Friday 23 January 2015

dvayataanuppassana sutta in kannada (12. ದ್ವಯತಾನುಪ್ಪಸ್ಸನಾ ಸುತ್ತ)

12. ದ್ವಯತಾನುಪ್ಪಸ್ಸನಾ ಸುತ್ತ
                (ಈ ಸುತ್ತದಲ್ಲಿ ಪಟಿಚ್ಛಸಮುಪ್ಪಾದದ ಅನುಸಾರವಾಗಿ ದುಃಖದ ಉತ್ಪತ್ತಿ ಹಾಗು ನಿರೋಧದ ಬಗ್ಗೆ ಅರಿವು ಮೂಡಿಸಿದ್ದಾರೆ)

                ಹೀಗೆ ನಾನು ಕೇಳಿದ್ದೇನೆ. ಒಮ್ಮೆ ಭಗವಾನರು ಶ್ರಾವಸ್ತಿಯ ಪೂರ್ವ ಆರಾಮದ ಮಿಗಾರ ಮಾತಾರ ಪ್ರಸಾದದಲ್ಲಿ ವಾಸಿಸುತ್ತಿದ್ದರು. ಒಮ್ಮೆ ಭಗವಾನರು ಪೂಣರ್ಿಮೆಯ ರಾತ್ರಿಯಲ್ಲಿ ಉಪೋಸಥಕ್ಕಾಗಿ ತೆರೆದ ಮೈದಾನದಲ್ಲಿ ಭಿಕ್ಷು ಸಂಘದ ಸಮೇತ ಕುಳಿತಿದ್ದರು. ಆಗ ಭಗವಾನರು ಮೌನದಿಂದ ಕೂಡಿದ ಭಿಕ್ಷು ಸಂಘಕ್ಕೆ ಈ ರೀತಿ ಸಂಬೋಧಿಸಿದರು-
                ಭಿಕ್ಷುಗಳೇ, ಈ ಆರ್ಯರ ಉತ್ತಮ ಸಂಬೋಧಿಯ ಕಡೆ ಕರೆದೊಯ್ಯುವ ಕಲ್ಯಾಣಕಾರಿ ಧಮ್ಮವನ್ನು ಕೇಳುವುದರಿಂದ ಪ್ರಯೋಜನ ಏನಿದೆ? ಹೀಗೆ ಕೇಳಿದವರಿಗೆ ನೀವು ತಿಳಿಯಪಡಿಸುವುದೇನೆಂದರೆ ಇದರಿಂದ ಎರಡು ಧಮ್ಮಗಳ ಯಥಾರ್ಥ ಜ್ಞಾನದ ಲಾಭವಾಗುವುದು. ಯಾವುದು ಎರಡು ಧಮ್ಮಗಳು ತಿಳಿಯಪಡಿಸಬೇಕಾಗಿರುವುದು?
                (1) ದುಃಖ ಮತ್ತು ದುಃಖದ ಮೂಲ (ಹೇತು). ಇದು ಒಂದು ಅನುಪಶ್ಶನ (ಚಿಂತನೆ). ದುಃಖನಿರೋಧ ಮತ್ತು ದುಃಖ ನಿರೋಧದ ಕಡೆ ಕೊಂಡೊಯ್ಯುವ ಮಾರ್ಗ. ಇದು ಎರಡನೆಯ ಅನುಪಶ್ಶನವಾಗಿದೆ. ಭಿಕ್ಷುಗಳೇ, ಈ ಎರಡು ಮಾತುಗಳನ್ನು (ವಿಷಯ) ಮನನ ಮಾಡುವಂತಹ ಅಪ್ರಮತ್ತ ಪ್ರಯತ್ನಶೀಲನು ತತ್ಪರನು ಆದ ಭಿಕ್ಷುವು ಎರಡು ಫಲಗಳಲ್ಲಿ ಒಂದನ್ನು ಪಡೆಯಬಲ್ಲವನಾಗುತ್ತಾನೆ. ಅದೆಂದರೆ: ಈ ಜನ್ಮದಲ್ಲೇ ಪೂರ್ಣ ಜ್ಞಾನ ಅಥವಾ ಅಲ್ಪ ವಾಸನೆಗಳ ಶೇಷವಿರುವ ಅನಗಾಮಿತ್ವ ಭಗವಾನರು ಹೀಗೆ ಹೇಳಿದರು. ಸುಗತರು ಹೀಗೆ ಹೇಳಿ ನಂತರ ಮತ್ತೆ ಹೀಗೆ ಮುಂದುವರಿಸಿದರು-
1.            ಯಾರು ದುಃಖವನ್ನು ಅರಿಯುವುದಿಲ್ಲವೋ ಹಾಗು ದುಃಖದ ಉತ್ಪತ್ತಿ ಸಹಾ ಅರಿಯುವುದಿಲ್ಲವೋ ಮತ್ತು ಎಲ್ಲಿ ಸರ್ವದುಃಖಗಳು ಸಂಪೂರ್ಣವಾಗಿ ಶಾಂತವಾಗಿವೆಯೋ ಮತ್ತು ದುಃಖದ ನಿರೋಧವಾಗಿ ಶಾಂತವಾಗುವಂತಹ ಮಾರ್ಗವನ್ನು ಸಹಾ ಅವರು ಅರಿಯಲಾರರು.
2.            ಅವರು ಚಿತ್ತ ಮತ್ತು ಪ್ರಜ್ಞೆಯ ವಿಮುಕ್ತಿಯಿಂದಲೂ ಸಹಾ ರಹಿತರಾಗಿದ್ದಾರೆ. ಅವರು ದುಃಖದ ಅಂತ್ಯ ಮಾಡಲು ಅಯೋಗ್ಯರಾಗಿದ್ದಾರೆ. ಅವರೇ ಜನ್ಮಜರಾದಲ್ಲಿ ಬೀಳುವವರಾಗಿದ್ದಾರೆ.
3.            ಎಲ್ಲಿ ಎಲ್ಲಾ ಪ್ರಕಾರದ ಸಂಪೂರ್ಣ ದುಃಖವು ನಿರುದ್ಧ (ನಾಶ) ವಾಗಿದೆಯೋ, ಅವರು ದುಃಖ, ದುಃಖದ ಉತ್ಪತ್ತಿ ಮತ್ತು ದುಃಖದ ಶಾಂತಿಯ ಮಾರ್ಗವನ್ನು ಅರಿತಿರುತ್ತಾರೆ.
4.            ಅವರು ಚಿತ್ತ ಮತ್ತು ಪ್ರಜ್ಞೆಯ ವಿಮುಕ್ತಿ ಸಂಪನ್ನರಾಗಿರುತ್ತಾರೆ. ಅವರು ದುಃಖದ ಅಂತ್ಯ ಮಾಡಲು ಸಮರ್ಥರಾಗಿದ್ದಾರೆ. ಅವರೇ ಜನ್ಮ-ಜರಾದಲ್ಲಿ ಬೀಳದವರಾಗಿದ್ದಾರೆ.
                (2) ಏನು ಅಂತಹ ಯಾವುದಾದರೂ ದ್ವಿತೀಯ ಕ್ರಮವಿದೆಯೇ, ಆ ಎರಡರ ಅನುಪಶ್ಶನ ಮಾಡಲಾಗುತ್ತದೆಯೆ? ಹೀಗೆ ಕೇಳಿದವರನ್ನು, ಇದೇ ಎಂದು ಹೇಳಬೇಕು. ಯಾವುದದು? ಯಾವ ಯಾವ ದುಃಖವು ಇದೆಯೋ, ಅದೆಲ್ಲವೂ ವಾಸನೆಯಿಂದ (ಕಾರಣದಿಂದ/ಉಪಾದಿ) ಆಗುತ್ತದೆ. ಇದು ಒಂದು ಅನುಪಶ್ಶನ (ಚಿಂತನೆ), ವಾಸನೆಗಳ ಸಂಪೂರ್ಣ ನಿವೃತ್ತಿ ಮತ್ತು ನಿರೋಧದಿಂದ ದುಃಖದ ಉತ್ಪತ್ತಿಯಾಗುವುದಿಲ್ಲ. ಇದು ಎರಡನೆಯ ಅನುಪಶ್ಶನವಾಗಿದೆ. ಶಾಸ್ತರು ಮತ್ತೆ ಹೀಗೆ ಹೇಳಿದರು-
5.            ಯಾವ ಲೋಕದಲ್ಲಿ ಅನೇಕ ಪ್ರಕಾರದ ದುಃಖಗಳಿವೆಯೋ ಅವು ವಾಸನೆಯ ಕಾರಣದಿಂದ ಉತ್ಪನ್ನವಾಗುತ್ತದೆ. ಯಾವ ಮೂರ್ಖನು ವಾಸನೆಗಳಲ್ಲಿ ಬೀಳುತ್ತಾನೋ, ಆ ಮೂಡನು ಪ್ರತಿಸಾರಿಯೂ ದುಃಖದಲ್ಲಿ ಬೀಳುತ್ತಾನೆ. ಆದ್ದರಿಂದ ದುಃಖದ ಉತ್ಪತ್ತಿ ಮತ್ತು ಹೇತು (ಮೂಲ) ಅರಿತು ಜನರು ವಾಸನೆಯಲ್ಲಿ ಬೀಳದಿರಲಿ.
                (3) ಏನು ಅಂತಹ ಬೇರೆ ಕ್ರಮವಿದೆಯೋ, ಆ ಎರಡರ ಚಿಂತನೆ (ಅನುಪಶ್ಶನ) ಮಾಡಲಾಗುತ್ತದೆಯೇ? ಎಂದು ಕೇಳುವವರಿಗೆ ಇದೆ ಎಂದು ಉತ್ತರಿಸಬೇಕು. ಯಾವುದದು? ಯಾವುದರಲ್ಲಿ ದುಃಖವಿದೆಯೋ, ಅದೆಲ್ಲವೂ ಅವಿದ್ಯೆಯ (ಅಜ್ಞಾನ) ಕಾರಣದಿಂದ ಆಗುತ್ತದೆ. ಇದು ಒಂದು ಚಿಂತನೆ. ಅವಿದ್ಯೆಯ ಸಂಪೂರ್ಣ ನಿವೃತ್ತಿಯಿಂದ, ನಿರೋಧದಿಂದ, ದುಃಖದ ಉತ್ಪನ್ನವಾಗುವುದಿಲ್ಲ. ಇದು ಎರಡನೆಯ ಚಿಂತನೆಯಾಗಿದೆ. ಶಾಸ್ತರು ಮತ್ತೆ ಹೀಗೆ ಹೇಳಿದರು-
6.            ಯಾವ ಜನರು ಜನ್ಮ-ಮೃತ್ಯು ರೂಪಿ ಸಂಸಾರದಲ್ಲಿ ಬಾರಿಬಾರಿಯು ಬೀಳುತ್ತಿರುವರೋ ಮತ್ತು ಈ ಲೋಕ ಹಾಗು ಪರಲೋಕದಲ್ಲಿ ಸುತ್ತಾಡುತ್ತಿರುತ್ತಾರೋ ಅವರಿಗೆ ಅವಿದ್ಯೆಯೇ ಅವರ ಗತಿಗೆ ಮೂಲ ಆಗಿದೆ.
7.            ಈ ಅವಿದ್ಯೆಯು ಮಹಾ ಮೋಹವಾಗಿದೆ. ಅದರ ಕಾರಣದಿಂದ ಚಿರಕಾಲದಿಂದ ಸುತ್ತಾಡುತ್ತಿದ್ದಾರೆ. ಯಾವ ಜೀವಿಗಳೂ ವಿದ್ಯೆ ಪ್ರಾಪ್ತಿ ಮಾಡಿದ್ದಾರೋ ಅವರು ಪುನರ್ಜನ್ಮದಲ್ಲಿ ಬೀಳುವುದಿಲ್ಲ.
                (4) ಏನು ಅಂತಹ ಬೇರೆ ಕ್ರಮವಿದೆಯೋ, ಆ ಎರಡರ ಚಿಂತನೆ (ಅನುಪಶ್ಶನ) ಮಾಡಲಾಗುತ್ತದೆಯೇ? ಎಂದು ಕೇಳುವವರಿಗೆ ಇದೆ ಎಂದು ಉತ್ತರಿಸಬೇಕು. ಯಾವುದದು? ಯಾವೆಲ್ಲಾ ದುಃಖವಿದೆಯೋ, ಅದೆಲ್ಲವೂ ಸಂಖಾರದ ಕಾರಣದಿಂದಾಗಿದೆ (ಮನೋನಿಮರ್ಿತಿ). ಸಂಖಾರದ ಸಂಪೂರ್ಣ ನಿರೋಧದಿಂದ ದುಃಖ ಇರುವುದಿಲ್ಲ. ಇದು ಎರಡನೆಯ ಚಿಂತನೆಯಗಿದೆ. ಶಾಸ್ತರು ಮತ್ತೆ ಇದನ್ನು ಹೇಳಿದರು.
8.            ಯಾವುದೆಲ್ಲವೂ ದುಃಖವಿದೆಯೋ, ಅದೆಲ್ಲಾ ಸಂಖಾರ (ಮನೋ ನಿಮರ್ಿತಿ)ದ ಕಾರಣದಿಂದ ಆಗುತ್ತದೆ. ಸಂಖಾರದ ನಿರೋಧದಿಂದ ದುಃಖ ಉತ್ಪತ್ತಿ ಆಗುವುದಿಲ್ಲ.
9.            ಸಂಖಾರಗಳ ಕಾರಣದಿಂದ ದುಃಖವುಂಟಾಗುತ್ತದೆ. ಈ ದುಷ್ಪರಿಣಾಮವನ್ನು ಅರಿತು ಸರ್ವ ಸಂಖಾರಗಳ ಶಾಂತಿ ಮತ್ತು ಸಂಜ್ಞೆಯ ನಿರೋಧದಿಂದ ದುಃಖದ ಕ್ಷಯವಾಗುತ್ತದೆ. ಇದನ್ನು ಯಥಾರ್ಥವಾಗಿ ಅರಿತು...
