tag:blogger.com,1999:blog-87426526913558147942024-03-12T19:14:35.926-07:00Buddha suttasAneesh Bodhhttp://www.blogger.com/profile/02041276688261983503noreply@blogger.comBlogger97125tag:blogger.com,1999:blog-8742652691355814794.post-35367156991575115612023-01-08T08:51:00.003-08:002023-01-08T08:51:55.663-08:00 ತಿರೋಕುಟ್ಟ ಸುತ್ತ tirokutta sutta in kannada <p> <b><span style="font-size: x-large;">ತಿರೋಕುಟ್ಟ ಸುತ್ತ</span></b></p><p> <b>ಗೋಡೆಯಾಚೆಗಿನ ಪ್ರೇತಗಳ ಘಟನೆ</b></p><p></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEgg6B8JTWkCkOeFqTd6gD1TxfNabqgqsbf-boIAlUi4dWzxDOcPUP6jd9k0hKFc1oAIjX1VhLRRtPxxMkl6RYdqsqodtoWn4qXBQ69l7YAdn7aIRKfy_8p6SPAGx1I0gy3c6ufqrG5oXcQcLl8Px_-ViC14CEHEAVaykzTljZCT4W-itxMwAee6iFLi/s724/302342069_136274219110117_3587243985904299168_n.jpg" imageanchor="1" style="margin-left: 1em; margin-right: 1em;"><img border="0" data-original-height="724" data-original-width="720" height="320" src="https://blogger.googleusercontent.com/img/b/R29vZ2xl/AVvXsEgg6B8JTWkCkOeFqTd6gD1TxfNabqgqsbf-boIAlUi4dWzxDOcPUP6jd9k0hKFc1oAIjX1VhLRRtPxxMkl6RYdqsqodtoWn4qXBQ69l7YAdn7aIRKfy_8p6SPAGx1I0gy3c6ufqrG5oXcQcLl8Px_-ViC14CEHEAVaykzTljZCT4W-itxMwAee6iFLi/s320/302342069_136274219110117_3587243985904299168_n.jpg" width="318" /></a></div><br /><b><br /></b><p></p><p><span style="white-space: pre;"> </span>ಬಿಂಬಸಾರ ರಾಜನು ಮಲಗಿರುವಾಗ ಅತ್ಯಂತ ಭೀಕರವಾದ ಶಬ್ದಗಳನ್ನು ಕೇಳಿದನು. ಅದರಿಂದ ಭಯಭೀತನಾಗಿ ಭಗವಾನರ ಬಳಿಗೆ ಬಂದು ವಿಷಯವನ್ನು ತಿಳಿಸಿದನು.: ಭಗವಾನ್ ನೀವು ಏನಾದರೂ ಅಂತಹ ಶಬ್ದಗಳನ್ನು ಕೇಳಿದಿರಾ , ಅದರಿಂದಾಗಿ ನನಗೆ ಏನಾದರೂ ಸಂಭವಿಸುವುದೇ ಎಂದು ನಾನು ಭಯಭೀತನಾಗಿರುವೆನು..</p><p><span style="white-space: pre;"> </span>ಆಗ ಭಗವಾನರು ಹೀಗೆ ಉತ್ತರಿಸಿದರು: ಭಯ ಬೇಡ ಮಹಾರಾಜ, ನಿನಗೆ ಯಾವ ಹಾನಿಯೂ ಜರುಗದು, ಬದಲಾಗಿ ಉನ್ನತಿಯು ನಿನ್ನ ಹಾದಿಯಲಿ ಬರುವುದು, ಈ ಶಬ್ಧಗಳು ಪ್ರೇತಗಳದ್ದಾಗಿದೆ ಇವರು ನಿನ್ನ ಪೂರ್ವಜನ್ಮದ ಬಂಧುಗಳಾಗಿದ್ದಾರೆ, ಇವರು ಹಿಂದಿನ ಬುದ್ಧರ ಕಾಲದವರು, ತಮ್ಮ ಈ ಪ್ರೇತ ಜನ್ಮದ ವಿಮೋಕ್ಷಕ್ಕಾಗಿ ಆಗಿನಿಂದ ಕಾಯುತ್ತಿದ್ದಾರೆ. ಅವರ ಬಯಕೆ ಏನೆಂದರೇ ಈತನು ಬುದ್ಧರಿಗೆ ದಾನವನ್ನು ಅಪರ್ಿಸಿ ಅದರ ಪುಣ್ಯಫಲವನ್ನು ನಮಗೆ ನೀಡುವನು ಅಲ್ಲದೆ ನೆನ್ನೆ ನೀನು ದಾನವನ್ನು ನೀಡಿಯೂ ಪುಣ್ಯವನ್ನು ಹಂಚಲಿಲ್ಲ. ಹೀಗಾಗಿ ಅವರು ಹತಾಶರಾಗಿ ಹೀಗೆ ಪ್ರಲಾಪದ ಕೂಗುಗಳನ್ನು ಮಾಡಿದ್ದಾರೆ. </p><p><span style="white-space: pre;"> </span>ಆಗ ರಾಜನು ಹೀಗೆ ಕೇಳಿದನು ಹಾಗಾದರೇ ಭಗವಾನ್ ಅವರು ದಾನದ ಫಲವನ್ನು ಸ್ವೀಕರಿಸುವರೇ?</p><p><span style="white-space: pre;"> </span>ಹೌದು</p><p><span style="white-space: pre;"> </span>ಭಗವಾನ್, ಹಾಗಾದರೇ ದಯೆಯಿಟ್ಟು ನಾಳೆ ನನ್ನ ಅರೆಮನೆಯಲ್ಲಿ ದಾನವನ್ನು ಸ್ವೀಕರಿಸಿ ಧನ್ಯನನ್ನಾಗಿಸಿ, ಅವರಿಗೆ ದಾನ ಫಲವನ್ನು ಹಂಚುವೆನು.</p><p><span style="white-space: pre;"> </span>ಆಗ ಮಹಾದಾನಿಯಾದ ಅರಸನು ಅತ್ಯಂತ ಸ್ವಾದಿಷ್ಟಮಯವಾದ ಆಹಾರಗಳನ್ನು ಸಿದ್ದಪಡಿಸಿದನು. ಇವನೆಲ್ಲಾ ಗಮನಿಸುತ್ತಿದ್ದಂತಹ ಪ್ರೇತಗಳು ಆನಂದಗೊಂಡವು. ಹಾಗೂ ಗೋಡೆಯಾಚೆ ನಿಂತವು. ಭಗವಾನರ ಸಂಕಲ್ಪದಿಂದಾಗಿ ಬಿಂಬಸಾರನಿಗೂ ಅವರೆಲ್ಲ ಕಾಣಿಸತೊಡಗಿದರು. </p><p><span style="white-space: pre;"> </span>ಯಾವಾಗ ರಾಜನು ಕೈತೊಳೆಯಲು ನೀರು ನೀಡುತ್ತಿದ್ದಂತೆ ಹೀಗೆ ಸಂಕಲ್ಪಿಸಿದನು ಇವೆಲ್ಲಾ ನನ್ನ ಜ್ಞಾತಿ(ಬಂಧು)ಗಳಿಗೆ ಸೇರಲಿ ತಕ್ಷಣ ಅವರು ಕಮಲಗಳುಳ್ಳ ಸರೋವರಕ್ಕೆ ಬಂದಿಳಿದರು, ಅವರೆಲ್ಲ ಅಲ್ಲಿ ಸ್ನಾನ ಮಾಡಿ, ತೃಪ್ತರಾಗಿ ನೀರನ್ನು ಸೇವಿಸಿದವು, ಅದಕ್ಕೆ ಮುಂಚೆ ಅವಕ್ಕೆ ನೀರು ಸೇವಿಸಲು ಸಾಧ್ಯವಾಗುತ್ತಿರಲಿಲ್ಲ, ಅವು ನೀರು ಸೇವಿಸುತ್ತಿದಂತೆ ಅವುಗಳ ಬಾಯಾರಿಕೆ, ದಣಿವು, ಖಿನ್ನತೆ ದೂರವಾಗಿ ಹೊಂಬಣ್ಣದವರಾದವು, ರಾಜನು ಸ್ವಾದಿಷ್ಟಮಯ ಬಗೆಬಗೆಯ ಆಹಾರಗಳನ್ನು ಬಡಿಸುತ್ತಿದ್ದಂತೆಯೇ, ಈ ಹಿಂದೆ ತಿನ್ನಲಾಗದಂತಹ ಸ್ಥಿತಿಯಲ್ಲಿದ್ದ ಅವುಗಳು ದೇವಲೋಕದಂತಹ ಆಹಾರವನ್ನು ಆನಂದದಿಂದ ಸೇವಿಸತೊಡಗಿದವು. ಹಾಗೆಯೆ ರಾಜನು ಭಿಕ್ಖುಗಳಿಗೆ ವಸ್ತ್ರದಾನಗಳನ್ನು ನೀಡುತ್ತಿದ್ದಂತೆಯೇ ಅವುಗಳು ದೇವ ವಸ್ತ್ರಗಳನ್ನು ಪಡೆದವು. ವಿಹಾರ ದಾನ ನೀಡುತ್ತಿದ್ದಂತೆಯೇ ದೇವ ಮಹಲುಗಳನ್ನು ಪಡೆದವು, ಹೀಗೆ ಬಗೆಬಗೆಯ ಸೌಲಭ್ಯಗಳನ್ನು ಅವು ಪಡೆದವು. ಆಗ ಭಗವಾನರು ಸಹಾ ಅವರು ಪಡೆಯುತ್ತಿದ್ದಂತಹ ಆನಂದವು ರಾಜನಿಗೂ ಲಭಿಸಲಿ ಎಂದು ಸಂಕಲ್ಪಿಸಿದರು. ಇದರಿಂದಾಗಿ ರಾಜನು ಸಹಾ ಆನಂದಭರಿತನಾದನು. ಆಗ ಭಗವಾನರು ರಾಜ ಹಾಗೂ ರಾಜ ಪರಿವಾರಕ್ಕೆ ತಿರೋಕುಟ್ಟ ಸುತ್ತವನ್ನು ಬೋಧಿಸಿದರು.</p><p><b>ತಿರೋಕುಟ್ಟ ಸುತ್ತ</b></p><p>1. ಅವರು ಗೋಡೆಯಾಚೆ, ತೆರೆದ ಸ್ಥಳಗಳಲ್ಲಿ ಮತ್ತು ರಸ್ತೆಗಳು ಸೇರುವ ಸ್ಥಳಗಳಲ್ಲಿ ದ್ವಾರಗಳ ಬಳಿ, ತಮ್ಮ ಹಿಂದಿನ ಮನೆಗಳ ಬಳಿ ಬಂದು ನಿಲ್ಲುವವು.</p><p>2.<span style="white-space: pre;"> </span>ಅದರೆ ಹೇರಳವಾದ ಸ್ವಾದಿಷ್ಟ ಬೋಜ್ಯಗಳು ಹಾಗೂ ಪಾನಿಯಗಳು ಸಿದ್ಧವಾಗಿದ್ದರೂ ಸಹಾ ಆ ಜೀವಿಗಳ ಪಾಪಯುತ ಅಕುಶಲ ಕಮ್ಮದಿಂದಾಗಿ ಯಾರೂ ಅವರನ್ನು ನೆನೆಯಲಾರರು.</p><p>3.<span style="white-space: pre;"> </span>ಹೀಗಾಗಿ ಯಾರು ಅನುಕಂಪಶೀಲರೋ ಅವರು ಯೋಗ್ಯ ಕಾಲದಲ್ಲಿ, ಪರಿಶುದ್ಧವಾದ, ಉತ್ಕೃಷ್ಟವಾದ, ಯೋಗ್ಯವಾದ ಭೋಜ್ಯಗಳನ್ನು ಹಾಗೂ ಪಾನಿಯಗಳನ್ನು ಪ್ರೇತಗಳಿಗೆ ನೀಡುವರು. ಹಾಗೂ ಹೀಗೆ ಸಂಕಲ್ಪಿಸುವರು : </p><p><span style="white-space: pre;"> </span>ಇವು ನಮ್ಮ ಜ್ಞಾತಿಗಳಿಗೆ(ಬಂಧುಗಳಿಗೆ) ಸೇರಲಿ, ನಮ್ಮ ಜ್ಞಾತಿಗಳೂ ಧನ್ಯರಾಗಲಿ ಸುಖಿಯಾಗಿರಲಿ.</p><p>4.<span style="white-space: pre;"> </span>ಆಗ ಯಾವೆಲ್ಲಾ ಪ್ರೇತಗಳು ಗುಂಪು ಸೇರಿ ಆಹಾರಗಳಿಂದ ಹಾಗೂ ಪಾನಿಯಗಳಿಂದ ಧನ್ಯರಾಗುವವೋ ಅವು ಗೌರವಪೂರ್ವಕವಾಗಿ ಹೀಗೆ ಕೃತಜ್ಞತೆ ಅಪರ್ಿಸುವವು. ಹಾಗೂ ಹೀಗೆ ಹೇಳುವವು </p><p>5.<span style="white-space: pre;"> </span>ನಮ್ಮ ಜ್ಞಾತಿಯು ಚಿರವಾಗಿ ಜೀವಿಸಲಿ, ಆತನಿಂದಾಗಿ ಈ ಲಾಭವನ್ನು ಪಡೆದು, ಗೌರವಿಸಲ್ಟಟ್ಟಿದ್ದೇವೆ, ಋಣಿಯಾಗಿದ್ದೇವೆ, ನಮಗೆ ನೀಡಿದಂತಹ ಆತನೂ ಸಹಾ ಪ್ರತಿಫಲವನ್ನು ಪಡೆಯುವಂತಾಗಲಿ.</p><p>6.<span style="white-space: pre;"> </span>ಅಲ್ಲಿ (ಪ್ರೇತಲೋಕದಲ್ಲಿ) ಯಾವ ವ್ಯವಸಾಯವೂ ಇಲ್ಲ, ಯಾವ ಪಶುಪಾಲನೆಯು ಇಲ್ಲ, ಹಾಗೆಯೇ ಯಾವ ವ್ಯಾಪಾರವೂ ಇಲ್ಲ, ಹಾಗೇಯೆ ಸ್ವರ್ಣದಿಂದಾಗುವಂತಹ ಯಾವ ವಿನಿಮಯವೂ ಇಲ್ಲ.</p><p>7.<span style="white-space: pre;"> </span>ಹೇಗೆ ಮಳೆಯ ನೀರು ಮೇಲಿನಿಂದ ಕೆಳಕ್ಕೆ ಧುಮಿಕ್ಕಿ, ಹರಿಯುವುದೋ ಹಾಗೇಯೇ ಪ್ರೇತಗಳು ದಾನದಿಂದ ಅವಲಂಬಿತವಾಗಿವೆ. ಹೀಗಾಗಿ ಇಲ್ಲಿ ಏನೆಲ್ಲಾ ದಾನವಾಗಿ ನೀಡುವೆವೋ ಅದು ಅಲ್ಲಿ ಪ್ರೇತಗಳಿಗೆ ಲಾಭವಾಗುವುದು.</p><p>8. ಹೇಗೆ ನದಿಗಳು ತುಂಬಿದಾಗ ಅವು ಹಾಗೇಯೆ ಸಾಗಿ ಸಾಗರವನ್ನು ಸೇರುವಂತೆ, ಹಾಗೆಯೇ ಯಾವುದೆಲ್ಲವೂ ಇಲ್ಲಿ ನೀಡಿದ್ದೇವೆಯೋ ಅವು ಪ್ರೇತಗಳಿಗೆ ದೊರೆತು ಲಾಭವನ್ನುಂಟು ಮಾಡುತ್ತವೆ.</p><p>9.<span style="white-space: pre;"> </span>ಈತನು ನನಗೆ ನೀಡಿದ್ದಾನೆ, ನನಗಾಗಿ ಕೆಲಸಗಳನ್ನು ಮಾಡಿದ್ದಾನೆ, ನನಗೆ ಈತನು ಬಂಧುವು, ಮಿತ್ರನು ಹಾಗೂ ಸಖನು ಆಗಿದ್ದನು, ಈ ರೀತಿಯಲ್ಲಿ ಅವರು ಈ ಹಿಂದೆ ಮಾಡಿದಂತಹ ಸಹಾಯಗಳನ್ನು ನೆನೆದು ಪ್ರೇತಗಳಿಗೆ ದಾನಗಳನ್ನು ಸಮಪರ್ಿಸಬೇಕು.</p><p>10.<span style="white-space: pre;"> </span>ಯಾವುದೇ ಆಶ್ರುಗಳಿಂದಾಗಲಿ, ಅಥವಾ ಶೋಕಗಳಿಂದಾಗಲಿ ಅಥವಾ ಯಾವುದೇ ಪ್ರಲಾಪಗಳಿಂದಾಗಲಿ ಎಲ್ಲಿಯವರೆಗೆ ಬಂಧುಗಳು ಈ ರೀತಿಗಳಲ್ಲಿ ದುಃಖಿಸುವರೋ ಇದರಿಂದಾಗಿ ಪ್ರೇತಗಳಿಗೆ ಯಾವುದೇ ಪ್ರಯೋಜನವಾಗದು.</p><p>11.<span style="white-space: pre;"> </span>ಅದರೆ ಅವರಿಗೆ ತಲುಪುವಂತೆ ಸಂಘಕ್ಕೆ ಸುಪ್ರತಿಷ್ಟಿತವಾಗಿ ನೀಡಿದಂತಹ ದಾನವು ಮಾತ್ರ ಅವರಿಗೆ ದೀರ್ಘಕಾಲ ಹಿತವನ್ನು ಲಾಭವನ್ನು ನೀಡುತ್ತದೆ. ಕಾಲವಿಳಂಬವಿಲ್ಲದೆ ತಕ್ಷಣವೇ ಅವರಿಗೆ ಫಲವನ್ನು ನೀಡುವುದು.</p><p>12.<span style="white-space: pre;"> </span>ಇದು ಬಂಧುಗಳಿಗೆ ನಾವು ಮಾಡುವಂತಹ ನಿಜ ಕರ್ತವ್ಯವೂ ಸಹಾ, ಹಾಗೆಯೇ ಅಗಲಿದವರಿಗೆ ನಾವು ನೀಡುವಂತಹ ಶ್ರೇಷ್ಟ ಗೌರವವೂ ಸಹಾ, ಭೋಜ್ಯ ಪಾನಿಯಗಳಿಂದ ಭಿಕ್ಖುಗಳಿಗೆ ದಾನ ನೀಡುವುದರಿಂದ ಅವರಿಗೆ ಶಕ್ತಿಯು ದೊರೆಯುವುದು, ಮತ್ತು ಇದು ನಿಮ್ಮಿಂದ ಉತ್ಪನ್ನವಾದ ಸಣ್ಣ ಪುಣ್ಯವೇನಲ್ಲ.</p><p><br /></p><p>- ಂ0ಂ </p>Aneesh Bodhhttp://www.blogger.com/profile/02041276688261983503noreply@blogger.com0tag:blogger.com,1999:blog-8742652691355814794.post-17787309795526014252022-08-28T10:34:00.003-07:002022-08-28T10:34:43.692-07:00 ಮಿತ್ತ ಸುತ್ತ mitta sutta in kannada<h1 style="text-align: left;"> <b> ಮಿತ್ತ ಸುತ್ತ<div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEiT_7PDnwMvQJGGg0q6Zfr8GNw_bQHEnS0mKBcr5MdMB19ZdOTNoEs5x05Z6JmI-nf9fVMBeXo9rvzAvjXcwyQbCmcHmBH-G20LYrVTrtShK_NpthLhC1RpUrnJIuqkgzncqtO9WoRdLgtWQOQJxGNEAKslA6v9KeZkhdh-UcDvAEjvvqHH4RxAYsfh/s553/images_1604481215837.jpeg" imageanchor="1" style="margin-left: 1em; margin-right: 1em;"><img border="0" data-original-height="553" data-original-width="465" height="320" src="https://blogger.googleusercontent.com/img/b/R29vZ2xl/AVvXsEiT_7PDnwMvQJGGg0q6Zfr8GNw_bQHEnS0mKBcr5MdMB19ZdOTNoEs5x05Z6JmI-nf9fVMBeXo9rvzAvjXcwyQbCmcHmBH-G20LYrVTrtShK_NpthLhC1RpUrnJIuqkgzncqtO9WoRdLgtWQOQJxGNEAKslA6v9KeZkhdh-UcDvAEjvvqHH4RxAYsfh/s320/images_1604481215837.jpeg" width="269" /></a></div><br /></b></h1><p><br /></p><p> ಭಿಕ್ಖುಗಳೇ, ಮಿತ್ರನು ಈ 7 ಗುಣಗಳಿಂದ ಕೂಡಿರುವಾಗ ಆತನು ಸಹವತರ್ಿಯಾಗಲು ಅರ್ಹನಾಗುತ್ತಾನೆ.</p><p>ಯಾವುವವು ಏಳು ?</p><p><br /></p><p>1. ಆತನು ಯಾವುದನ್ನು ಪರರು ನೀಡಲು ಕಷ್ಟಕರವಾಗಿರುವುದೋ ಅದನ್ನೇ ನೀಡುತ್ತಾನೆ,</p><p>2. ಆತನು ಯಾವುದನ್ನು ಪರರು ಮಾಡಲು ಹಿಂಜರಿಯುತ್ತಾರೋ ಅದನ್ನೇ ಮಾಡುತ್ತಾನೆ,</p><p>3. ಆತನು ಸಹಿಸಲು ಅತಿದುಸ್ಸಹವಾಗಿರುವುದನ್ನು ಸಹಿಸುತ್ತಾನೆ,</p><p>4. ಆತನು ತನ್ನ ರಹಸ್ಯಗಳನ್ನೆಲ್ಲಾ ಮಿತ್ರನ ಬಳಿ ತೆರೆದಿಡುತ್ತಾನೆ,</p><p>5. ಆದರೆ ಮಿತ್ರನ ರಹಸ್ಯಗಳನ್ನು ಅಡಗಿಸಿಡುತ್ತಾನೆ,</p><p>6. ಯಾವಾಗ ವಿಪತ್ತುಗಳು ಆಕ್ರಮಣ ಮಾಡುವವು ಆಗ ಆತನು ಮಿತ್ರನಿಗೆ ತೊರೆಯುವುದಿಲ್ಲ,</p><p>7. ಯಾವಾಗ ಮಿತ್ರನು ನಿರ್ಗತಿಕ ಅಥವಾ ನಿರ್ಧನನಾಗುವನೋ ಆಗ ಆತನನ್ನು ಕೀಳಾಗಿ ಕಾಣುವುದಿಲ್ಲ. </p><p><br /></p><p> ಆತನು ಸುಂದರವಾಗಿರುವುದನ್ನು ನೀಡಲು ಕಷ್ಟಕರವಾಗಿದ್ದರೂ ನೀಡುತ್ತಾನೆ.</p><p>ಮಾಡಲು ಅತಿಕಠಿಣವಾಗಿದ್ದರೂ ಮಾಡುತ್ತಾನೆ,</p><p>ಆಲಿಸಲು ಅತ್ಯಂತ ಹೇಯವಾದ ಕಠೋರವಾದ ಮಾತುಗಳನ್ನು ಸಹಿಸುತ್ತಾನೆ.</p><p>ಆತನ ರಹಸ್ಯಗಳನ್ನು ನಿನಗೆ ನುಡಿಯುತ್ತಾನೆ,</p><p>ನಿನ್ನ ರಹಸ್ಯಗಳನ್ನು ಬಚ್ಚಿಡುತ್ತಾನೆ,</p><p>ಯಾವಾಗ ದುರಂತಗಳು, ಆಪಾಯಗಳು ಬೀಳುತ್ತವೆಯೋ ಆತನು ನಿನ್ನನ್ನು ವಜರ್ಿಸಲಾರ.</p><p>ಯಾವಾಗ ನೀನು ಅವನತಿಗೆ ಈಡಾಗುವೆಯೋ ಆಗ ನಿನಗೆ ಕೀಳಾಗಿ ನೋಡಲಾರನು.</p><p>ಯಾರಲ್ಲಿ ಈ ಸಪ್ತ ಸದ್ಗುಣಗಳನ್ನು ನೋಡುತ್ತೆವೆಯೊ ಮಿತ್ರತ್ವ ಬಯಸುವವನು ತಕ್ಷಣ ಆತನ ಸ್ನೇಹವನ್ನು ಬಲಿಷ್ಟಗೊಳಿಸಬೇಕು.</p><p><br /></p><p><br /></p><p><br /></p><p> </p>Aneesh Bodhhttp://www.blogger.com/profile/02041276688261983503noreply@blogger.com0tag:blogger.com,1999:blog-8742652691355814794.post-43324339550400612512022-08-27T09:52:00.002-07:002022-08-27T09:52:30.159-07:00 ಕಿಂ ದಾನ ಸುತ್ತ kimdana sutta in kannada<p><b><span style="font-size: x-large;"> ಕಿಂ ದಾನ ಸುತ್ತ </span></b></p><div class="separator" style="clear: both; text-align: center;"><b><span style="font-size: x-large;"><a href="https://blogger.googleusercontent.com/img/b/R29vZ2xl/AVvXsEhk-wDkXOkX67q72YMEs2F6cQV1-vK51Y_x_tdFkjSOQZROa2DSyZMGMof6YE1ucR4GYm-RWqwZib_KSMBEWCz4aI-25elXtglaNfRb3T_LDBpHnJgzVTwzM9ot7mxkgJNtpCu_vrA1b4cgQ-fsQOkJdTPNXVejVgNVAbv5HT-zInBuKGdYP1ua_azT/s960/FB_IMG_1623842498817.jpg" imageanchor="1" style="margin-left: 1em; margin-right: 1em;"><img border="0" data-original-height="960" data-original-width="686" height="320" src="https://blogger.googleusercontent.com/img/b/R29vZ2xl/AVvXsEhk-wDkXOkX67q72YMEs2F6cQV1-vK51Y_x_tdFkjSOQZROa2DSyZMGMof6YE1ucR4GYm-RWqwZib_KSMBEWCz4aI-25elXtglaNfRb3T_LDBpHnJgzVTwzM9ot7mxkgJNtpCu_vrA1b4cgQ-fsQOkJdTPNXVejVgNVAbv5HT-zInBuKGdYP1ua_azT/s320/FB_IMG_1623842498817.jpg" width="229" /></a></span></b></div><b><span style="font-size: x-large;"><br /><div class="separator" style="clear: both; text-align: center;"><br /></div><br /></span></b><p></p><p>ದೇವನೊಬ್ಬನ ಪ್ರಶ್ನೆ :</p><p><br /></p><p>1. ಏನನ್ನು ದಾನ ನೀಡಿದರೆ ಶಕ್ತಿಯನ್ನು ನೀಡುತ್ತಾನೆ ?</p><p>2. ಏನನ್ನು ದಾನ ನೀಡಿದರೆ ಸೌಂದರ್ಯವನ್ನು ನೀಡುತ್ತಾನೆ ?</p><p>3. ಏನನ್ನು ದಾನ ನೀಡಿದರೆ ಆರಾಮ ನೀಡುತ್ತಾನೆ ?</p><p>4. ಏನನ್ನು ದಾನ ನೀಡಿದರೆ ದೃಷಿ ನೀಡುತ್ತಾನೆ ?</p><p>5. ಮತ್ತು ಏನನ್ನು ದಾನ ನೀಡಿದರೆ ಎಲ್ಲವನ್ನು ದಾನ ನೀಡಿದಂತೆ ಆಗುವುದು ?</p><p><br /></p><p> ಬುದ್ಧ ಭಗವಾನರ ಉತ್ತರ :</p><p><br /></p><p> 1. ಆಹಾರ ನೀಡುವ ದಾನಿಯು ಶಕ್ತಿಯನ್ನು ನೀಡುತ್ತಾನೆ.</p><p>2. ವಸ್ತ್ರಗಳನ್ನು ನೀಡುವ ದಾನಿಯು ಸೌಂದರ್ಯವನ್ನು ನೀಡುತ್ತಾನೆ .</p><p>3. ವಾಹನವನ್ನು ನೀಡುವ ದಾನಿಯು ಆರಾಮವನ್ನು ನೀಡುತ್ತಾನೆ.</p><p>4. ದೀಪಗಳನ್ನು ನೀಡುವ ದಾನಿಯು ದೃಷ್ಟಿಯನ್ನು ನೀಡುತ್ತಾನೆ.</p><p>5. ಮತ್ತು ವಸತಿಯನ್ನು ನೀಡುವ ದಾನಿಯು ಎಲ್ಲವನ್ನು ದಾನ ನೀಡಿದಂತೆ ಆಗುವುದು.</p><p>ಅದರೆ ಧಮ್ಮವನ್ನು (ಬುದ್ಧರ ಬೋಧನೆ) ನೀಡುವ ದಾನಿಯು ಅಮರತ್ವವನ್ನೇ ನೀಡುತ್ತಾನೆ.</p><p> </p>Aneesh Bodhhttp://www.blogger.com/profile/02041276688261983503noreply@blogger.com0tag:blogger.com,1999:blog-8742652691355814794.post-75614542389651156372021-06-12T09:24:00.001-07:002021-06-12T09:24:30.910-07:00 ಬ್ಯಸನ ಸುತ್ತ (ದುರಂತಗಳ ಸುತ್ತ) (ಅಂ.ನಿ. 11.6) byasana sutta (A.N. 11.6)<p><span style="font-size: x-large;"><b> ಬ್ಯಸನ ಸುತ್ತ (ದುರಂತಗಳ ಸುತ್ತ) (ಅಂ.ನಿ. 11.6)</b></span></p><div class="separator" style="clear: both; text-align: center;"><span style="font-size: x-large;"><b><a href="https://1.bp.blogspot.com/-XdpAo3ik3oA/YMTfrXXuJqI/AAAAAAAAFuY/Hnh9fgLmk-IUITd3pHbAP3ld_YHqd5JfACLcBGAsYHQ/s450/104457800-hand-of-buddha-statue-with-yellow-bokeh-background-light-of-wisdom-and-concentration-concept.jpg" imageanchor="1" style="margin-left: 1em; margin-right: 1em;"><img border="0" data-original-height="300" data-original-width="450" src="https://1.bp.blogspot.com/-XdpAo3ik3oA/YMTfrXXuJqI/AAAAAAAAFuY/Hnh9fgLmk-IUITd3pHbAP3ld_YHqd5JfACLcBGAsYHQ/s320/104457800-hand-of-buddha-statue-with-yellow-bokeh-background-light-of-wisdom-and-concentration-concept.jpg" width="320" /></a></b></span></div><span style="font-size: x-large;"><b><br /></b></span><p></p><p><br /></p><p> " ಭಿಕ್ಖುಗಳೇ, ಯಾವುದೇ ಭಿಕ್ಖುವು ಧಾಮರ್ಿಕ ಸಂಗಾತಿಗಳನ್ನು ನಿಂದಿಸುವನೋ, ಅವಮಾನ ಮಾಡುವನೋ, ಉದಾತ್ತರ ಬಗ್ಗೆ ಕೆಟ್ಟದಾಗಿ ಮಾತಾನಾಡುವನೋ ಅಂತಹವನು ನಿಸಂದೇಹವಾಗಿ ಈ 11 ದುರಂತಗಳಲ್ಲಿ ಯಾವುದಾದರೂ ಒಂದನ್ನು ಪಡೆಯುತ್ತಾನೆ."</p><p>" ಯಾವುದವು 11 ?"</p><p> "1. ಅಂತಹವರು ಪ್ರಾಪ್ತಿ ಮಾಡಬೇಕಾಗಿರುವುದನ್ನು ಪ್ರಾಪ್ತಿ ಮಾಡುವುದಿಲ್ಲ.</p><p><br /></p><p> 2.ಅಥವಾ ಅಂತಹವರು ಯಾವುದನ್ನು ಪ್ರಾಪ್ತಿ ಮಾಡಿರುವರೋ ಅದರಿಂದ ಕೆಳಕ್ಕೆ ಬೀಳುವರು. ಅಂದರೆ ಅವನ್ನು ಕಳೆದುಕೊಳ್ಳುವರು.</p><p><br /></p><p> 3. ಅಥವಾ ಅಂತಹವರು ಅವರು ತಮ್ಮ ಸದ್ಗುಣಗಳನ್ನು ಪರಿಶುದ್ಧಿಗೊಳಿಸುವುದಿಲ್ಲ.</p><p><br /></p><p> 4. ಅಥವಾ ಅಂತಹವರು ತಮ್ಮ ಸದ್ಗುಣಗಳ ಬಗ್ಗೆ ಅತಿಯಾಗಿ ಅಂದಾಜು ಮಾಡುತ್ತಾರೆ. ವಾಸ್ತವವಾಗಿ ಹಾಗೆ ವಿಕಾಸವಾಗಿರುವುದಿಲ್ಲ. </p><p><br /></p><p> 5. ಅಥವಾ ಅಂತಹವರು ತಮ್ಮ ಧಾಮರ್ಿಕ ಜೀವನವನ್ನು ಅಸಂತುಷ್ಟರಾಗಿ ಜೀವಿಸುತ್ತಾರೆ. </p><p><br /></p><p> 6. ಅಥವಾ ಅಂತಹವರು ಭ್ರಷ್ಟ ಅಪರಾದಗಳಲ್ಲಿ ತೊಡಗುತ್ತಾರೆ.</p><p><br /></p><p> 7. ಅಥವಾ ಅಂತಹವರು ತಮ್ಮ ಶಿಕ್ಷಣಕ್ಕೆ ರಾಜಿನಾಮೆ ನೀಡಿ ನೀಚ ಜೀವನಕ್ಕೆ ಹಿಂತಿರುಗುತ್ತಾರೆ. </p><p><br /></p><p> 8. ಅಥವಾ ಅಂತಹವರು ಭೀಕರ ರೋಗಕ್ಕೆ ಗುರಿಯಾಗುತ್ತಾರೆ. </p><p><br /></p><p> 9. ಅಥವಾ ಅಂತಹವರು ತಮ್ಮ ಮನಸ್ಸಿನ ನಿಯಂತ್ರಣ ಕಳೆದುಕೊಂಡು ಹುಚ್ಚರಾಗುತ್ತಾರೆ. </p><p><br /></p><p> 10. ಅಥವಾ ಅಂತಹವರು ಸಾಯುವಾಗ ನಷ್ಟತನದ ಭಾವವನ್ನು ಹೊಂದುತ್ತಾರೆ. </p><p><br /></p><p> 11. ಮತ್ತು ಅಂತಹವರು ಸಾವಿನ ನಂತರ, ಕಾಯವು ಭೇಧವಾದ ನಂತರ ಅಪಾಯಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತಗಳಲ್ಲಿ, ನಿರಯಗಳಲ್ಲಿ ಜನಿಸುತ್ತಾರೆ. "</p><p><br /></p><p> " ಹೀಗೆ ಭಿಕ್ಖುಗಳೇ, ಯಾವುದೇ ಭಿಕ್ಖುವು ಧಾಮರ್ಿಕ ಸಂಗಾತಿಗಳನ್ನು ನಿಂದಿಸುವನೋ, ಅವಮಾನ ಮಾಡುವನೋ, ಉದಾತ್ತರ ಬಗ್ಗೆ ಕೆಟ್ಟದಾಗಿ ಮಾತಾನಾಡುವನೋ ಅಂತಹವನು ನಿಸಂದೇಹವಾಗಿ ಈ 11 ದುರಂತಗಳಲ್ಲಿ ಯಾವುದಾದರೂ ಒಂದನ್ನು ಪಡೆಯುತ್ತಾನೆ.."</p><p><br /></p><p>" ಭಿಕ್ಖುಗಳೇ, ಯಾವುದೇ ಭಿಕ್ಖುವು ಧಾಮರ್ಿಕ ಸಂಗಾತಿಗಳನ್ನು ನಿಂದಿಸುವುದಿಲ್ಲವೋ, ಅವಮಾನ ಮಾಡುವುದಿಲ್ಲವೋ, ಉದಾತ್ತರ ಬಗ್ಗೆ ಕೆಟ್ಟದಾಗಿ ಮಾತಾನಾಡುವುದಿಲ್ಲವೋ, ಅಂತಹವನು ನಿಸಂದೇಹವಾಗಿ ಈ 11 ದುರಂತಗಳಲ್ಲಿ ಯಾವುದೂ ಪಡೆಯುವುದಿಲ್ಲ." .</p><p><br /></p><p> </p><p><br /></p><p> </p>Aneesh Bodhhttp://www.blogger.com/profile/02041276688261983503noreply@blogger.com0tag:blogger.com,1999:blog-8742652691355814794.post-36708681142117737412021-05-30T23:24:00.001-07:002021-05-30T23:24:08.056-07:00 ದುತಿಯಪರಿಹಾನಿ ಸುತ್ತ dutiya parihani sutta : ಯಾವ ರೀತಿಯಲ್ಲಿ ಉಪಾಸಕನು (ಗೃಹಸ್ಥ ಬೌದ್ಧ ಅನುಯಾಯಿ) ಅವನತಿಗೆ ಈಡಾಗುತ್ತಾನೆ.<p><b> <span style="font-size: x-large;"> ದುತಿಯಪರಿಹಾನಿ ಸುತ್ತ</span> </b>: </p><p><br /></p><p><span style="font-size: large;"><b>ಯಾವ ರೀತಿಯಲ್ಲಿ ಉಪಾಸಕನು (ಗೃಹಸ್ಥ ಬೌದ್ಧ ಅನುಯಾಯಿ) ಅವನತಿಗೆ ಈಡಾಗುತ್ತಾನೆ.</b></span></p><div class="separator" style="clear: both; text-align: center;"><div class="separator" style="clear: both; text-align: center;"><a href="https://1.bp.blogspot.com/-kvdLhJhksy4/YLSAoaQLyAI/AAAAAAAAFtY/zQs7xx3VcJwa-60m0nYM-8I7l9igZOb4gCLcBGAsYHQ/s575/bak.jpg" imageanchor="1" style="margin-left: 1em; margin-right: 1em;"><img border="0" data-original-height="575" data-original-width="471" height="320" src="https://1.bp.blogspot.com/-kvdLhJhksy4/YLSAoaQLyAI/AAAAAAAAFtY/zQs7xx3VcJwa-60m0nYM-8I7l9igZOb4gCLcBGAsYHQ/s320/bak.jpg" /></a></div><a href="https://1.bp.blogspot.com/-GIEPDDuvnRY/YLSAV5n5Z8I/AAAAAAAAFtQ/97oPMQ4ISAUFjwsaEqPBAeAN1nIBdMuDwCPcBGAsYHg/s600/1592700285248.jpg" imageanchor="1" style="margin-left: 1em; margin-right: 1em;"><img border="0" data-original-height="600" data-original-width="500" height="320" src="https://1.bp.blogspot.com/-GIEPDDuvnRY/YLSAV5n5Z8I/AAAAAAAAFtQ/97oPMQ4ISAUFjwsaEqPBAeAN1nIBdMuDwCPcBGAsYHg/s320/1592700285248.jpg" /></a><br /></div><br /><p></p><p> ಭಿಕ್ಖುಗಳೇ, ಈ ಏಳು ವಿಷಯಗಳಿಂದ ಉಪಾಸಕನು ಅವನತಿಗೆ ಈಡಾಗುತ್ತಾನೆ ?</p><p> </p><p> ಯಾವುವವು ಏಳು ?</p><p><br /></p><p> " 1. ಅವನು ಭಿಕ್ಖುಗಳನ್ನು ದಶರ್ಿಸಲು (ನೋಡಲು) ನಿಲ್ಲಿಸುತ್ತಾನೆ.</p><p><br /></p><p> 2. ಅವನು ಧಮ್ಮವನ್ನು ಕೇಳಲು ಅಲಕ್ಷಿಸುತ್ತಾ ಇರುತ್ತಾನೆ.</p><p><br /></p><p> 3. ಅವನು ಉನ್ನತವಾದ (ಪಂಚ)ಶೀಲವನ್ನು ಪಾಲಿಸುವುದಿಲ್ಲ.</p><p><br /></p><p> 4. ಅವನು ಭಿಕ್ಖುಗಳ ಬಗ್ಗೆ ಅಪಾರವಾಗಿ ಸಂಶಯಸ್ಥನಾಗುತ್ತಾನೆ. ಆ ಭಿಕ್ಖುಗಳು ಹಿರಿಯ ಥೇರರೇ ಆಗಿರಲಿ, ಹೊಸ ಸಮಣೇರರೇ ಆಗಿರಲಿ, ಅಥವಾ ವರ್ಷಗಳು ಸಾಧನೆ ಮಾಡುತ್ತಿರುವ ಭಿಕ್ಖುಗಳೇ ಆಗಿರಲಿ. ಅವರ ಬಗ್ಗೆ ಸಂಶಯಸ್ಥನಾಗಿರುತ್ತಾನೆ.</p><p><br /></p><p> 5. ಆತನು ಧಮ್ಮವನ್ನು ಆಲಿಸುವಾಗಲೂ ಸಹಾ ಟೀಕಾತ್ಮಕವಾಗಿಯೇ, ತಪ್ಪುಗಳನ್ನು ಹುಡುಕುವ ರೀತಿಯಲ್ಲಿಯೇ ಧಮ್ಮವನ್ನು ಆಲಿಸುತ್ತಾನೆ.</p><p><br /></p><p> 6. ಆತನು ಆರಿಯರಲ್ಲದ ಉದಾರಲ್ಲದ ವ್ಯಕ್ತಿಗಳಾದ ಹೊರಗಿನವರಿಗೆ ದಾನಕ್ಕೆ, ಆತಿಥ್ಯಕ್ಕೆ, ಜ್ಞಾನಕ್ಕೆ ಅರ್ಹರೆಂದು ಭಾವಿಸಿ ಅವರನ್ನೇ ಹಿಂಬಾಲಿಸುತ್ತಾನೆ. </p><p><br /></p><p> 7. ಆತನು ಆ ಉದಾರಲ್ಲದವರಲ್ಲಿಯೇ ಗೌರವ, ಜ್ಙಾನಗಳಿಕೆ, ದಾನ, ಸೇವೆ, ಆತಿಥ್ಯಗಳೆಲ್ಲವನ್ನು ಮಾಡುತ್ತಾನೆ.</p><p> </p><p> ಈ ಏಳು ವಿಷಯಗಳಿಂದ ಉಪಾಸಕನು(ಗೃಹಸ್ಥ ಬೌದ್ಧ ಅನುಯಾಯಿ) ಅವನತಿಗೆ ಈಡಾಗುತ್ತಾನೆ </p><p><br /></p><p><br /></p><p><br /></p><p><br /></p><p><br /></p><p> .</p><p><br /></p><p> </p>Aneesh Bodhhttp://www.blogger.com/profile/02041276688261983503noreply@blogger.com0tag:blogger.com,1999:blog-8742652691355814794.post-25247234796813480202020-09-24T10:10:00.004-07:002020-09-24T10:10:50.958-07:00 ಮಹಾನಾಮ ಸುತ್ತ (55.37) <p><span style="font-size: x-large;"> ಮಹಾನಾಮ ಸುತ್ತ (55.37)</span></p><p></p><div class="separator" style="clear: both; text-align: center;"><a href="https://1.bp.blogspot.com/-OfLnCwTmKxU/X2zSmhgUiHI/AAAAAAAAFco/WdP2N2USel8oS6MRA9VwlILqEKwP26IWQCLcBGAsYHQ/s700/FB_IMG_1591703371151.jpg" imageanchor="1" style="margin-left: 1em; margin-right: 1em;"><img border="0" data-original-height="580" data-original-width="700" src="https://1.bp.blogspot.com/-OfLnCwTmKxU/X2zSmhgUiHI/AAAAAAAAFco/WdP2N2USel8oS6MRA9VwlILqEKwP26IWQCLcBGAsYHQ/s320/FB_IMG_1591703371151.jpg" width="320" /></a></div><br /><span style="font-size: x-large;"><br /></span><p></p><p>ಒಮ್ಮೆ ಭಗವಾನರು ಶಾಕ್ಯರ ನಗರವಾದ ಕಪಿಲವಸ್ತುವಿನ ನಿಗ್ರೋಧ ಆರಾಮ(ಉಧ್ಯಾನವನ)ದಲ್ಲಿ ನೆಲಸಿದ್ದರು. ಆ ಸಮಯದಲ್ಲಿ ಶಾಕ್ಯರ ಹಿರಿಯರಾದಂತಹ ಮಹಾನಾಮರು ಭಗವಾನರ ಬಳಿಗೆ ಬಂದು ವಂದಿಸಿ ಒಂದೆಡೆ ಕುಳಿತರು. ನಂತರ ಅವರು ಭಗವಾನರೊಂದಿಗೆ ಹೀಗೆ ಸಂಬೋದಿಸಿದರು : <b>"ಭಂತೆ ಯಾವ ರೀತಿಯಲ್ಲಿ ಒಬ್ಬನು ಉಪಾಸಕನಾಗುತ್ತಾನೆ(ಬೌದ್ಧನಾಗುತ್ತಾನೆ)"</b></p><p>"ಇಲ್ಲಿ ಮಹಾನಾಮ ಒಬ್ಬನು ಬುದ್ಧರ ಶರಣು ಹೋದಾಗ, ಧಮ್ಮದ ಶರಣು ಹೋದಾಗ, ಸಂಘದ ಶರಣು ಹೋದಾಗ ಆತನು ಈ ರೀತಿಯಲ್ಲಿ ಉಪಾಸಕ(ಬೌದ್ಧ)ನಾಗುತ್ತಾನೆ."</p><p><br /></p><p><b>"ಮತ್ತೆ ಭಂತೆ ಯಾವ ರೀತಿಯಲ್ಲಿ ಉಪಾಸಕನು ಶೀಲಸಂಪನ್ನನು ಆಗುತ್ತಾನೆ. (ಶೀಲಯುತ ಬೌದ್ಧನೆನಸಿಕೊಳ್ಳುತ್ತಾನೆ)."</b></p><p>"ಇಲ್ಲಿ ಮಹಾನಾಮ ಪ್ರಾಣಗಳನ್ನು ತೆಗೆಯುವುದರಿಂದ ವಿರತನಾದರೆ, ಕೊಡದೆ ಇದ್ದುದ್ದನ್ನು ತೆಗೆದುಕೊಳ್ಳುವುದರಿಂದ ವಿರತನಾದರೆ, ಕಾಮುಕತೆಗಳ ಮಿಧ್ಯಾಚಾರಗಳಿಂದ(ಅನೈತಿಕ ಸಂಬಂಧಗಳಿಂದ, ಬಲತ್ಕಾರಗಳಿಂದ) ವಿರತನಾದರೆ, ಸುಳ್ಳು ಹೇಳುವುದರಿಂದ ವಿರತನಾದರೆ, ಮತ್ತು ಸುರ,ಮೆರೆಯ,ಇತರ ಪ್ರಮಾದ ತರುವ ಮಧ್ಯಪಾನ(ಮಾದಕ ವಸ್ತುಗಳಿಂದ)ಗಳಿಂದ ವಿರತನಾದಗ ಒಬ್ಬನು ಶೀಲ ಸಂಪನ್ನ ಬೌದ್ಧನಾಗುತ್ತಾನೆ." </p><p><b><br /></b></p><p><b>"ಮತ್ತೆ ಭಂತೆ ಯಾವ ರೀತಿಯಲ್ಲಿ ಉಪಾಸಕನು ಶ್ರದ್ಧಸಂಪನ್ನನು ಆಗುತ್ತಾನೆ. (ಶ್ರದ್ಧಯುತ ಬೌದ್ಧನೆನಸಿಕೊಳ್ಳುತ್ತಾನೆ)"</b></p><p>"ಇಲ್ಲಿ ಮಹಾರಾಜ ಈ ರೀತಿಯಲ್ಲಿ ಶ್ರದ್ಧಾಸಂಪನ್ನನು ಆಗುತ್ತಾನೆ, ಹೇಗೆಂದರೆ ಆತನಿಗೆ ತಥಾಗತರ ಬೋಧಿಯ(ಜ್ಞಾನ ಪ್ರಾಪ್ತಿಯ) ಮೇಲೆ ಅಚಲ ವಿಶ್ವಾಸವಿರುತ್ತದೆ, ಹೇಗೆಂದರೆ "ಭಗವಾನರು ಖಂಡಿತವಾಗಿಯು ಅರಹಂತರಾಗಿದ್ದಾರೆ(ಕಲ್ಮಶರಹಿತರು), ಸಮ್ಮಸಂಬುದ್ಧರಾಗಿದ್ದಾರೆ(ಸ್ವಯಂ ಆಗಿಯೇ ಸಂಪೂರ್ಣ ಸಂಬೋಧಿ ಪ್ರಾಪ್ತಿ ಮಾಡಿದ್ದಾರೆ), ವಿಜ್ಜಾಚರಣ ಸಂಪನ್ನರು(ವಿದ್ಯೆಯೆಂದರೆ ಸ್ಪಷ್ಟ ಜ್ಞಾನದರ್ಶನ ಹೊಂದಿರುವಿಕೆ ಹಾಗು ಚರಣವೆಂದರೆ ಶ್ರೇಷ್ಠ ಆಚರಣೆ ಉಳ್ಳವರು. ಒಟ್ಟಾರೆ ವಿದ್ಯೆ ಹಾಗು ಆಚರಣೆ ಸಂಪನ್ನರಾಗಿರುವುದರಿಂದಾಗಿ ವಿಜ್ಜಾಚರಣಸಂಪನ್ನರೆನ್ನುತ್ತಾರೆ), ಸುಗತರು(ಅವರು ಹೇಗೆ ಶೋಭಾಯಮಾನವಾಗಿ ಹೋಗಿ (ಗಮತ) ಸುಗತರಾಗಿದ್ದಾರೆ? ಗತ ಎಂದರೆ ಹೋಗಿದ್ದಾರೆ. ಭಗವಾನರಿಗೆ ಶೋಭನಾಮಯ (ಒಳಿತಿನಿಂದ ಕೂಡಿರುವವರು, ಒಳಿತನ್ನೇ ಮಾಡುವವರು) ಎನ್ನುತ್ತಾರೆ. ಅವರು ಹೇಗೆ, ಯಾವ ಮಾರ್ಗದಲ್ಲಿ ಹೋಗಿದ್ದಾರೆ? ಅವರು ಆರ್ಯ ಅಷ್ಠಾಂಗ ಮಾರ್ಗದಲ್ಲಿ, ಯಾವುದೇ ಅಂಟುವಿಕೆಯಿಲ್ಲದೆ ಕ್ಷೇಮಕರ ದ್ವಾರವಾದ ನಿಬ್ಬಾನ ತಲುಪಿದ್ದಾರೆ)ೆ., ಲೋಕವಿಧರು (ಅವರು ಲೋಕಗಳನ್ನು ಬಲ್ಲವರು. ಅವರು (ಭಗವಾನರು) ಅನುಭವಿಸಿದ್ದಾರೆ, ಲೋಕಗಳನ್ನು ಅತ್ಯಂತ ತೀಕ್ಷ್ಣವಾಗಿ ವೀಕ್ಷಿಸಿದ್ದಾರೆ. ಲೋಕಗಳ ಉದಯವನ್ನು, ಲೋಕಗಳ ನಿರೋಧವನ್ನು ನಿರೋಧದ ಉದ್ದೇಶವನ್ನು ಹೇಳಿದ್ದಾರೆ: ಅವರು ತಮ್ಮ ದಿವ್ಯಚಕ್ಷುವಿನಿಂದ ಸರ್ವಲೋಕಗಳನ್ನು ಅರಿತಿದ್ದಾರೆ. ಸಶರೀರರಾಗಿ ಲೋಕಗಳನ್ನು ಸಂಚರಿಸಿದ್ದಾರೆ. ಪಾಪಿಗಳ ದುರ್ಗತಿ, ಶೀಲವಂತರ ಸುಗತಿ, ದಾನಿಗಳ ಸ್ವರ್ಗ, ಧ್ಯಾನಿಗಳ ಬ್ರಹ್ಮಲೋಕ, ಜ್ಞಾನಿಗಳ ನಿಬ್ಬಾಣ ಎಲ್ಲವನ್ನು ಕಾರಣ ಪರಿಹಾರ ಸಮೇತ ವಿವರಿಸಿದ್ದಾರೆ. ಆದ್ದರಿಂದ ಅಂತಹ ನಿಬ್ಬಾಣ ಮಾರ್ಗದಶರ್ಿಗೆ ಲೋಕವಿದೂ ಎನ್ನುತ್ತಾರೆ.), ಅನುತ್ತರ ಪುರುಷ ಧಮ್ಮಸಾರಥಿಯು (ಅನುತ್ತರೋ ಎಂದರೆ ಸಾಟಿಯಿಲ್ಲದ, ಯಾರಿಗೂ ಹೋಲಿಸಲಾಗದ ಎಂದು ಅರ್ಥ. ಪುರಿಸ ಎಂದರೆ ಜೀವಿಗಳಲ್ಲಿ ಪುರುಷ (ವಿಶಾಲಾರ್ಥದಲ್ಲಿ ಎಲ್ಲಾ ಜೀವಿಗಳೆಂದು ಪರಿಗಣಿಸಲಾಗುತ್ತದೆ). ದಮ್ಮ ಎಂದರೆ (ದಮಿಸುವುದು); ಸಾರಥಿ ಎಂದರೆ ದಮಿಸುವವ ಅಥವಾ ನಾಯಕ ಎಂದರ್ಥ. ಅಂದರೆ ಒಟ್ಟಾರೆ ಜೀವಿಗಳನ್ನು ದಮಿಸುವಂತಹ ಹೋಲಿಸಲಾಗದಂತಹ ನಾಯಕ ಎಂದು ಅರ್ಥವಾಗಿದೆ.), ದೇವ-ಮನುಷ್ಯರಿಗೆ ಗುರುವು(ಭಗವಾನರು ಇಲ್ಲಿ ಈಗಲೇ ಲಾಭವಾಗುವ ಬೋಧನೆ ಮಾಡುತ್ತಿದ್ದರು. ಹಾಗೆಯೇ ಮುಂದಿನ ಜನ್ಮದಲ್ಲೂ ಒಳ್ಳೆಯದಾಗುವ ರೀತಿ ಬೋಧನೆ ಮಾಡುತ್ತಿದ್ದರು. ಅಷ್ಟೇ ಅಲ್ಲ, ಅಂತಿಮ ಗುರಿಯಾದ ನಿಬ್ಬಾಣ ಸಿಗುವಂತಹ ರೀತಿಯಲ್ಲಿ ಅವರು ಬೋಧನೆ ಮಾಡುತ್ತಿದ್ದರು. ಹೀಗೆ ವರ್ತಮಾನ ಹಾಗು ಭವಿಷ್ಯದಲ್ಲಿ ಮತ್ತು ಪರಮಾರ್ಥವಾದ ನಿಬ್ಬಾಣ ಗಳಿಸುವಿಕೆಯಲ್ಲೂ ಲಾಭವಾಗುವಂತಹ ಬೋಧನೆಯನ್ನು ಮಾನವರಿಗೆ ಮತ್ತು ದೇವತೆಗಳಿಗೆ ನೀಡುತ್ತಿದ್ದುದರಿಂದಾಗಿ ಅವರನ್ನು ದೇವತೆಗಳಿಗೆ ಹಾಗೂ ಮಾನವರಿಗೆ ಶಾಸ್ತರು ಎನ್ನುತ್ತಾರೆ.), ಬುದ್ಧರು (ವಿಮುಕ್ತಿ ಫಲವನ್ನು ಒಳಗೊಂಡ ಜ್ಞಾನದಿಂದ ಅವರು ಬುದ್ಧರಾಗಿದ್ದಾರೆ. ಅವರ ಅಗಾಧ ಜ್ಞಾನಸಂಪತ್ತು ಸ್ವತಃ ಅವರಿಂದಲೇ ಸಂಶೋಧಿಸಲ್ಪಟ್ಟಿದೆ; ಆದ್ದರಿಂದ ಅವರನ್ನು ಬುದ್ಧರೆನ್ನುತ್ತಾರೆ.) ಆಗಿದ್ಧಾರೆ ಹಾಗೂ ಭಗವಾನರಾಗಿದ್ದಾರೆ( 'ಭಗವಾನರು' ಎಂಬ ಪದ ಪದಗಳಲ್ಲೇ ಶ್ರೇಷ್ಠವಾದುದು, ಉತ್ಕೃಷ್ಟವಾದುದು, ಭಕ್ತಿಗೆ ಅರ್ಹವಾದುದು. ಆದ್ದರಿಂದಲೇ ಭಗವಾನರು ಎಂದೇ ಬಳಕೆಯಲ್ಲಿದೆ.) ಈ ರೀತಿಯಲ್ಲಿ ಮಹಾನಾಮ, ಉಪಾಸಕನು ಶ್ರದ್ಧಾಸಂಪನ್ನನು ಆಗುತ್ತಾನೆ."</p><p><b><br /></b></p><p><b>""ಮತ್ತೆ ಭಂತೆ ಯಾವ ರೀತಿಯಲ್ಲಿ ಉಪಾಸಕನು ತ್ಯಾಗ(ದಾನ)ಸಂಪನ್ನನು ಆಗುತ್ತಾನೆ."</b></p><p>"ಇಲ್ಲಿ ಮಹಾನಾಮ ಉಪಾಸಕನು ಸ್ವಾರ್ಥರಹಿತವಾದ ಮನೋಭಾವದಿಂದ ಕೂಡಿರುತ್ತಾನೆ(ಜೀವಿಸುತ್ತಾನೆ), ಉದಾರಿಯಾಗಿರುತ್ತಾನೆ, ಸದಾ ದಾನದಲ್ಲೆ ಆನಂದಿತನಾಗಿ ದಾನಹಸ್ತನಾಗಿರುತ್ತಾನೆ, ಯಾಚಕರಿಗೆ ಮುಕ್ತನಾಗಿರುತ್ತಾನೆ, ಹಂಚುವಿಕೆಯಲ್ಲೆ ಸುಖ ಕಾಣುತ್ತಾನೆ. ಹೀಗೆ ಬಿಟ್ಟುಬಿಡುವುದರಲ್ಲಿ ತ್ಯಾಗದಲ್ಲಿ ಆನಂದಿಸುವನು, ಈ ರೀತಿಯಲ್ಲಿ ಮಹಾನಾಮ, ಉಪಾಸಕನು ತ್ಯಾಗಸಂಪನ್ನನು ಆಗುತ್ತಾನೆ."</p><p><br /></p><p><b>""ಮತ್ತೆ ಭಂತೆ ಯಾವ ರೀತಿಯಲ್ಲಿ ಉಪಾಸಕನು ಪ್ರಜ್ಞಾಸಂಪನ್ನನು ಆಗುತ್ತಾನೆ."</b></p><p>"ಇಲ್ಲಿ ಮಹಾನಾಮ ಉಪಾಸಕನು ಪ್ರಜ್ಞವಂತನಾಗಿರುತ್ತಾನೆ(ಪನ್ನಾವ), ಆತನು ಉದಯ ಹಾಗೂ ಅಳಿಯುವಿಕೆಯ(ಮೆರೆಯಾಗುವಿಕೆಯ/ನಾಷವಾಗುವಿಕೆಯ)ಲ್ಲಿ ಜ್ಞಾನಿಯಾಗುತ್ತಾನೆ, ಅವುಗಳ ಜ್ಞಾನ ಆತನಿಗೆ ಇರುತ್ತದೆ, ಆ ಜ್ಞಾನವು ಉದಾತ್ತವಾದುದು(ಆರ್ಯರದ್ದು), ಅದು ಪರಮ ಬೇಧಕನೀಯವಾದುದ್ದು(ನಿಭ್ಭೇಧಿಕಾಯ), ಮತ್ತು ಅದು ದುಃಖಗಳ ಕ್ಷಯ(ಅಂತ್ಯ)ದೆಡೆಗೆ ಕರೆದೊಯ್ಯುವುದು. ಹೀಗೆ ಈ ರೀತಿಯಲ್ಲಿ ಪ್ರಜ್ಞಾಸಂಪನ್ನ ಉಪಾಸಕ ಎಂದು ಕರೆಸಿಕೊಳ್ಳುತ್ತಾನೆ.</p><p><br /></p><p><br /></p><p><br /></p><p><br /></p><p><br /></p><p> </p>Aneesh Bodhhttp://www.blogger.com/profile/02041276688261983503noreply@blogger.com0tag:blogger.com,1999:blog-8742652691355814794.post-16946695843319252622020-07-12T08:11:00.000-07:002020-07-12T08:11:40.997-07:00ಚುಲಕಮ್ಮವಿಭಂಗ ಸುತ್ತ culakammavibhanga sutta in kannada<br /><div class="separator" style="clear: both; text-align: center;"><br /></div><div class="separator" style="clear: both; text-align: center;"><b><font size="6"><br /></font></b></div><div class="separator" style="clear: both; text-align: center;"><b><font size="6">ಚುಲಕಮ್ಮವಿಭಂಗ ಸುತ್ತ</font></b></div><div class="separator" style="clear: both; text-align: center;"><b><font size="6">(ಕಮ್ಮಫಲದ ವಿಶ್ಲೇಷಣೆಯ ಚಿಕ್ಕ ಸುತ್ತ)</font></b></div><div class="separator" style="clear: both; text-align: center;"><a href="https://1.bp.blogspot.com/-hlaWPi9hCwE/Xwsm_gpkJYI/AAAAAAAAFQY/zS5tTYtcr2AP7N6qELaS7x-oMe4aaQKYQCLcBGAsYHQ/s354/kamma%2Bvipaka.jpg" imageanchor="1" style="margin-left: 1em; margin-right: 1em;"><img border="0" data-original-height="354" data-original-width="354" height="320" src="https://1.bp.blogspot.com/-hlaWPi9hCwE/Xwsm_gpkJYI/AAAAAAAAFQY/zS5tTYtcr2AP7N6qELaS7x-oMe4aaQKYQCLcBGAsYHQ/s320/kamma%2Bvipaka.jpg" /></a></div><div class="separator" style="clear: both; text-align: center;"><br /></div><div class="separator" style="clear: both; text-align: center;"><br /></div><div class="separator" style="clear: both; text-align: center;">ನಾನು ಹೀಗೆ ಕೇಳಿದ್ದೇನೆ. ಒಮ್ಮೆ ಭಗವಾನರು ಶ್ರಾವಸ್ಥಿಯ ಆನಾಥಪಿಂಡಿಕನ ಜೇತವನದಲ್ಲಿ ವಾಸಿಸುತ್ತಿದ್ದರು.</div><div class="separator" style="clear: both; text-align: center;">ಆಗ ಬ್ರಾಹ್ಮಣ ವಿಧ್ಯಾಥರ್ಿಯಾದ ತೋದಯ್ಯನ ಮಗನಾದ ಸುಭನು ಭಗವಾನರ ಬಳಿಗೆ ಹೋದನು ಅವರಿಗೆ ವಂದಿಸಿ ಕುಶಲಗಳನ್ನು ವಿನಿಯೋಗಿಸಿಕೊಂಡನು. ಹೀಗೆ ಕುಶಲ ಮಾತುಕತೆಯ ನಂತರ ಆತನು ಭಗವಾನರ ಮುಂದೆ ಒಂದೆಡೆ ಕುಳಿತನು. ಮತ್ತು ಹೀಗೆ ಪ್ರಶ್ನಿಸಿದನು: </div><div class="separator" style="clear: both; text-align: center;">"ಗೋತಮ ಭಗವಾನರೇ ಯಾವ ಕಾರಣದಿಂದ ಹಾಗೂ ಯಾವ ಸ್ಥಿತಿಯಿಂದಾಗಿ(ಬೆಂಬಲದಿಂದಾಗಿ) ಮಾನವರು ಹೀನರು ಹಾಗೂ ಶ್ರೇಷ್ಟರು ಆಗಿ ಕಾಣಿಸಿಕೊಳ್ಳುತ್ತಾರೆ. ? ಏಕೆಂದರೆ ಜನರು ಅಲ್ಪಾಯುಷ್ಯನಿಂದ ಹಾಗೂ ದೀಘರ್ಾಯುಷ್ಯನಿಂದ ಕಾಣಿಸುವರು. ರೋಗಿಗಳಾಗಿ ಮತ್ತು ಆರೋಗ್ಯವಂತರಾಗಿ ,ಅದೇ ರೀತಿ ಕುರೂಪಿಗಳಾಗಿ ಮತ್ತು ಸುರೂಪಿಗಳಾಗಿ, ಅಪ್ರಭಾವಿಗಳಾಗಿ ಮತ್ತು ಪ್ರಭಾವಿಗಳಾಗಿ, ಬಡವರಾಗಿ ಮತ್ತು ಸಿರಿವಂತರಾಗಿ, ನೀಚಕುಲದಲ್ಲಿ ಮತ್ತು ಉಚ್ಚಕುಲದಲ್ಲಿ, ದಡ್ಡರಾಗಿ ಹಾಗೇಯೆ ಪ್ರಜ್ಞಾವಂತರಾಗಿ, ಕಾಣಿಸಿಕೊಳ್ಳುತ್ತಿದ್ದಾರೆ. ಯಾವ ಕಾರಣದಿಂದ ಹಾಗೂ ಯಾವ ಸ್ಥಿತಿಗಳಿಂದಾಗಿ ಮಾನವರು ಹೀಗೆ ಹೀನರು ಹಾಗೂ ಶ್ರೇಷ್ಟರು ಆಗಿ ಕಾಣಿಸಿಕೊಳ್ಳುವರು."