಾವು ಶಾಂತರಾಗಿದ್ದೀರಿ, ದಾಂತರಾಗಿದ್ದೀರಿ, ಧೃತಿವಂತರಾಗಿರುವಿರಿ ಮತ್ತು ಸತ್ಯವಾದಿಗಳಾಗಿರುವಿರಿ.
34.          ಶ್ರೇಷ್ಠೋತ್ತಮರಲ್ಲಿ ಪರಮಶ್ರೇಷ್ಠರಾಗಿರುವ ಮಹಾವೀರರೇ, ಇಬ್ಬರಾದ ನಾರದ ಮತ್ತು ಪರ್ವತ; ಇನ್ನಿತರ ಮತ್ತೆಲ್ಲಾ ದೇವತೆಗಳು ತಮ್ಮ ಬೋಧನೆಯನ್ನು ಅನುಮೋದಿಸುತ್ತಾರೆ.
35.          ಹೇ ಶ್ರೇಷ್ಠ ಪುರುಷರೇ, ತಮಗೆ ವಂದಿಸುವೆ. ಹೇ ಉತ್ತಮ ಪುರುಷರೇ, ತಮಗೆ ನಮಸ್ಕರಿಸುವೆ. ದೇವತೆಗಳು ಹಾಗು ಮಾನವರ ಸಹಿತ ಸರ್ವ ಲೋಕಗಳಲ್ಲಿ ತಮ್ಮ ಸಮಾನರು ಯಾರೂ ಇಲ್ಲ.
36.          ತಾವು ಬುದ್ಧರಾಗಿರುವಿರಿ, ತಾವು ಶಾಸ್ತರಾಗಿರುವಿರಿ, ತಾವು ಮಾರವಿಜಯಿ ಮುನಿಯಾಗಿರುವಿರಿ, ತಾವು ಸಮಸ್ತ ವಾಸನೆಗಳ ಮೂಲಗಳನ್ನು ನಾಶಗೊಳಿಸಿ, ಭವಸಾಗರವನ್ನು ದಾಟಿರುವಿರಿ ಮತ್ತು ಈ ಮಾನವರನ್ನು ದಾಟಿಸಿರುವಿರಿ.
37.          ತಾವು ವಾಸನಾ-ಬಂಧನಗಳನ್ನು ಮೀರಿರುವಿರಿ, ವಾಸನೆಗಳನ್ನು ನಷ್ಟಗೊಳಿಸಿರುವಿರಿ, ತಾವು ಅನಾಸಕ್ತರೂ, ಭಯ ಹಾಗು ಭಯಾನಕತೆಯಿಂದ ರಹಿತರಾದ ಸಿಂಹವಾಗಿದ್ದೀರಿ.
38.          ಹೇಗೆ ಸುಂದರ ಕಮಲವು ಜಲದಿಂದ ಲಿಪ್ತವಾಗುವುದಿಲ್ಲವೋ, ಹಾಗೆಯೇ ತಾವು ಪುಣ್ಯ ಹಾಗು ಪಾಪಗಳೆರಡರಲ್ಲೂ ಲಿಪ್ತರಾಗಿಲ್ಲ. ಹೇ ವೀರರೇ, ಸಭಿಯನು ಶಾಸ್ತರಿಗೆ ಸಾಷ್ಟಾಂಗ ನಮಸ್ಕಾರ ಮಾಡುತಿರುವನು.
                ಆಗ ಸಭಿಯ ಪರಿವ್ರಾಜಕನು ಭಗವಾನರ ಪಾದ ಪದ್ಮದಲ್ಲಿ ಶಿರವನ್ನಿಟ್ಟು ಭಗವಾನರಿಗೆ ಹೀಗೆ ಹೇಳಿದನು- ಆಶ್ಚರ್ಯವಾಗಿದೆ ಗೋತಮರೇ, ಆಶ್ಚರ್ಯವಾಗಿದೆ. ಹೇಗೆಂದರೆ ಗೋತಮರೇ, ತಲೆಕೆಳಕಾಗಿದ್ದನ್ನು ಸರಿಯಾಗಿ ನಿಲ್ಲಿಸುವಂತೆ, ಅಡಗಿರುವುದನ್ನು ಅಗೆದು ತೋರಿಸುವಂತೆ, ದಾರಿತಪ್ಪಿದವರಿಗೆ ಮಾರ್ಗದಶರ್ಿಯಾಗಿ, ಅಂಧಕಾರದಲ್ಲಿದ್ದವರಿಗೆ ಬೆಳಕು ತೋರಿಸಿದಂತೆ, ಚಕ್ಷುವುಳ್ಳವರು ವಸ್ತುಗಳನ್ನು ಕಾಣುವ ಹಾಗೆ ಗೌತಮರಿಂದ ಅನೇಕ ರೀತಿಯಿಂದ ಧರ್ಮವು ಪ್ರಕಾಶಿಸಿತು. ಹೇ ಭಗವಾನ್, ನಾನು ಇಂದಿನಿಂದ ಬುದ್ಧರಲ್ಲಿ ಶರಣು ಹೋಗುತ್ತೇನೆ, ಧಮ್ಮಕ್ಕೆ ಹಾಗೂ ಸಂಘಕ್ಕೂ ಸಹಾ ಶರಣು ಹೋಗುತ್ತೇನೆ. ಭಗವಾನರು ನನಗೆ ಪ್ರವಜ್ರ್ಯವನ್ನು ನೀಡುವಂತಾಗಲಿ, ಉಪಸಂಪದವು ದೊರೆಯುವಂತಾಗಲಿ.
