Friday 29 May 2015

mahaaviyooha sutta in kannada 13. ಮಹಾವಿಯೂಹ ಸುತ್ತ

13. ಮಹಾವಿಯೂಹ ಸುತ್ತ
(ದೃಷ್ಟಿವಾದದಿಂದ ಶುದ್ದಿಯಿಲ್ಲ)

1.            ದೇವತಾ - ಯಾರಾದರೂ ದೃಷ್ಟಿಗಳನ್ನು ಗ್ರಹಣೆ ಮಾಡಿ ಇದೇ ಸತ್ಯ ಎಂದು ವಿವಾದ ಮಾಡುವರೋ ಅವರೆಲ್ಲರೂ ನಿಂದಿತರಾಗುತ್ತಾರೆಯೇ ಅಥವಾ ಅವರಲ್ಲಿ ಕೆಲವರು ಪ್ರಶಂಸತೆಯನ್ನು ಸಹಾ ಗಳಿಸುತ್ತಾರೆಯೇ?
2.            ಭಗವಾನ್ - ಇದು ಅಲ್ಪವಾಗಿದೆ, ಶಾಂತಿಗಾಗಿ ಪರ್ಯಪ್ತವಾಗಿಲ್ಲ. ನಾನು ವಿವಾದದಲ್ಲಿ ಎರಡೇ ಫಲ ಎಂದು ಹೇಳುತ್ತೇನೆ (ನಿಂದೆ, ಸ್ತುತಿ). ಆದರೆ ನಿಬ್ಬಾಣವನ್ನು ನಿವರ್ಿವಾದ ಭೂಮಿ ಮತ್ತು ಕಲ್ಯಾಣಕರ ಎಂದು ಅರಿತು ವಿವಾದದಲ್ಲಿ ಬೀಳದಿರಲಿ.
3.            ಯಾವ ಸಾಮಾನ್ಯ ಜನರು ನೀಡುವಂತಹ ಮಾನ್ಯತೆಗಳಿವೆಯೋ ಅದರಲ್ಲಿ ಬುದ್ಧಿವಂತ ಬೀಳುವುದಿಲ್ಲ. ದೃಷ್ಟಿ ಹಾಗು ಶ್ರುತಿಯನ್ನು ಗ್ರಹಣ ಮಾಡದವನ ಆಸಕ್ತರಹಿತನಾದ ಆತನು ಏನನ್ನುತ್ತಾನೆ, ಯಾವ ಗ್ರಹಣ ಮಾಡಬಲ್ಲ?
4.            ಶೀಲಗಳನ್ನು ಉತ್ತಮವೆಂದು ಭಾವಿಸುವವರು ಸಂಯಮದಿಂದ ಶುದ್ಧಿ ಎಂದು ಹೇಳುವರು. ಅವರು ವ್ರತಗಳನ್ನು ಗ್ರಹಣ ಮಾಡಿ ತಿಳಿಸುವುದೇನೆಂದರೆ ಆತನ ಶುದ್ಧಿಯನ್ನು ಇಲ್ಲಿಯೇ ಕಲಿಯಲಿ, ಭವದಲ್ಲಿ ಬಿದ್ದಿರುವ ಜನರು ತಮ್ಮನ್ನು ಕುಶಲರೆಂದು ಹೇಳುವರು.
5.            ಒಂದುವೇಳೆ ಆತನು ಶೀಲವ್ರತದಿಂದ ಚ್ಯುತಿ ಹೊಂದಿದರೆ ತನ್ನ ಕರ್ಮವು ಹಾಳಾಯಿತಲ್ಲ ಎಂದು ಕಂಪಿತನಾಗುತ್ತಾನೆ. ಅರ್ಥದಿಂದ ಬೇರೆ ಹೊಂದಿದ ಅಥವಾ ಮನೆಯಿಂದ ಪ್ರವಾಸ ಹೊರಟಿರುವವನ ರೀತಿ ಶೋಕಪಡುತ್ತಾನೆ ಮತ್ತು ಇಲ್ಲಿ ಶುದ್ಧಿ ಬಯಸುವನು.