</div><div class="separator" style="clear: both; text-align: center;"><br /></div><div class="separator" style="clear: both; text-align: center;"> " ಓ ಮಾಣವನೇ, </div><div class="separator" style="clear: both; text-align: center;"><b>ಜೀವಿಗಳು ತಮ್ಮ ಕಮ್ಮಗಳಿಗೆ ತಾವೆ ಒಡೆಯರು</b></div><div class="separator" style="clear: both; text-align: center;"><b>ತಮ್ಮ ಕಮ್ಮಕ್ಕೆ ತಾವೇ ಉತ್ತರಾಧಿಕಾರಿಗಳು</b></div><div class="separator" style="clear: both; text-align: center;"><b>ತಮ್ಮ ಕಮ್ಮಗಳಿಂದಲೇ ಅವರು ಜನಿಸುವರು</b></div><div class="separator" style="clear: both; text-align: center;"><b>ಕಮ್ಮಗಳೇ ಬಂಧುವು</b></div><div class="separator" style="clear: both; text-align: center;"><b>ಕಮ್ಮಗಳೆ ಅವರ ಶರಣು</b></div><div class="separator" style="clear: both; text-align: center;"><b>ಕಮ್ಮದಿಂದಲೇ ಹೀನ ಹಾಗೂ ಮಹಾನ್ ಆಗುವರು</b></div><div class="separator" style="clear: both; text-align: center;"><br /></div><div class="separator" style="clear: both; text-align: center;"><br /></div><div class="separator" style="clear: both; text-align: center;">"ಭಗವಾನರೇ ನಾನು ತಮ್ಮ ಬೋಧನೆಯ ಅರ್ಥವನ್ನು ವಿಶಾಲತೆಯನ್ನು ಅರ್ಥಮಾಡಿಕೊಳ್ಳಲಿಲ್ಲ, ತಾವು ಸಂಕ್ಷೀಪ್ತವಾಗಿ ನುಡಿದಿದ್ದಿರಿ ವಿವರವಾಗಿ ಹೇಳಲಿಲ್ಲ. ಹೀಗಾಗಿ ಭಗವಾನರು ನನಗೆ ಅರ್ಥವಾಗುವ ರೀತಿ ವಿಸ್ತಾರವಾಗಿ ಧಮ್ಮವನ್ನು ನುಡಿದರೆ ಬಹಳ ಒಳಿತಾಗುವುದು."</div><div class="separator" style="clear: both; text-align: center;"><br /></div><div class="separator" style="clear: both; text-align: center;">"ಹಾಗಾದರೇ ಮಾಣವನೇ ನಾನು ನುಡಿಯುವುದನ್ನೇ ಗಮನವಿಟ್ಟು ಆಲಿಸು."</div><div class="separator" style="clear: both; text-align: center;"><br /></div><div class="separator" style="clear: both; text-align: center;">"ಹಾಗೇ ಆಗಲಿ ಭಂತೆ" ಎಂದು ಶುಭನು ನುಡಿದನು.</div><div class="separator" style="clear: both; text-align: center;"><br /></div><div class="separator" style="clear: both; text-align: center;"> ಆಗ ಭಗವಾನರು ಹೀಗೆ ನುಡಿದರು :</div><div class="separator" style="clear: both; text-align: center;">"ಇಲ್ಲಿ ಮಾಣವನೇ ಹಲವು ಸ್ತ್ರೀಯರಾಗಲಿ ಅಥವಾ ಪುರುಷರಾಗಲಿ ಜೀವಿಗಳನ್ನು ಕೊಲ್ಲುತ್ತಾರೆ ಹೀಗೆ ಕೊಲೆಗಾರರಾಗುತ್ತಾರೆ, ರಕ್ತಸ್ಥಿಗ್ದ ಕೈಯುಳ್ಳವರಾಗಿ, ಹೊಡೆದಾಟಗಳಿಂದ ಮತ್ತು ಹಿಂಸೆಯಿಂದ ಕೂಡಿದವರಾಗಿ ಜೀವಿಗಳ ಬಗ್ಗೆ ದಯೆರಹಿತರಾಗುತ್ತಾರೆ, ಈ ಬಗೆಯ ಕರ್ಮಗಳಿಂದ ಕೃತ್ಯಗಳಿಂದಾಗಿ ಸಾವಿನ ನಂತರ ಶರೀರದಿಂದ ವಿಚ್ಛೇದರಾದ ನಂತರ ಆಪಾಯ, ದುರ್ಗತಿ, ವಿನಿಪಾತ(ಅದಃಪತನ) ಮತ್ತು ನಿರಯಗಳಲ್ಲಿ ಉದಯಿಸುತ್ತಾರೆ.ಒಂದು ವೇಳೆ ಅವರು ಆಪಾಯಗಳಲ್ಲಿ, ದುಗ್ಗತಿಯಲ್ಲಿ, ವಿನಿಪಾತದಲ್ಲಿ ಮತ್ತು ನಿರಯಗಳಲ್ಲಿ ಹುಟ್ಟದೆ ಪುನಃ ಮಾನವರಾಗಿ ಹುಟ್ಟಿದ್ದರೆ ಆತನು ಅಥವಾ ಅವಳು ಅಲ್ಪಾಯುಷ್ಯವನ್ನು ಹೊಂದಿ ಹುಟ್ಟಿರುತ್ತಾರೆ. ಈ ರೀತಿಯಲ್ಲಿ ಮಾಣವನೇ ಒಬ್ಬನು ಜೀವಿಗಳನ್ನು ಕೊಲ್ಲುತ್ತಾ ಕೊಲೆಗಾರನಾಗಿ ರಕ್ತಸ್ಥಿಗ್ದ ಕೈಯುಳ್ಳವನಾಗಿ, ಹೊಡೆತ ಹಾಗೂ ಹಿಂಸೆಯಿಂದ ಕೂಡಿದವನಾಗಿ ಜೀವಿಗಳ ಬಗ್ಗೆ ದಯೆರಹಿತನಾದರೆ ಹೀಗೆ ಅಲ್ಪಾಯುಷ್ಯದ ಜೀವನ ಪಡೆಯುತ್ತಾರೆ.</div><div class="separator" style="clear: both; text-align: center;"><br /></div><div class="separator" style="clear: both; text-align: center;"><br /></div><div class="separator" style="clear: both; text-align: center;">ಅದರೆ ಇಲ್ಲಿ ಮಾಣವಕನೇ ಹಲವು ಸ್ತ್ರೀ ಅಥವಾ ಪುರುಷರು ಜೀವ ಹತ್ಯೆಗಳನ್ನು ಮಾಡುವುದನ್ನು ತೊರೆದು ಜೀವಹತ್ಯೆಯಿಂದ ವಿರತರಾಗಿ ದಂಡಶಸ್ತ್ರಗಳನ್ನು ಪಕ್ಕಕ್ಕೆ ಇಟ್ಟು ದಯೆಯಿಂದ ಹಾಗೂ ಸಭ್ಯತೆಯಿಂದ ಕೂಡಿದವನಾಗಿ ಜೀವಿಗಳ ಬಗ್ಗೆ ಅನುಕಂಪೆಯುಳ್ಳವನಾಗಲು ಬದ್ದನಾಗಿರುತ್ತಾನೆ. ಈ ಬಗೆಯ ಕಮ್ಮಗಳನ್ನು ಆಚರಿಸಿದ್ದರಿಂದಾಗಿ ಮತ್ತು ನಿರ್ವಹಿಸಿದ್ದರಿಂದಾಗಿ ಆತನು ಅಥವಾ ಆಕೆಯು ಸಾವಿನ ನಂತರ ದೇಹದ ವಿಘಟನೆಯ ನಂತರ ಸುಗತಿಯಲ್ಲಿ ಜನಿಸುತ್ತಾನೆ. ಒಂದು ವೇಳೆ ಆತನು ಸಾವಿನ ನಂತರ ದೇಹದಿಂದ ಬೇರ್ಪಟ್ಟ ನಂತರ ಸುಗತಿಯಲ್ಲಿ ಜನಿಸದಿದ್ದರೇ ಮಾನವನಾಗಿಯೇ ಹುಟ್ಟಿದರೇ ಆತನು ಎಲ್ಲಿಯೇ ಹುಟ್ಟಲಿ ಆತನು ದೀಘರ್ಾಯುವಾಗಿಯೇ ಜೀವಿಸುವಂತವನಾಗುತ್ತಾನೆ. ಈ ರೀತಿಯಾಗಿ ಮಾಣವನೇ ಜೀವ ಹತ್ಯೆಗಳನ್ನು ಮಾಡುವುದನ್ನು ತೊರೆದು ಜೀವಹತ್ಯೆಯಿಂದ ವಿರತರಾಗಿ ದಂಡಶಸ್ತ್ರಗಳನ್ನು ಪಕ್ಕಕ್ಕೆ ಇಟ್ಟು ದಯೆಯಿಂದ ಹಾಗೂ ಸಭ್ಯತೆಯಿಂದ ಕೂಡಿದವರಾಗಿ ಜೀವಿಗಳ ಬಗ್ಗೆ ಅನುಕಂಪೆಯುಳ್ಳವನಾಗಿ ಬದ್ದನಾಗಿದ್ದರೇ ಅದು ದೀಘರ್ಾಯುತನಕ್ಕೆ ಕೊಂಡಯ್ಯುತ್ತದೆ.</div><div class="separator" style="clear: both; text-align: center;"><br /></div><div class="separator" style="clear: both; text-align: center;">.</div><div class="separator" style="clear: both; text-align: center;"><br /></div><div class="separator" style="clear: both; text-align: center;"> 'ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಜೀವಿಗಳ ಹಿಂಸೆಯಲ್ಲಿ ತೊಡಗುತ್ತಾರೆ. ಹೇಗೆಂದರೆ ಕೈಯಿಂದ ಹೆಂಟೆಯಿಂದ ದೊಣ್ಣೆಯಿಂದ ಅಥವಾ ಶಸ್ತ್ರದಿಂದ ಹಿಂಸೆ ಮಾಡುತ್ತಾರೆ. ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟುತ್ತಾರೆ. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ಎಲ್ಲೇ ಹುಟ್ಟಲಿ ರೋಗಗಳಿಂದ ಕೂಡಿರುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಜೀವಿಗಳ ಹಿಂಸೆಯಲ್ಲಿ ತೊಡಗಿದ್ದರೇ ಹೇಗೆಂದರೆ ಕೈಯಿಂದ ಹೆಂಟೆಯಿಂದ ದೊಣ್ಣೆಯಿಂದ ಅಥವಾ ಶಸ್ತ್ರದಿಂದ ಹಿಂಸೆ ಮಾಡಿದ್ದರೇ ಈ ಬಗೆಯಲ್ಲಿ ರೋಗಗಳಿಂದ ಕೂಡಿರುತ್ತಾರೆ..</div><div class="separator" style="clear: both; text-align: center;"><br /></div><div class="separator" style="clear: both; text-align: center;">'ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಜೀವಿಗಳ ಹಿಂಸೆಯಲ್ಲಿ ತೊಡಗುವುದಿಲ್ಲ. ಹೇಗೆಂದರೆ ಕೈಯಿಂದ ಹೆಂಟೆಯಿಂದ ದೊಣ್ಣೆಯಿಂದ ಅಥವಾ ಶಸ್ತ್ರದಿಂದ ಹಿಂಸೆ ಮಾಡುವುದಿಲ್ಲ. ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಉದಯಿಸುವರು. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ಎಲ್ಲೇ ಹುಟ್ಟಲಿ ಆರೋಗ್ಯಗಳಿಂದ ಕೂಡಿರುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಜೀವಿಗಳ ಹಿಂಸೆಯಲ್ಲಿ ತೊಡಗದಿದ್ದರೇ ಹೇಗೆಂದರೆ ಕೈಯಿಂದ ಹೆಂಟೆಯಿಂದ ದೊಣ್ಣೆಯಿಂದ ಅಥವಾ ಶಸ್ತ್ರದಿಂದ ಹಿಂಸೆ ಮಾಡದಿದ್ದರೇ ಈ ಬಗೆಯಲ್ಲಿ ಆರೋಗ್ಯಗಳಿಂದ ಕೂಡಿರುತ್ತಾರೆ..</div><div class="separator" style="clear: both; text-align: center;"><br /></div><div class="separator" style="clear: both; text-align: center;">ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಕ್ರೋಧ ಹಾಗೂ ಕೆರಳುವ ಸ್ವಭಾವದಿಂದ ಕೂಡಿರುತ್ತಾರೆ. ಅವರಿಗೆ ಸ್ವಲ್ಪ ಟೀಕೆ ಮಾಡಿದರೂ ಸಹಾ ರೇಗಿಬಿಡುತ್ತಾರೆ, ಕುಪಿತರಾಗುತ್ತಾರೆ, ದ್ವೇಶವುಳ್ಳವರಾಗುತ್ತಾರೆ, ಮತ್ತು ಮುನಿಯುತ್ತಾರೆ, ಮತ್ತು ಕೋಪ, ದ್ವೇಶ ಮತ್ತು ಕಹಿತನವನ್ನು ವ್ಯಕ್ತಪಡಿಸುತ್ತಾರೆ. ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟುತ್ತಾರೆ. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ಎಲ್ಲೇ ಹುಟ್ಟಲಿ ಕುರೂಪಿಯಾಗಿ, ದುವರ್ಣದವನಾಗಿ ಹುಟ್ಟುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಕುರೂಪಿಗಳಾಗಿ, ದುವರ್ಣದವರಾಗಿ ಹುಟ್ಟುತ್ತಾರೆ, ಅದಕ್ಕೆ ಕಾರಣ ಅವರು ಕ್ರೋಧ ಹಾಗೂ ಕೆರಳುವ ಸ್ವಭಾವದಿಂದ ಕೂಡಿರುತ್ತಾರೆ. ಅವರಿಗೆ ಸ್ವಲ್ಪ ಟೀಕೆ ಮಾಡಿದರೂ ಸಹಾ ರೇಗಿಬಿಡುತ್ತಾರೆ, ಕುಪಿತರಾಗುತ್ತಾರೆ, ದ್ವೇಶವುಳ್ಳವರಾಗುತ್ತಾರೆ, ಮತ್ತು ಮುನಿಯುತ್ತಾರೆ, ಮತ್ತು ಕೋಪ, ದ್ವೇಶ ಮತ್ತು ಕಹಿತನವನ್ನು ವ್ಯಕ್ತಪಡಿಸುತ್ತಾರೆ</div><div class="separator" style="clear: both; text-align: center;"><br /></div><div class="separator" style="clear: both; text-align: center;">ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಕ್ರೋಧ ಹಾಗೂ ಕೆರಳುವ ಸ್ವಭಾವದಿಂದ ಕೂಡಿರುವುದಿಲ್ಲ, ಅವರಿಗೆ ಬಹಳಷ್ಟು ಟೀಕೆ ಮಾಡಿದರೂ ಸಹಾ ರೇಗಿಬಿಡುವುದಿಲ್ಲ, ಕುಪಿತರಾಗುವುದಿಲ್ಲ, ದ್ವೇಶವುಳ್ಳವರಾಗುವುದಿಲ್ಲ, ಮತ್ತು ಮುನಿಯುವುದಿಲ್ಲ, ಮತ್ತು ಕೋಪ, ದ್ವೇಶ ಮತ್ತು ಕಹಿತನವನ್ನು ವ್ಯಕ್ತಪಡಿಸುವುದಿಲ್ಲ. ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಉದಯಿಸುವರು. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ಆತನು ಎಲ್ಲೇ ಹುಟ್ಟಲಿ ಸುರೂಪಿಯಾಗಿ, ಸುವರ್ಣದವನಾಗಿ ಹುಟ್ಟುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಸುರೂಪಿಗಳಾಗಿ, ಸುವರ್ಣದವರಾಗಿ ಹುಟ್ಟುತ್ತಾರೆ, ಅದಕ್ಕೆ ಕಾರಣ ಕ್ರೋಧ ಹಾಗೂ ಕೆರಳುವ ಸ್ವಭಾವದಿಂದ ಕೂಡಿರುವುದಿಲ್ಲ, ಅವರಿಗೆ ಬಹಳಷ್ಟು ಟೀಕೆ ಮಾಡಿದರೂ ಸಹಾ ರೇಗಿಬಿಡುವುದಿಲ್ಲ, ಕುಪಿತರಾಗುವುದಿಲ್ಲ, ದ್ವೇಶವುಳ್ಳವರಾಗುವುದಿಲ್ಲ, ಮತ್ತು ಮುನಿಯುವುದಿಲ್ಲ, ಮತ್ತು ಕೋಪ, ದ್ವೇಶ ಮತ್ತು ಕಹಿತನವನ್ನು ವ್ಯಕ್ತಪಡಿಸುವುದಿಲ್ಲ.</div><div class="separator" style="clear: both; text-align: center;"><br /></div><div class="separator" style="clear: both; text-align: center;"> ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಈಷರ್ೆ ಮನೋಭಾವದಿಂದ ಕೂಡಿರುತ್ತಾರೆ. ಅವರು ಪರರಿಗೆ ಸಿಗುವ ಲಾಭ, ಸತ್ಕಾರ, ಗೌರವ, ವಂದನೆ, ಪೂಜೆಗಳಿಗೆ ಈಷರ್ೆಪಡುತ್ತಾರೆ, ಅದನ್ನು ಸಹಿಸುವುದಿಲ್ಲ, ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟುತ್ತಾರೆ. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ಎಲ್ಲೇ ಹುಟ್ಟಲಿ ಪ್ರಭಾವರಹಿತನಾಗಿರುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಪ್ರಭಾವರಹಿತನಾಗಿರುತ್ತಾರೆ, ಅದಕ್ಕೆ ಕಾರಣ ಅವರು ಈಷರ್ೆ ಮನೋಭಾವದಿಂದ ಕೂಡಿರುತ್ತಾರೆ. ಅವರು ಪರರಿಗೆ ಸಿಗುವ ಲಾಭ, ಸತ್ಕಾರ, ಗೌರವ, ವಂದನೆ, ಪೂಜೆಗಳಿಗೆ ಈಷರ್ೆಪಡುತ್ತಾರೆ, ಅದನ್ನು ಸಹಿಸದೆ ಹೋಗಿರುತ್ತಾರೆ.</div><div class="separator" style="clear: both; text-align: center;"><br /></div><div class="separator" style="clear: both; text-align: center;"><br /></div><div class="separator" style="clear: both; text-align: center;"><br /></div><div class="separator" style="clear: both; text-align: center;">ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಈಷರ್ೆ ಮನೋಭಾವದಿಂದ ಕೂಡಿರುವುದಿಲ್ಲ. ಅವರು ಪರರಿಗೆ ಸಿಗುವ ಲಾಭ, ಸತ್ಕಾರ, ಗೌರವ, ವಂದನೆ, ಪೂಜೆಗಳಿಗೆ ಆನಂದಪಡುತ್ತಾರೆ, ಅದನ್ನು ಕಂಡು ಸಂಕಟ ಪಡುವುದಿಲ್ಲ,ಮುದಿತಾ ಮನೋಭಾವದಿಂದಿರುತ್ತಾರೆ. ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಉದಯಿಸುವರು. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಹುಟ್ಟದಿದ್ದರೇ, ಮಾನವನಾಗಿ ಹುಟ್ಟಿದ್ದರೇ ಆತನು ಎಲ್ಲೇ ಹುಟ್ಟಲಿ ಪ್ರಭಾವವುಳ್ಳವನಾಗಿರುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಪ್ರಭಾವವುಳ್ಳವರಾಗಿರುತ್ತಾರೆ, ಅದಕ್ಕೆ ಕಾರಣ ಅವರು ಈಷರ್ೆ ಮನೋಭಾವದಿಂದ ಕೂಡಿರುವುದಿಲ್ಲ. ಅವರು ಪರರಿಗೆ ಸಿಗುವ ಲಾಭ, ಸತ್ಕಾರ, ಗೌರವ, ವಂದನೆ, ಪೂಜೆಗಳಿಗೆ ಆನಂದಪಡುತ್ತಾರೆ, ಅದನ್ನು ಕಂಡು ಸಂಕಟ ಪಡುವುದಿಲ್ಲ,ಮುದಿತಾ ಮನೋಭಾವದಿಂದಿರುತ್ತಾರೆ</div><div class="separator" style="clear: both; text-align: center;"><br /></div><div class="separator" style="clear: both; text-align: center;"><br /></div><div class="separator" style="clear: both; text-align: center;"> ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಸಮಣ, ಬ್ರಾಹ್ಮಣರಿಗೆ, ಭಿಕ್ಖುಗಳಿಗೆ ಅನ್ನಪಾನಿಯಗಳನ್ನು, ವಸ್ತ್ರಗಳನ್ನು, ಸಾರೋಟು(ವಾಹನ)ಗಳನ್ನು, ಮಾಲೆಗಳನ್ನು, ಗಂಧಗಳನ್ನು, ಲೇಪನಗಳನ್ನು, ಹಾಸಿಗೆಗಳನ್ನು, ಮನೆಗಳನ್ನು, ದೀಪಗಳನ್ನು ದಾನವಾಗಿ ನೀಡುವುದಿಲ್ಲ. ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟುತ್ತಾರೆ. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ಎಲ್ಲೇ ಹುಟ್ಟಲಿ ಆತನು ಬಡವನಾಗಿರುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಬಡವರಾಗಿರುತ್ತಾರೆ, ಅದಕ್ಕೆ ಕಾರಣ ಅವರು ಪುರುಷರು ಸಮಣ, ಬ್ರಾಹ್ಮಣರಿಗೆ, ಭಿಕ್ಖುಗಳಿಗೆ ಅನ್ನಪಾನಿಯಗಳನ್ನು, ವಸ್ತ್ರಗಳನ್ನು, ಸಾರೋಟು(ವಾಹನ)ಗಳನ್ನು, ಮಾಲಾ, ಗಂಧಗಳನ್ನು, ಲೇಪನಗಳನ್ನು, ಹಾಸಿಗೆಗಳನ್ನು, ಮನೆಗಳನ್ನು, ದೀಪಗಳನ್ನು ದಾನವಾಗಿ ನೀಡಿರುವುದಿಲ್ಲ. </div><div class="separator" style="clear: both; text-align: center;"><br /></div><div class="separator" style="clear: both; text-align: center;"> ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಸಮಣ, ಬ್ರಾಹ್ಮಣರಿಗೆ, ಭಿಕ್ಖುಗಳಿಗೆ ಅನ್ನಪಾನಿಯಗಳನ್ನು, ವಸ್ತ್ರಗಳನ್ನು, ಸಾರೋಟು(ವಾಹನ)ಗಳನ್ನು, ಮಾಲೆಗಳನ್ನು, ಗಂಧಗಳನ್ನು, ಲೇಪನಗಳನ್ನು, ಹಾಸಿಗೆಗಳನ್ನು, ಮನೆಗಳನ್ನು, ದೀಪಗಳನ್ನು ದಾನವಾಗಿ ನೀಡುತ್ತಾರೆ. ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಉದಯಿಸುವರು. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ಎಲ್ಲೇ ಹುಟ್ಟಲಿ ಆತನು ಶ್ರೀಮಂತನಾಗಿರುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಶ್ರೀಮಂತರಾಗಿರುತ್ತಾರೆ, ಅದಕ್ಕೆ ಕಾರಣ ಅವರು ಸಮಣ, ಬ್ರಾಹ್ಮಣರಿಗೆ, ಭಿಕ್ಖುಗಳಿಗೆ ಅನ್ನಪಾನಿಯಗಳನ್ನು, ವಸ್ತ್ರಗಳನ್ನು, ಸಾರೋಟು(ವಾಹನ)ಗಳನ್ನು, ಮಾಲಾ, ಗಂಧಗಳನ್ನು, ಲೇಪನಗಳನ್ನು, ಹಾಸಿಗೆಗಳನ್ನು, ಮನೆಗಳನ್ನು, ದೀಪಗಳನ್ನು ದಾನವಾಗಿ ನೀಡಿರುತ್ತಾರೆ. </div><div class="separator" style="clear: both; text-align: center;"><br /></div><div class="separator" style="clear: both; text-align: center;"> ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಹಠವಾದಿಯಾಗಿರುತ್ತಾರೆ, ಮತ್ತು ಅಹಂಕಾರಿಯಾಗಿರುತ್ತಾರೆ; ಆತನು ಗೌರವಕ್ಕೆ ಅರ್ಹರಾಗಿರುವವರಿಗೆ ಗೌರವ ನೀಡುವುದಿಲ್ಲ, ಯಾರ ಬಳಿಯಲ್ಲಿ ಎದ್ದು ನಿಂತು ಗೌರವಿಸಬೇಕೋ ಅಂತಹವರ ಬಳಿ ಎದ್ದು ನಿಂತು ಗೌರವಿಸಲಾರರು, ಯಾರಿಗೆ ಆಸನವನ್ನು ನೀಡಿ ಗೌರವಿಸಬೇಕೋ ಅಂತಹವರಿಗೆ ಆಸನವನ್ನು ನೀಡಿ ಗೌರವಿಸಲಾರನು, ಯಾರಿಗೆ ದಾರಿಯನ್ನು ಬಿಟ್ಟುಕೊಡಬೇಕೊ ಅಂತಹವರಿಗೆ ದಾರಿಯನ್ನು ಬಿಟ್ಟುಕೊಡಲಾರರು, ಮತ್ತು ಯಾರಿಗೆ ಸತ್ಕಾರ ಮಾಡಬೇಕೋ ಅಂತಹವರಿಗೆ ಸತ್ಕಾರ ಮಾಡಲಾರರು, ಯಾರಿಗೆ ಮಯರ್ಾದೆ ನೀಡಬೇಕೊ ಅಂತಹವರಿಗೆ ಮಯರ್ಾದೆ ನೀಡಲಾರರು, ಯಾರಿಗೆ ಮಾನ್ಯತೆ ನೀಡಬೇಕೊ ಅಂತಹವರಿಗೆ ಮಾನ್ಯತೆ ನೀಡಲಾರರು, ಯಾರು ಪೂಜೆಗೆ ಅರ್ಹರೊ ಅಂತಹವರಿಗೆ ಪೂಜಿಸಲಾರರು, ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟುತ್ತಾರೆ. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ನೀಚಕುಲದಲ್ಲಿ ಹುಟ್ಟುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ನೀಚಕುಲದಲ್ಲಿ ಹುಟ್ಟುತ್ತಾರೆ, ಅದಕ್ಕೆ ಕಾರಣ ಅವರು ಹಠವಾದಿಯಾಗಿದ್ದರು, ಮತ್ತು ಅಹಂಕಾರಿಯಾಗಿದ್ದರು; ಆತನು ಗೌರವಕ್ಕೆ ಅರ್ಹರಾಗಿರುವವರಿಗೆ ಗೌರವ ನೀಡಿರಲಿಲ್ಲ, ಯಾರ ಬಳಿಯಲ್ಲಿ ಎದ್ದು ನಿಂತು ಗೌರವಿಸಬೇಕೋ ಅಂತಹವರ ಬಳಿ ಎದ್ದು ನಿಂತು ಗೌರವಿಸಲಿಲ್ಲ, ಯಾರಿಗೆ ಆಸನವನ್ನು ನೀಡಿ ಗೌರವಿಸಬೇಕೋ ಅಂತಹವರಿಗೆ ಆಸನವನ್ನು ನೀಡಿ ಗೌರವಿಸಲಿಲ್ಲ, ಯಾರಿಗೆ ದಾರಿಯನ್ನು ಬಿಟ್ಟುಕೊಡಬೇಕೊ ಅಂತಹವರಿಗೆ ದಾರಿಯನ್ನು ಬಿಟ್ಟುಕೊಟ್ಟಿರಲಿಲ್ಲ, ಮತ್ತು ಯಾರಿಗೆ ಸತ್ಕಾರ ಮಾಡಬೇಕೋ ಅಂತಹವರಿಗೆ ಸತ್ಕಾರ ಮಾಡಿರಲಿಲ್ಲ, ಯಾರಿಗೆ ಮಯರ್ಾದೆ ನೀಡಬೇಕೊ ಅಂತಹವರಿಗೆ ಮಯರ್ಾದೆ ನೀಡಿರಲಿಲ್ಲ, ಯಾರಿಗೆ ಮಾನ್ಯತೆ ನೀಡಬೇಕೊ ಅಂತಹವರಿಗೆ ಮಾನ್ಯತೆ ನೀಡಿರಲಿಲ್ಲ, ಯಾರು ಪೂಜೆಗೆ ಅರ್ಹರೊ ಅಂತಹವರಿಗೆ ಪೂಜಿಸಿರಲಿಲ್ಲ.</div><div class="separator" style="clear: both; text-align: center;"><br /></div><div class="separator" style="clear: both; text-align: center;"> ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಹಠವಾದಿಯಾಗಿರುವುದಿಲ್ಲ, ಮತ್ತು ಅಹಂಕಾರಿಯಾಗಿರುವುದಿಲ್ಲ; ಆತನು ಗೌರವಕ್ಕೆ ಅರ್ಹರಾಗಿರುವವರಿಗೆ ಗೌರವ ನೀಡುತ್ತಾನೆ, ಯಾರ ಬಳಿಯಲ್ಲಿ ಎದ್ದು ನಿಂತು ಗೌರವಿಸಬೇಕೋ ಅಂತಹವರ ಬಳಿ ಎದ್ದು ನಿಂತು ಗೌರವಿಸುತ್ತಾನೆ, ಯಾರಿಗೆ ಆಸನವನ್ನು ನೀಡಿ ಗೌರವಿಸಬೇಕೋ ಅಂತಹವರಿಗೆ ಆಸನವನ್ನು ನೀಡಿ ಗೌರವಿಸುತ್ತಾನೆ, ಯಾರಿಗೆ ದಾರಿಯನ್ನು ಬಿಟ್ಟುಕೊಡಬೇಕೊ ಅಂತಹವರಿಗೆ ದಾರಿಯನ್ನು ಬಿಟ್ಟುಕೊಡುತ್ತಾನೆ, ಮತ್ತು ಯಾರಿಗೆ ಸತ್ಕಾರ ಮಾಡಬೇಕೋ ಅಂತಹವರಿಗೆ ಸತ್ಕಾರ ಮಾಡುತ್ತಾನೆ, ಯಾರಿಗೆ ಮಯರ್ಾದೆ ನೀಡಬೇಕೊ ಅಂತಹವರಿಗೆ ಮಯರ್ಾದೆ ನೀಡುತ್ತಾನೆ, ಯಾರಿಗೆ ಮಾನ್ಯತೆ ನೀಡಬೇಕೊ ಅಂತಹವರಿಗೆ ಮಾನ್ಯತೆ ನೀಡುತ್ತಾನೆ, ಯಾರು ಪೂಜೆಗೆ ಅರ್ಹರೊ ಅಂತಹವರಿಗೆ ಪೂಜಿಸುತ್ತಾನೆ, ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಉದಯಿಸುವರು. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ಮಾನವನಾಗಿ ಹುಟ್ಟಿದ್ದರೇ ,ಆತನು ಉಚ್ಚಕುಲದಲ್ಲಿ ಹುಟ್ಟುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಉಚ್ಚಕುಲದಲ್ಲಿ ಹುಟ್ಟುತ್ತಾರೆ, ಅದಕ್ಕೆ ಕಾರಣ ಅವರು ಹಠವಾದಿಯಾಗಿಲಿಲ್ಲ, ಮತ್ತು ಅಹಂಕಾರಿಯಾಗಿರಲಿಲ್ಲ; ಆತನು ಗೌರವಕ್ಕೆ ಅರ್ಹರಾಗಿರುವವರಿಗೆ ಗೌರವ ನೀಡಿರುತ್ತಾನೆ, ಯಾರ ಬಳಿಯಲ್ಲಿ ಎದ್ದು ನಿಂತು ಗೌರವಿಸಬೇಕೋ ಅಂತಹವರ ಬಳಿ ಎದ್ದು ನಿಂತು ಗೌರವಿಸಿರುತ್ತಾನೆ, ಯಾರಿಗೆ ಆಸನವನ್ನು ನೀಡಿ ಗೌರವಿಸಬೇಕೋ ಅಂತಹವರಿಗೆ ಆಸನವನ್ನು ನೀಡಿ ಗೌರವಿಸಿರುತ್ತಾನೆ, ಯಾರಿಗೆ ದಾರಿಯನ್ನು ಬಿಟ್ಟುಕೊಡಬೇಕೊ ಅಂತಹವರಿಗೆ ದಾರಿಯನ್ನು ಬಿಟ್ಟುಕೊಟ್ಟಿರುತ್ತಾನೆ, ಮತ್ತು ಯಾರಿಗೆ ಸತ್ಕಾರ ಮಾಡಬೇಕೋ ಅಂತಹವರಿಗೆ ಸತ್ಕಾರ ಮಾಡಿರುತ್ತಾನೆ, ಯಾರಿಗೆ ಮಯರ್ಾದೆ ನೀಡಬೇಕೊ ಅಂತಹವರಿಗೆ ಮಯರ್ಾದೆ ನೀಡಿರುತ್ತಾನೆ, ಯಾರಿಗೆ ಮಾನ್ಯತೆ ನೀಡಬೇಕೊ ಅಂತಹವರಿಗೆ ಮಾನ್ಯತೆ ನೀಡಿರುತ್ತಾರೆ, ಯಾರು ಪೂಜೆಗೆ ಅರ್ಹರೊ ಅಂತಹವರಿಗೆ ಪೂಜಿಸಿರುತ್ತಾನೆ.</div><div class="separator" style="clear: both; text-align: center;"> ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಸಮಣರ ಬಳಿಗೆ ಅಥವಾ ಬ್ರಾಹ್ಮಣರ ಬಳಿಗೆ ಅಥವಾ ಜ್ಞಾನಿಗಳ ಬಳಿಗೆ ಹೋಗಿ ಹೀಗೆ ಪ್ರಶ್ನಿಸಲಿಲ್ಲ ; ಭಂತೆ ಯಾವುದು ಕುಶಲ ? ಯಾವುದು ಅಕುಶಲ ? ಯಾವುದು ನಿಂದನೀಯ ? ಯಾವುದು ನಿಂದಾತೀತ ? ಯಾವುದು ಅಭ್ಯಾಸಿಸಬೇಕು(ವಿಕಸಿಸಬೇಕು) ? ಯಾವುದು ಅಭ್ಯಾಸಿಸಬಾರದು?(ವಿಕಸಿಸಬಾರದು) ? ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ನೋವನ್ನು ಮತ್ತು ದುಃಖವನ್ನು ನೀಡುತ್ತದೆ ?.ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ಸುಖವನ್ನು ಹಾಗೂ ಕ್ಷೇಮವನ್ನು ನೀಡುತ್ತದೆ.? ಈ ಬಗೆಯ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟುತ್ತಾರೆ. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ದಡ್ಡನಾಗಿ(ದುಪ್ರಜ್ಞನಾಗಿ) ಹುಟ್ಟುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಮತ್ತು ಪುರುಷರು ದುಪ್ರ್ರಜ್ಙನಾಗಿ ಹುಟ್ಟುತ್ತಾರೆ. ಇದಕ್ಕೆ ಕಾರಣ ಅವರು ಜ್ಞಾನಿಗಳ ಬಳಿಗೆ ಅಂತಹ ಸಮಣ ಬ್ರಾಹ್ಮಣರ ಬಳಿಗೆ ಹೋಗಿ ಹೀಗೆ ಪ್ರಶ್ನಿಸಿರಲಿಲ್ಲ ; ಭಂತೆ ಯಾವುದು ಕುಶಲ ? ಯಾವುದು ಅಕುಶಲ ? ಯಾವುದು ನಿಂದನೀಯ ? ಯಾವುದು ನಿಂದಾತೀತ ? ಯಾವುದು ಅಭ್ಯಾಸಿಸಬೇಕು(ವಿಕಸಿಸಬೇಕು) ? ಯಾವುದು ಅಭ್ಯಾಸಿಸಬಾರದು?(ವಿಕಸಿಸಬಾರದು) ? ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ನೋವನ್ನು ಮತ್ತು ದುಃಖವನ್ನು ನೀಡುತ್ತದೆ ?.ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ಸುಖವನ್ನು ಹಾಗೂ ಕ್ಷೇಮವನ್ನು ನೀಡುತ್ತದೆ.? ಎಂದು.</div><div class="separator" style="clear: both; text-align: center;"><br /></div><div class="separator" style="clear: both; text-align: center;">ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಸಮಣರ ಬಳಿಗೆ ಅಥವಾ ಬ್ರಾಹ್ಮಣರ ಬಳಿಗೆ ಅಥವಾ ಜ್ಞಾನಿಗಳ ಬಳಿಗೆ ಹೋಗಿ ಹೀಗೆ ಪ್ರಶ್ನಿಸುತ್ತಾರೆ ; </div><div class="separator" style="clear: both; text-align: center;"><b>ಭಂತೆ ಯಾವುದು ಕುಶಲ ? </b></div><div class="separator" style="clear: both; text-align: center;"><b>ಯಾವುದು ಅಕುಶಲ ?</b></div><div class="separator" style="clear: both; text-align: center;"><b> ಯಾವುದು ನಿಂದನೀಯ ? </b></div><div class="separator" style="clear: both; text-align: center;"><b>ಯಾವುದು ನಿಂದಾತೀತ ? </b></div><div class="separator" style="clear: both; text-align: center;"><b>ಯಾವುದು ಅಭ್ಯಾಸಿಸಬೇಕು(ವಿಕಸಿಸಬೇಕು) ? </b></div><div class="separator" style="clear: both; text-align: center;"><b>ಯಾವುದು ಅಭ್ಯಾಸಿಸಬಾರದು?(ವಿಕಸಿಸಬಾರದು) ?</b></div><div class="separator" style="clear: both; text-align: center;"><b> ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ನೋವನ್ನು ಮತ್ತು ದುಃಖವನ್ನು ನೀಡುತ್ತದೆ ?.</b></div><div class="separator" style="clear: both; text-align: center;"><b>ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ಸುಖವನ್ನು ಹಾಗೂ ಕ್ಷೇಮವನ್ನು ನೀಡುತ್ತದೆ.?</b> ಈ ಬಗೆಯ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಉದಯಿಸುವರು. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ , ಆತನು ಮಹಾಪ್ರಾಜ್ಞನಾಗಿ (ಬುದ್ಧಿವಂತನಾಗಿ) ಹುಟ್ಟುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಮತ್ತು ಪುರುಷರು ಮಹಾಪ್ರಜ್ಞಾರಾಗಿ ಹುಟ್ಟುತ್ತಾರೆ. ಇದಕ್ಕೆ ಕಾರಣ ಅವರು ಜ್ಞಾನಿಗಳ ಬಳಿಗೆ ಅಂತಹ ಸಮಣ ಬ್ರಾಹ್ಮಣರ ಬಳಿಗೆ ಹೋಗಿ ಹೀಗೆ ಪ್ರಶ್ನಿಸಿದ್ದರು ; </div><div class="separator" style="clear: both; text-align: center;">ಭಂತೆ ಯಾವುದು ಕುಶಲ ? </div><div class="separator" style="clear: both; text-align: center;">ಯಾವುದು ಅಕುಶಲ ? </div><div class="separator" style="clear: both; text-align: center;">ಯಾವುದು ನಿಂದನೀಯ ? </div><div class="separator" style="clear: both; text-align: center;">ಯಾವುದು ನಿಂದಾತೀತ ? </div><div class="separator" style="clear: both; text-align: center;">ಯಾವುದು ಅಭ್ಯಾಸಿಸಬೇಕು(ವಿಕಸಿಸಬೇಕು) ? </div><div class="separator" style="clear: both; text-align: center;">ಯಾವುದು ಅಭ್ಯಾಸಿಸಬಾರದು?(ವಿಕಸಿಸಬಾರದು) ? </div><div class="separator" style="clear: both; text-align: center;">ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ನೋವನ್ನು ಮತ್ತು ದುಃಖವನ್ನು ನೀಡುತ್ತದೆ ?.</div><div class="separator" style="clear: both; text-align: center;">ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ಸುಖವನ್ನು ಹಾಗೂ ಕ್ಷೇಮವನ್ನು ನೀಡುತ್ತದೆ.? ಎಂದು.</div><div class="separator" style="clear: both; text-align: center;"><br /></div><div class="separator" style="clear: both; text-align: center;">ಹೀಗೆ ಮಾಣವನೇ ಈ ಬಗೆಯಲ್ಲಿ ಜನರು ಜೀವಿಸಿ ಹೀಗಾಗಿರುವರು. ಅಲ್ಪಯುಷ್ಯನ ಹಾದಿಯು ಜನರನ್ನು ಅಲ್ಪಯುಷ್ಯನನ್ನಾಗಿಸುತ್ತದೆ. ದೀಘರ್ಾಯುಸ್ಸಿನ ಹಾದಿಯು ಜನರನ್ನು ದೀಘರ್ಾಯುಸ್ಸನ್ನಾಗಿ ಮಾಡುತ್ತದೆ. ರೋಗಗಳ ಹಾದಿಯಲ್ಲಿ ಹೋಗುವವರು ರೋಗಿಗಳಾಗುತ್ತಾರೆ, ಆರೋಗ್ಯದ ಹಾದಿಯು ಜನರನ್ನು ಆರೋಗ್ಯನನ್ನಾಗಿಸಿದೆ, ಈ ಬಗೆಯ ಹಾದಿಯಲ್ಲಿ ಜೀವಿಸಿ ಕುರೂಪಿಗಳಾಗಿರುವರು, ಈ ಬಗೆಯ ಹಾದಿಯಲ್ಲಿ ಜೀವಿಸಿದಾಗ ಸುರೂಪಿಗಳಾಗುವರು. ಈ ಬಗೆಯ ಹಾದಿಯಲ್ಲಿ ಸಾಗಿದಾಗ ಪ್ರಭಾವರಹಿತರು ಆಗುವರು. ಈ ಬಗೆಯ ಹಾದಿಯಲ್ಲಿ ಜೀವಿಸಿದಾಗ ಪ್ರಭಾವಶಾಲಿಗಳಾಗುವರು. ಬಡತನದ ಹಾದಿಯು ಜನರನ್ನು ಬಡವರನ್ನಾಗಿಯು, ಸಿರಿತನದ ಹಾದಿಯು ಜನರನ್ನು ಸಿರಿವಂತರನ್ನಾಗಿಯು ಹಾಗೆಯೇ ನೀಚಕುಲದ ಹಾದಿಯು ಜನರನ್ನು ನೀಚರನ್ನಾಗಿಯು, ಉಚ್ಚಕುಲದ ಹಾದಿಯು ಜನರನ್ನು ಉಚ್ಚರನ್ನಾಗಿಯು ಮತ್ತು ದಡ್ಡತನದ ಹಾದಿಯು ಜನರನ್ನು ದಡ್ಡರನ್ನಾಗಿಯು ಮತ್ತು ಮಹಾಪ್ರಜ್ಞರ ಹಾದಿಯು ಜನರನ್ನು ಮಹಪ್ರಜ್ಞಾರನ್ನಾಗಿಯು ಮಾಡುತ್ತದೆ.</div><div class="separator" style="clear: both; text-align: center;"><br /></div><div class="separator" style="clear: both; text-align: center;">ಜೀವಿಗಳು ತಮ್ಮ ಕಮ್ಮಗಳಿಗೆ ತಾವೆ ಒಡೆಯರು</div><div class="separator" style="clear: both; text-align: center;">ತಮ್ಮ ಕಮ್ಮಕ್ಕೆ ತಾವೇ ಉತ್ತರಾಧಿಕಾರಿಗಳು</div><div class="separator" style="clear: both; text-align: center;">ತಮ್ಮ ಕಮ್ಮಗಳಿಂದಲೇ ಅವರು ಜನಿಸುವರು</div><div class="separator" style="clear: both; text-align: center;">ಕಮ್ಮಗಳೇ ಬಂಧುವು</div><div class="separator" style="clear: both; text-align: center;">ಕಮ್ಮಗಳೆ ಅವರ ಶರಣು</div><div class="separator" style="clear: both; text-align: center;">ಕಮ್ಮದಿಂದಲೇ ಹೀನ ಹಾಗೂ ಮಹಾನ್ ಆಗುವರು</div><div class="separator" style="clear: both; text-align: center;"><br /></div><div class="separator" style="clear: both; text-align: center;">ಯಾವಗ ಭಗವಾನರು ಹೀಗೆ ನುಡಿದರೊ ಆಗ ತೊದೆಯ್ಯನ ಮಗನಾದ ಸುಭನು ಭಗವಾನರಿಗೆ ಹೀಗೆ ನುಡಿದನು. : ಭವ್ಯವಾಗಿ ನುಡಿದಿರಿ ಗೋತಮರೇ ! ಗೋತಮರೇ ಅತುತ್ತಮವಾಗಿ ನುಡಿದಿರಿ! </div><div class="separator" style="clear: both; text-align: center;">ಧಮ್ಮವು ಭಗವಾನರಿಂದ ಅನೇಕ ವಿಧದಲ್ಲಿ ಸ್ಪಷ್ಟಿಕರಣಗೊಂಡಿತು. </div><div class="separator" style="clear: both; text-align: center;">ಹೇಗೆಂದರೇ ತಲೆಕೆಳಕಾಗಿರುವುದನ್ನು ಸರಿಯಾಗಿ ನಿಲ್ಲಿಸಿದಂತೆ, </div><div class="separator" style="clear: both; text-align: center;">ಅಡಗಿರುವುದನ್ನು ಅನಾವರಣಗೊಳಿಸಿದಂತೆ, </div><div class="separator" style="clear: both; text-align: center;">ದಾರಿ ತಪ್ಪಿದವನಿಗೆ ಮಾರ್ಗ ತೊರಿಸಿದಂತೆ, </div><div class="separator" style="clear: both; text-align: center;">ಕತ್ತಲೆಯಲ್ಲಿರುವವನಿಗೆ ಪ್ರದೀಪವನ್ನು ಹಿಡಿದು ರೂಪಗಳನ್ನು ತೋರಿಸಿದಂತೆ, </div><div class="separator" style="clear: both; text-align: center;"><br /></div><div class="separator" style="clear: both; text-align: center;">ಭಗವಾನರು ಅನೇಕ ರೀತಿಯಲ್ಲಿ ಧಮ್ಮವನ್ನು ಸ್ಪಷ್ಟಿಕರಿಸಿದ್ದಾರೆ, </div><div class="separator" style="clear: both; text-align: center;">ನಾನು ಭಗವಾನ ಗೋತಮರ ಶರಣು ಹೋಗುವೆನು, </div><div class="separator" style="clear: both; text-align: center;">ಅವರ ಅಧ್ಭುತವಾದ ಧಮ್ಮಕ್ಕೆ ಶರಣು ಹೋಗುವೆನು, </div><div class="separator" style="clear: both; text-align: center;">ಅವರ ಅಸಮಾನ ಸಂಘಕ್ಕೂ ಶರಣು ಹೋಗುವೆನು.</div><div class="separator" style="clear: both; text-align: center;">ಭಗವಾನರು ನನಗೆ ಅವರಲ್ಲಿ ಜೀವನ ಪರ್ಯಂತ ಶರಣು ಹೋದಂತಹ ಉಪಾಸಕನೆಂದು ಪರಿಗಣಿಸಲಿ</div><div class="separator" style="clear: both; text-align: center;"><br /></div><div class="separator" style="clear: both; text-align: center;"><br /></div><div class="separator" style="clear: both; text-align: center;">ಇಲ್ಲಿಗೆ ಕಮ್ಮವಿಪಾಕದ ವಿಶ್ಲೇಷಣೆಯ ಚಿಕ್ಕ ಸುತ್ತವು ಸಮಪ್ತಿಯಾಯಿತು.</div><div class="separator" style="clear: both; text-align: center;"><br /></div><div class="separator" style="clear: both; text-align: center;"><br /></div><div class="separator" style="clear: both; text-align: center;"> </div>Aneesh Bodhhttp://www.blogger.com/profile/02041276688261983503noreply@blogger.com0tag:blogger.com,1999:blog-8742652691355814794.post-44093355849371272752020-03-24T04:49:00.001-07:002020-03-24T04:49:22.760-07:00 ಅಸ್ಸಲಾಯನ ಸುತ್ತ Assalayana sutta in kannada<div dir="ltr" style="text-align: left;" trbidi="on">
<h2 style="text-align: left;">
ಅಸ್ಸಲಾಯನ ಸುತ್ತ<span style="font-weight: normal;">(ಸಂಕ್ಷಿಪ್ತ)</span></h2>
<div class="separator" style="clear: both; text-align: center;">
<a href="https://1.bp.blogspot.com/-T79HnFOSW-E/Xnnzjg0MeVI/AAAAAAAAFHQ/4pK5VscotEs-5_Av67z6YWte_oV2px4sQCLcBGAsYHQ/s1600/p54.jpg" imageanchor="1" style="margin-left: 1em; margin-right: 1em;"><img border="0" data-original-height="512" data-original-width="702" height="233" src="https://1.bp.blogspot.com/-T79HnFOSW-E/Xnnzjg0MeVI/AAAAAAAAFHQ/4pK5VscotEs-5_Av67z6YWte_oV2px4sQCLcBGAsYHQ/s320/p54.jpg" width="320" /></a></div>
<div>
<span style="font-weight: normal;"><br /></span></div>
<br />
<span style="white-space: pre;"> </span>ಒಮ್ಮೆ ಬ್ರಾಹ್ಮಣರು ಅಸ್ಸಲಾಯನ ಎಂಬ ಬ್ರಾಹ್ಮಣ ಯುವಕನ ನಾಯಕತ್ವದಲ್ಲಿ ಬಂದು ಹೀಗೆ ಕೇಳಿದರು:<br />
<br />
<span style="white-space: pre;"> </span>“ಭಗವಾನ್ ಬ್ರಾಹ್ಮಣರು ಹೀಗೆ ಹೇಳುತ್ತಾರೆ: ‘ಬ್ರಾಹ್ಮಣರದ್ದೇ ಶ್ರೇಷ್ಠ ಜಾತಿ, ಬೇರೆ ಜಾತಿಗಳು ತುಚ್ಛವಾದುದು. ಬ್ರಾಹ್ಮಣರದ್ದೇ ಸುವರ್ಣದ ಜಾತಿ, ಪರರದ್ದು ದುರ್ವಣವಾಗಿದ್ದು, ಬ್ರಾಹ್ಮಣರು ಮಾತ್ರ ಪರಿಶುದ್ಧರು, ಬೇರೆಯವರಲ್ಲ, ಬ್ರಾಹ್ಮಣರು ಮಾತ್ರ ಬ್ರಹ್ಮನಿಂದ ಹುಟ್ಟಿದವರು. ಆತನ ಮುಖದಿಂದ ಜನಿಸಿದವರು, ಬ್ರಹ್ಮನ ವಂಶಸ್ಥರು ಆಗಿದ್ದಾರೆ.”<br />
<br />
<span style="white-space: pre;"> </span>ಆಗ ಭಗವಾನರು ಈ ಎಲ್ಲಾ ಕಾರಣಗಳನ್ನು ನೀಡಿ ಅವರ ವಾದಗಳನ್ನು ಭಂಗ ಮಾಡುತ್ತಾರೆ.<br />
<br />
1.<span style="white-space: pre;"> </span>ಬ್ರಾಹ್ಮಣರ ಪತ್ನಿಯರು ಸಹಾ ಎಲ್ಲರಂತೆಯೇ ಜನ್ಮ ನೀಡುತ್ತಾರೆ.<br />
<br />
2.<span style="white-space: pre;"> </span>ಪಾಶ್ಚಿಮಾತ್ಯ ರಾಷ್ಟ್ರಗಳಾದ ಯೋನ ಮತ್ತು ಕಾಂಬೋಜಗಳಲ್ಲಿ 2 ಜಾತಿಯಿದೆ. ಯಜಮಾನ ಮತ್ತು ಸೇವಕ ಅವರಲ್ಲಿಯು ಅದು ನಿತ್ಯವಲ್ಲ, ಸ್ವಾಮಿಯು ಸೇವಕನಾಗಬಹುದು, ಸೇವಕನು ಸ್ವಾಮಿಯಾಗಬಹುದು.<br />
<br />
3.<span style="white-space: pre;"> </span>ಯಾರೇ ಪಾಪ ಮಾಡಿದರೂ ಸಹಾ ದುರ್ಗತಿಗೆ ಬೀಳುವರು, ಇದಕ್ಕೆ ಯಾರೂ ಹೊರತಲ್ಲ.<br />
<br />
4.<span style="white-space: pre;"> </span>ಪ್ರತಿಯೊಬ್ಬರು ಪುಣ್ಯ ಆಚರಿಸಬಹುದು, ಮೈತ್ರಿ ಧ್ಯಾನಗಳಲ್ಲಿ ಪ್ರವೀಣರಾಗಬಹುದು.<br />
<br />
5.<span style="white-space: pre;"> </span>ಪ್ರತಿಯೊಬ್ಬರು ಸ್ನಾನ ಮಾಡಿ ಶುದ್ಧರಾಗಬಹುದು.<br />
<br />
6.<span style="white-space: pre;"> </span>ಪ್ರತಿಯೊಬ್ಬರು ಹಚ್ಚಿದರೂ ಬೆಂಕಿ ಬರುವುದು, ಅದರಿಂದ ಅದರ ಪ್ರಯೋಜನ ಪಡೆಯಬಹುದು.<br />
<br />
<span style="white-space: pre;"> </span>“ಹೀಗಿರುವಾಗ ಬ್ರಾಹ್ಮಣರೇ ಶ್ರೇಷ್ಠರೆನ್ನುವುದಕ್ಕೆ ಆಧಾರವೇನು?” ಆದರೂ ಸಹಾ ಅವರು ಪಟ್ಟು ಹಿಡಿಯುತ್ತಾರೆ.<br />
<br />
<span style="white-space: pre;"> </span>ಆಗ ಭಗವಾನರು ಅವರನ್ನು ಬೇರೊಂದು ಹಾದಿಯಲ್ಲಿ ಚರ್ಚೆಗೆ ಆರಂಭಿಸುತ್ತಾರೆ: “ಅಸ್ಸಾಲಾಯನ ಇದರ ಬಗ್ಗೆ ಹೇಗೆ ಯೋಚಿಸುವೆ? ಇಬ್ಬರು ಬ್ರಾಹ್ಮಣ ಯುವಕರಿರುತ್ತಾರೆ, ಒಬ್ಬ ವೇದ ಜ್ಞಾನಗಳಲ್ಲಿ ಪರಿಣಿತ ಮತ್ತೊಬ್ಬ ಅವಿದ್ಯಾವಂತ. ಇಲ್ಲಿ ಯಾರಿಗೆ ಹೆಚ್ಚು ಗೌರವ, ಆತಿಥ್ಯ ನೀಡುತ್ತಾರೆ.”<br />
