Thursday, 24 September 2020

ಮಹಾನಾಮ ಸುತ್ತ (55.37)

 ಮಹಾನಾಮ ಸುತ್ತ (55.37)



ಒಮ್ಮೆ ಭಗವಾನರು ಶಾಕ್ಯರ ನಗರವಾದ ಕಪಿಲವಸ್ತುವಿನ ನಿಗ್ರೋಧ ಆರಾಮ(ಉಧ್ಯಾನವನ)ದಲ್ಲಿ ನೆಲಸಿದ್ದರು. ಆ ಸಮಯದಲ್ಲಿ ಶಾಕ್ಯರ ಹಿರಿಯರಾದಂತಹ ಮಹಾನಾಮರು ಭಗವಾನರ ಬಳಿಗೆ ಬಂದು ವಂದಿಸಿ ಒಂದೆಡೆ ಕುಳಿತರು. ನಂತರ ಅವರು ಭಗವಾನರೊಂದಿಗೆ ಹೀಗೆ ಸಂಬೋದಿಸಿದರು : "ಭಂತೆ ಯಾವ ರೀತಿಯಲ್ಲಿ ಒಬ್ಬನು ಉಪಾಸಕನಾಗುತ್ತಾನೆ(ಬೌದ್ಧನಾಗುತ್ತಾನೆ)"

"ಇಲ್ಲಿ ಮಹಾನಾಮ ಒಬ್ಬನು ಬುದ್ಧರ ಶರಣು ಹೋದಾಗ, ಧಮ್ಮದ ಶರಣು ಹೋದಾಗ, ಸಂಘದ ಶರಣು ಹೋದಾಗ ಆತನು ಈ ರೀತಿಯಲ್ಲಿ ಉಪಾಸಕ(ಬೌದ್ಧ)ನಾಗುತ್ತಾನೆ."


"ಮತ್ತೆ ಭಂತೆ ಯಾವ ರೀತಿಯಲ್ಲಿ ಉಪಾಸಕನು ಶೀಲಸಂಪನ್ನನು ಆಗುತ್ತಾನೆ. (ಶೀಲಯುತ ಬೌದ್ಧನೆನಸಿಕೊಳ್ಳುತ್ತಾನೆ)."

"ಇಲ್ಲಿ ಮಹಾನಾಮ ಪ್ರಾಣಗಳನ್ನು ತೆಗೆಯುವುದರಿಂದ ವಿರತನಾದರೆ, ಕೊಡದೆ ಇದ್ದುದ್ದನ್ನು ತೆಗೆದುಕೊಳ್ಳುವುದರಿಂದ ವಿರತನಾದರೆ, ಕಾಮುಕತೆಗಳ ಮಿಧ್ಯಾಚಾರಗಳಿಂದ(ಅನೈತಿಕ ಸಂಬಂಧಗಳಿಂದ, ಬಲತ್ಕಾರಗಳಿಂದ) ವಿರತನಾದರೆ, ಸುಳ್ಳು ಹೇಳುವುದರಿಂದ ವಿರತನಾದರೆ, ಮತ್ತು ಸುರ,ಮೆರೆಯ,ಇತರ ಪ್ರಮಾದ ತರುವ ಮಧ್ಯಪಾನ(ಮಾದಕ ವಸ್ತುಗಳಿಂದ)ಗಳಿಂದ ವಿರತನಾದಗ ಒಬ್ಬನು ಶೀಲ ಸಂಪನ್ನ ಬೌದ್ಧನಾಗುತ್ತಾನೆ." 


"ಮತ್ತೆ ಭಂತೆ ಯಾವ ರೀತಿಯಲ್ಲಿ ಉಪಾಸಕನು ಶ್ರದ್ಧಸಂಪನ್ನನು ಆಗುತ್ತಾನೆ. (ಶ್ರದ್ಧಯುತ ಬೌದ್ಧನೆನಸಿಕೊಳ್ಳುತ್ತಾನೆ)"

"ಇಲ್ಲಿ ಮಹಾರಾಜ ಈ ರೀತಿಯಲ್ಲಿ ಶ್ರದ್ಧಾಸಂಪನ್ನನು ಆಗುತ್ತಾನೆ, ಹೇಗೆಂದರೆ ಆತನಿಗೆ ತಥಾಗತರ ಬೋಧಿಯ(ಜ್ಞಾನ ಪ್ರಾಪ್ತಿಯ) ಮೇಲೆ ಅಚಲ ವಿಶ್ವಾಸವಿರುತ್ತದೆ, ಹೇಗೆಂದರೆ "ಭಗವಾನರು ಖಂಡಿತವಾಗಿಯು ಅರಹಂತರಾಗಿದ್ದಾರೆ(ಕಲ್ಮಶರಹಿತರು), ಸಮ್ಮಸಂಬುದ್ಧರಾಗಿದ್ದಾರೆ(ಸ್ವಯಂ ಆಗಿಯೇ ಸಂಪೂರ್ಣ ಸಂಬೋಧಿ ಪ್ರಾಪ್ತಿ ಮಾಡಿದ್ದಾರೆ), ವಿಜ್ಜಾಚರಣ ಸಂಪನ್ನರು(ವಿದ್ಯೆಯೆಂದರೆ ಸ್ಪಷ್ಟ ಜ್ಞಾನದರ್ಶನ ಹೊಂದಿರುವಿಕೆ ಹಾಗು ಚರಣವೆಂದರೆ ಶ್ರೇಷ್ಠ ಆಚರಣೆ ಉಳ್ಳವರು. ಒಟ್ಟಾರೆ ವಿದ್ಯೆ ಹಾಗು ಆಚರಣೆ ಸಂಪನ್ನರಾಗಿರುವುದರಿಂದಾಗಿ ವಿಜ್ಜಾಚರಣಸಂಪನ್ನರೆನ್ನುತ್ತಾರೆ), ಸುಗತರು(ಅವರು ಹೇಗೆ ಶೋಭಾಯಮಾನವಾಗಿ ಹೋಗಿ (ಗಮತ) ಸುಗತರಾಗಿದ್ದಾರೆ? ಗತ ಎಂದರೆ ಹೋಗಿದ್ದಾರೆ. ಭಗವಾನರಿಗೆ ಶೋಭನಾಮಯ (ಒಳಿತಿನಿಂದ ಕೂಡಿರುವವರು, ಒಳಿತನ್ನೇ ಮಾಡುವವರು) ಎನ್ನುತ್ತಾರೆ. ಅವರು ಹೇಗೆ, ಯಾವ ಮಾರ್ಗದಲ್ಲಿ ಹೋಗಿದ್ದಾರೆ? ಅವರು ಆರ್ಯ ಅಷ್ಠಾಂಗ ಮಾರ್ಗದಲ್ಲಿ, ಯಾವುದೇ ಅಂಟುವಿಕೆಯಿಲ್ಲದೆ ಕ್ಷೇಮಕರ ದ್ವಾರವಾದ ನಿಬ್ಬಾನ ತಲುಪಿದ್ದಾರೆ)ೆ., ಲೋಕವಿಧರು (ಅವರು ಲೋಕಗಳನ್ನು ಬಲ್ಲವರು. ಅವರು (ಭಗವಾನರು) ಅನುಭವಿಸಿದ್ದಾರೆ, ಲೋಕಗಳನ್ನು ಅತ್ಯಂತ ತೀಕ್ಷ್ಣವಾಗಿ ವೀಕ್ಷಿಸಿದ್ದಾರೆ. ಲೋಕಗಳ ಉದಯವನ್ನು, ಲೋಕಗಳ ನಿರೋಧವನ್ನು ನಿರೋಧದ ಉದ್ದೇಶವನ್ನು ಹೇಳಿದ್ದಾರೆ: ಅವರು ತಮ್ಮ ದಿವ್ಯಚಕ್ಷುವಿನಿಂದ ಸರ್ವಲೋಕಗಳನ್ನು ಅರಿತಿದ್ದಾರೆ. ಸಶರೀರರಾಗಿ ಲೋಕಗಳನ್ನು ಸಂಚರಿಸಿದ್ದಾರೆ. ಪಾಪಿಗಳ ದುರ್ಗತಿ, ಶೀಲವಂತರ ಸುಗತಿ, ದಾನಿಗಳ ಸ್ವರ್ಗ, ಧ್ಯಾನಿಗಳ ಬ್ರಹ್ಮಲೋಕ, ಜ್ಞಾನಿಗಳ ನಿಬ್ಬಾಣ ಎಲ್ಲವನ್ನು ಕಾರಣ ಪರಿಹಾರ ಸಮೇತ ವಿವರಿಸಿದ್ದಾರೆ. ಆದ್ದರಿಂದ ಅಂತಹ ನಿಬ್ಬಾಣ ಮಾರ್ಗದಶರ್ಿಗೆ ಲೋಕವಿದೂ ಎನ್ನುತ್ತಾರೆ.), ಅನುತ್ತರ ಪುರುಷ ಧಮ್ಮಸಾರಥಿಯು (ಅನುತ್ತರೋ ಎಂದರೆ ಸಾಟಿಯಿಲ್ಲದ, ಯಾರಿಗೂ ಹೋಲಿಸಲಾಗದ ಎಂದು ಅರ್ಥ. ಪುರಿಸ ಎಂದರೆ ಜೀವಿಗಳಲ್ಲಿ ಪುರುಷ (ವಿಶಾಲಾರ್ಥದಲ್ಲಿ ಎಲ್ಲಾ ಜೀವಿಗಳೆಂದು ಪರಿಗಣಿಸಲಾಗುತ್ತದೆ). ದಮ್ಮ ಎಂದರೆ (ದಮಿಸುವುದು); ಸಾರಥಿ ಎಂದರೆ ದಮಿಸುವವ ಅಥವಾ ನಾಯಕ ಎಂದರ್ಥ. ಅಂದರೆ ಒಟ್ಟಾರೆ ಜೀವಿಗಳನ್ನು ದಮಿಸುವಂತಹ ಹೋಲಿಸಲಾಗದಂತಹ ನಾಯಕ ಎಂದು ಅರ್ಥವಾಗಿದೆ.), ದೇವ-ಮನುಷ್ಯರಿಗೆ ಗುರುವು(ಭಗವಾನರು ಇಲ್ಲಿ ಈಗಲೇ ಲಾಭವಾಗುವ ಬೋಧನೆ ಮಾಡುತ್ತಿದ್ದರು. ಹಾಗೆಯೇ ಮುಂದಿನ ಜನ್ಮದಲ್ಲೂ ಒಳ್ಳೆಯದಾಗುವ ರೀತಿ ಬೋಧನೆ ಮಾಡುತ್ತಿದ್ದರು. ಅಷ್ಟೇ ಅಲ್ಲ, ಅಂತಿಮ ಗುರಿಯಾದ ನಿಬ್ಬಾಣ ಸಿಗುವಂತಹ ರೀತಿಯಲ್ಲಿ ಅವರು ಬೋಧನೆ ಮಾಡುತ್ತಿದ್ದರು. ಹೀಗೆ ವರ್ತಮಾನ ಹಾಗು ಭವಿಷ್ಯದಲ್ಲಿ ಮತ್ತು ಪರಮಾರ್ಥವಾದ ನಿಬ್ಬಾಣ ಗಳಿಸುವಿಕೆಯಲ್ಲೂ ಲಾಭವಾಗುವಂತಹ ಬೋಧನೆಯನ್ನು ಮಾನವರಿಗೆ ಮತ್ತು ದೇವತೆಗಳಿಗೆ ನೀಡುತ್ತಿದ್ದುದರಿಂದಾಗಿ ಅವರನ್ನು ದೇವತೆಗಳಿಗೆ ಹಾಗೂ ಮಾನವರಿಗೆ ಶಾಸ್ತರು ಎನ್ನುತ್ತಾರೆ.), ಬುದ್ಧರು (ವಿಮುಕ್ತಿ ಫಲವನ್ನು ಒಳಗೊಂಡ ಜ್ಞಾನದಿಂದ ಅವರು ಬುದ್ಧರಾಗಿದ್ದಾರೆ. ಅವರ ಅಗಾಧ ಜ್ಞಾನಸಂಪತ್ತು ಸ್ವತಃ ಅವರಿಂದಲೇ ಸಂಶೋಧಿಸಲ್ಪಟ್ಟಿದೆ; ಆದ್ದರಿಂದ ಅವರನ್ನು ಬುದ್ಧರೆನ್ನುತ್ತಾರೆ.) ಆಗಿದ್ಧಾರೆ ಹಾಗೂ ಭಗವಾನರಾಗಿದ್ದಾರೆ( 'ಭಗವಾನರು' ಎಂಬ ಪದ ಪದಗಳಲ್ಲೇ ಶ್ರೇಷ್ಠವಾದುದು, ಉತ್ಕೃಷ್ಟವಾದುದು, ಭಕ್ತಿಗೆ ಅರ್ಹವಾದುದು. ಆದ್ದರಿಂದಲೇ ಭಗವಾನರು ಎಂದೇ ಬಳಕೆಯಲ್ಲಿದೆ.) ಈ ರೀತಿಯಲ್ಲಿ ಮಹಾನಾಮ,  ಉಪಾಸಕನು ಶ್ರದ್ಧಾಸಂಪನ್ನನು ಆಗುತ್ತಾನೆ."


""ಮತ್ತೆ ಭಂತೆ ಯಾವ ರೀತಿಯಲ್ಲಿ ಉಪಾಸಕನು ತ್ಯಾಗ(ದಾನ)ಸಂಪನ್ನನು ಆಗುತ್ತಾನೆ."

"ಇಲ್ಲಿ ಮಹಾನಾಮ ಉಪಾಸಕನು ಸ್ವಾರ್ಥರಹಿತವಾದ ಮನೋಭಾವದಿಂದ ಕೂಡಿರುತ್ತಾನೆ(ಜೀವಿಸುತ್ತಾನೆ), ಉದಾರಿಯಾಗಿರುತ್ತಾನೆ, ಸದಾ ದಾನದಲ್ಲೆ ಆನಂದಿತನಾಗಿ ದಾನಹಸ್ತನಾಗಿರುತ್ತಾನೆ, ಯಾಚಕರಿಗೆ ಮುಕ್ತನಾಗಿರುತ್ತಾನೆ, ಹಂಚುವಿಕೆಯಲ್ಲೆ ಸುಖ ಕಾಣುತ್ತಾನೆ. ಹೀಗೆ ಬಿಟ್ಟುಬಿಡುವುದರಲ್ಲಿ ತ್ಯಾಗದಲ್ಲಿ ಆನಂದಿಸುವನು, ಈ ರೀತಿಯಲ್ಲಿ ಮಹಾನಾಮ,  ಉಪಾಸಕನು  ತ್ಯಾಗಸಂಪನ್ನನು ಆಗುತ್ತಾನೆ."


""ಮತ್ತೆ ಭಂತೆ ಯಾವ ರೀತಿಯಲ್ಲಿ ಉಪಾಸಕನು ಪ್ರಜ್ಞಾಸಂಪನ್ನನು ಆಗುತ್ತಾನೆ."

"ಇಲ್ಲಿ ಮಹಾನಾಮ ಉಪಾಸಕನು ಪ್ರಜ್ಞವಂತನಾಗಿರುತ್ತಾನೆ(ಪನ್ನಾವ), ಆತನು ಉದಯ ಹಾಗೂ ಅಳಿಯುವಿಕೆಯ(ಮೆರೆಯಾಗುವಿಕೆಯ/ನಾಷವಾಗುವಿಕೆಯ)ಲ್ಲಿ ಜ್ಞಾನಿಯಾಗುತ್ತಾನೆ, ಅವುಗಳ ಜ್ಞಾನ ಆತನಿಗೆ ಇರುತ್ತದೆ, ಆ ಜ್ಞಾನವು ಉದಾತ್ತವಾದುದು(ಆರ್ಯರದ್ದು), ಅದು ಪರಮ ಬೇಧಕನೀಯವಾದುದ್ದು(ನಿಭ್ಭೇಧಿಕಾಯ), ಮತ್ತು ಅದು ದುಃಖಗಳ ಕ್ಷಯ(ಅಂತ್ಯ)ದೆಡೆಗೆ ಕರೆದೊಯ್ಯುವುದು. ಹೀಗೆ ಈ ರೀತಿಯಲ್ಲಿ  ಪ್ರಜ್ಞಾಸಂಪನ್ನ ಉಪಾಸಕ ಎಂದು ಕರೆಸಿಕೊಳ್ಳುತ್ತಾನೆ.






