Friday 29 May 2015

kalahavivaada sutta in kannada 11. ಕಲಹ ವಿವಾದ ಸುತ್ತ

11. ಕಲಹ ವಿವಾದ ಸುತ್ತ

(ಕಲಹದ ಕಾರಣ)
1.            ದೇವತಾ - ನಮಗೆ ಇದನ್ನು ತಿಳಿಸಿರಿ. ಕಲಹ, ವಿವಾದ, ವಿಲಾಪ, ಶೋಕ, ಜಿಪುಣತನ, ಅಹಂ, ಅಭಿಮಾನ ಅಥವಾ ಚಾಡಿತನ ಎಲ್ಲಿ ಉತ್ಪನ್ನವಾಗುತ್ತದೆ.
2.            ಭಗವಾನರು - ಕಲಹ, ವಿವಾದ, ವಿಲಾಪ, ಶೋಕ, ಜಿಪುಣತನ, ಅಹಂ, ಅಭಿಮಾನ ಮತ್ತು ಚಾಡಿತನ ಪ್ರಿಯವಾದುದರಿಂದ ಉತ್ಪನ್ನವಾಗುತ್ತದೆ. ಕಲಹವು ಮತ್ತು ವಿವಾದ ಸ್ವಾರ್ಥದಿಂದ ಯುಕ್ತವಾಗಿದೆ ಮತ್ತು ವಿವಾದ ಉತ್ಪನ್ನದಿಂದ ಚಾಡಿತನವು ಆಗುತ್ತದೆ.
3.            ದೇವತಾ - ಲೋಕದಲ್ಲಿ ಪ್ರಿಯವಾದುದು ಎಲ್ಲಿ ಉತ್ಪನ್ನವಾಗುತ್ತದೆ? ಅಥವಾ ಲೋಭದ ಕಾರಣದಿಂದ ಲೋಕದಲ್ಲಿ ಸಂಚರಿಸುತ್ತಿರುವವರು ಎಲ್ಲಿಂದ ಉತ್ಪನ್ನರಾಗುತ್ತಾರೆ? ಯಾವುದು ಮನುಷ್ಯನ ಪುನರ್ಜನ್ಮದ ಹೇತುವಾಗಿದೆಯೋ ಅ ಇಚ್ಛೆಗಳೂ ಮತ್ತು ಅದರ ಪೂತರ್ಿ ಹೇಗೆ ಆಗುವುದು.
4.            ಭಗವಾನರು - ಪ್ರಿಯದ ಕಾರಣ ರಾಗವಾಗಿದೆ ಅಥವಾ ಲೋಭದ ಕಾರಣದಿಂದ ಜನರು ಲೋಕದಲ್ಲಿ ಸಂಚರಿಸುತ್ತಿರುವರು. ಇಚ್ಛೆಯ ಮತ್ತು ಅದರ ಪೂತರ್ಿಯ ಹೇತು (ಮೂಲ) ಇದೇ ಆಗಿದೆ. ಇದೇ ಮಾನವ ಪುನರ್ಜನ್ಮದ ಹೇತುವಾಗಿದೆ.
5.            ದೇವತಾ - ಮಹಾ ಸಮಣರು (ಬುದ್ಧರು) ಯಾವ ಧರ್ಮವನ್ನು ತಿಳಿಸಿರುವಿರೋ, ಅದರ ಅನುಸಾರವಾಗಿ ಇಚ್ಛೆಗಳು ಎಲ್ಲಿ ಉತ್ಪನ್ನವಾಗುತ್ತದೆ? ಅಥವಾ ವಿನಿಶ್ರಯ, ಕ್ರೋಧ, ಅಸತ್ಯ ಭಾಷಣ ಹಾಗು ಸಂದೇಹ ಎಲ್ಲಿ ಉತ್ಪನ್ನವಾಗುತ್ತದೆ?
6.            ಭಗವಾನರು - ಲೋಕದಲ್ಲಿ ಯಾವ ಪ್ರಿಯ ಮತ್ತು ಅಪ್ರಿಯ ವಸ್ತುಗಳಿವೆಯೋ, ಅದರ ಕಾರಣದಿಂದಲೇ ಇಚ್ಛೆಯು ಉತ್ಪನ್ನವಾಗುತ್ತದೆ. ದೇಹದ ವಿನಾಶ ಹಾಗು ಉತ್ಪತ್ತಿಯನ್ನು ಕಂಡು ಜನರು ಇಲ್ಲಿ ನಿಶ್ಚಯಕ್ಕೆ ಬರುತ್ತಾರೆ.