<br />
<span style="white-space: pre;"> </span>“ವಿದ್ಯಾವಂತನಿಗೆ, ಅವಿದ್ಯಾವಂತನಿಗಲ್ಲ.”<br />
<br />
<span style="white-space: pre;"> </span>“ಅಸ್ಸಲಾಯನ, ಈಗ ಇಬ್ಬರು ಬ್ರಾಹ್ಮಣರಿರುತ್ತಾರೆ, ಒಬ್ಬ ವೇದ ಜ್ಞಾನದಲ್ಲಿ ಪರಿಣಿತ ಆದರೆ ದುರಾಚಾರಿ, ದುಶ್ಶೀಲನಾಗಿರುತ್ತಾನೆ ಮತ್ತು ಇನ್ನೊಬ್ಬ ಅವಿದ್ಯಾವಂತ, ಆದರೆ ಸುಶೀಲ ಚಾರಿತ್ರ್ಯವಂತನಾಗಿರುತ್ತಾನೆ. ಇವರಲ್ಲಿ ಯಾರಿಗೆ ಗೌರವ ಆತಿಥ್ಯ ಸಿಗುತ್ತದೆ?”<span style="white-space: pre;"> </span>“ಅವಿದ್ಯಾವಂತನಾಗಿದ್ದರೂ ಶೀಲವಂತನಾದವನಿಗೆ ಗೌರವ ಆತಿಥ್ಯ ಸಿಗುತ್ತದೆ.”<br />
<br />
<span style="white-space: pre;"> </span>“ಓ ಅಸ್ಸಲಾಯನ ಮೊದಲು ಜನ್ಮದ ಬಗ್ಗೆ ಮಾತನಾಡಿದೆವು, ನಂತರ ವೇದಜ್ಞಾನ (ಮಂತ್ರಗಳ) ಬಗ್ಗೆ ಮಾತನಾಡಿದೆವು, ಕೊನೆಗೆ ಪರಿಶುದ್ಧತೆಯಿಂದಲೇ (ಶೀಲದಿಂದ) ಗೌರವ ಆತಿಥ್ಯ ಸಿಗುತ್ತದೆ ಎಂದು ನೀವು ಒಪ್ಪಿರುವಿರಿ. ನಾನು ಸಹಾ ಅದನ್ನೇ ಬೋಧಿಸುತ್ತಿರುವೆ. ನಾಲ್ಕು ವರ್ಣಗಳಲ್ಲಿ ಶೀಲವಂತರೇ ಗೌರವಕ್ಕೆ ಪಾತ್ರರು. ಯಾರು ಸಹಾ ಜನ್ಮದಿಂದ ಶ್ರೇಷ್ಠನಾಗುವುದಿಲ್ಲ, ಕರ್ಮದಿಂದ (ಶೀಲ)ದಿಂದ ಶ್ರೇಷ್ಠನಾಗುತ್ತಾನೆ.”<br />
<br />
<span style="white-space: pre;"> </span>ಇದನ್ನು ಕೇಳಿದ ಅಸ್ಸಲಾಯನು ತಲೆತಗ್ಗಿಸಿದನು.</div>
Aneesh Bodhhttp://www.blogger.com/profile/02041276688261983503noreply@blogger.com0tag:blogger.com,1999:blog-8742652691355814794.post-34937671006292319802019-11-29T01:24:00.005-08:002019-11-29T01:24:52.657-08:00ಅಭಾಸಿತ ಸುತ್ತ abhasita sutta<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://1.bp.blogspot.com/-EPdZ3JLZliY/XeDjpFImijI/AAAAAAAAE4s/c9ouktSrYfIRBEXSB399LXlRgTFque1fgCLcBGAsYHQ/s1600/WhatsApp%2BImage%2B2019-11-29%2Bat%2B2.09.30%2BPM.jpeg" imageanchor="1" style="margin-left: 1em; margin-right: 1em;"><img border="0" data-original-height="504" data-original-width="608" height="265" src="https://1.bp.blogspot.com/-EPdZ3JLZliY/XeDjpFImijI/AAAAAAAAE4s/c9ouktSrYfIRBEXSB399LXlRgTFque1fgCLcBGAsYHQ/s320/WhatsApp%2BImage%2B2019-11-29%2Bat%2B2.09.30%2BPM.jpeg" width="320" /></a></div>
<h2 style="text-align: left;">
ಅಭಾಸಿತ ಸುತ್ತ</h2>
<br />
ಭಿಕ್ಖುಗಳೇ, ಇವೆರಡು ತಥಾಗತರಿಗೆ ಮಾಡುವ ಅಪನಿಂದೆಗಳಾಗಿವೆ<br />
ಯಾವುವವು ಎರಡು ?<br />
<br />
"ತಥಾಗತರು ನುಡಿಯದಿದ್ದರೂ ಹೀಗೆ ನುಡಿದಿದ್ದಾರೆ ಎಂದು ನಿರೂಪಿಸುವುದು. &<br />
ತಥಾಗತರೂ ನುಡಿದಿದ್ದರೂ ಹೀಗೆ ನುಡಿದಿಲ್ಲ ಎಂದು ನಿರೂಪಿಸುವುದು.<br />
<br />
ಹೀಗೆ ತಥಾಗತರಿಗೆ 2 ರೀತಿಯಲ್ಲಿ ಅಪನಿಂದೆ ಮಾಡುವರು.</div>
Aneesh Bodhhttp://www.blogger.com/profile/02041276688261983503noreply@blogger.com0tag:blogger.com,1999:blog-8742652691355814794.post-15284261642604342432019-11-26T02:30:00.003-08:002019-11-26T02:30:29.974-08:00ಮಹಾಮೊಗ್ಗಲಾನ ಸುತ್ತ (ಪಾಚಾಲ ಸುತ್ತ/ಚಾಪಾಲ ಸುತ್ತ)<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://1.bp.blogspot.com/-a3uSHgecgW0/Xdz9r5gKQfI/AAAAAAAAE4E/ppbHJXnTDOA4MKTAu1A3RnUtpZmwpcErgCLcBGAsYHQ/s1600/hqdefault.jpg" imageanchor="1" style="margin-left: 1em; margin-right: 1em;"><img border="0" data-original-height="360" data-original-width="480" height="240" src="https://1.bp.blogspot.com/-a3uSHgecgW0/Xdz9r5gKQfI/AAAAAAAAE4E/ppbHJXnTDOA4MKTAu1A3RnUtpZmwpcErgCLcBGAsYHQ/s320/hqdefault.jpg" width="320" /></a></div>
<h2 style="text-align: left;">
ಮಹಾಮೊಗ್ಗಲಾನ ಸುತ್ತ (ಪಾಚಾಲ ಸುತ್ತ)</h2>
<span style="white-space: pre;"> </span>ಮಹಾಮೊಗ್ಗಲಾನರವರು ಮಗಧದ ಸಮೀಪದ ಕಲ್ಲವಾಲಪುತ್ತ ಎಂಬ ಹಳ್ಳಿಯಲ್ಲಿ ನೆಲೆಸಿದ್ದರು. ಪಬ್ಬಜ್ಜ ಸ್ವೀಕಾರದ ಏಳು ದಿನಕ್ಕೆ ಕಾಲಿಟ್ಟರು. ಸದಾಕಾಲ ಧ್ಯಾನದಲ್ಲಿ ತೊಡಗಿದರು. ಆದರೂ ಅವರು ಥೀನಮಿದ್ಧ (ಆಲಸ್ಯ, ಜಡತೆ, ನಿದ್ದೆ) ಯಿಂದಾಗಿ ತುಸು ತ್ರಾಸಪಟ್ಟರು.<br />
ಮೊಗ್ಗಲಾನರವರು ತಮ್ಮ ಧ್ಯಾನ ಸಾಧನೆಗೆ ಮಗಧದ ಸಮೀಪದ ಕಲ್ಲವಲಪುತ್ತ ಎಂಬ ಹಳ್ಳಿಯ ಪಕ್ಕದ ಅರಣ್ಯವನ್ನು ಆಯ್ಕೆ ಮಾಡಿದರು, ಅಲ್ಲಿ ಅವರು ಪದ್ಮಾಸನದಲ್ಲಿ ಹಾಗೂ ನಡಿಗೆಯ ಭಂಗಿಯಲ್ಲಿ ಧ್ಯಾನವನ್ನು ಆರಂಭಿಸಿದರು. ಅದರೂ ಸಹಾ ಅವರು ತೂಗಡಿಕೆಯನ್ನು ಗೆಲ್ಲಲಾರೆದೆ ಹೋದರು. ಅವರಿಗೆ ನಿದ್ರಿಸಲು ಇಷ್ಟವಿರಲಿಲ್ಲ ಅದರೂ ತಮ್ಮ ಬೆನ್ನು ಹಾಗೂ ಕತ್ತನ್ನು ನೇರವಾಗಿಡಲು ಅಸಮರ್ಥರಾದರು. ಅದರೂ ತಮ್ಮ ಇಚ್ಚಾಶಕ್ತಿಯಿಂದ ಕಣ್ಣುಗಳನ್ನು ಅಗಲವಾಗಿಸಿ ನಿದ್ರೆ ಗೆಲ್ಲಲು ಯತ್ನಿಸಿದರು. ಅದರೂ ಯಶಸ್ವಿಯಾಗದೆ ಹೋಯಿತು, ಅಂದು ಅವರು ಸಂಘಕ್ಕೆ ಸೇರಿ 7ನೆಯ ದಿನವಾಗಿತ್ತು. ಭಗವಾನರಿಗೆ ಇವರ ಕಷ್ಟಗಳು ಅರ್ಥವಾಗಿ ಅವರ ಮುಂದೆ ತೇಜೋಮಯವಾಗಿ ಪ್ರತ್ಯಕ್ಷವಾದರು. ಹಾಗೂ ಹೀಗೆ ಕೇಳಿದರು.<br />
<span style="white-space: pre;"> </span>"ಮೊಗ್ಗಲಾನ ತೂಗಡಿಸುತ್ತಿರುವೆಯಾ.? ಮೊಗ್ಗಲಾನ ತೂಗಡಿಸುತ್ತಿರುವೆಯಾ (ಮಂಪರು)"<br />
<span style="white-space: pre;"> </span>"ಹೌದು ಭಗವಾನ್"<br />
<span style="white-space: pre;"> </span>"ಸರಿ ಮೊಗ್ಗಲಾನ , ಯಾವಾಗಲಾದರೂ ನಿನಗೆ ನಿದ್ದೆ ಅಥವಾ ತೂಗಡಿಕೆ ಆವರಿಸಿದಾಗ ಆ ಯೋಚನೆ ಅಥವಾ ಆ ಗ್ರಹಿೆಕೆಯೆಡೆಗೆ ಗಮನ ಹರಿಸದಿರು, ಹಾಗೆ ಆ ಗ್ರಹಿಕೆಯೆಡೆ ಗಮನವನ್ನು ಹರಿಸಿದಾಗ ತೂಗಡಿಕೆ ದೂರವಾಗುವುದು."<br />
<span style="white-space: pre;"> </span>"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ಆಗ ನೀನೂ ಹಿಂದೆ ಆಲಿಸಿರುವ ಬೋಧನೆಯನ್ನು (ಧಮ್ಮ) ನೆನಪಿಸಿಕೋ ಹಾಗೂ ಅವನ್ನು ವಿಶ್ಲೇಶಿಸಿಕೊ.........."<br />
<span style="white-space: pre;"> </span>"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ನೀನೂ ಆಲಿಸಿದ್ದ ಧಮ್ಮವನ್ನು ಪೂರ್ಣ ವಿವರವಾಗಿ ಪುನಾರಾವತರ್ಿತಗೊಳಿಸಿಕೊ.............."<br />
<span style="white-space: pre;"> </span>"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ನಿನ್ನ ಕಿವಿಗಳ ಹಾಲೆಗಳನ್ನು ಎಳೆದಾಡು ಮತ್ತು ನಿನ್ನ ಅಂಗಗಳನ್ನು ಉಜ್ಜಲು ಆರಂಭಿಸು,............"<br />
"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ನೀನು ಆಸನದಿಂದ ಎದ್ದೇಳು ಹಾಗೂ ಕಣ್ಣುಗಳನ್ನು ನೀರಿನಿಂದ ತೊಳೆದುಕೊ, ನಂತರ ಎಲ್ಲಾ ದಿಕ್ಕುಗಳ ಕಡೆಗೆ ವೀಕ್ಷಿಸಲು ಆರಂಭಿಸು, ನಕ್ಷತ್ರಗಳನ್ನು ಹಾಗೂ ನಕ್ಷತ್ರಗಳ ಸಮೂಹ ರಾಶಿಗಳನ್ನು ನೋಡಲು ಆರಂಭಿಸು.........."<br />
<span style="white-space: pre;"> </span>"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ಬೆಳಕಿನ ಸಂಜ್ಞೆಯತ್ತ ಗಮನಹರಿಸು, ಹಗಲಿನ ಸಂಜ್ಞೆಯತ್ತ ಗಮನಹರಿಸು, ಅದನ್ನು ರಾತ್ರಿಯಲ್ಲಿ ಅಭ್ಯಾಸಿಸು ಅಂದರೆ ರಾತ್ರಿಯನ್ನು ಹಗಲಿನಂತೆ ಹಾಗೂ ಹಗಲನ್ನು ರಾತ್ರಿಯಂತೆ ಗ್ರಹಿಸುವುದು., ಹೀಗಾದಾಗ ಮನಸ್ಸು ಸ್ವಚ್ಚವಾಗಿ ಜಡರಹಿತವಾಗುವುದು. ಹೀಗೆ ಮನಸ್ಸನ್ನು ಬೆಳಕಿನಂತೆ ಪೂರ್ಣವಾಗಿ ಪ್ರಕಾಶಿಸು........"<br />
<span style="white-space: pre;"> </span>"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ಆಗ ಇಂದ್ರಿಯಗಳನ್ನು ಅಂತಮರ್ುಖಗೊಳಿಸಿ, ಮನಸ್ಸನ್ನು ಬಾಹ್ಯಕ್ಕೆ ದಾರಿತಪ್ಪದಂತೆ ಜಾಗಾರೂಕತೆವಹಿಸಿ, ನಡಿಗೆಯ ಧ್ಯಾನವನ್ನು ಆರಂಭಿಸು, ನಡಿಗೆಯಲ್ಲಿಯೇ ಗಮನವಹಿಸು. ಹಾಗೂ ಹಿಂದೆಯಿರುವುದನ್ನು ಕಲ್ಪಿಸಿಕೊ, ಹಾಗೂ ಹಿಂದೆಯಿದ್ದಾಗ ಮುಂದೆಯಿರುವುದನ್ನು ಕಲ್ಪಿಸಿಕೋ........"<br />
<span style="white-space: pre;"> </span>"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ನಿದ್ದೆಯು ಈಗ ಅವಶ್ಯಕವೆಂದು ತಿಳಿದು ಆಗ ಜಾಗಾರೂಕತೆಯಿಂದ, ಸ್ಪಷ್ಟ ಅರಿವಿನಿಂದ, ಸಿಂಹಶಯ್ಯೆಯ ಭಂಗಿಯಲ್ಲಿ ಬಲಮುಖವಾಗಿ ಮಲಗಿ, ಬಲಗಾಲ ಮೇಲೆ ಎಡಗಾಲನ್ನು ಇಟ್ಟು ನೇರವಾಗಿ ಮಲಗಿ, ಮತ್ತೆ ಮೇಲೆಳುವ ಸಮಯವನ್ನು ನಿಗಧಿತಪಡಿಸಿ, ಅಲ್ಪನಿದ್ದೆಯಲ್ಲಿ ತೃಪ್ತಿತಾಳಿ ನಂತರ ಎಚ್ಚರಗೊಂಡಾಗ ಜಾಗರೂಕತೆ ತಾಳಿ ಈ ಬಗೆಯ ಮನೋಭಾವ ತಾಳುವುದು ನಾನು ಅತಿನಿದ್ದೆಯಲ್ಲಿ ಅಥವಾ ಅತಿವಿಶ್ರಾಂತಿಯ ಸುಖದಲ್ಲಿ ತಲ್ಲೀನಲಾಗಿಲ್ಲ ಹಾಗೂ ತಲ್ಲೀನವಾಗುವುದಿಲ್ಲ. ಹೀಗೆ ಮೊಗ್ಗಾಲಾನ ನೀನು ಸುಶಿಕ್ಷಣಗೊಳಿಸಿಕೊಳ್ಳಬೇಕು."<br />
<span style="white-space: pre;"> </span>"ನಂತರ ಮೊಗ್ಗಲಾನ ನೀನು ಹೀಗೆ ಸುಶಿಕ್ಷಣಗೊಳಿಸಿಕೊಳ್ಳಬೇಕು ಹೇಗೆಂದರೆ ನಾನು ನನ್ನ ಅಹಂಕಾರ ಉದಯಿಸುವ ಅಥವಾ ವೃದ್ಧಿಯಾಗುವಂತಹ ಕುಟುಂಬಗಳಿಗೆ ಆಹಾರಕ್ಕೆ ಹೋಗಲಾರೆನು ಏಕೆಂದರೆ ಹಲವಾರು ಪ್ರಾಪಂಚಿಕ ಕಾರ್ಯಗಳಲ್ಲಿ ತೊಡಗಿರುವ ಕುಟುಂಬಗಳಿಗೆ ಹೋದಾಗ ಅವರು ಗಮನಹರಿಸದೆ ಹೋಗಬಹುದು ಆಗ ಇವರು ನನಗೆ ಇಷ್ಟ ಪಡುತ್ತಿಲ್ಲ, ಏನೂ ದೊರೆಯದೆ ಹೋಯಿತು, ಎಂದು ಲಜ್ಜೆಗೆ ಒಳಗಾಗಿ, ಕ್ಷೊಭೆಗೆ ಒಳಗಾಗಿ, ಅನಿಯಂತ್ರಿತನಾಗಿ, ಸಮಾಧಿಗೆ ದೂರನಾಗುತ್ತಾನೆ. "<br />
<span style="white-space: pre;"> </span>"ನಂತರ ಮೊಗ್ಗಲಾನ ನೀನು ಹೀಗೆ ಸುಶಿಕ್ಷಣಗೊಳಿಸಿಕೊಳ್ಳಬೇಕು, ನಾನು ಮುಖಾಮುಖಿ ಅಥವಾ ವಿವಾದಾತ್ಮಕ ವಾದಗಳಲ್ಲಿ ತೊಡಗುವುದಿಲ್ಲ ಏಕೆಂದರೆ ಆಗ ನಾನಾ ಚಚರ್ೆ ವಾದ ವಿವಾದಗಳು ಉಂಟಾಗಿ ಕ್ಷೊಭೆಗೆ ಒಳಗಾಗಿ, ಅನಿಯಂತ್ರಿತನಾಗಿ, ಸಮಾಧಿಗೆ ದೂರನಾಗುತ್ತಾನೆ."<br />
<span style="white-space: pre;"> </span>"ಮತ್ತೆ ಮೊಗ್ಗಾಲಾನ ನಾನು ಯಾವುದೇ ಬಗೆಯ ಸಂಸರ್ಗ(ಸ್ನೇಹ)ವನ್ನು ಪ್ರಶಂಸಿಸಲಾರೆನು, ಹಾಗೆಯೇ ನಾನು ಯಾವುದೇ ಬಗೆಯ ಸಂಸರ್ಗ(ಸ್ನೇಹ)ವನ್ನು ಅಪ್ರಶಂಸಿಸಲಾರೆನು ಹಾಗೆಯೇ ಗೃಹಸ್ಥರೊಡನೆಯಾಗಲಿ ಅಥವಾ ಪಬ್ಬಜಿತರೊಡನೆಯಾಗಲಿ ಯಾವುದೇ ಬಗೆಯ ಸಂಸರ್ಗ(ಸ್ನೇಹ)ವನ್ನು ಪ್ರಶಂಸಿಸಲಾರೆನು, ಹಾಗೂ ಯಾವ ಸ್ಥಳಗಳು ನಿಶಬ್ದದಿಂದ ಕೂಡಿವೆಯೋ, ಶಬ್ಧರಹಿತವೂ, ಹಾಗೂ ನಿರ್ಜನ ಪ್ರದೇಶಗಳೋ ಅಂತಹ ಧ್ಯಾನಯೋಗ್ಯ ಪ್ರದೇಶಗಳನ್ನು ನಾನು ಪ್ರಶಂಸಿಸುವೆನು".<br />
<span style="white-space: pre;"> </span>ಹೀಗೆ ಭಗವಾನರು ನುಡಿದಾಗ ಮೊಗ್ಗಲಾನರು ಹೀಗೆ ಪ್ರಶ್ನಿಸಿದರು : "ಭಗವಾನ್ ಸಂಕ್ಷಿಪ್ತವಾಗಿ ತಿಳಿಸಿ, ಯಾವ ರೀತಿಯಲ್ಲಿ ಒಬ್ಬನು ತೃಷ್ಣೆಯಿಂದ ಮುಕ್ತನಾಗುವನು, ಪೂರ್ಣವಾಗಿ ಬಂಧನಮುಕ್ತನಾಗುವನು, ಅತ್ಯಂತ ನಿಷ್ಟನು ,ಬ್ರಹ್ಮಚರ್ಯೆಯ ಜೀವನ ಪೂರ್ಣಗೊಳಿಸುವನು, ಅಂತಿಮ ಹಂತವನ್ನು ಪಡೆಯುವನು, ಹಾಗೂ ದೇವ ಮನುಷ್ಯರಲ್ಲಿ ಶ್ರೇಷ್ಟನಾಗುವನು."<br />
<span style="white-space: pre;"> </span>"ಇಲ್ಲಿ ಮೊಗ್ಗಾಲಾನ, ಒಬ್ಬನು ಹೀಗೆ ಕೇಳುತ್ತಾನೆ ಏನೆಂದರೆ ಎಲ್ಲಾ ಆಗುಹೋಗುಗಳು ಅಂಟಿಕೊಳ್ಳುವಿಕೆಗೆ ಅರ್ಹವಲ್ಲ ಆಗ ಆತನು ಎಲ್ಲಾ ಬಗೆಯ ಸ್ಥಿತಿಗಳನ್ನು ಅರಿಯುತ್ತಾನೆ, ಯಾವುದೇ ಅನುಭವಗಳಾಗಲಿ ಅದರಲ್ಲಿ ಕ್ಷಣಿಕತೆಯನ್ನು ಅರಿತು, ವಿರಾಗ ತಾಳುತ್ತಾನೆ, ನಿರೋಧ ತಾಳುತ್ತಾನೆ, ತ್ಯೆಜಿಸುವಿಕೆ ತಾಳುತ್ತಾನೆ, ಹೀಗೆ ಲೋಕದ ಯಾವುದಕ್ಕೂ ಅಂಟಲಾರನು, ಹೀಗೆ ಯಾವುದಕ್ಕೂ ಅಂಟದೆ ತಳಮಳಗೊಳ್ಳಲಾರನು, ತಳಮಳಗೊಳ್ಳದೆ ಆರತರ್ಯದಲ್ಲೇ ಸರಿಯಾಗಿ ಮುಕ್ತನಾಗುತ್ತಾನೆ, ಆಗ ಆತನಲ್ಲಿ ವಿಮುಕ್ತಿ ಜ್ಞಾನವು ಉಂಟಾಗುವುದು, ಜನ್ಮವು ಅಂತ್ಯವಾಯಿತು, ಬ್ರಹ್ಮಚರ್ಯೆಯ ಜೀವನ ಪೂರ್ಣವಾಯಿತು, ಮಾಡಬೇಕಾದುದೆಲ್ಲಾ ಮಾಡಿಯಾಯಿತು, ಈ ಲೋಕಗಳಿಗೆ ಇನ್ನೇನೂ ಉಳಿದಿಲ್ಲ."<br />
<span style="white-space: pre;"> </span>"ಈ ರೀತಿಯಾಗಿ ಮೊಗ್ಗಾಲಾನ ಸಂಕ್ಷಿಪ್ತವಾಗಿ ಒಬ್ಬನು ತೃಷ್ಣೆಯಿಂದ ಮುಕ್ತನಾಗುವನು, ಪೂರ್ಣವಾಗಿ ಬಂಧನಮುಕ್ತನಾಗುವನು, ಅತ್ಯಂತ ನಿಷ್ಟನು ,ಬ್ರಹ್ಮಚರ್ಯೆಯ ಜೀವನ ಪೂರ್ಣಗೊಳಿಸುವನು, ಅಂತಿಮ ಹಂತವನ್ನು ಪಡೆಯುವನು, ಹಾಗೂ ದೇವ ಮನುಷ್ಯರಲ್ಲಿ ಶ್ರೇಷ್ಟನಾಗುವನು.." <b>(ಪಾಚಾಲ ಸುತ್ತ, ಅಂಗುತ್ತರ ನಿಕಾಯ 7.58)</b><br />
<br />
<div>
<br /></div>
</div>
Aneesh Bodhhttp://www.blogger.com/profile/02041276688261983503noreply@blogger.com0tag:blogger.com,1999:blog-8742652691355814794.post-30506056807738597912019-10-30T23:56:00.000-07:002019-10-30T23:56:18.454-07:00ಸತ್ಪುರುಷನನ್ನು ಹೇಗೆ ಅರಿಯಬಹುದು? (ಚೂಲ ಪುಣ್ಣಮ ಸುತ್ತ): cula purnima sutta in kannada<div dir="ltr" style="text-align: left;" trbidi="on">
<h2 style="text-align: left;">
ಸತ್ಪುರುಷನನ್ನು ಹೇಗೆ ಅರಿಯಬಹುದು? (ಚೂಲ ಪುಣ್ಣಮ ಸುತ್ತ):</h2>
<div class="separator" style="clear: both; text-align: center;">
<a href="https://1.bp.blogspot.com/-ab2KnArbSgE/XbqFi7gDzlI/AAAAAAAAEzw/LeeMNDopVacQl88fyj7hJ70-fYFr2ladwCLcBGAsYHQ/s1600/download.jpg" imageanchor="1" style="margin-left: 1em; margin-right: 1em;"><img border="0" data-original-height="168" data-original-width="300" src="https://1.bp.blogspot.com/-ab2KnArbSgE/XbqFi7gDzlI/AAAAAAAAEzw/LeeMNDopVacQl88fyj7hJ70-fYFr2ladwCLcBGAsYHQ/s1600/download.jpg" /></a></div>
<div>
<br /></div>
<span style="white-space: pre;"> </span>ಹೀಗೆ ನಾನು ಕೇಳಿದ್ದೇನೆ - ಒಂದು ಸಮಯದಲ್ಲಿ ಭಗವಾನರು ಸಾವತ್ಥಿಯಲ್ಲಿ ಮಿಗಾರಮಾತೆಯ ಪೂರ್ವ ಆರಾಮ (ವಿಹಾರ)ದಲ್ಲಿ ವಿಹರಿಸುತ್ತಿದ್ದರು. ಅಂದು ಪೂಣರ್ಿಮೆಯಾದ್ದರಿಂದ ಉಪೂಸಥ ದಿನವಾಗಿತ್ತು. ಆಗ ಭಗವಾನರು ಹೊರಗೆ ಗಾಳಿಯಲ್ಲಿ ಕುಳಿತಿದ್ದರು. ಅವರ ಸುತ್ತಲು ಭಿಕ್ಷುಗಣವಿತ್ತು. ಭಗವಾನರು ಶಾಂತವಾಗಿದ್ದ ಭಿಕ್ಷು ಸಮೂಹಕ್ಕೆ ಹೀಗೆ ಕೇಳಿದರು:<br />
<br />
<span style="white-space: pre;"> </span>"ಈಗ ಭಿಕ್ಷುಗಳೇ, ಅಸತ್ಪುರುಷನಿಗೆ ಅಸತ್ಪುರುಷನು ಅರಿಯಲ್ಪಡುವನೇ, ಹೇಗೆಂದರೆ ಈ ವ್ಯಕ್ತಿಯು ಅಸತ್ಪುರುಷನೇ?"<br />
<br />
<span style="white-space: pre;"> </span>"ಇಲ್ಲ ಭಂತೆ."<br />
<br />
<span style="white-space: pre;"> </span>"ಒಳ್ಳೆಯದು ಭಿಕ್ಷುಗಳೇ, ಅಸತ್ಪುರುಷನಿಗೆ ಈತನು ಅಸತ್ಪುರುಷ ಎಂದು ತಿಳಿಯಲ್ಪಡುವುದಿಲ್ಲ. ಹಾಗೆಯೇ ಭಿಕ್ಷುಗಳೇ, ಅಸತ್ಪುರುಷನಿಗೆ ಸತ್ಪುರುಷನು ತಿಳಿಯಲ್ಪಡುವನೇ? ಹೇಗೆಂದರೆ ಈ ವ್ಯಕ್ತಿಯು ಸತ್ಪುರುಷನಿರಬಹುದೇ?"<br />
<span style="white-space: pre;"> </span>"ಇಲ್ಲ ಭಂತೆ."<br />
<br />
<span style="white-space: pre;"> </span>"ಒಳ್ಳೆಯದು ಭಿಕ್ಷುಗಳೇ, ಖಂಡಿತವಾಗಿಯು ಅಸತ್ಪುರುಷನಿಗೆ ಈ ವ್ಯಕ್ತಿಯು ಸತ್ಪುರುಷ ಎಂದು ತಿಳಿಯಲಾಗುವುದಿಲ್ಲ. ಆತನಿಗೆ ಅದು ಅಸಾಧ್ಯವಾಗಿದೆ. ಓ ಭಿಕ್ಷುಗಳೇ, ಅಸತ್ಪುರುಷನು ಅಕುಶಲ ಚಿತ್ತಸ್ಥಿತಿಗಳನ್ನು ಹೊಂದಿರುತ್ತಾನೆ. ಆತನು ಕೆಟ್ಟ ಸ್ನೇಹಿತರನ್ನು ಹೊಂದಿರುತ್ತಾನೆ. ಪಾಪಿಗಳಂತೆ ಯೋಚಿಸುತ್ತಾನೆ. ಆತನು ಪಾಪಿಗಳಂತೆಯೇ ಸಲಹೆ ಬುದ್ಧಿವಾದ ನೀಡುತ್ತಾನೆ, ಪಾಪಿಗಳಂತೆ ಮಾತನಾಡುತ್ತಾನೆ, ಪಾಪಿಗಳಂತೆ ಕಾರ್ಯವನ್ನು ಮಾಡುತ್ತಾನೆ. ಅಷ್ಟೇ ಅಲ್ಲ, ಆತನು ಅಸತ್ಪುರುಷರಂತೆಯೇ ದೃಷ್ಟಿಕೋನಗಳನ್ನು ಹೊಂದಿರುತ್ತಾನೆ ಮತ್ತು ಆತನು ಅಸತ್ಪುರುಷರಂತೆಯೇ ದಾನವನ್ನು ಮಾಡುತ್ತಾನೆ."<br />
<br />
<span style="white-space: pre;"> </span>"ಮತ್ತು ಭಿಕ್ಷುಗಳೇ, ಆತನು ಯಾವ ಅಕುಶಲ ಚಿತ್ತಸ್ಥಿತಿಗಳಿಂದ (ಅಸ್ಸಧಮ್ಮ ಸಮಾನಾಗತೋ) ಕೂಡಿರುತ್ತಾನೆ?" "ಭಿಕ್ಷುಗಳೇ, ಆತನು ಶ್ರದ್ಧಾರಹಿತನಾಗಿರುತ್ತಾನೆ. ಪಾಪಲಜ್ಜೆಯಿಂದ ಕೂಡಿರುವುದಿಲ್ಲ, ಪಾಪಭಯದಿಂದಲೂ ಕೂಡಿರುವುದಿಲ್ಲ. ಆತನು ಅಲ್ಪಶೃತ (ಕಡಿಮೆ ಜ್ಞಾನವನ್ನು ಕೇಳಿರುತ್ತಾನೆ) ನಾಗಿರುತ್ತಾನೆ. ಆತನು ಸೋಮಾರಿ ಆಗಿರುತ್ತಾನೆ. ಸ್ಮೃತಿಹೀನ (ಅಜಾಗರೂಕನು)ನು ಆಗಿರುತ್ತಾನೆ. ಕೆಟ್ಟ ಪ್ರಜ್ಞೆಯುಳ್ಳವ ನಾಗಿರುತ್ತಾನೆ (ಅಲ್ಪಪ್ರಜ್ಞನು). ಭಿಕ್ಷುಗಳೇ, ಈ ರೀತಿಯಲ್ಲಿ ಅಸತ್ಪುರುಷನ ಚಿತ್ತಸ್ಥಿತಿಗಳು ಇರುತ್ತದೆ."<br />
<br />
<span style="white-space: pre;"> </span>"ಮತ್ತೆ ಭಿಕ್ಷುಗಳೇ, ಆತನು ಯಾರೊಂದಿಗೆ ಸ್ನೇಹದಿಂದಿರುತ್ತಾನೆ?"<br />
<span style="white-space: pre;"> </span>"ಭಿಕ್ಷುಗಳೇ, ಯಾರಲ್ಲಿ ಶ್ರದ್ಧೆಯಿಲ್ಲವೋ, ಪಾಪಲಜ್ಜೆಯಿಲ್ಲವೊ, ಪಾಪಭೀತಿಯಿಲ್ಲವೊ, ಯಾರು ಅಲ್ಪಶೃತರೋ, ಯಾರು ಸೋಮಾರಿಗಳೋ, ಅಜಾಗರೂಕರೋ, ಅಲ್ಪ ಪ್ರಜ್ಞರೋ ಅವರೊಂದಿಗೆಯೇ ಆತನು ಬೆರೆಯುತ್ತಾನೆ. ಅವರೊಂದಿಗೆ ಆತನು ಸ್ನೇಹದಿಂದಿರುತ್ತಾನೆ."<br />
<br />
<span style="white-space: pre;"> </span>"ಮತ್ತೆ ಭಿಕ್ಷುಗಳೇ, ಆತನು ಅಸತ್ಪುರುಷರ ರೀತಿ ಹೇಗೆ ಯೋಚಿಸುತ್ತಾನೆ? ಆತನು ತನಗೆ ಅಹಿತವಾಗುವಂತೆ, ಬಾಧೆಯಾಗುವಂತೆ ಚಿಂತನೆ ಮಾಡುತ್ತಾನೆ. ಹಾಗು ಆತನು ಪರರಿಗೆ ಅಹಿತವಾಗುವಂತೆ ಬಾಧೆಯಾಗುವಂತೆ ಚಿಂತನೆ ಮಾಡುತ್ತಾನೆ. ಆತನು ಉಭಯರಿಗೂ ಬಾಧೆಯಾಗುವಂತೆ ಯೋಚಿಸುತ್ತಾನೆ."<br />
<br />
<span style="white-space: pre;"> </span>"ಮತ್ತೆ ಭಿಕ್ಷುಗಳೇ, ಆತನ ಅಸತ್ಪುರುಷರ ರೀತಿ ಹೇಗೆ ಬುದ್ಧಿವಾದ ನೀಡುತ್ತಾನೆ? ಆತನು ತನಗೆ ಅಹಿತವಾಗುವಂತೆ, ಬಾಧೆಯಾಗುವಂತೆ ಬುದ್ಧಿವಾದ ಹೇಳಿಕೊಳ್ಳುತ್ತಾನೆ. ಆತನು ಪರರಿಗೆ ಅಹಿತವಾಗುವಂತೆ, ಬಾಧೆಯಾಗುವಂತೆ ಬುದ್ಧಿವಾದ ಹೇಳುತ್ತಾನೆ".<br />
<br />
<span style="white-space: pre;"> </span>"ಮತ್ತೆ ಭಿಕ್ಷುಗಳೇ, ಆತನು ಅಸತ್ಪುರುಷರ ರೀತಿಯಲ್ಲಿ ಹೇಗೆ ಮಾತನಾಡುತ್ತಾನೆ?"<br />
<span style="white-space: pre;"> </span>"ಭಿಕ್ಷುಗಳೇ, ಆತನು ಸುಳ್ಳು ಹೇಳುತ್ತಾನೆ, ಚಾಡಿ ಹೇಳುತ್ತಾನೆ, ನಿಂದಾಯುತ ಕಟುಭಾಷೆ ಮಾತನಾಡುತ್ತಾನೆ, ವ್ಯರ್ಥವಾದ ಹಾನಿಯುತ ಹರಟೆ ಮಾಡುತ್ತಾನೆ."<br />
<br />
"ಮತ್ತೆ ಭಿಕ್ಷುಗಳೇ, ಆತನು ಅಸತ್ಪುರುಷರ ರೀತಿಯಲ್ಲಿ ಹೇಗೆ ಕರ್ಮ ಮಾಡುತ್ತಾನೆ?"<br />
<span style="white-space: pre;"> </span>"ಇಲ್ಲಿ ಭಿಕ್ಷುಗಳೇ, ಆತನು ಜೀವಹತ್ಯೆಗಳನ್ನು ಮಾಡುತ್ತಾನೆ, ಕಳ್ಳತನ ಮಾಡುತ್ತಾನೆ, ವ್ಯಭಿಚಾರದಲ್ಲಿ ತೊಡಗುತ್ತಾನೆ. ಹೀಗೆ ಭಿಕ್ಷುಗಳೇ, ಆತನು ಅಸತ್ಪುರುಷರ ಕರ್ಮ ಮಾಡುತ್ತಾನೆ".<br />
<br />
<span style="white-space: pre;"> </span>"ಮತ್ತೆ ಭಿಕ್ಷುಗಳೇ, ಆತನು ಅಸತ್ಪುರುಷ ರೀತಿ ಹೇಗೆ ದೃಷ್ಟಿಗಳನ್ನು ಹೊಂದಿರುತ್ತಾನೆ?"<br />
<span style="white-space: pre;"> </span>ಇಲ್ಲಿ ಭಿಕ್ಷುಗಳೇ, ಆತನು ಹೀಗೆ ಹಲವು ದೃಷ್ಟಿಗಳನ್ನು ಹೊಂದಿರುತ್ತಾನೆ. ಅವೆಂದರೆ:<br />
(1) ದಾನಕ್ಕೆ ಫಲವಿಲ್ಲ, ಅರ್ಪಣೆಗೆ ಫಲವಿಲ್ಲ, ತ್ಯಾಗ ಸತ್ಕಾರಗಳಿಗೆ ಫಲವಿಲ್ಲ.<br />
(2) ಸುಕಾರ್ಯಗಳಿಗೆ ಆಗಲಿ ಅಥವಾ ದುಷ್ಕಾರ್ಯಗಳಿಗಾಗಲಿ ಅಂತಹ ಕರ್ಮಗಳಿಗೆ ಫಲವಿಲ್ಲ<br />
(3) ಈ ಲೋಕವೂ ಇಲ್ಲ, ಪರಲೋಕವೂ ಇಲ್ಲ.<br />
(4) ತಾಯ್ತಂದೆಗಳ ಸಲಹುವಿಕೆಯಿಂದ ಯಾವ ಲಾಭವೂ ಇಲ್ಲ<br />
. (5) ತಾಯ್ತಂದೆಗಳಿಲ್ಲದೆಯೇ ತಮಗೆ ತಾವೇ ಹುಟ್ಟುವ (ಓಪಪಾತಿಕ) ಜೀವಿಗಳಿಲ್ಲ.<br />
(6) ಯೋಗ್ಯವಾಗಿ ಜೀವಿಸಿ, ಯೋಗ್ಯವಾಗಿ ಸಾಕ್ಷಾತ್ಕರಿಸಿ, ಅಭಿಜ್ಞಾ ಸಾಕ್ಷಾತ್ಕರಿಸಿ (ಅತೀಂದ್ರಿಯ ಬಲಗಳನ್ನು ಪಡೆದು) ಈ ಲೋಕ ಮತ್ತು ಪರಲೋಕವಿದೆ ಎಂದು ಹೇಳುವ ಸಮಣ ಬ್ರಾಹ್ಮಣರು ಇಲ್ಲ, ಅಂತಹವರು ಇಲ್ಲವೇ ಇಲ್ಲ. ಹೀಗೆ ಭಿಕ್ಷುಗಳೇ, ಅಸತ್ಪುರುಷನು ದೃಷ್ಟಿಕೋನಗಳನ್ನು ಹೊಂದಿರುತ್ತಾನೆ."<br />
<br />
<br />
<span style="white-space: pre;"> </span>"ಮತ್ತೆ ಭಿಕ್ಷುಗಳೇ, ಅಸತ್ಪುರುಷನು ಹೇಗೆ ದಾನವನ್ನು ಮಾಡುತ್ತಾನೆ?"<br />
<span style="white-space: pre;"> </span>"ಭಿಕ್ಷುಗಳೇ, ಅಸತ್ಪುರುಷನು ಗೌರವ ಭಕ್ತಿ ಯಾವುದೂ ಇಲ್ಲದೆ ದಾನ ಮಾಡುತ್ತಾನೆ. ಆತನು ತನ್ನ ಕೈಯಿಂದ ದಾನ ಮಾಡುವುದಿಲ್ಲ, ಆತನು ಬಿಸಾಡುವಂತಹದ್ದನ್ನು ದಾನ ಮಾಡುತ್ತಾನೆ. ಆತನು ಅಗತ್ಯವಿಲ್ಲದ್ದನ್ನು, ಅಪೇಕ್ಷೆಪಡದಿದ್ದುದನ್ನು ದಾನ ಮಾಡುತ್ತಾನೆ. ಆತನು ಭವಿಷ್ಯವನ್ನು ಗಣನೆಗೆ ತೆಗೆದುಕೊಳ್ಳದೆ ದಾನ ಮಾಡುತ್ತಾನೆ. ಹೀಗೆ ಭಿಕ್ಷುಗಳೇ, ಅಸತ್ಪುರುಷನು ದಾನ ಮಾಡುತ್ತಾನೆ."<br />
<br />
<span style="white-space: pre;"> </span>"ಭಿಕ್ಷುಗಳೇ, ಯಾವ ಅಸತ್ಪುರುಷನು ಪಾಪಚಿತ್ತ ಸ್ಥಿತಿಗಳನ್ನು, ಪಾಪಿ ಮಿತ್ರರನ್ನು, ಪಾಪ ಯೋಚನೆಗಳನ್ನು, ಪಾಪ ಸಲಹೆಗಳನ್ನು, ಪಾಪಯುತ ಮಾತುಗಳನ್ನು, ಪಾಪಯುತ ಕರ್ಮಗಳನ್ನು ಮತ್ತು ಪಾಪಯುತ ದೃಷ್ಟಿಕೋನಗಳನ್ನು ಹೊಂದಿರುತ್ತಾನೋ, ಆತನು ಮರಣದ ನಂತರ ಅಸತ್ಪುರುಷರೆ ಇರುವಂತಹ ಗತಿಯಲ್ಲಿ ಹುಟ್ಟುತ್ತಾನೆ. ಯಾವುದು ಆ ಗತಿ? ನಿರಯ ಇಲ್ಲವೆ ತಿರಚ್ಚನಯೋನಿ (ಪ್ರಾಣಿಗಳ ಲೋಕ)ಯಲ್ಲಿ ಜನ್ಮಿಸುತ್ತಾನೆ."<br />
<br />
<span style="white-space: pre;"> </span>"ಈಗ ಭಿಕ್ಷುಗಳೇ, ಸತ್ಪುರುಷನಿಗೆ ಇಂಥಹ ವ್ಯಕ್ತಿಯು ಸತ್ಪುರುಷನು ಎಂದು ಗೊತ್ತಾಗುತ್ತದೆಯೇ?"<br />
<span style="white-space: pre;"> </span>"ಹೌದು ಭಂತೆ."<br />
<br />
<span style="white-space: pre;"> </span>"ಒಳ್ಳೆಯದು ಭಿಕ್ಷುಗಳೇ, ಕೆಲವು ಸನ್ನಿವೇಶಗಳು ಬರುತ್ತವೆ. ಆಗ ಈತನು ಸತ್ಪುರುಷ ಎಂದು ಸತ್ಪುರುಷನಿಗೆ ಗೊತ್ತಾಗುವುದು. ಆದರೆ ಭಿಕ್ಷುಗಳೇ, ಸತ್ಪುರುಷನು ಅಸತ್ಪುರುಷನಿಗೆ ನೋಡಿದಾಗ ಇವನು ಅಸತ್ಪುರುಷ ಎಂದು ಗೊತ್ತಾಗುವುದೇ?"<br />
<span style="white-space: pre;"> </span>"ಹೌದು ಭಂತೆ ಗೊತ್ತಾಗುವುದು."<br />
<br />
<span style="white-space: pre;"> </span>"ಒಳ್ಳೆಯದು ಭಿಕ್ಷುಗಳೇ, ಸನ್ನಿವೇಶಗಳು ಬಂದಾಗ ಸತ್ಪುರುಷನಿಗೆ ಇವನು ಸತ್ಪುರುಷ ಎಂದು ಗೊತ್ತಾಗುತ್ತದೆ. ಭಿಕ್ಷುಗಳೇ, ಸತ್ಪುರುಷನು ಕುಶಲ ಚಿತ್ತ ಸ್ಥಿತಿಗಳನ್ನು ಹೊಂದಿರುತ್ತಾನೆ. ಸತ್ಪುರುಷರ ಜೊತೆಯಲ್ಲಿ ರಮಿಸುತ್ತಾನೆ, ಸತ್ಪುರುಷರ ರೀತಿಯಲ್ಲಿ ಚಿಂತನೆ ಮಾಡುತ್ತಾನೆ. ಸತ್ಪುರುಷ ರೀತಿ ಬೋಧನೆ (ಬುದ್ಧಿವಾದ) ನೀಡುತ್ತಾನೆ. ಸತ್ಪುರುಷರ ರೀತಿ ಮಾತನಾಡುತ್ತಾನೆ. ಸತ್ಪುರುಷರ ರೀತಿ ಕರ್ಮ ಮಾಡುತ್ತಾನೆ, ಸತ್ಪುರುಷರ ರೀತಿಯಲ್ಲಿ ದೃಷ್ಟಿಕೋನಗಳನ್ನು ಹೊಂದಿರುತ್ತಾನೆ. ಸತ್ಪುರುಷ ರೀತಿಯಲ್ಲಿ ದಾನ ಮಾಡುತ್ತಾನೆ ಮತ್ತು ಭಿಕ್ಷುಗಳೇ, ಹೇಗೆ ಸತ್ಪುರುಷನು ಕುಶಲ ಚಿತ್ತಸ್ಥಿತಿಗಳನ್ನು ಹೊಂದಿರುತ್ತಾನೆ? ಇಲ್ಲಿ ಭಿಕ್ಷುಗಳೇ, ಸತ್ಪುರುಷನು ಶ್ರದ್ಧೆಯನ್ನು ಹೊಂದಿರುತ್ತಾನೆ, ಸತ್ಪುರುಷನು ಪಾಪಲಜ್ಜೆ ಹಾಗು ಪಾಪ ಭಯವನ್ನು ಹೊಂದಿರುತ್ತಾನೆ. ಸತ್ಪುರುಷನು ಬಹಳಷ್ಟು ಜ್ಞಾನವನ್ನು ಕೇಳಿರುತ್ತಾನೆ. ಸತ್ಪುರುಷನು ಪ್ರಯತ್ನಶಾಲಿಯಾಗಿರುತ್ತಾನೆ, ಆತನಲ್ಲಿ ಸ್ಮೃತಿಯು ಜಾಗರೂಕತೆಯು ಸ್ಥಾಪಿತವಾಗಿರುತ್ತದೆ. ಸತ್ಪುರುಷನು ಪ್ರಜ್ಞಾವಂತನಾಗಿರುತ್ತಾನೆ. ಈ ರೀತಿಯಾಗಿ ಭಿಕ್ಷುಗಳೇ, ಸತ್ಪುರುಷನು ಕುಶಲ ಸ್ಥಿತಿಗಳನ್ನು ಹೊಂದಿರುತ್ತಾನೆ".<br />
<br />
<span style="white-space: pre;"> </span>"ಮತ್ತು ಭಿಕ್ಷುಗಳೇ, ಹೇಗೆ ಸತ್ಪುರುಷನು ಸತ್ಪುರುಷರೊಡನೆ ಜೊತೆಯಲ್ಲಿರುತ್ತಾನೆ?"<br />
<span style="white-space: pre;"> </span>"ಭಿಕ್ಷುಗಳೇ, ಯಾರಲ್ಲಿ ಶ್ರದ್ಧೆಯಿರುವುದೋ, ಪಾಪಲಜ್ಜೆ, ಪಾಪಭೀತಿಯಿರುವದೋ, ಯಾರು ಬಹುಶೃತರೋ, ಪ್ರಯತ್ನಶಾಲಿಗಳೋ, ಜಾಗೃತರೋ ಮತ್ತು ಪ್ರಜ್ಞಾವಂತರೋ ಅಂತಹವರೊಡನೆ ಸತ್ಪುರುಷನು ಸ್ನೇಹ ಬೆಳೆಸಿ ಅವರೊಂದಿಗಿರುತ್ತಾನೆ."<br />
<br />
<span style="white-space: pre;"> </span>"ಮತ್ತೆ ಭಿಕ್ಷುಗಳೇ, ಸತ್ಪುರುಷನು ಹೇಗೆ ಸತ್ಪುರುಷರಂತೆ ಚಿಂತನೆ ಮಾಡುತ್ತಾನೆ, ಇಲ್ಲಿ ಭಿಕ್ಷುಗಳೇ, ಸತ್ಪುರುಷನು ತನಗೆ ಬಾಧೆಯನ್ನು ನೀಡುವುದಿಲ್ಲ, ಹಾಗೆಯೇ ಪರರಿಗೂ ಬಾಧೆಯನ್ನು ನೀಡುವುದಿಲ್ಲ. ತನಗೆ ಮತ್ತು ಪರರಿಗೂ ಬಾಧೆ ನೀಡುವುದಿಲ್ಲ. ಹೀಗೆ ಭಿಕ್ಷುಗಳೇ, ಆತನು ಸತ್ಪುರುಷರಂತೆ ಚಿಂತಿಸುತ್ತಾನೆ."<br />
<br />
<span style="white-space: pre;"> </span>"ಮತ್ತೆ ಭಿಕ್ಷುಗಳೇ, ಹೇಗೆ ಆತನು ಸತ್ಪುರುಷರಂತೆ ಬುದ್ಧಿವಾದ ನೀಡುವನು? ಇಲ್ಲಿ ಭಿಕ್ಷುಗಳೇ, ಸತ್ಪುರುಷನು ತನಗೆ ಹಾನಿಯಾಗುವಂತೆ ಅಥವಾ ಪರರಿಗೆ ಹಾನಿಯಾಗುವಂತೆ ಆಗಲಿ ಅಥವಾ ಈರ್ವರಿಗೂ ಹಾನಿಯಾಗುವಂತೆ ಬುದ್ಧಿವಾದ ನೀಡುವುದಿಲ್ಲ. ಹೀಗೆ ಭಿಕ್ಷುಗಳೇ, ಆತನು ಸತ್ಪುರುಷರಂತೆ ಬುದ್ಧಿವಾದ ನೀಡುತ್ತಾನೆ."<br />
<br />
<span style="white-space: pre;"> </span>"ಮತ್ತೆ ಭಿಕ್ಷುಗಳೇ, ಹೇಗೆ ಆತನು ಸತ್ಪುರುಷರಂತೆ ಮಾತನಾಡುತ್ತಾನೆ? ಇಲ್ಲಿ ಭಿಕ್ಷುಗಳೇ, ಆತನು ಸುಳ್ಳಿನಿಂದ ದೂರವಾಗುತ್ತಾನೆ, ಚಾಡಿಯಿಂದ, ಕಟುವಾಕ್ಯದಿಂದ, ವ್ಯರ್ಥ ಹರಟೆಯಿಂದ ದೂರವಾಗುತ್ತಾನೆ. ಹೀಗೆ ಭಿಕ್ಷುಗಳೇ, ಸತ್ಪುರುಷನು ಮಾತನಾಡುತ್ತಾನೆ."<br />
<br />
<span style="white-space: pre;"> </span>"ಮತ್ತೆ ಭಿಕ್ಷುಗಳೇ, ಹೇಗೆ ಆತನು ಸತ್ಪುರುಷರಂತೆ ಕರ್ಮ ಮಾಡುತ್ತಾನೆ? ಇಲ್ಲಿ ಭಿಕ್ಷುಗಳೇ, ಆತನು ಎಲ್ಲಾ ಜೀವಿಗಳ ಜೀವಹತ್ಯೆಯಿಂದ ದೂರನಾಗಿರುತ್ತಾನೆ, ಕಳ್ಳತನದಿಂದ, ವ್ಯಭಿಚಾರದಿಂದ ದೂರವಾಗುತ್ತಾನೆ. ಹೀಗೆ ಭಿಕ್ಷುಗಳೇ, ಸತ್ಪುರುಷನು ಕರ್ಮ ಮಾಡುತ್ತಾನೆ."<br />
<br />
<span style="white-space: pre;"> </span>"ಮತ್ತೆ ಭಿಕ್ಷುಗಳೇ, ಹೇಗೆ ಆತನು ಸತ್ಪುರುಷರಂತೆ ದೃಷ್ಟಿಕೋನಗಳನ್ನು ಹೊಂದಿರುತ್ತಾನೆ? ಭಿಕ್ಷುಗಳೇ, ಸತ್ಪುರುಷನು ಈ ಕೆಳಕಂಡಂತೆ ಸಮ್ಮಾ ದೃಷ್ಟಿಕೋನಗಳನ್ನು ಹೊಂದಿರುತ್ತಾನೆ: ದಾನಕ್ಕೆ ಫಲವಿದೆ, ಅರ್ಪಣೆಗೆ ಫಲವಿದೆ, ತ್ಯಾಗ ಸತ್ಕಾರಗಳಿಗೆ ಫಲವಿದೆ, ಕುಶಲ ಕರ್ಮಗಳಿಗೆ ಹಾಗು ಪಾಪ ಕರ್ಮಗಳಿಗೆ ಫಲವಿದೆ. ಹೀಗಾಗಿ ಈ ಲೋಕವು ಇದು ಹಾಗೆಯೆ ಪರಲೋಕವೂ ಇದೆ. ತಾಯ್ತಂದೆಯರಿಗೆ ಸೇವೆ ಮಾಡುವುದರಿಂದಾಗಿ ಲಾಭವಿದೆ, ತಾಯಿ-ತಂದೆಯರಿಲ್ಲದೆಯೇ ತಾವಾಗಿಯೇ ಹುಟ್ಟುವಂತಹ ಓಪಪಾತಿಕ ಜೀವಿಗಳೂ ಇದ್ದಾರೆ. ಯೋಗ್ಯವಾಗಿ, ಸರಿಯಾಗಿ ಜೀವಿಸುವ ಸಮಣ ಬ್ರಾಹ್ಮಣರೂ ಇದ್ದಾರೆ. ತಮ್ಮ ಅಭಿಜ್ಞ ಬಲದಿಂದಾಗಿ ಈ ಲೋಕದ ಬಗ್ಗೆ, ಪರಲೋಕದ ಬಗ್ಗೆ ಹೇಳುವಂತಹ ಮಹಾನುಭಾವರು ಲೋಕದಲ್ಲಿರುವರು. ಹೀಗೆ ಭಿಕ್ಷುಗಳೇ, ಸತ್ಪುರುಷರು ಸಮ್ಮಾದೃಷ್ಟಿಗಳನ್ನು ಹೊಂದಿತ್ತಾರೆ."<br />
<br />
<span style="white-space: pre;"> </span>"ಮತ್ತೆ ಭಿಕ್ಷುಗಳೇ, ಹೇಗೆ ಸತ್ಪುರುಷರು ದಾನವನ್ನು ಮಾಡುತ್ತಾರೆ? ಇಲ್ಲಿ ಭಿಕ್ಷುಗಳೇ, ಸತ್ಪುರುಷರು ಗೌರವಾರ್ಪಣೆಯಿಂದ ದಾನ ಮಾಡುತ್ತಾರೆ. ತಮ್ಮ ಕೈಯಿಂದಲೇ ದಾನವನ್ನು ಮಾಡುತ್ತಾರೆ. ಪ್ರಜ್ಞಾಯುತವಾಗಿ ಶ್ರೇಷ್ಟವಾದುದನ್ನು ದಾನ ಮಾಡುತ್ತಾರೆ. ಪರಿಶುದ್ಧವಾದುದನ್ನೇ ದಾನ ಮಾಡುತ್ತಾರೆ. ಭವಿಷ್ಯವನ್ನು ಗಣನೆಗೆ ತೆಗೆದುಕೊಂಡು ದಾನ ಮಾಡುತ್ತಾರೆ. ಹೀಗೆ ಭಿಕ್ಷುಗಳೇ, ಸತ್ಪುರುಷರು ದಾನ ಮಾಡುತ್ತಾರೆ."<br />
<br />
<span style="white-space: pre;"> </span>"ಭಿಕ್ಷುಗಳೇ, ಹೀಗೆ ಸತ್ಪುರುಷನು ಕುಶಲಚಿತ್ತ ಸ್ಥಿತಿಗಳನ್ನು ಹೊಂದಿರುತ್ತಾನೆ, ಸತ್ಪುರುಷರ ಜೊತೆಯಲ್ಲಿರುತ್ತಾನೆ, ಸತ್ಪುರುಷರಂತೆ ಚಿಂತಿಸುತ್ತಾನೆ, ಸತ್ಪುರುಷರಂತೆ ಬುದ್ಧಿವಾದನೀಡುತ್ತಾನೆ, ಸತ್ಪುರುಷರಂತೆಯೇ ಮಾತನಾಡುತ್ತಾನೆ, ಸತ್ಪುರುಷರಂತೆಯೇ ಕರ್ಮ ಮಾಡುತ್ತಾನೆ, ಸತ್ಪರುಷರಂತೆಯೇ ದೃಷ್ಟಿಕೋನಗಳನ್ನು ಹೊಂದಿರುತ್ತಾನೆ. ಸತ್ಪುರುಷರಂತೆ ದಾನವನ್ನು ಮಾಡುತ್ತಾನೆ. ಇಂತಹ ಸತ್ಪುರುಷನು ಮರಣದ ನಂತರವೂ ಸತ್ಪುರುಷರು ಇರುವಲ್ಲಿಯೇ ಜನ್ಮ ತಾಳುವನು ಅಂತಹ ಸ್ಥಿತಿ ಯಾವುದು? ಅದೇ ಮಹತ್ತರವಾದ ಸುಗತಿ ಅಥವಾ ಮಾನವರಲ್ಲಿ ಶ್ರೇಷ್ಠ ಸ್ಥಿತಿಯನ್ನು ಹೊಂದುತ್ತಾನೆ."<br />
<br />
<span style="white-space: pre;"> </span>ಹೀಗೆ ಭಗವಾನರು ಹೇಳಿದಾಗ, ಭಿಕ್ಷುಗಳು ಆನಂದದಿಂದ ಅನುಮೋದನೆ ಮಾಡಿದರು.<br />
</div>
Aneesh Bodhhttp://www.blogger.com/profile/02041276688261983503noreply@blogger.com0tag:blogger.com,1999:blog-8742652691355814794.post-74845438649892138122019-10-22T02:41:00.005-07:002019-10-22T02:41:52.660-07:00ಅವಿಜ್ಜ ಸುತ್ತ (ಅವಿದ್ಯೆ/ಅಜ್ಞಾನದ ಸೂತ್ರ)<div dir="ltr" style="text-align: left;" trbidi="on">
<h2 style="text-align: left;">
<b>ಅವಿಜ್ಜ ಸುತ್ತ (ಅವಿದ್ಯೆ/ಅಜ್ಞಾನದ ಸೂತ್ರ)</b></h2>
<b><br /></b>
<div class="separator" style="clear: both; text-align: center;">
<a href="https://1.bp.blogspot.com/-6nk-trcdf9k/Xa7OzeCASLI/AAAAAAAAEy8/XS1ONzDbWc8MP4TE4eQ7raJ6hlXC35-gQCLcBGAsYHQ/s1600/crop%2B%25288%2529.jpg" imageanchor="1" style="margin-left: 1em; margin-right: 1em;"><img border="0" data-original-height="1280" data-original-width="1440" height="284" src="https://1.bp.blogspot.com/-6nk-trcdf9k/Xa7OzeCASLI/AAAAAAAAEy8/XS1ONzDbWc8MP4TE4eQ7raJ6hlXC35-gQCLcBGAsYHQ/s320/crop%2B%25288%2529.jpg" width="320" /></a></div>
<b><br /></b>
<span style="white-space: pre;"> </span>ಒಬ್ಬ ಭಿಕ್ಷುವು ಭಗವಾನರಲ್ಲಿಗೆ ಹೋಗಿ ವಂದಿಸಿದನು, ನಂತರ ಒಂದು ಪಕ್ಕದಲ್ಲಿ ಕುಳಿತನು ಮತ್ತು ಹೀಗೆ ಹೇಳಿದನು: ಭಗವಾನ್ ಯಾವ ಒಂದು ವಿಷಯವನ್ನು ಭಿಕ್ಷುವು ವಜರ್ಿಸಿದಾಗ, ಆತನಲ್ಲಿನ ಅಜ್ಞಾನವು ಪರಿತ್ಯಜಿಸಲ್ಪಟ್ಟು ಆತನಲ್ಲಿ ಸ್ಪಷ್ಟ ಜ್ಞಾನವು ಉದಯಿಸುತ್ತದೆ?<br />
<span style="white-space: pre;"> </span>ಹೌದು ಭಿಕ್ಷು, ಅಂತಹ ವಿಷಯವೊಂದಿದೆ. ಅದನ್ನು ಭಿಕ್ಷುವು ವಜರ್ಿಸಿದಾಗ ಆತನಲ್ಲಿನ ಅಜ್ಞಾನವು ಪರಿತ್ಯಜಿಸಲ್ಪಟ್ಟು ಆತನಲ್ಲಿ ಸ್ಪಷ್ಟ ಜ್ಞಾನವು ಉದಯಿಸುತ್ತದೆ.<br />
<span style="white-space: pre;"> </span>ಆ ಒಂದು ವಿಷಯ ಯಾವುದು?<br />
<span style="white-space: pre;"> </span>ಅಜ್ಞಾನವೇ ಭಿಕ್ಷುವೆ, ಇದನ್ನು ಭಿಕ್ಷುವು ವಜರ್ಿಸಿದಾಗ ಆತನ ಅಜ್ಞಾನವು ಪರಿತ್ಯಜಿಸಲ್ಪಟ್ಟು, ಆತನಲ್ಲಿ ಸ್ಪಷ್ಟ ಜ್ಞಾನವು ಉದಯಿಸುತ್ತದೆ.<br />
<span style="white-space: pre;"> </span>ಆದರೆ ಅಜ್ಞಾನವು ಪರಿತ್ಯಜವಾಯಿತು ಮತ್ತು ಸ್ಪಷ್ಟ ಜ್ಞಾನವು ಉದಯಿಸುತ್ತದೆ ಎಂದು ಭಿಕ್ಷುವು ಹೇಗೆ ಅರಿಯುತ್ತಾನೆ ಮತ್ತು ಕಾಣುತ್ತಾನೆ?<br />
<span style="white-space: pre;"> </span>ಒಮ್ಮೆ ಭಿಕ್ಷುವು ಹೀಗೆ ಕೇಳಿರುತ್ತಾನೆ: ಎಲ್ಲಾ ವಿಷಯಗಳು ಅಂಟುವಿಕೆಗೆ ಅನರ್ಹವಾಗಿದೆ. ಆಗ ಆತನಿಗೆ ನೇರವಾಗಿ ಪ್ರತಿಯೊಂದು ಅರಿವಿಗೆ ಬಂದಿರುತ್ತದೆ. ಆತನು ಎಲ್ಲವನ್ನು ಸೂಕ್ಷ್ಮವಾಗಿಯೇ ಗ್ರಹಿಸಿರುತ್ತಾನೆ. ಆತನು ಎಲ್ಲಾ ವಿಷಯಗಳನ್ನು ಯಾವುದೋ ರೀತಿಯಲ್ಲಿ ಪ್ರತ್ಯೇಕವಾಗಿ ಕಾಣುತ್ತಾನೆ.<br />
<span style="white-space: pre;"> </span>ಆತನು ಕಣ್ಣನ್ನು ಬೇರೆಯಾಗಿ ಕಾಣುತ್ತಾನೆ, ಹಾಗೆಯೇ ದೃಶ್ಯಗಳನ್ನು ಬೇರೆಯಾಗಿ (ಪ್ರತ್ಯೇಕವಾಗಿ) ಕಾಣುತ್ತಾನೆ, ಅವೆರಡರಿಂದ ಉತ್ಪನ್ನವಾಗುವ ಕಣ್ಣಿನಿಂದಾದ ಅರಿವನ್ನು (ಚಕ್ಷು ವಿಞ್ಞಾನ) ಬೇರೆಯಾಗಿಯೇ ಕಾಣುತ್ತಾನೆ. ಹಾಗೆಯೇ ಕಣ್ಣು ಮತ್ತು ದೃಶ್ಯಗಳ ನಡುವಿನ ಸಂಪರ್ಕವನ್ನು (ಪಸ್ಸ/ಸ್ಪರ್ಶ) ಬೇರೆಯಾಗಿಯೇ ಕಾಣುತ್ತಾನೆ ಮತ್ತು ಯಾವುದೆಲ್ಲವು ಕಣ್ಣಿನ ಸಂಪರ್ಕದಿಂದಾಗಿ ಉದಯಿಸಿತೋ ಹೇಳುವುದಾದರೆ ಸುಖ, ದುಃಖ ಅಥವಾ ಸುಖವು-ದುಃಖವೂ ಅಲ್ಲದ, ಅವೆಲ್ಲವನ್ನು ಪ್ರತ್ಯೇಕವಾಗಿ ಕಾಣುತ್ತಾನೆ.<br />
<span style="white-space: pre;"> </span>ಹಾಗೆಯೇ ಕಿವಿಯನ್ನು... ಮೂಗನ್ನು... ನಾಲಿಗೆಯನ್ನು... ದೇಹವನ್ನು ಪ್ರತ್ಯೇಕವಾಗಿ ಕಾಣುತ್ತಾನೆ. ಆತನು ಮನಸ್ಸನ್ನು ಪ್ರತ್ಯೇಕವಾಗಿ ಕಾಣುತ್ತಾನೆ, ಹಾಗೆಯೇ ಚಿತ್ತ ವಿಷಯಗಳನ್ನು ಪ್ರತ್ಯೇಕವಾಗಿ ಕಾಣುತ್ತಾನೆ, ಹಾಗೆಯೇ ಮನೋ ವಿಞ್ಞಾನವನ್ನು (ಮನಸ್ಸಿನಿಂದ ಅರಿಯುವಿಕೆಯನ್ನು) ಬೇರೆಯಾಗಿ ಕಾಣುತ್ತಾನೆ. ಮನಸ್ಸಿನ ಮತ್ತು ಮನೋ ವಿಷಯಗಳ ನಡುವಿನ ಸಂಪರ್ಕವನ್ನು ಬೇರೆಯಾಗಿ ಕಾಣುತ್ತಾನೆ. ಹಾಗೆಯೇ ಅಲ್ಲಿಂದ ಉತ್ಪನ್ನವಾದ ಸುಖ-ದುಃಖ, ಸುಖವು ಅಲ್ಲದ, ದುಃಖವು ಅಲ್ಲದ ವೇದನೆಗಳನ್ನು ಬೇರೆಯಾಗಿ ಕಾಣುತ್ತಾನೆ.<br />
<span style="white-space: pre;"> </span>ಹೀಗೆ ಓ ಭಿಕ್ಷುವೇ, ಭಿಕ್ಷುವು ಅಜ್ಞಾನವು ಪರಿತ್ಯಜಿತವಾಗಿ, ಸ್ಪಷ್ಟ ಜ್ಞಾನವು ಉದಯಿಸುವುದನ್ನು ಭಿಕ್ಷು ಕಾಣುತ್ತಾನೆ.<br />
</div>
Aneesh Bodhhttp://www.blogger.com/profile/02041276688261983503noreply@blogger.com0tag:blogger.com,1999:blog-8742652691355814794.post-3987584411544907662019-08-13T04:38:00.005-07:002019-08-13T04:38:44.843-07:00 Girimananda sutta in kannada ಗಿರಿಮಾನಂದ ಸುತ್ತ (ರೋಗಿಗಳ ಬಳಿ ಪಠಿಸುವ ಸುತ್ತ)<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://1.bp.blogspot.com/-WW_Js0-0E4I/XVKgG9AfskI/AAAAAAAAEsc/YSmXiiMSedwgTohJbbAJeykJUkjS_g0pwCLcBGAs/s1600/default.jpg" imageanchor="1" style="margin-left: 1em; margin-right: 1em;"><img border="0" data-original-height="1077" data-original-width="900" height="320" src="https://1.bp.blogspot.com/-WW_Js0-0E4I/XVKgG9AfskI/AAAAAAAAEsc/YSmXiiMSedwgTohJbbAJeykJUkjS_g0pwCLcBGAs/s320/default.jpg" width="267" /></a></div>
<h2 style="clear: both; text-align: center;">
ಗಿರಿಮಾನಂದ ಸುತ್ತ (ರೋಗಿಗಳ ಬಳಿ ಪಠಿಸುವ ಸುತ್ತ)</h2>
<div class="separator" style="clear: both; text-align: center;">
ಒಮ್ಮೆ ಭಗವಾನರು ಶ್ರಾವಸ್ಥಿಯ ಜೇತವನದ ಆನಾಥಪಿಂಡಿಕನ ವಿಹಾರದಲ್ಲಿ ತಂಗಿದ್ದರು. ಆ ಸಮಯದಲ್ಲಿ ಪೂಜ್ಯ ಗಿರಿಮಾನಂದರು ಅಸ್ವಸ್ಥರಾಗಿದ್ದರು. ಅವರ ಆರೋಗ್ಯ ತೀರ ಕೆಟ್ಟಿತ್ತು. ಆಗ ಪೂಜ್ಯ ಆನಂದರವರು ಭಗವಾನರ ಬಳಿಗೆ ಬಂದು ವಂದಿಸಿ ಒಂದೆಡೆ ಕುಳಿತು ಹೀಗೆ ನುಡಿದರು: :</div>
<div class="separator" style="clear: both; text-align: center;">
ಭಗವಾನ್ ಅಯುಷ್ಮಂತ ಗಿರಿಮಾನಂದರು ತೀರ ಅಸ್ವಸ್ಥರಾಗಿದ್ದಾರೆ ಅವರ ಆರೋಗ್ಯ ಗಂಭಿರವಾಗಿದೆ. ಅದ್ದರಿಂದ ಭಗವಾನರು ಅನುಕಂಪೆಯುಳ್ಳವರಾಗಿ ಅಲ್ಲಿಗೆ ಹೋಗುವಂತಾಗಲಿ.</div>
