Tuesday, 24 March 2020

ಅಸ್ಸಲಾಯನ ಸುತ್ತ Assalayana sutta in kannada

  ಅಸ್ಸಲಾಯನ ಸುತ್ತ(ಸಂಕ್ಷಿಪ್ತ)



ಒಮ್ಮೆ ಬ್ರಾಹ್ಮಣರು ಅಸ್ಸಲಾಯನ ಎಂಬ ಬ್ರಾಹ್ಮಣ ಯುವಕನ ನಾಯಕತ್ವದಲ್ಲಿ ಬಂದು ಹೀಗೆ ಕೇಳಿದರು:

“ಭಗವಾನ್ ಬ್ರಾಹ್ಮಣರು ಹೀಗೆ ಹೇಳುತ್ತಾರೆ: ‘ಬ್ರಾಹ್ಮಣರದ್ದೇ ಶ್ರೇಷ್ಠ ಜಾತಿ, ಬೇರೆ ಜಾತಿಗಳು ತುಚ್ಛವಾದುದು. ಬ್ರಾಹ್ಮಣರದ್ದೇ ಸುವರ್ಣದ ಜಾತಿ, ಪರರದ್ದು ದುರ್ವಣವಾಗಿದ್ದು, ಬ್ರಾಹ್ಮಣರು ಮಾತ್ರ ಪರಿಶುದ್ಧರು, ಬೇರೆಯವರಲ್ಲ, ಬ್ರಾಹ್ಮಣರು ಮಾತ್ರ ಬ್ರಹ್ಮನಿಂದ ಹುಟ್ಟಿದವರು. ಆತನ ಮುಖದಿಂದ ಜನಿಸಿದವರು, ಬ್ರಹ್ಮನ ವಂಶಸ್ಥರು ಆಗಿದ್ದಾರೆ.”

ಆಗ ಭಗವಾನರು ಈ ಎಲ್ಲಾ ಕಾರಣಗಳನ್ನು ನೀಡಿ ಅವರ ವಾದಗಳನ್ನು ಭಂಗ ಮಾಡುತ್ತಾರೆ.

1. ಬ್ರಾಹ್ಮಣರ ಪತ್ನಿಯರು ಸಹಾ ಎಲ್ಲರಂತೆಯೇ ಜನ್ಮ ನೀಡುತ್ತಾರೆ.

2. ಪಾಶ್ಚಿಮಾತ್ಯ ರಾಷ್ಟ್ರಗಳಾದ ಯೋನ ಮತ್ತು ಕಾಂಬೋಜಗಳಲ್ಲಿ 2 ಜಾತಿಯಿದೆ. ಯಜಮಾನ ಮತ್ತು ಸೇವಕ ಅವರಲ್ಲಿಯು ಅದು ನಿತ್ಯವಲ್ಲ, ಸ್ವಾಮಿಯು ಸೇವಕನಾಗಬಹುದು, ಸೇವಕನು ಸ್ವಾಮಿಯಾಗಬಹುದು.

3. ಯಾರೇ ಪಾಪ ಮಾಡಿದರೂ ಸಹಾ ದುರ್ಗತಿಗೆ ಬೀಳುವರು, ಇದಕ್ಕೆ ಯಾರೂ ಹೊರತಲ್ಲ.

4. ಪ್ರತಿಯೊಬ್ಬರು ಪುಣ್ಯ ಆಚರಿಸಬಹುದು, ಮೈತ್ರಿ ಧ್ಯಾನಗಳಲ್ಲಿ ಪ್ರವೀಣರಾಗಬಹುದು.

5. ಪ್ರತಿಯೊಬ್ಬರು ಸ್ನಾನ ಮಾಡಿ ಶುದ್ಧರಾಗಬಹುದು.

6. ಪ್ರತಿಯೊಬ್ಬರು ಹಚ್ಚಿದರೂ ಬೆಂಕಿ ಬರುವುದು, ಅದರಿಂದ ಅದರ ಪ್ರಯೋಜನ ಪಡೆಯಬಹುದು.

“ಹೀಗಿರುವಾಗ ಬ್ರಾಹ್ಮಣರೇ ಶ್ರೇಷ್ಠರೆನ್ನುವುದಕ್ಕೆ ಆಧಾರವೇನು?” ಆದರೂ ಸಹಾ ಅವರು ಪಟ್ಟು ಹಿಡಿಯುತ್ತಾರೆ.

ಆಗ ಭಗವಾನರು ಅವರನ್ನು ಬೇರೊಂದು ಹಾದಿಯಲ್ಲಿ ಚರ್ಚೆಗೆ ಆರಂಭಿಸುತ್ತಾರೆ: “ಅಸ್ಸಾಲಾಯನ ಇದರ ಬಗ್ಗೆ ಹೇಗೆ ಯೋಚಿಸುವೆ? ಇಬ್ಬರು ಬ್ರಾಹ್ಮಣ ಯುವಕರಿರುತ್ತಾರೆ, ಒಬ್ಬ ವೇದ ಜ್ಞಾನಗಳಲ್ಲಿ ಪರಿಣಿತ ಮತ್ತೊಬ್ಬ ಅವಿದ್ಯಾವಂತ. ಇಲ್ಲಿ ಯಾರಿಗೆ ಹೆಚ್ಚು ಗೌರವ, ಆತಿಥ್ಯ ನೀಡುತ್ತಾರೆ.”

“ವಿದ್ಯಾವಂತನಿಗೆ, ಅವಿದ್ಯಾವಂತನಿಗಲ್ಲ.”

“ಅಸ್ಸಲಾಯನ, ಈಗ ಇಬ್ಬರು ಬ್ರಾಹ್ಮಣರಿರುತ್ತಾರೆ, ಒಬ್ಬ ವೇದ ಜ್ಞಾನದಲ್ಲಿ ಪರಿಣಿತ ಆದರೆ ದುರಾಚಾರಿ, ದುಶ್ಶೀಲನಾಗಿರುತ್ತಾನೆ ಮತ್ತು ಇನ್ನೊಬ್ಬ ಅವಿದ್ಯಾವಂತ, ಆದರೆ ಸುಶೀಲ ಚಾರಿತ್ರ್ಯವಂತನಾಗಿರುತ್ತಾನೆ. ಇವರಲ್ಲಿ ಯಾರಿಗೆ ಗೌರವ ಆತಿಥ್ಯ ಸಿಗುತ್ತದೆ?” “ಅವಿದ್ಯಾವಂತನಾಗಿದ್ದರೂ ಶೀಲವಂತನಾದವನಿಗೆ ಗೌರವ ಆತಿಥ್ಯ ಸಿಗುತ್ತದೆ.”

“ಓ ಅಸ್ಸಲಾಯನ ಮೊದಲು ಜನ್ಮದ ಬಗ್ಗೆ ಮಾತನಾಡಿದೆವು, ನಂತರ ವೇದಜ್ಞಾನ (ಮಂತ್ರಗಳ) ಬಗ್ಗೆ ಮಾತನಾಡಿದೆವು, ಕೊನೆಗೆ ಪರಿಶುದ್ಧತೆಯಿಂದಲೇ (ಶೀಲದಿಂದ) ಗೌರವ ಆತಿಥ್ಯ ಸಿಗುತ್ತದೆ ಎಂದು ನೀವು ಒಪ್ಪಿರುವಿರಿ. ನಾನು ಸಹಾ ಅದನ್ನೇ ಬೋಧಿಸುತ್ತಿರುವೆ. ನಾಲ್ಕು ವರ್ಣಗಳಲ್ಲಿ ಶೀಲವಂತರೇ ಗೌರವಕ್ಕೆ ಪಾತ್ರರು. ಯಾರು ಸಹಾ ಜನ್ಮದಿಂದ ಶ್ರೇಷ್ಠನಾಗುವುದಿಲ್ಲ, ಕರ‍್ಮದಿಂದ (ಶೀಲ)ದಿಂದ ಶ್ರೇಷ್ಠನಾಗುತ್ತಾನೆ.”

ಇದನ್ನು ಕೇಳಿದ ಅಸ್ಸಲಾಯನು ತಲೆತಗ್ಗಿಸಿದನು.

Friday, 29 November 2019

ಅಭಾಸಿತ ಸುತ್ತ abhasita sutta

ಅಭಾಸಿತ ಸುತ್ತ


  ಭಿಕ್ಖುಗಳೇ, ಇವೆರಡು ತಥಾಗತರಿಗೆ ಮಾಡುವ ಅಪನಿಂದೆಗಳಾಗಿವೆ
ಯಾವುವವು ಎರಡು ?

"ತಥಾಗತರು ನುಡಿಯದಿದ್ದರೂ ಹೀಗೆ  ನುಡಿದಿದ್ದಾರೆ ಎಂದು ನಿರೂಪಿಸುವುದು. &
ತಥಾಗತರೂ ನುಡಿದಿದ್ದರೂ ಹೀಗೆ ನುಡಿದಿಲ್ಲ ಎಂದು ನಿರೂಪಿಸುವುದು.

ಹೀಗೆ ತಥಾಗತರಿಗೆ 2 ರೀತಿಯಲ್ಲಿ ಅಪನಿಂದೆ ಮಾಡುವರು.

Tuesday, 26 November 2019

ಮಹಾಮೊಗ್ಗಲಾನ ಸುತ್ತ (ಪಾಚಾಲ ಸುತ್ತ/ಚಾಪಾಲ ಸುತ್ತ)

ಮಹಾಮೊಗ್ಗಲಾನ ಸುತ್ತ (ಪಾಚಾಲ ಸುತ್ತ)