7.            ಸಮಣರು ಅರಿತು ಇದನ್ನು ಹೇಳುವುದು ಅದೇನೆಂದರೆ ಕ್ರೋಧ, ಅಸತ್ಯ ಭಾಷಣ ಮತ್ತು ಸಂದೇಹ - ಈ ಧರ್ಮಗಳು ಎರಡು ವಿಷಯದಿಂದ (ರಾಗ, ದ್ವೇಷ) ಉತ್ಪನ್ನವಾಗುತ್ತದೆ. ಸಂದೇಹದಿಂದ ಕೂಡಿದ ವ್ಯಕ್ತಿಯು ಜ್ಞಾನಪಥದ ಅಭ್ಯಾಸ ಮಾಡಬೇಕು.
8.            ದೇವತಾ - ನನಗೆ ಇವುಗಳ ಉತ್ಪತ್ತಿಯ ಕಾರಣ ತಿಳಿಸಿ, ಸುಖ ಹಾಗು ದುಃಖ ವೇದನೆಗಳು ಎಲ್ಲಿಂದ ಉತ್ಪನ್ನವಾಗುತ್ತದೆ? ಯಾವುದರ ಇಲ್ಲವಾಗಿಕೆಯಿಂದ ಇವು ಇರುವುದಿಲ್ಲ. ನಾಶ ಹಾಗು ಉತ್ಪತ್ತಿ ಯಾವುದನ್ನು ಹೇಳಿರುವಿರೋ ಅದರ ಕಾರಣವನ್ನು ತಿಳಿಸಿ.
9.            ಭಗವಾನರು - ಸ್ಪರ್ಶದ (ಇಂದ್ರಿಯ ವಿಷಯಗಳ) ಕಾರಣದಿಂದ ಸುಖ ಮತ್ತು ದುಃಖ ವೇದನೆಗಳು ಆಗುತ್ತದೆ. ಸ್ಪರ್ಶ ಇಲ್ಲದಿದ್ದರೆ ಇವು ಆಗುವುದಿಲ್ಲ. ಯಾವುದು ವಿನಾಶ ಮತ್ತು ಉತ್ಪತ್ತಿಯೆಂದು ಹೇಳಿದೆಯೋ, ಅವುಗಳ ಕಾರಣವನ್ನು ಇದೇ (ಸ್ಪರ್ಶ) ಎಂದು ಹೇಳುತ್ತೇನೆ.
10.          ದೇವತಾ - ಲೋಕದಲ್ಲಿ ಸ್ಪರ್ಶವು ಎಲ್ಲಿಂದ ಉತ್ಪನ್ನವಾಗುತ್ತದೆ? ಪರಿಗ್ರಹವು ಎಲ್ಲಿಂದ ಉತ್ಪನ್ನವಾಗುತ್ತದೆ? ಯಾವುದು ಇಲ್ಲದಿದ್ದರೆ ಮಮತ್ವವು ಇರುವುದಿಲ್ಲ? ಯಾವುದು ಇರದಿದ್ದರೆ ಸ್ಪರ್ಶ ಇರುವುದಿಲ್ಲ?
11.          ಭಗವಾನರು - ದೇಹ ಮತ್ತು ಮನಸ್ಸಿನಿಂದ ಸ್ಪರ್ಶವಾಗುತ್ತದೆ. ಇಚ್ಛೆಯಿಂದ ಪರಿಗ್ರಹವಾಗುತ್ತದೆ. ಇಚ್ಛೆಯಿಲ್ಲದಿದ್ದರೆ ಮಮತ್ವವೂ ಇರುವುದಿಲ್ಲ ಮತ್ತು ದೇಹ (ಹಾಗು ಮನಸ್ಸು) ಇಲ್ಲದಿದ್ದರೆ ಸ್ಪರ್ಶವೂ ಆಗಲಾರದು.
12.          ದೇವತಾ - ಹೇಗೆ ಕಾರ್ಯ ಮಾಡುವವನ ದೇಹವು ಇರುವುದಿಲ್ಲ ಅಥವಾ ಸುಖ ಮತ್ತು ದುಃಖವು ಹೇಗೆ ಇರುವುದಿಲ್ಲ? ಇವು ಹೇಗೆ ಇಲ್ಲವಾಗುವುವೋ ನನಗೆ ತಿಳಿಸಿ. ನಮ್ಮ ಇಚ್ಛೆ ಅದನ್ನು ಅರಿಯುವುದಾಗಿದೆ.
