Friday 29 May 2015

puraabheda sutta in kannada 10. ಪುರಾಭೇದ ಸುತ್ತ

10. ಪುರಾಭೇದ ಸುತ್ತ
(ಶಾಂತಪುರುಷ ಯಾರು?)

1.            ದೇವತಾ - ಯಾವರೀತಿಯ ದರ್ಶನದವನು ಮತ್ತು ಯಾವರೀತಿಯ ಶೀಲವಂತನಾದ ವ್ಯಕ್ತಿ ಉಪಶಾಂತನೆಂದು ಕರೆಯಲ್ಪಡುತ್ತಾನೆ? ಹೇ ಗೋತಮರೇ! ನನ್ನ ಕೇಳುವಿಕೆಗೆ ಆ ಉತ್ತಮ ಪುರುಷನನ್ನು ತಿಳಿಸಿರಿ.
2.            ಭಗವಾನರು - ಯಾರು ಶರೀರ ತ್ಯಾಗದ ಮುಂಚೆಯೇ ತೃಷ್ಣಾರಹಿತನೋ ಮತ್ತು ಭೂತ ಹಾಗು ಭವಿಷ್ಯದ ಆಶ್ರಿತನಲ್ಲವೋ, ಯಾರು ವರ್ತಮಾನದಲ್ಲೂ ಆಶ್ರಿತನಲ್ಲವೊ, ಅವನಿಗೆ ಎಲ್ಲಿಯೂ ಆಸಕ್ತಿಯಿಲ್ಲ.
3.            ಯಾರು ಕ್ರೋಧ, ತ್ರಾಸ, ಸ್ವಪ್ರಶಂಸೆ ಮತ್ತು ಚಂಚಲತೆಗಳಿಂದ ರಹಿತನೋ, ಯಾರು ಚಿಂತಿಸಿ ಮಾತನಾಡುವವನೋ, ಅಭಿಮಾನರಹಿತನೋ ಮತ್ತು ವಚನದಲ್ಲಿ ಸಂಯಮಿಯೋ ಆತನು ಮುನಿಯಾಗಿರುವನು.
4.            ಯಾರು ಭವಿಷ್ಯದ ವಿಷಯದಲ್ಲಿ ಆಸಕ್ತಿ ಇರುವುದಿಲ್ಲವೋ ಮತ್ತು ಭೂತಕಾಲದ ಬಗ್ಗೆ ಪಶ್ಚಾತ್ತಾಪ ಪಡುವುದಿಲ್ಲವೋ, ಯಾರು ಸ್ಪರ್ಶಗಳಲ್ಲಿ ವಿವೇಕದಶರ್ಿಯೋ ಆತನು ದೃಷ್ಟಿಗಳ ಜಾಲದಲ್ಲಿ ಬೀಳುವುದಿಲ್ಲ.
5.            ಯಾರು ರಾಗ, ಡೊಂಗಿತನ, ಇಚ್ಛೆ, ಜಿಪುಣತನ, ಪ್ರಗಲ್ಲತಾ ಮತ್ತು ಅಸಹ್ಯತೆಯಿಂದ ರಹಿತನೋ ಮತ್ತು ಚಾಡಿತನದಲ್ಲದವನೋ...
6.            ಯಾರು ಕಾಮಭೋಗಗಳಲ್ಲಿ ರತನಾಗುವುದಿಲ್ಲವೋ, ಅಭಿಮಾನಪಡುವುದಿಲ್ಲವೋ, ಶಾಂತ ಮತ್ತು ಪಟಿಭಾನವನೋ ಆತನು ನಂಬಿಕೆಯವನಾಗಲಿ ಅಥವಾ ವಿರಕ್ತನಾಗಲಿ ಆಗುವುದಿಲ್ಲ.
7.            ಯಾರು ಲಾಭವನ್ನು ಬಯಸಿ ಪ್ರಯತ್ನಶೀಲನಾಗುವುದಿಲ್ಲವೋ (ಬೋಧಿಸುವುದಿಲ್ಲವೋ) ಲಾಭವಾಗದೆ ಇದ್ದಾಗ ಕುಪಿತನಾಗುವುದಿಲ್ಲವೋ, ತೃಷ್ಣೆಗಳಲ್ಲಿ ಅವಿರುದ್ಧನಾಗಿ (ಅನಾಸಕ್ತನಾಗಿ) ಅವುಗಳ ರಸದಲ್ಲಿ ಲಿಪ್ತನಾಗದೆಯೂ ಇರುತ್ತಾನೆ.
