Friday, 12 September 2014

Aamagandha sutta in kannada (is non-veg food pollute to the mind or person ?)

2. ಆಮಗಂಧ ಸುತ್ತ
                (ಈ ಸುತ್ತದಲ್ಲಿ ಮತ್ಸ್ಯ ಮಾಂಸವನ್ನು ತಿನ್ನುವವನು ಕಲುಷಿತನಾಗುವುದಿಲ್ಲ. ಆದರೆ ಚಿತ್ತಕ್ಲೇಶ ಹಾಗು ಪಾಪಕಮರ್ಿಯು ಕಲುಶಿತ (ಆಮಗಂಧ) ನೆಂದು ಹೇಳಿದ್ದಾರೆ. ಈ ಸುತ್ತವು ಗೋತಮ ಬುದ್ಧರವರಿಗಿಂತ ಹಿಂದಿನ ಬುದ್ಧರಾದ ಕಶ್ಯಪ ಬುದ್ಧ ಭಗವಾನರು ತಿಸ್ಸ ಬ್ರಾಹ್ಮಣನಿಗೆ ಹೇಳಿದ ಬೋಧನೆಯಾಗಿದೆ.)

1.            ತಿಸ್ಸ ಬ್ರಾಹ್ಮಣ - ಧರ್ಮಪೂರ್ವಕವಾಗಿ ಪ್ರಾಪ್ತಿಯಾದ ಸ್ಹಾವಾ, ಸಜ್ಜೆ, ಕಳ್ಳೆ, ಪಲ್ಯ, ಸೊಪ್ಪು, ಕಂದಮೂಲ, ಲತಾಫಲಗಳನ್ನು ತಿನ್ನುವ ಸತ್ಪುರುಷನು ತನ್ನ ಇಚ್ಛೆಗೆ ಅನುಸಾರವಾಗಿ ಅಸತ್ಯ ಹೇಳಲಾರನು.
2.            ಹೇ ಕಶ್ಯಪರೇ, ಆದರೆ ಯಾರು ಪರರಿಂದ ಚೆನ್ನಾಗಿ ಬೇಯಿಸಿ ಅಡಿಗೆ ಮಾಡಿದ ಅನ್ನವನ್ನು ತಿನ್ನುವನೋ ಆತನು ಆಮಗಂಧ (ಕಲುಷಿತ) ಸೇವಿಸುತ್ತಾನೆ.
3.            ಹೇ ವಸುಬಂಧು! ಕಲುಷಿತರಲ್ಲವೆಂದು ತಾವು ಹೇಳುತ್ತಿರುವಿರಿ. ಆದರೆ ತಾವು ಪಕ್ಷಿಗಳ ಮಾಂಸ ಸಮೇತ ಚೆನ್ನಾಗಿ ಬೇಯಿಸಿ ಅಡುಗೆ ಮಾಡಿದ ಅನ್ನವನ್ನು ತಿನ್ನುತ್ತಿರುವಿರಿ. ಹೇ ಕಾಶ್ಯಪರೇ, ತಮ್ಮ ರೀತಿಯಲ್ಲಿ ಆಮಗಂಧ (ಕಲುಷಿತ) ಹೇಗಿರುತ್ತಾನೆ.
4.            ಕಶ್ಯಪ ಬುದ್ಧರು - ಜೀವಹಿಂಸೆ, ವಧೆ, ಬಂಧನ ಮಾಡುವವ, ಕಳ್ಳ, ಅಸತ್ಯ ಹೇಳುವವ, ಮೋಸಗಾರ, ಠಕ್ಕ, ನಿರರ್ಥಕ ಗ್ರಂಥಗಳನ್ನು ಅಧ್ಯಯನ ಮಾಡುವವ ಹಾಗು ಪರಸ್ತ್ರೀಯನ್ನು ಸೇವಿಸುವವ ಕಲುಷಿತನಾಗಿರುತ್ತಾನೆಯೇ ಹೊರತು, ಮಾಂಸ ಸೇವಿಸುವವನಲ್ಲ.
5.            ಯಾವ ಜನರು ಕಾಮಭೋಗಗಳಲ್ಲಿ ಸಂಯಮದಿಂದಿರುವುದಿಲ್ಲವೊ, ಸ್ವಾದಿಷ್ಟ ರಸಗಳಲ್ಲಿ ಲಿಪ್ತರಾಗಿರುವರೊ, ನಾನಾ ಪ್ರಕಾರದ ಪಾಪಕರ್ಮಗಳಲ್ಲಿ ಇರುವರೋ, ವಿಷಯ ಹಾಗೂ ವಕ್ರ ನಾಸ್ತಿಕ ದೃಷ್ಟಿಯುಳ್ಳವರೋ ಅವರು ಕಲುಷಿತರೇ ಹೊರತು, ಮಾಂಸದ ಭೋಜನ ತಿನ್ನುವವರಲ್ಲ.
6.            ಯಾರು ಕಠೋರರೋ, ದಾರುಣರೋ, ಚಾಡಿ ಹೇಳುವವರೋ, ಮಿತ್ರದ್ರೋಹಿಗಳೋ, ನಿರ್ದಯರೋ, ಅತಿ ಅಹಂಕಾರಿಗಳೋ, ದಾನ ನೀಡದವರೋ, ಜಿಪುಣರೋ, ಅವರು ಕಲುಷಿತರು ಹೊರತು, ಮಾಂಸದ ಭೋಜನ ತಿನ್ನುವವರಲ್ಲ.
7.            ಕ್ರೋಧ, ಮದ, ಜಡತೆ, ವಿರೋಧ, ಮಾಯಾ, ಈಷ್ಯರ್ೆ, ಸ್ವಪ್ರಶಂಸೆ, ಅತಿ ಅಹಂಕಾರಿ, ಕೆಟ್ಟಸಂಗ ಮಾಡುವವ ಕಲುಷಿತನಾಗುತ್ತಾನೆ ಹೊರತು, ಮಾಂಸ ಭೋಜನ ತಿನ್ನುವವನಲ್ಲ.
8.            ಯಾವ ಜನರು ಜೀವಿಗಳ ಪ್ರತಿಯಾಗಿ ಅಸಂಯಮಿಗಳೊ, ಪರರ ವಸ್ತುಗಳನ್ನು ತೆಗೆದುಕೊಂಡು ತೊಂದರೆ ಉಂಟುಮಾಡುವರೊ, ದುರಾಚಾರಿಗಳೋ, ಲೋಭಿ, ಕಠೋರರೋ ಹಾಗು ಆದರಹೀನರೋ ಅವರು ಕಲುಷಿತರಾಗುವರೇ ಹೊರತು, ಮಾಂಸ ಭೋಜನ ತಿನ್ನುವವರಲ್ಲ.
9.            ಯಾರು ಪಾಪಿಯೋ, ಋಣವನ್ನು ತೀರಿಸದವನೋ, ಮೋಸ ಮಾಡುವವನೋ, ಡೋಂಗಿಯೋ, ನರಾಧಮನೋ, ಇಲ್ಲಿ ಪಾಪಕರ್ಮವನ್ನು ಮಾಡುತ್ತಾನೋ, ಅವನು ಕಲುಷಿತನೇ ಹೊರತು, ಮಾಂಸ ಭೋಜನ ತಿನ್ನುವವನಲ್ಲ.
10.          ಯಾವ ಜನರು ಇದರಲ್ಲಿ ಲೋಭಿಗಳಾಗಿ ವಿರೋಧಭಾವ ಹಾಗು ಜೀವಹಿಂಸೆಯಲ್ಲಿ ತಲ್ಲೀನರೋ, ಅವರು ಮೃತ್ಯು ಹೊಂದಿ ಅಂಧಕಾರದಲ್ಲಿ ಹೋಗುವರು. ಅವರು ತಲೆಕೆಳಕಾಗಿ ನರಕದಲ್ಲಿ ಬೀಳುವರು. ಅವರು ಕಲುಷಿತರೇ ಹೊರತು, ಮಾಂಸ ಭೋಜನ ತಿನ್ನುವವರಲ್ಲ.
11.          ಮತ್ಸ್ಯ ಮಾಂಸ ತಿನ್ನದೆ ಇರುವುದರಿಂದಾಗಲಿ, ನಗ್ನವಾಗಿರುವುದರಿಂದಾಗಲಿ, ಉಪವಾಸ ಇರುವುದರಿಂದಾಗಲಿ, ತಲೆಯನ್ನು ತಿರುಗಿಸುವುದರಿಂದಾಗಲಿ, ಜಟೆಯನ್ನು ಬಿಡುವುದರಿಂದಾಗಲಿ, ಬೂದಿಯನ್ನು ಬಳಿದುಕೊಂಡಿರುವುದ ರಿಂದಾಗಲಿ, ಮೃಗಗಳ ಚರ್ಮ ಧರಿಸಿರುವುದರಿಂದಾಗಲಿ, ಅಗ್ನಿಹವನ ಮಾಡುವುದರಿಂದಾಗಲಿ, ಅಮರತ್ವದ ಅಪೇಕ್ಷೆಯಿಂದ ನಾನಾ ದೇಹದಂಡನೆ ಮಾಡುವುದರಿಂದಾಗಲಿ, ಮಂತ್ರವನ್ನು ಜಪಿಸುವುದರಿಂದಾಗಾಲಿ, ಹವನ ಮಾಡುವುದರಿಂದಾಗಲಿ, ಯಜ್ಞವನ್ನು ಆಚರಿಸುವುದರಿಂದಾಗಲಿ ಹಾಗು ಋತುಗಳ ಉಪಸೇವನೆ ಮಾಡುವುದು. ಈ ಕಾರ್ಯಗಳನ್ನು ಮಾಡುವವನು ಶುದ್ಧನಾಗುವುದಿಲ್ಲ. ಅಂತಹ ಸಂಶಯಯುಕ್ತ ಪುರುಷ ಶುದ್ಧನು ಹೇಗೆತಾನೆ ಆಗುತ್ತಾನೆ?
12.          ಯಾರು ಸರ್ವ ಇಂದ್ರಿಯಗಳಲ್ಲಿ ಸಂಯಮಿಯೋ, ಇಂದ್ರಿಯಗಳನ್ನು ಬಹಳ ರೀತಿ ಅರಿತು ಸಂಚರಿಸುವನೋ, ಧಮ್ಮದಲ್ಲಿ ಸ್ಥಿರನೋ, ಶೀಲ ಹಾಗು ಮೃದುತೆಯಲ್ಲಿ ರತನೊ, ಸಾಂಸಾರಿಕ ಆಸಕ್ತಿಯನ್ನು ದಾಟಿದವನೋ, ಯಾರ ಸರ್ವ ದುಃಖವು ಅಂತ್ಯವಾಗಿರುವುದೋ, ಅಂತಹ ಧೀರ ವ್ಯಕ್ತಿಯು ನೋಡಿ-ಕೇಳುವ ಮಾತುಗಳಲ್ಲಿ ಲಿಪ್ತನಾಗುವುದಿಲ್ಲ.
13.          ಈ ಮಾತನ್ನು ಭಗವಾನರು ಮತ್ತೆ ಮತ್ತೆ ಹೇಳಿದರು. ವೇದ ಪಾರಂಗತ ಬ್ರಾಹ್ಮಣನು ಇದನ್ನು ಅರಿತನು. ತೃಷ್ಣಾರಹಿತರಾಗಿ, ಅನಾಸಕ್ತ ಹಾಗು ಅನುಸರಣೆ ಮಾಡುವುದರಲ್ಲಿ ಪಳಗಿರುವ ಮುನಿಯು ಸುಂದರ ಗಾಥೆಗಳಲ್ಲಿ ನಿರಆಮಗಂಧವನ್ನು (ಪರಿಶುದ್ಧತೆಯನ್ನು) ಪ್ರಕಟಪಡಿಸಿದರು.
14.          ಸರ್ವ ದುಃಖ ಪರಿಹಾರಕರಾದ ಬುದ್ಧ ಭಗವಾನರ ಪರಿಶುದ್ಧ ಸುಭಾಷಿತವನ್ನು ಕೇಳಿ ತಿಸ್ಸನು ವಿನಮ್ರ ಭಾವದಿಂದ ತಥಾಗತರಿಗೆ ವಂದಿಸಿ, ಪ್ರವಜರ್ಿತನಾಗಲು ನಿರ್ಧರಿಸಿದನು.