ಮಹಾಮೊಗ್ಗಲಾನರವರು ಮಗಧದ ಸಮೀಪದ ಕಲ್ಲವಾಲಪುತ್ತ ಎಂಬ ಹಳ್ಳಿಯಲ್ಲಿ ನೆಲೆಸಿದ್ದರು. ಪಬ್ಬಜ್ಜ ಸ್ವೀಕಾರದ ಏಳು ದಿನಕ್ಕೆ ಕಾಲಿಟ್ಟರು. ಸದಾಕಾಲ ಧ್ಯಾನದಲ್ಲಿ ತೊಡಗಿದರು. ಆದರೂ ಅವರು ಥೀನಮಿದ್ಧ (ಆಲಸ್ಯ, ಜಡತೆ, ನಿದ್ದೆ) ಯಿಂದಾಗಿ ತುಸು ತ್ರಾಸಪಟ್ಟರು.
   ಮೊಗ್ಗಲಾನರವರು ತಮ್ಮ ಧ್ಯಾನ ಸಾಧನೆಗೆ ಮಗಧದ ಸಮೀಪದ ಕಲ್ಲವಲಪುತ್ತ ಎಂಬ ಹಳ್ಳಿಯ ಪಕ್ಕದ ಅರಣ್ಯವನ್ನು ಆಯ್ಕೆ ಮಾಡಿದರು, ಅಲ್ಲಿ ಅವರು ಪದ್ಮಾಸನದಲ್ಲಿ ಹಾಗೂ ನಡಿಗೆಯ ಭಂಗಿಯಲ್ಲಿ ಧ್ಯಾನವನ್ನು ಆರಂಭಿಸಿದರು. ಅದರೂ ಸಹಾ ಅವರು ತೂಗಡಿಕೆಯನ್ನು ಗೆಲ್ಲಲಾರೆದೆ ಹೋದರು.  ಅವರಿಗೆ ನಿದ್ರಿಸಲು ಇಷ್ಟವಿರಲಿಲ್ಲ ಅದರೂ ತಮ್ಮ ಬೆನ್ನು ಹಾಗೂ ಕತ್ತನ್ನು ನೇರವಾಗಿಡಲು ಅಸಮರ್ಥರಾದರು. ಅದರೂ ತಮ್ಮ ಇಚ್ಚಾಶಕ್ತಿಯಿಂದ ಕಣ್ಣುಗಳನ್ನು ಅಗಲವಾಗಿಸಿ ನಿದ್ರೆ ಗೆಲ್ಲಲು ಯತ್ನಿಸಿದರು. ಅದರೂ ಯಶಸ್ವಿಯಾಗದೆ ಹೋಯಿತು, ಅಂದು ಅವರು ಸಂಘಕ್ಕೆ ಸೇರಿ 7ನೆಯ ದಿನವಾಗಿತ್ತು.  ಭಗವಾನರಿಗೆ ಇವರ ಕಷ್ಟಗಳು ಅರ್ಥವಾಗಿ ಅವರ ಮುಂದೆ ತೇಜೋಮಯವಾಗಿ ಪ್ರತ್ಯಕ್ಷವಾದರು. ಹಾಗೂ ಹೀಗೆ ಕೇಳಿದರು.
"ಮೊಗ್ಗಲಾನ ತೂಗಡಿಸುತ್ತಿರುವೆಯಾ.? ಮೊಗ್ಗಲಾನ ತೂಗಡಿಸುತ್ತಿರುವೆಯಾ (ಮಂಪರು)"
"ಹೌದು ಭಗವಾನ್"
"ಸರಿ ಮೊಗ್ಗಲಾನ , ಯಾವಾಗಲಾದರೂ ನಿನಗೆ ನಿದ್ದೆ ಅಥವಾ ತೂಗಡಿಕೆ ಆವರಿಸಿದಾಗ ಆ ಯೋಚನೆ ಅಥವಾ ಆ ಗ್ರಹಿೆಕೆಯೆಡೆಗೆ ಗಮನ ಹರಿಸದಿರು, ಹಾಗೆ ಆ ಗ್ರಹಿಕೆಯೆಡೆ ಗಮನವನ್ನು ಹರಿಸಿದಾಗ ತೂಗಡಿಕೆ ದೂರವಾಗುವುದು."
"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ಆಗ ನೀನೂ ಹಿಂದೆ ಆಲಿಸಿರುವ ಬೋಧನೆಯನ್ನು (ಧಮ್ಮ) ನೆನಪಿಸಿಕೋ ಹಾಗೂ ಅವನ್ನು ವಿಶ್ಲೇಶಿಸಿಕೊ.........."
"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ನೀನೂ ಆಲಿಸಿದ್ದ ಧಮ್ಮವನ್ನು ಪೂರ್ಣ ವಿವರವಾಗಿ ಪುನಾರಾವತರ್ಿತಗೊಳಿಸಿಕೊ.............."
"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ನಿನ್ನ ಕಿವಿಗಳ ಹಾಲೆಗಳನ್ನು ಎಳೆದಾಡು ಮತ್ತು ನಿನ್ನ ಅಂಗಗಳನ್ನು ಉಜ್ಜಲು ಆರಂಭಿಸು,............"
"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ನೀನು ಆಸನದಿಂದ ಎದ್ದೇಳು ಹಾಗೂ ಕಣ್ಣುಗಳನ್ನು ನೀರಿನಿಂದ ತೊಳೆದುಕೊ, ನಂತರ ಎಲ್ಲಾ ದಿಕ್ಕುಗಳ ಕಡೆಗೆ ವೀಕ್ಷಿಸಲು ಆರಂಭಿಸು,   ನಕ್ಷತ್ರಗಳನ್ನು ಹಾಗೂ ನಕ್ಷತ್ರಗಳ ಸಮೂಹ ರಾಶಿಗಳನ್ನು ನೋಡಲು ಆರಂಭಿಸು.........."
"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ಬೆಳಕಿನ ಸಂಜ್ಞೆಯತ್ತ ಗಮನಹರಿಸು, ಹಗಲಿನ ಸಂಜ್ಞೆಯತ್ತ ಗಮನಹರಿಸು, ಅದನ್ನು ರಾತ್ರಿಯಲ್ಲಿ ಅಭ್ಯಾಸಿಸು ಅಂದರೆ ರಾತ್ರಿಯನ್ನು ಹಗಲಿನಂತೆ ಹಾಗೂ ಹಗಲನ್ನು ರಾತ್ರಿಯಂತೆ ಗ್ರಹಿಸುವುದು., ಹೀಗಾದಾಗ ಮನಸ್ಸು ಸ್ವಚ್ಚವಾಗಿ ಜಡರಹಿತವಾಗುವುದು. ಹೀಗೆ ಮನಸ್ಸನ್ನು ಬೆಳಕಿನಂತೆ ಪೂರ್ಣವಾಗಿ ಪ್ರಕಾಶಿಸು........"
"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ಆಗ ಇಂದ್ರಿಯಗಳನ್ನು ಅಂತಮರ್ುಖಗೊಳಿಸಿ,  ಮನಸ್ಸನ್ನು ಬಾಹ್ಯಕ್ಕೆ ದಾರಿತಪ್ಪದಂತೆ ಜಾಗಾರೂಕತೆವಹಿಸಿ, ನಡಿಗೆಯ ಧ್ಯಾನವನ್ನು ಆರಂಭಿಸು, ನಡಿಗೆಯಲ್ಲಿಯೇ ಗಮನವಹಿಸು. ಹಾಗೂ ಹಿಂದೆಯಿರುವುದನ್ನು ಕಲ್ಪಿಸಿಕೊ, ಹಾಗೂ ಹಿಂದೆಯಿದ್ದಾಗ ಮುಂದೆಯಿರುವುದನ್ನು ಕಲ್ಪಿಸಿಕೋ........"
"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ನಿದ್ದೆಯು ಈಗ ಅವಶ್ಯಕವೆಂದು ತಿಳಿದು ಆಗ ಜಾಗಾರೂಕತೆಯಿಂದ, ಸ್ಪಷ್ಟ ಅರಿವಿನಿಂದ, ಸಿಂಹಶಯ್ಯೆಯ ಭಂಗಿಯಲ್ಲಿ ಬಲಮುಖವಾಗಿ ಮಲಗಿ,  ಬಲಗಾಲ ಮೇಲೆ ಎಡಗಾಲನ್ನು ಇಟ್ಟು ನೇರವಾಗಿ ಮಲಗಿ, ಮತ್ತೆ ಮೇಲೆಳುವ ಸಮಯವನ್ನು ನಿಗಧಿತಪಡಿಸಿ, ಅಲ್ಪನಿದ್ದೆಯಲ್ಲಿ ತೃಪ್ತಿತಾಳಿ ನಂತರ ಎಚ್ಚರಗೊಂಡಾಗ ಜಾಗರೂಕತೆ ತಾಳಿ ಈ ಬಗೆಯ ಮನೋಭಾವ ತಾಳುವುದು ನಾನು ಅತಿನಿದ್ದೆಯಲ್ಲಿ ಅಥವಾ ಅತಿವಿಶ್ರಾಂತಿಯ ಸುಖದಲ್ಲಿ ತಲ್ಲೀನಲಾಗಿಲ್ಲ ಹಾಗೂ ತಲ್ಲೀನವಾಗುವುದಿಲ್ಲ. ಹೀಗೆ ಮೊಗ್ಗಾಲಾನ ನೀನು ಸುಶಿಕ್ಷಣಗೊಳಿಸಿಕೊಳ್ಳಬೇಕು."
"ನಂತರ ಮೊಗ್ಗಲಾನ ನೀನು ಹೀಗೆ ಸುಶಿಕ್ಷಣಗೊಳಿಸಿಕೊಳ್ಳಬೇಕು ಹೇಗೆಂದರೆ ನಾನು ನನ್ನ ಅಹಂಕಾರ ಉದಯಿಸುವ ಅಥವಾ ವೃದ್ಧಿಯಾಗುವಂತಹ ಕುಟುಂಬಗಳಿಗೆ ಆಹಾರಕ್ಕೆ ಹೋಗಲಾರೆನು ಏಕೆಂದರೆ ಹಲವಾರು ಪ್ರಾಪಂಚಿಕ ಕಾರ್ಯಗಳಲ್ಲಿ ತೊಡಗಿರುವ ಕುಟುಂಬಗಳಿಗೆ ಹೋದಾಗ ಅವರು  ಗಮನಹರಿಸದೆ ಹೋಗಬಹುದು ಆಗ ಇವರು ನನಗೆ ಇಷ್ಟ ಪಡುತ್ತಿಲ್ಲ, ಏನೂ ದೊರೆಯದೆ ಹೋಯಿತು, ಎಂದು ಲಜ್ಜೆಗೆ ಒಳಗಾಗಿ, ಕ್ಷೊಭೆಗೆ ಒಳಗಾಗಿ, ಅನಿಯಂತ್ರಿತನಾಗಿ, ಸಮಾಧಿಗೆ ದೂರನಾಗುತ್ತಾನೆ. "
"ನಂತರ ಮೊಗ್ಗಲಾನ ನೀನು ಹೀಗೆ ಸುಶಿಕ್ಷಣಗೊಳಿಸಿಕೊಳ್ಳಬೇಕು, ನಾನು ಮುಖಾಮುಖಿ ಅಥವಾ ವಿವಾದಾತ್ಮಕ ವಾದಗಳಲ್ಲಿ ತೊಡಗುವುದಿಲ್ಲ ಏಕೆಂದರೆ ಆಗ ನಾನಾ ಚಚರ್ೆ ವಾದ ವಿವಾದಗಳು ಉಂಟಾಗಿ ಕ್ಷೊಭೆಗೆ ಒಳಗಾಗಿ, ಅನಿಯಂತ್ರಿತನಾಗಿ, ಸಮಾಧಿಗೆ ದೂರನಾಗುತ್ತಾನೆ."
"ಮತ್ತೆ ಮೊಗ್ಗಾಲಾನ ನಾನು ಯಾವುದೇ ಬಗೆಯ ಸಂಸರ್ಗ(ಸ್ನೇಹ)ವನ್ನು ಪ್ರಶಂಸಿಸಲಾರೆನು, ಹಾಗೆಯೇ ನಾನು ಯಾವುದೇ ಬಗೆಯ ಸಂಸರ್ಗ(ಸ್ನೇಹ)ವನ್ನು ಅಪ್ರಶಂಸಿಸಲಾರೆನು ಹಾಗೆಯೇ ಗೃಹಸ್ಥರೊಡನೆಯಾಗಲಿ ಅಥವಾ ಪಬ್ಬಜಿತರೊಡನೆಯಾಗಲಿ ಯಾವುದೇ ಬಗೆಯ ಸಂಸರ್ಗ(ಸ್ನೇಹ)ವನ್ನು ಪ್ರಶಂಸಿಸಲಾರೆನು, ಹಾಗೂ ಯಾವ ಸ್ಥಳಗಳು ನಿಶಬ್ದದಿಂದ ಕೂಡಿವೆಯೋ, ಶಬ್ಧರಹಿತವೂ, ಹಾಗೂ ನಿರ್ಜನ ಪ್ರದೇಶಗಳೋ ಅಂತಹ ಧ್ಯಾನಯೋಗ್ಯ ಪ್ರದೇಶಗಳನ್ನು ನಾನು ಪ್ರಶಂಸಿಸುವೆನು".
ಹೀಗೆ ಭಗವಾನರು ನುಡಿದಾಗ ಮೊಗ್ಗಲಾನರು ಹೀಗೆ ಪ್ರಶ್ನಿಸಿದರು : "ಭಗವಾನ್ ಸಂಕ್ಷಿಪ್ತವಾಗಿ ತಿಳಿಸಿ, ಯಾವ ರೀತಿಯಲ್ಲಿ ಒಬ್ಬನು ತೃಷ್ಣೆಯಿಂದ ಮುಕ್ತನಾಗುವನು, ಪೂರ್ಣವಾಗಿ ಬಂಧನಮುಕ್ತನಾಗುವನು, ಅತ್ಯಂತ ನಿಷ್ಟನು ,ಬ್ರಹ್ಮಚರ್ಯೆಯ ಜೀವನ ಪೂರ್ಣಗೊಳಿಸುವನು, ಅಂತಿಮ ಹಂತವನ್ನು ಪಡೆಯುವನು, ಹಾಗೂ ದೇವ ಮನುಷ್ಯರಲ್ಲಿ ಶ್ರೇಷ್ಟನಾಗುವನು."
"ಇಲ್ಲಿ ಮೊಗ್ಗಾಲಾನ, ಒಬ್ಬನು ಹೀಗೆ ಕೇಳುತ್ತಾನೆ ಏನೆಂದರೆ ಎಲ್ಲಾ ಆಗುಹೋಗುಗಳು ಅಂಟಿಕೊಳ್ಳುವಿಕೆಗೆ ಅರ್ಹವಲ್ಲ ಆಗ ಆತನು ಎಲ್ಲಾ ಬಗೆಯ ಸ್ಥಿತಿಗಳನ್ನು ಅರಿಯುತ್ತಾನೆ, ಯಾವುದೇ ಅನುಭವಗಳಾಗಲಿ ಅದರಲ್ಲಿ ಕ್ಷಣಿಕತೆಯನ್ನು ಅರಿತು, ವಿರಾಗ ತಾಳುತ್ತಾನೆ, ನಿರೋಧ ತಾಳುತ್ತಾನೆ,  ತ್ಯೆಜಿಸುವಿಕೆ ತಾಳುತ್ತಾನೆ, ಹೀಗೆ ಲೋಕದ ಯಾವುದಕ್ಕೂ ಅಂಟಲಾರನು, ಹೀಗೆ ಯಾವುದಕ್ಕೂ ಅಂಟದೆ ತಳಮಳಗೊಳ್ಳಲಾರನು, ತಳಮಳಗೊಳ್ಳದೆ ಆರತರ್ಯದಲ್ಲೇ ಸರಿಯಾಗಿ ಮುಕ್ತನಾಗುತ್ತಾನೆ, ಆಗ ಆತನಲ್ಲಿ ವಿಮುಕ್ತಿ ಜ್ಞಾನವು ಉಂಟಾಗುವುದು, ಜನ್ಮವು ಅಂತ್ಯವಾಯಿತು,  ಬ್ರಹ್ಮಚರ್ಯೆಯ ಜೀವನ ಪೂರ್ಣವಾಯಿತು, ಮಾಡಬೇಕಾದುದೆಲ್ಲಾ ಮಾಡಿಯಾಯಿತು, ಈ ಲೋಕಗಳಿಗೆ ಇನ್ನೇನೂ ಉಳಿದಿಲ್ಲ."
"ಈ ರೀತಿಯಾಗಿ ಮೊಗ್ಗಾಲಾನ ಸಂಕ್ಷಿಪ್ತವಾಗಿ  ಒಬ್ಬನು ತೃಷ್ಣೆಯಿಂದ ಮುಕ್ತನಾಗುವನು, ಪೂರ್ಣವಾಗಿ ಬಂಧನಮುಕ್ತನಾಗುವನು, ಅತ್ಯಂತ ನಿಷ್ಟನು ,ಬ್ರಹ್ಮಚರ್ಯೆಯ ಜೀವನ ಪೂರ್ಣಗೊಳಿಸುವನು, ಅಂತಿಮ ಹಂತವನ್ನು ಪಡೆಯುವನು, ಹಾಗೂ ದೇವ ಮನುಷ್ಯರಲ್ಲಿ ಶ್ರೇಷ್ಟನಾಗುವನು.." (ಪಾಚಾಲ ಸುತ್ತ, ಅಂಗುತ್ತರ ನಿಕಾಯ 7.58)


Wednesday, 30 October 2019

ಸತ್ಪುರುಷನನ್ನು ಹೇಗೆ ಅರಿಯಬಹುದು? (ಚೂಲ ಪುಣ್ಣಮ ಸುತ್ತ): cula purnima sutta in kannada

ಸತ್ಪುರುಷನನ್ನು ಹೇಗೆ ಅರಿಯಬಹುದು? (ಚೂಲ ಪುಣ್ಣಮ ಸುತ್ತ):


ಹೀಗೆ ನಾನು ಕೇಳಿದ್ದೇನೆ - ಒಂದು ಸಮಯದಲ್ಲಿ ಭಗವಾನರು ಸಾವತ್ಥಿಯಲ್ಲಿ ಮಿಗಾರಮಾತೆಯ ಪೂರ್ವ ಆರಾಮ (ವಿಹಾರ)ದಲ್ಲಿ ವಿಹರಿಸುತ್ತಿದ್ದರು. ಅಂದು ಪೂಣರ್ಿಮೆಯಾದ್ದರಿಂದ ಉಪೂಸಥ ದಿನವಾಗಿತ್ತು. ಆಗ ಭಗವಾನರು ಹೊರಗೆ ಗಾಳಿಯಲ್ಲಿ ಕುಳಿತಿದ್ದರು. ಅವರ ಸುತ್ತಲು ಭಿಕ್ಷುಗಣವಿತ್ತು. ಭಗವಾನರು ಶಾಂತವಾಗಿದ್ದ ಭಿಕ್ಷು ಸಮೂಹಕ್ಕೆ ಹೀಗೆ ಕೇಳಿದರು:

"ಈಗ ಭಿಕ್ಷುಗಳೇ, ಅಸತ್ಪುರುಷನಿಗೆ ಅಸತ್ಪುರುಷನು ಅರಿಯಲ್ಪಡುವನೇ, ಹೇಗೆಂದರೆ ಈ ವ್ಯಕ್ತಿಯು ಅಸತ್ಪುರುಷನೇ?"

"ಇಲ್ಲ ಭಂತೆ."

"ಒಳ್ಳೆಯದು ಭಿಕ್ಷುಗಳೇ, ಅಸತ್ಪುರುಷನಿಗೆ ಈತನು ಅಸತ್ಪುರುಷ ಎಂದು ತಿಳಿಯಲ್ಪಡುವುದಿಲ್ಲ. ಹಾಗೆಯೇ ಭಿಕ್ಷುಗಳೇ, ಅಸತ್ಪುರುಷನಿಗೆ ಸತ್ಪುರುಷನು ತಿಳಿಯಲ್ಪಡುವನೇ? ಹೇಗೆಂದರೆ ಈ ವ್ಯಕ್ತಿಯು ಸತ್ಪುರುಷನಿರಬಹುದೇ?"
"ಇಲ್ಲ ಭಂತೆ."

"ಒಳ್ಳೆಯದು ಭಿಕ್ಷುಗಳೇ, ಖಂಡಿತವಾಗಿಯು ಅಸತ್ಪುರುಷನಿಗೆ ಈ ವ್ಯಕ್ತಿಯು ಸತ್ಪುರುಷ ಎಂದು ತಿಳಿಯಲಾಗುವುದಿಲ್ಲ. ಆತನಿಗೆ ಅದು ಅಸಾಧ್ಯವಾಗಿದೆ. ಓ ಭಿಕ್ಷುಗಳೇ, ಅಸತ್ಪುರುಷನು ಅಕುಶಲ ಚಿತ್ತಸ್ಥಿತಿಗಳನ್ನು ಹೊಂದಿರುತ್ತಾನೆ. ಆತನು ಕೆಟ್ಟ ಸ್ನೇಹಿತರನ್ನು ಹೊಂದಿರುತ್ತಾನೆ. ಪಾಪಿಗಳಂತೆ ಯೋಚಿಸುತ್ತಾನೆ. ಆತನು ಪಾಪಿಗಳಂತೆಯೇ ಸಲಹೆ ಬುದ್ಧಿವಾದ ನೀಡುತ್ತಾನೆ, ಪಾಪಿಗಳಂತೆ ಮಾತನಾಡುತ್ತಾನೆ, ಪಾಪಿಗಳಂತೆ ಕಾರ್ಯವನ್ನು ಮಾಡುತ್ತಾನೆ. ಅಷ್ಟೇ ಅಲ್ಲ, ಆತನು ಅಸತ್ಪುರುಷರಂತೆಯೇ ದೃಷ್ಟಿಕೋನಗಳನ್ನು ಹೊಂದಿರುತ್ತಾನೆ ಮತ್ತು ಆತನು ಅಸತ್ಪುರುಷರಂತೆಯೇ ದಾನವನ್ನು ಮಾಡುತ್ತಾನೆ."

"ಮತ್ತು ಭಿಕ್ಷುಗಳೇ, ಆತನು ಯಾವ ಅಕುಶಲ ಚಿತ್ತಸ್ಥಿತಿಗಳಿಂದ (ಅಸ್ಸಧಮ್ಮ ಸಮಾನಾಗತೋ) ಕೂಡಿರುತ್ತಾನೆ?" "ಭಿಕ್ಷುಗಳೇ, ಆತನು ಶ್ರದ್ಧಾರಹಿತನಾಗಿರುತ್ತಾನೆ. ಪಾಪಲಜ್ಜೆಯಿಂದ ಕೂಡಿರುವುದಿಲ್ಲ, ಪಾಪಭಯದಿಂದಲೂ ಕೂಡಿರುವುದಿಲ್ಲ. ಆತನು ಅಲ್ಪಶೃತ (ಕಡಿಮೆ ಜ್ಞಾನವನ್ನು ಕೇಳಿರುತ್ತಾನೆ) ನಾಗಿರುತ್ತಾನೆ. ಆತನು ಸೋಮಾರಿ ಆಗಿರುತ್ತಾನೆ. ಸ್ಮೃತಿಹೀನ (ಅಜಾಗರೂಕನು)ನು ಆಗಿರುತ್ತಾನೆ. ಕೆಟ್ಟ ಪ್ರಜ್ಞೆಯುಳ್ಳವ ನಾಗಿರುತ್ತಾನೆ (ಅಲ್ಪಪ್ರಜ್ಞನು). ಭಿಕ್ಷುಗಳೇ, ಈ ರೀತಿಯಲ್ಲಿ ಅಸತ್ಪುರುಷನ ಚಿತ್ತಸ್ಥಿತಿಗಳು ಇರುತ್ತದೆ."