 

Sunday, 12 July 2020

ಚುಲಕಮ್ಮವಿಭಂಗ ಸುತ್ತ culakammavibhanga sutta in kannada




ಚುಲಕಮ್ಮವಿಭಂಗ ಸುತ್ತ
(ಕಮ್ಮಫಲದ ವಿಶ್ಲೇಷಣೆಯ ಚಿಕ್ಕ ಸುತ್ತ)


ನಾನು ಹೀಗೆ ಕೇಳಿದ್ದೇನೆ. ಒಮ್ಮೆ ಭಗವಾನರು ಶ್ರಾವಸ್ಥಿಯ ಆನಾಥಪಿಂಡಿಕನ ಜೇತವನದಲ್ಲಿ ವಾಸಿಸುತ್ತಿದ್ದರು.
ಆಗ ಬ್ರಾಹ್ಮಣ ವಿಧ್ಯಾಥರ್ಿಯಾದ ತೋದಯ್ಯನ ಮಗನಾದ ಸುಭನು ಭಗವಾನರ ಬಳಿಗೆ ಹೋದನು ಅವರಿಗೆ ವಂದಿಸಿ ಕುಶಲಗಳನ್ನು ವಿನಿಯೋಗಿಸಿಕೊಂಡನು. ಹೀಗೆ ಕುಶಲ ಮಾತುಕತೆಯ ನಂತರ ಆತನು ಭಗವಾನರ ಮುಂದೆ ಒಂದೆಡೆ ಕುಳಿತನು. ಮತ್ತು ಹೀಗೆ ಪ್ರಶ್ನಿಸಿದನು: 
"ಗೋತಮ ಭಗವಾನರೇ ಯಾವ ಕಾರಣದಿಂದ ಹಾಗೂ ಯಾವ ಸ್ಥಿತಿಯಿಂದಾಗಿ(ಬೆಂಬಲದಿಂದಾಗಿ) ಮಾನವರು ಹೀನರು ಹಾಗೂ ಶ್ರೇಷ್ಟರು ಆಗಿ ಕಾಣಿಸಿಕೊಳ್ಳುತ್ತಾರೆ. ? ಏಕೆಂದರೆ ಜನರು ಅಲ್ಪಾಯುಷ್ಯನಿಂದ ಹಾಗೂ ದೀಘರ್ಾಯುಷ್ಯನಿಂದ ಕಾಣಿಸುವರು. ರೋಗಿಗಳಾಗಿ ಮತ್ತು ಆರೋಗ್ಯವಂತರಾಗಿ ,ಅದೇ ರೀತಿ ಕುರೂಪಿಗಳಾಗಿ ಮತ್ತು ಸುರೂಪಿಗಳಾಗಿ, ಅಪ್ರಭಾವಿಗಳಾಗಿ ಮತ್ತು ಪ್ರಭಾವಿಗಳಾಗಿ, ಬಡವರಾಗಿ ಮತ್ತು ಸಿರಿವಂತರಾಗಿ, ನೀಚಕುಲದಲ್ಲಿ ಮತ್ತು ಉಚ್ಚಕುಲದಲ್ಲಿ, ದಡ್ಡರಾಗಿ ಹಾಗೇಯೆ ಪ್ರಜ್ಞಾವಂತರಾಗಿ, ಕಾಣಿಸಿಕೊಳ್ಳುತ್ತಿದ್ದಾರೆ. ಯಾವ ಕಾರಣದಿಂದ ಹಾಗೂ ಯಾವ ಸ್ಥಿತಿಗಳಿಂದಾಗಿ ಮಾನವರು ಹೀಗೆ ಹೀನರು ಹಾಗೂ ಶ್ರೇಷ್ಟರು ಆಗಿ ಕಾಣಿಸಿಕೊಳ್ಳುವರು."

   " ಓ ಮಾಣವನೇ, 
ಜೀವಿಗಳು ತಮ್ಮ ಕಮ್ಮಗಳಿಗೆ ತಾವೆ ಒಡೆಯರು
ತಮ್ಮ ಕಮ್ಮಕ್ಕೆ ತಾವೇ ಉತ್ತರಾಧಿಕಾರಿಗಳು
ತಮ್ಮ ಕಮ್ಮಗಳಿಂದಲೇ ಅವರು ಜನಿಸುವರು
ಕಮ್ಮಗಳೇ ಬಂಧುವು
ಕಮ್ಮಗಳೆ ಅವರ ಶರಣು
ಕಮ್ಮದಿಂದಲೇ ಹೀನ ಹಾಗೂ ಮಹಾನ್ ಆಗುವರು


"ಭಗವಾನರೇ ನಾನು ತಮ್ಮ ಬೋಧನೆಯ ಅರ್ಥವನ್ನು ವಿಶಾಲತೆಯನ್ನು ಅರ್ಥಮಾಡಿಕೊಳ್ಳಲಿಲ್ಲ, ತಾವು ಸಂಕ್ಷೀಪ್ತವಾಗಿ ನುಡಿದಿದ್ದಿರಿ ವಿವರವಾಗಿ ಹೇಳಲಿಲ್ಲ.  ಹೀಗಾಗಿ ಭಗವಾನರು ನನಗೆ ಅರ್ಥವಾಗುವ ರೀತಿ ವಿಸ್ತಾರವಾಗಿ ಧಮ್ಮವನ್ನು ನುಡಿದರೆ ಬಹಳ ಒಳಿತಾಗುವುದು."

"ಹಾಗಾದರೇ ಮಾಣವನೇ ನಾನು ನುಡಿಯುವುದನ್ನೇ ಗಮನವಿಟ್ಟು ಆಲಿಸು."

"ಹಾಗೇ ಆಗಲಿ ಭಂತೆ" ಎಂದು ಶುಭನು ನುಡಿದನು.

  ಆಗ ಭಗವಾನರು ಹೀಗೆ ನುಡಿದರು :
"ಇಲ್ಲಿ ಮಾಣವನೇ ಹಲವು ಸ್ತ್ರೀಯರಾಗಲಿ ಅಥವಾ ಪುರುಷರಾಗಲಿ ಜೀವಿಗಳನ್ನು ಕೊಲ್ಲುತ್ತಾರೆ ಹೀಗೆ ಕೊಲೆಗಾರರಾಗುತ್ತಾರೆ, ರಕ್ತಸ್ಥಿಗ್ದ ಕೈಯುಳ್ಳವರಾಗಿ, ಹೊಡೆದಾಟಗಳಿಂದ ಮತ್ತು ಹಿಂಸೆಯಿಂದ ಕೂಡಿದವರಾಗಿ ಜೀವಿಗಳ ಬಗ್ಗೆ ದಯೆರಹಿತರಾಗುತ್ತಾರೆ, ಈ ಬಗೆಯ ಕರ್ಮಗಳಿಂದ ಕೃತ್ಯಗಳಿಂದಾಗಿ ಸಾವಿನ ನಂತರ ಶರೀರದಿಂದ ವಿಚ್ಛೇದರಾದ ನಂತರ ಆಪಾಯ, ದುರ್ಗತಿ, ವಿನಿಪಾತ(ಅದಃಪತನ) ಮತ್ತು ನಿರಯಗಳಲ್ಲಿ ಉದಯಿಸುತ್ತಾರೆ.ಒಂದು ವೇಳೆ ಅವರು ಆಪಾಯಗಳಲ್ಲಿ, ದುಗ್ಗತಿಯಲ್ಲಿ, ವಿನಿಪಾತದಲ್ಲಿ ಮತ್ತು ನಿರಯಗಳಲ್ಲಿ ಹುಟ್ಟದೆ ಪುನಃ ಮಾನವರಾಗಿ ಹುಟ್ಟಿದ್ದರೆ ಆತನು ಅಥವಾ ಅವಳು ಅಲ್ಪಾಯುಷ್ಯವನ್ನು ಹೊಂದಿ ಹುಟ್ಟಿರುತ್ತಾರೆ. ಈ ರೀತಿಯಲ್ಲಿ ಮಾಣವನೇ ಒಬ್ಬನು ಜೀವಿಗಳನ್ನು ಕೊಲ್ಲುತ್ತಾ ಕೊಲೆಗಾರನಾಗಿ ರಕ್ತಸ್ಥಿಗ್ದ ಕೈಯುಳ್ಳವನಾಗಿ, ಹೊಡೆತ ಹಾಗೂ ಹಿಂಸೆಯಿಂದ ಕೂಡಿದವನಾಗಿ ಜೀವಿಗಳ ಬಗ್ಗೆ ದಯೆರಹಿತನಾದರೆ ಹೀಗೆ ಅಲ್ಪಾಯುಷ್ಯದ ಜೀವನ ಪಡೆಯುತ್ತಾರೆ.


ಅದರೆ ಇಲ್ಲಿ ಮಾಣವಕನೇ ಹಲವು ಸ್ತ್ರೀ ಅಥವಾ ಪುರುಷರು ಜೀವ ಹತ್ಯೆಗಳನ್ನು ಮಾಡುವುದನ್ನು ತೊರೆದು ಜೀವಹತ್ಯೆಯಿಂದ ವಿರತರಾಗಿ ದಂಡಶಸ್ತ್ರಗಳನ್ನು ಪಕ್ಕಕ್ಕೆ ಇಟ್ಟು ದಯೆಯಿಂದ ಹಾಗೂ ಸಭ್ಯತೆಯಿಂದ ಕೂಡಿದವನಾಗಿ ಜೀವಿಗಳ ಬಗ್ಗೆ ಅನುಕಂಪೆಯುಳ್ಳವನಾಗಲು ಬದ್ದನಾಗಿರುತ್ತಾನೆ. ಈ ಬಗೆಯ ಕಮ್ಮಗಳನ್ನು ಆಚರಿಸಿದ್ದರಿಂದಾಗಿ ಮತ್ತು ನಿರ್ವಹಿಸಿದ್ದರಿಂದಾಗಿ ಆತನು ಅಥವಾ ಆಕೆಯು ಸಾವಿನ ನಂತರ ದೇಹದ ವಿಘಟನೆಯ ನಂತರ ಸುಗತಿಯಲ್ಲಿ ಜನಿಸುತ್ತಾನೆ. ಒಂದು ವೇಳೆ ಆತನು ಸಾವಿನ ನಂತರ ದೇಹದಿಂದ ಬೇರ್ಪಟ್ಟ ನಂತರ ಸುಗತಿಯಲ್ಲಿ ಜನಿಸದಿದ್ದರೇ ಮಾನವನಾಗಿಯೇ ಹುಟ್ಟಿದರೇ ಆತನು ಎಲ್ಲಿಯೇ ಹುಟ್ಟಲಿ ಆತನು ದೀಘರ್ಾಯುವಾಗಿಯೇ ಜೀವಿಸುವಂತವನಾಗುತ್ತಾನೆ. ಈ ರೀತಿಯಾಗಿ ಮಾಣವನೇ ಜೀವ ಹತ್ಯೆಗಳನ್ನು ಮಾಡುವುದನ್ನು ತೊರೆದು ಜೀವಹತ್ಯೆಯಿಂದ ವಿರತರಾಗಿ ದಂಡಶಸ್ತ್ರಗಳನ್ನು ಪಕ್ಕಕ್ಕೆ ಇಟ್ಟು ದಯೆಯಿಂದ ಹಾಗೂ ಸಭ್ಯತೆಯಿಂದ ಕೂಡಿದವರಾಗಿ ಜೀವಿಗಳ ಬಗ್ಗೆ ಅನುಕಂಪೆಯುಳ್ಳವನಾಗಿ ಬದ್ದನಾಗಿದ್ದರೇ ಅದು ದೀಘರ್ಾಯುತನಕ್ಕೆ ಕೊಂಡಯ್ಯುತ್ತದೆ.

.

 'ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಜೀವಿಗಳ ಹಿಂಸೆಯಲ್ಲಿ ತೊಡಗುತ್ತಾರೆ. ಹೇಗೆಂದರೆ ಕೈಯಿಂದ ಹೆಂಟೆಯಿಂದ ದೊಣ್ಣೆಯಿಂದ ಅಥವಾ ಶಸ್ತ್ರದಿಂದ ಹಿಂಸೆ ಮಾಡುತ್ತಾರೆ. ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟುತ್ತಾರೆ. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ಎಲ್ಲೇ ಹುಟ್ಟಲಿ ರೋಗಗಳಿಂದ ಕೂಡಿರುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಜೀವಿಗಳ ಹಿಂಸೆಯಲ್ಲಿ ತೊಡಗಿದ್ದರೇ ಹೇಗೆಂದರೆ ಕೈಯಿಂದ ಹೆಂಟೆಯಿಂದ ದೊಣ್ಣೆಯಿಂದ ಅಥವಾ ಶಸ್ತ್ರದಿಂದ ಹಿಂಸೆ ಮಾಡಿದ್ದರೇ ಈ ಬಗೆಯಲ್ಲಿ ರೋಗಗಳಿಂದ ಕೂಡಿರುತ್ತಾರೆ..

'ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಜೀವಿಗಳ ಹಿಂಸೆಯಲ್ಲಿ ತೊಡಗುವುದಿಲ್ಲ. ಹೇಗೆಂದರೆ ಕೈಯಿಂದ ಹೆಂಟೆಯಿಂದ ದೊಣ್ಣೆಯಿಂದ ಅಥವಾ ಶಸ್ತ್ರದಿಂದ ಹಿಂಸೆ ಮಾಡುವುದಿಲ್ಲ. ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಉದಯಿಸುವರು. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ಎಲ್ಲೇ ಹುಟ್ಟಲಿ ಆರೋಗ್ಯಗಳಿಂದ ಕೂಡಿರುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಜೀವಿಗಳ ಹಿಂಸೆಯಲ್ಲಿ ತೊಡಗದಿದ್ದರೇ ಹೇಗೆಂದರೆ ಕೈಯಿಂದ ಹೆಂಟೆಯಿಂದ ದೊಣ್ಣೆಯಿಂದ ಅಥವಾ ಶಸ್ತ್ರದಿಂದ ಹಿಂಸೆ ಮಾಡದಿದ್ದರೇ ಈ ಬಗೆಯಲ್ಲಿ ಆರೋಗ್ಯಗಳಿಂದ ಕೂಡಿರುತ್ತಾರೆ..

ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಕ್ರೋಧ ಹಾಗೂ ಕೆರಳುವ ಸ್ವಭಾವದಿಂದ ಕೂಡಿರುತ್ತಾರೆ. ಅವರಿಗೆ ಸ್ವಲ್ಪ ಟೀಕೆ ಮಾಡಿದರೂ ಸಹಾ ರೇಗಿಬಿಡುತ್ತಾರೆ, ಕುಪಿತರಾಗುತ್ತಾರೆ, ದ್ವೇಶವುಳ್ಳವರಾಗುತ್ತಾರೆ, ಮತ್ತು ಮುನಿಯುತ್ತಾರೆ, ಮತ್ತು ಕೋಪ, ದ್ವೇಶ ಮತ್ತು ಕಹಿತನವನ್ನು ವ್ಯಕ್ತಪಡಿಸುತ್ತಾರೆ. ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟುತ್ತಾರೆ. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ಎಲ್ಲೇ ಹುಟ್ಟಲಿ ಕುರೂಪಿಯಾಗಿ, ದುವರ್ಣದವನಾಗಿ ಹುಟ್ಟುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಕುರೂಪಿಗಳಾಗಿ, ದುವರ್ಣದವರಾಗಿ ಹುಟ್ಟುತ್ತಾರೆ, ಅದಕ್ಕೆ ಕಾರಣ ಅವರು ಕ್ರೋಧ ಹಾಗೂ ಕೆರಳುವ ಸ್ವಭಾವದಿಂದ ಕೂಡಿರುತ್ತಾರೆ. ಅವರಿಗೆ ಸ್ವಲ್ಪ ಟೀಕೆ ಮಾಡಿದರೂ ಸಹಾ ರೇಗಿಬಿಡುತ್ತಾರೆ, ಕುಪಿತರಾಗುತ್ತಾರೆ, ದ್ವೇಶವುಳ್ಳವರಾಗುತ್ತಾರೆ, ಮತ್ತು ಮುನಿಯುತ್ತಾರೆ, ಮತ್ತು ಕೋಪ, ದ್ವೇಶ ಮತ್ತು ಕಹಿತನವನ್ನು ವ್ಯಕ್ತಪಡಿಸುತ್ತಾರೆ

ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಕ್ರೋಧ ಹಾಗೂ ಕೆರಳುವ ಸ್ವಭಾವದಿಂದ ಕೂಡಿರುವುದಿಲ್ಲ,  ಅವರಿಗೆ ಬಹಳಷ್ಟು ಟೀಕೆ ಮಾಡಿದರೂ ಸಹಾ ರೇಗಿಬಿಡುವುದಿಲ್ಲ, ಕುಪಿತರಾಗುವುದಿಲ್ಲ, ದ್ವೇಶವುಳ್ಳವರಾಗುವುದಿಲ್ಲ, ಮತ್ತು ಮುನಿಯುವುದಿಲ್ಲ, ಮತ್ತು ಕೋಪ, ದ್ವೇಶ ಮತ್ತು ಕಹಿತನವನ್ನು ವ್ಯಕ್ತಪಡಿಸುವುದಿಲ್ಲ. ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಉದಯಿಸುವರು. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ಆತನು ಎಲ್ಲೇ ಹುಟ್ಟಲಿ ಸುರೂಪಿಯಾಗಿ, ಸುವರ್ಣದವನಾಗಿ ಹುಟ್ಟುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಸುರೂಪಿಗಳಾಗಿ, ಸುವರ್ಣದವರಾಗಿ ಹುಟ್ಟುತ್ತಾರೆ, ಅದಕ್ಕೆ ಕಾರಣ ಕ್ರೋಧ ಹಾಗೂ ಕೆರಳುವ ಸ್ವಭಾವದಿಂದ ಕೂಡಿರುವುದಿಲ್ಲ,  ಅವರಿಗೆ ಬಹಳಷ್ಟು ಟೀಕೆ ಮಾಡಿದರೂ ಸಹಾ ರೇಗಿಬಿಡುವುದಿಲ್ಲ, ಕುಪಿತರಾಗುವುದಿಲ್ಲ, ದ್ವೇಶವುಳ್ಳವರಾಗುವುದಿಲ್ಲ, ಮತ್ತು ಮುನಿಯುವುದಿಲ್ಲ, ಮತ್ತು ಕೋಪ, ದ್ವೇಶ ಮತ್ತು ಕಹಿತನವನ್ನು ವ್ಯಕ್ತಪಡಿಸುವುದಿಲ್ಲ.

 ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಈಷರ್ೆ ಮನೋಭಾವದಿಂದ ಕೂಡಿರುತ್ತಾರೆ. ಅವರು ಪರರಿಗೆ ಸಿಗುವ ಲಾಭ, ಸತ್ಕಾರ, ಗೌರವ, ವಂದನೆ, ಪೂಜೆಗಳಿಗೆ ಈಷರ್ೆಪಡುತ್ತಾರೆ, ಅದನ್ನು ಸಹಿಸುವುದಿಲ್ಲ, ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟುತ್ತಾರೆ. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ಎಲ್ಲೇ ಹುಟ್ಟಲಿ ಪ್ರಭಾವರಹಿತನಾಗಿರುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಪ್ರಭಾವರಹಿತನಾಗಿರುತ್ತಾರೆ, ಅದಕ್ಕೆ ಕಾರಣ ಅವರು ಈಷರ್ೆ ಮನೋಭಾವದಿಂದ ಕೂಡಿರುತ್ತಾರೆ. ಅವರು ಪರರಿಗೆ ಸಿಗುವ ಲಾಭ, ಸತ್ಕಾರ, ಗೌರವ, ವಂದನೆ, ಪೂಜೆಗಳಿಗೆ ಈಷರ್ೆಪಡುತ್ತಾರೆ, ಅದನ್ನು ಸಹಿಸದೆ ಹೋಗಿರುತ್ತಾರೆ.



ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಈಷರ್ೆ ಮನೋಭಾವದಿಂದ ಕೂಡಿರುವುದಿಲ್ಲ. ಅವರು ಪರರಿಗೆ ಸಿಗುವ ಲಾಭ, ಸತ್ಕಾರ, ಗೌರವ, ವಂದನೆ, ಪೂಜೆಗಳಿಗೆ ಆನಂದಪಡುತ್ತಾರೆ, ಅದನ್ನು ಕಂಡು ಸಂಕಟ ಪಡುವುದಿಲ್ಲ,ಮುದಿತಾ ಮನೋಭಾವದಿಂದಿರುತ್ತಾರೆ. ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಉದಯಿಸುವರು. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಹುಟ್ಟದಿದ್ದರೇ, ಮಾನವನಾಗಿ ಹುಟ್ಟಿದ್ದರೇ ಆತನು ಎಲ್ಲೇ ಹುಟ್ಟಲಿ ಪ್ರಭಾವವುಳ್ಳವನಾಗಿರುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಪ್ರಭಾವವುಳ್ಳವರಾಗಿರುತ್ತಾರೆ, ಅದಕ್ಕೆ ಕಾರಣ ಅವರು ಈಷರ್ೆ ಮನೋಭಾವದಿಂದ ಕೂಡಿರುವುದಿಲ್ಲ. ಅವರು ಪರರಿಗೆ ಸಿಗುವ ಲಾಭ, ಸತ್ಕಾರ, ಗೌರವ, ವಂದನೆ, ಪೂಜೆಗಳಿಗೆ ಆನಂದಪಡುತ್ತಾರೆ, ಅದನ್ನು ಕಂಡು ಸಂಕಟ ಪಡುವುದಿಲ್ಲ,ಮುದಿತಾ ಮನೋಭಾವದಿಂದಿರುತ್ತಾರೆ


 ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಸಮಣ, ಬ್ರಾಹ್ಮಣರಿಗೆ, ಭಿಕ್ಖುಗಳಿಗೆ ಅನ್ನಪಾನಿಯಗಳನ್ನು, ವಸ್ತ್ರಗಳನ್ನು, ಸಾರೋಟು(ವಾಹನ)ಗಳನ್ನು, ಮಾಲೆಗಳನ್ನು, ಗಂಧಗಳನ್ನು, ಲೇಪನಗಳನ್ನು, ಹಾಸಿಗೆಗಳನ್ನು, ಮನೆಗಳನ್ನು, ದೀಪಗಳನ್ನು ದಾನವಾಗಿ ನೀಡುವುದಿಲ್ಲ.  ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟುತ್ತಾರೆ. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ಎಲ್ಲೇ ಹುಟ್ಟಲಿ ಆತನು ಬಡವನಾಗಿರುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಬಡವರಾಗಿರುತ್ತಾರೆ, ಅದಕ್ಕೆ ಕಾರಣ ಅವರು ಪುರುಷರು ಸಮಣ, ಬ್ರಾಹ್ಮಣರಿಗೆ, ಭಿಕ್ಖುಗಳಿಗೆ ಅನ್ನಪಾನಿಯಗಳನ್ನು, ವಸ್ತ್ರಗಳನ್ನು, ಸಾರೋಟು(ವಾಹನ)ಗಳನ್ನು, ಮಾಲಾ, ಗಂಧಗಳನ್ನು, ಲೇಪನಗಳನ್ನು, ಹಾಸಿಗೆಗಳನ್ನು, ಮನೆಗಳನ್ನು, ದೀಪಗಳನ್ನು ದಾನವಾಗಿ ನೀಡಿರುವುದಿಲ್ಲ.  

 ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಸಮಣ, ಬ್ರಾಹ್ಮಣರಿಗೆ, ಭಿಕ್ಖುಗಳಿಗೆ ಅನ್ನಪಾನಿಯಗಳನ್ನು, ವಸ್ತ್ರಗಳನ್ನು, ಸಾರೋಟು(ವಾಹನ)ಗಳನ್ನು, ಮಾಲೆಗಳನ್ನು, ಗಂಧಗಳನ್ನು, ಲೇಪನಗಳನ್ನು, ಹಾಸಿಗೆಗಳನ್ನು, ಮನೆಗಳನ್ನು, ದೀಪಗಳನ್ನು ದಾನವಾಗಿ ನೀಡುತ್ತಾರೆ.  ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಉದಯಿಸುವರು. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ಎಲ್ಲೇ ಹುಟ್ಟಲಿ ಆತನು ಶ್ರೀಮಂತನಾಗಿರುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಶ್ರೀಮಂತರಾಗಿರುತ್ತಾರೆ, ಅದಕ್ಕೆ ಕಾರಣ ಅವರು ಸಮಣ, ಬ್ರಾಹ್ಮಣರಿಗೆ, ಭಿಕ್ಖುಗಳಿಗೆ ಅನ್ನಪಾನಿಯಗಳನ್ನು, ವಸ್ತ್ರಗಳನ್ನು, ಸಾರೋಟು(ವಾಹನ)ಗಳನ್ನು, ಮಾಲಾ, ಗಂಧಗಳನ್ನು, ಲೇಪನಗಳನ್ನು, ಹಾಸಿಗೆಗಳನ್ನು, ಮನೆಗಳನ್ನು, ದೀಪಗಳನ್ನು ದಾನವಾಗಿ ನೀಡಿರುತ್ತಾರೆ.  

 ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಹಠವಾದಿಯಾಗಿರುತ್ತಾರೆ, ಮತ್ತು ಅಹಂಕಾರಿಯಾಗಿರುತ್ತಾರೆ; ಆತನು ಗೌರವಕ್ಕೆ ಅರ್ಹರಾಗಿರುವವರಿಗೆ ಗೌರವ ನೀಡುವುದಿಲ್ಲ, ಯಾರ ಬಳಿಯಲ್ಲಿ ಎದ್ದು ನಿಂತು ಗೌರವಿಸಬೇಕೋ ಅಂತಹವರ ಬಳಿ ಎದ್ದು ನಿಂತು ಗೌರವಿಸಲಾರರು, ಯಾರಿಗೆ ಆಸನವನ್ನು ನೀಡಿ ಗೌರವಿಸಬೇಕೋ ಅಂತಹವರಿಗೆ ಆಸನವನ್ನು ನೀಡಿ ಗೌರವಿಸಲಾರನು, ಯಾರಿಗೆ ದಾರಿಯನ್ನು ಬಿಟ್ಟುಕೊಡಬೇಕೊ ಅಂತಹವರಿಗೆ ದಾರಿಯನ್ನು ಬಿಟ್ಟುಕೊಡಲಾರರು, ಮತ್ತು ಯಾರಿಗೆ ಸತ್ಕಾರ ಮಾಡಬೇಕೋ ಅಂತಹವರಿಗೆ ಸತ್ಕಾರ ಮಾಡಲಾರರು, ಯಾರಿಗೆ ಮಯರ್ಾದೆ ನೀಡಬೇಕೊ ಅಂತಹವರಿಗೆ ಮಯರ್ಾದೆ ನೀಡಲಾರರು, ಯಾರಿಗೆ ಮಾನ್ಯತೆ ನೀಡಬೇಕೊ ಅಂತಹವರಿಗೆ ಮಾನ್ಯತೆ ನೀಡಲಾರರು, ಯಾರು ಪೂಜೆಗೆ ಅರ್ಹರೊ ಅಂತಹವರಿಗೆ ಪೂಜಿಸಲಾರರು, ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟುತ್ತಾರೆ. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ನೀಚಕುಲದಲ್ಲಿ ಹುಟ್ಟುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ನೀಚಕುಲದಲ್ಲಿ ಹುಟ್ಟುತ್ತಾರೆ, ಅದಕ್ಕೆ ಕಾರಣ ಅವರು ಹಠವಾದಿಯಾಗಿದ್ದರು, ಮತ್ತು ಅಹಂಕಾರಿಯಾಗಿದ್ದರು; ಆತನು ಗೌರವಕ್ಕೆ ಅರ್ಹರಾಗಿರುವವರಿಗೆ ಗೌರವ ನೀಡಿರಲಿಲ್ಲ, ಯಾರ ಬಳಿಯಲ್ಲಿ ಎದ್ದು ನಿಂತು ಗೌರವಿಸಬೇಕೋ ಅಂತಹವರ ಬಳಿ ಎದ್ದು ನಿಂತು ಗೌರವಿಸಲಿಲ್ಲ, ಯಾರಿಗೆ ಆಸನವನ್ನು ನೀಡಿ ಗೌರವಿಸಬೇಕೋ ಅಂತಹವರಿಗೆ ಆಸನವನ್ನು ನೀಡಿ ಗೌರವಿಸಲಿಲ್ಲ, ಯಾರಿಗೆ ದಾರಿಯನ್ನು ಬಿಟ್ಟುಕೊಡಬೇಕೊ ಅಂತಹವರಿಗೆ ದಾರಿಯನ್ನು ಬಿಟ್ಟುಕೊಟ್ಟಿರಲಿಲ್ಲ, ಮತ್ತು ಯಾರಿಗೆ ಸತ್ಕಾರ ಮಾಡಬೇಕೋ ಅಂತಹವರಿಗೆ ಸತ್ಕಾರ ಮಾಡಿರಲಿಲ್ಲ, ಯಾರಿಗೆ ಮಯರ್ಾದೆ ನೀಡಬೇಕೊ ಅಂತಹವರಿಗೆ ಮಯರ್ಾದೆ ನೀಡಿರಲಿಲ್ಲ, ಯಾರಿಗೆ ಮಾನ್ಯತೆ ನೀಡಬೇಕೊ ಅಂತಹವರಿಗೆ ಮಾನ್ಯತೆ ನೀಡಿರಲಿಲ್ಲ, ಯಾರು ಪೂಜೆಗೆ ಅರ್ಹರೊ ಅಂತಹವರಿಗೆ ಪೂಜಿಸಿರಲಿಲ್ಲ.

 ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಹಠವಾದಿಯಾಗಿರುವುದಿಲ್ಲ, ಮತ್ತು ಅಹಂಕಾರಿಯಾಗಿರುವುದಿಲ್ಲ; ಆತನು ಗೌರವಕ್ಕೆ ಅರ್ಹರಾಗಿರುವವರಿಗೆ ಗೌರವ ನೀಡುತ್ತಾನೆ, ಯಾರ ಬಳಿಯಲ್ಲಿ ಎದ್ದು ನಿಂತು ಗೌರವಿಸಬೇಕೋ ಅಂತಹವರ ಬಳಿ ಎದ್ದು ನಿಂತು ಗೌರವಿಸುತ್ತಾನೆ, ಯಾರಿಗೆ ಆಸನವನ್ನು ನೀಡಿ ಗೌರವಿಸಬೇಕೋ ಅಂತಹವರಿಗೆ ಆಸನವನ್ನು ನೀಡಿ ಗೌರವಿಸುತ್ತಾನೆ, ಯಾರಿಗೆ ದಾರಿಯನ್ನು ಬಿಟ್ಟುಕೊಡಬೇಕೊ ಅಂತಹವರಿಗೆ ದಾರಿಯನ್ನು ಬಿಟ್ಟುಕೊಡುತ್ತಾನೆ, ಮತ್ತು ಯಾರಿಗೆ ಸತ್ಕಾರ ಮಾಡಬೇಕೋ ಅಂತಹವರಿಗೆ ಸತ್ಕಾರ ಮಾಡುತ್ತಾನೆ, ಯಾರಿಗೆ ಮಯರ್ಾದೆ ನೀಡಬೇಕೊ ಅಂತಹವರಿಗೆ ಮಯರ್ಾದೆ ನೀಡುತ್ತಾನೆ, ಯಾರಿಗೆ ಮಾನ್ಯತೆ ನೀಡಬೇಕೊ ಅಂತಹವರಿಗೆ ಮಾನ್ಯತೆ ನೀಡುತ್ತಾನೆ, ಯಾರು ಪೂಜೆಗೆ ಅರ್ಹರೊ ಅಂತಹವರಿಗೆ ಪೂಜಿಸುತ್ತಾನೆ, ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಉದಯಿಸುವರು. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ಮಾನವನಾಗಿ ಹುಟ್ಟಿದ್ದರೇ ,ಆತನು ಉಚ್ಚಕುಲದಲ್ಲಿ ಹುಟ್ಟುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಉಚ್ಚಕುಲದಲ್ಲಿ ಹುಟ್ಟುತ್ತಾರೆ, ಅದಕ್ಕೆ ಕಾರಣ ಅವರು ಹಠವಾದಿಯಾಗಿಲಿಲ್ಲ, ಮತ್ತು ಅಹಂಕಾರಿಯಾಗಿರಲಿಲ್ಲ; ಆತನು ಗೌರವಕ್ಕೆ ಅರ್ಹರಾಗಿರುವವರಿಗೆ ಗೌರವ ನೀಡಿರುತ್ತಾನೆ, ಯಾರ ಬಳಿಯಲ್ಲಿ ಎದ್ದು ನಿಂತು ಗೌರವಿಸಬೇಕೋ ಅಂತಹವರ ಬಳಿ ಎದ್ದು ನಿಂತು ಗೌರವಿಸಿರುತ್ತಾನೆ, ಯಾರಿಗೆ ಆಸನವನ್ನು ನೀಡಿ ಗೌರವಿಸಬೇಕೋ ಅಂತಹವರಿಗೆ ಆಸನವನ್ನು ನೀಡಿ ಗೌರವಿಸಿರುತ್ತಾನೆ, ಯಾರಿಗೆ ದಾರಿಯನ್ನು ಬಿಟ್ಟುಕೊಡಬೇಕೊ ಅಂತಹವರಿಗೆ ದಾರಿಯನ್ನು ಬಿಟ್ಟುಕೊಟ್ಟಿರುತ್ತಾನೆ, ಮತ್ತು ಯಾರಿಗೆ ಸತ್ಕಾರ ಮಾಡಬೇಕೋ ಅಂತಹವರಿಗೆ ಸತ್ಕಾರ ಮಾಡಿರುತ್ತಾನೆ, ಯಾರಿಗೆ ಮಯರ್ಾದೆ ನೀಡಬೇಕೊ ಅಂತಹವರಿಗೆ ಮಯರ್ಾದೆ ನೀಡಿರುತ್ತಾನೆ, ಯಾರಿಗೆ ಮಾನ್ಯತೆ ನೀಡಬೇಕೊ ಅಂತಹವರಿಗೆ ಮಾನ್ಯತೆ ನೀಡಿರುತ್ತಾರೆ, ಯಾರು ಪೂಜೆಗೆ ಅರ್ಹರೊ ಅಂತಹವರಿಗೆ ಪೂಜಿಸಿರುತ್ತಾನೆ.
 ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಸಮಣರ ಬಳಿಗೆ ಅಥವಾ ಬ್ರಾಹ್ಮಣರ ಬಳಿಗೆ ಅಥವಾ ಜ್ಞಾನಿಗಳ ಬಳಿಗೆ ಹೋಗಿ ಹೀಗೆ ಪ್ರಶ್ನಿಸಲಿಲ್ಲ ; ಭಂತೆ ಯಾವುದು ಕುಶಲ ? ಯಾವುದು ಅಕುಶಲ ? ಯಾವುದು ನಿಂದನೀಯ ? ಯಾವುದು ನಿಂದಾತೀತ ? ಯಾವುದು ಅಭ್ಯಾಸಿಸಬೇಕು(ವಿಕಸಿಸಬೇಕು) ? ಯಾವುದು ಅಭ್ಯಾಸಿಸಬಾರದು?(ವಿಕಸಿಸಬಾರದು) ? ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ನೋವನ್ನು ಮತ್ತು ದುಃಖವನ್ನು ನೀಡುತ್ತದೆ ?.ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ಸುಖವನ್ನು ಹಾಗೂ ಕ್ಷೇಮವನ್ನು ನೀಡುತ್ತದೆ.? ಈ ಬಗೆಯ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟುತ್ತಾರೆ. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ದಡ್ಡನಾಗಿ(ದುಪ್ರಜ್ಞನಾಗಿ) ಹುಟ್ಟುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಮತ್ತು ಪುರುಷರು ದುಪ್ರ್ರಜ್ಙನಾಗಿ ಹುಟ್ಟುತ್ತಾರೆ. ಇದಕ್ಕೆ ಕಾರಣ ಅವರು ಜ್ಞಾನಿಗಳ ಬಳಿಗೆ ಅಂತಹ ಸಮಣ ಬ್ರಾಹ್ಮಣರ ಬಳಿಗೆ ಹೋಗಿ ಹೀಗೆ ಪ್ರಶ್ನಿಸಿರಲಿಲ್ಲ ; ಭಂತೆ ಯಾವುದು ಕುಶಲ ? ಯಾವುದು ಅಕುಶಲ ? ಯಾವುದು ನಿಂದನೀಯ ? ಯಾವುದು ನಿಂದಾತೀತ ? ಯಾವುದು ಅಭ್ಯಾಸಿಸಬೇಕು(ವಿಕಸಿಸಬೇಕು) ? ಯಾವುದು ಅಭ್ಯಾಸಿಸಬಾರದು?(ವಿಕಸಿಸಬಾರದು) ? ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ನೋವನ್ನು ಮತ್ತು ದುಃಖವನ್ನು ನೀಡುತ್ತದೆ ?.ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ಸುಖವನ್ನು ಹಾಗೂ ಕ್ಷೇಮವನ್ನು ನೀಡುತ್ತದೆ.? ಎಂದು.

ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಸಮಣರ ಬಳಿಗೆ ಅಥವಾ ಬ್ರಾಹ್ಮಣರ ಬಳಿಗೆ ಅಥವಾ ಜ್ಞಾನಿಗಳ ಬಳಿಗೆ ಹೋಗಿ ಹೀಗೆ ಪ್ರಶ್ನಿಸುತ್ತಾರೆ ; 
ಭಂತೆ ಯಾವುದು ಕುಶಲ ? 
ಯಾವುದು ಅಕುಶಲ ?
 ಯಾವುದು ನಿಂದನೀಯ ? 
ಯಾವುದು ನಿಂದಾತೀತ ? 
ಯಾವುದು ಅಭ್ಯಾಸಿಸಬೇಕು(ವಿಕಸಿಸಬೇಕು) ? 
ಯಾವುದು ಅಭ್ಯಾಸಿಸಬಾರದು?(ವಿಕಸಿಸಬಾರದು) ?
 ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ನೋವನ್ನು ಮತ್ತು ದುಃಖವನ್ನು ನೀಡುತ್ತದೆ ?.
ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ಸುಖವನ್ನು ಹಾಗೂ ಕ್ಷೇಮವನ್ನು ನೀಡುತ್ತದೆ.? ಈ ಬಗೆಯ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಉದಯಿಸುವರು. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ , ಆತನು ಮಹಾಪ್ರಾಜ್ಞನಾಗಿ (ಬುದ್ಧಿವಂತನಾಗಿ) ಹುಟ್ಟುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಮತ್ತು ಪುರುಷರು ಮಹಾಪ್ರಜ್ಞಾರಾಗಿ ಹುಟ್ಟುತ್ತಾರೆ. ಇದಕ್ಕೆ ಕಾರಣ ಅವರು ಜ್ಞಾನಿಗಳ ಬಳಿಗೆ ಅಂತಹ ಸಮಣ ಬ್ರಾಹ್ಮಣರ ಬಳಿಗೆ ಹೋಗಿ ಹೀಗೆ ಪ್ರಶ್ನಿಸಿದ್ದರು ; 
ಭಂತೆ ಯಾವುದು ಕುಶಲ ? 
ಯಾವುದು ಅಕುಶಲ ? 
ಯಾವುದು ನಿಂದನೀಯ ? 
ಯಾವುದು ನಿಂದಾತೀತ ? 
ಯಾವುದು ಅಭ್ಯಾಸಿಸಬೇಕು(ವಿಕಸಿಸಬೇಕು) ? 
ಯಾವುದು ಅಭ್ಯಾಸಿಸಬಾರದು?(ವಿಕಸಿಸಬಾರದು) ? 
ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ನೋವನ್ನು ಮತ್ತು ದುಃಖವನ್ನು ನೀಡುತ್ತದೆ ?.
ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ಸುಖವನ್ನು ಹಾಗೂ ಕ್ಷೇಮವನ್ನು ನೀಡುತ್ತದೆ.? ಎಂದು.

ಹೀಗೆ ಮಾಣವನೇ ಈ ಬಗೆಯಲ್ಲಿ ಜನರು ಜೀವಿಸಿ ಹೀಗಾಗಿರುವರು.  ಅಲ್ಪಯುಷ್ಯನ ಹಾದಿಯು ಜನರನ್ನು ಅಲ್ಪಯುಷ್ಯನನ್ನಾಗಿಸುತ್ತದೆ. ದೀಘರ್ಾಯುಸ್ಸಿನ ಹಾದಿಯು ಜನರನ್ನು ದೀಘರ್ಾಯುಸ್ಸನ್ನಾಗಿ ಮಾಡುತ್ತದೆ. ರೋಗಗಳ ಹಾದಿಯಲ್ಲಿ ಹೋಗುವವರು ರೋಗಿಗಳಾಗುತ್ತಾರೆ, ಆರೋಗ್ಯದ ಹಾದಿಯು ಜನರನ್ನು ಆರೋಗ್ಯನನ್ನಾಗಿಸಿದೆ, ಈ ಬಗೆಯ ಹಾದಿಯಲ್ಲಿ ಜೀವಿಸಿ ಕುರೂಪಿಗಳಾಗಿರುವರು, ಈ ಬಗೆಯ ಹಾದಿಯಲ್ಲಿ ಜೀವಿಸಿದಾಗ ಸುರೂಪಿಗಳಾಗುವರು. ಈ ಬಗೆಯ ಹಾದಿಯಲ್ಲಿ ಸಾಗಿದಾಗ ಪ್ರಭಾವರಹಿತರು ಆಗುವರು. ಈ ಬಗೆಯ ಹಾದಿಯಲ್ಲಿ ಜೀವಿಸಿದಾಗ ಪ್ರಭಾವಶಾಲಿಗಳಾಗುವರು. ಬಡತನದ ಹಾದಿಯು ಜನರನ್ನು ಬಡವರನ್ನಾಗಿಯು, ಸಿರಿತನದ ಹಾದಿಯು ಜನರನ್ನು ಸಿರಿವಂತರನ್ನಾಗಿಯು ಹಾಗೆಯೇ ನೀಚಕುಲದ ಹಾದಿಯು ಜನರನ್ನು ನೀಚರನ್ನಾಗಿಯು, ಉಚ್ಚಕುಲದ ಹಾದಿಯು ಜನರನ್ನು ಉಚ್ಚರನ್ನಾಗಿಯು ಮತ್ತು ದಡ್ಡತನದ ಹಾದಿಯು ಜನರನ್ನು ದಡ್ಡರನ್ನಾಗಿಯು ಮತ್ತು ಮಹಾಪ್ರಜ್ಞರ ಹಾದಿಯು ಜನರನ್ನು ಮಹಪ್ರಜ್ಞಾರನ್ನಾಗಿಯು ಮಾಡುತ್ತದೆ.

ಜೀವಿಗಳು ತಮ್ಮ ಕಮ್ಮಗಳಿಗೆ ತಾವೆ ಒಡೆಯರು
ತಮ್ಮ ಕಮ್ಮಕ್ಕೆ ತಾವೇ ಉತ್ತರಾಧಿಕಾರಿಗಳು
ತಮ್ಮ ಕಮ್ಮಗಳಿಂದಲೇ ಅವರು ಜನಿಸುವರು
ಕಮ್ಮಗಳೇ ಬಂಧುವು
ಕಮ್ಮಗಳೆ ಅವರ ಶರಣು
ಕಮ್ಮದಿಂದಲೇ ಹೀನ ಹಾಗೂ ಮಹಾನ್ ಆಗುವರು

ಯಾವಗ ಭಗವಾನರು ಹೀಗೆ ನುಡಿದರೊ ಆಗ ತೊದೆಯ್ಯನ ಮಗನಾದ ಸುಭನು ಭಗವಾನರಿಗೆ ಹೀಗೆ ನುಡಿದನು. : ಭವ್ಯವಾಗಿ ನುಡಿದಿರಿ ಗೋತಮರೇ ! ಗೋತಮರೇ ಅತುತ್ತಮವಾಗಿ ನುಡಿದಿರಿ! 
ಧಮ್ಮವು ಭಗವಾನರಿಂದ ಅನೇಕ ವಿಧದಲ್ಲಿ ಸ್ಪಷ್ಟಿಕರಣಗೊಂಡಿತು. 
ಹೇಗೆಂದರೇ ತಲೆಕೆಳಕಾಗಿರುವುದನ್ನು ಸರಿಯಾಗಿ ನಿಲ್ಲಿಸಿದಂತೆ, 
ಅಡಗಿರುವುದನ್ನು ಅನಾವರಣಗೊಳಿಸಿದಂತೆ, 
ದಾರಿ ತಪ್ಪಿದವನಿಗೆ ಮಾರ್ಗ ತೊರಿಸಿದಂತೆ, 
ಕತ್ತಲೆಯಲ್ಲಿರುವವನಿಗೆ ಪ್ರದೀಪವನ್ನು ಹಿಡಿದು ರೂಪಗಳನ್ನು ತೋರಿಸಿದಂತೆ, 

ಭಗವಾನರು ಅನೇಕ ರೀತಿಯಲ್ಲಿ ಧಮ್ಮವನ್ನು ಸ್ಪಷ್ಟಿಕರಿಸಿದ್ದಾರೆ, 
ನಾನು ಭಗವಾನ ಗೋತಮರ ಶರಣು ಹೋಗುವೆನು, 
ಅವರ ಅಧ್ಭುತವಾದ ಧಮ್ಮಕ್ಕೆ ಶರಣು ಹೋಗುವೆನು, 
ಅವರ ಅಸಮಾನ ಸಂಘಕ್ಕೂ ಶರಣು ಹೋಗುವೆನು.
ಭಗವಾನರು ನನಗೆ ಅವರಲ್ಲಿ ಜೀವನ ಪರ್ಯಂತ ಶರಣು ಹೋದಂತಹ ಉಪಾಸಕನೆಂದು ಪರಿಗಣಿಸಲಿ


ಇಲ್ಲಿಗೆ ಕಮ್ಮವಿಪಾಕದ ವಿಶ್ಲೇಷಣೆಯ ಚಿಕ್ಕ ಸುತ್ತವು ಸಮಪ್ತಿಯಾಯಿತು.


  

Tuesday, 24 March 2020

ಅಸ್ಸಲಾಯನ ಸುತ್ತ Assalayana sutta in kannada

  ಅಸ್ಸಲಾಯನ ಸುತ್ತ(ಸಂಕ್ಷಿಪ್ತ)



ಒಮ್ಮೆ ಬ್ರಾಹ್ಮಣರು ಅಸ್ಸಲಾಯನ ಎಂಬ ಬ್ರಾಹ್ಮಣ ಯುವಕನ ನಾಯಕತ್ವದಲ್ಲಿ ಬಂದು ಹೀಗೆ ಕೇಳಿದರು:

“ಭಗವಾನ್ ಬ್ರಾಹ್ಮಣರು ಹೀಗೆ ಹೇಳುತ್ತಾರೆ: ‘ಬ್ರಾಹ್ಮಣರದ್ದೇ ಶ್ರೇಷ್ಠ ಜಾತಿ, ಬೇರೆ ಜಾತಿಗಳು ತುಚ್ಛವಾದುದು. ಬ್ರಾಹ್ಮಣರದ್ದೇ ಸುವರ್ಣದ ಜಾತಿ, ಪರರದ್ದು ದುರ್ವಣವಾಗಿದ್ದು, ಬ್ರಾಹ್ಮಣರು ಮಾತ್ರ ಪರಿಶುದ್ಧರು, ಬೇರೆಯವರಲ್ಲ, ಬ್ರಾಹ್ಮಣರು ಮಾತ್ರ ಬ್ರಹ್ಮನಿಂದ ಹುಟ್ಟಿದವರು. ಆತನ ಮುಖದಿಂದ ಜನಿಸಿದವರು, ಬ್ರಹ್ಮನ ವಂಶಸ್ಥರು ಆಗಿದ್ದಾರೆ.”

