Sunday, 8 January 2023

ತಿರೋಕುಟ್ಟ ಸುತ್ತ tirokutta sutta in kannada

 ತಿರೋಕುಟ್ಟ ಸುತ್ತ

 ಗೋಡೆಯಾಚೆಗಿನ ಪ್ರೇತಗಳ ಘಟನೆ



ಬಿಂಬಸಾರ ರಾಜನು ಮಲಗಿರುವಾಗ ಅತ್ಯಂತ ಭೀಕರವಾದ ಶಬ್ದಗಳನ್ನು ಕೇಳಿದನು. ಅದರಿಂದ ಭಯಭೀತನಾಗಿ ಭಗವಾನರ ಬಳಿಗೆ ಬಂದು ವಿಷಯವನ್ನು ತಿಳಿಸಿದನು.: ಭಗವಾನ್ ನೀವು ಏನಾದರೂ ಅಂತಹ ಶಬ್ದಗಳನ್ನು ಕೇಳಿದಿರಾ , ಅದರಿಂದಾಗಿ ನನಗೆ ಏನಾದರೂ ಸಂಭವಿಸುವುದೇ ಎಂದು ನಾನು ಭಯಭೀತನಾಗಿರುವೆನು..

ಆಗ ಭಗವಾನರು ಹೀಗೆ ಉತ್ತರಿಸಿದರು: ಭಯ ಬೇಡ ಮಹಾರಾಜ, ನಿನಗೆ ಯಾವ ಹಾನಿಯೂ ಜರುಗದು, ಬದಲಾಗಿ ಉನ್ನತಿಯು ನಿನ್ನ ಹಾದಿಯಲಿ ಬರುವುದು, ಈ ಶಬ್ಧಗಳು ಪ್ರೇತಗಳದ್ದಾಗಿದೆ ಇವರು ನಿನ್ನ ಪೂರ್ವಜನ್ಮದ ಬಂಧುಗಳಾಗಿದ್ದಾರೆ, ಇವರು ಹಿಂದಿನ ಬುದ್ಧರ ಕಾಲದವರು, ತಮ್ಮ ಈ ಪ್ರೇತ ಜನ್ಮದ ವಿಮೋಕ್ಷಕ್ಕಾಗಿ ಆಗಿನಿಂದ ಕಾಯುತ್ತಿದ್ದಾರೆ. ಅವರ ಬಯಕೆ ಏನೆಂದರೇ ಈತನು ಬುದ್ಧರಿಗೆ ದಾನವನ್ನು ಅಪರ್ಿಸಿ ಅದರ ಪುಣ್ಯಫಲವನ್ನು ನಮಗೆ ನೀಡುವನು ಅಲ್ಲದೆ ನೆನ್ನೆ ನೀನು ದಾನವನ್ನು ನೀಡಿಯೂ ಪುಣ್ಯವನ್ನು ಹಂಚಲಿಲ್ಲ. ಹೀಗಾಗಿ ಅವರು ಹತಾಶರಾಗಿ ಹೀಗೆ ಪ್ರಲಾಪದ ಕೂಗುಗಳನ್ನು ಮಾಡಿದ್ದಾರೆ. 

ಆಗ ರಾಜನು ಹೀಗೆ ಕೇಳಿದನು ಹಾಗಾದರೇ ಭಗವಾನ್ ಅವರು ದಾನದ ಫಲವನ್ನು ಸ್ವೀಕರಿಸುವರೇ?

ಹೌದು

ಭಗವಾನ್, ಹಾಗಾದರೇ ದಯೆಯಿಟ್ಟು ನಾಳೆ ನನ್ನ ಅರೆಮನೆಯಲ್ಲಿ ದಾನವನ್ನು ಸ್ವೀಕರಿಸಿ ಧನ್ಯನನ್ನಾಗಿಸಿ, ಅವರಿಗೆ ದಾನ ಫಲವನ್ನು ಹಂಚುವೆನು.

ಆಗ ಮಹಾದಾನಿಯಾದ ಅರಸನು ಅತ್ಯಂತ ಸ್ವಾದಿಷ್ಟಮಯವಾದ ಆಹಾರಗಳನ್ನು ಸಿದ್ದಪಡಿಸಿದನು. ಇವನೆಲ್ಲಾ ಗಮನಿಸುತ್ತಿದ್ದಂತಹ ಪ್ರೇತಗಳು ಆನಂದಗೊಂಡವು. ಹಾಗೂ ಗೋಡೆಯಾಚೆ ನಿಂತವು. ಭಗವಾನರ ಸಂಕಲ್ಪದಿಂದಾಗಿ ಬಿಂಬಸಾರನಿಗೂ ಅವರೆಲ್ಲ ಕಾಣಿಸತೊಡಗಿದರು. 

ಯಾವಾಗ ರಾಜನು ಕೈತೊಳೆಯಲು ನೀರು ನೀಡುತ್ತಿದ್ದಂತೆ ಹೀಗೆ ಸಂಕಲ್ಪಿಸಿದನು ಇವೆಲ್ಲಾ ನನ್ನ ಜ್ಞಾತಿ(ಬಂಧು)ಗಳಿಗೆ ಸೇರಲಿ ತಕ್ಷಣ ಅವರು ಕಮಲಗಳುಳ್ಳ ಸರೋವರಕ್ಕೆ ಬಂದಿಳಿದರು, ಅವರೆಲ್ಲ ಅಲ್ಲಿ ಸ್ನಾನ ಮಾಡಿ, ತೃಪ್ತರಾಗಿ ನೀರನ್ನು ಸೇವಿಸಿದವು, ಅದಕ್ಕೆ ಮುಂಚೆ ಅವಕ್ಕೆ ನೀರು ಸೇವಿಸಲು ಸಾಧ್ಯವಾಗುತ್ತಿರಲಿಲ್ಲ, ಅವು ನೀರು ಸೇವಿಸುತ್ತಿದಂತೆ ಅವುಗಳ ಬಾಯಾರಿಕೆ, ದಣಿವು, ಖಿನ್ನತೆ ದೂರವಾಗಿ ಹೊಂಬಣ್ಣದವರಾದವು, ರಾಜನು ಸ್ವಾದಿಷ್ಟಮಯ ಬಗೆಬಗೆಯ ಆಹಾರಗಳನ್ನು ಬಡಿಸುತ್ತಿದ್ದಂತೆಯೇ, ಈ ಹಿಂದೆ ತಿನ್ನಲಾಗದಂತಹ ಸ್ಥಿತಿಯಲ್ಲಿದ್ದ ಅವುಗಳು ದೇವಲೋಕದಂತಹ ಆಹಾರವನ್ನು ಆನಂದದಿಂದ ಸೇವಿಸತೊಡಗಿದವು. ಹಾಗೆಯೆ ರಾಜನು ಭಿಕ್ಖುಗಳಿಗೆ ವಸ್ತ್ರದಾನಗಳನ್ನು ನೀಡುತ್ತಿದ್ದಂತೆಯೇ ಅವುಗಳು ದೇವ ವಸ್ತ್ರಗಳನ್ನು ಪಡೆದವು. ವಿಹಾರ ದಾನ ನೀಡುತ್ತಿದ್ದಂತೆಯೇ ದೇವ ಮಹಲುಗಳನ್ನು ಪಡೆದವು, ಹೀಗೆ ಬಗೆಬಗೆಯ ಸೌಲಭ್ಯಗಳನ್ನು ಅವು ಪಡೆದವು. ಆಗ ಭಗವಾನರು ಸಹಾ ಅವರು ಪಡೆಯುತ್ತಿದ್ದಂತಹ ಆನಂದವು ರಾಜನಿಗೂ ಲಭಿಸಲಿ ಎಂದು ಸಂಕಲ್ಪಿಸಿದರು. ಇದರಿಂದಾಗಿ ರಾಜನು ಸಹಾ ಆನಂದಭರಿತನಾದನು. ಆಗ ಭಗವಾನರು ರಾಜ ಹಾಗೂ ರಾಜ ಪರಿವಾರಕ್ಕೆ ತಿರೋಕುಟ್ಟ ಸುತ್ತವನ್ನು ಬೋಧಿಸಿದರು.

ತಿರೋಕುಟ್ಟ ಸುತ್ತ

1.  ಅವರು ಗೋಡೆಯಾಚೆ,  ತೆರೆದ ಸ್ಥಳಗಳಲ್ಲಿ ಮತ್ತು ರಸ್ತೆಗಳು ಸೇರುವ ಸ್ಥಳಗಳಲ್ಲಿ ದ್ವಾರಗಳ ಬಳಿ, ತಮ್ಮ ಹಿಂದಿನ ಮನೆಗಳ ಬಳಿ ಬಂದು ನಿಲ್ಲುವವು.

2. ಅದರೆ ಹೇರಳವಾದ ಸ್ವಾದಿಷ್ಟ ಬೋಜ್ಯಗಳು ಹಾಗೂ ಪಾನಿಯಗಳು ಸಿದ್ಧವಾಗಿದ್ದರೂ ಸಹಾ ಆ ಜೀವಿಗಳ ಪಾಪಯುತ ಅಕುಶಲ ಕಮ್ಮದಿಂದಾಗಿ ಯಾರೂ ಅವರನ್ನು ನೆನೆಯಲಾರರು.

3. ಹೀಗಾಗಿ ಯಾರು ಅನುಕಂಪಶೀಲರೋ ಅವರು ಯೋಗ್ಯ ಕಾಲದಲ್ಲಿ, ಪರಿಶುದ್ಧವಾದ, ಉತ್ಕೃಷ್ಟವಾದ, ಯೋಗ್ಯವಾದ ಭೋಜ್ಯಗಳನ್ನು ಹಾಗೂ ಪಾನಿಯಗಳನ್ನು ಪ್ರೇತಗಳಿಗೆ ನೀಡುವರು. ಹಾಗೂ ಹೀಗೆ ಸಂಕಲ್ಪಿಸುವರು : 

ಇವು ನಮ್ಮ ಜ್ಞಾತಿಗಳಿಗೆ(ಬಂಧುಗಳಿಗೆ) ಸೇರಲಿ, ನಮ್ಮ ಜ್ಞಾತಿಗಳೂ ಧನ್ಯರಾಗಲಿ ಸುಖಿಯಾಗಿರಲಿ.

4. ಆಗ ಯಾವೆಲ್ಲಾ ಪ್ರೇತಗಳು ಗುಂಪು ಸೇರಿ ಆಹಾರಗಳಿಂದ ಹಾಗೂ ಪಾನಿಯಗಳಿಂದ ಧನ್ಯರಾಗುವವೋ ಅವು ಗೌರವಪೂರ್ವಕವಾಗಿ ಹೀಗೆ ಕೃತಜ್ಞತೆ ಅಪರ್ಿಸುವವು. ಹಾಗೂ ಹೀಗೆ ಹೇಳುವವು 

5. ನಮ್ಮ ಜ್ಞಾತಿಯು ಚಿರವಾಗಿ ಜೀವಿಸಲಿ, ಆತನಿಂದಾಗಿ ಈ ಲಾಭವನ್ನು ಪಡೆದು, ಗೌರವಿಸಲ್ಟಟ್ಟಿದ್ದೇವೆ, ಋಣಿಯಾಗಿದ್ದೇವೆ, ನಮಗೆ ನೀಡಿದಂತಹ ಆತನೂ ಸಹಾ ಪ್ರತಿಫಲವನ್ನು ಪಡೆಯುವಂತಾಗಲಿ.

6. ಅಲ್ಲಿ (ಪ್ರೇತಲೋಕದಲ್ಲಿ) ಯಾವ ವ್ಯವಸಾಯವೂ ಇಲ್ಲ, ಯಾವ ಪಶುಪಾಲನೆಯು ಇಲ್ಲ, ಹಾಗೆಯೇ ಯಾವ ವ್ಯಾಪಾರವೂ ಇಲ್ಲ, ಹಾಗೇಯೆ ಸ್ವರ್ಣದಿಂದಾಗುವಂತಹ ಯಾವ ವಿನಿಮಯವೂ ಇಲ್ಲ.

7. ಹೇಗೆ ಮಳೆಯ ನೀರು ಮೇಲಿನಿಂದ ಕೆಳಕ್ಕೆ ಧುಮಿಕ್ಕಿ, ಹರಿಯುವುದೋ ಹಾಗೇಯೇ ಪ್ರೇತಗಳು ದಾನದಿಂದ ಅವಲಂಬಿತವಾಗಿವೆ. ಹೀಗಾಗಿ ಇಲ್ಲಿ ಏನೆಲ್ಲಾ ದಾನವಾಗಿ ನೀಡುವೆವೋ ಅದು ಅಲ್ಲಿ ಪ್ರೇತಗಳಿಗೆ ಲಾಭವಾಗುವುದು.

8. ಹೇಗೆ ನದಿಗಳು ತುಂಬಿದಾಗ ಅವು ಹಾಗೇಯೆ ಸಾಗಿ ಸಾಗರವನ್ನು ಸೇರುವಂತೆ, ಹಾಗೆಯೇ ಯಾವುದೆಲ್ಲವೂ ಇಲ್ಲಿ ನೀಡಿದ್ದೇವೆಯೋ ಅವು ಪ್ರೇತಗಳಿಗೆ ದೊರೆತು ಲಾಭವನ್ನುಂಟು ಮಾಡುತ್ತವೆ.

9. ಈತನು ನನಗೆ ನೀಡಿದ್ದಾನೆ, ನನಗಾಗಿ ಕೆಲಸಗಳನ್ನು ಮಾಡಿದ್ದಾನೆ, ನನಗೆ ಈತನು ಬಂಧುವು, ಮಿತ್ರನು ಹಾಗೂ ಸಖನು ಆಗಿದ್ದನು, ಈ ರೀತಿಯಲ್ಲಿ ಅವರು ಈ ಹಿಂದೆ ಮಾಡಿದಂತಹ ಸಹಾಯಗಳನ್ನು ನೆನೆದು ಪ್ರೇತಗಳಿಗೆ ದಾನಗಳನ್ನು ಸಮಪರ್ಿಸಬೇಕು.

10. ಯಾವುದೇ ಆಶ್ರುಗಳಿಂದಾಗಲಿ, ಅಥವಾ ಶೋಕಗಳಿಂದಾಗಲಿ ಅಥವಾ ಯಾವುದೇ ಪ್ರಲಾಪಗಳಿಂದಾಗಲಿ ಎಲ್ಲಿಯವರೆಗೆ ಬಂಧುಗಳು ಈ ರೀತಿಗಳಲ್ಲಿ ದುಃಖಿಸುವರೋ ಇದರಿಂದಾಗಿ ಪ್ರೇತಗಳಿಗೆ ಯಾವುದೇ ಪ್ರಯೋಜನವಾಗದು.

11. ಅದರೆ ಅವರಿಗೆ ತಲುಪುವಂತೆ ಸಂಘಕ್ಕೆ ಸುಪ್ರತಿಷ್ಟಿತವಾಗಿ ನೀಡಿದಂತಹ ದಾನವು ಮಾತ್ರ ಅವರಿಗೆ ದೀರ್ಘಕಾಲ ಹಿತವನ್ನು ಲಾಭವನ್ನು ನೀಡುತ್ತದೆ. ಕಾಲವಿಳಂಬವಿಲ್ಲದೆ ತಕ್ಷಣವೇ ಅವರಿಗೆ ಫಲವನ್ನು ನೀಡುವುದು.

12. ಇದು ಬಂಧುಗಳಿಗೆ ನಾವು ಮಾಡುವಂತಹ ನಿಜ ಕರ್ತವ್ಯವೂ ಸಹಾ, ಹಾಗೆಯೇ ಅಗಲಿದವರಿಗೆ ನಾವು ನೀಡುವಂತಹ ಶ್ರೇಷ್ಟ ಗೌರವವೂ ಸಹಾ, ಭೋಜ್ಯ ಪಾನಿಯಗಳಿಂದ ಭಿಕ್ಖುಗಳಿಗೆ ದಾನ ನೀಡುವುದರಿಂದ ಅವರಿಗೆ ಶಕ್ತಿಯು ದೊರೆಯುವುದು, ಮತ್ತು ಇದು ನಿಮ್ಮಿಂದ ಉತ್ಪನ್ನವಾದ ಸಣ್ಣ ಪುಣ್ಯವೇನಲ್ಲ.


- ಂ0ಂ  

Sunday, 28 August 2022

ಮಿತ್ತ ಸುತ್ತ mitta sutta in kannada

                       ಮಿತ್ತ ಸುತ್ತ


 ಭಿಕ್ಖುಗಳೇ, ಮಿತ್ರನು ಈ 7 ಗುಣಗಳಿಂದ ಕೂಡಿರುವಾಗ ಆತನು ಸಹವತರ್ಿಯಾಗಲು ಅರ್ಹನಾಗುತ್ತಾನೆ.

ಯಾವುವವು ಏಳು ?


1. ಆತನು ಯಾವುದನ್ನು ಪರರು ನೀಡಲು ಕಷ್ಟಕರವಾಗಿರುವುದೋ ಅದನ್ನೇ ನೀಡುತ್ತಾನೆ,

2. ಆತನು ಯಾವುದನ್ನು ಪರರು ಮಾಡಲು ಹಿಂಜರಿಯುತ್ತಾರೋ ಅದನ್ನೇ ಮಾಡುತ್ತಾನೆ,

3. ಆತನು ಸಹಿಸಲು ಅತಿದುಸ್ಸಹವಾಗಿರುವುದನ್ನು ಸಹಿಸುತ್ತಾನೆ,

4. ಆತನು ತನ್ನ ರಹಸ್ಯಗಳನ್ನೆಲ್ಲಾ ಮಿತ್ರನ ಬಳಿ ತೆರೆದಿಡುತ್ತಾನೆ,

5. ಆದರೆ ಮಿತ್ರನ ರಹಸ್ಯಗಳನ್ನು ಅಡಗಿಸಿಡುತ್ತಾನೆ,

6. ಯಾವಾಗ ವಿಪತ್ತುಗಳು ಆಕ್ರಮಣ ಮಾಡುವವು ಆಗ ಆತನು ಮಿತ್ರನಿಗೆ ತೊರೆಯುವುದಿಲ್ಲ,

7.  ಯಾವಾಗ ಮಿತ್ರನು ನಿರ್ಗತಿಕ ಅಥವಾ ನಿರ್ಧನನಾಗುವನೋ ಆಗ ಆತನನ್ನು ಕೀಳಾಗಿ ಕಾಣುವುದಿಲ್ಲ. 


   ಆತನು ಸುಂದರವಾಗಿರುವುದನ್ನು ನೀಡಲು ಕಷ್ಟಕರವಾಗಿದ್ದರೂ ನೀಡುತ್ತಾನೆ.

ಮಾಡಲು ಅತಿಕಠಿಣವಾಗಿದ್ದರೂ ಮಾಡುತ್ತಾನೆ,

ಆಲಿಸಲು ಅತ್ಯಂತ ಹೇಯವಾದ ಕಠೋರವಾದ ಮಾತುಗಳನ್ನು ಸಹಿಸುತ್ತಾನೆ.

ಆತನ ರಹಸ್ಯಗಳನ್ನು ನಿನಗೆ ನುಡಿಯುತ್ತಾನೆ,

ನಿನ್ನ ರಹಸ್ಯಗಳನ್ನು ಬಚ್ಚಿಡುತ್ತಾನೆ,

ಯಾವಾಗ ದುರಂತಗಳು, ಆಪಾಯಗಳು ಬೀಳುತ್ತವೆಯೋ ಆತನು ನಿನ್ನನ್ನು ವಜರ್ಿಸಲಾರ.

ಯಾವಾಗ ನೀನು ಅವನತಿಗೆ ಈಡಾಗುವೆಯೋ ಆಗ ನಿನಗೆ ಕೀಳಾಗಿ ನೋಡಲಾರನು.

ಯಾರಲ್ಲಿ ಈ ಸಪ್ತ ಸದ್ಗುಣಗಳನ್ನು ನೋಡುತ್ತೆವೆಯೊ ಮಿತ್ರತ್ವ ಬಯಸುವವನು ತಕ್ಷಣ ಆತನ ಸ್ನೇಹವನ್ನು ಬಲಿಷ್ಟಗೊಳಿಸಬೇಕು.




 

Saturday, 27 August 2022

ಕಿಂ ದಾನ ಸುತ್ತ kimdana sutta in kannada

    ಕಿಂ ದಾನ ಸುತ್ತ 




ದೇವನೊಬ್ಬನ ಪ್ರಶ್ನೆ :


1. ಏನನ್ನು ದಾನ ನೀಡಿದರೆ ಶಕ್ತಿಯನ್ನು ನೀಡುತ್ತಾನೆ ?

2. ಏನನ್ನು ದಾನ ನೀಡಿದರೆ ಸೌಂದರ್ಯವನ್ನು ನೀಡುತ್ತಾನೆ ?

3. ಏನನ್ನು ದಾನ ನೀಡಿದರೆ ಆರಾಮ  ನೀಡುತ್ತಾನೆ ?

4. ಏನನ್ನು ದಾನ ನೀಡಿದರೆ ದೃಷಿ ನೀಡುತ್ತಾನೆ ?

5. ಮತ್ತು ಏನನ್ನು ದಾನ ನೀಡಿದರೆ ಎಲ್ಲವನ್ನು ದಾನ ನೀಡಿದಂತೆ ಆಗುವುದು ?


  ಬುದ್ಧ ಭಗವಾನರ ಉತ್ತರ :


 1. ಆಹಾರ ನೀಡುವ ದಾನಿಯು ಶಕ್ತಿಯನ್ನು ನೀಡುತ್ತಾನೆ.

2. ವಸ್ತ್ರಗಳನ್ನು ನೀಡುವ ದಾನಿಯು ಸೌಂದರ್ಯವನ್ನು ನೀಡುತ್ತಾನೆ .

3. ವಾಹನವನ್ನು ನೀಡುವ ದಾನಿಯು ಆರಾಮವನ್ನು ನೀಡುತ್ತಾನೆ.

4. ದೀಪಗಳನ್ನು ನೀಡುವ ದಾನಿಯು ದೃಷ್ಟಿಯನ್ನು ನೀಡುತ್ತಾನೆ.

5.  ಮತ್ತು ವಸತಿಯನ್ನು ನೀಡುವ ದಾನಿಯು ಎಲ್ಲವನ್ನು ದಾನ ನೀಡಿದಂತೆ ಆಗುವುದು.

ಅದರೆ ಧಮ್ಮವನ್ನು (ಬುದ್ಧರ ಬೋಧನೆ) ನೀಡುವ ದಾನಿಯು ಅಮರತ್ವವನ್ನೇ ನೀಡುತ್ತಾನೆ.

 

Saturday, 12 June 2021

ಬ್ಯಸನ ಸುತ್ತ (ದುರಂತಗಳ ಸುತ್ತ) (ಅಂ.ನಿ. 11.6) byasana sutta (A.N. 11.6)

  ಬ್ಯಸನ ಸುತ್ತ (ದುರಂತಗಳ ಸುತ್ತ) (ಅಂ.ನಿ. 11.6)



 " ಭಿಕ್ಖುಗಳೇ, ಯಾವುದೇ ಭಿಕ್ಖುವು ಧಾಮರ್ಿಕ ಸಂಗಾತಿಗಳನ್ನು ನಿಂದಿಸುವನೋ, ಅವಮಾನ ಮಾಡುವನೋ, ಉದಾತ್ತರ ಬಗ್ಗೆ ಕೆಟ್ಟದಾಗಿ ಮಾತಾನಾಡುವನೋ ಅಂತಹವನು ನಿಸಂದೇಹವಾಗಿ ಈ 11 ದುರಂತಗಳಲ್ಲಿ ಯಾವುದಾದರೂ ಒಂದನ್ನು ಪಡೆಯುತ್ತಾನೆ."

"  ಯಾವುದವು 11 ?"

  "1. ಅಂತಹವರು ಪ್ರಾಪ್ತಿ ಮಾಡಬೇಕಾಗಿರುವುದನ್ನು ಪ್ರಾಪ್ತಿ ಮಾಡುವುದಿಲ್ಲ.


  2.ಅಥವಾ ಅಂತಹವರು ಯಾವುದನ್ನು ಪ್ರಾಪ್ತಿ ಮಾಡಿರುವರೋ ಅದರಿಂದ ಕೆಳಕ್ಕೆ ಬೀಳುವರು. ಅಂದರೆ ಅವನ್ನು ಕಳೆದುಕೊಳ್ಳುವರು.


   3. ಅಥವಾ ಅಂತಹವರು ಅವರು ತಮ್ಮ ಸದ್ಗುಣಗಳನ್ನು ಪರಿಶುದ್ಧಿಗೊಳಿಸುವುದಿಲ್ಲ.


    4. ಅಥವಾ ಅಂತಹವರು ತಮ್ಮ ಸದ್ಗುಣಗಳ ಬಗ್ಗೆ ಅತಿಯಾಗಿ ಅಂದಾಜು ಮಾಡುತ್ತಾರೆ. ವಾಸ್ತವವಾಗಿ ಹಾಗೆ ವಿಕಾಸವಾಗಿರುವುದಿಲ್ಲ. 


     5. ಅಥವಾ ಅಂತಹವರು ತಮ್ಮ ಧಾಮರ್ಿಕ ಜೀವನವನ್ನು ಅಸಂತುಷ್ಟರಾಗಿ ಜೀವಿಸುತ್ತಾರೆ. 


      6. ಅಥವಾ ಅಂತಹವರು ಭ್ರಷ್ಟ ಅಪರಾದಗಳಲ್ಲಿ ತೊಡಗುತ್ತಾರೆ.


       7. ಅಥವಾ ಅಂತಹವರು ತಮ್ಮ ಶಿಕ್ಷಣಕ್ಕೆ ರಾಜಿನಾಮೆ ನೀಡಿ ನೀಚ ಜೀವನಕ್ಕೆ ಹಿಂತಿರುಗುತ್ತಾರೆ. 


        8. ಅಥವಾ ಅಂತಹವರು ಭೀಕರ ರೋಗಕ್ಕೆ ಗುರಿಯಾಗುತ್ತಾರೆ. 


       9. ಅಥವಾ ಅಂತಹವರು ತಮ್ಮ ಮನಸ್ಸಿನ ನಿಯಂತ್ರಣ ಕಳೆದುಕೊಂಡು ಹುಚ್ಚರಾಗುತ್ತಾರೆ. 


        10. ಅಥವಾ ಅಂತಹವರು ಸಾಯುವಾಗ ನಷ್ಟತನದ ಭಾವವನ್ನು ಹೊಂದುತ್ತಾರೆ. 


        11. ಮತ್ತು ಅಂತಹವರು ಸಾವಿನ ನಂತರ, ಕಾಯವು ಭೇಧವಾದ ನಂತರ ಅಪಾಯಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತಗಳಲ್ಲಿ, ನಿರಯಗಳಲ್ಲಿ ಜನಿಸುತ್ತಾರೆ. "


  "   ಹೀಗೆ ಭಿಕ್ಖುಗಳೇ, ಯಾವುದೇ ಭಿಕ್ಖುವು ಧಾಮರ್ಿಕ ಸಂಗಾತಿಗಳನ್ನು ನಿಂದಿಸುವನೋ, ಅವಮಾನ ಮಾಡುವನೋ, ಉದಾತ್ತರ ಬಗ್ಗೆ ಕೆಟ್ಟದಾಗಿ ಮಾತಾನಾಡುವನೋ ಅಂತಹವನು ನಿಸಂದೇಹವಾಗಿ ಈ 11 ದುರಂತಗಳಲ್ಲಿ ಯಾವುದಾದರೂ ಒಂದನ್ನು ಪಡೆಯುತ್ತಾನೆ.."


" ಭಿಕ್ಖುಗಳೇ, ಯಾವುದೇ ಭಿಕ್ಖುವು ಧಾಮರ್ಿಕ ಸಂಗಾತಿಗಳನ್ನು ನಿಂದಿಸುವುದಿಲ್ಲವೋ, ಅವಮಾನ ಮಾಡುವುದಿಲ್ಲವೋ, ಉದಾತ್ತರ ಬಗ್ಗೆ ಕೆಟ್ಟದಾಗಿ ಮಾತಾನಾಡುವುದಿಲ್ಲವೋ, ಅಂತಹವನು ನಿಸಂದೇಹವಾಗಿ ಈ 11 ದುರಂತಗಳಲ್ಲಿ ಯಾವುದೂ ಪಡೆಯುವುದಿಲ್ಲ." .


  


 

Sunday, 30 May 2021

ದುತಿಯಪರಿಹಾನಿ ಸುತ್ತ dutiya parihani sutta : ಯಾವ ರೀತಿಯಲ್ಲಿ ಉಪಾಸಕನು (ಗೃಹಸ್ಥ ಬೌದ್ಧ ಅನುಯಾಯಿ) ಅವನತಿಗೆ ಈಡಾಗುತ್ತಾನೆ.

   ದುತಿಯಪರಿಹಾನಿ ಸುತ್ತ


ಯಾವ ರೀತಿಯಲ್ಲಿ ಉಪಾಸಕನು (ಗೃಹಸ್ಥ ಬೌದ್ಧ ಅನುಯಾಯಿ) ಅವನತಿಗೆ ಈಡಾಗುತ್ತಾನೆ.



   ಭಿಕ್ಖುಗಳೇ, ಈ ಏಳು ವಿಷಯಗಳಿಂದ ಉಪಾಸಕನು ಅವನತಿಗೆ ಈಡಾಗುತ್ತಾನೆ ?

  

       ಯಾವುವವು ಏಳು ?


  " 1. ಅವನು ಭಿಕ್ಖುಗಳನ್ನು ದಶರ್ಿಸಲು (ನೋಡಲು) ನಿಲ್ಲಿಸುತ್ತಾನೆ.


    2. ಅವನು ಧಮ್ಮವನ್ನು ಕೇಳಲು ಅಲಕ್ಷಿಸುತ್ತಾ ಇರುತ್ತಾನೆ.


    3. ಅವನು ಉನ್ನತವಾದ (ಪಂಚ)ಶೀಲವನ್ನು ಪಾಲಿಸುವುದಿಲ್ಲ.


     4. ಅವನು ಭಿಕ್ಖುಗಳ ಬಗ್ಗೆ ಅಪಾರವಾಗಿ ಸಂಶಯಸ್ಥನಾಗುತ್ತಾನೆ. ಆ ಭಿಕ್ಖುಗಳು ಹಿರಿಯ ಥೇರರೇ ಆಗಿರಲಿ, ಹೊಸ ಸಮಣೇರರೇ ಆಗಿರಲಿ, ಅಥವಾ ವರ್ಷಗಳು ಸಾಧನೆ ಮಾಡುತ್ತಿರುವ ಭಿಕ್ಖುಗಳೇ ಆಗಿರಲಿ. ಅವರ ಬಗ್ಗೆ ಸಂಶಯಸ್ಥನಾಗಿರುತ್ತಾನೆ.


      5. ಆತನು ಧಮ್ಮವನ್ನು ಆಲಿಸುವಾಗಲೂ ಸಹಾ ಟೀಕಾತ್ಮಕವಾಗಿಯೇ, ತಪ್ಪುಗಳನ್ನು ಹುಡುಕುವ ರೀತಿಯಲ್ಲಿಯೇ ಧಮ್ಮವನ್ನು ಆಲಿಸುತ್ತಾನೆ.


       6. ಆತನು ಆರಿಯರಲ್ಲದ ಉದಾರಲ್ಲದ ವ್ಯಕ್ತಿಗಳಾದ ಹೊರಗಿನವರಿಗೆ ದಾನಕ್ಕೆ, ಆತಿಥ್ಯಕ್ಕೆ, ಜ್ಞಾನಕ್ಕೆ ಅರ್ಹರೆಂದು ಭಾವಿಸಿ ಅವರನ್ನೇ ಹಿಂಬಾಲಿಸುತ್ತಾನೆ. 


       7. ಆತನು ಆ ಉದಾರಲ್ಲದವರಲ್ಲಿಯೇ ಗೌರವ, ಜ್ಙಾನಗಳಿಕೆ, ದಾನ, ಸೇವೆ, ಆತಿಥ್ಯಗಳೆಲ್ಲವನ್ನು ಮಾಡುತ್ತಾನೆ.

  

      ಈ ಏಳು ವಿಷಯಗಳಿಂದ ಉಪಾಸಕನು(ಗೃಹಸ್ಥ ಬೌದ್ಧ ಅನುಯಾಯಿ) ಅವನತಿಗೆ ಈಡಾಗುತ್ತಾನೆ 






 .


 

Thursday, 24 September 2020

ಮಹಾನಾಮ ಸುತ್ತ (55.37)

 ಮಹಾನಾಮ ಸುತ್ತ (55.37)



ಒಮ್ಮೆ ಭಗವಾನರು ಶಾಕ್ಯರ ನಗರವಾದ ಕಪಿಲವಸ್ತುವಿನ ನಿಗ್ರೋಧ ಆರಾಮ(ಉಧ್ಯಾನವನ)ದಲ್ಲಿ ನೆಲಸಿದ್ದರು. ಆ ಸಮಯದಲ್ಲಿ ಶಾಕ್ಯರ ಹಿರಿಯರಾದಂತಹ ಮಹಾನಾಮರು ಭಗವಾನರ ಬಳಿಗೆ ಬಂದು ವಂದಿಸಿ ಒಂದೆಡೆ ಕುಳಿತರು. ನಂತರ ಅವರು ಭಗವಾನರೊಂದಿಗೆ ಹೀಗೆ ಸಂಬೋದಿಸಿದರು : "ಭಂತೆ ಯಾವ ರೀತಿಯಲ್ಲಿ ಒಬ್ಬನು ಉಪಾಸಕನಾಗುತ್ತಾನೆ(ಬೌದ್ಧನಾಗುತ್ತಾನೆ)"

"ಇಲ್ಲಿ ಮಹಾನಾಮ ಒಬ್ಬನು ಬುದ್ಧರ ಶರಣು ಹೋದಾಗ, ಧಮ್ಮದ ಶರಣು ಹೋದಾಗ, ಸಂಘದ ಶರಣು ಹೋದಾಗ ಆತನು ಈ ರೀತಿಯಲ್ಲಿ ಉಪಾಸಕ(ಬೌದ್ಧ)ನಾಗುತ್ತಾನೆ."


