Thursday 26 July 2018

ಅನತ್ತ ಲಕ್ಖಣ ಸುತ್ತ (ಬುದ್ಧಭಗವಾನರ ಎರಡನೇಯ ಸುತ್ತ) anatta lakkhana sutta in kannada

ಅನತ್ತ ಲಕ್ಖಣ ಸುತ್ತ


(ಬುದ್ಧಭಗವಾನರ ಎರಡನೇಯ ಸುತ್ತ)



ಹೀಗೆ ನಾನು ಕೇಳಿದ್ದೇನೆ ಆಗ ಭಗವಾನರು ಕಾಶಿಯ ಹತ್ತಿರದ ಇಸಿಪತ್ತನದ ಮೃಗದಾಯದ ಬಳಿ ಇದ್ದರು.ಆಗ ಭಗವಾನರು ಪಂಚವಗರ್ೀಯ ಭಿಕ್ಖುಗಳೊಂದಿಗೆ ಹೀಗೆ ಸಂಬೋಧಿಸಿದರು. :
  ಭಿಕ್ಖುಗಳೇ ಆಕಾರವು(ದೇಹವು) ಆತ್ಮವಾಗಿಲ್ಲ(ಸ್ವಯಂವಾಗಿಲ್ಲ), ದೇಹವೇ ಆತ್ಮವಾಗಿದ್ದರೇ ಆಗ ದೇಹವೂ ರೋಗಕ್ಕೆ ಒಳಗಾಗುತ್ತಿರಲ್ಲಿಲ್ಲ. ಮತ್ತು ಆಗ ಇಚ್ಚೆಗೆ ತಕ್ಕಂತೆ ನನ್ನ ಶರೀರ ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಾಗುತ್ತಿತ್ತು.. ಅದರೆ ಭಿಕ್ಖುಗಳೇ ದೇಹವೂ ಆತ್ಮವಲ್ಲದ್ದರಿಂದಾಗಿ ಅದು ರೋಗವನ್ನು ಪಡೆಯುತ್ತದೆ, ಹಾಗೂ ಇಚ್ಚೆಯಂತೆ ನನ್ನ ಶರೀರ ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಿಲ್ಲ.

ಭಿಕ್ಖುಗಳೇ ವೇದನೆಗಳು ಆತ್ಮವಾಗಿಲ್ಲ(ಸ್ವಯಂವಾಗಿಲ್ಲ), ವೇದನೆಗಳೇ ಆತ್ಮವಾಗಿದ್ದರೇ ಆಗ ವೇದನೆಗಳು ನೋವಿಗೆ ಒಳಗಾಗುತ್ತಿರಲ್ಲಿಲ್ಲ. ಮತ್ತು ಆಗ ಇಚ್ಚೆಗೆ ತಕ್ಕಂತೆ ನನ್ನ ವೇದನೆ ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಾಗುತ್ತಿತ್ತು.. ಅದರೆ ಭಿಕ್ಖುಗಳೇ ವೇದನೆಗಳು ಆತ್ಮವಲ್ಲದ್ದರಿಂದಾಗಿ ಅದು ನೋವುಗಳನ್ನು ಪಡೆಯುತ್ತದೆ, ಹಾಗೂ ಇಚ್ಚೆಯಂತೆ ನನ್ನ ವೇದನೆ ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಿಲ್ಲ.

ಭಿಕ್ಖುಗಳೇ ಸಞ್ಞೆಗಳು (ಗ್ರಹಿಕೆಗಳು) ಆತ್ಮವಾಗಿಲ್ಲ (ಸ್ವಯಂವಾಗಿಲ್ಲ), ಸಞ್ಞೆಗಳು (ಗ್ರಹಿಕೆಗಳು) ಆತ್ಮವಾಗಿದ್ದರೇ ಆಗ ಸಞ್ಞೆಗಳು (ಗ್ರಹಿಕೆಗಳು) ನೋವಿಗೆ ಒಳಗಾಗುತ್ತಿರಲ್ಲಿಲ್ಲ. ಮತ್ತು ಆಗ ಇಚ್ಚೆಗೆ ತಕ್ಕಂತೆ ನನ್ನ ಸಞ್ಞೆಗಳು(ಗ್ರಹಿಕೆಗಳು) ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಾಗುತ್ತಿತ್ತು.. ಅದರೆ ಭಿಕ್ಖುಗಳೇ ಸಞ್ಞೆಗಳು (ಗ್ರಹಿಕೆಗಳು) ಆತ್ಮವಲ್ಲದ್ದರಿಂದಾಗಿ ಅದು ನೋವುಗಳನ್ನು ಪಡೆಯುತ್ತದೆ, ಹಾಗೂ ಇಚ್ಚೆಯಂತೆ ನನ್ನ ಸಞ್ಞೆಗಳು (ಗ್ರಹಿಕೆಗಳು) ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಿಲ್ಲ.

ಭಿಕ್ಖುಗಳೇ ಸಂಖಾರಗಳು(ಮನೋನಿಮರ್ಿತಿಗಳು) ಆತ್ಮವಾಗಿಲ್ಲ(ಸ್ವಯಂವಾಗಿಲ್ಲ), ಸಂಖಾರಗಳು(ಮನೋನಿಮರ್ಿತಿಗಳು) ಆತ್ಮವಾಗಿದ್ದರೇ ಆಗ ಸಂಖಾರಗಳು(ಮನೋನಿಮರ್ಿತಿಗಳು) ನೋವಿಗೆ(ಕ್ಲೇಷಗಳಿಗೆ) ಒಳಗಾಗುತ್ತಿರಲ್ಲಿಲ್ಲ.್ಲ. ಮತ್ತು ಆಗ ಇಚ್ಚೆಗೆ ತಕ್ಕಂತೆ ನನ್ನ ಸಂಖಾರಗಳು(ಮನೋನಿಮರ್ಿತಿಗಳು)ೆ ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಾಗುತ್ತಿತ್ತು.. ಅದರೆ ಭಿಕ್ಖುಗಳೇ ಸಂಖಾರಗಳು(ಮನೋನಿಮರ್ಿತಿಗಳು) ಆತ್ಮವಲ್ಲದ್ದರಿಂದಾಗಿ ಅದು ನೋವುಗಳನ್ನು ಪಡೆಯುತ್ತದೆ, ಹಾಗೂ ಇಚ್ಚೆಯಂತೆ ನನ್ನ ಸಂಖಾರಗಳು(ಮನೋನಿಮರ್ಿತಿಗಳು) ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಿಲ್ಲ.


ಭಿಕ್ಖುಗಳೇ ವಿಞ್ಞನಗಳು (ಅರಿಯುವಿಕೆ) ಆತ್ಮವಾಗಿಲ್ಲ (ಸ್ವಯಂವಾಗಿಲ್ಲ), ವಿಞ್ಞನಗಳು (ಅರಿಯುವಿಕೆ) ಆತ್ಮವಾಗಿದ್ದರೇ ಆಗ ವಿಞ್ಞನಗಳು (ಅರಿಯುವಿಕೆ) ನೋವಿಗೆ(ಕ್ಲೇಷಗಳಿಗೆ) ಒಳಗಾಗುತ್ತಿರಲ್ಲಿಲ್ಲ.್ಲ. ಮತ್ತು ಆಗ ಇಚ್ಚೆಗೆ ತಕ್ಕಂತೆ ನನ್ನ ವಿಞ್ಞನಗಳು(ಅರಿಯುವಿಕೆ)ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಾಗುತ್ತಿತ್ತು.. ಅದರೆ ಭಿಕ್ಖುಗಳೇ ವಿಞ್ಞನಗಳು(ಅರಿಯುವಿಕೆ) ಆತ್ಮವಲ್ಲದ್ದರಿಂದಾಗಿ ಅದು ನೋವುಗಳನ್ನು ಪಡೆಯುತ್ತದೆ, ಹಾಗೂ ಇಚ್ಚೆಯಂತೆ ನನ್ನ ವಿಞ್ಞನಗಳು(ಅರಿಯುವಿಕೆ)ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಿಲ್ಲ.