ಆಗ ಭಗವಾನರು ಈ ಎಲ್ಲಾ ಕಾರಣಗಳನ್ನು ನೀಡಿ ಅವರ ವಾದಗಳನ್ನು ಭಂಗ ಮಾಡುತ್ತಾರೆ.

1. ಬ್ರಾಹ್ಮಣರ ಪತ್ನಿಯರು ಸಹಾ ಎಲ್ಲರಂತೆಯೇ ಜನ್ಮ ನೀಡುತ್ತಾರೆ.

2. ಪಾಶ್ಚಿಮಾತ್ಯ ರಾಷ್ಟ್ರಗಳಾದ ಯೋನ ಮತ್ತು ಕಾಂಬೋಜಗಳಲ್ಲಿ 2 ಜಾತಿಯಿದೆ. ಯಜಮಾನ ಮತ್ತು ಸೇವಕ ಅವರಲ್ಲಿಯು ಅದು ನಿತ್ಯವಲ್ಲ, ಸ್ವಾಮಿಯು ಸೇವಕನಾಗಬಹುದು, ಸೇವಕನು ಸ್ವಾಮಿಯಾಗಬಹುದು.

3. ಯಾರೇ ಪಾಪ ಮಾಡಿದರೂ ಸಹಾ ದುರ್ಗತಿಗೆ ಬೀಳುವರು, ಇದಕ್ಕೆ ಯಾರೂ ಹೊರತಲ್ಲ.

4. ಪ್ರತಿಯೊಬ್ಬರು ಪುಣ್ಯ ಆಚರಿಸಬಹುದು, ಮೈತ್ರಿ ಧ್ಯಾನಗಳಲ್ಲಿ ಪ್ರವೀಣರಾಗಬಹುದು.

5. ಪ್ರತಿಯೊಬ್ಬರು ಸ್ನಾನ ಮಾಡಿ ಶುದ್ಧರಾಗಬಹುದು.

6. ಪ್ರತಿಯೊಬ್ಬರು ಹಚ್ಚಿದರೂ ಬೆಂಕಿ ಬರುವುದು, ಅದರಿಂದ ಅದರ ಪ್ರಯೋಜನ ಪಡೆಯಬಹುದು.

“ಹೀಗಿರುವಾಗ ಬ್ರಾಹ್ಮಣರೇ ಶ್ರೇಷ್ಠರೆನ್ನುವುದಕ್ಕೆ ಆಧಾರವೇನು?” ಆದರೂ ಸಹಾ ಅವರು ಪಟ್ಟು ಹಿಡಿಯುತ್ತಾರೆ.

ಆಗ ಭಗವಾನರು ಅವರನ್ನು ಬೇರೊಂದು ಹಾದಿಯಲ್ಲಿ ಚರ್ಚೆಗೆ ಆರಂಭಿಸುತ್ತಾರೆ: “ಅಸ್ಸಾಲಾಯನ ಇದರ ಬಗ್ಗೆ ಹೇಗೆ ಯೋಚಿಸುವೆ? ಇಬ್ಬರು ಬ್ರಾಹ್ಮಣ ಯುವಕರಿರುತ್ತಾರೆ, ಒಬ್ಬ ವೇದ ಜ್ಞಾನಗಳಲ್ಲಿ ಪರಿಣಿತ ಮತ್ತೊಬ್ಬ ಅವಿದ್ಯಾವಂತ. ಇಲ್ಲಿ ಯಾರಿಗೆ ಹೆಚ್ಚು ಗೌರವ, ಆತಿಥ್ಯ ನೀಡುತ್ತಾರೆ.”

“ವಿದ್ಯಾವಂತನಿಗೆ, ಅವಿದ್ಯಾವಂತನಿಗಲ್ಲ.”

“ಅಸ್ಸಲಾಯನ, ಈಗ ಇಬ್ಬರು ಬ್ರಾಹ್ಮಣರಿರುತ್ತಾರೆ, ಒಬ್ಬ ವೇದ ಜ್ಞಾನದಲ್ಲಿ ಪರಿಣಿತ ಆದರೆ ದುರಾಚಾರಿ, ದುಶ್ಶೀಲನಾಗಿರುತ್ತಾನೆ ಮತ್ತು ಇನ್ನೊಬ್ಬ ಅವಿದ್ಯಾವಂತ, ಆದರೆ ಸುಶೀಲ ಚಾರಿತ್ರ್ಯವಂತನಾಗಿರುತ್ತಾನೆ. ಇವರಲ್ಲಿ ಯಾರಿಗೆ ಗೌರವ ಆತಿಥ್ಯ ಸಿಗುತ್ತದೆ?” “ಅವಿದ್ಯಾವಂತನಾಗಿದ್ದರೂ ಶೀಲವಂತನಾದವನಿಗೆ ಗೌರವ ಆತಿಥ್ಯ ಸಿಗುತ್ತದೆ.”

“ಓ ಅಸ್ಸಲಾಯನ ಮೊದಲು ಜನ್ಮದ ಬಗ್ಗೆ ಮಾತನಾಡಿದೆವು, ನಂತರ ವೇದಜ್ಞಾನ (ಮಂತ್ರಗಳ) ಬಗ್ಗೆ ಮಾತನಾಡಿದೆವು, ಕೊನೆಗೆ ಪರಿಶುದ್ಧತೆಯಿಂದಲೇ (ಶೀಲದಿಂದ) ಗೌರವ ಆತಿಥ್ಯ ಸಿಗುತ್ತದೆ ಎಂದು ನೀವು ಒಪ್ಪಿರುವಿರಿ. ನಾನು ಸಹಾ ಅದನ್ನೇ ಬೋಧಿಸುತ್ತಿರುವೆ. ನಾಲ್ಕು ವರ್ಣಗಳಲ್ಲಿ ಶೀಲವಂತರೇ ಗೌರವಕ್ಕೆ ಪಾತ್ರರು. ಯಾರು ಸಹಾ ಜನ್ಮದಿಂದ ಶ್ರೇಷ್ಠನಾಗುವುದಿಲ್ಲ, ಕರ‍್ಮದಿಂದ (ಶೀಲ)ದಿಂದ ಶ್ರೇಷ್ಠನಾಗುತ್ತಾನೆ.”

ಇದನ್ನು ಕೇಳಿದ ಅಸ್ಸಲಾಯನು ತಲೆತಗ್ಗಿಸಿದನು.

Friday, 29 November 2019

ಅಭಾಸಿತ ಸುತ್ತ abhasita sutta

ಅಭಾಸಿತ ಸುತ್ತ


  ಭಿಕ್ಖುಗಳೇ, ಇವೆರಡು ತಥಾಗತರಿಗೆ ಮಾಡುವ ಅಪನಿಂದೆಗಳಾಗಿವೆ
ಯಾವುವವು ಎರಡು ?

"ತಥಾಗತರು ನುಡಿಯದಿದ್ದರೂ ಹೀಗೆ  ನುಡಿದಿದ್ದಾರೆ ಎಂದು ನಿರೂಪಿಸುವುದು. &
ತಥಾಗತರೂ ನುಡಿದಿದ್ದರೂ ಹೀಗೆ ನುಡಿದಿಲ್ಲ ಎಂದು ನಿರೂಪಿಸುವುದು.

ಹೀಗೆ ತಥಾಗತರಿಗೆ 2 ರೀತಿಯಲ್ಲಿ ಅಪನಿಂದೆ ಮಾಡುವರು.

Tuesday, 26 November 2019

ಮಹಾಮೊಗ್ಗಲಾನ ಸುತ್ತ (ಪಾಚಾಲ ಸುತ್ತ/ಚಾಪಾಲ ಸುತ್ತ)

ಮಹಾಮೊಗ್ಗಲಾನ ಸುತ್ತ (ಪಾಚಾಲ ಸುತ್ತ)