"ಮತ್ತೆ ಭಂತೆ ಯಾವ ರೀತಿಯಲ್ಲಿ ಉಪಾಸಕನು ಶೀಲಸಂಪನ್ನನು ಆಗುತ್ತಾನೆ. (ಶೀಲಯುತ ಬೌದ್ಧನೆನಸಿಕೊಳ್ಳುತ್ತಾನೆ)."

"ಇಲ್ಲಿ ಮಹಾನಾಮ ಪ್ರಾಣಗಳನ್ನು ತೆಗೆಯುವುದರಿಂದ ವಿರತನಾದರೆ, ಕೊಡದೆ ಇದ್ದುದ್ದನ್ನು ತೆಗೆದುಕೊಳ್ಳುವುದರಿಂದ ವಿರತನಾದರೆ, ಕಾಮುಕತೆಗಳ ಮಿಧ್ಯಾಚಾರಗಳಿಂದ(ಅನೈತಿಕ ಸಂಬಂಧಗಳಿಂದ, ಬಲತ್ಕಾರಗಳಿಂದ) ವಿರತನಾದರೆ, ಸುಳ್ಳು ಹೇಳುವುದರಿಂದ ವಿರತನಾದರೆ, ಮತ್ತು ಸುರ,ಮೆರೆಯ,ಇತರ ಪ್ರಮಾದ ತರುವ ಮಧ್ಯಪಾನ(ಮಾದಕ ವಸ್ತುಗಳಿಂದ)ಗಳಿಂದ ವಿರತನಾದಗ ಒಬ್ಬನು ಶೀಲ ಸಂಪನ್ನ ಬೌದ್ಧನಾಗುತ್ತಾನೆ." 


"ಮತ್ತೆ ಭಂತೆ ಯಾವ ರೀತಿಯಲ್ಲಿ ಉಪಾಸಕನು ಶ್ರದ್ಧಸಂಪನ್ನನು ಆಗುತ್ತಾನೆ. (ಶ್ರದ್ಧಯುತ ಬೌದ್ಧನೆನಸಿಕೊಳ್ಳುತ್ತಾನೆ)"

"ಇಲ್ಲಿ ಮಹಾರಾಜ ಈ ರೀತಿಯಲ್ಲಿ ಶ್ರದ್ಧಾಸಂಪನ್ನನು ಆಗುತ್ತಾನೆ, ಹೇಗೆಂದರೆ ಆತನಿಗೆ ತಥಾಗತರ ಬೋಧಿಯ(ಜ್ಞಾನ ಪ್ರಾಪ್ತಿಯ) ಮೇಲೆ ಅಚಲ ವಿಶ್ವಾಸವಿರುತ್ತದೆ, ಹೇಗೆಂದರೆ "ಭಗವಾನರು ಖಂಡಿತವಾಗಿಯು ಅರಹಂತರಾಗಿದ್ದಾರೆ(ಕಲ್ಮಶರಹಿತರು), ಸಮ್ಮಸಂಬುದ್ಧರಾಗಿದ್ದಾರೆ(ಸ್ವಯಂ ಆಗಿಯೇ ಸಂಪೂರ್ಣ ಸಂಬೋಧಿ ಪ್ರಾಪ್ತಿ ಮಾಡಿದ್ದಾರೆ), ವಿಜ್ಜಾಚರಣ ಸಂಪನ್ನರು(ವಿದ್ಯೆಯೆಂದರೆ ಸ್ಪಷ್ಟ ಜ್ಞಾನದರ್ಶನ ಹೊಂದಿರುವಿಕೆ ಹಾಗು ಚರಣವೆಂದರೆ ಶ್ರೇಷ್ಠ ಆಚರಣೆ ಉಳ್ಳವರು. ಒಟ್ಟಾರೆ ವಿದ್ಯೆ ಹಾಗು ಆಚರಣೆ ಸಂಪನ್ನರಾಗಿರುವುದರಿಂದಾಗಿ ವಿಜ್ಜಾಚರಣಸಂಪನ್ನರೆನ್ನುತ್ತಾರೆ), ಸುಗತರು(ಅವರು ಹೇಗೆ ಶೋಭಾಯಮಾನವಾಗಿ ಹೋಗಿ (ಗಮತ) ಸುಗತರಾಗಿದ್ದಾರೆ? ಗತ ಎಂದರೆ ಹೋಗಿದ್ದಾರೆ. ಭಗವಾನರಿಗೆ ಶೋಭನಾಮಯ (ಒಳಿತಿನಿಂದ ಕೂಡಿರುವವರು, ಒಳಿತನ್ನೇ ಮಾಡುವವರು) ಎನ್ನುತ್ತಾರೆ. ಅವರು ಹೇಗೆ, ಯಾವ ಮಾರ್ಗದಲ್ಲಿ ಹೋಗಿದ್ದಾರೆ? ಅವರು ಆರ್ಯ ಅಷ್ಠಾಂಗ ಮಾರ್ಗದಲ್ಲಿ, ಯಾವುದೇ ಅಂಟುವಿಕೆಯಿಲ್ಲದೆ ಕ್ಷೇಮಕರ ದ್ವಾರವಾದ ನಿಬ್ಬಾನ ತಲುಪಿದ್ದಾರೆ)ೆ., ಲೋಕವಿಧರು (ಅವರು ಲೋಕಗಳನ್ನು ಬಲ್ಲವರು. ಅವರು (ಭಗವಾನರು) ಅನುಭವಿಸಿದ್ದಾರೆ, ಲೋಕಗಳನ್ನು ಅತ್ಯಂತ ತೀಕ್ಷ್ಣವಾಗಿ ವೀಕ್ಷಿಸಿದ್ದಾರೆ. ಲೋಕಗಳ ಉದಯವನ್ನು, ಲೋಕಗಳ ನಿರೋಧವನ್ನು ನಿರೋಧದ ಉದ್ದೇಶವನ್ನು ಹೇಳಿದ್ದಾರೆ: ಅವರು ತಮ್ಮ ದಿವ್ಯಚಕ್ಷುವಿನಿಂದ ಸರ್ವಲೋಕಗಳನ್ನು ಅರಿತಿದ್ದಾರೆ. ಸಶರೀರರಾಗಿ ಲೋಕಗಳನ್ನು ಸಂಚರಿಸಿದ್ದಾರೆ. ಪಾಪಿಗಳ ದುರ್ಗತಿ, ಶೀಲವಂತರ ಸುಗತಿ, ದಾನಿಗಳ ಸ್ವರ್ಗ, ಧ್ಯಾನಿಗಳ ಬ್ರಹ್ಮಲೋಕ, ಜ್ಞಾನಿಗಳ ನಿಬ್ಬಾಣ ಎಲ್ಲವನ್ನು ಕಾರಣ ಪರಿಹಾರ ಸಮೇತ ವಿವರಿಸಿದ್ದಾರೆ. ಆದ್ದರಿಂದ ಅಂತಹ ನಿಬ್ಬಾಣ ಮಾರ್ಗದಶರ್ಿಗೆ ಲೋಕವಿದೂ ಎನ್ನುತ್ತಾರೆ.), ಅನುತ್ತರ ಪುರುಷ ಧಮ್ಮಸಾರಥಿಯು (ಅನುತ್ತರೋ ಎಂದರೆ ಸಾಟಿಯಿಲ್ಲದ, ಯಾರಿಗೂ ಹೋಲಿಸಲಾಗದ ಎಂದು ಅರ್ಥ. ಪುರಿಸ ಎಂದರೆ ಜೀವಿಗಳಲ್ಲಿ ಪುರುಷ (ವಿಶಾಲಾರ್ಥದಲ್ಲಿ ಎಲ್ಲಾ ಜೀವಿಗಳೆಂದು ಪರಿಗಣಿಸಲಾಗುತ್ತದೆ). ದಮ್ಮ ಎಂದರೆ (ದಮಿಸುವುದು); ಸಾರಥಿ ಎಂದರೆ ದಮಿಸುವವ ಅಥವಾ ನಾಯಕ ಎಂದರ್ಥ. ಅಂದರೆ ಒಟ್ಟಾರೆ ಜೀವಿಗಳನ್ನು ದಮಿಸುವಂತಹ ಹೋಲಿಸಲಾಗದಂತಹ ನಾಯಕ ಎಂದು ಅರ್ಥವಾಗಿದೆ.), ದೇವ-ಮನುಷ್ಯರಿಗೆ ಗುರುವು(ಭಗವಾನರು ಇಲ್ಲಿ ಈಗಲೇ ಲಾಭವಾಗುವ ಬೋಧನೆ ಮಾಡುತ್ತಿದ್ದರು. ಹಾಗೆಯೇ ಮುಂದಿನ ಜನ್ಮದಲ್ಲೂ ಒಳ್ಳೆಯದಾಗುವ ರೀತಿ ಬೋಧನೆ ಮಾಡುತ್ತಿದ್ದರು. ಅಷ್ಟೇ ಅಲ್ಲ, ಅಂತಿಮ ಗುರಿಯಾದ ನಿಬ್ಬಾಣ ಸಿಗುವಂತಹ ರೀತಿಯಲ್ಲಿ ಅವರು ಬೋಧನೆ ಮಾಡುತ್ತಿದ್ದರು. ಹೀಗೆ ವರ್ತಮಾನ ಹಾಗು ಭವಿಷ್ಯದಲ್ಲಿ ಮತ್ತು ಪರಮಾರ್ಥವಾದ ನಿಬ್ಬಾಣ ಗಳಿಸುವಿಕೆಯಲ್ಲೂ ಲಾಭವಾಗುವಂತಹ ಬೋಧನೆಯನ್ನು ಮಾನವರಿಗೆ ಮತ್ತು ದೇವತೆಗಳಿಗೆ ನೀಡುತ್ತಿದ್ದುದರಿಂದಾಗಿ ಅವರನ್ನು ದೇವತೆಗಳಿಗೆ ಹಾಗೂ ಮಾನವರಿಗೆ ಶಾಸ್ತರು ಎನ್ನುತ್ತಾರೆ.), ಬುದ್ಧರು (ವಿಮುಕ್ತಿ ಫಲವನ್ನು ಒಳಗೊಂಡ ಜ್ಞಾನದಿಂದ ಅವರು ಬುದ್ಧರಾಗಿದ್ದಾರೆ. ಅವರ ಅಗಾಧ ಜ್ಞಾನಸಂಪತ್ತು ಸ್ವತಃ ಅವರಿಂದಲೇ ಸಂಶೋಧಿಸಲ್ಪಟ್ಟಿದೆ; ಆದ್ದರಿಂದ ಅವರನ್ನು ಬುದ್ಧರೆನ್ನುತ್ತಾರೆ.) ಆಗಿದ್ಧಾರೆ ಹಾಗೂ ಭಗವಾನರಾಗಿದ್ದಾರೆ( 'ಭಗವಾನರು' ಎಂಬ ಪದ ಪದಗಳಲ್ಲೇ ಶ್ರೇಷ್ಠವಾದುದು, ಉತ್ಕೃಷ್ಟವಾದುದು, ಭಕ್ತಿಗೆ ಅರ್ಹವಾದುದು. ಆದ್ದರಿಂದಲೇ ಭಗವಾನರು ಎಂದೇ ಬಳಕೆಯಲ್ಲಿದೆ.) ಈ ರೀತಿಯಲ್ಲಿ ಮಹಾನಾಮ,  ಉಪಾಸಕನು ಶ್ರದ್ಧಾಸಂಪನ್ನನು ಆಗುತ್ತಾನೆ."


""ಮತ್ತೆ ಭಂತೆ ಯಾವ ರೀತಿಯಲ್ಲಿ ಉಪಾಸಕನು ತ್ಯಾಗ(ದಾನ)ಸಂಪನ್ನನು ಆಗುತ್ತಾನೆ."

"ಇಲ್ಲಿ ಮಹಾನಾಮ ಉಪಾಸಕನು ಸ್ವಾರ್ಥರಹಿತವಾದ ಮನೋಭಾವದಿಂದ ಕೂಡಿರುತ್ತಾನೆ(ಜೀವಿಸುತ್ತಾನೆ), ಉದಾರಿಯಾಗಿರುತ್ತಾನೆ, ಸದಾ ದಾನದಲ್ಲೆ ಆನಂದಿತನಾಗಿ ದಾನಹಸ್ತನಾಗಿರುತ್ತಾನೆ, ಯಾಚಕರಿಗೆ ಮುಕ್ತನಾಗಿರುತ್ತಾನೆ, ಹಂಚುವಿಕೆಯಲ್ಲೆ ಸುಖ ಕಾಣುತ್ತಾನೆ. ಹೀಗೆ ಬಿಟ್ಟುಬಿಡುವುದರಲ್ಲಿ ತ್ಯಾಗದಲ್ಲಿ ಆನಂದಿಸುವನು, ಈ ರೀತಿಯಲ್ಲಿ ಮಹಾನಾಮ,  ಉಪಾಸಕನು  ತ್ಯಾಗಸಂಪನ್ನನು ಆಗುತ್ತಾನೆ."


""ಮತ್ತೆ ಭಂತೆ ಯಾವ ರೀತಿಯಲ್ಲಿ ಉಪಾಸಕನು ಪ್ರಜ್ಞಾಸಂಪನ್ನನು ಆಗುತ್ತಾನೆ."

"ಇಲ್ಲಿ ಮಹಾನಾಮ ಉಪಾಸಕನು ಪ್ರಜ್ಞವಂತನಾಗಿರುತ್ತಾನೆ(ಪನ್ನಾವ), ಆತನು ಉದಯ ಹಾಗೂ ಅಳಿಯುವಿಕೆಯ(ಮೆರೆಯಾಗುವಿಕೆಯ/ನಾಷವಾಗುವಿಕೆಯ)ಲ್ಲಿ ಜ್ಞಾನಿಯಾಗುತ್ತಾನೆ, ಅವುಗಳ ಜ್ಞಾನ ಆತನಿಗೆ ಇರುತ್ತದೆ, ಆ ಜ್ಞಾನವು ಉದಾತ್ತವಾದುದು(ಆರ್ಯರದ್ದು), ಅದು ಪರಮ ಬೇಧಕನೀಯವಾದುದ್ದು(ನಿಭ್ಭೇಧಿಕಾಯ), ಮತ್ತು ಅದು ದುಃಖಗಳ ಕ್ಷಯ(ಅಂತ್ಯ)ದೆಡೆಗೆ ಕರೆದೊಯ್ಯುವುದು. ಹೀಗೆ ಈ ರೀತಿಯಲ್ಲಿ  ಪ್ರಜ್ಞಾಸಂಪನ್ನ ಉಪಾಸಕ ಎಂದು ಕರೆಸಿಕೊಳ್ಳುತ್ತಾನೆ.






 

Sunday, 12 July 2020

ಚುಲಕಮ್ಮವಿಭಂಗ ಸುತ್ತ culakammavibhanga sutta in kannada




ಚುಲಕಮ್ಮವಿಭಂಗ ಸುತ್ತ
(ಕಮ್ಮಫಲದ ವಿಶ್ಲೇಷಣೆಯ ಚಿಕ್ಕ ಸುತ್ತ)


ನಾನು ಹೀಗೆ ಕೇಳಿದ್ದೇನೆ. ಒಮ್ಮೆ ಭಗವಾನರು ಶ್ರಾವಸ್ಥಿಯ ಆನಾಥಪಿಂಡಿಕನ ಜೇತವನದಲ್ಲಿ ವಾಸಿಸುತ್ತಿದ್ದರು.
ಆಗ ಬ್ರಾಹ್ಮಣ ವಿಧ್ಯಾಥರ್ಿಯಾದ ತೋದಯ್ಯನ ಮಗನಾದ ಸುಭನು ಭಗವಾನರ ಬಳಿಗೆ ಹೋದನು ಅವರಿಗೆ ವಂದಿಸಿ ಕುಶಲಗಳನ್ನು ವಿನಿಯೋಗಿಸಿಕೊಂಡನು. ಹೀಗೆ ಕುಶಲ ಮಾತುಕತೆಯ ನಂತರ ಆತನು ಭಗವಾನರ ಮುಂದೆ ಒಂದೆಡೆ ಕುಳಿತನು. ಮತ್ತು ಹೀಗೆ ಪ್ರಶ್ನಿಸಿದನು: 
"ಗೋತಮ ಭಗವಾನರೇ ಯಾವ ಕಾರಣದಿಂದ ಹಾಗೂ ಯಾವ ಸ್ಥಿತಿಯಿಂದಾಗಿ(ಬೆಂಬಲದಿಂದಾಗಿ) ಮಾನವರು ಹೀನರು ಹಾಗೂ ಶ್ರೇಷ್ಟರು ಆಗಿ ಕಾಣಿಸಿಕೊಳ್ಳುತ್ತಾರೆ. ? ಏಕೆಂದರೆ ಜನರು ಅಲ್ಪಾಯುಷ್ಯನಿಂದ ಹಾಗೂ ದೀಘರ್ಾಯುಷ್ಯನಿಂದ ಕಾಣಿಸುವರು. ರೋಗಿಗಳಾಗಿ ಮತ್ತು ಆರೋಗ್ಯವಂತರಾಗಿ ,ಅದೇ ರೀತಿ ಕುರೂಪಿಗಳಾಗಿ ಮತ್ತು ಸುರೂಪಿಗಳಾಗಿ, ಅಪ್ರಭಾವಿಗಳಾಗಿ ಮತ್ತು ಪ್ರಭಾವಿಗಳಾಗಿ, ಬಡವರಾಗಿ ಮತ್ತು ಸಿರಿವಂತರಾಗಿ, ನೀಚಕುಲದಲ್ಲಿ ಮತ್ತು ಉಚ್ಚಕುಲದಲ್ಲಿ, ದಡ್ಡರಾಗಿ ಹಾಗೇಯೆ ಪ್ರಜ್ಞಾವಂತರಾಗಿ, ಕಾಣಿಸಿಕೊಳ್ಳುತ್ತಿದ್ದಾರೆ. ಯಾವ ಕಾರಣದಿಂದ ಹಾಗೂ ಯಾವ ಸ್ಥಿತಿಗಳಿಂದಾಗಿ ಮಾನವರು ಹೀಗೆ ಹೀನರು ಹಾಗೂ ಶ್ರೇಷ್ಟರು ಆಗಿ ಕಾಣಿಸಿಕೊಳ್ಳುವರು."

   " ಓ ಮಾಣವನೇ, 
ಜೀವಿಗಳು ತಮ್ಮ ಕಮ್ಮಗಳಿಗೆ ತಾವೆ ಒಡೆಯರು
ತಮ್ಮ ಕಮ್ಮಕ್ಕೆ ತಾವೇ ಉತ್ತರಾಧಿಕಾರಿಗಳು
ತಮ್ಮ ಕಮ್ಮಗಳಿಂದಲೇ ಅವರು ಜನಿಸುವರು
ಕಮ್ಮಗಳೇ ಬಂಧುವು
ಕಮ್ಮಗಳೆ ಅವರ ಶರಣು
ಕಮ್ಮದಿಂದಲೇ ಹೀನ ಹಾಗೂ ಮಹಾನ್ ಆಗುವರು


"ಭಗವಾನರೇ ನಾನು ತಮ್ಮ ಬೋಧನೆಯ ಅರ್ಥವನ್ನು ವಿಶಾಲತೆಯನ್ನು ಅರ್ಥಮಾಡಿಕೊಳ್ಳಲಿಲ್ಲ, ತಾವು ಸಂಕ್ಷೀಪ್ತವಾಗಿ ನುಡಿದಿದ್ದಿರಿ ವಿವರವಾಗಿ ಹೇಳಲಿಲ್ಲ.  ಹೀಗಾಗಿ ಭಗವಾನರು ನನಗೆ ಅರ್ಥವಾಗುವ ರೀತಿ ವಿಸ್ತಾರವಾಗಿ ಧಮ್ಮವನ್ನು ನುಡಿದರೆ ಬಹಳ ಒಳಿತಾಗುವುದು."

"ಹಾಗಾದರೇ ಮಾಣವನೇ ನಾನು ನುಡಿಯುವುದನ್ನೇ ಗಮನವಿಟ್ಟು ಆಲಿಸು."

"ಹಾಗೇ ಆಗಲಿ ಭಂತೆ" ಎಂದು ಶುಭನು ನುಡಿದನು.

  ಆಗ ಭಗವಾನರು ಹೀಗೆ ನುಡಿದರು :
"ಇಲ್ಲಿ ಮಾಣವನೇ ಹಲವು ಸ್ತ್ರೀಯರಾಗಲಿ ಅಥವಾ ಪುರುಷರಾಗಲಿ ಜೀವಿಗಳನ್ನು ಕೊಲ್ಲುತ್ತಾರೆ ಹೀಗೆ ಕೊಲೆಗಾರರಾಗುತ್ತಾರೆ, ರಕ್ತಸ್ಥಿಗ್ದ ಕೈಯುಳ್ಳವರಾಗಿ, ಹೊಡೆದಾಟಗಳಿಂದ ಮತ್ತು ಹಿಂಸೆಯಿಂದ ಕೂಡಿದವರಾಗಿ ಜೀವಿಗಳ ಬಗ್ಗೆ ದಯೆರಹಿತರಾಗುತ್ತಾರೆ, ಈ ಬಗೆಯ ಕರ್ಮಗಳಿಂದ ಕೃತ್ಯಗಳಿಂದಾಗಿ ಸಾವಿನ ನಂತರ ಶರೀರದಿಂದ ವಿಚ್ಛೇದರಾದ ನಂತರ ಆಪಾಯ, ದುರ್ಗತಿ, ವಿನಿಪಾತ(ಅದಃಪತನ) ಮತ್ತು ನಿರಯಗಳಲ್ಲಿ ಉದಯಿಸುತ್ತಾರೆ.ಒಂದು ವೇಳೆ ಅವರು ಆಪಾಯಗಳಲ್ಲಿ, ದುಗ್ಗತಿಯಲ್ಲಿ, ವಿನಿಪಾತದಲ್ಲಿ ಮತ್ತು ನಿರಯಗಳಲ್ಲಿ ಹುಟ್ಟದೆ ಪುನಃ ಮಾನವರಾಗಿ ಹುಟ್ಟಿದ್ದರೆ ಆತನು ಅಥವಾ ಅವಳು ಅಲ್ಪಾಯುಷ್ಯವನ್ನು ಹೊಂದಿ ಹುಟ್ಟಿರುತ್ತಾರೆ. ಈ ರೀತಿಯಲ್ಲಿ ಮಾಣವನೇ ಒಬ್ಬನು ಜೀವಿಗಳನ್ನು ಕೊಲ್ಲುತ್ತಾ ಕೊಲೆಗಾರನಾಗಿ ರಕ್ತಸ್ಥಿಗ್ದ ಕೈಯುಳ್ಳವನಾಗಿ, ಹೊಡೆತ ಹಾಗೂ ಹಿಂಸೆಯಿಂದ ಕೂಡಿದವನಾಗಿ ಜೀವಿಗಳ ಬಗ್ಗೆ ದಯೆರಹಿತನಾದರೆ ಹೀಗೆ ಅಲ್ಪಾಯುಷ್ಯದ ಜೀವನ ಪಡೆಯುತ್ತಾರೆ.


ಅದರೆ ಇಲ್ಲಿ ಮಾಣವಕನೇ ಹಲವು ಸ್ತ್ರೀ ಅಥವಾ ಪುರುಷರು ಜೀವ ಹತ್ಯೆಗಳನ್ನು ಮಾಡುವುದನ್ನು ತೊರೆದು ಜೀವಹತ್ಯೆಯಿಂದ ವಿರತರಾಗಿ ದಂಡಶಸ್ತ್ರಗಳನ್ನು ಪಕ್ಕಕ್ಕೆ ಇಟ್ಟು ದಯೆಯಿಂದ ಹಾಗೂ ಸಭ್ಯತೆಯಿಂದ ಕೂಡಿದವನಾಗಿ ಜೀವಿಗಳ ಬಗ್ಗೆ ಅನುಕಂಪೆಯುಳ್ಳವನಾಗಲು ಬದ್ದನಾಗಿರುತ್ತಾನೆ. ಈ ಬಗೆಯ ಕಮ್ಮಗಳನ್ನು ಆಚರಿಸಿದ್ದರಿಂದಾಗಿ ಮತ್ತು ನಿರ್ವಹಿಸಿದ್ದರಿಂದಾಗಿ ಆತನು ಅಥವಾ ಆಕೆಯು ಸಾವಿನ ನಂತರ ದೇಹದ ವಿಘಟನೆಯ ನಂತರ ಸುಗತಿಯಲ್ಲಿ ಜನಿಸುತ್ತಾನೆ. ಒಂದು ವೇಳೆ ಆತನು ಸಾವಿನ ನಂತರ ದೇಹದಿಂದ ಬೇರ್ಪಟ್ಟ ನಂತರ ಸುಗತಿಯಲ್ಲಿ ಜನಿಸದಿದ್ದರೇ ಮಾನವನಾಗಿಯೇ ಹುಟ್ಟಿದರೇ ಆತನು ಎಲ್ಲಿಯೇ ಹುಟ್ಟಲಿ ಆತನು ದೀಘರ್ಾಯುವಾಗಿಯೇ ಜೀವಿಸುವಂತವನಾಗುತ್ತಾನೆ. ಈ ರೀತಿಯಾಗಿ ಮಾಣವನೇ ಜೀವ ಹತ್ಯೆಗಳನ್ನು ಮಾಡುವುದನ್ನು ತೊರೆದು ಜೀವಹತ್ಯೆಯಿಂದ ವಿರತರಾಗಿ ದಂಡಶಸ್ತ್ರಗಳನ್ನು ಪಕ್ಕಕ್ಕೆ ಇಟ್ಟು ದಯೆಯಿಂದ ಹಾಗೂ ಸಭ್ಯತೆಯಿಂದ ಕೂಡಿದವರಾಗಿ ಜೀವಿಗಳ ಬಗ್ಗೆ ಅನುಕಂಪೆಯುಳ್ಳವನಾಗಿ ಬದ್ದನಾಗಿದ್ದರೇ ಅದು ದೀಘರ್ಾಯುತನಕ್ಕೆ ಕೊಂಡಯ್ಯುತ್ತದೆ.

.

 'ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಜೀವಿಗಳ ಹಿಂಸೆಯಲ್ಲಿ ತೊಡಗುತ್ತಾರೆ. ಹೇಗೆಂದರೆ ಕೈಯಿಂದ ಹೆಂಟೆಯಿಂದ ದೊಣ್ಣೆಯಿಂದ ಅಥವಾ ಶಸ್ತ್ರದಿಂದ ಹಿಂಸೆ ಮಾಡುತ್ತಾರೆ. ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟುತ್ತಾರೆ. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ಎಲ್ಲೇ ಹುಟ್ಟಲಿ ರೋಗಗಳಿಂದ ಕೂಡಿರುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಜೀವಿಗಳ ಹಿಂಸೆಯಲ್ಲಿ ತೊಡಗಿದ್ದರೇ ಹೇಗೆಂದರೆ ಕೈಯಿಂದ ಹೆಂಟೆಯಿಂದ ದೊಣ್ಣೆಯಿಂದ ಅಥವಾ ಶಸ್ತ್ರದಿಂದ ಹಿಂಸೆ ಮಾಡಿದ್ದರೇ ಈ ಬಗೆಯಲ್ಲಿ ರೋಗಗಳಿಂದ ಕೂಡಿರುತ್ತಾರೆ..

'ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಜೀವಿಗಳ ಹಿಂಸೆಯಲ್ಲಿ ತೊಡಗುವುದಿಲ್ಲ. ಹೇಗೆಂದರೆ ಕೈಯಿಂದ ಹೆಂಟೆಯಿಂದ ದೊಣ್ಣೆಯಿಂದ ಅಥವಾ ಶಸ್ತ್ರದಿಂದ ಹಿಂಸೆ ಮಾಡುವುದಿಲ್ಲ. ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಉದಯಿಸುವರು. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ಎಲ್ಲೇ ಹುಟ್ಟಲಿ ಆರೋಗ್ಯಗಳಿಂದ ಕೂಡಿರುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಜೀವಿಗಳ ಹಿಂಸೆಯಲ್ಲಿ ತೊಡಗದಿದ್ದರೇ ಹೇಗೆಂದರೆ ಕೈಯಿಂದ ಹೆಂಟೆಯಿಂದ ದೊಣ್ಣೆಯಿಂದ ಅಥವಾ ಶಸ್ತ್ರದಿಂದ ಹಿಂಸೆ ಮಾಡದಿದ್ದರೇ ಈ ಬಗೆಯಲ್ಲಿ ಆರೋಗ್ಯಗಳಿಂದ ಕೂಡಿರುತ್ತಾರೆ..

ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಕ್ರೋಧ ಹಾಗೂ ಕೆರಳುವ ಸ್ವಭಾವದಿಂದ ಕೂಡಿರುತ್ತಾರೆ. ಅವರಿಗೆ ಸ್ವಲ್ಪ ಟೀಕೆ ಮಾಡಿದರೂ ಸಹಾ ರೇಗಿಬಿಡುತ್ತಾರೆ, ಕುಪಿತರಾಗುತ್ತಾರೆ, ದ್ವೇಶವುಳ್ಳವರಾಗುತ್ತಾರೆ, ಮತ್ತು ಮುನಿಯುತ್ತಾರೆ, ಮತ್ತು ಕೋಪ, ದ್ವೇಶ ಮತ್ತು ಕಹಿತನವನ್ನು ವ್ಯಕ್ತಪಡಿಸುತ್ತಾರೆ. ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟುತ್ತಾರೆ. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ಎಲ್ಲೇ ಹುಟ್ಟಲಿ ಕುರೂಪಿಯಾಗಿ, ದುವರ್ಣದವನಾಗಿ ಹುಟ್ಟುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಕುರೂಪಿಗಳಾಗಿ, ದುವರ್ಣದವರಾಗಿ ಹುಟ್ಟುತ್ತಾರೆ, ಅದಕ್ಕೆ ಕಾರಣ ಅವರು ಕ್ರೋಧ ಹಾಗೂ ಕೆರಳುವ ಸ್ವಭಾವದಿಂದ ಕೂಡಿರುತ್ತಾರೆ. ಅವರಿಗೆ ಸ್ವಲ್ಪ ಟೀಕೆ ಮಾಡಿದರೂ ಸಹಾ ರೇಗಿಬಿಡುತ್ತಾರೆ, ಕುಪಿತರಾಗುತ್ತಾರೆ, ದ್ವೇಶವುಳ್ಳವರಾಗುತ್ತಾರೆ, ಮತ್ತು ಮುನಿಯುತ್ತಾರೆ, ಮತ್ತು ಕೋಪ, ದ್ವೇಶ ಮತ್ತು ಕಹಿತನವನ್ನು ವ್ಯಕ್ತಪಡಿಸುತ್ತಾರೆ

ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಕ್ರೋಧ ಹಾಗೂ ಕೆರಳುವ ಸ್ವಭಾವದಿಂದ ಕೂಡಿರುವುದಿಲ್ಲ,  ಅವರಿಗೆ ಬಹಳಷ್ಟು ಟೀಕೆ ಮಾಡಿದರೂ ಸಹಾ ರೇಗಿಬಿಡುವುದಿಲ್ಲ, ಕುಪಿತರಾಗುವುದಿಲ್ಲ, ದ್ವೇಶವುಳ್ಳವರಾಗುವುದಿಲ್ಲ, ಮತ್ತು ಮುನಿಯುವುದಿಲ್ಲ, ಮತ್ತು ಕೋಪ, ದ್ವೇಶ ಮತ್ತು ಕಹಿತನವನ್ನು ವ್ಯಕ್ತಪಡಿಸುವುದಿಲ್ಲ. ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಉದಯಿಸುವರು. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ಆತನು ಎಲ್ಲೇ ಹುಟ್ಟಲಿ ಸುರೂಪಿಯಾಗಿ, ಸುವರ್ಣದವನಾಗಿ ಹುಟ್ಟುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಸುರೂಪಿಗಳಾಗಿ, ಸುವರ್ಣದವರಾಗಿ ಹುಟ್ಟುತ್ತಾರೆ, ಅದಕ್ಕೆ ಕಾರಣ ಕ್ರೋಧ ಹಾಗೂ ಕೆರಳುವ ಸ್ವಭಾವದಿಂದ ಕೂಡಿರುವುದಿಲ್ಲ,  ಅವರಿಗೆ ಬಹಳಷ್ಟು ಟೀಕೆ ಮಾಡಿದರೂ ಸಹಾ ರೇಗಿಬಿಡುವುದಿಲ್ಲ, ಕುಪಿತರಾಗುವುದಿಲ್ಲ, ದ್ವೇಶವುಳ್ಳವರಾಗುವುದಿಲ್ಲ, ಮತ್ತು ಮುನಿಯುವುದಿಲ್ಲ, ಮತ್ತು ಕೋಪ, ದ್ವೇಶ ಮತ್ತು ಕಹಿತನವನ್ನು ವ್ಯಕ್ತಪಡಿಸುವುದಿಲ್ಲ.

 ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಈಷರ್ೆ ಮನೋಭಾವದಿಂದ ಕೂಡಿರುತ್ತಾರೆ. ಅವರು ಪರರಿಗೆ ಸಿಗುವ ಲಾಭ, ಸತ್ಕಾರ, ಗೌರವ, ವಂದನೆ, ಪೂಜೆಗಳಿಗೆ ಈಷರ್ೆಪಡುತ್ತಾರೆ, ಅದನ್ನು ಸಹಿಸುವುದಿಲ್ಲ, ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟುತ್ತಾರೆ. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ಎಲ್ಲೇ ಹುಟ್ಟಲಿ ಪ್ರಭಾವರಹಿತನಾಗಿರುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಪ್ರಭಾವರಹಿತನಾಗಿರುತ್ತಾರೆ, ಅದಕ್ಕೆ ಕಾರಣ ಅವರು ಈಷರ್ೆ ಮನೋಭಾವದಿಂದ ಕೂಡಿರುತ್ತಾರೆ. ಅವರು ಪರರಿಗೆ ಸಿಗುವ ಲಾಭ, ಸತ್ಕಾರ, ಗೌರವ, ವಂದನೆ, ಪೂಜೆಗಳಿಗೆ ಈಷರ್ೆಪಡುತ್ತಾರೆ, ಅದನ್ನು ಸಹಿಸದೆ ಹೋಗಿರುತ್ತಾರೆ.



ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಈಷರ್ೆ ಮನೋಭಾವದಿಂದ ಕೂಡಿರುವುದಿಲ್ಲ. ಅವರು ಪರರಿಗೆ ಸಿಗುವ ಲಾಭ, ಸತ್ಕಾರ, ಗೌರವ, ವಂದನೆ, ಪೂಜೆಗಳಿಗೆ ಆನಂದಪಡುತ್ತಾರೆ, ಅದನ್ನು ಕಂಡು ಸಂಕಟ ಪಡುವುದಿಲ್ಲ,ಮುದಿತಾ ಮನೋಭಾವದಿಂದಿರುತ್ತಾರೆ. ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಉದಯಿಸುವರು. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಹುಟ್ಟದಿದ್ದರೇ, ಮಾನವನಾಗಿ ಹುಟ್ಟಿದ್ದರೇ ಆತನು ಎಲ್ಲೇ ಹುಟ್ಟಲಿ ಪ್ರಭಾವವುಳ್ಳವನಾಗಿರುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಪ್ರಭಾವವುಳ್ಳವರಾಗಿರುತ್ತಾರೆ, ಅದಕ್ಕೆ ಕಾರಣ ಅವರು ಈಷರ್ೆ ಮನೋಭಾವದಿಂದ ಕೂಡಿರುವುದಿಲ್ಲ. ಅವರು ಪರರಿಗೆ ಸಿಗುವ ಲಾಭ, ಸತ್ಕಾರ, ಗೌರವ, ವಂದನೆ, ಪೂಜೆಗಳಿಗೆ ಆನಂದಪಡುತ್ತಾರೆ, ಅದನ್ನು ಕಂಡು ಸಂಕಟ ಪಡುವುದಿಲ್ಲ,ಮುದಿತಾ ಮನೋಭಾವದಿಂದಿರುತ್ತಾರೆ


 ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಸಮಣ, ಬ್ರಾಹ್ಮಣರಿಗೆ, ಭಿಕ್ಖುಗಳಿಗೆ ಅನ್ನಪಾನಿಯಗಳನ್ನು, ವಸ್ತ್ರಗಳನ್ನು, ಸಾರೋಟು(ವಾಹನ)ಗಳನ್ನು, ಮಾಲೆಗಳನ್ನು, ಗಂಧಗಳನ್ನು, ಲೇಪನಗಳನ್ನು, ಹಾಸಿಗೆಗಳನ್ನು, ಮನೆಗಳನ್ನು, ದೀಪಗಳನ್ನು ದಾನವಾಗಿ ನೀಡುವುದಿಲ್ಲ.  ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟುತ್ತಾರೆ. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ಎಲ್ಲೇ ಹುಟ್ಟಲಿ ಆತನು ಬಡವನಾಗಿರುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಬಡವರಾಗಿರುತ್ತಾರೆ, ಅದಕ್ಕೆ ಕಾರಣ ಅವರು ಪುರುಷರು ಸಮಣ, ಬ್ರಾಹ್ಮಣರಿಗೆ, ಭಿಕ್ಖುಗಳಿಗೆ ಅನ್ನಪಾನಿಯಗಳನ್ನು, ವಸ್ತ್ರಗಳನ್ನು, ಸಾರೋಟು(ವಾಹನ)ಗಳನ್ನು, ಮಾಲಾ, ಗಂಧಗಳನ್ನು, ಲೇಪನಗಳನ್ನು, ಹಾಸಿಗೆಗಳನ್ನು, ಮನೆಗಳನ್ನು, ದೀಪಗಳನ್ನು ದಾನವಾಗಿ ನೀಡಿರುವುದಿಲ್ಲ.  

 ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಸಮಣ, ಬ್ರಾಹ್ಮಣರಿಗೆ, ಭಿಕ್ಖುಗಳಿಗೆ ಅನ್ನಪಾನಿಯಗಳನ್ನು, ವಸ್ತ್ರಗಳನ್ನು, ಸಾರೋಟು(ವಾಹನ)ಗಳನ್ನು, ಮಾಲೆಗಳನ್ನು, ಗಂಧಗಳನ್ನು, ಲೇಪನಗಳನ್ನು, ಹಾಸಿಗೆಗಳನ್ನು, ಮನೆಗಳನ್ನು, ದೀಪಗಳನ್ನು ದಾನವಾಗಿ ನೀಡುತ್ತಾರೆ.  ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಉದಯಿಸುವರು. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ಎಲ್ಲೇ ಹುಟ್ಟಲಿ ಆತನು ಶ್ರೀಮಂತನಾಗಿರುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಶ್ರೀಮಂತರಾಗಿರುತ್ತಾರೆ, ಅದಕ್ಕೆ ಕಾರಣ ಅವರು ಸಮಣ, ಬ್ರಾಹ್ಮಣರಿಗೆ, ಭಿಕ್ಖುಗಳಿಗೆ ಅನ್ನಪಾನಿಯಗಳನ್ನು, ವಸ್ತ್ರಗಳನ್ನು, ಸಾರೋಟು(ವಾಹನ)ಗಳನ್ನು, ಮಾಲಾ, ಗಂಧಗಳನ್ನು, ಲೇಪನಗಳನ್ನು, ಹಾಸಿಗೆಗಳನ್ನು, ಮನೆಗಳನ್ನು, ದೀಪಗಳನ್ನು ದಾನವಾಗಿ ನೀಡಿರುತ್ತಾರೆ.  

 ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಹಠವಾದಿಯಾಗಿರುತ್ತಾರೆ, ಮತ್ತು ಅಹಂಕಾರಿಯಾಗಿರುತ್ತಾರೆ; ಆತನು ಗೌರವಕ್ಕೆ ಅರ್ಹರಾಗಿರುವವರಿಗೆ ಗೌರವ ನೀಡುವುದಿಲ್ಲ, ಯಾರ ಬಳಿಯಲ್ಲಿ ಎದ್ದು ನಿಂತು ಗೌರವಿಸಬೇಕೋ ಅಂತಹವರ ಬಳಿ ಎದ್ದು ನಿಂತು ಗೌರವಿಸಲಾರರು, ಯಾರಿಗೆ ಆಸನವನ್ನು ನೀಡಿ ಗೌರವಿಸಬೇಕೋ ಅಂತಹವರಿಗೆ ಆಸನವನ್ನು ನೀಡಿ ಗೌರವಿಸಲಾರನು, ಯಾರಿಗೆ ದಾರಿಯನ್ನು ಬಿಟ್ಟುಕೊಡಬೇಕೊ ಅಂತಹವರಿಗೆ ದಾರಿಯನ್ನು ಬಿಟ್ಟುಕೊಡಲಾರರು, ಮತ್ತು ಯಾರಿಗೆ ಸತ್ಕಾರ ಮಾಡಬೇಕೋ ಅಂತಹವರಿಗೆ ಸತ್ಕಾರ ಮಾಡಲಾರರು, ಯಾರಿಗೆ ಮಯರ್ಾದೆ ನೀಡಬೇಕೊ ಅಂತಹವರಿಗೆ ಮಯರ್ಾದೆ ನೀಡಲಾರರು, ಯಾರಿಗೆ ಮಾನ್ಯತೆ ನೀಡಬೇಕೊ ಅಂತಹವರಿಗೆ ಮಾನ್ಯತೆ ನೀಡಲಾರರು, ಯಾರು ಪೂಜೆಗೆ ಅರ್ಹರೊ ಅಂತಹವರಿಗೆ ಪೂಜಿಸಲಾರರು, ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟುತ್ತಾರೆ. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ನೀಚಕುಲದಲ್ಲಿ ಹುಟ್ಟುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ನೀಚಕುಲದಲ್ಲಿ ಹುಟ್ಟುತ್ತಾರೆ, ಅದಕ್ಕೆ ಕಾರಣ ಅವರು ಹಠವಾದಿಯಾಗಿದ್ದರು, ಮತ್ತು ಅಹಂಕಾರಿಯಾಗಿದ್ದರು; ಆತನು ಗೌರವಕ್ಕೆ ಅರ್ಹರಾಗಿರುವವರಿಗೆ ಗೌರವ ನೀಡಿರಲಿಲ್ಲ, ಯಾರ ಬಳಿಯಲ್ಲಿ ಎದ್ದು ನಿಂತು ಗೌರವಿಸಬೇಕೋ ಅಂತಹವರ ಬಳಿ ಎದ್ದು ನಿಂತು ಗೌರವಿಸಲಿಲ್ಲ, ಯಾರಿಗೆ ಆಸನವನ್ನು ನೀಡಿ ಗೌರವಿಸಬೇಕೋ ಅಂತಹವರಿಗೆ ಆಸನವನ್ನು ನೀಡಿ ಗೌರವಿಸಲಿಲ್ಲ, ಯಾರಿಗೆ ದಾರಿಯನ್ನು ಬಿಟ್ಟುಕೊಡಬೇಕೊ ಅಂತಹವರಿಗೆ ದಾರಿಯನ್ನು ಬಿಟ್ಟುಕೊಟ್ಟಿರಲಿಲ್ಲ, ಮತ್ತು ಯಾರಿಗೆ ಸತ್ಕಾರ ಮಾಡಬೇಕೋ ಅಂತಹವರಿಗೆ ಸತ್ಕಾರ ಮಾಡಿರಲಿಲ್ಲ, ಯಾರಿಗೆ ಮಯರ್ಾದೆ ನೀಡಬೇಕೊ ಅಂತಹವರಿಗೆ ಮಯರ್ಾದೆ ನೀಡಿರಲಿಲ್ಲ, ಯಾರಿಗೆ ಮಾನ್ಯತೆ ನೀಡಬೇಕೊ ಅಂತಹವರಿಗೆ ಮಾನ್ಯತೆ ನೀಡಿರಲಿಲ್ಲ, ಯಾರು ಪೂಜೆಗೆ ಅರ್ಹರೊ ಅಂತಹವರಿಗೆ ಪೂಜಿಸಿರಲಿಲ್ಲ.

 ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಹಠವಾದಿಯಾಗಿರುವುದಿಲ್ಲ, ಮತ್ತು ಅಹಂಕಾರಿಯಾಗಿರುವುದಿಲ್ಲ; ಆತನು ಗೌರವಕ್ಕೆ ಅರ್ಹರಾಗಿರುವವರಿಗೆ ಗೌರವ ನೀಡುತ್ತಾನೆ, ಯಾರ ಬಳಿಯಲ್ಲಿ ಎದ್ದು ನಿಂತು ಗೌರವಿಸಬೇಕೋ ಅಂತಹವರ ಬಳಿ ಎದ್ದು ನಿಂತು ಗೌರವಿಸುತ್ತಾನೆ, ಯಾರಿಗೆ ಆಸನವನ್ನು ನೀಡಿ ಗೌರವಿಸಬೇಕೋ ಅಂತಹವರಿಗೆ ಆಸನವನ್ನು ನೀಡಿ ಗೌರವಿಸುತ್ತಾನೆ, ಯಾರಿಗೆ ದಾರಿಯನ್ನು ಬಿಟ್ಟುಕೊಡಬೇಕೊ ಅಂತಹವರಿಗೆ ದಾರಿಯನ್ನು ಬಿಟ್ಟುಕೊಡುತ್ತಾನೆ, ಮತ್ತು ಯಾರಿಗೆ ಸತ್ಕಾರ ಮಾಡಬೇಕೋ ಅಂತಹವರಿಗೆ ಸತ್ಕಾರ ಮಾಡುತ್ತಾನೆ, ಯಾರಿಗೆ ಮಯರ್ಾದೆ ನೀಡಬೇಕೊ ಅಂತಹವರಿಗೆ ಮಯರ್ಾದೆ ನೀಡುತ್ತಾನೆ, ಯಾರಿಗೆ ಮಾನ್ಯತೆ ನೀಡಬೇಕೊ ಅಂತಹವರಿಗೆ ಮಾನ್ಯತೆ ನೀಡುತ್ತಾನೆ, ಯಾರು ಪೂಜೆಗೆ ಅರ್ಹರೊ ಅಂತಹವರಿಗೆ ಪೂಜಿಸುತ್ತಾನೆ, ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಉದಯಿಸುವರು. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ಮಾನವನಾಗಿ ಹುಟ್ಟಿದ್ದರೇ ,ಆತನು ಉಚ್ಚಕುಲದಲ್ಲಿ ಹುಟ್ಟುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಉಚ್ಚಕುಲದಲ್ಲಿ ಹುಟ್ಟುತ್ತಾರೆ, ಅದಕ್ಕೆ ಕಾರಣ ಅವರು ಹಠವಾದಿಯಾಗಿಲಿಲ್ಲ, ಮತ್ತು ಅಹಂಕಾರಿಯಾಗಿರಲಿಲ್ಲ; ಆತನು ಗೌರವಕ್ಕೆ ಅರ್ಹರಾಗಿರುವವರಿಗೆ ಗೌರವ ನೀಡಿರುತ್ತಾನೆ, ಯಾರ ಬಳಿಯಲ್ಲಿ ಎದ್ದು ನಿಂತು ಗೌರವಿಸಬೇಕೋ ಅಂತಹವರ ಬಳಿ ಎದ್ದು ನಿಂತು ಗೌರವಿಸಿರುತ್ತಾನೆ, ಯಾರಿಗೆ ಆಸನವನ್ನು ನೀಡಿ ಗೌರವಿಸಬೇಕೋ ಅಂತಹವರಿಗೆ ಆಸನವನ್ನು ನೀಡಿ ಗೌರವಿಸಿರುತ್ತಾನೆ, ಯಾರಿಗೆ ದಾರಿಯನ್ನು ಬಿಟ್ಟುಕೊಡಬೇಕೊ ಅಂತಹವರಿಗೆ ದಾರಿಯನ್ನು ಬಿಟ್ಟುಕೊಟ್ಟಿರುತ್ತಾನೆ, ಮತ್ತು ಯಾರಿಗೆ ಸತ್ಕಾರ ಮಾಡಬೇಕೋ ಅಂತಹವರಿಗೆ ಸತ್ಕಾರ ಮಾಡಿರುತ್ತಾನೆ, ಯಾರಿಗೆ ಮಯರ್ಾದೆ ನೀಡಬೇಕೊ ಅಂತಹವರಿಗೆ ಮಯರ್ಾದೆ ನೀಡಿರುತ್ತಾನೆ, ಯಾರಿಗೆ ಮಾನ್ಯತೆ ನೀಡಬೇಕೊ ಅಂತಹವರಿಗೆ ಮಾನ್ಯತೆ ನೀಡಿರುತ್ತಾರೆ, ಯಾರು ಪೂಜೆಗೆ ಅರ್ಹರೊ ಅಂತಹವರಿಗೆ ಪೂಜಿಸಿರುತ್ತಾನೆ.
 ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಸಮಣರ ಬಳಿಗೆ ಅಥವಾ ಬ್ರಾಹ್ಮಣರ ಬಳಿಗೆ ಅಥವಾ ಜ್ಞಾನಿಗಳ ಬಳಿಗೆ ಹೋಗಿ ಹೀಗೆ ಪ್ರಶ್ನಿಸಲಿಲ್ಲ ; ಭಂತೆ ಯಾವುದು ಕುಶಲ ? ಯಾವುದು ಅಕುಶಲ ? ಯಾವುದು ನಿಂದನೀಯ ? ಯಾವುದು ನಿಂದಾತೀತ ? ಯಾವುದು ಅಭ್ಯಾಸಿಸಬೇಕು(ವಿಕಸಿಸಬೇಕು) ? ಯಾವುದು ಅಭ್ಯಾಸಿಸಬಾರದು?(ವಿಕಸಿಸಬಾರದು) ? ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ನೋವನ್ನು ಮತ್ತು ದುಃಖವನ್ನು ನೀಡುತ್ತದೆ ?.ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ಸುಖವನ್ನು ಹಾಗೂ ಕ್ಷೇಮವನ್ನು ನೀಡುತ್ತದೆ.? ಈ ಬಗೆಯ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟುತ್ತಾರೆ. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಅಪಾಯ ಲೋಕಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತದಲ್ಲಿ, ನಿರಯದಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ ,ಆತನು ದಡ್ಡನಾಗಿ(ದುಪ್ರಜ್ಞನಾಗಿ) ಹುಟ್ಟುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಮತ್ತು ಪುರುಷರು ದುಪ್ರ್ರಜ್ಙನಾಗಿ ಹುಟ್ಟುತ್ತಾರೆ. ಇದಕ್ಕೆ ಕಾರಣ ಅವರು ಜ್ಞಾನಿಗಳ ಬಳಿಗೆ ಅಂತಹ ಸಮಣ ಬ್ರಾಹ್ಮಣರ ಬಳಿಗೆ ಹೋಗಿ ಹೀಗೆ ಪ್ರಶ್ನಿಸಿರಲಿಲ್ಲ ; ಭಂತೆ ಯಾವುದು ಕುಶಲ ? ಯಾವುದು ಅಕುಶಲ ? ಯಾವುದು ನಿಂದನೀಯ ? ಯಾವುದು ನಿಂದಾತೀತ ? ಯಾವುದು ಅಭ್ಯಾಸಿಸಬೇಕು(ವಿಕಸಿಸಬೇಕು) ? ಯಾವುದು ಅಭ್ಯಾಸಿಸಬಾರದು?(ವಿಕಸಿಸಬಾರದು) ? ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ನೋವನ್ನು ಮತ್ತು ದುಃಖವನ್ನು ನೀಡುತ್ತದೆ ?.ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ಸುಖವನ್ನು ಹಾಗೂ ಕ್ಷೇಮವನ್ನು ನೀಡುತ್ತದೆ.? ಎಂದು.

ಇಲ್ಲಿ ಮಾಣವನೇ ಹಲವು ಸ್ತ್ರೀಯರು ಅಥವಾ ಪುರುಷರು ಸಮಣರ ಬಳಿಗೆ ಅಥವಾ ಬ್ರಾಹ್ಮಣರ ಬಳಿಗೆ ಅಥವಾ ಜ್ಞಾನಿಗಳ ಬಳಿಗೆ ಹೋಗಿ ಹೀಗೆ ಪ್ರಶ್ನಿಸುತ್ತಾರೆ ; 
ಭಂತೆ ಯಾವುದು ಕುಶಲ ? 
ಯಾವುದು ಅಕುಶಲ ?
 ಯಾವುದು ನಿಂದನೀಯ ? 
ಯಾವುದು ನಿಂದಾತೀತ ? 
ಯಾವುದು ಅಭ್ಯಾಸಿಸಬೇಕು(ವಿಕಸಿಸಬೇಕು) ? 
ಯಾವುದು ಅಭ್ಯಾಸಿಸಬಾರದು?(ವಿಕಸಿಸಬಾರದು) ?
 ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ನೋವನ್ನು ಮತ್ತು ದುಃಖವನ್ನು ನೀಡುತ್ತದೆ ?.
ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ಸುಖವನ್ನು ಹಾಗೂ ಕ್ಷೇಮವನ್ನು ನೀಡುತ್ತದೆ.? ಈ ಬಗೆಯ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಅಂತಹ ಕಮ್ಮದಿಂದಾಗಿ ಕ್ರಿಯೆಯಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಉದಯಿಸುವರು. ಒಂದು ವೇಳೆ ಆತನು ಈ ರೀತಿಯ ಕೃತ್ಯಗಳಿಂದ ಕಮ್ಮದಿಂದಾಗಿ ಮರಣದ ನಂತರ ದೇಹದಿಂದ ಬೇದವಾದ ಮೇಲೆ ಆತನು ಅಥವಾ ಆಕೆಯು ಆಕೆಯು ಸುಗತಿಯಲ್ಲಿ, ಸ್ವರ್ಗದಲ್ಲಿ ಅಂತಹ ಲೋಕಗಳಲ್ಲಿ ಹುಟ್ಟದಿದ್ದರೇ ಮಾನವನಾಗಿ ಹುಟ್ಟಿದ್ದರೇ , ಆತನು ಮಹಾಪ್ರಾಜ್ಞನಾಗಿ (ಬುದ್ಧಿವಂತನಾಗಿ) ಹುಟ್ಟುತ್ತಾನೆ. ಈ ರೀತಿಯಾಗಿ ಮಾಣವನೇ ಹಲವು ಸ್ತ್ರೀಯರು ಮತ್ತು ಪುರುಷರು ಮಹಾಪ್ರಜ್ಞಾರಾಗಿ ಹುಟ್ಟುತ್ತಾರೆ. ಇದಕ್ಕೆ ಕಾರಣ ಅವರು ಜ್ಞಾನಿಗಳ ಬಳಿಗೆ ಅಂತಹ ಸಮಣ ಬ್ರಾಹ್ಮಣರ ಬಳಿಗೆ ಹೋಗಿ ಹೀಗೆ ಪ್ರಶ್ನಿಸಿದ್ದರು ; 
ಭಂತೆ ಯಾವುದು ಕುಶಲ ? 
ಯಾವುದು ಅಕುಶಲ ? 
ಯಾವುದು ನಿಂದನೀಯ ? 
ಯಾವುದು ನಿಂದಾತೀತ ? 
ಯಾವುದು ಅಭ್ಯಾಸಿಸಬೇಕು(ವಿಕಸಿಸಬೇಕು) ? 
ಯಾವುದು ಅಭ್ಯಾಸಿಸಬಾರದು?(ವಿಕಸಿಸಬಾರದು) ? 
ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ನೋವನ್ನು ಮತ್ತು ದುಃಖವನ್ನು ನೀಡುತ್ತದೆ ?.
ಯಾವ ರೀತಿಯ ಕಮ್ಮವು ದೀರ್ಘಕಾಲದವರೆಗೆ ಸುಖವನ್ನು ಹಾಗೂ ಕ್ಷೇಮವನ್ನು ನೀಡುತ್ತದೆ.? ಎಂದು.

ಹೀಗೆ ಮಾಣವನೇ ಈ ಬಗೆಯಲ್ಲಿ ಜನರು ಜೀವಿಸಿ ಹೀಗಾಗಿರುವರು.  ಅಲ್ಪಯುಷ್ಯನ ಹಾದಿಯು ಜನರನ್ನು ಅಲ್ಪಯುಷ್ಯನನ್ನಾಗಿಸುತ್ತದೆ. ದೀಘರ್ಾಯುಸ್ಸಿನ ಹಾದಿಯು ಜನರನ್ನು ದೀಘರ್ಾಯುಸ್ಸನ್ನಾಗಿ ಮಾಡುತ್ತದೆ. ರೋಗಗಳ ಹಾದಿಯಲ್ಲಿ ಹೋಗುವವರು ರೋಗಿಗಳಾಗುತ್ತಾರೆ, ಆರೋಗ್ಯದ ಹಾದಿಯು ಜನರನ್ನು ಆರೋಗ್ಯನನ್ನಾಗಿಸಿದೆ, ಈ ಬಗೆಯ ಹಾದಿಯಲ್ಲಿ ಜೀವಿಸಿ ಕುರೂಪಿಗಳಾಗಿರುವರು, ಈ ಬಗೆಯ ಹಾದಿಯಲ್ಲಿ ಜೀವಿಸಿದಾಗ ಸುರೂಪಿಗಳಾಗುವರು. ಈ ಬಗೆಯ ಹಾದಿಯಲ್ಲಿ ಸಾಗಿದಾಗ ಪ್ರಭಾವರಹಿತರು ಆಗುವರು. ಈ ಬಗೆಯ ಹಾದಿಯಲ್ಲಿ ಜೀವಿಸಿದಾಗ ಪ್ರಭಾವಶಾಲಿಗಳಾಗುವರು. ಬಡತನದ ಹಾದಿಯು ಜನರನ್ನು ಬಡವರನ್ನಾಗಿಯು, ಸಿರಿತನದ ಹಾದಿಯು ಜನರನ್ನು ಸಿರಿವಂತರನ್ನಾಗಿಯು ಹಾಗೆಯೇ ನೀಚಕುಲದ ಹಾದಿಯು ಜನರನ್ನು ನೀಚರನ್ನಾಗಿಯು, ಉಚ್ಚಕುಲದ ಹಾದಿಯು ಜನರನ್ನು ಉಚ್ಚರನ್ನಾಗಿಯು ಮತ್ತು ದಡ್ಡತನದ ಹಾದಿಯು ಜನರನ್ನು ದಡ್ಡರನ್ನಾಗಿಯು ಮತ್ತು ಮಹಾಪ್ರಜ್ಞರ ಹಾದಿಯು ಜನರನ್ನು ಮಹಪ್ರಜ್ಞಾರನ್ನಾಗಿಯು ಮಾಡುತ್ತದೆ.

ಜೀವಿಗಳು ತಮ್ಮ ಕಮ್ಮಗಳಿಗೆ ತಾವೆ ಒಡೆಯರು
ತಮ್ಮ ಕಮ್ಮಕ್ಕೆ ತಾವೇ ಉತ್ತರಾಧಿಕಾರಿಗಳು
ತಮ್ಮ ಕಮ್ಮಗಳಿಂದಲೇ ಅವರು ಜನಿಸುವರು
ಕಮ್ಮಗಳೇ ಬಂಧುವು
ಕಮ್ಮಗಳೆ ಅವರ ಶರಣು
ಕಮ್ಮದಿಂದಲೇ ಹೀನ ಹಾಗೂ ಮಹಾನ್ ಆಗುವರು

ಯಾವಗ ಭಗವಾನರು ಹೀಗೆ ನುಡಿದರೊ ಆಗ ತೊದೆಯ್ಯನ ಮಗನಾದ ಸುಭನು ಭಗವಾನರಿಗೆ ಹೀಗೆ ನುಡಿದನು. : ಭವ್ಯವಾಗಿ ನುಡಿದಿರಿ ಗೋತಮರೇ ! ಗೋತಮರೇ ಅತುತ್ತಮವಾಗಿ ನುಡಿದಿರಿ! 
ಧಮ್ಮವು ಭಗವಾನರಿಂದ ಅನೇಕ ವಿಧದಲ್ಲಿ ಸ್ಪಷ್ಟಿಕರಣಗೊಂಡಿತು. 
ಹೇಗೆಂದರೇ ತಲೆಕೆಳಕಾಗಿರುವುದನ್ನು ಸರಿಯಾಗಿ ನಿಲ್ಲಿಸಿದಂತೆ, 
ಅಡಗಿರುವುದನ್ನು ಅನಾವರಣಗೊಳಿಸಿದಂತೆ, 
ದಾರಿ ತಪ್ಪಿದವನಿಗೆ ಮಾರ್ಗ ತೊರಿಸಿದಂತೆ, 
ಕತ್ತಲೆಯಲ್ಲಿರುವವನಿಗೆ ಪ್ರದೀಪವನ್ನು ಹಿಡಿದು ರೂಪಗಳನ್ನು ತೋರಿಸಿದಂತೆ, 

ಭಗವಾನರು ಅನೇಕ ರೀತಿಯಲ್ಲಿ ಧಮ್ಮವನ್ನು ಸ್ಪಷ್ಟಿಕರಿಸಿದ್ದಾರೆ, 
ನಾನು ಭಗವಾನ ಗೋತಮರ ಶರಣು ಹೋಗುವೆನು, 
ಅವರ ಅಧ್ಭುತವಾದ ಧಮ್ಮಕ್ಕೆ ಶರಣು ಹೋಗುವೆನು, 
ಅವರ ಅಸಮಾನ ಸಂಘಕ್ಕೂ ಶರಣು ಹೋಗುವೆನು.
ಭಗವಾನರು ನನಗೆ ಅವರಲ್ಲಿ ಜೀವನ ಪರ್ಯಂತ ಶರಣು ಹೋದಂತಹ ಉಪಾಸಕನೆಂದು ಪರಿಗಣಿಸಲಿ


ಇಲ್ಲಿಗೆ ಕಮ್ಮವಿಪಾಕದ ವಿಶ್ಲೇಷಣೆಯ ಚಿಕ್ಕ ಸುತ್ತವು ಸಮಪ್ತಿಯಾಯಿತು.


  

Tuesday, 24 March 2020

ಅಸ್ಸಲಾಯನ ಸುತ್ತ Assalayana sutta in kannada

  ಅಸ್ಸಲಾಯನ ಸುತ್ತ(ಸಂಕ್ಷಿಪ್ತ)



ಒಮ್ಮೆ ಬ್ರಾಹ್ಮಣರು ಅಸ್ಸಲಾಯನ ಎಂಬ ಬ್ರಾಹ್ಮಣ ಯುವಕನ ನಾಯಕತ್ವದಲ್ಲಿ ಬಂದು ಹೀಗೆ ಕೇಳಿದರು:

“ಭಗವಾನ್ ಬ್ರಾಹ್ಮಣರು ಹೀಗೆ ಹೇಳುತ್ತಾರೆ: ‘ಬ್ರಾಹ್ಮಣರದ್ದೇ ಶ್ರೇಷ್ಠ ಜಾತಿ, ಬೇರೆ ಜಾತಿಗಳು ತುಚ್ಛವಾದುದು. ಬ್ರಾಹ್ಮಣರದ್ದೇ ಸುವರ್ಣದ ಜಾತಿ, ಪರರದ್ದು ದುರ್ವಣವಾಗಿದ್ದು, ಬ್ರಾಹ್ಮಣರು ಮಾತ್ರ ಪರಿಶುದ್ಧರು, ಬೇರೆಯವರಲ್ಲ, ಬ್ರಾಹ್ಮಣರು ಮಾತ್ರ ಬ್ರಹ್ಮನಿಂದ ಹುಟ್ಟಿದವರು. ಆತನ ಮುಖದಿಂದ ಜನಿಸಿದವರು, ಬ್ರಹ್ಮನ ವಂಶಸ್ಥರು ಆಗಿದ್ದಾರೆ.”

ಆಗ ಭಗವಾನರು ಈ ಎಲ್ಲಾ ಕಾರಣಗಳನ್ನು ನೀಡಿ ಅವರ ವಾದಗಳನ್ನು ಭಂಗ ಮಾಡುತ್ತಾರೆ.

1. ಬ್ರಾಹ್ಮಣರ ಪತ್ನಿಯರು ಸಹಾ ಎಲ್ಲರಂತೆಯೇ ಜನ್ಮ ನೀಡುತ್ತಾರೆ.

2. ಪಾಶ್ಚಿಮಾತ್ಯ ರಾಷ್ಟ್ರಗಳಾದ ಯೋನ ಮತ್ತು ಕಾಂಬೋಜಗಳಲ್ಲಿ 2 ಜಾತಿಯಿದೆ. ಯಜಮಾನ ಮತ್ತು ಸೇವಕ ಅವರಲ್ಲಿಯು ಅದು ನಿತ್ಯವಲ್ಲ, ಸ್ವಾಮಿಯು ಸೇವಕನಾಗಬಹುದು, ಸೇವಕನು ಸ್ವಾಮಿಯಾಗಬಹುದು.

3. ಯಾರೇ ಪಾಪ ಮಾಡಿದರೂ ಸಹಾ ದುರ್ಗತಿಗೆ ಬೀಳುವರು, ಇದಕ್ಕೆ ಯಾರೂ ಹೊರತಲ್ಲ.

4. ಪ್ರತಿಯೊಬ್ಬರು ಪುಣ್ಯ ಆಚರಿಸಬಹುದು, ಮೈತ್ರಿ ಧ್ಯಾನಗಳಲ್ಲಿ ಪ್ರವೀಣರಾಗಬಹುದು.

5. ಪ್ರತಿಯೊಬ್ಬರು ಸ್ನಾನ ಮಾಡಿ ಶುದ್ಧರಾಗಬಹುದು.

6. ಪ್ರತಿಯೊಬ್ಬರು ಹಚ್ಚಿದರೂ ಬೆಂಕಿ ಬರುವುದು, ಅದರಿಂದ ಅದರ ಪ್ರಯೋಜನ ಪಡೆಯಬಹುದು.

“ಹೀಗಿರುವಾಗ ಬ್ರಾಹ್ಮಣರೇ ಶ್ರೇಷ್ಠರೆನ್ನುವುದಕ್ಕೆ ಆಧಾರವೇನು?” ಆದರೂ ಸಹಾ ಅವರು ಪಟ್ಟು ಹಿಡಿಯುತ್ತಾರೆ.

ಆಗ ಭಗವಾನರು ಅವರನ್ನು ಬೇರೊಂದು ಹಾದಿಯಲ್ಲಿ ಚರ್ಚೆಗೆ ಆರಂಭಿಸುತ್ತಾರೆ: “ಅಸ್ಸಾಲಾಯನ ಇದರ ಬಗ್ಗೆ ಹೇಗೆ ಯೋಚಿಸುವೆ? ಇಬ್ಬರು ಬ್ರಾಹ್ಮಣ ಯುವಕರಿರುತ್ತಾರೆ, ಒಬ್ಬ ವೇದ ಜ್ಞಾನಗಳಲ್ಲಿ ಪರಿಣಿತ ಮತ್ತೊಬ್ಬ ಅವಿದ್ಯಾವಂತ. ಇಲ್ಲಿ ಯಾರಿಗೆ ಹೆಚ್ಚು ಗೌರವ, ಆತಿಥ್ಯ ನೀಡುತ್ತಾರೆ.”

“ವಿದ್ಯಾವಂತನಿಗೆ, ಅವಿದ್ಯಾವಂತನಿಗಲ್ಲ.”