ನೀವು ಹೇಗೆ ಯೋಚಿಸುವಿರಿ ಭಿಕ್ಖುಗಳೇ ದೇಹವೂ ನಿತ್ಯವೋ ಅಥವಾ ಅನಿತ್ಯವೋ
    ಅನಿತ್ಯ ಭಗವಾನ್
    ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?
    ದುಃಖಕಾರಿ ಭಂತೆ
    ಈಗ ಯಾವುದು ಅನಿತ್ಯವೋ, ದುಃಖಕಾರಿಯೋ, ಬದಲಾಗುವ ಧರ್ಮದ್ದೊ ಅದನ್ನು ಇದು ನನ್ನದು, ಇದೇ ನಾನು, ಇದು ನನ್ನ ಆತ್ಮ ಎಂದು ಪರಿಗಣಿಸಬಹುದೇ?
ಖಂಡಿತವಾಗಿಯು ಇಲ್ಲ ಭಗವಾನ್
ನೀವು ಹೇಗೆ ಯೋಚಿಸುವಿರಿ ಭಿಕ್ಖುಗಳೇ ವೇದನೆಗಳು ನಿತ್ಯವೋ ಅಥವಾ ಅನಿತ್ಯವೋ
    ಅನಿತ್ಯ ಭಗವಾನ್
    ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?
    ದುಃಖಕಾರಿ ಭಂತೆ
    ಈಗ ಯಾವುದು ಅನಿತ್ಯವೋ, ದುಃಖಕಾರಿಯೋ, ಬದಲಾಗುವ ಧರ್ಮದ್ದೊ ಅದನ್ನು ಇದು ನನ್ನದು, ಇದೇ ನಾನು, ಇದು ನನ್ನ ಆತ್ಮ ಎಂದು ಪರಿಗಣಿಸಬಹುದೇ?
  ಖಂಡಿತವಾಗಿಯು ಇಲ್ಲ ಭಗವಾನ್.
 ನೀವು ಹೇಗೆ ಯೋಚಿಸುವಿರಿ ಭಿಕ್ಖುಗಳೇ ಸಞ್ಞ(ಗ್ರಹಿಕೆಗಳು) ನಿತ್ಯವೋ ಅಥವಾ ಅನಿತ್ಯವೋ
    ಅನಿತ್ಯ ಭಗವಾನ್
    ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?
    ದುಃಖಕಾರಿ ಭಂತೆ
    ಈಗ ಯಾವುದು ಅನಿತ್ಯವೋ, ದುಃಖಕಾರಿಯೋ, ಬದಲಾಗುವ ಧರ್ಮದ್ದೊ ಅದನ್ನು ಇದು ನನ್ನದು, ಇದೇ ನಾನು, ಇದು ನನ್ನ ಆತ್ಮ ಎಂದು ಪರಿಗಣಿಸಬಹುದೇ?
  ಖಂಡಿತವಾಗಿಯು ಇಲ್ಲ ಭಗವಾನ್.
 ನೀವು ಹೇಗೆ ಯೋಚಿಸುವಿರಿ ಭಿಕ್ಖುಗಳೇ ಸಂಖಾರಗಳು(ಮನೋನಿಮರ್ಿತಿಗಳು) ನಿತ್ಯವೋ ಅಥವಾ ಅನಿತ್ಯವೋ
ಅನಿತ್ಯ ಭಗವಾನ್
ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?
ದುಃಖಕಾರಿ ಭಂತೆ
ಈಗ ಯಾವುದು ಅನಿತ್ಯವೋ, ದುಃಖಕಾರಿಯೋ, ಬದಲಾಗುವ ಧರ್ಮದ್ದೊ ಅದನ್ನು ಇದು ನನ್ನದು, ಇದೇ ನಾನು, ಇದು ನನ್ನ ಆತ್ಮ ಎಂದು ಪರಿಗಣಿಸಬಹುದೇ?
ಖಂಡಿತವಾಗಿಯು ಇಲ್ಲ ಭಗವಾನ್.
  ನೀವು ಹೇಗೆ ಯೋಚಿಸುವಿರಿ ಭಿಕ್ಖುಗಳೇ ವಿಞ್ಞನಗಳು(ಅರಿಯುವಿಕೆಗಳು) ನಿತ್ಯವೋ ಅಥವಾ ಅನಿತ್ಯವೋ
ಅನಿತ್ಯ ಭಗವಾನ್
ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?
ದುಃಖಕಾರಿ ಭಂತೆ
ಈಗ ಯಾವುದು ಅನಿತ್ಯವೋ, ದುಃಖಕಾರಿಯೋ, ಬದಲಾಗುವ ಧರ್ಮದ್ದೊ ಅದನ್ನು ಇದು ನನ್ನದು, ಇದೇ ನಾನು, ಇದು ನನ್ನ ಆತ್ಮ ಎಂದು ಪರಿಗಣಿಸಬಹುದೇ?
ಖಂಡಿತವಾಗಿಯು ಇಲ್ಲ ಭಗವಾನ್.
ಅದ್ದರಿಂದ ಭಿಕ್ಖುಗಳೇ ಯಾವುದೇ ಶರೀರವು ಅದು ಭೂತಕಾಲದ್ದೇ ಅಗಿರಲಿ, ಅಥವಾ ಭವಿಷ್ಯದ್ದೇ ಆಗಿರಲಿ ಅಥವಾ ವರ್ತಮಾನದ್ದೇ ಆಗಿರಲಿ ,ಆಂತರ್ಯದ್ದೇ ಆಗಿರಲಿ ಅಥವಾ ಬಾಹ್ಯದ್ದೇ ಆಗಿರಲಿ, ಸ್ಥೂಲವಾದ್ದೇ ಆಗಿರಲಿ ಅಥವಾ ಸೂಕ್ಷ್ಮವಾದ್ದೇ ಆಗಿರಲಿ,  ಶ್ರೇಷ್ಟವಾದ್ದೇ ಆಗಿರಲಿ ಅಥವ ನೀಚವಾದ್ದೇ ಆಗಿರಲಿ, ದೂರದ್ದೇ ಆಗಿರಲಿ ಅಥವಾ ಹತ್ತಿರದ್ದೇ ಆಗಿರಲಿ , ಆ ಎಲ್ಲಾ ಶರೀರವನ್ನು ಇದು ನನ್ನದ್ದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಪ್ರಜ್ಞಾಪೂರ್ವಕವಾಗಿ, ಯಥಾಭೂತವಾಗಿ ಹೀಗೆ ಅರಿಯಬೇಕು.

ಅದ್ದರಿಂದ ಭಿಕ್ಖುಗಳೇ ಯಾವುದೇ ವೇದನೆಯು ಅದು ಭೂತಕಾಲದ್ದೇ ಅಗಿರಲಿ, ಅಥವಾ ಭವಿಷ್ಯದ್ದೇ ಆಗಿರಲಿ ಅಥವಾ ವರ್ತಮಾನದ್ದೇ ಆಗಿರಲಿ ,ಆಂತರ್ಯದ್ದೇ ಆಗಿರಲಿ ಅಥವಾ ಬಾಹ್ಯದ್ದೇ ಆಗಿರಲಿ, ಸ್ಥೂಲವಾದ್ದೇ ಆಗಿರಲಿ ಅಥವಾ ಸೂಕ್ಷ್ಮವಾದ್ದೇ ಆಗಿರಲಿ,  ಶ್ರೇಷ್ಟವಾದ್ದೇ ಆಗಿರಲಿ ಅಥವ ನೀಚವಾದ್ದೇ ಆಗಿರಲಿ, ದೂರದ್ದೇ ಆಗಿರಲಿ ಅಥವಾ ಹತ್ತಿರದ್ದೇ ಆಗಿರಲಿ , ಆ ಎಲ್ಲಾ ವೇದನೆಗಳನ್ನು  ಇದು ನನ್ನದ್ದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಪ್ರಜ್ಞಾಪೂರ್ವಕವಾಗಿ, ಯಥಾಭೂತವಾಗಿ ಹೀಗೆ ಅರಿಯಬೇಕು.

ಅದ್ದರಿಂದ ಭಿಕ್ಖುಗಳೇ ಯಾವುದೇ ಸಞ್ಞೆಯು ಅದು ಭೂತಕಾಲದ್ದೇ ಅಗಿರಲಿ, ಅಥವಾ ಭವಿಷ್ಯದ್ದೇ ಆಗಿರಲಿ ಅಥವಾ ವರ್ತಮಾನದ್ದೇ ಆಗಿರಲಿ ,ಆಂತರ್ಯದ್ದೇ ಆಗಿರಲಿ ಅಥವಾ ಬಾಹ್ಯದ್ದೇ ಆಗಿರಲಿ, ಸ್ಥೂಲವಾದ್ದೇ ಆಗಿರಲಿ ಅಥವಾ ಸೂಕ್ಷ್ಮವಾದ್ದೇ ಆಗಿರಲಿ,  ಶ್ರೇಷ್ಟವಾದ್ದೇ ಆಗಿರಲಿ ಅಥವ ನೀಚವಾದ್ದೇ ಆಗಿರಲಿ, ದೂರದ್ದೇ ಆಗಿರಲಿ ಅಥವಾ ಹತ್ತಿರದ್ದೇ ಆಗಿರಲಿ , ಆ ಎಲ್ಲಾ ಸಞ್ಞೆಗಳನ್ನು  ಇದು ನನ್ನದ್ದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಪ್ರಜ್ಞಾಪೂರ್ವಕವಾಗಿ, ಯಥಾಭೂತವಾಗಿ ಹೀಗೆ ಅರಿಯಬೇಕು.