ಮಹಾಮೊಗ್ಗಲಾನರವರು ಮಗಧದ ಸಮೀಪದ ಕಲ್ಲವಾಲಪುತ್ತ ಎಂಬ ಹಳ್ಳಿಯಲ್ಲಿ ನೆಲೆಸಿದ್ದರು. ಪಬ್ಬಜ್ಜ ಸ್ವೀಕಾರದ ಏಳು ದಿನಕ್ಕೆ ಕಾಲಿಟ್ಟರು. ಸದಾಕಾಲ ಧ್ಯಾನದಲ್ಲಿ ತೊಡಗಿದರು. ಆದರೂ ಅವರು ಥೀನಮಿದ್ಧ (ಆಲಸ್ಯ, ಜಡತೆ, ನಿದ್ದೆ) ಯಿಂದಾಗಿ ತುಸು ತ್ರಾಸಪಟ್ಟರು.
   ಮೊಗ್ಗಲಾನರವರು ತಮ್ಮ ಧ್ಯಾನ ಸಾಧನೆಗೆ ಮಗಧದ ಸಮೀಪದ ಕಲ್ಲವಲಪುತ್ತ ಎಂಬ ಹಳ್ಳಿಯ ಪಕ್ಕದ ಅರಣ್ಯವನ್ನು ಆಯ್ಕೆ ಮಾಡಿದರು, ಅಲ್ಲಿ ಅವರು ಪದ್ಮಾಸನದಲ್ಲಿ ಹಾಗೂ ನಡಿಗೆಯ ಭಂಗಿಯಲ್ಲಿ ಧ್ಯಾನವನ್ನು ಆರಂಭಿಸಿದರು. ಅದರೂ ಸಹಾ ಅವರು ತೂಗಡಿಕೆಯನ್ನು ಗೆಲ್ಲಲಾರೆದೆ ಹೋದರು.  ಅವರಿಗೆ ನಿದ್ರಿಸಲು ಇಷ್ಟವಿರಲಿಲ್ಲ ಅದರೂ ತಮ್ಮ ಬೆನ್ನು ಹಾಗೂ ಕತ್ತನ್ನು ನೇರವಾಗಿಡಲು ಅಸಮರ್ಥರಾದರು. ಅದರೂ ತಮ್ಮ ಇಚ್ಚಾಶಕ್ತಿಯಿಂದ ಕಣ್ಣುಗಳನ್ನು ಅಗಲವಾಗಿಸಿ ನಿದ್ರೆ ಗೆಲ್ಲಲು ಯತ್ನಿಸಿದರು. ಅದರೂ ಯಶಸ್ವಿಯಾಗದೆ ಹೋಯಿತು, ಅಂದು ಅವರು ಸಂಘಕ್ಕೆ ಸೇರಿ 7ನೆಯ ದಿನವಾಗಿತ್ತು.  ಭಗವಾನರಿಗೆ ಇವರ ಕಷ್ಟಗಳು ಅರ್ಥವಾಗಿ ಅವರ ಮುಂದೆ ತೇಜೋಮಯವಾಗಿ ಪ್ರತ್ಯಕ್ಷವಾದರು. ಹಾಗೂ ಹೀಗೆ ಕೇಳಿದರು.
"ಮೊಗ್ಗಲಾನ ತೂಗಡಿಸುತ್ತಿರುವೆಯಾ.? ಮೊಗ್ಗಲಾನ ತೂಗಡಿಸುತ್ತಿರುವೆಯಾ (ಮಂಪರು)"
"ಹೌದು ಭಗವಾನ್"
"ಸರಿ ಮೊಗ್ಗಲಾನ , ಯಾವಾಗಲಾದರೂ ನಿನಗೆ ನಿದ್ದೆ ಅಥವಾ ತೂಗಡಿಕೆ ಆವರಿಸಿದಾಗ ಆ ಯೋಚನೆ ಅಥವಾ ಆ ಗ್ರಹಿೆಕೆಯೆಡೆಗೆ ಗಮನ ಹರಿಸದಿರು, ಹಾಗೆ ಆ ಗ್ರಹಿಕೆಯೆಡೆ ಗಮನವನ್ನು ಹರಿಸಿದಾಗ ತೂಗಡಿಕೆ ದೂರವಾಗುವುದು."
"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ಆಗ ನೀನೂ ಹಿಂದೆ ಆಲಿಸಿರುವ ಬೋಧನೆಯನ್ನು (ಧಮ್ಮ) ನೆನಪಿಸಿಕೋ ಹಾಗೂ ಅವನ್ನು ವಿಶ್ಲೇಶಿಸಿಕೊ.........."
"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ನೀನೂ ಆಲಿಸಿದ್ದ ಧಮ್ಮವನ್ನು ಪೂರ್ಣ ವಿವರವಾಗಿ ಪುನಾರಾವತರ್ಿತಗೊಳಿಸಿಕೊ.............."
"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ನಿನ್ನ ಕಿವಿಗಳ ಹಾಲೆಗಳನ್ನು ಎಳೆದಾಡು ಮತ್ತು ನಿನ್ನ ಅಂಗಗಳನ್ನು ಉಜ್ಜಲು ಆರಂಭಿಸು,............"
"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ನೀನು ಆಸನದಿಂದ ಎದ್ದೇಳು ಹಾಗೂ ಕಣ್ಣುಗಳನ್ನು ನೀರಿನಿಂದ ತೊಳೆದುಕೊ, ನಂತರ ಎಲ್ಲಾ ದಿಕ್ಕುಗಳ ಕಡೆಗೆ ವೀಕ್ಷಿಸಲು ಆರಂಭಿಸು,   ನಕ್ಷತ್ರಗಳನ್ನು ಹಾಗೂ ನಕ್ಷತ್ರಗಳ ಸಮೂಹ ರಾಶಿಗಳನ್ನು ನೋಡಲು ಆರಂಭಿಸು.........."
"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ಬೆಳಕಿನ ಸಂಜ್ಞೆಯತ್ತ ಗಮನಹರಿಸು, ಹಗಲಿನ ಸಂಜ್ಞೆಯತ್ತ ಗಮನಹರಿಸು, ಅದನ್ನು ರಾತ್ರಿಯಲ್ಲಿ ಅಭ್ಯಾಸಿಸು ಅಂದರೆ ರಾತ್ರಿಯನ್ನು ಹಗಲಿನಂತೆ ಹಾಗೂ ಹಗಲನ್ನು ರಾತ್ರಿಯಂತೆ ಗ್ರಹಿಸುವುದು., ಹೀಗಾದಾಗ ಮನಸ್ಸು ಸ್ವಚ್ಚವಾಗಿ ಜಡರಹಿತವಾಗುವುದು. ಹೀಗೆ ಮನಸ್ಸನ್ನು ಬೆಳಕಿನಂತೆ ಪೂರ್ಣವಾಗಿ ಪ್ರಕಾಶಿಸು........"
"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ಆಗ ಇಂದ್ರಿಯಗಳನ್ನು ಅಂತಮರ್ುಖಗೊಳಿಸಿ,  ಮನಸ್ಸನ್ನು ಬಾಹ್ಯಕ್ಕೆ ದಾರಿತಪ್ಪದಂತೆ ಜಾಗಾರೂಕತೆವಹಿಸಿ, ನಡಿಗೆಯ ಧ್ಯಾನವನ್ನು ಆರಂಭಿಸು, ನಡಿಗೆಯಲ್ಲಿಯೇ ಗಮನವಹಿಸು. ಹಾಗೂ ಹಿಂದೆಯಿರುವುದನ್ನು ಕಲ್ಪಿಸಿಕೊ, ಹಾಗೂ ಹಿಂದೆಯಿದ್ದಾಗ ಮುಂದೆಯಿರುವುದನ್ನು ಕಲ್ಪಿಸಿಕೋ........"
"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ನಿದ್ದೆಯು ಈಗ ಅವಶ್ಯಕವೆಂದು ತಿಳಿದು ಆಗ ಜಾಗಾರೂಕತೆಯಿಂದ, ಸ್ಪಷ್ಟ ಅರಿವಿನಿಂದ, ಸಿಂಹಶಯ್ಯೆಯ ಭಂಗಿಯಲ್ಲಿ ಬಲಮುಖವಾಗಿ ಮಲಗಿ,  ಬಲಗಾಲ ಮೇಲೆ ಎಡಗಾಲನ್ನು ಇಟ್ಟು ನೇರವಾಗಿ ಮಲಗಿ, ಮತ್ತೆ ಮೇಲೆಳುವ ಸಮಯವನ್ನು ನಿಗಧಿತಪಡಿಸಿ, ಅಲ್ಪನಿದ್ದೆಯಲ್ಲಿ ತೃಪ್ತಿತಾಳಿ ನಂತರ ಎಚ್ಚರಗೊಂಡಾಗ ಜಾಗರೂಕತೆ ತಾಳಿ ಈ ಬಗೆಯ ಮನೋಭಾವ ತಾಳುವುದು ನಾನು ಅತಿನಿದ್ದೆಯಲ್ಲಿ ಅಥವಾ ಅತಿವಿಶ್ರಾಂತಿಯ ಸುಖದಲ್ಲಿ ತಲ್ಲೀನಲಾಗಿಲ್ಲ ಹಾಗೂ ತಲ್ಲೀನವಾಗುವುದಿಲ್ಲ. ಹೀಗೆ ಮೊಗ್ಗಾಲಾನ ನೀನು ಸುಶಿಕ್ಷಣಗೊಳಿಸಿಕೊಳ್ಳಬೇಕು."
"ನಂತರ ಮೊಗ್ಗಲಾನ ನೀನು ಹೀಗೆ ಸುಶಿಕ್ಷಣಗೊಳಿಸಿಕೊಳ್ಳಬೇಕು ಹೇಗೆಂದರೆ ನಾನು ನನ್ನ ಅಹಂಕಾರ ಉದಯಿಸುವ ಅಥವಾ ವೃದ್ಧಿಯಾಗುವಂತಹ ಕುಟುಂಬಗಳಿಗೆ ಆಹಾರಕ್ಕೆ ಹೋಗಲಾರೆನು ಏಕೆಂದರೆ ಹಲವಾರು ಪ್ರಾಪಂಚಿಕ ಕಾರ್ಯಗಳಲ್ಲಿ ತೊಡಗಿರುವ ಕುಟುಂಬಗಳಿಗೆ ಹೋದಾಗ ಅವರು  ಗಮನಹರಿಸದೆ ಹೋಗಬಹುದು ಆಗ ಇವರು ನನಗೆ ಇಷ್ಟ ಪಡುತ್ತಿಲ್ಲ, ಏನೂ ದೊರೆಯದೆ ಹೋಯಿತು, ಎಂದು ಲಜ್ಜೆಗೆ ಒಳಗಾಗಿ, ಕ್ಷೊಭೆಗೆ ಒಳಗಾಗಿ, ಅನಿಯಂತ್ರಿತನಾಗಿ, ಸಮಾಧಿಗೆ ದೂರನಾಗುತ್ತಾನೆ. "
"ನಂತರ ಮೊಗ್ಗಲಾನ ನೀನು ಹೀಗೆ ಸುಶಿಕ್ಷಣಗೊಳಿಸಿಕೊಳ್ಳಬೇಕು, ನಾನು ಮುಖಾಮುಖಿ ಅಥವಾ ವಿವಾದಾತ್ಮಕ ವಾದಗಳಲ್ಲಿ ತೊಡಗುವುದಿಲ್ಲ ಏಕೆಂದರೆ ಆಗ ನಾನಾ ಚಚರ್ೆ ವಾದ ವಿವಾದಗಳು ಉಂಟಾಗಿ ಕ್ಷೊಭೆಗೆ ಒಳಗಾಗಿ, ಅನಿಯಂತ್ರಿತನಾಗಿ, ಸಮಾಧಿಗೆ ದೂರನಾಗುತ್ತಾನೆ."
"ಮತ್ತೆ ಮೊಗ್ಗಾಲಾನ ನಾನು ಯಾವುದೇ ಬಗೆಯ ಸಂಸರ್ಗ(ಸ್ನೇಹ)ವನ್ನು ಪ್ರಶಂಸಿಸಲಾರೆನು, ಹಾಗೆಯೇ ನಾನು ಯಾವುದೇ ಬಗೆಯ ಸಂಸರ್ಗ(ಸ್ನೇಹ)ವನ್ನು ಅಪ್ರಶಂಸಿಸಲಾರೆನು ಹಾಗೆಯೇ ಗೃಹಸ್ಥರೊಡನೆಯಾಗಲಿ ಅಥವಾ ಪಬ್ಬಜಿತರೊಡನೆಯಾಗಲಿ ಯಾವುದೇ ಬಗೆಯ ಸಂಸರ್ಗ(ಸ್ನೇಹ)ವನ್ನು ಪ್ರಶಂಸಿಸಲಾರೆನು, ಹಾಗೂ ಯಾವ ಸ್ಥಳಗಳು ನಿಶಬ್ದದಿಂದ ಕೂಡಿವೆಯೋ, ಶಬ್ಧರಹಿತವೂ, ಹಾಗೂ ನಿರ್ಜನ ಪ್ರದೇಶಗಳೋ ಅಂತಹ ಧ್ಯಾನಯೋಗ್ಯ ಪ್ರದೇಶಗಳನ್ನು ನಾನು ಪ್ರಶಂಸಿಸುವೆನು".
ಹೀಗೆ ಭಗವಾನರು ನುಡಿದಾಗ ಮೊಗ್ಗಲಾನರು ಹೀಗೆ ಪ್ರಶ್ನಿಸಿದರು : "ಭಗವಾನ್ ಸಂಕ್ಷಿಪ್ತವಾಗಿ ತಿಳಿಸಿ, ಯಾವ ರೀತಿಯಲ್ಲಿ ಒಬ್ಬನು ತೃಷ್ಣೆಯಿಂದ ಮುಕ್ತನಾಗುವನು, ಪೂರ್ಣವಾಗಿ ಬಂಧನಮುಕ್ತನಾಗುವನು, ಅತ್ಯಂತ ನಿಷ್ಟನು ,ಬ್ರಹ್ಮಚರ್ಯೆಯ ಜೀವನ ಪೂರ್ಣಗೊಳಿಸುವನು, ಅಂತಿಮ ಹಂತವನ್ನು ಪಡೆಯುವನು, ಹಾಗೂ ದೇವ ಮನುಷ್ಯರಲ್ಲಿ ಶ್ರೇಷ್ಟನಾಗುವನು."
"ಇಲ್ಲಿ ಮೊಗ್ಗಾಲಾನ, ಒಬ್ಬನು ಹೀಗೆ ಕೇಳುತ್ತಾನೆ ಏನೆಂದರೆ ಎಲ್ಲಾ ಆಗುಹೋಗುಗಳು ಅಂಟಿಕೊಳ್ಳುವಿಕೆಗೆ ಅರ್ಹವಲ್ಲ ಆಗ ಆತನು ಎಲ್ಲಾ ಬಗೆಯ ಸ್ಥಿತಿಗಳನ್ನು ಅರಿಯುತ್ತಾನೆ, ಯಾವುದೇ ಅನುಭವಗಳಾಗಲಿ ಅದರಲ್ಲಿ ಕ್ಷಣಿಕತೆಯನ್ನು ಅರಿತು, ವಿರಾಗ ತಾಳುತ್ತಾನೆ, ನಿರೋಧ ತಾಳುತ್ತಾನೆ,  ತ್ಯೆಜಿಸುವಿಕೆ ತಾಳುತ್ತಾನೆ, ಹೀಗೆ ಲೋಕದ ಯಾವುದಕ್ಕೂ ಅಂಟಲಾರನು, ಹೀಗೆ ಯಾವುದಕ್ಕೂ ಅಂಟದೆ ತಳಮಳಗೊಳ್ಳಲಾರನು, ತಳಮಳಗೊಳ್ಳದೆ ಆರತರ್ಯದಲ್ಲೇ ಸರಿಯಾಗಿ ಮುಕ್ತನಾಗುತ್ತಾನೆ, ಆಗ ಆತನಲ್ಲಿ ವಿಮುಕ್ತಿ ಜ್ಞಾನವು ಉಂಟಾಗುವುದು, ಜನ್ಮವು ಅಂತ್ಯವಾಯಿತು,  ಬ್ರಹ್ಮಚರ್ಯೆಯ ಜೀವನ ಪೂರ್ಣವಾಯಿತು, ಮಾಡಬೇಕಾದುದೆಲ್ಲಾ ಮಾಡಿಯಾಯಿತು, ಈ ಲೋಕಗಳಿಗೆ ಇನ್ನೇನೂ ಉಳಿದಿಲ್ಲ."
"ಈ ರೀತಿಯಾಗಿ ಮೊಗ್ಗಾಲಾನ ಸಂಕ್ಷಿಪ್ತವಾಗಿ  ಒಬ್ಬನು ತೃಷ್ಣೆಯಿಂದ ಮುಕ್ತನಾಗುವನು, ಪೂರ್ಣವಾಗಿ ಬಂಧನಮುಕ್ತನಾಗುವನು, ಅತ್ಯಂತ ನಿಷ್ಟನು ,ಬ್ರಹ್ಮಚರ್ಯೆಯ ಜೀವನ ಪೂರ್ಣಗೊಳಿಸುವನು, ಅಂತಿಮ ಹಂತವನ್ನು ಪಡೆಯುವನು, ಹಾಗೂ ದೇವ ಮನುಷ್ಯರಲ್ಲಿ ಶ್ರೇಷ್ಟನಾಗುವನು.." (ಪಾಚಾಲ ಸುತ್ತ, ಅಂಗುತ್ತರ ನಿಕಾಯ 7.58)


Wednesday, 30 October 2019

ಸತ್ಪುರುಷನನ್ನು ಹೇಗೆ ಅರಿಯಬಹುದು? (ಚೂಲ ಪುಣ್ಣಮ ಸುತ್ತ): cula purnima sutta in kannada

ಸತ್ಪುರುಷನನ್ನು ಹೇಗೆ ಅರಿಯಬಹುದು? (ಚೂಲ ಪುಣ್ಣಮ ಸುತ್ತ):


ಹೀಗೆ ನಾನು ಕೇಳಿದ್ದೇನೆ - ಒಂದು ಸಮಯದಲ್ಲಿ ಭಗವಾನರು ಸಾವತ್ಥಿಯಲ್ಲಿ ಮಿಗಾರಮಾತೆಯ ಪೂರ್ವ ಆರಾಮ (ವಿಹಾರ)ದಲ್ಲಿ ವಿಹರಿಸುತ್ತಿದ್ದರು. ಅಂದು ಪೂಣರ್ಿಮೆಯಾದ್ದರಿಂದ ಉಪೂಸಥ ದಿನವಾಗಿತ್ತು. ಆಗ ಭಗವಾನರು ಹೊರಗೆ ಗಾಳಿಯಲ್ಲಿ ಕುಳಿತಿದ್ದರು. ಅವರ ಸುತ್ತಲು ಭಿಕ್ಷುಗಣವಿತ್ತು. ಭಗವಾನರು ಶಾಂತವಾಗಿದ್ದ ಭಿಕ್ಷು ಸಮೂಹಕ್ಕೆ ಹೀಗೆ ಕೇಳಿದರು:

"ಈಗ ಭಿಕ್ಷುಗಳೇ, ಅಸತ್ಪುರುಷನಿಗೆ ಅಸತ್ಪುರುಷನು ಅರಿಯಲ್ಪಡುವನೇ, ಹೇಗೆಂದರೆ ಈ ವ್ಯಕ್ತಿಯು ಅಸತ್ಪುರುಷನೇ?"

"ಇಲ್ಲ ಭಂತೆ."

"ಒಳ್ಳೆಯದು ಭಿಕ್ಷುಗಳೇ, ಅಸತ್ಪುರುಷನಿಗೆ ಈತನು ಅಸತ್ಪುರುಷ ಎಂದು ತಿಳಿಯಲ್ಪಡುವುದಿಲ್ಲ. ಹಾಗೆಯೇ ಭಿಕ್ಷುಗಳೇ, ಅಸತ್ಪುರುಷನಿಗೆ ಸತ್ಪುರುಷನು ತಿಳಿಯಲ್ಪಡುವನೇ? ಹೇಗೆಂದರೆ ಈ ವ್ಯಕ್ತಿಯು ಸತ್ಪುರುಷನಿರಬಹುದೇ?"
"ಇಲ್ಲ ಭಂತೆ."

"ಒಳ್ಳೆಯದು ಭಿಕ್ಷುಗಳೇ, ಖಂಡಿತವಾಗಿಯು ಅಸತ್ಪುರುಷನಿಗೆ ಈ ವ್ಯಕ್ತಿಯು ಸತ್ಪುರುಷ ಎಂದು ತಿಳಿಯಲಾಗುವುದಿಲ್ಲ. ಆತನಿಗೆ ಅದು ಅಸಾಧ್ಯವಾಗಿದೆ. ಓ ಭಿಕ್ಷುಗಳೇ, ಅಸತ್ಪುರುಷನು ಅಕುಶಲ ಚಿತ್ತಸ್ಥಿತಿಗಳನ್ನು ಹೊಂದಿರುತ್ತಾನೆ. ಆತನು ಕೆಟ್ಟ ಸ್ನೇಹಿತರನ್ನು ಹೊಂದಿರುತ್ತಾನೆ. ಪಾಪಿಗಳಂತೆ ಯೋಚಿಸುತ್ತಾನೆ. ಆತನು ಪಾಪಿಗಳಂತೆಯೇ ಸಲಹೆ ಬುದ್ಧಿವಾದ ನೀಡುತ್ತಾನೆ, ಪಾಪಿಗಳಂತೆ ಮಾತನಾಡುತ್ತಾನೆ, ಪಾಪಿಗಳಂತೆ ಕಾರ್ಯವನ್ನು ಮಾಡುತ್ತಾನೆ. ಅಷ್ಟೇ ಅಲ್ಲ, ಆತನು ಅಸತ್ಪುರುಷರಂತೆಯೇ ದೃಷ್ಟಿಕೋನಗಳನ್ನು ಹೊಂದಿರುತ್ತಾನೆ ಮತ್ತು ಆತನು ಅಸತ್ಪುರುಷರಂತೆಯೇ ದಾನವನ್ನು ಮಾಡುತ್ತಾನೆ."

"ಮತ್ತು ಭಿಕ್ಷುಗಳೇ, ಆತನು ಯಾವ ಅಕುಶಲ ಚಿತ್ತಸ್ಥಿತಿಗಳಿಂದ (ಅಸ್ಸಧಮ್ಮ ಸಮಾನಾಗತೋ) ಕೂಡಿರುತ್ತಾನೆ?" "ಭಿಕ್ಷುಗಳೇ, ಆತನು ಶ್ರದ್ಧಾರಹಿತನಾಗಿರುತ್ತಾನೆ. ಪಾಪಲಜ್ಜೆಯಿಂದ ಕೂಡಿರುವುದಿಲ್ಲ, ಪಾಪಭಯದಿಂದಲೂ ಕೂಡಿರುವುದಿಲ್ಲ. ಆತನು ಅಲ್ಪಶೃತ (ಕಡಿಮೆ ಜ್ಞಾನವನ್ನು ಕೇಳಿರುತ್ತಾನೆ) ನಾಗಿರುತ್ತಾನೆ. ಆತನು ಸೋಮಾರಿ ಆಗಿರುತ್ತಾನೆ. ಸ್ಮೃತಿಹೀನ (ಅಜಾಗರೂಕನು)ನು ಆಗಿರುತ್ತಾನೆ. ಕೆಟ್ಟ ಪ್ರಜ್ಞೆಯುಳ್ಳವ ನಾಗಿರುತ್ತಾನೆ (ಅಲ್ಪಪ್ರಜ್ಞನು). ಭಿಕ್ಷುಗಳೇ, ಈ ರೀತಿಯಲ್ಲಿ ಅಸತ್ಪುರುಷನ ಚಿತ್ತಸ್ಥಿತಿಗಳು ಇರುತ್ತದೆ."