"ಮತ್ತೆ ಭಿಕ್ಷುಗಳೇ, ಆತನು ಯಾರೊಂದಿಗೆ ಸ್ನೇಹದಿಂದಿರುತ್ತಾನೆ?"
"ಭಿಕ್ಷುಗಳೇ, ಯಾರಲ್ಲಿ ಶ್ರದ್ಧೆಯಿಲ್ಲವೋ, ಪಾಪಲಜ್ಜೆಯಿಲ್ಲವೊ, ಪಾಪಭೀತಿಯಿಲ್ಲವೊ, ಯಾರು ಅಲ್ಪಶೃತರೋ, ಯಾರು ಸೋಮಾರಿಗಳೋ, ಅಜಾಗರೂಕರೋ, ಅಲ್ಪ ಪ್ರಜ್ಞರೋ ಅವರೊಂದಿಗೆಯೇ ಆತನು ಬೆರೆಯುತ್ತಾನೆ. ಅವರೊಂದಿಗೆ ಆತನು ಸ್ನೇಹದಿಂದಿರುತ್ತಾನೆ."

"ಮತ್ತೆ ಭಿಕ್ಷುಗಳೇ, ಆತನು ಅಸತ್ಪುರುಷರ ರೀತಿ ಹೇಗೆ ಯೋಚಿಸುತ್ತಾನೆ? ಆತನು ತನಗೆ ಅಹಿತವಾಗುವಂತೆ, ಬಾಧೆಯಾಗುವಂತೆ ಚಿಂತನೆ ಮಾಡುತ್ತಾನೆ. ಹಾಗು ಆತನು ಪರರಿಗೆ ಅಹಿತವಾಗುವಂತೆ ಬಾಧೆಯಾಗುವಂತೆ ಚಿಂತನೆ ಮಾಡುತ್ತಾನೆ. ಆತನು ಉಭಯರಿಗೂ ಬಾಧೆಯಾಗುವಂತೆ ಯೋಚಿಸುತ್ತಾನೆ."

"ಮತ್ತೆ ಭಿಕ್ಷುಗಳೇ, ಆತನ ಅಸತ್ಪುರುಷರ ರೀತಿ ಹೇಗೆ ಬುದ್ಧಿವಾದ ನೀಡುತ್ತಾನೆ? ಆತನು ತನಗೆ ಅಹಿತವಾಗುವಂತೆ, ಬಾಧೆಯಾಗುವಂತೆ ಬುದ್ಧಿವಾದ ಹೇಳಿಕೊಳ್ಳುತ್ತಾನೆ. ಆತನು ಪರರಿಗೆ ಅಹಿತವಾಗುವಂತೆ, ಬಾಧೆಯಾಗುವಂತೆ ಬುದ್ಧಿವಾದ ಹೇಳುತ್ತಾನೆ".

"ಮತ್ತೆ ಭಿಕ್ಷುಗಳೇ, ಆತನು ಅಸತ್ಪುರುಷರ ರೀತಿಯಲ್ಲಿ ಹೇಗೆ ಮಾತನಾಡುತ್ತಾನೆ?"
"ಭಿಕ್ಷುಗಳೇ, ಆತನು ಸುಳ್ಳು ಹೇಳುತ್ತಾನೆ, ಚಾಡಿ ಹೇಳುತ್ತಾನೆ, ನಿಂದಾಯುತ ಕಟುಭಾಷೆ ಮಾತನಾಡುತ್ತಾನೆ, ವ್ಯರ್ಥವಾದ ಹಾನಿಯುತ ಹರಟೆ ಮಾಡುತ್ತಾನೆ."

"ಮತ್ತೆ ಭಿಕ್ಷುಗಳೇ, ಆತನು ಅಸತ್ಪುರುಷರ ರೀತಿಯಲ್ಲಿ ಹೇಗೆ ಕರ್ಮ ಮಾಡುತ್ತಾನೆ?"
"ಇಲ್ಲಿ ಭಿಕ್ಷುಗಳೇ, ಆತನು ಜೀವಹತ್ಯೆಗಳನ್ನು ಮಾಡುತ್ತಾನೆ, ಕಳ್ಳತನ ಮಾಡುತ್ತಾನೆ, ವ್ಯಭಿಚಾರದಲ್ಲಿ ತೊಡಗುತ್ತಾನೆ. ಹೀಗೆ ಭಿಕ್ಷುಗಳೇ, ಆತನು ಅಸತ್ಪುರುಷರ ಕರ್ಮ ಮಾಡುತ್ತಾನೆ".

"ಮತ್ತೆ ಭಿಕ್ಷುಗಳೇ, ಆತನು ಅಸತ್ಪುರುಷ ರೀತಿ ಹೇಗೆ ದೃಷ್ಟಿಗಳನ್ನು ಹೊಂದಿರುತ್ತಾನೆ?"
ಇಲ್ಲಿ ಭಿಕ್ಷುಗಳೇ, ಆತನು ಹೀಗೆ ಹಲವು ದೃಷ್ಟಿಗಳನ್ನು ಹೊಂದಿರುತ್ತಾನೆ. ಅವೆಂದರೆ:
 (1) ದಾನಕ್ಕೆ ಫಲವಿಲ್ಲ, ಅರ್ಪಣೆಗೆ ಫಲವಿಲ್ಲ, ತ್ಯಾಗ ಸತ್ಕಾರಗಳಿಗೆ ಫಲವಿಲ್ಲ.
(2) ಸುಕಾರ್ಯಗಳಿಗೆ ಆಗಲಿ ಅಥವಾ ದುಷ್ಕಾರ್ಯಗಳಿಗಾಗಲಿ ಅಂತಹ ಕರ್ಮಗಳಿಗೆ ಫಲವಿಲ್ಲ
 (3) ಈ ಲೋಕವೂ ಇಲ್ಲ, ಪರಲೋಕವೂ ಇಲ್ಲ.
 (4) ತಾಯ್ತಂದೆಗಳ ಸಲಹುವಿಕೆಯಿಂದ ಯಾವ ಲಾಭವೂ ಇಲ್ಲ
. (5) ತಾಯ್ತಂದೆಗಳಿಲ್ಲದೆಯೇ ತಮಗೆ ತಾವೇ ಹುಟ್ಟುವ (ಓಪಪಾತಿಕ) ಜೀವಿಗಳಿಲ್ಲ.
(6) ಯೋಗ್ಯವಾಗಿ ಜೀವಿಸಿ, ಯೋಗ್ಯವಾಗಿ ಸಾಕ್ಷಾತ್ಕರಿಸಿ, ಅಭಿಜ್ಞಾ ಸಾಕ್ಷಾತ್ಕರಿಸಿ (ಅತೀಂದ್ರಿಯ ಬಲಗಳನ್ನು ಪಡೆದು) ಈ ಲೋಕ ಮತ್ತು ಪರಲೋಕವಿದೆ ಎಂದು ಹೇಳುವ ಸಮಣ ಬ್ರಾಹ್ಮಣರು ಇಲ್ಲ, ಅಂತಹವರು ಇಲ್ಲವೇ ಇಲ್ಲ. ಹೀಗೆ ಭಿಕ್ಷುಗಳೇ, ಅಸತ್ಪುರುಷನು ದೃಷ್ಟಿಕೋನಗಳನ್ನು ಹೊಂದಿರುತ್ತಾನೆ."


"ಮತ್ತೆ ಭಿಕ್ಷುಗಳೇ, ಅಸತ್ಪುರುಷನು ಹೇಗೆ ದಾನವನ್ನು ಮಾಡುತ್ತಾನೆ?"
"ಭಿಕ್ಷುಗಳೇ, ಅಸತ್ಪುರುಷನು ಗೌರವ ಭಕ್ತಿ ಯಾವುದೂ ಇಲ್ಲದೆ ದಾನ ಮಾಡುತ್ತಾನೆ. ಆತನು ತನ್ನ ಕೈಯಿಂದ ದಾನ ಮಾಡುವುದಿಲ್ಲ, ಆತನು ಬಿಸಾಡುವಂತಹದ್ದನ್ನು ದಾನ ಮಾಡುತ್ತಾನೆ. ಆತನು ಅಗತ್ಯವಿಲ್ಲದ್ದನ್ನು, ಅಪೇಕ್ಷೆಪಡದಿದ್ದುದನ್ನು ದಾನ ಮಾಡುತ್ತಾನೆ. ಆತನು ಭವಿಷ್ಯವನ್ನು ಗಣನೆಗೆ ತೆಗೆದುಕೊಳ್ಳದೆ ದಾನ ಮಾಡುತ್ತಾನೆ. ಹೀಗೆ ಭಿಕ್ಷುಗಳೇ, ಅಸತ್ಪುರುಷನು ದಾನ ಮಾಡುತ್ತಾನೆ."

"ಭಿಕ್ಷುಗಳೇ, ಯಾವ ಅಸತ್ಪುರುಷನು ಪಾಪಚಿತ್ತ ಸ್ಥಿತಿಗಳನ್ನು, ಪಾಪಿ ಮಿತ್ರರನ್ನು, ಪಾಪ ಯೋಚನೆಗಳನ್ನು, ಪಾಪ ಸಲಹೆಗಳನ್ನು, ಪಾಪಯುತ ಮಾತುಗಳನ್ನು, ಪಾಪಯುತ ಕರ್ಮಗಳನ್ನು ಮತ್ತು ಪಾಪಯುತ ದೃಷ್ಟಿಕೋನಗಳನ್ನು ಹೊಂದಿರುತ್ತಾನೋ, ಆತನು ಮರಣದ ನಂತರ ಅಸತ್ಪುರುಷರೆ ಇರುವಂತಹ ಗತಿಯಲ್ಲಿ ಹುಟ್ಟುತ್ತಾನೆ. ಯಾವುದು ಆ ಗತಿ? ನಿರಯ ಇಲ್ಲವೆ ತಿರಚ್ಚನಯೋನಿ (ಪ್ರಾಣಿಗಳ ಲೋಕ)ಯಲ್ಲಿ ಜನ್ಮಿಸುತ್ತಾನೆ."

"ಈಗ ಭಿಕ್ಷುಗಳೇ, ಸತ್ಪುರುಷನಿಗೆ ಇಂಥಹ ವ್ಯಕ್ತಿಯು ಸತ್ಪುರುಷನು ಎಂದು ಗೊತ್ತಾಗುತ್ತದೆಯೇ?"
"ಹೌದು ಭಂತೆ."

"ಒಳ್ಳೆಯದು ಭಿಕ್ಷುಗಳೇ, ಕೆಲವು ಸನ್ನಿವೇಶಗಳು ಬರುತ್ತವೆ. ಆಗ ಈತನು ಸತ್ಪುರುಷ ಎಂದು ಸತ್ಪುರುಷನಿಗೆ ಗೊತ್ತಾಗುವುದು. ಆದರೆ ಭಿಕ್ಷುಗಳೇ, ಸತ್ಪುರುಷನು ಅಸತ್ಪುರುಷನಿಗೆ ನೋಡಿದಾಗ ಇವನು ಅಸತ್ಪುರುಷ ಎಂದು ಗೊತ್ತಾಗುವುದೇ?"
"ಹೌದು ಭಂತೆ ಗೊತ್ತಾಗುವುದು."

"ಒಳ್ಳೆಯದು ಭಿಕ್ಷುಗಳೇ, ಸನ್ನಿವೇಶಗಳು ಬಂದಾಗ ಸತ್ಪುರುಷನಿಗೆ ಇವನು ಸತ್ಪುರುಷ ಎಂದು ಗೊತ್ತಾಗುತ್ತದೆ. ಭಿಕ್ಷುಗಳೇ, ಸತ್ಪುರುಷನು ಕುಶಲ ಚಿತ್ತ ಸ್ಥಿತಿಗಳನ್ನು ಹೊಂದಿರುತ್ತಾನೆ. ಸತ್ಪುರುಷರ ಜೊತೆಯಲ್ಲಿ ರಮಿಸುತ್ತಾನೆ, ಸತ್ಪುರುಷರ ರೀತಿಯಲ್ಲಿ ಚಿಂತನೆ ಮಾಡುತ್ತಾನೆ. ಸತ್ಪುರುಷ ರೀತಿ ಬೋಧನೆ (ಬುದ್ಧಿವಾದ) ನೀಡುತ್ತಾನೆ. ಸತ್ಪುರುಷರ ರೀತಿ ಮಾತನಾಡುತ್ತಾನೆ. ಸತ್ಪುರುಷರ ರೀತಿ ಕರ್ಮ ಮಾಡುತ್ತಾನೆ, ಸತ್ಪುರುಷರ ರೀತಿಯಲ್ಲಿ ದೃಷ್ಟಿಕೋನಗಳನ್ನು ಹೊಂದಿರುತ್ತಾನೆ. ಸತ್ಪುರುಷ ರೀತಿಯಲ್ಲಿ ದಾನ ಮಾಡುತ್ತಾನೆ ಮತ್ತು ಭಿಕ್ಷುಗಳೇ, ಹೇಗೆ ಸತ್ಪುರುಷನು ಕುಶಲ ಚಿತ್ತಸ್ಥಿತಿಗಳನ್ನು ಹೊಂದಿರುತ್ತಾನೆ? ಇಲ್ಲಿ ಭಿಕ್ಷುಗಳೇ, ಸತ್ಪುರುಷನು ಶ್ರದ್ಧೆಯನ್ನು ಹೊಂದಿರುತ್ತಾನೆ, ಸತ್ಪುರುಷನು ಪಾಪಲಜ್ಜೆ ಹಾಗು ಪಾಪ ಭಯವನ್ನು ಹೊಂದಿರುತ್ತಾನೆ. ಸತ್ಪುರುಷನು ಬಹಳಷ್ಟು ಜ್ಞಾನವನ್ನು ಕೇಳಿರುತ್ತಾನೆ. ಸತ್ಪುರುಷನು ಪ್ರಯತ್ನಶಾಲಿಯಾಗಿರುತ್ತಾನೆ, ಆತನಲ್ಲಿ ಸ್ಮೃತಿಯು ಜಾಗರೂಕತೆಯು ಸ್ಥಾಪಿತವಾಗಿರುತ್ತದೆ. ಸತ್ಪುರುಷನು ಪ್ರಜ್ಞಾವಂತನಾಗಿರುತ್ತಾನೆ. ಈ ರೀತಿಯಾಗಿ ಭಿಕ್ಷುಗಳೇ, ಸತ್ಪುರುಷನು ಕುಶಲ ಸ್ಥಿತಿಗಳನ್ನು ಹೊಂದಿರುತ್ತಾನೆ".

"ಮತ್ತು ಭಿಕ್ಷುಗಳೇ, ಹೇಗೆ ಸತ್ಪುರುಷನು ಸತ್ಪುರುಷರೊಡನೆ ಜೊತೆಯಲ್ಲಿರುತ್ತಾನೆ?"
"ಭಿಕ್ಷುಗಳೇ, ಯಾರಲ್ಲಿ ಶ್ರದ್ಧೆಯಿರುವುದೋ, ಪಾಪಲಜ್ಜೆ, ಪಾಪಭೀತಿಯಿರುವದೋ, ಯಾರು ಬಹುಶೃತರೋ, ಪ್ರಯತ್ನಶಾಲಿಗಳೋ, ಜಾಗೃತರೋ ಮತ್ತು ಪ್ರಜ್ಞಾವಂತರೋ ಅಂತಹವರೊಡನೆ ಸತ್ಪುರುಷನು ಸ್ನೇಹ ಬೆಳೆಸಿ ಅವರೊಂದಿಗಿರುತ್ತಾನೆ."

"ಮತ್ತೆ ಭಿಕ್ಷುಗಳೇ, ಸತ್ಪುರುಷನು ಹೇಗೆ ಸತ್ಪುರುಷರಂತೆ ಚಿಂತನೆ ಮಾಡುತ್ತಾನೆ, ಇಲ್ಲಿ ಭಿಕ್ಷುಗಳೇ, ಸತ್ಪುರುಷನು ತನಗೆ ಬಾಧೆಯನ್ನು ನೀಡುವುದಿಲ್ಲ, ಹಾಗೆಯೇ ಪರರಿಗೂ ಬಾಧೆಯನ್ನು ನೀಡುವುದಿಲ್ಲ. ತನಗೆ ಮತ್ತು ಪರರಿಗೂ ಬಾಧೆ ನೀಡುವುದಿಲ್ಲ. ಹೀಗೆ ಭಿಕ್ಷುಗಳೇ, ಆತನು ಸತ್ಪುರುಷರಂತೆ ಚಿಂತಿಸುತ್ತಾನೆ."

"ಮತ್ತೆ ಭಿಕ್ಷುಗಳೇ, ಹೇಗೆ ಆತನು ಸತ್ಪುರುಷರಂತೆ ಬುದ್ಧಿವಾದ ನೀಡುವನು? ಇಲ್ಲಿ ಭಿಕ್ಷುಗಳೇ, ಸತ್ಪುರುಷನು ತನಗೆ ಹಾನಿಯಾಗುವಂತೆ ಅಥವಾ ಪರರಿಗೆ ಹಾನಿಯಾಗುವಂತೆ ಆಗಲಿ ಅಥವಾ ಈರ್ವರಿಗೂ ಹಾನಿಯಾಗುವಂತೆ ಬುದ್ಧಿವಾದ ನೀಡುವುದಿಲ್ಲ. ಹೀಗೆ ಭಿಕ್ಷುಗಳೇ, ಆತನು ಸತ್ಪುರುಷರಂತೆ ಬುದ್ಧಿವಾದ ನೀಡುತ್ತಾನೆ."