13.          ಭಗವಾನರು - ಯಾರು ಸಂಞ್ಞಾ (ಗ್ರಹಿಕೆ)ಗಳಲ್ಲಿ ಇಲ್ಲವೋ, ಯಾರು ಸಞ್ಞಾರಹಿತರಲ್ಲವೋ ಮತ್ತು ಯಾರು ಅಸಂಞ್ಞರು (ಅಗ್ರಹಿಕೆಯುಳ್ಳವರು) ಅಲ್ಲವೂ ಹಾಗು ಯಾರು (ಸಮಾಧಿಯ ಅಗ್ರ ಸ್ಥಿತಿಯಾದ) ಸಞ್ಞಾವನ್ನು ಅತಿಕ್ರಮಣ ಮಾಡಿರುವರೋ, ಹಾಗೆ ಆಗುವುದರಿಂದ ದೇಹ ಇರುವುದಿಲ್ಲ. ಸಂಞ್ಞಾ ಕಾರಣದಿಂದಲೇ ಸರ್ವಪ್ರಪಂಚ (ಅಸ್ತಿತ್ವ) ಉತ್ಪನ್ನವಾಗುತ್ತದೆ.
14.          ದೇವತಾ - ನಾವು ಏನನ್ನೆಲ್ಲಾ ಕೇಳಿದೆವೋ, ಅದೆಲ್ಲವನ್ನು ತಾವು ನಮಗೆ ತಿಳಿಸಿದಿರಿ. ಈಗ ನಾವು ಬೇರೆಯದನ್ನು ಕೇಳುತ್ತೇವೆ. ಅದನ್ನು ನಮಗೆ ತಿಳಿಸಿರಿ. ಕೆಲವು ಜ್ಞಾನಿಗಳು ಇದನ್ನೇ (ಗ್ರಹಿಕೆ ಇಲ್ಲ, ಗ್ರಹಿಕೆ ಇಲ್ಲದೆಯೂ ಇಲ್ಲ ಎಂಬ ಅಗ್ರ ಸಮಾಧಿ) ವ್ಯಕ್ತಿಯ ಶುದ್ಧಿಗಾಗಿ ಶ್ರೇಷ್ಠವೆನ್ನುವರು. ಅಥವಾ ಇದಕ್ಕಿಂತ ಬೇರೆಯದು ತಿಳಿಸುವಿರೇ?
15.          ಭಗವಾನರು - ಕೆಲವು ಜ್ಞಾನಿಗಳು (ಪಂಡಿತರು) ವ್ಯಕ್ತಿಯ ಶುದ್ಧತೆಯನ್ನು ಇಷ್ಟರಿಂದಲೇ ಎಂದು ಹೇಳುವರು. ಕೆಲವರು ಅವರ ಉಚ್ಚೇದ (ನಾಶ) ದ ಮಾತು ಆಡುವರು. ಆದರೆ ಕುಶಲ ವ್ಯಕ್ತಿಗಳು ನಿಬ್ಬಾಣವನ್ನು ಮಾತ್ರ ಶುದ್ಧಿ ಎಂದು ಹೇಳುವರು.
16.          ಈ ದೃಷ್ಟಿಗಳನ್ನು ಗ್ರಹಣ ಮಾಡಿ ಅದರಲ್ಲಿ (ಬಂಧಿತರಾಗಿ) ಸಿಕ್ಕಿರುವರು. ಹೀಗೆ ಮುನಿಯು (ಬುದ್ಧರು) ವಿವೇಕಾಪೂರ್ವಕವಾಗಿ ಅರಿತು ವಿಮುಕ್ತರಾಗಿರುವರು. ಅವರು ವಿವಾದದಲ್ಲಿ ಬೀಳುವುದಿಲ್ಲ ಮತ್ತು ಧೀರರು ಉತ್ಪತ್ತಿ ಮತ್ತು ವಿನಾಶದ ಜಾಲದಲ್ಲಿ ಬೀಳಲಾರರು.

ಇಲ್ಲಿಗೆ ಕಲಹ ವಿವಾದ ಸುತ್ತ ಮುಗಿಯಿತು.

No comments:

Post a Comment