"ಮತ್ತೆ ಭಿಕ್ಷುಗಳೇ, ಆತನು ಯಾರೊಂದಿಗೆ ಸ್ನೇಹದಿಂದಿರುತ್ತಾನೆ?"
"ಭಿಕ್ಷುಗಳೇ, ಯಾರಲ್ಲಿ ಶ್ರದ್ಧೆಯಿಲ್ಲವೋ, ಪಾಪಲಜ್ಜೆಯಿಲ್ಲವೊ, ಪಾಪಭೀತಿಯಿಲ್ಲವೊ, ಯಾರು ಅಲ್ಪಶೃತರೋ, ಯಾರು ಸೋಮಾರಿಗಳೋ, ಅಜಾಗರೂಕರೋ, ಅಲ್ಪ ಪ್ರಜ್ಞರೋ ಅವರೊಂದಿಗೆಯೇ ಆತನು ಬೆರೆಯುತ್ತಾನೆ. ಅವರೊಂದಿಗೆ ಆತನು ಸ್ನೇಹದಿಂದಿರುತ್ತಾನೆ."

"ಮತ್ತೆ ಭಿಕ್ಷುಗಳೇ, ಆತನು ಅಸತ್ಪುರುಷರ ರೀತಿ ಹೇಗೆ ಯೋಚಿಸುತ್ತಾನೆ? ಆತನು ತನಗೆ ಅಹಿತವಾಗುವಂತೆ, ಬಾಧೆಯಾಗುವಂತೆ ಚಿಂತನೆ ಮಾಡುತ್ತಾನೆ. ಹಾಗು ಆತನು ಪರರಿಗೆ ಅಹಿತವಾಗುವಂತೆ ಬಾಧೆಯಾಗುವಂತೆ ಚಿಂತನೆ ಮಾಡುತ್ತಾನೆ. ಆತನು ಉಭಯರಿಗೂ ಬಾಧೆಯಾಗುವಂತೆ ಯೋಚಿಸುತ್ತಾನೆ."

"ಮತ್ತೆ ಭಿಕ್ಷುಗಳೇ, ಆತನ ಅಸತ್ಪುರುಷರ ರೀತಿ ಹೇಗೆ ಬುದ್ಧಿವಾದ ನೀಡುತ್ತಾನೆ? ಆತನು ತನಗೆ ಅಹಿತವಾಗುವಂತೆ, ಬಾಧೆಯಾಗುವಂತೆ ಬುದ್ಧಿವಾದ ಹೇಳಿಕೊಳ್ಳುತ್ತಾನೆ. ಆತನು ಪರರಿಗೆ ಅಹಿತವಾಗುವಂತೆ, ಬಾಧೆಯಾಗುವಂತೆ ಬುದ್ಧಿವಾದ ಹೇಳುತ್ತಾನೆ".

"ಮತ್ತೆ ಭಿಕ್ಷುಗಳೇ, ಆತನು ಅಸತ್ಪುರುಷರ ರೀತಿಯಲ್ಲಿ ಹೇಗೆ ಮಾತನಾಡುತ್ತಾನೆ?"
"ಭಿಕ್ಷುಗಳೇ, ಆತನು ಸುಳ್ಳು ಹೇಳುತ್ತಾನೆ, ಚಾಡಿ ಹೇಳುತ್ತಾನೆ, ನಿಂದಾಯುತ ಕಟುಭಾಷೆ ಮಾತನಾಡುತ್ತಾನೆ, ವ್ಯರ್ಥವಾದ ಹಾನಿಯುತ ಹರಟೆ ಮಾಡುತ್ತಾನೆ."

"ಮತ್ತೆ ಭಿಕ್ಷುಗಳೇ, ಆತನು ಅಸತ್ಪುರುಷರ ರೀತಿಯಲ್ಲಿ ಹೇಗೆ ಕರ್ಮ ಮಾಡುತ್ತಾನೆ?"
"ಇಲ್ಲಿ ಭಿಕ್ಷುಗಳೇ, ಆತನು ಜೀವಹತ್ಯೆಗಳನ್ನು ಮಾಡುತ್ತಾನೆ, ಕಳ್ಳತನ ಮಾಡುತ್ತಾನೆ, ವ್ಯಭಿಚಾರದಲ್ಲಿ ತೊಡಗುತ್ತಾನೆ. ಹೀಗೆ ಭಿಕ್ಷುಗಳೇ, ಆತನು ಅಸತ್ಪುರುಷರ ಕರ್ಮ ಮಾಡುತ್ತಾನೆ".

"ಮತ್ತೆ ಭಿಕ್ಷುಗಳೇ, ಆತನು ಅಸತ್ಪುರುಷ ರೀತಿ ಹೇಗೆ ದೃಷ್ಟಿಗಳನ್ನು ಹೊಂದಿರುತ್ತಾನೆ?"
ಇಲ್ಲಿ ಭಿಕ್ಷುಗಳೇ, ಆತನು ಹೀಗೆ ಹಲವು ದೃಷ್ಟಿಗಳನ್ನು ಹೊಂದಿರುತ್ತಾನೆ. ಅವೆಂದರೆ:
 (1) ದಾನಕ್ಕೆ ಫಲವಿಲ್ಲ, ಅರ್ಪಣೆಗೆ ಫಲವಿಲ್ಲ, ತ್ಯಾಗ ಸತ್ಕಾರಗಳಿಗೆ ಫಲವಿಲ್ಲ.
(2) ಸುಕಾರ್ಯಗಳಿಗೆ ಆಗಲಿ ಅಥವಾ ದುಷ್ಕಾರ್ಯಗಳಿಗಾಗಲಿ ಅಂತಹ ಕರ್ಮಗಳಿಗೆ ಫಲವಿಲ್ಲ
 (3) ಈ ಲೋಕವೂ ಇಲ್ಲ, ಪರಲೋಕವೂ ಇಲ್ಲ.
 (4) ತಾಯ್ತಂದೆಗಳ ಸಲಹುವಿಕೆಯಿಂದ ಯಾವ ಲಾಭವೂ ಇಲ್ಲ
. (5) ತಾಯ್ತಂದೆಗಳಿಲ್ಲದೆಯೇ ತಮಗೆ ತಾವೇ ಹುಟ್ಟುವ (ಓಪಪಾತಿಕ) ಜೀವಿಗಳಿಲ್ಲ.
(6) ಯೋಗ್ಯವಾಗಿ ಜೀವಿಸಿ, ಯೋಗ್ಯವಾಗಿ ಸಾಕ್ಷಾತ್ಕರಿಸಿ, ಅಭಿಜ್ಞಾ ಸಾಕ್ಷಾತ್ಕರಿಸಿ (ಅತೀಂದ್ರಿಯ ಬಲಗಳನ್ನು ಪಡೆದು) ಈ ಲೋಕ ಮತ್ತು ಪರಲೋಕವಿದೆ ಎಂದು ಹೇಳುವ ಸಮಣ ಬ್ರಾಹ್ಮಣರು ಇಲ್ಲ, ಅಂತಹವರು ಇಲ್ಲವೇ ಇಲ್ಲ. ಹೀಗೆ ಭಿಕ್ಷುಗಳೇ, ಅಸತ್ಪುರುಷನು ದೃಷ್ಟಿಕೋನಗಳನ್ನು ಹೊಂದಿರುತ್ತಾನೆ."


"ಮತ್ತೆ ಭಿಕ್ಷುಗಳೇ, ಅಸತ್ಪುರುಷನು ಹೇಗೆ ದಾನವನ್ನು ಮಾಡುತ್ತಾನೆ?"
"ಭಿಕ್ಷುಗಳೇ, ಅಸತ್ಪುರುಷನು ಗೌರವ ಭಕ್ತಿ ಯಾವುದೂ ಇಲ್ಲದೆ ದಾನ ಮಾಡುತ್ತಾನೆ. ಆತನು ತನ್ನ ಕೈಯಿಂದ ದಾನ ಮಾಡುವುದಿಲ್ಲ, ಆತನು ಬಿಸಾಡುವಂತಹದ್ದನ್ನು ದಾನ ಮಾಡುತ್ತಾನೆ. ಆತನು ಅಗತ್ಯವಿಲ್ಲದ್ದನ್ನು, ಅಪೇಕ್ಷೆಪಡದಿದ್ದುದನ್ನು ದಾನ ಮಾಡುತ್ತಾನೆ. ಆತನು ಭವಿಷ್ಯವನ್ನು ಗಣನೆಗೆ ತೆಗೆದುಕೊಳ್ಳದೆ ದಾನ ಮಾಡುತ್ತಾನೆ. ಹೀಗೆ ಭಿಕ್ಷುಗಳೇ, ಅಸತ್ಪುರುಷನು ದಾನ ಮಾಡುತ್ತಾನೆ."

"ಭಿಕ್ಷುಗಳೇ, ಯಾವ ಅಸತ್ಪುರುಷನು ಪಾಪಚಿತ್ತ ಸ್ಥಿತಿಗಳನ್ನು, ಪಾಪಿ ಮಿತ್ರರನ್ನು, ಪಾಪ ಯೋಚನೆಗಳನ್ನು, ಪಾಪ ಸಲಹೆಗಳನ್ನು, ಪಾಪಯುತ ಮಾತುಗಳನ್ನು, ಪಾಪಯುತ ಕರ್ಮಗಳನ್ನು ಮತ್ತು ಪಾಪಯುತ ದೃಷ್ಟಿಕೋನಗಳನ್ನು ಹೊಂದಿರುತ್ತಾನೋ, ಆತನು ಮರಣದ ನಂತರ ಅಸತ್ಪುರುಷರೆ ಇರುವಂತಹ ಗತಿಯಲ್ಲಿ ಹುಟ್ಟುತ್ತಾನೆ. ಯಾವುದು ಆ ಗತಿ? ನಿರಯ ಇಲ್ಲವೆ ತಿರಚ್ಚನಯೋನಿ (ಪ್ರಾಣಿಗಳ ಲೋಕ)ಯಲ್ಲಿ ಜನ್ಮಿಸುತ್ತಾನೆ."

"ಈಗ ಭಿಕ್ಷುಗಳೇ, ಸತ್ಪುರುಷನಿಗೆ ಇಂಥಹ ವ್ಯಕ್ತಿಯು ಸತ್ಪುರುಷನು ಎಂದು ಗೊತ್ತಾಗುತ್ತದೆಯೇ?"
"ಹೌದು ಭಂತೆ."

"ಒಳ್ಳೆಯದು ಭಿಕ್ಷುಗಳೇ, ಕೆಲವು ಸನ್ನಿವೇಶಗಳು ಬರುತ್ತವೆ. ಆಗ ಈತನು ಸತ್ಪುರುಷ ಎಂದು ಸತ್ಪುರುಷನಿಗೆ ಗೊತ್ತಾಗುವುದು. ಆದರೆ ಭಿಕ್ಷುಗಳೇ, ಸತ್ಪುರುಷನು ಅಸತ್ಪುರುಷನಿಗೆ ನೋಡಿದಾಗ ಇವನು ಅಸತ್ಪುರುಷ ಎಂದು ಗೊತ್ತಾಗುವುದೇ?"
"ಹೌದು ಭಂತೆ ಗೊತ್ತಾಗುವುದು."

"ಒಳ್ಳೆಯದು ಭಿಕ್ಷುಗಳೇ, ಸನ್ನಿವೇಶಗಳು ಬಂದಾಗ ಸತ್ಪುರುಷನಿಗೆ ಇವನು ಸತ್ಪುರುಷ ಎಂದು ಗೊತ್ತಾಗುತ್ತದೆ. ಭಿಕ್ಷುಗಳೇ, ಸತ್ಪುರುಷನು ಕುಶಲ ಚಿತ್ತ ಸ್ಥಿತಿಗಳನ್ನು ಹೊಂದಿರುತ್ತಾನೆ. ಸತ್ಪುರುಷರ ಜೊತೆಯಲ್ಲಿ ರಮಿಸುತ್ತಾನೆ, ಸತ್ಪುರುಷರ ರೀತಿಯಲ್ಲಿ ಚಿಂತನೆ ಮಾಡುತ್ತಾನೆ. ಸತ್ಪುರುಷ ರೀತಿ ಬೋಧನೆ (ಬುದ್ಧಿವಾದ) ನೀಡುತ್ತಾನೆ. ಸತ್ಪುರುಷರ ರೀತಿ ಮಾತನಾಡುತ್ತಾನೆ. ಸತ್ಪುರುಷರ ರೀತಿ ಕರ್ಮ ಮಾಡುತ್ತಾನೆ, ಸತ್ಪುರುಷರ ರೀತಿಯಲ್ಲಿ ದೃಷ್ಟಿಕೋನಗಳನ್ನು ಹೊಂದಿರುತ್ತಾನೆ. ಸತ್ಪುರುಷ ರೀತಿಯಲ್ಲಿ ದಾನ ಮಾಡುತ್ತಾನೆ ಮತ್ತು ಭಿಕ್ಷುಗಳೇ, ಹೇಗೆ ಸತ್ಪುರುಷನು ಕುಶಲ ಚಿತ್ತಸ್ಥಿತಿಗಳನ್ನು ಹೊಂದಿರುತ್ತಾನೆ? ಇಲ್ಲಿ ಭಿಕ್ಷುಗಳೇ, ಸತ್ಪುರುಷನು ಶ್ರದ್ಧೆಯನ್ನು ಹೊಂದಿರುತ್ತಾನೆ, ಸತ್ಪುರುಷನು ಪಾಪಲಜ್ಜೆ ಹಾಗು ಪಾಪ ಭಯವನ್ನು ಹೊಂದಿರುತ್ತಾನೆ. ಸತ್ಪುರುಷನು ಬಹಳಷ್ಟು ಜ್ಞಾನವನ್ನು ಕೇಳಿರುತ್ತಾನೆ. ಸತ್ಪುರುಷನು ಪ್ರಯತ್ನಶಾಲಿಯಾಗಿರುತ್ತಾನೆ, ಆತನಲ್ಲಿ ಸ್ಮೃತಿಯು ಜಾಗರೂಕತೆಯು ಸ್ಥಾಪಿತವಾಗಿರುತ್ತದೆ. ಸತ್ಪುರುಷನು ಪ್ರಜ್ಞಾವಂತನಾಗಿರುತ್ತಾನೆ. ಈ ರೀತಿಯಾಗಿ ಭಿಕ್ಷುಗಳೇ, ಸತ್ಪುರುಷನು ಕುಶಲ ಸ್ಥಿತಿಗಳನ್ನು ಹೊಂದಿರುತ್ತಾನೆ".

"ಮತ್ತು ಭಿಕ್ಷುಗಳೇ, ಹೇಗೆ ಸತ್ಪುರುಷನು ಸತ್ಪುರುಷರೊಡನೆ ಜೊತೆಯಲ್ಲಿರುತ್ತಾನೆ?"
"ಭಿಕ್ಷುಗಳೇ, ಯಾರಲ್ಲಿ ಶ್ರದ್ಧೆಯಿರುವುದೋ, ಪಾಪಲಜ್ಜೆ, ಪಾಪಭೀತಿಯಿರುವದೋ, ಯಾರು ಬಹುಶೃತರೋ, ಪ್ರಯತ್ನಶಾಲಿಗಳೋ, ಜಾಗೃತರೋ ಮತ್ತು ಪ್ರಜ್ಞಾವಂತರೋ ಅಂತಹವರೊಡನೆ ಸತ್ಪುರುಷನು ಸ್ನೇಹ ಬೆಳೆಸಿ ಅವರೊಂದಿಗಿರುತ್ತಾನೆ."

"ಮತ್ತೆ ಭಿಕ್ಷುಗಳೇ, ಸತ್ಪುರುಷನು ಹೇಗೆ ಸತ್ಪುರುಷರಂತೆ ಚಿಂತನೆ ಮಾಡುತ್ತಾನೆ, ಇಲ್ಲಿ ಭಿಕ್ಷುಗಳೇ, ಸತ್ಪುರುಷನು ತನಗೆ ಬಾಧೆಯನ್ನು ನೀಡುವುದಿಲ್ಲ, ಹಾಗೆಯೇ ಪರರಿಗೂ ಬಾಧೆಯನ್ನು ನೀಡುವುದಿಲ್ಲ. ತನಗೆ ಮತ್ತು ಪರರಿಗೂ ಬಾಧೆ ನೀಡುವುದಿಲ್ಲ. ಹೀಗೆ ಭಿಕ್ಷುಗಳೇ, ಆತನು ಸತ್ಪುರುಷರಂತೆ ಚಿಂತಿಸುತ್ತಾನೆ."