"ಮತ್ತೆ ಭಿಕ್ಷುಗಳೇ, ಹೇಗೆ ಆತನು ಸತ್ಪುರುಷರಂತೆ ಮಾತನಾಡುತ್ತಾನೆ? ಇಲ್ಲಿ ಭಿಕ್ಷುಗಳೇ, ಆತನು ಸುಳ್ಳಿನಿಂದ ದೂರವಾಗುತ್ತಾನೆ, ಚಾಡಿಯಿಂದ, ಕಟುವಾಕ್ಯದಿಂದ, ವ್ಯರ್ಥ ಹರಟೆಯಿಂದ ದೂರವಾಗುತ್ತಾನೆ. ಹೀಗೆ ಭಿಕ್ಷುಗಳೇ, ಸತ್ಪುರುಷನು ಮಾತನಾಡುತ್ತಾನೆ."

"ಮತ್ತೆ ಭಿಕ್ಷುಗಳೇ, ಹೇಗೆ ಆತನು ಸತ್ಪುರುಷರಂತೆ ಕರ್ಮ ಮಾಡುತ್ತಾನೆ? ಇಲ್ಲಿ ಭಿಕ್ಷುಗಳೇ, ಆತನು ಎಲ್ಲಾ ಜೀವಿಗಳ ಜೀವಹತ್ಯೆಯಿಂದ ದೂರನಾಗಿರುತ್ತಾನೆ, ಕಳ್ಳತನದಿಂದ, ವ್ಯಭಿಚಾರದಿಂದ ದೂರವಾಗುತ್ತಾನೆ. ಹೀಗೆ ಭಿಕ್ಷುಗಳೇ, ಸತ್ಪುರುಷನು ಕರ್ಮ ಮಾಡುತ್ತಾನೆ."

"ಮತ್ತೆ ಭಿಕ್ಷುಗಳೇ, ಹೇಗೆ ಆತನು ಸತ್ಪುರುಷರಂತೆ ದೃಷ್ಟಿಕೋನಗಳನ್ನು ಹೊಂದಿರುತ್ತಾನೆ? ಭಿಕ್ಷುಗಳೇ, ಸತ್ಪುರುಷನು ಈ ಕೆಳಕಂಡಂತೆ ಸಮ್ಮಾ ದೃಷ್ಟಿಕೋನಗಳನ್ನು ಹೊಂದಿರುತ್ತಾನೆ: ದಾನಕ್ಕೆ ಫಲವಿದೆ, ಅರ್ಪಣೆಗೆ ಫಲವಿದೆ, ತ್ಯಾಗ ಸತ್ಕಾರಗಳಿಗೆ ಫಲವಿದೆ, ಕುಶಲ ಕರ್ಮಗಳಿಗೆ ಹಾಗು ಪಾಪ ಕರ್ಮಗಳಿಗೆ ಫಲವಿದೆ. ಹೀಗಾಗಿ ಈ ಲೋಕವು ಇದು ಹಾಗೆಯೆ ಪರಲೋಕವೂ ಇದೆ. ತಾಯ್ತಂದೆಯರಿಗೆ ಸೇವೆ ಮಾಡುವುದರಿಂದಾಗಿ ಲಾಭವಿದೆ, ತಾಯಿ-ತಂದೆಯರಿಲ್ಲದೆಯೇ ತಾವಾಗಿಯೇ ಹುಟ್ಟುವಂತಹ ಓಪಪಾತಿಕ ಜೀವಿಗಳೂ ಇದ್ದಾರೆ. ಯೋಗ್ಯವಾಗಿ, ಸರಿಯಾಗಿ ಜೀವಿಸುವ ಸಮಣ ಬ್ರಾಹ್ಮಣರೂ ಇದ್ದಾರೆ. ತಮ್ಮ ಅಭಿಜ್ಞ ಬಲದಿಂದಾಗಿ ಈ ಲೋಕದ ಬಗ್ಗೆ, ಪರಲೋಕದ ಬಗ್ಗೆ ಹೇಳುವಂತಹ ಮಹಾನುಭಾವರು ಲೋಕದಲ್ಲಿರುವರು. ಹೀಗೆ ಭಿಕ್ಷುಗಳೇ, ಸತ್ಪುರುಷರು ಸಮ್ಮಾದೃಷ್ಟಿಗಳನ್ನು ಹೊಂದಿತ್ತಾರೆ."

"ಮತ್ತೆ ಭಿಕ್ಷುಗಳೇ, ಹೇಗೆ ಸತ್ಪುರುಷರು ದಾನವನ್ನು ಮಾಡುತ್ತಾರೆ? ಇಲ್ಲಿ ಭಿಕ್ಷುಗಳೇ, ಸತ್ಪುರುಷರು ಗೌರವಾರ್ಪಣೆಯಿಂದ ದಾನ ಮಾಡುತ್ತಾರೆ. ತಮ್ಮ ಕೈಯಿಂದಲೇ ದಾನವನ್ನು ಮಾಡುತ್ತಾರೆ. ಪ್ರಜ್ಞಾಯುತವಾಗಿ ಶ್ರೇಷ್ಟವಾದುದನ್ನು ದಾನ ಮಾಡುತ್ತಾರೆ. ಪರಿಶುದ್ಧವಾದುದನ್ನೇ ದಾನ ಮಾಡುತ್ತಾರೆ. ಭವಿಷ್ಯವನ್ನು ಗಣನೆಗೆ ತೆಗೆದುಕೊಂಡು ದಾನ ಮಾಡುತ್ತಾರೆ. ಹೀಗೆ ಭಿಕ್ಷುಗಳೇ, ಸತ್ಪುರುಷರು ದಾನ ಮಾಡುತ್ತಾರೆ."

"ಭಿಕ್ಷುಗಳೇ, ಹೀಗೆ ಸತ್ಪುರುಷನು ಕುಶಲಚಿತ್ತ ಸ್ಥಿತಿಗಳನ್ನು ಹೊಂದಿರುತ್ತಾನೆ, ಸತ್ಪುರುಷರ ಜೊತೆಯಲ್ಲಿರುತ್ತಾನೆ, ಸತ್ಪುರುಷರಂತೆ ಚಿಂತಿಸುತ್ತಾನೆ, ಸತ್ಪುರುಷರಂತೆ ಬುದ್ಧಿವಾದನೀಡುತ್ತಾನೆ, ಸತ್ಪುರುಷರಂತೆಯೇ ಮಾತನಾಡುತ್ತಾನೆ, ಸತ್ಪುರುಷರಂತೆಯೇ ಕರ್ಮ ಮಾಡುತ್ತಾನೆ, ಸತ್ಪರುಷರಂತೆಯೇ ದೃಷ್ಟಿಕೋನಗಳನ್ನು ಹೊಂದಿರುತ್ತಾನೆ. ಸತ್ಪುರುಷರಂತೆ ದಾನವನ್ನು ಮಾಡುತ್ತಾನೆ. ಇಂತಹ ಸತ್ಪುರುಷನು ಮರಣದ ನಂತರವೂ ಸತ್ಪುರುಷರು ಇರುವಲ್ಲಿಯೇ ಜನ್ಮ ತಾಳುವನು ಅಂತಹ ಸ್ಥಿತಿ ಯಾವುದು? ಅದೇ ಮಹತ್ತರವಾದ ಸುಗತಿ ಅಥವಾ ಮಾನವರಲ್ಲಿ ಶ್ರೇಷ್ಠ ಸ್ಥಿತಿಯನ್ನು ಹೊಂದುತ್ತಾನೆ."

ಹೀಗೆ ಭಗವಾನರು ಹೇಳಿದಾಗ, ಭಿಕ್ಷುಗಳು ಆನಂದದಿಂದ ಅನುಮೋದನೆ ಮಾಡಿದರು.

Tuesday, 22 October 2019

ಅವಿಜ್ಜ ಸುತ್ತ (ಅವಿದ್ಯೆ/ಅಜ್ಞಾನದ ಸೂತ್ರ)

ಅವಿಜ್ಜ ಸುತ್ತ (ಅವಿದ್ಯೆ/ಅಜ್ಞಾನದ ಸೂತ್ರ)



ಒಬ್ಬ ಭಿಕ್ಷುವು ಭಗವಾನರಲ್ಲಿಗೆ ಹೋಗಿ ವಂದಿಸಿದನು, ನಂತರ ಒಂದು ಪಕ್ಕದಲ್ಲಿ ಕುಳಿತನು ಮತ್ತು ಹೀಗೆ ಹೇಳಿದನು: ಭಗವಾನ್ ಯಾವ ಒಂದು ವಿಷಯವನ್ನು ಭಿಕ್ಷುವು ವಜರ್ಿಸಿದಾಗ, ಆತನಲ್ಲಿನ ಅಜ್ಞಾನವು ಪರಿತ್ಯಜಿಸಲ್ಪಟ್ಟು ಆತನಲ್ಲಿ ಸ್ಪಷ್ಟ ಜ್ಞಾನವು ಉದಯಿಸುತ್ತದೆ?
ಹೌದು ಭಿಕ್ಷು, ಅಂತಹ ವಿಷಯವೊಂದಿದೆ. ಅದನ್ನು ಭಿಕ್ಷುವು ವಜರ್ಿಸಿದಾಗ ಆತನಲ್ಲಿನ ಅಜ್ಞಾನವು ಪರಿತ್ಯಜಿಸಲ್ಪಟ್ಟು ಆತನಲ್ಲಿ ಸ್ಪಷ್ಟ ಜ್ಞಾನವು ಉದಯಿಸುತ್ತದೆ.
ಆ ಒಂದು ವಿಷಯ ಯಾವುದು?
ಅಜ್ಞಾನವೇ ಭಿಕ್ಷುವೆ, ಇದನ್ನು ಭಿಕ್ಷುವು ವಜರ್ಿಸಿದಾಗ ಆತನ ಅಜ್ಞಾನವು ಪರಿತ್ಯಜಿಸಲ್ಪಟ್ಟು, ಆತನಲ್ಲಿ ಸ್ಪಷ್ಟ ಜ್ಞಾನವು ಉದಯಿಸುತ್ತದೆ.
ಆದರೆ ಅಜ್ಞಾನವು ಪರಿತ್ಯಜವಾಯಿತು ಮತ್ತು ಸ್ಪಷ್ಟ ಜ್ಞಾನವು ಉದಯಿಸುತ್ತದೆ ಎಂದು ಭಿಕ್ಷುವು ಹೇಗೆ ಅರಿಯುತ್ತಾನೆ ಮತ್ತು ಕಾಣುತ್ತಾನೆ?
ಒಮ್ಮೆ ಭಿಕ್ಷುವು ಹೀಗೆ ಕೇಳಿರುತ್ತಾನೆ: ಎಲ್ಲಾ ವಿಷಯಗಳು ಅಂಟುವಿಕೆಗೆ ಅನರ್ಹವಾಗಿದೆ. ಆಗ ಆತನಿಗೆ ನೇರವಾಗಿ ಪ್ರತಿಯೊಂದು ಅರಿವಿಗೆ ಬಂದಿರುತ್ತದೆ. ಆತನು ಎಲ್ಲವನ್ನು ಸೂಕ್ಷ್ಮವಾಗಿಯೇ ಗ್ರಹಿಸಿರುತ್ತಾನೆ. ಆತನು ಎಲ್ಲಾ ವಿಷಯಗಳನ್ನು ಯಾವುದೋ ರೀತಿಯಲ್ಲಿ ಪ್ರತ್ಯೇಕವಾಗಿ ಕಾಣುತ್ತಾನೆ.
ಆತನು ಕಣ್ಣನ್ನು ಬೇರೆಯಾಗಿ ಕಾಣುತ್ತಾನೆ, ಹಾಗೆಯೇ ದೃಶ್ಯಗಳನ್ನು ಬೇರೆಯಾಗಿ (ಪ್ರತ್ಯೇಕವಾಗಿ) ಕಾಣುತ್ತಾನೆ, ಅವೆರಡರಿಂದ ಉತ್ಪನ್ನವಾಗುವ ಕಣ್ಣಿನಿಂದಾದ ಅರಿವನ್ನು (ಚಕ್ಷು ವಿಞ್ಞಾನ) ಬೇರೆಯಾಗಿಯೇ ಕಾಣುತ್ತಾನೆ. ಹಾಗೆಯೇ ಕಣ್ಣು ಮತ್ತು ದೃಶ್ಯಗಳ ನಡುವಿನ ಸಂಪರ್ಕವನ್ನು (ಪಸ್ಸ/ಸ್ಪರ್ಶ) ಬೇರೆಯಾಗಿಯೇ ಕಾಣುತ್ತಾನೆ ಮತ್ತು ಯಾವುದೆಲ್ಲವು ಕಣ್ಣಿನ ಸಂಪರ್ಕದಿಂದಾಗಿ ಉದಯಿಸಿತೋ ಹೇಳುವುದಾದರೆ ಸುಖ, ದುಃಖ ಅಥವಾ ಸುಖವು-ದುಃಖವೂ ಅಲ್ಲದ, ಅವೆಲ್ಲವನ್ನು ಪ್ರತ್ಯೇಕವಾಗಿ ಕಾಣುತ್ತಾನೆ.
ಹಾಗೆಯೇ ಕಿವಿಯನ್ನು... ಮೂಗನ್ನು... ನಾಲಿಗೆಯನ್ನು... ದೇಹವನ್ನು ಪ್ರತ್ಯೇಕವಾಗಿ ಕಾಣುತ್ತಾನೆ. ಆತನು ಮನಸ್ಸನ್ನು ಪ್ರತ್ಯೇಕವಾಗಿ ಕಾಣುತ್ತಾನೆ, ಹಾಗೆಯೇ ಚಿತ್ತ ವಿಷಯಗಳನ್ನು ಪ್ರತ್ಯೇಕವಾಗಿ ಕಾಣುತ್ತಾನೆ, ಹಾಗೆಯೇ ಮನೋ ವಿಞ್ಞಾನವನ್ನು (ಮನಸ್ಸಿನಿಂದ ಅರಿಯುವಿಕೆಯನ್ನು) ಬೇರೆಯಾಗಿ ಕಾಣುತ್ತಾನೆ. ಮನಸ್ಸಿನ ಮತ್ತು ಮನೋ ವಿಷಯಗಳ ನಡುವಿನ ಸಂಪರ್ಕವನ್ನು ಬೇರೆಯಾಗಿ ಕಾಣುತ್ತಾನೆ. ಹಾಗೆಯೇ ಅಲ್ಲಿಂದ ಉತ್ಪನ್ನವಾದ ಸುಖ-ದುಃಖ, ಸುಖವು ಅಲ್ಲದ, ದುಃಖವು ಅಲ್ಲದ ವೇದನೆಗಳನ್ನು ಬೇರೆಯಾಗಿ ಕಾಣುತ್ತಾನೆ.
ಹೀಗೆ ಓ ಭಿಕ್ಷುವೇ, ಭಿಕ್ಷುವು ಅಜ್ಞಾನವು ಪರಿತ್ಯಜಿತವಾಗಿ, ಸ್ಪಷ್ಟ ಜ್ಞಾನವು ಉದಯಿಸುವುದನ್ನು ಭಿಕ್ಷು ಕಾಣುತ್ತಾನೆ.

Tuesday, 13 August 2019

Girimananda sutta in kannada ಗಿರಿಮಾನಂದ ಸುತ್ತ (ರೋಗಿಗಳ ಬಳಿ ಪಠಿಸುವ ಸುತ್ತ)

      ಗಿರಿಮಾನಂದ ಸುತ್ತ (ರೋಗಿಗಳ ಬಳಿ ಪಠಿಸುವ ಸುತ್ತ)

ಒಮ್ಮೆ ಭಗವಾನರು ಶ್ರಾವಸ್ಥಿಯ ಜೇತವನದ ಆನಾಥಪಿಂಡಿಕನ ವಿಹಾರದಲ್ಲಿ ತಂಗಿದ್ದರು. ಆ ಸಮಯದಲ್ಲಿ ಪೂಜ್ಯ ಗಿರಿಮಾನಂದರು ಅಸ್ವಸ್ಥರಾಗಿದ್ದರು. ಅವರ ಆರೋಗ್ಯ ತೀರ ಕೆಟ್ಟಿತ್ತು. ಆಗ ಪೂಜ್ಯ ಆನಂದರವರು ಭಗವಾನರ ಬಳಿಗೆ ಬಂದು ವಂದಿಸಿ ಒಂದೆಡೆ ಕುಳಿತು ಹೀಗೆ ನುಡಿದರು: :
 ಭಗವಾನ್ ಅಯುಷ್ಮಂತ ಗಿರಿಮಾನಂದರು ತೀರ ಅಸ್ವಸ್ಥರಾಗಿದ್ದಾರೆ ಅವರ ಆರೋಗ್ಯ ಗಂಭಿರವಾಗಿದೆ. ಅದ್ದರಿಂದ ಭಗವಾನರು ಅನುಕಂಪೆಯುಳ್ಳವರಾಗಿ ಅಲ್ಲಿಗೆ ಹೋಗುವಂತಾಗಲಿ.
ಆನಂದ ನೀನು ಆಯುಷ್ಮಂತ ಗಿರಿಮಾನಂದನಲ್ಲಿಗೆ ಹೋಗಿ ಈ 10 ಬಗೆಯ ಸಞ್ಞಗಳನ್ನು (ಸಂಜ್ಞೆ/ಗ್ರಹಿಕೆ) ಪಠಿಸಿದ್ದೆ ಆದರೆ , ಅದನ್ನು ಆಲಿಸಿ, ಅದರ ಬಗ್ಗೆ ಮನಸ್ಸು ಹರಿಸಿ ಆತನ ಚಿತ್ತವು ಸಕಾರಾತ್ಮಕವಾಗಿ ಆತನ ರೋಗವು ಆ ಸ್ಥಳದಲ್ಲಿಯೆ ಆ ಕ್ಷಣವೇ ಇಲ್ಲದಂತಾಗುವುದು.