8.            ಯಾರು ಸಮಭಾವದ ಚಿತ್ತನೋ (ಉಪೇಕ್ಷಕ) ಸದಾ ಜಾಗರೂಕನೋ, ಲೋಕದಲ್ಲಿ ಯಾರಿಗೂ ಸಮಾನವೆಂದಾಗಲಿ, ಶ್ರೇಷ್ಠವೆಂದಾಗಲಿ ಅಳೆಯುವುದಿಲ್ಲವೋ, ಆತನಲ್ಲಿ ರಾಗವಿರುವುದಿಲ್ಲ.
9.            ಯಾರಲ್ಲಿ ತೃಷ್ಣೆಯಿಲ್ಲವೋ, ಯಾರು ಧರ್ಮವನ್ನು ಅರಿತು ಉತ್ಪತ್ತಿ ಮತ್ತು ವಿನಾಷದ ಬಗ್ಗೆ ತೃಷ್ಣಾರಹಿತನೋ, ಆತನಲ್ಲಿ ತೃಷ್ಣೆಯು ಇರುವುದಿಲ್ಲ.
10.          ಕಾಮಭೋಗಗಳ ಅಪೇಕ್ಷೆ ಪಡದ ಆ ವ್ಯಕ್ತಿಗೆ ಉಪಶಾಂತ ಎಂದು ಹೇಳುತ್ತೇನೆ. ಆತನಿಗೆ ಯಾವ ಸಾಂಸರಿಕ ಬಂಧನವೂ ಇಲ್ಲ. ಆತನು ತೃಷ್ಣೆಯನ್ನು ಮೀರಿ (ದಾಟಿ) ಹೋಗಿದ್ದಾನೆ.
11.          ಆತನಿಗೆ ಪುತ್ರರು, ಪಶುಗಳು, ಹೊಲಗಳು, ಅಥವಾ ಧನದ (ಆಸಕ್ತಿಗಳು) ಇಲ್ಲವಾಗಿದೆ ಮತ್ತು ಆತನಿಗೆ ತನ್ನ ಅಥವಾ ಪರರು ಎಂಬ ಬೇಧಭಾವವು ಇಲ್ಲವಾಗಿದೆ.
12.          ಯಾವ ವಿಷಯದಲ್ಲಿ ಆತನಿಗೆ ಸಾಮಾನ್ಯ ಜನರು ಮತ್ತು ಸಮಣ ಬ್ರಾಹ್ಮಣರು ದೋಷ ಆರೋಪಿಸುತ್ತಾರೋ, ಅಂತಹ ಯಾವುದೇ ದೋಷ ಆತನಲ್ಲಿರುವುದಿಲ್ಲ. ಆದ್ದರಿಂದ ಆತನು ತನ್ನ ನಿಂದೆಯಿಂದಲೂ ವಿಚಲಿತನಾಗುವುದಿಲ್ಲ.
13.          ರಾಗ ಹಾಗು ಜಿಪುಣತನದಿಂದ ರಹಿತನಾದ ಆ ಮುನಿಯು ತನ್ನನ್ನು ಶ್ರೇಷ್ಠ, ಸಮಾನ, ಅಥವಾ ನಿಮ್ನ (ನೀಚ) ಜನಗಳಿಗೆ ಹೋಲಿಸಿಕೊಳ್ಳುವುದಿಲ್ಲ. ಆತನು ಪುನರ್ಜನ್ಮದಲ್ಲಿ ಬೀಳುವುದಿಲ್ಲ. ಏಕೆಂದರೆ ಆತನು ಜನ್ಮದಿಂದ ಮೀರಿ (ದಾಟಿ) ಹೋಗಿದ್ದಾನೆ.
14.          ಆತನಿಗೆ ಲೋಕದಲ್ಲಿ ತನ್ನದು ಎನ್ನುವಂತಹ ಏನೂ ಇಲ್ಲ. ಯಾವ ಕೊರತೆಗಾಗಿಯೂ ಪಶ್ಚಾತ್ತಾಪ ಪಡುವುದಿಲ್ಲ ಮತ್ತು ಸರ್ವ ಧರ್ಮದಲ್ಲಿ ರಾಗಾದಿಗಳ ವಶಕ್ಕೆ ಬೀಳುವುದಿಲ್ಲ. ಆತನೇ ಶಾಂತನೆಂದು ಕರೆಯಲ್ಪಡುತ್ತಾನೆ.

ಇಲ್ಲಿಗೆ ಪುರಾಭೇದ ಸುತ್ತ ಮುಗಿಯಿತು.

No comments:

Post a Comment