"ಮತ್ತೆ ಭಿಕ್ಷುಗಳೇ, ಹೇಗೆ ಆತನು ಸತ್ಪುರುಷರಂತೆ ಬುದ್ಧಿವಾದ ನೀಡುವನು? ಇಲ್ಲಿ ಭಿಕ್ಷುಗಳೇ, ಸತ್ಪುರುಷನು ತನಗೆ ಹಾನಿಯಾಗುವಂತೆ ಅಥವಾ ಪರರಿಗೆ ಹಾನಿಯಾಗುವಂತೆ ಆಗಲಿ ಅಥವಾ ಈರ್ವರಿಗೂ ಹಾನಿಯಾಗುವಂತೆ ಬುದ್ಧಿವಾದ ನೀಡುವುದಿಲ್ಲ. ಹೀಗೆ ಭಿಕ್ಷುಗಳೇ, ಆತನು ಸತ್ಪುರುಷರಂತೆ ಬುದ್ಧಿವಾದ ನೀಡುತ್ತಾನೆ."

"ಮತ್ತೆ ಭಿಕ್ಷುಗಳೇ, ಹೇಗೆ ಆತನು ಸತ್ಪುರುಷರಂತೆ ಮಾತನಾಡುತ್ತಾನೆ? ಇಲ್ಲಿ ಭಿಕ್ಷುಗಳೇ, ಆತನು ಸುಳ್ಳಿನಿಂದ ದೂರವಾಗುತ್ತಾನೆ, ಚಾಡಿಯಿಂದ, ಕಟುವಾಕ್ಯದಿಂದ, ವ್ಯರ್ಥ ಹರಟೆಯಿಂದ ದೂರವಾಗುತ್ತಾನೆ. ಹೀಗೆ ಭಿಕ್ಷುಗಳೇ, ಸತ್ಪುರುಷನು ಮಾತನಾಡುತ್ತಾನೆ."

"ಮತ್ತೆ ಭಿಕ್ಷುಗಳೇ, ಹೇಗೆ ಆತನು ಸತ್ಪುರುಷರಂತೆ ಕರ್ಮ ಮಾಡುತ್ತಾನೆ? ಇಲ್ಲಿ ಭಿಕ್ಷುಗಳೇ, ಆತನು ಎಲ್ಲಾ ಜೀವಿಗಳ ಜೀವಹತ್ಯೆಯಿಂದ ದೂರನಾಗಿರುತ್ತಾನೆ, ಕಳ್ಳತನದಿಂದ, ವ್ಯಭಿಚಾರದಿಂದ ದೂರವಾಗುತ್ತಾನೆ. ಹೀಗೆ ಭಿಕ್ಷುಗಳೇ, ಸತ್ಪುರುಷನು ಕರ್ಮ ಮಾಡುತ್ತಾನೆ."

"ಮತ್ತೆ ಭಿಕ್ಷುಗಳೇ, ಹೇಗೆ ಆತನು ಸತ್ಪುರುಷರಂತೆ ದೃಷ್ಟಿಕೋನಗಳನ್ನು ಹೊಂದಿರುತ್ತಾನೆ? ಭಿಕ್ಷುಗಳೇ, ಸತ್ಪುರುಷನು ಈ ಕೆಳಕಂಡಂತೆ ಸಮ್ಮಾ ದೃಷ್ಟಿಕೋನಗಳನ್ನು ಹೊಂದಿರುತ್ತಾನೆ: ದಾನಕ್ಕೆ ಫಲವಿದೆ, ಅರ್ಪಣೆಗೆ ಫಲವಿದೆ, ತ್ಯಾಗ ಸತ್ಕಾರಗಳಿಗೆ ಫಲವಿದೆ, ಕುಶಲ ಕರ್ಮಗಳಿಗೆ ಹಾಗು ಪಾಪ ಕರ್ಮಗಳಿಗೆ ಫಲವಿದೆ. ಹೀಗಾಗಿ ಈ ಲೋಕವು ಇದು ಹಾಗೆಯೆ ಪರಲೋಕವೂ ಇದೆ. ತಾಯ್ತಂದೆಯರಿಗೆ ಸೇವೆ ಮಾಡುವುದರಿಂದಾಗಿ ಲಾಭವಿದೆ, ತಾಯಿ-ತಂದೆಯರಿಲ್ಲದೆಯೇ ತಾವಾಗಿಯೇ ಹುಟ್ಟುವಂತಹ ಓಪಪಾತಿಕ ಜೀವಿಗಳೂ ಇದ್ದಾರೆ. ಯೋಗ್ಯವಾಗಿ, ಸರಿಯಾಗಿ ಜೀವಿಸುವ ಸಮಣ ಬ್ರಾಹ್ಮಣರೂ ಇದ್ದಾರೆ. ತಮ್ಮ ಅಭಿಜ್ಞ ಬಲದಿಂದಾಗಿ ಈ ಲೋಕದ ಬಗ್ಗೆ, ಪರಲೋಕದ ಬಗ್ಗೆ ಹೇಳುವಂತಹ ಮಹಾನುಭಾವರು ಲೋಕದಲ್ಲಿರುವರು. ಹೀಗೆ ಭಿಕ್ಷುಗಳೇ, ಸತ್ಪುರುಷರು ಸಮ್ಮಾದೃಷ್ಟಿಗಳನ್ನು ಹೊಂದಿತ್ತಾರೆ."

"ಮತ್ತೆ ಭಿಕ್ಷುಗಳೇ, ಹೇಗೆ ಸತ್ಪುರುಷರು ದಾನವನ್ನು ಮಾಡುತ್ತಾರೆ? ಇಲ್ಲಿ ಭಿಕ್ಷುಗಳೇ, ಸತ್ಪುರುಷರು ಗೌರವಾರ್ಪಣೆಯಿಂದ ದಾನ ಮಾಡುತ್ತಾರೆ. ತಮ್ಮ ಕೈಯಿಂದಲೇ ದಾನವನ್ನು ಮಾಡುತ್ತಾರೆ. ಪ್ರಜ್ಞಾಯುತವಾಗಿ ಶ್ರೇಷ್ಟವಾದುದನ್ನು ದಾನ ಮಾಡುತ್ತಾರೆ. ಪರಿಶುದ್ಧವಾದುದನ್ನೇ ದಾನ ಮಾಡುತ್ತಾರೆ. ಭವಿಷ್ಯವನ್ನು ಗಣನೆಗೆ ತೆಗೆದುಕೊಂಡು ದಾನ ಮಾಡುತ್ತಾರೆ. ಹೀಗೆ ಭಿಕ್ಷುಗಳೇ, ಸತ್ಪುರುಷರು ದಾನ ಮಾಡುತ್ತಾರೆ."

"ಭಿಕ್ಷುಗಳೇ, ಹೀಗೆ ಸತ್ಪುರುಷನು ಕುಶಲಚಿತ್ತ ಸ್ಥಿತಿಗಳನ್ನು ಹೊಂದಿರುತ್ತಾನೆ, ಸತ್ಪುರುಷರ ಜೊತೆಯಲ್ಲಿರುತ್ತಾನೆ, ಸತ್ಪುರುಷರಂತೆ ಚಿಂತಿಸುತ್ತಾನೆ, ಸತ್ಪುರುಷರಂತೆ ಬುದ್ಧಿವಾದನೀಡುತ್ತಾನೆ, ಸತ್ಪುರುಷರಂತೆಯೇ ಮಾತನಾಡುತ್ತಾನೆ, ಸತ್ಪುರುಷರಂತೆಯೇ ಕರ್ಮ ಮಾಡುತ್ತಾನೆ, ಸತ್ಪರುಷರಂತೆಯೇ ದೃಷ್ಟಿಕೋನಗಳನ್ನು ಹೊಂದಿರುತ್ತಾನೆ. ಸತ್ಪುರುಷರಂತೆ ದಾನವನ್ನು ಮಾಡುತ್ತಾನೆ. ಇಂತಹ ಸತ್ಪುರುಷನು ಮರಣದ ನಂತರವೂ ಸತ್ಪುರುಷರು ಇರುವಲ್ಲಿಯೇ ಜನ್ಮ ತಾಳುವನು ಅಂತಹ ಸ್ಥಿತಿ ಯಾವುದು? ಅದೇ ಮಹತ್ತರವಾದ ಸುಗತಿ ಅಥವಾ ಮಾನವರಲ್ಲಿ ಶ್ರೇಷ್ಠ ಸ್ಥಿತಿಯನ್ನು ಹೊಂದುತ್ತಾನೆ."

ಹೀಗೆ ಭಗವಾನರು ಹೇಳಿದಾಗ, ಭಿಕ್ಷುಗಳು ಆನಂದದಿಂದ ಅನುಮೋದನೆ ಮಾಡಿದರು.

Tuesday, 22 October 2019

ಅವಿಜ್ಜ ಸುತ್ತ (ಅವಿದ್ಯೆ/ಅಜ್ಞಾನದ ಸೂತ್ರ)

ಅವಿಜ್ಜ ಸುತ್ತ (ಅವಿದ್ಯೆ/ಅಜ್ಞಾನದ ಸೂತ್ರ)



ಒಬ್ಬ ಭಿಕ್ಷುವು ಭಗವಾನರಲ್ಲಿಗೆ ಹೋಗಿ ವಂದಿಸಿದನು, ನಂತರ ಒಂದು ಪಕ್ಕದಲ್ಲಿ ಕುಳಿತನು ಮತ್ತು ಹೀಗೆ ಹೇಳಿದನು: ಭಗವಾನ್ ಯಾವ ಒಂದು ವಿಷಯವನ್ನು ಭಿಕ್ಷುವು ವಜರ್ಿಸಿದಾಗ, ಆತನಲ್ಲಿನ ಅಜ್ಞಾನವು ಪರಿತ್ಯಜಿಸಲ್ಪಟ್ಟು ಆತನಲ್ಲಿ ಸ್ಪಷ್ಟ ಜ್ಞಾನವು ಉದಯಿಸುತ್ತದೆ?
ಹೌದು ಭಿಕ್ಷು, ಅಂತಹ ವಿಷಯವೊಂದಿದೆ. ಅದನ್ನು ಭಿಕ್ಷುವು ವಜರ್ಿಸಿದಾಗ ಆತನಲ್ಲಿನ ಅಜ್ಞಾನವು ಪರಿತ್ಯಜಿಸಲ್ಪಟ್ಟು ಆತನಲ್ಲಿ ಸ್ಪಷ್ಟ ಜ್ಞಾನವು ಉದಯಿಸುತ್ತದೆ.
ಆ ಒಂದು ವಿಷಯ ಯಾವುದು?
ಅಜ್ಞಾನವೇ ಭಿಕ್ಷುವೆ, ಇದನ್ನು ಭಿಕ್ಷುವು ವಜರ್ಿಸಿದಾಗ ಆತನ ಅಜ್ಞಾನವು ಪರಿತ್ಯಜಿಸಲ್ಪಟ್ಟು, ಆತನಲ್ಲಿ ಸ್ಪಷ್ಟ ಜ್ಞಾನವು ಉದಯಿಸುತ್ತದೆ.
ಆದರೆ ಅಜ್ಞಾನವು ಪರಿತ್ಯಜವಾಯಿತು ಮತ್ತು ಸ್ಪಷ್ಟ ಜ್ಞಾನವು ಉದಯಿಸುತ್ತದೆ ಎಂದು ಭಿಕ್ಷುವು ಹೇಗೆ ಅರಿಯುತ್ತಾನೆ ಮತ್ತು ಕಾಣುತ್ತಾನೆ?
ಒಮ್ಮೆ ಭಿಕ್ಷುವು ಹೀಗೆ ಕೇಳಿರುತ್ತಾನೆ: ಎಲ್ಲಾ ವಿಷಯಗಳು ಅಂಟುವಿಕೆಗೆ ಅನರ್ಹವಾಗಿದೆ. ಆಗ ಆತನಿಗೆ ನೇರವಾಗಿ ಪ್ರತಿಯೊಂದು ಅರಿವಿಗೆ ಬಂದಿರುತ್ತದೆ. ಆತನು ಎಲ್ಲವನ್ನು ಸೂಕ್ಷ್ಮವಾಗಿಯೇ ಗ್ರಹಿಸಿರುತ್ತಾನೆ. ಆತನು ಎಲ್ಲಾ ವಿಷಯಗಳನ್ನು ಯಾವುದೋ ರೀತಿಯಲ್ಲಿ ಪ್ರತ್ಯೇಕವಾಗಿ ಕಾಣುತ್ತಾನೆ.
ಆತನು ಕಣ್ಣನ್ನು ಬೇರೆಯಾಗಿ ಕಾಣುತ್ತಾನೆ, ಹಾಗೆಯೇ ದೃಶ್ಯಗಳನ್ನು ಬೇರೆಯಾಗಿ (ಪ್ರತ್ಯೇಕವಾಗಿ) ಕಾಣುತ್ತಾನೆ, ಅವೆರಡರಿಂದ ಉತ್ಪನ್ನವಾಗುವ ಕಣ್ಣಿನಿಂದಾದ ಅರಿವನ್ನು (ಚಕ್ಷು ವಿಞ್ಞಾನ) ಬೇರೆಯಾಗಿಯೇ ಕಾಣುತ್ತಾನೆ. ಹಾಗೆಯೇ ಕಣ್ಣು ಮತ್ತು ದೃಶ್ಯಗಳ ನಡುವಿನ ಸಂಪರ್ಕವನ್ನು (ಪಸ್ಸ/ಸ್ಪರ್ಶ) ಬೇರೆಯಾಗಿಯೇ ಕಾಣುತ್ತಾನೆ ಮತ್ತು ಯಾವುದೆಲ್ಲವು ಕಣ್ಣಿನ ಸಂಪರ್ಕದಿಂದಾಗಿ ಉದಯಿಸಿತೋ ಹೇಳುವುದಾದರೆ ಸುಖ, ದುಃಖ ಅಥವಾ ಸುಖವು-ದುಃಖವೂ ಅಲ್ಲದ, ಅವೆಲ್ಲವನ್ನು ಪ್ರತ್ಯೇಕವಾಗಿ ಕಾಣುತ್ತಾನೆ.
ಹಾಗೆಯೇ ಕಿವಿಯನ್ನು... ಮೂಗನ್ನು... ನಾಲಿಗೆಯನ್ನು... ದೇಹವನ್ನು ಪ್ರತ್ಯೇಕವಾಗಿ ಕಾಣುತ್ತಾನೆ. ಆತನು ಮನಸ್ಸನ್ನು ಪ್ರತ್ಯೇಕವಾಗಿ ಕಾಣುತ್ತಾನೆ, ಹಾಗೆಯೇ ಚಿತ್ತ ವಿಷಯಗಳನ್ನು ಪ್ರತ್ಯೇಕವಾಗಿ ಕಾಣುತ್ತಾನೆ, ಹಾಗೆಯೇ ಮನೋ ವಿಞ್ಞಾನವನ್ನು (ಮನಸ್ಸಿನಿಂದ ಅರಿಯುವಿಕೆಯನ್ನು) ಬೇರೆಯಾಗಿ ಕಾಣುತ್ತಾನೆ. ಮನಸ್ಸಿನ ಮತ್ತು ಮನೋ ವಿಷಯಗಳ ನಡುವಿನ ಸಂಪರ್ಕವನ್ನು ಬೇರೆಯಾಗಿ ಕಾಣುತ್ತಾನೆ. ಹಾಗೆಯೇ ಅಲ್ಲಿಂದ ಉತ್ಪನ್ನವಾದ ಸುಖ-ದುಃಖ, ಸುಖವು ಅಲ್ಲದ, ದುಃಖವು ಅಲ್ಲದ ವೇದನೆಗಳನ್ನು ಬೇರೆಯಾಗಿ ಕಾಣುತ್ತಾನೆ.
ಹೀಗೆ ಓ ಭಿಕ್ಷುವೇ, ಭಿಕ್ಷುವು ಅಜ್ಞಾನವು ಪರಿತ್ಯಜಿತವಾಗಿ, ಸ್ಪಷ್ಟ ಜ್ಞಾನವು ಉದಯಿಸುವುದನ್ನು ಭಿಕ್ಷು ಕಾಣುತ್ತಾನೆ.