 ಆನಂದ ಯಾವುವವು 10 ?ಅವೆಂದರೆ 

1. ಅನಿತ್ಯದ ಸಂಜ್ಞೆ
2. ಅನತ್ತ (ಆನಾತ್ಮದ ) ಸಂಜ್ಞೆ
3. ಅಶುಭದ ಕುರೂಪ (ಸಂಜ್ಞೆ)
4. ಅದಿನವದ (ಅನಾನುಕೂಲಗಳ) ಸಂಜ್ಞೆ
5. ಪಹಾನದ (ತೇಜಿಸಬೇಕಾದುದರ ಬಗ್ಗೆ ) ಸಂಜ್ಞೆ
6. ವಿರಾಗದ  (ರಾಗರಹಿತನಾಗುವಿಕೆಯ) ಸಂಜ್ಞೆ
7. ನಿರೋಧದ  (ನಿಲ್ಲಿಸುವಿಕೆಯ /ಉದಯಿಸುದಿರುವಿಕೆಯ) ಸಂಜ್ಞೆ
8. ಸಬ್ಬಲೋಕೇ ಅಭಿರತನ (ಎಲ್ಲಾ ಲೋಕಗಳ ಬಗೆಗಿನ ಆಸಕ್ತಿ ಇಲ್ಲದಿರುವಿಕೆಯ )ಸಂಜ್ಞೆ
9. ಸರ್ವ ಸಂಖಾರಗಳಲ್ಲಿ ಅನಿತ್ಯದ ಸಂಜ್ಞೆ
10. ಅನಾಪಾನ ಸತಿ

1.ಮತ್ತೆ ಯಾವುದು ಅನಿತ್ಯದ ಸಂಜ್ಞೆ ? 
ಇಲ್ಲಿ ಭಿಕ್ಖುವು ಅಥವಾ ಸಾಧಕನು ಕಾಡಿಗೆ ಹೋಗಿ ಅಥವಾ ಮರದ ಬುಡಕ್ಕೆ, ಅಥವಾ ಖಾಲಿಯಾದ ಗೃಹದಲ್ಲಿ, ಹೋಗಿ ಹೀಗೆ ಚಿಂತನೆ ಮಾಡುತ್ತಾನೆ ದೇಹವಾಗಲಿ, ಭಾವವೇಶಗಳಾಗಲಿ (ವೇದನೆ), ಸಂಜ್ಞೇಗಳಾಗಲಿ, ಸಂಖಾರಗಳಾಗಲಿ(ಇಚ್ಚೆ) ಮತ್ತು ವಿಜ್ಞಾಣ(ಮನಸ್ಥಿತಿ/ಅರಿವು)ಗಳಾಗಲಿ ಇವೆಲ್ಲವೂ ಅನಿತ್ಯವಾಗಿದೆ ಹೀಗೆ ಆತನು ಪಂಚಖಂದಗಳಲ್ಲಿ ಅನಿತ್ಯಗಳನ್ನು ಧ್ಯಾನದಲ್ಲಿ ಕಾಣುವನು.. ಇದಕ್ಕೆ ಅನಿತ್ಯದ ಸಂಜ್ಞೆ ಎನ್ನುವರು.

 2. ಮತ್ತೆ ಯಾವುದು ಅನತ್ತ (ಆನಾತ್ಮದ ) ಸಂಜ್ಞೆ ? 
ಇಲ್ಲಿ ಭಿಕ್ಖುವು ಅಥವಾ ಸಾಧಕನು ಕಾಡಿಗೆ ಹೋಗಿ ಅಥವಾ ಮರದ ಬುಡಕ್ಕೆ, ಅಥವಾ ಖಾಲಿಯಾದ ಗೃಹದಲ್ಲಿ, ಹೋಗಿ ಹೀಗೆ ಚಿಂತನೆ ಮಾಡುತ್ತಾನೆ : ಕಣ್ನು ಆಗಲಿ ಅಥವಾ ಅವುಗಳಿಂದ ನೋಡಲ್ಪಡುವ ರೂಪಗಳಾಗಲಿ ಹಾಗೆಯೇ ಕಿವಿ ಮತ್ತು ಶಬ್ದಗಳು: ; ಮೂಗು ಮತ್ತು ವಾಸನೆಗಳು ; ನಾಲಿಗೆ ಮತ್ತು ಸ್ವಾದಗಳು :ದೇಹ ಮತ್ತು ಸ್ಪರ್ಷಗಳು ; ಮತ್ತು ಮನಸ್ಸು ಮತ್ತು ಮಾನಸಿಕ ವಿಷಯಗಳು. ಇವು ಯಾವುವು ಸಹಾ ನಾನಲ್ಲ ,ನನ್ನದಲ್ಲ, ನನ್ನ ಆತ್ಮವಲ್ಲ, ಎಂದು ಅರಿಯುವುದು. ಹೀಗೆ ಆರು ಇಂದ್ರಿಯಗಳು ಹಾಗೂ ಅವುಗಳ ವಿಷಯಗಳಲ್ಲಿ ಆನಾತ್ಮವನ್ನು ಕಾಣುವುದು ಅಂದರೆ ಆವು ಯಾವುದರಲ್ಲಿಯೂ ಸಹಾ ಆತ್ಮವನ್ನು (ಸ್ವಯಂ/ನಾನು/ನನ್ನದು) ಕಾಣದಿರುವುದು.

   3. ಮತ್ತೆ ಯಾವುದು ಅಶುಭದ (ಕುರೂಪ )ಸಂಜ್ಞೆ? 
ಇಲ್ಲಿ ಭಿಕ್ಖುವು ಅಥವಾ ಸಾಧಕನು ಕಾಡಿಗೆ ಹೋಗಿ ಅಥವಾ ಮರದ ಬುಡಕ್ಕೆ, ಅಥವಾ ಖಾಲಿಯಾದ ಗೃಹದಲ್ಲಿ, ಹೋಗಿ ಹೀಗೆ ಚಿಂತನೆ ಮಾಡುತ್ತಾನೆ : ಇಲ್ಲಿ ಭಿಕ್ಖುವು ಪಾದತಳದಿಂದ ಹಿಡಿದು ತಲೆಕೂದಲವರೆವಿಗೂ ಈ ಶರೀರವೂ ಚರ್ಮದಿಂದ ಆವೃತವಾದ ಅನೇಕ ಬಗೆಯ ಅಸಹ್ಯತೆಗಳಿಂದ  ಕೂಡಿರುವುದನ್ನು ಹೀಗೆ ಪರಿಕ್ಷಿಸುತ್ತಾನೆ.  ಈ ಶರೀರದಲ್ಲಿ ತಲೆಕೂದಲು, ಶರೀರದ ಕೂದಲು, ಉಗುರುಗಳು, ಹಲ್ಲುಗಳು, ಚರ್ಮ, ಮಾಂಸ, ಸ್ನಾಯುಗಳು, ಮೂಳೆಗಳು,, ಅಸ್ಥಿಮಜ್ಜೆ, , ಮೂತ್ರಪಿಂಡ, ಹೃದಯ, ಯಕೃತ್, ದ್ವನಿಪೆಟ್ಟಿಗೆ, ಗುಲ್ಮ, ಶ್ವಾಸಕೋಶ, ಕರುಳು, ಜಠರ, ಜೀರ್ಣವಾಗದ ಆಹಾರ, ಮಲ, ಪಿತ್ತ,, ಕಫ, ಕೀವು,, ರಕ್ತ, ಬೆವರು, ,ಕೊಬ್ಬು, ಆಶ್ರು, ಮೆದಸ್ಸು, ಜೊಲ್ಲು, ಗೊಣ್ಣೆ, ಕೀಲುಗಳ ಮಧ್ಯೆಯಿರುವ ಎಣ್ಣೆ, ಮೂತ್ರ, ಇತ್ಯಾದಿಗಳು ಇವೆ. ಹೀಗೆ ಶರೀರದ ಕುರೂಪವನ್ನು ಅರಿಯುತ್ತ ಅಸಹ್ಯಕರದ ಸಂಜ್ಞೆಗಳನ್ನು ಅರಿಯುತ್ತ ಬೆಳಸುತ್ತಾನೆ. ಇದನ್ನು ಅಶುಭದ ಸಂಜ್ಞೆ ಎನ್ನುವರು.


   4. ಮತ್ತೆ ಯಾವುದು ಅದಿನವದ (ಅನಾನುಕೂಲಗಳ) ಸಂಜ್ಞೆ ? 
ಇಲ್ಲಿ ಭಿಕ್ಖುವು ಅಥವಾ ಸಾಧಕನು ಕಾಡಿಗೆ ಹೋಗಿ ಅಥವಾ ಮರದ ಬುಡಕ್ಕೆ, ಅಥವಾ ಖಾಲಿಯಾದ ಗೃಹದಲ್ಲಿ, ಹೋಗಿ ಹೀಗೆ ಚಿಂತನೆ ಮಾಡುತ್ತಾನೆ : ಈ ಶರೀರವು ಬಹಳಷ್ಟು ದುಃಖಗಳನ್ನು ಮತ್ತು ಹಲವಾರು ಅನಾನುಕೂಲಗಳನ್ನು ಹೊಂದಿದೆ. ಅದರಿಂದಾಗಿಯೇ ಈ ಶರೀರವು ಬಹಳಷ್ಟು ವಿಧದ ಕಾಯಿಲೆಗಳಿಗೆ ಗುರಿಯಾಗುವುದು, ಉದಾಹರಿಸುವುದಾದರೆ ಕಣ್ಣಿನ ಕಾಯಿಲೆ, ಒಳಕಿವಿಯ ಕಾಯಿಲೆ, ಮೂಗಿನ ಕಾಯಿಲೆ, ನಾಲಿಗೆಗೆ ಸಂಬಂಧ ಪಟ್ಟ ಕಾಯಿಲೆಗಳು, ದೇಹ, ತಲೆ, ಕಿವಿ, ಹಲ್ಲುನೋವು,  ಮತ್ತು ತುಟಿಗಳ ಕಾಯಿಲೆ, ಕೆಮ್ಮು, ಅಸ್ತಮ, ನೆಗಡಿ, ಉರಿ, ಜ್ವರ, ಹೊಟ್ಟೆನೋವು, ತಲೆತಿರುಗುವಿಕೆ, ಆಮಶಂಕೆ, ಜಠರ ನೋವು, ಕಾಲೆರಾ, ಕುಷ್ಠರೋಗ, ಗುಳ್ಳೆಗಳು, ಚರ್ಮರೋಗಗಳು, ಕ್ಷಯರೋಗ, ಮೂಚರ್ೆರೋಗ,, ಸರ್ಪಸುತ್ತು ಚರ್ಮ ರೋಗ, ತುರಿಕೆ, ಕಜ್ಜಿ, ಸಿಡುಬು ರೋಗ, ಹಕ್ಕಳೆ ರೋಗ, ರಕ್ತಸ್ರಾವ, ಮಧುಮೇಹ, ಮೂಲವ್ಯಾಧಿ, ಮೊಡಮೆ, ಮತ್ತು ಕೀವು ವ್ರಣ, ಪಿತ್ತ ಅಥವಾ ಕಫ ಅಥವಾ ವಾತದ ಅವ್ಯವಸ್ಥೆಯಿಂದಾಗುವ ರೋಗಗಳು, ವಾತವರಣದ ಅವ್ಯವಸ್ಥೆಯಿಂದಾಗುವ ರೋಗಗಳು, ನಿರ್ಲಕ್ಷತೆಯಿಂದ ಉಂಟಾಗುವ ರೋಗಗಳು, ಅತಿಶ್ರಮದಿಂದ ಅಥವಾ ಹಿಂದಿನ ಕಮ್ಮಗಳಿಂದ ಉಂಟಾಗುವ ರೋಗಗಳು, ಚಳಿ, ಉಷ,, ಹಸಿವು, ಬಾಯಾರಿಕೆ, ನಿರ್ಜಲಿಕರಣ, ಮೂತ್ರವ್ಯಾದಿಗಳು, ಮತ್ತು ಇತ್ಯಾದಿ. ಹೀಗೆ ಹಲವಾರು ದೋಷಗಳಿಂದ ಕೋಡಿರುವ ಶರೀರವನ್ನು ವೀಕ್ಷಿಸುತ್ತಾನೆ, ಇದಕ್ಕೆ ಶರೀರದ ಅನಾನೂಕಲಗಳ ಸಂಜ್ಞೆ ಎನ್ನುತ್ತಾರೆ.

5. ಮತ್ತೆ ಯಾವುದು ಪಹಾನದ (ತೇಜಿಸಬೇಕಾದುದರ ಬಗ್ಗೆ )ಸಂಜ್ಞೆ ?
 ಇಲ್ಲಿ ಭಿಕ್ಖುವು ಅಥವಾ ಸಾಧಕನು ಕಾಡಿಗೆ ಹೋಗಿ ಅಥವಾ ಮರದ ಬುಡಕ್ಕೆ, ಅಥವಾ ಖಾಲಿಯಾದ ಗೃಹದಲ್ಲಿ, ಹೋಗಿ ಹೀಗೆ ಚಿಂತನೆ ಮಾಡುತ್ತಾನೆ : ಇಲ್ಲಿ ಭಿಕ್ಖುವು ಕಾಮುಕತೆಗಳ ಯೋಚನೆಗಳಾಗಲಿ, ಅಥವಾ ದ್ವೇಷಗಳ ಯೋಚನೆಗಳಾಗಲಿ ಅಥವಾ ಹಿಂಸೆ(ಕ್ರೂರತೆ )ಗಳ ಯೋಚನೆಗಳಾಗಲಿ ಅವು ಉಂಟಾದಾಗ ಸಹಿಸುವುದಿಲ್ಲ, ಅಕುಶಲ ಯೋಚನೆಗಳು ಯಾವುವೇ ಆಗಲಿ ಅವು ಉದಯಿಸುವಾಗ ಸಹಿಸಲಾರನು, ಬದಲಾಗಿ ಅವುಗಳನ್ನು ತೊರೆಯುತ್ತಾನೆ, ತೆಗೆದು ಹಾಕುತ್ತಾನೆ, ಇನ್ನಿಲ್ಲದಂತೆ ಮಾಡುತ್ತಾನೆ, ಮತ್ತು ನಿನರ್ಾಮ ಮಾಡಿಹಾಕುತ್ತಾನೆ, ಇದನ್ನು ತ್ಯೇಜಿಸಬೇಕಾದುದರ ಸಂಜ್ಞೆ ಎನ್ನುತ್ತಾರೆ.

6. ಮತ್ತೆ ಯಾವುದು ವಿರಾಗದ  (ರಾಗರಹಿತನಾಗುವಿಕೆಯ) ಸಂಜ್ಞೆ ?
 ಇಲ್ಲಿ ಭಿಕ್ಖುವು ಅಥವಾ ಸಾಧಕನು ಕಾಡಿಗೆ ಹೋಗಿ ಅಥವಾ ಮರದ ಬುಡಕ್ಕೆ, ಅಥವಾ ಖಾಲಿಯಾದ ಗೃಹದಲ್ಲಿ, ಹೋಗಿ ಹೀಗೆ ಚಿಂತನೆ ಮಾಡುತ್ತಾನೆ : ಇದೇ ಶಾಂತಿಯಾಗಿದೆ, ಇದೇ ಉದಾತ್ತವಾಗಿದೆ,  ಅದೇಂದರೆ ಎಲ್ಲಾ ಚಟುವಟಿಕೆ(ಸಂಖಾರ)ೆಗಳನ್ನು ಸ್ತಬ್ದಗೊಳಿಸುವಿಕೆ, ಎಲ್ಲಾ ಬಗೆಯ ಅಂಟುವಿಕೆಗಳನ್ನು ಬಿಟ್ಟುಬಿಡುವಿಕೆ, ತೃಷ್ಣೆಯ ಕ್ಷಯಗೊಳಿಸುವಿಕೆ, ವಿರಾಗತಾಳುವಿಕೆ, ನಂದಿಸುವಿಕೆ(ನಿಬ್ಬಾಣ). ಇವನ್ನೆ ವಿರಾಗದ ಸಂಜ್ಞೆಗಳು ಎನ್ನುವರು.