ಇಲ್ಲಿಗೆ ಆಮಗಂಧ ಸುತ್ತ ಮುಗಿಯಿತು.

Ratana sutta in kannada( the great ratana sutta for protection )

. ಚೂಳ ವಗ್ಗ
1. ರತನ ಸುತ್ತ
                (ಈ ಸುತ್ತವನ್ನು ಉಪದೇಶವನ್ನು ಭಗವಾನರು ವೈಶಾಲಿಯಲ್ಲಿ ಬೋಧಿಸಿದರು. ಆ ಸಮಯದಲ್ಲಿ ವೈಶಾಲಿಯಲ್ಲಿ ಜನರು ದುಭರ್ಿಕ್ಷ, ರೋಗ ಹಾಗು ಅಮನುಷ್ಯರಿಂದ ಪೀಡಿತರಾಗಿದ್ದರು. ಇದರಲ್ಲಿ ಬುದ್ಧ, ಧಮ್ಮ ಹಾಗು ಸಂಘದ ಗುಣ ವರ್ಣನೆಯಿದೆ.)

1.            ಈ ಪೃಥ್ವಿಯಲ್ಲಿರುವ ಹಾಗು ಆಕಾಶದಲ್ಲಿ ಸೇರಿರುವ ಎಲ್ಲಾ ಜೀವಿಗಳು ಪ್ರಸನ್ನರಾಗಲಿ ಹಾಗು ನಮ್ಮ ಈ ಸುಕಥನವನ್ನು (ಸುವಾಣಿ) ಆದರಪೂರ್ವಕವಾಗಿ ಕೇಳಲಿ.
2.            ಇದನ್ನು ಸರ್ವ ಜೀವಿಗಳು ಕೇಳಲಿ ಹಾಗು ಮಾನವರ ಮೇಲೆ ಮೈತ್ರಿ ತೋರಿಸಲಿ. ಅವರು ಸಹಾ ನಿಮಗೆ ಹಗಲು-ರಾತ್ರಿ ದಾನವನ್ನು ನೀಡುತ್ತಾರೆ. ಅದಕ್ಕಾಗಿ ನೀವು ಅಪ್ರಮತ್ತ (ಜಾಗರೂಕತೆ) ರಾಗಿ ರಕ್ಷಿಸಿರಿ.
3.            ಈ ಲೋಕದ ಅಥವಾ ಪರಲೋಕದ ಯಾವುದೇ ಧನವಿರಲಿ ಅಥವಾ ಸ್ವರ್ಗದ ಯಾವುದೇ ಉತ್ತಮ ರತ್ನಗಳಿರಲಿ ಅವ್ಯಾವುದು ಸಹಾ ಬುದ್ಧರ ಸಮಾನವಾಗಿ ಶ್ರೇಷ್ಠವಾಗಿಲ್ಲ. ಇದು ಬುದ್ಧರಲ್ಲಿರುವ ಅತ್ಯುತ್ತಮ ರತ್ನವಾಗಿದೆ (ಬುದ್ಧರ ಶ್ರೇಷ್ಠ ಅತ್ಯುತ್ತಮ ರತ್ನವಾಗಿದೆ). ಈ ಸತ್ಯ ವಚನದಿಂದ ಸ್ವಸ್ತಿಯಾಗಲಿ.
4.            ಯಾವ ಅತ್ಯುತ್ತಮ ಅಮೃತ, ವಿರಾಗಪದವಾದ ನಿಬ್ಬಾಣವನ್ನು ಸಮಾಹಿತದಿಂದ ಶಾಕ್ಯ ಮುನಿಯು ಅರಿತರೊ, ಆ ಶ್ರೇಷ್ಠ ಧರ್ಮದ ಸಮಾನವಾಗಿ ಬೇರೆ ಯಾವುದೂ ಶ್ರೇಷ್ಠವಲ್ಲ. ಆ ಧರ್ಮವು ಅತ್ಯುತ್ತಮ ರತ್ನವಾಗಿದೆ. ಈ ಸತ್ಯವಚನದಿಂದ ಸರ್ವರಿಗೂ ಸ್ವಸ್ತಿಯಾಗಲಿ.
5.            ಪರಮಶ್ರೇಷ್ಠ ಭಗವಾನ್ ಬುದ್ಧರು ಯಾವ ಸಮಾಧಿಯನ್ನು (ವಿಪಶ್ಶನ) ತತ್ಕಾಲದಿಂದ ಫಲಪ್ರದ ಎಂದು ಹೇಳಿದರೊ, ಆ ಸಮಾಧಿಯ ಸಮಾನವಾಗಿ ಬೇರಾವುದೂ ಇಲ್ಲ. ಇದು ಧಮ್ಮದ ಅತಿ ಉತ್ತಮ ರತ್ನವಾಗಿದೆ. ಈ ಸತ್ಯವಚನದಿಂದ ಸರ್ವರಿಗೂ ಸ್ವಸ್ತಿಯಾಗಲಿ.
6.            ಬುದ್ಧ ಭಗವಾನರಿಂದ ಪ್ರಶಂಸಿತರಾದ ಎಂಟು ಪ್ರಕಾರದ ವ್ಯಕ್ತಿಗಳು ಇದ್ದಾರೆ. ಇವರು ನಾಲ್ಕು ಜೊತೆ ಇರುವರು. ಆ ಬುದ್ಧರ ಶಿಷ್ಯರು ದಕ್ಷಿಣೆಗೆ, ದಾನಕ್ಕೆ ಯೋಗ್ಯರಾಗಿದ್ದಾರೆ. ಹಾಗೆ ಅವರಿಗೆ ದಾನ ನೀಡಿದ್ದು ಮಹಾಫಲವನ್ನು ಪ್ರಾಪ್ತಿಯಾಗಿಸುತ್ತದೆ. ಇದು ಸಂಘದ ಅತಿ ಉತ್ತಮ ರತ್ನವಾಗಿದೆ. ಈ ಸತ್ಯವಚನದಿಂದ ಸ್ವಸ್ತಿಯಾಗಲಿ.
7.            ಯಾವ ಗೋತಮ ಬುದ್ಧ ಭಗವಾನರ ಶಾಸನದಿಂದ ಸ್ಫೂತರ್ಿಹೊಂದಿ ತೃಷ್ಣಾರಹಿತರಾಗಿ, ದೃಢಮನಸ್ಕರಾಗಿ, ಪ್ರಾಪ್ತಿಮಾಡಲು ಕಡುಕಷ್ಟ ಸಾಧ್ಯವಾಗಿರುವುದನ್ನು ಪ್ರಾಪ್ತಿಮಾಡಿ, ಅಮರತ್ವ ಗಳಿಸಿ ವಿಮುಕ್ತಿ ರಸವನ್ನು ಅಸ್ವಾದಿಸಿದ್ದಾರೆ. ಇದು ಸಂಘದ ಅತ್ಯುತ್ತಮ ರತ್ನವಾಗಿದೆ. ಈ ಸತ್ಯವಚನದಿಂದ ಸರ್ವರಿಗೂ ಸ್ವಸ್ತಿಯಾಗಲಿ.
8.            ಯಾವ ಭೂಮಿಯು ಇಂದ್ರಕೀಲದಂತೆ ಅತಿ ದೃಢವಾಗಿ ಸ್ಥಾಪಿತವಾಗಿದೆಯೋ, ವಾಯುವಿನ ವೇಗಕ್ಕೆ ಕಂಪನಮಯವಾಗುವುದಿಲ್ಲವೊ, ಹಾಗೆಯೇ ಸತ್ಪುರುಷನು ಸಹಾ ನಾಲ್ಕು ಮಹಾನ್ ಸತ್ಯಗಳನ್ನು ಆಳವಾಗಿ ಅರಿತು ಜ್ಞಾನದರ್ಶನ ಮಾಡುತ್ತಾನೋ ಆತನು ಸಹಾ ಸಂಘದ ಉತ್ತಮರತ್ನ - ಈ ಸತ್ಯವಚನದಿಂದ ಸರ್ವರಿಗೂ ಸ್ತಸ್ತಿಯಾಗಲಿ.