ಅದ್ದರಿಂದ ಭಿಕ್ಖುಗಳೇ ಯಾವುದೇ ಸಂಖಾರಗಳು ಅದು ಭೂತಕಾಲದ್ದೇ ಅಗಿರಲಿ, ಅಥವಾ ಭವಿಷ್ಯದ್ದೇ ಆಗಿರಲಿ ಅಥವಾ ವರ್ತಮಾನದ್ದೇ ಆಗಿರಲಿ ,ಆಂತರ್ಯದ್ದೇ ಆಗಿರಲಿ ಅಥವಾ ಬಾಹ್ಯದ್ದೇ ಆಗಿರಲಿ, ಸ್ಥೂಲವಾದ್ದೇ ಆಗಿರಲಿ ಅಥವಾ ಸೂಕ್ಷ್ಮವಾದ್ದೇ ಆಗಿರಲಿ,  ಶ್ರೇಷ್ಟವಾದ್ದೇ ಆಗಿರಲಿ ಅಥವ ನೀಚವಾದ್ದೇ ಆಗಿರಲಿ, ದೂರದ್ದೇ ಆಗಿರಲಿ ಅಥವಾ ಹತ್ತಿರದ್ದೇ ಆಗಿರಲಿ , ಆ ಎಲ್ಲಾ ಸಂಖಾರಗಳನ್ನು  ಇದು ನನ್ನದ್ದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಪ್ರಜ್ಞಾಪೂರ್ವಕವಾಗಿ, ಯಥಾಭೂತವಾಗಿ ಹೀಗೆ ಅರಿಯಬೇಕು.

ಅದ್ದರಿಂದ ಭಿಕ್ಖುಗಳೇ ಯಾವುದೇ ವಿಞ್ಞನಗಳು ಗಳು ಅದು ಭೂತಕಾಲದ್ದೇ ಅಗಿರಲಿ, ಅಥವಾ ಭವಿಷ್ಯದ್ದೇ ಆಗಿರಲಿ ಅಥವಾ ವರ್ತಮಾನದ್ದೇ ಆಗಿರಲಿ ,ಆಂತರ್ಯದ್ದೇ ಆಗಿರಲಿ ಅಥವಾ ಬಾಹ್ಯದ್ದೇ ಆಗಿರಲಿ, ಸ್ಥೂಲವಾದ್ದೇ ಆಗಿರಲಿ ಅಥವಾ ಸೂಕ್ಷ್ಮವಾದ್ದೇ ಆಗಿರಲಿ,  ಶ್ರೇಷ್ಟವಾದ್ದೇ ಆಗಿರಲಿ ಅಥವ ನೀಚವಾದ್ದೇ ಆಗಿರಲಿ, ದೂರದ್ದೇ ಆಗಿರಲಿ ಅಥವಾ ಹತ್ತಿರದ್ದೇ ಆಗಿರಲಿ , ಆ ಎಲ್ಲಾ ವಿಞ್ಞನಗಳನ್ನು  ಇದು ನನ್ನದ್ದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಪ್ರಜ್ಞಾಪೂರ್ವಕವಾಗಿ, ಯಥಾಭೂತವಾಗಿ ಹೀಗೆ ಅರಿಯಬೇಕು.

ಓ ಭಿಕ್ಖುಗಳೇ, ಯಾವಾಗ ಸುಶಿಕ್ಷಿತ ಆರ್ಯ ಶ್ರಾವಕನು ಹೀಗೆ ಗಮನಿಸಿದಾಗ ಆತನು ದೇಹದಿಂದ ವಿಕಷರ್ಿತನಾಗುತ್ತಾನೆ , ವೇದನೆಗಳಿಂದ ವಿಕಷರ್ಿತನಾಗುತ್ತಾನೆ,  ಸಞ್ಞಗಳಿಂದ ವಿಕಷರ್ಿತನಾಗುತ್ತಾನೆ , ಸಂಖಾರಗಳಿಂದ ವಿಕಷರ್ಿತನಾಗುತ್ತಾನೆ , ವಿಞ್ಞನಗಳಿಂದ ವಿಕಷರ್ಿತನಾಗುತ್ತಾನೆ ,ವಿಕಷರ್ಿತನಾದ್ದರಿಂದಾಗಿ ವಿರಾಗ ಹೊಂದುತ್ತಾನೆ, ವಿರಾಗ ಹೊಂದಿದ್ದರಿಂದಾಗಿ ವಿಮುಕ್ತನಾಗುತ್ತಾನೆ, ಅದರಿಂದಾಗಿ ವಿಮುಕ್ತಜ್ಞಾನ ಪಡೆಯುತ್ತಾನೆ ಜನ್ಮವೂ ನಾಶವಾಯಿತು, ಬ್ರಹ್ಮಚರ್ಯೆಯ ಜೀವನ ಪೂರ್ಣವಾಯಿತು, ಯಾವುದೆಲ್ಲವನ್ನು ಮಾಡಬೇಕಾಗಿತ್ತೊ ಅವೆಲ್ಲವನ್ನು ಮಾಡಿಯಾಗಿದೆ, ಇನ್ನು ನನಗೆ ಭವವಿಲ್ಲ ಎಂದು ಅರಿಯುತ್ತಾನೆ.

ಭಗವಾನರು ಹೀಗೆ ಬೋಧಿಸಿದಾಗ ಪಂಚವಗರ್ೀಯ ಭಿಕ್ಷುಗಳು ಆನಂದಿತರಾದರು ಹಾಗೂ ಅವರ ಚಿತ್ತಗಳು ಅಸವಗಳಿಂದ ಮುಕ್ತವಾದವು, ಅವರು ಎಲ್ಲಾಬಗೆಯ ಅಂಟುವಿಕೆಯಿಂದ ಮುಕ್ತರಾದರು.

DHAMMACAKKAPAVATTANA SUTTA in kannada ದಮ್ಮಚಕ್ಕಪವತ್ತನ ಸುತ್ತ

 ದಮ್ಮಚಕ್ಕಪವತ್ತನ ಸುತ್ತ




ನಾನು ಹೀಗೆ ಕೇಳಿದ್ದೇನೆ :
ಒಮ್ಮೆ ಭಗವಾನರು ವಾರಾಣಸಿಯ ಇಸಿಪಟ್ಟಣದ ಮಿಗದಾಯದಲ್ಲಿ ವಿಹರಿಸುತ್ತಿದ್ದರು, ಆಗ ಭಗವಾನರು ಪಂಚವಗರ್ೀಯ ಭಿಕ್ಖುಗಳಿಗೆ ಹೀಗೆ ಸಂಭೋದಿಸಿದರು :

 ಎರಡು ಅತಿರೇಕಗಳಿವೆ ಭಿಕ್ಖುಗಳೇ, ಅದನ್ನು ಪಬ್ಬಜಿತನಾದವನು ಸೇವಿಸಬಾರದು, ಯಾವುದವು ಎರಡು ?

 ಅವೆಂದರೆ ಕಾಮಸುಖಗಳಲ್ಲಿ ತಲ್ಲಿನನಾಗುವಿಕೆ, ಇವು ಹೀನವಾದುದು, ಅಸಭ್ಯವಾದುದು(ಗಮ್ಮೋ), ಪ್ರಾಪಂಚಿಕವಾದುದು(ಪೊಥುಜ್ಜನಿಕೊ), ಉದಾತ್ತವಲ್ಲದ್ದು(ಅನರಿಯೊ), ಮತ್ತು ಅನರ್ಥಕಾರಿಯಾದುದು.


ಇನ್ನೊಂದು ಅತಿರೇಕವೆಂದರೆ ಸ್ವಯಂವನ್ನು(ದೇಹ) ದಂಡಿಸುವಿಕೆ, ಇವು ದುಃಖಕಾರಿ, ಉದಾತ್ತವಲ್ಲದ್ದು, ಮತ್ತು ಅನರ್ಥಕಾರಿಯಾದುದು.