“ಅಸ್ಸಲಾಯನ, ಈಗ ಇಬ್ಬರು ಬ್ರಾಹ್ಮಣರಿರುತ್ತಾರೆ, ಒಬ್ಬ ವೇದ ಜ್ಞಾನದಲ್ಲಿ ಪರಿಣಿತ ಆದರೆ ದುರಾಚಾರಿ, ದುಶ್ಶೀಲನಾಗಿರುತ್ತಾನೆ ಮತ್ತು ಇನ್ನೊಬ್ಬ ಅವಿದ್ಯಾವಂತ, ಆದರೆ ಸುಶೀಲ ಚಾರಿತ್ರ್ಯವಂತನಾಗಿರುತ್ತಾನೆ. ಇವರಲ್ಲಿ ಯಾರಿಗೆ ಗೌರವ ಆತಿಥ್ಯ ಸಿಗುತ್ತದೆ?” “ಅವಿದ್ಯಾವಂತನಾಗಿದ್ದರೂ ಶೀಲವಂತನಾದವನಿಗೆ ಗೌರವ ಆತಿಥ್ಯ ಸಿಗುತ್ತದೆ.”

“ಓ ಅಸ್ಸಲಾಯನ ಮೊದಲು ಜನ್ಮದ ಬಗ್ಗೆ ಮಾತನಾಡಿದೆವು, ನಂತರ ವೇದಜ್ಞಾನ (ಮಂತ್ರಗಳ) ಬಗ್ಗೆ ಮಾತನಾಡಿದೆವು, ಕೊನೆಗೆ ಪರಿಶುದ್ಧತೆಯಿಂದಲೇ (ಶೀಲದಿಂದ) ಗೌರವ ಆತಿಥ್ಯ ಸಿಗುತ್ತದೆ ಎಂದು ನೀವು ಒಪ್ಪಿರುವಿರಿ. ನಾನು ಸಹಾ ಅದನ್ನೇ ಬೋಧಿಸುತ್ತಿರುವೆ. ನಾಲ್ಕು ವರ್ಣಗಳಲ್ಲಿ ಶೀಲವಂತರೇ ಗೌರವಕ್ಕೆ ಪಾತ್ರರು. ಯಾರು ಸಹಾ ಜನ್ಮದಿಂದ ಶ್ರೇಷ್ಠನಾಗುವುದಿಲ್ಲ, ಕರ‍್ಮದಿಂದ (ಶೀಲ)ದಿಂದ ಶ್ರೇಷ್ಠನಾಗುತ್ತಾನೆ.”

ಇದನ್ನು ಕೇಳಿದ ಅಸ್ಸಲಾಯನು ತಲೆತಗ್ಗಿಸಿದನು.

Friday, 29 November 2019

ಅಭಾಸಿತ ಸುತ್ತ abhasita sutta

ಅಭಾಸಿತ ಸುತ್ತ


  ಭಿಕ್ಖುಗಳೇ, ಇವೆರಡು ತಥಾಗತರಿಗೆ ಮಾಡುವ ಅಪನಿಂದೆಗಳಾಗಿವೆ
ಯಾವುವವು ಎರಡು ?

"ತಥಾಗತರು ನುಡಿಯದಿದ್ದರೂ ಹೀಗೆ  ನುಡಿದಿದ್ದಾರೆ ಎಂದು ನಿರೂಪಿಸುವುದು. &
ತಥಾಗತರೂ ನುಡಿದಿದ್ದರೂ ಹೀಗೆ ನುಡಿದಿಲ್ಲ ಎಂದು ನಿರೂಪಿಸುವುದು.

ಹೀಗೆ ತಥಾಗತರಿಗೆ 2 ರೀತಿಯಲ್ಲಿ ಅಪನಿಂದೆ ಮಾಡುವರು.

Tuesday, 26 November 2019

ಮಹಾಮೊಗ್ಗಲಾನ ಸುತ್ತ (ಪಾಚಾಲ ಸುತ್ತ/ಚಾಪಾಲ ಸುತ್ತ)

ಮಹಾಮೊಗ್ಗಲಾನ ಸುತ್ತ (ಪಾಚಾಲ ಸುತ್ತ)

ಮಹಾಮೊಗ್ಗಲಾನರವರು ಮಗಧದ ಸಮೀಪದ ಕಲ್ಲವಾಲಪುತ್ತ ಎಂಬ ಹಳ್ಳಿಯಲ್ಲಿ ನೆಲೆಸಿದ್ದರು. ಪಬ್ಬಜ್ಜ ಸ್ವೀಕಾರದ ಏಳು ದಿನಕ್ಕೆ ಕಾಲಿಟ್ಟರು. ಸದಾಕಾಲ ಧ್ಯಾನದಲ್ಲಿ ತೊಡಗಿದರು. ಆದರೂ ಅವರು ಥೀನಮಿದ್ಧ (ಆಲಸ್ಯ, ಜಡತೆ, ನಿದ್ದೆ) ಯಿಂದಾಗಿ ತುಸು ತ್ರಾಸಪಟ್ಟರು.
   ಮೊಗ್ಗಲಾನರವರು ತಮ್ಮ ಧ್ಯಾನ ಸಾಧನೆಗೆ ಮಗಧದ ಸಮೀಪದ ಕಲ್ಲವಲಪುತ್ತ ಎಂಬ ಹಳ್ಳಿಯ ಪಕ್ಕದ ಅರಣ್ಯವನ್ನು ಆಯ್ಕೆ ಮಾಡಿದರು, ಅಲ್ಲಿ ಅವರು ಪದ್ಮಾಸನದಲ್ಲಿ ಹಾಗೂ ನಡಿಗೆಯ ಭಂಗಿಯಲ್ಲಿ ಧ್ಯಾನವನ್ನು ಆರಂಭಿಸಿದರು. ಅದರೂ ಸಹಾ ಅವರು ತೂಗಡಿಕೆಯನ್ನು ಗೆಲ್ಲಲಾರೆದೆ ಹೋದರು.  ಅವರಿಗೆ ನಿದ್ರಿಸಲು ಇಷ್ಟವಿರಲಿಲ್ಲ ಅದರೂ ತಮ್ಮ ಬೆನ್ನು ಹಾಗೂ ಕತ್ತನ್ನು ನೇರವಾಗಿಡಲು ಅಸಮರ್ಥರಾದರು. ಅದರೂ ತಮ್ಮ ಇಚ್ಚಾಶಕ್ತಿಯಿಂದ ಕಣ್ಣುಗಳನ್ನು ಅಗಲವಾಗಿಸಿ ನಿದ್ರೆ ಗೆಲ್ಲಲು ಯತ್ನಿಸಿದರು. ಅದರೂ ಯಶಸ್ವಿಯಾಗದೆ ಹೋಯಿತು, ಅಂದು ಅವರು ಸಂಘಕ್ಕೆ ಸೇರಿ 7ನೆಯ ದಿನವಾಗಿತ್ತು.  ಭಗವಾನರಿಗೆ ಇವರ ಕಷ್ಟಗಳು ಅರ್ಥವಾಗಿ ಅವರ ಮುಂದೆ ತೇಜೋಮಯವಾಗಿ ಪ್ರತ್ಯಕ್ಷವಾದರು. ಹಾಗೂ ಹೀಗೆ ಕೇಳಿದರು.
"ಮೊಗ್ಗಲಾನ ತೂಗಡಿಸುತ್ತಿರುವೆಯಾ.? ಮೊಗ್ಗಲಾನ ತೂಗಡಿಸುತ್ತಿರುವೆಯಾ (ಮಂಪರು)"
"ಹೌದು ಭಗವಾನ್"
"ಸರಿ ಮೊಗ್ಗಲಾನ , ಯಾವಾಗಲಾದರೂ ನಿನಗೆ ನಿದ್ದೆ ಅಥವಾ ತೂಗಡಿಕೆ ಆವರಿಸಿದಾಗ ಆ ಯೋಚನೆ ಅಥವಾ ಆ ಗ್ರಹಿೆಕೆಯೆಡೆಗೆ ಗಮನ ಹರಿಸದಿರು, ಹಾಗೆ ಆ ಗ್ರಹಿಕೆಯೆಡೆ ಗಮನವನ್ನು ಹರಿಸಿದಾಗ ತೂಗಡಿಕೆ ದೂರವಾಗುವುದು."
"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ಆಗ ನೀನೂ ಹಿಂದೆ ಆಲಿಸಿರುವ ಬೋಧನೆಯನ್ನು (ಧಮ್ಮ) ನೆನಪಿಸಿಕೋ ಹಾಗೂ ಅವನ್ನು ವಿಶ್ಲೇಶಿಸಿಕೊ.........."
"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ನೀನೂ ಆಲಿಸಿದ್ದ ಧಮ್ಮವನ್ನು ಪೂರ್ಣ ವಿವರವಾಗಿ ಪುನಾರಾವತರ್ಿತಗೊಳಿಸಿಕೊ.............."
"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ನಿನ್ನ ಕಿವಿಗಳ ಹಾಲೆಗಳನ್ನು ಎಳೆದಾಡು ಮತ್ತು ನಿನ್ನ ಅಂಗಗಳನ್ನು ಉಜ್ಜಲು ಆರಂಭಿಸು,............"
"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ನೀನು ಆಸನದಿಂದ ಎದ್ದೇಳು ಹಾಗೂ ಕಣ್ಣುಗಳನ್ನು ನೀರಿನಿಂದ ತೊಳೆದುಕೊ, ನಂತರ ಎಲ್ಲಾ ದಿಕ್ಕುಗಳ ಕಡೆಗೆ ವೀಕ್ಷಿಸಲು ಆರಂಭಿಸು,   ನಕ್ಷತ್ರಗಳನ್ನು ಹಾಗೂ ನಕ್ಷತ್ರಗಳ ಸಮೂಹ ರಾಶಿಗಳನ್ನು ನೋಡಲು ಆರಂಭಿಸು.........."
"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ಬೆಳಕಿನ ಸಂಜ್ಞೆಯತ್ತ ಗಮನಹರಿಸು, ಹಗಲಿನ ಸಂಜ್ಞೆಯತ್ತ ಗಮನಹರಿಸು, ಅದನ್ನು ರಾತ್ರಿಯಲ್ಲಿ ಅಭ್ಯಾಸಿಸು ಅಂದರೆ ರಾತ್ರಿಯನ್ನು ಹಗಲಿನಂತೆ ಹಾಗೂ ಹಗಲನ್ನು ರಾತ್ರಿಯಂತೆ ಗ್ರಹಿಸುವುದು., ಹೀಗಾದಾಗ ಮನಸ್ಸು ಸ್ವಚ್ಚವಾಗಿ ಜಡರಹಿತವಾಗುವುದು. ಹೀಗೆ ಮನಸ್ಸನ್ನು ಬೆಳಕಿನಂತೆ ಪೂರ್ಣವಾಗಿ ಪ್ರಕಾಶಿಸು........"
"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ಆಗ ಇಂದ್ರಿಯಗಳನ್ನು ಅಂತಮರ್ುಖಗೊಳಿಸಿ,  ಮನಸ್ಸನ್ನು ಬಾಹ್ಯಕ್ಕೆ ದಾರಿತಪ್ಪದಂತೆ ಜಾಗಾರೂಕತೆವಹಿಸಿ, ನಡಿಗೆಯ ಧ್ಯಾನವನ್ನು ಆರಂಭಿಸು, ನಡಿಗೆಯಲ್ಲಿಯೇ ಗಮನವಹಿಸು. ಹಾಗೂ ಹಿಂದೆಯಿರುವುದನ್ನು ಕಲ್ಪಿಸಿಕೊ, ಹಾಗೂ ಹಿಂದೆಯಿದ್ದಾಗ ಮುಂದೆಯಿರುವುದನ್ನು ಕಲ್ಪಿಸಿಕೋ........"
"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ನಿದ್ದೆಯು ಈಗ ಅವಶ್ಯಕವೆಂದು ತಿಳಿದು ಆಗ ಜಾಗಾರೂಕತೆಯಿಂದ, ಸ್ಪಷ್ಟ ಅರಿವಿನಿಂದ, ಸಿಂಹಶಯ್ಯೆಯ ಭಂಗಿಯಲ್ಲಿ ಬಲಮುಖವಾಗಿ ಮಲಗಿ,  ಬಲಗಾಲ ಮೇಲೆ ಎಡಗಾಲನ್ನು ಇಟ್ಟು ನೇರವಾಗಿ ಮಲಗಿ, ಮತ್ತೆ ಮೇಲೆಳುವ ಸಮಯವನ್ನು ನಿಗಧಿತಪಡಿಸಿ, ಅಲ್ಪನಿದ್ದೆಯಲ್ಲಿ ತೃಪ್ತಿತಾಳಿ ನಂತರ ಎಚ್ಚರಗೊಂಡಾಗ ಜಾಗರೂಕತೆ ತಾಳಿ ಈ ಬಗೆಯ ಮನೋಭಾವ ತಾಳುವುದು ನಾನು ಅತಿನಿದ್ದೆಯಲ್ಲಿ ಅಥವಾ ಅತಿವಿಶ್ರಾಂತಿಯ ಸುಖದಲ್ಲಿ ತಲ್ಲೀನಲಾಗಿಲ್ಲ ಹಾಗೂ ತಲ್ಲೀನವಾಗುವುದಿಲ್ಲ. ಹೀಗೆ ಮೊಗ್ಗಾಲಾನ ನೀನು ಸುಶಿಕ್ಷಣಗೊಳಿಸಿಕೊಳ್ಳಬೇಕು."
"ನಂತರ ಮೊಗ್ಗಲಾನ ನೀನು ಹೀಗೆ ಸುಶಿಕ್ಷಣಗೊಳಿಸಿಕೊಳ್ಳಬೇಕು ಹೇಗೆಂದರೆ ನಾನು ನನ್ನ ಅಹಂಕಾರ ಉದಯಿಸುವ ಅಥವಾ ವೃದ್ಧಿಯಾಗುವಂತಹ ಕುಟುಂಬಗಳಿಗೆ ಆಹಾರಕ್ಕೆ ಹೋಗಲಾರೆನು ಏಕೆಂದರೆ ಹಲವಾರು ಪ್ರಾಪಂಚಿಕ ಕಾರ್ಯಗಳಲ್ಲಿ ತೊಡಗಿರುವ ಕುಟುಂಬಗಳಿಗೆ ಹೋದಾಗ ಅವರು  ಗಮನಹರಿಸದೆ ಹೋಗಬಹುದು ಆಗ ಇವರು ನನಗೆ ಇಷ್ಟ ಪಡುತ್ತಿಲ್ಲ, ಏನೂ ದೊರೆಯದೆ ಹೋಯಿತು, ಎಂದು ಲಜ್ಜೆಗೆ ಒಳಗಾಗಿ, ಕ್ಷೊಭೆಗೆ ಒಳಗಾಗಿ, ಅನಿಯಂತ್ರಿತನಾಗಿ, ಸಮಾಧಿಗೆ ದೂರನಾಗುತ್ತಾನೆ. "
"ನಂತರ ಮೊಗ್ಗಲಾನ ನೀನು ಹೀಗೆ ಸುಶಿಕ್ಷಣಗೊಳಿಸಿಕೊಳ್ಳಬೇಕು, ನಾನು ಮುಖಾಮುಖಿ ಅಥವಾ ವಿವಾದಾತ್ಮಕ ವಾದಗಳಲ್ಲಿ ತೊಡಗುವುದಿಲ್ಲ ಏಕೆಂದರೆ ಆಗ ನಾನಾ ಚಚರ್ೆ ವಾದ ವಿವಾದಗಳು ಉಂಟಾಗಿ ಕ್ಷೊಭೆಗೆ ಒಳಗಾಗಿ, ಅನಿಯಂತ್ರಿತನಾಗಿ, ಸಮಾಧಿಗೆ ದೂರನಾಗುತ್ತಾನೆ."
"ಮತ್ತೆ ಮೊಗ್ಗಾಲಾನ ನಾನು ಯಾವುದೇ ಬಗೆಯ ಸಂಸರ್ಗ(ಸ್ನೇಹ)ವನ್ನು ಪ್ರಶಂಸಿಸಲಾರೆನು, ಹಾಗೆಯೇ ನಾನು ಯಾವುದೇ ಬಗೆಯ ಸಂಸರ್ಗ(ಸ್ನೇಹ)ವನ್ನು ಅಪ್ರಶಂಸಿಸಲಾರೆನು ಹಾಗೆಯೇ ಗೃಹಸ್ಥರೊಡನೆಯಾಗಲಿ ಅಥವಾ ಪಬ್ಬಜಿತರೊಡನೆಯಾಗಲಿ ಯಾವುದೇ ಬಗೆಯ ಸಂಸರ್ಗ(ಸ್ನೇಹ)ವನ್ನು ಪ್ರಶಂಸಿಸಲಾರೆನು, ಹಾಗೂ ಯಾವ ಸ್ಥಳಗಳು ನಿಶಬ್ದದಿಂದ ಕೂಡಿವೆಯೋ, ಶಬ್ಧರಹಿತವೂ, ಹಾಗೂ ನಿರ್ಜನ ಪ್ರದೇಶಗಳೋ ಅಂತಹ ಧ್ಯಾನಯೋಗ್ಯ ಪ್ರದೇಶಗಳನ್ನು ನಾನು ಪ್ರಶಂಸಿಸುವೆನು".
ಹೀಗೆ ಭಗವಾನರು ನುಡಿದಾಗ ಮೊಗ್ಗಲಾನರು ಹೀಗೆ ಪ್ರಶ್ನಿಸಿದರು : "ಭಗವಾನ್ ಸಂಕ್ಷಿಪ್ತವಾಗಿ ತಿಳಿಸಿ, ಯಾವ ರೀತಿಯಲ್ಲಿ ಒಬ್ಬನು ತೃಷ್ಣೆಯಿಂದ ಮುಕ್ತನಾಗುವನು, ಪೂರ್ಣವಾಗಿ ಬಂಧನಮುಕ್ತನಾಗುವನು, ಅತ್ಯಂತ ನಿಷ್ಟನು ,ಬ್ರಹ್ಮಚರ್ಯೆಯ ಜೀವನ ಪೂರ್ಣಗೊಳಿಸುವನು, ಅಂತಿಮ ಹಂತವನ್ನು ಪಡೆಯುವನು, ಹಾಗೂ ದೇವ ಮನುಷ್ಯರಲ್ಲಿ ಶ್ರೇಷ್ಟನಾಗುವನು."
"ಇಲ್ಲಿ ಮೊಗ್ಗಾಲಾನ, ಒಬ್ಬನು ಹೀಗೆ ಕೇಳುತ್ತಾನೆ ಏನೆಂದರೆ ಎಲ್ಲಾ ಆಗುಹೋಗುಗಳು ಅಂಟಿಕೊಳ್ಳುವಿಕೆಗೆ ಅರ್ಹವಲ್ಲ ಆಗ ಆತನು ಎಲ್ಲಾ ಬಗೆಯ ಸ್ಥಿತಿಗಳನ್ನು ಅರಿಯುತ್ತಾನೆ, ಯಾವುದೇ ಅನುಭವಗಳಾಗಲಿ ಅದರಲ್ಲಿ ಕ್ಷಣಿಕತೆಯನ್ನು ಅರಿತು, ವಿರಾಗ ತಾಳುತ್ತಾನೆ, ನಿರೋಧ ತಾಳುತ್ತಾನೆ,  ತ್ಯೆಜಿಸುವಿಕೆ ತಾಳುತ್ತಾನೆ, ಹೀಗೆ ಲೋಕದ ಯಾವುದಕ್ಕೂ ಅಂಟಲಾರನು, ಹೀಗೆ ಯಾವುದಕ್ಕೂ ಅಂಟದೆ ತಳಮಳಗೊಳ್ಳಲಾರನು, ತಳಮಳಗೊಳ್ಳದೆ ಆರತರ್ಯದಲ್ಲೇ ಸರಿಯಾಗಿ ಮುಕ್ತನಾಗುತ್ತಾನೆ, ಆಗ ಆತನಲ್ಲಿ ವಿಮುಕ್ತಿ ಜ್ಞಾನವು ಉಂಟಾಗುವುದು, ಜನ್ಮವು ಅಂತ್ಯವಾಯಿತು,  ಬ್ರಹ್ಮಚರ್ಯೆಯ ಜೀವನ ಪೂರ್ಣವಾಯಿತು, ಮಾಡಬೇಕಾದುದೆಲ್ಲಾ ಮಾಡಿಯಾಯಿತು, ಈ ಲೋಕಗಳಿಗೆ ಇನ್ನೇನೂ ಉಳಿದಿಲ್ಲ."
"ಈ ರೀತಿಯಾಗಿ ಮೊಗ್ಗಾಲಾನ ಸಂಕ್ಷಿಪ್ತವಾಗಿ  ಒಬ್ಬನು ತೃಷ್ಣೆಯಿಂದ ಮುಕ್ತನಾಗುವನು, ಪೂರ್ಣವಾಗಿ ಬಂಧನಮುಕ್ತನಾಗುವನು, ಅತ್ಯಂತ ನಿಷ್ಟನು ,ಬ್ರಹ್ಮಚರ್ಯೆಯ ಜೀವನ ಪೂರ್ಣಗೊಳಿಸುವನು, ಅಂತಿಮ ಹಂತವನ್ನು ಪಡೆಯುವನು, ಹಾಗೂ ದೇವ ಮನುಷ್ಯರಲ್ಲಿ ಶ್ರೇಷ್ಟನಾಗುವನು.." (ಪಾಚಾಲ ಸುತ್ತ, ಅಂಗುತ್ತರ ನಿಕಾಯ 7.58)


Wednesday, 30 October 2019

ಸತ್ಪುರುಷನನ್ನು ಹೇಗೆ ಅರಿಯಬಹುದು? (ಚೂಲ ಪುಣ್ಣಮ ಸುತ್ತ): cula purnima sutta in kannada

ಸತ್ಪುರುಷನನ್ನು ಹೇಗೆ ಅರಿಯಬಹುದು? (ಚೂಲ ಪುಣ್ಣಮ ಸುತ್ತ):


ಹೀಗೆ ನಾನು ಕೇಳಿದ್ದೇನೆ - ಒಂದು ಸಮಯದಲ್ಲಿ ಭಗವಾನರು ಸಾವತ್ಥಿಯಲ್ಲಿ ಮಿಗಾರಮಾತೆಯ ಪೂರ್ವ ಆರಾಮ (ವಿಹಾರ)ದಲ್ಲಿ ವಿಹರಿಸುತ್ತಿದ್ದರು. ಅಂದು ಪೂಣರ್ಿಮೆಯಾದ್ದರಿಂದ ಉಪೂಸಥ ದಿನವಾಗಿತ್ತು. ಆಗ ಭಗವಾನರು ಹೊರಗೆ ಗಾಳಿಯಲ್ಲಿ ಕುಳಿತಿದ್ದರು. ಅವರ ಸುತ್ತಲು ಭಿಕ್ಷುಗಣವಿತ್ತು. ಭಗವಾನರು ಶಾಂತವಾಗಿದ್ದ ಭಿಕ್ಷು ಸಮೂಹಕ್ಕೆ ಹೀಗೆ ಕೇಳಿದರು:

"ಈಗ ಭಿಕ್ಷುಗಳೇ, ಅಸತ್ಪುರುಷನಿಗೆ ಅಸತ್ಪುರುಷನು ಅರಿಯಲ್ಪಡುವನೇ, ಹೇಗೆಂದರೆ ಈ ವ್ಯಕ್ತಿಯು ಅಸತ್ಪುರುಷನೇ?"

"ಇಲ್ಲ ಭಂತೆ."

"ಒಳ್ಳೆಯದು ಭಿಕ್ಷುಗಳೇ, ಅಸತ್ಪುರುಷನಿಗೆ ಈತನು ಅಸತ್ಪುರುಷ ಎಂದು ತಿಳಿಯಲ್ಪಡುವುದಿಲ್ಲ. ಹಾಗೆಯೇ ಭಿಕ್ಷುಗಳೇ, ಅಸತ್ಪುರುಷನಿಗೆ ಸತ್ಪುರುಷನು ತಿಳಿಯಲ್ಪಡುವನೇ? ಹೇಗೆಂದರೆ ಈ ವ್ಯಕ್ತಿಯು ಸತ್ಪುರುಷನಿರಬಹುದೇ?"
"ಇಲ್ಲ ಭಂತೆ."

"ಒಳ್ಳೆಯದು ಭಿಕ್ಷುಗಳೇ, ಖಂಡಿತವಾಗಿಯು ಅಸತ್ಪುರುಷನಿಗೆ ಈ ವ್ಯಕ್ತಿಯು ಸತ್ಪುರುಷ ಎಂದು ತಿಳಿಯಲಾಗುವುದಿಲ್ಲ. ಆತನಿಗೆ ಅದು ಅಸಾಧ್ಯವಾಗಿದೆ. ಓ ಭಿಕ್ಷುಗಳೇ, ಅಸತ್ಪುರುಷನು ಅಕುಶಲ ಚಿತ್ತಸ್ಥಿತಿಗಳನ್ನು ಹೊಂದಿರುತ್ತಾನೆ. ಆತನು ಕೆಟ್ಟ ಸ್ನೇಹಿತರನ್ನು ಹೊಂದಿರುತ್ತಾನೆ. ಪಾಪಿಗಳಂತೆ ಯೋಚಿಸುತ್ತಾನೆ. ಆತನು ಪಾಪಿಗಳಂತೆಯೇ ಸಲಹೆ ಬುದ್ಧಿವಾದ ನೀಡುತ್ತಾನೆ, ಪಾಪಿಗಳಂತೆ ಮಾತನಾಡುತ್ತಾನೆ, ಪಾಪಿಗಳಂತೆ ಕಾರ್ಯವನ್ನು ಮಾಡುತ್ತಾನೆ. ಅಷ್ಟೇ ಅಲ್ಲ, ಆತನು ಅಸತ್ಪುರುಷರಂತೆಯೇ ದೃಷ್ಟಿಕೋನಗಳನ್ನು ಹೊಂದಿರುತ್ತಾನೆ ಮತ್ತು ಆತನು ಅಸತ್ಪುರುಷರಂತೆಯೇ ದಾನವನ್ನು ಮಾಡುತ್ತಾನೆ."

"ಮತ್ತು ಭಿಕ್ಷುಗಳೇ, ಆತನು ಯಾವ ಅಕುಶಲ ಚಿತ್ತಸ್ಥಿತಿಗಳಿಂದ (ಅಸ್ಸಧಮ್ಮ ಸಮಾನಾಗತೋ) ಕೂಡಿರುತ್ತಾನೆ?" "ಭಿಕ್ಷುಗಳೇ, ಆತನು ಶ್ರದ್ಧಾರಹಿತನಾಗಿರುತ್ತಾನೆ. ಪಾಪಲಜ್ಜೆಯಿಂದ ಕೂಡಿರುವುದಿಲ್ಲ, ಪಾಪಭಯದಿಂದಲೂ ಕೂಡಿರುವುದಿಲ್ಲ. ಆತನು ಅಲ್ಪಶೃತ (ಕಡಿಮೆ ಜ್ಞಾನವನ್ನು ಕೇಳಿರುತ್ತಾನೆ) ನಾಗಿರುತ್ತಾನೆ. ಆತನು ಸೋಮಾರಿ ಆಗಿರುತ್ತಾನೆ. ಸ್ಮೃತಿಹೀನ (ಅಜಾಗರೂಕನು)ನು ಆಗಿರುತ್ತಾನೆ. ಕೆಟ್ಟ ಪ್ರಜ್ಞೆಯುಳ್ಳವ ನಾಗಿರುತ್ತಾನೆ (ಅಲ್ಪಪ್ರಜ್ಞನು). ಭಿಕ್ಷುಗಳೇ, ಈ ರೀತಿಯಲ್ಲಿ ಅಸತ್ಪುರುಷನ ಚಿತ್ತಸ್ಥಿತಿಗಳು ಇರುತ್ತದೆ."

"ಮತ್ತೆ ಭಿಕ್ಷುಗಳೇ, ಆತನು ಯಾರೊಂದಿಗೆ ಸ್ನೇಹದಿಂದಿರುತ್ತಾನೆ?"
"ಭಿಕ್ಷುಗಳೇ, ಯಾರಲ್ಲಿ ಶ್ರದ್ಧೆಯಿಲ್ಲವೋ, ಪಾಪಲಜ್ಜೆಯಿಲ್ಲವೊ, ಪಾಪಭೀತಿಯಿಲ್ಲವೊ, ಯಾರು ಅಲ್ಪಶೃತರೋ, ಯಾರು ಸೋಮಾರಿಗಳೋ, ಅಜಾಗರೂಕರೋ, ಅಲ್ಪ ಪ್ರಜ್ಞರೋ ಅವರೊಂದಿಗೆಯೇ ಆತನು ಬೆರೆಯುತ್ತಾನೆ. ಅವರೊಂದಿಗೆ ಆತನು ಸ್ನೇಹದಿಂದಿರುತ್ತಾನೆ."

"ಮತ್ತೆ ಭಿಕ್ಷುಗಳೇ, ಆತನು ಅಸತ್ಪುರುಷರ ರೀತಿ ಹೇಗೆ ಯೋಚಿಸುತ್ತಾನೆ? ಆತನು ತನಗೆ ಅಹಿತವಾಗುವಂತೆ, ಬಾಧೆಯಾಗುವಂತೆ ಚಿಂತನೆ ಮಾಡುತ್ತಾನೆ. ಹಾಗು ಆತನು ಪರರಿಗೆ ಅಹಿತವಾಗುವಂತೆ ಬಾಧೆಯಾಗುವಂತೆ ಚಿಂತನೆ ಮಾಡುತ್ತಾನೆ. ಆತನು ಉಭಯರಿಗೂ ಬಾಧೆಯಾಗುವಂತೆ ಯೋಚಿಸುತ್ತಾನೆ."

"ಮತ್ತೆ ಭಿಕ್ಷುಗಳೇ, ಆತನ ಅಸತ್ಪುರುಷರ ರೀತಿ ಹೇಗೆ ಬುದ್ಧಿವಾದ ನೀಡುತ್ತಾನೆ? ಆತನು ತನಗೆ ಅಹಿತವಾಗುವಂತೆ, ಬಾಧೆಯಾಗುವಂತೆ ಬುದ್ಧಿವಾದ ಹೇಳಿಕೊಳ್ಳುತ್ತಾನೆ. ಆತನು ಪರರಿಗೆ ಅಹಿತವಾಗುವಂತೆ, ಬಾಧೆಯಾಗುವಂತೆ ಬುದ್ಧಿವಾದ ಹೇಳುತ್ತಾನೆ".

"ಮತ್ತೆ ಭಿಕ್ಷುಗಳೇ, ಆತನು ಅಸತ್ಪುರುಷರ ರೀತಿಯಲ್ಲಿ ಹೇಗೆ ಮಾತನಾಡುತ್ತಾನೆ?"
"ಭಿಕ್ಷುಗಳೇ, ಆತನು ಸುಳ್ಳು ಹೇಳುತ್ತಾನೆ, ಚಾಡಿ ಹೇಳುತ್ತಾನೆ, ನಿಂದಾಯುತ ಕಟುಭಾಷೆ ಮಾತನಾಡುತ್ತಾನೆ, ವ್ಯರ್ಥವಾದ ಹಾನಿಯುತ ಹರಟೆ ಮಾಡುತ್ತಾನೆ."

"ಮತ್ತೆ ಭಿಕ್ಷುಗಳೇ, ಆತನು ಅಸತ್ಪುರುಷರ ರೀತಿಯಲ್ಲಿ ಹೇಗೆ ಕರ್ಮ ಮಾಡುತ್ತಾನೆ?"
"ಇಲ್ಲಿ ಭಿಕ್ಷುಗಳೇ, ಆತನು ಜೀವಹತ್ಯೆಗಳನ್ನು ಮಾಡುತ್ತಾನೆ, ಕಳ್ಳತನ ಮಾಡುತ್ತಾನೆ, ವ್ಯಭಿಚಾರದಲ್ಲಿ ತೊಡಗುತ್ತಾನೆ. ಹೀಗೆ ಭಿಕ್ಷುಗಳೇ, ಆತನು ಅಸತ್ಪುರುಷರ ಕರ್ಮ ಮಾಡುತ್ತಾನೆ".

"ಮತ್ತೆ ಭಿಕ್ಷುಗಳೇ, ಆತನು ಅಸತ್ಪುರುಷ ರೀತಿ ಹೇಗೆ ದೃಷ್ಟಿಗಳನ್ನು ಹೊಂದಿರುತ್ತಾನೆ?"
ಇಲ್ಲಿ ಭಿಕ್ಷುಗಳೇ, ಆತನು ಹೀಗೆ ಹಲವು ದೃಷ್ಟಿಗಳನ್ನು ಹೊಂದಿರುತ್ತಾನೆ. ಅವೆಂದರೆ:
 (1) ದಾನಕ್ಕೆ ಫಲವಿಲ್ಲ, ಅರ್ಪಣೆಗೆ ಫಲವಿಲ್ಲ, ತ್ಯಾಗ ಸತ್ಕಾರಗಳಿಗೆ ಫಲವಿಲ್ಲ.
(2) ಸುಕಾರ್ಯಗಳಿಗೆ ಆಗಲಿ ಅಥವಾ ದುಷ್ಕಾರ್ಯಗಳಿಗಾಗಲಿ ಅಂತಹ ಕರ್ಮಗಳಿಗೆ ಫಲವಿಲ್ಲ
 (3) ಈ ಲೋಕವೂ ಇಲ್ಲ, ಪರಲೋಕವೂ ಇಲ್ಲ.
 (4) ತಾಯ್ತಂದೆಗಳ ಸಲಹುವಿಕೆಯಿಂದ ಯಾವ ಲಾಭವೂ ಇಲ್ಲ
. (5) ತಾಯ್ತಂದೆಗಳಿಲ್ಲದೆಯೇ ತಮಗೆ ತಾವೇ ಹುಟ್ಟುವ (ಓಪಪಾತಿಕ) ಜೀವಿಗಳಿಲ್ಲ.
(6) ಯೋಗ್ಯವಾಗಿ ಜೀವಿಸಿ, ಯೋಗ್ಯವಾಗಿ ಸಾಕ್ಷಾತ್ಕರಿಸಿ, ಅಭಿಜ್ಞಾ ಸಾಕ್ಷಾತ್ಕರಿಸಿ (ಅತೀಂದ್ರಿಯ ಬಲಗಳನ್ನು ಪಡೆದು) ಈ ಲೋಕ ಮತ್ತು ಪರಲೋಕವಿದೆ ಎಂದು ಹೇಳುವ ಸಮಣ ಬ್ರಾಹ್ಮಣರು ಇಲ್ಲ, ಅಂತಹವರು ಇಲ್ಲವೇ ಇಲ್ಲ. ಹೀಗೆ ಭಿಕ್ಷುಗಳೇ, ಅಸತ್ಪುರುಷನು ದೃಷ್ಟಿಕೋನಗಳನ್ನು ಹೊಂದಿರುತ್ತಾನೆ."