<div class="separator" style="clear: both; text-align: center;">
ಆನಂದ ನೀನು ಆಯುಷ್ಮಂತ ಗಿರಿಮಾನಂದನಲ್ಲಿಗೆ ಹೋಗಿ ಈ 10 ಬಗೆಯ ಸಞ್ಞಗಳನ್ನು (ಸಂಜ್ಞೆ/ಗ್ರಹಿಕೆ) ಪಠಿಸಿದ್ದೆ ಆದರೆ , ಅದನ್ನು ಆಲಿಸಿ, ಅದರ ಬಗ್ಗೆ ಮನಸ್ಸು ಹರಿಸಿ ಆತನ ಚಿತ್ತವು ಸಕಾರಾತ್ಮಕವಾಗಿ ಆತನ ರೋಗವು ಆ ಸ್ಥಳದಲ್ಲಿಯೆ ಆ ಕ್ಷಣವೇ ಇಲ್ಲದಂತಾಗುವುದು.</div>
<div class="separator" style="clear: both; text-align: center;">
<br /></div>
<div class="separator" style="clear: both; text-align: center;">
ಆನಂದ ಯಾವುವವು 10 ?ಅವೆಂದರೆ </div>
<div class="separator" style="clear: both; text-align: center;">
<br /></div>
<div class="separator" style="clear: both; text-align: center;">
1.<span style="white-space: pre;"> </span>ಅನಿತ್ಯದ ಸಂಜ್ಞೆ</div>
<div class="separator" style="clear: both; text-align: center;">
2.<span style="white-space: pre;"> </span>ಅನತ್ತ (ಆನಾತ್ಮದ ) ಸಂಜ್ಞೆ</div>
<div class="separator" style="clear: both; text-align: center;">
3.<span style="white-space: pre;"> </span>ಅಶುಭದ ಕುರೂಪ (ಸಂಜ್ಞೆ)</div>
<div class="separator" style="clear: both; text-align: center;">
4.<span style="white-space: pre;"> </span>ಅದಿನವದ (ಅನಾನುಕೂಲಗಳ) ಸಂಜ್ಞೆ</div>
<div class="separator" style="clear: both; text-align: center;">
5.<span style="white-space: pre;"> </span>ಪಹಾನದ (ತೇಜಿಸಬೇಕಾದುದರ ಬಗ್ಗೆ ) ಸಂಜ್ಞೆ</div>
<div class="separator" style="clear: both; text-align: center;">
6.<span style="white-space: pre;"> </span>ವಿರಾಗದ (ರಾಗರಹಿತನಾಗುವಿಕೆಯ) ಸಂಜ್ಞೆ</div>
<div class="separator" style="clear: both; text-align: center;">
7.<span style="white-space: pre;"> </span>ನಿರೋಧದ (ನಿಲ್ಲಿಸುವಿಕೆಯ /ಉದಯಿಸುದಿರುವಿಕೆಯ) ಸಂಜ್ಞೆ</div>
<div class="separator" style="clear: both; text-align: center;">
8.<span style="white-space: pre;"> </span>ಸಬ್ಬಲೋಕೇ ಅಭಿರತನ (ಎಲ್ಲಾ ಲೋಕಗಳ ಬಗೆಗಿನ ಆಸಕ್ತಿ ಇಲ್ಲದಿರುವಿಕೆಯ )ಸಂಜ್ಞೆ</div>
<div class="separator" style="clear: both; text-align: center;">
9.<span style="white-space: pre;"> </span>ಸರ್ವ ಸಂಖಾರಗಳಲ್ಲಿ ಅನಿತ್ಯದ ಸಂಜ್ಞೆ</div>
<div class="separator" style="clear: both; text-align: center;">
10.<span style="white-space: pre;"> </span>ಅನಾಪಾನ ಸತಿ</div>
<div class="separator" style="clear: both; text-align: center;">
<br /></div>
<div class="separator" style="clear: both; text-align: center;">
<b>1.ಮತ್ತೆ ಯಾವುದು ಅನಿತ್ಯದ ಸಂಜ್ಞೆ ? </b></div>
<div class="separator" style="clear: both; text-align: center;">
ಇಲ್ಲಿ ಭಿಕ್ಖುವು ಅಥವಾ ಸಾಧಕನು ಕಾಡಿಗೆ ಹೋಗಿ ಅಥವಾ ಮರದ ಬುಡಕ್ಕೆ, ಅಥವಾ ಖಾಲಿಯಾದ ಗೃಹದಲ್ಲಿ, ಹೋಗಿ ಹೀಗೆ ಚಿಂತನೆ ಮಾಡುತ್ತಾನೆ ದೇಹವಾಗಲಿ, ಭಾವವೇಶಗಳಾಗಲಿ (ವೇದನೆ), ಸಂಜ್ಞೇಗಳಾಗಲಿ, ಸಂಖಾರಗಳಾಗಲಿ(ಇಚ್ಚೆ) ಮತ್ತು ವಿಜ್ಞಾಣ(ಮನಸ್ಥಿತಿ/ಅರಿವು)ಗಳಾಗಲಿ ಇವೆಲ್ಲವೂ ಅನಿತ್ಯವಾಗಿದೆ ಹೀಗೆ ಆತನು ಪಂಚಖಂದಗಳಲ್ಲಿ ಅನಿತ್ಯಗಳನ್ನು ಧ್ಯಾನದಲ್ಲಿ ಕಾಣುವನು.. ಇದಕ್ಕೆ ಅನಿತ್ಯದ ಸಂಜ್ಞೆ ಎನ್ನುವರು.</div>
<div class="separator" style="clear: both; text-align: center;">
<br /></div>
<div class="separator" style="clear: both; text-align: center;">
<b> 2. ಮತ್ತೆ ಯಾವುದು ಅನತ್ತ (ಆನಾತ್ಮದ ) ಸಂಜ್ಞೆ ? </b></div>
<div class="separator" style="clear: both; text-align: center;">
ಇಲ್ಲಿ ಭಿಕ್ಖುವು ಅಥವಾ ಸಾಧಕನು ಕಾಡಿಗೆ ಹೋಗಿ ಅಥವಾ ಮರದ ಬುಡಕ್ಕೆ, ಅಥವಾ ಖಾಲಿಯಾದ ಗೃಹದಲ್ಲಿ, ಹೋಗಿ ಹೀಗೆ ಚಿಂತನೆ ಮಾಡುತ್ತಾನೆ : ಕಣ್ನು ಆಗಲಿ ಅಥವಾ ಅವುಗಳಿಂದ ನೋಡಲ್ಪಡುವ ರೂಪಗಳಾಗಲಿ ಹಾಗೆಯೇ ಕಿವಿ ಮತ್ತು ಶಬ್ದಗಳು: ; ಮೂಗು ಮತ್ತು ವಾಸನೆಗಳು ; ನಾಲಿಗೆ ಮತ್ತು ಸ್ವಾದಗಳು :ದೇಹ ಮತ್ತು ಸ್ಪರ್ಷಗಳು ; ಮತ್ತು ಮನಸ್ಸು ಮತ್ತು ಮಾನಸಿಕ ವಿಷಯಗಳು. ಇವು ಯಾವುವು ಸಹಾ ನಾನಲ್ಲ ,ನನ್ನದಲ್ಲ, ನನ್ನ ಆತ್ಮವಲ್ಲ, ಎಂದು ಅರಿಯುವುದು. ಹೀಗೆ ಆರು ಇಂದ್ರಿಯಗಳು ಹಾಗೂ ಅವುಗಳ ವಿಷಯಗಳಲ್ಲಿ ಆನಾತ್ಮವನ್ನು ಕಾಣುವುದು ಅಂದರೆ ಆವು ಯಾವುದರಲ್ಲಿಯೂ ಸಹಾ ಆತ್ಮವನ್ನು (ಸ್ವಯಂ/ನಾನು/ನನ್ನದು) ಕಾಣದಿರುವುದು.</div>
<div class="separator" style="clear: both; text-align: center;">
<br /></div>
<div class="separator" style="clear: both; text-align: center;">
<b> 3. ಮತ್ತೆ ಯಾವುದು ಅಶುಭದ (ಕುರೂಪ )ಸಂಜ್ಞೆ? </b></div>
<div class="separator" style="clear: both; text-align: center;">
ಇಲ್ಲಿ ಭಿಕ್ಖುವು ಅಥವಾ ಸಾಧಕನು ಕಾಡಿಗೆ ಹೋಗಿ ಅಥವಾ ಮರದ ಬುಡಕ್ಕೆ, ಅಥವಾ ಖಾಲಿಯಾದ ಗೃಹದಲ್ಲಿ, ಹೋಗಿ ಹೀಗೆ ಚಿಂತನೆ ಮಾಡುತ್ತಾನೆ : ಇಲ್ಲಿ ಭಿಕ್ಖುವು ಪಾದತಳದಿಂದ ಹಿಡಿದು ತಲೆಕೂದಲವರೆವಿಗೂ ಈ ಶರೀರವೂ ಚರ್ಮದಿಂದ ಆವೃತವಾದ ಅನೇಕ ಬಗೆಯ ಅಸಹ್ಯತೆಗಳಿಂದ ಕೂಡಿರುವುದನ್ನು ಹೀಗೆ ಪರಿಕ್ಷಿಸುತ್ತಾನೆ. ಈ ಶರೀರದಲ್ಲಿ ತಲೆಕೂದಲು, ಶರೀರದ ಕೂದಲು, ಉಗುರುಗಳು, ಹಲ್ಲುಗಳು, ಚರ್ಮ, ಮಾಂಸ, ಸ್ನಾಯುಗಳು, ಮೂಳೆಗಳು,, ಅಸ್ಥಿಮಜ್ಜೆ, , ಮೂತ್ರಪಿಂಡ, ಹೃದಯ, ಯಕೃತ್, ದ್ವನಿಪೆಟ್ಟಿಗೆ, ಗುಲ್ಮ, ಶ್ವಾಸಕೋಶ, ಕರುಳು, ಜಠರ, ಜೀರ್ಣವಾಗದ ಆಹಾರ, ಮಲ, ಪಿತ್ತ,, ಕಫ, ಕೀವು,, ರಕ್ತ, ಬೆವರು, ,ಕೊಬ್ಬು, ಆಶ್ರು, ಮೆದಸ್ಸು, ಜೊಲ್ಲು, ಗೊಣ್ಣೆ, ಕೀಲುಗಳ ಮಧ್ಯೆಯಿರುವ ಎಣ್ಣೆ, ಮೂತ್ರ, ಇತ್ಯಾದಿಗಳು ಇವೆ. ಹೀಗೆ ಶರೀರದ ಕುರೂಪವನ್ನು ಅರಿಯುತ್ತ ಅಸಹ್ಯಕರದ ಸಂಜ್ಞೆಗಳನ್ನು ಅರಿಯುತ್ತ ಬೆಳಸುತ್ತಾನೆ. ಇದನ್ನು ಅಶುಭದ ಸಂಜ್ಞೆ ಎನ್ನುವರು.</div>
<div class="separator" style="clear: both; text-align: center;">
<br /></div>
<div class="separator" style="clear: both; text-align: center;">
<br /></div>
<div class="separator" style="clear: both; text-align: center;">
<b> 4. ಮತ್ತೆ ಯಾವುದು ಅದಿನವದ (ಅನಾನುಕೂಲಗಳ) ಸಂಜ್ಞೆ ? </b></div>
<div class="separator" style="clear: both; text-align: center;">
ಇಲ್ಲಿ ಭಿಕ್ಖುವು ಅಥವಾ ಸಾಧಕನು ಕಾಡಿಗೆ ಹೋಗಿ ಅಥವಾ ಮರದ ಬುಡಕ್ಕೆ, ಅಥವಾ ಖಾಲಿಯಾದ ಗೃಹದಲ್ಲಿ, ಹೋಗಿ ಹೀಗೆ ಚಿಂತನೆ ಮಾಡುತ್ತಾನೆ : ಈ ಶರೀರವು ಬಹಳಷ್ಟು ದುಃಖಗಳನ್ನು ಮತ್ತು ಹಲವಾರು ಅನಾನುಕೂಲಗಳನ್ನು ಹೊಂದಿದೆ. ಅದರಿಂದಾಗಿಯೇ ಈ ಶರೀರವು ಬಹಳಷ್ಟು ವಿಧದ ಕಾಯಿಲೆಗಳಿಗೆ ಗುರಿಯಾಗುವುದು, ಉದಾಹರಿಸುವುದಾದರೆ ಕಣ್ಣಿನ ಕಾಯಿಲೆ, ಒಳಕಿವಿಯ ಕಾಯಿಲೆ, ಮೂಗಿನ ಕಾಯಿಲೆ, ನಾಲಿಗೆಗೆ ಸಂಬಂಧ ಪಟ್ಟ ಕಾಯಿಲೆಗಳು, ದೇಹ, ತಲೆ, ಕಿವಿ, ಹಲ್ಲುನೋವು, ಮತ್ತು ತುಟಿಗಳ ಕಾಯಿಲೆ, ಕೆಮ್ಮು, ಅಸ್ತಮ, ನೆಗಡಿ, ಉರಿ, ಜ್ವರ, ಹೊಟ್ಟೆನೋವು, ತಲೆತಿರುಗುವಿಕೆ, ಆಮಶಂಕೆ, ಜಠರ ನೋವು, ಕಾಲೆರಾ, ಕುಷ್ಠರೋಗ, ಗುಳ್ಳೆಗಳು, ಚರ್ಮರೋಗಗಳು, ಕ್ಷಯರೋಗ, ಮೂಚರ್ೆರೋಗ,, ಸರ್ಪಸುತ್ತು ಚರ್ಮ ರೋಗ, ತುರಿಕೆ, ಕಜ್ಜಿ, ಸಿಡುಬು ರೋಗ, ಹಕ್ಕಳೆ ರೋಗ, ರಕ್ತಸ್ರಾವ, ಮಧುಮೇಹ, ಮೂಲವ್ಯಾಧಿ, ಮೊಡಮೆ, ಮತ್ತು ಕೀವು ವ್ರಣ, ಪಿತ್ತ ಅಥವಾ ಕಫ ಅಥವಾ ವಾತದ ಅವ್ಯವಸ್ಥೆಯಿಂದಾಗುವ ರೋಗಗಳು, ವಾತವರಣದ ಅವ್ಯವಸ್ಥೆಯಿಂದಾಗುವ ರೋಗಗಳು, ನಿರ್ಲಕ್ಷತೆಯಿಂದ ಉಂಟಾಗುವ ರೋಗಗಳು, ಅತಿಶ್ರಮದಿಂದ ಅಥವಾ ಹಿಂದಿನ ಕಮ್ಮಗಳಿಂದ ಉಂಟಾಗುವ ರೋಗಗಳು, ಚಳಿ, ಉಷ,, ಹಸಿವು, ಬಾಯಾರಿಕೆ, ನಿರ್ಜಲಿಕರಣ, ಮೂತ್ರವ್ಯಾದಿಗಳು, ಮತ್ತು ಇತ್ಯಾದಿ. ಹೀಗೆ ಹಲವಾರು ದೋಷಗಳಿಂದ ಕೋಡಿರುವ ಶರೀರವನ್ನು ವೀಕ್ಷಿಸುತ್ತಾನೆ, ಇದಕ್ಕೆ ಶರೀರದ ಅನಾನೂಕಲಗಳ ಸಂಜ್ಞೆ ಎನ್ನುತ್ತಾರೆ.</div>
<div class="separator" style="clear: both; text-align: center;">
<br /></div>
<div class="separator" style="clear: both; text-align: center;">
<b>5. ಮತ್ತೆ ಯಾವುದು ಪಹಾನದ (ತೇಜಿಸಬೇಕಾದುದರ ಬಗ್ಗೆ )ಸಂಜ್ಞೆ ?</b></div>
<div class="separator" style="clear: both; text-align: center;">
ಇಲ್ಲಿ ಭಿಕ್ಖುವು ಅಥವಾ ಸಾಧಕನು ಕಾಡಿಗೆ ಹೋಗಿ ಅಥವಾ ಮರದ ಬುಡಕ್ಕೆ, ಅಥವಾ ಖಾಲಿಯಾದ ಗೃಹದಲ್ಲಿ, ಹೋಗಿ ಹೀಗೆ ಚಿಂತನೆ ಮಾಡುತ್ತಾನೆ : ಇಲ್ಲಿ ಭಿಕ್ಖುವು ಕಾಮುಕತೆಗಳ ಯೋಚನೆಗಳಾಗಲಿ, ಅಥವಾ ದ್ವೇಷಗಳ ಯೋಚನೆಗಳಾಗಲಿ ಅಥವಾ ಹಿಂಸೆ(ಕ್ರೂರತೆ )ಗಳ ಯೋಚನೆಗಳಾಗಲಿ ಅವು ಉಂಟಾದಾಗ ಸಹಿಸುವುದಿಲ್ಲ, ಅಕುಶಲ ಯೋಚನೆಗಳು ಯಾವುವೇ ಆಗಲಿ ಅವು ಉದಯಿಸುವಾಗ ಸಹಿಸಲಾರನು, ಬದಲಾಗಿ ಅವುಗಳನ್ನು ತೊರೆಯುತ್ತಾನೆ, ತೆಗೆದು ಹಾಕುತ್ತಾನೆ, ಇನ್ನಿಲ್ಲದಂತೆ ಮಾಡುತ್ತಾನೆ, ಮತ್ತು ನಿನರ್ಾಮ ಮಾಡಿಹಾಕುತ್ತಾನೆ, ಇದನ್ನು ತ್ಯೇಜಿಸಬೇಕಾದುದರ ಸಂಜ್ಞೆ ಎನ್ನುತ್ತಾರೆ.</div>
<div class="separator" style="clear: both; text-align: center;">
<br /></div>
<div class="separator" style="clear: both; text-align: center;">
<b>6. ಮತ್ತೆ ಯಾವುದು ವಿರಾಗದ (ರಾಗರಹಿತನಾಗುವಿಕೆಯ) ಸಂಜ್ಞೆ ?</b></div>
<div class="separator" style="clear: both; text-align: center;">
ಇಲ್ಲಿ ಭಿಕ್ಖುವು ಅಥವಾ ಸಾಧಕನು ಕಾಡಿಗೆ ಹೋಗಿ ಅಥವಾ ಮರದ ಬುಡಕ್ಕೆ, ಅಥವಾ ಖಾಲಿಯಾದ ಗೃಹದಲ್ಲಿ, ಹೋಗಿ ಹೀಗೆ ಚಿಂತನೆ ಮಾಡುತ್ತಾನೆ : ಇದೇ ಶಾಂತಿಯಾಗಿದೆ, ಇದೇ ಉದಾತ್ತವಾಗಿದೆ, ಅದೇಂದರೆ ಎಲ್ಲಾ ಚಟುವಟಿಕೆ(ಸಂಖಾರ)ೆಗಳನ್ನು ಸ್ತಬ್ದಗೊಳಿಸುವಿಕೆ, ಎಲ್ಲಾ ಬಗೆಯ ಅಂಟುವಿಕೆಗಳನ್ನು ಬಿಟ್ಟುಬಿಡುವಿಕೆ, ತೃಷ್ಣೆಯ ಕ್ಷಯಗೊಳಿಸುವಿಕೆ, ವಿರಾಗತಾಳುವಿಕೆ, ನಂದಿಸುವಿಕೆ(ನಿಬ್ಬಾಣ). ಇವನ್ನೆ ವಿರಾಗದ ಸಂಜ್ಞೆಗಳು ಎನ್ನುವರು.</div>
<div class="separator" style="clear: both; text-align: center;">
<br /></div>
<div class="separator" style="clear: both; text-align: center;">
<b>7. ಮತ್ತೆ ಯಾವುದು ನಿರೋಧದ (ನಿಲ್ಲಿಸುವಿಕೆಯ /ಉದಯಿಸುದಿರುವಿಕೆಯ) ಸಂಜ್ಞೆ ? </b></div>
<div class="separator" style="clear: both; text-align: center;">
ಇಲ್ಲಿ ಭಿಕ್ಖುವು ಅಥವಾ ಸಾಧಕನು ಕಾಡಿಗೆ ಹೋಗಿ ಅಥವಾ ಮರದ ಬುಡಕ್ಕೆ, ಅಥವಾ ಖಾಲಿಯಾದ ಗೃಹದಲ್ಲಿ, ಹೋಗಿ ಹೀಗೆ ಚಿಂತನೆ ಮಾಡುತ್ತಾನೆ : : ಇದೇ ಶಾಂತಿಯಾಗಿದೆ, ಇದೇ ಉದಾತ್ತವಾಗಿದೆ, ಅದೇಂದರೆ ಎಲ್ಲಾ ಚಟುವಟಿಕ(ಸಂಖಾರ)ೆಗಳನ್ನು ಸ್ತಬ್ದಗೊಳಿಸುವಿಕೆ, ಎಲ್ಲಾ ಬಗೆಯ ಅಂಟುವಿಕೆಗಳನ್ನು ಬಿಟ್ಟುಬಿಡುವಿಕೆ, ತೃಷ್ಣೆಯ ಕ್ಷಯಗೊಳಿಸುವಿಕೆ, ನಿರೋಧ ತಾಳುವಿಕೆ, ನಂದಿಸುವಿಕೆ(ನಿಬ್ಬಾಣ)ೆ. ಇವನ್ನೆ ನಿರೋಧದ ಸಂಜ್ಞೆಗಳು ಎನ್ನುವರು.</div>
<div class="separator" style="clear: both; text-align: center;">
<br /></div>
<div class="separator" style="clear: both; text-align: center;">
<b>8. ಮತ್ತೆ ಯಾವುದು ಸಬ್ಬಲೋಕೇ ಅಭಿರತನ (ಎಲ್ಲಾ ಲೋಕಗಳ ಬಗೆಗಿನ ಆಸಕ್ತಿ ಇಲ್ಲದಿರುವಿಕೆಯ )ಸಂಜ್ಞೆ? </b></div>
<div class="separator" style="clear: both; text-align: center;">
ಇಲ್ಲಿ ಭಿಕ್ಖುವು ಲೋಕಗಳ ಬಗ್ಗೆ ಯಾವುದೇ ರೀತಿಯಲ್ಲೂ ಅಂಟಿಕೊಳ್ಳದೆ, ಈ ಹಿಂದಿನ ಎಲ್ಲವನ್ನು ಬಿಟ್ಟು, ಯಾವುದರಲ್ಲು ಆಕಷರ್ಿತನಾಗದೆ, ಹಿಡಿದುಕೊಳ್ಳದೆ, ಹಾಗೇಯೇ ೆ ಹುದುಗಿರುವ ಅನುಶಯಗಳ ಬಗ್ಗೆ ,ಇಚ್ಚೆಪಡದೆ, ದೃಡನಿಧರ್ಾರ ತಾಳದೆ ಹೀಗೆ ತೊರೆದು ಉಪಾದಿಯಿಲ್ಲದೆ ವಿಹರಿಸುತ್ತಾನೆ, ಇದನ್ನೆ ಸಬ್ಬಲೋಕೇ ಅಭಿರತನ (ಎಲ್ಲಾ ಲೋಕಗಳ ಬಗೆಗಿನ ಆಸಕ್ತಿ ಇಲ್ಲದಿರುವಿಕೆಯ )ಸಂಜ್ಞೆ ಎನ್ನುವರು.</div>
<div class="separator" style="clear: both; text-align: center;">
<br /></div>
<div class="separator" style="clear: both; text-align: center;">
<b>9. ಮತ್ತೆ ಯಾವುದು ಸರ್ವ ಸಂಖಾರಗಳಲ್ಲಿ ಅನಿತ್ಯದ ಸಂಜ್ಞೆ ?</b></div>
<div class="separator" style="clear: both; text-align: center;">
ಇಲ್ಲಿ ಭಿಕ್ಖುವು ಎಲ್ಲಾ ಸಂಖಾರಗಳಲ್ಲಿ (ಚಟುವಟಿಕೆ) ಭಯಭೀತನಾಗಿ, ವಿಕಷರ್ಿತನಾಗಿ, ಜಿಗುಪ್ಸೆ ತಾಳುತ್ತಾನೆ, ಇದನ್ನೆ ಸರ್ವ ಸಂಖಾರಗಳಲ್ಲಿ ಅನಿತ್ಯದ ಸಂಜ್ಞೆ ಎನ್ನುತ್ತಾರೆ.</div>
<div class="separator" style="clear: both; text-align: center;">
<br /></div>
<div class="separator" style="clear: both; text-align: center;">
<b>10.ಮತ್ತೆ ಯಾವುದು ಅನಾಪಾನ ಸತಿ? </b></div>
<div class="separator" style="clear: both; text-align: center;">
ಇಲ್ಲಿ ಭಿಕ್ಷುವು ಅರಣ್ಯದಲ್ಲಿ, ಮರದ ಬುಡದಲ್ಲಿ ಅಥವ ಶೂನ್ಯಗೃಹದಲ್ಲಿ, ಪದ್ಮಾಸನದಲ್ಲಿ ಅಸೀನನಾಗಿ, ತನ್ನ ದೇಹವನ್ನು ನೇರವಾಗಿಟ್ಟುಕೊಂಡು ಮತ್ತು ಸದಾ ಉಶ್ವಾಸ ಮತ್ತು ನಿಶ್ವಾಸದಲ್ಲಿಯೇ ಜಾಗರೂಕತೆಯನ್ನು ಸ್ಥಾಪಿಸಿ ಸಾಧನೆ ಮಾಡುತ್ತಿರುತ್ತಾನೆ. </div>
<div class="separator" style="clear: both; text-align: center;">
1.<span style="white-space: pre;"> </span>ಉಸಿರಾಟವು <b>ದೀರ್ಘವಾಗಿದ್ದರೆ</b> ನಾನು ದೀರ್ಘವಾದ ಉಸಿರನ್ನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಅರಿಯುತ್ತಿರುತ್ತಾನೆ. </div>
<div class="separator" style="clear: both; text-align: center;">
2.<span style="white-space: pre;"> </span>ಉಸಿರಾಟವು <b>ಕಿರಿದಾಗಿದ್ದರೆ</b> ನಾನು ಕಿರಿದಾದ ಉಸಿರನ್ನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಅರಿಯುತ್ತಾನೆ. </div>
<div class="separator" style="clear: both; text-align: center;">
3.<span style="white-space: pre;"> </span>ಇಡೀ <b>ಉಸಿರಿನ ಕಾಯವನ್ನು ಅನುಭವಿಸಿದವನಾಗಿ</b> ನಾನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ತನಗೆ ತಾನೇ ಸುಶಿಕ್ಷಣ ಪಡೆಯುತ್ತಾನೆ.</div>
<div class="separator" style="clear: both; text-align: center;">
4.<span style="white-space: pre;"> </span><b>ಉಸಿರು ಕಾಯದ ಸಂಖಾರಗಳನ್ನು (ಚಟುವಟಿಕೆ) ಶಾಂತಗೊಳಿ</b>ಸಿ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ತನಗೆ ತಾನೇ ಸುಶಿಕ್ಷಣ ಪಡೆಯುತ್ತಾನೆ. (ಇವಿಷ್ಟು ಅನುಪಾನ ಕಾಯನುಪಸ್ಸನವಾಗಿದೆ).</div>
<div class="separator" style="clear: both; text-align: center;">
5.<span style="white-space: pre;"> </span><b>ಆನಂದವನ್ನು (ಪ್ರೀತಿ) ಅನುಭವಿಸಿದವನಾಗಿ</b> ನಾನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನಗೆ ತಾನೇ ಸುಶಿಕ್ಷಣ ಪಡೆಯುತ್ತಾನೆ.</div>
<div class="separator" style="clear: both; text-align: center;">
6.<span style="white-space: pre;"> </span><b>ಶಾಂತತೆಯನ್ನು (ಸುಖ) ಅನುಭವಿಸಿದವನಾಗಿ </b>ನಾನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನಗೆ ತಾನೇ ಸುಶಿಕ್ಷಣ ಪಡೆಯುತ್ತಾನೆ.</div>
<div class="separator" style="clear: both; text-align: center;">
7.<span style="white-space: pre;"> </span><b>ಚಿತ್ತದ ಚಟುವಟಿಕೆಗಳನ್ನೆಲ್ಲಾ ಅನುಭವಿಸಿ</b> ನಾನು ಉಶ್ವಾಸಿಸುತ್ತಿರುವೆ ಅಥವಾ ನಿಶ್ವಾಸಿಸುತ್ತಿರುವೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.</div>
<div class="separator" style="clear: both; text-align: center;">
8.<span style="white-space: pre;"> </span><b>ಚಿತ್ತದ ಚಟುವಟಿಕೆಗಳನ್ನೆಲ್ಲಾ (ಸಂಖಾರಗಳನ್ನು) ಶಾಂತಗೊಳಿಸಿದವನಾಗಿ</b> ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ. (ಇವಿಷ್ಟು ಅನಾಪಾನಾ ವೇದನಾನುಪಸ್ಸನವಾಗಿದೆ).</div>
<div class="separator" style="clear: both; text-align: center;">
9.<span style="white-space: pre;"> </span><b>ಚಿತ್ತವನ್ನು ಅನುಭವಿಸಿದವನಾಗಿ </b>ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಅತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.</div>
<div class="separator" style="clear: both; text-align: center;">
10.<span style="white-space: pre;"> </span><b>ಚಿತ್ತವನ್ನು ಸಂತೃಪ್ತಿಗೊಳಿಸುತ್ತಾ (ಆನಂದಗೊಳಿಸುತ್ತಾ)</b> ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.</div>
<div class="separator" style="clear: both; text-align: center;">
11.<span style="white-space: pre;"> </span><b>ಚಿತ್ತವನ್ನು ಸ್ಥಿರ (ಏಕಾಗ್ರ)ಗೊಳಿಸುತ್ತಾ </b>ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.</div>
<div class="separator" style="clear: both; text-align: center;">
12.<span style="white-space: pre;"> </span><b>ಚಿತ್ತವನ್ನು ವಿಮೋಚನೆಗೊಳಿಸುತ್ತಾ</b> ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ. (ಇವಿಷ್ಟು ಅನಾಪಾನಾ ಚಿತ್ತಾನುಪಸ್ಸನವಾಗಿದೆ).</div>
<div class="separator" style="clear: both; text-align: center;">
13.<span style="white-space: pre;"> </span><b>ಅನಿತ್ಯತೆಯನ್ನು ಗಮನಿಸುತ್ತಾ</b> ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.</div>
<div class="separator" style="clear: both; text-align: center;">
14.<span style="white-space: pre;"> </span><b>ವಿರಾಗವನ್ನು ಗಮನಿಸುತ್ತಾ</b> ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.</div>
<div class="separator" style="clear: both; text-align: center;">
15.<span style="white-space: pre;"> </span><b>ನಿರೋಧವನ್ನು ಗಮನಿಸಿ</b> ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.</div>
<div class="separator" style="clear: both; text-align: center;">
16.<span style="white-space: pre;"> </span><b>ತ್ಯಜಿಸುವಿಕೆ (ಪಟಿನಿಸ್ಸ) ಗಮನಿಸುತ್ತಾ</b> ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ. (ಇವಿಷ್ಟು ಅನಾಪಾನಾ ಧಮ್ಮಾನುಪಸ್ಸನವಾಗಿದೆ).</div>
<div class="separator" style="clear: both; text-align: center;">
<br /></div>
<div class="separator" style="clear: both; text-align: center;">
<span style="white-space: pre;"> </span>ಹೀಗೆ ನೀವು ಬಿಕ್ಖು ಗಿರಿಮಾನಂದನ ಬಳಿಯಲ್ಲಿ ಈ 10 ಸಂಜ್ಞೆಗಳನ್ನು ಪಠಿಸಿದರೆ , ಇದನ್ನು ಆಲಿಸಿ ಅಥರ್ೈಸಿಕೊಂಡ ನಂತರ ಆ ಕ್ಷಣದಲೇ ಅಲ್ಲಿಯೇ ಆತನ ಕಾಯಿಲೆಯು ನಾಷವಾಗುವುದು.</div>
<div class="separator" style="clear: both; text-align: center;">
<br /></div>
<div class="separator" style="clear: both; text-align: center;">
ನಂತರ ಆನಂದರವರು ಆ ಸುತ್ತವನ್ನು ಭಗವಾನರಿಂದ ಆಲಿಸಿ ನೆನಪಿನಲ್ಲಿಟ್ಟುಕೊಂಡು ಗಿರಿವéಾನಂದರ ಬಳಿಗೆ ಹೋದರು ಹಾಗು ಈ ಸುತ್ತವನ್ನು ಅದರಲ್ಲಿಯ 10 ಸಂಜ್ಞೆಗಳನ್ನು ಪಠಿಸಿದಾಗ ಗಿರಿಮಾನಂದರ ಕಾಯಿಲೆಯು ಆ ಕ್ಷಣದಲ್ಲಿಯೇ ಅಲ್ಲಿಯೇ ಇನ್ನಿಲ್ಲದಂತಾಯಿತು. ಹೀಗೆ ಅವರು ರೋಗದಿಂದ ಮುಕ್ತರಾದರು.</div>
<div class="separator" style="clear: both; text-align: center;">
(ಅಂದಿನಿಂದ ಇಲ್ಲಿಯತನಕ ಈ ಸುತ್ತವನ್ನು ರೋಗಿಗಳ ಬಳಿಯಲ್ಲಿ ಪಠಿಸುತ್ತಾರೆ. ಅದನ್ನು ಆಲಿಸಿ ಅಥರ್ೈಸಿಕೊಂಡವರು ರೋಗಗಳಿಂದ ಮುಕ್ತರಾದಂತಹ ಬಹಳಷ್ಡು ನಿದರ್ಶನಗಳು ಇವೆ.)</div>
<div class="separator" style="clear: both; text-align: center;">
<br /></div>
<div class="separator" style="clear: both; text-align: center;">
<br /></div>
<div class="separator" style="clear: both; text-align: center;">
<br /></div>
<div class="separator" style="clear: both; text-align: center;">
<br /></div>
<div class="separator" style="clear: both; text-align: center;">
<br /></div>
<div class="separator" style="clear: both; text-align: center;">
<br /></div>
<div class="separator" style="clear: both; text-align: center;">
<br /></div>
<br /></div>
Aneesh Bodhhttp://www.blogger.com/profile/02041276688261983503noreply@blogger.com1tag:blogger.com,1999:blog-8742652691355814794.post-87806027248181127512019-03-28T03:50:00.004-07:002019-03-28T03:50:58.338-07:00 dakkhina vibhanga sutta in kannada ದಕ್ಖಿಣಾ ವಿಭಂಗ ಸುತ್ತ (ದಾನದ ವಿಶ್ಲೇಷಣೆಯ ಸುತ್ತ)<div dir="ltr" style="text-align: left;" trbidi="on">
<h2>
ದಕ್ಖಿಣಾ ವಿಭಂಗ ಸುತ್ತ<br /> (ದಾನದ ವಿಶ್ಲೇಷಣೆಯ ಸುತ್ತ)</h2>
<div class="separator" style="clear: both; text-align: center;">
<br /></div>
<div class="separator" style="clear: both; text-align: center;">
<br /></div>
<div class="separator" style="clear: both; text-align: center;">
<a href="https://4.bp.blogspot.com/-qkLtrPW4bY4/XJymNE4XACI/AAAAAAAAEYc/XFkz9mMDencQwoHPfUwzrbe6RXlYi5rXwCLcBGAs/s1600/111.jpg" imageanchor="1" style="margin-left: 1em; margin-right: 1em;"><img border="0" data-original-height="960" data-original-width="702" height="320" src="https://4.bp.blogspot.com/-qkLtrPW4bY4/XJymNE4XACI/AAAAAAAAEYc/XFkz9mMDencQwoHPfUwzrbe6RXlYi5rXwCLcBGAs/s320/111.jpg" width="234" /></a></div>
<h2 style="text-align: left;">
</h2>
<h3 style="text-align: left;">
(ಸಂಘಕ್ಕೆ ನೀಡುವ ದಾನವೂ ವೈಯಕ್ತಿಕ ದಾನಕ್ಕಿಂತಲೂ ಅತಿ ಹೆಚ್ಚು ಫಲಯುತ)</h3>
<br />
ನಾನು ಹೀಗೆ ಕೇಳಿದ್ದೇನೆ, ಆ ಸಮಯದಲ್ಲಿ ಬುದ್ಧ ಭಗವಾನರು ಶಾಕ್ಯರ ನಾಡಿನ ಕಪಿಲವಸ್ತುವಿನ ಆಲದ ಮರಗಳ(ನಿಗ್ರೋಧರಾಮ) ವಿಹಾರದಲ್ಲಿದ್ದರು, ಆಗ ಮಾತೆಯಾದ ಮಹಾಪಜಾಪತಿ ಗೋತಮಿಯು ಭಗವಾನರ ಬಳಿಗೆ ಒಂದು ಜೋತೆ ವಸ್ತ್ರಗಳೊಂದಿಗೆ ಬಂದರು. ಆಕೆಯು ವಂದಿಸಿ ಒಂದೆಡೆ ಕುಳಿತುಕೊಂಡರು ನಂತರ ಭಗವಾನರೊಂದಿಗೆ ಹೀಗೆ ನುಡಿದರು :<br />
ಭಂತೆ ಇವನ್ನು ನಾನೇ ಸ್ವತಃ ನೆಯ್ದು ಹಾಗೂ ಹೆಣೆದು ಈ ವಸ್ತ್ರಗಳನ್ನು ಭಗವಾನರಿಗೆಂದೇ ತಂದಿರುವೆ ಭಗವಾನರು ದಯೆಯಿಂದ ಇವನ್ನು ಸ್ವೀಕರಿಸಬೇಕು, ಹೀಗೆ ಆಕೆಯು ನುಡಿದಾಗ ಭಗವಾನರು ಆಕೆಗೆ ಹೀಗೆ ನುಡಿದರು :<br />
ಸಂಘಕ್ಕೆ ದಾನವ ನೀಡು ಮಾತೆ ಗೋತಮಿ, ಯಾವಾಗ ನೀವು ಸಂಘಕ್ಕೆ ನೀಡುವಿರೊ ಆಗ ಸಂಘ ಹಾಗೂ ನಾನು ಜೋತೆಯಾಗಿಯೇ ಗೌರವಕ್ಕೆ ಪಾತ್ರರಾಗುವೆವು.<br />
ಆಗ ಆಕೆಯು ಎರಡನೆಯ ಬಾರಿ ಹೀಗೆ ನುಡಿದರು : ಭಂತೆ ಇವನ್ನು ನಾನೇ ಸ್ವತಃ ನೆಯ್ದು ಹಾಗೂ ಹೆಣೆದು ಈ ವಸ್ತ್ರಗಳನ್ನು ಭಗವಾನರಿಗೆಂದೇ ತಂದಿರುವೆ ಭಗವಾನರು ದಯೆಯಿಂದ ಇವನ್ನು ಸ್ವೀಕರಿಸಬೇಕು, ಹೀಗೆ ಆಕೆಯು ನುಡಿದಾಗ ಭಗವಾನರು ಎರಡನೆಯ ಬಾರಿ ಆಕೆಗೆ ಹೀಗೆ ನುಡಿದರು :<br />
ಸಂಘಕ್ಕೆ ದಾನವ ನೀಡು ಮಾತೆ ಗೋತಮಿ, ಯಾವಾಗ ನೀವು ಸಂಘಕ್ಕೆ ನೀಡುವಿರೊ ಆಗ ಸಂಘ ಹಾಗೂ ನಾನು ಜೋತೆಯಾಗಿಯೇ ಗೌರವಕ್ಕೆ ಪಾತ್ರರಾಗುವೆವು.<br />
ಆಗ ಆಕೆಯು ಮೂರನೆೆಯ ಬಾರಿ ಹೀಗೆ ನುಡಿದರು : ಭಂತೆ ಇವನ್ನು ನಾನೇ ಸ್ವತಃ ನೆಯ್ದು ಹಾಗೂ ಹೆಣೆದು ಈ ವಸ್ತ್ರಗಳನ್ನು ಭಗವಾನರಿಗೆಂದೇ ತಂದಿರುವೆ ಭಗವಾನರು ದಯೆಯಿಂದ ಇವನ್ನು ಸ್ವೀಕರಿಸಬೇಕು, ಹೀಗೆ ಆಕೆಯು ನುಡಿದಾಗ ಭಗವಾನರು ಮೂರನೆಯ ಬಾರಿ ಆಕೆಗೆ ಹೀಗೆ ನುಡಿದರು :<br />
ಸಂಘಕ್ಕೆ ದಾನವ ನೀಡು ಮಾತೆ ಗೋತಮಿ, ಯಾವಾಗ ನೀವು ಸಂಘಕ್ಕೆ ನೀಡುವಿರೊ ಆಗ ಸಂಘ ಹಾಗೂ ನಾನು ಜೋತೆಯಾಗಿಯೇ ಗೌರವಕ್ಕೆ ಪಾತ್ರರಾಗುವೆವು. ಯಾವಾಗ ಭಗವಾನರು ಹೀಗೆ ನುಡಿದರೋ ಆಗ ಪೂಜ್ಯ ಆನಂದರವರು ಮಧ್ಯೆ ಪ್ರವೇಶಿಸಿ ಹೀಗೆ ನುಡಿದರು :<br />
ಭಗವಾನ್, ಮಾತೆಯವರಾದ ಮಹಾಪಜಾಪತಿ ಗೋತಮಿಯವರ ಈ ವಸ್ತ್ರಗಳನ್ನು ದಯವಿಟ್ಟು ಸ್ವೀಕರಿಸಿರಿ, ಮಹಾಪಜಾಪತಿ ಗೋತಮಿಯು ತಮಗೆ ಆಪಾರ ಸಹಾಯಗಳನ್ನು ಮಾಡಿರುವರು, ಚಿಕ್ಕಮ್ಮರಾಗಿ ತಮಗೆ ಪೋಷಿಸಿದ್ದಾರೆ, ಲಾಲನೆಪಾಲನೆ ಮಾಡಿದ್ದಾರೆ, ತಮಗೆ ಹಾಲನ್ನು ಉಣಿಸಿದ್ದಾರೆ, ಯಾವಾಗ ಬೋದಿಸತ್ವರ ಮಾತೆಯು ಈ ಲೋಕದಿಂದ ಮೃತ್ಯುವಶರಾದರೋ ಆಗ ಈಕೆಯೇ ತನ್ನ ಸ್ವಪುತ್ರನಂತೆಯೇ ಎಲ್ಲಾ ರೀತಿಯಲ್ಲಿಯು ತಮಗೆ ಪೋಷಿಸಿಹಳು (ಮತ್ತು ಹೀಗಾಗಿ ಬುದ್ಧರು ಸಹಾ ಆಕೆಗೆ ಸಹಾಯ ಮಾಡಲೇಬೇಕು.)<br />
<br />
ಮತ್ತು ಭಗವಾನರೂ ಸಹಾ ಆಕೆಗೆ ತುಂಬ ಸಹಾಯ ಮಾಡುತ್ತಲೇ ಬಂದಿರುವರು, ಭಗವಾನರಿಂದಲೇ ಆಕೆಯು ಬುದ್ಧರಿಗೆ, ಧಮ್ಮಕ್ಕೆ, ಮತ್ತು ಸಂಘಕ್ಕೆ ಶರಣು ಹೋಗಿರುವರು, ಭಗವಾನರಿಂದಲೇ ಆಕೆಯು ಪ್ರಾಣಿಹತ್ಯೆಗಳನ್ನು ಮಾಡುವುದನ್ನು ತೋರೆದಿರುವರು, ಕೋಡದೆ ಇದ್ದುದ್ದನ್ನು ಸ್ವೀಕರಿಸುವುದಿಲ್ಲ, ಬ್ರಹ್ಮಚಾರ್ಯೆಯ ಜೀವನ ನಡೆಸುತಿಹರು, ಸುಳ್ಳು ಹೇಳಲಾರರು, ಮಾದಕ ಪಾನಿಯಗಳನ್ನು ಸ್ವೀಕರಿಸಲಾರರು,<br />
<br />
ತಿರತನಗಳಾದ ತಮಗೆ, ಧಮ್ಮಕ್ಕೆ, ಮತ್ತು ಸಂಘಕ್ಕೆ ಅಪಾರ ಶ್ರದ್ಧೆಯನ್ನು ಇಟ್ಟಿರುವರು, ಹಾಗೂ ಆರ್ಯರ ಶೀಲಗಳನ್ನು ಇಷ್ಟಪಟ್ಟು ಪಾಲಿಸುತಿಹರು. ಭಗವಾನರಿಂದಲೇ ಆಕೆಯು ಆರಿಯ ಸತ್ಯಗಳಾದ ದುಃಖ, ದುಃಖಸಮುದಯ, ದುಃಖನಿರೋಧ, ಮತ್ತು ಆರಿಯ ಅಷ್ಟಾಂಗ ಮಾರ್ಗದ ಬಗೆಗಿನ ಸಂಶಯಗಳನ್ನು ದಾಟಿರುವರು, ಹೀಗಾಗಿ ಭಗವಾನರು ಸಹಾ ಆಕೆಗೆ ಆಪಾರ ಸಹಾಯ ಮಾಡಿರುವರು.<br />
<br />
ಇದು ಸತ್ಯ, ಆನಂದ. ಯಾವಾಗ ಒಬ್ಬನು ತಿಸರಣುವಿಗೆ ಶರಣು ಹೋಗಲು ಸಹಾಯ ಮಾಡಿರುವನೊ, ಅಂತಹವನಿಗೆ ಋಣ ತೀರಿಸುವುದು ಅಷ್ಟು ಸುಲಭವಲ್ಲ. ತಲೆಬಾಗಿ ವಂದಿಸುವುದರಿಂದಾಗಲಿ, ಮೇಲೇದ್ದು ಗೌರವಿಸುವುದರಿಂದಾಗಲಿ, ಕೈಜೋಡಿಸಿ ನಮಸ್ಕರಿಸುವುದರಿಂದಾಗಲಿ, ಮತ್ತು ವಿನಯವಿಧೇಯತೆಯಿಂದಾಗಲಿ, ಅಂತಹವರಿಗೆ ಚಿವರ ವಸ್ತ್ರಾದಿಗಳಿಂದ ದಾನಮಾಡುವುದರಿಂದಾಗಲಿ, ಆಹಾರ ಪಾನಿಯಗಳ ದಾನದಿಂದಾಗಲಿ, ವಸತಿ ನೀಡುವುದರಿಂದಾಗಲಿ, ರೋಗಿಯಾಗಿದ್ದಾಗ ಔಷಧಿಗಳನ್ನು ನೀಡುವುದರಿಂದಾಗಲಿ, ಅಂತಹವರಿಗೆ ಒಬ್ಬನು ಋಣವನ್ನು ತೀರಿಸಲಾರನು,<br />
ಮತ್ತೆ ಯಾವಾಗ ಒಬ್ಬನಿಂದಾಗಿ ಪಂಚಶೀಲಗಳಾದ ಪ್ರಾಣಿಹತ್ಯೆಗಳನ್ನು ಮಾಡುವುದನ್ನು ತೋರೆದಿರುವುದು, ಕೋಡದೆ ಇದ್ದುದ್ದನ್ನು ಸ್ವೀಕರಿಸದಿರುವುದು, ಬ್ರಹ್ಮಚಾರ್ಯೆಯ ಜೀವನ ನಡೆಸುವುದು, ಸುಳ್ಳು ಹೇಳದಿರುವುದು, ಮಾದಕ ಪಾನಿಯಗಳನ್ನು ಸ್ವೀಕರಿಸದಿರುವುದು, ಅಂತಹ ಸಹಾಯ ಮಾಡಿದವರಿಗೆ ಋಣ ತೀರಿಸುವುದು ಅಷ್ಟು ಸುಲಭವಲ್ಲ, ತಲೆಬಾಗಿ ವಂದಿಸುವುದರಿಂದಾಗಲಿ, ಮೇಲೇದ್ದು ಗೌರವಿಸುವುದರಿಂದಾಗಲಿ, ಕೈಜೋಡಿಸಿ ನಮಸ್ಕರಿಸುವುದರಿಂದಾಗಲಿ, ಮತ್ತು ವಿನಯವಿಧೇಯತೆಯಿಂದಾಗಲಿ, ಅಂತಹವರಿಗೆ ಚಿವರ ವಸ್ತ್ರಾದಿಗಳಿಂದ ದಾನಮಾಡುವುದರಿಂದಾಗಲಿ, ಆಹಾರ ಪಾನಿಯಗಳ ದಾನದಿಂದಾಗಲಿ, ವಸತಿ ನೀಡುವುದರಿಂದಾಗಲಿ, ರೋಗಿಯಾಗಿದ್ದಾಗ ಔಷಧಿಗಳನ್ನು ನೀಡುವುದರಿಂದಾಗಲಿ, ಒಬ್ಬನು ಅಂತಹವರಿಗೆ ಋಣವನ್ನು ತೀರಿಸಲಾರನು.<br />
<br />
ಯಾವಾಗ ಒಬ್ಬನಿಂದಾಗಿ ತಿರತನಗಳಾದ ಬುದ್ಧರಿಗೆ, ಧಮ್ಮಕ್ಕೆ, ಮತ್ತು ಸಂಘಕ್ಕೆ ಅಪಾರ ಶ್ರದ್ಧೆಯನ್ನು ಇಟ್ಟಿರುವಂತಾಗುವರೋ, ಹಾಗೂ ಆರ್ಯರ ಶೀಲಗಳನ್ನು ಇಷ್ಟಪಟ್ಟು ಪಾಲಿಸುವಂತವರಾಗಿದ್ದಾರೋ ಅಂತಹ ಸಹಾಯ ಮಾಡಿದವರಿಗೆ ಋಣ ತೀರಿಸುವುದು ಅಷ್ಟು ಸುಲಭವಲ್ಲ, ತಲೆಬಾಗಿ ವಂದಿಸುವುದರಿಂದಾಗಲಿ, ಮೇಲೇದ್ದು ಗೌರವಿಸುವುದರಿಂದಾಗಲಿ, ಕೈಜೋಡಿಸಿ ನಮಸ್ಕರಿಸುವುದರಿಂದಾಗಲಿ, ಮತ್ತು ವಿನಯವಿಧೇಯತೆಯಿಂದಾಗಲಿ, ಅಂತಹವರಿಗೆ ಚಿವರ ವಸ್ತ್ರಾದಿಗಳಿಂದ ದಾನಮಾಡುವುದರಿಂದಾಗಲಿ, ಆಹಾರ ಪಾನಿಯಗಳ ದಾನದಿಂದಾಗಲಿ, ವಸತಿ ನೀಡುವುದರಿಂದಾಗಲಿ, ರೋಗಿಯಾಗಿದ್ದಾಗ ಔಷಧಿಗಳನ್ನು ನೀಡುವುದರಿಂದಾಗಲಿ, ಒಬ್ಬನು ಅಂತಹವರಿಗೆ ಋಣವನ್ನು ತೀರಿಸಲಾರನು.<br />
<br />
ಮತ್ತು ಯಾರಿಂದಾಗಿ ಆರಿಯ ಸತ್ಯಗಳಾದ ದುಃಖ, ದುಃಖಸಮುದಯ, ದುಃಖನಿರೋಧ, ಮತ್ತು ದುಃಖ ನಿರೋಧದ ಮಾರ್ಗವಾದ ಆರಿಯ ಅಷ್ಟಾಂಗ ಮಾರ್ಗದ ಬಗೆಗಿನ ಮಾಹಿತಿಗಳನ್ನು ತಿಳಿದು ಅವುಗಳ ಬಗೆಗಿನ ಸಂಶಯಗಳನ್ನು ದಾಟಿರುವರೋ ಅಂತಹ ಸಹಾಯ ಮಾಡಿದವರಿಗೆ ಋಣ ತೀರಿಸುವುದು ಅಷ್ಟು ಸುಲಭವಲ್ಲ, ತಲೆಬಾಗಿ ವಂದಿಸುವುದರಿಂದಾಗಲಿ, ಮೇಲೇದ್ದು ಗೌರವಿಸುವುದರಿಂದಾಗಲಿ, ಕೈಜೋಡಿಸಿ ನಮಸ್ಕರಿಸುವುದರಿಂದಾಗಲಿ, ಮತ್ತು ವಿನಯವಿಧೇಯತೆಯಿಂದಾಗಲಿ, ಅಂತಹವರಿಗೆ ಚಿವರ ವಸ್ತ್ರಾದಿಗಳಿಂದ ದಾನಮಾಡುವುದರಿಂದಾಗಲಿ, ಆಹಾರ ಪಾನಿಯಗಳ ದಾನದಿಂದಾಗಲಿ, ವಸತಿ ನೀಡುವುದರಿಂದಾಗಲಿ, ರೋಗಿಯಾಗಿದ್ದಾಗ ಔಷಧಿಗಳನ್ನು ನೀಡುವುದರಿಂದಾಗಲಿ, ಒಬ್ಬನು ಅಂತಹವರಿಗೆ ಋಣವನ್ನು ತೀರಿಸಲಾರನು.<br />
<br />
ಆನಂದ ಹದಿನಾಲ್ಕು ಬಗೆಯ ವೈಯಕ್ತಿಕದಾನಗಳಿವೆ. ಯಾವುವವು 14 ? ಅವೆಂದರೇ ಒಬ್ಬನು ತಥಾಗತರು, ಅರಹಂತರು ಆದ ಸಮ್ಮಸಂಬುದ್ಧರಿಗೆ ದಾನವನ್ನು ನೀಡುತ್ತಾನೆ. ಇದು ಮೊದಲನೆಯ ವೈಯಕ್ತಿಕ ದಾನವಾಗಿದೆ. ಒಬ್ಬನು ಪಚ್ಚೆಕ ಬುದ್ಧರಿಗೆ ದಾನವನ್ನು ನೀಡುತ್ತಾನೆ, ಇದು ಎರಡನೆಯ ವೈಯಕ್ತಿಕದಾನವಾಗಿದೆ. ಒಬ್ಬನು ತಥಾಗತರ ಶ್ರಾವಕರಾದ ಅರಹಂತರಿಗೆ ದಾನವನ್ನು ಮಾಡುತ್ತಾನೆ. ಇದು ಮೂರನೆಯ ವೈಯಕ್ತಿಕ ದಾನವಾಗಿದೆ. ಒಬ್ಬನು ಅರಹಂತ ಫಲವನ್ನು ಸಾಕ್ಷತ್ಕರಿಸುವ ಮಾರ್ಗದಲ್ಲಿರುವವನಿಗೆ ದಾನ ನೀಡುತ್ತಾನೆ. ಇದು ನಾಲ್ಕನೆಯ ವೈಯಕ್ತಿಕದಾನವಾಗಿದೆ.. ಒಬ್ಬನು ಅನಾಗಾಮಿಗೆ ದಾನವನ್ನು ನೀಡುತ್ತಾನೆ, ಇದು ಐದನೆಯ ವೈಯಕ್ತಿಕದಾನವಾಗಿದೆ.. ಒಬ್ಬನು ಅನಾಗಾಮಿ ಪಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ ದಾನ ನೀಡುತ್ತಾನೆ , ಇದು ಆರನೆಯ ವೈಯಕ್ತಿಕ ದಾನವಾಗಿದೆ, ಒಬ್ಬನು ಸಕದಾಗಾಮಿಗೆ ದಾನವನ್ನು ನೀಡುತ್ತಾನೆ, ಇದು ಏಳನೆಯ ವೈಯಕ್ತಿಕದಾನವಾಗಿದೆ.. ಒಬ್ಬನು ಸಕದಾಗಾಮಿ ಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ ದಾನ ನೀಡುತ್ತಾನೆ , ಇದು ಎಂಟನೆಯ ವೈಯಕ್ತಿಕ ದಾನವಾಗಿದೆ, ಒಬ್ಬನು ಸೋತಪನ್ನನಿಗೆ ದಾನವನ್ನು ನೀಡುತ್ತಾನೆ, ಇದು ಒಂಬತ್ತನೆೆಯ ವೈಯಕ್ತಿಕ ದಾನವಾಗಿದೆ.. ಒಬ್ಬನು ಸೋತಪನ್ನ ಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ ದಾನ ನೀಡುತ್ತಾನೆ , ಇದು ಹತ್ತನೆಯ ವೈಯಕ್ತಿಕ ದಾನವಾಗಿದೆ, ಒಬ್ಬನು ಬುದ್ಧ ದಮ್ಮದ ಬಾಹ್ಯದಲ್ಲಿರುವ ನಿಷ್ಕಾಮ ವೀತರಾಗಿಗೆ ದಾನ ನೀಡುತ್ತಾನೆ, ಇದು ಹನ್ನೊಂದನೆಯ ವೈಯಕ್ತಿಕ ದಾನವಾಗಿದೆ, ಒಬ್ಬನು ಶೀಲವಂತ ಸಾಧಾರಣ ಮಾನವನಿಗೆ ದಾನ ನೀಡುತ್ತಾನೆ, ಇದು ಹನ್ನೆರಡನೆಯ ವೈಯಕ್ತಿಕ ದಾನವಾಗಿದೆ, ಒಬ್ಬನು ದುಶ್ಯೀಲ ಮಾನವನಿಗೆ ದಾನ ನೀಡುತ್ತಾನೆ, ಇದು ಹದಿಮೂರನೆಯ ವೈಯಕ್ತಿಕ ದಾನವಾಗಿದೆ, ಒಬ್ಬನು ತಿರಚ್ಛನಗತಿಯುಳ್ಳ ಪ್ರಾಣಿಗಳಿಗೆ ದಾನವನ್ನು ನೀಡುತ್ತಾನೆ, ಇದು ಹದಿನಾಲ್ಕನೆಯ ವೈಯಕ್ತಿಕ ದಾನವಾಗಿದೆ,<br />
ಈಗ ಆನಂದ , ಈ ಮೇಲಿನ ವ್ಯಕ್ತಿಗಳಿಗೆ ನೀಡಿರುವ ದಾನದಿಂದ ಈ ರೀತಿಯ ಫಲಿತಾಂಶಗಳನ್ನು ನಿರೀಕ್ಷಿಸಬಹುದು. <b>ಪ್ರಾಣಿಗಳಿಗೆ ದಾನ ನೀಡಿದರೆ ನೂರು ಪಟ್ಟು ಫಲ ಸಿಗುತ್ತದೆ.</b><br />
<b> ದುಶ್ಯೀಲ ಮಾನವನಿಗೆ ದಾನ ನೀಡಿದರೆ ಸಾವಿರ ಪಟ್ಟು ಫಲ ಹಿಂದಿರುಗಿ ಸಿಗುತ್ತದೆ.</b><br />
<b> ಶೀಲವಂತ ಮಾನವನಿಗೆ ದಾನ ನೀಡಿದರೆ ಲಕ್ಷ ಪಟ್ಟು ಫಲ ಹಿಂದಿರುಗಿ ಸಿಗುತ್ತದೆ.</b><br />
<b> ಬುದ್ಧ ದಮ್ಮದ ಬಾಹ್ಯದಲ್ಲಿರುವ ನಿಷ್ಕಾಮ ವಿತರಾಗಿಗೆ ದಾನ ನೀಡಿದರೆ 10000000000 ( ಸಾವಿರ ಕೋಟಿ) ಪಟ್ಟು ಫಲ ಹಿಂದಿರುಗಿ ಸಿಗುತ್ತದೆ. </b><br />
<b> ಸೋತಪನ್ನ ಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ ದಾನ ನೀಡಿದರೆ ಲೆಕ್ಖಕ್ಕೆ ನಿಲುಕದಂತಹುದು, ಅಳೆಯಲಾಗದಷ್ಟು ಪಟ್ಟು ಫಲ ಹಿಂದಿರುಗಿ ಸಿಗುತ್ತದೆ. ಹೀಗಿರುವಾಗ ಸೋತಪನ್ನರಿಗೆ ದಾನ ನೀಡಿದರೆ ಎಷ್ಟೊಂದು ಪಟ್ಟು ಫಲ ಹಿಂತಿರುಗಿ ಮರಳಬಹುದು,? ಹಾಗೂ ಸಕದಾಗಾಮಿ ಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ, ಸಕದಾಗಾಮಿಗೆ ,ಅನಾಗಾಮಿ ಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ, ಅನಾಗಾಮಿಗೆ ,ಅರಹಂತ ಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ, ಅರಹಂತರಿಗೆ , ಮತ್ತು ಪಚ್ಚೆಕ ಬುದ್ಧರಿಗೆ ದಾನ ನೀಡಿದರೆ ಎಷ್ಟೊಂದು ಪಟ್ಟು ಫಲ ಹಿಂತಿರುಗಿ ಮರಳಬಹುದು,? ಇನ್ನೂ ಸಮ್ಮ ಸಂಬುದ್ಧರಿಗೆ ದಾನ ನೀಡಿದರೇ ಎಷ್ಟೊಂದು ಪಟ್ಟು ಫಲ ಹಿಂತಿರುಗಿ ಮರಳಬಹುದು,?</b><br />
<br />
ಅದರೆ ಆನಂದ ಏಳು ಬಗೆಯ ದಾನಗಳನ್ನು ಸಂಘಕ್ಕೆ ಸಮಪರ್ಿಸಲಾಗುತ್ತದೆ. ಯಾವುವವು ಏಳು ?<br />
<b><br /></b>
<b>1. ಬುದ್ಧಭಗವಾನರ ಸಹಿತ ಭಿಕ್ಖುಗಳು ಹಾಗು ಭಿಕ್ಖುಣಿಯರ ಸಮೂಹಕ್ಕೆ ಒಬ್ಬನು ದಾನ ನೀಡುವಿಕೆ. ಇದು ಸಂಘಕ್ಕೆ ಸಮಪರ್ಿಸಲಾಗುವ ಮೊದಲನೆಯ ದಾನ.</b><br />
<b><br /></b>
<b>2. ಬುದ್ಧಭಗವಾನರು ಮಹಾಪರಿನಿಬ್ಬಾಣ ಪಡೆದ ಬಳಿಕ ಭಿಕ್ಖುಗಳು ಹಾಗು ಭಿಕ್ಖುಣಿಯರ ಸಮೂಹಕ್ಕೆ ಒಬ್ಬನು ದಾನ ನೀಡುವಿಕೆ. ಇದು ಸಂಘಕ್ಕೆ ಸಮಪರ್ಿಸಲಾಗುವ ಎರಡನೆಯ ದಾನ.</b><br />
<b><br /></b>
<b>3. ಭಿಕ್ಖುಗಳು ಸಮೂಹಕ್ಕೆ ಒಬ್ಬನು ದಾನ ನೀಡುವಿಕೆ. ಇದು ಸಂಘಕ್ಕೆ ಸಮಪರ್ಿಸಲಾಗುವ ಮೂರನೆಯ ದಾನ.</b><br />
<b><br /></b>
<b>4. ಭಿಕ್ಖುಣಿಯರ ಸಮೂಹಕ್ಕೆ ಒಬ್ಬನು ದಾನ ನೀಡುವಿಕೆ. ಇದು ಸಂಘಕ್ಕೆ ಸಮಪರ್ಿಸಲಾಗುವ ನಾಲ್ಕನೆಯ ದಾನ.</b><br />
<b><br /></b>
<b>5. ನನಗಾಗಿ ಸಂಘವು ಅನೇಕ ಭಿಕ್ಖುಗಳು ಹಾಗು ಭಿಕ್ಖುಣಿಯರನ್ನು ದಾನಕ್ಕಾಗಿ ನೇಮಕಮಾಡಬಹುದು ಎಂದು ಯೋಚಿಸಿ ಒಬ್ಬನು ದಾನ ಮಾಡಬಹುದು. ಇದು ಸಂಘಕ್ಕೆ ಸಮಪರ್ಿಸಲಾಗುವ ಐದನೆಯ ದಾನ.</b><br />