 ಈ ಉಭಯವನ್ನು ವಜರ್ಿಸಿರುವ ತಥಾಗತರು ಮಧ್ಯಮ ಮಾರ್ಗವನ್ನು ಅನ್ವೇಷಿಸಿದ್ದಾರೆ. ಇದು ಚಕ್ಷುಕಾರಕವು, ಜ್ಞಾನಕಾರಕ, ಉಪಶಾಂತತೆ ನೀಡುವಂತಹದ್ದು, ಅಭಿಞ್ಞಕಾರಕ, ಸಂಬೋಧಿದಾಯಕ ಹಾಗೂ ನಿಬ್ಬಾಣದೆಡೆಗೆ ಒಯ್ಯುವಂತಹುದು.

   ಯಾವುದು ಭಿಕ್ಖುಗಳೇ ತಥಾಗತರು ಅನ್ವೇಷಿಸಿರುವ. ಮಧ್ಯಮ ಮಾರ್ಗವು. ಚಕ್ಷುಕಾರಕವು, ಜ್ಞಾನಕಾರಕವು, ಉಪಶಾಂತತೆ ನೀಡುವಂತಹದ್ದು, ಅಭಿಞ್ಞಕಾರಕ, ಸಂಬೋಧಿದಾಯಕ ಹಾಗೂ ನಿಬ್ಬಾಣದೆಡೆಗೆ ಒಯ್ಯುವಂತಹುದು..
 ಅದೇ ಆರ್ಯ ಆಷ್ಟಾಂಗಿಕ ಮಾರ್ಗ ಅಂದರೆ
ಸಮ್ಮಾದೃಷ್ಟಿಕೋನ,
ಸಮ್ಮಾಸಂಕಲ್ಪ,
ಸಮ್ಮಾ ವಾಚ,
ಸಮ್ಮಾ ಕಮ್ಮ,
 ಸಮ್ಮಾ ಜೀವನೋಪಾಯ,
ಸಮ್ಮಾ ಸ್ಮೃತಿ ಮತ್ತು
ಸಮ್ಮಾ ಸಮಾಧಿ.

ಇದು ಚಕ್ಷುಕಾರಕವು, ಜ್ಞಾನಕಾರಕ, ಉಪಶಾಂತತೆ ನೀಡುವಂತಹದ್ದು, ಅಭಿಞ್ಞಕಾರಕ, ಸಂಬೋಧಿದಾಯಕ ಹಾಗೂ ನಿಬ್ಬಾಣದೆಡೆಗೆ ಒಯ್ಯುವಂತಹುದು.
 ಇದೇ ಭಿಕ್ಖುಗಳೇ ದುಃಖ ಆರ್ಯಸತ್ಯ, ಹೇಗೆಂದರೆ ಜನ್ಮವು ದುಃಖಕರ, ಜರಾ(ಮುಪ್ಪು) ದುಃಖಕರ, ವ್ಯಾದಿ ದುಃಖಕರ, ಮರಣ ದುಃಖಕರ, ಅಪ್ರೀಯವಾದುದರ ಸಮಾಗಮ ದುಃಖ, ಪ್ರಿಯವಾದುದರ ವಿಯೋಗ ದುಃಖಕರ, ಇಚ್ಚಿಸುವಂತಹುದು ಅಲಭ್ಯವಾದರೆ ದುಃಖ, ಸಂಕ್ಷೀಪ್ತವಾಗಿ ಹೇಳುವುದಾದರೆ ಐದು ಖಂದಗಳಲ್ಲಿ(ದೇಹ ಮತ್ತು ಮನಸ್ಸುಗೆ) ಅಂಟಿರುವಿಕೆಯೇ ದುಃಖಕರ.

  ಈಗ ಓ ಭಿಕ್ಖುಗಳೇ ಇದೇ ದುಃಖ ಸಮುದಯ(ಉದಯ ಯಾವುದರಿಂದಾಗಿ ಆಗುವುದು ಎಂಬುದರ) ಆರ್ಯ ಸತ್ಯವಾಗಿದೆ. ಇಲ್ಲಿ ತಣ್ಹಾದಿಂದಲೇ ಪುನರ್ಭವಿಸುತ್ತಾನೆ ತಣ್ಹಾವು 3 ವಿಧದ್ದಾಗಿದೆ ಕಾಮತಣ್ಹಾ(ಇಂದ್ರೀಯ ಬೋಗ), ಭವತಣ್ಹಾ(ಶಾಶ್ವತವಾಗಿ ಅಥವಾ ಇರಬೇಕೆಂಬ ತೀವ್ರಬಯಕೆ) ಮತ್ತು ವಿಭವ ತಣ್ಹಾ(ಇರಬಾರದು ಎಂಬ ತೀವ್ರಬಯಕೆ).

ಈಗ ಓ ಭಿಕ್ಖುಗಳೇ ಇದೇ ದುಃಖನಿರೋಧ ಆರ್ಯಸತ್ಯವಾಗಿದೆ. ಅಂದರೆ ಈ ತಣ್ಹಾದಿಂದ ನಿಶ್ಶ್ಯೇಷವಾಗಿ ರಹಿತನಾಗುವಿಕೆ, ವಿರಾಗಹೊಂದುವಿಕೆ, ನಿರೋಧಹೊಂದುವಿಕೆ, ತ್ಯಾಗಮಾಡಿವಿಕೆ, ಬಿಟ್ಟುಬಿಡುವಿಕೆ, ಮುಕ್ತಿ ಹೊಂದುವಿಕೆ ಮತ್ತು ಪೂರ್ಣವಾಗಿ ಅಂಟದೆ ಹೋಗುವಿಕೆ.

          ಈಗ ಓ ಭಿಕ್ಖುಗಳೇ ಇದೇ ದುಃಖನಿರೋಧಕ್ಕೇ ಕೊಂಡುಯ್ಯುವಂತಹ ಮಾರ್ಗದ ಆರ್ಯಸತ್ಯವಾಗಿದೆ. ಅದೇ ಅದೇ ಆರ್ಯ ಆಷ್ಟಾಂಗಿಕ ಮಾರ್ಗ ಅಂದರೆ ಸಮ್ಮಾದೃಷ್ಟಿಕೋನ, ಸಮ್ಮಾಸಂಕಲ್ಪ, ಸಮ್ಮಾ ವಾಚ, ಸಮ್ಮಾ ಕಮ್ಮ, ಸಮ್ಮಾ ಜೀವನೋಪಾಯ, ಸಮ್ಮಾ ಸ್ಮೃತಿ ಮತ್ತು ಸಮ್ಮಾ ಸಮಾಧಿ.

ಇದೇ ದುಃಖದ ಆರಿಯ ಸತ್ಯವಾಗಿದೆ. ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.

 ಈ ದುಃಖ ಆರಿಯ ಸತ್ಯವನ್ನು ಪೂರ್ಣವಾಗಿ ಅರಿಯಲೇಬೇಕು(ಪರಿನೆಯ್ಯ) ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.

 ಈ ದುಃಖ ಆರಿಯ ಸತ್ಯವನ್ನು ಅರಿಯಲಾಗಿದೆ ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.

  ಇದು ದುಃಖಸಮುದಯದ ((ಉದಯ ಯಾವುದರಿಂದಾಗಿ ಆಗುವುದು ಎಂಬುದರ) ಆರಿಯ ಸತ್ಯವಾಗಿದೆ. ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.


 ಈ ದುಃಖದ ಕಾರಣಗಳ(ಉದಯಗಳ) ಸಮೂಹವನ್ನು ನಿಮರ್ೂಲನೆ(ಪಹತಬ್ಬ) ಮಾಡಲೇಬೇಕು. ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.


ಈ ದುಃಖದ ಕಾರಣಗಳ(ಉದಯಗಳ) ಸಮೂಹವನ್ನು ನಿಮರ್ೂಲನೆ(ಪಹತಬ್ಬ) ಮಾಡಿಯಾಗಿದೆ. ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.

 ಇದೇ ದುಃಖನಿರೋಧ ಆರಿಯ ಸತ್ಯ ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.

ಈ ದುಃಖನಿರೋಧ ಆರಿಯ ಸತ್ಯವನ್ನು ಸಾಕ್ಷಾತ್ಕಾರಿಸಲೇಬೇಕು ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.

ಈ ದುಃಖನಿರೋಧ ಆರಿಯ ಸತ್ಯವನ್ನು ಸಾಕ್ಷಾತ್ಕಾರಿಸಲಾಗಿದೆ  ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.