"ಮತ್ತೆ ಭಿಕ್ಷುಗಳೇ, ಅಸತ್ಪುರುಷನು ಹೇಗೆ ದಾನವನ್ನು ಮಾಡುತ್ತಾನೆ?"
"ಭಿಕ್ಷುಗಳೇ, ಅಸತ್ಪುರುಷನು ಗೌರವ ಭಕ್ತಿ ಯಾವುದೂ ಇಲ್ಲದೆ ದಾನ ಮಾಡುತ್ತಾನೆ. ಆತನು ತನ್ನ ಕೈಯಿಂದ ದಾನ ಮಾಡುವುದಿಲ್ಲ, ಆತನು ಬಿಸಾಡುವಂತಹದ್ದನ್ನು ದಾನ ಮಾಡುತ್ತಾನೆ. ಆತನು ಅಗತ್ಯವಿಲ್ಲದ್ದನ್ನು, ಅಪೇಕ್ಷೆಪಡದಿದ್ದುದನ್ನು ದಾನ ಮಾಡುತ್ತಾನೆ. ಆತನು ಭವಿಷ್ಯವನ್ನು ಗಣನೆಗೆ ತೆಗೆದುಕೊಳ್ಳದೆ ದಾನ ಮಾಡುತ್ತಾನೆ. ಹೀಗೆ ಭಿಕ್ಷುಗಳೇ, ಅಸತ್ಪುರುಷನು ದಾನ ಮಾಡುತ್ತಾನೆ."

"ಭಿಕ್ಷುಗಳೇ, ಯಾವ ಅಸತ್ಪುರುಷನು ಪಾಪಚಿತ್ತ ಸ್ಥಿತಿಗಳನ್ನು, ಪಾಪಿ ಮಿತ್ರರನ್ನು, ಪಾಪ ಯೋಚನೆಗಳನ್ನು, ಪಾಪ ಸಲಹೆಗಳನ್ನು, ಪಾಪಯುತ ಮಾತುಗಳನ್ನು, ಪಾಪಯುತ ಕರ್ಮಗಳನ್ನು ಮತ್ತು ಪಾಪಯುತ ದೃಷ್ಟಿಕೋನಗಳನ್ನು ಹೊಂದಿರುತ್ತಾನೋ, ಆತನು ಮರಣದ ನಂತರ ಅಸತ್ಪುರುಷರೆ ಇರುವಂತಹ ಗತಿಯಲ್ಲಿ ಹುಟ್ಟುತ್ತಾನೆ. ಯಾವುದು ಆ ಗತಿ? ನಿರಯ ಇಲ್ಲವೆ ತಿರಚ್ಚನಯೋನಿ (ಪ್ರಾಣಿಗಳ ಲೋಕ)ಯಲ್ಲಿ ಜನ್ಮಿಸುತ್ತಾನೆ."

"ಈಗ ಭಿಕ್ಷುಗಳೇ, ಸತ್ಪುರುಷನಿಗೆ ಇಂಥಹ ವ್ಯಕ್ತಿಯು ಸತ್ಪುರುಷನು ಎಂದು ಗೊತ್ತಾಗುತ್ತದೆಯೇ?"
"ಹೌದು ಭಂತೆ."

"ಒಳ್ಳೆಯದು ಭಿಕ್ಷುಗಳೇ, ಕೆಲವು ಸನ್ನಿವೇಶಗಳು ಬರುತ್ತವೆ. ಆಗ ಈತನು ಸತ್ಪುರುಷ ಎಂದು ಸತ್ಪುರುಷನಿಗೆ ಗೊತ್ತಾಗುವುದು. ಆದರೆ ಭಿಕ್ಷುಗಳೇ, ಸತ್ಪುರುಷನು ಅಸತ್ಪುರುಷನಿಗೆ ನೋಡಿದಾಗ ಇವನು ಅಸತ್ಪುರುಷ ಎಂದು ಗೊತ್ತಾಗುವುದೇ?"
"ಹೌದು ಭಂತೆ ಗೊತ್ತಾಗುವುದು."

"ಒಳ್ಳೆಯದು ಭಿಕ್ಷುಗಳೇ, ಸನ್ನಿವೇಶಗಳು ಬಂದಾಗ ಸತ್ಪುರುಷನಿಗೆ ಇವನು ಸತ್ಪುರುಷ ಎಂದು ಗೊತ್ತಾಗುತ್ತದೆ. ಭಿಕ್ಷುಗಳೇ, ಸತ್ಪುರುಷನು ಕುಶಲ ಚಿತ್ತ ಸ್ಥಿತಿಗಳನ್ನು ಹೊಂದಿರುತ್ತಾನೆ. ಸತ್ಪುರುಷರ ಜೊತೆಯಲ್ಲಿ ರಮಿಸುತ್ತಾನೆ, ಸತ್ಪುರುಷರ ರೀತಿಯಲ್ಲಿ ಚಿಂತನೆ ಮಾಡುತ್ತಾನೆ. ಸತ್ಪುರುಷ ರೀತಿ ಬೋಧನೆ (ಬುದ್ಧಿವಾದ) ನೀಡುತ್ತಾನೆ. ಸತ್ಪುರುಷರ ರೀತಿ ಮಾತನಾಡುತ್ತಾನೆ. ಸತ್ಪುರುಷರ ರೀತಿ ಕರ್ಮ ಮಾಡುತ್ತಾನೆ, ಸತ್ಪುರುಷರ ರೀತಿಯಲ್ಲಿ ದೃಷ್ಟಿಕೋನಗಳನ್ನು ಹೊಂದಿರುತ್ತಾನೆ. ಸತ್ಪುರುಷ ರೀತಿಯಲ್ಲಿ ದಾನ ಮಾಡುತ್ತಾನೆ ಮತ್ತು ಭಿಕ್ಷುಗಳೇ, ಹೇಗೆ ಸತ್ಪುರುಷನು ಕುಶಲ ಚಿತ್ತಸ್ಥಿತಿಗಳನ್ನು ಹೊಂದಿರುತ್ತಾನೆ? ಇಲ್ಲಿ ಭಿಕ್ಷುಗಳೇ, ಸತ್ಪುರುಷನು ಶ್ರದ್ಧೆಯನ್ನು ಹೊಂದಿರುತ್ತಾನೆ, ಸತ್ಪುರುಷನು ಪಾಪಲಜ್ಜೆ ಹಾಗು ಪಾಪ ಭಯವನ್ನು ಹೊಂದಿರುತ್ತಾನೆ. ಸತ್ಪುರುಷನು ಬಹಳಷ್ಟು ಜ್ಞಾನವನ್ನು ಕೇಳಿರುತ್ತಾನೆ. ಸತ್ಪುರುಷನು ಪ್ರಯತ್ನಶಾಲಿಯಾಗಿರುತ್ತಾನೆ, ಆತನಲ್ಲಿ ಸ್ಮೃತಿಯು ಜಾಗರೂಕತೆಯು ಸ್ಥಾಪಿತವಾಗಿರುತ್ತದೆ. ಸತ್ಪುರುಷನು ಪ್ರಜ್ಞಾವಂತನಾಗಿರುತ್ತಾನೆ. ಈ ರೀತಿಯಾಗಿ ಭಿಕ್ಷುಗಳೇ, ಸತ್ಪುರುಷನು ಕುಶಲ ಸ್ಥಿತಿಗಳನ್ನು ಹೊಂದಿರುತ್ತಾನೆ".

"ಮತ್ತು ಭಿಕ್ಷುಗಳೇ, ಹೇಗೆ ಸತ್ಪುರುಷನು ಸತ್ಪುರುಷರೊಡನೆ ಜೊತೆಯಲ್ಲಿರುತ್ತಾನೆ?"
"ಭಿಕ್ಷುಗಳೇ, ಯಾರಲ್ಲಿ ಶ್ರದ್ಧೆಯಿರುವುದೋ, ಪಾಪಲಜ್ಜೆ, ಪಾಪಭೀತಿಯಿರುವದೋ, ಯಾರು ಬಹುಶೃತರೋ, ಪ್ರಯತ್ನಶಾಲಿಗಳೋ, ಜಾಗೃತರೋ ಮತ್ತು ಪ್ರಜ್ಞಾವಂತರೋ ಅಂತಹವರೊಡನೆ ಸತ್ಪುರುಷನು ಸ್ನೇಹ ಬೆಳೆಸಿ ಅವರೊಂದಿಗಿರುತ್ತಾನೆ."

"ಮತ್ತೆ ಭಿಕ್ಷುಗಳೇ, ಸತ್ಪುರುಷನು ಹೇಗೆ ಸತ್ಪುರುಷರಂತೆ ಚಿಂತನೆ ಮಾಡುತ್ತಾನೆ, ಇಲ್ಲಿ ಭಿಕ್ಷುಗಳೇ, ಸತ್ಪುರುಷನು ತನಗೆ ಬಾಧೆಯನ್ನು ನೀಡುವುದಿಲ್ಲ, ಹಾಗೆಯೇ ಪರರಿಗೂ ಬಾಧೆಯನ್ನು ನೀಡುವುದಿಲ್ಲ. ತನಗೆ ಮತ್ತು ಪರರಿಗೂ ಬಾಧೆ ನೀಡುವುದಿಲ್ಲ. ಹೀಗೆ ಭಿಕ್ಷುಗಳೇ, ಆತನು ಸತ್ಪುರುಷರಂತೆ ಚಿಂತಿಸುತ್ತಾನೆ."

"ಮತ್ತೆ ಭಿಕ್ಷುಗಳೇ, ಹೇಗೆ ಆತನು ಸತ್ಪುರುಷರಂತೆ ಬುದ್ಧಿವಾದ ನೀಡುವನು? ಇಲ್ಲಿ ಭಿಕ್ಷುಗಳೇ, ಸತ್ಪುರುಷನು ತನಗೆ ಹಾನಿಯಾಗುವಂತೆ ಅಥವಾ ಪರರಿಗೆ ಹಾನಿಯಾಗುವಂತೆ ಆಗಲಿ ಅಥವಾ ಈರ್ವರಿಗೂ ಹಾನಿಯಾಗುವಂತೆ ಬುದ್ಧಿವಾದ ನೀಡುವುದಿಲ್ಲ. ಹೀಗೆ ಭಿಕ್ಷುಗಳೇ, ಆತನು ಸತ್ಪುರುಷರಂತೆ ಬುದ್ಧಿವಾದ ನೀಡುತ್ತಾನೆ."

"ಮತ್ತೆ ಭಿಕ್ಷುಗಳೇ, ಹೇಗೆ ಆತನು ಸತ್ಪುರುಷರಂತೆ ಮಾತನಾಡುತ್ತಾನೆ? ಇಲ್ಲಿ ಭಿಕ್ಷುಗಳೇ, ಆತನು ಸುಳ್ಳಿನಿಂದ ದೂರವಾಗುತ್ತಾನೆ, ಚಾಡಿಯಿಂದ, ಕಟುವಾಕ್ಯದಿಂದ, ವ್ಯರ್ಥ ಹರಟೆಯಿಂದ ದೂರವಾಗುತ್ತಾನೆ. ಹೀಗೆ ಭಿಕ್ಷುಗಳೇ, ಸತ್ಪುರುಷನು ಮಾತನಾಡುತ್ತಾನೆ."

"ಮತ್ತೆ ಭಿಕ್ಷುಗಳೇ, ಹೇಗೆ ಆತನು ಸತ್ಪುರುಷರಂತೆ ಕರ್ಮ ಮಾಡುತ್ತಾನೆ? ಇಲ್ಲಿ ಭಿಕ್ಷುಗಳೇ, ಆತನು ಎಲ್ಲಾ ಜೀವಿಗಳ ಜೀವಹತ್ಯೆಯಿಂದ ದೂರನಾಗಿರುತ್ತಾನೆ, ಕಳ್ಳತನದಿಂದ, ವ್ಯಭಿಚಾರದಿಂದ ದೂರವಾಗುತ್ತಾನೆ. ಹೀಗೆ ಭಿಕ್ಷುಗಳೇ, ಸತ್ಪುರುಷನು ಕರ್ಮ ಮಾಡುತ್ತಾನೆ."

"ಮತ್ತೆ ಭಿಕ್ಷುಗಳೇ, ಹೇಗೆ ಆತನು ಸತ್ಪುರುಷರಂತೆ ದೃಷ್ಟಿಕೋನಗಳನ್ನು ಹೊಂದಿರುತ್ತಾನೆ? ಭಿಕ್ಷುಗಳೇ, ಸತ್ಪುರುಷನು ಈ ಕೆಳಕಂಡಂತೆ ಸಮ್ಮಾ ದೃಷ್ಟಿಕೋನಗಳನ್ನು ಹೊಂದಿರುತ್ತಾನೆ: ದಾನಕ್ಕೆ ಫಲವಿದೆ, ಅರ್ಪಣೆಗೆ ಫಲವಿದೆ, ತ್ಯಾಗ ಸತ್ಕಾರಗಳಿಗೆ ಫಲವಿದೆ, ಕುಶಲ ಕರ್ಮಗಳಿಗೆ ಹಾಗು ಪಾಪ ಕರ್ಮಗಳಿಗೆ ಫಲವಿದೆ. ಹೀಗಾಗಿ ಈ ಲೋಕವು ಇದು ಹಾಗೆಯೆ ಪರಲೋಕವೂ ಇದೆ. ತಾಯ್ತಂದೆಯರಿಗೆ ಸೇವೆ ಮಾಡುವುದರಿಂದಾಗಿ ಲಾಭವಿದೆ, ತಾಯಿ-ತಂದೆಯರಿಲ್ಲದೆಯೇ ತಾವಾಗಿಯೇ ಹುಟ್ಟುವಂತಹ ಓಪಪಾತಿಕ ಜೀವಿಗಳೂ ಇದ್ದಾರೆ. ಯೋಗ್ಯವಾಗಿ, ಸರಿಯಾಗಿ ಜೀವಿಸುವ ಸಮಣ ಬ್ರಾಹ್ಮಣರೂ ಇದ್ದಾರೆ. ತಮ್ಮ ಅಭಿಜ್ಞ ಬಲದಿಂದಾಗಿ ಈ ಲೋಕದ ಬಗ್ಗೆ, ಪರಲೋಕದ ಬಗ್ಗೆ ಹೇಳುವಂತಹ ಮಹಾನುಭಾವರು ಲೋಕದಲ್ಲಿರುವರು. ಹೀಗೆ ಭಿಕ್ಷುಗಳೇ, ಸತ್ಪುರುಷರು ಸಮ್ಮಾದೃಷ್ಟಿಗಳನ್ನು ಹೊಂದಿತ್ತಾರೆ."

"ಮತ್ತೆ ಭಿಕ್ಷುಗಳೇ, ಹೇಗೆ ಸತ್ಪುರುಷರು ದಾನವನ್ನು ಮಾಡುತ್ತಾರೆ? ಇಲ್ಲಿ ಭಿಕ್ಷುಗಳೇ, ಸತ್ಪುರುಷರು ಗೌರವಾರ್ಪಣೆಯಿಂದ ದಾನ ಮಾಡುತ್ತಾರೆ. ತಮ್ಮ ಕೈಯಿಂದಲೇ ದಾನವನ್ನು ಮಾಡುತ್ತಾರೆ. ಪ್ರಜ್ಞಾಯುತವಾಗಿ ಶ್ರೇಷ್ಟವಾದುದನ್ನು ದಾನ ಮಾಡುತ್ತಾರೆ. ಪರಿಶುದ್ಧವಾದುದನ್ನೇ ದಾನ ಮಾಡುತ್ತಾರೆ. ಭವಿಷ್ಯವನ್ನು ಗಣನೆಗೆ ತೆಗೆದುಕೊಂಡು ದಾನ ಮಾಡುತ್ತಾರೆ. ಹೀಗೆ ಭಿಕ್ಷುಗಳೇ, ಸತ್ಪುರುಷರು ದಾನ ಮಾಡುತ್ತಾರೆ."

"ಭಿಕ್ಷುಗಳೇ, ಹೀಗೆ ಸತ್ಪುರುಷನು ಕುಶಲಚಿತ್ತ ಸ್ಥಿತಿಗಳನ್ನು ಹೊಂದಿರುತ್ತಾನೆ, ಸತ್ಪುರುಷರ ಜೊತೆಯಲ್ಲಿರುತ್ತಾನೆ, ಸತ್ಪುರುಷರಂತೆ ಚಿಂತಿಸುತ್ತಾನೆ, ಸತ್ಪುರುಷರಂತೆ ಬುದ್ಧಿವಾದನೀಡುತ್ತಾನೆ, ಸತ್ಪುರುಷರಂತೆಯೇ ಮಾತನಾಡುತ್ತಾನೆ, ಸತ್ಪುರುಷರಂತೆಯೇ ಕರ್ಮ ಮಾಡುತ್ತಾನೆ, ಸತ್ಪರುಷರಂತೆಯೇ ದೃಷ್ಟಿಕೋನಗಳನ್ನು ಹೊಂದಿರುತ್ತಾನೆ. ಸತ್ಪುರುಷರಂತೆ ದಾನವನ್ನು ಮಾಡುತ್ತಾನೆ. ಇಂತಹ ಸತ್ಪುರುಷನು ಮರಣದ ನಂತರವೂ ಸತ್ಪುರುಷರು ಇರುವಲ್ಲಿಯೇ ಜನ್ಮ ತಾಳುವನು ಅಂತಹ ಸ್ಥಿತಿ ಯಾವುದು? ಅದೇ ಮಹತ್ತರವಾದ ಸುಗತಿ ಅಥವಾ ಮಾನವರಲ್ಲಿ ಶ್ರೇಷ್ಠ ಸ್ಥಿತಿಯನ್ನು ಹೊಂದುತ್ತಾನೆ."

ಹೀಗೆ ಭಗವಾನರು ಹೇಳಿದಾಗ, ಭಿಕ್ಷುಗಳು ಆನಂದದಿಂದ ಅನುಮೋದನೆ ಮಾಡಿದರು.

Tuesday, 22 October 2019

ಅವಿಜ್ಜ ಸುತ್ತ (ಅವಿದ್ಯೆ/ಅಜ್ಞಾನದ ಸೂತ್ರ)

ಅವಿಜ್ಜ ಸುತ್ತ (ಅವಿದ್ಯೆ/ಅಜ್ಞಾನದ ಸೂತ್ರ)



ಒಬ್ಬ ಭಿಕ್ಷುವು ಭಗವಾನರಲ್ಲಿಗೆ ಹೋಗಿ ವಂದಿಸಿದನು, ನಂತರ ಒಂದು ಪಕ್ಕದಲ್ಲಿ ಕುಳಿತನು ಮತ್ತು ಹೀಗೆ ಹೇಳಿದನು: ಭಗವಾನ್ ಯಾವ ಒಂದು ವಿಷಯವನ್ನು ಭಿಕ್ಷುವು ವಜರ್ಿಸಿದಾಗ, ಆತನಲ್ಲಿನ ಅಜ್ಞಾನವು ಪರಿತ್ಯಜಿಸಲ್ಪಟ್ಟು ಆತನಲ್ಲಿ ಸ್ಪಷ್ಟ ಜ್ಞಾನವು ಉದಯಿಸುತ್ತದೆ?
ಹೌದು ಭಿಕ್ಷು, ಅಂತಹ ವಿಷಯವೊಂದಿದೆ. ಅದನ್ನು ಭಿಕ್ಷುವು ವಜರ್ಿಸಿದಾಗ ಆತನಲ್ಲಿನ ಅಜ್ಞಾನವು ಪರಿತ್ಯಜಿಸಲ್ಪಟ್ಟು ಆತನಲ್ಲಿ ಸ್ಪಷ್ಟ ಜ್ಞಾನವು ಉದಯಿಸುತ್ತದೆ.
ಆ ಒಂದು ವಿಷಯ ಯಾವುದು?
ಅಜ್ಞಾನವೇ ಭಿಕ್ಷುವೆ, ಇದನ್ನು ಭಿಕ್ಷುವು ವಜರ್ಿಸಿದಾಗ ಆತನ ಅಜ್ಞಾನವು ಪರಿತ್ಯಜಿಸಲ್ಪಟ್ಟು, ಆತನಲ್ಲಿ ಸ್ಪಷ್ಟ ಜ್ಞಾನವು ಉದಯಿಸುತ್ತದೆ.
ಆದರೆ ಅಜ್ಞಾನವು ಪರಿತ್ಯಜವಾಯಿತು ಮತ್ತು ಸ್ಪಷ್ಟ ಜ್ಞಾನವು ಉದಯಿಸುತ್ತದೆ ಎಂದು ಭಿಕ್ಷುವು ಹೇಗೆ ಅರಿಯುತ್ತಾನೆ ಮತ್ತು ಕಾಣುತ್ತಾನೆ?
ಒಮ್ಮೆ ಭಿಕ್ಷುವು ಹೀಗೆ ಕೇಳಿರುತ್ತಾನೆ: ಎಲ್ಲಾ ವಿಷಯಗಳು ಅಂಟುವಿಕೆಗೆ ಅನರ್ಹವಾಗಿದೆ. ಆಗ ಆತನಿಗೆ ನೇರವಾಗಿ ಪ್ರತಿಯೊಂದು ಅರಿವಿಗೆ ಬಂದಿರುತ್ತದೆ. ಆತನು ಎಲ್ಲವನ್ನು ಸೂಕ್ಷ್ಮವಾಗಿಯೇ ಗ್ರಹಿಸಿರುತ್ತಾನೆ. ಆತನು ಎಲ್ಲಾ ವಿಷಯಗಳನ್ನು ಯಾವುದೋ ರೀತಿಯಲ್ಲಿ ಪ್ರತ್ಯೇಕವಾಗಿ ಕಾಣುತ್ತಾನೆ.
ಆತನು ಕಣ್ಣನ್ನು ಬೇರೆಯಾಗಿ ಕಾಣುತ್ತಾನೆ, ಹಾಗೆಯೇ ದೃಶ್ಯಗಳನ್ನು ಬೇರೆಯಾಗಿ (ಪ್ರತ್ಯೇಕವಾಗಿ) ಕಾಣುತ್ತಾನೆ, ಅವೆರಡರಿಂದ ಉತ್ಪನ್ನವಾಗುವ ಕಣ್ಣಿನಿಂದಾದ ಅರಿವನ್ನು (ಚಕ್ಷು ವಿಞ್ಞಾನ) ಬೇರೆಯಾಗಿಯೇ ಕಾಣುತ್ತಾನೆ. ಹಾಗೆಯೇ ಕಣ್ಣು ಮತ್ತು ದೃಶ್ಯಗಳ ನಡುವಿನ ಸಂಪರ್ಕವನ್ನು (ಪಸ್ಸ/ಸ್ಪರ್ಶ) ಬೇರೆಯಾಗಿಯೇ ಕಾಣುತ್ತಾನೆ ಮತ್ತು ಯಾವುದೆಲ್ಲವು ಕಣ್ಣಿನ ಸಂಪರ್ಕದಿಂದಾಗಿ ಉದಯಿಸಿತೋ ಹೇಳುವುದಾದರೆ ಸುಖ, ದುಃಖ ಅಥವಾ ಸುಖವು-ದುಃಖವೂ ಅಲ್ಲದ, ಅವೆಲ್ಲವನ್ನು ಪ್ರತ್ಯೇಕವಾಗಿ ಕಾಣುತ್ತಾನೆ.
ಹಾಗೆಯೇ ಕಿವಿಯನ್ನು... ಮೂಗನ್ನು... ನಾಲಿಗೆಯನ್ನು... ದೇಹವನ್ನು ಪ್ರತ್ಯೇಕವಾಗಿ ಕಾಣುತ್ತಾನೆ. ಆತನು ಮನಸ್ಸನ್ನು ಪ್ರತ್ಯೇಕವಾಗಿ ಕಾಣುತ್ತಾನೆ, ಹಾಗೆಯೇ ಚಿತ್ತ ವಿಷಯಗಳನ್ನು ಪ್ರತ್ಯೇಕವಾಗಿ ಕಾಣುತ್ತಾನೆ, ಹಾಗೆಯೇ ಮನೋ ವಿಞ್ಞಾನವನ್ನು (ಮನಸ್ಸಿನಿಂದ ಅರಿಯುವಿಕೆಯನ್ನು) ಬೇರೆಯಾಗಿ ಕಾಣುತ್ತಾನೆ. ಮನಸ್ಸಿನ ಮತ್ತು ಮನೋ ವಿಷಯಗಳ ನಡುವಿನ ಸಂಪರ್ಕವನ್ನು ಬೇರೆಯಾಗಿ ಕಾಣುತ್ತಾನೆ. ಹಾಗೆಯೇ ಅಲ್ಲಿಂದ ಉತ್ಪನ್ನವಾದ ಸುಖ-ದುಃಖ, ಸುಖವು ಅಲ್ಲದ, ದುಃಖವು ಅಲ್ಲದ ವೇದನೆಗಳನ್ನು ಬೇರೆಯಾಗಿ ಕಾಣುತ್ತಾನೆ.
ಹೀಗೆ ಓ ಭಿಕ್ಷುವೇ, ಭಿಕ್ಷುವು ಅಜ್ಞಾನವು ಪರಿತ್ಯಜಿತವಾಗಿ, ಸ್ಪಷ್ಟ ಜ್ಞಾನವು ಉದಯಿಸುವುದನ್ನು ಭಿಕ್ಷು ಕಾಣುತ್ತಾನೆ.

Tuesday, 13 August 2019

Girimananda sutta in kannada ಗಿರಿಮಾನಂದ ಸುತ್ತ (ರೋಗಿಗಳ ಬಳಿ ಪಠಿಸುವ ಸುತ್ತ)

      ಗಿರಿಮಾನಂದ ಸುತ್ತ (ರೋಗಿಗಳ ಬಳಿ ಪಠಿಸುವ ಸುತ್ತ)

ಒಮ್ಮೆ ಭಗವಾನರು ಶ್ರಾವಸ್ಥಿಯ ಜೇತವನದ ಆನಾಥಪಿಂಡಿಕನ ವಿಹಾರದಲ್ಲಿ ತಂಗಿದ್ದರು. ಆ ಸಮಯದಲ್ಲಿ ಪೂಜ್ಯ ಗಿರಿಮಾನಂದರು ಅಸ್ವಸ್ಥರಾಗಿದ್ದರು. ಅವರ ಆರೋಗ್ಯ ತೀರ ಕೆಟ್ಟಿತ್ತು. ಆಗ ಪೂಜ್ಯ ಆನಂದರವರು ಭಗವಾನರ ಬಳಿಗೆ ಬಂದು ವಂದಿಸಿ ಒಂದೆಡೆ ಕುಳಿತು ಹೀಗೆ ನುಡಿದರು: :
 ಭಗವಾನ್ ಅಯುಷ್ಮಂತ ಗಿರಿಮಾನಂದರು ತೀರ ಅಸ್ವಸ್ಥರಾಗಿದ್ದಾರೆ ಅವರ ಆರೋಗ್ಯ ಗಂಭಿರವಾಗಿದೆ. ಅದ್ದರಿಂದ ಭಗವಾನರು ಅನುಕಂಪೆಯುಳ್ಳವರಾಗಿ ಅಲ್ಲಿಗೆ ಹೋಗುವಂತಾಗಲಿ.
ಆನಂದ ನೀನು ಆಯುಷ್ಮಂತ ಗಿರಿಮಾನಂದನಲ್ಲಿಗೆ ಹೋಗಿ ಈ 10 ಬಗೆಯ ಸಞ್ಞಗಳನ್ನು (ಸಂಜ್ಞೆ/ಗ್ರಹಿಕೆ) ಪಠಿಸಿದ್ದೆ ಆದರೆ , ಅದನ್ನು ಆಲಿಸಿ, ಅದರ ಬಗ್ಗೆ ಮನಸ್ಸು ಹರಿಸಿ ಆತನ ಚಿತ್ತವು ಸಕಾರಾತ್ಮಕವಾಗಿ ಆತನ ರೋಗವು ಆ ಸ್ಥಳದಲ್ಲಿಯೆ ಆ ಕ್ಷಣವೇ ಇಲ್ಲದಂತಾಗುವುದು.

 ಆನಂದ ಯಾವುವವು 10 ?ಅವೆಂದರೆ 

1. ಅನಿತ್ಯದ ಸಂಜ್ಞೆ
2. ಅನತ್ತ (ಆನಾತ್ಮದ ) ಸಂಜ್ಞೆ
3. ಅಶುಭದ ಕುರೂಪ (ಸಂಜ್ಞೆ)
4. ಅದಿನವದ (ಅನಾನುಕೂಲಗಳ) ಸಂಜ್ಞೆ
5. ಪಹಾನದ (ತೇಜಿಸಬೇಕಾದುದರ ಬಗ್ಗೆ ) ಸಂಜ್ಞೆ
6. ವಿರಾಗದ  (ರಾಗರಹಿತನಾಗುವಿಕೆಯ) ಸಂಜ್ಞೆ
7. ನಿರೋಧದ  (ನಿಲ್ಲಿಸುವಿಕೆಯ /ಉದಯಿಸುದಿರುವಿಕೆಯ) ಸಂಜ್ಞೆ
8. ಸಬ್ಬಲೋಕೇ ಅಭಿರತನ (ಎಲ್ಲಾ ಲೋಕಗಳ ಬಗೆಗಿನ ಆಸಕ್ತಿ ಇಲ್ಲದಿರುವಿಕೆಯ )ಸಂಜ್ಞೆ
9. ಸರ್ವ ಸಂಖಾರಗಳಲ್ಲಿ ಅನಿತ್ಯದ ಸಂಜ್ಞೆ
10. ಅನಾಪಾನ ಸತಿ

1.ಮತ್ತೆ ಯಾವುದು ಅನಿತ್ಯದ ಸಂಜ್ಞೆ ? 
ಇಲ್ಲಿ ಭಿಕ್ಖುವು ಅಥವಾ ಸಾಧಕನು ಕಾಡಿಗೆ ಹೋಗಿ ಅಥವಾ ಮರದ ಬುಡಕ್ಕೆ, ಅಥವಾ ಖಾಲಿಯಾದ ಗೃಹದಲ್ಲಿ, ಹೋಗಿ ಹೀಗೆ ಚಿಂತನೆ ಮಾಡುತ್ತಾನೆ ದೇಹವಾಗಲಿ, ಭಾವವೇಶಗಳಾಗಲಿ (ವೇದನೆ), ಸಂಜ್ಞೇಗಳಾಗಲಿ, ಸಂಖಾರಗಳಾಗಲಿ(ಇಚ್ಚೆ) ಮತ್ತು ವಿಜ್ಞಾಣ(ಮನಸ್ಥಿತಿ/ಅರಿವು)ಗಳಾಗಲಿ ಇವೆಲ್ಲವೂ ಅನಿತ್ಯವಾಗಿದೆ ಹೀಗೆ ಆತನು ಪಂಚಖಂದಗಳಲ್ಲಿ ಅನಿತ್ಯಗಳನ್ನು ಧ್ಯಾನದಲ್ಲಿ ಕಾಣುವನು.. ಇದಕ್ಕೆ ಅನಿತ್ಯದ ಸಂಜ್ಞೆ ಎನ್ನುವರು.

 2. ಮತ್ತೆ ಯಾವುದು ಅನತ್ತ (ಆನಾತ್ಮದ ) ಸಂಜ್ಞೆ ? 
ಇಲ್ಲಿ ಭಿಕ್ಖುವು ಅಥವಾ ಸಾಧಕನು ಕಾಡಿಗೆ ಹೋಗಿ ಅಥವಾ ಮರದ ಬುಡಕ್ಕೆ, ಅಥವಾ ಖಾಲಿಯಾದ ಗೃಹದಲ್ಲಿ, ಹೋಗಿ ಹೀಗೆ ಚಿಂತನೆ ಮಾಡುತ್ತಾನೆ : ಕಣ್ನು ಆಗಲಿ ಅಥವಾ ಅವುಗಳಿಂದ ನೋಡಲ್ಪಡುವ ರೂಪಗಳಾಗಲಿ ಹಾಗೆಯೇ ಕಿವಿ ಮತ್ತು ಶಬ್ದಗಳು: ; ಮೂಗು ಮತ್ತು ವಾಸನೆಗಳು ; ನಾಲಿಗೆ ಮತ್ತು ಸ್ವಾದಗಳು :ದೇಹ ಮತ್ತು ಸ್ಪರ್ಷಗಳು ; ಮತ್ತು ಮನಸ್ಸು ಮತ್ತು ಮಾನಸಿಕ ವಿಷಯಗಳು. ಇವು ಯಾವುವು ಸಹಾ ನಾನಲ್ಲ ,ನನ್ನದಲ್ಲ, ನನ್ನ ಆತ್ಮವಲ್ಲ, ಎಂದು ಅರಿಯುವುದು. ಹೀಗೆ ಆರು ಇಂದ್ರಿಯಗಳು ಹಾಗೂ ಅವುಗಳ ವಿಷಯಗಳಲ್ಲಿ ಆನಾತ್ಮವನ್ನು ಕಾಣುವುದು ಅಂದರೆ ಆವು ಯಾವುದರಲ್ಲಿಯೂ ಸಹಾ ಆತ್ಮವನ್ನು (ಸ್ವಯಂ/ನಾನು/ನನ್ನದು) ಕಾಣದಿರುವುದು.