9.            ಯಾರು ಪರಮ ಗಂಭೀರ ಪ್ರಜ್ಞಾವಾನ್ ಬುದ್ಧರಿಂದ ಪ್ರಕಾಶಿಸಲ್ಪಟ್ಟ ಆರ್ಯ ಸತ್ಯಗಳನ್ನು ಮನನ ಮಾಡಿದ್ದಾರೋ ಅವರು ತೀರಾ ಎಚ್ಚರತಪ್ಪಿದ್ದರೂ ಎಂಟನೆಯ ಜನ್ಮ ಪಡೆಯುವುದಿಲ್ಲ. ಇದು ಸಂಘದ ಉತ್ತಮ ರತ್ನವಾಗಿದೆ. ಈ ಸತ್ಯವಚನದಿಂದ ಸರ್ವರಿಗೂ ಸ್ವಸ್ತಿಯಾಗಲಿ.
10-11. ವಿಶುದ್ಧಿ ಜ್ಞಾನ ಪ್ರಾಪ್ತಿಯ ಜೊತೆಗೆ ಆತನ ಮೂರು ಬಂಧನಗಳಾದ ತನ್ನ ಆತ್ಮ (ಅಸ್ತಿತ್ವ) ವೆಂಬ ಮಿಥ್ಯಾದೃಷ್ಟಿ, ಸಂದೇಹ ಮತ್ತು ಮೂಢಾಚರಣೆಗಳು ಕತ್ತರಿಸಿ ಹೋಗುತ್ತವೆ. ಹಾಗು ನಾಲ್ಕು ಅಪಾಯಗಳಿಂದ (ದುರ್ಗತಿ) ಮುಕ್ತನಾಗುತ್ತಾನೆ. ಹಾಗು ಆರು ಘೋರ ಪಾಪಕರ್ಮಗಳನ್ನು ಎಂದಿಗೂ ಆಚರಣೆ ಮಾಡುವುದಿಲ್ಲ. ಇದು ಸಹಾ ಸಂಘದ ಉತ್ತಮರತ್ನವಾಗಿದೆ. ಈ ಸತ್ಯವಚನದಿಂದ ಸರ್ವರಿಗೂ ಸ್ವಸ್ತಿಯಾಗಲಿ.
12.          ಆತನು ಶರೀರದಿಂದ, ವಚನದಿಂದ, ಅಥವಾ ಚಿತ್ತದಿಂದ ಪಾಪ ಮಾಡಿದರೂ ಆತನು ಅದನ್ನು ಮರೆಮಾಡಲು ಸಾಧ್ಯವಿಲ್ಲ. ಏಕೆಂದರೆ ನಿಬ್ಬಾಣದಶರ್ಿಯು ಬಚ್ಚಿಡಲು ಅಸಮರ್ಥನಾಗುತ್ತಾನೆ. ಇದು ಸಹಾ ಸಂಘದ ಉತ್ತಮ ರತ್ನವಾಗಿದೆ. ಈ ಸತ್ಯವಚನದಿಂದ ಸರ್ವರಿಗೂ ಸ್ವಸ್ತಿಯಾಗಲಿ.
13.          ವಸಂತ ಋತುವಿನ ಪ್ರಾರಂಭದಲ್ಲಿ ಹೇಗೆ ವನವು ಹಾಗು ವೃಕ್ಷಗಳು ಪುಷ್ಠಿಯಾಗುವವೋ, ಹಾಗೆಯೇ ಬುದ್ಧ ಭಗವಾನರು ಶ್ರೇಷ್ಠ ಧರ್ಮದ ಉಪದೇಶ ನೀಡಿದ್ದಾರೆ. ಇದು ಸಹಾ ಸಂಘದಲ್ಲಿ ಉತ್ತಮ ರತ್ನವಾಗಿದೆ. ಈ ಸತ್ಯವಚನದಿಂದ ಸರ್ವರಿಗೂ ಸ್ವಸ್ತಿಯಾಗಲಿ.
14.          ಪರಮಶ್ರೇಷ್ಠ ನಿಬ್ಬಾಣದ ದಾನಿಗಳು, ಸುಶ್ರೇಷ್ಠ ಧರ್ಮದ ಜ್ಞಾನಿಗಳು ಮಹಾ ಮಾರ್ಗದ ನಿದರ್ೆಶಕರು, ಶ್ರೇಷ್ಠ ಲೋಕೋತ್ತರ ಬುದ್ಧರು ಅತ್ಯುತ್ತಮ ಧರ್ಮದ ಉಪದೇಶ ನೀಡಿದ್ದಾರೆ. ಇದು ಸಹಾ ಸಂಘದ ಅತ್ಯುತ್ತಮ ರತ್ನವಾಗಿದೆ. ಈ ಸತ್ಯವಚನದಿಂದ ಸರ್ವರಿಗೂ ಸ್ವಸ್ತಿಯಾಗಲಿ.
15.          ಹಿಂದಿನದು (ಹಳೆಯ) ಕರ್ಮ (ಚಿತ್ತ) ಕ್ಷೀಣವಾಯಿತು. ಹೊಸದು ಎಂದಿಗೂ ಉದಯವಾಗುವುದಿಲ್ಲ. ಆತನ ಚಿತ್ತವು ಪುನರ್ಜನ್ಮದಿಂದ ಮುಕ್ತಿ ಪಡೆಯಿತು. ಆತನು ಕ್ಷಯಬೀಜನಾದನು, ಆತನ ತೃಷ್ಣೆಯು ಅಂತ್ಯಗೊಂಡಿತು. ಅವನು ಈ ಪ್ರದೀಪದಂತೆ ನಿಬ್ಬಾಣ ಪ್ರಾಪ್ತಿಮಾಡುವನು. ಇದು ಸಹಾ ಸಂಘದ ಅತ್ಯುತ್ತಮ ರತ್ನವಾಗಿದೆ. ಈ ಸತ್ಯವಚನದಿಂದ ಸರ್ವರಿಗೂ ಸ್ವಸ್ತಿಯಾಗಲಿ.
16.          ಈ ಸಮಯದಲ್ಲಿ ಪೃಥ್ವಿಯ ಅಥವಾ ಅಂತರಿಕ್ಷದ ಯಾವುದೇ  ಜೀವಿಗಳು ಇಲ್ಲಿ ನೆರೆದಿರಲಿ, ತಥಾಗತರು ಆ ಎಲ್ಲಾ ದೇವ ಮನುಷ್ಯರಿಂದ ಪೂಜಿತರಾಗಿದ್ದಾರೆ. ನಾವು ಬುದ್ಧರಿಗೆ ವಂದಿಸುತ್ತೇವೆ, ಸರ್ವರಿಗೂ ಸ್ವಸ್ತಿಯಾಗಲಿ.
17.          ಈ ಸಮಯದಲ್ಲಿ ಪೃಥ್ವಿಯ ಅಥವಾ ಅಂತರಿಕ್ಷದ ಯಾವುದೇ  ಜೀವಿಗಳು ಇಲ್ಲಿ ನೆರೆದಿರಲಿ, ತಥಾಗತರು ಆ ಎಲ್ಲಾ ದೇವ ಮನುಷ್ಯರಿಂದ ಪೂಜಿತರಾಗಿದ್ದಾರೆ. ನಾವು ಧಮ್ಮಕ್ಕೆ ವಂದಿಸುತ್ತೇವೆ, ಸರ್ವರಿಗೂ ಸ್ವಸ್ತಿಯಾಗಲಿ.
18.          ಈ ಸಮಯದಲ್ಲಿ ಪೃಥ್ವಿಯ ಅಥವಾ ಅಂತರಿಕ್ಷದ ಯಾವುದೇ  ಜೀವಿಗಳು ಇಲ್ಲಿ ನೆರೆದಿರಲಿ, ತಥಾಗತರು ಆ ಎಲ್ಲಾ ದೇವ ಮನುಷ್ಯರಿಂದ ಪೂಜಿತರಾಗಿದ್ದಾರೆ. ನಾವು ಸಂಘಕ್ಕೆ ವಂದಿಸುತ್ತೇವೆ, ಸರ್ವರಿಗೂ ಸ್ವಸ್ತಿಯಾಗಲಿ.