10.          ಸಮ್ಯಕ್ ದಶರ್ಿಯು, ಜ್ಞಾನಿಯು, ಪಂಡಿತರು ಚೆನ್ನಾಗಿ ಅರಿತು ಮಾರನ ಸಂಯೋಗವನ್ನು ಜಯಿಸಿ ಪುನರ್ಜನ್ಮದಲ್ಲಿ ಬೀಳುವುದಿಲ್ಲ.
                (5) ಏನು ಅಂತಹ ಬೇರೆ ಕ್ರಮವಿದೆಯೋ, ಆ ಎರಡರ ಚಿಂತನೆ (ಅನುಪಶ್ಶನ) ಮಾಡಲಾಗುತ್ತದೆಯೇ? ಎಂದು ಕೇಳುವವರಿಗೆ ಇದೆ ಎಂದು ಉತ್ತರಿಸಬೇಕು. ಯಾವುದದು? ಯಾವೆಲ್ಲಾ ದುಃಖವಿದೆಯೋ, ಅದೆಲ್ಲವೂ ವಿಞ್ಞಾಣದ ಕಾರಣದಿಂದ ಆಗುವುದು. ಇದು ಒಂದು ಚಿಂತನೆಯಾಗಿದೆ. ವಿಞ್ಞಾಣದ ಸಂಪೂರ್ಣ ನಿರೋಧದಿಂದ ದುಃಖ ಉತ್ಪನ್ನ ಆಗುವುದಿಲ್ಲ. ಇದು ಒಂದು ಎರಡನೆಯ ಚಿಂತನೆಯಾಗಿದೆ. ಶಾಸ್ತರು ಮತ್ತೆ ಹೀಗೆ ಹೇಳಿದರು-
11.          ಯಾವೆಲ್ಲಾ ದುಃಖವು ಉತ್ಪನ್ನವಾಗುವುದೋ, ಅದೆಲ್ಲವೂ ವಿಞ್ಞಾಣದ ಕಾರಣದಿಂದ ಆಗುತ್ತದೆ. ವಿಞ್ಞಾಣದ ನಿರೋಧದಿಂದ ದುಃಖ ಉತ್ಪನ್ನವಾಗುವುದಿಲ್ಲ.
12.          ವಿಞ್ಞಾಣ ಕಾರಣದಿಂದ ದುಃಖವಾಗುವುದು. ಇದರ ದುಷ್ಟರಿಣಾಮಗಳನ್ನು ಅರಿತು ವಿಞ್ಞಾಣದ ನಿರೋಧದಿಂದ ಭಿಕ್ಷು ತೃಷ್ಣಾರಹಿತನಾಗಿ ಪರಿನಿಬ್ಬಾಣವನ್ನು ಪ್ರಾಪ್ತಿಮಾಡುವನು.
                (6) ಏನು ಅಂತಹ ಬೇರೆ ಕ್ರಮವಿದೆಯೋ, ಆ ಎರಡರ ಚಿಂತನೆ (ಅನುಪಶ್ಶನ) ಮಾಡಲಾಗುತ್ತದೆಯೇ? ಎಂದು ಕೇಳುವವರಿಗೆ ಇದೆ ಎಂದು ಉತ್ತರಿಸಬೇಕು. ಯಾವುದದು? ಯಾವೆಲ್ಲಾ ದುಃಖವಿದೆಯೋ ಅದೆಲ್ಲವೂ ಸ್ಪರ್ಶದ ಕಾರಣದಿಂದ ಆಗುತ್ತದೆ. ಇದು ಒಂದು ಚಿಂತನೆಯಾಗಿದೆ. ಸ್ಪರ್ಶದ ಸಂಪೂರ್ಣ ನಿರೋಧದಿಂದ ದುಃಖದ ಉತ್ಪನ್ನವಾಗುವುದಿಲ್ಲ. ಇದು ಎರಡನೆಯ ಚಿಂತನೆಯಾಗಿದೆ. ಶಾಸ್ತರು ಮತ್ತೆ ಇದನ್ನು ಹೇಳಿದರು.
13.          ಯಾರು ಸ್ಪರ್ಶಗಳಲ್ಲಿ ಸಂಲಗ್ನರಾಗಿರುವರೋ, ಅವರು ಸಂಸಾರ ಶ್ರೋತದ ಅನುಸಾರವಾಗಿ ಚಲಿಸುವವರಾಗಿದ್ದಾರೆ. ಅವರು ಸುಮಾರ್ಗದಲ್ಲಿ ಚಲಿಸುವವರಾಗಿದ್ದಾರೆ. ಅವರೆಲ್ಲರೂ ಸಾಂಸಾರಿಕ ಬಂಧನಗಳು, ಕ್ಷಯದಿಂದ ದೂರವಿದ್ದಾರೆ.
14.          ಯಾರು ಸ್ಪರ್ಶವನ್ನು ಆಳವಾಗಿ ಅರಿತು ಜ್ಞಾನಪೂರ್ವಕ ಉಪಶಮದಲ್ಲಿ ರತರೋ, ಅವರು ಸ್ಪರ್ಶ ನಿರೋಧದಿಂದ ತೃಷ್ಣಾರಹಿತರಾಗಿ ಪರಿನಿಬ್ಬಾಣವನ್ನು ಪ್ರಾಪ್ತಿಮಾಡಿರುವರು.
                (7) ಏನು ಅಂತಹ ಬೇರೆ ಕ್ರಮವಿದೆಯೋ, ಆ ಎರಡರ ಚಿಂತನೆ (ಅನುಪಶ್ಶನ) ಮಾಡಲಾಗುತ್ತದೆಯೇ? ಎಂದು ಕೇಳುವವರಿಗೆ ಇದೆ ಎಂದು ಉತ್ತರಿಸಬೇಕು. ಯಾವುದದು? ಯಾವೆಲ್ಲಾ ದುಃಖವಿದೆಯೋ, ಅವೆಲ್ಲವೂ ವೇದನೆಯ ಕಾರಣದಿಂದ ಉತ್ಪನ್ನವಾಗುವುದು. ಇದು ಒಂದು ಅನುಪಶ್ಶನ (ಚಿಂತನೆ) ವಾಗಿದೆ. ವೇದನೆಯ ಸಂಪೂರ್ಣ ನಿರೋಧದಿಂದ ದುಃಖದ ಉತ್ಪತ್ತಿ ಆಗುವುದಿಲ್ಲ. ಇದು ಎರಡನೆಯ ಚಿಂತನೆಯಾಗಿದೆ. ನಂತರ ಶಾಸ್ತರು ಹೀಗೆ ಹೇಳಿದರು:
15.          ಸುಖ, ದುಃಖ ಮತ್ತು ತಟಸ್ಥ (ಉಪೇಕ್ಷಾ)ಗಳ ರೂಪದಲ್ಲಿ ಯಾವೆಲ್ಲವೂ ಆಂತರ್ಯದಲ್ಲಿ ಮತ್ತು ಬಾಹ್ಯದಲ್ಲಿ ವೇದನೆಗಳಿವೆ.
16.          ಅವೆಲ್ಲವನ್ನು ನಶ್ವರ ಮತ್ತು ಕ್ಷಣಭಂಗುರ ಎಂದು ಅರಿತು ಇದು ದುಃಖವಾಗಿದೆ ಎಂದು ಸ್ಪಷ್ಟವಾಗಿ ಅರಿತು, ವಿಶಾಲವಾಗಿ ಅವುಗಳ ನಷ್ಟವನ್ನು (ಕ್ಷಯ) ನೋಡಿ ಈ ಪ್ರಕಾರದಿಂದ ಅದರಿಂದ ವಿರಕ್ತನಾಗುತ್ತಾನೆ. ಆ ಭಿಕ್ಷುವು ವೇದನೆಗಳ ಕ್ಷಯದಿಂದ ತೃಷ್ಣಾರಹಿತನಾಗಿ ಪರಿನಿಬ್ಬಾಣವನ್ನು ಪ್ರಾಪ್ತಿಮಾಡುತ್ತಾನೆ.
                (8) ಏನು ಅಂತಹ ಬೇರೆ ಕ್ರಮವಿದೆಯೋ, ಆ ಎರಡರ ಚಿಂತನೆ (ಅನುಪಶ್ಶನ) ಮಾಡಲಾಗುತ್ತದೆಯೇ? ಎಂದು ಕೇಳುವವರಿಗೆ ಇದೆ ಎಂದು ಉತ್ತರಿಸಬೇಕು. ಯಾವುದದು? ಯಾವೆಲ್ಲವೂ ದುಃಖವಿದೆಯೋ, ಅವೆಲ್ಲವೂ ತೃಷ್ಣೆಯ ಕಾರಣದಿಂದ ಅಗುತ್ತದೆ. ಇದು ಒಂದು ಚಿಂತನೆಯಾಗಿದೆ. ತೃಷ್ಣೆಯ ಸಂಪೂರ್ಣ ನಿರೋಧದಿಂದ ದುಃಖದ ಉತ್ಪತ್ತಿ ಆಗುವುದಿಲ್ಲ. ಇದು ಎರಡನೆಯ ಅನುಪಶ್ಶನವಾಗಿದೆ. ಶಾಸ್ತರು ಮತ್ತೆ ಹೀಗೆ ನುಡಿದರು.
17.          ತೃಷ್ಣೆಯ ಸಂಗಡ ಪುರುಷನು ದೀರ್ಘಕಾಲದಿಂದ ಈ ಲೋಕದಲ್ಲಿ ಹಾಗು ಪರಲೋಕದಲ್ಲಿ ಸುತ್ತಾಡುತ್ತಿದ್ದಾನೆ. ಮತ್ತೆ ಸಂಸಾರವನ್ನು ದಾಟಲು ಅಸಮರ್ಥನಾಗಿದ್ದಾನೆ.
18.          ತೃಷ್ಣೆಯ ಕಾರಣದಿಂದ ದುಃಖದ ಉತ್ಪನ್ನ ಆಗುವುದು. ಈ ದುಷ್ಟರಿಣಾಮವನ್ನು ಅರಿತು ಭಿಕ್ಷುವಿಗೆ ಬೇಕಾಗಿರುವುದು ಏನೆಂದರೆ ತೃಷ್ಣಾರಹಿತ ಮತ್ತು ಆಸಕ್ತರಹಿತನಾಗಿ ಸ್ಮೃತಿ (ಎಚ್ಚರಿಕೆ)ಯಿಂದ ಸಂಚರಿಸಲಿ.
                (9) ಏನು ಅಂತಹ ಬೇರೆ ಕ್ರಮವಿದೆಯೋ, ಆ ಎರಡರ ಚಿಂತನೆ (ಅನುಪಶ್ಶನ) ಮಾಡಲಾಗುತ್ತದೆಯೇ? ಎಂದು ಕೇಳುವವರಿಗೆ ಇದೆ ಎಂದು ಉತ್ತರಿಸಬೇಕು. ಯಾವುದದು? ಯಾವೆಲ್ಲಾ ದುಃಖವಿದೆಯೋ, ಅವೆಲ್ಲವೂ ಉಪಾದಾನದ (ಅಂಟುವಿಕೆಯ) ಕಾರಣದಿಂದ ಉತ್ಪನ್ನವಾಗುತ್ತದೆ. ಇದು ಒಂದು ಅನುಪಶ್ಶನವಾಗಿದೆ. ಉಪಾದಾನದ ಸಂಪೂರ್ಣ ನಿರೋಧದಿಂದ ದುಃಖದ ಉತ್ಪತ್ತಿಯಾಗುವುದಿಲ್ಲ. ಇದು ಎರಡನೆಯ ಅನುಪಶ್ಶನವಾಗಿದೆ. ಶಾಸ್ತರು ಹೀಗೆ ಮತ್ತೆ ನುಡಿದರು.
19.          ಉಪಾದಾನದ (ವಿಷಯಗಳಲ್ಲಿ ಪ್ರಬಲವಾಗಿ ಅಂಟುವಿಕೆ) ಕಾರಣದಿಂದ ಭವ (ಜನ್ಮ ಸಂಭವಿಸುವಿಕೆ) ವಾಗುತ್ತದೆ ಮತ್ತು ಜೀವಿಗಳಿಗೆ ದುಃಖವು ಪ್ರಾಪ್ತಿ ಆಗುತ್ತದೆ. (ಜನ್ಮ) ಉತ್ಪನ್ನನಾದವನಿಗೆ ಮೃತ್ಯುವು ಆಗುತ್ತದೆ. ಇದೇ ದುಃಖದ ಉತ್ಪತ್ತಿ ಆಗಿದೆ.
20.          ಆದ್ದರಿಂದ ಉಪಾದಾನದ ಕ್ಷಯದಿಂದ ಪಂಡಿತನು ಜನ್ಮಕ್ಷಯವೆಂದು ಆಳವಾಗಿ ಅರಿಯುತ್ತಾನೆ ಹಾಗು ಪುನರ್ಜನ್ಮದಲ್ಲಿ ಬೀಳುವುದಿಲ್ಲ.