 ಇದೇ ದುಃಖನಿರೋಧದೆಡೆಗೆ ಕೊಂಡುಯ್ಯುವ ಮಾರ್ಗದ ಆರಿಯ ಸತ್ಯವಾಗಿದೆ. ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.

 ಈ ದುಃಖನಿರೋಧದೆಡೆಗೆ ಕೊಂಡುಯ್ಯುವ ಮಾರ್ಗವನ್ನು ಅಭಿವೃದ್ಧಿಗೊಳಿಸಲೇಬೇಕು. . ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.

 ಈ ದುಃಖನಿರೋಧದೆಡೆಗೆ ಕೊಂಡುಯ್ಯುವ ಮಾರ್ಗವನ್ನು ಅಭಿವೃದ್ಧಿಗೊಳಿಸಲಾಗಿದೆ  . ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.

 ಭಿಕ್ಖುಗಳೇ ಎಲ್ಲಿಯವರೆಗೆ ಈ ಆರಿಯಸತ್ಯಗಳ ಪರಿಪೂರ್ಣವಾದ ಸಮಗ್ರವಾದ ಜ್ಞಾನವು ಈ ಬಗೆಯ 3 ಅಂಶಗಳಲ್ಲಿ, ಮತ್ತು 12 ವಿಧಾನಗಳಲ್ಲಿ ನನಗೆ ಪರಿಪೂರ್ಣವಾಗಿ ಸ್ಪಷ್ಟವಾಗಲಿಲ್ಲವೋ, ಅಲ್ಲಿಯವರೆಗೆ ನಾನು ದೇವತೆಗಳ ಸಹಿತವಾದ, ಮಾರರ, ಬ್ರಹ್ಮರ, ಸಮಣರ, ಬ್ರ್ರಾಹ್ಮಣರ, ದೇವತೆಗಳ, ಮತ್ತು ಮಾನವರಸಹಿತ ಈ ಲೋಕಗಳಲ್ಲಿ ಅನುತ್ತರವಾದ ಸಂಯಕ್ ಸಂಬೋದಿಯನ್ನು ಪಡೆದಿದ್ದೇನೆ ಎಂದು ಒಪ್ಪಿಕೊಳ್ಳಲ್ಲಿಲ್ಲ.

 ಅದರೆ ಭಿಕ್ಖುಗಳೇ ಯಾವಾಗ ಈ ಆರಿಯಸತ್ಯಗಳ ಪರಿಪೂರ್ಣವಾದ ಸಮಗ್ರವಾದ ಜ್ಞಾನವು ಈ ಬಗೆಯ 3 ಅಂಶಗಳಲ್ಲಿ, ಮತ್ತು 12 ವಿಧಾನಗಳಲ್ಲಿ ನನಗೆ ಪರಿಪೂರ್ಣವಾಗಿ ಸ್ಪಷ್ಟವಾಗಿಹೋಯಿತೋ, ಆಗ ನಾನು ದೇವತೆಗಳ ಸಹಿತವಾದ, ಮಾರರ, ಬ್ರಹ್ಮರ, ಸಮಣರ, ಬ್ರ್ರಾಹ್ಮಣರ, ದೇವತೆಗಳ, ಮತ್ತು ಮಾನವರಸಹಿತ ಈ ಲೋಕಗಳಲ್ಲಿ ಅನುತ್ತರವಾದ ಸಂಯಕ್ ಸಂಬೋದಿಯನ್ನು ಪಡೆದಿದ್ದೇನೆ ಎಂದು ಒಪ್ಪಿಕೊಂಡೆನು.

ಮತ್ತು ಆಗ ನನ್ನಲ್ಲಿ ಈ ಬಗೆಯ ಜ್ಞಾನವೂ ಹಾಗೂ ದರ್ಶನವೂ ಉದಯಿಸಿತು ಅದೇನೆಂದರೆ ; (ನನ್ನ) ಚೇತೋವಿಮುಕ್ತಿಯು ಅಚಲವಾದುದು, ಇದೇ (ನನ್ನ) ಕಟ್ಟಕಡೆಯ ಜನ್ಮ, ಮತ್ತೆ ಪುನರ್ಭವವಿಲ್ಲ.(ಅಸ್ತಿತ್ವವಿಲ್ಲ).


ಹೀಗೆ ಭಗವಾನರು ಸುತ್ತವನ್ನು ಪ್ರವಚಿಸಿದಾಗ ಭಿಕ್ಖುಗಳು ಆನಂದಿತರಾದರು ಹಾಗು ಅಭಿನಂದನೆ ಮಾಡಿದರು. ಯಾವಾಗ ಹೀಗೆ ಸುತ್ತವನ್ನು ಪ್ರವಚಿಸುವಾಗ ಪೂಜ್ಯ ಕೊಂಡನ್ಯರವರಿಗೆ ಹೀಗೆ ವಿರಜವಾದ, ವಿಮಲವಾದ ಧಮ್ಮಚಕ್ಷುವು ಉದಯವಾಯಿತು.: ಯಾವುದೆಲ್ಲಾ ಉದಯ ಧಮ್ಮವನ್ನು ಹೊಂದಿವೆಯೋ ಅವೆಲ್ಲವೂ ನಿರೋಧಧಮ್ಮವನ್ನು ಹೊಂದುತ್ತವೆ.

ಯಾವಾಗ ಬುದ್ಧಭಗವಾನರು ಈ ಧಮ್ಮಚಕ್ಕ ಸುತ್ತವನ್ನು ಪ್ರವಚಿಸಿದರೋ ಆಗ ಭೂಮಿಯಲ್ಲಿನ ದೇವದೇವತೆಗಳೂ ಹೀಗೇ ಹಷರ್ೋಧ್ಗಾರಗಳನ್ನು ಮಾಡಿದವು : ಭಗವಾನರು ವಾರಾಣಸಿಯ ಋಷಿಪಟ್ಟಣದಲ್ಲಿ ಮೃಗದಾಯದ ಬಳಿ ಅನುತ್ತರವಾದ ಧಮ್ಮಚಕ್ರವನ್ನು ಪ್ರವತರ್ಿಸಿದ್ದಾರೆ. ಈ ಬಗೆಯ ಧಮ್ಮಚಕ್ರದ ಚಾಲನೆಯನ್ನು ಈವರೆವಿಗೆ ಈ ಲೋಕಗಳ ಯಾವುದೇ ಸಮಣ ಬ್ರಾಹ್ಮಣರಾಗಲಿ, ದೇವಗಳಾಗಲಿ, ಮಾರರಾಗಲಿ, ಬ್ರಹ್ಮರಾಗಲಿ ಪ್ರವರ್ತನೆ ಮಾಡಿಲ್ಲ  ಈ ದಮ್ಮಚಕ್ಕಪವತ್ತನವನ್ನು ಯಾರು ನಿಲ್ಲಿಸಲು ಸಾಧ್ಯವಿಲ್ಲ ಹಾಗೂ ಯಾರಿಂದಲೂ ಹಿಂದಕ್ಕೆ ತಿರುಗಿಸಲು ಸಾಧ್ಯವಿಲ್ಲ .. ಈ ಬಗೆಯ ಭೂಮಿಯ ದೇವದೇವತೆಗಳ ಶಬ್ದಗಳನ್ನು ಆಲಿಸಿದಂತಹ ಚಾತುಮಹಾರಾಜಿಕಾ ದೇವತೆಗಳುಹೀಗೆಯೇ ಪುನರುಚ್ಚಿಸಿದವು. . . .  . . . . . .ಅವನ್ನು ಕಂಡು . . . .ತಾವತಿಂಸ . .. . . . . .ಯಾಮ. . . . . . ತುಸಿತಾ. . .. . . .ನಿಮ್ಮಾನರತಿ. . .. . . . . .ಪರನಿಮ್ಮಾನರತಿ ದೇವಗಳು ಪುನರುಚ್ಚಿಸಿದವು.. ..  . . .. .. .ಅವರ ಧ್ವನಿ ಆಲಿಸಿದಂತಹ ಬ್ರಹ್ಮಕಾಯಿಕ ದೇವತೆಗಳಾದ ಬ್ರಹ್ಮ ಪರಿಸಜ್ಜ,  . . . ಬ್ರಹ್ಮ ಪುರೋಹಿತ .. . .ಮಹಾಬ್ರಹ್ಮ . . . .ಪರಿತ್ತಭ. .. . . .ಅಪ್ಪಮಾನಾಭ. .. . .ಸುಭಕಿನ್ನ,, . . ..ವೆಹಪ್ಫಲ. . .ಅವಿಹ. . .. ಅತಪ್ಪ. . . ಸುದಸ್ಸ . . . .ಮತ್ತು ಅಕನಿತ್ಥ ಅವರೂ ಸಹಾ ಹೀಗೆಯೇ ಹಷರ್ೋಧ್ಗಾರಗಳನ್ನು ಮಾಡಿದವು
ಹೀಗೇ ಆ ಕ್ಷಣದಲ್ಲಿ ಆ ಸಮಯದಲ್ಲಿ ಈ ಬಗೆಯ ಹಷರ್ೋಧ್ಗಾರಗಳೂ ಬ್ರಹ್ಮಲೋಕಗಳವರೆವಿಗೂ ಹಬ್ಬಿತು. ಆಗ ಹತ್ತುಸಹಸ್ರ ಲೋಕಧಾತುಗಳು ಕಂಪಿಸಿದವು,  ನಡುಗಿದವು, ಭೀಕರವಾಗಿ ಅಲುಗಾಡಿದವು.
ಆಗ ದೇವದೇವತೆಗಳ ಮೀರಿಸಿದ ತೇಜಸ್ಸುಗಳ ಮಹಾ ಬೆಳಗಿನಿಂದಾಗಿ ಲೋಕವೆಲ್ಲಾ ಪ್ರಕಾಶಮಾನವಾಯಿತು. ಆಗ ಭಗವಾನರು ಹೀಗೆ ನುಡಿದರು. :  ಅರಿತಿದ್ದಾನೆ ಕೋಂಡನ್ಯ, ನಿಜವಾಗಿಯು ಆಯುಷ್ಮಂತ ಕೋಂಡನ್ಯ ಜ್ಞಾನವನ್ನು ಪಡೆದಿದ್ದಾನೆ .ಅಥರ್ೈಸಿಕೊಂಡಿದ್ದಾನೆ.

