Sunday 26 April 2015

duttattaka sutta in kannada 3. ದುಟ್ಠಟ್ಠಕ ಸುತ್ತ (ಮುನಿಯು ಯಾವುದೇ ದೃಷ್ಟಿ ವಿಶೇಷದಲ್ಲಿ ಬೀಳುವುದಿಲ್ಲ)

3. ದುಟ್ಠಟ್ಠಕ ಸುತ್ತ
(ಮುನಿಯು ಯಾವುದೇ ದೃಷ್ಟಿ ವಿಶೇಷದಲ್ಲಿ ಬೀಳುವುದಿಲ್ಲ)

1.            ಕೆಲವರು ದುಷ್ಟಮನದಿಂದ ನಿಂದಿಸುತ್ತಾರೆ ಮತ್ತು ಕೆಲವರು ಸತ್ಯಮನದಿಂದ ನಿಂದಿಸುತ್ತಾರೆ. ಮುನಿಯು ಈ ಉಪವಾದಗಳಲ್ಲಿ ಬೀಳುವುದಿಲ್ಲ. ಆದ್ದರಿಂದಲೇ ಮುನಿಗೆ ಲೋಕದಲ್ಲಿ ರಾಗಾದಿಗಳ ಮುಳ್ಳು ಇಲ್ಲವಾಗಿದೆ.
2.            ರಾಗಾದಿಗಳಲ್ಲಿ ಬಿದ್ದಿರುವ, ಮನಸ್ಸಿನಲ್ಲಿ ಅತಿ ಪ್ರಿಯವಾಗಿ ಹಚ್ಚಿಕೊಂಡಿರುವ ವ್ಯಕ್ತಿ ತನ್ನ ದೃಷ್ಠಿಯನ್ನು ಹೇಗೆತಾನೇ ತ್ಯಜಿಸುತ್ತಾನೆ? ಸ್ವಯಂ ಗ್ರಹಣೆಯಿಂದ ದೃಷ್ಟಿಗೆ ಅನುಸಾರವಾಗಿ ಕಾರ್ಯ ಮಾಡುವ ಆತನು ಹೇಗೆ ಅರಿಯುತ್ತಾನೋ ಹಾಗೆಯೇ ಹೇಳುತ್ತಾನೆ.
3.            ಯಾವ ವ್ಯಕ್ತಿಯು ತನ್ನ ಶೀಲವ್ರತಗಳ ಬಗ್ಗೆ ಕೇಳಿದಾಗ, ಬೇರೆಯವರದನ್ನು ಹೇಳುತ್ತಾನೋ, ಅದನ್ನು ಕುಶಲ ವ್ಯಕ್ತಿಗಳು ಅನಾರ್ಯ ಧರ್ಮವೆಂದು ಹೇಳುತ್ತಾರೆ. ಏಕೆಂದರೆ ಆತನು ತನ್ನ ಸಂಬಂಧವಾಗಿ ಸ್ವಯಂ ಹೇಳಿಕೊಳ್ಳುತ್ತಾನೆ.
4.            ಯಾವ ಭಿಕ್ಷು ಶಾಂತನೋ, ಉಪಶಾಂತನೋ ಮತ್ತು ತನ್ನ ಶೀಲಗಳು ಹೇಳುವುದಿಲ್ಲವೋ, ಯಾರಿಗೆ ಸಂಸಾರದಲ್ಲಿ ಎಲ್ಲಿಯೂ ರಾಗವಿಲ್ಲವೋ, ಅದನ್ನು ಕುಶಲ ವ್ಯಕ್ತಿಗಳು ಆರ್ಯ ಧರ್ಮ ಎನ್ನುತ್ತಾರೆ.
5.            ಯಾರ ಧರ್ಮವು ಕೃತಕವೋ ಮತ್ತು ಕಲ್ಪಿತವೋ, ಯಾರು ತೃಷ್ಣೆಯಿಂದ ಉತ್ಪನ್ನನೋ, ಆತನು ತನ್ನ ಯಾವ ಗುಣವನ್ನು ಕಾಣುತ್ತಾನೋ ಅದರ ಆಸರೆಯಿಂದಲೇ, ಅದರ ಕಾರಣದಿಂದಲೇ ಆತನು ಹೇಳುವನು.
6.            ದೃಷ್ಠಿಗಳ (ಸಿದ್ಧಾಂತಗಳ) ಗ್ರಹಣವನ್ನು ಸುಲಭವಾಗಿ ಬಿಡಲಾಗುವುದಿಲ್ಲ. ಏಕೆಂದರೆ ನಿರ್ಣಯ ಮಾಡಿಯೇ ಯಾವುದೇ ದೃಷ್ಟಿಯನ್ನು ಗ್ರಹಿಸಲಾಗುತ್ತದೆ. ಆದ್ದರಿಂದಲೇ ಆ ವ್ಯಕ್ತಿಯು ಆ ದೃಷ್ಟಿಗಳಲ್ಲಿ ಇರುತ್ತಾ ಧರ್ಮವನ್ನು ಅನೇಕಬಾರಿ ಬಿಡುತ್ತಾ ಹಾಗು ಹಿಡಿಯುತ್ತಾ (ಗ್ರಹಣ ಮಾಡುತ್ತಾ) ಇರುತ್ತಾನೆ.
7.            ಶುದ್ಧ ವ್ಯಕ್ತಿಯು ಲೋಕದಲ್ಲಿ ಎಲ್ಲಿಯೂ ಕಲ್ಪಿತ ದೃಷ್ಠಿ ಹೊಂದಿರಲಾರನು. ಆ ಶುದ್ಧ ವ್ಯಕ್ತಿಯು ಮಾಯಾ ಮತ್ತು ಅಭಿಮಾನವನ್ನು ತ್ಯಜಿಸಿ ಅನಾಸಕ್ತನಾಗಿ ಮತ್ತೆ ಯಾವ ಕಾರಣಕ್ಕಾಗಿ ವಿವಾದದಲ್ಲಿ ಬೀಳಬೇಕು?
8.            ಆಸಕ್ತನಾದ ವ್ಯಕ್ತಿಯೇ ಧರ್ಮಸಂಬಂಧಿ ವಿವಾದಗಳಲ್ಲಿ ಬೀಳುತ್ತಾನೆ. ಯಾರು ಆಸಕ್ತಿರಹಿತನೋ, ಆತನು ಯಾವ ಕಾರಣದಿಂದ ಮತ್ತು ಹೇಗೆ ವಿವಾದದಲ್ಲಿ ಬೀಳುವನು? ಆತನಲ್ಲಿ ಆತ್ಮದೃಷ್ಠಿಯಾಗಲಿ ಹಾಗು ಉಚ್ಛದ (ಲೋಕಾಯುತ) ದೃಷ್ಟಿಯಾಗಲಿ ಇರುವುದಿಲ್ಲ. ಆತನು ಇಲ್ಲಿಯೇ ಸರ್ವ ದೃಷ್ಟಿಗಳನ್ನು ನಷ್ಟಪಡಿಸಿರುವನು.

ಇಲ್ಲಿಗೆ ದುಟ್ಠಟ್ಠ ಸುತ್ತ ಮುಗಿಯಿತು.

No comments:

Post a Comment