                (10) ಏನು ಅಂತಹ ಬೇರೆ ಕ್ರಮವಿದೆಯೋ, ಆ ಎರಡರ ಚಿಂತನೆ (ಅನುಪಶ್ಶನ) ಮಾಡಲಾಗುತ್ತದೆಯೇ? ಎಂದು ಕೇಳುವವರಿಗೆ ಇದೆ ಎಂದು ಉತ್ತರಿಸಬೇಕು. ಯಾವುದದು? ಯಾವೆಲ್ಲಾ ದುಃಖವಿದೆಯೋ, ಅವೆಲ್ಲವೂ ಕರ್ಮಯುಕ್ತ ಪ್ರಯತ್ನದಿಂದ ಉತ್ಪನ್ನವಾಗುತ್ತದೆ. ಇದು ಒಂದು ಚಿಂತನೆಯಾಗಿದೆ. ಕರ್ಮಯುಕ್ತ ಪ್ರಯತ್ನದಿಂದ ಸಂಪೂರ್ಣವಾಗಿ ನಿರೋಧದಿಂದ ದುಃಖದ ಉತ್ಪತ್ತಿ ಆಗುವುದಿಲ್ಲ. ಇದು ಎರಡನೆಯ ಅನುಪಶ್ಶನವಾಗಿದೆ. ಶಾಸ್ತರು ಮತ್ತೆ ಹೀಗೆ ಹೇಳಿದರು-
21.          ಯಾವುದೆಲ್ಲವೂ ದುಃಖ ಉತ್ಪನ್ನವಾಗುವುದೋ, ಅವೆಲ್ಲವೂ ಕರ್ಮಯುಕ್ತ ಪ್ರಯತ್ನದಿಂದ ಉತ್ಪನ್ನವಾಗುತ್ತದೆ. ಪ್ರಯತ್ನ (ಕರ್ಮ)ದ ನಿರೋಧದಿಂದ ದುಃಖದ ಉತ್ಪತ್ತಿ ಆಗಲಾರದು.
22-23. ದುಃಖವು ಕ್ರಿಯೆಯ (ಪ್ರಯತ್ನ) ಕಾರಣದಿಂದ ಆಗುತ್ತದೆ. ಇದರ ದುಷ್ಪರಿಣಾಮವನ್ನು ಅರಿತು ಸರ್ವ ಪ್ರಯತ್ನಗಳನ್ನು ತ್ಯಜಿಸಿ ಕರ್ಮಯುಕ್ತ ಪ್ರಯತ್ನರಹಿತನಾಗಿ ವಿಮುಕ್ತನಾಗಲಿ, ಭವತೃಷ್ಣೆಯ ವಿನಾಶದಲ್ಲಿ ಶಾಂತಚಿತ್ತ ಭಿಕ್ಷು ನಿರತನಾಗಲಿ ಮತ್ತು ಜನ್ಮರೂಪಿ ಸಾಗರವನ್ನು ದಾಟಲಿ. ಆತನು ಮತ್ತೆ ಪುನರ್ಜನ್ಮದಲ್ಲಿ ಬೀಳುವುದಿಲ್ಲ.
                (11) ಏನು ಅಂತಹ ಬೇರೆ ಕ್ರಮವಿದೆಯೋ, ಆ ಎರಡರ ಚಿಂತನೆ (ಅನುಪಶ್ಶನ) ಮಾಡಲಾಗುತ್ತದೆಯೇ? ಎಂದು ಕೇಳುವವರಿಗೆ ಇದೆ ಎಂದು ಉತ್ತರಿಸಬೇಕು. ಯಾವುದದು? ಯಾವೆಲ್ಲಾ ದುಃಖವಿದೆಯೋ ಅವೆಲ್ಲವೂ ಆಹಾರದ (ಮಾನಸಿಕ ಆಹಾರ) ಕಾರಣದಿಂದ ಆಗುತ್ತದೆ. ಇದು ಒಂದು ಚಿಂತನೆ, ಆಹಾರದ ಸಂಪೂರ್ಣತೆ ನಿರೋಧದಿಂದ ದುಃಖದ ಉತ್ಪತ್ತಿ ಆಗಲಾರದು. ಇದು ಎರಡನೆಯ ಅನುಪಶ್ಶನ. ಹೀಗೆ ನುಡಿದು ಶಾಸ್ತರು ಹೀಗೆ ಹೇಳಿದರು-
24.          ಯಾವೆಲ್ಲವೂ ದುಃಖ ಉತ್ಪನ್ನವಾಗುವುದೋ ಅವೆಲ್ಲಾ ಆಹಾರದ (ಸ್ಪರ್ಶ, ಇಚ್ಛೆ, ವಿನ್ಯಾನ) ಕಾರಣದಿಂದ ಉತ್ಪನ್ನವಾಗುತ್ತದೆ. ಆಹಾರದ ನಿರೋಧದಿಂದ ದುಃಖದ ಉತ್ಪತ್ತಿ ಆಗುವುದಿಲ್ಲ.
25.          ಆಹಾರದಿಂದಲೇ ದುಃಖ, ಇದರ ದುಷ್ಪರಿಣಾಮಗಳನ್ನು ಚೆನ್ನಾಗಿ ಅರಿತು ಆಹಾರದಿಂದ (ವಿಷಯಗಳಿಂದ) ವಿಮುಕ್ತನಾಗಲಿ.
26.          ಚಿತ್ತ ಮಲಗಳ ಕ್ಷಯದಿಂದಲೇ ಆರೋಗ್ಯ (ನಿಬ್ಬಾಣ) ಎಂಬುದನ್ನು ಚೆನ್ನಾಗಿ ಅರಿತು ಸ್ಥಿರ ವ್ಯಕ್ತಿಯು ಜ್ಞಾನಪೂರ್ವಕ ಆಹಾರ ಸೇವಿಸಲಿ (ಕುಶಲ ಚೇತಸಿಕಾ) ಇಂತಹ ವ್ಯಕ್ತಿಯು ಮತ್ತೆ ಜನ್ಮಗ್ರಹಣ ಮಾಡುವುದಿಲ್ಲ.
                (12) ಏನು ಅಂತಹ ಬೇರೆ ಕ್ರಮವಿದೆಯೋ, ಆ ಎರಡರ ಚಿಂತನೆ (ಅನುಪಶ್ಶನ) ಮಾಡಲಾಗುತ್ತದೆಯೇ? ಎಂದು ಕೇಳುವವರಿಗೆ ಇದೆ ಎಂದು ಉತ್ತರಿಸಬೇಕು. ಯಾವುದದು? ಯಾವೆಲ್ಲವೂ ದುಃಖದಿಂದಿದೆಯೋ, ಅವೆಲ್ಲವೂ ಚಂಚಲತೆಯ ಕಾರಣದಿಂದ ಆಗುತ್ತದೆ. ಇದು ಒಂದು ಚಿಂತನೆಯಾಗಿದೆ. ಚಂಚಲತೆಗಳ ಸಂಪೂರ್ಣ ನಿರೋಧದಿಂದ ದುಃಖದ ಉತ್ಪತ್ತಿ ಆಗುವುದಿಲ್ಲ. ಇದು ಎರಡನೆಯ ಅನುಷ್ಠಾನವಾಗಿದೆ. ಶಾಸ್ತರು ಮತ್ತೆ ಇದನ್ನು ನುಡಿದರು-
27.          ಯಾವೆಲ್ಲವೂ ದುಃಖವು ಸಂಭವಿಸುವುದೋ ಅವೆಲ್ಲವೂ ಚಂಚಲತೆಯ ಕಾರಣದಿಂದ ಆಗುತ್ತದೆ. ಚಂಚಲತೆಯ ನಿರೋಧದಿಂದ ದುಃಖದ ಉತ್ಪತ್ತಿ ಆಗುವುದಿಲ್ಲ.
28.          ಆದ್ದರಿಂದ ಇದನ್ನು ತ್ಯಜಿಸಿ, ಸಂಖಾರಗಳ ನಿರೋಧ ಮಾಡಿ, ತೃಷ್ಣೆ ಹಾಗು ಆಸಕ್ತಿರಹಿತರಾಗಿ ಸ್ಮೃತಿಯಿಂದ ಭಿಕ್ಷು ಸಂಚರಿಸಲಿ.
                (13) ಏನು ಅಂತಹ ಬೇರೆ ಕ್ರಮವಿದೆಯೋ, ಆ ಎರಡರ ಚಿಂತನೆ (ಅನುಪಶ್ಶನ) ಮಾಡಲಾಗುತ್ತದೆಯೇ? ಎಂದು ಕೇಳುವವರಿಗೆ ಇದೆ ಎಂದು ಉತ್ತರಿಸಬೇಕು. ಯಾವುದದು? ಯಾರು ತೃಷ್ಣೆಯಲ್ಲಿ ಲಿಪ್ತರಾಗಿರುವರೋ ಅವರಲ್ಲಿ ಚಂಚಲತೆ ಬರುವುದು. ಇದು ಒಂದು ಚಿಂತನೆಯಾಗಿದೆ. ಯಾರು ತೃಷ್ಣೆಯಲ್ಲಿ ನಿಲರ್ಿಪ್ತರೋ ಅವರಿಗೆ ಚಂಚಲತೆ ಇರುವುದಿಲ್ಲ. ಇದು ಎರಡನೆಯ ಚಿಂತನೆ ಆಗಿದೆ. ಶಾಸ್ತರು ಮತ್ತೆ ಇದನ್ನು ನುಡಿದರು-
29.          ಯಾರು ತೃಷ್ಣೆಯಲ್ಲಿ ಲಿಪ್ತರಲ್ಲವೋ ಅವರಲ್ಲಿ ಚಂಚಲತೆ ಇರುವುದಿಲ್ಲ. ಆದರೆ ತೃಷ್ಣೆಯಲ್ಲಿ ಲಿಪ್ತರಾಗಿರುವವರಲ್ಲಿ ಚಂಚಲತೆ ಆಗುತ್ತದೆ. ಅವರು ಈ ಲೋಕ ಹಾಗು ಪರಲೋಕದಲ್ಲಿ ಸುತ್ತಾಡುವಿಕೆಯಿಂದ ಮುಕ್ತಿ ಹೊಂದಲಾರರು.
30.          ತೃಷ್ಣೆಯಲ್ಲಿ ಲಿಪ್ತರಾಗಿರುವುದು ಮಹಾ ಭಯವಾಗಿದೆ. ಈ ದುಷ್ಪರಿಣಾಮವನ್ನು ಚೆನ್ನಾಗಿ ಅರಿತು ತೃಷ್ಣೆಯಿಂದ ನಿಲರ್ಿಪ್ತನಾಗಿ ಮತ್ತು ಅನಾಸಕ್ತನಾಗಿ ಸ್ಮೃತಿಯಿಂದ ಸಂಚರಿಸಲಿ (ವಾಸಿಸಲಿ).
                (14) ಏನು ಅಂತಹ ಬೇರೆ ಕ್ರಮವಿದೆಯೋ, ಆ ಎರಡರ ಚಿಂತನೆ (ಅನುಪಶ್ಶನ) ಮಾಡಲಾಗುತ್ತದೆಯೇ? ಎಂದು ಕೇಳುವವರಿಗೆ ಇದೆ ಎಂದು ಉತ್ತರಿಸಬೇಕು. ಯಾವುದದು? ಭಿಕ್ಷುಗಳೇ, ರೂಪಲೋಕಕ್ಕಿಂತ ಅರೂಪಲೋಕವು ಶಾಂತಕರವಾಗಿದೆ. ಇದು ಒಂದು ಚಿಂತನೆ, ಅರೂಪಲೋಕಕ್ಕಿಂತ ನಿಬ್ಬಾಣವು ಶಾಂತಕರವಾಗಿದೆ. ಇದು ಎರಡನೆಯ ಅನುಪಶ್ಶನವಾಗಿದೆ. ಶಾಸ್ತರು ಮತ್ತೆ ಹೀಗೆ ನುಡಿದರು-
31.          ಯಾವೆಲ್ಲಾ ಜೀವಿಗಳು ರೂಪಲೋಕದಲ್ಲಿ ಇರುತ್ತವೆಯೋ ಮತ್ತು ಯಾವೆಲ್ಲಾ ಜೀವಿಗಳು ಅರೂಪಲೋಕ ನಿವಾಸಿಗಳೋ, ಅವುಗಳು ನಿರೋಧ (ನಿಬ್ಬಾಣ) ಅರಿಯದೆ ಪುನರ್ಜನ್ಮದಲ್ಲಿ ಬೀಳುತ್ತವೆ.
32.          ಯಾವೆಲ್ಲವೂ ರೂಪವನ್ನು (ದೇಹ) ಅರಿತು (ಚಿತ್ತ) ಅರೂಪದಲ್ಲಿ ಅನಾಸಕ್ತರಾಗಿರುವರೋ, ಯಾರು ನಿಬ್ಬಾಣ ಪ್ರಾಪ್ತಿಮಾಡಿ ವಿಮುಕ್ತರೋ, ಅವರು ಮೃತ್ಯುವನ್ನು ಅಂತ್ಯ ಮಾಡಿರುವರು.
                (15) ಏನು ಅಂತಹ ಬೇರೆ ಕ್ರಮವಿದೆಯೋ, ಆ ಎರಡರ ಚಿಂತನೆ (ಅನುಪಶ್ಶನ) ಮಾಡಲಾಗುತ್ತದೆಯೇ? ಎಂದು ಕೇಳುವವರಿಗೆ ಇದೆ ಎಂದು ಉತ್ತರಿಸಬೇಕು. ಯಾವುದದು? ಭಿಕ್ಷುಗಳೇ, ದೇವ, ಮಾರ, ಬ್ರಹ್ಮ, ಸಮಣ ಹಾಗು ಬ್ರಾಹ್ಮಣ ಸಹಿತ ಸರ್ವ ಜೀವಿಗಳ ಸಮೂಹವು ಯಾವುದನ್ನು ಸತ್ಯ ಎಂದು ಅರಿತವೋ ಅದನ್ನು ಆರ್ಯರು ಸಮ್ಯಕ್ ಪ್ರಜ್ಞೆಯಿಂದ ಅಸತ್ಯ ಎಂದು ಅರಿತರು. ಇದು ಒಂದು ಅನುಪಶ್ಶನವಾಗಿದೆ. ದೇವ, ಮಾರ, ಬ್ರಹ್ಮ, ಶ್ರಮಣ ಹಾಗು ಬ್ರಾಹ್ಮಣರ ಸಹಿತ ಸರ್ವಜೀವಿಗಳ ಸಮೂಹವು ಯಾವುದನ್ನು ಅಸತ್ಯ ಎಂದು ಭಾವಿಸಿದ್ದರೋ, ಆರ್ಯರು ಅದನ್ನು ಸಮ್ಯಕ್ ಪ್ರಜ್ಞೆಯಿಂದ ಸತ್ಯ ಎಂದು ಅರಿತರು. ಇದು ಎರಡನೆಯ ಚಿಂತನೆಯಾಗಿದೆ. ಶಾಸ್ತರು ಮತ್ತೆ ಹೀಗೆ ನುಡಿದರು-
33.          ಅನಾತ್ಮರಲ್ಲಿ (ತಾನು ಅಲ್ಲದುದರಲ್ಲಿ) ಆತ್ಮವನ್ನು (ತಾನೆಂದು, ನಿತ್ಯವೆಂದು ಭ್ರಮಿಸುವ) ನಂಬಿರುವ ದೇವಸಹಿತ ಲೋಕವನ್ನು ನೋಡಿ, ನಾಮ (ಮನಸ್ಸು) ಮತ್ತು ರೂಪದಲ್ಲಿ (ದೇಹ) ಸಂಲಗ್ನನರಾಗಿರುವ ಜೀವಿಗಳೂ ಇದನ್ನು ಸತ್ಯವೆಂದು ನಂಬುವರು.