ಅಂದಿನಿಂದ ಪೂಜ್ಯಕೊಂಡನ್ಯನವರಿಗೆ ಅಞ್ಞಸಿ(ಅರಿತಿರುವ) ಕೊಂಡನ್ಯ ಎಂದು ಕರೆಯಲಾರಂಬಿಸಿದರು.

  _____________________________ಸಮಾಪ್ತಿ_______________________________________

Saturday 14 July 2018

ಅಹುನೇಯ್ಯ ಸುತ್ತ ahuneyya sutta

ಅಹುನೇಯ್ಯ ಸುತ್ತ 



ಭಿಕ್ಖುಗಳೇ,
ಈ 10 ಬಗೆಯ ವ್ಯಕ್ತಿಗಳು ದಾನಗಳಿಗೆ, ಆತಿಥ್ಯಗಳಿಗೆ, ಅರ್ಪಣೆಗಳಿಗೆ,  ಗೌರವಾರ್ಹ ವಂದನೆಗಳಿಗೆ, ಲೋಕದಲ್ಲಿ ಪುಣ್ಯಗಳಿಗೆ ಮಿರಿಸಲಾಗದ ಕ್ಷೇತ್ರವಾಗಿದ್ದಾರೆ.

ಯಾರವರು 10 ಜನರು ?
ಅವರೆಂದರೇ

1.ತಥಾಗತರು ಅರಹಂತರು ಆಗಿರುವಂತಹ  ಸಮ್ಮಸಂಬುಧ್ಧರು
2.ಪಚ್ಚೇಕ ಬುಧ್ಧರು.
3.ಸಮಥ ಹಾಗೂ ವಿಪಸ್ಸನ ಎರಡರಿಂದಲೂ ವಿಮುಕ್ತರಾಗಿರುವವರು.
4.ಪ್ರಜ್ಞೆಯಿಂದ(ವಿಪಸ್ಸನ) ವಿಮುಕ್ತರಾಗಿರುವವರು
5.ಕಾಯವನ್ನು ಸಾಕ್ಷಿಯಾಗಿ ಗಮನಿಸುತ್ತ ಕಾಯಾಗತಾನುಸತಿಯಿಂದ ವಿಮುಕ್ತರಾಗಿರುವವರು.
6.ದರ್ಶನದಿಂದ(ದೃಷ್ಟಿಗಳಿಂದ) ವಿಮುಕ್ತರಾಗಿರುವವರು
7.ಶ್ರಧ್ಧೆಯಿಂದ ವಿಮುಕ್ತರಾಗಿರುವವರು(ಸೋತಪನ್ನ)
8.ಧಮ್ಮಾನುಯಾಯಿ(ಸುಶೀಲರು/ಧರ್ಮದ ಆಚರಣೆಯ ಲ್ಲಿರುವವನು)
9.ತಿರತನದಲ್ಲಿ ಆಪಾರ ಅಚಲ ನಂಬಿಕೆ ಇರುವವವನು(.ಶ್ರಧ್ಹಾನುಸಾರಿ )
10.ಭಿಕ್ಖು (ಗೋತ್ರ್ರಭೂ ಆಗೀರುವವರು ಅಂದ್ರೆ ಇಂದ್ರಿಯ ಲೋಕದಿಂದ ಸಮಾದಿ ಸ್ಥಿತಿ ಅಥವಾ ಅರಿಯ ಸ್ಥಿತಿ  ಹೊಂದಿದವರು ) 

ಈ 10 ಜನರು ದಾನಗಳಿಗೆ, ಆತಿಥ್ಯಗಳಿಗೆ, ಅರ್ಪಣೆಗಳಿಗೆ,  ಗೌರವಾರ್ಹ ವಂದನೆಗಳಿಗೆ, ಲೋಕದಲ್ಲಿ ಪುಣ್ಯಗಳಿಗೆ ಮಿರಿಸಲಾಗದ ಕ್ಷೇತ್ರವಾಗಿದ್ದಾರೆ

Thursday 14 June 2018

Eight-fold path of Lord Buddha ಬುದ್ಧಭಗವಾನರ ಆರ್ಯ ಆಷ್ಟಾಂಗ ಮಾರ್ಗ (ಮಗ್ಗ ವಿಭಂಗ ಸುತ್ತ)

       ಬುದ್ಧಭಗವಾನರ ಆರ್ಯ ಆಷ್ಟಾಂಗ ಮಾರ್ಗ   

                (ಮಗ್ಗ ವಿಭಂಗ ಸುತ್ತ)


ಒಮ್ಮೆ ಭಗವಾನರು ಶ್ರಾವಸ್ತಿಯ ಜೇತವನದ ಅನಾಥಪಿಂಡಿಕನ ಆರಾಮದಲ್ಲಿ ನೆಲಸಿದ್ದರು. ಆಗ ಅವರು ಭಿಕ್ಷುಗಳೊಂದಿಗೆ ಹೀಗೆ ಸಂಬೋಧಿಸಿದರು, ಭಿಕ್ಷುಗಳೇ
 ಭಗವಾನ್ ಎಂದು ಪ್ರತಿ ಉತ್ತರಿಸಿದರು.
ಆಗ ಭಗವಾನರು ಹೀಗೆ ನುಡಿದರು, ನಾನು ನಿಮಗಾಗಿ ಆರ್ಯಆಷ್ಟಾಂಗ ಮಾರ್ಗವನ್ನು ಬೋದಿಸುತ್ತಿದ್ದೇನೆ ಹಾಗೂ ವಿಶ್ಲೇಷಿಸುತ್ತಿದ್ದೇನೆ, ಗಮನವಿಟ್ಟು ಆಲಿಸಿರಿ.
 ಹಾಗೆ ಆಗಲಿ ಭಂತೆ.
ಆಗ ಭಗವಾನರು ಹೀಗೆ ಮುಂದುವರೆಸಿದರು, ಈಗ ಭಿಕ್ಖಗಳೇ ಯಾವುದು ಆರ್ಯಆಷ್ಟಾಂಗ ಮಾರ್ಗ ?
ಅದೇಂದರೆ
1 ಸಮ್ಮ ದೃಷ್ಟಿಕೋನ,
2 ಸಮ್ಮಸಂಕಲ್ಪ,
3 ಸಮ್ಮ ವಾಚ,
4 ಸಮ್ಮ ಕಮ್ಮ,
5 ಸಮ್ಮ ಜೀವನೋಪಾಯ,
6 ಸಮ್ಮವ್ಯಾಯಮ,
7 ಸಮ್ಮಸ್ಮೃತಿ, ಮತ್ತು
8 ಸಮ್ಮಸಮಾಧಿ.

