Sunday 26 April 2015

suddhuttaka sutta in kannada 4. ಸುದ್ಧುಟ್ಠಕ ಸುತ್ತ (ಅನಾಸಕ್ತಿಯಿಂದಲೇ ಮುಕ್ತಿ ಸಾಧ್ಯ)

4. ಸುದ್ಧುಟ್ಠಕ ಸುತ್ತ
(ಅನಾಸಕ್ತಿಯಿಂದಲೇ ಮುಕ್ತಿ ಸಾಧ್ಯ)

1.            ನಾನು ಶುದ್ಧ, ಪರಮಶ್ರೇಷ್ಠ, ಆರೋಗ್ಯ ನೋಡುತ್ತಿದ್ದೇನೆ. ಈ ಬಗೆಯ ದೃಷ್ಠಿಯಿಂದಲೂ ಸಹಾ ವ್ಯಕ್ತಿಯು ಶುದ್ಧನಾಗಲಾರ. ನಾನು ಯಾವುದನ್ನು ಅರಿಯುತ್ತೇನೆಯೋ ಅದೇ ಸರ್ವಶ್ರೇಷ್ಠ. ಹೀಗೆ ಶುದ್ಧತೆಯನ್ನು ನೋಡುವವನು ಅದನ್ನೇ ಪರಮಜ್ಞಾನ ಎಂದು ಅಥರ್ೈಸಿಕೊಳ್ಳುತ್ತಾನೆ.
2.            ಒಂದುವೇಳೆ ದೃಷ್ಟಿಯಿಂದ ಮನುಷ್ಯ ಶುದ್ಧಿ ಆಗುವ ಹಾಗಿದ್ದರೆ ಅಥವಾ ಜ್ಞಾನದಿಂದಲೇ ಆತನ ದುಃಖ ತ್ಯಾಗವಾಗುವ ಹಾಗಿದ್ದರೆ ಆಸಕ್ತ ಪುರುಷನ ಶುದ್ಧಿಯು ಬೇರೆ ರೀತಿಯೇ ಆಗುತ್ತಿತ್ತು. ಆದರೆ ಹೀಗೆ ಆಗುವುದಿಲ್ಲ. ಆತನಂತೂ ಆತನ ದೃಷ್ಠಿಕೋನದಂತೆ ಮಾತನಾಡುತ್ತಾನೆ.
3.            ದೃಷ್ಠಿ, ಶ್ರುತಿ, ಶೀಲವ್ರತ ಮತ್ತು ವಿಚಾರಶೀಲತೆಯಿಂದಲೇ (ಅಥವಾ ಯಾವುದಾದರೂ ಒಂದರಿಂದಲೇ) ಬ್ರಾಹ್ಮಣನೊಬ್ಬನು ಶುದ್ಧಿಯಾಗಲಾರ. ಯಾರು ಪುಣ್ಯ ಮತ್ತು ಪಾಪಗಳಲ್ಲಿ ಲಿಪ್ತನಾಗುವುದಿಲ್ಲವೋ, ಯಾರು ಸ್ವ-ತ್ಯಾಗಿಯೋ ಮತ್ತು ಪುಣ್ಯ ಪಾಪಗಳನ್ನು ಮಾಡದವನೋ ಅವನೇ ಶುದ್ಧನಾಗಿರುವನು.
4.            ಯಾವ ವ್ಯಕ್ತಿಯು ಮೊದಲಿನ ದೃಷ್ಟಿಯನ್ನು ತ್ಯಜಿಸಿ ಮತ್ತೊಂದು ದೃಷ್ಟಿಯನ್ನು ಗ್ರಹಣ ಮಾಡುವನೋ ಅಂತಹ ತೃಷ್ಣಾ ವಶೀಭೂತರೂ ಆಸಕ್ತಿಯನ್ನು ದಾಟುವುದಿಲ್ಲ. ಹೇಗೆ ಮಂಗವು ಮರದ ಒಂದು ರೆಂಬೆಯಿಂದ ಮತ್ತೊಂದು ರೆಂಬೆ ಹಿಡಿಯುವುದೋ ಹಾಗೆಯೇ ಒಂದು ದೃಷ್ಟಿಯನ್ನು ತ್ಯಜಿಸಿ ಮತ್ತೊಂದನ್ನು ಗ್ರಹಣ ಮಾಡುವನು.