6.            ಸರ್ವಶೀಲವ್ರತ ಹಾಗು ಸದೋಷ-ನಿದರ್ೊಷ ಕರ್ಮಗಳನ್ನು ತ್ಯಜಿಸಿ, ಶುದ್ಧಿ ಮತ್ತು ಅಶುದ್ಧಿಯ ಕಾಮನೆ ಮಾಡದೆ ಶಾಂತಿಗಾಗಿ ವಿರಕ್ತನಾಗಿ ವಾಸಿಸಲಿ.
7.            ಕೆಲವರಂತು ತಪದಿಂದ ಅಥವಾ ಅಸಹ್ಯ ಕರ್ಮದಿಂದ ಅಥವಾ ದೃಷ್ಟಿಯಿಂದ, ಶ್ರುತಿಯಿಂದ, ಅಥವಾ ವಿಚಾರತೆಯಿಂದ ಶುದ್ಧಿ ಎನ್ನುತ್ತಾ ಪುನರ್ಜನ್ಮಕ್ಕೆ ಕಾರಣವಾದ ತೃಷ್ಣೆಯನ್ನು ತ್ಯಜಿಸದೆಯೇ ತಮ್ಮನ್ನು ಉಚ್ಛಸ್ತರದಿಂದ ಶುದ್ಧರೆಂದು ಹೇಳಿಕೊಳ್ಳುವರು.
8.            ಯಾರು ಕಾಮನೆಯನ್ನು ಮಾಡುವರೋ, ಅವರಲ್ಲಿಯೇ ತೃಷ್ಣೆಯಿರುತ್ತದೆ. ಯಾರು ಉಪಾಯವನ್ನು ಮಾಡುವನೋ ಆತನೇ ಕಂಪಿಸುತ್ತಾನೆ. ಯಾರಿಗೆ ಮೃತ್ಯು ಮತ್ತು ಜನ್ಮವಿಲ್ಲವೋ ಆತನು ಯಾತಕ್ಕಾಗಿ ಮತ್ತು ಎಲ್ಲಿ ಕಂಪಿತನಾಗುತ್ತಾನೆ ಮತ್ತು ಯಾವ ತೃಷ್ಣೆಯನ್ನು ಪಡುತ್ತಾನೆ?
9.            ದೇವತಾ - ಯಾವುದನ್ನು ಕೆಲವರು ಉತ್ತಮ ಧರ್ಮವೆಂದು ಹೇಳುವರೋ ಅದನ್ನೇ ಪರರು ಹೀನವೆಂದು ಹೇಳುವರು. ಇದರಲ್ಲಿ ಯಾವುದು ಸತ್ಯವಾಗಿದೆ? ಇವರೆಲ್ಲರೂ ತಮ್ಮನ್ನು ಕುಶಲರೆಂದು ಹೇಳಿಕೊಳ್ಳುವರು.
10.          ಭಗವಾನರು - ತನ್ನ ಧಮ್ಮವನ್ನು ಪರಿಪೂರ್ಣ ಎಂದೆನ್ನುತ್ತಾ ಮತ್ತು ಪರರ ಧರ್ಮವನ್ನು ಹೀನವೆನ್ನುತ್ತಾರೆ. ಈ ಪ್ರಕಾರದ ಭಿನ್ನಮತದವರು ವಿವಾದ ಮಾಡುತ್ತಾರೆ ಮತ್ತು ತಮ್ಮ ಧಾರಣೆಯನ್ನು ಸತ್ಯವೆನ್ನುತ್ತಾರೆ.