34.          ಯಾವುದನ್ನು ಯಾವರೀತಿ ಅರಿಯುವರೋ, ಅದು ಅದಕ್ಕಿಂತ ಭಿನ್ನವಾಗಿದೆ. ಅವರ ಈ ಧಾರಣೆ (ನಂಬಿಕೆ) ಅಸತ್ಯವಾಗುತ್ತದೆ. ಯಾವುದು ಅಸತ್ಯವೋ ಅದು ನಶ್ವರವಾಗಿದೆ.
35.          ನಿಬ್ಬಾಣವು ಅನಕ್ಷರವಾಗಿದೆ. ಆರ್ಯರು ಅದನ್ನು ಸತ್ಯವೆಂದು ಅರಿತಿದ್ದಾರೆ. ಸತ್ಯವನ್ನು ಅರಿತವರು (ಯಾರೇ ಆಗಲಿ) ತೃಷ್ಣಾರಹಿತರಾಗಿ ಪರಿನಿಬ್ಬಾಣ ಪ್ರಾಪ್ತಿಮಾಡುತ್ತಾರೆ.
                (16) ಏನು ಅಂತಹ ಬೇರೆ ಕ್ರಮವಿದೆಯೋ, ಆ ಎರಡರ ಚಿಂತನೆ (ಅನುಪಶ್ಶನ) ಮಾಡಲಾಗುತ್ತದೆಯೇ? ಎಂದು ಕೇಳುವವರಿಗೆ ಇದೆ ಎಂದು ಉತ್ತರಿಸಬೇಕು. ಯಾವುದದು? ಭಿಕ್ಷುಗಳೇ, ದೇವ, ಮಾರ, ಶ್ರಮಣ ಹಾಗು ಬ್ರಾಹ್ಮಣಸಹಿತ ಸರ್ವಜೀವಿಗಳು ಯಾವುದನ್ನು ಸುಖ ಎಂದು ಅರಿತಿರುವರೋ, ಆರ್ಯರು ಅದನ್ನೇ ಸಮ್ಯಕ್ ಪ್ರಜ್ಞಾದಿಂದ ಯಥಾರ್ಥವಾಗಿ ದುಃಖ ಎಂದು ಅರಿತಿದ್ದಾರೆ. ಇದು ಒಂದು ಅನುಪಶ್ಶನವಾಗಿದೆ. ದೇವ, ಮಾನವ, ಬ್ರಹ್ಮ, ಶ್ರಮಣ ಹಾಗು ಬ್ರಾಹ್ಮಣ ಸಹಿತ ಸರ್ವ ಜೀವಿಗಳೂ ಯಾವುದನ್ನು ದುಃಖ ಎಂದು ಅರಿತಿರುವರೋ, ಆರ್ಯರು ಅದನ್ನು ಸುಖ ಎಂದು ಯಥಾರ್ಥವಾಗಿ ಅರಿತಿರುವರು. ಇದು ಎರಡನೆಯ ಅನುಪಶ್ಶನವಾಗಿದೆ. ಭಿಕ್ಷುಗಳೇ, ಈ ಎರಡು ಮಾತುಗಳನ್ನು ಮನನ ಮಾಡುವವ ಅಪ್ರಮತ್ತನಾಗಿ, ಪ್ರಯತ್ನಶೀಲನಾಗಿರುವ ತತ್ಪರ ಭಿಕ್ಷು ಎರಡು ಫಲಗಳಲ್ಲಿ ಒಂದನ್ನು ಪ್ರಾಪ್ತಿಮಾಡಬಹುದು. ಒಂದು ಇದೇ ಜನ್ಮದಲ್ಲೇ ಪೂರ್ಣ ಗಂಭೀರ ಜ್ಞಾನ ಅಥವಾ (ಎರಡನೆಯದು) ಅಲ್ಪ ವಾಸನಶೇಷ ಅನಗಾಮಿತ್ವ, ಭಗವಾನರು ಹೀಗೆ ಹೇಳಿದರು, ಸುಗತರು ಹೀಗೆ ಹೇಳಿದರುಶಾಸ್ತರು ಹೀಗೆ ಹೇಳಿದರು-
36-37. ಎಷ್ಟೇ ಇಷ್ಟವಾದ ಪ್ರಿಯವಾದ ಮನಾಪವಾದ (ಮನಸೂರೆಗೊಳ್ಳುವ) ರೂಪ, ಶಬ್ದ, ಗಂಧ, ರಸ ಮತ್ತು ಸ್ಪರ್ಶ ಇದೆಯೋ ಅವೆಲ್ಲವನ್ನು ದೇವಸಹಿತವಾದ ಲೋಕವು ಸುಖವೆಂದು ಪರಿಗಣಿಸಿದೆ. ಮತ್ತು ಎಲ್ಲಿ ಅದರ ನಿರೋಧವಾಗುವುದೋ ಅದನ್ನೇ ಮಿಥ್ಯಾ ಜ್ಞಾನಿಗಳು ದುಃಖವೆಂದು ನಂಬಿದ್ದಾರೆ.
38.          ಪಂಚಖಂದದ (ಅಸ್ತಿತ್ವದ) ನಿರೋಧವನ್ನು ಆರ್ಯರು ಸುಖವೆಂದು ಯಥಾರ್ಥವಾಗಿ ಅರಿತಿರುವರು. ಸಮ್ಯಕ್ ದರ್ಶಕರ ಈ ಮಹೋನ್ನತ ಅನುಭವವು ಲೋಕದ (ಇತರರ) ಅನುಭವಕ್ಕಿಂತ ಭಿನ್ನವಾಗಿದೆ ಹಾಗು ಶ್ರೇಷ್ಠವಾಗಿದೆ.
39.          ಯಾವುದನ್ನು ಪರರು ಸುಖ ಎಂದು ಹೇಳುವರೋ, ಅದನ್ನೇ ಆರ್ಯರು ದುಃಖವೆಂದು ಹೇಳುವರು. ಯಾವುದನ್ನು ಪರರು ದುಃಖವೆಂದು ಹೇಳುವರೋ, ಅದನ್ನೇ ಆರ್ಯರು ಸುಖವೆಂದು ಅರಿಯುವರು. ಅರಿಯುವಿಕೆಯಲ್ಲಿ ದುಷ್ಕರವಾದ ಈ ಧಮ್ಮವನ್ನು ನೋಡಿ, ಅಜ್ಞರಾದ ಜನರು ಈ ವಿಷಯದಲ್ಲಿ ಮೂಢರಾಗಿಯೇ ಇದ್ದಾರೆ.
40.          ಅವಿದ್ಯೆಯಿಂದ ಆವರಿಸಿರುವ ಜನರಿಗೆ ಕತ್ತಲೆಯಾಗಿದೆ ಮತ್ತು ಅಜ್ಞರಿಗೆ ಅಂಧಕಾರಮಯವಾಗಿದೆ. ಸತ್ಪುರುಷರಿಗೆ ಆ ಪ್ರಕಾಶವು ನೋಡಲು ಸಮಾನವಾಗಿರುವಂತೆ (ಅನುಕೂಲವಾಗಿ) ತೆರೆದಿರುತ್ತದೆ. ಧರ್ಮವನ್ನು ಅರಿಯದವರು ಹತ್ತಿರವಿದ್ದರೂ ಸತ್ಯವನ್ನು ಅರಿಯುವುದಿಲ್ಲ.
41.          ಭವರಾಗದಲ್ಲಿ ವಶೀಭೂತರೂ, ಭವಶ್ರೋತದಲ್ಲಿ ಬಿದ್ದಿರುವರು ಮತ್ತು ಮಾರನ ಅಧೀನರಾಗಿರುವ ಜನರಿಗೆ ಈ ಧರ್ಮ ಅರಿಯುವುದು ಅಷ್ಟು ಸುಲಭವಲ್ಲ.
42.          ಆರ್ಯರಿಗೆ ಅತಿರಿಕ್ತವಾಗಿ ಮತ್ತು ಯಾರು ಸಂಬೋಧಿ ಪದಕ್ಕೆ ಅರ್ಹರೋ ಅವರು ಚೆನ್ನಾಗಿ ಅರಿತು ಆಸವರಹಿತರಾಗಿ ಪರಿನಿಬ್ಬಾಣ ಪ್ರಾಪ್ತಿಮಾಡುತ್ತಾರೆ.
                ಭಗವಾನರು ಹೀಗೆ ನುಡಿದರು. ಆ ಭಿಕ್ಷುಗಳು ಆ ಬೋಧನೆಗೆ ಪ್ರಸನ್ನರಾಗಿ ಅನುಮೋದಿಸಿ ಅಭಿನಂದಿಸಿದರು. ಈ ಉಪದೇಶ ಹೇಳುವಾಗ ಅರವತ್ತು ಭಿಕ್ಷುಗಳ ಚಿತ್ತವು ಆಸವಗಳಿಂದ ವಿಮುಕ್ತವಾಗಿ, ಅರಹಂತರಾದರು.

ಇಲ್ಲಿಗೆ ದ್ವಯತಾನುಪ್ಪಸನಾ ಸುತ್ತ ಮುಗಿಯಿತು.

ಮಹಾ ವಗ್ಗ ಮುಗಿಯಿತ

naalaka sutta in kannada (ನಾಲಕ ಸುತ್ತ)

11. ನಾಲಕ ಸುತ್ತ
                (ಅಸಿತ ಋಷಿಯ ಸೋದರಿಯ ಪುತ್ರನಿಗೆ ಭಗವಾನರ ಉಪದೇಶ)

1.            ಅಸಿತ ಋಷಿಯು (ತುಸಿತ ದೇವಲೋಕದಲ್ಲಿ) ದಿನದ ಆಹಾರಕ್ಕೆಂದು ಹೋಗಿ ನೋಡಿದಾಗ ಸರ್ವ ದೇವತೆಗಳೂ ಆನಂದಿತರಾಗಿದ್ದಾರೆ, ಪ್ರಸನ್ನರಾಗಿದ್ದಾರೆ, ದೇವತೆಗಳು ಮತ್ತು ಇಂದ್ರನು ಸತ್ಕಾರ ಪೂರ್ವಕವಾಗಿ, ಶುದ್ಧ ವಸ್ತ್ರಗಳನ್ನು ಧಾರಣೆ ಮಾಡಿದ್ದನು. ಹಾಗು ವಸ್ತ್ರವನ್ನು ಹಾರಿಸುತ್ತಾ ಅತ್ಯಧಿಕ ಸ್ತುತಿಯನ್ನು ಮಾಡುತ್ತಿದ್ದನು.
2.            ದೇವತೆಗಳ ಪ್ರಸನ್ನತೆ ಹಾಗು ಹರ್ಷ ಚಿತ್ತವನ್ನು ಕಂಡು ಅಸಿತರು ಈ ರೀತಿ ಚಿಂತಿಸಿದರು- ಯಾವ ಕಾರಣ ದೇವಗಣಕ್ಕೆ ಅತ್ಯಂತ ಪ್ರಸನ್ನರನ್ನಾಗಿ ಮಾಡಿ ವಸ್ತ್ರ ಹಾರಿಸುವಂತೆ ಮಾಡಿದೆ?.
3.            ಒಮ್ಮೆ ಅಸುರರೊಂದಿಗೆ ಯುದ್ಧವಾಗಿ, ದೇವತೆಗಳಿಗೆ ವಿಜಯವಾಗಿತ್ತು. ಅಸುರರು ಪರಾಜಿತರಾಗಿದ್ದರು. ಆಗಲೂ ಸಹಾ ಈ ರೀತಿಯಾದ ರೋಮಾಂಚನಕಾರಿ ಆನಂದ ಅನುಭವಿಸಿರಲಿಲ್ಲ. ಯಾವ ಅದ್ಭುತವಾದ ವಿಷಯ ಕಂಡು ದೇವತೆಗಳು ಪ್ರಮುದಿತರಾಗಿದ್ದಾರೆ.
4.            ದೇವತೆಗಳು ಹಷರ್ೊದ್ಗಾರಗಳು ಮಾಡುತ್ತಿದ್ದಾರೆ. ಗೀತೆಗಳನ್ನು ಹಾಡುತ್ತಿರುವರು. ಭುಜಗಳನ್ನು ಹಾರಿಸುತ್ತಾ ಹಾಗು ದಿವ್ಯನೃತ್ಯಗಳನ್ನು ಮಾಡುತ್ತಾ ಇರುವರು. ನಾನು ಮೇರುಶಿಖರದಲ್ಲಿರುವ ತಮ್ಮನ್ನು ಕೇಳುತ್ತಿದ್ದೇನೆ, ಇಂದ್ರ ನನ್ನ ಸಂದೇಹವನ್ನು ಶೀಘ್ರದಲ್ಲಿ ದೂರೀಕರಿಸು.