5.            ವ್ಯಕ್ತಿಯು ಸ್ವಯಂ ವ್ರತಗಳನ್ನು ಧಾರಣೆ ಮಾಡಿ ಆಸಕ್ತಿಗಳು ಇರುವ ಬೇರೆ ಬೇರೆಯ ಉಚ್ಚ ನೀಚ ದೃಷ್ಟಿಗಳಲ್ಲಿ ಬೀಳುತ್ತಾನೆ. ಆದರೆ ಯಾರು ಚೆನ್ನಾಗಿ ಧರ್ಮವನ್ನು ಅರಿತಿರುವರೋ, ಅಂತಹ ಮಹಾಪ್ರಾಜ್ಞರು ಉಚ್ಚ-ನೀಚ ದೃಷ್ಟಿಗಳ ಜಾಲದಲ್ಲಿ ಬೀಳುವುದಿಲ್ಲ.
6.            ಆ ಮಹಾಪ್ರಾಜ್ಞನು ಯಾವುದೆಲ್ಲದರಲ್ಲಿ ದೃಷ್ಟಿ, ಶ್ರುತ ಅಥವ ವಿಚಾರತೆಯಿರುವುದೋ, ಆ ಎಲ್ಲಾ ಧರ್ಮಗಳಲ್ಲಿ ಬೀಳುವುದಿಲ್ಲ. ಆತನು ಸತ್ಯವನ್ನು ನೋಡುತ್ತಾ ಸ್ವತಂತ್ರವಾಗಿ ಸಂಚರಿಸುತ್ತಾನೆ. ಹಾಗಿರುವಾಗ ಈ ಲೋಕದಲ್ಲಿ ಆತನಿಗೆ ಯಾವುದು ತಾನೇ ವಿಚಲಿತನನ್ನಾಗಿ ಮಾಡುತ್ತದೆ.
7.            ಅವರು ಯಾವುದೇ ವಿಷಯವನ್ನು ಕಲ್ಪನೆ ಆಗಲಿ ಅಥವಾ ಗ್ರಹಣ ಆಗಲಿ ಮಾಡುವುದಿಲ್ಲ. ಲೋಕದ ಆಸಕ್ತಿಗಳು ಬಂಧನವನ್ನು ತ್ಯಜಿಸಿ ಲೋಕದಲ್ಲಿ ಎಲ್ಲಿಯೂ ತೃಷ್ಣೆಯಿಡುವುದಿಲ್ಲ.
8.            ಯಾವ ಬ್ರಾಹ್ಮಣನು ಪಾಪವನ್ನು ತ್ಯಾಗಮಾಡಿ ಸೀಮೆಯನ್ನು ದಾಟಿರುವನೋ ಮತ್ತು ಯಾರು ಅರಿತು ದೃಷ್ಟಿಗ್ರಾಹ್ಯವನ್ನು ತ್ಯಜಿಸಿರುವನೋ ಯಾರು ರಾಗದಲ್ಲಿ ಲಿಪ್ತನಾಗುವುದಿಲ್ಲವೋ ಮತ್ತು ವೈರಾಗ್ಯದಲ್ಲೂ ಸಹಾ ಯೋಚನಾತೀತನಾದ ಆತನಿಗೆ ಇಲ್ಲಿ ಕಲಿಯಬೇಕಾಗಿರುವುದು ಉಳಿದಿಲ್ಲ.

ಇಲ್ಲಿಗೆ ಸುದ್ಧುಟ್ಠಕ ಸುತ್ತ ಮುಗಿಯಿತು.

No comments:

Post a Comment