                      ಸಮ್ಮ ದೃಷ್ಟಿಕೋನ

    ಮತ್ತೆ ಭಿಕ್ಖುಗಳೇ ಯಾವುದು ಸಮ್ಮದೃಷ್ಟಿಕೋನ ?
 ಭಿಕ್ಖುಗಳೇ ದುಃಖಗಳ ಜ್ಞಾನ, ದುಃಖಗಳ ಉದಯದ ಬಗೆಗಿನ ಜ್ಞಾನ, ದುಃಖಗಳ ನಿರೋಧ ಜ್ಞಾನ, ಮತ್ತು ದುಃಖಗಳ ನಿರೋಧಕ್ಕೆ ತಲುಪಿಸುವ ಮಾರ್ಗದ ಜ್ಞಾನ. ಇವನ್ನೇ ಸಮ್ಮ ದೃಷ್ಟಿಕೋನ ಎನ್ನುತ್ತೇವೆ. .

                        ಸಮ್ಮಸಂಕಲ್ಪ

   ಮತ್ತೇ ಯಾವುದು ಭಿಕ್ಖುಗಳೇ ಸಮ್ಮ ಸಂಕಲ್ಪ ?
 ಭಿಕ್ಖುಗಳೇ ತ್ಯಾಗಗಳ ಸಂಕಲ್ಪ,  ದ್ವೇಷರಹಿತತೆಯ ಸಂಕಲ್ಪ, ಮತ್ತು ಹಿಂಸೆರಹಿತತೆಯ ಸಂಕಲ್ಪ. ಇವನ್ನೇ ಸಮ್ಮ ಸಂಕಲ್ಪ ಎನ್ನುತ್ತೇವೆ.
                           

                        ಸಮ್ಮ ವಾಚ


   ಮತ್ತೇ ಯಾವುದು ಭಿಕ್ಖುಗಳೇ ಸಮ್ಮ ವಾಚ ?
 ಭಿಕ್ಖುಗಳೇ ಸುಳ್ಳಿನಿಂದ ವಿರತನಾಗುವಿಕೆ, ಚಾಡಿಯಿಂದ ವಿರತನಾಗುವಿಕೆ, ಕಠೋರ ನಿಂದಾಮಯ ವಾಚಗಳಿಂದ ವಿರತನಾಗುವಿಕೆ ಮತ್ತು ವ್ಯರ್ಥಹರಟೆಗಳಿಂದ ವಿರತನಾಗುವಿಕೆ. ಇವನ್ನೇ ಸಮ್ಮವಾಚ ಎನ್ನುತ್ತೇವೆ.

                          ಸಮ್ಮ ಕಮ್ಮ 

    ಮತ್ತೇ ಯಾವುದು ಭಿಕ್ಖುಗಳೇ ಸಮ್ಮ ಕಮ್ಮ ?
 ಭಿಕ್ಖುಗಳೇ ಪ್ರಾಣಹತ್ಯೆಗಳಿಂದ ವಿರತನಾಗುವಿಕೆ, ಕೊಡದೆ ಇರುವುದನ್ನು ತಗೆದುಕೊಳ್ಳದಿರುವಿಕೆ, ಅಬ್ರಹ್ಮಚಾರ್ಯದಿಂದ (ಗೃಹಸ್ಥರಾಗಿದ್ದರೆ ಅನೈತಿಕ ಕಾಮುಕತೆಯಿಂದ) ವಿರತನಾಗುವಿಕೆ. ಇವನ್ನೇ ಸಮ್ಮಕಮ್ಮ ಎನ್ನುತ್ತೇವೆ.   
               

                  ಸಮ್ಮ ಜೀವನೋಪಾಯ



        ಮತ್ತೆ ಭಿಕ್ಖುಗಳೇ ಯಾವುದು ಸಮ್ಮ ಜೀವನೋಪಾಯ ?
           ಇಲ್ಲಿ ಭಿಕ್ಖುಗಳೇ ಆರ್ಯಶ್ರಾವಕನು ಅಪ್ರಮಾಣಿಕವಾದಂತಹ ಮಿಥ್ಯಜೀವನೋಪಾಯಗಳನ್ನು ತೋರೆಯಬೇಕು, ಸಮ್ಮ ಮಾರ್ಗಗಳಿಂದಲೇ ಜೀವನೋಪಾಯ ಮಾಡಿಕೋಳ್ಳಬೇಕು. ಇದನ್ನೇ ಭಿಕ್ಖುಗಳೇ ಸಮ್ಮಜೀವನೋಪಾಯ ಎನ್ನುವರು.
     ( ಭಿಕ್ಖುಗಳೇ ಉಪಾಸಕನು 5 ವಿಧವಾದ ವೃತ್ತಿಗಳಲ್ಲಿ ತೋಡಗಬಾರದು, ಯಾವುದದು 5 ?
ಅವೇಂದರೇ ಶಸ್ತ್ರಗಳ ವಾಣಿಜ್ಯ, ಜೀವಿಗಳ ವಾಣಿಜ್ಯ, ಮಾಂಸದ ವಾಣಿಜ್ಯ, ಮಧ್ಯಪಾನದ ವಾಣಿಜ್ಯ ಮತ್ತು ವಿಷಗಳ ವಾಣಿಜ್ಯ/ವ್ಯಾಪಾರ )

                       ಸಮ್ಮವ್ಯಾಯಮ


             ಮತ್ತೇ ಭಿಕ್ಖುಗಳೇ ಯಾವುದು ಸಮ್ಮ ವ್ಯಾಯಾಮ ?
1. ಇಲ್ಲಿ ಭಿಕ್ಖುಗಳೇ, ಭಿಕ್ಖುವು ಅನುತ್ಪನ್ನವಾದ ಪಾಪಯುತವಾದ, ಅಕುಶಲವಾದ ಯೋಚನೆಗಳನ್ನು(ಮಾನಸಿಕ ವಿಷಯ/ಧಮ್ಮ) ಉದಯಿಸದಂತೆ ಆತನು ಇಚ್ಚಶಕ್ತಿಯನ್ನು, ಪ್ರಯತ್ನವನ್ನು ಪಡುತ್ತಾನೆ,
2. ಮತ್ತೇ ಇಲ್ಲಿ ಭಿಕ್ಖುವು ಉತ್ಪನ್ನವಾದ ಪಾಪಯುತವಾದ ಹಾಗೂ ಅಕುಶಲಯುತ ಯೋಚನೆಗಳನ್ನು ತೋರೆಯಲು ಇಚ್ಚಿಸುತ್ತಾನೆ ಹಾಗೂ ಅವನ್ನು ತೋರೆಯಲು ಪ್ರಯತ್ನವನ್ನು ಪಡುತ್ತಾನೆ.
3. ಮತ್ತೇ ಇಲ್ಲಿ ಭಿಕ್ಖುವು ಅನುತ್ಪನ್ನವಾದ ಪುಣ್ಯಕಾರಿಯಾದ, ಕುಶಲವಾದ ಯೋಚನೆಗಳನ್ನು ಉದಯಿಸುವಂತೆ ಆತನು ಇಚ್ಚಶಕ್ತಿಯನ್ನು ಹಾಗೂ ಧೃಡವಾದ ಪ್ರಯತ್ನವನ್ನು ಪಡುತ್ತಾನೆ,
4.   ಮತ್ತೇ ಇಲ್ಲಿ ಭಿಕ್ಖುವು ಉತ್ಪನ್ನವಾದ ಪುಣ್ಯಕಾರಿಯಾದ, ಕುಶಲವಾದ ಯೋಚನೆಗಳನ್ನು ಉಳಿಯುವಂತೆ, ವಿಕಾಸವಾಗುವಂತೆ,  ವ್ಯವಸ್ಥಿತವಾಗಿರುವಂತೆ, ಆತನು ಇಚ್ಚಶಕ್ತಿಯನ್ನು ಹಾಗೂ ಧೃಡವಾದ ಪ್ರಯತ್ನವನ್ನು ಪಡುತ್ತಾನೆ,
               ಇದನ್ನೇ ಭಿಕ್ಖುಗಳೇ ಸಮ್ಮವ್ಯಾಯಾಮ ಎನ್ನುವರು.