<b><br /></b>
<b>6. ನನಗಾಗಿ ಸಂಘವು ಅನೇಕ ಭಿಕ್ಖುಗಳನ್ನು ದಾನಕ್ಕಾಗಿ ನೇಮಕಮಾಡಬಹುದು ಎಂದು ಯೋಚಿಸಿ ಒಬ್ಬನು ದಾನ ಮಾಡಬಹುದು. ಇದು ಸಂಘಕ್ಕೆ ಸಮಪರ್ಿಸಲಾಗುವ ಆರನೆಯ ದಾನ.</b><br />
<b><br /></b>
<b>7. ನನಗಾಗಿ ಸಂಘವು ಅನೇಕ ಭಿಕ್ಖುಣಿಯರನ್ನು ದಾನಕ್ಕಾಗಿ ನೇಮಕಮಾಡಬಹುದು ಎಂದು ಯೋಚಿಸಿ ಒಬ್ಬನು ದಾನ ಮಾಡಬಹುದು. ಇದು ಸಂಘಕ್ಕೆ ಸಮಪರ್ಿಸಲಾಗುವ ಏಳನೆಯ ದಾನ.</b><br />
<br />
ಮುಂದೊಂದು ಕಾಲ ಬರುವುದು ಆಗ ಸಂಘದ ಸದಸ್ಯರು ಕೇವಲ ಕಾವಿಯ ವಸ್ತ್ರವನ್ನು ತಮ್ಮ ಕುತ್ತಿಗೆಯ ಸುತ್ತಲೂ ಮಾತ್ರ ಧರಿಸುವರು, ಅದರೆ ಅವರು ದುಶ್ಶಿಲರು ಹಾಗೂ ಹೀನಚಾರಿತ್ರ್ಯರು ಆಗಿರುತ್ತಾರೆ, ಅದರೆ ಜನರು ಅವರಿಗೆ ಸಂಘದ ಹೆಸರಿನಲ್ಲಿ ದಾನವನ್ನು ಮಾಡುತ್ತಾರೆ, ಆಗಲೂ ಸಹಾ ನಾನೂ ಹೇಳುತ್ತಿದೇನೆ ಸಂಘಕ್ಕೇ ನೀಡುವ ದಾನವು ಲೆಕ್ಖಕ್ಕೆ ನಿಲುಕದಂತಹುದು ಹಾಗೂ ಅಳೆಯಲಾಗದಂತಹುದು. ಹೀಗಾಗಿ ನಾನೂ ಹೇಳುವುದು ಏನೆಂದರೆ ಸಂಘಕ್ಕೆ ನೀಡುವ ದಾನವೂ ವೈಯಕ್ತಿಕ ದಾನಕ್ಕಿಂತಲೂ ಅತಿ ಹೆಚ್ಚು ಫಲಯುತವಾದದ್ದು.<br />
<br />
ಆನಂದ ದಾನಗಳಿಂದ ನಾಲ್ಕು ವಿಧವಾಗಿ ಪರಿಶುದ್ಧರಾಗುವರು. ಯಾವುವವು ನಾಲ್ಕು ?<br />
<b><br /></b>
<b>1. ಇಲ್ಲಿ ದಾನದಿಂದ ದಾನಿಯು ಪರಿಶುದ್ಧನಾಗುತ್ತಾನೆ ಅದರೆ ಅತಿಥಿಯು(ಸ್ವೀಕರಿಸುವವನು) ಅಲ್ಲ.</b><br />
<b><br /></b>
<b>2. ಇಲ್ಲಿ ದಾನದಿಂದ ಅತಿಥಿಯು ಪರಿಶುದ್ಧನಾಗುತ್ತಾನೆ ಅದರೆ ದಾನಿಯು ಅಲ್ಲ.</b><br />
<b><br /></b>
<b>3. ಇಲ್ಲಿ ದಾನದಿಂದ ದಾನಿಯಾಗಲಿ ಅಥವಾ ಅತಿಥಿಯಾಗಲಿ ಈರ್ವರೂ ಪರಿಶುದ್ಧರಾಗುವುದಿಲ್ಲ.</b><br />
<b><br /></b>
<b>4. ಇಲ್ಲಿ ದಾನದಿಂದ ದಾನಿಯು ಹಾಗೂ ಅತಿಥಿಯು ಈರ್ವರೂ ಪರಿಶುದ್ಧರಾಗುವರು.</b><br />
<br />
ಮತ್ತು ಇಲ್ಲಿ ಹೇಗೆ ದಾನದಿಂದ ದಾನಿಯು ಪರಿಶುದ್ಧನಾಗುತ್ತಾನೆ ಅದರೆ ಅತಿಥಿಯು(ಸ್ವೀಕರಿಸುವವನು) ಅಲ್ಲ.? ಹೇಗೆಂದರೆ ಇಲ್ಲಿ ದಾನಿಯು ಶೀಲವಂತನಾಗಿರುತ್ತಾನೆ ಸುಚಾರಿತ್ಯವಂತನಾಗಿರುತ್ತಾನೆ ಅದರೆ ಅತಿಥಿಯು ದುಶ್ಶಿಲನು ಹಾಗೂ ಹೀನಚಾರಿತ್ರ್ಯನು ಆಗಿರುತ್ತಾರೆ,<br />
<br />
ಮತ್ತು ಇಲ್ಲಿ ಹೇಗೆ ಇಲ್ಲಿ ದಾನದಿಂದ ಅತಿಥಿಯು ಪರಿಶುದ್ಧನಾಗುತ್ತಾನೆ ಅದರೆ ದಾನಿಯು ಅಲ್ಲ. ? ಹೇಗೆಂದರೆ ಇಲ್ಲಿ ಅತಿಥಿಯು ಶೀಲವಂತನಾಗಿರುತ್ತಾನೆ ಸುಚಾರಿತ್ಯವಂತನಾಗಿರುತ್ತಾನೆ ಅದರೆ ದಾನಿಯು ದುಶ್ಶಿಲನು ಹಾಗೂ ಹೀನಚಾರಿತ್ರ್ಯನು ಆಗಿರುತ್ತಾರೆ,<br />
ಮತ್ತು ಇಲ್ಲಿ ಹೇಗೆ ದಾನದಿಂದ ದಾನಿಯಾಗಲಿ ಅಥವಾ ಅತಿಥಿಯಾಗಲಿ ಈರ್ವರೂ ಪರಿಶುದ್ಧರಾಗುವುದಿಲ್ಲ. ? ಹೇಗೆಂದರೆ ಇಲ್ಲಿ ದಾನಿಯು ಹಾಗೂ ಅತಿಥಿಯು ಈರ್ವರೂ ದುಶ್ಶಿಲರು ಹಾಗೂ ಹೀನಚಾರಿತ್ರ್ಯರು ಆಗಿರುತ್ತಾರೆ,<br />
<br />
ಮತ್ತು ಇಲ್ಲಿ ಹೇಗೆ ಇಲ್ಲಿ ದಾನದಿಂದ ದಾನಿಯು ಹಾಗೂ ಅತಿಥಿಯು ಈರ್ವರೂ ಪರಿಶುದ್ಧರಾಗುವರು. ? ಹೇಗೆಂದರೆ ಇಲ್ಲಿ ದಾನಿಯು ಹಾಗೂ ಅತಿಥಿಯು ಈರ್ವರೂ ಶೀಲವಂತನಾಗಿರುತ್ತಾರೆ ಮತ್ತು ಸುಚಾರಿತ್ಯವಂತನಾಗಿರುತ್ತಾರೆ.<br />
<br />
ಹೀಗೆ ದಾನದಕ್ಷಣೆಗಳಿಂದ ನಾಲ್ಕು ವಿಧವಾಗಿ ವಿಶುದ್ಧರಾಗುವರು.<br />
<br />
ಹೀಗೆ ನುಡಿದ ಭಗವಾನರು ನಂತರ ಸುಗತರು ಆದ ಶಾಸ್ತರು ಹೀಗೆ ನುಡಿದರು:<br />
<br />
<i>ಯಾವಾಗ ಸುಶೀಲನು ಶ್ರದ್ಧಾಯುತ ಪ್ರಸನ್ನಚಿತ್ತದಿಂದ </i><br />
<i> ದುಶ್ಶಿಲನಿಗೆ ಯೋಗ್ಯವಾದ ಉಡುಗೋರೆ ಅಥವಾ ದಾನವನ್ನು </i><br />
<i> ವಿಶಾಲ ವಿಫುಲವಾದ ಭರವಸೆಗಳಿಂದ ನೀಡುವನೋ ಅಂತಹ </i><br />
<i> ದಾನವು ದಾಯಕನ್ನು ವಿಶುದ್ಧಗೊಳಿಸುವುದು.</i><br />
<i><br /></i>
<i> ಯಾವಾಗ ದುಶ್ಶಿಲನು ಸಂಶಯ ಚಿತ್ತದಿಂದ </i><br />
<i> ಶೀಲವಂತ ಅತಿಥಿಗೆ ಅಯೋಗ್ಯವಾದಂತಹ ದಾನವನ್ನು</i><br />
<i> ಯಾವುದೇ ಫಲಗಳ ಭರವಸೆಗಳಿಲ್ಲದೆ ನೀಡುವನೋ ಅಂತಹ </i><br />
<i> ದಾನವು ಅತಿಥಿಯನ್ನು ವಿಶುದ್ಧಗೊಳಿಸುವುದು.</i><br />
<i><br /></i>
<i> ಯಾವಾಗ ದುಶ್ಶಿಲನು ಸಂಶಯ ಚಿತ್ತದಿಂದ </i><br />
<i> ದುಶ್ಶೀಲ ಅತಿಥಿಗೆ ಅಯೋಗ್ಯವಾದಂತಹ ದಾನವನ್ನು</i><br />
<i> ಯಾವುದೇ ಫಲಗಳ ಭರವಸೆಗಳಿಲ್ಲದೆ ನೀಡುವನೋ ಅಂತಹ </i><br />
<i> ದಾನವು ಅತ್ಯಂತ ಅಲ್ಪ ಫಲಕಾರಿ ಎಂದು ಘೋಷಿಸುತ್ತೇನೆ.</i><br />
<i><br /></i>
<i> ಯಾವಾಗ ಸುಶೀಲನು ಶ್ರದ್ಧಾಯುತ ಪ್ರಸನ್ನಚಿತ್ತದಿಂದ </i><br />
<i> ಶೀಲವಂತನಿಗೆ ಯೋಗ್ಯವಾದ ಉಡುಗೋರೆ ಅಥವಾ ದಾನವನ್ನು </i><br />
<i> ವಿಶಾಲ ವಿಫುಲವಾದ ಭರವಸೆಗಳಿಂದ ನೀಡುವನೋ ಅಂತಹ </i><br />
<i> ದಾನವು ಮಹತ್ಫಲವೆಂದು ಘೋಷಿಸುತ್ತೇನೆ.</i><br />
<i><br /></i>
<i> </i><br />
<i><br /></i>
<i> ಯಾವಾಗ ವೀತರಾಗಿಯು ವೀತರಾಗಿಗೆ </i><br />
<i> ಪ್ರಸನ್ನಚಿತ್ತದಿಂದ ಯೋಗ್ಯವಾದ ದಾನವನ್ನು </i><br />
<i> ಕಮ್ಮಫಲದ ದೃಷ್ಟಿಕೋನದಿಂದ ನೀಡುವನೋ </i><br />
<i> ಅಂತಹ ದಾನವು ನಿಜಕ್ಕೂ ಆಮಿಷ ದಾನಗಳಲ್ಲೇ </i><br />
<i> ಶ್ರೇಷ್ಟಕರವಾಗಿರುತ್ತದೆ.</i><br />
<br />
<br />
ಇಲ್ಲಿಗೆ ದಕ್ಖಿಣಾ ವಿಭಂಗ ಸುತ್ತವು ಮುಗಿಯಿತು.<br />
( ಈ ಸುತ್ತದ ಪ್ರವಚನದ ನಂತರ ಎಲ್ಲರಿಗೂ ಭಗವಾನರು ಏತಕ್ಕಾಗಿ ಸಂಘದಾನಕ್ಕೆ ಒತ್ತು ನೀಡಿದರು ಎಂದು ತಿಳಿಯಿತು.)<br />
<br />
<br />
<br />
<br />
<br />
<br />
</div>
Aneesh Bodhhttp://www.blogger.com/profile/02041276688261983503noreply@blogger.com0tag:blogger.com,1999:blog-8742652691355814794.post-51654460568903702542019-03-26T05:15:00.006-07:002019-03-26T05:15:55.617-07:00 sacca vibhanga sutta in kannada ಸಚ್ಚ ವಿಭಂಗ ಸುತ್ತ(ಸತ್ಯಗಳ ವಿಶ್ಲೇಷಣೆಯ ಸುತ್ತ)<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://4.bp.blogspot.com/-PH5gw5dpDfQ/XJoXPHqg-dI/AAAAAAAAEYA/zTFnDr2wE90gHGLd4K4rmMAWAcaFwTr0QCLcBGAs/s1600/6.jpg" imageanchor="1" style="margin-left: 1em; margin-right: 1em;"><img border="0" data-original-height="720" data-original-width="1280" height="180" src="https://4.bp.blogspot.com/-PH5gw5dpDfQ/XJoXPHqg-dI/AAAAAAAAEYA/zTFnDr2wE90gHGLd4K4rmMAWAcaFwTr0QCLcBGAs/s320/6.jpg" width="320" /></a></div>
<h2 style="text-align: left;">
<br /> ಸಚ್ಚ ವಿಭಂಗ ಸುತ್ತ(ಸತ್ಯಗಳ ವಿಶ್ಲೇಷಣೆಯ ಸುತ್ತ)</h2>
<br />
ನಾನು ಹೀಗೆ ಕೇಳಿದ್ದೇನೆ, ಒಮ್ಮೆ ಭಗವಾನರು ವಾರಣಾಸಿಯ ಇಸಿಪಟ್ಟಣದ ಜಿಂಕೆಗಳ ಉಧ್ಯಾನ(ಮಿಗದಾಯ)ದಲ್ಲಿ ತಂಗಿದ್ದರು, ಆಗ ಭಗವಾನರು ಭಿಕ್ಖುಗಳೊಂದಿಗೆ ಹೀಗೆ ಸಂಬೋಧಿಸಿದರು. :ಭಿಕ್ಖುಗಳೇ<br />
ಭಗವಾನ್<br />
ಆಗ ಭಗವಾನರು ಹೀಗೆ ನುಡಿದರು : ಭಿಕ್ಖುಗಳೇ ತಥಾಗತರು ಅರಹಂತರು ಹಾಗೂ ಸಮ್ಮಸಂಬುದ್ಧರಿಂದ ವಾರಣಾಸಿಯ ಋಷಿಪಟ್ಟಣದ ಮಿಗದಾಯದಲ್ಲಿ ಅನುತ್ತರವಾದ ಧಮ್ಮಚಕ್ರವು ಪ್ರವರ್ತನ(ಚಾಲಿತ)ವಾಯಿತು. ಮತ್ತು ಆ ಚಕ್ರವು ಯಾವುದೇ ಸಮಣನಿಂದಾಗಲಿ, ಅಥವಾ ಯಾವುದೇ ಬ್ರಾಹ್ಮಣನಿಂದಾಗಲಿ, ಅಥವಾ ಯಾವುದೇ ದೇವನಿಂದಾಗಲಿ, ಅಥವಾ ಯಾವುದೇ ಮಾರನಿಂದಾಗಲಿ, ಯಾವುದೇ ಬ್ರಹ್ಮನಿಂದಾಗಲಿ, ಅಥವಾ ಲೋಕಗಳಲ್ಲಿ ಯಾರಿಂದಲೇ ಆಗಲಿ ಅಪ್ರವರ್ತನ(ಅಚಾಲಿತ ಅಥವಾ ಹಿಂತಿರುಗಿ ಹೋಗುವಿಕೆ ಅಥವಾ ಸುಳ್ಳೆಂದು ಸಾಬಿತಾಗುವಿಕೆ)ವಾಗುವುದಿಲ್ಲ, ಇದು ಆರ್ಯಸತ್ಯಗಳ ಬೋದನೆಯಾಗಿದೆ, ಪ್ರತಿಪಾದನೆಯಾಗಿದೆ, ಸ್ಥಾಪನೆಯಾಗಿದೆ, ಸ್ಪಷ್ಟತೆಯಾಗಿದೆ, ವಿಶ್ಲೇಷಣೆಯಾಗಿದೆ,<br />
<br />
<b> ಯಾವುವವು 4 ಆರ್ಯಸತ್ಯಗಳು ?</b><br />
<br />
ಅವೆಂದರೆ<br />
1. ದುಃಖ ಆರ್ಯಸತ್ಯ<br />
2. ದುಃಖದ ಉದಯ(ಕಾರಣ) ಆರ್ಯಸತ್ಯ<br />
3. ದುಃಖದ ನಿರೋಧ ಆರ್ಯಸತ್ಯ ಮತ್ತು<br />
4. ದುಃಖದ ನಿರೋಧಕ್ಕೆ ಕೊಂಡೊಯ್ಯುವ ಮಾರ್ಗದ ಆರ್ಯಸತ್ಯ<br />
<br />
ಭಿಕ್ಖುಗಳೇ ತಥಾಗತರು ಅರಹಂತರು ಹಾಗೂ ಸಮ್ಮಸಂಬುದ್ಧರಿಂದ ವಾರಣಾಸಿಯ ಋಷಿಪಟ್ಟಣದ ಮಿಗದಾಯದಲ್ಲಿ ಅನುತ್ತರವಾದ ಧಮ್ಮಚಕ್ರವು ಪ್ರವರ್ತನ(ಚಾಲಿತ)ವಾಯಿತು. ಮತ್ತು ಆ ಚಕ್ರವು ಯಾವುದೇ ಸಮಣನಿಂದಾಗಲಿ, ಅಥವಾ ಯಾವುದೇ ಬ್ರಾಹ್ಮಣನಿಂದಾಗಲಿ, ಅಥವಾ ಯಾವುದೇ ದೇವನಿಂದಾಗಲಿ, ಅಥವಾ ಯಾವುದೇ ಮಾರನಿಂದಾಗಲಿ, ಯಾವುದೇ ಬ್ರಹ್ಮನಿಂದಾಗಲಿ, ಅಥವಾ ಲೋಕಗಳಲ್ಲಿ ಯಾರಿಂದಲೇ ಆಗಲಿ ಅಪ್ರವರ್ತನ(ಅಚಾಲಿತ ಅಥವಾ ಹಿಂತಿರುಗಿ ಹೋಗುವಿಕೆ ಅಥವಾ ಸುಳ್ಳೆಂದು ಸಾಬಿತಾಗುವಿಕೆ)ವಾಗುವುದಿಲ್ಲ, ಇದು ಆರ್ಯಸತ್ಯಗಳ ಬೋದನೆಯಾಗಿದೆ, ಪ್ರತಿಪಾದನೆಯಾಗಿದೆ, ಸ್ಥಾಪನೆಯಾಗಿದೆ, ಸ್ಪಷ್ಟತೆಯಾಗಿದೆ, ವಿಶ್ಲೇಷಣೆಯಾಗಿದೆ,<br />
<br />
<br />
ಭಿಕ್ಖುಗಳೇ ನೀವುಗಳು ಸಾರಿಪುತ್ರ ಹಾಗೂ ಮೊಗ್ಗಲಾನರ ಸೇವನೆ(ಮಿತ್ರತ್ವ)ೆ ಮಾಡಿರಿ, ಅವರ ಒಡನಾಟದಿಂದ ಬೆರೆಯಿರಿ, ಅವರು ಪಂಡಿತ(ಜ್ಞಾನಿ) ಭಿಕ್ಖುಗಳಾಗಿದ್ದಾರೆ, ಅವರು ಬ್ರಹ್ಮಚರಿಯದ ಶ್ರೇಷ್ಟ ಜೀವನಕ್ಕೆ ಅನುಗ್ರಹ ತೋರುತ್ತಾರೆ, ಅದರಲ್ಲಿ ಸಾರಿಪುತ್ತರು ಜನ್ಮನೀಡಿದ ಮಾತೆಯ ತರಹ, ಹಾಗೆಯೇ ಮೋಗ್ಗಲಾನರು ಮಗುವನ್ನು ಸಲಹುವಂತಹವರ ತರಹ, ಸಾರಿಪುತ್ತರು ಎಲ್ಲರನ್ನು ಸೋತಪತ್ತಿ ಫಲವನ್ನು ಪಡೆಯುವ ಹಾಗೇ ಮಾರ್ಗದಶರ್ಿತರಾಗುವರು. ಮತ್ತು ಮೊಗ್ಗಲಾನರು ಉನ್ನತ ಗುರಿಯೆಡೆಗೆ ಸಾಗಿಸುವಂತಹವರು. ಸಾರಿಪುತ್ರರು ಆರ್ಯಸತ್ಯಗಳನ್ನು ಬೋದಿಸುವಲ್ಲಿ ಸಮರ್ಥರು ಅವರು ಆರ್ಯಸತ್ಯಗಳನ್ನು ವಿವರಿಸುತ್ತಾರೆ, ಒತ್ತಿಹೇಳುತ್ತಾರೆ, ಸ್ಥಾಪಿಸುತ್ತಾರೆ, ಸ್ಪಷ್ಟಿಕರಿಸುತ್ತಾರೆ, ವಿಶ್ಲೇಷಿಸುತ್ತಾರೆ, ಮತ್ತು ಪ್ರಕಟಪಡಿಸುತ್ತಾರೆ. ಹೀಗೆ ನುಡಿದ ಭಗವಾನರು ತಮ್ಮ ಆಸನದಿಂದ ಎದ್ದು ತಮ್ಮ ವಿಹಾರದೆಡೆಗೆ ವಿಶ್ರಮಿಸಲು ಹೋರಟರು.<br />
<br />
ಅವರು ಹೋರಟ ನಂತರ ಸಾರಿಪುತ್ತರು ಎದ್ದು ಭಿಕ್ಖುಗಳೊಂದಿಗೆ ಹೀಗೆ ಸಂಬೋದಿಸಿದರು : ಅಯುಷ್ಮಂತ ಭಿಕ್ಖುಗಳೇ,<br />
ಆಗ ಪ್ರತಿಯಾಗಿ ಭಿಕ್ಖುಗಳು ಸಹಾ ಆಯುಷ್ಮಂತರೇ ಎಂದರು. ಆಗ ಸಾರಿಪುತ್ತರು ಹೀಗೆ ನುಡಿದರು : ಭಿಕ್ಖುಗಳೇ ತಥಾಗತರು ಅರಹಂತರು ಹಾಗೂ ಸಮ್ಮಸಂಬುದ್ಧರುರಿಂದ ವಾರಣಾಸಿಯ ಋಷಿಪಟ್ಟಣದ ಮಿಗದಾಯದಲ್ಲಿ ಅನುತ್ತರವಾದ ಧಮ್ಮಚಕ್ರವು ಪ್ರವರ್ತನ(ಚಾಲಿತ)ವಾಯಿತು. ಮತ್ತು ಆ ಚಕ್ರವು ಯಾವುದೇ ಸಮಣನಿಂದಾಗಲಿ, ಅಥವಾ ಯಾವುದೇ ಬ್ರಾಹ್ಮಣನಿಂದಾಗಲಿ, ಅಥವಾ ಯಾವುದೇ ದೇವನಿಂದಾಗಲಿ, ಅಥವಾ ಯಾವುದೇ ಮಾರನಿಂದಾಗಲಿ, ಯಾವುದೇ ಬ್ರಹ್ಮನಿಂದಾಗಲಿ, ಅಥವಾ ಲೋಕಗಳಲ್ಲಿ ಯಾರಿಂದಲೇ ಆಗಲಿ ಅಪ್ರವರ್ತನ(ಅಚಾಲಿತ ಅಥವಾ ಹಿಂತಿರುಗಿ ಹೋಗುವಿಕೆ ಅಥವಾ ಸುಳ್ಳೆಂದು ಸಾಬಿತಾಗುವಿಕೆ)ವಾಗುವುದಿಲ್ಲ, ಇದು ಆರ್ಯಸತ್ಯಗಳ ಬೋದನೆಯಾಗಿದೆ, ಪ್ರತಿಪಾದನೆಯಾಗಿದೆ, ಸ್ಥಾಪನೆಯಾಗಿದೆ, ಸ್ಪಷ್ಟತೆಯಾಗಿದೆ, ವಿಶ್ಲೇಷಣೆಯಾಗಿದೆ,<br />
<br />
<b> ಯಾವುವವು 4 ಆರ್ಯಸತ್ಯಗಳು ?</b><br />
<br />
<br />
<br />
<br />
ಅವೆಂದರೆ<br />
1. ದುಃಖ ಆರ್ಯಸತ್ಯ<br />
2. ದುಃಖದ ಉದಯ(ಕಾರಣ) ಆರ್ಯಸತ್ಯ<br />
3. ದುಃಖದ ನಿರೋಧ ಆರ್ಯಸತ್ಯ ಮತ್ತು<br />
4. ದುಃಖದ ನಿರೋಧಕ್ಕೆ ಕೊಂಡೊಯ್ಯುವ ಮಾರ್ಗದ ಆರ್ಯಸತ್ಯ<br />
<br />
<b> ಮತ್ತೆ ಯಾವುದು ದುಃಖ ಆರ್ಯ ಸತ್ಯ ?</b><br />
ಜನ್ಮವು ದುಃಖ, ಜರಾವು ದುಃಖ, ಮರಣವು ದುಃಖ, ಶೋಕ ಪ್ರಲಾಪವು ದುಃಖ, ನೋವು ದುಃಖ, ಚಿಂತೆ ಯಾತನೆಗಳು ದುಃಖ, ಅಪ್ರಿಯವಾದುದರ ಸಮಾಗಮ ದುಃಖ, ಪ್ರಿಯವಾದುದರ ವಿಯೋಗ ದುಃಖ, ಇಷ್ಟ(ಇಚ್ಚೆ)ಪಟ್ಟಿದ್ದು ದೊರೆಯದಿದ್ದಾಗ ದುಃಖ, ಒಟ್ಟಾರೆ ಸಂಕ್ಷಿಪ್ತವಾಗಿ ಹೇಳುವುದಾದರೆ ಪಂಚ ಉಪಾದಾನ ಖಂದಗಳು( 5 ರಾಶಿಗಳಿಗೆ(ದೇಹ ಮತ್ತು ಮನಸ್ಸಿಗೆ) ಅಂಟುವಿಕೆಯೇ) ದುಃಖಕರ.<br />
<br />
ಮತ್ತು ಜನ್ಮ ಎಂದರೇನು?<br />
ಆಯುಷ್ಮಂತರೇ, ಎಲ್ಲಾ ಜೀವಿಗಳ ವರ್ಗಗಳಲ್ಲಿ ಜೀವಿಗಳ ಜನ್ಮ, ಆರಂಭ, ಪುನರ್ಜನ್ಮ, ಖಂದಗಳ ಸ್ಥಾಪನೆ, ಮತ್ತು ಇಂದ್ರೀಯಗಳ ಪಡೆಯುವಿಕೆಯನ್ನು ಜನ್ಮ ಎನ್ನುತ್ತಾರೆ.<br />
<br />
ಮತ್ತು ಜರಾ ಎಂದರೇನು ?<br />
ಆಯುಷ್ಮಂತರೇ, ಎಲ್ಲಾ ಜೀವಿಗಳ ವರ್ಗಗಳಲ್ಲಿ ಜೀವಿಗಳ ವೃದ್ಧಾಪ್ಯ, ವಯಸ್ಸಿನಿಂದ ದುರ್ಬಲವಾಗುವಿಕೆ, ಮುರಿದ ಹಲ್ಲುಗಳು, ನೆರತಕೂದಲು, ಸುಕ್ಕುಗಟ್ಟಿದ ಚರ್ಮ, ಶಕ್ತಿಗುಂದುವಿಕೆ, ಇಂದ್ರೀಯಗಳ ಶಿಥಿಲತೆಯನ್ನು ಜರಾ ಎನ್ನುತ್ತಾರೆ.<br />
<br />
ಮತ್ತು ಮರಣ ಎಂದರೇನು ?<br />
ಆಯುಷ್ಮಂತರೇ, ಎಲ್ಲಾ ಜೀವಿಗಳ ವರ್ಗಗಳಲ್ಲಿ ಮರಣಿಸುವಿಕೆ, ನಾಷವಾಗುವಿಕೆ, ವಿಯೋಗ, ಅಂತ್ಯವಾಗುವಿಕೆ, ಮೃತ್ಯುವಶವಾಗುವಿಕೆ, ಸಾವು, ಖಂದಗಳ ಬೇರ್ಪಡೆಯಾಗುವಿಕೆ, ಶವವಾಗುವಿಕೆ, ಜೀವಿಂದ್ರೀಯದ ಕತ್ತರಿಸುವಿಕೆಯನ್ನು ಮರಣ ಎನ್ನುವರು.<br />
<br />
ಮತ್ತು ಶೋಕ ಎಂದರೇನು?<br />
ಆಯುಷ್ಮಂತರೇ, ಶೋಕ, ಶೋಕಿಸುವಿಕೆ, ಶೋಕಸ್ಥಿತಿ, ಅಂತರ್ಯದ ದುಃಖ, ದೌಭರ್ಾಗ್ಯ ಅಥವಾ ದುರ್ಘಟನೆಗೆ ಈಡಾಗಿರುವವರಲ್ಲಿನ ಆಂತರ್ಯದ ಆಳ ನೋವು, ಶೋಕವನ್ನು ಅನುಭವಿಸುತ್ತಿರುವಿಕೆ, ಇವನೆಲ್ಲಾ ಶೋಕ ಎನ್ನುವರು.<br />
<br />
ಮತ್ತು ಪ್ರಲಾಪ ಎಂದರೇನು ?<br />
ಆಯುಷ್ಮಂತರೇ ಅಳುವಿಕೆ, ಪ್ರಲಾಪಿಸುವಿಕೆ, ಯಾರದರೂ ದುಃಖಭರಿತ ಸನ್ನಿವೇಶದಲ್ಲಿದ್ದಾಗ ಅಥವಾ ತಾವೇ ಅಂತಹ ಸನ್ನಿವೇಶದಲ್ಲಿದ್ದಾಗ ಅತ್ತು ಪ್ರಲಾಪಿಸುವುದನ್ನು ಪ್ರಲಾಪವೆನ್ನುತ್ತೇವೆ.<br />
<br />
ಮತ್ತು ನೋವು(ಕಾಯದ ದುಃಖ) ಎಂದರೇನು ?<br />
ಅಯುಷ್ಮಂತರೇ ಶಾರೀರಿಕ ನೋವು, ಶಾರೀರಿಕ ಅಸಂತೋಷ, ಶರೀರಕ್ಕೆ ಸಂಪರ್ಕವಾಗಿ ಉಂಟಾಗುವ ನೋವುಭರಿತ, ಅಪ್ರೀಯ ವೇದನೆಗಳನ್ನು ನೋವು(ಕಾಯದ ದುಃಖ) ಎನ್ನುತ್ತಾರೆ.<br />
<br />
ಮತ್ತು ದೋಮನಸ್ಸು ಎಂದರೇನು ?<br />
ಆಯುಷ್ಮಂತರೇ, ಮಾನಸಿಕ ದುಃಖ, ಮಾನಸಿಕ ಅಸಂತುಷ್ಟತೆ, ಮನಸ್ಸಿಗೆ ಮಾನಸಿಕ ವಿಷಯಗಳಾದ ಚೇತಸಿಕಗಳು ಸಂಪರ್ಕವಾದಾಗ ಉಂಟಾಗುವ ಅಪ್ರಿಯ ವೇದನೆಗಳನ್ನು ದೋಮನಸ್ಸು ಎನ್ನುತ್ತೇವೆ.<br />
<br />
ಮತ್ತು ಉಪಯಾಸೋ(ಖಿನ್ನತೆ/ಚಿಂತೆ) ಎಂದರೇನು ?<br />
ಆಯುಷ್ಮಂತರೇ, ಒತ್ತಡ, ಯಾತನೆ, ಯಾವಾಗ ಒಬ್ಬನು ದುಃಖಭರಿತ ಅಥವಾ ನಷ್ಟಭರಿತ ಸನ್ನಿವéೇಷದಲ್ಲಿದ್ದಾಗ ಆತನು ಅನುಭವಿಸುವ ದುಃಖವನ್ನು ಉಪಯಾಸೋ ಎನ್ನುತ್ತೇವೆ.<br />
<br />
ಮತ್ತು ಇಷ್ಟ(ಇಚ್ಚೆ)ಪಟ್ಟಿದ್ದು ದೊರೆಯದಿರುವುದೇ ದುಃಖ ಎಂದರೇನು ?<br />
ಇಲ್ಲಿ ಅಯುಷ್ಮಂತರೇ, ಇದಕ್ಕೆ ಉದಾಹರಿಸುವುದಾದರೆ ಯಾವ ಜೀವಿಗಳು ಪುನರ್ಜನ್ಮಿಸುವ ಖಚಿತತೆ ಹೊಂದಿವೆಯೊ ಅವರಲ್ಲಿ ಇಂತಹ ಇಚ್ಚೆ ಉಂಟಾಗಬಹುದು ಎನೆಂದರೇ ಒಹ್ ನಾವು ಮಾತ್ರ ಪುನರ್ಜನ್ಮ ತಾಳದಿದ್ದರೆ ಹೇಗೆ !, ನಮಗೆ ಮಾತ್ರ ಪುನರ್ಜನ್ಮವಾಗದಿರಲಿ! ಅದರೆ ಹಾಗೇ ಬಯಸಿದ ಮಾತ್ರಕ್ಕೆ ಒಬ್ಬರಿಗೆ ಪುನರ್ಜನ್ಮ ಸಿಗದೇ ಹೋಗುವುದಿಲ್ಲ. ಬಯಸಿದ ಮಾತ್ರಕ್ಕೆ ಹಾಗಾವುದಿಲ್ಲ. ಆಗ ಆತನು ಹಾಗೇ ಆಗಲಿಲ್ಲವಲ್ಲ ಎಂದು ದುಃಖಿಸುವನು, ಇದನ್ನೇ ಇಚ್ಚಿಸಿದ ಮಾತ್ರಕ್ಕೆ ಹಾಗೇ ಆಗದಿದ್ದಾಗ ಸಿಗುವ ದುಃಖ ಎನ್ನುವರು. ಜೀವಿಗಳಲ್ಲಿ ಯಾರೆಲ್ಲಾ ವೃದ್ಧಾವಸ್ಥೆಗೆ.....ರೋಗಕ್ಕೆ........ಮರಣಕ್ಕೆ.........ಶೋಕಕ್ಕೆ......ಪ್ರಲಾಪಕ್ಕೆ......ನೋವಿಗೆ.......ದೋಮನಸ್ಸಿಗೆ......ಮತ್ತು, ಚಿಂತೆಗೆ ಗುರಿಯಾಗಬಾರದು ಎಂದು ಇಚ್ಚಿಸುತ್ತೇವೆ, ಅದರೆ ಕೇವಲ ಇಚ್ಚಿಸಿದ ಮಾತ್ರಕ್ಕೆ ನೀವು ಅವೆಲ್ಲಾವನ್ನು ತಡೆಯಲು ಸಾಧ್ಯವೇ ?.ಇದನ್ನೇ ಇಚ್ಚಿಸಿದ ಮಾತ್ರಕ್ಕೆ ಹಾಗೇ ಆಗದಿದ್ದಾಗ ಸಿಗುವ ದುಃಖ ಎನ್ನುವರು.<br />
<br />
ಮತ್ತು ಆಯುಷ್ಮಂತರೇ ಪಂಚ ಉಪಾದಾನಖಂದಗಳು ದುಃಖ ಎಂದರೇನು?<br />
ಇಲ್ಲಿ 5 ರೀತಿಯ ಅಂಟುವಿಕೆಗಳಿವೆ ಅವೆಂದರೆ ದೇಹಕ್ಕೆ, ವೇದನೆಗಳಿಗೆ, ಗ್ರಹಿಕೆಗಳಿಗೆ, ಸಂಖಾರಗಳಿಗೆ, ಮತ್ತು ವಿಞ್ಞಆನಗಳಿಗೆ ಅಂಟಿಕೊಂಡಿರುವುದು. ಇದನ್ನು ಸಂಕ್ಷಿಪ್ತವಾಗಿ 5 ಖಂದಗಳಿಗೆ ಅಂಟಿರುವುದೇ ದುಃಖ ಎಂದು ಹೇಳಲಾಗಿದೆ, ಇದೇ ಆರ್ಯರ ದುಃಖ ಸತ್ಯವಾಗಿದೆ.<b> </b><br />
<b><br /></b>
<b> ಮತ್ತು ಆಯುಷ್ಮಂತರೇ ಆರ್ಯರ ದುಃಖದ ಸಮುದಯ(ಕಾರಣ/ಉದಯ) ಸತ್ಯ ಎಂದರೇನು ?</b><br />
ಇಲ್ಲಿ ತೃಷ್ಣೆಯೇ ಪುನರ್ಜನ್ಮಗಳ ಕಡೆಗೆ ಕರೆದೊಯ್ಯುತ್ತದೆ, ಇದು ಆನಂದ ಹಾಗೂ ರಾಗದಿಂದ ಕೂಡಿದ್ದು, ಸದಾ ವಿವಿಧ ವಲಯಗಳಲ್ಲಿ, ಕ್ಷೇತ್ರಗಳಲ್ಲಿ ಸುಖಭೋಗಗಳನ್ನು ಹುಡುಕುತ್ತಿರುತ್ತದೆ. ಅವೆಂದರೆ ಕಾಮತನ್ಹಾ(ಇಂದ್ರೀಯಸುಖಗಳ ಬೋಗಾಸಕ್ತಿ), ಭವತನ್ಹಾ(ಶಾಶ್ವತವಾಗಿ ಇರಬೇಕು ಎನ್ನುವ ತೀವ್ರಬಯಕೆ), ಮತ್ತು ವಿಭವ ತನ್ಹಾ(ಇರಲೇಬಾರದು ಎಂಬ ತೀವ್ರ ಬಯಕೆ). ಇದನ್ನೇ ಆರ್ಯರ ದುಃಖದ ಸಮುದಯ(ಕಾರಣ/ಉದಯ) ಸತ್ಯ ಎನ್ನುತ್ತಾರೆ.<br />
<br />
<b><br /></b>
<b> ಮತ್ತು ಆಯುಷ್ಮಂತರೇ ಆರ್ಯರ ದುಃಖ ನಿರೋಧ(ಅಂತ್ಯ/ಸಮಾಪ್ತಿ/ಇಲ್ಲವಾಗುವಿಕೆ) ಎಂದರೇನು ?</b><br />
ದುಃಖಕ್ಕೆ ಕಾರಣವಾದ ತನ್ಹಾವನ್ನು (ತೀವ್ರಬಯಕೆಗಳನ್ನು) ನಿಶ್ಶೇಷವಾಗಿ ವಿರಾಗತೋರುವುದು(ಮರೆಮಾಡುವುದು/ವಿಕರ್ಷಣವಾಗುವುದು), ನಿರೋಧಗೊಳಿಸುವುದು(ಅಂತ್ಯ), ತ್ಯಾಗಮಾಡುವುದು, ಪಟಿನಿಸ್ಸ(ಬಿಟ್ಟುಬಿಡುವುದು)ಮಾಡುವುದು, ಮುಕ್ತವಾಗುವುದು, ಅನಾಲಯಗೊಳ್ಳುವುದು(ಅಂಟದೆ ಇರುವುದು), ಇದನ್ನೇ ಆಯುಷ್ಮಂತರೇ ಆರ್ಯರ ದುಃಖನಿರೋಧ ಎನ್ನುತ್ತಾರೆ.<br />
<br />
<br />
<b> ಮತ್ತು ಆಯುಷ್ಮಂತರೇ ಆರ್ಯರ ದುಃಖ ನಿರೋಧಕ್ಕೆ ಕೊಂಡೊಯ್ಯುವ ಮಾರ್ಗಸತ್ಯ ಎಂದರೇನು ?</b><br />
ಅದೇ ಆರ್ಯ ಆಷ್ಟಾಂಗ ಮಾರ್ಗ ಅಂದರೆ<br />
<br />
ಸಮ್ಮಾ ದಿಟ್ಟಿ<br />
ಸಮ್ಮಾ ಸಂಕಲ್ಪ<br />
ಸಮ್ಮಾ ವಾಚಾ<br />
ಸಮ್ಮಾ ಕಮ್ಮ<br />
ಸಮ್ಮಾ ಜೀವನೋಪಾಯ<br />
ಸಮ್ಮಾ ವ್ಯಾಯಾಮ<br />
ಸಮ್ಮಾ ಸ್ಮೃತಿ<br />
ಸಮ್ಮಾ ಸಮಾಧಿ<br />
<b><br /></b>
<b>ಮತ್ತು ಆಯುಷ್ಮಂತರೇ ಸಮ್ಮಾ ದಿಟ್ಟಿ(ದೃಷ್ಟಿಕೋನ) ಎಂದರೇನು</b>?<br />
ದುಃಖ ಆರ್ಯ ಸತ್ಯ, ದುಃಖ ಸಮುದಯ ಆರ್ಯ ಸತ್ಯ, ದುಃಖ ನಿರೋಧ ಆರ್ಯ ಸತ್ಯ, ಮತ್ತು ದುಃಖ ನಿರೋಧಕ್ಕೆ ಕೊಂಡೊಯ್ಯುನ ಮಾರ್ಗ. ಇವುಗಳನ್ನು ಯಾತಾರ್ಥವಾಗಿ ಅರಿಯುವುದೇ ಸಮ್ಮಾ ದಿಟ್ಟಿಯಾಗಿದೆ.<br />
<br />
<br />
<b>ಮತ್ತು ಆಯುಷ್ಮಂತರೇ ಸಮ್ಮಾಸಂಕಲ್ಪ ಎಂದರೇನು?</b><br />
ತ್ಯಾಗದ ಸಂಕಲ್ಪಗಳು, ಅದ್ವೇಷದ ಸಂಕಲ್ಪಗಳು, ಅಹಿಂಸೆಯ ಸಂಕಲ್ಪಗಳು ಇಂಥವುಗಳನ್ನು ಆಯುಷ್ಮಂತರೇ ಸಮ್ಮಾ ಸಂಕಲ್ಪ ಎನ್ನುವರು.<br />
<br />
<b>ಮತ್ತು ಆಯುಷ್ಮಂತರೇ ಸಮ್ಮಾವಾಚಾ ಎಂದರೇನು?</b><br />
ಸುಳ್ಳುಮಾತುಗಳಿಂದ ವಿರತನಾಗುವಿಕೆ , ಚಾಡಿತನಗಳಿಂದ ವಿರತನಾಗುವಿಕೆ, ಕಠೋರ ಮಾತುಗಳಿಂದ ವಿರತನಾಗುವಿಕೆ , ಮತ್ತು ಅಸಂಬದ್ಧಮಾತುಗಳಿಂದ ವಿರತನಾಗುವಿಕೆ ಇಂಥವುಗಳನ್ನು ಆಯುಷ್ಮಂತರೇ ಸಮ್ಮಾವಾಚಾ ಎನ್ನುವರು.<br />
<br />
<br />
<b> ಮತ್ತು ಆಯುಷ್ಮಂತರೇ ಸಮ್ಮಾಕಮ್ಮ ಎಂದರೇನು?</b><br />
ಪ್ರಾಣಿಹತ್ಯೆಗಳಿಂದ ವಿರತನಾಗುವಿಕೆ, ಕಳ್ಳತನಗಳಿಂದ ವಿರತನಾಗುವಿಕೆ, ಮತ್ತು ಅನೈತಿಕ ಕಾಮುಕತೆಯಿಂದ ವಿರತನಾಗುವಿಕೆ ಇಂಥವುಗಳನ್ನು ಆಯುಷ್ಮಂತರೇ ಸಮ್ಮಾಕಮ್ಮ ಎನ್ನುವರು.<br />
<br />
<b>ಮತ್ತು ಆಯುಷ್ಮಂತರೇ ಸಮ್ಮಾಜೀವನೊಪಾಯ ಎಂದರೇನು?</b><br />
ಇಲ್ಲಿ ಆರ್ಯಶ್ರಾವಕನು ಮಿಥ್ಯಜೀವನೋಪಯಗಳನ್ನು ತೊರೆದು ಸಮ್ಮಜೀವನೊಪಾಯದಿಂದ ಜೀವಿಸಿದರೆ ಇಂಥವುಗಳನ್ನು ಆಯುಷ್ಮಂತರೇ ಸಮ್ಮಾಕಮ್ಮ ಎನ್ನುವರು.<br />
<br />
<b> ಮತ್ತು ಆಯುಷ್ಮಂತರೇ ಸಮ್ಮಾವ್ಯಾಯಮವು ಯಾವುದು ?</b><br />
ಇಲ್ಲಿ ಆರ್ಯಶ್ರಾವಕನು ಇನ್ನು ಉತ್ಪನ್ನವಾಗದಿರುವ ಪಾಪಯುತವಾದ ಮತ್ತು ಅಕುಶಲವಾದ ಮಾನಸಿಕ ಸ್ಥಿತಿ(ಯೋಚನೆ)ಗಳನ್ನು ಉದಯಿಸದಂತೆ ಮಾಡಲು ಇಚ್ಚೆಯುಳ್ಳವನಾಗುತ್ತಾನೆ, ಉತ್ಸಾಹಿತನಾಗುತ್ತಾನೆ, ಪ್ರಯತ್ನಿಸುತ್ತಾನೆ, ಮತ್ತು ಅದರಲ್ಲಿ ಯಶಸ್ವಿಯಾಗುತ್ತಾನೆ. ಹಾಗೇಯೇ ಇಲ್ಲಿ ಆರ್ಯಶ್ರಾವಕನು ಉತ್ಪನ್ನವಾಗಿರುವ ಪಾಪಯುತವಾದ ಮತ್ತು ಅಕುಶಲವಾದ ಮಾನಸಿಕ ಸ್ಥಿತಿ(ಯೋಚನೆ)ಗಳನ್ನು ಇನ್ನಿಲ್ಲದಂತೆ ಮಾಡಲು ಇಚ್ಚೆಯುಳ್ಳವನಾಗುತ್ತಾನೆ, ಉತ್ಸಾಹಿತನಾಗುತ್ತಾನೆ, ಪ್ರಯತ್ನಿಸುತ್ತಾನೆ, ಮತ್ತು ಅದರಲ್ಲಿ ಯಶಸ್ವಿಯಾಗುತ್ತಾನೆ. ಹಾಗೇಯೆ ಇಲ್ಲಿ ಆರ್ಯಶ್ರಾವಕನು ಇನ್ನು ಉತ್ಪನ್ನವಾಗದಿರುವ ಪುಣ್ಯಭರಿತವಾದ ಮತ್ತು ಕುಶಲವಾದ ಮಾನಸಿಕ ಸ್ಥಿತಿ(ಯೋಚನೆ)ಗಳನ್ನು ಉದಯಿಸುವಂತೆ ಮಾಡಲು ಇಚ್ಚೆಯುಳ್ಳವನಾಗುತ್ತಾನೆ, ಉತ್ಸಾಹಿತನಾಗುತ್ತಾನೆ, ಪ್ರಯತ್ನಿಸುತ್ತಾನೆ, ಮತ್ತು ಅದರಲ್ಲಿ ಯಶಸ್ವಿಯಾಗುತ್ತಾನೆ. ಹಾಗೆಯೇ ಇಲ್ಲಿ ಆರ್ಯಶ್ರಾವಕನು ಉತ್ಪನ್ನವಾಗಿರುವ ಪುಣ್ಯಭರಿತವಾದ ಮತ್ತು ಕುಶಲವಾದ ಮಾನಸಿಕ ಸ್ಥಿತಿ(ಯೋಚನೆ)ಗಳನ್ನು ಕಳೆದುಹೋಗದಂತೆ, ವೃದ್ಧಿಸುವಂತೆ, ವಿಕಸಿಸುವಂತೆ, ಮಾಡಲು ಇಚ್ಚೆಯುಳ್ಳವನಾಗುತ್ತಾನೆ, ಉತ್ಸಾಹಿತನಾಗುತ್ತಾನೆ, ಪ್ರಯತ್ನಿಸುತ್ತಾನೆ, ಮತ್ತು ಅದರಲ್ಲಿ ಯಶಸ್ವಿಯಾಗುತ್ತಾನೆ. ಇಂಥವುಗಳನ್ನು ಆಯುಷ್ಮಂತರೇ ಸಮ್ಮಾವ್ಯಾಯಾಮ ಎನ್ನುವರು. <br />
<br />
<b> ಮತ್ತು ಆಯುಷ್ಮಂತರೇ ಸಮ್ಮಾ ಸ್ಮೃತಿಯು ಯಾವುದು ? </b><br />
ಇಲ್ಲಿ ಆಯುಷ್ಮಂತರೇ, ಭಿಕ್ಖುವು ಕಾಯದಲ್ಲಿ ಕಾಯಾನುಪಸ್ಸಿಯಾಗಿ ವಿಹರಿಸುತ್ತಾನೆ, ಉತ್ಸಾಹಿತನಾಗಿ ಎಚ್ಚರಿಕೆಯಿಂದ ಪೂರ್ಣಅರಿವಿನಿಂದ ಲೋಕದ ಯಾವುದಕ್ಕೂ ಆಸೆಯಾಗಲಿ, ದ್ವೇಷವಾಗಲಿ ತಾಳದೆ ವಿಕ್ಷಿಸುವವನಾಗುತ್ತಾನೆ. ಅದೇ ರೀತಿಯಲ್ಲಿ ವೇದನೆಗಳಲ್ಲಿ ವೇದನೂಪಸ್ಸಿಯಾಗಿ ವಿಹರಿಸುತ್ತಾನೆ. ಉತ್ಸಾಹಿತನಾಗಿ ಎಚ್ಚರಿಕೆಯಿಂದ ಪೂರ್ಣಅರಿವಿನಿಂದ ಲೋಕದ ಯಾವುದಕ್ಕೂ ಆಸೆಯಾಗಲಿ, ದ್ವೇಷವಾಗಲಿ ತಾಳದೆ ವಿಕ್ಷಿಸುವವನಾಗುತ್ತಾನೆ. ಹಾಗೆಯೇ ಚಿತ್ತಗಳಲ್ಲಿ ಚಿತ್ತಾನುಪಸ್ಸಿಯಾಗಿ ವಿಹರಿಸುತ್ತಾನೆ, ಉತ್ಸಾಹಿತನಾಗಿ ಎಚ್ಚರಿಕೆಯಿಂದ ಪೂರ್ಣಅರಿವಿನಿಂದ ಲೋಕದ ಯಾವುದಕ್ಕೂ ಆಸೆಯಾಗಲಿ, ದ್ವೇಷವಾಗಲಿ ತಾಳದೆ ವಿಕ್ಷಿಸುವವನಾಗುತ್ತಾನೆ. ಅದೇ ರೀತಿಯಲ್ಲಿ ಧಮ್ಮಗಳಲ್ಲಿ ಧಮ್ಮಾನುಪಸ್ಸಿಯಾಗಿ ವಿಹರಿಸುತ್ತಾನೆ, ಉತ್ಸಾಹಿತನಾಗಿ ಎಚ್ಚರಿಕೆಯಿಂದ ಪೂರ್ಣಅರಿವಿನಿಂದ ಲೋಕದ ಯಾವುದಕ್ಕೂ ಆಸೆಯಾಗಲಿ, ದ್ವೇಷವಾಗಲಿ ತಾಳದೆ ವಿಕ್ಷಿಸುವವನಾಗುತ್ತಾನೆ. ಇಂಥವುಗಳನ್ನು ಆಯುಷ್ಮಂತರೇ ಸಮ್ಮಾಸತಿ ಎನ್ನುವರು. <br />
<br />
<br />
<b> ಮತ್ತು ಆಯುಷ್ಮಂತರೇ ಸಮ್ಮಾ ಸ್ಮೃಮಾಧಿಯು ಯಾವುದು ? </b><br />
<br />
ಇಲ್ಲಿ ಆಯುಷ್ಮಂತರೇ ಭಿಕ್ಖುವು ಇಂದ್ರೀಯಸುಖಗಳ ಯೋಚನೆಗಳಿಂದ ರಹಿತನಾಗಿ(ಬರಿದಾಗಿ) ಹಾಗೆಯೇ ಅಕುಶಲ ಮಾನಸಿಕ ಸ್ಥಿತಿಗಳಿಂದ ರಹಿತನಾಗಿ, ವಿತರ್ಕ(ಮನಸ್ಸನ್ನು ಕೇಂದ್ರಿಕರಿಸುವಿಕೆ), ವಿಚಾರ(ಆ ದಿಕ್ಕಿನಲ್ಲಿಯೇ ಮನಸ್ಸನ್ನು ಹರಿಸುವಿಕೆ), ಹಾಗೂ ಏಕಾಗ್ರತೆಗಳಿಂದ ಹುಟ್ಟಿದ ಆನಂದ ಮತ್ತು ಸುಖದಿಂದ ಕೂಡಿದ ಪ್ರಥಮ ಸಮಾದಿಯಲ್ಲಿ ನೆಲೆಸುತ್ತಾನೆ.<br />
<br />
ನಂತರ ವಿತರ್ಕ ಮತ್ತು ವಿಚಾರಗಳಿಂದ ರಹಿತನಾಗಿ, ಅವುಗಳಿಗೆ ಅತೀತನಾಗಿ ದ್ವೀತೀಯ ಸಮಾಧಿಯಲ್ಲಿ ನೆಲೆಸುತ್ತಾನೆ, ಆ ಸಮಾಧಿಯು ವಿತರ್ಕ ಮತ್ತು ವಿಚಾರಗಳಿಂದ ರಹಿತವಾದ ಆನಂದ ಹಾಗೂ ಸುಖಗಳಿಂದ ಕೂಡಿರುತ್ತದೆ. ಜೋತೆಗೆ ಅಂತರಿಕ ಸ್ಪಷ್ಟತೆ ಹಾಗೂ ಶ್ರದ್ಧೆಯಿಂದ ಕೂಡಿದ್ದು ಚಿತ್ತದ ಏಕೋಭಾವದಿಂದ ಕೂಡಿರುತ್ತದೆ.<br />
<br />
ನಂತರ ಆನಂದವನ್ನು ಮೀರಿದ ತ್ರಿತೀಯ ಸಮಾಧಿಯಲ್ಲಿ ನೆಲೆಸುತ್ತಾನೆ. ಅಲ್ಲಿ ಅವರು ಸಮಚಿತ್ತತೆಯಿಂದ, ಸ್ಮೃತಿ ಹಾಗೂ ಎಚ್ಚರಿಕೆಯಿಂದ ಕೂಡಿದ ಸುಖದಲ್ಲಿ ನೆಲಸಿರುತ್ತಾರೆ, ಯಾವುದನ್ನು ಕುರಿತು ಆರ್ಯರು ಹೀಗೆ ನುಡಿದಿದ್ದಾರೊ : ಉಪೇಕ್ಖ(ಸಮಚಿತ್ತತೆ) ಹಾಗೂ ಸ್ಮೃತಿ(ಎಚ್ಚರಿಕೆ)ಯಿಂದ ಕೂಡಿದ ಸುಖಯುತ ಸಮಾಧಿಯಲ್ಲಿ ನೆಲಸುತ್ತಾನೆ. ಅದರಲ್ಲಿ ನೆಲಸುತ್ತಾನೆ.<br />
<br />
ನಂತರ ಸುಖಗಳನ್ನು ಹಾಗೂ ನೋವುಗಳನ್ನು ತ್ಯೇಜಿಸಿ, ಹಿಂದಿನ ಸುಖ ಹಾಗೂ ಶೋಕಗಳನ್ನು ಮೀರಿ, ಆತನು ಚತುರ್ಥ ಸಮಾಧಿಯಲ್ಲಿ ಪ್ರವೇಶಿಸಿ ನೆಲಸುತ್ತಾನೆ, ಅಲ್ಲಿ ಶುದ್ಧವಾದ ಸಮಚಿತ್ತತೆ ಹಾಗೂ ಸ್ಮೃತಿಯು ಇರುತ್ತದೆ. ಇದನ್ನೇ ಆಯುಷ್ಮಂತರೇ ಸಮ್ಮ ಸಮಾಧಿ ಎನ್ನುವರು. ಇದನ್ನೇ ಆಯುಷ್ಮಂತರೇ ದುಃಖನಿರೋಧಗಾಮಿನಿಯ ಮಾರ್ಗದ ಆರಿಯ ಸತ್ಯ ಎನ್ನುವರು.<br />
<br />
ಅಯುಷ್ಮಂತರೇ ತಥಾಗತರು ಅರಹಂತರು ಹಾಗೂ ಸಮ್ಮಸಂಬುದ್ಧರಿಂದ ವಾರಣಾಸಿಯ ಋಷಿಪಟ್ಟಣದ ಮಿಗದಾಯದಲ್ಲಿ ಅನುತ್ತರವಾದ ಧಮ್ಮಚಕ್ರವು ಪ್ರವರ್ತನ(ಚಾಲಿತ)ವಾಯಿತು. ಮತ್ತು ಆ ಚಕ್ರವು ಯಾವುದೇ ಸಮಣನಿಂದಾಗಲಿ, ಅಥವಾ ಯಾವುದೇ ಬ್ರಾಹ್ಮಣನಿಂದಾಗಲಿ, ಅಥವಾ ಯಾವುದೇ ದೇವನಿಂದಾಗಲಿ, ಅಥವಾ ಯಾವುದೇ ಮಾರನಿಂದಾಗಲಿ, ಯಾವುದೇ ಬ್ರಹ್ಮನಿಂದಾಗಲಿ, ಅಥವಾ ಲೋಕಗಳಲ್ಲಿ ಯಾರಿಂದಲೇ ಆಗಲಿ ಅಪ್ರವರ್ತನ(ಅಚಾಲಿತ ಅಥವಾ ಹಿಂತಿರುಗಿ ಹೋಗುವಿಕೆ ಅಥವಾ ಸುಳ್ಳೆಂದು ಸಾಬಿತಾಗುವಿಕೆ)ವಾಗುವುದಿಲ್ಲ, ಇದು ಆರ್ಯಸತ್ಯಗಳ ಬೋದನೆಯಾಗಿದೆ, ಪ್ರತಿಪಾದನೆಯಾಗಿದೆ, ಸ್ಥಾಪನೆಯಾಗಿದೆ, ಸ್ಪಷ್ಟತೆಯಾಗಿದೆ, ವಿಶ್ಲೇಷಣೆಯಾಗಿದೆ,<br />
<br />
ಹೀಗೆ ಅಯುಷ್ಮಂತರಾದ ಸಾರಿಪುತ್ತರು ನುಡಿದರು. ಇದನ್ನು ಅಲಿಸಿ ಆನಂದಿತರಾಗಿದಂತಹ ಭಿಕ್ಕೂಗಳು ಸಾರಿಪುತ್ತರ ಬೊಧನೆಗೆ ಅಭಿನಂದನೆ ಮಾಡಿದರು.<br />
<br />
ಇಲ್ಲಿಗೆ ಹನ್ನೊಂದನೆಯ ಸಚ್ಚವಿಭಂಗ ಸುತ್ತವು ಮುಗಿಯಿತು.<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
</div>
Aneesh Bodhhttp://www.blogger.com/profile/02041276688261983503noreply@blogger.com0tag:blogger.com,1999:blog-8742652691355814794.post-26012786277514761962019-03-21T22:04:00.000-07:002019-03-21T22:04:19.264-07:00pathama mahanama sutta in kannada 7. ಪ್ರಥಮ ಮಹಾನಾಮ ಸುತ್ತ<div dir="ltr" style="text-align: left;" trbidi="on">
<h2 style="text-align: left;">
7. ಪ್ರಥಮ ಮಹಾನಾಮ ಸುತ್ತ</h2>
<div class="separator" style="clear: both; text-align: center;">
<a href="https://1.bp.blogspot.com/-IRBJokGxxgc/XJRrjSOHIlI/AAAAAAAAEXM/oGXu9Jt_a9kAslHkyvdo4NFG1R0kPxK8wCLcBGAs/s1600/7.jpg" imageanchor="1" style="margin-left: 1em; margin-right: 1em;"><img border="0" data-original-height="1499" data-original-width="1160" height="320" src="https://1.bp.blogspot.com/-IRBJokGxxgc/XJRrjSOHIlI/AAAAAAAAEXM/oGXu9Jt_a9kAslHkyvdo4NFG1R0kPxK8wCLcBGAs/s320/7.jpg" width="247" /></a></div>
<div>
<br /></div>
<br />
<span style="white-space: pre;"> </span>ಆ ಸಮಯದಲ್ಲಿ ಭಗವಾನರು ಶಾಕ್ಯರ ರಾಜ್ಯದಲ್ಲಿ ಇದ್ದರು. ಕಪಿಲವಸ್ತುವಿನ ಸಮೀಪದ ಆಲದಮರದ ವಿಹಾರದಲ್ಲಿ ನೆಲೆಸಿದ್ದರು. ಆ ಸಮಯದಲ್ಲಿ ಕೆಲ ಭಿಕ್ಹುಗಳು ಭಗವಾನರಿಗೆ ಚಿವರ(ಭಿಕ್ಖು ವಸ್ತ್ರ)ವನ್ನು ಸಿದ್ಧಪಡಿಸುತ್ತಿದ್ದರು ಏಕೆಂದರೆ ವಷರ್ಾವಾಸದ ನಂತರ ಭಗವಾನರು ಬೇರೆಡೆ ಸಂಚಾರಕ್ಕೆ ಹೊರಡುವ ಸಾಧ್ಯತೆ ಇತ್ತು.. ಈ ವಿಷಯವನ್ನು ಮಹಾನಾಮ ಶಾಕ್ಯರು ಕೇಳಿದರು.<br />
<span style="white-space: pre;"> </span>ಅವರು ಬುದ್ಧರಲ್ಲಿಗೆ ಹೋಗಿ ವಂದಿಸಿದರು ನಂತರ ಒಂದೆಡೆ ಕುಳಿತರು ಮತ್ತು ಹೀಗೆ ಕೇಳಿದರು : ಭಗವಾನ್, ಕೆಲ ಭಿಕ್ಹುಗಳು ಭಗವಾನರಿಗೆ ಚಿವರವನ್ನು ಸಿದ್ಧಪಡಿಸುತ್ತಿದ್ದಾರೆ ಏಕೆಂದರೆ ವಷರ್ಾವಾಸದ ನಂತರ ತಾವು ಬೇರೆಡೆ ಸಂಚಾರಕ್ಕೆ ಹೊರಡುವ ಸಾಧ್ಯತೆ ಇದೆ ಎಂದು. ಈಗ ನಾವು ನಮ್ಮ ಜೀವನವನ್ನು ಹಲವಾರು ವಿಧದಲ್ಲಿ ಕಳೆಯುತಿಹೆವು, ನಾವು ಯಾವ ರೀತಿಯ ಸಾಧನೆಯಲ್ಲಿ ತೊಡಗಿದರೆ ನಮಗೆ ಒಳಿತಾಗಬಹುದು.<br />
<span style="white-space: pre;"> </span>ಸಾಧು ಸಾಧು ಮಹಾನಾಮ, ತಮ್ಮಂತಹ ಗೌರವಾನ್ವಿತ ವ್ಯಕ್ತಿಗಳು ನನ್ನೊಂದಿಗೆ ಈ ರೀತಿಯಲ್ಲಿ ಬಂದು, ನಾವು ನಮ್ಮ ಜೀವನವನ್ನು ಹಲವಾರು ವಿಧದಲ್ಲಿ ಕಳೆಯುತಿಹೆವು, ನಾವು ಯಾವ ರೀತಿಯ ಸಾಧನೆಯಲ್ಲಿ ತೊಡಗಿದರೆ ನಮಗೆ ಒಳಿತಾಗಬಹುದು. ಎಂದು ಕೇಳುವುದು ಅತ್ಯಂತ ಸಮಂಜಸವಾಗಿದೆ.<br />
<span style="white-space: pre;"> </span><b>ಮಹಾನಾಮ, ಶ್ರದ್ಧಾವಂತನು ಯಶಸ್ವಿಯಾಗುತ್ತಾನೆ ಹೊರತು ಅಶ್ರದ್ಧಾವಂತನಲ್ಲ,</b><br />
<b><span style="white-space: pre;"> </span>ಧೃಡಯತ್ನಶೀಲನು ಯಶಸ್ವಿಯಾಗುತ್ತಾನೆ ಹೊರತು ಸೋಮಾರಿಯಲ್ಲ, </b><br />
<b><span style="white-space: pre;"> </span>ಸ್ಮೃತಿವಂತನು ಯಶಸ್ವಿಯಾಗುತ್ತಾನೆ ಹೊರತು ಸ್ಮೃತಿಹೀನನಲ್ಲ,</b><br />
<b><span style="white-space: pre;"> </span>ಸಮಾಹಿತನು ಯಶಸ್ವಿಯಾಗುತ್ತಾನೆ ಹೊರತು ಅಸಮಾಹಿತನಲ್ಲ, </b><br />
<b><span style="white-space: pre;"> </span>ಪ್ರಜ್ಞಾವಂತನು ಯಶಸ್ವಿಯಾಗುತ್ತಾನೆ ಹೊರತು ದುಪ್ರಜ್ಞನಲ್ಲ, </b><br />
<span style="white-space: pre;"> </span>ಯಾವಾಗ ನೀವು ಈ ರೀತಿಯಲ್ಲಿ ಈ ಐದು ವಿಷಯಗಳಲ್ಲಿ ನೆಲೆಗೊಂಡಾಗ, ನೀವು ನಂತರ ಆರು ಉನ್ನತ ವಿಷಯಗಳಲ್ಲಿ ಅಭಿವೃದ್ಧಿ ತಾಳಬೇಕು. ಮೊದಲು ನೀವು ತಥಾಗತರ ಅನುಸ್ಮರಣೆ ಹೀಗೆ ಮಾಡಬೇಕು:<br />
<b> ಭಗವಾನರು ಅರಹಂತರು, ಸಮ್ಮಾಸಂಬುದ್ಧರು, ವಿಧ್ಯಾಚರಣೆಯ ಸಂಪನ್ನರು, ಸುಗತರು, ಲೋಕವಿದರು, ಅನುತ್ತರರು, ಪುರುಷದಮ್ಯ ಸಾರಥಿಯು, ದೇವತೆಗಳಿಗೆ ಮತ್ತು ಮಾನವರಿಗೆ ಶಾಸ್ತರು, ಬುದ್ಧರು ಹಾಗೂ ಭಗವಾನರು ಆಗಿದ್ದಾರೆ.</b> ಯಾವಾಗ ಹೀಗೆ ಆರ್ಯ ಶಿಷ್ಯನು ತಥಾಗತರನ್ನು ಅನುಸ್ಮೃರಣೆ ಮಾಡುವನೊ ಆಗ ಆತನ ಮನಸ್ಸು ರಾಗಯುತವಾಗಿರುವುದಿಲ್ಲ, ದ್ವೇಷಯುತವಾಗಿರುವುದಿಲ್ಲ ಹಾಗೂ ಮೋಹಯುತವಾಗಿರುವುದಿಲ್ಲ, ಆ ಸಮಯದಲ್ಲಿ ಅವರ ಮನಸ್ಸು ಬುದ್ಧಾನುಸ್ಸತಿಯಲ್ಲಿಯೇ ಅವಿಚಲವಾಗಿರುತ್ತದೆ, ಹೀಗೆ ಅವಿಚಲ ಚಿತ್ತವು ಅರ್ಥಸಹಿತ, ಧಮ್ಮಸಹಿತ ಆನಂದವಾಗಿರುತ್ತದೆ, ಹೀಗೆ ಧಮ್ಮುಪಸಂಹಿತವಾದ ಚಿತ್ತವು ಪ್ರಮೋದವನ್ನು ತಾಳುತ್ತದೆ, ಪ್ರಮೋದದಿಂದಾಗಿ ಪೀತಿ(ಆನಂದ)ವು ಉಂಟಾಗುತ್ತದೆ, ಆನಂದದಿಂದ ಕಾಯವು ಪ್ರಸನ್ನವಾಗುತ್ತದೆ, ಪ್ರಸನ್ನ ಕಾಯದಿಂದ ಸುಖವು ಉಂಟಾಗುವುದು, ಸುಖಯುತ ಚಿತ್ತದಿಂದ ಸಮಾಧಿಯುಂಟಾಗುವುದು.. ಹೀಗೆ ನೆಲೆಸುವ ಆರ್ಯಶ್ರಾವಕನು ಅವ್ಯವಸ್ಥತೆಯ ಜನರ ಮಧ್ಯೆ ಸಮತೋಲನವಾಗಿರುತ್ತಾನೆ, ಕ್ಷೊಭೆಯುಳ್ಳ ಜನರ ಮಧ್ಯೆ ಅಕ್ಷೊಭನಾಗಿರುತ್ತಾನೆ. ಅವರು ಧಮ್ಮದ ಶ್ರೋತದಲ್ಲಿ ಪ್ರವೇಶಿಸುತ್ತಾರೆ, ಮತ್ತು ಧಮ್ಮದ ಅನುಸ್ಸತಿಯಲ್ಲಿ ಅಭಿವೃದ್ಧಿ ಹೊಂದುತ್ತಾರೆ.<br />
<span style="white-space: pre;"> </span>ಅಲ್ಲದೆ ನೀವು ಧಮ್ಮಾನುಸ್ಸತಿಯಲ್ಲಿ ತೊಡಗಬೇಕು ಹೇಗೆಂದರೆ :<br />
<b><span style="white-space: pre;"> </span>ಧಮ್ಮವು (ಬೋಧನೆ) ಭಗವಾನರಿಂದ ತುಂಬ ಚೆನ್ನಾಗಿ ವಿವರಿಸಲ್ಪಟ್ಟಿದೆ (ಸ್ವಾಖ್ವಾತೋ), ಧಮ್ಮವು ಇಲ್ಲಿಯೇ ಈಗಲೇ ದಶರ್ಿಸಲ್ಪಟ್ಟಿದೆ(ಸಂದಿಟ್ಟಿಕೊ), ಕಾಲವಿಳಂಬವಿಲ್ಲದೆ ಫಲಕಾರಿಯು ಮತ್ತು ಸವರ್ಾಕಾಲಿಕವಾದುದು (ಅಕಾಲಿಕೊ), ಬನ್ನಿ ಪರಿಕ್ಷಿಸಿ (ಏಹಿಪಸ್ಸಿಕೊ) ನಂತರ ಸ್ವೀಕರಿಸಿ ಎಂದು ಆಹ್ವಾನಿಸುತ್ತದೆ. ಉನ್ನತಿಯೆಡೆಗೆ (ಓಪನಯಿಕೋ) ಸಾಗಿಸುವಂತಹುದು, ಜ್ಞಾನಿಗಳಾದ ಪ್ರತಿಯೊಬ್ಬರಿಂದಲೂ ಅರಿಯಬಹುದಾಗಿದೆ (ಪಚ್ಚತ್ತಂ ವೇದಿತಬ್ಬೊ ವಿಞ್ಞೋಹಿ ತಿ).</b><br />
<span style="white-space: pre;"> </span>ಯಾವಾಗ ಹೀಗೆ ಆರ್ಯ ಶಿಷ್ಯನು ಧಮ್ಮವನ್ನು ಅನುಸ್ಮೃರಣೆ ಮಾಡುವನೊ ಆಗ ಆತನ ಮನಸ್ಸು ರಾಗಯುತವಾಗಿರುವುದಿಲ್ಲ, ದ್ವೇಷಯುತವಾಗಿರುವುದಿಲ್ಲ ಹಾಗೂ ಮೋಹಯುತವಾಗಿರುವುದಿಲ್ಲ, ಆ ಸಮಯದಲ್ಲಿ ಅವರ ಮನಸ್ಸು ಧಮ್ಮಾನುಸ್ಸತಿಯಲ್ಲಿಯೇ ಅವಿಚಲವಾಗಿರುತ್ತದೆ, ಹೀಗೆ ಅವಿಚಲ ಚಿತ್ತವು ಅರ್ಥಸಹಿತ, ಧಮ್ಮಸಹಿತ ಆನಂದವಾಗಿರುತ್ತದೆ, ಹೀಗೆ ಧಮ್ಮುಪಸಂಹಿತವಾದ ಚಿತ್ತವು ಪ್ರಮೋದವನ್ನು ತಾಳುತ್ತದೆ, ಪ್ರಮೋದದಿಂದಾಗಿ ಪೀತಿ(ಆನಂದ)ವು ಉಂಟಾಗುತ್ತದೆ, ಆನಂದದಿಂದ ಕಾಯವು ಪ್ರಸನ್ನವಾಗುತ್ತದೆ, ಪ್ರಸನ್ನ ಕಾಯದಿಂದ ಸುಖವು ಉಂಟಾಗುವುದು, ಸುಖಯುತ ಚಿತ್ತದಿಂದ ಸಮಾಧಿಯುಂಟಾಗುವುದು.. ಹೀಗೆ ನೆಲೆಸುವ ಆರ್ಯಶ್ರಾವಕನು ಅವ್ಯವಸ್ಥಿತೆಯ ಜನರ ಮಧ್ಯೆ ಸಮತೋಲನವಾಗಿರುತ್ತಾನೆ, ಕ್ಷೊಭೆಯುಳ್ಳ ಜನರ ಮಧ್ಯೆ ಅಕ್ಷೊಭನಾಗಿರುತ್ತಾನೆ. ಅವರು ಧಮ್ಮದ ಶ್ರೋತದಲ್ಲಿ ಪ್ರವೇಶಿಸುತ್ತಾರೆ, ಮತ್ತು ಧಮ್ಮದ ಅನುಸ್ಸತಿಯಲ್ಲಿ ಅಭಿವೃದ್ಧಿ ಹೊಂದುತ್ತಾರೆ.<br />
<b><span style="white-space: pre;"> </span>ಭಗವಾನರ ಶ್ರಾವಕ ಸಂಘವು ಒಳ್ಳೆಯ ದಾರಿಯಲ್ಲಿ ಹೋಗುತ್ತಿದೆ</b><br />
<b><span style="white-space: pre;"> </span>ಭಗವಾನರ ಶ್ರಾವಕ ಸಂಘವು ಋಜುವಿನ (ನೇರವಾದ) ದಾರಿಯಲ್ಲಿ. ಹೋಗುತ್ತಿದೆ.</b><br />
<b><span style="white-space: pre;"> </span>ಭಗವಾನರ ಶ್ರಾವಕ ಸಂಘವು ನ್ಯಾಯವಾದ (ನಿಜ/ಸತ್ಯ) ದಾರಿಯಲ್ಲಿ ಹೋಗುತ್ತಿದೆ.</b><br />
<b><span style="white-space: pre;"> </span>ಭಗವಾನರ ಶ್ರಾವಕ ಸಂಘವು ಸಮಂಜಸವಾದ ದಾರಿಯಲ್ಲಿ ಹೋಗುತ್ತಿದೆ. ನಾಲ್ಕು ವ್ಯಕ್ತಿಗಳ ಜೋಡಿಗಳಿಂದ ಮತ್ತು ಅಷ್ಟ ವ್ಯಕ್ತಿಗಳಿಂದ ಕೂಡಿರುವುದೇ ಭಗವಾನರ ಶ್ರಾವಕ ಸಂಘವಾಗಿದೆ. ಈ ಪವಿತ್ರವಾದ ಸಂಘವು ದಾನಕ್ಕೆ ಅರ್ಹವಾಗಿದೆ, ಆತಿಥ್ಯಕ್ಕೆ ಅರ್ಹವಾಗಿದೆ, ದಕ್ಷಣೆಗೆ (ಸಮರ್ಪಣೆ) ಅರ್ಹವಾಗಿದೆ. ಅಂಜಲಿಬದ್ಧರಾಗಿ ಅನುತ್ತರವಾದ ಪುಣ್ಯಕ್ಷೇತ್ರವಾಗಿದೆ</b>.<br />
<span style="white-space: pre;"> </span>ಯಾವಾಗ ಹೀಗೆ ಆರ್ಯ ಶಿಷ್ಯನು ಸಂಘವನ್ನು ಅನುಸ್ಮೃರಣೆ ಮಾಡುವನೊ ಆಗ ಆತನ ಮನಸ್ಸು ರಾಗಯುತವಾಗಿರುವುದಿಲ್ಲ, ದ್ವೇಷಯುತವಾಗಿರುವುದಿಲ್ಲ ಹಾಗೂ ಮೋಹಯುತವಾಗಿರುವುದಿಲ್ಲ, ಆ ಸಮಯದಲ್ಲಿ ಅವರ ಮನಸ್ಸು ಸಂಘಾನುಸ್ಸತಿಯಲ್ಲಿಯೇ ಅವಿಚಲವಾಗಿರುತ್ತದೆ, ಹೀಗೆ ಅವಿಚಲ ಚಿತ್ತವು ಅರ್ಥಸಹಿತ, ಧಮ್ಮಸಹಿತ ಆನಂದವಾಗಿರುತ್ತದೆ, ಹೀಗೆ ಧಮ್ಮುಪಸಂಹಿತವಾದ ಚಿತ್ತವು ಪ್ರಮೋದವನ್ನು ತಾಳುತ್ತದೆ, ಪ್ರಮೋದದಿಂದಾಗಿ ಪೀತಿ(ಆನಂದ)ವು ಉಂಟಾಗುತ್ತದೆ, ಆನಂದದಿಂದ ಕಾಯವು ಪ್ರಸನ್ನವಾಗುತ್ತದೆ, ಪ್ರಸನ್ನ ಕಾಯದಿಂದ ಸುಖವು ಉಂಟಾಗುವುದು, ಸುಖಯುತ ಚಿತ್ತದಿಂದ ಸಮಾಧಿಯುಂಟಾಗುವುದು.. ಹೀಗೆ ನೆಲೆಸುವ ಆರ್ಯಶ್ರಾವಕನು ಅವ್ಯವಸ್ಥಿತೆಯ ಜನರ ಮಧ್ಯೆ ಸಮತೋಲನವಾಗಿರುತ್ತಾನೆ, ಕ್ಷೊಭೆಯುಳ್ಳ ಜನರ ಮಧ್ಯೆ ಅಕ್ಷೊಭನಾಗಿರುತ್ತಾನೆ. ಅವರು ಧಮ್ಮದ ಶ್ರೋತದಲ್ಲಿ ಪ್ರವೇಶಿಸುತ್ತಾರೆ, ಮತ್ತು ಧಮ್ಮದ ಅನುಸ್ಸತಿಯಲ್ಲಿ ಅಭಿವೃದ್ಧಿ ಹೊಂದುತ್ತಾರೆ.<br />
ಅಲ್ಲದೆ ನೀವು ಶೀಲಾನುನುಸ್ಸತಿಯಲ್ಲಿ ತೊಡಗಬೇಕು ಹೇಗೆಂದರೆ ?:<br />
<b><span style="white-space: pre;"> </span>ನಾನು ಶೀಲಗಳನ್ನು ಅಭಂಗವಾಗಿ ಪಾಲಿಸಿದ್ದೇನೆ</b><br />
<b><span style="white-space: pre;"> </span>ನಾನು ಶೀಲಗಳನ್ನು ಅಛಿದ್ರವಾಗಿ ಪಾಲಿಸಿದ್ದೇನೆ</b><br />
<b><span style="white-space: pre;"> </span>ನಾನು ಶೀಲಗಳನ್ನು ಕಲೆರಹಿತವಾಗಿ ಪಾಲಿಸಿದ್ದೇನೆ</b><br />
<b><span style="white-space: pre;"> </span>ನಾನು ಶೀಲಗಳನ್ನು ಅಮಲಿನವಾಗಿ ಪಾಲಿಸಿದ್ದೇನೆ</b><br />
<b><span style="white-space: pre;"> </span>ನಾನು ಶೀಲಗಳನ್ನು ಅಖಂಡವಾಗಿ ಪಾಲಿಸಿದ್ದೇನೆ </b><br />
<b><span style="white-space: pre;"> </span>ನಾನು ಸೀಲಗಳನ್ನು ಸ್ವತಂತ್ರಗಳಿಸುವ ರೀತಿಯಲ್ಲಿ ಪಾಲಿಸಿದ್ದೆನೆ,</b><br />
<b><span style="white-space: pre;"> </span>ನಾನು ಶೀಲಗಳನ್ನು ಜ್ಞಾನಿಗಳೂ ಸಹಾ ಪ್ರಶಂಶಿಸುವ ರೀತಿಯಲಿ ಪಾಲಿಸಿದ್ದೇನೆ,</b><br />
<b><span style="white-space: pre;"> </span>ನಾನು ಶೀಲಗಳನ್ನು ಸಮಾಧಿಯು ಗಳಿಸುವ ರೀತಿಯಲ್ಲಿ ಪಾಲಿಸಿದ್ದೇನೆ. ಎಂದು ಆನಂದಿಸುತ್ತಾನೆ.</b><br />
<span style="white-space: pre;"> </span>ಯಾವಾಗ ಹೀಗೆ ಆರ್ಯ ಶಿಷ್ಯನು ಶೀಲವನ್ನು ಅನುಸ್ಮೃರಣೆ ಮಾಡುವನೊ ಆಗ ಆತನ ಮನಸ್ಸು ರಾಗಯುತವಾಗಿರುವುದಿಲ್ಲ, ದ್ವೇಷಯುತವಾಗಿರುವುದಿಲ್ಲ ಹಾಗೂ ಮೋಹಯುತವಾಗಿರುವುದಿಲ್ಲ, ಆ ಸಮಯದಲ್ಲಿ ಅವರ ಮನಸ್ಸು ಶೀಲಾನುಸ್ಸತಿಯಲ್ಲಿಯೇ ಅವಿಚಲವಾಗಿರುತ್ತದೆ, ಹೀಗೆ ಅವಿಚಲ ಚಿತ್ತವು ಅರ್ಥಸಹಿತ, ಧಮ್ಮಸಹಿತ ಆನಂದವಾಗಿರುತ್ತದೆ, ಹೀಗೆ ಧಮ್ಮುಪಸಂಹಿತವಾದ ಚಿತ್ತವು ಪ್ರಮೋದವನ್ನು ತಾಳುತ್ತದೆ, ಪ್ರಮೋದದಿಂದಾಗಿ ಪೀತಿ(ಆನಂದ)ವು ಉಂಟಾಗುತ್ತದೆ, ಆನಂದದಿಂದ ಕಾಯವು ಪ್ರಸನ್ನವಾಗುತ್ತದೆ, ಪ್ರಸನ್ನ ಕಾಯದಿಂದ ಸುಖವು ಉಂಟಾಗುವುದು, ಸುಖಯುತ ಚಿತ್ತದಿಂದ ಸಮಾಧಿಯುಂಟಾಗುವುದು.. ಹೀಗೆ ನೆಲೆಸುವ ಆರ್ಯಶ್ರಾವಕನು ಅವ್ಯವಸ್ಥಿತೆಯ ಜನರ ಮಧ್ಯೆ ಸಮತೋಲನವಾಗಿರುತ್ತಾನೆ, ಕ್ಷೊಭೆಯುಳ್ಳ ಜನರ ಮಧ್ಯೆ ಅಕ್ಷೊಭನಾಗಿರುತ್ತಾನೆ. ಅವರು ಧಮ್ಮದ ಶ್ರೋತದಲ್ಲಿ ಪ್ರವೇಶಿಸುತ್ತಾರೆ, ಮತ್ತು ಧಮ್ಮದ ಅನುಸ್ಸತಿಯಲ್ಲಿ ಅಭಿವೃದ್ಧಿ ಹೊಂದುತ್ತಾರೆ.<br />
<span style="white-space: pre;"> </span>ಅಲ್ಲದೆ ನೀವು ಚಾಗಾ(ತ್ಯಾಗಾ)ನುನುಸ್ಸತಿಯಲ್ಲಿ ತೊಡಗಬೇಕು ಹೇಗೆಂದರೆ:<br />
<b><span style="white-space: pre;"> </span>ನಾನು ಅತ್ಯಂತ ಲಾಭವಂತ, ಭಾಗ್ಯಶಾಲಿ, ಪುಣ್ಯವಂತನಾಗಿದ್ದೇನೆ, ಏಕೆಂದರೆ ಸ್ವಾರ್ಥಮಲ ಹೊಂದಿರುವ ಜನರ ನಡುವೆ ನಿಃಸ್ವಾರ್ಥತತೆಯಿಂದ ಸ್ವತಂತ್ರವಾಗಿ, ದಾನಿಯಾಗಿ, ತೆರೆದಹಸ್ತವುಳ್ಳವವಾಗಿ, ತ್ಯಾಗದಲ್ಲಿ ಪ್ರೀತಿಸುವವನಾಗಿ, ದಾನಶೀಲತೆಯಲ್ಲಿ ಬದ್ಧನಾಗಿ, ನೀಡುವುದರಲ್ಲಿ , ಹಂಚುವುದರಲ್ಲ್ಲಿ ಆನಂದಿಸುವವನಾಗಿದ್ದೇನೆ</b><br />
<span style="white-space: pre;"> </span>ಯಾವಾಗ ಹೀಗೆ ಆರ್ಯ ಶಿಷ್ಯನು ತ್ಯಾಗವನ್ನು ಅನುಸ್ಮೃರಣೆ ಮಾಡುವನೊ ಆಗ ಆತನ ಮನಸ್ಸು ರಾಗಯುತವಾಗಿರುವುದಿಲ್ಲ, ದ್ವೇಷಯುತವಾಗಿರುವುದಿಲ್ಲ ಹಾಗೂ ಮೋಹಯುತವಾಗಿರುವುದಿಲ್ಲ, ಆ ಸಮಯದಲ್ಲಿ ಅವರ ಮನಸ್ಸು ತ್ಯಾಗಾನುಸ್ಸತಿಯಲ್ಲಿಯೇ ಅವಿಚಲವಾಗಿರುತ್ತದೆ, ಹೀಗೆ ಅವಿಚಲ ಚಿತ್ತವು ಅರ್ಥಸಹಿತ, ಧಮ್ಮಸಹಿತ ಆನಂದವಾಗಿರುತ್ತದೆ, ಹೀಗೆ ಧಮ್ಮುಪಸಂಹಿತವಾದ ಚಿತ್ತವು ಪ್ರಮೋದವನ್ನು ತಾಳುತ್ತದೆ, ಪ್ರಮೋದದಿಂದಾಗಿ ಪೀತಿ(ಆನಂದ)ವು ಉಂಟಾಗುತ್ತದೆ, ಆನಂದದಿಂದ ಕಾಯವು ಪ್ರಸನ್ನವಾಗುತ್ತದೆ, ಪ್ರಸನ್ನ ಕಾಯದಿಂದ ಸುಖವು ಉಂಟಾಗುವುದು, ಸುಖಯುತ ಚಿತ್ತದಿಂದ ಸಮಾಧಿಯುಂಟಾಗುವುದು.. ಹೀಗೆ ನೆಲೆಸುವ ಆರ್ಯಶ್ರಾವಕನು ಅವವ್ಯಸ್ಥಿತೆಯ ಜನರ ಮಧ್ಯೆ ಸಮತೋಲನವಾಗಿರುತ್ತಾನೆ, ಕ್ಷೊಭೆಯುಳ್ಳ ಜನರ ಮಧ್ಯೆ ಅಕ್ಷೊಭನಾಗಿರುತ್ತಾನೆ. ಅವರು ಧಮ್ಮದ ಶ್ರೋತದಲ್ಲಿ ಪ್ರವೇಶಿಸುತ್ತಾರೆ, ಮತ್ತು ಧಮ್ಮದ ಅನುಸ್ಸತಿಯಲ್ಲಿ ಅಭಿವೃದ್ಧಿ ಹೊಂದುತ್ತಾರೆ.<br />
ಅಲ್ಲದೆ ನೀವು ದೇವತಾನುನುಸ್ಸತಿಯಲ್ಲಿ ತೊಡಗಬೇಕು. ಹೇಗೆಂದರೆ? :ಚತುರ್ ಮಹಾರಾಜಿಕ ದೇವತೆಗಳಿದ್ದಾರೆ, ತಾವತಿಂಸ ದೇವತೆಗಳಿದ್ದಾರೆ, ತುಸಿತಾ ದೇವತೆಗಳಿದ್ದಾರೆ, ನಿಮರ್ಾಣರತಿ ದೇವತೆಗಳಿದ್ದಾರೆ, ಪರನಿಮರ್ಾಣರತಿ ದೇವತೆಗಳಿದ್ದಾರೆ, ಬ್ರಹ್ಮ ದೇವತೆಗಳಿದ್ದಾರೆ ಮತ್ತು ಬೇರೆಯ ಉನ್ನತ ರೀತಿಯ ದೇವತೆಗಳಿದ್ದಾರೆ. ಯಾವಾಗ ಈ ದೇವತೆಗಳು ಇಲ್ಲಿಂದ ಚ್ಯುತಿ ಹೊಂದುವವು ಆಗ ಅವು ಇಲ್ಲಿಂದ ಬೇರೆಡೆ ದೇವ ಪುನರ್ಜನ್ಮ ತಾಳುವವು, ಇವರೆಲ್ಲರ ಬಳಿ ಶ್ರದ್ಧೆ, ದಾನ, ಶೀಲ, ಧ್ಯಾನ, ಕಲಿಯುವಿಕೆ, ಪ್ರಜ್ಞಾ ಗುಣವು ಇದ್ದು ಈಗ ಅವುಗಳ ಫಲದಿಂದ ದೇವತೆಗಳಾಗಿದ್ದಾರೆ. ನನ್ನಲ್ಲೂ ಸಹಾ ಆ ಗುಣಗಳಿವೆ. ನಾನು ಆ ಗುಣಗಳನ್ನು ವೃದ್ಧಿಸುವೆ.<br />
<span style="white-space: pre;"> </span>ಯಾವಾಗ ಹೀಗೆ ಆರ್ಯ ಶಿಷ್ಯನು ದೇವತಾನುಸತಿಯನ್ನು ಅನುಸ್ಮೃರಣೆ ಮಾಡುವನೊ ಆಗ ಆತನ ಮನಸ್ಸು ರಾಗಯುತವಾಗಿರುವುದಿಲ್ಲ, ದ್ವೇಷಯುತವಾಗಿರುವುದಿಲ್ಲ ಹಾಗೂ ಮೋಹಯುತವಾಗಿರುವುದಿಲ್ಲ, ಆ ಸಮಯದಲ್ಲಿ ಅವರ ಮನಸ್ಸು ದೇವತಾನುಸ್ಸತಿಯಲ್ಲಿಯೇ ಅವಿಚಲವಾಗಿರುತ್ತದೆ, ಹೀಗೆ ಅವಿಚಲ ಚಿತ್ತವು ಅರ್ಥಸಹಿತ, ಧಮ್ಮಸಹಿತ ಆನಂದವಾಗಿರುತ್ತದೆ, ಹೀಗೆ ಧಮ್ಮುಪಸಂಹಿತವಾದ ಚಿತ್ತವು ಪ್ರಮೋದವನ್ನು ತಾಳುತ್ತದೆ, ಪ್ರಮೋದದಿಂದಾಗಿ ಪೀತಿ(ಆನಂದ)ವು ಉಂಟಾಗುತ್ತದೆ, ಆನಂದದಿಂದ ಕಾಯವು ಪ್ರಸನ್ನವಾಗುತ್ತದೆ, ಪ್ರಸನ್ನ ಕಾಯದಿಂದ ಸುಖವು ಉಂಟಾಗುವುದು, ಸುಖಯುತ ಚಿತ್ತದಿಂದ ಸಮಾಧಿಯುಂಟಾಗುವುದು..<br />
<span style="white-space: pre;"> </span>ಹೀಗೆ ನೆಲೆಸುವ ಆರ್ಯಶ್ರಾವಕನು ಅವ್ಯವಸ್ಥಿತೆಯ ಜನರ ಮಧ್ಯೆ ಸಮತೋಲನವಾಗಿರುತ್ತಾನೆ, ಕ್ಷೊಭೆಯುಳ್ಳ ಜನರ ಮಧ್ಯೆ ಅಕ್ಷೊಭನಾಗಿರುತ್ತಾನೆ. ಅವರು ಧಮ್ಮದ ಶ್ರೋತದಲ್ಲಿ ಪ್ರವೇಶಿಸುತ್ತಾರೆ, ಮತ್ತು ಧಮ್ಮದ ಅನುಸ್ಸತಿಯಲ್ಲಿ ಅಭಿವೃದ್ಧಿ ಹೊಂದುತ್ತಾರೆ.<br />
<br />
ಇಲ್ಲಿಗೆ ಪ್ರಥಮ ಮಹಾನಾಮ ಮುಗಿಯಿತು </div>
Aneesh Bodhhttp://www.blogger.com/profile/02041276688261983503noreply@blogger.com0tag:blogger.com,1999:blog-8742652691355814794.post-25050291926762202232019-03-21T21:57:00.001-07:002019-03-21T21:57:12.175-07:00velama sutta in kannada ವೇಲಾಮ ಸುತ್ತ<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://2.bp.blogspot.com/-eJrG8boYneg/XJRqoCekWwI/AAAAAAAAEXA/0YH9pXnMvnQE8EXRtY_maQkbVQcEthpggCLcBGAs/s1600/5.jpg" imageanchor="1" style="margin-left: 1em; margin-right: 1em;"><img border="0" data-original-height="364" data-original-width="504" height="231" src="https://2.bp.blogspot.com/-eJrG8boYneg/XJRqoCekWwI/AAAAAAAAEXA/0YH9pXnMvnQE8EXRtY_maQkbVQcEthpggCLcBGAs/s320/5.jpg" width="320" /></a></div>
<h2 style="text-align: left;">
2. ವೇಲಾಮ ಸುತ್ತ</h2>
<br />
<span style="white-space: pre;"> </span>ಆ ಸಮಯದಲ್ಲಿ ಭಗವಾನರು ಶ್ರಾವಸ್ಥಿಯ ಜೇತವನದ ಆನಾಥಪಿಂಡಿಕನ ವಿಹಾರದಲ್ಲಿ ನೆಲೆಸಿದ್ದರು. ಆಗ ಮಹಾಉಪಾಸಕ ಅನಾಥಪಿಂಡಿಕರು ಭಗವಾನರ ಬಳಿಗೆ ಬಂದರು, ಶ್ರದ್ಧಾಪೂರ್ವಕವಾಗಿ ವಂದಿಸಿದರು, ನಂತರ ಒಂದೆಡೆ ಕುಳಿತರು. ಆಗ ಭಗವಾನರು ಆತನಿಗೆ ಹೀಗೆ ಕೇಳಿದರು:<br />
ಗೃಹಪತಿಯೇ, ನಿಮ್ಮ ಕುಲವು ಈಗಲೂ ದಾನಗಳನ್ನು ನೀಡುತ್ತಿದೆಯೇ?<br />
ನೀಡುತ್ತಿದೆ ಭಗವಾನ್, ಅದರೆ ಕೇವಲ ಒರಟಾದ ಅಂಬಲಿ ಹಾಗೂ ಉಪ್ಪಿನಕಾಯಿಗಳನ್ನು ನೀಡುತ್ತಿದ್ದೇವೆ.<br />
ಗೃಹಪತಿಯೇ ದಾನಿಯು ನೀಡುವಂತಹ ಆಹಾರವು ಒರಟಾಗಿರಬಹುದು ಅಥವಾ ಶ್ರೇಷ್ಟವಾಗಿರುವುದೇ ಆಗಿರಬಹುದು, ಅದರೆ ಅವರು ಅಲಕ್ಷವಾಗಿ ನೀಡಿದರೆ, ಮನಸ್ಸಿಡದೇ ನೀಡಿದರೆ, ತಮ್ಮ ಕೈಯಾರೆ ನೀಡದಿದ್ದರೇ, ಉಳಿದಿದ್ದು ನೀಡಿದರೆ, ಕಮ್ಮವಿಪಾಕದ ಅರಿವಿಲ್ಲದೆ ನೀಡಿದರೆ, ಅಂತಹ ದಾನದ ಪರಿಣಾಮದಿಂದಾಗಿ ಸಿಗುವಂತಹ ಫಲಗಳಾದ ಉತ್ತಮ ಆಹಾರವಾಗಿರ ಬಹುದು, ಉತ್ತಮ ವಸ್ತ್ರಗಳಾಗಬಹುದು, ವಾಹನಗಳಾಗಿರಬಹುದು, ಅಥವಾ ಪಂಚವಿಧದ ಕಾಮಸುಖಗಳಾಗಿರಬಹುದು ಅವ್ಯಾವುದರಲ್ಲೂ ಆತನು ಆನಂದಿಸಲಾರನು ಆತನ ಮನಸ್ಸು ಅದರಲ್ಲಿ ಹರಿಯಲಾರದು, ಮತ್ತು ಆತನ ಪತ್ನಿಯಾಗಲಿ ಅಥವಾ ಪುತ್ರರಾಗಲಿ, ಅಥವಾ ಸೇವಕರಾಗಲಿ, ಗುಲಾಮನಾಗಲಿ, ಕೆಲಸಗಾರನಾಗಲಿ, ಯಾರು ಸಹಾ ಆತನ ಮಾತನ್ನು ಕೇಳಲಾರರು, ಅವರ್ಯಾರು ಸಹಾ ಅತನ ಮಾತುಗಳಿಗೆ ಗಮನವೂ ಸಹ ನೀಡುವುದಿಲ್ಲ ಹಾಗೇಯೆ ಅರ್ಥವನ್ನು ಮಾಡಿಕೊಳ್ಳಲು ಸಹಾ ಹೋಗುವುದಿಲ್ಲ. ಏಕೆ ಹೀಗೆ ? ಏಕೆಂದರೆ ಅವರು ದಾನವನ್ನು ನಿರ್ಲಕ್ಷವಾಗಿ ನೀಡಿದ್ದಾರೆ.<br />
<span style="white-space: pre;"> </span>ಇಲ್ಲಿ ಹಲವರು ದಾನದಲ್ಲಿ ನೀಡುವಂತಹ ಆಹಾರವು ಒರಟಾಗಿಯೇ ಇರಲಿ ಅಥವಾ ಶ್ರೇಷ್ಟವಾಗಿಯೇ ಇರಲಿ ಅದರೆ ಅವರು ಜಾಗರೂಕವಾಗಿ ಶ್ರದ್ಧೆಯಿಂದ ನೀಡಿದರೆ, ಮನಸ್ಸಿಟ್ಟು ನೀಡಿದರೆ, ತಮ್ಮ ಕೈಯಾರೆ ನೀಡಿದ್ದರೇ, ಉಳಿದಿದ್ದು ನೀಡದಿದ್ದರೆ, ಕಮ್ಮವಿಪಾಕದ ಅರಿವಿದ್ದು ನೀಡಿದರೆ, ಅಂತಹ ದಾನದ ಪರಿಣಾಮದಿಂದಾಗಿ ಸಿಗುವಂತಹ ಫಲಗಳಾದ ಉತ್ತಮ ಆಹಾರ ವಾಗಿರಬಹುದು, ಉತ್ತಮ ವಸ್ತ್ರಗಳಾಗಬಹುದು, ವಾಹನಗಳಾಗಿರಬಹುದು, ಅಥವಾ ಪಂಚವಿಧದ ಕಾಮಸುಖಗಳಾಗಿರಬಹುದು ಆ ಎಲ್ಲದರಲ್ಲು ಆತನು ಆನಂದಿಸುವನು ಆತನ ಮನಸ್ಸು ಅದರಲ್ಲಿ ಬಾಗುವುದು ಮತ್ತು ಆತನ ಪತ್ನಿಯಾಗಲಿ ಅಥವಾ ಪುತ್ರರಾಗಲಿ, ಅಥವಾ ಸೇವಕರಾಗಲಿ, ಗುಲಾಮನಾಗಲಿ, ಕೆಲಸಗಾರನಾಗಲಿ, ಎಲ್ಲರೂ ಸಹಾ ಆತನ ಮಾತನ್ನು ಕೇಳುವರು. ಎಲ್ಲರೂ ಸಹಾ ಅತನ ಮಾತುಗಳಿಗೆ ಗಮನವೂ ನೀಡುತ್ತಾರೆ ಹಾಗೇಯೆ ಅರ್ಥವನ್ನು ಮಾಡಿಕೊಳ್ಳುತ್ತಾರೆ ಏಕೆ ಹೀಗೆ ? ಏಕೆಂದರೆ ಅವರು ದಾನವನ್ನು ಜಾಗರೂಕವಾಗಿ, ಶ್ರದ್ಧಾಪೂರ್ವಕವಾಗಿ ನೀಡಿದ್ದಾರೆ ಅದರ ಕಮ್ಮಫಲದಿಂದಾಗಿ ಹೀಗಾಗಿದೆ.<br />
<span style="white-space: pre;"> </span>ಗೃಹಪತಿಯೇ ಒಂದು ಕಾಲದಲ್ಲಿ ವೇಲಾಮ ಎಂಬ ಹೆಸರಿನ ಬ್ರಾಹ್ಮಣನಿದ್ದನು, ಆತನು ಹೀಗೆ ದಾನವನ್ನು ಮಾಡುತ್ತಿದ್ದನು ಹೇಗೆಂದರೆ 84000 ಸಾವಿರ ಚಿನ್ನದ ಪಾತ್ರೆಗಳು ಬೆಳ್ಳಿಯಿಂದ ತುಂಬಿರುತ್ತಿದ್ದವು, 84000 ಸಾವಿರ ಬೆಳ್ಳಿಪಾತ್ರೆಗಳು ಚಿನ್ನದಿಂದ ತುಂಬಿರುತ್ತಿತ್ತು, 84000 ಕಂಚಿನ ಪಾತ್ರೆಗಳು ಚಿನ್ನದ ನಾಣ್ಯಗಳಿಂದ ತುಂಬಿರುತ್ತ್ತಿತ್ತು. 84000 ಆನೆಗಳು ಚಿನ್ನಾಭರಣಗಳಿಂದ, ಧ್ವಜಗಳಿಂದ ಕೂಡಿರುತ್ತಿತ್ತು, 84000 ರಥಗಳು ಸಿಂಹಗಳ, ಹುಲಿಗಳ, ಚಿರತೆಗಳ ಚರ್ಮಗಳಿಂದ ಮತ್ತು ನಯವಾದ ರತ್ನಕಂಬಳಿಗಳಿಂದ, ಚಿನ್ನವಸ್ತ್ರಗಳಿಂದ, ಚಿನ್ನದ ಧ್ವಜಗಳಿಂದ ಅಲಂಕೃತವಾಗಿರುತ್ತಿದ್ದವು, ಚಿನ್ನದ ಬಲೆಗಳಿಂದ ಕೂಡಿರುತ್ತಿದ್ದವು. ಹಾಗೇಯೆ ಹಾಲನ್ನು ನೀಡುವಂತಹ 84000 ಹಸುಗಳಿಗೆ ರೇಷ್ಮೆಯ ಮೂಗುದಾರವು ಹಾಗೂ ಹತೋಟಿಯ ರೇಷ್ಮೆಯ ಹಗ್ಗವು ಇರುತ್ತಿತ್ತು, ಹಾಗೇಯೇ 84000 ಕನ್ಯೆಯರು ರತ್ನಾಭರಣಗಳಿಂದ ಅಭೂಷಿತರಾಗಿದ್ದರು, 84000 ಪಲ್ಲಕ್ಕಿಗಳು ರತ್ನಗಂಬಳಿಗಳಿಂದ, ಹೂವು ಇತ್ಯಾದಿಗಳಿಂದ ಜಿಂಕೆಯ ಚರ್ಮಗಳಿಂದ ಅಲಂಕೃತವಾಗಿ ಅವರಿಸಿದ್ದವು, ಅದರಲ್ಲಿ ಕೆಂಪು ದಿಂಬುಗಳು ಸಹಾ ಇದ್ದವು, ಹಾಗೆಯೇ 84000000000 ಗಳಷ್ಟು ಲಿನೀನ್ನ, ರೇಷ್ಮೇಯ, ಉಣ್ಣೆಯ, ಮತ್ತು ಹತ್ತಿಯ ಉಡುಗೆಗಳು ಸಹಾ ಇದ್ದವು. ಮತ್ತು ಇನ್ನು ಊಟ, ಪಾನಿಯ, ತಿಂಡಿ, ಆಹಾರಗಳು, ಭೋಜನಗಳು ಇತ್ಯಾದಿಗಳ ಬಗ್ಗೆ ಹೇಳಲೇ ಬೇಕಾಗಿಲ್ಲ, ಏಕೆಂದರೆ , ಅವೆಲ್ಲಾ ನದಿಯಂತೆ ಹರಿಯುತ್ತಿದ್ದವು.<br />
<span style="white-space: pre;"> </span>ಗೃಹಪತಿಯೇ ನೀನು ಹೀಗೆ ಯೋಚಿಸಬಹುದು: ಖಂಡಿತವಾಗಿ ಈ ಬ್ರಾಹ್ಮಣ ಆ ಕಾಲದಲ್ಲಿ ಬೇರೆ ಯಾರೋ ಇದ್ದಿರಬಹುದು! ಎಂದು. ಅದರೆ ಹಾಗೇ ಭಾವಿಸದಿರಿ. ನಾನೇ ಆ ಕಾಲದಲ್ಲಿ ವೇಲಾಮ ಬ್ರಾಹ್ಮಣ ನಾಗಿದ್ದೇನು. ನಾನೇ ಆಗ ಆ ಮಟ್ಟದ ದಾನಗಳನ್ನು ಮಾಡಿದ್ದೆನು!, ಅದರೆ ಆ ಕಾಲದಲ್ಲಿ ಯಾರು ಸಹಾ ಅಂತಹ ದಾನ ಸ್ವೀಕಾರಕ್ಕೆ ಅರ್ಹರು ಇರಲಿಲ್ಲ. ಹೀಗಾಗಿ ಅಂತಹ ದಾನದಿಂದ ಯಾರು ಸಹಾ ಪರಿಶುದ್ಧರಾಗಲಿಲ್ಲ.<br />
<span style="white-space: pre;"> </span><b>ಗೃಹಪತಿಯೇ ವೇಲಾಮ ಬ್ರಾಹ್ಮಣ ಮಹಾದಾನವನ್ನೇ ಮಾಡಿರ ಬಹುದು, ಅದರೆ ಒಬ್ಬ ದೃಷ್ಟಿಸಂಪನ್ನನಿಗೆ (ಸೋತಪನ್ನ) ಬೋಜನದಾನ ಮಾಡಿಸಿದರೆ ಅದು ಈ ಹಿಂದೆ ವೇಲಾಮ ಮಾಡಿದ ಅಷ್ಟು ಮಹಾದಾನಕ್ಕಿಂತಲೂ ಮಹತ್ಫಲವಾಗುತ್ತದೆ.</b><br />
<b><span style="white-space: pre;"> </span>ಹಾಗೆಯೇ ಗೃಹಪತಿಯೇ , ಒಬ್ಬ ಸಕದಾಗಾಮಿ(ಜ್ಞಾನೋದಯದ 2ನೇಯ ಹಂತದವನಿ)ಗೆ ಭೋಜನದಾನ ಮಾಡಿಸಿದರೆ ಅದು ನೂರು ದೃಷ್ಟಿಸಂಪನ್ನರಿಗೆ ಮಾಡಿದ ಮಹಾದಾನಕ್ಕಿಂತಲೂ ಮಹತ್ಫಲವಾಗುತ್ತದೆ.</b><br />
<b><span style="white-space: pre;"> </span>ಹಾಗೆಯೇ ಗೃಹಪತಿಯೇ, ಒಬ್ಬ ಅನಾಗಾಮಿ(ಜ್ಞಾನೋದಯದ 3ನೇಯ ಹಂತದವನಿ)ಗೆ ಭೋಜನದಾನ ಮಾಡಿಸಿದರೆ ಅದು ನೂರು ಸಕದಾಗಾಮಿಯರಿಗೆ ಮಾಡಿದ ಮಹಾದಾನಕ್ಕಿಂತಲೂ ಮಹತ್ಫಲವಾಗುತ್ತದೆ.</b><br />
<b><span style="white-space: pre;"> </span>ಹಾಗೆಯೇ ಗೃಹಪತಿಯೇ, ಒಬ್ಬ ಅರಹಂತಗೆ(ಜ್ಞಾನೋದಯ ಪೂರ್ಣ) ಭೋಜನದಾನ ಮಾಡಿಸಿದರೆ ಅದು ನೂರು ಅನಾಗಾಮಿಯರಿಗೆ ಮಾಡಿದ ಮಹಾದಾನಕ್ಕಿಂತಲೂ ಮಹತ್ಫಲವಾಗುತ್ತದೆ. </b><br />
<b><span style="white-space: pre;"> </span>ಹಾಗೆಯೇ ಗೃಹಪತಿಯೇ, ಒಬ್ಬ ಪಚ್ಚೇಕಬುದ್ಧರಿಗೆ ಭೋಜನದಾನ ಮಾಡಿಸಿದರೆ ಅದು ನೂರು ಅರಹಂತರಿಗೆ ಮಾಡಿದ ಮಹಾದಾನಕ್ಕಿಂತಲೂ ಮಹತ್ಫಲವಾಗುತ್ತದೆ. </b><br />
<b><span style="white-space: pre;"> </span>ಹಾಗೆಯೇ ಗೃಹಪತಿಯೇ, ಒಬ್ಬ ತಥಾಗತರು, ಅರಹಂತರು ಹಾಗೂ ಸಮ್ಮಸಂಬುದ್ಧರು ಆಗಿರುವ ಅವರಿಗೆ ಭೋಜನದಾನ ಮಾಡಿದರೆ ಅದು ನೂರು ಪಚ್ಚೇಕಬುದ್ಧರಿಗೆ ಮಾಡಿದ ಮಹಾದಾನಕ್ಕಿಂತಲೂ ಮಹತ್ಫಲವಾಗುತ್ತದೆ.</b><br />
<b><span style="white-space: pre;"> </span>ಹಾಗೆಯೇ ಗೃಹಪತಿಯೇ ಭಿಕ್ಖುಸಂಘಸಹಿತ ,ಒಬ್ಬ ತಥಾಗತರು, ಅರಹಂತರು ಹಾಗೂ ಸಮ್ಮಸಂಬುದ್ಧರು ಆಗಿರುವ ಅವರಿಗೆ ಬೋಜನದಾನ ಮಾಡಿದರೆ ಅದು ಒಬ್ಬ ತಥಾಗತರು, ಅರಹಂತರು ಹಾಗೂ ಸಮ್ಮಸಂಬುದ್ಧರು ಮಾಡಿದ ಮಹಾದಾನಕ್ಕಿಂತಲೂ ಮಹತ್ಫಲವಾಗುತ್ತದೆ.</b><br />
<b><span style="white-space: pre;"> </span>ಹಾಗೇಯೇ ನಾಲ್ಕು ದಿಕ್ಕುಗಳಲ್ಲಿರುವ ಸಂಘಕ್ಕೇ ವಿಹಾರವನ್ನು(ವಾಸ ಸ್ಥಳ) ಕಟ್ಟಿಸುವುದು ಭಿಕ್ಖುಸಂಘಸಹಿತ ಒಬ್ಬ ತಥಾಗತರು, ಅರಹಂತರು ಹಾಗೂ ಸಮ್ಮಸಂಬುದ್ಧರು ಆಗಿರುವ ಅವರಿಗೆ ಬೋಜನದಾನ ಮಾಡಿಸುವುದಕ್ಕಿಂತಲೂ ಮಹತ್ಫಲವಾಗಿರುತ್ತದೆ.</b><br />
<span style="white-space: pre;"> </span><b>ಹಾಗೇಯೇ ಶ್ರದ್ಧಾಯುತ ಹೃದಯದಿಂದ ಬುದ್ಧರಿಗೆ, ಧಮ್ಮಕ್ಕೇ, ಮತ್ತು ಸಂಘಕ್ಕೇ ಶರಣು ಹೋಗುವುದು ನಾಲ್ಕು ದಿಕ್ಕುಗಳಲ್ಲಿರುವ ಸಂಘಕ್ಕೇ ವಿಹಾರವನ್ನು(ವಾಸ ಸ್ಥಳ) ಕಟ್ಟಿಸುವುದಕ್ಕಿಂತಲೂ ಹೆಚ್ಚು ಮಹತ್ಪಲವನ್ನು ನೀಡುತ್ತದೆ.</b><br />
<b><span style="white-space: pre;"> </span>ಹಾಗೆಯೇ ಪಂಚಶೀಲಗಳಾದ (- ಜೀವಹತ್ಯೆ ಮಾಡದಿರುವುದು, ಕಳ್ಳತನ ಮಾಡದಿರುವುದು, ಅನೈತಿಕ ಕಾಮುಕತೆಯಲ್ಲಿ ತೊಡಗದಿರುವುದು, ಸುಳ್ಳು ಹೇಳದಿರುವುದು ಮತ್ತು ಮತ್ತನ್ನುಂಟುಮಾಡುವ ಮಾದಕ ದ್ರವ್ಯಗಳನ್ನು ಸೇವಿಸದಿರುವುದು -ಇವುಗಳ) ಪಾಲನೆಯು ಶ್ರದ್ಧಾಯುತ ಹೃದಯದಿಂದ ಬುದ್ಧರಿಗೆ, ಧಮ್ಮಕ್ಕೇ, ಮತ್ತು ಸಂಘಕ್ಕೇ ಶರಣು ಹೋಗುವುದಕ್ಕಿಂತಲೂ ಹೆಚ್ಚು ಮಹತ್ಪಲವನ್ನು ನೀಡುತ್ತದೆ.</b><br />
<b><span style="white-space: pre;"> </span>ಹಾಗೇಯೇ ಹಸುವಿನಿಂದ ಹಾಲು ಕರೆಯುವ ಕಾಲದಷ್ಟು ಮೆತ್ತಾ (ಸರ್ವರ ಮೇಲಿನ ಪರಿಶುದ್ಧ ಪ್ರೀತಿ) ಧ್ಯಾನವು ಮಾಡಿದರೆ ಅದು ಪಂಚಶೀಲಗಳಾದ (ಜೀವಹತ್ಯೆ ಮಾಡದಿರುವುದು, ಕಳ್ಳತನ ಮಾಡದಿರುವುದು, ಅನೈತಿಕ ಕಾಮುಕತೆಯಲ್ಲಿ ತೋಡಗದಿರುವುದು, ಸುಳ್ಳು ಹೇಳದಿರುವುದು ಮತ್ತು ಮತ್ತನ್ನುಂಟುಮಾಡುವ ಮಾದಕ ದ್ರವ್ಯಗಳನ್ನು ಸೇವಿಸದಿರುವುದು -ಇವುಗಳ) ಪಾಲನೆಗಿಂತಲೂ ಹೆಚ್ಚು ಮಹತ್ಫಲವನ್ನು ನೀಡುತ್ತದೆ. </b><br />
<b><span style="white-space: pre;"> </span>ಹಾಗೇಯೇ ನಿಮಿಷಗಳ ಕಾಲದ ಅನಿತ್ಯತೆಯ ಸಂಜ್ಞೇಯ ಧ್ಯಾನವನ್ನು ಮಾಡಿದರೆ ಅದು ಹಸುವಿನಿಂದ ಹಾಲು ಕರೆಯುವ ಕಾಲದಷ್ಟು ಮೆತ್ತಾ (ಸರ್ವರ ಮೇಲಿನ ಪರಿಶುದ್ಧ ಪ್ರೀತಿ) ಭಾವನ (ಧ್ಯಾನ)ವು ಮಾಡಿದುದಕ್ಕಿಂತಲೂ ಹೆಚ್ಚು ಮಹತ್ಫಲ ನೀಡುತ್ತದೆ .ಇದು ಇವೆಲ್ಲಕ್ಕೂ ಹೆಚ್ಚು ಮಹತ್ಫಲವಾಗಿದೆ .</b><br />
<br />
ಇಲ್ಲಿಗೆ ವೇಲಾಮ ಸುತ್ತವು ಮುಗಿಯಿತು </div>
Aneesh Bodhhttp://www.blogger.com/profile/02041276688261983503noreply@blogger.com0tag:blogger.com,1999:blog-8742652691355814794.post-57714357126233473332019-03-21T21:54:00.002-07:002019-03-21T21:54:16.497-07:00kalama sutta in kannada ಕಾಲಾಮ ಸುತ್ತ<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://4.bp.blogspot.com/-CIlXqrA8QTg/XJRp2ySJsBI/AAAAAAAAEW4/4M2UnW67FbM6W_ctizi6VK2fi_p6Qs94QCLcBGAs/s1600/1.jpg" imageanchor="1" style="margin-left: 1em; margin-right: 1em;"><img border="0" data-original-height="506" data-original-width="703" height="229" src="https://4.bp.blogspot.com/-CIlXqrA8QTg/XJRp2ySJsBI/AAAAAAAAEW4/4M2UnW67FbM6W_ctizi6VK2fi_p6Qs94QCLcBGAs/s320/1.jpg" width="320" /></a></div>
<h2 style="text-align: left;">
1. ಕೇಸಮುಟ್ಟಿ (ಕೇಸಪುತ್ತಿಯ/ಕಾಲಾಮ ಸುತ್ತ) (ವಿಚಾರಶೀಲತೆಯ ಸೂತ್ರ) ಸುತ್ತ</h2>
<br />
<span style="white-space: pre;"> </span>ನಾನು ಹೀಗೆ ಕೇಳಿರುವೆ. ಭಗವಾನರು ಒಮ್ಮೆ ಕೋಸಲ ರಾಜ್ಯದ ಕೇಸಪುತ್ತ ಜಿಲ್ಲೆಗೆ ಬೃಹತ್ ಸಮೂಹದೊಂದಿಗೆ ಬಂದರು. ಕೇಸಪುತ್ತರು ಕಾಲಾಮರಿಗೆ ಭಗವಾನರು ಅಲ್ಲಿಗೆ ಬಂದಿರುವುದು ತಿಳಿಯಿತು. ಕೇಸಪುತ್ತದ ಕಾಲಾಮರು ಹೀಗೆ ಭಗವಾನರ ಖ್ಯಾತಿ ಆಲಿಸಿದ್ದರು. ಏನೆಂದರೆ ಶಾಕ್ಯಪುತ್ರರಾದ ಸಮಣಗೋತಮರು ಕೇಸಪುತ್ತಕ್ಕೆ ಆಗಮಿಸಿದ್ದಾರೆ ಅವರ ಬಗ್ಗೆ ಈ ರೀತಿಯ ಖ್ಯಾತಿಯು ಹಬ್ಬಿದೆ:<br />
<span style="white-space: pre;"> </span>ಭಗವಾನರು ಅರಹಂತರು, ಸಮ್ಮಾಸಂಬುದ್ಧರು, ವಿದ್ಯಾಚರಣೆಯ ಸಂಪನ್ನರು, ಸುಗತರು, ಲೋಕವಿದರು, ಅನುತ್ತರರು, ಪುರುಷಧಮ್ಮ ಸಾರಥಿಯು, ದೇವತೆಗಳಿಗೆ ಮತ್ತು ಮಾನವರಿಗೆ ಶಾಸ್ತರು, ಬುದ್ಧರು ಹಾಗೂ ಭಗವಾನರು ಆಗಿದ್ದಾರೆ. ಹೀಗಾಗಿ ಅಂತಹ ಅರಹಂತರನ್ನು ದಶರ್ಿಸುವುದು ಒಳ್ಳೆಯದು ಎಂದು ತಿಮರ್ಾನಿಸಿದರು.<br />
<span style="white-space: pre;"> </span>ಹೀಗೆ ಕೇಸಪುತ್ತದ ಕಾಲಾಮರು ಭಗವಾನರಲ್ಲಿಗೆ ಬಂದು ವಂದಿಸಿ, ಕುಶಲಕ್ಷೇಮವನ್ನು ವಿಚಾರಿಸಿ, ಗೌರವಾರ್ಪಣೆ ಮಾಡಿ ಕುಳಿತರು....ಕೆಲವರು ನಿಶ್ಯಬ್ದವಾಗಿ ಕುಳಿತರು.... ಆಗ ಕಾಲಾಮರು ಭಗವಾನರಲ್ಲಿ ಹೀಗೆ ಪ್ರಶ್ನಿಸಿದರು:<br />
<span style="white-space: pre;"> </span>ಭಂತೆ ಇಲ್ಲಿಗೆ ಕೆಲವು ಸಮಣ ಬ್ರಾಹ್ಮಣರು ಬರುತ್ತಾರೆ, ತಮ್ಮ ಸಿದ್ಧಾಂತವನ್ನು ವಿವರಿಸುತ್ತಾರೆ, ಬಣ್ಣಿಸುತ್ತಾರೆ. ಆದರೆ ಹಾಗೆಯೇ ಪರರ ಸಿದ್ಧಾಂತಗಳನ್ನು ಖಂಡಿಸುತ್ತಾರೆ, ನಿಂದಿಸುತ್ತಾರೆ, ನಿರಾಕರಿಸುತ್ತಾರೆ. ಅದೇರೀತಿಯಲ್ಲೇ ಬೇರೆ ಕೆಲವು ಸಮಣ ಬ್ರಾಹ್ಮಣರು ಸಹಾ ಬಂದು ಹಾಗೇ ಅದೇರೀತಿ ಮಾಡುತ್ತಾರೆ. ಹೀಗೆ ವಿಭಿನ್ನವಾದ ಸಿದ್ಧಾಂತಗಳಿಂದಾಗಿ ನಮ್ಮಲ್ಲಿ ಧ್ವಂದ್ವ ಉಂಟಾಗಿದೆ, ಸಂಶಯ ಉಂಟಾಗಿದೆ, ನಮಗೆ ಅವರಲ್ಲಿ ಸತ್ಯ ಹೇಳುತ್ತಿರುವವರು ಯಾರು? ಮಿಥ್ಯ ನುಡಿಯುತ್ತಿರುವವರು ಯಾರು? ತಿಳಿಯದಾಗಿದೆ. ಇದನ್ನು ನೀವೇ ನಮಗೆ ಪರಿಹರಿಸಬೇಕು ಭಂತೆ.<br />
<span style="white-space: pre;"> </span>ಓ ಕಾಲಾಮರೇ, ನೀವು ಸಂಶಯಸ್ತ ವಿಷಯಗಳಲ್ಲಿಯೇ ಸಂಶಯ ಪಡುತ್ತಿರುವಿರಿ, ದ್ವ್ವಂದ್ವವುಳ್ಳ ವಿಷಯದಲ್ಲೇ ಧ್ವಂದ್ವಪಡುತ್ತಿರುವಿರಿ. ಸಂಶಯಸ್ತ ವಿಷಯಗಳಲ್ಲಿ ದ್ವಂದ್ವತೆ ಆಗುವುದು.<br />
ಬನ್ನಿ ಕಾಲಾಮರೇ,<br />
<b>1.<span style="white-space: pre;"> </span>ಬಹಳಷ್ಟು ಕೇಳಿದ್ದೇವೇ ಎಂದು ನಂಬದಿರಿ (ಅನುಸ್ಸವವೇನ) </b><br />
<b>2.<span style="white-space: pre;"> </span>ಸಂಪ್ರದಾಯವೆಂದು (ಪರಂಪರಾ) ನಂಬದಿರಿ </b><br />
<b>3.<span style="white-space: pre;"> </span>ವದಂತಿಗಳನ್ನು (ಇತಿಕಿರಾಯ) ನಂಬದಿರಿ, </b><br />
<b>4.<span style="white-space: pre;"> </span>ಧರ್ಮಗ್ರಂಥಗಳಲ್ಲಿದೆ (ಪಿಟಿಕ ಸಂಪಾದನೇನ) ಎಂದು ನಂಬದಿರಿ, </b><br />
<b>5.<span style="white-space: pre;"> </span>ತರ್ಕ ಸಮ್ಮತ (ತರ್ಕಹೇತು) ಎಂದಾಗಲಿ ನಂಬದಿರಿ, </b><br />
<b>6.<span style="white-space: pre;"> </span>ಯೋಜನಬದ್ಧವಾಗಿದೆ (ನಯಹೇತು) ಎಂದು ನಂಬದಿರಿ, </b><br />
<b>7.<span style="white-space: pre;"> </span>ತೋರಿಕೆಯ ತರ್ಕದಿಂದ (ಚೆನ್ನಾಗಿ ಕಾಣುತ್ತಿದೆ) ಸ್ವೀಕಾರಾರ್ಹವಾಗಿದೆ (ಆಕಾರಪರಿವಿತಕ್ಕೇನ) ಎಂದಾಗಲಿ ನಂಬದಿರಿ,</b><br />
<b>8.<span style="white-space: pre;"> </span>ಪಕ್ಷಪಾತ ಅಥವಾ ಪೂವರ್ಾಗ್ರಹ ಪೀಡಿತತೆಯಿಂದಾಗಿ ನಮ್ಮ ಚಿಂತನೆಯಂತಿದೆ ಎಂದು (ದಿಟ್ಠನಿಜ್ಝಾನಕ್ಖನ್ತಿಯಾ) ನಂಬದಿರಿ, </b><br />
<b>9.<span style="white-space: pre;"> </span>ಭವ್ಯ ನುರಿತ ತಜ್ಞರಿಂದ ಬಂದಿದೆ (ಭಬ್ಬರೂಪತಾಯ) ಎಂದಾಗಲಿ ನಂಬದಿರಿ, </b><br />
<b>10.<span style="white-space: pre;"> </span>ಅಥವಾ ಇವರು ನಮ್ಮ ಗೌರವಾರ್ಹ ಸಮಣ ಗುರುವು ಅವರಿಂದ ಬಂದಿದೆ (ಸಮಣೊ ನೊ ಗರೂತಿ) ಎಂದಾಗಲಿ ನಂಬಬೇಡಿ. </b><br />
<span style="white-space: pre;"> </span>ಆದರೆ ಕಾಲಾಮರೇ, ಯಾವಾಗ ನೀವೇ ಚಿಂತನೆ ಮಾಡಿದಾಗ, ಇವು ಅಕುಶಲವಾದವು, ಇವು ನಿಂದನಾರ್ಹವಾದವು, ಇವು ಅನರ್ಥಕಾರಿ, ನಿಂದನೀಯ, ಜ್ಞಾನಿಗಳಿಂದ ನಿಷೇಧಿಸಲ್ಪಡುತ್ತದೆ ಎಂದು ಗೊತ್ತಾದಾಗ, ಇವುಗಳ ಪಾಲನೆಯಿಂದ ದುಃಖವಾಗುತ್ತದೆ ಎಂದು ಅರಿವಾದಾಗ ಅದನ್ನು ತಿರಸ್ಕರಿಸಿ.<br />
<span style="white-space: pre;"> </span>ಈಗ ಕಾಲಾಮರೇ, ಇದರ ಬಗ್ಗೆ ಹೇಗೆ ಯೋಚಿಸುವಿರಿ,? ಒಬ್ಬನಲ್ಲಿ ಲೋಭ ಉಂಟಾದಾಗ ಅದು ಆತನಿಗೆ ಲಾಭಕ್ಷೇಮ ತರುತ್ತದೆಯೋ ಅಥವಾ ಹಾನಿಯನ್ನು ಉಂಟುಮಾಡುತ್ತದೆಯೋ?<br />
<span style="white-space: pre;"> </span>ಅದು ಹಾನಿಯನ್ನು ತರುತ್ತದೆ ಭಗವಾನರೇ.<br />
<span style="white-space: pre;"> </span>ಕಾಲಾಮರೇ, ಈಗ ಆತನು ಲೋಭಿಯಾದಾಗ, ಲೋಭದಿಂದ ಸೋತಿರುವಾಗ, ಲೋಭದ ಗೀಳನ್ನು ಹೊಂದಿರುವಾಗ, ಆತನ ಚಿತ್ತವು ನಿಯಂತ್ರಣ ತಪ್ಪುತ್ತದೆ, ಆಗ ಆತನು ಜೀವಹತ್ಯೆ, ಕಳ್ಳತನ, ವ್ಯಭಿಚಾರ, ಸುಳ್ಳು ಹೇಳುವಿಕೆ ಮಾಡುತ್ತಾನೆ, ಹಾಗೆಯೇ ಪರರಿಗೂ ಅದೇ ರೀತಿ ಮಾಡಲು ಪ್ರೋತ್ಸಾಹ ನೀಡುತ್ತಾನೆ. ಅದರಿಂದಾಗಿ ಆತನಿಗೆ ಭವಿಷ್ಯದಲ್ಲಿ ದೀರ್ಘ ದುಃಖ ಮತ್ತು ಹಾನಿ ಉಂಟಾಗುತ್ತದೆ ಅಲ್ಲವೇ?<br />
<span style="white-space: pre;"> </span>ಹೌದು ಭಂತೆ<br />
<span style="white-space: pre;"> </span>ಕಾಲಾಮರೇ, ಈಗ ಆತನು ದ್ವೇಷಿಯಾದಾಗ, ದ್ವೇಷದಿಂದ ಸೋತಿರುವಾಗ, ದ್ವೇಷದ ಗೀಳನ್ನು ಹೊಂದಿರುವಾಗ, ಆತನ ಚಿತ್ತವು ನಿಯಂತ್ರಣ ತಪ್ಪುತ್ತದೆ, ಆಗ ಆತನು ಜೀವಹತ್ಯೆ, ಕಳ್ಳತನ, ವ್ಯಭಿಚಾರ, ಸುಳ್ಳು ಹೇಳುವಿಕೆ ಮಾಡುತ್ತಾನೆ, ಹಾಗೆಯೇ ಪರರಿಗೂ ಅದೇರೀತಿ ಮಾಡಲು ಪ್ರೋತ್ಸಾಹ ನೀಡುತ್ತಾನೆ. ಅದರಿಂದಾಗಿ ಆತನಿಗೆ ಭವಿಷ್ಯದಲ್ಲಿ ದೀರ್ಘ ದುಃಖ ಮತ್ತು ಹಾನಿ ಉಂಟಾಗುತ್ತದೆ ಅಲ್ಲವೇ?<br />
<span style="white-space: pre;"> </span>ಹೌದು ಭಂತೆ<br />
<span style="white-space: pre;"> </span>ಕಾಲಾಮರೇ, ಈಗ ಆತನು ಮೋಹಿಯಾದಾಗ, ಮೋಹದಿಂದ ಸೋತಿರುವಾಗ, ಮೋಹದ ಗೀಳನ್ನು ಹೊಂದಿರುವಾಗ, ಆತನ ಚಿತ್ತವು ನಿಯಂತ್ರಣ ತಪ್ಪುತ್ತದೆ, ಆಗ ಆತನು ಜೀವಹತ್ಯೆ, ಕಳ್ಳತನ, ವ್ಯಭಿಚಾರ, ಸುಳ್ಳು ಹೇಳುವಿಕೆ ಮಾಡುತ್ತಾನೆ, ಹಾಗೆಯೇ ಪರರಿಗೂ ಅದೇರೀತಿ ಮಾಡಲು ಪ್ರೋತ್ಸಾಹ ನೀಡುತ್ತಾನೆ. ಅದರಿಂದಾಗಿ ಆತನಿಗೆ ಭವಿಷ್ಯದಲ್ಲಿ ದೀರ್ಘ ದುಃಖ ಮತ್ತು ಹಾನಿ ಉಂಟಾಗುತ್ತದೆ ಅಲ್ಲವೇ?<br />
<span style="white-space: pre;"> </span>ಹೌದು ಭಂತೆ<br />
<span style="white-space: pre;"> </span>ಈಗ ಕಾಲಾಮರೇ, ಇದರ ಬಗ್ಗೆ ಹೇಗೆ ಯೋಚಿಸುವಿರಿ,? ಈ ವಿಷಯಗಳು ಕುಶಲವೋ ಅಥವಾ ಅಕುಶಲವೋ?<br />
<span style="white-space: pre;"> </span>ಅಕುಶಲ ಭಂತೆ<br />
<span style="white-space: pre;"> </span>ಇವು ನಿಂದನೀಯವೋ ಅಥವಾ ನಿಂದನಾತೀತವೋ?<br />
<span style="white-space: pre;"> </span>ನಿಂದನೀಯವಾದುದು ಭಗವಾನ್.<br />
<span style="white-space: pre;"> </span>ಇವು ಜ್ಞಾನಿಗಳಿಂದ ನಿಷೇಧಿಸಲ್ಪಡುವುದೋ ಅಥವಾ ಪ್ರಶಂಸನೀಯವೋ ?<br />
<span style="white-space: pre;"> </span>ನಿಷೇಧಿಸಲ್ಪಡುವುದು ಭಗವಾನ್.<br />
<span style="white-space: pre;"> </span>ಇವುಗಳನ್ನು ಸ್ವೀಕರಿಸಿ, ಪರಿಪಾಲಿಸಿದಾಗ ದೀರ್ಘಕಾಲ ಹಾನಿ, ದುಃಖ, ಉಂಟಾಗುತ್ತದೆ ಅಲ್ಲವೇ? ಇದನ್ನು ಹೇಗೆ ತೆಗೆದುಕೊಳ್ಳುವಿರಿ?<br />
<span style="white-space: pre;"> </span>ಇವುಗಳನ್ನು ಸ್ವೀಕರಿಸಿ, ಪರಿಪಾಲಿಸಿದಾಗ ದೀರ್ಘಕಾಲ ಹಾನಿ, ದುಃಖ, ಉಂಟಾಗುತ್ತದೆ. ಇದನ್ನು ನಾವು ಹೀಗೆ ತೆಗೆದುಕೊಳ್ಳುವೆವು.<br />
ಓ ಕಾಲಾಮರೇ, ಹೀಗಾಗಿ<br />
ಬನ್ನಿ ಕಾಲಾಮರೇ,<br />
1.<span style="white-space: pre;"> </span>ಬಹಳಷ್ಟು ಕೇಳಿದ್ದೇವೇ ಎಂದು ನಂಬದಿರಿ (ಅನುಸ್ಸವವೇನ)<br />
2.<span style="white-space: pre;"> </span>ಸಂಪ್ರದಾಯವೆಂದು (ಪರಂಪರಾ) ನಂಬದಿರಿ<br />
3.<span style="white-space: pre;"> </span>ವದಂತಿಗಳನ್ನು (ಇತಿಕಿರಾಯ) ನಂಬದಿರಿ, <br />
4.<span style="white-space: pre;"> </span>ಧರ್ಮಗ್ರಂಥಗಳಲ್ಲಿದೆ (ಪಿಟಿಕ ಸಂಪಾದನೇನ) ಎಂದು ನಂಬದಿರಿ,<br />
5.<span style="white-space: pre;"> </span>ತರ್ಕ ಸಮ್ಮತ (ತರ್ಕಹೇತು) ಎಂದಾಗಲಿ ನಂಬದಿರಿ,<br />
6.<span style="white-space: pre;"> </span>ಯೋಜನಬದ್ಧವಾಗಿದೆ (ನಯಹೇತು) ಎಂದು ನಂಬದಿರಿ, <br />
7.<span style="white-space: pre;"> </span>ತೋರಿಕೆಯ ತರ್ಕದಿಂದ (ಚೆನ್ನಾಗಿ ಕಾಣುತ್ತಿದೆ) ಸ್ವೀಕಾರಾರ್ಹವಾಗಿದೆ (ಆಕಾರಪರಿವಿತಕ್ಕೇನ) ಎಂದಾಗಲಿ ನಂಬದಿರಿ,<br />
8.<span style="white-space: pre;"> </span>ಪಕ್ಷಪಾತ ಅಥವಾ ಪೂವರ್ಾಗ್ರಹಪೀಡಿತತೆಯಿಂದಾಗಿ ನಮ್ಮ ಚಿಂತನೆಯಂತಿದೆ ಎಂದು (ದಿಟ್ಠನಿಜ್ಝಾನಕ್ಖನ್ತಿಯಾ) ನಂಬದಿರಿ,<br />
9.<span style="white-space: pre;"> </span>ಭವ್ಯನುರಿತ ತಜ್ಞರಿಂದ ಬಂದಿದೆ (ಭಬ್ಬರೂಪತಾಯ) ಎಂದಾಗಲಿ ನಂಬದಿರಿ,<br />
10.<span style="white-space: pre;"> </span>ಅಥವಾ ಇವರು ನಮ್ಮ ಗೌರವಾರ್ಹ ಸಮಣ ಗುರುವು ಅವರಿಂದ ಬಂದಿದೆ (ಸಮಣೊ ನೊ ಗರೂತಿ) ಎಂದಾಗಲಿ ನಂಬಬೇಡಿ. <br />
<span style="white-space: pre;"> </span>ಆದರೆ ಕಾಲಾಮರೇ, ಯಾವಾಗ ನೀವೇ ಚಿಂತನೆ ಮಾಡಿದಾಗ, ಇವು ಅಕುಶಲವಾದವು, ಇವು ನಿಂದನಾರ್ಹವಾದವು ,ಇವು ಅನರ್ಥಕಾರಿ, ನಿಂದನೀಯ, ಜ್ಞಾನಿಗಳಿಂದ ನಿಷೇಧಿಸಲ್ಪಡುತ್ತದೆ ಎಂದು ಗೊತ್ತಾದಾಗ, ಇವುಗಳ ಪಾಲನೆಯಿಂದ ದುಃಖವಾಗುತ್ತದೆ ಎಂದು ಅರಿವಾದಾಗ ಅದನ್ನು ತಿರಸ್ಕರಿಸಿ ,ಅದಕ್ಕಾಗಿಯೇ ಹೀಗೆ ಹೇಳಿದ್ದೇನೆ.<br />
ಬನ್ನಿ ಕಾಲಾಮರೇ,<br />
1.<span style="white-space: pre;"> </span>ಬಹಳಷ್ಟು ಕೇಳಿದ್ದೇವೇ ಎಂದು ನಂಬದಿರಿ (ಅನುಸ್ಸವವೇನ)<br />
2.<span style="white-space: pre;"> </span>ಸಂಪ್ರದಾಯವೆಂದು (ಪರಂಪರಾ) ನಂಬದಿರಿ<br />
3.<span style="white-space: pre;"> </span>ವದಂತಿಗಳನ್ನು (ಇತಿಕಿರಾಯ) ನಂಬದಿರಿ, <br />
4.<span style="white-space: pre;"> </span>ಧರ್ಮಗ್ರಂಥಗಳಲ್ಲಿದೆ (ಪಿಟಿಕ ಸಂಪಾದನೇನ) ಎಂದು ನಂಬದಿರಿ,<br />
5.<span style="white-space: pre;"> </span>ತರ್ಕ ಸಮ್ಮತ (ತರ್ಕಹೇತು) ಎಂದಾಗಲಿ ನಂಬದಿರಿ,<br />
6.<span style="white-space: pre;"> </span>ಯೋಜನಬದ್ಧವಾಗಿದೆ (ನಯಹೇತು) ಎಂದು ನಂಬದಿರಿ, <br />
7.<span style="white-space: pre;"> </span>ತೋರಿಕೆಯ ತರ್ಕದಿಂದ (ಚೆನ್ನಾಗಿ ಕಾಣುತ್ತಿದೆ) ಸ್ವೀಕಾರಾರ್ಹವಾಗಿದೆ (ಆಕಾರಪರಿವಿತಕ್ಕೇನ) ಎಂದಾಗಲಿ ನಂಬದಿರಿ,<br />
8.<span style="white-space: pre;"> </span>ಪಕ್ಷಪಾತ ಅಥವಾ ಪೂವರ್ಾಗ್ರಹಪೀಡಿತತೆಯಿಂದಾಗಿ ನಮ್ಮ ಚಿಂತನೆಯಂತಿದೆ ಎಂದು (ದಿಟ್ಠನಿಜ್ಝಾನಕ್ಖನ್ತಿಯಾ) ನಂಬದಿರಿ,<br />
9.<span style="white-space: pre;"> </span>ಭವ್ಯನುರಿತ ತಜ್ಞರಿಂದ ಬಂದಿದೆ (ಭಬ್ಬರೂಪತಾಯ) ಎಂದಾಗಲಿ ನಂಬದಿರಿ,<br />
10.<span style="white-space: pre;"> </span>ಅಥವಾ ಇವರು ನಮ್ಮ ಗೌರವಾರ್ಹ ಸಮಣ ಗುರುವು ಅವರಿಂದ ಬಂದಿದೆ (ಸಮಣೊ ನೊ ಗರೂತಿ) ಎಂದಾಗಲಿ ನಂಬಬೇಡಿ.<br />
<span style="white-space: pre;"> </span>ಆದರೆ ಕಾಲಾಮರೇ, ಯಾವಾಗ ನೀವೇ ಚಿಂತನೆ ಮಾಡಿದಾಗ, ಇವು ಕುಶಲವಾದವು, ಇವು ನಿಂದಾತೀತವಾದವು ,ಇವು ಅರ್ಥಕಾರಿ, ನಿಂದತೀತವಾದವು ಜ್ಞಾನಿಗಳಿಂದ ಪ್ರಶಂಶಿಲ್ಪಡುತ್ತದೆ ಎಂದು ಗೊತ್ತಾದಾಗ, ಇವುಗಳ ಪಾಲನೆಯಿಂದ ಸುಖವಾಗುತ್ತದೆ ಮತ್ತು ಕ್ಷೇಮವಾಗುತ್ತದೆ ಎಂದು ಅರಿವಾದಾಗ ಅವನ್ನು ಸ್ವೀಕರಿಸಿರಿ, ಪಾಲಿಸಿರಿ, ಜೀವಿಸಿರಿ.<br />
<span style="white-space: pre;"> </span>ಈಗ ಕಾಲಾಮರೇ, ಇದರ ಬಗ್ಗೆ ಹೇಗೆ ಯೋಚಿಸುವಿರಿ?, ಅಲೋಭವು ವ್ಯಕ್ತಿಯಲ್ಲಿ ಉದಯಿಸಿದರೆ ಆತನಿಗೆ ಕ್ಷೇಮವಾಗುತ್ತದೋ ಅಥವಾ ಹಾನಿಯಾಗುತ್ತದೋ?<br />
<span style="white-space: pre;"> </span>ಕ್ಷೇಮವಾಗುತ್ತದೆ ಭಂತೆ.<br />
<span style="white-space: pre;"> </span><b>ಈಗ ಮನುಷ್ಯನು ಲೋಭಮುುಕ್ತನಾದಾಗ, ಲೋಭದಿಂದ ಸೋಲದಿದ್ದಾಗ, ಲೋಭದಿಂದ ಆವೃತವಾಗದೇ ಇದ್ದಾಗ, ಆತನು ಜೀವಹತ್ಯೆ ಮಾಡಲಾರನು, ಕಳ್ಳತನವಾಗಲಿ, ವ್ಯಭಿಚಾರವಾಗಲಿ ಮಾಡಲಾರನು ಸುಳ್ಳಾಗಲಿ ನುಡಿಯಲಾರನು, ಹಾಗೆಯೇ ಪರರಿಗೂ ಇದನ್ನೇ ಪ್ರೋತ್ಸಾಹಿಸಿ ಆತನು ಅವರಿಗೆ ದಾರಿ ತಪ್ಪಿಸಲಾರನು. ಇದರಿಂದಾಗಿ ಆತನಿಗೆ ಕ್ಷೇಮವು ಮತ್ತು ಸುಖವು ದೀರ್ಘಕಾಲ ಇರುತ್ತದೆಯಲ್ಲವೇ ?</b><br />
<b><span style="white-space: pre;"> </span>ಹೌದು ಭಂತೆ.</b><br />
<span style="white-space: pre;"> </span>ಈಗ ಕಾಲಾಮರೇ, ಇದರ ಬಗ್ಗೆ ಹೇಗೆ ಯೋಚಿಸುವಿರಿ, ಅದ್ವೇಷವು ವ್ಯಕ್ತಿಯಲ್ಲಿ ಉದಯಿಸಿದರೆ ಆತನಿಗೆ ಕ್ಷೇಮವಾಗುತ್ತದೋ ಅಥವಾ ಹಾನಿಯಾಗುತ್ತದೋ?<br />
<span style="white-space: pre;"> </span>ಕ್ಷೇಮವಾಗುತ್ತದೆ ಭಂತೆ.<br />
<span style="white-space: pre;"> </span><b>ಈಗ ಮನುಷ್ಯನು ದ್ವೇಷಮುಕ್ತನಾದಾಗ, ದ್ವೇಷದಿಂದ ಸೋಲದಿದ್ದಾಗ, ದ್ವೇಷದಿಂದ ಆವೃತವಾಗದೇ ಇದ್ದಾಗ, ಆತನು ಜೀವಹತ್ಯೆ ಮಾಡಲಾರನು, ಕಳ್ಳತನವಾಗಲಿ, ವ್ಯಭಿಚಾರವಾಗಲಿ ಮಾಡಲಾರನು ಸುಳ್ಳಾಗಲಿ ನುಡಿಯಲಾರನು, ಹಾಗೆಯೇ ಪರರಿಗೂ ಪ್ರೋತ್ಸಾಹಿಸಿ ಆತನು ಅವರಿಗೆ ದಾರಿ ತಪ್ಪಿಸಲಾರನು. ಇದರಿಂದಾಗಿ ಆತನಿಗೆ ಕ್ಷೇಮವು ಮತ್ತು ಸುಖವು ದೀರ್ಘಕಾಲ ಇರುತ್ತದೆಯಲ್ಲವೇ ?</b><br />
<b> ಹೌದು ಭಂತೆ.</b><br />
<span style="white-space: pre;"> </span>ಈಗ ಕಾಲಾಮರೇ, ಇದರ ಬಗ್ಗೆ ಹೇಗೆ ಯೋಚಿಸುವಿರಿ, ಅಮೋಹವು ವ್ಯಕ್ತಿಯಲ್ಲಿ ಉದಯಿಸಿದರೆ ಆತನಿಗೆ ಕ್ಷೇಮವಾಗುತ್ತದೋ ಅಥವಾ ಹಾನಿಯಾಗುತ್ತದೋ?<br />
<span style="white-space: pre;"> </span>ಕ್ಷೇಮವಾಗುತ್ತದೆ ಭಂತೆ.<br />
<span style="white-space: pre;"> </span><b>ಈಗ ಮನುಷ್ಯನು ಮೋಹಮುಕ್ತನಾದಾಗ, ಮೋಹದಿಂದ ಸೋಲದಿದ್ದಾಗ, ಮೋಹದಿಂದ ಆವೃತವಾಗದೇ ಇದ್ದಾಗ, ಆತನು ಜೀವಹತ್ಯೆ ಮಾಡಲಾರನು, ಕಳ್ಳತನವಾಗಲಿ, ವ್ಯಭಿಚಾರವಾಗಲಿ ಮಾಡಲಾರನು ಸುಳ್ಳಾಗಲಿ ನುಡಿಯಲಾರನು, ಹಾಗೆಯೇ ಪರರಿಗೂ ಪ್ರೋತ್ಸಾಹಿಸಿ ಆತನು ಅವರಿಗೆ ದಾರಿ ತಪ್ಪಿಸಲಾರನು. ಇದರಿಂದಾಗಿ ಆತನಿಗೆ ಕ್ಷೇಮವು ಮತ್ತು ಸುಖವು ದೀರ್ಘಕಾಲ ಇರುತ್ತದೆಯಲ್ಲವೇ ?</b><br />
<b> ಹೌದು ಭಂತೆ.</b><br />
<span style="white-space: pre;"> </span>ಈಗ ಕಾಲಾಮರೇ, ಇದರ ಬಗ್ಗೆ ಹೇಗೆ ಯೋಚಿಸುವಿರಿ, ಈ ವಿಷಯಗಳು ಕುಶಲವೋ ಅಥವಾ ಅಕುಶಲವೋ,?<br />
<span style="white-space: pre;"> </span>ಕುಶಲ ಭಂತೆ<br />
<span style="white-space: pre;"> </span>ಇವು ನಿಂದನೀಯವೋ ಅಥವಾ ನಿಂದನತೀತವೋ ?.<br />
<span style="white-space: pre;"> </span>ನಿಂದನಾತೀತವಾದುದು ಭಗವಾನ್.<br />
<span style="white-space: pre;"> </span>ಇವು ಜ್ಞಾನಿಗಳಿಂದ ನಿಷೇಧಿಸಲ್ಪಡುವುದೋ ಅಥವಾ ಪ್ರಶಂಸನೀಯವೋ ?<br />
<span style="white-space: pre;"> </span>ಪ್ರಶಂಸಿಸಲ್ಪಡುವುದು ಭಗವಾನ್.<br />
<span style="white-space: pre;"> </span>ಇವುಗಳನ್ನು ಸ್ವೀಕರಿಸಿ, ಪರಿಪಾಲಿಸಿದಾಗ ದೀರ್ಘಕಾಲ ಸುಖ, ಕ್ಷೇಮ ಉಂಟಾಗುತ್ತದೆ ಅಥವಾ ಅಲ್ಲವೇ ಇದನ್ನು ಹೇಗೆ ತೆಗೆದುಕೊಳ್ಳುವಿರಿ ?<br />
<span style="white-space: pre;"> </span>ಇವುಗಳನ್ನು ಸ್ವೀಕರಿಸಿ, ಪರಿಪಾಲಿಸಿದಾಗ ದೀರ್ಘಕಾಲ ಸುಖ, ಕ್ಷೇಮ ಉಂಟಾಗುತ್ತದೆ. ಇದನ್ನು ನಾವು ಹೀಗೆ ತೆಗೆದುಕೊಳ್ಳುವೆವು.<br />
ಬನ್ನಿ ಕಾಲಾಮರೇ,<br />
1.<span style="white-space: pre;"> </span>ಬಹಳಷ್ಟು ಕೇಳಿದ್ದೇವೇ ಎಂದು ನಂಬದಿರಿ (ಅನುಸ್ಸವವೇನ)<br />
2.<span style="white-space: pre;"> </span>ಸಂಪ್ರದಾಯವೆಂದು (ಪರಂಪರಾ) ನಂಬದಿರಿ<br />
3.<span style="white-space: pre;"> </span>ವದಂತಿಗಳನ್ನು (ಇತಿಕಿರಾಯ) ನಂಬದಿರಿ, <br />
4.<span style="white-space: pre;"> </span>ಧರ್ಮಗ್ರಂಥಗಳಲ್ಲಿದೆ (ಪಿಟಿಕ ಸಂಪಾದನೇನ) ಎಂದು ನಂಬದಿರಿ,<br />
5.<span style="white-space: pre;"> </span>ತರ್ಕ ಸಮ್ಮತ (ತರ್ಕಹೇತು) ಎಂದಾಗಲಿ ನಂಬದಿರಿ,<br />
6.<span style="white-space: pre;"> </span>ಯೋಜನಬದ್ಧವಾಗಿದೆ (ನಯಹೇತು) ಎಂದು ನಂಬದಿರಿ, <br />
7.<span style="white-space: pre;"> </span>ತೋರಿಕೆಯ ತರ್ಕದಿಂದ (ಚೆನ್ನಾಗಿ ಕಾಣುತ್ತಿದೆ) ಸ್ವೀಕಾರಾರ್ಹವಾಗಿದೆ (ಆಕಾರಪರಿವಿತಕ್ಕೇನ) ಎಂದಾಗಲಿ ನಂಬದಿರಿ,<br />
8.<span style="white-space: pre;"> </span>ಪಕ್ಷಪಾತ ಅಥವಾ ಪೂವರ್ಾಗಹ್ರಪೀಡಿತತೆಯಿಂದಾಗಿ ನಮ್ಮ ಚಿಂತನೆಯಂತಿದೆ ಎಂದು (ದಿಟ್ಠನಿಜ್ಝಾನಕ್ಖನ್ತಿಯಾ) ನಂಬದಿರಿ,<br />
9.<span style="white-space: pre;"> </span>ಭವ್ಯನುರಿತ ತಜ್ಞರಿಂದ ಬಂದಿದೆ (ಭಬ್ಬರೂಪತಾಯ) ಎಂದಾಗಲಿ ನಂಬದಿರಿ,<br />
10.<span style="white-space: pre;"> </span>ಅಥವಾ ಇವರು ನಮ್ಮ ಗೌರವಾರ್ಹ ಸಮಣ ಗುರುವು ಅವರಿಂದ ಬಂದಿದೆ (ಸಮಣೊ ನೊ ಗರೂತಿ) ಎಂದಾಗಲಿ ನಂಬಬೇಡಿ.<br />
<span style="white-space: pre;"> </span>ಆದರೆ ಕಾಲಾಮರೇ, ಯಾವಾಗ ನೀವೇ ಚಿಂತನೆ ಮಾಡಿದಾಗ, ಇವು ಕುಶಲವಾದವು, ಇವು ನಿಂದನಾತೀತವಾದವು ,ಇವು ಅರ್ಥಕಾರಿ, ಜ್ಞಾನಿಗಳಿಂದ ಪ್ರಶಂಶಿಸಲ್ಪಡುತ್ತದೆ ಎಂದು ಗೊತ್ತಾದಾಗ, ಇವುಗಳ ಸ್ವೀಕಾರ ಹಾಗು ಪಾಲನೆಯಿಂದ ದೀರ್ಘಕಾಲಸುಖವಾಗುತ್ತದೆ ಎಂದು ಅರಿವಾದಾಗ ಅದನ್ನು ಪುರಸ್ಕರಿಸಿ, ಪಾಲಿಸಿರಿ ಮತ್ತು ಜೀವಿಸಿರಿ ಅದಕ್ಕಾಗಿಯೇ ಹೀಗೆ ಹೇಳಲಾಗಿದೆ.<br />