                ಭಗವಾನರು - ಸಭಿಯ! ಯಾರು ಅನ್ಯತೀರ್ಥಕನಾಗಿ ಇಲ್ಲಿ ಪಬ್ಬಜ್ಜ ಸ್ವೀಕರಿಸುವನೋ, ಉಪಸಂಪದ ಬಯಸುವನೋ, ಆತನು ನಾಲ್ಕು ಮಾಸ ಪರಿಕ್ಷಾರ್ಥ ನಿವಾಸ ಮಾಡಬೇಕಾಗುತ್ತದೆ. ನಾಲ್ಕು ಮಾಸದ ನಂತರ ಭಿಕ್ಷುಗಳು ಪ್ರಸನ್ನತೆಯಿಂದ ಆತನಿಗೆ ಪಬ್ಬಜ್ಜ ನೀಡುವರು, ಉಪಸಂಪದ ಕೊಡುವರು. ಆದರೂ ಸಹಾ ನನಗೆ ಇಲ್ಲಿ ವ್ಯಕ್ತಿಯ ವಿಭಿನ್ನತೆಯ ಜ್ಞಾನವಿದೆ.
                ಸಭಿಯ - ಹಾಗಾದರೆ ಭಂತೆ, ಹಿಂದೆ ಅನ್ಯತೀರ್ಥಕನಾಗಿ, ಪಬ್ಬಜ್ಜ ಅಪೇಕ್ಷಿಸಿದರೆ, ಉಪಸಂಪದ ಅಪೇಕ್ಷಿಸಿದರೆ ನಾಲ್ಕು ಮಾಸ ಪರಿಕ್ಷಾರ್ಥ ನಿವಾಸ ಮಾಡಬೇಕಾದರೆ, ಅನಂತರ ಭಿಕ್ಷು ಪ್ರಸನ್ನತೆಯಿಂದ ಪಬ್ಬಜ್ಜ, ಉಪಸಂಪದ ನೀಡುವದಿದ್ದರೆ ನಾನು ನಾಲ್ಕು ಮಾಸಗಳೇನು, ನಾಲ್ಕು ವರ್ಷಗಳಷ್ಟು ಕಾಲ ಪರವಾಸ ಮಾಡುತ್ತೇನೆ. ಆನಂತರವೇ ಬೇಕಾದಲ್ಲಿ ನನಗೆ ಭಿಕ್ಷುಗಳು ಪ್ರಸನ್ನತೆಯಿಂದ ಪಬ್ಬಜ್ಜ ನೀಡಲಿ, ಉಪಸಂಪದ ನೀಡಲಿ.
                ಸಭಿಯ ಪರಿವ್ರಾಜಕನು ಭಗವಾನರಿಂದ ಪ್ರವಜ್ರ್ಯ ಪಡೆದನು, ಉಪಸಂಪದ ಪಡೆದನು. ಉಪಸಂಪದ ಪಡೆದ ಕೆಲವೇ ದಿನಗಳಲ್ಲಿ ಆಯುಷ್ಮಂತ ಸಭಿಯನು ಏಕಾಂತದಲ್ಲಿ ವಾಸಿಸಿ, ಸಂಯಮಿ, ಅಪ್ರಮಾದಿ ಧ್ಯಾನ ವಿಧಿಗಳಲ್ಲಿ ಮಗ್ನನಾದನು. ನಂತರ ಯಾವ ಪರಮ ಅರ್ಥವನ್ನು ಪಡೆಯಲು ಕುಲಪುತ್ರರು ಮನೆ ತ್ಯಜಿಸಿ ಪ್ರವಜರ್ಿತರಾಗಿ ಸಾಧನಶೀಲರಾಗುವರೋ, ಅಂತಹ ಅನುತ್ತರ ಬ್ರಹ್ಮಚರ್ಯದ ಅಂತಿಮ ಫಲವನ್ನು ಸ್ವಯಂ ಜ್ಞಾನವನ್ನು ಸಾಕ್ಷಾತ್ಕರಿಸಿದನು. ಹಾಗೆಯೇ ವಿಮುಕ್ತಿ ಜ್ಞಾನವು ಲಭಿಸಿತು- ಜನ್ಮವು ಕ್ಷೀಣವಾಯಿತು, ಬ್ರಹ್ಮಚರ್ಯವು ಪೂರ್ಣವಾಯಿತು, ಮಾಡಬೇಕಾದ್ದನ್ನು ಮಾಡಿದೆ, ಯಾವ ಶೇಷವೂ ಉಳಿದಿಲ್ಲ. ಆಯುಷ್ಮಂತ ಸಭಿಯನು ಅರಹಂತರಲ್ಲಿ ಒಬ್ಬನಾದನು.

ಇಲ್ಲಿಗೆ ಸಭಿಯ ಸುತ್ತ ಮುಗಿಯಿತು.

No comments:

Post a Comment