                         ಸಮ್ಮಸ್ಮೃತಿ

 ಮತ್ತೇ ಯಾವುದು ಭಿಕ್ಖುಗಳೇ ಸಮ್ಮ ಸ್ಮೃತಿಯು ?
  ಇಲ್ಲಿ ಭಿಕ್ಖುಗಳೇ, ಭಿಕ್ಖುವು ಕಾಯದಲ್ಲಿ ಕಾಯಾನುಪಸ್ಸಿಯಾಗಿ ವಿಹರಿಸುತ್ತಾನೆ ಹೇಗೆಂದರೆ, ಎಚ್ಚರಿಕೆಯಿಂದ, ಉತ್ಸಾಹದಿಂದ, ಜಾಗ್ರತಯಿಂದ, ಅರಿವಿನಿಂದ ಕೂಡಿದ್ದು ಲೋಕದ ಬಗೆಗಿನ ಲೋಭ ಹಾಗು ದೋಮನಸ್ಸುನ್ನು ದೂರಿಕರಿಸುತ್ತಾನೆ.

ಇಲ್ಲಿ ಭಿಕ್ಖುಗಳೇ, ಭಿಕ್ಖುವು ಚಿತ್ತಗಳಲ್ಲಿ ಚಿತ್ತಾನುಪಸ್ಸಿಯಾಗಿ ಸಮಚಿತ್ತತೆಯಿಂದ ವಿಹರಿಸುತ್ತಾನೆ ಹೇಗೆಂದರೆ, ಎಚ್ಚರಿಕೆಯಿಂದ, ಉತ್ಸಾಹದಿಂದ, ಜಾಗ್ರತಯಿಂದ, ಅರಿವಿನಿಂದ ಕೂಡಿದ್ದು ಲೋಕದ ಬಗೆಗಿನ ಲೋಭ ಹಾಗು ದೋಮನಸ್ಸುನ್ನು ದೂರಿಕರಿಸುತ್ತಾನೆ.
ಇಲ್ಲಿ ಭಿಕ್ಖುಗಳೇ, ಭಿಕ್ಖುವು ವೇದನೆಗಳಲ್ಲಿ ವೇದಾನುನುಪಸ್ಸಿಯಾಗಿ ಸಮಚಿತ್ತತೆಯಿಂದ ವಿಹರಿಸುತ್ತಾನೆ ಹೇಗೆಂದರೆ, ಎಚ್ಚರಿಕೆಯಿಂದ, ಉತ್ಸಾಹದಿಂದ, ಜಾಗ್ರತಯಿಂದ, ಅರಿವಿನಿಂದ ಕೂಡಿದ್ದು ಲೋಕದ ಬಗೆಗಿನ ಲೋಭ ಹಾಗು ದೋಮನಸ್ಸುನ್ನು ದೂರಿಕರಿಸುತ್ತಾನೆ.
ಇಲ್ಲಿ ಭಿಕ್ಖುಗಳೇ, ಭಿಕ್ಖುವು ಧಮ್ಮಗಳಲ್ಲಿ(ಮಾನಸಿಕ ವಿಷಯಗಳಲ್ಲಿ) ಧಮ್ಮಾನುಪಸ್ಸಿಯಾಗಿ ಸಮಚಿತ್ತತೆಯಿಂದವಿಹರಿಸುತ್ತಾನೆ ಹೇಗೆಂದರೆ, ಎಚ್ಚರಿಕೆಯಿಂದ, ಉತ್ಸಾಹದಿಂದ, ಜಾಗ್ರತಯಿಂದ, ಅರಿವಿನಿಂದ ಕೂಡಿದ್ದು ಲೋಕದ ಬಗೆಗಿನ ಲೋಭ ಹಾಗು 
ದೋಮನಸ್ಸುನ್ನು ದೂರಿಕರಿಸುತ್ತಾನೆ.   
ಇದನ್ನೇ ಭಿಕ್ಖುಗಳೇ ಸಮ್ಮಸತಿ ಎನ್ನುವರು.
             

                      ಸಮ್ಮಸಮಾದಿ

       ಮತ್ತೇ ಯಾವುದು ಭಿಕ್ಖುಗಳೇ ಸಮ್ಮ ಸಮಾಧಿಯು?
                              ಪ್ರಥಮ ಸಮಾಧಿ
ಇಲ್ಲಿ ಭಿಕ್ಖುಗಳೇ ಭಿಕ್ಖುವು ಎಲ್ಲಾ ಬಗೆಯ ಕಾಮಗಳಿಂದ(ಆಸೆ) ಹಾಗೂ ಅಕುಶಲ ಮಾನಸಿಕ ವಿಷಯಗಳಿಂದ ದೂರವಾಗಿ ಸುವಿತರ್ಕ ಹಾಗೂ ಸುವಿಚಾರಗಳನ್ನು ಹೊಂದಿರುವ ಮತ್ತು  ಆದರಿಂದ ಉದಯಿಸುವ ಆನಂದ ಹಾಗೂ ಸುಖಯುತದ ಪ್ರಥಮ ಸಮಾಧಿ ಪ್ರವೇಶಿಸಿ ಅದರಲ್ಲಿ ನೆಲೆಸುತ್ತಾನೆ.
                   
                        ದ್ವಿತೀಯ ಸಮಾಧಿ
   ನಂತರ ಇಲ್ಲಿ ಭಿಕ್ಖುಗಳೇ ಭಿಕ್ಖುವು  ಸುವಿತರ್ಕ ಹಾಗೂ ಸುವಿಚಾರಗಳನ್ನು ದೂರಿಕರಿಸಿ ಆದರಿಂದ ಉದಯಿಸುವ ಆನಂದ ಹಾಗೂ ಸುಖಯುತದ ಅಂತರಿಕದ ಶ್ರದ್ಧಾಯುತ ಏಕೋಭಾವದ ದ್ವಿತೀಯ ಸಮಾಧಿ ಪ್ರವೇಶಿಸಿ ಅದರಲ್ಲಿ ನೆಲೆಸುತ್ತಾನೆ.
                           
                               ತ್ರಿತೀಯ ಸಮಾಧಿ
ನಂತರ ಇಲ್ಲಿ ಭಿಕ್ಖುಗಳೇ ಭಿಕ್ಖುವು ಆನಂದದಲ್ಲಿ ವಿರಾಗವನ್ನು ಹೊಂದಿ, ಆನಂದವನ್ನು ಮೀರಿಹೋಗಿ ದಾಟಿ, ಸದಾ ಉಪೇಕ್ಖಯುತ(ಸಮಚಿತ್ತತೆಯುತ), ಎಚ್ಚರಿಕೆಯಿಂದ, ಅರಿವಿನಿಂದ ಕೂಡಿದ ಆ ಸುಖಯುತದ ತ್ರಿತೀಯ ಸಮಾಧಿ ಪ್ರವೇಶೀಸಿ ಅದರಲ್ಲಿ ನೆಲೆಸುತ್ತಾನೆ. ಸುಖದಿಂದ ಇಡಿ ಕಾಯವು ದಿವ್ಯಾನುಭವವನ್ನು ಹೊಂದಿ ಅಂತಹ ವಿಶೇಷ ಧ್ಯಾನವನ್ನು ಆರ್ಯರು ಜಾಗರೂಕತೆ ಹಾಗೂ ಸಮಚಿತ್ತತೆಯುತ ಸುಖದ ಸ್ಥಿತಿಯಲ್ಲಿ ನೆಲೆಗೊಂಡವ ಎನ್ನುವರು.

                                ಚತುರ್ಥ ಸಮಾಧಿ
ನಂತರ ಇಲ್ಲಿ ಭಿಕ್ಷುಗಳೇ ಭಿಕ್ಖುವು ಸುಖದ ಅನುಭವಗಳನ್ನು ಮೀರಿ, ದುಃಖದ ಅನುಭವಗಳನ್ನು ಮೀರಿ ಹಿಂದಿನ ಸೋಮನಸ್ಸು ಹಾಗೂ ದೋಮನಸ್ಸುಗಳನ್ನು ದಾಟಿ ಅದುಃಖಅಸುಖಯುತ ಸಮಚಿತ್ತತೆಯ ಸ್ಮೃತಿಯುತ ಪರಿಶುದ್ಧವಾದ ಚತುರ್ಥ ಝಾನದಲ್ಲಿ(ಧ್ಯಾನ) ಪ್ರವೇಶಿಸಿ ನೆಲೆಸುತ್ತಾನೆ.
ಇದನ್ನೇ ಭಿಕ್ಖುಗಳೇ ಸಮ್ಮಸಮಾಧಿ ಎನ್ನುವರು.
   
  ಭಗವಾನರ ಈ ಸುತ್ತದಿಂದ ಭಿಕ್ಖುಗಳು ಆನಂದಿತರಾದರು.