   3. ಮತ್ತೆ ಯಾವುದು ಅಶುಭದ (ಕುರೂಪ )ಸಂಜ್ಞೆ? 
ಇಲ್ಲಿ ಭಿಕ್ಖುವು ಅಥವಾ ಸಾಧಕನು ಕಾಡಿಗೆ ಹೋಗಿ ಅಥವಾ ಮರದ ಬುಡಕ್ಕೆ, ಅಥವಾ ಖಾಲಿಯಾದ ಗೃಹದಲ್ಲಿ, ಹೋಗಿ ಹೀಗೆ ಚಿಂತನೆ ಮಾಡುತ್ತಾನೆ : ಇಲ್ಲಿ ಭಿಕ್ಖುವು ಪಾದತಳದಿಂದ ಹಿಡಿದು ತಲೆಕೂದಲವರೆವಿಗೂ ಈ ಶರೀರವೂ ಚರ್ಮದಿಂದ ಆವೃತವಾದ ಅನೇಕ ಬಗೆಯ ಅಸಹ್ಯತೆಗಳಿಂದ  ಕೂಡಿರುವುದನ್ನು ಹೀಗೆ ಪರಿಕ್ಷಿಸುತ್ತಾನೆ.  ಈ ಶರೀರದಲ್ಲಿ ತಲೆಕೂದಲು, ಶರೀರದ ಕೂದಲು, ಉಗುರುಗಳು, ಹಲ್ಲುಗಳು, ಚರ್ಮ, ಮಾಂಸ, ಸ್ನಾಯುಗಳು, ಮೂಳೆಗಳು,, ಅಸ್ಥಿಮಜ್ಜೆ, , ಮೂತ್ರಪಿಂಡ, ಹೃದಯ, ಯಕೃತ್, ದ್ವನಿಪೆಟ್ಟಿಗೆ, ಗುಲ್ಮ, ಶ್ವಾಸಕೋಶ, ಕರುಳು, ಜಠರ, ಜೀರ್ಣವಾಗದ ಆಹಾರ, ಮಲ, ಪಿತ್ತ,, ಕಫ, ಕೀವು,, ರಕ್ತ, ಬೆವರು, ,ಕೊಬ್ಬು, ಆಶ್ರು, ಮೆದಸ್ಸು, ಜೊಲ್ಲು, ಗೊಣ್ಣೆ, ಕೀಲುಗಳ ಮಧ್ಯೆಯಿರುವ ಎಣ್ಣೆ, ಮೂತ್ರ, ಇತ್ಯಾದಿಗಳು ಇವೆ. ಹೀಗೆ ಶರೀರದ ಕುರೂಪವನ್ನು ಅರಿಯುತ್ತ ಅಸಹ್ಯಕರದ ಸಂಜ್ಞೆಗಳನ್ನು ಅರಿಯುತ್ತ ಬೆಳಸುತ್ತಾನೆ. ಇದನ್ನು ಅಶುಭದ ಸಂಜ್ಞೆ ಎನ್ನುವರು.


   4. ಮತ್ತೆ ಯಾವುದು ಅದಿನವದ (ಅನಾನುಕೂಲಗಳ) ಸಂಜ್ಞೆ ? 
ಇಲ್ಲಿ ಭಿಕ್ಖುವು ಅಥವಾ ಸಾಧಕನು ಕಾಡಿಗೆ ಹೋಗಿ ಅಥವಾ ಮರದ ಬುಡಕ್ಕೆ, ಅಥವಾ ಖಾಲಿಯಾದ ಗೃಹದಲ್ಲಿ, ಹೋಗಿ ಹೀಗೆ ಚಿಂತನೆ ಮಾಡುತ್ತಾನೆ : ಈ ಶರೀರವು ಬಹಳಷ್ಟು ದುಃಖಗಳನ್ನು ಮತ್ತು ಹಲವಾರು ಅನಾನುಕೂಲಗಳನ್ನು ಹೊಂದಿದೆ. ಅದರಿಂದಾಗಿಯೇ ಈ ಶರೀರವು ಬಹಳಷ್ಟು ವಿಧದ ಕಾಯಿಲೆಗಳಿಗೆ ಗುರಿಯಾಗುವುದು, ಉದಾಹರಿಸುವುದಾದರೆ ಕಣ್ಣಿನ ಕಾಯಿಲೆ, ಒಳಕಿವಿಯ ಕಾಯಿಲೆ, ಮೂಗಿನ ಕಾಯಿಲೆ, ನಾಲಿಗೆಗೆ ಸಂಬಂಧ ಪಟ್ಟ ಕಾಯಿಲೆಗಳು, ದೇಹ, ತಲೆ, ಕಿವಿ, ಹಲ್ಲುನೋವು,  ಮತ್ತು ತುಟಿಗಳ ಕಾಯಿಲೆ, ಕೆಮ್ಮು, ಅಸ್ತಮ, ನೆಗಡಿ, ಉರಿ, ಜ್ವರ, ಹೊಟ್ಟೆನೋವು, ತಲೆತಿರುಗುವಿಕೆ, ಆಮಶಂಕೆ, ಜಠರ ನೋವು, ಕಾಲೆರಾ, ಕುಷ್ಠರೋಗ, ಗುಳ್ಳೆಗಳು, ಚರ್ಮರೋಗಗಳು, ಕ್ಷಯರೋಗ, ಮೂಚರ್ೆರೋಗ,, ಸರ್ಪಸುತ್ತು ಚರ್ಮ ರೋಗ, ತುರಿಕೆ, ಕಜ್ಜಿ, ಸಿಡುಬು ರೋಗ, ಹಕ್ಕಳೆ ರೋಗ, ರಕ್ತಸ್ರಾವ, ಮಧುಮೇಹ, ಮೂಲವ್ಯಾಧಿ, ಮೊಡಮೆ, ಮತ್ತು ಕೀವು ವ್ರಣ, ಪಿತ್ತ ಅಥವಾ ಕಫ ಅಥವಾ ವಾತದ ಅವ್ಯವಸ್ಥೆಯಿಂದಾಗುವ ರೋಗಗಳು, ವಾತವರಣದ ಅವ್ಯವಸ್ಥೆಯಿಂದಾಗುವ ರೋಗಗಳು, ನಿರ್ಲಕ್ಷತೆಯಿಂದ ಉಂಟಾಗುವ ರೋಗಗಳು, ಅತಿಶ್ರಮದಿಂದ ಅಥವಾ ಹಿಂದಿನ ಕಮ್ಮಗಳಿಂದ ಉಂಟಾಗುವ ರೋಗಗಳು, ಚಳಿ, ಉಷ,, ಹಸಿವು, ಬಾಯಾರಿಕೆ, ನಿರ್ಜಲಿಕರಣ, ಮೂತ್ರವ್ಯಾದಿಗಳು, ಮತ್ತು ಇತ್ಯಾದಿ. ಹೀಗೆ ಹಲವಾರು ದೋಷಗಳಿಂದ ಕೋಡಿರುವ ಶರೀರವನ್ನು ವೀಕ್ಷಿಸುತ್ತಾನೆ, ಇದಕ್ಕೆ ಶರೀರದ ಅನಾನೂಕಲಗಳ ಸಂಜ್ಞೆ ಎನ್ನುತ್ತಾರೆ.

5. ಮತ್ತೆ ಯಾವುದು ಪಹಾನದ (ತೇಜಿಸಬೇಕಾದುದರ ಬಗ್ಗೆ )ಸಂಜ್ಞೆ ?
 ಇಲ್ಲಿ ಭಿಕ್ಖುವು ಅಥವಾ ಸಾಧಕನು ಕಾಡಿಗೆ ಹೋಗಿ ಅಥವಾ ಮರದ ಬುಡಕ್ಕೆ, ಅಥವಾ ಖಾಲಿಯಾದ ಗೃಹದಲ್ಲಿ, ಹೋಗಿ ಹೀಗೆ ಚಿಂತನೆ ಮಾಡುತ್ತಾನೆ : ಇಲ್ಲಿ ಭಿಕ್ಖುವು ಕಾಮುಕತೆಗಳ ಯೋಚನೆಗಳಾಗಲಿ, ಅಥವಾ ದ್ವೇಷಗಳ ಯೋಚನೆಗಳಾಗಲಿ ಅಥವಾ ಹಿಂಸೆ(ಕ್ರೂರತೆ )ಗಳ ಯೋಚನೆಗಳಾಗಲಿ ಅವು ಉಂಟಾದಾಗ ಸಹಿಸುವುದಿಲ್ಲ, ಅಕುಶಲ ಯೋಚನೆಗಳು ಯಾವುವೇ ಆಗಲಿ ಅವು ಉದಯಿಸುವಾಗ ಸಹಿಸಲಾರನು, ಬದಲಾಗಿ ಅವುಗಳನ್ನು ತೊರೆಯುತ್ತಾನೆ, ತೆಗೆದು ಹಾಕುತ್ತಾನೆ, ಇನ್ನಿಲ್ಲದಂತೆ ಮಾಡುತ್ತಾನೆ, ಮತ್ತು ನಿನರ್ಾಮ ಮಾಡಿಹಾಕುತ್ತಾನೆ, ಇದನ್ನು ತ್ಯೇಜಿಸಬೇಕಾದುದರ ಸಂಜ್ಞೆ ಎನ್ನುತ್ತಾರೆ.

6. ಮತ್ತೆ ಯಾವುದು ವಿರಾಗದ  (ರಾಗರಹಿತನಾಗುವಿಕೆಯ) ಸಂಜ್ಞೆ ?
 ಇಲ್ಲಿ ಭಿಕ್ಖುವು ಅಥವಾ ಸಾಧಕನು ಕಾಡಿಗೆ ಹೋಗಿ ಅಥವಾ ಮರದ ಬುಡಕ್ಕೆ, ಅಥವಾ ಖಾಲಿಯಾದ ಗೃಹದಲ್ಲಿ, ಹೋಗಿ ಹೀಗೆ ಚಿಂತನೆ ಮಾಡುತ್ತಾನೆ : ಇದೇ ಶಾಂತಿಯಾಗಿದೆ, ಇದೇ ಉದಾತ್ತವಾಗಿದೆ,  ಅದೇಂದರೆ ಎಲ್ಲಾ ಚಟುವಟಿಕೆ(ಸಂಖಾರ)ೆಗಳನ್ನು ಸ್ತಬ್ದಗೊಳಿಸುವಿಕೆ, ಎಲ್ಲಾ ಬಗೆಯ ಅಂಟುವಿಕೆಗಳನ್ನು ಬಿಟ್ಟುಬಿಡುವಿಕೆ, ತೃಷ್ಣೆಯ ಕ್ಷಯಗೊಳಿಸುವಿಕೆ, ವಿರಾಗತಾಳುವಿಕೆ, ನಂದಿಸುವಿಕೆ(ನಿಬ್ಬಾಣ). ಇವನ್ನೆ ವಿರಾಗದ ಸಂಜ್ಞೆಗಳು ಎನ್ನುವರು.

7.  ಮತ್ತೆ ಯಾವುದು ನಿರೋಧದ  (ನಿಲ್ಲಿಸುವಿಕೆಯ /ಉದಯಿಸುದಿರುವಿಕೆಯ) ಸಂಜ್ಞೆ ? 
ಇಲ್ಲಿ ಭಿಕ್ಖುವು ಅಥವಾ ಸಾಧಕನು ಕಾಡಿಗೆ ಹೋಗಿ ಅಥವಾ ಮರದ ಬುಡಕ್ಕೆ, ಅಥವಾ ಖಾಲಿಯಾದ ಗೃಹದಲ್ಲಿ, ಹೋಗಿ ಹೀಗೆ ಚಿಂತನೆ ಮಾಡುತ್ತಾನೆ : : ಇದೇ ಶಾಂತಿಯಾಗಿದೆ, ಇದೇ ಉದಾತ್ತವಾಗಿದೆ,  ಅದೇಂದರೆ ಎಲ್ಲಾ ಚಟುವಟಿಕ(ಸಂಖಾರ)ೆಗಳನ್ನು ಸ್ತಬ್ದಗೊಳಿಸುವಿಕೆ, ಎಲ್ಲಾ ಬಗೆಯ ಅಂಟುವಿಕೆಗಳನ್ನು ಬಿಟ್ಟುಬಿಡುವಿಕೆ, ತೃಷ್ಣೆಯ ಕ್ಷಯಗೊಳಿಸುವಿಕೆ, ನಿರೋಧ ತಾಳುವಿಕೆ, ನಂದಿಸುವಿಕೆ(ನಿಬ್ಬಾಣ)ೆ. ಇವನ್ನೆ ನಿರೋಧದ ಸಂಜ್ಞೆಗಳು ಎನ್ನುವರು.

8.  ಮತ್ತೆ ಯಾವುದು ಸಬ್ಬಲೋಕೇ ಅಭಿರತನ (ಎಲ್ಲಾ ಲೋಕಗಳ ಬಗೆಗಿನ ಆಸಕ್ತಿ ಇಲ್ಲದಿರುವಿಕೆಯ )ಸಂಜ್ಞೆ? 
ಇಲ್ಲಿ ಭಿಕ್ಖುವು ಲೋಕಗಳ ಬಗ್ಗೆ ಯಾವುದೇ ರೀತಿಯಲ್ಲೂ ಅಂಟಿಕೊಳ್ಳದೆ, ಈ ಹಿಂದಿನ ಎಲ್ಲವನ್ನು ಬಿಟ್ಟು, ಯಾವುದರಲ್ಲು ಆಕಷರ್ಿತನಾಗದೆ, ಹಿಡಿದುಕೊಳ್ಳದೆ, ಹಾಗೇಯೇ ೆ ಹುದುಗಿರುವ ಅನುಶಯಗಳ ಬಗ್ಗೆ ,ಇಚ್ಚೆಪಡದೆ, ದೃಡನಿಧರ್ಾರ ತಾಳದೆ ಹೀಗೆ ತೊರೆದು ಉಪಾದಿಯಿಲ್ಲದೆ ವಿಹರಿಸುತ್ತಾನೆ, ಇದನ್ನೆ ಸಬ್ಬಲೋಕೇ ಅಭಿರತನ (ಎಲ್ಲಾ ಲೋಕಗಳ ಬಗೆಗಿನ ಆಸಕ್ತಿ ಇಲ್ಲದಿರುವಿಕೆಯ )ಸಂಜ್ಞೆ ಎನ್ನುವರು.

9. ಮತ್ತೆ ಯಾವುದು ಸರ್ವ ಸಂಖಾರಗಳಲ್ಲಿ ಅನಿತ್ಯದ ಸಂಜ್ಞೆ ?
 ಇಲ್ಲಿ ಭಿಕ್ಖುವು ಎಲ್ಲಾ ಸಂಖಾರಗಳಲ್ಲಿ (ಚಟುವಟಿಕೆ) ಭಯಭೀತನಾಗಿ, ವಿಕಷರ್ಿತನಾಗಿ, ಜಿಗುಪ್ಸೆ ತಾಳುತ್ತಾನೆ, ಇದನ್ನೆ ಸರ್ವ ಸಂಖಾರಗಳಲ್ಲಿ ಅನಿತ್ಯದ ಸಂಜ್ಞೆ ಎನ್ನುತ್ತಾರೆ.

10.ಮತ್ತೆ ಯಾವುದು ಅನಾಪಾನ ಸತಿ? 
ಇಲ್ಲಿ ಭಿಕ್ಷುವು ಅರಣ್ಯದಲ್ಲಿ, ಮರದ ಬುಡದಲ್ಲಿ ಅಥವ ಶೂನ್ಯಗೃಹದಲ್ಲಿ, ಪದ್ಮಾಸನದಲ್ಲಿ ಅಸೀನನಾಗಿ, ತನ್ನ ದೇಹವನ್ನು ನೇರವಾಗಿಟ್ಟುಕೊಂಡು ಮತ್ತು ಸದಾ ಉಶ್ವಾಸ ಮತ್ತು ನಿಶ್ವಾಸದಲ್ಲಿಯೇ ಜಾಗರೂಕತೆಯನ್ನು ಸ್ಥಾಪಿಸಿ ಸಾಧನೆ ಮಾಡುತ್ತಿರುತ್ತಾನೆ. 
1. ಉಸಿರಾಟವು ದೀರ್ಘವಾಗಿದ್ದರೆ ನಾನು ದೀರ್ಘವಾದ ಉಸಿರನ್ನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಅರಿಯುತ್ತಿರುತ್ತಾನೆ. 
2. ಉಸಿರಾಟವು ಕಿರಿದಾಗಿದ್ದರೆ ನಾನು ಕಿರಿದಾದ ಉಸಿರನ್ನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಅರಿಯುತ್ತಾನೆ. 
3. ಇಡೀ ಉಸಿರಿನ ಕಾಯವನ್ನು ಅನುಭವಿಸಿದವನಾಗಿ ನಾನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ತನಗೆ ತಾನೇ ಸುಶಿಕ್ಷಣ ಪಡೆಯುತ್ತಾನೆ.
4. ಉಸಿರು ಕಾಯದ ಸಂಖಾರಗಳನ್ನು (ಚಟುವಟಿಕೆ) ಶಾಂತಗೊಳಿಸಿ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ತನಗೆ ತಾನೇ ಸುಶಿಕ್ಷಣ ಪಡೆಯುತ್ತಾನೆ. (ಇವಿಷ್ಟು ಅನುಪಾನ ಕಾಯನುಪಸ್ಸನವಾಗಿದೆ).
5. ಆನಂದವನ್ನು (ಪ್ರೀತಿ) ಅನುಭವಿಸಿದವನಾಗಿ ನಾನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನಗೆ ತಾನೇ ಸುಶಿಕ್ಷಣ ಪಡೆಯುತ್ತಾನೆ.
6. ಶಾಂತತೆಯನ್ನು (ಸುಖ) ಅನುಭವಿಸಿದವನಾಗಿ ನಾನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನಗೆ ತಾನೇ ಸುಶಿಕ್ಷಣ ಪಡೆಯುತ್ತಾನೆ.
7. ಚಿತ್ತದ ಚಟುವಟಿಕೆಗಳನ್ನೆಲ್ಲಾ ಅನುಭವಿಸಿ ನಾನು ಉಶ್ವಾಸಿಸುತ್ತಿರುವೆ ಅಥವಾ ನಿಶ್ವಾಸಿಸುತ್ತಿರುವೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
8. ಚಿತ್ತದ ಚಟುವಟಿಕೆಗಳನ್ನೆಲ್ಲಾ (ಸಂಖಾರಗಳನ್ನು) ಶಾಂತಗೊಳಿಸಿದವನಾಗಿ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ. (ಇವಿಷ್ಟು ಅನಾಪಾನಾ ವೇದನಾನುಪಸ್ಸನವಾಗಿದೆ).
9. ಚಿತ್ತವನ್ನು ಅನುಭವಿಸಿದವನಾಗಿ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಅತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
10. ಚಿತ್ತವನ್ನು ಸಂತೃಪ್ತಿಗೊಳಿಸುತ್ತಾ (ಆನಂದಗೊಳಿಸುತ್ತಾ) ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
11. ಚಿತ್ತವನ್ನು ಸ್ಥಿರ (ಏಕಾಗ್ರ)ಗೊಳಿಸುತ್ತಾ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
12. ಚಿತ್ತವನ್ನು ವಿಮೋಚನೆಗೊಳಿಸುತ್ತಾ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ. (ಇವಿಷ್ಟು ಅನಾಪಾನಾ ಚಿತ್ತಾನುಪಸ್ಸನವಾಗಿದೆ).
13. ಅನಿತ್ಯತೆಯನ್ನು ಗಮನಿಸುತ್ತಾ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
14. ವಿರಾಗವನ್ನು ಗಮನಿಸುತ್ತಾ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
15. ನಿರೋಧವನ್ನು ಗಮನಿಸಿ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
16. ತ್ಯಜಿಸುವಿಕೆ (ಪಟಿನಿಸ್ಸ) ಗಮನಿಸುತ್ತಾ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ. (ಇವಿಷ್ಟು ಅನಾಪಾನಾ ಧಮ್ಮಾನುಪಸ್ಸನವಾಗಿದೆ).

ಹೀಗೆ ನೀವು ಬಿಕ್ಖು ಗಿರಿಮಾನಂದನ ಬಳಿಯಲ್ಲಿ ಈ 10 ಸಂಜ್ಞೆಗಳನ್ನು ಪಠಿಸಿದರೆ , ಇದನ್ನು ಆಲಿಸಿ ಅಥರ್ೈಸಿಕೊಂಡ ನಂತರ ಆ ಕ್ಷಣದಲೇ ಅಲ್ಲಿಯೇ ಆತನ ಕಾಯಿಲೆಯು ನಾಷವಾಗುವುದು.

ನಂತರ ಆನಂದರವರು ಆ ಸುತ್ತವನ್ನು ಭಗವಾನರಿಂದ ಆಲಿಸಿ ನೆನಪಿನಲ್ಲಿಟ್ಟುಕೊಂಡು ಗಿರಿವéಾನಂದರ ಬಳಿಗೆ ಹೋದರು ಹಾಗು ಈ ಸುತ್ತವನ್ನು ಅದರಲ್ಲಿಯ 10 ಸಂಜ್ಞೆಗಳನ್ನು ಪಠಿಸಿದಾಗ ಗಿರಿಮಾನಂದರ ಕಾಯಿಲೆಯು ಆ ಕ್ಷಣದಲ್ಲಿಯೇ ಅಲ್ಲಿಯೇ ಇನ್ನಿಲ್ಲದಂತಾಯಿತು. ಹೀಗೆ ಅವರು ರೋಗದಿಂದ ಮುಕ್ತರಾದರು.
(ಅಂದಿನಿಂದ ಇಲ್ಲಿಯತನಕ ಈ ಸುತ್ತವನ್ನು ರೋಗಿಗಳ ಬಳಿಯಲ್ಲಿ ಪಠಿಸುತ್ತಾರೆ. ಅದನ್ನು ಆಲಿಸಿ ಅಥರ್ೈಸಿಕೊಂಡವರು ರೋಗಗಳಿಂದ ಮುಕ್ತರಾದಂತಹ ಬಹಳಷ್ಡು ನಿದರ್ಶನಗಳು ಇವೆ.)








Thursday, 28 March 2019

dakkhina vibhanga sutta in kannada ದಕ್ಖಿಣಾ ವಿಭಂಗ ಸುತ್ತ (ದಾನದ ವಿಶ್ಲೇಷಣೆಯ ಸುತ್ತ)

                                         ದಕ್ಖಿಣಾ ವಿಭಂಗ ಸುತ್ತ
                                    (ದಾನದ ವಿಶ್ಲೇಷಣೆಯ ಸುತ್ತ)



  

(ಸಂಘಕ್ಕೆ ನೀಡುವ ದಾನವೂ ವೈಯಕ್ತಿಕ ದಾನಕ್ಕಿಂತಲೂ ಅತಿ ಹೆಚ್ಚು ಫಲಯುತ)


ನಾನು ಹೀಗೆ ಕೇಳಿದ್ದೇನೆ, ಆ ಸಮಯದಲ್ಲಿ ಬುದ್ಧ ಭಗವಾನರು ಶಾಕ್ಯರ ನಾಡಿನ ಕಪಿಲವಸ್ತುವಿನ ಆಲದ ಮರಗಳ(ನಿಗ್ರೋಧರಾಮ) ವಿಹಾರದಲ್ಲಿದ್ದರು,  ಆಗ ಮಾತೆಯಾದ ಮಹಾಪಜಾಪತಿ ಗೋತಮಿಯು ಭಗವಾನರ ಬಳಿಗೆ ಒಂದು ಜೋತೆ ವಸ್ತ್ರಗಳೊಂದಿಗೆ ಬಂದರು. ಆಕೆಯು ವಂದಿಸಿ ಒಂದೆಡೆ ಕುಳಿತುಕೊಂಡರು ನಂತರ ಭಗವಾನರೊಂದಿಗೆ ಹೀಗೆ ನುಡಿದರು :
 ಭಂತೆ ಇವನ್ನು ನಾನೇ ಸ್ವತಃ ನೆಯ್ದು ಹಾಗೂ ಹೆಣೆದು ಈ ವಸ್ತ್ರಗಳನ್ನು ಭಗವಾನರಿಗೆಂದೇ ತಂದಿರುವೆ ಭಗವಾನರು ದಯೆಯಿಂದ ಇವನ್ನು ಸ್ವೀಕರಿಸಬೇಕು, ಹೀಗೆ ಆಕೆಯು ನುಡಿದಾಗ ಭಗವಾನರು ಆಕೆಗೆ ಹೀಗೆ ನುಡಿದರು :
   ಸಂಘಕ್ಕೆ ದಾನವ ನೀಡು ಮಾತೆ ಗೋತಮಿ, ಯಾವಾಗ ನೀವು ಸಂಘಕ್ಕೆ ನೀಡುವಿರೊ ಆಗ ಸಂಘ ಹಾಗೂ ನಾನು ಜೋತೆಯಾಗಿಯೇ ಗೌರವಕ್ಕೆ ಪಾತ್ರರಾಗುವೆವು.
 ಆಗ ಆಕೆಯು ಎರಡನೆಯ ಬಾರಿ ಹೀಗೆ ನುಡಿದರು :  ಭಂತೆ ಇವನ್ನು ನಾನೇ ಸ್ವತಃ ನೆಯ್ದು ಹಾಗೂ ಹೆಣೆದು ಈ ವಸ್ತ್ರಗಳನ್ನು ಭಗವಾನರಿಗೆಂದೇ ತಂದಿರುವೆ ಭಗವಾನರು ದಯೆಯಿಂದ ಇವನ್ನು ಸ್ವೀಕರಿಸಬೇಕು, ಹೀಗೆ ಆಕೆಯು ನುಡಿದಾಗ ಭಗವಾನರು ಎರಡನೆಯ ಬಾರಿ ಆಕೆಗೆ ಹೀಗೆ ನುಡಿದರು :
   ಸಂಘಕ್ಕೆ ದಾನವ ನೀಡು ಮಾತೆ ಗೋತಮಿ, ಯಾವಾಗ ನೀವು ಸಂಘಕ್ಕೆ ನೀಡುವಿರೊ ಆಗ ಸಂಘ ಹಾಗೂ ನಾನು ಜೋತೆಯಾಗಿಯೇ ಗೌರವಕ್ಕೆ ಪಾತ್ರರಾಗುವೆವು.
  ಆಗ ಆಕೆಯು ಮೂರನೆೆಯ ಬಾರಿ ಹೀಗೆ ನುಡಿದರು :  ಭಂತೆ ಇವನ್ನು ನಾನೇ ಸ್ವತಃ ನೆಯ್ದು ಹಾಗೂ ಹೆಣೆದು ಈ ವಸ್ತ್ರಗಳನ್ನು ಭಗವಾನರಿಗೆಂದೇ ತಂದಿರುವೆ ಭಗವಾನರು ದಯೆಯಿಂದ ಇವನ್ನು ಸ್ವೀಕರಿಸಬೇಕು, ಹೀಗೆ ಆಕೆಯು ನುಡಿದಾಗ ಭಗವಾನರು ಮೂರನೆಯ ಬಾರಿ ಆಕೆಗೆ ಹೀಗೆ ನುಡಿದರು :
   ಸಂಘಕ್ಕೆ ದಾನವ ನೀಡು ಮಾತೆ ಗೋತಮಿ, ಯಾವಾಗ ನೀವು ಸಂಘಕ್ಕೆ ನೀಡುವಿರೊ ಆಗ ಸಂಘ ಹಾಗೂ ನಾನು ಜೋತೆಯಾಗಿಯೇ ಗೌರವಕ್ಕೆ ಪಾತ್ರರಾಗುವೆವು. ಯಾವಾಗ ಭಗವಾನರು ಹೀಗೆ ನುಡಿದರೋ ಆಗ ಪೂಜ್ಯ ಆನಂದರವರು ಮಧ್ಯೆ ಪ್ರವೇಶಿಸಿ ಹೀಗೆ ನುಡಿದರು :
ಭಗವಾನ್,  ಮಾತೆಯವರಾದ ಮಹಾಪಜಾಪತಿ ಗೋತಮಿಯವರ ಈ ವಸ್ತ್ರಗಳನ್ನು ದಯವಿಟ್ಟು ಸ್ವೀಕರಿಸಿರಿ, ಮಹಾಪಜಾಪತಿ ಗೋತಮಿಯು ತಮಗೆ ಆಪಾರ ಸಹಾಯಗಳನ್ನು ಮಾಡಿರುವರು, ಚಿಕ್ಕಮ್ಮರಾಗಿ ತಮಗೆ ಪೋಷಿಸಿದ್ದಾರೆ, ಲಾಲನೆಪಾಲನೆ ಮಾಡಿದ್ದಾರೆ, ತಮಗೆ ಹಾಲನ್ನು ಉಣಿಸಿದ್ದಾರೆ, ಯಾವಾಗ ಬೋದಿಸತ್ವರ ಮಾತೆಯು ಈ ಲೋಕದಿಂದ ಮೃತ್ಯುವಶರಾದರೋ ಆಗ ಈಕೆಯೇ ತನ್ನ ಸ್ವಪುತ್ರನಂತೆಯೇ ಎಲ್ಲಾ ರೀತಿಯಲ್ಲಿಯು ತಮಗೆ ಪೋಷಿಸಿಹಳು (ಮತ್ತು ಹೀಗಾಗಿ ಬುದ್ಧರು ಸಹಾ ಆಕೆಗೆ ಸಹಾಯ ಮಾಡಲೇಬೇಕು.)

 ಮತ್ತು ಭಗವಾನರೂ ಸಹಾ ಆಕೆಗೆ ತುಂಬ ಸಹಾಯ ಮಾಡುತ್ತಲೇ ಬಂದಿರುವರು, ಭಗವಾನರಿಂದಲೇ ಆಕೆಯು ಬುದ್ಧರಿಗೆ, ಧಮ್ಮಕ್ಕೆ, ಮತ್ತು ಸಂಘಕ್ಕೆ ಶರಣು ಹೋಗಿರುವರು, ಭಗವಾನರಿಂದಲೇ ಆಕೆಯು ಪ್ರಾಣಿಹತ್ಯೆಗಳನ್ನು ಮಾಡುವುದನ್ನು ತೋರೆದಿರುವರು, ಕೋಡದೆ ಇದ್ದುದ್ದನ್ನು ಸ್ವೀಕರಿಸುವುದಿಲ್ಲ, ಬ್ರಹ್ಮಚಾರ್ಯೆಯ ಜೀವನ ನಡೆಸುತಿಹರು, ಸುಳ್ಳು ಹೇಳಲಾರರು, ಮಾದಕ ಪಾನಿಯಗಳನ್ನು ಸ್ವೀಕರಿಸಲಾರರು,

 ತಿರತನಗಳಾದ ತಮಗೆ, ಧಮ್ಮಕ್ಕೆ, ಮತ್ತು ಸಂಘಕ್ಕೆ ಅಪಾರ ಶ್ರದ್ಧೆಯನ್ನು ಇಟ್ಟಿರುವರು, ಹಾಗೂ ಆರ್ಯರ ಶೀಲಗಳನ್ನು ಇಷ್ಟಪಟ್ಟು ಪಾಲಿಸುತಿಹರು. ಭಗವಾನರಿಂದಲೇ ಆಕೆಯು ಆರಿಯ ಸತ್ಯಗಳಾದ ದುಃಖ, ದುಃಖಸಮುದಯ, ದುಃಖನಿರೋಧ, ಮತ್ತು ಆರಿಯ ಅಷ್ಟಾಂಗ ಮಾರ್ಗದ ಬಗೆಗಿನ ಸಂಶಯಗಳನ್ನು ದಾಟಿರುವರು, ಹೀಗಾಗಿ ಭಗವಾನರು ಸಹಾ ಆಕೆಗೆ ಆಪಾರ ಸಹಾಯ ಮಾಡಿರುವರು.

ಇದು ಸತ್ಯ, ಆನಂದ. ಯಾವಾಗ ಒಬ್ಬನು ತಿಸರಣುವಿಗೆ ಶರಣು ಹೋಗಲು ಸಹಾಯ ಮಾಡಿರುವನೊ, ಅಂತಹವನಿಗೆ ಋಣ ತೀರಿಸುವುದು ಅಷ್ಟು ಸುಲಭವಲ್ಲ. ತಲೆಬಾಗಿ ವಂದಿಸುವುದರಿಂದಾಗಲಿ, ಮೇಲೇದ್ದು ಗೌರವಿಸುವುದರಿಂದಾಗಲಿ, ಕೈಜೋಡಿಸಿ ನಮಸ್ಕರಿಸುವುದರಿಂದಾಗಲಿ, ಮತ್ತು ವಿನಯವಿಧೇಯತೆಯಿಂದಾಗಲಿ, ಅಂತಹವರಿಗೆ ಚಿವರ ವಸ್ತ್ರಾದಿಗಳಿಂದ ದಾನಮಾಡುವುದರಿಂದಾಗಲಿ, ಆಹಾರ ಪಾನಿಯಗಳ ದಾನದಿಂದಾಗಲಿ, ವಸತಿ ನೀಡುವುದರಿಂದಾಗಲಿ, ರೋಗಿಯಾಗಿದ್ದಾಗ ಔಷಧಿಗಳನ್ನು ನೀಡುವುದರಿಂದಾಗಲಿ, ಅಂತಹವರಿಗೆ ಒಬ್ಬನು ಋಣವನ್ನು ತೀರಿಸಲಾರನು,
   ಮತ್ತೆ ಯಾವಾಗ ಒಬ್ಬನಿಂದಾಗಿ ಪಂಚಶೀಲಗಳಾದ ಪ್ರಾಣಿಹತ್ಯೆಗಳನ್ನು ಮಾಡುವುದನ್ನು ತೋರೆದಿರುವುದು, ಕೋಡದೆ ಇದ್ದುದ್ದನ್ನು ಸ್ವೀಕರಿಸದಿರುವುದು, ಬ್ರಹ್ಮಚಾರ್ಯೆಯ ಜೀವನ ನಡೆಸುವುದು, ಸುಳ್ಳು ಹೇಳದಿರುವುದು, ಮಾದಕ ಪಾನಿಯಗಳನ್ನು ಸ್ವೀಕರಿಸದಿರುವುದು,  ಅಂತಹ ಸಹಾಯ ಮಾಡಿದವರಿಗೆ ಋಣ ತೀರಿಸುವುದು ಅಷ್ಟು ಸುಲಭವಲ್ಲ, ತಲೆಬಾಗಿ ವಂದಿಸುವುದರಿಂದಾಗಲಿ, ಮೇಲೇದ್ದು ಗೌರವಿಸುವುದರಿಂದಾಗಲಿ, ಕೈಜೋಡಿಸಿ ನಮಸ್ಕರಿಸುವುದರಿಂದಾಗಲಿ, ಮತ್ತು ವಿನಯವಿಧೇಯತೆಯಿಂದಾಗಲಿ, ಅಂತಹವರಿಗೆ ಚಿವರ ವಸ್ತ್ರಾದಿಗಳಿಂದ ದಾನಮಾಡುವುದರಿಂದಾಗಲಿ, ಆಹಾರ ಪಾನಿಯಗಳ ದಾನದಿಂದಾಗಲಿ, ವಸತಿ ನೀಡುವುದರಿಂದಾಗಲಿ, ರೋಗಿಯಾಗಿದ್ದಾಗ ಔಷಧಿಗಳನ್ನು ನೀಡುವುದರಿಂದಾಗಲಿ, ಒಬ್ಬನು ಅಂತಹವರಿಗೆ ಋಣವನ್ನು ತೀರಿಸಲಾರನು.