7.  ಮತ್ತೆ ಯಾವುದು ನಿರೋಧದ  (ನಿಲ್ಲಿಸುವಿಕೆಯ /ಉದಯಿಸುದಿರುವಿಕೆಯ) ಸಂಜ್ಞೆ ? 
ಇಲ್ಲಿ ಭಿಕ್ಖುವು ಅಥವಾ ಸಾಧಕನು ಕಾಡಿಗೆ ಹೋಗಿ ಅಥವಾ ಮರದ ಬುಡಕ್ಕೆ, ಅಥವಾ ಖಾಲಿಯಾದ ಗೃಹದಲ್ಲಿ, ಹೋಗಿ ಹೀಗೆ ಚಿಂತನೆ ಮಾಡುತ್ತಾನೆ : : ಇದೇ ಶಾಂತಿಯಾಗಿದೆ, ಇದೇ ಉದಾತ್ತವಾಗಿದೆ,  ಅದೇಂದರೆ ಎಲ್ಲಾ ಚಟುವಟಿಕ(ಸಂಖಾರ)ೆಗಳನ್ನು ಸ್ತಬ್ದಗೊಳಿಸುವಿಕೆ, ಎಲ್ಲಾ ಬಗೆಯ ಅಂಟುವಿಕೆಗಳನ್ನು ಬಿಟ್ಟುಬಿಡುವಿಕೆ, ತೃಷ್ಣೆಯ ಕ್ಷಯಗೊಳಿಸುವಿಕೆ, ನಿರೋಧ ತಾಳುವಿಕೆ, ನಂದಿಸುವಿಕೆ(ನಿಬ್ಬಾಣ)ೆ. ಇವನ್ನೆ ನಿರೋಧದ ಸಂಜ್ಞೆಗಳು ಎನ್ನುವರು.

8.  ಮತ್ತೆ ಯಾವುದು ಸಬ್ಬಲೋಕೇ ಅಭಿರತನ (ಎಲ್ಲಾ ಲೋಕಗಳ ಬಗೆಗಿನ ಆಸಕ್ತಿ ಇಲ್ಲದಿರುವಿಕೆಯ )ಸಂಜ್ಞೆ? 
ಇಲ್ಲಿ ಭಿಕ್ಖುವು ಲೋಕಗಳ ಬಗ್ಗೆ ಯಾವುದೇ ರೀತಿಯಲ್ಲೂ ಅಂಟಿಕೊಳ್ಳದೆ, ಈ ಹಿಂದಿನ ಎಲ್ಲವನ್ನು ಬಿಟ್ಟು, ಯಾವುದರಲ್ಲು ಆಕಷರ್ಿತನಾಗದೆ, ಹಿಡಿದುಕೊಳ್ಳದೆ, ಹಾಗೇಯೇ ೆ ಹುದುಗಿರುವ ಅನುಶಯಗಳ ಬಗ್ಗೆ ,ಇಚ್ಚೆಪಡದೆ, ದೃಡನಿಧರ್ಾರ ತಾಳದೆ ಹೀಗೆ ತೊರೆದು ಉಪಾದಿಯಿಲ್ಲದೆ ವಿಹರಿಸುತ್ತಾನೆ, ಇದನ್ನೆ ಸಬ್ಬಲೋಕೇ ಅಭಿರತನ (ಎಲ್ಲಾ ಲೋಕಗಳ ಬಗೆಗಿನ ಆಸಕ್ತಿ ಇಲ್ಲದಿರುವಿಕೆಯ )ಸಂಜ್ಞೆ ಎನ್ನುವರು.

9. ಮತ್ತೆ ಯಾವುದು ಸರ್ವ ಸಂಖಾರಗಳಲ್ಲಿ ಅನಿತ್ಯದ ಸಂಜ್ಞೆ ?
 ಇಲ್ಲಿ ಭಿಕ್ಖುವು ಎಲ್ಲಾ ಸಂಖಾರಗಳಲ್ಲಿ (ಚಟುವಟಿಕೆ) ಭಯಭೀತನಾಗಿ, ವಿಕಷರ್ಿತನಾಗಿ, ಜಿಗುಪ್ಸೆ ತಾಳುತ್ತಾನೆ, ಇದನ್ನೆ ಸರ್ವ ಸಂಖಾರಗಳಲ್ಲಿ ಅನಿತ್ಯದ ಸಂಜ್ಞೆ ಎನ್ನುತ್ತಾರೆ.

10.ಮತ್ತೆ ಯಾವುದು ಅನಾಪಾನ ಸತಿ? 
ಇಲ್ಲಿ ಭಿಕ್ಷುವು ಅರಣ್ಯದಲ್ಲಿ, ಮರದ ಬುಡದಲ್ಲಿ ಅಥವ ಶೂನ್ಯಗೃಹದಲ್ಲಿ, ಪದ್ಮಾಸನದಲ್ಲಿ ಅಸೀನನಾಗಿ, ತನ್ನ ದೇಹವನ್ನು ನೇರವಾಗಿಟ್ಟುಕೊಂಡು ಮತ್ತು ಸದಾ ಉಶ್ವಾಸ ಮತ್ತು ನಿಶ್ವಾಸದಲ್ಲಿಯೇ ಜಾಗರೂಕತೆಯನ್ನು ಸ್ಥಾಪಿಸಿ ಸಾಧನೆ ಮಾಡುತ್ತಿರುತ್ತಾನೆ. 
1. ಉಸಿರಾಟವು ದೀರ್ಘವಾಗಿದ್ದರೆ ನಾನು ದೀರ್ಘವಾದ ಉಸಿರನ್ನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಅರಿಯುತ್ತಿರುತ್ತಾನೆ. 
2. ಉಸಿರಾಟವು ಕಿರಿದಾಗಿದ್ದರೆ ನಾನು ಕಿರಿದಾದ ಉಸಿರನ್ನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಅರಿಯುತ್ತಾನೆ. 
3. ಇಡೀ ಉಸಿರಿನ ಕಾಯವನ್ನು ಅನುಭವಿಸಿದವನಾಗಿ ನಾನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ತನಗೆ ತಾನೇ ಸುಶಿಕ್ಷಣ ಪಡೆಯುತ್ತಾನೆ.
4. ಉಸಿರು ಕಾಯದ ಸಂಖಾರಗಳನ್ನು (ಚಟುವಟಿಕೆ) ಶಾಂತಗೊಳಿಸಿ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ತನಗೆ ತಾನೇ ಸುಶಿಕ್ಷಣ ಪಡೆಯುತ್ತಾನೆ. (ಇವಿಷ್ಟು ಅನುಪಾನ ಕಾಯನುಪಸ್ಸನವಾಗಿದೆ).
5. ಆನಂದವನ್ನು (ಪ್ರೀತಿ) ಅನುಭವಿಸಿದವನಾಗಿ ನಾನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನಗೆ ತಾನೇ ಸುಶಿಕ್ಷಣ ಪಡೆಯುತ್ತಾನೆ.
6. ಶಾಂತತೆಯನ್ನು (ಸುಖ) ಅನುಭವಿಸಿದವನಾಗಿ ನಾನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನಗೆ ತಾನೇ ಸುಶಿಕ್ಷಣ ಪಡೆಯುತ್ತಾನೆ.
7. ಚಿತ್ತದ ಚಟುವಟಿಕೆಗಳನ್ನೆಲ್ಲಾ ಅನುಭವಿಸಿ ನಾನು ಉಶ್ವಾಸಿಸುತ್ತಿರುವೆ ಅಥವಾ ನಿಶ್ವಾಸಿಸುತ್ತಿರುವೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
8. ಚಿತ್ತದ ಚಟುವಟಿಕೆಗಳನ್ನೆಲ್ಲಾ (ಸಂಖಾರಗಳನ್ನು) ಶಾಂತಗೊಳಿಸಿದವನಾಗಿ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ. (ಇವಿಷ್ಟು ಅನಾಪಾನಾ ವೇದನಾನುಪಸ್ಸನವಾಗಿದೆ).
9. ಚಿತ್ತವನ್ನು ಅನುಭವಿಸಿದವನಾಗಿ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಅತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
10. ಚಿತ್ತವನ್ನು ಸಂತೃಪ್ತಿಗೊಳಿಸುತ್ತಾ (ಆನಂದಗೊಳಿಸುತ್ತಾ) ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
11. ಚಿತ್ತವನ್ನು ಸ್ಥಿರ (ಏಕಾಗ್ರ)ಗೊಳಿಸುತ್ತಾ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
12. ಚಿತ್ತವನ್ನು ವಿಮೋಚನೆಗೊಳಿಸುತ್ತಾ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ. (ಇವಿಷ್ಟು ಅನಾಪಾನಾ ಚಿತ್ತಾನುಪಸ್ಸನವಾಗಿದೆ).
13. ಅನಿತ್ಯತೆಯನ್ನು ಗಮನಿಸುತ್ತಾ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
14. ವಿರಾಗವನ್ನು ಗಮನಿಸುತ್ತಾ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
15. ನಿರೋಧವನ್ನು ಗಮನಿಸಿ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
16. ತ್ಯಜಿಸುವಿಕೆ (ಪಟಿನಿಸ್ಸ) ಗಮನಿಸುತ್ತಾ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ. (ಇವಿಷ್ಟು ಅನಾಪಾನಾ ಧಮ್ಮಾನುಪಸ್ಸನವಾಗಿದೆ).

ಹೀಗೆ ನೀವು ಬಿಕ್ಖು ಗಿರಿಮಾನಂದನ ಬಳಿಯಲ್ಲಿ ಈ 10 ಸಂಜ್ಞೆಗಳನ್ನು ಪಠಿಸಿದರೆ , ಇದನ್ನು ಆಲಿಸಿ ಅಥರ್ೈಸಿಕೊಂಡ ನಂತರ ಆ ಕ್ಷಣದಲೇ ಅಲ್ಲಿಯೇ ಆತನ ಕಾಯಿಲೆಯು ನಾಷವಾಗುವುದು.

ನಂತರ ಆನಂದರವರು ಆ ಸುತ್ತವನ್ನು ಭಗವಾನರಿಂದ ಆಲಿಸಿ ನೆನಪಿನಲ್ಲಿಟ್ಟುಕೊಂಡು ಗಿರಿವéಾನಂದರ ಬಳಿಗೆ ಹೋದರು ಹಾಗು ಈ ಸುತ್ತವನ್ನು ಅದರಲ್ಲಿಯ 10 ಸಂಜ್ಞೆಗಳನ್ನು ಪಠಿಸಿದಾಗ ಗಿರಿಮಾನಂದರ ಕಾಯಿಲೆಯು ಆ ಕ್ಷಣದಲ್ಲಿಯೇ ಅಲ್ಲಿಯೇ ಇನ್ನಿಲ್ಲದಂತಾಯಿತು. ಹೀಗೆ ಅವರು ರೋಗದಿಂದ ಮುಕ್ತರಾದರು.
(ಅಂದಿನಿಂದ ಇಲ್ಲಿಯತನಕ ಈ ಸುತ್ತವನ್ನು ರೋಗಿಗಳ ಬಳಿಯಲ್ಲಿ ಪಠಿಸುತ್ತಾರೆ. ಅದನ್ನು ಆಲಿಸಿ ಅಥರ್ೈಸಿಕೊಂಡವರು ರೋಗಗಳಿಂದ ಮುಕ್ತರಾದಂತಹ ಬಹಳಷ್ಡು ನಿದರ್ಶನಗಳು ಇವೆ.)








Thursday, 28 March 2019

dakkhina vibhanga sutta in kannada ದಕ್ಖಿಣಾ ವಿಭಂಗ ಸುತ್ತ (ದಾನದ ವಿಶ್ಲೇಷಣೆಯ ಸುತ್ತ)

                                         ದಕ್ಖಿಣಾ ವಿಭಂಗ ಸುತ್ತ
                                    (ದಾನದ ವಿಶ್ಲೇಷಣೆಯ ಸುತ್ತ)



  

(ಸಂಘಕ್ಕೆ ನೀಡುವ ದಾನವೂ ವೈಯಕ್ತಿಕ ದಾನಕ್ಕಿಂತಲೂ ಅತಿ ಹೆಚ್ಚು ಫಲಯುತ)


ನಾನು ಹೀಗೆ ಕೇಳಿದ್ದೇನೆ, ಆ ಸಮಯದಲ್ಲಿ ಬುದ್ಧ ಭಗವಾನರು ಶಾಕ್ಯರ ನಾಡಿನ ಕಪಿಲವಸ್ತುವಿನ ಆಲದ ಮರಗಳ(ನಿಗ್ರೋಧರಾಮ) ವಿಹಾರದಲ್ಲಿದ್ದರು,  ಆಗ ಮಾತೆಯಾದ ಮಹಾಪಜಾಪತಿ ಗೋತಮಿಯು ಭಗವಾನರ ಬಳಿಗೆ ಒಂದು ಜೋತೆ ವಸ್ತ್ರಗಳೊಂದಿಗೆ ಬಂದರು. ಆಕೆಯು ವಂದಿಸಿ ಒಂದೆಡೆ ಕುಳಿತುಕೊಂಡರು ನಂತರ ಭಗವಾನರೊಂದಿಗೆ ಹೀಗೆ ನುಡಿದರು :
 ಭಂತೆ ಇವನ್ನು ನಾನೇ ಸ್ವತಃ ನೆಯ್ದು ಹಾಗೂ ಹೆಣೆದು ಈ ವಸ್ತ್ರಗಳನ್ನು ಭಗವಾನರಿಗೆಂದೇ ತಂದಿರುವೆ ಭಗವಾನರು ದಯೆಯಿಂದ ಇವನ್ನು ಸ್ವೀಕರಿಸಬೇಕು, ಹೀಗೆ ಆಕೆಯು ನುಡಿದಾಗ ಭಗವಾನರು ಆಕೆಗೆ ಹೀಗೆ ನುಡಿದರು :
   ಸಂಘಕ್ಕೆ ದಾನವ ನೀಡು ಮಾತೆ ಗೋತಮಿ, ಯಾವಾಗ ನೀವು ಸಂಘಕ್ಕೆ ನೀಡುವಿರೊ ಆಗ ಸಂಘ ಹಾಗೂ ನಾನು ಜೋತೆಯಾಗಿಯೇ ಗೌರವಕ್ಕೆ ಪಾತ್ರರಾಗುವೆವು.
 ಆಗ ಆಕೆಯು ಎರಡನೆಯ ಬಾರಿ ಹೀಗೆ ನುಡಿದರು :  ಭಂತೆ ಇವನ್ನು ನಾನೇ ಸ್ವತಃ ನೆಯ್ದು ಹಾಗೂ ಹೆಣೆದು ಈ ವಸ್ತ್ರಗಳನ್ನು ಭಗವಾನರಿಗೆಂದೇ ತಂದಿರುವೆ ಭಗವಾನರು ದಯೆಯಿಂದ ಇವನ್ನು ಸ್ವೀಕರಿಸಬೇಕು, ಹೀಗೆ ಆಕೆಯು ನುಡಿದಾಗ ಭಗವಾನರು ಎರಡನೆಯ ಬಾರಿ ಆಕೆಗೆ ಹೀಗೆ ನುಡಿದರು :
   ಸಂಘಕ್ಕೆ ದಾನವ ನೀಡು ಮಾತೆ ಗೋತಮಿ, ಯಾವಾಗ ನೀವು ಸಂಘಕ್ಕೆ ನೀಡುವಿರೊ ಆಗ ಸಂಘ ಹಾಗೂ ನಾನು ಜೋತೆಯಾಗಿಯೇ ಗೌರವಕ್ಕೆ ಪಾತ್ರರಾಗುವೆವು.
  ಆಗ ಆಕೆಯು ಮೂರನೆೆಯ ಬಾರಿ ಹೀಗೆ ನುಡಿದರು :  ಭಂತೆ ಇವನ್ನು ನಾನೇ ಸ್ವತಃ ನೆಯ್ದು ಹಾಗೂ ಹೆಣೆದು ಈ ವಸ್ತ್ರಗಳನ್ನು ಭಗವಾನರಿಗೆಂದೇ ತಂದಿರುವೆ ಭಗವಾನರು ದಯೆಯಿಂದ ಇವನ್ನು ಸ್ವೀಕರಿಸಬೇಕು, ಹೀಗೆ ಆಕೆಯು ನುಡಿದಾಗ ಭಗವಾನರು ಮೂರನೆಯ ಬಾರಿ ಆಕೆಗೆ ಹೀಗೆ ನುಡಿದರು :
   ಸಂಘಕ್ಕೆ ದಾನವ ನೀಡು ಮಾತೆ ಗೋತಮಿ, ಯಾವಾಗ ನೀವು ಸಂಘಕ್ಕೆ ನೀಡುವಿರೊ ಆಗ ಸಂಘ ಹಾಗೂ ನಾನು ಜೋತೆಯಾಗಿಯೇ ಗೌರವಕ್ಕೆ ಪಾತ್ರರಾಗುವೆವು. ಯಾವಾಗ ಭಗವಾನರು ಹೀಗೆ ನುಡಿದರೋ ಆಗ ಪೂಜ್ಯ ಆನಂದರವರು ಮಧ್ಯೆ ಪ್ರವೇಶಿಸಿ ಹೀಗೆ ನುಡಿದರು :
ಭಗವಾನ್,  ಮಾತೆಯವರಾದ ಮಹಾಪಜಾಪತಿ ಗೋತಮಿಯವರ ಈ ವಸ್ತ್ರಗಳನ್ನು ದಯವಿಟ್ಟು ಸ್ವೀಕರಿಸಿರಿ, ಮಹಾಪಜಾಪತಿ ಗೋತಮಿಯು ತಮಗೆ ಆಪಾರ ಸಹಾಯಗಳನ್ನು ಮಾಡಿರುವರು, ಚಿಕ್ಕಮ್ಮರಾಗಿ ತಮಗೆ ಪೋಷಿಸಿದ್ದಾರೆ, ಲಾಲನೆಪಾಲನೆ ಮಾಡಿದ್ದಾರೆ, ತಮಗೆ ಹಾಲನ್ನು ಉಣಿಸಿದ್ದಾರೆ, ಯಾವಾಗ ಬೋದಿಸತ್ವರ ಮಾತೆಯು ಈ ಲೋಕದಿಂದ ಮೃತ್ಯುವಶರಾದರೋ ಆಗ ಈಕೆಯೇ ತನ್ನ ಸ್ವಪುತ್ರನಂತೆಯೇ ಎಲ್ಲಾ ರೀತಿಯಲ್ಲಿಯು ತಮಗೆ ಪೋಷಿಸಿಹಳು (ಮತ್ತು ಹೀಗಾಗಿ ಬುದ್ಧರು ಸಹಾ ಆಕೆಗೆ ಸಹಾಯ ಮಾಡಲೇಬೇಕು.)

