Saturday 17 October 2015

ajita maanava pucca of suttanipata in kannada ಅಜೀತ ಮಾಣವ ಪುಚ್ಚ (ಅಜೀತ ಮಾಣವನ ಪ್ರಶ್ನಾವಳಿ)

1. ಅಜೀತ ಮಾಣವ ಪುಚ್ಚ
(ಅಜೀತ ಮಾಣವನ ಪ್ರಶ್ನಾವಳಿ)

1.            ಅಜಿತ- ಸಂಸಾರವು ಯಾವುದರಿಂದ ಆವರಿಸಲ್ಪಟ್ಟಿದೆ? ಯಾವುದರಿಂದ ಪ್ರಕಾಶಿತವಾಗುವುದಿಲ್ಲ? ಯಾವುದಕ್ಕೆ ಲೇಪ (ಕಲೆ) ಎನ್ನುತ್ತೇವೆ? ಇದರಿಂದಾಗುವ ಮಹಾಭಯ ಯಾವುದು?
2.            ಭಗವಾನರು- ಸಂಸಾರವು ಅವಿದ್ಯೆಯಿಂದ ಆವರಿಸಲ್ಪಟ್ಟಿದೆ. ಲೋಭ ಹಾಗು ಪ್ರಮಾದದ ಕಾರಣದಿಂದಾಗಿ ಇದು ಪ್ರಕಾಶಿತವಾಗುವುದಿಲ್ಲ. ತೃಷ್ಣಾ ಅಥವಾ ಲೋಭಕ್ಕೆ ನಾನು ಲೋಪ ಅಥವಾ ಕಲೆ ಎನ್ನುತ್ತೇನೆ. ದುಃಖವೇ ಇದರಿಂದಾಗುವ ಮಹಾಭಯ ಆಗಿದೆ.
3.            ಅಜಿತ- ಎಲ್ಲೆಡೆ ತೃಷ್ಣಾ ಸಂಬಂಧಿ ಧಾರೆಗಳು ಹರಿಯುತ್ತಿವೆ; ಈ ಧಾರೆಗಳ ನಿವಾರಣೆಯಾದರೂ ಏನು? ಈ ಧಾರೆಗಳ ಆವರಣವನ್ನು ತಿಳಿಸಿ ಹಾಗು ಈ ಧಾರೆಗಳು ಹೇಗೆ ನಿಂತು ಹೋಗುವುವು?
4.            ಭಗವಾನರು- ಸಂಸಾರದಲ್ಲಿ ಎಷ್ಟೋ ಧಾರೆಗಳು ಇವೆಯೋ ಅವೆಲ್ಲಕ್ಕೂ ಸ್ಮೃತಿಯೇ (ಜಾಗರೂಕತೆಯೇ) ನಿವಾರಣೆಯಾಗಿದೆ. ಎಚ್ಚರಿಕೆಯಿಂದಲೇ ಧಾರೆಗಳ ಆವರಣವಾಗುವುದು. ಈ ಎಲ್ಲಾ ಧಾರೆಗಳು ಪ್ರಜ್ಞೆಯಿಂದಲೇ ನಿಂತುಹೋಗುವುವು.
5.            ಅಜಿತ- ಹೇ ಪರಮಪೂಜ್ಯರೇ, ಪ್ರಜ್ಞಾ, ಸ್ಮೃತಿ ಮತ್ತು ನಾಮರೂಪ (ದೇಹ ಮತ್ತು ಮನಸ್ಸು) ಅಂತ್ಯವು ಎಲ್ಲಿ ಆಗುವುದು? ದಯವಿಟ್ಟು ತಿಳಿಸಿ.
6.            ಭಗವಾನರು- ಅಜಿತ ! ಯಾವ ಪ್ರಶ್ನೆಯನ್ನು ನೀನು ಕೇಳಿದೆಯೋ ಅದಕ್ಕೆ ಉತ್ತರಿಸುವೆ ಆಲಿಸು. ಯಾವಾಗ ನಾಮರೂಪವು ಸಂಪೂರ್ಣವಾಗಿ ನಿರೋಧ ಆಗುವವೋ ಆಗಲೇ ವಿಞ್ಞಾಣದ (ಪ್ರಜ್ಞಾ/ಸ್ಮೃತಿ) ನಿರೋಧವೂ ಆಗುವುದು.
7.            ಅಜಿತ - ಯಾರು ಎಲ್ಲವನ್ನು ಅರಿತಿರುವಂತಹ ಸಂಖತಧಮ್ಮ ಅರಿತಂಥಹವರ ಹಾಗು ಯಾರು ಇನ್ನೂ ಶಿಕ್ಷಣ ಪಡೆಯುತ್ತಿರುವಂತಹ ಸೇಖರೋ ಹಾಗು ಸಾಮಾನ್ಯ ಗೃಹಸ್ಥರೋ (ಪುಥುಜ್ಜನ), ಇವರೆಲ್ಲರೂ ಪಾಲಿಸಬೇಕಾದ ಚಯರ್ೆಗಳು ಯಾವುವು ತಿಳಿಸಿ, ಓ ಪೂಜ್ಯರೇ.
8.            ಭಗವಾನರು- ಕಾಮಭೋಗಗಳಲ್ಲಿ ಲಿಪ್ತನಾಗದಿರುವುದು, ಮನಸ್ಸನ್ನು ನಿರ್ಮಲವಾಗಿಡುವುದು, ಸರ್ವ ಧರ್ಮಗಳಲ್ಲಿ ಕುಶಲನಾಗಿರುವುದು, ಹೀಗಿದ್ದು ಭಿಕ್ಷುವು ಸ್ಮೃತಿವಂತನಾಗಿ ಸಂಚರಿಸಲಿ.

ಇಲ್ಲಿಗೆ ಅಜಿತ ಮಾಣವ ಪ್ರಶ್ನೆಗಳು ಮುಗಿಯಿತು.

No comments:

Post a Comment