    ಯಾವಾಗ ಒಬ್ಬನಿಂದಾಗಿ ತಿರತನಗಳಾದ ಬುದ್ಧರಿಗೆ, ಧಮ್ಮಕ್ಕೆ, ಮತ್ತು ಸಂಘಕ್ಕೆ ಅಪಾರ ಶ್ರದ್ಧೆಯನ್ನು ಇಟ್ಟಿರುವಂತಾಗುವರೋ, ಹಾಗೂ ಆರ್ಯರ ಶೀಲಗಳನ್ನು ಇಷ್ಟಪಟ್ಟು ಪಾಲಿಸುವಂತವರಾಗಿದ್ದಾರೋ ಅಂತಹ ಸಹಾಯ ಮಾಡಿದವರಿಗೆ ಋಣ ತೀರಿಸುವುದು ಅಷ್ಟು ಸುಲಭವಲ್ಲ, ತಲೆಬಾಗಿ ವಂದಿಸುವುದರಿಂದಾಗಲಿ, ಮೇಲೇದ್ದು ಗೌರವಿಸುವುದರಿಂದಾಗಲಿ, ಕೈಜೋಡಿಸಿ ನಮಸ್ಕರಿಸುವುದರಿಂದಾಗಲಿ, ಮತ್ತು ವಿನಯವಿಧೇಯತೆಯಿಂದಾಗಲಿ, ಅಂತಹವರಿಗೆ ಚಿವರ ವಸ್ತ್ರಾದಿಗಳಿಂದ ದಾನಮಾಡುವುದರಿಂದಾಗಲಿ, ಆಹಾರ ಪಾನಿಯಗಳ ದಾನದಿಂದಾಗಲಿ, ವಸತಿ ನೀಡುವುದರಿಂದಾಗಲಿ, ರೋಗಿಯಾಗಿದ್ದಾಗ ಔಷಧಿಗಳನ್ನು ನೀಡುವುದರಿಂದಾಗಲಿ, ಒಬ್ಬನು ಅಂತಹವರಿಗೆ ಋಣವನ್ನು ತೀರಿಸಲಾರನು.

     ಮತ್ತು ಯಾರಿಂದಾಗಿ ಆರಿಯ ಸತ್ಯಗಳಾದ ದುಃಖ, ದುಃಖಸಮುದಯ, ದುಃಖನಿರೋಧ, ಮತ್ತು ದುಃಖ ನಿರೋಧದ ಮಾರ್ಗವಾದ ಆರಿಯ ಅಷ್ಟಾಂಗ ಮಾರ್ಗದ ಬಗೆಗಿನ ಮಾಹಿತಿಗಳನ್ನು ತಿಳಿದು ಅವುಗಳ ಬಗೆಗಿನ ಸಂಶಯಗಳನ್ನು ದಾಟಿರುವರೋ ಅಂತಹ ಸಹಾಯ ಮಾಡಿದವರಿಗೆ ಋಣ ತೀರಿಸುವುದು ಅಷ್ಟು ಸುಲಭವಲ್ಲ, ತಲೆಬಾಗಿ ವಂದಿಸುವುದರಿಂದಾಗಲಿ, ಮೇಲೇದ್ದು ಗೌರವಿಸುವುದರಿಂದಾಗಲಿ, ಕೈಜೋಡಿಸಿ ನಮಸ್ಕರಿಸುವುದರಿಂದಾಗಲಿ, ಮತ್ತು ವಿನಯವಿಧೇಯತೆಯಿಂದಾಗಲಿ, ಅಂತಹವರಿಗೆ ಚಿವರ ವಸ್ತ್ರಾದಿಗಳಿಂದ ದಾನಮಾಡುವುದರಿಂದಾಗಲಿ, ಆಹಾರ ಪಾನಿಯಗಳ ದಾನದಿಂದಾಗಲಿ, ವಸತಿ ನೀಡುವುದರಿಂದಾಗಲಿ, ರೋಗಿಯಾಗಿದ್ದಾಗ ಔಷಧಿಗಳನ್ನು ನೀಡುವುದರಿಂದಾಗಲಿ, ಒಬ್ಬನು ಅಂತಹವರಿಗೆ ಋಣವನ್ನು ತೀರಿಸಲಾರನು.

   ಆನಂದ ಹದಿನಾಲ್ಕು ಬಗೆಯ ವೈಯಕ್ತಿಕದಾನಗಳಿವೆ. ಯಾವುವವು 14 ? ಅವೆಂದರೇ ಒಬ್ಬನು ತಥಾಗತರು, ಅರಹಂತರು ಆದ ಸಮ್ಮಸಂಬುದ್ಧರಿಗೆ ದಾನವನ್ನು ನೀಡುತ್ತಾನೆ. ಇದು ಮೊದಲನೆಯ ವೈಯಕ್ತಿಕ ದಾನವಾಗಿದೆ. ಒಬ್ಬನು ಪಚ್ಚೆಕ ಬುದ್ಧರಿಗೆ ದಾನವನ್ನು ನೀಡುತ್ತಾನೆ, ಇದು ಎರಡನೆಯ ವೈಯಕ್ತಿಕದಾನವಾಗಿದೆ. ಒಬ್ಬನು ತಥಾಗತರ ಶ್ರಾವಕರಾದ ಅರಹಂತರಿಗೆ ದಾನವನ್ನು ಮಾಡುತ್ತಾನೆ. ಇದು ಮೂರನೆಯ ವೈಯಕ್ತಿಕ ದಾನವಾಗಿದೆ. ಒಬ್ಬನು ಅರಹಂತ ಫಲವನ್ನು ಸಾಕ್ಷತ್ಕರಿಸುವ ಮಾರ್ಗದಲ್ಲಿರುವವನಿಗೆ ದಾನ ನೀಡುತ್ತಾನೆ. ಇದು ನಾಲ್ಕನೆಯ ವೈಯಕ್ತಿಕದಾನವಾಗಿದೆ.. ಒಬ್ಬನು ಅನಾಗಾಮಿಗೆ ದಾನವನ್ನು ನೀಡುತ್ತಾನೆ, ಇದು ಐದನೆಯ ವೈಯಕ್ತಿಕದಾನವಾಗಿದೆ.. ಒಬ್ಬನು ಅನಾಗಾಮಿ ಪಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ ದಾನ ನೀಡುತ್ತಾನೆ , ಇದು ಆರನೆಯ ವೈಯಕ್ತಿಕ ದಾನವಾಗಿದೆ, ಒಬ್ಬನು ಸಕದಾಗಾಮಿಗೆ ದಾನವನ್ನು ನೀಡುತ್ತಾನೆ, ಇದು ಏಳನೆಯ ವೈಯಕ್ತಿಕದಾನವಾಗಿದೆ.. ಒಬ್ಬನು ಸಕದಾಗಾಮಿ ಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ ದಾನ ನೀಡುತ್ತಾನೆ , ಇದು ಎಂಟನೆಯ ವೈಯಕ್ತಿಕ ದಾನವಾಗಿದೆ, ಒಬ್ಬನು ಸೋತಪನ್ನನಿಗೆ ದಾನವನ್ನು ನೀಡುತ್ತಾನೆ, ಇದು ಒಂಬತ್ತನೆೆಯ ವೈಯಕ್ತಿಕ ದಾನವಾಗಿದೆ.. ಒಬ್ಬನು ಸೋತಪನ್ನ ಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ ದಾನ ನೀಡುತ್ತಾನೆ , ಇದು ಹತ್ತನೆಯ ವೈಯಕ್ತಿಕ ದಾನವಾಗಿದೆ, ಒಬ್ಬನು ಬುದ್ಧ ದಮ್ಮದ ಬಾಹ್ಯದಲ್ಲಿರುವ ನಿಷ್ಕಾಮ ವೀತರಾಗಿಗೆ ದಾನ ನೀಡುತ್ತಾನೆ, ಇದು ಹನ್ನೊಂದನೆಯ ವೈಯಕ್ತಿಕ ದಾನವಾಗಿದೆ, ಒಬ್ಬನು ಶೀಲವಂತ ಸಾಧಾರಣ ಮಾನವನಿಗೆ ದಾನ ನೀಡುತ್ತಾನೆ, ಇದು ಹನ್ನೆರಡನೆಯ ವೈಯಕ್ತಿಕ ದಾನವಾಗಿದೆ, ಒಬ್ಬನು ದುಶ್ಯೀಲ ಮಾನವನಿಗೆ ದಾನ ನೀಡುತ್ತಾನೆ, ಇದು ಹದಿಮೂರನೆಯ ವೈಯಕ್ತಿಕ ದಾನವಾಗಿದೆ, ಒಬ್ಬನು ತಿರಚ್ಛನಗತಿಯುಳ್ಳ ಪ್ರಾಣಿಗಳಿಗೆ ದಾನವನ್ನು ನೀಡುತ್ತಾನೆ, ಇದು ಹದಿನಾಲ್ಕನೆಯ ವೈಯಕ್ತಿಕ ದಾನವಾಗಿದೆ,
      ಈಗ ಆನಂದ , ಈ ಮೇಲಿನ ವ್ಯಕ್ತಿಗಳಿಗೆ ನೀಡಿರುವ ದಾನದಿಂದ ಈ ರೀತಿಯ ಫಲಿತಾಂಶಗಳನ್ನು ನಿರೀಕ್ಷಿಸಬಹುದು. ಪ್ರಾಣಿಗಳಿಗೆ ದಾನ ನೀಡಿದರೆ ನೂರು ಪಟ್ಟು ಫಲ ಸಿಗುತ್ತದೆ.
      ದುಶ್ಯೀಲ ಮಾನವನಿಗೆ ದಾನ ನೀಡಿದರೆ ಸಾವಿರ ಪಟ್ಟು ಫಲ ಹಿಂದಿರುಗಿ ಸಿಗುತ್ತದೆ.
      ಶೀಲವಂತ ಮಾನವನಿಗೆ ದಾನ ನೀಡಿದರೆ ಲಕ್ಷ ಪಟ್ಟು ಫಲ ಹಿಂದಿರುಗಿ ಸಿಗುತ್ತದೆ.
  ಬುದ್ಧ ದಮ್ಮದ ಬಾಹ್ಯದಲ್ಲಿರುವ ನಿಷ್ಕಾಮ ವಿತರಾಗಿಗೆ ದಾನ ನೀಡಿದರೆ 10000000000 ( ಸಾವಿರ ಕೋಟಿ) ಪಟ್ಟು  ಫಲ ಹಿಂದಿರುಗಿ ಸಿಗುತ್ತದೆ.   
      ಸೋತಪನ್ನ ಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ ದಾನ ನೀಡಿದರೆ  ಲೆಕ್ಖಕ್ಕೆ ನಿಲುಕದಂತಹುದು, ಅಳೆಯಲಾಗದಷ್ಟು ಪಟ್ಟು ಫಲ ಹಿಂದಿರುಗಿ ಸಿಗುತ್ತದೆ. ಹೀಗಿರುವಾಗ ಸೋತಪನ್ನರಿಗೆ ದಾನ ನೀಡಿದರೆ ಎಷ್ಟೊಂದು ಪಟ್ಟು ಫಲ ಹಿಂತಿರುಗಿ ಮರಳಬಹುದು,? ಹಾಗೂ ಸಕದಾಗಾಮಿ ಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ, ಸಕದಾಗಾಮಿಗೆ ,ಅನಾಗಾಮಿ ಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ, ಅನಾಗಾಮಿಗೆ ,ಅರಹಂತ ಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ, ಅರಹಂತರಿಗೆ , ಮತ್ತು ಪಚ್ಚೆಕ ಬುದ್ಧರಿಗೆ ದಾನ ನೀಡಿದರೆ ಎಷ್ಟೊಂದು ಪಟ್ಟು ಫಲ ಹಿಂತಿರುಗಿ ಮರಳಬಹುದು,? ಇನ್ನೂ ಸಮ್ಮ ಸಂಬುದ್ಧರಿಗೆ ದಾನ ನೀಡಿದರೇ ಎಷ್ಟೊಂದು ಪಟ್ಟು ಫಲ ಹಿಂತಿರುಗಿ ಮರಳಬಹುದು,?

   ಅದರೆ ಆನಂದ ಏಳು ಬಗೆಯ ದಾನಗಳನ್ನು ಸಂಘಕ್ಕೆ ಸಮಪರ್ಿಸಲಾಗುತ್ತದೆ. ಯಾವುವವು ಏಳು ?

1. ಬುದ್ಧಭಗವಾನರ ಸಹಿತ ಭಿಕ್ಖುಗಳು ಹಾಗು ಭಿಕ್ಖುಣಿಯರ ಸಮೂಹಕ್ಕೆ ಒಬ್ಬನು ದಾನ ನೀಡುವಿಕೆ. ಇದು ಸಂಘಕ್ಕೆ ಸಮಪರ್ಿಸಲಾಗುವ ಮೊದಲನೆಯ ದಾನ.

2.  ಬುದ್ಧಭಗವಾನರು ಮಹಾಪರಿನಿಬ್ಬಾಣ ಪಡೆದ ಬಳಿಕ ಭಿಕ್ಖುಗಳು ಹಾಗು ಭಿಕ್ಖುಣಿಯರ ಸಮೂಹಕ್ಕೆ ಒಬ್ಬನು ದಾನ ನೀಡುವಿಕೆ. ಇದು ಸಂಘಕ್ಕೆ ಸಮಪರ್ಿಸಲಾಗುವ ಎರಡನೆಯ ದಾನ.

3. ಭಿಕ್ಖುಗಳು ಸಮೂಹಕ್ಕೆ ಒಬ್ಬನು ದಾನ ನೀಡುವಿಕೆ. ಇದು ಸಂಘಕ್ಕೆ ಸಮಪರ್ಿಸಲಾಗುವ ಮೂರನೆಯ ದಾನ.

4. ಭಿಕ್ಖುಣಿಯರ ಸಮೂಹಕ್ಕೆ ಒಬ್ಬನು ದಾನ ನೀಡುವಿಕೆ. ಇದು ಸಂಘಕ್ಕೆ ಸಮಪರ್ಿಸಲಾಗುವ ನಾಲ್ಕನೆಯ ದಾನ.

5.  ನನಗಾಗಿ ಸಂಘವು ಅನೇಕ ಭಿಕ್ಖುಗಳು ಹಾಗು ಭಿಕ್ಖುಣಿಯರನ್ನು ದಾನಕ್ಕಾಗಿ ನೇಮಕಮಾಡಬಹುದು ಎಂದು ಯೋಚಿಸಿ ಒಬ್ಬನು ದಾನ ಮಾಡಬಹುದು. ಇದು ಸಂಘಕ್ಕೆ ಸಮಪರ್ಿಸಲಾಗುವ ಐದನೆಯ ದಾನ.

6. ನನಗಾಗಿ ಸಂಘವು ಅನೇಕ ಭಿಕ್ಖುಗಳನ್ನು ದಾನಕ್ಕಾಗಿ ನೇಮಕಮಾಡಬಹುದು ಎಂದು ಯೋಚಿಸಿ ಒಬ್ಬನು ದಾನ ಮಾಡಬಹುದು. ಇದು ಸಂಘಕ್ಕೆ ಸಮಪರ್ಿಸಲಾಗುವ ಆರನೆಯ ದಾನ.

7. ನನಗಾಗಿ ಸಂಘವು ಅನೇಕ ಭಿಕ್ಖುಣಿಯರನ್ನು ದಾನಕ್ಕಾಗಿ ನೇಮಕಮಾಡಬಹುದು ಎಂದು ಯೋಚಿಸಿ ಒಬ್ಬನು ದಾನ ಮಾಡಬಹುದು. ಇದು ಸಂಘಕ್ಕೆ ಸಮಪರ್ಿಸಲಾಗುವ  ಏಳನೆಯ ದಾನ.

  ಮುಂದೊಂದು ಕಾಲ ಬರುವುದು ಆಗ ಸಂಘದ ಸದಸ್ಯರು ಕೇವಲ ಕಾವಿಯ ವಸ್ತ್ರವನ್ನು ತಮ್ಮ ಕುತ್ತಿಗೆಯ ಸುತ್ತಲೂ ಮಾತ್ರ ಧರಿಸುವರು, ಅದರೆ ಅವರು ದುಶ್ಶಿಲರು ಹಾಗೂ ಹೀನಚಾರಿತ್ರ್ಯರು ಆಗಿರುತ್ತಾರೆ, ಅದರೆ ಜನರು ಅವರಿಗೆ ಸಂಘದ ಹೆಸರಿನಲ್ಲಿ ದಾನವನ್ನು ಮಾಡುತ್ತಾರೆ, ಆಗಲೂ ಸಹಾ ನಾನೂ ಹೇಳುತ್ತಿದೇನೆ ಸಂಘಕ್ಕೇ ನೀಡುವ ದಾನವು ಲೆಕ್ಖಕ್ಕೆ ನಿಲುಕದಂತಹುದು ಹಾಗೂ ಅಳೆಯಲಾಗದಂತಹುದು. ಹೀಗಾಗಿ ನಾನೂ ಹೇಳುವುದು ಏನೆಂದರೆ ಸಂಘಕ್ಕೆ ನೀಡುವ ದಾನವೂ ವೈಯಕ್ತಿಕ ದಾನಕ್ಕಿಂತಲೂ ಅತಿ ಹೆಚ್ಚು ಫಲಯುತವಾದದ್ದು.

    ಆನಂದ ದಾನಗಳಿಂದ ನಾಲ್ಕು ವಿಧವಾಗಿ ಪರಿಶುದ್ಧರಾಗುವರು. ಯಾವುವವು ನಾಲ್ಕು ?

1. ಇಲ್ಲಿ ದಾನದಿಂದ ದಾನಿಯು ಪರಿಶುದ್ಧನಾಗುತ್ತಾನೆ ಅದರೆ ಅತಿಥಿಯು(ಸ್ವೀಕರಿಸುವವನು) ಅಲ್ಲ.

2. ಇಲ್ಲಿ ದಾನದಿಂದ ಅತಿಥಿಯು ಪರಿಶುದ್ಧನಾಗುತ್ತಾನೆ ಅದರೆ ದಾನಿಯು ಅಲ್ಲ.

3. ಇಲ್ಲಿ ದಾನದಿಂದ ದಾನಿಯಾಗಲಿ ಅಥವಾ ಅತಿಥಿಯಾಗಲಿ ಈರ್ವರೂ ಪರಿಶುದ್ಧರಾಗುವುದಿಲ್ಲ.

4. ಇಲ್ಲಿ ದಾನದಿಂದ ದಾನಿಯು ಹಾಗೂ ಅತಿಥಿಯು ಈರ್ವರೂ ಪರಿಶುದ್ಧರಾಗುವರು.

 ಮತ್ತು ಇಲ್ಲಿ ಹೇಗೆ ದಾನದಿಂದ ದಾನಿಯು ಪರಿಶುದ್ಧನಾಗುತ್ತಾನೆ ಅದರೆ ಅತಿಥಿಯು(ಸ್ವೀಕರಿಸುವವನು) ಅಲ್ಲ.? ಹೇಗೆಂದರೆ ಇಲ್ಲಿ ದಾನಿಯು ಶೀಲವಂತನಾಗಿರುತ್ತಾನೆ ಸುಚಾರಿತ್ಯವಂತನಾಗಿರುತ್ತಾನೆ ಅದರೆ ಅತಿಥಿಯು ದುಶ್ಶಿಲನು ಹಾಗೂ ಹೀನಚಾರಿತ್ರ್ಯನು ಆಗಿರುತ್ತಾರೆ,

   ಮತ್ತು ಇಲ್ಲಿ ಹೇಗೆ ಇಲ್ಲಿ ದಾನದಿಂದ ಅತಿಥಿಯು ಪರಿಶುದ್ಧನಾಗುತ್ತಾನೆ ಅದರೆ ದಾನಿಯು ಅಲ್ಲ. ? ಹೇಗೆಂದರೆ ಇಲ್ಲಿ ಅತಿಥಿಯು ಶೀಲವಂತನಾಗಿರುತ್ತಾನೆ ಸುಚಾರಿತ್ಯವಂತನಾಗಿರುತ್ತಾನೆ ಅದರೆ ದಾನಿಯು ದುಶ್ಶಿಲನು ಹಾಗೂ ಹೀನಚಾರಿತ್ರ್ಯನು ಆಗಿರುತ್ತಾರೆ,
   ಮತ್ತು ಇಲ್ಲಿ ಹೇಗೆ ದಾನದಿಂದ ದಾನಿಯಾಗಲಿ ಅಥವಾ ಅತಿಥಿಯಾಗಲಿ ಈರ್ವರೂ ಪರಿಶುದ್ಧರಾಗುವುದಿಲ್ಲ. ? ಹೇಗೆಂದರೆ ಇಲ್ಲಿ ದಾನಿಯು ಹಾಗೂ ಅತಿಥಿಯು ಈರ್ವರೂ ದುಶ್ಶಿಲರು ಹಾಗೂ ಹೀನಚಾರಿತ್ರ್ಯರು ಆಗಿರುತ್ತಾರೆ,

   ಮತ್ತು ಇಲ್ಲಿ ಹೇಗೆ ಇಲ್ಲಿ ದಾನದಿಂದ ದಾನಿಯು ಹಾಗೂ ಅತಿಥಿಯು ಈರ್ವರೂ ಪರಿಶುದ್ಧರಾಗುವರು. ? ಹೇಗೆಂದರೆ ಇಲ್ಲಿ ದಾನಿಯು ಹಾಗೂ ಅತಿಥಿಯು ಈರ್ವರೂ ಶೀಲವಂತನಾಗಿರುತ್ತಾರೆ ಮತ್ತು ಸುಚಾರಿತ್ಯವಂತನಾಗಿರುತ್ತಾರೆ.

  ಹೀಗೆ ದಾನದಕ್ಷಣೆಗಳಿಂದ ನಾಲ್ಕು ವಿಧವಾಗಿ ವಿಶುದ್ಧರಾಗುವರು.

ಹೀಗೆ ನುಡಿದ ಭಗವಾನರು ನಂತರ ಸುಗತರು ಆದ ಶಾಸ್ತರು ಹೀಗೆ ನುಡಿದರು:

    ಯಾವಾಗ ಸುಶೀಲನು ಶ್ರದ್ಧಾಯುತ ಪ್ರಸನ್ನಚಿತ್ತದಿಂದ 
  ದುಶ್ಶಿಲನಿಗೆ ಯೋಗ್ಯವಾದ ಉಡುಗೋರೆ ಅಥವಾ ದಾನವನ್ನು 
  ವಿಶಾಲ ವಿಫುಲವಾದ ಭರವಸೆಗಳಿಂದ ನೀಡುವನೋ ಅಂತಹ 
   ದಾನವು ದಾಯಕನ್ನು ವಿಶುದ್ಧಗೊಳಿಸುವುದು.

   ಯಾವಾಗ ದುಶ್ಶಿಲನು ಸಂಶಯ ಚಿತ್ತದಿಂದ 
   ಶೀಲವಂತ ಅತಿಥಿಗೆ ಅಯೋಗ್ಯವಾದಂತಹ ದಾನವನ್ನು
  ಯಾವುದೇ ಫಲಗಳ ಭರವಸೆಗಳಿಲ್ಲದೆ ನೀಡುವನೋ ಅಂತಹ 
   ದಾನವು ಅತಿಥಿಯನ್ನು ವಿಶುದ್ಧಗೊಳಿಸುವುದು.

    ಯಾವಾಗ ದುಶ್ಶಿಲನು ಸಂಶಯ ಚಿತ್ತದಿಂದ 
   ದುಶ್ಶೀಲ ಅತಿಥಿಗೆ ಅಯೋಗ್ಯವಾದಂತಹ ದಾನವನ್ನು
  ಯಾವುದೇ ಫಲಗಳ ಭರವಸೆಗಳಿಲ್ಲದೆ ನೀಡುವನೋ ಅಂತಹ 
   ದಾನವು ಅತ್ಯಂತ ಅಲ್ಪ ಫಲಕಾರಿ ಎಂದು ಘೋಷಿಸುತ್ತೇನೆ.

    ಯಾವಾಗ ಸುಶೀಲನು ಶ್ರದ್ಧಾಯುತ ಪ್ರಸನ್ನಚಿತ್ತದಿಂದ 
  ಶೀಲವಂತನಿಗೆ ಯೋಗ್ಯವಾದ ಉಡುಗೋರೆ ಅಥವಾ ದಾನವನ್ನು 
  ವಿಶಾಲ ವಿಫುಲವಾದ ಭರವಸೆಗಳಿಂದ ನೀಡುವನೋ ಅಂತಹ 
   ದಾನವು ಮಹತ್ಫಲವೆಂದು ಘೋಷಿಸುತ್ತೇನೆ.

   

    ಯಾವಾಗ ವೀತರಾಗಿಯು ವೀತರಾಗಿಗೆ 
    ಪ್ರಸನ್ನಚಿತ್ತದಿಂದ ಯೋಗ್ಯವಾದ ದಾನವನ್ನು 
   ಕಮ್ಮಫಲದ ದೃಷ್ಟಿಕೋನದಿಂದ ನೀಡುವನೋ 
   ಅಂತಹ ದಾನವು  ನಿಜಕ್ಕೂ ಆಮಿಷ ದಾನಗಳಲ್ಲೇ 
         ಶ್ರೇಷ್ಟಕರವಾಗಿರುತ್ತದೆ.


   ಇಲ್ಲಿಗೆ ದಕ್ಖಿಣಾ ವಿಭಂಗ ಸುತ್ತವು ಮುಗಿಯಿತು.
( ಈ ಸುತ್ತದ ಪ್ರವಚನದ ನಂತರ ಎಲ್ಲರಿಗೂ ಭಗವಾನರು ಏತಕ್ಕಾಗಿ ಸಂಘದಾನಕ್ಕೆ ಒತ್ತು ನೀಡಿದರು ಎಂದು ತಿಳಿಯಿತು.)


 
 

 
    

Tuesday, 26 March 2019

sacca vibhanga sutta in kannada ಸಚ್ಚ ವಿಭಂಗ ಸುತ್ತ(ಸತ್ಯಗಳ ವಿಶ್ಲೇಷಣೆಯ ಸುತ್ತ)

 
    ಸಚ್ಚ ವಿಭಂಗ ಸುತ್ತ(ಸತ್ಯಗಳ ವಿಶ್ಲೇಷಣೆಯ ಸುತ್ತ)


ನಾನು ಹೀಗೆ ಕೇಳಿದ್ದೇನೆ, ಒಮ್ಮೆ ಭಗವಾನರು ವಾರಣಾಸಿಯ ಇಸಿಪಟ್ಟಣದ ಜಿಂಕೆಗಳ ಉಧ್ಯಾನ(ಮಿಗದಾಯ)ದಲ್ಲಿ ತಂಗಿದ್ದರು, ಆಗ ಭಗವಾನರು ಭಿಕ್ಖುಗಳೊಂದಿಗೆ ಹೀಗೆ ಸಂಬೋಧಿಸಿದರು. :ಭಿಕ್ಖುಗಳೇ
       ಭಗವಾನ್
ಆಗ ಭಗವಾನರು ಹೀಗೆ ನುಡಿದರು : ಭಿಕ್ಖುಗಳೇ ತಥಾಗತರು ಅರಹಂತರು ಹಾಗೂ  ಸಮ್ಮಸಂಬುದ್ಧರಿಂದ ವಾರಣಾಸಿಯ ಋಷಿಪಟ್ಟಣದ ಮಿಗದಾಯದಲ್ಲಿ ಅನುತ್ತರವಾದ ಧಮ್ಮಚಕ್ರವು ಪ್ರವರ್ತನ(ಚಾಲಿತ)ವಾಯಿತು. ಮತ್ತು ಆ ಚಕ್ರವು ಯಾವುದೇ ಸಮಣನಿಂದಾಗಲಿ, ಅಥವಾ ಯಾವುದೇ ಬ್ರಾಹ್ಮಣನಿಂದಾಗಲಿ, ಅಥವಾ ಯಾವುದೇ ದೇವನಿಂದಾಗಲಿ, ಅಥವಾ ಯಾವುದೇ ಮಾರನಿಂದಾಗಲಿ, ಯಾವುದೇ ಬ್ರಹ್ಮನಿಂದಾಗಲಿ, ಅಥವಾ ಲೋಕಗಳಲ್ಲಿ ಯಾರಿಂದಲೇ ಆಗಲಿ ಅಪ್ರವರ್ತನ(ಅಚಾಲಿತ ಅಥವಾ ಹಿಂತಿರುಗಿ ಹೋಗುವಿಕೆ ಅಥವಾ ಸುಳ್ಳೆಂದು ಸಾಬಿತಾಗುವಿಕೆ)ವಾಗುವುದಿಲ್ಲ, ಇದು ಆರ್ಯಸತ್ಯಗಳ ಬೋದನೆಯಾಗಿದೆ, ಪ್ರತಿಪಾದನೆಯಾಗಿದೆ, ಸ್ಥಾಪನೆಯಾಗಿದೆ, ಸ್ಪಷ್ಟತೆಯಾಗಿದೆ, ವಿಶ್ಲೇಷಣೆಯಾಗಿದೆ,
 
    ಯಾವುವವು 4 ಆರ್ಯಸತ್ಯಗಳು ?

ಅವೆಂದರೆ
        1. ದುಃಖ ಆರ್ಯಸತ್ಯ
        2. ದುಃಖದ ಉದಯ(ಕಾರಣ) ಆರ್ಯಸತ್ಯ
        3. ದುಃಖದ ನಿರೋಧ ಆರ್ಯಸತ್ಯ ಮತ್ತು
        4. ದುಃಖದ ನಿರೋಧಕ್ಕೆ ಕೊಂಡೊಯ್ಯುವ ಮಾರ್ಗದ ಆರ್ಯಸತ್ಯ

ಭಿಕ್ಖುಗಳೇ ತಥಾಗತರು ಅರಹಂತರು ಹಾಗೂ  ಸಮ್ಮಸಂಬುದ್ಧರಿಂದ ವಾರಣಾಸಿಯ ಋಷಿಪಟ್ಟಣದ ಮಿಗದಾಯದಲ್ಲಿ ಅನುತ್ತರವಾದ ಧಮ್ಮಚಕ್ರವು ಪ್ರವರ್ತನ(ಚಾಲಿತ)ವಾಯಿತು. ಮತ್ತು ಆ ಚಕ್ರವು ಯಾವುದೇ ಸಮಣನಿಂದಾಗಲಿ, ಅಥವಾ ಯಾವುದೇ ಬ್ರಾಹ್ಮಣನಿಂದಾಗಲಿ, ಅಥವಾ ಯಾವುದೇ ದೇವನಿಂದಾಗಲಿ, ಅಥವಾ ಯಾವುದೇ ಮಾರನಿಂದಾಗಲಿ, ಯಾವುದೇ ಬ್ರಹ್ಮನಿಂದಾಗಲಿ, ಅಥವಾ ಲೋಕಗಳಲ್ಲಿ ಯಾರಿಂದಲೇ ಆಗಲಿ ಅಪ್ರವರ್ತನ(ಅಚಾಲಿತ ಅಥವಾ ಹಿಂತಿರುಗಿ ಹೋಗುವಿಕೆ ಅಥವಾ ಸುಳ್ಳೆಂದು ಸಾಬಿತಾಗುವಿಕೆ)ವಾಗುವುದಿಲ್ಲ, ಇದು ಆರ್ಯಸತ್ಯಗಳ ಬೋದನೆಯಾಗಿದೆ, ಪ್ರತಿಪಾದನೆಯಾಗಿದೆ, ಸ್ಥಾಪನೆಯಾಗಿದೆ, ಸ್ಪಷ್ಟತೆಯಾಗಿದೆ, ವಿಶ್ಲೇಷಣೆಯಾಗಿದೆ,


  ಭಿಕ್ಖುಗಳೇ ನೀವುಗಳು ಸಾರಿಪುತ್ರ ಹಾಗೂ ಮೊಗ್ಗಲಾನರ  ಸೇವನೆ(ಮಿತ್ರತ್ವ)ೆ  ಮಾಡಿರಿ, ಅವರ ಒಡನಾಟದಿಂದ ಬೆರೆಯಿರಿ, ಅವರು ಪಂಡಿತ(ಜ್ಞಾನಿ) ಭಿಕ್ಖುಗಳಾಗಿದ್ದಾರೆ, ಅವರು ಬ್ರಹ್ಮಚರಿಯದ ಶ್ರೇಷ್ಟ ಜೀವನಕ್ಕೆ ಅನುಗ್ರಹ ತೋರುತ್ತಾರೆ, ಅದರಲ್ಲಿ ಸಾರಿಪುತ್ತರು  ಜನ್ಮನೀಡಿದ ಮಾತೆಯ ತರಹ, ಹಾಗೆಯೇ ಮೋಗ್ಗಲಾನರು ಮಗುವನ್ನು ಸಲಹುವಂತಹವರ ತರಹ, ಸಾರಿಪುತ್ತರು ಎಲ್ಲರನ್ನು ಸೋತಪತ್ತಿ ಫಲವನ್ನು ಪಡೆಯುವ ಹಾಗೇ ಮಾರ್ಗದಶರ್ಿತರಾಗುವರು. ಮತ್ತು ಮೊಗ್ಗಲಾನರು ಉನ್ನತ ಗುರಿಯೆಡೆಗೆ ಸಾಗಿಸುವಂತಹವರು. ಸಾರಿಪುತ್ರರು ಆರ್ಯಸತ್ಯಗಳನ್ನು ಬೋದಿಸುವಲ್ಲಿ ಸಮರ್ಥರು ಅವರು ಆರ್ಯಸತ್ಯಗಳನ್ನು ವಿವರಿಸುತ್ತಾರೆ, ಒತ್ತಿಹೇಳುತ್ತಾರೆ, ಸ್ಥಾಪಿಸುತ್ತಾರೆ, ಸ್ಪಷ್ಟಿಕರಿಸುತ್ತಾರೆ, ವಿಶ್ಲೇಷಿಸುತ್ತಾರೆ, ಮತ್ತು ಪ್ರಕಟಪಡಿಸುತ್ತಾರೆ. ಹೀಗೆ ನುಡಿದ ಭಗವಾನರು ತಮ್ಮ ಆಸನದಿಂದ ಎದ್ದು ತಮ್ಮ ವಿಹಾರದೆಡೆಗೆ ವಿಶ್ರಮಿಸಲು ಹೋರಟರು.