 ಮತ್ತು ಭಗವಾನರೂ ಸಹಾ ಆಕೆಗೆ ತುಂಬ ಸಹಾಯ ಮಾಡುತ್ತಲೇ ಬಂದಿರುವರು, ಭಗವಾನರಿಂದಲೇ ಆಕೆಯು ಬುದ್ಧರಿಗೆ, ಧಮ್ಮಕ್ಕೆ, ಮತ್ತು ಸಂಘಕ್ಕೆ ಶರಣು ಹೋಗಿರುವರು, ಭಗವಾನರಿಂದಲೇ ಆಕೆಯು ಪ್ರಾಣಿಹತ್ಯೆಗಳನ್ನು ಮಾಡುವುದನ್ನು ತೋರೆದಿರುವರು, ಕೋಡದೆ ಇದ್ದುದ್ದನ್ನು ಸ್ವೀಕರಿಸುವುದಿಲ್ಲ, ಬ್ರಹ್ಮಚಾರ್ಯೆಯ ಜೀವನ ನಡೆಸುತಿಹರು, ಸುಳ್ಳು ಹೇಳಲಾರರು, ಮಾದಕ ಪಾನಿಯಗಳನ್ನು ಸ್ವೀಕರಿಸಲಾರರು,

 ತಿರತನಗಳಾದ ತಮಗೆ, ಧಮ್ಮಕ್ಕೆ, ಮತ್ತು ಸಂಘಕ್ಕೆ ಅಪಾರ ಶ್ರದ್ಧೆಯನ್ನು ಇಟ್ಟಿರುವರು, ಹಾಗೂ ಆರ್ಯರ ಶೀಲಗಳನ್ನು ಇಷ್ಟಪಟ್ಟು ಪಾಲಿಸುತಿಹರು. ಭಗವಾನರಿಂದಲೇ ಆಕೆಯು ಆರಿಯ ಸತ್ಯಗಳಾದ ದುಃಖ, ದುಃಖಸಮುದಯ, ದುಃಖನಿರೋಧ, ಮತ್ತು ಆರಿಯ ಅಷ್ಟಾಂಗ ಮಾರ್ಗದ ಬಗೆಗಿನ ಸಂಶಯಗಳನ್ನು ದಾಟಿರುವರು, ಹೀಗಾಗಿ ಭಗವಾನರು ಸಹಾ ಆಕೆಗೆ ಆಪಾರ ಸಹಾಯ ಮಾಡಿರುವರು.

ಇದು ಸತ್ಯ, ಆನಂದ. ಯಾವಾಗ ಒಬ್ಬನು ತಿಸರಣುವಿಗೆ ಶರಣು ಹೋಗಲು ಸಹಾಯ ಮಾಡಿರುವನೊ, ಅಂತಹವನಿಗೆ ಋಣ ತೀರಿಸುವುದು ಅಷ್ಟು ಸುಲಭವಲ್ಲ. ತಲೆಬಾಗಿ ವಂದಿಸುವುದರಿಂದಾಗಲಿ, ಮೇಲೇದ್ದು ಗೌರವಿಸುವುದರಿಂದಾಗಲಿ, ಕೈಜೋಡಿಸಿ ನಮಸ್ಕರಿಸುವುದರಿಂದಾಗಲಿ, ಮತ್ತು ವಿನಯವಿಧೇಯತೆಯಿಂದಾಗಲಿ, ಅಂತಹವರಿಗೆ ಚಿವರ ವಸ್ತ್ರಾದಿಗಳಿಂದ ದಾನಮಾಡುವುದರಿಂದಾಗಲಿ, ಆಹಾರ ಪಾನಿಯಗಳ ದಾನದಿಂದಾಗಲಿ, ವಸತಿ ನೀಡುವುದರಿಂದಾಗಲಿ, ರೋಗಿಯಾಗಿದ್ದಾಗ ಔಷಧಿಗಳನ್ನು ನೀಡುವುದರಿಂದಾಗಲಿ, ಅಂತಹವರಿಗೆ ಒಬ್ಬನು ಋಣವನ್ನು ತೀರಿಸಲಾರನು,
   ಮತ್ತೆ ಯಾವಾಗ ಒಬ್ಬನಿಂದಾಗಿ ಪಂಚಶೀಲಗಳಾದ ಪ್ರಾಣಿಹತ್ಯೆಗಳನ್ನು ಮಾಡುವುದನ್ನು ತೋರೆದಿರುವುದು, ಕೋಡದೆ ಇದ್ದುದ್ದನ್ನು ಸ್ವೀಕರಿಸದಿರುವುದು, ಬ್ರಹ್ಮಚಾರ್ಯೆಯ ಜೀವನ ನಡೆಸುವುದು, ಸುಳ್ಳು ಹೇಳದಿರುವುದು, ಮಾದಕ ಪಾನಿಯಗಳನ್ನು ಸ್ವೀಕರಿಸದಿರುವುದು,  ಅಂತಹ ಸಹಾಯ ಮಾಡಿದವರಿಗೆ ಋಣ ತೀರಿಸುವುದು ಅಷ್ಟು ಸುಲಭವಲ್ಲ, ತಲೆಬಾಗಿ ವಂದಿಸುವುದರಿಂದಾಗಲಿ, ಮೇಲೇದ್ದು ಗೌರವಿಸುವುದರಿಂದಾಗಲಿ, ಕೈಜೋಡಿಸಿ ನಮಸ್ಕರಿಸುವುದರಿಂದಾಗಲಿ, ಮತ್ತು ವಿನಯವಿಧೇಯತೆಯಿಂದಾಗಲಿ, ಅಂತಹವರಿಗೆ ಚಿವರ ವಸ್ತ್ರಾದಿಗಳಿಂದ ದಾನಮಾಡುವುದರಿಂದಾಗಲಿ, ಆಹಾರ ಪಾನಿಯಗಳ ದಾನದಿಂದಾಗಲಿ, ವಸತಿ ನೀಡುವುದರಿಂದಾಗಲಿ, ರೋಗಿಯಾಗಿದ್ದಾಗ ಔಷಧಿಗಳನ್ನು ನೀಡುವುದರಿಂದಾಗಲಿ, ಒಬ್ಬನು ಅಂತಹವರಿಗೆ ಋಣವನ್ನು ತೀರಿಸಲಾರನು.

    ಯಾವಾಗ ಒಬ್ಬನಿಂದಾಗಿ ತಿರತನಗಳಾದ ಬುದ್ಧರಿಗೆ, ಧಮ್ಮಕ್ಕೆ, ಮತ್ತು ಸಂಘಕ್ಕೆ ಅಪಾರ ಶ್ರದ್ಧೆಯನ್ನು ಇಟ್ಟಿರುವಂತಾಗುವರೋ, ಹಾಗೂ ಆರ್ಯರ ಶೀಲಗಳನ್ನು ಇಷ್ಟಪಟ್ಟು ಪಾಲಿಸುವಂತವರಾಗಿದ್ದಾರೋ ಅಂತಹ ಸಹಾಯ ಮಾಡಿದವರಿಗೆ ಋಣ ತೀರಿಸುವುದು ಅಷ್ಟು ಸುಲಭವಲ್ಲ, ತಲೆಬಾಗಿ ವಂದಿಸುವುದರಿಂದಾಗಲಿ, ಮೇಲೇದ್ದು ಗೌರವಿಸುವುದರಿಂದಾಗಲಿ, ಕೈಜೋಡಿಸಿ ನಮಸ್ಕರಿಸುವುದರಿಂದಾಗಲಿ, ಮತ್ತು ವಿನಯವಿಧೇಯತೆಯಿಂದಾಗಲಿ, ಅಂತಹವರಿಗೆ ಚಿವರ ವಸ್ತ್ರಾದಿಗಳಿಂದ ದಾನಮಾಡುವುದರಿಂದಾಗಲಿ, ಆಹಾರ ಪಾನಿಯಗಳ ದಾನದಿಂದಾಗಲಿ, ವಸತಿ ನೀಡುವುದರಿಂದಾಗಲಿ, ರೋಗಿಯಾಗಿದ್ದಾಗ ಔಷಧಿಗಳನ್ನು ನೀಡುವುದರಿಂದಾಗಲಿ, ಒಬ್ಬನು ಅಂತಹವರಿಗೆ ಋಣವನ್ನು ತೀರಿಸಲಾರನು.

     ಮತ್ತು ಯಾರಿಂದಾಗಿ ಆರಿಯ ಸತ್ಯಗಳಾದ ದುಃಖ, ದುಃಖಸಮುದಯ, ದುಃಖನಿರೋಧ, ಮತ್ತು ದುಃಖ ನಿರೋಧದ ಮಾರ್ಗವಾದ ಆರಿಯ ಅಷ್ಟಾಂಗ ಮಾರ್ಗದ ಬಗೆಗಿನ ಮಾಹಿತಿಗಳನ್ನು ತಿಳಿದು ಅವುಗಳ ಬಗೆಗಿನ ಸಂಶಯಗಳನ್ನು ದಾಟಿರುವರೋ ಅಂತಹ ಸಹಾಯ ಮಾಡಿದವರಿಗೆ ಋಣ ತೀರಿಸುವುದು ಅಷ್ಟು ಸುಲಭವಲ್ಲ, ತಲೆಬಾಗಿ ವಂದಿಸುವುದರಿಂದಾಗಲಿ, ಮೇಲೇದ್ದು ಗೌರವಿಸುವುದರಿಂದಾಗಲಿ, ಕೈಜೋಡಿಸಿ ನಮಸ್ಕರಿಸುವುದರಿಂದಾಗಲಿ, ಮತ್ತು ವಿನಯವಿಧೇಯತೆಯಿಂದಾಗಲಿ, ಅಂತಹವರಿಗೆ ಚಿವರ ವಸ್ತ್ರಾದಿಗಳಿಂದ ದಾನಮಾಡುವುದರಿಂದಾಗಲಿ, ಆಹಾರ ಪಾನಿಯಗಳ ದಾನದಿಂದಾಗಲಿ, ವಸತಿ ನೀಡುವುದರಿಂದಾಗಲಿ, ರೋಗಿಯಾಗಿದ್ದಾಗ ಔಷಧಿಗಳನ್ನು ನೀಡುವುದರಿಂದಾಗಲಿ, ಒಬ್ಬನು ಅಂತಹವರಿಗೆ ಋಣವನ್ನು ತೀರಿಸಲಾರನು.

   ಆನಂದ ಹದಿನಾಲ್ಕು ಬಗೆಯ ವೈಯಕ್ತಿಕದಾನಗಳಿವೆ. ಯಾವುವವು 14 ? ಅವೆಂದರೇ ಒಬ್ಬನು ತಥಾಗತರು, ಅರಹಂತರು ಆದ ಸಮ್ಮಸಂಬುದ್ಧರಿಗೆ ದಾನವನ್ನು ನೀಡುತ್ತಾನೆ. ಇದು ಮೊದಲನೆಯ ವೈಯಕ್ತಿಕ ದಾನವಾಗಿದೆ. ಒಬ್ಬನು ಪಚ್ಚೆಕ ಬುದ್ಧರಿಗೆ ದಾನವನ್ನು ನೀಡುತ್ತಾನೆ, ಇದು ಎರಡನೆಯ ವೈಯಕ್ತಿಕದಾನವಾಗಿದೆ. ಒಬ್ಬನು ತಥಾಗತರ ಶ್ರಾವಕರಾದ ಅರಹಂತರಿಗೆ ದಾನವನ್ನು ಮಾಡುತ್ತಾನೆ. ಇದು ಮೂರನೆಯ ವೈಯಕ್ತಿಕ ದಾನವಾಗಿದೆ. ಒಬ್ಬನು ಅರಹಂತ ಫಲವನ್ನು ಸಾಕ್ಷತ್ಕರಿಸುವ ಮಾರ್ಗದಲ್ಲಿರುವವನಿಗೆ ದಾನ ನೀಡುತ್ತಾನೆ. ಇದು ನಾಲ್ಕನೆಯ ವೈಯಕ್ತಿಕದಾನವಾಗಿದೆ.. ಒಬ್ಬನು ಅನಾಗಾಮಿಗೆ ದಾನವನ್ನು ನೀಡುತ್ತಾನೆ, ಇದು ಐದನೆಯ ವೈಯಕ್ತಿಕದಾನವಾಗಿದೆ.. ಒಬ್ಬನು ಅನಾಗಾಮಿ ಪಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ ದಾನ ನೀಡುತ್ತಾನೆ , ಇದು ಆರನೆಯ ವೈಯಕ್ತಿಕ ದಾನವಾಗಿದೆ, ಒಬ್ಬನು ಸಕದಾಗಾಮಿಗೆ ದಾನವನ್ನು ನೀಡುತ್ತಾನೆ, ಇದು ಏಳನೆಯ ವೈಯಕ್ತಿಕದಾನವಾಗಿದೆ.. ಒಬ್ಬನು ಸಕದಾಗಾಮಿ ಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ ದಾನ ನೀಡುತ್ತಾನೆ , ಇದು ಎಂಟನೆಯ ವೈಯಕ್ತಿಕ ದಾನವಾಗಿದೆ, ಒಬ್ಬನು ಸೋತಪನ್ನನಿಗೆ ದಾನವನ್ನು ನೀಡುತ್ತಾನೆ, ಇದು ಒಂಬತ್ತನೆೆಯ ವೈಯಕ್ತಿಕ ದಾನವಾಗಿದೆ.. ಒಬ್ಬನು ಸೋತಪನ್ನ ಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ ದಾನ ನೀಡುತ್ತಾನೆ , ಇದು ಹತ್ತನೆಯ ವೈಯಕ್ತಿಕ ದಾನವಾಗಿದೆ, ಒಬ್ಬನು ಬುದ್ಧ ದಮ್ಮದ ಬಾಹ್ಯದಲ್ಲಿರುವ ನಿಷ್ಕಾಮ ವೀತರಾಗಿಗೆ ದಾನ ನೀಡುತ್ತಾನೆ, ಇದು ಹನ್ನೊಂದನೆಯ ವೈಯಕ್ತಿಕ ದಾನವಾಗಿದೆ, ಒಬ್ಬನು ಶೀಲವಂತ ಸಾಧಾರಣ ಮಾನವನಿಗೆ ದಾನ ನೀಡುತ್ತಾನೆ, ಇದು ಹನ್ನೆರಡನೆಯ ವೈಯಕ್ತಿಕ ದಾನವಾಗಿದೆ, ಒಬ್ಬನು ದುಶ್ಯೀಲ ಮಾನವನಿಗೆ ದಾನ ನೀಡುತ್ತಾನೆ, ಇದು ಹದಿಮೂರನೆಯ ವೈಯಕ್ತಿಕ ದಾನವಾಗಿದೆ, ಒಬ್ಬನು ತಿರಚ್ಛನಗತಿಯುಳ್ಳ ಪ್ರಾಣಿಗಳಿಗೆ ದಾನವನ್ನು ನೀಡುತ್ತಾನೆ, ಇದು ಹದಿನಾಲ್ಕನೆಯ ವೈಯಕ್ತಿಕ ದಾನವಾಗಿದೆ,
      ಈಗ ಆನಂದ , ಈ ಮೇಲಿನ ವ್ಯಕ್ತಿಗಳಿಗೆ ನೀಡಿರುವ ದಾನದಿಂದ ಈ ರೀತಿಯ ಫಲಿತಾಂಶಗಳನ್ನು ನಿರೀಕ್ಷಿಸಬಹುದು. ಪ್ರಾಣಿಗಳಿಗೆ ದಾನ ನೀಡಿದರೆ ನೂರು ಪಟ್ಟು ಫಲ ಸಿಗುತ್ತದೆ.
      ದುಶ್ಯೀಲ ಮಾನವನಿಗೆ ದಾನ ನೀಡಿದರೆ ಸಾವಿರ ಪಟ್ಟು ಫಲ ಹಿಂದಿರುಗಿ ಸಿಗುತ್ತದೆ.
      ಶೀಲವಂತ ಮಾನವನಿಗೆ ದಾನ ನೀಡಿದರೆ ಲಕ್ಷ ಪಟ್ಟು ಫಲ ಹಿಂದಿರುಗಿ ಸಿಗುತ್ತದೆ.
  ಬುದ್ಧ ದಮ್ಮದ ಬಾಹ್ಯದಲ್ಲಿರುವ ನಿಷ್ಕಾಮ ವಿತರಾಗಿಗೆ ದಾನ ನೀಡಿದರೆ 10000000000 ( ಸಾವಿರ ಕೋಟಿ) ಪಟ್ಟು  ಫಲ ಹಿಂದಿರುಗಿ ಸಿಗುತ್ತದೆ.   
      ಸೋತಪನ್ನ ಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ ದಾನ ನೀಡಿದರೆ  ಲೆಕ್ಖಕ್ಕೆ ನಿಲುಕದಂತಹುದು, ಅಳೆಯಲಾಗದಷ್ಟು ಪಟ್ಟು ಫಲ ಹಿಂದಿರುಗಿ ಸಿಗುತ್ತದೆ. ಹೀಗಿರುವಾಗ ಸೋತಪನ್ನರಿಗೆ ದಾನ ನೀಡಿದರೆ ಎಷ್ಟೊಂದು ಪಟ್ಟು ಫಲ ಹಿಂತಿರುಗಿ ಮರಳಬಹುದು,? ಹಾಗೂ ಸಕದಾಗಾಮಿ ಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ, ಸಕದಾಗಾಮಿಗೆ ,ಅನಾಗಾಮಿ ಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ, ಅನಾಗಾಮಿಗೆ ,ಅರಹಂತ ಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ, ಅರಹಂತರಿಗೆ , ಮತ್ತು ಪಚ್ಚೆಕ ಬುದ್ಧರಿಗೆ ದಾನ ನೀಡಿದರೆ ಎಷ್ಟೊಂದು ಪಟ್ಟು ಫಲ ಹಿಂತಿರುಗಿ ಮರಳಬಹುದು,? ಇನ್ನೂ ಸಮ್ಮ ಸಂಬುದ್ಧರಿಗೆ ದಾನ ನೀಡಿದರೇ ಎಷ್ಟೊಂದು ಪಟ್ಟು ಫಲ ಹಿಂತಿರುಗಿ ಮರಳಬಹುದು,?

   ಅದರೆ ಆನಂದ ಏಳು ಬಗೆಯ ದಾನಗಳನ್ನು ಸಂಘಕ್ಕೆ ಸಮಪರ್ಿಸಲಾಗುತ್ತದೆ. ಯಾವುವವು ಏಳು ?

1. ಬುದ್ಧಭಗವಾನರ ಸಹಿತ ಭಿಕ್ಖುಗಳು ಹಾಗು ಭಿಕ್ಖುಣಿಯರ ಸಮೂಹಕ್ಕೆ ಒಬ್ಬನು ದಾನ ನೀಡುವಿಕೆ. ಇದು ಸಂಘಕ್ಕೆ ಸಮಪರ್ಿಸಲಾಗುವ ಮೊದಲನೆಯ ದಾನ.

2.  ಬುದ್ಧಭಗವಾನರು ಮಹಾಪರಿನಿಬ್ಬಾಣ ಪಡೆದ ಬಳಿಕ ಭಿಕ್ಖುಗಳು ಹಾಗು ಭಿಕ್ಖುಣಿಯರ ಸಮೂಹಕ್ಕೆ ಒಬ್ಬನು ದಾನ ನೀಡುವಿಕೆ. ಇದು ಸಂಘಕ್ಕೆ ಸಮಪರ್ಿಸಲಾಗುವ ಎರಡನೆಯ ದಾನ.

3. ಭಿಕ್ಖುಗಳು ಸಮೂಹಕ್ಕೆ ಒಬ್ಬನು ದಾನ ನೀಡುವಿಕೆ. ಇದು ಸಂಘಕ್ಕೆ ಸಮಪರ್ಿಸಲಾಗುವ ಮೂರನೆಯ ದಾನ.

4. ಭಿಕ್ಖುಣಿಯರ ಸಮೂಹಕ್ಕೆ ಒಬ್ಬನು ದಾನ ನೀಡುವಿಕೆ. ಇದು ಸಂಘಕ್ಕೆ ಸಮಪರ್ಿಸಲಾಗುವ ನಾಲ್ಕನೆಯ ದಾನ.

5.  ನನಗಾಗಿ ಸಂಘವು ಅನೇಕ ಭಿಕ್ಖುಗಳು ಹಾಗು ಭಿಕ್ಖುಣಿಯರನ್ನು ದಾನಕ್ಕಾಗಿ ನೇಮಕಮಾಡಬಹುದು ಎಂದು ಯೋಚಿಸಿ ಒಬ್ಬನು ದಾನ ಮಾಡಬಹುದು. ಇದು ಸಂಘಕ್ಕೆ ಸಮಪರ್ಿಸಲಾಗುವ ಐದನೆಯ ದಾನ.

6. ನನಗಾಗಿ ಸಂಘವು ಅನೇಕ ಭಿಕ್ಖುಗಳನ್ನು ದಾನಕ್ಕಾಗಿ ನೇಮಕಮಾಡಬಹುದು ಎಂದು ಯೋಚಿಸಿ ಒಬ್ಬನು ದಾನ ಮಾಡಬಹುದು. ಇದು ಸಂಘಕ್ಕೆ ಸಮಪರ್ಿಸಲಾಗುವ ಆರನೆಯ ದಾನ.

7. ನನಗಾಗಿ ಸಂಘವು ಅನೇಕ ಭಿಕ್ಖುಣಿಯರನ್ನು ದಾನಕ್ಕಾಗಿ ನೇಮಕಮಾಡಬಹುದು ಎಂದು ಯೋಚಿಸಿ ಒಬ್ಬನು ದಾನ ಮಾಡಬಹುದು. ಇದು ಸಂಘಕ್ಕೆ ಸಮಪರ್ಿಸಲಾಗುವ  ಏಳನೆಯ ದಾನ.

  ಮುಂದೊಂದು ಕಾಲ ಬರುವುದು ಆಗ ಸಂಘದ ಸದಸ್ಯರು ಕೇವಲ ಕಾವಿಯ ವಸ್ತ್ರವನ್ನು ತಮ್ಮ ಕುತ್ತಿಗೆಯ ಸುತ್ತಲೂ ಮಾತ್ರ ಧರಿಸುವರು, ಅದರೆ ಅವರು ದುಶ್ಶಿಲರು ಹಾಗೂ ಹೀನಚಾರಿತ್ರ್ಯರು ಆಗಿರುತ್ತಾರೆ, ಅದರೆ ಜನರು ಅವರಿಗೆ ಸಂಘದ ಹೆಸರಿನಲ್ಲಿ ದಾನವನ್ನು ಮಾಡುತ್ತಾರೆ, ಆಗಲೂ ಸಹಾ ನಾನೂ ಹೇಳುತ್ತಿದೇನೆ ಸಂಘಕ್ಕೇ ನೀಡುವ ದಾನವು ಲೆಕ್ಖಕ್ಕೆ ನಿಲುಕದಂತಹುದು ಹಾಗೂ ಅಳೆಯಲಾಗದಂತಹುದು. ಹೀಗಾಗಿ ನಾನೂ ಹೇಳುವುದು ಏನೆಂದರೆ ಸಂಘಕ್ಕೆ ನೀಡುವ ದಾನವೂ ವೈಯಕ್ತಿಕ ದಾನಕ್ಕಿಂತಲೂ ಅತಿ ಹೆಚ್ಚು ಫಲಯುತವಾದದ್ದು.

    ಆನಂದ ದಾನಗಳಿಂದ ನಾಲ್ಕು ವಿಧವಾಗಿ ಪರಿಶುದ್ಧರಾಗುವರು. ಯಾವುವವು ನಾಲ್ಕು ?

1. ಇಲ್ಲಿ ದಾನದಿಂದ ದಾನಿಯು ಪರಿಶುದ್ಧನಾಗುತ್ತಾನೆ ಅದರೆ ಅತಿಥಿಯು(ಸ್ವೀಕರಿಸುವವನು) ಅಲ್ಲ.

2. ಇಲ್ಲಿ ದಾನದಿಂದ ಅತಿಥಿಯು ಪರಿಶುದ್ಧನಾಗುತ್ತಾನೆ ಅದರೆ ದಾನಿಯು ಅಲ್ಲ.

3. ಇಲ್ಲಿ ದಾನದಿಂದ ದಾನಿಯಾಗಲಿ ಅಥವಾ ಅತಿಥಿಯಾಗಲಿ ಈರ್ವರೂ ಪರಿಶುದ್ಧರಾಗುವುದಿಲ್ಲ.

4. ಇಲ್ಲಿ ದಾನದಿಂದ ದಾನಿಯು ಹಾಗೂ ಅತಿಥಿಯು ಈರ್ವರೂ ಪರಿಶುದ್ಧರಾಗುವರು.

 ಮತ್ತು ಇಲ್ಲಿ ಹೇಗೆ ದಾನದಿಂದ ದಾನಿಯು ಪರಿಶುದ್ಧನಾಗುತ್ತಾನೆ ಅದರೆ ಅತಿಥಿಯು(ಸ್ವೀಕರಿಸುವವನು) ಅಲ್ಲ.? ಹೇಗೆಂದರೆ ಇಲ್ಲಿ ದಾನಿಯು ಶೀಲವಂತನಾಗಿರುತ್ತಾನೆ ಸುಚಾರಿತ್ಯವಂತನಾಗಿರುತ್ತಾನೆ ಅದರೆ ಅತಿಥಿಯು ದುಶ್ಶಿಲನು ಹಾಗೂ ಹೀನಚಾರಿತ್ರ್ಯನು ಆಗಿರುತ್ತಾರೆ,

   ಮತ್ತು ಇಲ್ಲಿ ಹೇಗೆ ಇಲ್ಲಿ ದಾನದಿಂದ ಅತಿಥಿಯು ಪರಿಶುದ್ಧನಾಗುತ್ತಾನೆ ಅದರೆ ದಾನಿಯು ಅಲ್ಲ. ? ಹೇಗೆಂದರೆ ಇಲ್ಲಿ ಅತಿಥಿಯು ಶೀಲವಂತನಾಗಿರುತ್ತಾನೆ ಸುಚಾರಿತ್ಯವಂತನಾಗಿರುತ್ತಾನೆ ಅದರೆ ದಾನಿಯು ದುಶ್ಶಿಲನು ಹಾಗೂ ಹೀನಚಾರಿತ್ರ್ಯನು ಆಗಿರುತ್ತಾರೆ,
   ಮತ್ತು ಇಲ್ಲಿ ಹೇಗೆ ದಾನದಿಂದ ದಾನಿಯಾಗಲಿ ಅಥವಾ ಅತಿಥಿಯಾಗಲಿ ಈರ್ವರೂ ಪರಿಶುದ್ಧರಾಗುವುದಿಲ್ಲ. ? ಹೇಗೆಂದರೆ ಇಲ್ಲಿ ದಾನಿಯು ಹಾಗೂ ಅತಿಥಿಯು ಈರ್ವರೂ ದುಶ್ಶಿಲರು ಹಾಗೂ ಹೀನಚಾರಿತ್ರ್ಯರು ಆಗಿರುತ್ತಾರೆ,

   ಮತ್ತು ಇಲ್ಲಿ ಹೇಗೆ ಇಲ್ಲಿ ದಾನದಿಂದ ದಾನಿಯು ಹಾಗೂ ಅತಿಥಿಯು ಈರ್ವರೂ ಪರಿಶುದ್ಧರಾಗುವರು. ? ಹೇಗೆಂದರೆ ಇಲ್ಲಿ ದಾನಿಯು ಹಾಗೂ ಅತಿಥಿಯು ಈರ್ವರೂ ಶೀಲವಂತನಾಗಿರುತ್ತಾರೆ ಮತ್ತು ಸುಚಾರಿತ್ಯವಂತನಾಗಿರುತ್ತಾರೆ.

  ಹೀಗೆ ದಾನದಕ್ಷಣೆಗಳಿಂದ ನಾಲ್ಕು ವಿಧವಾಗಿ ವಿಶುದ್ಧರಾಗುವರು.

ಹೀಗೆ ನುಡಿದ ಭಗವಾನರು ನಂತರ ಸುಗತರು ಆದ ಶಾಸ್ತರು ಹೀಗೆ ನುಡಿದರು:

    ಯಾವಾಗ ಸುಶೀಲನು ಶ್ರದ್ಧಾಯುತ ಪ್ರಸನ್ನಚಿತ್ತದಿಂದ 
  ದುಶ್ಶಿಲನಿಗೆ ಯೋಗ್ಯವಾದ ಉಡುಗೋರೆ ಅಥವಾ ದಾನವನ್ನು 
  ವಿಶಾಲ ವಿಫುಲವಾದ ಭರವಸೆಗಳಿಂದ ನೀಡುವನೋ ಅಂತಹ 
   ದಾನವು ದಾಯಕನ್ನು ವಿಶುದ್ಧಗೊಳಿಸುವುದು.

   ಯಾವಾಗ ದುಶ್ಶಿಲನು ಸಂಶಯ ಚಿತ್ತದಿಂದ 
   ಶೀಲವಂತ ಅತಿಥಿಗೆ ಅಯೋಗ್ಯವಾದಂತಹ ದಾನವನ್ನು
  ಯಾವುದೇ ಫಲಗಳ ಭರವಸೆಗಳಿಲ್ಲದೆ ನೀಡುವನೋ ಅಂತಹ 
   ದಾನವು ಅತಿಥಿಯನ್ನು ವಿಶುದ್ಧಗೊಳಿಸುವುದು.

    ಯಾವಾಗ ದುಶ್ಶಿಲನು ಸಂಶಯ ಚಿತ್ತದಿಂದ 
   ದುಶ್ಶೀಲ ಅತಿಥಿಗೆ ಅಯೋಗ್ಯವಾದಂತಹ ದಾನವನ್ನು
  ಯಾವುದೇ ಫಲಗಳ ಭರವಸೆಗಳಿಲ್ಲದೆ ನೀಡುವನೋ ಅಂತಹ 
   ದಾನವು ಅತ್ಯಂತ ಅಲ್ಪ ಫಲಕಾರಿ ಎಂದು ಘೋಷಿಸುತ್ತೇನೆ.

    ಯಾವಾಗ ಸುಶೀಲನು ಶ್ರದ್ಧಾಯುತ ಪ್ರಸನ್ನಚಿತ್ತದಿಂದ 
  ಶೀಲವಂತನಿಗೆ ಯೋಗ್ಯವಾದ ಉಡುಗೋರೆ ಅಥವಾ ದಾನವನ್ನು 
  ವಿಶಾಲ ವಿಫುಲವಾದ ಭರವಸೆಗಳಿಂದ ನೀಡುವನೋ ಅಂತಹ 
   ದಾನವು ಮಹತ್ಫಲವೆಂದು ಘೋಷಿಸುತ್ತೇನೆ.

   

    ಯಾವಾಗ ವೀತರಾಗಿಯು ವೀತರಾಗಿಗೆ 
    ಪ್ರಸನ್ನಚಿತ್ತದಿಂದ ಯೋಗ್ಯವಾದ ದಾನವನ್ನು 
   ಕಮ್ಮಫಲದ ದೃಷ್ಟಿಕೋನದಿಂದ ನೀಡುವನೋ 
   ಅಂತಹ ದಾನವು  ನಿಜಕ್ಕೂ ಆಮಿಷ ದಾನಗಳಲ್ಲೇ 
         ಶ್ರೇಷ್ಟಕರವಾಗಿರುತ್ತದೆ.


   ಇಲ್ಲಿಗೆ ದಕ್ಖಿಣಾ ವಿಭಂಗ ಸುತ್ತವು ಮುಗಿಯಿತು.
( ಈ ಸುತ್ತದ ಪ್ರವಚನದ ನಂತರ ಎಲ್ಲರಿಗೂ ಭಗವಾನರು ಏತಕ್ಕಾಗಿ ಸಂಘದಾನಕ್ಕೆ ಒತ್ತು ನೀಡಿದರು ಎಂದು ತಿಳಿಯಿತು.)