ಇಲ್ಲಿಗೆ ರತನ ಸುತ್ತ ಮುಗಿಯಿತು.

Friday, 5 September 2014

kalama sutta in kannada( famous sutta for rational)

ಕಾಲಾಮ (ವಿಚಾರಶೀಲತೆಯ ಕುರಿತು) ಸುತ್ತ
                ನಾನು ಹೀಗೆ ಕೇಳಿರುವೆ, ಭಗವಾನರು ಒಮ್ಮೆ ಕೋಶಲ ರಾಜ್ಯದ ಕೇಸಪುತ್ತ ಜಿಲ್ಲೆಗೆ ಬೃಹತ್ ಸಮೂಹದೊಂದಿಗೆ ಬಂದರು. ಕೇಸಪುತ್ತರು ಕಾಲಾಮರಿಗೆ ಭಗವಾನರು ಅಲ್ಲಿಗೆ ಬಂದಿರುವುದು ತಿಳಿಯಿತು. ಭಗವಾನರ ಖ್ಯಾತಿ ಆಲಿಸಿ ಎಲ್ಲರೂ ಭಗವಾನರಲ್ಲಿಗೆ ಬಂದು ವಂದಿಸಿ, ಕುಶಲಕ್ಷೇಮವನ್ನು ವಿಚಾರಿಸಿ, ಗೌರವಾರ್ಪಣೆ ಮಾಡಿ ಕುಳಿತರು. ಆಗ ಕಾಲಾಮರು ಭಗವಾನರಲ್ಲಿ ಹೀಗೆ ಪ್ರಶ್ನಿಸಿದರು:

                ಭಂತೆ ಇಲ್ಲಿಗೆ ಕೆಲವು ಸಮಣ ಬ್ರಾಹ್ಮಣರು ಬರುತ್ತಾರೆ, ತಮ್ಮ ಸಿದ್ದಾಂತವನ್ನು ವಿವರಿಸುತ್ತಾರೆ, ಬಣ್ಣಿಸುತ್ತಾರೆ. ಆದರೆ ಹಾಗೆಯೇ ಪರರ ಸಿದ್ಧಾಂತಗಳನ್ನು ಖಂಡಿಸುತ್ತಾರೆ, ನಿಂದಿಸುತ್ತಾರೆ, ನಿರಾಕರಿಸುತ್ತಾರೆ. ಅದೇರೀತಿಯಲ್ಲೇ ಬೇರೆ ಕೆಲವು ಸಮಣ ಬ್ರಾಹ್ಮಣರು ಸಹಾ ಬಂದು ಹಾಗೇ ಅದೇರೀತಿ ಮಾಡುತ್ತಾರೆ. ಹೀಗೆ ವಿಭಿನ್ನವಾದ ಸಿದ್ಧಾಂತಗಳಿಂದಾಗಿ ನಮ್ಮಲ್ಲಿ ಧ್ವಂದ್ವ ಉಂಟಾಗಿದೆ, ಸಂಶಯ ಉಂಟಾಗಿದೆ, ನಮಗೆ ಅವರಲ್ಲಿ ಸತ್ಯ ಹೇಳುತ್ತಿರುವವರು ಯಾರು? ಮಿಥ್ಯ ನುಡಿಯುತ್ತಿರುವವರು ಯಾರು ತಿಳಿಯದಾಗಿದೆ. ಇದನ್ನು ನೀವೇ ನಮಗೆ ಪರಿಹರಿಸಬೇಕು ಭಂತೆ.
                ಓ ಕಾಲಾಮರೇ, ನೀವು ಸಂಶಯಸ್ತ ವಿಷಯಗಳಲ್ಲಿಯೇ ಸಂಶಯಪಡುತ್ತಿರುವಿರಿ, ದ್ವ್ವಂದ್ವವುಳ್ಳ ವಿಷಯದಲ್ಲೇ ಧ್ವಂದ್ವಪಡುತ್ತಿರುವಿರಿ. ಸಂಶಯಸ್ತ ವಿಷಯಗಳಲ್ಲಿ ದ್ವಂದ್ವತೆ ಆಗುವುದು.
                ಈಗ ನೋಡಿ ಕಾಲಾಮರೇ, ಸುದ್ದಿಗಳಿಗಾಗಲಿ ಅಥವಾ ಸಂಪ್ರದಾಯಕ್ಕಾಗಲಿ ಅಥವಾ ಅಸಂಪ್ರದಾಯ ಸಿದ್ಧಾಂತಕ್ಕಾಗಲಿ ನಂಬದಿರಿ. ಅದರಲ್ಲೇ ದಾರಿ ತಪ್ಪಬೇಡಿ. ಧಮ್ಮಗ್ರಂಥಗಳಲ್ಲಿದೆ ಎಂದಾಗಲಿ, ಅಥವಾ ತರ್ಕ ಸಮ್ಮತ ಎಂದಾಗಲಿ, ಊಹೆಗೆ ನಿಲುಕುತ್ತದೆ ಎಂದಾಗಲಿ, ಪಯರ್ಾಯಾಲೋಚಿಸಿ ಸಿದ್ಧವಾದುದೆಂದಾಗಲಿ, ಚಿಂತನೆ ಮಾಡಿ ಸಿದ್ಧವಾದ ಸಿದ್ಧಾಂತ ಎಂದಾಗಲಿ, ಚೆನ್ನಾಗಿ ಕಾಣಿಸುತ್ತದೆ ಎಂದಾಗಲಿ, ಇದು ಗೌರವಾರ್ಹ ಗುರುವಿನಿಂದ ಬಂದಿದೆ ಎಂದಾಗಲಿ ನಂಬಬೇಡಿ. ಆದರೆ ಕಾಲಾಮರೇ, ಯಾವಾಗ ನೀವೇ ಚಿಂತನೆ ಮಾಡಿದಾಗ, ನಿಮಗೆ ಇವು ಅನರ್ಥಕಾರಿ, ನಿಂದನೀಯ, ಜ್ಞಾನಿಗಳಿಂದ ನಿಷೇಧಿಸಲ್ಪಡುತ್ತದೆ ಎಂದು ಗೊತ್ತಾದಾಗ, ಇವುಗಳ ಪಾಲನೆಯಿಂದ ದುಃಖವಾಗುತ್ತದೆ ಎಂದು ಅರಿವಾದಾಗ ಅದನ್ನು ತಿರಸ್ಕರಿಸಿ.
                ಈಗ ಕಾಲಾಮರೇ, ಒಬ್ಬನಲ್ಲಿ ಲೋಭ ಉಂಟಾದಾಗ (ಅಥವಾ ದ್ವೇಷ ಉಂಟಾದಾಗ... ಅಥವಾ ಮೋಹ ಉಂಟಾದಾಗ) ಅದು ಆತನಿಗೆ ಲಾಭ ತರುತ್ತದೆಯೋ ಅಥವಾ ನಷ್ಟವನ್ನು ಉಂಟುಮಾಡುತ್ತದೆಯೋ?
                ಅದು ನಷ್ಟವನ್ನು, ಹಾನಿಯನ್ನು ತರುತ್ತದೆ ಭಗವಾನರೇ.
                ಕಾಲಾಮರೇ, ಈಗ ಆತನು ಲೋಭಿಯಾದಾಗ (ದ್ವೇಷಿಯಾದಾಗ/ಮೋಹಿಯಾದಾಗ) ಆತನ ಚಿತ್ತವು ನಿಯಂತ್ರಣ ತಪ್ಪುತ್ತದೆ, ಆಗ ಆತನು ಜೀವಹತ್ಯೆ, ಕಳ್ಳತನ, ವ್ಯಭಿಚಾರ, ಸುಳ್ಳು, ಮದ್ಯಪಾನವೆಲ್ಲಾ ಮಾಡುತ್ತಾನೆ. ಹಾಗೆಯೇ ಪರರಿಗೂ ಪ್ರೋತ್ಸಾಹ ನೀಡುತ್ತಾನೆ. ಈ ರೀತಿಯಾಗಿ ಭವಿಷ್ಯದ ದೀರ್ಘ ದುಃಖ ಉಂಟಾಗಲು ಕಾರಣಕರ್ತನಾಗುತ್ತಾನೆ ಅಲ್ಲವೇ?
                ಹೌದು ಭಗವಾನರೇ.
                ಈಗ ನಿಮಗೆ ಹೇಗೆ ಅನಿಸುತ್ತದೆ ಕಾಲಾಮರೇ, ಇವು ಲಾಭಕಾರಿಯೋ ಅಥವಾ ನಷ್ಟಕಾರಿಯೋ?
                ಇವು ನಷ್ಟಕಾರಿ ಭಗವಾನ್.
                ಇವು ನಿಂದನೀಯವೋ ಅಥವಾ ಅಲ್ಲವೋ.
                ನಿಂದನೀಯವಾದುದು ಭಗವಾನ್.
                ಇವು ಜ್ಞಾನಿಗಳಿಂದಲೇ ನಿಷೇಧಿಸಲ್ಪಡುವುದು ಅಲ್ಲವೇ?
                ಹೌದು ಭಗವಾನ್.
                ಇವುಗಳನ್ನು ಪರಿಪಾಲಿಸಿದಾಗ ದೀರ್ಘಕಾಲ ದುಃಖ, ನಷ್ಟ ಉಂಟಾಗುತ್ತದೆ ಅಲ್ಲವೇ?
                ಹೌದು ಭಂತೆ.
                ಈಗ ಕಾಲಾಮರೇ, ಈ ಲೋಭದಿಂದ (ದ್ವೇಷದಿಂದ ಅಥವಾ ಮೋಹದಿಂದ) ಮುಕ್ತನಾದರೆ ಆತನಿಗೆ ಲಾಭವಾಗುತ್ತದೋ ಅಥವಾ ನಷ್ಟವಾಗುತ್ತದೋ?
                ಲಾಭವಾಗುತ್ತದೆ ಭಂತೆ.
                ಈಗ ಇಂತಹ ಮನುಷ್ಯನು ಲೋಭದಿಂದ, ದ್ವೇಷದಿಂದ ಮತ್ತು ಮೋಹದಿಂದ ಮುಕ್ತನಾದಾಗ, ಆತನು ಜೀವಹತ್ಯೆಯಾಗಲಿ, ಕಳ್ಳತನವಾಗಲಿ, ವ್ಯಭಿಚಾರವಾಗಲಿ, ಸುಳ್ಳಾಗಲಿ, ನುಡಿಯಲಾರನು, ಮದ್ಯ ಸೇವಿಸಲಾರನು. ಹಾಗೆಯೇ ಪರರಿಗೂ ಆತನು ದಾರಿ ತಪ್ಪಿಸಲಾರನು. ಹೀಗಿರುವಾಗ ಆತನಿಗೆ ದುಃಖವಿಲ್ಲದೆ, ನಷ್ಟವಿಲ್ಲದೆ ಸುಖಿಯಾಗಿ ಇರುತ್ತಾನೆ ಅಲ್ಲವೆ.