     ಅವರು ಹೋರಟ ನಂತರ ಸಾರಿಪುತ್ತರು ಎದ್ದು ಭಿಕ್ಖುಗಳೊಂದಿಗೆ ಹೀಗೆ ಸಂಬೋದಿಸಿದರು : ಅಯುಷ್ಮಂತ ಭಿಕ್ಖುಗಳೇ,
ಆಗ ಪ್ರತಿಯಾಗಿ ಭಿಕ್ಖುಗಳು ಸಹಾ ಆಯುಷ್ಮಂತರೇ ಎಂದರು. ಆಗ ಸಾರಿಪುತ್ತರು ಹೀಗೆ ನುಡಿದರು : ಭಿಕ್ಖುಗಳೇ ತಥಾಗತರು ಅರಹಂತರು ಹಾಗೂ  ಸಮ್ಮಸಂಬುದ್ಧರುರಿಂದ ವಾರಣಾಸಿಯ ಋಷಿಪಟ್ಟಣದ ಮಿಗದಾಯದಲ್ಲಿ ಅನುತ್ತರವಾದ ಧಮ್ಮಚಕ್ರವು ಪ್ರವರ್ತನ(ಚಾಲಿತ)ವಾಯಿತು. ಮತ್ತು ಆ ಚಕ್ರವು ಯಾವುದೇ ಸಮಣನಿಂದಾಗಲಿ, ಅಥವಾ ಯಾವುದೇ ಬ್ರಾಹ್ಮಣನಿಂದಾಗಲಿ, ಅಥವಾ ಯಾವುದೇ ದೇವನಿಂದಾಗಲಿ, ಅಥವಾ ಯಾವುದೇ ಮಾರನಿಂದಾಗಲಿ, ಯಾವುದೇ ಬ್ರಹ್ಮನಿಂದಾಗಲಿ, ಅಥವಾ ಲೋಕಗಳಲ್ಲಿ ಯಾರಿಂದಲೇ ಆಗಲಿ ಅಪ್ರವರ್ತನ(ಅಚಾಲಿತ ಅಥವಾ ಹಿಂತಿರುಗಿ ಹೋಗುವಿಕೆ ಅಥವಾ ಸುಳ್ಳೆಂದು ಸಾಬಿತಾಗುವಿಕೆ)ವಾಗುವುದಿಲ್ಲ, ಇದು ಆರ್ಯಸತ್ಯಗಳ ಬೋದನೆಯಾಗಿದೆ, ಪ್ರತಿಪಾದನೆಯಾಗಿದೆ, ಸ್ಥಾಪನೆಯಾಗಿದೆ, ಸ್ಪಷ್ಟತೆಯಾಗಿದೆ, ವಿಶ್ಲೇಷಣೆಯಾಗಿದೆ,
 
    ಯಾವುವವು 4 ಆರ್ಯಸತ್ಯಗಳು ?




       ಅವೆಂದರೆ
        1. ದುಃಖ ಆರ್ಯಸತ್ಯ
        2. ದುಃಖದ ಉದಯ(ಕಾರಣ) ಆರ್ಯಸತ್ಯ
        3. ದುಃಖದ ನಿರೋಧ ಆರ್ಯಸತ್ಯ ಮತ್ತು
        4. ದುಃಖದ ನಿರೋಧಕ್ಕೆ ಕೊಂಡೊಯ್ಯುವ ಮಾರ್ಗದ ಆರ್ಯಸತ್ಯ

      ಮತ್ತೆ ಯಾವುದು ದುಃಖ ಆರ್ಯ ಸತ್ಯ ?
   ಜನ್ಮವು ದುಃಖ, ಜರಾವು ದುಃಖ, ಮರಣವು ದುಃಖ, ಶೋಕ ಪ್ರಲಾಪವು ದುಃಖ, ನೋವು ದುಃಖ, ಚಿಂತೆ ಯಾತನೆಗಳು ದುಃಖ, ಅಪ್ರಿಯವಾದುದರ ಸಮಾಗಮ ದುಃಖ, ಪ್ರಿಯವಾದುದರ ವಿಯೋಗ ದುಃಖ, ಇಷ್ಟ(ಇಚ್ಚೆ)ಪಟ್ಟಿದ್ದು ದೊರೆಯದಿದ್ದಾಗ ದುಃಖ, ಒಟ್ಟಾರೆ ಸಂಕ್ಷಿಪ್ತವಾಗಿ ಹೇಳುವುದಾದರೆ ಪಂಚ ಉಪಾದಾನ ಖಂದಗಳು( 5 ರಾಶಿಗಳಿಗೆ(ದೇಹ ಮತ್ತು ಮನಸ್ಸಿಗೆ) ಅಂಟುವಿಕೆಯೇ) ದುಃಖಕರ.

  ಮತ್ತು ಜನ್ಮ ಎಂದರೇನು?
     ಆಯುಷ್ಮಂತರೇ, ಎಲ್ಲಾ ಜೀವಿಗಳ ವರ್ಗಗಳಲ್ಲಿ ಜೀವಿಗಳ ಜನ್ಮ, ಆರಂಭ, ಪುನರ್ಜನ್ಮ, ಖಂದಗಳ ಸ್ಥಾಪನೆ, ಮತ್ತು ಇಂದ್ರೀಯಗಳ ಪಡೆಯುವಿಕೆಯನ್ನು ಜನ್ಮ ಎನ್ನುತ್ತಾರೆ.

   ಮತ್ತು ಜರಾ ಎಂದರೇನು ?
     ಆಯುಷ್ಮಂತರೇ, ಎಲ್ಲಾ ಜೀವಿಗಳ ವರ್ಗಗಳಲ್ಲಿ ಜೀವಿಗಳ ವೃದ್ಧಾಪ್ಯ, ವಯಸ್ಸಿನಿಂದ ದುರ್ಬಲವಾಗುವಿಕೆ, ಮುರಿದ ಹಲ್ಲುಗಳು, ನೆರತಕೂದಲು, ಸುಕ್ಕುಗಟ್ಟಿದ ಚರ್ಮ, ಶಕ್ತಿಗುಂದುವಿಕೆ, ಇಂದ್ರೀಯಗಳ ಶಿಥಿಲತೆಯನ್ನು ಜರಾ ಎನ್ನುತ್ತಾರೆ.

   ಮತ್ತು ಮರಣ ಎಂದರೇನು ?
     ಆಯುಷ್ಮಂತರೇ, ಎಲ್ಲಾ ಜೀವಿಗಳ ವರ್ಗಗಳಲ್ಲಿ ಮರಣಿಸುವಿಕೆ, ನಾಷವಾಗುವಿಕೆ, ವಿಯೋಗ, ಅಂತ್ಯವಾಗುವಿಕೆ, ಮೃತ್ಯುವಶವಾಗುವಿಕೆ, ಸಾವು,  ಖಂದಗಳ ಬೇರ್ಪಡೆಯಾಗುವಿಕೆ, ಶವವಾಗುವಿಕೆ, ಜೀವಿಂದ್ರೀಯದ ಕತ್ತರಿಸುವಿಕೆಯನ್ನು ಮರಣ ಎನ್ನುವರು.

     ಮತ್ತು ಶೋಕ ಎಂದರೇನು?
   ಆಯುಷ್ಮಂತರೇ, ಶೋಕ, ಶೋಕಿಸುವಿಕೆ, ಶೋಕಸ್ಥಿತಿ, ಅಂತರ್ಯದ ದುಃಖ, ದೌಭರ್ಾಗ್ಯ ಅಥವಾ ದುರ್ಘಟನೆಗೆ ಈಡಾಗಿರುವವರಲ್ಲಿನ ಆಂತರ್ಯದ ಆಳ ನೋವು, ಶೋಕವನ್ನು ಅನುಭವಿಸುತ್ತಿರುವಿಕೆ, ಇವನೆಲ್ಲಾ ಶೋಕ ಎನ್ನುವರು.

     ಮತ್ತು ಪ್ರಲಾಪ ಎಂದರೇನು ?
 ಆಯುಷ್ಮಂತರೇ ಅಳುವಿಕೆ, ಪ್ರಲಾಪಿಸುವಿಕೆ, ಯಾರದರೂ ದುಃಖಭರಿತ ಸನ್ನಿವೇಶದಲ್ಲಿದ್ದಾಗ ಅಥವಾ ತಾವೇ ಅಂತಹ ಸನ್ನಿವೇಶದಲ್ಲಿದ್ದಾಗ ಅತ್ತು ಪ್ರಲಾಪಿಸುವುದನ್ನು ಪ್ರಲಾಪವೆನ್ನುತ್ತೇವೆ.

       ಮತ್ತು ನೋವು(ಕಾಯದ ದುಃಖ) ಎಂದರೇನು ?
 ಅಯುಷ್ಮಂತರೇ ಶಾರೀರಿಕ ನೋವು, ಶಾರೀರಿಕ ಅಸಂತೋಷ, ಶರೀರಕ್ಕೆ ಸಂಪರ್ಕವಾಗಿ ಉಂಟಾಗುವ ನೋವುಭರಿತ, ಅಪ್ರೀಯ ವೇದನೆಗಳನ್ನು ನೋವು(ಕಾಯದ ದುಃಖ) ಎನ್ನುತ್ತಾರೆ.

        ಮತ್ತು ದೋಮನಸ್ಸು ಎಂದರೇನು ?
     ಆಯುಷ್ಮಂತರೇ, ಮಾನಸಿಕ ದುಃಖ, ಮಾನಸಿಕ ಅಸಂತುಷ್ಟತೆ, ಮನಸ್ಸಿಗೆ ಮಾನಸಿಕ ವಿಷಯಗಳಾದ ಚೇತಸಿಕಗಳು ಸಂಪರ್ಕವಾದಾಗ ಉಂಟಾಗುವ ಅಪ್ರಿಯ ವೇದನೆಗಳನ್ನು ದೋಮನಸ್ಸು ಎನ್ನುತ್ತೇವೆ.

         ಮತ್ತು ಉಪಯಾಸೋ(ಖಿನ್ನತೆ/ಚಿಂತೆ) ಎಂದರೇನು ?
   ಆಯುಷ್ಮಂತರೇ, ಒತ್ತಡ, ಯಾತನೆ, ಯಾವಾಗ ಒಬ್ಬನು ದುಃಖಭರಿತ ಅಥವಾ ನಷ್ಟಭರಿತ ಸನ್ನಿವéೇಷದಲ್ಲಿದ್ದಾಗ ಆತನು ಅನುಭವಿಸುವ ದುಃಖವನ್ನು ಉಪಯಾಸೋ ಎನ್ನುತ್ತೇವೆ.

          ಮತ್ತು ಇಷ್ಟ(ಇಚ್ಚೆ)ಪಟ್ಟಿದ್ದು ದೊರೆಯದಿರುವುದೇ ದುಃಖ ಎಂದರೇನು ?
    ಇಲ್ಲಿ ಅಯುಷ್ಮಂತರೇ, ಇದಕ್ಕೆ ಉದಾಹರಿಸುವುದಾದರೆ ಯಾವ ಜೀವಿಗಳು ಪುನರ್ಜನ್ಮಿಸುವ ಖಚಿತತೆ ಹೊಂದಿವೆಯೊ ಅವರಲ್ಲಿ ಇಂತಹ ಇಚ್ಚೆ ಉಂಟಾಗಬಹುದು ಎನೆಂದರೇ ಒಹ್ ನಾವು ಮಾತ್ರ ಪುನರ್ಜನ್ಮ ತಾಳದಿದ್ದರೆ ಹೇಗೆ !, ನಮಗೆ ಮಾತ್ರ ಪುನರ್ಜನ್ಮವಾಗದಿರಲಿ! ಅದರೆ ಹಾಗೇ ಬಯಸಿದ ಮಾತ್ರಕ್ಕೆ ಒಬ್ಬರಿಗೆ ಪುನರ್ಜನ್ಮ ಸಿಗದೇ ಹೋಗುವುದಿಲ್ಲ. ಬಯಸಿದ ಮಾತ್ರಕ್ಕೆ ಹಾಗಾವುದಿಲ್ಲ. ಆಗ ಆತನು ಹಾಗೇ ಆಗಲಿಲ್ಲವಲ್ಲ ಎಂದು ದುಃಖಿಸುವನು, ಇದನ್ನೇ ಇಚ್ಚಿಸಿದ ಮಾತ್ರಕ್ಕೆ ಹಾಗೇ ಆಗದಿದ್ದಾಗ ಸಿಗುವ ದುಃಖ ಎನ್ನುವರು. ಜೀವಿಗಳಲ್ಲಿ ಯಾರೆಲ್ಲಾ ವೃದ್ಧಾವಸ್ಥೆಗೆ.....ರೋಗಕ್ಕೆ........ಮರಣಕ್ಕೆ.........ಶೋಕಕ್ಕೆ......ಪ್ರಲಾಪಕ್ಕೆ......ನೋವಿಗೆ.......ದೋಮನಸ್ಸಿಗೆ......ಮತ್ತು, ಚಿಂತೆಗೆ ಗುರಿಯಾಗಬಾರದು ಎಂದು ಇಚ್ಚಿಸುತ್ತೇವೆ, ಅದರೆ ಕೇವಲ ಇಚ್ಚಿಸಿದ ಮಾತ್ರಕ್ಕೆ ನೀವು ಅವೆಲ್ಲಾವನ್ನು ತಡೆಯಲು ಸಾಧ್ಯವೇ ?.ಇದನ್ನೇ ಇಚ್ಚಿಸಿದ ಮಾತ್ರಕ್ಕೆ ಹಾಗೇ ಆಗದಿದ್ದಾಗ ಸಿಗುವ ದುಃಖ ಎನ್ನುವರು.
   
        ಮತ್ತು ಆಯುಷ್ಮಂತರೇ ಪಂಚ ಉಪಾದಾನಖಂದಗಳು ದುಃಖ ಎಂದರೇನು?
  ಇಲ್ಲಿ  5 ರೀತಿಯ ಅಂಟುವಿಕೆಗಳಿವೆ ಅವೆಂದರೆ ದೇಹಕ್ಕೆ, ವೇದನೆಗಳಿಗೆ, ಗ್ರಹಿಕೆಗಳಿಗೆ, ಸಂಖಾರಗಳಿಗೆ, ಮತ್ತು ವಿಞ್ಞಆನಗಳಿಗೆ ಅಂಟಿಕೊಂಡಿರುವುದು. ಇದನ್ನು ಸಂಕ್ಷಿಪ್ತವಾಗಿ 5 ಖಂದಗಳಿಗೆ ಅಂಟಿರುವುದೇ ದುಃಖ ಎಂದು ಹೇಳಲಾಗಿದೆ, ಇದೇ ಆರ್ಯರ ದುಃಖ ಸತ್ಯವಾಗಿದೆ. 

      ಮತ್ತು ಆಯುಷ್ಮಂತರೇ ಆರ್ಯರ ದುಃಖದ ಸಮುದಯ(ಕಾರಣ/ಉದಯ) ಸತ್ಯ ಎಂದರೇನು ?
   ಇಲ್ಲಿ ತೃಷ್ಣೆಯೇ ಪುನರ್ಜನ್ಮಗಳ ಕಡೆಗೆ ಕರೆದೊಯ್ಯುತ್ತದೆ, ಇದು ಆನಂದ ಹಾಗೂ ರಾಗದಿಂದ ಕೂಡಿದ್ದು, ಸದಾ ವಿವಿಧ ವಲಯಗಳಲ್ಲಿ, ಕ್ಷೇತ್ರಗಳಲ್ಲಿ ಸುಖಭೋಗಗಳನ್ನು ಹುಡುಕುತ್ತಿರುತ್ತದೆ. ಅವೆಂದರೆ ಕಾಮತನ್ಹಾ(ಇಂದ್ರೀಯಸುಖಗಳ ಬೋಗಾಸಕ್ತಿ), ಭವತನ್ಹಾ(ಶಾಶ್ವತವಾಗಿ ಇರಬೇಕು ಎನ್ನುವ ತೀವ್ರಬಯಕೆ), ಮತ್ತು ವಿಭವ ತನ್ಹಾ(ಇರಲೇಬಾರದು ಎಂಬ ತೀವ್ರ ಬಯಕೆ). ಇದನ್ನೇ ಆರ್ಯರ ದುಃಖದ ಸಮುದಯ(ಕಾರಣ/ಉದಯ) ಸತ್ಯ ಎನ್ನುತ್ತಾರೆ.


      ಮತ್ತು ಆಯುಷ್ಮಂತರೇ ಆರ್ಯರ ದುಃಖ ನಿರೋಧ(ಅಂತ್ಯ/ಸಮಾಪ್ತಿ/ಇಲ್ಲವಾಗುವಿಕೆ) ಎಂದರೇನು ?
  ದುಃಖಕ್ಕೆ ಕಾರಣವಾದ ತನ್ಹಾವನ್ನು (ತೀವ್ರಬಯಕೆಗಳನ್ನು) ನಿಶ್ಶೇಷವಾಗಿ ವಿರಾಗತೋರುವುದು(ಮರೆಮಾಡುವುದು/ವಿಕರ್ಷಣವಾಗುವುದು), ನಿರೋಧಗೊಳಿಸುವುದು(ಅಂತ್ಯ), ತ್ಯಾಗಮಾಡುವುದು, ಪಟಿನಿಸ್ಸ(ಬಿಟ್ಟುಬಿಡುವುದು)ಮಾಡುವುದು, ಮುಕ್ತವಾಗುವುದು, ಅನಾಲಯಗೊಳ್ಳುವುದು(ಅಂಟದೆ ಇರುವುದು), ಇದನ್ನೇ ಆಯುಷ್ಮಂತರೇ ಆರ್ಯರ ದುಃಖನಿರೋಧ ಎನ್ನುತ್ತಾರೆ.

   
     ಮತ್ತು ಆಯುಷ್ಮಂತರೇ ಆರ್ಯರ ದುಃಖ ನಿರೋಧಕ್ಕೆ ಕೊಂಡೊಯ್ಯುವ ಮಾರ್ಗಸತ್ಯ ಎಂದರೇನು ?
ಅದೇ ಆರ್ಯ ಆಷ್ಟಾಂಗ ಮಾರ್ಗ ಅಂದರೆ

ಸಮ್ಮಾ ದಿಟ್ಟಿ
ಸಮ್ಮಾ ಸಂಕಲ್ಪ
ಸಮ್ಮಾ ವಾಚಾ
ಸಮ್ಮಾ ಕಮ್ಮ
ಸಮ್ಮಾ ಜೀವನೋಪಾಯ
ಸಮ್ಮಾ ವ್ಯಾಯಾಮ
ಸಮ್ಮಾ ಸ್ಮೃತಿ
ಸಮ್ಮಾ ಸಮಾಧಿ

ಮತ್ತು ಆಯುಷ್ಮಂತರೇ ಸಮ್ಮಾ ದಿಟ್ಟಿ(ದೃಷ್ಟಿಕೋನ) ಎಂದರೇನು?
  ದುಃಖ ಆರ್ಯ ಸತ್ಯ, ದುಃಖ ಸಮುದಯ ಆರ್ಯ ಸತ್ಯ, ದುಃಖ ನಿರೋಧ ಆರ್ಯ ಸತ್ಯ, ಮತ್ತು ದುಃಖ ನಿರೋಧಕ್ಕೆ ಕೊಂಡೊಯ್ಯುನ ಮಾರ್ಗ. ಇವುಗಳನ್ನು ಯಾತಾರ್ಥವಾಗಿ ಅರಿಯುವುದೇ ಸಮ್ಮಾ ದಿಟ್ಟಿಯಾಗಿದೆ.


ಮತ್ತು ಆಯುಷ್ಮಂತರೇ ಸಮ್ಮಾಸಂಕಲ್ಪ ಎಂದರೇನು?
  ತ್ಯಾಗದ ಸಂಕಲ್ಪಗಳು, ಅದ್ವೇಷದ ಸಂಕಲ್ಪಗಳು, ಅಹಿಂಸೆಯ ಸಂಕಲ್ಪಗಳು ಇಂಥವುಗಳನ್ನು ಆಯುಷ್ಮಂತರೇ ಸಮ್ಮಾ ಸಂಕಲ್ಪ ಎನ್ನುವರು.

ಮತ್ತು ಆಯುಷ್ಮಂತರೇ ಸಮ್ಮಾವಾಚಾ ಎಂದರೇನು?
  ಸುಳ್ಳುಮಾತುಗಳಿಂದ ವಿರತನಾಗುವಿಕೆ , ಚಾಡಿತನಗಳಿಂದ ವಿರತನಾಗುವಿಕೆ, ಕಠೋರ ಮಾತುಗಳಿಂದ ವಿರತನಾಗುವಿಕೆ , ಮತ್ತು ಅಸಂಬದ್ಧಮಾತುಗಳಿಂದ ವಿರತನಾಗುವಿಕೆ ಇಂಥವುಗಳನ್ನು ಆಯುಷ್ಮಂತರೇ ಸಮ್ಮಾವಾಚಾ ಎನ್ನುವರು.


      ಮತ್ತು ಆಯುಷ್ಮಂತರೇ ಸಮ್ಮಾಕಮ್ಮ ಎಂದರೇನು?
  ಪ್ರಾಣಿಹತ್ಯೆಗಳಿಂದ ವಿರತನಾಗುವಿಕೆ, ಕಳ್ಳತನಗಳಿಂದ ವಿರತನಾಗುವಿಕೆ, ಮತ್ತು ಅನೈತಿಕ ಕಾಮುಕತೆಯಿಂದ ವಿರತನಾಗುವಿಕೆ ಇಂಥವುಗಳನ್ನು ಆಯುಷ್ಮಂತರೇ ಸಮ್ಮಾಕಮ್ಮ ಎನ್ನುವರು.

       ಮತ್ತು ಆಯುಷ್ಮಂತರೇ ಸಮ್ಮಾಜೀವನೊಪಾಯ ಎಂದರೇನು?
   ಇಲ್ಲಿ ಆರ್ಯಶ್ರಾವಕನು ಮಿಥ್ಯಜೀವನೋಪಯಗಳನ್ನು ತೊರೆದು ಸಮ್ಮಜೀವನೊಪಾಯದಿಂದ ಜೀವಿಸಿದರೆ ಇಂಥವುಗಳನ್ನು ಆಯುಷ್ಮಂತರೇ ಸಮ್ಮಾಕಮ್ಮ ಎನ್ನುವರು.

       ಮತ್ತು ಆಯುಷ್ಮಂತರೇ ಸಮ್ಮಾವ್ಯಾಯಮವು ಯಾವುದು ?
   ಇಲ್ಲಿ ಆರ್ಯಶ್ರಾವಕನು ಇನ್ನು ಉತ್ಪನ್ನವಾಗದಿರುವ ಪಾಪಯುತವಾದ ಮತ್ತು ಅಕುಶಲವಾದ ಮಾನಸಿಕ ಸ್ಥಿತಿ(ಯೋಚನೆ)ಗಳನ್ನು ಉದಯಿಸದಂತೆ ಮಾಡಲು ಇಚ್ಚೆಯುಳ್ಳವನಾಗುತ್ತಾನೆ, ಉತ್ಸಾಹಿತನಾಗುತ್ತಾನೆ, ಪ್ರಯತ್ನಿಸುತ್ತಾನೆ, ಮತ್ತು ಅದರಲ್ಲಿ ಯಶಸ್ವಿಯಾಗುತ್ತಾನೆ.  ಹಾಗೇಯೇ ಇಲ್ಲಿ ಆರ್ಯಶ್ರಾವಕನು ಉತ್ಪನ್ನವಾಗಿರುವ ಪಾಪಯುತವಾದ ಮತ್ತು ಅಕುಶಲವಾದ ಮಾನಸಿಕ ಸ್ಥಿತಿ(ಯೋಚನೆ)ಗಳನ್ನು ಇನ್ನಿಲ್ಲದಂತೆ ಮಾಡಲು ಇಚ್ಚೆಯುಳ್ಳವನಾಗುತ್ತಾನೆ, ಉತ್ಸಾಹಿತನಾಗುತ್ತಾನೆ, ಪ್ರಯತ್ನಿಸುತ್ತಾನೆ, ಮತ್ತು ಅದರಲ್ಲಿ ಯಶಸ್ವಿಯಾಗುತ್ತಾನೆ. ಹಾಗೇಯೆ ಇಲ್ಲಿ ಆರ್ಯಶ್ರಾವಕನು ಇನ್ನು ಉತ್ಪನ್ನವಾಗದಿರುವ ಪುಣ್ಯಭರಿತವಾದ ಮತ್ತು ಕುಶಲವಾದ ಮಾನಸಿಕ ಸ್ಥಿತಿ(ಯೋಚನೆ)ಗಳನ್ನು ಉದಯಿಸುವಂತೆ ಮಾಡಲು ಇಚ್ಚೆಯುಳ್ಳವನಾಗುತ್ತಾನೆ, ಉತ್ಸಾಹಿತನಾಗುತ್ತಾನೆ, ಪ್ರಯತ್ನಿಸುತ್ತಾನೆ, ಮತ್ತು ಅದರಲ್ಲಿ ಯಶಸ್ವಿಯಾಗುತ್ತಾನೆ. ಹಾಗೆಯೇ ಇಲ್ಲಿ ಆರ್ಯಶ್ರಾವಕನು ಉತ್ಪನ್ನವಾಗಿರುವ ಪುಣ್ಯಭರಿತವಾದ ಮತ್ತು ಕುಶಲವಾದ ಮಾನಸಿಕ ಸ್ಥಿತಿ(ಯೋಚನೆ)ಗಳನ್ನು ಕಳೆದುಹೋಗದಂತೆ, ವೃದ್ಧಿಸುವಂತೆ, ವಿಕಸಿಸುವಂತೆ, ಮಾಡಲು ಇಚ್ಚೆಯುಳ್ಳವನಾಗುತ್ತಾನೆ, ಉತ್ಸಾಹಿತನಾಗುತ್ತಾನೆ, ಪ್ರಯತ್ನಿಸುತ್ತಾನೆ, ಮತ್ತು ಅದರಲ್ಲಿ ಯಶಸ್ವಿಯಾಗುತ್ತಾನೆ. ಇಂಥವುಗಳನ್ನು ಆಯುಷ್ಮಂತರೇ ಸಮ್ಮಾವ್ಯಾಯಾಮ ಎನ್ನುವರು. 

        ಮತ್ತು ಆಯುಷ್ಮಂತರೇ ಸಮ್ಮಾ ಸ್ಮೃತಿಯು ಯಾವುದು ? 
  ಇಲ್ಲಿ ಆಯುಷ್ಮಂತರೇ, ಭಿಕ್ಖುವು ಕಾಯದಲ್ಲಿ ಕಾಯಾನುಪಸ್ಸಿಯಾಗಿ ವಿಹರಿಸುತ್ತಾನೆ, ಉತ್ಸಾಹಿತನಾಗಿ ಎಚ್ಚರಿಕೆಯಿಂದ ಪೂರ್ಣಅರಿವಿನಿಂದ ಲೋಕದ ಯಾವುದಕ್ಕೂ ಆಸೆಯಾಗಲಿ, ದ್ವೇಷವಾಗಲಿ ತಾಳದೆ ವಿಕ್ಷಿಸುವವನಾಗುತ್ತಾನೆ. ಅದೇ ರೀತಿಯಲ್ಲಿ ವೇದನೆಗಳಲ್ಲಿ ವೇದನೂಪಸ್ಸಿಯಾಗಿ ವಿಹರಿಸುತ್ತಾನೆ. ಉತ್ಸಾಹಿತನಾಗಿ ಎಚ್ಚರಿಕೆಯಿಂದ ಪೂರ್ಣಅರಿವಿನಿಂದ ಲೋಕದ ಯಾವುದಕ್ಕೂ ಆಸೆಯಾಗಲಿ, ದ್ವೇಷವಾಗಲಿ ತಾಳದೆ ವಿಕ್ಷಿಸುವವನಾಗುತ್ತಾನೆ. ಹಾಗೆಯೇ ಚಿತ್ತಗಳಲ್ಲಿ ಚಿತ್ತಾನುಪಸ್ಸಿಯಾಗಿ ವಿಹರಿಸುತ್ತಾನೆ, ಉತ್ಸಾಹಿತನಾಗಿ ಎಚ್ಚರಿಕೆಯಿಂದ ಪೂರ್ಣಅರಿವಿನಿಂದ ಲೋಕದ ಯಾವುದಕ್ಕೂ ಆಸೆಯಾಗಲಿ, ದ್ವೇಷವಾಗಲಿ ತಾಳದೆ ವಿಕ್ಷಿಸುವವನಾಗುತ್ತಾನೆ. ಅದೇ ರೀತಿಯಲ್ಲಿ ಧಮ್ಮಗಳಲ್ಲಿ ಧಮ್ಮಾನುಪಸ್ಸಿಯಾಗಿ ವಿಹರಿಸುತ್ತಾನೆ, ಉತ್ಸಾಹಿತನಾಗಿ ಎಚ್ಚರಿಕೆಯಿಂದ ಪೂರ್ಣಅರಿವಿನಿಂದ ಲೋಕದ ಯಾವುದಕ್ಕೂ ಆಸೆಯಾಗಲಿ, ದ್ವೇಷವಾಗಲಿ ತಾಳದೆ ವಿಕ್ಷಿಸುವವನಾಗುತ್ತಾನೆ. ಇಂಥವುಗಳನ್ನು ಆಯುಷ್ಮಂತರೇ ಸಮ್ಮಾಸತಿ ಎನ್ನುವರು. 


          ಮತ್ತು ಆಯುಷ್ಮಂತರೇ ಸಮ್ಮಾ ಸ್ಮೃಮಾಧಿಯು ಯಾವುದು ?  

    ಇಲ್ಲಿ ಆಯುಷ್ಮಂತರೇ ಭಿಕ್ಖುವು ಇಂದ್ರೀಯಸುಖಗಳ ಯೋಚನೆಗಳಿಂದ ರಹಿತನಾಗಿ(ಬರಿದಾಗಿ) ಹಾಗೆಯೇ ಅಕುಶಲ ಮಾನಸಿಕ ಸ್ಥಿತಿಗಳಿಂದ ರಹಿತನಾಗಿ, ವಿತರ್ಕ(ಮನಸ್ಸನ್ನು ಕೇಂದ್ರಿಕರಿಸುವಿಕೆ), ವಿಚಾರ(ಆ ದಿಕ್ಕಿನಲ್ಲಿಯೇ ಮನಸ್ಸನ್ನು ಹರಿಸುವಿಕೆ),  ಹಾಗೂ ಏಕಾಗ್ರತೆಗಳಿಂದ ಹುಟ್ಟಿದ  ಆನಂದ ಮತ್ತು ಸುಖದಿಂದ ಕೂಡಿದ ಪ್ರಥಮ ಸಮಾದಿಯಲ್ಲಿ ನೆಲೆಸುತ್ತಾನೆ.

 ನಂತರ ವಿತರ್ಕ ಮತ್ತು ವಿಚಾರಗಳಿಂದ ರಹಿತನಾಗಿ, ಅವುಗಳಿಗೆ ಅತೀತನಾಗಿ  ದ್ವೀತೀಯ ಸಮಾಧಿಯಲ್ಲಿ ನೆಲೆಸುತ್ತಾನೆ, ಆ ಸಮಾಧಿಯು ವಿತರ್ಕ ಮತ್ತು ವಿಚಾರಗಳಿಂದ ರಹಿತವಾದ ಆನಂದ ಹಾಗೂ ಸುಖಗಳಿಂದ ಕೂಡಿರುತ್ತದೆ. ಜೋತೆಗೆ ಅಂತರಿಕ ಸ್ಪಷ್ಟತೆ ಹಾಗೂ ಶ್ರದ್ಧೆಯಿಂದ ಕೂಡಿದ್ದು ಚಿತ್ತದ ಏಕೋಭಾವದಿಂದ ಕೂಡಿರುತ್ತದೆ.

    ನಂತರ ಆನಂದವನ್ನು ಮೀರಿದ ತ್ರಿತೀಯ ಸಮಾಧಿಯಲ್ಲಿ ನೆಲೆಸುತ್ತಾನೆ. ಅಲ್ಲಿ ