Saturday 17 October 2015

bhadravudha manava pucca of suttanipata in kannada 12. ಭದ್ರಾವುಧ ಮಾಣವ ಪುಚ್ಛಾ (ಭದ್ರಾವುಧ ಮಾಣವನ ಪ್ರಶ್ನಾವಳಿ)

12. ಭದ್ರಾವುಧ ಮಾಣವ ಪುಚ್ಛಾ (ಭದ್ರಾವುಧ ಮಾಣವನ ಪ್ರಶ್ನಾವಳಿ)

1.            ಭದ್ರಾವುಧ- ಗೃಹತ್ಯಾಗಿ, ತೃಷ್ಣಾವನ್ನು ಛಿದ್ರಗೊಳಿಸಿದಂತಹ ರಾಗ ತ್ಯಾಗಿಗಳೇ, ಪ್ರವಾಹ ದಾಟಿದವರೇ, ವಿಮುಕ್ತರೇ ಹಾಗು ಲೋಕ ತ್ಯಜಿಸಿದಂತಹ ಸುಮೇಧರಲ್ಲಿ ನಾನು ಯಾಚಿಸುತ್ತಿರುವೆ. ತಮ್ಮಂತಹ ಶ್ರೇಷ್ಠರ (ನಾಗ) ಉಪದೇಶ ಆಲಿಸಿದವರು ಇಲ್ಲಿಂದ (ಲೋಕದಿಂದ) ಹೊರಟು ವಿಮುಕ್ತರಾಗುತ್ತಾರೆ.
2.            ಹೇ ವೀರರೇ! ತಮ್ಮ ಅಮೃತ ವಚನ ಆಲಿಸಲು ಆಕಾಂಕ್ಷಿತರಾಗಿ ಅನೇಕ ಜನಪದಗಳಿಂದ ಅನೇಕ ಪ್ರಕಾರದ ಜನರು ಏಕತ್ರಿತರಾಗಿದ್ದಾರೆ, ತಾವು ಅವರಿಗೆ ಸರ್ವರೀತಿಯಲ್ಲಿ ಬೋಧಿಸಿ, ಏಕೆಂದರೆ ತಮಗೆ ಧಮ್ಮ ಸಾಕ್ಷಾತ್ಕಾರವಾಗಿದೆ.
3.            ಭಗವಾನರು- ಮೇಲೆ, ಕೆಳಗೆ, ಸುತ್ತಲೂ ಅಥವಾ ಮಧ್ಯೆಯಲ್ಲಿಯೂ ಆಸಕ್ತ ರೂಪವಾದ ತೃಷ್ಣೆಯನ್ನು ತ್ಯಾಗಮಾಡಿ, ಲೋಕದಲ್ಲಿ ಜನರು ಯಾವ ಯಾವುದಕ್ಕೆ ಹಂಬಲಿಸಿ ಪಡೆಯುತ್ತಾರೋ, ಅದೇ ಕಾರಣಕ್ಕೆ ಮಾರನು ಮನುಷ್ಯರ ಹಿಂದೆ ಬೀಳುತ್ತಾನೆ.
4.            ಆದ್ದರಿಂದ ತೃಷ್ಣೆಯಲ್ಲಿ ಆಸಕ್ತರಾದ, ಮೃತ್ಯು ರಾಜ್ಯದಲ್ಲಿ ಲೀನವಾದ ಈ ಪ್ರಜೆಗಳನ್ನು ನೋಡುತ್ತಾ ಸ್ಮೃತಿವಂತನಾದ ಭಿಕ್ಷುವು ಲೋಕದ ಯಾವುದರ ಮೇಲೆಯೂ ಆಸಕ್ತಿ ತಾಳದಿರಲಿ.

ಇಲ್ಲಿಗೆ ಭದ್ರಾವುಧ ಮಾಣವ ಪ್ರಶ್ನಾವಳಿ ಮುಗಿಯಿತು.

No comments:

Post a Comment