<span style="white-space: pre;"> </span>ಈಗ ಕಾಲಾಮರೇ, ಯಾವ ಆರ್ಯ ಶ್ರಾವಕನು ಹೀಗೆ ಲೋಭದಿಂದ, ದ್ವೇಷದಿಂದ ಮತ್ತು ಮೋಹದಿಂದ ಮುಕ್ತನಾದಾಗ ಆತನು ದಿಗ್ಭ್ರಮೆಪಡುವುದಿಲ್ಲ. ಸ್ಪಷ್ಟವಾಗಿ ಅರಿಯುವವನಾಗುತ್ತಾನೆ, ಮತ್ತು ಸ್ಮೃತಿವಂತನಾಗುತ್ತಾನೆ ಮತ್ತು ಚಿತ್ತದಲ್ಲಿ ಮೈತ್ರಿಯಿಂದ ಕೂಡಿರುತ್ತಾನೆ, ಹೀಗೇ ಸ್ಥಾಪಿತವಾದ ಮೆತ್ತಾಯುತವಾದ ಚಿತ್ತದಿಂದ ಒಂದು ದಿಕ್ಕಿನತ್ತ ಮೆತ್ತವನ್ನು ಪ್ರಸರಿಸುತ್ತಾನೆ.......... ಕರುಣೆಯಿಂದ ಕೂಡಿರುತ್ತಾನೆ.......... ಮುದಿತಾದಿಂದ ಕೂಡಿರುತ್ತಾನೆ......... ಸಮಚಿತ್ತತೆಯಿಂದ ಕೂಡಿರುತ್ತಾನೆ. ಇದೇರೀತಿಯ ಭಾವನೆಯಿಂದ ಆತನು ಒಂದು ದಿಕ್ಕಿಗೆ ಹರಡುತ್ತಾನೆ. ಹಾಗೆಯೇ ಎರಡನೇಯ ದಿಕ್ಕಿಗೂ, ಮೂರನೆಯ ದಿಕ್ಕಿಗೂ, ನಾಲ್ಕನೇಯ ದಿಕ್ಕಿಗೂ, ಹೀಗೆಯೇ ಮೇಲೆ, ಕೆಳಗೆ, ಸುತ್ತಲೂ, ಎಲ್ಲಾ ದಿಕ್ಕುಗಳಿಗೂ ಸಮಚಿತ್ತತೆಯನ್ನು ಹರಡುತ್ತ ನೆಲೆಸುತ್ತಾನೆ. ಹೀಗೆ ಆತನು ವ್ಯಾಪಕವಾದ, ಉನ್ನತವಾದ, ಅಪರಿಮಿತವಾದ, ದ್ವೇಷರಹಿತವಾದ, ಚಿತ್ತದಿಂದ ಕೂಡಿರುತ್ತಾನೆ.<br />
<span style="white-space: pre;"> </span>ಕಾಲಾಮರೇ ಈ ರೀತಿಯಾಗಿ ಆರ್ಯಶ್ರಾವಕನು ಚಿತ್ತದಿಂದ, ದ್ವೇಷ, ವಿರೋಧ, ಚಿತ್ತಕ್ಲೇಶಗಳಿಂದ ಮುಕ್ತನಾಗಿ, ಪರಿಶುದ್ಧನಾಗುತ್ತಾನೆ. ಅಂತಹುದರಿಂದ ಈ ಜನ್ಮದಲ್ಲೇ ನಾಲ್ಕು ಸಮಾಧಾನವನ್ನು ಭರವಸೆಗಳನ್ನು ಕಾಣಬಹುದು.<br />
<b>1.<span style="white-space: pre;"> </span>ಮೊದಲ ಭರವಸೆ ಏನೆಂದರೆ, ಒಂದು ವೇಳೆ ಪರಲೋಕವಿದ್ದರೆ ಒಳ್ಳೆಯ ಹಾಗೂ ಕೆಟ್ಟ ಕರ್ಮಗಳಿಗೆ ಕರ್ಮಫಲವು ಸಿಗುವುದಿದ್ದರೆ ನಮ್ಮ ಒಳ್ಳೆಯ ಕಾರ್ಯಗಳನ್ನು ಮಾಡಿರುವೆ, ನನಗೆ ಸಾವಿನ ನಂತರ ಸುಗತಿಯೇ ಸಿಗುವುದು.</b><br />
<b>2.<span style="white-space: pre;"> </span>ಎರಡನೆಯ ಭರವಸೆ ಏನೆಂದರ,ೆ ಪರಲೋಕವಿಲ್ಲದಿದ್ದರೆ, ಒಳ್ಳೆಯ ಹಾಗೂ ಕೆಟ್ಟ ಕರ್ಮಗಳಿಗೆ ಕರ್ಮಫಲ ಸಿಗದಿದ್ದರೆ, ಅದರೂ ಈ ಜನ್ಮದಲ್ಲೇ ದ್ವೇಷರಹಿತನಾಗಿ, ದುಃಖರಹಿತನಾಗಿ, ಕ್ಲೇಷರಹಿತನಾಗಿ ಸುಖಿಯಾಗಿ ಇರುತ್ತೇನೆ.</b><br />
<b>3.<span style="white-space: pre;"> </span>ಮೂರನೆಯ ಭರವಸೆ ಏನೆಂದರೆ, ಕರ್ಮಫಲ ಇರುವುದಾದರೆ, ಪಾಪಿಗೇ ಮಾತ್ರ ಕೆಡಕಾಗುತ್ತದೆ, ನಾನು ಯಾವುದೇ ಕೆಟ್ಟ ಇಚ್ಚೆಗಳನ್ನು ಯಾರ ಮೇಲೆಯೂ ಹೊಂದಿಲ್ಲ, ಹೀಗೆ ಯಾವ ಪಾಪವೂ ಮಾಡದ ನನಗೆ ಹೇಗೆತಾನೆ ದುಃಖವು ತಟ್ಟಿತು?.</b><br />
<b>4.<span style="white-space: pre;"> </span>ನಾಲ್ಕನೆಯ ಭರವಸೆ ಏನೆಂದರೆ, ಕೆಟ್ಟಕಮ್ಮ ಮಾಡುವವನಿಗೂ ಕರ್ಮಫಲ ಸಿಗುವುದಿಲ್ಲ ಎನ್ನುವುವಾದರೆ, ನನ್ನಿಂದ ಯಾವ ಪಾಪವು ನಡೆದಿಲ್ಲ, ಹೀಗೆ ಎರಡು ರೀತಿಯಲ್ಲಿಯೂ ಪರಿಶುದ್ಧನಾಗಿಯೇ ಇರುವೆನು</b>.<br />
<span style="white-space: pre;"> </span>ಹೀಗೆ ಕಾಲಾಮರೆ, ಆ ಆರ್ಯಶ್ರಾವಕನು ಚಿತ್ತಕ್ಲೇಷಗಳಿಂದ, ದ್ವೇಷದಿಂದ, ವಿಮುಕ್ತನಾಗಿ ನಿರ್ಮಲನಾಗಿ ಈ ಜೀವಿತದಲ್ಲೇ ಈ ನಾಲ್ಕು ಸಮಾಧಾನ ಪಡೆಯುತ್ತಾನೆ.<br />
<span style="white-space: pre;"> </span>ಇದು ಹೀಗೆಯೇ ಭಗವಾನ್ ಇದು ಸರಿಯಾಗಿಯೇ ಇದೆ, ಸುಗತರೇ, ಆ ಆರ್ಯಶ್ರಾವಕನು ಚಿತ್ತಕ್ಲೇಷಗಳಿಂದ, ದ್ವೇಷದಿಂದ, ವಿಮುಕ್ತನಾಗಿ ನಿರ್ಮಲನಾಗಿ ಈ ಜೀವಿತದಲ್ಲೇ ಈ ನಾಲ್ಕು ಸಮಾಧಾನ ಪಡೆಯುತ್ತಾನೆ.<br />
<span style="white-space: pre;"> </span>ಮೊದಲ ಭರವಸೆ ಏನೆಂದರೆ ಒಂದು ವೇಳೆ ಪರಲೋಕವಿದ್ದರೆ ಒಳ್ಳೆಯ ಹಾಗೂ ಕೆಟ್ಟ ಕರ್ಮಗಳಿಗೆ ಕರ್ಮಫಲವು ಸಿಗುವುದಿದ್ದರೆ ನಾನು ಒಳ್ಳೆಯ ಕಾರ್ಯಗಳನ್ನು ಮಾಡಿರುವೆ, ನನಗೆ ಸಾವಿನ ನಂತರ ಸುಗತಿಯೇ ಸಿಗುವುದು.............. ನಾಲ್ಕನೆಯ ಭರವಸೆ ಏನೆಂದರೆ ಕೆಟ್ಟಕಮ್ಮ ಮಾಡುವವನಿಗೂ ಕರ್ಮಫಲ ಸಿಗುವುದಿಲ್ಲ ಎಂದರೂ ನನ್ನಿಂದ ಯಾವ ಪಾಪವು ನಡೆದಿಲ್ಲ, ಹೀಗೆ ಎರಡು ರೀತಿಯಲ್ಲಿಯೂ ಪರಿಶುದ್ಧನಾಗಿಯೇ ಇರುವೆನು. ಇದು ಹೀಗೆಯೇ ಭಗವಾನ್ ಇದು ಸರಿಯಾಗಿಯೇ ಇದೆ, ಸುಗತರೇ, ಆ ಆರ್ಯಶ್ರಾವಕನು ಚಿತ್ತಕ್ಲೇಷಗಳಿಂದ, ದ್ವೇಷದಿಂದ, ವಿಮುಕ್ತನಾಗಿ ನಿರ್ಮಲನಾಗಿ ಈ ಜೀವಿತದಲ್ಲೇ ಈ ನಾಲ್ಕು ಸಮಾಧಾನ ಪಡೆಯುತ್ತಾನೆ.<br />
<span style="white-space: pre;"> </span>ಅದ್ಭುತ ಭಂತೆ! ......... ನಾವು ಭಗವಾನರಿಗೆ ಶರಣು ಹೋಗುವೆವು, ಧಮ್ಮಕ್ಕೂ ಶರಣು ಹೋಗುವೆವು, ಸಂಘಕ್ಕೂ ಶರಣು ಹೋಗುವೆವು. ನಮ್ಮನ್ನು ಭಗವಾನರು ಇಂದಿನಿಂದ ಜೀವನ ಪರ್ಯಂತ ಉಪಾಸಕರೆಂದು ಪರಿಗಣಿಸಲಿ.<br />
- ಂ0ಂ </div>
Aneesh Bodhhttp://www.blogger.com/profile/02041276688261983503noreply@blogger.com0tag:blogger.com,1999:blog-8742652691355814794.post-15044007877048730742018-07-26T04:28:00.002-07:002018-07-26T05:13:21.545-07:00ಅನತ್ತ ಲಕ್ಖಣ ಸುತ್ತ (ಬುದ್ಧಭಗವಾನರ ಎರಡನೇಯ ಸುತ್ತ) anatta lakkhana sutta in kannada<div dir="ltr" style="text-align: left;" trbidi="on">
<h2 style="text-align: left;">
<span style="color: red;">ಅನತ್ತ ಲಕ್ಖಣ ಸುತ್ತ</span></h2>
<br />
<h2 style="text-align: left;">
(ಬುದ್ಧಭಗವಾನರ ಎರಡನೇಯ ಸುತ್ತ)</h2>
<div class="separator" style="clear: both; text-align: center;">
<a href="https://3.bp.blogspot.com/-6w-_aWSucaU/W1mwQgDrWAI/AAAAAAAADdw/yvZwMgjP4Cs3my3ZHgbCD2cTLrBDQGGTwCLcBGAs/s1600/FB_IMG_1525249646135.jpg" imageanchor="1" style="margin-left: 1em; margin-right: 1em;"><img border="0" data-original-height="600" data-original-width="480" height="320" src="https://3.bp.blogspot.com/-6w-_aWSucaU/W1mwQgDrWAI/AAAAAAAADdw/yvZwMgjP4Cs3my3ZHgbCD2cTLrBDQGGTwCLcBGAs/s320/FB_IMG_1525249646135.jpg" width="256" /></a></div>
<div>
<br /></div>
<br />
<span style="white-space: pre;"> </span>ಹೀಗೆ ನಾನು ಕೇಳಿದ್ದೇನೆ ಆಗ ಭಗವಾನರು ಕಾಶಿಯ ಹತ್ತಿರದ ಇಸಿಪತ್ತನದ ಮೃಗದಾಯದ ಬಳಿ ಇದ್ದರು.ಆಗ ಭಗವಾನರು ಪಂಚವಗರ್ೀಯ ಭಿಕ್ಖುಗಳೊಂದಿಗೆ ಹೀಗೆ ಸಂಬೋಧಿಸಿದರು. :<br />
ಭಿಕ್ಖುಗಳೇ ಆಕಾರವು(ದೇಹವು) ಆತ್ಮವಾಗಿಲ್ಲ(ಸ್ವಯಂವಾಗಿಲ್ಲ), ದೇಹವೇ ಆತ್ಮವಾಗಿದ್ದರೇ ಆಗ ದೇಹವೂ ರೋಗಕ್ಕೆ ಒಳಗಾಗುತ್ತಿರಲ್ಲಿಲ್ಲ. ಮತ್ತು ಆಗ ಇಚ್ಚೆಗೆ ತಕ್ಕಂತೆ ನನ್ನ ಶರೀರ ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಾಗುತ್ತಿತ್ತು.. ಅದರೆ ಭಿಕ್ಖುಗಳೇ ದೇಹವೂ ಆತ್ಮವಲ್ಲದ್ದರಿಂದಾಗಿ ಅದು ರೋಗವನ್ನು ಪಡೆಯುತ್ತದೆ, ಹಾಗೂ ಇಚ್ಚೆಯಂತೆ ನನ್ನ ಶರೀರ ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಿಲ್ಲ.<br />
<br />
<span style="white-space: pre;"> </span>ಭಿಕ್ಖುಗಳೇ ವೇದನೆಗಳು ಆತ್ಮವಾಗಿಲ್ಲ(ಸ್ವಯಂವಾಗಿಲ್ಲ), ವೇದನೆಗಳೇ ಆತ್ಮವಾಗಿದ್ದರೇ ಆಗ ವೇದನೆಗಳು ನೋವಿಗೆ ಒಳಗಾಗುತ್ತಿರಲ್ಲಿಲ್ಲ. ಮತ್ತು ಆಗ ಇಚ್ಚೆಗೆ ತಕ್ಕಂತೆ ನನ್ನ ವೇದನೆ ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಾಗುತ್ತಿತ್ತು.. ಅದರೆ ಭಿಕ್ಖುಗಳೇ ವೇದನೆಗಳು ಆತ್ಮವಲ್ಲದ್ದರಿಂದಾಗಿ ಅದು ನೋವುಗಳನ್ನು ಪಡೆಯುತ್ತದೆ, ಹಾಗೂ ಇಚ್ಚೆಯಂತೆ ನನ್ನ ವೇದನೆ ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಿಲ್ಲ.<br />
<br />
<span style="white-space: pre;"> </span>ಭಿಕ್ಖುಗಳೇ ಸಞ್ಞೆಗಳು (ಗ್ರಹಿಕೆಗಳು) ಆತ್ಮವಾಗಿಲ್ಲ (ಸ್ವಯಂವಾಗಿಲ್ಲ), ಸಞ್ಞೆಗಳು (ಗ್ರಹಿಕೆಗಳು) ಆತ್ಮವಾಗಿದ್ದರೇ ಆಗ ಸಞ್ಞೆಗಳು (ಗ್ರಹಿಕೆಗಳು) ನೋವಿಗೆ ಒಳಗಾಗುತ್ತಿರಲ್ಲಿಲ್ಲ. ಮತ್ತು ಆಗ ಇಚ್ಚೆಗೆ ತಕ್ಕಂತೆ ನನ್ನ ಸಞ್ಞೆಗಳು(ಗ್ರಹಿಕೆಗಳು) ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಾಗುತ್ತಿತ್ತು.. ಅದರೆ ಭಿಕ್ಖುಗಳೇ ಸಞ್ಞೆಗಳು (ಗ್ರಹಿಕೆಗಳು) ಆತ್ಮವಲ್ಲದ್ದರಿಂದಾಗಿ ಅದು ನೋವುಗಳನ್ನು ಪಡೆಯುತ್ತದೆ, ಹಾಗೂ ಇಚ್ಚೆಯಂತೆ ನನ್ನ ಸಞ್ಞೆಗಳು (ಗ್ರಹಿಕೆಗಳು) ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಿಲ್ಲ.<br />
<br />
<span style="white-space: pre;"> </span>ಭಿಕ್ಖುಗಳೇ ಸಂಖಾರಗಳು(ಮನೋನಿಮರ್ಿತಿಗಳು) ಆತ್ಮವಾಗಿಲ್ಲ(ಸ್ವಯಂವಾಗಿಲ್ಲ), ಸಂಖಾರಗಳು(ಮನೋನಿಮರ್ಿತಿಗಳು) ಆತ್ಮವಾಗಿದ್ದರೇ ಆಗ ಸಂಖಾರಗಳು(ಮನೋನಿಮರ್ಿತಿಗಳು) ನೋವಿಗೆ(ಕ್ಲೇಷಗಳಿಗೆ) ಒಳಗಾಗುತ್ತಿರಲ್ಲಿಲ್ಲ.್ಲ. ಮತ್ತು ಆಗ ಇಚ್ಚೆಗೆ ತಕ್ಕಂತೆ ನನ್ನ ಸಂಖಾರಗಳು(ಮನೋನಿಮರ್ಿತಿಗಳು)ೆ ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಾಗುತ್ತಿತ್ತು.. ಅದರೆ ಭಿಕ್ಖುಗಳೇ ಸಂಖಾರಗಳು(ಮನೋನಿಮರ್ಿತಿಗಳು) ಆತ್ಮವಲ್ಲದ್ದರಿಂದಾಗಿ ಅದು ನೋವುಗಳನ್ನು ಪಡೆಯುತ್ತದೆ, ಹಾಗೂ ಇಚ್ಚೆಯಂತೆ ನನ್ನ ಸಂಖಾರಗಳು(ಮನೋನಿಮರ್ಿತಿಗಳು) ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಿಲ್ಲ.<br />
<br />
<br />
<span style="white-space: pre;"> </span>ಭಿಕ್ಖುಗಳೇ ವಿಞ್ಞನಗಳು (ಅರಿಯುವಿಕೆ) ಆತ್ಮವಾಗಿಲ್ಲ (ಸ್ವಯಂವಾಗಿಲ್ಲ), ವಿಞ್ಞನಗಳು (ಅರಿಯುವಿಕೆ) ಆತ್ಮವಾಗಿದ್ದರೇ ಆಗ ವಿಞ್ಞನಗಳು (ಅರಿಯುವಿಕೆ) ನೋವಿಗೆ(ಕ್ಲೇಷಗಳಿಗೆ) ಒಳಗಾಗುತ್ತಿರಲ್ಲಿಲ್ಲ.್ಲ. ಮತ್ತು ಆಗ ಇಚ್ಚೆಗೆ ತಕ್ಕಂತೆ ನನ್ನ ವಿಞ್ಞನಗಳು(ಅರಿಯುವಿಕೆ)ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಾಗುತ್ತಿತ್ತು.. ಅದರೆ ಭಿಕ್ಖುಗಳೇ ವಿಞ್ಞನಗಳು(ಅರಿಯುವಿಕೆ) ಆತ್ಮವಲ್ಲದ್ದರಿಂದಾಗಿ ಅದು ನೋವುಗಳನ್ನು ಪಡೆಯುತ್ತದೆ, ಹಾಗೂ ಇಚ್ಚೆಯಂತೆ ನನ್ನ ವಿಞ್ಞನಗಳು(ಅರಿಯುವಿಕೆ)ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಿಲ್ಲ.<br />
<br />
<span style="white-space: pre;"> </span>ನೀವು ಹೇಗೆ ಯೋಚಿಸುವಿರಿ ಭಿಕ್ಖುಗಳೇ ದೇಹವೂ ನಿತ್ಯವೋ ಅಥವಾ ಅನಿತ್ಯವೋ<br />
ಅನಿತ್ಯ ಭಗವಾನ್<br />
ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?<br />
ದುಃಖಕಾರಿ ಭಂತೆ<br />
ಈಗ ಯಾವುದು ಅನಿತ್ಯವೋ, ದುಃಖಕಾರಿಯೋ, ಬದಲಾಗುವ ಧರ್ಮದ್ದೊ ಅದನ್ನು ಇದು ನನ್ನದು, ಇದೇ ನಾನು, ಇದು ನನ್ನ ಆತ್ಮ ಎಂದು ಪರಿಗಣಿಸಬಹುದೇ?<br />
<span style="white-space: pre;"> </span>ಖಂಡಿತವಾಗಿಯು ಇಲ್ಲ ಭಗವಾನ್<br />
<span style="white-space: pre;"> </span>ನೀವು ಹೇಗೆ ಯೋಚಿಸುವಿರಿ ಭಿಕ್ಖುಗಳೇ ವೇದನೆಗಳು ನಿತ್ಯವೋ ಅಥವಾ ಅನಿತ್ಯವೋ<br />
ಅನಿತ್ಯ ಭಗವಾನ್<br />
ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?<br />
ದುಃಖಕಾರಿ ಭಂತೆ<br />
ಈಗ ಯಾವುದು ಅನಿತ್ಯವೋ, ದುಃಖಕಾರಿಯೋ, ಬದಲಾಗುವ ಧರ್ಮದ್ದೊ ಅದನ್ನು ಇದು ನನ್ನದು, ಇದೇ ನಾನು, ಇದು ನನ್ನ ಆತ್ಮ ಎಂದು ಪರಿಗಣಿಸಬಹುದೇ?<br />
ಖಂಡಿತವಾಗಿಯು ಇಲ್ಲ ಭಗವಾನ್.<br />
ನೀವು ಹೇಗೆ ಯೋಚಿಸುವಿರಿ ಭಿಕ್ಖುಗಳೇ ಸಞ್ಞ(ಗ್ರಹಿಕೆಗಳು) ನಿತ್ಯವೋ ಅಥವಾ ಅನಿತ್ಯವೋ<br />
ಅನಿತ್ಯ ಭಗವಾನ್<br />
ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?<br />
ದುಃಖಕಾರಿ ಭಂತೆ<br />
ಈಗ ಯಾವುದು ಅನಿತ್ಯವೋ, ದುಃಖಕಾರಿಯೋ, ಬದಲಾಗುವ ಧರ್ಮದ್ದೊ ಅದನ್ನು ಇದು ನನ್ನದು, ಇದೇ ನಾನು, ಇದು ನನ್ನ ಆತ್ಮ ಎಂದು ಪರಿಗಣಿಸಬಹುದೇ?<br />
ಖಂಡಿತವಾಗಿಯು ಇಲ್ಲ ಭಗವಾನ್.<br />
ನೀವು ಹೇಗೆ ಯೋಚಿಸುವಿರಿ ಭಿಕ್ಖುಗಳೇ ಸಂಖಾರಗಳು(ಮನೋನಿಮರ್ಿತಿಗಳು) ನಿತ್ಯವೋ ಅಥವಾ ಅನಿತ್ಯವೋ<br />
<span style="white-space: pre;"> </span>ಅನಿತ್ಯ ಭಗವಾನ್<br />
<span style="white-space: pre;"> </span>ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?<br />
<span style="white-space: pre;"> </span>ದುಃಖಕಾರಿ ಭಂತೆ<br />
<span style="white-space: pre;"> </span>ಈಗ ಯಾವುದು ಅನಿತ್ಯವೋ, ದುಃಖಕಾರಿಯೋ, ಬದಲಾಗುವ ಧರ್ಮದ್ದೊ ಅದನ್ನು ಇದು ನನ್ನದು, ಇದೇ ನಾನು, ಇದು ನನ್ನ ಆತ್ಮ ಎಂದು ಪರಿಗಣಿಸಬಹುದೇ?<br />
<span style="white-space: pre;"> </span>ಖಂಡಿತವಾಗಿಯು ಇಲ್ಲ ಭಗವಾನ್.<br />
<span style="white-space: pre;"> </span>ನೀವು ಹೇಗೆ ಯೋಚಿಸುವಿರಿ ಭಿಕ್ಖುಗಳೇ ವಿಞ್ಞನಗಳು(ಅರಿಯುವಿಕೆಗಳು) ನಿತ್ಯವೋ ಅಥವಾ ಅನಿತ್ಯವೋ<br />
<span style="white-space: pre;"> </span>ಅನಿತ್ಯ ಭಗವಾನ್<br />
<span style="white-space: pre;"> </span>ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?<br />
<span style="white-space: pre;"> </span>ದುಃಖಕಾರಿ ಭಂತೆ<br />
<span style="white-space: pre;"> </span>ಈಗ ಯಾವುದು ಅನಿತ್ಯವೋ, ದುಃಖಕಾರಿಯೋ, ಬದಲಾಗುವ ಧರ್ಮದ್ದೊ ಅದನ್ನು ಇದು ನನ್ನದು, ಇದೇ ನಾನು, ಇದು ನನ್ನ ಆತ್ಮ ಎಂದು ಪರಿಗಣಿಸಬಹುದೇ?<br />
<span style="white-space: pre;"> </span>ಖಂಡಿತವಾಗಿಯು ಇಲ್ಲ ಭಗವಾನ್.<br />
<span style="white-space: pre;"> </span>ಅದ್ದರಿಂದ ಭಿಕ್ಖುಗಳೇ ಯಾವುದೇ ಶರೀರವು ಅದು ಭೂತಕಾಲದ್ದೇ ಅಗಿರಲಿ, ಅಥವಾ ಭವಿಷ್ಯದ್ದೇ ಆಗಿರಲಿ ಅಥವಾ ವರ್ತಮಾನದ್ದೇ ಆಗಿರಲಿ ,ಆಂತರ್ಯದ್ದೇ ಆಗಿರಲಿ ಅಥವಾ ಬಾಹ್ಯದ್ದೇ ಆಗಿರಲಿ, ಸ್ಥೂಲವಾದ್ದೇ ಆಗಿರಲಿ ಅಥವಾ ಸೂಕ್ಷ್ಮವಾದ್ದೇ ಆಗಿರಲಿ, ಶ್ರೇಷ್ಟವಾದ್ದೇ ಆಗಿರಲಿ ಅಥವ ನೀಚವಾದ್ದೇ ಆಗಿರಲಿ, ದೂರದ್ದೇ ಆಗಿರಲಿ ಅಥವಾ ಹತ್ತಿರದ್ದೇ ಆಗಿರಲಿ , ಆ ಎಲ್ಲಾ ಶರೀರವನ್ನು ಇದು ನನ್ನದ್ದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಪ್ರಜ್ಞಾಪೂರ್ವಕವಾಗಿ, ಯಥಾಭೂತವಾಗಿ ಹೀಗೆ ಅರಿಯಬೇಕು.<br />
<br />
ಅದ್ದರಿಂದ ಭಿಕ್ಖುಗಳೇ ಯಾವುದೇ ವೇದನೆಯು ಅದು ಭೂತಕಾಲದ್ದೇ ಅಗಿರಲಿ, ಅಥವಾ ಭವಿಷ್ಯದ್ದೇ ಆಗಿರಲಿ ಅಥವಾ ವರ್ತಮಾನದ್ದೇ ಆಗಿರಲಿ ,ಆಂತರ್ಯದ್ದೇ ಆಗಿರಲಿ ಅಥವಾ ಬಾಹ್ಯದ್ದೇ ಆಗಿರಲಿ, ಸ್ಥೂಲವಾದ್ದೇ ಆಗಿರಲಿ ಅಥವಾ ಸೂಕ್ಷ್ಮವಾದ್ದೇ ಆಗಿರಲಿ, ಶ್ರೇಷ್ಟವಾದ್ದೇ ಆಗಿರಲಿ ಅಥವ ನೀಚವಾದ್ದೇ ಆಗಿರಲಿ, ದೂರದ್ದೇ ಆಗಿರಲಿ ಅಥವಾ ಹತ್ತಿರದ್ದೇ ಆಗಿರಲಿ , ಆ ಎಲ್ಲಾ ವೇದನೆಗಳನ್ನು ಇದು ನನ್ನದ್ದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಪ್ರಜ್ಞಾಪೂರ್ವಕವಾಗಿ, ಯಥಾಭೂತವಾಗಿ ಹೀಗೆ ಅರಿಯಬೇಕು.<br />
<br />
ಅದ್ದರಿಂದ ಭಿಕ್ಖುಗಳೇ ಯಾವುದೇ ಸಞ್ಞೆಯು ಅದು ಭೂತಕಾಲದ್ದೇ ಅಗಿರಲಿ, ಅಥವಾ ಭವಿಷ್ಯದ್ದೇ ಆಗಿರಲಿ ಅಥವಾ ವರ್ತಮಾನದ್ದೇ ಆಗಿರಲಿ ,ಆಂತರ್ಯದ್ದೇ ಆಗಿರಲಿ ಅಥವಾ ಬಾಹ್ಯದ್ದೇ ಆಗಿರಲಿ, ಸ್ಥೂಲವಾದ್ದೇ ಆಗಿರಲಿ ಅಥವಾ ಸೂಕ್ಷ್ಮವಾದ್ದೇ ಆಗಿರಲಿ, ಶ್ರೇಷ್ಟವಾದ್ದೇ ಆಗಿರಲಿ ಅಥವ ನೀಚವಾದ್ದೇ ಆಗಿರಲಿ, ದೂರದ್ದೇ ಆಗಿರಲಿ ಅಥವಾ ಹತ್ತಿರದ್ದೇ ಆಗಿರಲಿ , ಆ ಎಲ್ಲಾ ಸಞ್ಞೆಗಳನ್ನು ಇದು ನನ್ನದ್ದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಪ್ರಜ್ಞಾಪೂರ್ವಕವಾಗಿ, ಯಥಾಭೂತವಾಗಿ ಹೀಗೆ ಅರಿಯಬೇಕು.<br />
<br />
<span style="white-space: pre;"> </span>ಅದ್ದರಿಂದ ಭಿಕ್ಖುಗಳೇ ಯಾವುದೇ ಸಂಖಾರಗಳು ಅದು ಭೂತಕಾಲದ್ದೇ ಅಗಿರಲಿ, ಅಥವಾ ಭವಿಷ್ಯದ್ದೇ ಆಗಿರಲಿ ಅಥವಾ ವರ್ತಮಾನದ್ದೇ ಆಗಿರಲಿ ,ಆಂತರ್ಯದ್ದೇ ಆಗಿರಲಿ ಅಥವಾ ಬಾಹ್ಯದ್ದೇ ಆಗಿರಲಿ, ಸ್ಥೂಲವಾದ್ದೇ ಆಗಿರಲಿ ಅಥವಾ ಸೂಕ್ಷ್ಮವಾದ್ದೇ ಆಗಿರಲಿ, ಶ್ರೇಷ್ಟವಾದ್ದೇ ಆಗಿರಲಿ ಅಥವ ನೀಚವಾದ್ದೇ ಆಗಿರಲಿ, ದೂರದ್ದೇ ಆಗಿರಲಿ ಅಥವಾ ಹತ್ತಿರದ್ದೇ ಆಗಿರಲಿ , ಆ ಎಲ್ಲಾ ಸಂಖಾರಗಳನ್ನು ಇದು ನನ್ನದ್ದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಪ್ರಜ್ಞಾಪೂರ್ವಕವಾಗಿ, ಯಥಾಭೂತವಾಗಿ ಹೀಗೆ ಅರಿಯಬೇಕು.<br />
<br />
<span style="white-space: pre;"> </span>ಅದ್ದರಿಂದ ಭಿಕ್ಖುಗಳೇ ಯಾವುದೇ ವಿಞ್ಞನಗಳು ಗಳು ಅದು ಭೂತಕಾಲದ್ದೇ ಅಗಿರಲಿ, ಅಥವಾ ಭವಿಷ್ಯದ್ದೇ ಆಗಿರಲಿ ಅಥವಾ ವರ್ತಮಾನದ್ದೇ ಆಗಿರಲಿ ,ಆಂತರ್ಯದ್ದೇ ಆಗಿರಲಿ ಅಥವಾ ಬಾಹ್ಯದ್ದೇ ಆಗಿರಲಿ, ಸ್ಥೂಲವಾದ್ದೇ ಆಗಿರಲಿ ಅಥವಾ ಸೂಕ್ಷ್ಮವಾದ್ದೇ ಆಗಿರಲಿ, ಶ್ರೇಷ್ಟವಾದ್ದೇ ಆಗಿರಲಿ ಅಥವ ನೀಚವಾದ್ದೇ ಆಗಿರಲಿ, ದೂರದ್ದೇ ಆಗಿರಲಿ ಅಥವಾ ಹತ್ತಿರದ್ದೇ ಆಗಿರಲಿ , ಆ ಎಲ್ಲಾ ವಿಞ್ಞನಗಳನ್ನು ಇದು ನನ್ನದ್ದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಪ್ರಜ್ಞಾಪೂರ್ವಕವಾಗಿ, ಯಥಾಭೂತವಾಗಿ ಹೀಗೆ ಅರಿಯಬೇಕು.<br />
<br />
<span style="white-space: pre;"> </span>ಓ ಭಿಕ್ಖುಗಳೇ, ಯಾವಾಗ ಸುಶಿಕ್ಷಿತ ಆರ್ಯ ಶ್ರಾವಕನು ಹೀಗೆ ಗಮನಿಸಿದಾಗ ಆತನು ದೇಹದಿಂದ ವಿಕಷರ್ಿತನಾಗುತ್ತಾನೆ , ವೇದನೆಗಳಿಂದ ವಿಕಷರ್ಿತನಾಗುತ್ತಾನೆ, ಸಞ್ಞಗಳಿಂದ ವಿಕಷರ್ಿತನಾಗುತ್ತಾನೆ , ಸಂಖಾರಗಳಿಂದ ವಿಕಷರ್ಿತನಾಗುತ್ತಾನೆ , ವಿಞ್ಞನಗಳಿಂದ ವಿಕಷರ್ಿತನಾಗುತ್ತಾನೆ ,ವಿಕಷರ್ಿತನಾದ್ದರಿಂದಾಗಿ ವಿರಾಗ ಹೊಂದುತ್ತಾನೆ, ವಿರಾಗ ಹೊಂದಿದ್ದರಿಂದಾಗಿ ವಿಮುಕ್ತನಾಗುತ್ತಾನೆ, ಅದರಿಂದಾಗಿ ವಿಮುಕ್ತಜ್ಞಾನ ಪಡೆಯುತ್ತಾನೆ ಜನ್ಮವೂ ನಾಶವಾಯಿತು, ಬ್ರಹ್ಮಚರ್ಯೆಯ ಜೀವನ ಪೂರ್ಣವಾಯಿತು, ಯಾವುದೆಲ್ಲವನ್ನು ಮಾಡಬೇಕಾಗಿತ್ತೊ ಅವೆಲ್ಲವನ್ನು ಮಾಡಿಯಾಗಿದೆ, ಇನ್ನು ನನಗೆ ಭವವಿಲ್ಲ ಎಂದು ಅರಿಯುತ್ತಾನೆ.<br />
<br />
<span style="white-space: pre;"> </span>ಭಗವಾನರು ಹೀಗೆ ಬೋಧಿಸಿದಾಗ ಪಂಚವಗರ್ೀಯ ಭಿಕ್ಷುಗಳು ಆನಂದಿತರಾದರು ಹಾಗೂ ಅವರ ಚಿತ್ತಗಳು ಅಸವಗಳಿಂದ ಮುಕ್ತವಾದವು, ಅವರು ಎಲ್ಲಾಬಗೆಯ ಅಂಟುವಿಕೆಯಿಂದ ಮುಕ್ತರಾದರು.</div>
Aneesh Bodhhttp://www.blogger.com/profile/02041276688261983503noreply@blogger.com0tag:blogger.com,1999:blog-8742652691355814794.post-59275094791198362332018-07-26T04:22:00.003-07:002018-07-26T05:12:08.461-07:00DHAMMACAKKAPAVATTANA SUTTA in kannada ದಮ್ಮಚಕ್ಕಪವತ್ತನ ಸುತ್ತ<div dir="ltr" style="text-align: left;" trbidi="on">
<h2 style="text-align: left;">
<span style="color: red;"> ದಮ್ಮಚಕ್ಕಪವತ್ತನ ಸುತ್ತ</span></h2>
<div class="separator" style="clear: both; text-align: center;">
<a href="https://1.bp.blogspot.com/-7STIiAvUKGg/W1mu9ZnBDdI/AAAAAAAADdk/wPF-WAe45jocvYwAP1VRbCltIOwVL600ACLcBGAs/s1600/p31.jpg" imageanchor="1" style="margin-left: 1em; margin-right: 1em;"><img border="0" data-original-height="501" data-original-width="703" height="228" src="https://1.bp.blogspot.com/-7STIiAvUKGg/W1mu9ZnBDdI/AAAAAAAADdk/wPF-WAe45jocvYwAP1VRbCltIOwVL600ACLcBGAs/s320/p31.jpg" width="320" /></a></div>
<div>
<span style="color: red;"><br /></span></div>
<br />
<br />
ನಾನು ಹೀಗೆ ಕೇಳಿದ್ದೇನೆ :<br />
ಒಮ್ಮೆ ಭಗವಾನರು ವಾರಾಣಸಿಯ ಇಸಿಪಟ್ಟಣದ ಮಿಗದಾಯದಲ್ಲಿ ವಿಹರಿಸುತ್ತಿದ್ದರು, ಆಗ ಭಗವಾನರು ಪಂಚವಗರ್ೀಯ ಭಿಕ್ಖುಗಳಿಗೆ ಹೀಗೆ ಸಂಭೋದಿಸಿದರು :<br />
<br />
ಎರಡು ಅತಿರೇಕಗಳಿವೆ ಭಿಕ್ಖುಗಳೇ, ಅದನ್ನು ಪಬ್ಬಜಿತನಾದವನು ಸೇವಿಸಬಾರದು, ಯಾವುದವು ಎರಡು ?<br />
<br />
ಅವೆಂದರೆ ಕಾಮಸುಖಗಳಲ್ಲಿ ತಲ್ಲಿನನಾಗುವಿಕೆ, ಇವು ಹೀನವಾದುದು, ಅಸಭ್ಯವಾದುದು(ಗಮ್ಮೋ), ಪ್ರಾಪಂಚಿಕವಾದುದು(ಪೊಥುಜ್ಜನಿಕೊ), ಉದಾತ್ತವಲ್ಲದ್ದು(ಅನರಿಯೊ), ಮತ್ತು ಅನರ್ಥಕಾರಿಯಾದುದು.<br />
<br />
<br />
ಇನ್ನೊಂದು ಅತಿರೇಕವೆಂದರೆ ಸ್ವಯಂವನ್ನು(ದೇಹ) ದಂಡಿಸುವಿಕೆ, ಇವು ದುಃಖಕಾರಿ, ಉದಾತ್ತವಲ್ಲದ್ದು, ಮತ್ತು ಅನರ್ಥಕಾರಿಯಾದುದು.<br />
<br />
ಈ ಉಭಯವನ್ನು ವಜರ್ಿಸಿರುವ ತಥಾಗತರು ಮಧ್ಯಮ ಮಾರ್ಗವನ್ನು ಅನ್ವೇಷಿಸಿದ್ದಾರೆ. ಇದು ಚಕ್ಷುಕಾರಕವು, ಜ್ಞಾನಕಾರಕ, ಉಪಶಾಂತತೆ ನೀಡುವಂತಹದ್ದು, ಅಭಿಞ್ಞಕಾರಕ, ಸಂಬೋಧಿದಾಯಕ ಹಾಗೂ ನಿಬ್ಬಾಣದೆಡೆಗೆ ಒಯ್ಯುವಂತಹುದು.<br />
<br />
ಯಾವುದು ಭಿಕ್ಖುಗಳೇ ತಥಾಗತರು ಅನ್ವೇಷಿಸಿರುವ. ಮಧ್ಯಮ ಮಾರ್ಗವು. ಚಕ್ಷುಕಾರಕವು, ಜ್ಞಾನಕಾರಕವು, ಉಪಶಾಂತತೆ ನೀಡುವಂತಹದ್ದು, ಅಭಿಞ್ಞಕಾರಕ, ಸಂಬೋಧಿದಾಯಕ ಹಾಗೂ ನಿಬ್ಬಾಣದೆಡೆಗೆ ಒಯ್ಯುವಂತಹುದು..<br />
ಅದೇ <b>ಆರ್ಯ ಆಷ್ಟಾಂಗಿಕ ಮಾರ್ಗ </b>ಅಂದರೆ<br />
ಸಮ್ಮಾದೃಷ್ಟಿಕೋನ,<br />
ಸಮ್ಮಾಸಂಕಲ್ಪ,<br />
ಸಮ್ಮಾ ವಾಚ,<br />
ಸಮ್ಮಾ ಕಮ್ಮ,<br />
ಸಮ್ಮಾ ಜೀವನೋಪಾಯ,<br />
ಸಮ್ಮಾ ಸ್ಮೃತಿ ಮತ್ತು<br />
ಸಮ್ಮಾ ಸಮಾಧಿ.<br />
<br />
<b>ಇದು ಚಕ್ಷುಕಾರಕವು, ಜ್ಞಾನಕಾರಕ, ಉಪಶಾಂತತೆ ನೀಡುವಂತಹದ್ದು, ಅಭಿಞ್ಞಕಾರಕ, ಸಂಬೋಧಿದಾಯಕ ಹಾಗೂ ನಿಬ್ಬಾಣದೆಡೆಗೆ ಒಯ್ಯುವಂತಹುದು</b>.<br />
<b> ಇದೇ ಭಿಕ್ಖುಗಳೇ ದುಃಖ ಆರ್ಯಸತ್ಯ</b>, ಹೇಗೆಂದರೆ ಜನ್ಮವು ದುಃಖಕರ, ಜರಾ(ಮುಪ್ಪು) ದುಃಖಕರ, ವ್ಯಾದಿ ದುಃಖಕರ, ಮರಣ ದುಃಖಕರ, ಅಪ್ರೀಯವಾದುದರ ಸಮಾಗಮ ದುಃಖ, ಪ್ರಿಯವಾದುದರ ವಿಯೋಗ ದುಃಖಕರ, ಇಚ್ಚಿಸುವಂತಹುದು ಅಲಭ್ಯವಾದರೆ ದುಃಖ, ಸಂಕ್ಷೀಪ್ತವಾಗಿ ಹೇಳುವುದಾದರೆ ಐದು ಖಂದಗಳಲ್ಲಿ(ದೇಹ ಮತ್ತು ಮನಸ್ಸುಗೆ) ಅಂಟಿರುವಿಕೆಯೇ ದುಃಖಕರ.<br />
<br />
<b> ಈಗ ಓ ಭಿಕ್ಖುಗಳೇ ಇದೇ ದುಃಖ ಸಮುದಯ(ಉದಯ ಯಾವುದರಿಂದಾಗಿ ಆಗುವುದು ಎಂಬುದರ) ಆರ್ಯ ಸತ್ಯವಾಗಿದೆ</b>. ಇಲ್ಲಿ ತಣ್ಹಾದಿಂದಲೇ ಪುನರ್ಭವಿಸುತ್ತಾನೆ ತಣ್ಹಾವು 3 ವಿಧದ್ದಾಗಿದೆ ಕಾಮತಣ್ಹಾ(ಇಂದ್ರೀಯ ಬೋಗ), ಭವತಣ್ಹಾ(ಶಾಶ್ವತವಾಗಿ ಅಥವಾ ಇರಬೇಕೆಂಬ ತೀವ್ರಬಯಕೆ) ಮತ್ತು ವಿಭವ ತಣ್ಹಾ(ಇರಬಾರದು ಎಂಬ ತೀವ್ರಬಯಕೆ).<br />
<b><br /></b>
<b>ಈಗ ಓ ಭಿಕ್ಖುಗಳೇ ಇದೇ ದುಃಖನಿರೋಧ ಆರ್ಯಸತ್ಯವಾಗಿದೆ</b>. ಅಂದರೆ ಈ ತಣ್ಹಾದಿಂದ ನಿಶ್ಶ್ಯೇಷವಾಗಿ ರಹಿತನಾಗುವಿಕೆ, ವಿರಾಗಹೊಂದುವಿಕೆ, ನಿರೋಧಹೊಂದುವಿಕೆ, ತ್ಯಾಗಮಾಡಿವಿಕೆ, ಬಿಟ್ಟುಬಿಡುವಿಕೆ, ಮುಕ್ತಿ ಹೊಂದುವಿಕೆ ಮತ್ತು ಪೂರ್ಣವಾಗಿ ಅಂಟದೆ ಹೋಗುವಿಕೆ.<br />
<br />
<b> ಈಗ ಓ ಭಿಕ್ಖುಗಳೇ ಇದೇ ದುಃಖನಿರೋಧಕ್ಕೇ ಕೊಂಡುಯ್ಯುವಂತಹ ಮಾರ್ಗದ ಆರ್ಯಸತ್ಯವಾಗಿದೆ</b>. ಅದೇ ಅದೇ ಆರ್ಯ ಆಷ್ಟಾಂಗಿಕ ಮಾರ್ಗ ಅಂದರೆ ಸಮ್ಮಾದೃಷ್ಟಿಕೋನ, ಸಮ್ಮಾಸಂಕಲ್ಪ, ಸಮ್ಮಾ ವಾಚ, ಸಮ್ಮಾ ಕಮ್ಮ, ಸಮ್ಮಾ ಜೀವನೋಪಾಯ, ಸಮ್ಮಾ ಸ್ಮೃತಿ ಮತ್ತು ಸಮ್ಮಾ ಸಮಾಧಿ.<br />
<br />
<b>ಇದೇ ದುಃಖದ ಆರಿಯ ಸತ್ಯವಾಗಿದೆ</b>. ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.<br />
<b><br /></b>
<b> ಈ ದುಃಖ ಆರಿಯ ಸತ್ಯವನ್ನು ಪೂರ್ಣವಾಗಿ ಅರಿಯಲೇಬೇಕು(ಪರಿನೆಯ್ಯ</b>) ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.<br />
<br />
<b>ಈ ದುಃಖ ಆರಿಯ ಸತ್ಯವನ್ನು ಅರಿಯಲಾಗಿದೆ</b> ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.<br />
<br />
<b> ಇದು ದುಃಖಸಮುದಯದ ((ಉದಯ ಯಾವುದರಿಂದಾಗಿ ಆಗುವುದು ಎಂಬುದರ) ಆರಿಯ ಸತ್ಯವಾಗಿದೆ</b>. ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.<br />
<br />
<b><br /></b>
<b> ಈ ದುಃಖದ ಕಾರಣಗಳ(ಉದಯಗಳ) ಸಮೂಹವನ್ನು ನಿಮರ್ೂಲನೆ(ಪಹತಬ್ಬ) ಮಾಡಲೇಬೇಕು</b>. ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.<br />
<br />
<br />
<b>ಈ ದುಃಖದ ಕಾರಣಗಳ(ಉದಯಗಳ) ಸಮೂಹವನ್ನು ನಿಮರ್ೂಲನೆ(ಪಹತಬ್ಬ) ಮಾಡಿಯಾಗಿದೆ</b>. ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.<br />
<br />
<b> ಇದೇ ದುಃಖನಿರೋಧ ಆರಿಯ ಸತ್ಯ</b> ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.<br />
<b><br /></b>
<b>ಈ ದುಃಖನಿರೋಧ ಆರಿಯ ಸತ್ಯವನ್ನು ಸಾಕ್ಷಾತ್ಕಾರಿಸಲೇಬೇಕು</b> ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.<br />
<b><br /></b>
<b>ಈ ದುಃಖನಿರೋಧ ಆರಿಯ ಸತ್ಯವನ್ನು ಸಾಕ್ಷಾತ್ಕಾರಿಸಲಾಗಿದೆ</b> ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.<br />
<br />
<b><br /></b>
<b> ಇದೇ ದುಃಖನಿರೋಧದೆಡೆಗೆ ಕೊಂಡುಯ್ಯುವ ಮಾರ್ಗದ ಆರಿಯ ಸತ್ಯವಾಗಿದೆ</b>. ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.<br />
<b><br /></b>
<b> ಈ ದುಃಖನಿರೋಧದೆಡೆಗೆ ಕೊಂಡುಯ್ಯುವ ಮಾರ್ಗವನ್ನು ಅಭಿವೃದ್ಧಿಗೊಳಿಸಲೇಬೇಕು</b>. . ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.<br />
<br />
<b> ಈ ದುಃಖನಿರೋಧದೆಡೆಗೆ ಕೊಂಡುಯ್ಯುವ ಮಾರ್ಗವನ್ನು ಅಭಿವೃದ್ಧಿಗೊಳಿಸಲಾಗಿದೆ </b> . ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.<br />
<br />
ಭಿಕ್ಖುಗಳೇ ಎಲ್ಲಿಯವರೆಗೆ ಈ ಆರಿಯಸತ್ಯಗಳ ಪರಿಪೂರ್ಣವಾದ ಸಮಗ್ರವಾದ ಜ್ಞಾನವು ಈ ಬಗೆಯ 3 ಅಂಶಗಳಲ್ಲಿ, ಮತ್ತು 12 ವಿಧಾನಗಳಲ್ಲಿ ನನಗೆ ಪರಿಪೂರ್ಣವಾಗಿ ಸ್ಪಷ್ಟವಾಗಲಿಲ್ಲವೋ, ಅಲ್ಲಿಯವರೆಗೆ ನಾನು ದೇವತೆಗಳ ಸಹಿತವಾದ, ಮಾರರ, ಬ್ರಹ್ಮರ, ಸಮಣರ, ಬ್ರ್ರಾಹ್ಮಣರ, ದೇವತೆಗಳ, ಮತ್ತು ಮಾನವರಸಹಿತ ಈ ಲೋಕಗಳಲ್ಲಿ ಅನುತ್ತರವಾದ ಸಂಯಕ್ ಸಂಬೋದಿಯನ್ನು ಪಡೆದಿದ್ದೇನೆ ಎಂದು ಒಪ್ಪಿಕೊಳ್ಳಲ್ಲಿಲ್ಲ.<br />
<br />
ಅದರೆ ಭಿಕ್ಖುಗಳೇ ಯಾವಾಗ ಈ ಆರಿಯಸತ್ಯಗಳ ಪರಿಪೂರ್ಣವಾದ ಸಮಗ್ರವಾದ ಜ್ಞಾನವು ಈ ಬಗೆಯ 3 ಅಂಶಗಳಲ್ಲಿ, ಮತ್ತು 12 ವಿಧಾನಗಳಲ್ಲಿ ನನಗೆ ಪರಿಪೂರ್ಣವಾಗಿ ಸ್ಪಷ್ಟವಾಗಿಹೋಯಿತೋ, ಆಗ ನಾನು ದೇವತೆಗಳ ಸಹಿತವಾದ, ಮಾರರ, ಬ್ರಹ್ಮರ, ಸಮಣರ, ಬ್ರ್ರಾಹ್ಮಣರ, ದೇವತೆಗಳ, ಮತ್ತು ಮಾನವರಸಹಿತ ಈ ಲೋಕಗಳಲ್ಲಿ ಅನುತ್ತರವಾದ ಸಂಯಕ್ ಸಂಬೋದಿಯನ್ನು ಪಡೆದಿದ್ದೇನೆ ಎಂದು ಒಪ್ಪಿಕೊಂಡೆನು.<br />
<br />
ಮತ್ತು ಆಗ ನನ್ನಲ್ಲಿ ಈ ಬಗೆಯ ಜ್ಞಾನವೂ ಹಾಗೂ ದರ್ಶನವೂ ಉದಯಿಸಿತು ಅದೇನೆಂದರೆ ;<b> (ನನ್ನ) ಚೇತೋವಿಮುಕ್ತಿಯು ಅಚಲವಾದುದು, ಇದೇ (ನನ್ನ) ಕಟ್ಟಕಡೆಯ ಜನ್ಮ, ಮತ್ತೆ ಪುನರ್ಭವವಿಲ್ಲ.(ಅಸ್ತಿತ್ವವಿಲ್ಲ).</b><br />
<br />
<br />
ಹೀಗೆ ಭಗವಾನರು ಸುತ್ತವನ್ನು ಪ್ರವಚಿಸಿದಾಗ ಭಿಕ್ಖುಗಳು ಆನಂದಿತರಾದರು ಹಾಗು ಅಭಿನಂದನೆ ಮಾಡಿದರು. ಯಾವಾಗ ಹೀಗೆ ಸುತ್ತವನ್ನು ಪ್ರವಚಿಸುವಾಗ ಪೂಜ್ಯ ಕೊಂಡನ್ಯರವರಿಗೆ ಹೀಗೆ ವಿರಜವಾದ, ವಿಮಲವಾದ ಧಮ್ಮಚಕ್ಷುವು ಉದಯವಾಯಿತು.: <b>ಯಾವುದೆಲ್ಲಾ ಉದಯ ಧಮ್ಮವನ್ನು ಹೊಂದಿವೆಯೋ ಅವೆಲ್ಲವೂ ನಿರೋಧಧಮ್ಮವನ್ನು ಹೊಂದುತ್ತವೆ.</b><br />
<br />
ಯಾವಾಗ ಬುದ್ಧಭಗವಾನರು ಈ ಧಮ್ಮಚಕ್ಕ ಸುತ್ತವನ್ನು ಪ್ರವಚಿಸಿದರೋ ಆಗ ಭೂಮಿಯಲ್ಲಿನ ದೇವದೇವತೆಗಳೂ ಹೀಗೇ ಹಷರ್ೋಧ್ಗಾರಗಳನ್ನು ಮಾಡಿದವು : <b>ಭಗವಾನರು ವಾರಾಣಸಿಯ ಋಷಿಪಟ್ಟಣದಲ್ಲಿ ಮೃಗದಾಯದ ಬಳಿ ಅನುತ್ತರವಾದ ಧಮ್ಮಚಕ್ರವನ್ನು ಪ್ರವತರ್ಿಸಿದ್ದಾರೆ. ಈ ಬಗೆಯ ಧಮ್ಮಚಕ್ರದ ಚಾಲನೆಯನ್ನು ಈವರೆವಿಗೆ ಈ ಲೋಕಗಳ ಯಾವುದೇ ಸಮಣ ಬ್ರಾಹ್ಮಣರಾಗಲಿ, ದೇವಗಳಾಗಲಿ, ಮಾರರಾಗಲಿ, ಬ್ರಹ್ಮರಾಗಲಿ ಪ್ರವರ್ತನೆ ಮಾಡಿಲ್ಲ ಈ ದಮ್ಮಚಕ್ಕಪವತ್ತನವನ್ನು ಯಾರು ನಿಲ್ಲಿಸಲು ಸಾಧ್ಯವಿಲ್ಲ ಹಾಗೂ ಯಾರಿಂದಲೂ ಹಿಂದಕ್ಕೆ ತಿರುಗಿಸಲು ಸಾಧ್ಯವಿಲ್ಲ .</b>. ಈ ಬಗೆಯ ಭೂಮಿಯ ದೇವದೇವತೆಗಳ ಶಬ್ದಗಳನ್ನು ಆಲಿಸಿದಂತಹ ಚಾತುಮಹಾರಾಜಿಕಾ ದೇವತೆಗಳುಹೀಗೆಯೇ ಪುನರುಚ್ಚಿಸಿದವು. . . . . . . . . .ಅವನ್ನು ಕಂಡು . . . .ತಾವತಿಂಸ . .. . . . . .ಯಾಮ. . . . . . ತುಸಿತಾ. . .. . . .ನಿಮ್ಮಾನರತಿ. . .. . . . . .ಪರನಿಮ್ಮಾನರತಿ ದೇವಗಳು ಪುನರುಚ್ಚಿಸಿದವು.. .. . . .. .. .ಅವರ ಧ್ವನಿ ಆಲಿಸಿದಂತಹ ಬ್ರಹ್ಮಕಾಯಿಕ ದೇವತೆಗಳಾದ ಬ್ರಹ್ಮ ಪರಿಸಜ್ಜ, . . . ಬ್ರಹ್ಮ ಪುರೋಹಿತ .. . .ಮಹಾಬ್ರಹ್ಮ . . . .ಪರಿತ್ತಭ. .. . . .ಅಪ್ಪಮಾನಾಭ. .. . .ಸುಭಕಿನ್ನ,, . . ..ವೆಹಪ್ಫಲ. . .ಅವಿಹ. . .. ಅತಪ್ಪ. . . ಸುದಸ್ಸ . . . .ಮತ್ತು ಅಕನಿತ್ಥ ಅವರೂ ಸಹಾ ಹೀಗೆಯೇ ಹಷರ್ೋಧ್ಗಾರಗಳನ್ನು ಮಾಡಿದವು<br />
ಹೀಗೇ ಆ ಕ್ಷಣದಲ್ಲಿ ಆ ಸಮಯದಲ್ಲಿ ಈ ಬಗೆಯ ಹಷರ್ೋಧ್ಗಾರಗಳೂ ಬ್ರಹ್ಮಲೋಕಗಳವರೆವಿಗೂ ಹಬ್ಬಿತು. ಆಗ ಹತ್ತುಸಹಸ್ರ ಲೋಕಧಾತುಗಳು ಕಂಪಿಸಿದವು, ನಡುಗಿದವು, ಭೀಕರವಾಗಿ ಅಲುಗಾಡಿದವು.<br />
ಆಗ ದೇವದೇವತೆಗಳ ಮೀರಿಸಿದ ತೇಜಸ್ಸುಗಳ ಮಹಾ ಬೆಳಗಿನಿಂದಾಗಿ ಲೋಕವೆಲ್ಲಾ ಪ್ರಕಾಶಮಾನವಾಯಿತು. ಆಗ ಭಗವಾನರು ಹೀಗೆ ನುಡಿದರು. : ಅರಿತಿದ್ದಾನೆ ಕೋಂಡನ್ಯ, ನಿಜವಾಗಿಯು ಆಯುಷ್ಮಂತ ಕೋಂಡನ್ಯ ಜ್ಞಾನವನ್ನು ಪಡೆದಿದ್ದಾನೆ .ಅಥರ್ೈಸಿಕೊಂಡಿದ್ದಾನೆ.<br />
<br />
ಅಂದಿನಿಂದ ಪೂಜ್ಯಕೊಂಡನ್ಯನವರಿಗೆ ಅಞ್ಞಸಿ(ಅರಿತಿರುವ) ಕೊಂಡನ್ಯ ಎಂದು ಕರೆಯಲಾರಂಬಿಸಿದರು.<br />
<br />
_____________________________ಸಮಾಪ್ತಿ_______________________________________</div>
Aneesh Bodhhttp://www.blogger.com/profile/02041276688261983503noreply@blogger.com0tag:blogger.com,1999:blog-8742652691355814794.post-56117494601582521122018-07-14T02:51:00.000-07:002018-07-14T02:51:49.707-07:00ಅಹುನೇಯ್ಯ ಸುತ್ತ ahuneyya sutta<div dir="ltr" style="text-align: left;" trbidi="on">
<h2 style="text-align: left;">
<span style="color: red;">ಅಹುನೇಯ್ಯ ಸುತ್ತ </span></h2>
<div class="separator" style="clear: both; text-align: center;">
<a href="https://2.bp.blogspot.com/-pTmv174Bg30/W0nHrS7diQI/AAAAAAAADc8/Br9ZxyI09mcsRigAGiylAiIofoF9EtLoACLcBGAs/s1600/FB_IMG_1505006914567.jpg" imageanchor="1" style="margin-left: 1em; margin-right: 1em;"><img border="0" data-original-height="960" data-original-width="703" height="320" src="https://2.bp.blogspot.com/-pTmv174Bg30/W0nHrS7diQI/AAAAAAAADc8/Br9ZxyI09mcsRigAGiylAiIofoF9EtLoACLcBGAs/s320/FB_IMG_1505006914567.jpg" width="234" /></a></div>
<div>
<span style="color: red;"><br /></span></div>
<br />
ಭಿಕ್ಖುಗಳೇ,<br />
ಈ 10 ಬಗೆಯ ವ್ಯಕ್ತಿಗಳು ದಾನಗಳಿಗೆ, ಆತಿಥ್ಯಗಳಿಗೆ, ಅರ್ಪಣೆಗಳಿಗೆ, ಗೌರವಾರ್ಹ ವಂದನೆಗಳಿಗೆ, ಲೋಕದಲ್ಲಿ ಪುಣ್ಯಗಳಿಗೆ ಮಿರಿಸಲಾಗದ ಕ್ಷೇತ್ರವಾಗಿದ್ದಾರೆ.<br />
<br />
ಯಾರವರು 10 ಜನರು ?<br />
ಅವರೆಂದರೇ<br />
<br />
1.ತಥಾಗತರು ಅರಹಂತರು ಆಗಿರುವಂತಹ ಸಮ್ಮಸಂಬುಧ್ಧರು<br />
2.ಪಚ್ಚೇಕ ಬುಧ್ಧರು.<br />
3.ಸಮಥ ಹಾಗೂ ವಿಪಸ್ಸನ ಎರಡರಿಂದಲೂ ವಿಮುಕ್ತರಾಗಿರುವವರು.<br />
4.ಪ್ರಜ್ಞೆಯಿಂದ(ವಿಪಸ್ಸನ) ವಿಮುಕ್ತರಾಗಿರುವವರು<br />
5.ಕಾಯವನ್ನು ಸಾಕ್ಷಿಯಾಗಿ ಗಮನಿಸುತ್ತ ಕಾಯಾಗತಾನುಸತಿಯಿಂದ ವಿಮುಕ್ತರಾಗಿರುವವರು.<br />
6.ದರ್ಶನದಿಂದ(ದೃಷ್ಟಿಗಳಿಂದ) ವಿಮುಕ್ತರಾಗಿರುವವರು<br />
7.ಶ್ರಧ್ಧೆಯಿಂದ ವಿಮುಕ್ತರಾಗಿರುವವರು(ಸೋತಪನ್ನ)<br />
8.ಧಮ್ಮಾನುಯಾಯಿ(ಸುಶೀಲರು/ಧರ್ಮದ ಆಚರಣೆಯ ಲ್ಲಿರುವವನು)<br />
9.ತಿರತನದಲ್ಲಿ ಆಪಾರ ಅಚಲ ನಂಬಿಕೆ ಇರುವವವನು(.ಶ್ರಧ್ಹಾನುಸಾರಿ )<br />
10.ಭಿಕ್ಖು (ಗೋತ್ರ್ರಭೂ ಆಗೀರುವವರು ಅಂದ್ರೆ ಇಂದ್ರಿಯ ಲೋಕದಿಂದ ಸಮಾದಿ ಸ್ಥಿತಿ ಅಥವಾ ಅರಿಯ ಸ್ಥಿತಿ ಹೊಂದಿದವರು ) <br />
<br />
ಈ 10 ಜನರು ದಾನಗಳಿಗೆ, ಆತಿಥ್ಯಗಳಿಗೆ, ಅರ್ಪಣೆಗಳಿಗೆ, ಗೌರವಾರ್ಹ ವಂದನೆಗಳಿಗೆ, ಲೋಕದಲ್ಲಿ ಪುಣ್ಯಗಳಿಗೆ ಮಿರಿಸಲಾಗದ ಕ್ಷೇತ್ರವಾಗಿದ್ದಾರೆ</div>
Aneesh Bodhhttp://www.blogger.com/profile/02041276688261983503noreply@blogger.com0tag:blogger.com,1999:blog-8742652691355814794.post-11757055343711593342018-06-14T04:00:00.001-07:002018-06-14T04:00:39.615-07:00 Eight-fold path of Lord Buddha ಬುದ್ಧಭಗವಾನರ ಆರ್ಯ ಆಷ್ಟಾಂಗ ಮಾರ್ಗ (ಮಗ್ಗ ವಿಭಂಗ ಸುತ್ತ)<div dir="ltr" style="text-align: left;" trbidi="on">
<h2 style="text-align: left;">
<b><span style="color: red;"> ಬುದ್ಧಭಗವಾನರ ಆರ್ಯ ಆಷ್ಟಾಂಗ ಮಾರ್ಗ </span></b></h2>
<h2 style="text-align: left;">
<span style="color: red;"> (ಮಗ್ಗ ವಿಭಂಗ ಸುತ್ತ)<div class="separator" style="clear: both; text-align: center;">
<a href="https://1.bp.blogspot.com/-pqSlCgwbCmI/WyJKXrC7k8I/AAAAAAAADbw/B_KhCd-e4KIVyoX8PWGtj5x1P3gBPNrMACLcBGAs/s1600/FB_IMG_1512836091722.jpg" imageanchor="1" style="margin-left: 1em; margin-right: 1em;"><img border="0" data-original-height="1600" data-original-width="1071" height="320" src="https://1.bp.blogspot.com/-pqSlCgwbCmI/WyJKXrC7k8I/AAAAAAAADbw/B_KhCd-e4KIVyoX8PWGtj5x1P3gBPNrMACLcBGAs/s320/FB_IMG_1512836091722.jpg" width="214" /></a></div>
</span></h2>
<div>
<span style="color: red;"><span id="goog_381268676"></span><span id="goog_381268677"></span><br /></span></div>
ಒಮ್ಮೆ ಭಗವಾನರು ಶ್ರಾವಸ್ತಿಯ ಜೇತವನದ ಅನಾಥಪಿಂಡಿಕನ ಆರಾಮದಲ್ಲಿ ನೆಲಸಿದ್ದರು. ಆಗ ಅವರು ಭಿಕ್ಷುಗಳೊಂದಿಗೆ ಹೀಗೆ ಸಂಬೋಧಿಸಿದರು, ಭಿಕ್ಷುಗಳೇ<br />
ಭಗವಾನ್ ಎಂದು ಪ್ರತಿ ಉತ್ತರಿಸಿದರು.<br />
ಆಗ ಭಗವಾನರು ಹೀಗೆ ನುಡಿದರು, ನಾನು ನಿಮಗಾಗಿ ಆರ್ಯಆಷ್ಟಾಂಗ ಮಾರ್ಗವನ್ನು ಬೋದಿಸುತ್ತಿದ್ದೇನೆ ಹಾಗೂ ವಿಶ್ಲೇಷಿಸುತ್ತಿದ್ದೇನೆ, ಗಮನವಿಟ್ಟು ಆಲಿಸಿರಿ.<br />
ಹಾಗೆ ಆಗಲಿ ಭಂತೆ.<br />
ಆಗ ಭಗವಾನರು ಹೀಗೆ ಮುಂದುವರೆಸಿದರು, ಈಗ ಭಿಕ್ಖಗಳೇ ಯಾವುದು ಆರ್ಯಆಷ್ಟಾಂಗ ಮಾರ್ಗ ?<br />
ಅದೇಂದರೆ<br />
1<span style="white-space: pre;"> </span>ಸಮ್ಮ ದೃಷ್ಟಿಕೋನ,<br />
2<span style="white-space: pre;"> </span>ಸಮ್ಮಸಂಕಲ್ಪ,<br />
3<span style="white-space: pre;"> </span>ಸಮ್ಮ ವಾಚ,<br />
4<span style="white-space: pre;"> </span>ಸಮ್ಮ ಕಮ್ಮ,<br />
5<span style="white-space: pre;"> </span>ಸಮ್ಮ ಜೀವನೋಪಾಯ,<br />
6<span style="white-space: pre;"> </span>ಸಮ್ಮವ್ಯಾಯಮ,<br />
7<span style="white-space: pre;"> </span>ಸಮ್ಮಸ್ಮೃತಿ, ಮತ್ತು<br />
8<span style="white-space: pre;"> </span>ಸಮ್ಮಸಮಾಧಿ.<br />
<h3 style="text-align: left;">
ಸಮ್ಮ ದೃಷ್ಟಿಕೋನ</h3>
ಮತ್ತೆ ಭಿಕ್ಖುಗಳೇ ಯಾವುದು ಸಮ್ಮದೃಷ್ಟಿಕೋನ ?<br />
ಭಿಕ್ಖುಗಳೇ ದುಃಖಗಳ ಜ್ಞಾನ, ದುಃಖಗಳ ಉದಯದ ಬಗೆಗಿನ ಜ್ಞಾನ, ದುಃಖಗಳ ನಿರೋಧ ಜ್ಞಾನ, ಮತ್ತು ದುಃಖಗಳ ನಿರೋಧಕ್ಕೆ ತಲುಪಿಸುವ ಮಾರ್ಗದ ಜ್ಞಾನ. ಇವನ್ನೇ ಸಮ್ಮ ದೃಷ್ಟಿಕೋನ ಎನ್ನುತ್ತೇವೆ. .<br />
<br />
<h3 style="text-align: left;">
ಸಮ್ಮಸಂಕಲ್ಪ</h3>
ಮತ್ತೇ ಯಾವುದು ಭಿಕ್ಖುಗಳೇ ಸಮ್ಮ ಸಂಕಲ್ಪ ?<br />
ಭಿಕ್ಖುಗಳೇ ತ್ಯಾಗಗಳ ಸಂಕಲ್ಪ, ದ್ವೇಷರಹಿತತೆಯ ಸಂಕಲ್ಪ, ಮತ್ತು ಹಿಂಸೆರಹಿತತೆಯ ಸಂಕಲ್ಪ. ಇವನ್ನೇ ಸಮ್ಮ ಸಂಕಲ್ಪ ಎನ್ನುತ್ತೇವೆ.<br />
<br />
<h3 style="text-align: left;">
ಸಮ್ಮ ವಾಚ</h3>
<br />
ಮತ್ತೇ ಯಾವುದು ಭಿಕ್ಖುಗಳೇ ಸಮ್ಮ ವಾಚ ?<br />
ಭಿಕ್ಖುಗಳೇ ಸುಳ್ಳಿನಿಂದ ವಿರತನಾಗುವಿಕೆ, ಚಾಡಿಯಿಂದ ವಿರತನಾಗುವಿಕೆ, ಕಠೋರ ನಿಂದಾಮಯ ವಾಚಗಳಿಂದ ವಿರತನಾಗುವಿಕೆ ಮತ್ತು ವ್ಯರ್ಥಹರಟೆಗಳಿಂದ ವಿರತನಾಗುವಿಕೆ. ಇವನ್ನೇ ಸಮ್ಮವಾಚ ಎನ್ನುತ್ತೇವೆ.<br />
<br />
<h3 style="text-align: left;">
ಸಮ್ಮ ಕಮ್ಮ </h3>
ಮತ್ತೇ ಯಾವುದು ಭಿಕ್ಖುಗಳೇ ಸಮ್ಮ ಕಮ್ಮ ?<br />
ಭಿಕ್ಖುಗಳೇ ಪ್ರಾಣಹತ್ಯೆಗಳಿಂದ ವಿರತನಾಗುವಿಕೆ, ಕೊಡದೆ ಇರುವುದನ್ನು ತಗೆದುಕೊಳ್ಳದಿರುವಿಕೆ, ಅಬ್ರಹ್ಮಚಾರ್ಯದಿಂದ (ಗೃಹಸ್ಥರಾಗಿದ್ದರೆ ಅನೈತಿಕ ಕಾಮುಕತೆಯಿಂದ) ವಿರತನಾಗುವಿಕೆ. ಇವನ್ನೇ ಸಮ್ಮಕಮ್ಮ ಎನ್ನುತ್ತೇವೆ. <br />
<br />
<h3 style="text-align: left;">
ಸಮ್ಮ ಜೀವನೋಪಾಯ</h3>
<br />
<br />
ಮತ್ತೆ ಭಿಕ್ಖುಗಳೇ ಯಾವುದು ಸಮ್ಮ ಜೀವನೋಪಾಯ ?<br />
ಇಲ್ಲಿ ಭಿಕ್ಖುಗಳೇ ಆರ್ಯಶ್ರಾವಕನು ಅಪ್ರಮಾಣಿಕವಾದಂತಹ ಮಿಥ್ಯಜೀವನೋಪಾಯಗಳನ್ನು ತೋರೆಯಬೇಕು, ಸಮ್ಮ ಮಾರ್ಗಗಳಿಂದಲೇ ಜೀವನೋಪಾಯ ಮಾಡಿಕೋಳ್ಳಬೇಕು. ಇದನ್ನೇ ಭಿಕ್ಖುಗಳೇ ಸಮ್ಮಜೀವನೋಪಾಯ ಎನ್ನುವರು.<br />
( ಭಿಕ್ಖುಗಳೇ ಉಪಾಸಕನು 5 ವಿಧವಾದ ವೃತ್ತಿಗಳಲ್ಲಿ ತೋಡಗಬಾರದು, ಯಾವುದದು 5 ?<br />
ಅವೇಂದರೇ ಶಸ್ತ್ರಗಳ ವಾಣಿಜ್ಯ, ಜೀವಿಗಳ ವಾಣಿಜ್ಯ, ಮಾಂಸದ ವಾಣಿಜ್ಯ, ಮಧ್ಯಪಾನದ ವಾಣಿಜ್ಯ ಮತ್ತು ವಿಷಗಳ ವಾಣಿಜ್ಯ/ವ್ಯಾಪಾರ )<br />
<span style="white-space: pre;"> </span><br />
<h3 style="text-align: left;">
ಸಮ್ಮವ್ಯಾಯಮ</h3>
<br />
ಮತ್ತೇ ಭಿಕ್ಖುಗಳೇ ಯಾವುದು ಸಮ್ಮ ವ್ಯಾಯಾಮ ?<br />
1.<span style="white-space: pre;"> </span> ಇಲ್ಲಿ ಭಿಕ್ಖುಗಳೇ, ಭಿಕ್ಖುವು ಅನುತ್ಪನ್ನವಾದ ಪಾಪಯುತವಾದ, ಅಕುಶಲವಾದ ಯೋಚನೆಗಳನ್ನು(ಮಾನಸಿಕ ವಿಷಯ/ಧಮ್ಮ) ಉದಯಿಸದಂತೆ ಆತನು ಇಚ್ಚಶಕ್ತಿಯನ್ನು, ಪ್ರಯತ್ನವನ್ನು ಪಡುತ್ತಾನೆ,<br />
2.<span style="white-space: pre;"> </span> ಮತ್ತೇ ಇಲ್ಲಿ ಭಿಕ್ಖುವು ಉತ್ಪನ್ನವಾದ ಪಾಪಯುತವಾದ ಹಾಗೂ ಅಕುಶಲಯುತ ಯೋಚನೆಗಳನ್ನು ತೋರೆಯಲು ಇಚ್ಚಿಸುತ್ತಾನೆ ಹಾಗೂ ಅವನ್ನು ತೋರೆಯಲು ಪ್ರಯತ್ನವನ್ನು ಪಡುತ್ತಾನೆ.<br />
3.<span style="white-space: pre;"> </span> ಮತ್ತೇ ಇಲ್ಲಿ ಭಿಕ್ಖುವು ಅನುತ್ಪನ್ನವಾದ ಪುಣ್ಯಕಾರಿಯಾದ, ಕುಶಲವಾದ ಯೋಚನೆಗಳನ್ನು ಉದಯಿಸುವಂತೆ ಆತನು ಇಚ್ಚಶಕ್ತಿಯನ್ನು ಹಾಗೂ ಧೃಡವಾದ ಪ್ರಯತ್ನವನ್ನು ಪಡುತ್ತಾನೆ,<br />
4.<span style="white-space: pre;"> </span> ಮತ್ತೇ ಇಲ್ಲಿ ಭಿಕ್ಖುವು ಉತ್ಪನ್ನವಾದ ಪುಣ್ಯಕಾರಿಯಾದ, ಕುಶಲವಾದ ಯೋಚನೆಗಳನ್ನು ಉಳಿಯುವಂತೆ, ವಿಕಾಸವಾಗುವಂತೆ, ವ್ಯವಸ್ಥಿತವಾಗಿರುವಂತೆ, ಆತನು ಇಚ್ಚಶಕ್ತಿಯನ್ನು ಹಾಗೂ ಧೃಡವಾದ ಪ್ರಯತ್ನವನ್ನು ಪಡುತ್ತಾನೆ,<br />
ಇದನ್ನೇ ಭಿಕ್ಖುಗಳೇ ಸಮ್ಮವ್ಯಾಯಾಮ ಎನ್ನುವರು.<br />
<br />
<br />
<h3 style="text-align: left;">
ಸಮ್ಮಸ್ಮೃತಿ</h3>
ಮತ್ತೇ ಯಾವುದು ಭಿಕ್ಖುಗಳೇ ಸಮ್ಮ ಸ್ಮೃತಿಯು ?<br />
ಇಲ್ಲಿ ಭಿಕ್ಖುಗಳೇ, ಭಿಕ್ಖುವು ಕಾಯದಲ್ಲಿ ಕಾಯಾನುಪಸ್ಸಿಯಾಗಿ ವಿಹರಿಸುತ್ತಾನೆ ಹೇಗೆಂದರೆ, ಎಚ್ಚರಿಕೆಯಿಂದ, ಉತ್ಸಾಹದಿಂದ, ಜಾಗ್ರತಯಿಂದ, ಅರಿವಿನಿಂದ ಕೂಡಿದ್ದು ಲೋಕದ ಬಗೆಗಿನ ಲೋಭ ಹಾಗು ದೋಮನಸ್ಸುನ್ನು ದೂರಿಕರಿಸುತ್ತಾನೆ.<br />
<br />
ಇಲ್ಲಿ ಭಿಕ್ಖುಗಳೇ, ಭಿಕ್ಖುವು ಚಿತ್ತಗಳಲ್ಲಿ ಚಿತ್ತಾನುಪಸ್ಸಿಯಾಗಿ ಸಮಚಿತ್ತತೆಯಿಂದ ವಿಹರಿಸುತ್ತಾನೆ ಹೇಗೆಂದರೆ, ಎಚ್ಚರಿಕೆಯಿಂದ, ಉತ್ಸಾಹದಿಂದ, ಜಾಗ್ರತಯಿಂದ, ಅರಿವಿನಿಂದ ಕೂಡಿದ್ದು ಲೋಕದ ಬಗೆಗಿನ ಲೋಭ ಹಾಗು ದೋಮನಸ್ಸುನ್ನು ದೂರಿಕರಿಸುತ್ತಾನೆ.<br />
ಇಲ್ಲಿ ಭಿಕ್ಖುಗಳೇ, ಭಿಕ್ಖುವು ವೇದನೆಗಳಲ್ಲಿ ವೇದಾನುನುಪಸ್ಸಿಯಾಗಿ ಸಮಚಿತ್ತತೆಯಿಂದ ವಿಹರಿಸುತ್ತಾನೆ ಹೇಗೆಂದರೆ, ಎಚ್ಚರಿಕೆಯಿಂದ, ಉತ್ಸಾಹದಿಂದ, ಜಾಗ್ರತಯಿಂದ, ಅರಿವಿನಿಂದ ಕೂಡಿದ್ದು ಲೋಕದ ಬಗೆಗಿನ ಲೋಭ ಹಾಗು ದೋಮನಸ್ಸುನ್ನು ದೂರಿಕರಿಸುತ್ತಾನೆ.<br />
ಇಲ್ಲಿ ಭಿಕ್ಖುಗಳೇ, ಭಿಕ್ಖುವು ಧಮ್ಮಗಳಲ್ಲಿ(ಮಾನಸಿಕ ವಿಷಯಗಳಲ್ಲಿ) ಧಮ್ಮಾನುಪಸ್ಸಿಯಾಗಿ ಸಮಚಿತ್ತತೆಯಿಂದವಿಹರಿಸುತ್ತಾನೆ ಹೇಗೆಂದರೆ, ಎಚ್ಚರಿಕೆಯಿಂದ, ಉತ್ಸಾಹದಿಂದ, ಜಾಗ್ರತಯಿಂದ, ಅರಿವಿನಿಂದ ಕೂಡಿದ್ದು ಲೋಕದ ಬಗೆಗಿನ ಲೋಭ ಹಾಗು <br />
ದೋಮನಸ್ಸುನ್ನು ದೂರಿಕರಿಸುತ್ತಾನೆ. <br />
ಇದನ್ನೇ ಭಿಕ್ಖುಗಳೇ ಸಮ್ಮಸತಿ ಎನ್ನುವರು.<br />
<br />
<h3 style="text-align: left;">
ಸಮ್ಮಸಮಾದಿ</h3>
ಮತ್ತೇ ಯಾವುದು ಭಿಕ್ಖುಗಳೇ ಸಮ್ಮ ಸಮಾಧಿಯು?<br />
<b> ಪ್ರಥಮ ಸಮಾಧಿ</b><br />
ಇಲ್ಲಿ ಭಿಕ್ಖುಗಳೇ ಭಿಕ್ಖುವು ಎಲ್ಲಾ ಬಗೆಯ ಕಾಮಗಳಿಂದ(ಆಸೆ) ಹಾಗೂ ಅಕುಶಲ ಮಾನಸಿಕ ವಿಷಯಗಳಿಂದ ದೂರವಾಗಿ ಸುವಿತರ್ಕ ಹಾಗೂ ಸುವಿಚಾರಗಳನ್ನು ಹೊಂದಿರುವ ಮತ್ತು ಆದರಿಂದ ಉದಯಿಸುವ ಆನಂದ ಹಾಗೂ ಸುಖಯುತದ ಪ್ರಥಮ ಸಮಾಧಿ ಪ್ರವೇಶಿಸಿ ಅದರಲ್ಲಿ ನೆಲೆಸುತ್ತಾನೆ.<br />
<br />
<b> ದ್ವಿತೀಯ ಸಮಾಧಿ</b><br />
ನಂತರ ಇಲ್ಲಿ ಭಿಕ್ಖುಗಳೇ ಭಿಕ್ಖುವು ಸುವಿತರ್ಕ ಹಾಗೂ ಸುವಿಚಾರಗಳನ್ನು ದೂರಿಕರಿಸಿ ಆದರಿಂದ ಉದಯಿಸುವ ಆನಂದ ಹಾಗೂ ಸುಖಯುತದ ಅಂತರಿಕದ ಶ್ರದ್ಧಾಯುತ ಏಕೋಭಾವದ ದ್ವಿತೀಯ ಸಮಾಧಿ ಪ್ರವೇಶಿಸಿ ಅದರಲ್ಲಿ ನೆಲೆಸುತ್ತಾನೆ.<br />
<br />
<b> ತ್ರಿತೀಯ ಸಮಾಧಿ</b><br />
ನಂತರ ಇಲ್ಲಿ ಭಿಕ್ಖುಗಳೇ ಭಿಕ್ಖುವು ಆನಂದದಲ್ಲಿ ವಿರಾಗವನ್ನು ಹೊಂದಿ, ಆನಂದವನ್ನು ಮೀರಿಹೋಗಿ ದಾಟಿ, ಸದಾ ಉಪೇಕ್ಖಯುತ(ಸಮಚಿತ್ತತೆಯುತ), ಎಚ್ಚರಿಕೆಯಿಂದ, ಅರಿವಿನಿಂದ ಕೂಡಿದ ಆ ಸುಖಯುತದ ತ್ರಿತೀಯ ಸಮಾಧಿ ಪ್ರವೇಶೀಸಿ ಅದರಲ್ಲಿ ನೆಲೆಸುತ್ತಾನೆ. ಸುಖದಿಂದ ಇಡಿ ಕಾಯವು ದಿವ್ಯಾನುಭವವನ್ನು ಹೊಂದಿ ಅಂತಹ ವಿಶೇಷ ಧ್ಯಾನವನ್ನು ಆರ್ಯರು ಜಾಗರೂಕತೆ ಹಾಗೂ ಸಮಚಿತ್ತತೆಯುತ ಸುಖದ ಸ್ಥಿತಿಯಲ್ಲಿ ನೆಲೆಗೊಂಡವ ಎನ್ನುವರು.<br />
<br />
<b> ಚತುರ್ಥ ಸಮಾಧಿ</b><br />
ನಂತರ ಇಲ್ಲಿ ಭಿಕ್ಷುಗಳೇ ಭಿಕ್ಖುವು ಸುಖದ ಅನುಭವಗಳನ್ನು ಮೀರಿ, ದುಃಖದ ಅನುಭವಗಳನ್ನು ಮೀರಿ ಹಿಂದಿನ ಸೋಮನಸ್ಸು ಹಾಗೂ ದೋಮನಸ್ಸುಗಳನ್ನು ದಾಟಿ ಅದುಃಖಅಸುಖಯುತ ಸಮಚಿತ್ತತೆಯ ಸ್ಮೃತಿಯುತ ಪರಿಶುದ್ಧವಾದ ಚತುರ್ಥ ಝಾನದಲ್ಲಿ(ಧ್ಯಾನ) ಪ್ರವೇಶಿಸಿ ನೆಲೆಸುತ್ತಾನೆ.<br />
ಇದನ್ನೇ ಭಿಕ್ಖುಗಳೇ ಸಮ್ಮಸಮಾಧಿ ಎನ್ನುವರು.<br />
<br />
ಭಗವಾನರ ಈ ಸುತ್ತದಿಂದ ಭಿಕ್ಖುಗಳು ಆನಂದಿತರಾದರು.<br />
<br />
<br />
</div>
Aneesh Bodhhttp://www.blogger.com/profile/02041276688261983503noreply@blogger.com0tag:blogger.com,1999:blog-8742652691355814794.post-6806747397182036642015-10-17T04:41:00.001-07:002015-10-17T04:41:39.857-07:00parayana sutta of suttanipata in kannada ಪಾರಾಯಣ ಸುತ್ತ<div dir="ltr" style="text-align: left;" trbidi="on">
<div class="MsoNormal">
<b><span lang="KN" style="color: red; font-family: "Tunga",sans-serif; font-size: 48.0pt; line-height: 107%; mso-ansi-font-size: 72.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಪಾರಾಯಣ ಸುತ್ತ</span></b></div>
<div class="separator" style="clear: both; text-align: center;">
<b><a href="http://1.bp.blogspot.com/-zX6yHXZHe10/ViIz3A79sXI/AAAAAAAACH0/-LCdSJjzZug/s1600/p83.jpg" imageanchor="1" style="margin-left: 1em; margin-right: 1em;"><img border="0" height="229" src="http://1.bp.blogspot.com/-zX6yHXZHe10/ViIz3A79sXI/AAAAAAAACH0/-LCdSJjzZug/s320/p83.jpg" width="320" /></a></b></div>
<b><span style="color: red; font-size: 72.0pt; line-height: 107%; mso-bidi-font-size: 48.0pt;"><o:p></o:p></span></b><br />
<div class="MsoNormal">
<span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಭಗವಾನರು ಮಗಧದಲ್ಲಿ ಪಾಸಾಣ ಚೈತ್ಯದಲ್ಲಿ ವಿಹರಿಸುತ್ತಿರುವ ಸಮಯದಲ್ಲಿ
ಇದನ್ನು ಬೋಧಿಸಿದ್ದರು. ಬಾವರಿಯ ಹದಿನಾರು ಶಿಷ್ಯರಿಂದ ಕೇಳಲ್ಪಟ್ಟ ಪ್ರಶ್ನೆಗಳಿಗೆ
ಉತ್ತರಿಸಿದ್ದರು. ಯಾವುದೇ ಒಂದೇ ಒಂದು ಪ್ರಶ್ನೆಯ ಅರ್ಥ ಹಾಗು ಅದಕ್ಕೆ ಪ್ರತಿಯಾಗಿ ನೀಡಿದ
ಧಮ್ಮೋಪದೇಶದ ಉತ್ತರ ಅರಿತರೂ ಹಾಗು ಧಮ್ಮಾನುಧಮ್ಮವನ್ನು ಅರಿತು ಅದರಂತೆ ಜೀವಿಸಿದರೂ
ಖಂಡಿತವಾಗಿಯೂ ಜನ್ಮ ಹಾಗು ಮುದಿತನದಿಂದ ಪಾರಾಗಿಬಿಡುತ್ತಾರೆ. ಇನ್ನು ಎಲ್ಲರ ಪ್ರಶ್ನೆಗೆ
ಹೇಳುವುದೇನಿದೆ</span>? <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಇದು ಪಾರುಮಾಡುವಂತಹ
ಧಮ್ಮವಾಗಿದೆ. ಈ ತೀರದಿಂದ ಆ ತೀರಕ್ಕೆ ಇರುವ ನಿಬ್ಬಾಣಕ್ಕೆ ಕೊಂಡೊಯ್ಯುವ ಧಮ್ಮವಾಗಿದೆ.
ಆದ್ದರಿಂದಾಗಿ ಈ ಧಮ್ಮೋಪದೇಶಕ್ಕೆ ಪಾರಾಯಣ ಸುತ್ತ ಎಂಬ ಹೆಸರಿದೆ. </span><o:p></o:p></div>
<div class="MsoNormal">
1-3. <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಅಜೀತ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ತಿಸ್ಸಮೆತ್ತೆಯ್ಯ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಪುಣ್ಣಕ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಮೆತ್ತಗೂ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ದೋತಕ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಉಪಸೀವ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ನಂದ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಹೇಮಕ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ತೊದೆಯ್ಯ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಕಪ್ಪ ಹಾಗು ಪಂಡಿತ ಜಾತುಕಣ್ಣಿ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಭದ್ರಾವುಧ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಉದಯ ಹಾಗು ಪೋಸಾಲ ಬ್ರಾಹ್ಮಣ
ಬುದ್ಧಿವಂತ ಮೋಘರಾಜ ಹಾಗು ಮಹಷರ್ಿ ಪಿಂಗಿಯ - ಇವರೆಲ್ಲಾ ಋಷಿಗಳಲ್ಲೇ ಶ್ರೇಷ್ಠರಾದ ಸದಾಚಾರಿ
ಋಷಿಯಾದ ಬುದ್ಧರ ಬಳಿಗೆ ಸಮೀಪಿಸುತ್ತಾರೆ. ನಿಪುಣವಾದ ಪ್ರಶ್ನೆಗಳಿಂದ ಶ್ರೇಷ್ಠರಾದ ಬುದ್ಧರಿಗೆ
ಸಮೀಪವಾಗುತ್ತಾರೆ. </span><o:p></o:p></div>
<div class="MsoNormal">
4. <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಬುದ್ಧ ಭಗವಾನರು ಸಹಾ ಅವರು ಕೇಳಿದ ಪ್ರಶ್ನೆಗಳಿಗೆ ಯತಾರ್ಥವಾಗಿ
ಉತ್ತರಿಸಿದರು. ಮಹಾಮುನಿಯಾದ ಬುದ್ಧರು ಆ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ನೀಡಿ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಆ ಬ್ರಾಹ್ಮಣರಿಗೆ ಸಂತುಷ್ಟಗೊಳಿಸುತ್ತಾರೆ.</span><o:p></o:p></div>
<div class="MsoNormal">
5. <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಆದಿತ್ಯಬಂಧು ಚಕ್ಷುವಂತರಾಗಿರುವ ಬುದ್ಧರಿಂದ ಸಂತುಷ್ಟರಾದ ಮೇಲೆ</span>,
<span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಅವರೆಲ್ಲಾ ಶ್ರೇಷ್ಠ ಪ್ರಾಜ್ಞರಾದ ಬುದ್ಧರ ಬಳಿ ಬ್ರಹ್ಮಚರ್ಯದ ಪಾಲನೆ
ಮಾಡಿದರು.</span><o:p></o:p></div>
<div class="MsoNormal">
6. <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಒಂದೊಂದು ಪ್ರಶ್ನೆಗೂ ಹೇಗೆ ಬುದ್ಧರು ಉತ್ತರಿಸಿದರೋ ಹಾಗೇ
ಆಚರಿಸಿದವರೆಲ್ಲಾ ಈ ತೀರದಿಂದ ಆ ತೀರಕ್ಕೆ (ನಿಬ್ಬಾಣ) ಹೋಗಿಬಿಡುವರು.</span><o:p></o:p></div>
<div class="MsoNormal">
7. <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಉತ್ತಮ ಮಾರ್ಗವನ್ನು ಅಭ್ಯಸಿಸುತ್ತಿರುವ ಆತನು ಈ ತೀರದಿಂದ ಆ ತೀರಕ್ಕೆ
ಹೋಗಿಬಿಡುವನು. ಇದು ದಾಟಲು</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಪಾರಾಗುವಂತಹ
ಮಾರ್ಗವಾಗಿದೆ. ಆದ್ದರಿಂದ ಇದಕ್ಕೆ ಪಾರಾಯಣ ಎಂದು ಹೆಸರಿಸಲಾಗಿದೆ. </span><o:p></o:p></div>
<div class="MsoNormal">
8. <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಪಿಂಗಿಯ- ನಾನು ಈ ಪಾರಾಯಣದ (ದಾಟಲು ಸಮರ್ಥವಾದ) ಧಮ್ಮದ ವರ್ಣನೆ
ಮಾಡುವೆನು. ಯಾವ ವಿಮಲವಾದ ಭೂರಿಮೇದಸ್ಸಿ (ಮಹಾಪ್ರಾಜ್ಞರು) ರವರು ಹೀಗೆ ವೀಕ್ಷಿಸಿದರೋ ಹಾಗೆಯೇ
ಬೋಧಿಸಿದರು. ಮಹಾಮಹಿಮರಾದಂತಹ ಶಾಸ್ತರು ನಿಷ್ಕಾಮಿಗಳಾಗಿದ್ದಾರೆ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ತೃಷ್ಣಾರಹಿತರಾಗಿದ್ದಾರೆ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಅಂತಹವರು
ಅಸತ್ಯವನ್ನಾದರೂ ಹೇಗೆತಾನೆ ನುಡಿಯಲು ಸಾಧ್ಯ</span>?<o:p></o:p></div>
<div class="MsoNormal">
9. <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಮೋಹ ಮಲರಹಿತರಾದ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಅಹಂಕಾರರಹಿತರೂ
ಹಾಗು ಮಾಯಾವಿತನವಿಲ್ಲದವರೂ ಆದ ಭಗವಾನರ ಮಧುರ ಸ್ವರದ ವರ್ಣನೆಯನ್ನು ನಾನು ಮಾಡುವೆ.</span><o:p></o:p></div>
<div class="MsoNormal">
10. <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಹೇ ಬ್ರಾಹ್ಮಣರೇ ! ಅಂಧಕಾರವನ್ನು ದೂರಮಾಡುವಂತಹ ಬುದ್ಧರು</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಸರ್ವವನ್ನು ವೀಕ್ಷಿಸುವಂತ ಸಮಂತ ಚಕ್ಷುವಂತರು</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಲೋಕದ ಅಂತ್ಯವನ್ನು ಅರಿತು ಸರ್ವ ಭವಗಳನ್ನು ದಾಟಿ ಹೋಗಿರುವರು</span>,
<span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಅನಾಸವರಾದಂತಹ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಸರ್ವ ದುಃಖಗಳಿಗೆ
ಪ್ರಹಾರ ಮಾಡುವಂತಹ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಅಂತಹ ಸತ್ಯದ ನಾಮಧೇಯರಾದಂತಹ
ಅವರು ನನ್ನಿಂದ ಆರಾಧಿಸಲ್ಪಟ್ಟಿದ್ದಾರೆ.</span><o:p></o:p></div>
<div class="MsoNormal">
11. <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಹೇಗೆ ಪಕ್ಷಿಯು ಚಿಕ್ಕ ವನವನ್ನು ಬಿಟ್ಟು</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಅಪಾರ ಫಲಾವೃತವಾಗಿರುವ ಅರಣ್ಯದಲ್ಲಿ ನೆಲೆಸುವುದೋ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಅದೇರೀತಿ ನಾನು ಅಲ್ಪ ದಾರ್ಶನಿಕರನ್ನು ಬಿಟ್ಟು ಮಹಾ ಜಲಾಶಯವಾದ ಸರೋವರದತ್ತ ಹೋಗುವ ಹಂಸದ
ರೀತಿ ಬುದ್ಧರ ಬಳಿಗೆ ಬಂದೆನು.</span><o:p></o:p></div>
<div class="MsoNormal">
12. <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಗೋತಮ ಬುದ್ಧರ ಶಾಸನ ಬಗ್ಗೆ ಹೊರಗೆ ಮೊದಲು ಹೀಗೆ ಹೇಳಲಾಗುತ್ತಿತ್ತು-
ಹೀಗಿತ್ತು</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಹೀಗಾಗುವುದು. ಆದರೆ ಅವೆಲ್ಲಾ ದಾರ್ಶನಿಕತ್ವವು
ಕಾಲ್ಪನಿಕವಾಗಿತ್ತು. ಅವೆಲ್ಲವೂ ತಕರ್ಾಧಾರಿತವಾಗಿತ್ತು. </span><o:p></o:p></div>
<div class="MsoNormal">
13. <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಅಂಧಕಾರವನ್ನು ದೂರ ಮಾಡುವಂತಹ ಪರಮಶ್ರೇಷ್ಠರು ಅವರೊಬ್ಬರೇ ಆಗಿದ್ದರು.
ಅವರು ಪ್ರಕಾಶ ನೀಡುವ ಪ್ರಚಾರಕರು. ಗೋತಮರು ಮಹಾ ಜ್ಞಾನಿಯಾಗಿದ್ದಾರೆ (ಭೂರಿಪನ್ಯಾನೋ). ಗೋತಮರು
ಮಹಾ ಪ್ರಜ್ಞಾವಂತರಾಗಿದ್ದಾರೆ (ಭೂರಿಮೇಧನೋ).</span><o:p></o:p></div>
<div class="MsoNormal">
14. <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಅವರು ನನಗೆ ಈಗಲೇ ಇಲ್ಲಿಯೇ ತಕ್ಷಣವೇ ಫಲ ನೀಡುವಂತಹ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಪ್ರತ್ಯಕ್ಷವಾಗಿಯೇ ಮುಂದೆ ಇರುವಂತಹ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ತೃಷ್ಣಾದ ನಾಶ ಮಾಡುವಂತಹ ಹಾಗು ದುಃಖವನ್ನು ದೂರ ಮಾಡುವಂತಹ ಧಮ್ಮದ ಉಪದೇಶ ನೀಡಿದರು.
ಅಂತಹುದರ ಉಪಮೆಯನ್ನು ಯಾವುದರಿಂದಲೂ ಹೋಲಿಸಲು ಆಗದು.</span><o:p></o:p></div>
<div class="MsoNormal">
15. <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಬಾವರಿ- ಹೇ ಪಿಂಗಿಯಾ! ನೀನು ಅಂತಹ ಮಹಾಜ್ಞಾನಿ ಗೋತಮರ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಮಹಾಪ್ರಜ್ಞಾವಂತರಾದ ಗೋತಮರಿಂದ ಕ್ಷಣಮಾತ್ರವೂ ದೂರ ಇರಬಲ್ಲೆಯಾ</span>?<o:p></o:p></div>
<div class="MsoNormal">
16. <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಯಾರು ನಿನಗೆ ಕಣ್ಣ ಮುಂದೆಯೇ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ತಕ್ಷಣವೇ ಫಲಕಾರಿಯಾದ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ತೃಷ್ಣೆಯನ್ನು
ನಾಶಗೊಳಿಸುವಂತಹ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ದುಃಖವನ್ನು ದೂರಗೊಳಿಸುವಂತಹ
ಉಪದೇಶವನ್ನು ನೀಡಿದ್ದಾರೆ. ಅಂತಹವರ ಸಾಮ್ಯತೆ ಎಲ್ಲಿಯೂ ಸಿಗದು. ಯಾವುದರಿಂದಲೂ ಹೋಲಿಸಲು ಆಗದು.</span><o:p></o:p></div>
<div class="MsoNormal">
17. <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಪಿಂಗಿಯಾ- ಓ ಬ್ರಾಹ್ಮಣ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ನಾನು ಅಂತಹ ಮಹಾಪ್ರಾಜ್ಞ ಗೋತಮರ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಅಂತಹ ಮಹಾಮೇಧಾವಿ
ಗೋತಮರನ್ನು ಅಗಲಿ ಕ್ಷಣಮಾತ್ರವೂ ಇರಲಾರೆ.</span><o:p></o:p></div>
<div class="MsoNormal">
18. <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಅವರು ನನ್ನ ಚಕ್ಷುಗಳ ಮುಂದೆಯೇ ಕಾಲವಿಳಂಬವಿಲ್ಲದೆ ಫಲ ನೀಡುವ</span>,
<span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ತೃಷ್ಣಾ ನಾಶಕಾರಿಯಾದ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ದುಃಖ
ನಿರೋಧಗೊಳಿಸುವ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಧಮ್ಮೋಪದೇಶ ನೀಡಿದ್ದಾರೆ.
ಅದರ ತುಲನೆಯನ್ನು ಯಾವುದರಿಂದಲೂ ಮಾಡಲಾಗದು.</span><o:p></o:p></div>
<div class="MsoNormal">
19. <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಹೇ ಬ್ರಾಹ್ಮಣ! ನಾನು ಅಹೋರಾತ್ರಿ ಅಪ್ರಮತ್ತನಾಗಿ ಚಿತ್ತ
ಚಕ್ಷುವಿನಿಂದಲೇ ಅವರನ್ನು ಕಾಣುತ್ತಿದ್ದೇನೆ. ನಾಮ ಸ್ಮರಿಸುತ್ತಲೇ ನಾನು ರಾತ್ರಿಯನ್ನು
ಕಳೆಯುತ್ತಿದ್ದೇನೆ. ಹೀಗಾಗಿ ನಾನು ಅವರಿಂದ ಬೇರೆ ಇದ್ದೇನೆಂದು ತಿಳಿಯುತ್ತಿಲ್ಲ.</span><o:p></o:p></div>
<div class="MsoNormal">
20. <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ನನ್ನ ಶ್ರದ್ಧೆಯಾಗಲಿ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಭಕ್ತಿಯಾಗಲಿ</span>,
<span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಆನಂದವಾಗಲಿ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಮನಸ್ಸಾಗಲಿ</span>,
<span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಸ್ಮೃತಿಯೇ ಆಗಲಿ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಗೋತಮರ ಶಿಕ್ಷಣದಿಂದ
ಅಣುಮಾತ್ರವೂ ದೂರ ಹೋಗದು. ಎಲ್ಲಿ ಯಾವ ದಿಕ್ಕಿನೆಡೆಗೆ ಆ ಮಹಾಪ್ರಾಜ್ಞರು ಹೋಗುತ್ತಾರೋ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಆ ದಿಕ್ಕಿನೆಡೆಗೆಲ್ಲಾ ಶಿರಬಾಗಿ ನಮಸ್ಕರಿಸುತ್ತೇನೆ.</span><o:p></o:p></div>
<div class="MsoNormal">
21. <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಜೀರ್ಣಗೊಂಡಿರುವ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಬಲಹೀನವಾದ ನನ್ನ
ಶರೀರವು ಅವರಿರುವೆಡೆಯಲ್ಲಿ ಹೋಗಲಾರದು. ಆದರೂ ಮಾನಸಿಕವಾಗಿ ನಿತ್ಯವೂ ಅವರಿರುವೆಡೆಗೆ
ಹೋಗುತ್ತೇನೆ. ಹೀಗಾಗಿ ಹೇ ಬ್ರಾಹ್ಮಣ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ನನ್ನ ಮನಸ್ಸು ಅವರ
ಜೊತೆಯಲ್ಲೇ ಇದೆ.</span><o:p></o:p></div>
<div class="MsoNormal">
22. <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಕಾಮ ಭೋಗಗಳ ಕೆಸರಿನಲ್ಲಿ ಹೊರಳಾಡುತ್ತಿದ್ದ ನಾನು ಒಂದು ದ್ವೀಪದಿಂದ
ಇನ್ನೊಂದು ದ್ವೀಪದೆಡೆಗೆ ಗುರುವನ್ನು ಅರಸುತ್ತಾ ಹೋಗುತ್ತಿದ್ದೆನು. ಆಗ ನಾನು ಲೋಕದ ಬೃಹತ್
ಪ್ರವಾಹವನ್ನು ದಾಟಿರುವ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಅನಾಸವರಾದ
ಸಮ್ಮಾಸಂಬುದ್ಧರನ್ನು ಕಂಡೆನು.</span><o:p></o:p></div>
<div class="MsoNormal">
23. <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಆಗ ಅಲ್ಲಿ ಪ್ರತ್ಯಕ್ಷರಾದ ಭಗವಾನರು ಹೀಗೆ ನುಡಿದರು- ಯಾವರೀತಿಯಲ್ಲಿ
ವಕ್ಕಲಿ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಭದ್ರಾವುಧ ಹಾಗು ಆಳವಿಯು ತಥಾಗತರ ಮೇಲಿನ
ಶ್ರದ್ಧೆಯಿಂದಲೇ ಮುಕ್ತರಾದರೋ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಅದೇರೀತಿಯಲ್ಲಿ
ನೀನು ಸಹಾ ಶ್ರದ್ಧೆಯನ್ನು ವೃದ್ಧಿಗೊಳಿಸು ಪಿಂಗಿಯಾ! ಆಗ ನೀನು ಸಹ ಮೃತ್ಯುರಾಜನಿಂದ ದೂರವಾಗುವೆ.</span><o:p></o:p></div>
<div class="MsoNormal">
24. <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಮುನಿಗಳ ಈ ವಚನವನ್ನು ಆಲಿಸಿ ನಾನು ಅತ್ಯಧಿಕವಾಗಿ ಪ್ರಸನ್ನಗೊಂಡೆನು.
ಓ ತೆರೆದ ಜ್ಞಾನವಂತರೇ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಸಮ್ಮಾಸಂಬುದ್ಧರೇ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ತಾವು ನಿಜಕ್ಕೂ ನಿರ್ಮಲಚಿತ್ತದವರಾಗಿದ್ದೀರಿ ಹಾಗು
ಮಹಾಜ್ಞಾನಿಗಳಾಗಿದ್ದೀರಿ.</span><o:p></o:p></div>
<div class="MsoNormal">
25. <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ತಾವು ದೇವತೆಗಳಿಂದ ಅತೀತ ಶ್ರೇಷ್ಠ ಧಮ್ಮವನ್ನು ಸಾಕ್ಷಾತ್ಕರಿಸಿ
ಯಾವುದನ್ನೂ ಬಿಡದೆ ಸರ್ವವನ್ನೂ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಸರ್ವ ಲೋಕಗಳನ್ನು
ಅರಿತಿರುವಿರಿ. ಸಂದೇಹಸ್ಥರ ಹಾಗು ಜ್ಞಾನಿಗಳ ಸರ್ವ ಪ್ರಶ್ನೆಗಳನ್ನು ತಮ್ಮ ಉತ್ತರದಿಂದ ಅಂತ್ಯ
ಮಾಡುವವರಾಗಿದ್ದೀರಿ.</span><o:p></o:p></div>
<div class="MsoNormal">
26. <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ನಿಬ್ಬಾಣವು ಅಕಂಪನಮಯವೂ ಅಜೇಯವಾಗಿದೆ! ಸ್ಥಿರವಾಗಿದೆ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಯಾವುದರಿಂದಲೂ ಅದರ ಉಪಮೆ ನೀಡಲಾಗದು. ನಾನು ಖಂಡಿತವಾಗಿ ಆ ಅಚಲತೆಯ
ಪ್ರಾಪ್ತಿಮಾಡುವೆ. ಈ ವಿಷಯದಲ್ಲಿ ನನಗೆ ಯಾವ ಸಂದೇಹವೂ ಇಲ್ಲ. ಈ ರೀತಿಯಾಗಿ ನನ್ನನ್ನು ಧಾರಣೆ
ಮಾಡಿಕೊಳ್ಳಿ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಓ ಪೂರ್ಣ ಚಿತ್ತವಿಮುಕ್ತ
ಭಗವಾನರೇ!</span><o:p></o:p></div>
<div class="MsoNormal">
<span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಇಲ್ಲಿಗೆ ಪಾರಾಯಣ ಸುತ್ತ
ಮುಗಿಯಿತು.</span><o:p></o:p></div>
<div class="MsoNormal">
<span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಎಂಟು ಬಾಣವಾರಗಳಿಗೆ ಸಮನಾದ
ಸುತ್ತನಿಪಾತವು ಮುಗಿಯಿತು.</span><o:p></o:p></div>
<div class="MsoNormal">
<span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಐದು ವರ್ಗಗಳ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಎಂಟು ಬಾಣವಾರಗಳ ಹಾಗು </span>72<span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;"> ಸುತ್ತಗಳಲ್ಲಿ ಸಂಗ್ರಹಿತವಾದ </span><o:p></o:p></div>
<br />
<div class="MsoNormal">
<span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಖುದ್ದಕನಿಕಾಯದಲ್ಲಿ
ಅಂತರ್ಗತವಾಗಿರುವ ಸುತ್ತನಿಪಾತವು ಮುಗಿಯಿತು</span><o:p></o:p></div>
</div>
Aneesh Bodhhttp://www.blogger.com/profile/02041276688261983503noreply@blogger.com0tag:blogger.com,1999:blog-8742652691355814794.post-72665802143433818542015-10-17T04:38:00.001-07:002015-10-17T04:38:20.039-07:00pingiya manava pucca of suttanipata in kannada 16. ಪಿಂಗಿಯ ಮಾಣವ ಪುಚ್ಛಾ (ಪಿಂಗಿಯ ಮಾಣವನ ಪ್ರಶ್ನೆಗಳು)<div dir="ltr" style="text-align: left;" trbidi="on">
<div class="MsoNormal">
<b><span style="color: red; font-size: 22.0pt; line-height: 107%; mso-bidi-font-size: 20.0pt;">16. </span></b><b><span lang="KN" style="color: red; font-family: "Tunga",sans-serif; font-size: 20.0pt; line-height: 107%; mso-ansi-font-size: 22.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಪಿಂಗಿಯ
ಮಾಣವ ಪುಚ್ಛಾ (ಪಿಂಗಿಯ ಮಾಣವನ ಪ್ರಶ್ನೆಗಳು)</span></b></div>
<div class="separator" style="clear: both; text-align: center;">
<b><a href="http://1.bp.blogspot.com/-wKJerS1h6_Y/ViIy-JvnirI/AAAAAAAACHo/pqk2SSzvLjs/s1600/1%2B%252818%2529.jpg" imageanchor="1" style="margin-left: 1em; margin-right: 1em;"><img border="0" height="320" src="http://1.bp.blogspot.com/-wKJerS1h6_Y/ViIy-JvnirI/AAAAAAAACHo/pqk2SSzvLjs/s320/1%2B%252818%2529.jpg" width="266" /></a></b></div>
<b><span style="color: red; font-size: 22.0pt; line-height: 107%; mso-bidi-font-size: 20.0pt;"><o:p></o:p></span></b><br />
<div class="MsoNormal">
1. <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಪಿಂಗಿಯಾ- ನಾನು ಜೀಣರ್ಾವಸ್ಥೆಯಲ್ಲಿಹೆನು</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ದುರ್ಬಲನೂ ಹೌದು. ನನ್ನ ಸುಂದರತೆ ಹೋಗುತ್ತಲಿದೆ. ನನ್ನ ಕಂಗಳು ಸರಿಯಾಗಿ ಕಾಣಿಸುತ್ತಿಲ್ಲ.
ಕಿವಿಗಳು ಸಹಾ ಸ್ಪಷ್ಟವಾಗಿ ಆಲಿಸದು. ನನಗೆ ಧಮ್ಮೋಪದೇಶ ನೀಡಿ. ಅದರಿಂದಾಗಿ ನಾನು ಜನ್ಮ ಜರಾ
ಬಂಧನದಿಂದ ಪಾರಾಗುವಂತಾಗಲಿ. ಹಾಗು ಮಧ್ಯದಲ್ಲಿ ಮೋಹದ ಜೊತೆಯಲ್ಲಿಯೇ ಸಾಯದೆ ಹೋಗುವಂತಾಗಲಿ.</span><o:p></o:p></div>
<div class="MsoNormal">
2. <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಭಗವಾನರು- ದೇಹದ ಕಾರಣದಿಂದಾಗಿ ಚಿಂತಿತರಾಗಿರುವ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ದೇಹದ ಕಾರಣದಿಂದಲೇ ನಾಶವಾಗುತ್ತಿರುವ ಅಜಾಗರೂಕ ಜನತೆಯನ್ನು ನೋಡುತ್ತಾ
ಓ ಪಿಂಗಿಯಾ! ಅಪ್ರಮತ್ತನಾಗು</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಜಾಗರೂಕನಾಗಿ ದೇಹದ
ಮೋಹವನ್ನು ಅಂತ್ಯಗೊಳಿಸು. ಅದರಿಂದಾಗಿ ಭವ ಅಂತ್ಯವಾಗಲಿ.</span><o:p></o:p></div>
<div class="MsoNormal">
3. <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಪಿಂಗಿಯ- ನಾಲ್ಕು ದಿಕ್ಕುಗಳು</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಮತ್ತೆ ನಾಲ್ಕು ಅನು ದಿಕ್ಕುಗಳು (ಮೂಲೆ ದಿಕ್ಕುಗಳು) ಊದ್ರ್ವ ಹಾಗೂ ಅಧೋ ದಿಕ್ಕು. ಹೀಗೆ
ಯಾವೆಲ್ಲಾ ಲೋಕಗಳಲ್ಲಿ ದಿಕ್ಕುಗಳಿವೆಯೋ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಅವುಗಳಲ್ಲೆಲ್ಲಾ
ಯಾವುದು ಸಹಾ ತಮ್ಮಿಂದ ಅದೃಷ್ಯವಾಗಿಲ್ಲ (ಎಲ್ಲವನ್ನು ನೋಡಿದ್ದೀರಿ)</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಅಶ್ರುತವಾಗಿಲ್ಲ (ಎಲ್ಲವನ್ನು ಅರಿತಿದ್ದೀರಿ)</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಅಪರಿಚಿತವಾಗಿಲ್ಲ ಅಥವಾ ಅಜ್ಞಾತವಾಗಿಲ್ಲ. ಆದ್ದರಿಂದ ತಾವು ನನಗೆ ಧಮ್ಮ ತಿಳಿಸಿ. ಅದನ್ನು
ಅರಿತು ನಾನು ಜನ್ಮ ಹಾಗು ಜರಾಗಳ ಅಂತ್ಯ ಮಾಡುವಂತಾಗಲಿ.</span><o:p></o:p></div>
<div class="MsoNormal">
4. <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಭಗವಾನರು- ಹೇ ಪಿಂಗಿಯಾ! ತೃಷ್ಣೆಗೆ ವಶೀಭೂತರಾಗಿರುವ ಹೀಗೆಯೇ ಸಾಗಿ
ದುಃಖಿತರಾಗಿರುವ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ವೃದ್ಧಾಪ್ಯದಿಂದಾಗಿ
ಚಿಂತಾಕ್ರಾಂತರಾಗಿರುವ ಈ ಮನುಜರನ್ನು ನೋಡಿ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ನೀನು ಪಿಂಗಿಯಾ!
ಅಪ್ರಮತ್ತನಾಗು. ಪುನಃ ಪುನಃ ಜನ್ಮ ತಾಳದಿರಲು ಈ ತೃಷ್ಣೆಯನ್ನು ತ್ಯಾಗ ಮಾಡಿಬಿಡು.</span><o:p></o:p></div>
<br />
<div class="MsoNormal">
<span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಇಲ್ಲಿಗೆ ಪಿಂಗಿಯ ಮಾಣವ
ಪ್ರಶ್ನೆಗಳು ಮುಗಿಯಿತು.</span><o:p></o:p></div>
</div>
Aneesh Bodhhttp://www.blogger.com/profile/02041276688261983503noreply@blogger.com0tag:blogger.com,1999:blog-8742652691355814794.post-34086790551903517392015-10-17T04:36:00.001-07:002015-10-17T04:36:26.164-07:00mogharaja manava pucca of suttanipata in kannada 15. ಮೋಘರಾಜ ಮಾಣವ ಪುಚ್ಛಾ (ಮೋಘರಾಜ ಮಾಣವನ ಪ್ರಶ್ನಾವಳಿ)<div dir="ltr" style="text-align: left;" trbidi="on">
<div class="MsoNormal">
<b><span style="color: red; font-size: 22.0pt; line-height: 107%; mso-bidi-font-size: 20.0pt;">15. </span></b><b><span lang="KN" style="color: red; font-family: "Tunga",sans-serif; font-size: 20.0pt; line-height: 107%; mso-ansi-font-size: 22.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಮೋಘರಾಜ
ಮಾಣವ ಪುಚ್ಛಾ (ಮೋಘರಾಜ ಮಾಣವನ ಪ್ರಶ್ನಾವಳಿ)</span></b></div>
<div class="separator" style="clear: both; text-align: center;">
<b><a href="http://1.bp.blogspot.com/-H-O4lptsHOg/ViIyhy7YhOI/AAAAAAAACHg/l3M-S53OJY0/s1600/1%2B%252813%2529.jpg" imageanchor="1" style="margin-left: 1em; margin-right: 1em;"><img border="0" height="320" src="http://1.bp.blogspot.com/-H-O4lptsHOg/ViIyhy7YhOI/AAAAAAAACHg/l3M-S53OJY0/s320/1%2B%252813%2529.jpg" width="244" /></a></b></div>
<b><span style="color: red; font-size: 22.0pt; line-height: 107%; mso-bidi-font-size: 20.0pt;"><o:p></o:p></span></b><br />
<div class="MsoNormal">
1. <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಮೋಘರಾಜ- ಹೇ ಶಕ್ರರೇ! ನಾನು ಎರಡುಬಾರಿ ವಿಭಿನ್ನ ಸನ್ನಿವೇಶದಲ್ಲಿ
ತಮ್ಮಲ್ಲಿ ಪ್ರಶ್ನಿಸಿದೆನು. ಆದರೆ ಚಕ್ಷುವಂತರೇ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ತಾವು ಉತ್ತರವನ್ನು
ನೀಡಲಿಲ್ಲ. ದೇವಷರ್ಿಗಳು </span>3<span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ನೇ ಬಾರಿ ಖಂಡಿತವಾಗಿ
ಉತ್ತರಿಸುವರು ಎಂದು ಕೇಳಿದ್ದೇನೆ.</span><o:p></o:p></div>
<div class="MsoNormal">
2. <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಈ ಲೋಕ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಪರಲೋಕ ಹಾಗು
ದೇವತೆಗಳ ಸಹಿತ ಬ್ರಹ್ಮಲೋಕಗಳಿವೆ. ಇವುಗಳ ಬಗ್ಗೆ ಯಶಸ್ವಿಗಳಾದ ಗೋತಮರ ದೃಷ್ಟಿಕೋನ ಏನು ಎಂಬುದು
ನನಗೆ ತಿಳಿದಿಲ್ಲ.</span><o:p></o:p></div>
<div class="MsoNormal">
3. <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಹೇ ಪರಮಪ್ರಜ್ಞಾದ ವಿಶುದ್ಧಿದಶರ್ಿಗಳೆ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ನಾನು ತಮ್ಮಲ್ಲಿ ಈ ಪ್ರಶ್ನೆ ಕೇಳಲೇ ಬಂದಿರುವೆನು. ಲೋಕವನ್ನು ಯಾವರೀತಿ ನೋಡುವುದರಿಂದಾಗಿ
(ಗ್ರಹಿಸುವುದರಿಂದ) ಅಂತಹನಿಗೆ ಮೃತ್ಯುರಾಜ ನೋಡಲಾಗುವುದಿಲ್ಲ.</span><o:p></o:p></div>
<div class="MsoNormal">
4. <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಭಗವಾನರು- ಹೇ ಮೋಘರಾಜ! ಸದಾ ಸ್ಮೃತಿವಂತನಾಗಿ</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಶೂನ್ಯಭಾವದಿಂದ ನೋಡುವಂತಾಗು</span>, <span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಈ ರೀತಿಯಾಗಿ ಆತ್ಮ-ದೃಷ್ಟಿಗಳ ನಾಶ ಮಾಡಿದರೆ ಮೃತ್ಯುರಾಜನನ್ನು ದಾಟಿಹೋಗುವೆ. ಈ ರೀತಿಯಾಗಿ
(ಶೂನ್ಯಭಾವದಿಂದ) ಲೋಕವನ್ನು ನೋಡುವವನಿಗೆ ಮೃತ್ಯುರಾಜ ನೋಡಲಾಗುವುದಿಲ್ಲ.</span><o:p></o:p></div>
<br />
<div class="MsoNormal">
<span lang="KN" style="font-family: "Tunga",sans-serif; font-size: 10.0pt; line-height: 107%; mso-ansi-font-size: 11.0pt; mso-ascii-font-family: Calibri; mso-ascii-theme-font: minor-latin; mso-bidi-language: KN; mso-hansi-font-family: Calibri; mso-hansi-theme-font: minor-latin;">ಇಲ್ಲಿಗೆ ಮೋಘರಾಜ ಮಾಣವ
ಪ್ರಶ್ನಾವಳಿ ಮುಗಿಯಿತು.</span><o:p></o:p></div>
</div>
Aneesh Bodhhttp://www.blogger.com/profile/02041276688261983503noreply@blogger.com0