11.          ಒಂದುವೇಳೆ ಪರರ ನಿಂದೆಯಿಂದಲೇ ಹೀನನಾಗುವ ಹಾಗಿದ್ದರೆ, ಧರ್ಮದಲ್ಲಿ ಯಾರು ಶ್ರೇಷ್ಠರಾಗುತ್ತಿರಲಿಲ್ಲ. ಎಲ್ಲರೂ ಪರರನ್ನು ಹೀನ ಎಂದು ಹೇಳುತ್ತಾನೆ ಮತ್ತು ತನ್ನನ್ನು ಹೀನನಲ್ಲ ಎಂದು ಹೇಳುತ್ತಾರೆ.
12.          ಜನರು ಯಾವರೀತಿ ತನ್ನ ಧಮ್ಮ ಮಾರ್ಗವನ್ನು ಪ್ರಶಂಸೆ ಮಾಡುವರೋ, ಅದೇರೀತಿ ಅದರ ಪೂಜೆ ಸಹಾ ಮಾಡುವರು. ಒಂದುವೇಳೆ ಸರ್ವರ ಕಥನ ಹಾಗೇ ಇದ್ದರೆ ಅವರ ಶುದ್ಧಿಯು ತಮ್ಮ ತಮ್ಮಲ್ಲೇ (ಬೇರೆ ಬೇರೆಯಾಗಿ) ಆಗುತ್ತಿತ್ತು.
13.          ಬ್ರಾಹ್ಮಣನು ಬೇರೆಯ ಆಶ್ರಯದಲ್ಲಿರಲಾರ, ಆತನು ಧಾಮರ್ಿಕ ದೃಷ್ಟಿಯಲ್ಲಿ ದೃಢಗ್ರಾಹಿ ಇರುವುದಿಲ್ಲ. ಅದರಿಂದಲೇ ವಿವಾದದಿಂದ ದಾಟಿದ್ದಾನೆ. ಆತನು ಪರರ ಧರ್ಮವನ್ನು ಶ್ರೇಷ್ಠ ಎಂದು ಒಪ್ಪಲಾರ.
14.          ನಾನು ಹಾಗೆಯೇ ಅರಿಯುತ್ತಿದ್ದೇನೆ ಮತ್ತು ನೋಡುತ್ತಿದ್ದೇನೆ ಈ ರೀತಿಯಾಗಿ ಕೆಲವರು ದೃಷ್ಟಿಯಿಂದ ಶುದ್ಧಿ ಹೇಳುವರು. ಒಂದುವೇಳೆ ಅವರು ನೋಡಿದ್ದಾದರೂ ಏನು? ಅವರು ಯಥಾರ್ಥ ಕ್ರಮವನ್ನು ಬಿಟ್ಟು ಬೇರೆ ಕ್ರಮದಿಂದ ಶುದ್ಧಿ ಹೇಳುವರು.
15.          ನೋಡುವ ಮನುಷ್ಯ ದೇಹ-ಮನಸ್ಸನ್ನೇ ನೋಡುತ್ತಾನೆ. ನೋಡುತ್ತಾ ಅದನ್ನು ಒಪ್ಪುತ್ತಾನೆ. ಆತನು ಸಾಕಷ್ಟು ಹೆಚ್ಚು ಅಥವ ಕಡಿಮೆಯೇ ನೋಡಲಿ, ಕುಶಲರು ಇದರಿಂದಲೇ (ಇಷ್ಟರಿಂದಲೇ) ಶುದ್ಧಿ ಎಂದು ಹೇಳಲಾರರು.
16.          ಯಾರು ಯಾವುದಾದರು ವಿಷಯದಲ್ಲಿ ಆಸಕ್ತನೋ, ಆತನು ಶುದ್ಧಿಪ್ರಾಪ್ತಿ ಆಗಲಾರ. ಏಕೆಂದರೆ ಆತನು ಯಾವುದೇ ದೃಷ್ಟಿಗೆ ಒಪ್ಪುತ್ತಾನೆ. ಮನುಷ್ಯ ಯಾವುದರಲ್ಲಿ ಆಸಕ್ತನಾಗುವನೋ ಅದನ್ನೇ ಶುಭ ಎಂದು ಹೇಳುತ್ತಾನೆ, ಅದನ್ನೇ ಶುದ್ಧಿ ಎಂದು ಹೇಳುತ್ತಾನೆ ಮತ್ತು ಅದನ್ನೇ ಸತ್ಯವೆಂದು ನಂಬುತ್ತಾನೆ.