5.            ಇಂದ್ರ - ಆ ಅತುಲನಿಯ, ಪರಮಶ್ರೇಷ್ಠ ರತ್ನವಾದ ಮಹಾಬೋಧಿಸತ್ವರು ಸರ್ವಜೀವಿಗಳ ಹಿತಸುಖಕ್ಕಾಗಿ ಮಾನವ ಲೋಕದಲ್ಲಿ ಶಾಕ್ಯ ಜನಪದದಲ್ಲಿ ಲುಂಬಿನಿ ಉದ್ಯಾನದಲ್ಲಿ (ಗ್ರಾಮ) ಜನಿಸಿದ್ದಾರೆ. ಅದರಿಂದ ನಾವೆಲ್ಲಾ ಅತ್ಯಧಿಕ ತುಷ್ಟರು ಹಾಗು ಪ್ರಸನ್ನರೂ ಆಗಿದ್ದೇವೆ.
6.            ಅವರು ಸರ್ವಜೀವಿಗಳಲ್ಲೂ ಅತ್ಯುತ್ತಮರು, ಮಹಾಶ್ರೇಷ್ಠರು, ಸರ್ವಮಾನವ ಶ್ರೇಷ್ಠರು, ಸರ್ವ ಪ್ರಜೋತ್ತಮರು ಆಗಿರುವರು. ಹೇಗೆ ಸಿಂಹವು ಸುಘರ್ಜನೆ ಮಾಡುವುದೋ, ಅದೇರೀತಿ ಋಷಿಪತ್ತನ ವನದಲ್ಲಿ ಧರ್ಮಚಕ್ರ ಪ್ರವರ್ತನ ಮಾಡುವರು.
7.            ಈ ಮಾತನ್ನು ಕೇಳಿದ ಅವರು ಅತಿ ಶೀಘ್ರದಲ್ಲಿ ಶುದ್ಧೋಧನ ಮಹಾರಾಜರ ಭವನಕ್ಕೆ ಬಂದರು. ಅಲ್ಲಿ ಕುಳಿತು ಶಾಕ್ಯರೊಂದಿಗೆ ಈ ರೀತಿ ಕೇಳಿದರು- ಕುಮಾರರೆಲ್ಲಿ? ನಾನು ದಶರ್ಿಸಲು ಪ್ರಬಲಾಕಾಂಕ್ಷೆಯುಳ್ಳವನಾಗಿದ್ದೇನೆ!
8.            ಆಗ ಸುಂದರ ಆಕಾರದಲ್ಲಿ ಸುನಿಮರ್ಿತರಾದ, ತೇಜೋಕಾಂತಿಯುಕ್ತರಾದ, ಸ್ವರ್ಣಪ್ರಭೆಯನ್ನು ಪ್ರಸರಿಸುತ್ತಿರುವ ಪರಮ ಸ್ವರೂಪಿ ಪುತ್ರನನ್ನು ಶಾಕ್ಯರು ಅಸಿತ ಋಷಿಗೆ ತೋರಿಸಿದರು.
9.            ಪ್ರಜ್ವಲಿಸುತ್ತಿರುವ ತೇಜಸ್ಸಿನಂತೆ, ಆಕಾಶದಲ್ಲಿ ನಿರ್ಮಲಶುದ್ಧ ಚಂದಿರನಂತೆ ಮತ್ತು ಮೇಘರಹಿತ ಶರದ್ ಋತುವಿನ ಸೂರ್ಯನಂತೆ ಇರುವ ಕುಮಾರನನ್ನು ಕಂಡು ಅಸಿತರು ಆನಂದಿತರಾದರು. ಅವರಲ್ಲಿ ವಿಪುಲವಾದ ಆನಂದವು ಉಕ್ಕಿಹರಿಯಿತು.
10.          ಆಕಾಶದಲ್ಲೂ ಸಹಾ ದೇವತೆಗಳಲ್ಲಿ ಅನೇಕ ಶಾಖೆ ಹಾಗು ಸಹಸ್ರ ಮಂಡಲದಿಂದ ಕೂಡಿದ ಛತ್ರಿಯನ್ನು ಧಾರಣೆ ಮಾಡಿದ್ದರು. ಸ್ವರ್ಣದಂಡಯುಕ್ತವಾದ ಚಾಮರವನ್ನು ಬೀಸುತ್ತಿದ್ದರು. ಆದರೂ ಚಾಮರದವರೂ ಮತ್ತು ಛತ್ರಿಧಾರಣೆಯವರು ಕಾಣುತ್ತಿರಲಿಲ್ಲ.
11.          ಜಟಧಾರಿಯಾದ, ಪ್ರಸಿದ್ಧಿ ಹೊಂದಿದ ಅಸಿತ ಋಷಿಯು ಹಳದಿ ವರ್ಣದ ಕಂಬಳಿಯಲ್ಲಿಟ್ಟ ಸ್ವರ್ಣಮುದ್ರೆಯಂತಿರುವ ಸುಂದರ ಕುಮಾರನನ್ನು ದಶರ್ಿಸಿ ಅತ್ಯಧಿಕ ಹಷರ್ಿತರಾದರು, ಅವರ ಚಿತ್ತವು ಸಹಾ ಆನಂದಿತವಾಯಿತು. ಕುಮಾರನ ಮೇಲೆ ಶ್ವೇತಛತ್ರಿಯಿತ್ತು.
12.          ಉತ್ತಮೋತ್ತಮರಾದ ಶಾಕ್ಯ ಕುಮಾರನನ್ನು ಗ್ರಹಿಸಿ, ಲಕ್ಷಣಶಾಸ್ತ್ರ ಮತ್ತು ವೇದಪಾರಂಗತ ಜಿಜ್ಞಾಸು ಋಷಿಯು ಪ್ರಸನ್ನ ಮನದಿಂದ ಈ ಮಾತು ಹೇಳಿದರು. ಈತನು ಸವರ್ೊತ್ತಮನಾಗಿದ್ದಾನೆ, ಮನುಷ್ಯರಲ್ಲೇ ಅತ್ಯಂತ ಉತ್ತಮನಾಗಿರುವನು.
13.          ಹಾಗೆಯೇ ಅವರಿಗೆ ತಮ್ಮ ಗಮನ (ಮರಣ)ದ ಸ್ಮರಣೆ ಉಂಟಾಗಿ ಅವರ ನೇತ್ರಗಳಲ್ಲಿ ಆಶ್ರುವು ಹರಿಯಿತು. ಶಾಕ್ಯರಾಜರಂತು ಅಸಿತ ಋಷಿಯ ಆಶ್ರುವನ್ನು ಕಂಡು ಗಾಬರಿಯಿಂದ ಈ ರೀತಿ ಕೇಳಿದರು- ಕುಮಾರನಿಗೆ ವಿಘ್ನವಾವುದು ಇಲ್ಲತಾನೆ?
14.          ಕಾಲದೇವಲ (ಅಸಿತ) ಋಷಿಯು ಶಾಕ್ಯರ ಆತಂಕ ಕಂಡು ಈ ವಾಕ್ಯ ನುಡಿದರು: ಅಹಿತ ಯಾವುದನ್ನೂ ಕುಮಾರ ಕಾಣಲಾರ ಮತ್ತು ಯಾವುದೇ ವಿಘ್ನ ಆಗಲಾರದು. ಈತನು ಸಾಧಾರಣ ಮಾನವನಲ್ಲ, ತಾವೆಲ್ಲರೂ ಪ್ರಸನ್ನರಾಗಿರಿ.
15.          (ಚಕ್ಷು) ಉತ್ತಮನು, ವಿಶುದ್ಧ ದಶರ್ಿಯಾದ ಈ ಕುಮಾರನು ಸಂಬೋಧಿಯ ಪ್ರಾಪ್ತಿಮಾಡುವನು ಮತ್ತು ಸರ್ವಜೀವಿಗಳ (ಬಹುಜನರ) ಹಿತದ ಅನುಕಂಪೆಯಿಂದ ಧಮ್ಮಚಕ್ರದ ಪ್ರವರ್ತನ ಮಾಡುವನು. ಅವನ ಬ್ರಹ್ಮಚರ್ಯಯುತ ಶಾಸನವು ಶ್ರೇಷ್ಠತರವಾಗಿ ಹರಡುತ್ತದೆ.
16.          ಆದರೆ ಇಲ್ಲಿ ನನ್ನ ಆಯುವು ಹೆಚ್ಚು ಉಳಿದಿಲ್ಲ. ಅದಕ್ಕೆ ಮುಂಚೆಯೇ ನನ್ನ ಮೃತ್ಯು ಸಂಭವಿಸುತ್ತದೆ. ನಾನು ಈ ಅಸದೃಶ ಪರಾಕ್ರಮಿಯ ಧಮ್ಮವನ್ನು ಕೇಳಲಾರೆನು. ಆದ್ದರಿಂದ ನಾನು ಆತುರನಾಗಿದ್ದೇನೆ, ಕಷ್ಟದಲ್ಲಿದ್ದೇನೆ ಹಾಗು ದುಃಖಿತನಾಗಿದ್ದೇನೆ.
17.          ಶಾಕ್ಯರಿಗೆ ವಿಪುಲವಾದ ಆನಂದ ನೀಡಿ ಆ ಬ್ರಹ್ಮಚಾರಿಯು ಅಂತಃಪುರದಿಂದ ಹೊರಟರು. ಆದರೆ ಅವರು ತಮ್ಮ ಸೋದರಿಯ ಪುತ್ರನ ಮೇಲೆ ಅನುಂಕಪ ತಾಳಿ ಆತನನ್ನು ಅಸದೃಶ ಪರಕ್ರಮಿಯ ಬಳಿ ಬ್ರಹ್ಮಚರ್ಯೆಯಲ್ಲಿ ತೊಡಗಿಸಿದರು.
18.          ಸಂಬೋಧಿ ಪ್ರಾಪ್ತಿ, ಧಮ್ಮ ಮಾರ್ಗದ ಉಪದೇಶ ನೀಡುವಂತ ಬುದ್ಧರ ಘೋಷ ಪರರಿಂದ ಕೇಳಿದಾಗ ಅವರ (ಬುದ್ಧರ) ಬಳಿಗೆ ಹೋಗು, ಧಮ್ಮದ ವಿಷಯ ಕೇಳಿ ಆ ಭಗವಾನರ ಬಳಿ ಬ್ರಹ್ಮಚರ್ಯೆ ಪಾಲಿಸು.
19.          ಹಿತೈಷಿ ಭಾವದಿಂದ, ಸ್ಥಿರವಾದ, ಉತ್ತಮವಾದ, ವಿಶುದ್ಧ ಭವಿಷ್ಯ ದೃಷ್ಟಿಯಿಂದ ಉಪದಿಷ್ಟನಾದ ಪುಣ್ಯವಂತ ಆ ನಾಲಕನು ಬುದ್ಧರ (ಜಿನ) ಪ್ರತೀಕ್ಷೆಯಿಂದ ತಪಸ್ವಿಯಾಗಿ ಇಂದ್ರಿಯಗಳ ರಕ್ಷಣೆ ಮಾಡಿದನು.
20.          ಧಮ್ಮಚಕ್ರ ಪ್ರವತ್ತನದ ಸಮಯದಲ್ಲಿ ಬುದ್ಧರೆಂಬ ಘೋಷವನ್ನು ಕೇಳಿ, ಅವರಲ್ಲಿಗೆ ಹೋದನು. ಪರಮಶ್ರೇಷ್ಠ ಋಷಿಗೆ ದಶರ್ಿಸಿ ಧಮ್ಮದ ವಿಷಯದಲ್ಲಿ ಅಸಿತರಿಂದ ಕಲಿಯಲ್ಪಟ್ಟ ಪ್ರಶ್ನೆಗಳನ್ನು ಉತ್ತಮ ಪ್ರಜ್ಞೆಯಿಂದ ಕೇಳಿದನು.
ಇಲ್ಲಿಗೆ ವಸ್ತು ಗಾಥೆ ಮುಗಿಯಿತು.
21.          ನಾಲಕ - ನಾನು ಈ ಮಾತನ್ನು ಅಸಿತ ಋಷಿಯಿಂದ ಯಥಾರ್ಥವಾಗಿ ಅರಿತಿರುವೆನು. ಸರ್ವಧಮ್ಮಗಳಲ್ಲಿ ಪಾರಂಗತರಾದ ಹೇ ಗೋತಮರೇ, ನಾನು ಅದನ್ನು ಕೇಳುತ್ತಿರುವೆನು.
22.          ಗೃಹತ್ಯಾಗಿಯಾಗಿ ಭಿಕ್ಷೆಯಿಂದ ಜೀವಿಸುತ್ತಿರುವ ನನಗೆ, ನಾನು ಪ್ರಶ್ನಿಸಿದಾಗ ಉತ್ತಮ ಪದದ ವಿಷಯದಲ್ಲಿ ತಿಳಿಸಿ.
23.          ಭಗವಾನರು - ದುಷ್ಕರ ಮತ್ತು ಕಠಿಣತೆಯಿಂದ ಪ್ರಾಪ್ತವಾದ ಜ್ಞಾನ ವ್ಯಾಖ್ಯೆಯನ್ನು ನಾನು ಮಾಡುವೆನು. ನಾನು ಆ ವಿಷಯದಲ್ಲಿ ನಿನಗೆ ತಿಳಿಸುವೆನು. ಆದ್ದರಿಂದ ನೀನು ಸ್ಥಿರಚಿತ್ತದಲ್ಲಿ ದೃಢನಾಗು.
24.          ಗ್ರಾಮದಲ್ಲಿ ಕೆಲವರು ವಂದಿಸುವರು, ಅಥವಾ ಕೆಲವರು ನಿಂದಿಸುವರು. ಅದರ ಪ್ರತಿಯಾಗಿ ಸಮಾನ ಭಾವದಿಂದಿರು, ಮನವನ್ನು ದೂಷಿತ ಮಾಡದಿರು, ಶಾಂತತೆ ಹಾಗು ವಿನೀತನಾಗಿ ಸಂಚರಿಸು.
25.          ದಾವಾಗ್ನಿಯ ಜ್ವಾಲೆಯ ರೀತಿ ನಾನಾ ಪ್ರಕಾರದ ಅವಲಂಬನೆ (ಆಕರ್ಷಣೆ) ಉಪಸ್ಥಿತವಾಗಿರುತ್ತದೆ. ಸ್ತ್ರೀಯರು ಮುನಿಗಳಿಗೆ ಪ್ರಲೋಭನೆ ಮಾಡುವರು. ಅವರಲ್ಲಿ ನೀನು ಪ್ರಲೋಭಿತನಾಗದಿರು.
26.          ಮೈಥುನ ಧರ್ಮದಿಂದ ವಿರತನಾಗು, ಒಳ್ಳೆಯ-ಕೆಟ್ಟದಾದ ಕಾಮಭೋಗಗಳನ್ನು ತ್ಯಜಿಸಿ, ನಿಂತಿರುವ ಮತ್ತು ಚಲಿಸುತ್ತಿರುವ ಜೀವಿಗಳ ಬಗ್ಗೆ ವಿರೋಧಭಾವ ಅಥವಾ ಆಸಕ್ತಿಯಿಂದ ರಹಿತನಾಗು.
27.          ಹೇಗೆ ನಾನು ಇರುವೆನೋ, ಹಾಗೆಯೇ ಜೀವಿಗಳು ಸಹಾ, ಹೇಗೆ ಈ ಜೀವಿಗಳಿರುವವೋ ಹಾಗೆಯೇ ನಾನಿರುವೆನು. ಈ ರೀತಿಯಾಗಿ ಎಲ್ಲರೂ ತನ್ನ ಸಮಾನರು ಎಂದು ಅರಿತು ಯಾರನ್ನು ವಧಿಸದಿರು ಮತ್ತು ಪರರಿಂದ ಕೊಲ್ಲಿಸದಿರು (ಹಿಂಸಿಸದಿರು).
28.          ಯಾವ ಇಚ್ಛೆ ಮತ್ತು ಲೋಭದಿಂದ ಸಾಮಾನ್ಯ ಜನ, ಪ್ರಾಣಿಗಳು ಆಸಕ್ತರಾಗಿರುವರು, ಅದನ್ನು ತ್ಯಜಿಸಿ ಚಕ್ಷುಮಂತನು ಸಂಚರಿಸಲಿ ಮತ್ತು ನರಕವನ್ನು ದಾಟಿಹೋಗಲಿ.
29.          ಯಾರು ಹೊಟ್ಟೆಬಾಕನಲ್ಲವೋ, ಮಿತಹಾರ ಭೋಜನ ಮಾಡುವನೋ, ಅಲ್ಪೆಚ್ಛೆ ಮತ್ತು ಲೋಭರಹಿತ ನಾಗಿರುವನೋ ಅಂತಹ ಇಚ್ಛಾರಹಿತ ಸಂತುಷ್ಟ ವ್ಯಕ್ತಿ ಶಾಂತನಾಗುವನು.
30.          ಭಿಕ್ಷೆ ಸ್ವೀಕರಿಸಿ ಆ ಮುನಿಯು ವನದಲ್ಲಿ ಹೋಗಲಿ ಮತ್ತು ಗಿಡ (ಮರ)ದ ಕೆಳಗೆ ಆಸನ ಹಾಕಿ ಕುಳಿತುಕೊಳ್ಳಲಿ.
31.          ವನದಲ್ಲಿ ಇರುತ್ತಾ ಆ ಧೀರನು ಧ್ಯಾನತತ್ವರ ಆಗಲಿ, ತನಗೆ ಸಂತೋಷ ನೀಡುವ ಮರದ ಕೆಳಗೆ ಧ್ಯಾನಮಾಡಲಿ.
32.          ರಾತ್ರಿ ಕಳೆದ ನಂತರ ಪ್ರಾತಃ ಭಿಕ್ಷೆಗಾಗಿ ಗ್ರಾಮವನ್ನು ಪ್ರವೇಶಿಸಲಿ, ಅಲ್ಲಿ ಯಾರಲ್ಲಿಯೂ ನಿಮಂತ್ರಣ ಸ್ವೀಕಾರ ಮಾಡದೆ ಮತ್ತು ಪರರು ಗ್ರಾಮದಿಂದ ತಂದ ಭೋಜನವನ್ನು ಸ್ವೀಕರಿಸದಿರಲಿ.
33.          ಮುನಿಯು ಗ್ರಾಮದಲ್ಲಿ ಬಂದಕೂಡಲೇ ಕುಲಗಳಲ್ಲಿ ಬೆರೆಯದಿರಲಿ, ನಿಶ್ಶಬ್ದದಿಂದ ಭಿಕ್ಷೆ ಸ್ವೀಕರಿಸಲಿ, ಸಂಕೇತ ನೀಡುವಂತಹ ಯಾವ ಮಾತನ್ನು ಆಡದಿರಲಿ.
34.          ಏನಾದರೂ ಉತ್ತಮವಾದದ್ದು ಸಿಕ್ಕರೆ ಸಿಗಲಿ, ಸಿಗದಿದ್ದರೂ ಪರವಾಗಿಲ್ಲ. ಒಂದು (ಸ್ಥಳ) ಸ್ಥಾನದಲ್ಲಿ ವೃಕ್ಷದ ರೀತಿ ಎರಡು ಅವಸ್ಥೆಯಲ್ಲಿ ಸಮಾನ (ಶಾಂತ) ನಾಗಿಯೇ ಇರುತ್ತಾನೆ.
35.          ಮೂಕನಾಗದಿದ್ದರೂ ಮೂಕನ ಹಾಗೆ ನಿಶ್ಶಬ್ದದಿಂದ ಭಿಕ್ಷಾಪಾತ್ರೆಯನ್ನು ತೆಗೆದುಕೊಂಡು ಸಂಚರಿಸುತ್ತಾ ಅಲ್ಪ ದಾನವನ್ನು ಅನಾಧರಣೆ ಮಾಡದೆ ಮತ್ತು ದಾನಿ (ದಾತನ)ಯ ನಿಂದೆ ಮಾಡದಿರಲಿ.
36.          ಮಹಾಶ್ರಮಣರಿಂದ ಒಳ್ಳೆಯ-ಕೆಟ್ಟ ಮಾರ್ಗ ಹೇಳಲ್ಪಟ್ಟಿವೆ. ಸಂಸಾರ ಸಾಗರವನ್ನು ಎರಡುಬಾರಿ ದಾಟಲಾಗುವುದಿಲ್ಲ ಮತ್ತು ಒಂದೇಸಾರಿ (ತಕ್ಷಣವೂ) ಪ್ರಾಪ್ತಿಮಾಡಲಾಗುವುದಿಲ್ಲ.
37.          ಯಾರಲ್ಲಿ ತೃಷ್ಣೆ ಇಲ್ಲವೋ, ಯಾವ ಭಿಕ್ಷುವಿನ ಭವಸ್ತೋತ್ರ ನಷ್ಟವಾಗಿದೆಯೋ, ಯಾರು ಕೃತ್ಯ-ಅಕೃತ್ಯಗಳಿಂದ ಮೀರಿಹೋಗಿರುವರೋ, ಅವರಿಗೆ ಯಾವ ಸಂತಾಪವೂ ಇಲ್ಲ.
38.          ನಾನು ನಿನಗೆ ಮೌನೇಯ (ಶ್ರೇಷ್ಠಜ್ಞಾನ) ವನ್ನು ತಿಳಿಸುತ್ತೇನೆ, ಅದು ಕತ್ತಿಯ ಅಲಗಿನಂತಿರುತ್ತದೆ. ನಾಲಿಗೆಯನ್ನು ತಾಲುವಿಗೆ ಒತ್ತಿ ಹೊಟ್ಟೆ (ನಾಲಿಗೆ)ಯ ಬಗ್ಗೆ ಸಂಯಮಿಯಾಗು.
39.          ಆಲಸ್ಯರಹಿತ ಚಿತ್ತದವನಾಗು, ಅವಿಶ್ರಾಂತಿಯುತ ಚಿಂತನೆ ಮಾಡದಿರು, ಕ್ಲೇಷರಹಿತ ಹಾಗು ಅನಾಸಕ್ತನಾಗಿ ಬ್ರಹ್ಮಚರ್ಯ ಪಾಲನೆಮಾಡು.
40.          ಒಂದೇ ಆಸನದಲ್ಲಿ ಬಹುಕಾಲ ಇರುವಂತೆ ಅಭ್ಯಾಸಿಸು ಮತ್ತು ಶ್ರಮಣರ ಸಂಗತಿ ಮಾಡು, ಏಕಾಂತವಾಸಿಯು ಮೌನೆಯ ಎಂದು ಕರೆಯಲ್ಪಡುತ್ತಾನೆ. ಏಕಾಂತತೆಯಲ್ಲಿ (ಚಿತ್ತ ಏಕಾಂತತೆ) ವಿಹರಿಸುವವನು (ಪಾಲಿಸುವವನು) ದಶದಿಕ್ಕುಗಳನ್ನು ಪ್ರಕಾಶಿಸುವನು.
41.          ಧ್ಯಾನಿಯು, ವಿಷಯ ವಾಸನಾ ತ್ಯಾಗಿಯು ಧೀರರ ವಾಣಿಯನ್ನು ಕೇಳಿ ಶ್ರದ್ಧಾಳು ವ್ಯಕ್ತಿಯಾಗಿ (ಪಾಪಗಳಲ್ಲಿ) ಲಜ್ಜೆಯುಳ್ಳವನಾಗಿ (ಪುಣ್ಯ) ಕರ್ಮಗಳಲ್ಲಿ ಶ್ರದ್ಧೆಯನ್ನು ಅತ್ಯಧಿಕಾಗಿ ಬೆಳೆಸಲಿ.
42.          ಚಿಕ್ಕ ನದಿಗಳಲ್ಲಿ ಮತ್ತು ಕಾಲುವೆಗಳ ಮಧ್ಯೆಯಿರುವುದನ್ನು ನದಿ ಎಂದು ಭಾವಿಸು. ಚಿಕ್ಕ ನದಿಯು ಶಬ್ದ ಮಾಡುತ್ತಾ ಹರಿಯುತ್ತದೆ. ಆದರೆ ಸಾಗರವು ಶಾಂತವಾಗಿ ಚಲಿಸುತ್ತದೆ.
43.          ಯಾರಲ್ಲಿ ಕೊರತೆಯಿರುವುದೋ ಆತನು ಕೀತರ್ಿಗಾಗಿ (ಪ್ರಚಾರ) ಶಬ್ದಮಾಡುತ್ತಾನೆ. ಆದರೆ ಯಾರು ಪೂರ್ಣವಾಗಿರುವರೊ, ಅವರು ಶಾಂತರಾಗಿರುತ್ತಾರೆ. ಮೂರ್ಖ ಅರ್ಧ ತುಂಬಿದ ಗಡಿಗೆಯಂತಾದರೆ, ಪಂಡಿತರು ತುಂಬಿದ ಜಲಾಶಯದಂತೆ.
44.          ಯಾವ ಶ್ರಮಣರು ಅರ್ಥಯುಕ್ತ ಬಹುಮಾತನ್ನು ಹೇಳುವರೋ, ಅವರು ಅರಿತು ಧಮ್ಮೋಪದೇಶ ನೀಡುವರು ಮತ್ತು ಅರಿತು ಹೇಳುವರು.
45.          ಅವರು ಅರಿತು ಸಹಾ ಸಂಯಮದ ಕಾರಣದಿಂದ ಅರಿತ ಧರ್ಮವನ್ನು ಬಹು ವಿವರವಾಗಿ ಹೇಳುವುದಿಲ್ಲ. ಮುನಿ ಮೌನೆಯನೆಂದು ಕರೆಯಲ್ಪಡುತ್ತಾನೆ. ಆ ಮುನಿಯು ಮೌನೆಯವನ್ನು (ಶಾಂತಜ್ಞಾನ) ಪ್ರಾಪ್ತಿಮಾಡಿರುವನು.

ಇಲ್ಲಿಗೆ ನಾಲಕ ಸುತ್ತ ಮುಗಿಯಿತು.

kokalika sutta in kannada (ಕೋಕಾಲಿಕ ಸುತ್ತ)

10. ಕೋಕಾಲಿಕ ಸುತ್ತ
                (ಅಗ್ರಶ್ರಾವಕ ಆಯುಷ್ಮಂತ ಸಾರಿಪುತ್ತ ಮತ್ತು ಆಯುಷ್ಮಂತ ಮೊಗ್ಗಲ್ಲಾನರಿಗೆ ನಿಂದಿಸಿ ಕೋಕಾಲಿಕನು ನರಕದಲ್ಲಿ ಹುಟ್ಟಿದನು. ಸಂತರನ್ನು ನಿಂದಿಸುವುದು ಮಹಾ ಪಾಪವಾಗಿದೆ.)

                ಹೀಗೆ ನಾನು ಕೇಳಿದ್ದೇನೆ. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿ ಅನಾಥಪಿಂಡಿಕನ ಜೇತವನ ಆರಾಮದಲ್ಲಿ ತಂಗಿದ್ದರು. ಆಗ ಕೋಕಾಲಿಕನು ಭಗವಾನರು ಇರುವೆಡೆಗೆ ಬಂದನು. ಭಗವಾನರಿಗೆ ವಂದಿಸಿ ಒಂದುಕಡೆ ಕುಳಿತನು. ಒಂದುಕಡೆ ಕುಳಿತ ಕೋಕಾಲಿಕನು ಭಗವಾನರಿಗೆ ಹೀಗೆ ಹೇಳಿದನು- ಭಂತೆ, ಸಾರಿಪುತ್ತ ಹಾಗು ಮೊಗ್ಗಲ್ಲಾನರು ಕೆಟ್ಟ ವಿಚಾರವುಳ್ಳವರಾಗಿದ್ದಾರೆ, ಕೆಟ್ಟ ಇಚ್ಛೆಗಳಿಗೆ ವಶಿಯಾಗಿದ್ದಾರೆ.
                ಹೀಗೆ ಹೇಳಿದ ಕೋಕಾಲಿಕ ಭಿಕ್ಷುವಿಗೆ ಭಗವಾನರು ಈ ರೀತಿ ಹೇಳಿದರು- ಕೋಕಾಲಿಕ, ಹೀಗೆ ಹೇಳದಿರು, ಹೀಗೆ ಹೇಳದಿರು, ಕೋಕಾಲಿಕ, ಸಾರಿಪುತ್ತ ಹಾಗು ಮೊಗ್ಗಲ್ಲಾನರಲ್ಲಿ ನಿನ್ನ ಚಿತ್ತವನ್ನು ಪ್ರಸನ್ನವಾಗಿಡು, ಸಾರಿಪುತ್ತ ಹಾಗು ಮೊಗ್ಗಲ್ಲಾನರು ಅತ್ಯಂತ ಉತ್ತಮರಾಗಿದ್ದಾರೆ.
                ಎರಡನೆಯ ಬಾರಿಯೂ ಮತ್ತು ಮೂರನೆಯ ಬಾರಿಯೂ ಕೋಕಾಲಿಕ ಭಿಕ್ಷುವು ಭಗವಾನರಿಗೆ ಈ ರೀತಿ ಹೇಳಿದನು: ಭಂತೆ! ಯಾದಾಪಿ ನಾನು ಭಗವಾನರಲ್ಲಿ ಶ್ರದ್ಧೆ ಇಡುವೆನು ಹಾಗು ಪ್ರಸನ್ನನಾಗಿರುವೆನು. ಆದರೂ ಸಹಾ ಸಾರಿಪುತ್ತ ಹಾಗು ಮೊಗ್ಗಲ್ಲಾನರು ಕೆಟ್ಟ ವಿಚಾರವುಳ್ಳವರು, ಕೆಟ್ಟ ಇಚ್ಛೆಗಳಿಗೆ ವಶಿಯಾಗಿದ್ದಾರೆ. ಮೂರನೆಯ ಬಾರಿಯೂ ಸಹಾ ಭಗವಾನರು ಕೋಕಾಲಿಕನಿಗೆ ಈ ರೀತಿ ಹೇಳಿದರು- ಕೋಕಾಲಿಕ, ಹೀಗೆ ಹೇಳದಿರು, ಹೀಗೆ ಹೇಳದಿರು, ಕೋಕಾಲಿಕ, ಸಾರಿಪುತ್ತ ಹಾಗು ಮೊಗ್ಗಲ್ಲಾನರಲ್ಲಿ ನಿನ್ನ ಚಿತ್ತವನ್ನು ಪ್ರಸನ್ನವಾಗಿಡು, ಸಾರಿಪುತ್ತ ಹಾಗು ಮೊಗ್ಗಲ್ಲಾನರು ಅತ್ಯಂತ ಅತ್ಯುತ್ತಮರಾಗಿದ್ದಾರೆ.
                ಆಗ ಕೋಕಾಲಿಕ ಭಿಕ್ಷು ಆಸನದಿಂದ ಎದ್ದು ಭಗವಾನರಿಗೆ ಪ್ರಣಾಮ ಮಾಡಿ ಪ್ರದಕ್ಷಿಣೆ ಹಾಕಿ ಹೊರಟನು. ಕೋಕಾಲಿಕ ಭಿಕ್ಷು ಹೋದ ಅಲ್ಪಕಾಲದಲ್ಲೇ ಆತನ ಶರೀರದಲ್ಲೆಲ್ಲಾ ಸಾಸುವೆ ಕಾಳಿನಷ್ಟು ಗುಳ್ಳೆಗಳು ಎದ್ದವು. ಸಾಸುವೆ ಕಾಳಿನಿಂದ ಆ ಗುಳ್ಳೆಗಳ ಆಕಾರ ಹೆಸರುಕಾಳಿನಷ್ಟಾದವು. ಹೆಸರುಕಾಳಿನಿಂದ ಅದರ ಗಾತ್ರವು ಬಟಾಣಿಕಾಳಿನಷ್ಟಾಯಿತು. ಬಟಾಣಿ ಕಾಳಿನಿಂದ ಆ ಗುಳ್ಳೆಗಳ ಗಾತ್ರವು ಗೊರಟಿನಷ್ಟಾಯಿತು. ಗೊರಟಿಯ ಗಾತ್ರದಿಂದ ಆ ಗುಳ್ಳೆಗಳು ಬೊರೆಹಣ್ಣಿನಷ್ಟಾಯಿತು. ಬೋರೆ ಹಣ್ಣಿನ ಗಾತ್ರದಿಂದ ಆ ಗುಳ್ಳೆಗಳು ನಲ್ಲಿಕಾಯಿಯಷ್ಟು ದಪ್ಪಗಾದವು. ನಲ್ಲಿಕಾಯಿ ಗಾತ್ರದಿಂದ ಆ ಗುಳ್ಳೆಗಳು ಬೇಲದಹಣ್ಣಿನಷ್ಟಾಯಿತು. ಬೇಲದಹಣ್ಣಿನಷ್ಟು ಆದಮೇಲೆ ಗುಳ್ಳೆಗಳು ಹಿಗ್ಗಿ ಒಡೆದುಹೋದವು. ಕೀವು ಹಾಗು ರಕ್ತವು ಹರಿಯಿತು. ನಂತರ ಕೋಕಾಲಿಕನು ಅದೇ ರೋಗದಿಂದ ಮರಣಿಸಿದನು. ಸಾರಿಪುತ್ತ ಹಾಗು ಮೊಗ್ಗಲ್ಲಾನರ ದ್ವೇಷಚಿತ್ತದ ಪರಿಣಾಮವಾಗಿ ಆತನು ಪದ್ಮನರಕದಲ್ಲಿ ಉದ್ಭವಿಸಿದನು.
                ಆಗ ಸಹಂಪತಿ ಬ್ರಹ್ಮನು ರಾತ್ರಿ ಕಳೆಯುತ್ತಿದ್ದಂತೆ ತನ್ನ ಕಾಂತಿಯಿಂದ ಸಂಪೂರ್ಣ ಜೇತವನವನ್ನು ಪ್ರಕಾಶಗೊಳಿಸುತ್ತಾ ಭಗವಾನರು ಇರುವಲ್ಲಿಗೆ ಬಂದನು. ಭಗವಾನರ ಬಳಿಗೆ ಬಂದು ವಂದಿಸಿ ಒಂದುಕಡೆ ನಿಂತುಕೊಂಡನು. ಒಂದುಕಡೆ ನಿಂತ ಸಹಂಪತಿ ಬ್ರಹ್ಮನು ಭಗವಾನರಿಗೆ ಈ ರೀತಿ ಹೇಳಿದನು- ಭಂತೆ, ಕೋಕಾಲಿಕ ಭಿಕ್ಷುವು ಮೃತ್ಯು ಹೊಂದಿದ್ದಾನೆ, ಸತ್ತ ಕೋಕಾಲಿಕ ಭಿಕ್ಷುವು ಸಾರಿಪುತ್ತ ಹಾಗು ಮೊಗ್ಗಲ್ಲಾನರ ಬಗ್ಗೆ ದ್ವೇಷಚಿತ್ತವುಳ್ಳ ಕಾರಣದಿಂದ ಪದ್ಮ ನರಕದಲ್ಲಿ ಉತ್ಪನ್ನನಾಗಿದ್ದಾನೆ. ಹೀಗೆ ಹೇಳಿ ಭಗವಾನರಿಗೆ ವಂದಿಸಿ, ಪ್ರದಕ್ಷಿಣೆ ಮಾಡಿ ಅಲ್ಲಿಯೇ ಅಂತದರ್ಾನನಾದನು.
                ಆಗ ಭಗವಾನರು ಆ ರಾತ್ರಿ ಕಳೆದನಂತರ ಭಿಕ್ಷುಗಳಿಗೆ ಆಮಂತ್ರಿಸಿದರು. ನಂತರ ಹೀಗೆ ನುಡಿದರು- ಭಿಕ್ಷುಗಳೇ, ಇಂದು ರಾತ್ರಿ ಸಹಂಪತಿ ಬ್ರಹ್ಮನು ಈ ರೀತಿ ಹೇಳಿದನು- ಭಂತೆ, ಕೋಕಾಲಿಕ ಭಿಕ್ಷುವು ಮೃತ್ಯು ಹೊಂದಿದ್ದಾನೆ, ಸತ್ತ ಕೋಕಾಲಿಕ ಭಿಕ್ಷುವು ಸಾರಿಪುತ್ತ ಹಾಗು ಮೊಗ್ಗಲ್ಲಾನರ ಬಗ್ಗೆ ದ್ವೇಷಚಿತ್ತವುಳ್ಳ ಕಾರಣದಿಂದ ಪದ್ಮ ನರಕದಲ್ಲಿ ಉತ್ಪನ್ನನಾಗಿದ್ದಾನೆ. ಹೀಗೆ ಹೇಳಿ ನಂತರ ನನಗೆ ವಂದಿಸಿ, ಪ್ರದಕ್ಷಿಣೆ ಮಾಡಿ ಅಲ್ಲಿಯೇ ಅಂತದರ್ಾನನಾದನು.
                ಹೀಗೆ ನುಡಿದ ನಂತರ ಓರ್ವ ಭಿಕ್ಷುವು ಭಗವಾನರೊಡನೆ ಹೀಗೆ ಕೇಳಿದನು- ಭಂತೆ, ಪದ್ಮ ನರಕದ ಆಯುವು ಎಷ್ಟು ದೀರ್ಘವಾಗಿರುತ್ತದೆ?
                ಭಿಕ್ಷು, ಪದ್ಮ ನರಕದ ಆಯುವು ದೀರ್ಘವಾಗಿರುತ್ತದೆ. ಅದರ ಗಣಿಕೆ ಇಷ್ಟು ಸಹಜವಾಗಿಲ್ಲ. ಅದು ಇಷ್ಟು ವರ್ಷ, ನೂರು ವರ್ಷ ಅಥವಾ ಇಷ್ಟು ಲಕ್ಷ ವರ್ಷವೆಂದು ಸೀಮಿತವಾಗಿಲ್ಲ?
                ಭಂತೆ, ಉಪಮೆ ನೀಡಬಲ್ಲಿರಾ?
                ಭಿಕ್ಷು, ನೀಡಬಹುದು ಎಂದು ಭಗವಾನರು ಹೀಗೆ ನುಡಿದರು- ಭಿಕ್ಷು ಹೇಗೆ ಇಪ್ಪತ್ತು ಖಾರಿ (1 ಖಾರಿ=4 ಮಣ) ಎಳ್ಳನ್ನು ಕೊಂಡೊಯ್ಯುತ್ತಿರುವ ಕೋಸಲದ ಯಾವ ಬಂಡಿಯಿದೆಯೋ ಅದರಿಂದ ಒಬ್ಬ ಪುರುಷನು ಸಾವಿರ ವರ್ಷದ ನಂತರ ಒಂದು ಎಳ್ಳುಕಾಳನ್ನು ತೆಗೆದರೆ, ಇದೇ ಕ್ರಮದಲ್ಲಿ ಕಾಲಾಂತರದಲ್ಲಿ ಇಪ್ಪತ್ತು ಖಾರಿ ಎಳ್ಳನ್ನು ತೆಗೆಯುತ್ತಾ ಮುಗಿಸಿದರೂ ಅದು ಅಬರ್ುದ ನರಕದ ಆಯುವಿನ 20 ಜೀವನಕ್ಕೆ ಸಮನಾಗಿದೆ ಹಾಗು ನಿರಬರ್ುದ ನರಕದ ಒಂದು ಜೀವನ ಕಾಲಕ್ಕೆ ಸಮನಾಗಿದೆ. ಭಿಕ್ಷು ಅಬಬ ನರಕದ 20 ಜೀವನಗಳಿಗೆ ಸಮನಾಗಿ ಅಹಹದ ನರಕದ ಒಂದು ಜೀವನ ಸಮವಾಗಿದೆ. ಭಿಕ್ಷು ಅಹಹ ನರಕದ 20 ಜೀವನಕ್ಕೆ ಸಮವಾದುದು ಅಟಟ ನರಕದ ಒಂದು ಜೀವನ ಕಾಲ. ಅಟಟ ನರಕದ 20 ಜೀವನಗಳಿಗೆ ಸಮನಾದುದು ಕುಮುದ ನರಕದ ಒಂದು ಜೀವನ. ಭಿಕ್ಷು ಕುಮುದ ನರಕದ 20 ಜೀವನಗಳಿಗೆ ಸಮನಾದುದು ಸೌಗಂಧಿಕಾ ನರಕದ ಒಂದು ಜೀವನಕಾಲ. ಭಿಕ್ಷು ಸೌಗಂಧಿಕಾ ನರಕದ 20 ಜೀವನಕ್ಕೆ ಸಮನಾದುದು ಉತ್ಪಲ ನರಕದ ಒಂದು ಜೀವನಕಾಲ. ಉತ್ಪಲ ನರಕದ 20 ಜೀವನಕ್ಕೆ ಸಮನಾದುದು ಪುಂಡರಿಕ ನರಕದ ಒಂದು ಜೀವನ ಕಾಲ. ಪುಂಡರಿಕ ನರಕದ 20 ಜೀವನ ಕಾಲಕ್ಕೆ ಸಮನಾದುದು ಪದ್ಮ ನರಕದ ಒಂದು ಜೀವನಕಾಲ. ಭಿಕ್ಷು ಸಾರಿಪುತ್ತ ಹಾಗು ಮೊಗ್ಗಲ್ಲಾನರ ಪ್ರತಿ ದ್ವೇಷಚಿತ್ತ ಮಾಡಿ ಕೋಕಾಲಿಕನು ಪದ್ಮ ನರಕದಲ್ಲಿ ಉತ್ಪತ್ತಿಯಾಗಿದ್ದಾನೆ. ಹೀಗೆ ಹೇಳಿ ಸುಗತರಾದ ಶಾಸ್ತರು ಹೀಗೆ ಹೇಳಿದರು-
1.            ಅಲ್ಲಿ ಉತ್ಪನ್ನವಾಗುವ ಪುರುಷರ ಮುಖದಲ್ಲಿ ಕೊಡಲಿಯು ಉದ್ಭವಿಸುತ್ತದೆ. ಮೂರ್ಖ ಕೆಟ್ಟ ಮಾತು ಆಡುತ್ತಾ ಅದರಿಂದಲೇ ಕತ್ತರಿಸಲ್ಪಡುತ್ತಾನೆ.