                ಹೌದು ಭಂತೆ.
                ಈಗ ಕಾಲಾಮರೇ, ನೀವೇನು ಯೋಚಿಸುವಿರಿ? ಲೋಭದಿಂದ, ದ್ವೇಷದಿಂದ ಮತ್ತು ಮೋಹದಿಂದ ಮುಕ್ತನಾಗುವುದು ಲಾಭಕಾರಿಯೋ ಅಥವಾ ನಷ್ಟಕಾರಿಯೋ?
                ಲಾಭಕಾರಿ ಭಂತೆ.
                ಇವು ನಿಂದನೀಯವೋ ಅಥವಾ ಅಲ್ಲವೋ?
                ಇವು ನಿಂದನೀಯವಲ್ಲ.
                ಜ್ಞಾನಿಗಳಿಂದ ನಿರಾಕರಿಸಲ್ಪಡುತ್ತದೋ ಅಥವಾ ಪ್ರಶಂಸಿಸಲ್ಪಡುತ್ತದೋ?
                ಪ್ರಶಂಸಿಲ್ಪಡುತ್ತದೆ ಭಂತೆ.
                ಹೀಗೆ ಪರಿಪಾಲಿತವಾದಾಗ ಅವು ಸುಖಕಾರಿಯೋ ಅಥವಾ ಅಲ್ಲವೋ.
                ಸುಖಕಾರಿ ಭಂತೆ, ಸುಖವನ್ನು ತರುತ್ತದೆ.
                ಈಗ ಕಾಲಾಮರೇ, ಯಾವ ಆರ್ಯ ಶ್ರಾವಕನು ಹೀಗೆ ಲೋಭದಿಂದ, ದ್ವೇಷದಿಂದ ಮತ್ತು ಮೋಹದಿಂದ ಮುಕ್ತನಾದಾಗ ಆತನು ದಿಗ್ಭ್ರಮೆಪಡುವುದಿಲ್ಲ. ಬದಲಾಗಿ ಸ್ವನಿಯಂತ್ರಣವುಳ್ಳವನಾಗುತ್ತಾನೆ ಮತ್ತು ಸ್ಮೃತಿವಂತನಾಗುತ್ತಾನೆ ಮತ್ತು ಚಿತ್ತದಲ್ಲಿ ಮೈತ್ರಿಯಿಂದ ಕೂಡಿರುತ್ತಾನೆ, ಕರುಣೆಯಿಂದ ಕೂಡಿರುತ್ತಾನೆ, ಮುದಿತಾದಿಂದ ಕೂಡಿರುತ್ತಾನೆ, ಸಮಚಿತ್ತತೆಯಿಂದ ಕೂಡಿರುತ್ತಾನೆ. ಇದೇರೀತಿಯ ಭಾವನೆಯಿಂದ ಆತನು ಒಂದು ದಿಕ್ಕಿಗೆ ಹರಡುತ್ತಾನೆ. ಹಾಗೆಯೇ ಎಲ್ಲಾ ದಿಕ್ಕುಗಳಿಗೂ ಹರಡುತ್ತಾನೆ. ಈ ರೀತಿಯಾಗಿ ಆರ್ಯಶ್ರಾವಕನು ಚಿತ್ತದಿಂದ, ದ್ವೇಷ, ವಿರೋಧ, ಚಿತ್ತಕ್ಲೇಶಗಳಿಂದ ಮುಕ್ತನಾಗಿ, ಪರಿಶುದ್ಧನಾಗುತ್ತಾನೆ. ಅಂತಹುದರಿಂದ ಈ ಜನ್ಮದಲ್ಲೇ ನಾಲ್ಕು ಸಮಾಧಾನವನ್ನು ಕಾಣಬಹುದು.
1.            ಪರಲೋಕವಿದ್ದರೆ ಕರ್ಮಫಲವು ಸಿಗುವುದಿದ್ದರೆ ನಮ್ಮ ಒಳ್ಳೆಯ ಕಾರ್ಯಗಳನ್ನು ಮಾಡಿರುವೆ, ನನಗೆ ಸುಗತಿಯೇ ಸಿಗುವುದು.
2.            ಪರಲೋಕವಿಲ್ಲದಿದ್ದರೆ, ಕರ್ಮಫಲ ಸಿಗದಿದ್ದರೆ ಈ ಜನ್ಮದಲ್ಲೇ ದ್ವೇಷರಹಿತನಾಗಿ, ದುಃಖರಹಿತನಾಗಿ, ಕ್ಲೇಷರಹಿತನಾಗಿ ಸುಖಿಯಾಗಿ ಇರುತ್ತೇನೆ.
3.            ಕರ್ಮಫಲ ಇರುವುದಾದರೆ, ನಾನು ಹಿಂದೆ ಪಾಪ ಮಾಡಿದ್ದರೂ, ಈಗ ನಾನು ಯಾರ ಅಹಿತವನ್ನು ಬಯಸುತ್ತಿಲ್ಲ. ಹೀಗಿರುವಾಗ ದುಃಖವು ನನಗೆ ಹೇಗೆತಾನೆ ತಟ್ಟಿತು.
4.            ಕರ್ಮಫಲ ಸಿಗುವುದಾದರೆ, ನನ್ನಿಂದ ಯಾವ ಪಾಪವು ನಡೆದಿಲ್ಲ, ಹೀಗೆ ಎರಡು ರೀತಿಯಲ್ಲಿ ಪರಿಶುದ್ಧನಾಗಿಯೇ ಇರುವೆನು.
                ಹೀಗೆ ಕಾಲಾಮರೆ, ಆ ಆರ್ಯಶ್ರಾವಕನು ಚಿತ್ತಕ್ಲೇಷಗಳಿಂದ, ದ್ವೇಷದಿಂದ, ವಿಮುಕ್ತನಾಗಿ ನಿರ್ಮಲನಾಗಿ ಈ ಜೀವಿತದಲ್ಲೇ ಈ ನಾಲ್ಕು ಸಮಾಧಾನ ಪಡೆಯುತ್ತಾನೆ.
                ಅದ್ಭುತ ಭಂತೆ, ನಾವು ಇಂದಿನಿಂದ ತಮಗೆ, ಧಮ್ಮಕ್ಕೆ ಮತ್ತು ಸಂಘಕ್ಕೆ ಶರಣು ಹೋಗುವೆವು. ಭಗವಾನರು ನಮ್ಮನ್ನು ತಮ್ಮ ಉಪಾಸಕರೆಂದು ಸ್ವೀಕರಿಸಲಿ. ನಾವು ಜೀವಿತ ಪರ್ಯಂತ ತ್ರಿಶರಣು ಹೋಗುವೆವು.
                ಕಾಲಾಮ ಸುತ್ತದಲ್ಲಿ ನಾವು ಅರಿಯುವಂತಹುದು ಏನೆಂದರೆ ಸಿದ್ಧಾಂತಗಳಿಗೆ, ಸಂಪ್ರದಾಯಕ್ಕೆ, ಅಸಂಪ್ರದಾಯಕ್ಕೆ, ತರ್ಕ, ಊಹೆ, ಸುದ್ದಿಗಳಿಗೆ, ಪೂಜ್ಯ ಗ್ರಂಥಗಳಿಗೆ, ಪೂಜ್ಯ ಗುರುಗಳಿಗೂ ನಂಬಬಾರದು. ಏಕೆಂದರೆ ನಾವು ಕಂಡಂತೆ ಇವುಗಳಲ್ಲಿ ಎಷ್ಟೋ ತಪ್ಪಿರುತ್ತದೆ, ಅಹಿತ ತರುವಂತಹುದು ಇರುತ್ತದೆ. ಆದ್ದರಿಂದ ನಾವು ವಿಚಾರಶೀಲರಾಗಿ ಸತ್ಯವನ್ನೇ ಸ್ವೀಕರಿಸಬೇಕು.
                ಎರಡನೆಯ ವಿಷಯ ಏನೆಂದರೆ ಭಗವಾನರ ಬೋಧನೆಯಲ್ಲಿ ಇಲ್ಲಿ ಲೋಭರಹಿತ, ದ್ವೇಷರಹಿತ ಮತ್ತು ಮೋಹರಹಿತರಾಗಿರುವುದು ಮತ್ತು ಮೈತ್ರಿ, ಕರುಣೆ, ಮುದಿತಾ ಮತ್ತು ಸಮಚಿತ್ತತೆಯಿಂದ ಕೂಡಿರುವುದು.

                ನಿಜಕ್ಕೂ ಈ ರೀತಿಯ ಶ್ರೇಷ್ಠ ಜೀವನದಿಂದಾಗಿ ಇಹ ಮತ್ತು ಪರರಲ್ಲಿಯೂ ಸಹಾ ಸುಖ ಪ್ರಾಪ್ತಿಯೇ ಆಗುವುದು.

Saturday, 30 August 2014

muni sutta in kannada (who is muni or monk ? )

.

12. ಮುನಿ ಸುತ್ತ
(ಮುನಿ ಯಾರು ?)
1. ಪ್ರೀತಿ ಸಂಬಂಧಗಳ ಸಲಿಗೆಯಿಂದ ಭಯ ಉತ್ಪನ್ನವಾಗುತ್ತದೆ. ಗೃಹಸ್ಥ ಜೀವನದಿಂದ ರಜ (ರಾಗ, ದ್ವೇಷ, ಮೋಹ) ಉತ್ಪನ್ನವಾಗುತ್ತದೆ. ಆದ್ದರಿಂದ ಬೆರೆಯುವಿಕೆಯನ್ನು (ಪ್ರೇಮ-ಸ್ನೇಹ) ಮಾಡದೆ ಹಾಗು ಗೃಹಸ್ಥ ಜೀವನದಲ್ಲಿ ಇರದೆ ಇರುವುದೇ ಉತ್ತಮವಾಗಿದೆ. ಇದನ್ನು ಮುನಿಗಳು ದಶರ್ಿಸಿದ್ದಾರೆ.
2. ಯಾರು ಉತ್ಪನ್ನವಾದ ಪಾಪವನ್ನು ಕತ್ತರಿಸಿ ಮತ್ತೆ ಅದರಲ್ಲಿ ಅಂಟುವುದಿಲ್ಲವೊ, ಹಾಗು ಅದರ ಉತ್ಪನ್ನವನ್ನು ಬೆಳೆಸುವುದಿಲ್ಲವೊ, ಆತನನ್ನು ಏಕಾಂಗಿ ಮುನಿ ಎನ್ನುತ್ತಾರೆ. ಆ ಮಹಾ ಋಷಿಯು ಶಾಂತಿಪಥ (ನಿಬ್ಬಾಣ)ವನ್ನು ನೋಡಿದ್ದಾನೆ.
3. ವಸ್ತುಸ್ಥಿತಿಯನ್ನು ಚೆನ್ನಾಗಿ ಅರಿತು ಲೋಕದಲ್ಲಿ ಉತ್ಪನ್ನ ಮಾಡುವ ಬೀಜವನ್ನು (ಅಜ್ಞಾನ) ನಷ್ಟಮಾಡಿ, ಅದಕ್ಕೆ ಸ್ನೇಹ (ಅಂಟದೆ) ಮಾಡದೆ ಇರುವನೋ, ತರ್ಕವನ್ನು ಮೀರಿ ಅಲೌಕಿಕನಾಗಿದ್ದಾನೆಯೋ ಅಂತಹ ಜನ್ಮಕ್ಷಯಿ ದರ್ಶನವುಳ್ಳವನೇ ಮುನಿ ಎಂದು ಹೇಳಲ್ಪಡುತ್ತಾನೆ.
4. ಸರ್ವ ಕಾಮಲೋಕ ಇತ್ಯಾದಿಯನ್ನು ಅರಿತು, ಅವ್ಯಾವುದರಲ್ಲೂ ಇರುವ ಇಚ್ಛೆ ವ್ಯಕ್ತಪಡಿಸದೆ, ರಾಗರಹಿತನೂ, ಆಸಕ್ತರಹಿತನೂ ಆದ ಅವನೇ ಮುನಿಯಾಗಿರುವನು. ಆತನು ಪಾಪ-ಪುಣ್ಯದ ಸಂಗ್ರಹ ಮಾಡುವುದಿಲ್ಲ. ಆತನಂತೂ ಪಾರಂಗತನಾಗಿದ್ದಾನೆ.
5. ಯಾರು ಸರ್ವವನ್ನೂ ಜಯಿಸಿದವನೋ, ಸರ್ವವನ್ನು ಅರಿತಿರುವನೋ, ಸುಮೇಧನೋ, ಯಾರು ಸರ್ವ ಧರ್ಮ (ಚಿತ್ತವೃತ್ತಿ) ಗಳಲ್ಲೂ ಲಿಪ್ತನಾಗುವುದಿಲ್ಲವೋ, ಸರ್ವತ್ಯಾಗಿಯೋ, ತೃಷ್ಣೆ ಕ್ಷಯದಿಂದ ವಿಮುಕ್ತನೊ ಆತನನ್ನು ಜ್ಞಾನಿಗಳು ಮುನಿ ಎನ್ನುವರು.
6. ಯಾರು ಪ್ರಜ್ಞಾ ಬಲದಿಂದ ಇರುವನೋ, ಶೀಲಸಂಪನ್ನನೋ, ಏಕಾಗ್ರಚಿತ್ತನೋ, ಧ್ಯಾನದಲ್ಲಿ ಲೀನನೋ, ಸ್ಮೃತಿವಂತನೋ, ಬಂಧನಮುಕ್ತನೋ ಹಾಗು ಪೂರ್ಣವಾಗಿ ಆಸವರಹಿತನೋ ಆತನನ್ನು ಜ್ಞಾನಿಗಳು ಮುನಿ ಎನ್ನುತ್ತಾರೆ.
7. ಏಕಾಂಗಿಯಾಗಿ ಸಂಚರಿಸುವ ಅಪ್ರಮಾದಿಯನು, ನಿಂದೆ ಹಾಗು ಪ್ರಶಂಸೆಗಳಿಂದ ವಿಚಲಿತನಾಗದಿರುವವನು, ಸಿಂಹದ ಸಮಾನವಾದ ಶಬ್ದಗಳಿಂದ ಹೆದರದವನೊ, ಬಲೆಗೆ ಸಿಲುಕದ ವಾಯುವಿನಂತೆ ಇರುವವನೊ, ಜಲದಲ್ಲಿ ಲಿಪ್ತವಾಗದ ಕಮಲ ಸದೃಶನೊ, ಪರರಿಗೆ ಮಾರ್ಗದಶರ್ಿಯು ಹಾಗು ಪರರ ಅನುಯಾಯಿ ಆಗದವನು ಆದ ಅವನನ್ನು ಜ್ಞಾನಿಗಳು ಮುನಿ ಎನ್ನುತ್ತಾರೆ.