17.          ಬ್ರಾಹ್ಮಣನು ವಿವೇಕಿಯಾಗಿ ತೃಷ್ಣಾದೃಷ್ಟಿಯಲ್ಲಿ ಬೀಳಲಾರ. ಆತನು ದೃಷ್ಟಿಯ ಅನುಸರಣೆ ಮಾಡಲಾರ ಮತ್ತು ಜ್ಞಾನಬಂಧು (ಪ್ರಾಪಂಚಿಕ) ಆಗಲಾರ. ಆತನು ಸಾಮಾನ್ಯ ಜನರ ಧಾರಣೆಯನ್ನು ಮತ್ತು ಯಾವುದನ್ನು ಪರವ್ಯಕ್ತಿಗಳಲ್ಲಿ ಗ್ರಹಣ ಮಾಡಿರುವರೋ ಅದನ್ನೆಲ್ಲಾ ಅರಿತು ಅದರಿಂದ ಉಪೇಕ್ಷೆ (ತ್ಯಜಿಸಿ ಶಾಂತನಾಗುತ್ತಾನೆ) ಯಿಂದ ಇರುತ್ತಾನೆ.
18.          ಮುನಿಯು ಈ ಸಂಸಾರದಲ್ಲಿ ಬಂಧನಗಳನ್ನು ಕತ್ತರಿಸಿ ವಿವಾದ ಮಾಡುವವರ ಪಕ್ಷಧರನಾಗುವುದಿಲ್ಲ. ಆತನು ಅಶಾಂತರಲ್ಲಿ ಶಾಂತನಾಗಿ ಅನ್ಯರು ಯಾವುದನ್ನು ಗ್ರಹಣ ಮಾಡುವರೋ ಅದರ ಉಪೇಕ್ಷೆ ಮಾಡುತ್ತಾನೆ.
19.          ಯಾರು ಹಿಂದಿನ (ಆಸವ) ಕಶ್ಮಲಗಳನ್ನು ತೊರೆದು, ಹೊಸ ಕಶ್ಮಲ (ಆಸವ) ಗಳನ್ನು ಉತ್ಪತ್ತಿ ಮಾಡಲಾರನೋ, ಇಚ್ಛೆರಹಿತನೊ, ವಾದದಲ್ಲಿ ಅನಾಸಕ್ತನೋ ದೃಷ್ಟಿಗಳಲ್ಲಿ ಪೂರ್ಣವಾಗಿ ಮುಕ್ತನಾದ ಆ ಧೀರನು ಸಂಸಾರದಲ್ಲಿ ಲಿಪ್ತನಾಗಲಾರ ಮತ್ತು ಆತನು ತನ್ನ ನಿಂದೆಯನ್ನು ಮಾಡಿಕೊಳ್ಳಲಾರ.
20.          ಯಾವುದೆಲ್ಲವೂ ದೃಷ್ಟಿ, ಶ್ರುತಿ ಅಥವಾ ವಿಚಾರತೆಯಿದೆಯೋ, ಅದೆಲ್ಲದರಿಂದ ಆತನು ವಿಜಯಿಯಾಗಿದ್ದಾನೆ. ಆತನು ಪೂರ್ಣ ರೂಪದಿಂದ ಮುಕ್ತನು, ಭಾರಯುಕ್ತ ಪ್ರಜ್ಞಾವಂತನು ಹಾಗು ಉಪರತಿ ಹಾಗು ತೃಷ್ಣೆಯಿಂದ ರಹಿತನಾಗಿದ್ದಾನೆ.

ಇಲ್ಲಿಗೆ ಮಹಾವಿಯೂಹ ಸುತ್ತ ಮುಗಿಯಿತು.

No comments:

Post a Comment