2.            ಯಾರು ನಿಂದನೀಯನ ಪ್ರಶಂಸೆ ಮಾಡುವನೋ ಅಥವಾ ಪ್ರಶಂಸನೀಯರ ನಿಂದೆ ಮಾಡುತ್ತಾನೋ ಆ ಮೂರ್ಖನು ಪಾಪ ಮಾಡುತ್ತಾನೆ ಮತ್ತು ಆ ಪಾಪದ ಕಾರಣದಿಂದ ಆತನು ಸುಖವನ್ನು ಪ್ರಾಪ್ತಿಮಾಡುವುದಿಲ್ಲ.
3.            ಯಾರು ಜೂಜಿನಲ್ಲಿ ತನ್ನ ಸರ್ವಸ್ವ ಧನವನ್ನು ಕಳೆದುಕೊಳ್ಳುವನೋ ಅದು ಅಲ್ಪಹಾನಿಯೇ ಆಗಿದೆ. ಆದರೆ ಎಲ್ಲಕ್ಕಿಂತ ದೊಡ್ಡ ಹಾನಿ ಯಾವುದೆಂದರೆ ತಥಾಗತರ ಬಗ್ಗೆ ಮನವನ್ನು ದೂಷಿತ ಮಾಡುವುದಾಗಿದೆ.
4.            ಆರ್ಯ ಪುರುಷರ ನಿಂದೆ ಮಾಡುವವನು ತನ್ನ ಮನ ಮತ್ತು ವಚನವನ್ನು ಪಾಪದಲ್ಲಿ ಹಾಕಿ ನರಕದಲ್ಲಿ ಉದ್ಭವಿಸುತ್ತಾನೆ. ಅಲ್ಲಿನ ಆಯು ಒಂದು ಲಕ್ಷ ನಿರಬರ್ುದ ಹಾಗು 41 ಅಬರ್ುದವಾಗಿದೆ.
5.            ಅಸತ್ಯವಾದಿಯು ನರಕಕ್ಕೆ ಹೋಗುವನು ಮತ್ತು ಯಾರು ಮಾಡಿರುವುದನ್ನು ಇಲ್ಲವೆನ್ನುತ್ತಾನೋ ಆತನು ಸಹಾ ಹೀನಕರ್ಮ ಮಾಡುವ ಈ ಇಬ್ಬರು ಪರಲೋಕದಲ್ಲಿ ಸಮಾನರಾಗುತ್ತಾರೆ.
6.            ಯಾರು ದೋಷರಹಿತರಾದ ಶುದ್ಧ, ನಿರ್ಮಲ, ಪುರುಷರಿಗೆ ದೋಷಿಸುತ್ತಾರೋ ಅವರ ಪಾಪ ಎದುರು ದಿಕ್ಕಿನಲ್ಲಿ ಬರುತ್ತಿರುವ ಗಾಳಿಗೆ ಧೂಳನ್ನು ಎಸೆದಂತೆ ಅದೇ ಮೂರ್ಖನ ಮೇಲೆ ಬೀಳುತ್ತದೆ.
7.            ಯಾರು ಶ್ರದ್ಧಾರಹಿತನೋ, ಯಾರು ಬೇರೆಯವರು ದಾನ ಮಾಡುತ್ತಿದ್ದರೆ ಸಹಿಸಲಾರನೋ, ಯಾರು ಯಾರ ಮಾತನ್ನು ಕೇಳುವುದಿಲ್ಲವೋ, ಜಿಪುಣನೋ, ಚಾಡಿತನದಲ್ಲಿ ತಲ್ಲೀನನೋ, ಲೋಭದಲ್ಲಿ ಬಿದ್ದಿರುವನೋ, ಅವನು ವಚನದಿಂದ ಪರರನ್ನು ನಿಂದಿಸುವನು.
8.            ದುರ್ವಚನಿಯು, ಸುಳ್ಳುಗಾರನು, ಅನಾರ್ಯನೂ ಬುದ್ಧಿನಾಶಕನೂ, ಪಾಪಿಯು, ಕೆಟ್ಟಕರ್ಮನೂ, ಅಧಮ ಪುರುಷನು ಮತ್ತು ಕೆಳನರಕದಲ್ಲಿ ಹೋಗುವಂತಹ ನೀನು ಇಲ್ಲಿ ಹೆಚ್ಚು ಮಾತು ಆಡದಿರು.
9.            ನೀನು ಪಾಪಿ ಆಗಿದ್ದೂ ಅಲ್ಲದೆ, ನಂತರ ನಿಂದೆಮಾಡಿ ನಿನ್ನ ಅಹಿತವನ್ನು ಮಾಡಿಕೊಳ್ಳುತ್ತಿದ್ದೀಯೆ. ಅನೇಕ ಪಾಪಮಾಡಿ ಬಹುಕಾಲ ಹಳ್ಳದಲ್ಲಿ ಬೀಳುವೆ.
10.          ಯಾರ ಕರ್ಮವು ನಷ್ಟವಾಗುವುದಿಲ್ಲ, ಮಾಡುವವನು ಅದರ ಫಲ ಪ್ರಾಪ್ತಿಮಾಡುತ್ತಾನೆ. ಪಾಪಕಾರಿ ಮೂರ್ಖನು ತಾನಾಗಿಯೇ ಪರಲೋಕದಲ್ಲಿ ದುಃಖದಲ್ಲಿ ಬೀಳುತ್ತಾನೆ.
11.          ಆತನು ಮುಳ್ಳುಗಳಿಂದ ಹಾಗು ತೀಕ್ಷ್ಣ ಅಗ್ರವುಳ್ಳ ಲೋಹದ ಭಜರ್ಿಗಳಿಂದ ಆವೃತವಾದ ನರಕದಲ್ಲಿ ಬೀಳುತ್ತಾನೆ. ಅಲ್ಲಿ ಕಾದ ಲೋಹದ ಗುಂಡುಗಳೇ ಅವನ ಭೋಜನವಾಗಿರುತ್ತದೆ.
12.          ನರಕವಾಸಿಗಳಾದ ಯಾರು ಅಲ್ಲಿ ಪ್ರಿಯವಚನ ನುಡಿಯಲಾರರು. ಪ್ರಸನ್ನ ಮುಖದವರು ಹಾಗು ರಕ್ಷಕರೂ ಅಲ್ಲಿ ದೊರೆಯಲಾರದ ಬೆಂಕಿಯಿಂದ ಆವೃತರಾದ ಅವರು ಬೆಂಕಿಯ ಹಾಸಿಗೆಯಲ್ಲಿ ಮಲಗುತ್ತಾರೆ. ಪ್ರಜ್ವಲಿಸುತ್ತಿರುವ ಬೆಂಕಿಯಲ್ಲೇ ಪ್ರವೇಶಿಸಬೇಕಾಗುತ್ತದೆ.
13.          ನರಕವಾಸಿಗಳು ಜಾಲಗಳಲ್ಲಿ ಬಂಧಿತರಾಗಿ ಸುತ್ತಿಗಳಿಂದ ಹೊಡೆದಾಡಿಕೊಳ್ಳುವರು (ಹೊಡೆಯುವರು). ಅವರು ಬಹು ಘೋರ ಅಂಧಕಾರದಲ್ಲಿ ಬೀಳುವರು ಹಾಗು ಅದು ಉನ್ನತ ಪೃಥ್ವಿಯ ರೀತಿ ಹರಡಿರುತ್ತದೆ.
14.          ಬೆಂಕಿಯ ಸಮಾನವಾದ ಲೋಹದ ದೊಡ್ಡ ಪಾತ್ರೆಯಲ್ಲಿ ಬೀಳುವರು ಮತ್ತು ಬೆಂಕಿಯ ರೀತಿ ಅದರಲ್ಲಿ ಚಿರಕಾಲ ಮೇಲೆ-ಕೆಳಗೆ ಬಂದು ಹೋಗುತ್ತಾ ಬೇಯುವರು.
15.          ಆಗ ಕೀವು ಹಾಗು ರಕ್ತದಿಂದ ಆ ಪಾಪಕಾರಿಯು ಒದ್ದಾಡುತ್ತಾ ಬೇಯುತ್ತಾನೆ. ಯಾವರೀತಿ ಎಂದರೆ ಎಲ್ಲೆಲ್ಲಿ ಒದ್ದಾಡುತ್ತಾನೋ ಅಲ್ಲೆಲ್ಲಾ ಕೀವುರಕ್ತದಿಂದ ಸ್ರವಿಸಿ ಮಲಿನವಾಗುತ್ತಾನೆ.
16.          ಪಾಪಿಯು ಮಲಿನವಾದ ನೀರಿನಲ್ಲಿ ಈ ರೀತಿಯಾಗಿ ಬೇಯುತ್ತಾನೆ. ಹೇಗೆಂದರೆ ಆತನು ಈಜಲಾರ. ಏಕೆಂದರೆ ನಾಲ್ಕು ಕಡೆಯೂ ಕಡಾಯಿಗಳಿರುತ್ತವೆ.
17.          ಗಾಯಗೊಂಡ ಶರೀರದಿಂದ ಆತನು ತೀಕ್ಷ್ಣವಾದ ಅಸಿಪತ್ರ ವನದಲ್ಲಿ ಪ್ರವೇಶಿಸುತ್ತಾನೆ. ನರಕವಾಸಿಗಳು ಆತನ ನಾಲಿಗೆಯನ್ನು ಹಿಡಿದು ಮುಳ್ಳುಗಳಿಂದ ವಧಿಸುತ್ತಾರೆ.
18.          ಆಗ ಆತನ ತೀಕ್ಷ್ಣಧಾರೆಯ ಕತ್ತಿಗೆ ಸಮಾನವಾದ ತೀಕ್ಷ್ಣ ಧಾರೆಯುಳ್ಳ ದುಸ್ತರವಾದ ವೈತರಿಣಿ ನದಿಯಲ್ಲಿ ಬೀಳುತ್ತಾನೆ. ಪಾಪಿಯಾಗಿರುವ ಮೂರ್ಖನು ಅದರಲ್ಲೇ ಬೀಳುತ್ತಾನೆ.
19.          ಅಲ್ಲಿ ಕಪ್ಪಾದ ಮತ್ತು ಬಣ್ಣಗಳ ಕಾಗೆಯು ಅವರನ್ನು ತಿನ್ನುತ್ತದೆ. ನಾಯಿಗಳು, ನರಿಗಳು, ವ್ಯಾಘ್ರ, ಹದ್ದುಗಳು ಮತ್ತು ಕಾಗೆಗಳು ಅವರನ್ನು ತಿನ್ನುತ್ತವೆ.
20.          ಪಾಪಕಾರಿ ಮಾನವ ನರಕದಲ್ಲಿ ಯಾವ ಜೀವನದ ಅನುಭವ ಪಡೆಯುವನೋ, ಅದು ದುಃಖಕರವಾಗಿದೆ. ಆದ್ದರಿಂದ ಮನುಷ್ಯನು ಪ್ರಮಾದರಹಿತನಾಗಿ ತನ್ನ ಉಳಿದ ಜೀವನವನ್ನು ಒಳ್ಳೆಯ ಕರ್ಮದಿಂದ ಜೀವಿಸಲಿ.
21.          ಪದ್ಮ ನರಕವು ಉತ್ಪನ್ನವಾಗುವವರ ಆಯುವು ಪಂಡಿತರ ಗಣಕದಿಂದ ಎಳ್ಳನ್ನು ಒಂದೊಂದಾಗಿ ಎಣಿಸುವಷ್ಟು ದೀರ್ಘಯುತವಾಗಿದೆ. ಅದು 4 ನರಕ ಕೋಟಿ ಮತ್ತು 1200 ಕೋಟಿಗೆ ಸಮನಾಗಿದೆ.
22.          ಇಲ್ಲಿ ಎಷ್ಟೆಲ್ಲವೂ ದುಃಖವನ್ನು ನೀಡಲಾಗಿದೆಯೋ, ಅದೆಲ್ಲವನ್ನು ಅವರು ಅನುಭವಿಸಬೇಕಾಗಿದೆ. ಆದ್ದರಿಂದ ಪವಿತ್ರ ಉತ್ತಮ ಸಾಧುಗಳಲ್ಲಿ ಪ್ರತಿ ತಮ್ಮ ಮನಸ್ಸನ್ನು ಹಾಗು ವಚನವನ್ನು ಸದಾ ಸಂಯಮವಾಗಿಡಿ.

ಇಲ್ಲಿಗೆ ಕೋಕಾಲಿಕ ಸುತ್ತ ಮುಗಿಯಿತು.