8. ಸ್ನಾನ ಮಾಡುವ ತೀರದಲ್ಲಿರುವ ಕಂಬದ ಹಾಗೆ ಸ್ಥಿರವಾಗಿರುವವನನ್ನು, ಪರರ ಮಾತುಗಳ ಪ್ರಭಾವ ಅಲ್ಪವೂ ಆಗದಿರುವವನನ್ನು ಅಂತಹ ವೀತರಾಗ, ಇಂದ್ರಿಯ ಸಂಯಮಿಯನ್ನು ಜ್ಞಾನಿಗಳು ಮುನಿ ಎನ್ನುತ್ತಾರೆ.
9. ಯಾರು ಲಾಳಿಯ ಹಾಗೆ ಋಜು ಹಾಗು ಸ್ಥಿರ ಚಿತ್ತವುಳ್ಳವನೊ, ಪಾಪಕರ್ಮಗಳಿಗೆ ಅಸಹ್ಯಿಸುವವನೊ, ಕುಶಲ-ಅಕುಶಲ ಕರ್ಮಗಳ ಅರಿವುಳ್ಳವನೋ, ವಿಷಯ ಸ್ಥಿತಿಗಳಲ್ಲಿ ಶಾಂತನೋ, ಆತನನ್ನು ಜ್ಞಾನಿಗಳು ಮುನಿ ಎನ್ನುತ್ತಾರೆ.
10. ಯಾರು ಸಂಯಮಿಯೋ, ಪಾಪಕರ್ಮ ಮಾಡನೋ, ಯಾರು ಬಾಲ್ಯ ಹಾಗು ಮಧ್ಯ ವಯಸ್ಸಿನಲ್ಲೂ ಸಂಯಮದಿಂದಿರುವನೋ, ಯಾರು ಪರರಿಂದ ಕ್ರೋಧಿತರಾಗುವುದಿಲ್ಲವೊ, ಪರರಿಗೂ ಕ್ರೋಧವುಂಟು ಮಾಡುವುದಿಲ್ಲವೋ, ಅಂತಹವನಿಗೆ ಜ್ಞಾನಿಗಳು ಮುನಿ ಎನ್ನುತ್ತಾರೆ.
11. ಯಾರು ಅಗ್ರ ಭಾಗದಿಂದ ಮಧ್ಯ ಭಾಗದಿಂದ ಹಾಗು ಅವಶೇಷ ಭಾಗದಿಂದ ಭಿಕ್ಷೆ ತೆಗೆದುಕೊಳ್ಳುವರೋ, ಯಾರ ಜೀವನವು ಪರರ ದಾನದಿಂದ ಅವಲಂಬಿತವಾಗಿದೆಯೋ (ಆಹಾರ), ಯಾರು ದಾನ ನೀಡಿದವನಿಗೆ ಪ್ರಶಂಸೆ ಅಥವಾ ನಿಂದನೆ ಮಾಡುವುದಿಲ್ಲವೋ ಆತನಿಗೆ ಜ್ಞಾನಿಗಳು ಮುನಿ ಎನ್ನುತ್ತಾರೆ.
12. ಯಾವ ಮುನಿಯು ಮೈಥುನದಿಂದ ವಿರತನಾಗಿ, ಏಕಾಂಗಿಯಾಗಿ ಸಂಚರಿಸುವನೋ, ಯಾರು ಯೌವ್ವನದಲ್ಲಿಯೂ ಅನಾಸಕ್ತನಾಗಿದ್ದಾನೋ, ಯಾರು ಮದದಿಂದ ಎಚ್ಚರ ತಪ್ಪಿಲ್ಲವೋ ಆತನನ್ನು ಜ್ಞಾನಿಗಳು ಮುನಿ ಎನ್ನುವರು.
13. ತನ್ನ ಜ್ಞಾನದಿಂದ ಲೋಕವನ್ನು ಅರಿತಿರುವನೋ, ಯಾರು ಲೋಕದ ಪ್ರವಾಹ ಹಾಗು ಭವಸಾಗರವನ್ನು ದಾಟಿ ಸ್ಥಿರನಾಗಿರುವನೋ, ಅಂತಹ ಬಂಧನಹೀನ ಹಾಗು ಅನಾಸವನನ್ನು ಜ್ಞಾನಿಗಳು ಮುನಿ ಎನ್ನುತ್ತಾರೆ.
14. ಸ್ತ್ರೀಯ ಪಾಲನೆಯಲ್ಲಿ ಲೀನವಾದ ಗೃಹಸ್ಥನಿಗೂ ಹಾಗು ಕಾಷಾಯವಸ್ತ್ರಧಾರಿ ಭಿಕ್ಷುವಿಗೂ ಯಾವ ಸಮಾನತೆಯೂ ಇಲ್ಲ, ಇಬ್ಬರಿಗೂ ಬಹಳ ಅಂತರ (ವ್ಯತ್ಯಾಸ) ವಿರುವ ಸ್ವಭಾವವಿದೆ. ಏಕೆಂದರೆ ಗೃಹಸ್ಥನೂ ಅಸಂಯಮಿಯೂ ಹಾಗು ಹಿಂಸೆಯಲ್ಲಿ ಆನಂದಿಸುವವನೂ (ರತನೂ), ಆದರೆ ಮುನಿಯು ನಿತ್ಯ ಸಂಯಮದ ರಕ್ಷಣೆ ಮಾಡುತ್ತಾನೆ.
15. ಹೇಗೆ ಆಕಾಶದಲ್ಲಿ ಸಂಚರಿಸುವ ನೀಲಿ ವರ್ಣದ ಕುತ್ತಿಗೆಯುಳ್ಳ ನವಿಲು ಹಾರುವಿಕೆಯಲ್ಲಿ ಹಂಸದ ಸಮಾನ ಆಗುವುದಿಲ್ಲವೋ, ಅದೇರೀತಿ ಗೃಹಸ್ಥನು ಭಿಕ್ಷುವಿನ ಸಮಾನ ಆಗುವುದಿಲ್ಲ. ಮುನಿಯಂತೂ ಏಕಾಂತತೆಯಲ್ಲಿದ್ದು ಧ್ಯಾನದಲ್ಲಿ ಲೀನವಾಗುತ್ತಾನೆ.
ಇಲ್ಲಿಗೆ ಮುನಿ ಸುತ್ತ ಮುಗಿಯಿತು.