Saturday 17 October 2015

udaya manava pucca of suttanipata in kannada 13. ಉದಯ ಮಾಣವ ಪುಚ್ಛಾ (ಉದಯ ಮಾಣವನ ಪ್ರಶ್ನಾವಳಿ)

13. ಉದಯ ಮಾಣವ ಪುಚ್ಛಾ (ಉದಯ ಮಾಣವನ ಪ್ರಶ್ನಾವಳಿ)

1.            ಉದಯ- ಧ್ಯಾನಿಯು, ರಜರಹಿತರಾಗಿ ಆಸೀನರಾದ, ಕರ್ತವ್ಯಗಳನ್ನು ಪೂರೈಸಿದ, ಆಸವರಹಿತರಾದ, ಸರ್ವಧರ್ಮ ಪಾರಂಗತರಾದ, ಭಗವಾನರೇ ತಮ್ಮಲ್ಲಿ ಪ್ರಶ್ನಿಸಲು ಬಂದಿದ್ದೇನೆ, ಪ್ರಜ್ಞಾವಿಮೋಕ್ಷ ಹಾಗು ಅವಿದ್ಯೆಯ ನಾಶದ ಬಗ್ಗೆ ತಿಳಿಸಿ.
2.            ಭಗವಾನರು- ಕಾಮರಾಗಗಳನ್ನು ಮತ್ತು ದುರ್ಮನಸ್ಸು (ದುಃಖ/ವಿರೋಧ ಛಾಯೆಯ ಚಿತ್ತಸ್ಥಿತಿ) ವಜರ್ಿಸು, ಸೋಮಾರಿತನದ ಜಡತೆಗಳನ್ನೆಲ್ಲಾ ನಷ್ಟಗೊಳಿಸು. ಸಂದೇಹ ಹಾಗು ಅನಿಧರ್ಾರಗಳನ್ನು ನಿವಾರಿಸಿಕೋ.
3.            ಉಪೇಕ್ಷಾಯುತ ಸ್ಮೃತಿವಂತನಾಗು, ಅದರಿಂದ ಉಂಟಾಗುವ ಪರಿಶುದ್ಧತೆಯಿಂದ ಹಾಗು ಧಾಮರ್ಿಕ ವಿಚಾರಗಳಿಂದ ಉತ್ಪನ್ನತೆಯಿಂದಲೇ ಪ್ರಜ್ಞಾ ವಿಮೋಕ್ಷ ಹಾಗು ಅವಿದ್ಯೆಯ ನಾಶವೆಂದು ಹೇಳುತ್ತೇನೆ.
4.            ಉದಯ- ಲೋಕವು ಯಾವುದರಿಂದ ಸಂಯೋಜನಗೊಂಡಿದೆ (ಬಂಧಿತವಾಗಿದೆ), ಯಾವುದರಲ್ಲಿ ಲೋಕವು ವಿಹರಿಸುವುದು (ಆನಂದಿಸುವುದು), ಯಾವುದನ್ನು ತ್ಯಾಗ ಮಾಡುವುದರಿಂದ ನಿಬ್ಬಾಣವು ಪ್ರಾಪ್ತಿಯಾಗುವುದು?
5.            ಭಗವಾನರು- ಲೋಕವು ರಾಗದಿಂದ ಬಂಧಿತವಾಗಿದೆ, ಅದರ ಬಗ್ಗೆ ತಕರ್ಿಸುತ್ತಿರುವುದರಲ್ಲಿಯೇ ಅದು ವಿಹರಿಸುವುದು. ತೃಷ್ಣೆಯನ್ನು ತ್ಯಾಗ ಮಾಡುವುದರಿಂದಲೇ ನಿಬ್ಬಾಣ ಪ್ರಾಪ್ತಿಯಾಗುತ್ತದೆ (ತೃಷ್ಣಾ ತ್ಯಾಗವೇ ನಿಬ್ಬಾಣವೆಂದು ಹೇಳಲಾಗುತ್ತದೆ).
6.            ಉದಯ- ಯಾವರೀತಿಯ ಎಚ್ಚರಿಕೆಯಿಂದ ಸ್ಮೃತಿ ನೆಲೆಸಿದಾಗ, ವಿಞ್ಞಾನದ (ಮನಸ್ಸಿನ/ಅರಿವಿನ) ನಿರೋಧವಾಗುವುದು? ಭಗವಾನರ ಬಳಿ ಪ್ರಶ್ನಿಸಲು ಬಂದಿರುವೆನು. ತಮ್ಮ ಉತ್ತರವನ್ನು ಆಲಿಸಲು ಇಚ್ಛಿಸುತ್ತೇನೆ.
7.            ಭಗವಾನರು- ಅಂತರಂಗದಲ್ಲಾಗಲಿ ಅಥವಾ ಬಾಹ್ಯದಲ್ಲಾಗಲಿ, ಯಾವುದೇ ರೀತಿಯ ವೇದನೆ (ಸಂವೇದನೆ)ಗಳಲ್ಲಿ ಆನಂದಿಸಬೇಡ (ಅಭಿನಂದಿಸಬೇಡ). ಹೀಗೆ ಸ್ಮೃತಿವಂತನಾಗಿ ವೇದನೆಗಳಿಗೆ ಅತೀತನಾದರೆ ವಿಞ್ಞಾನದ ನಿರೋಧವಾಗುವುದು.

ಇಲ್ಲಿಗೆ ಉದಯ ಮಾಣವ ಪ್ರಶ್ನಾವಳಿ ಮುಗಿಯಿತು.

No comments:

Post a Comment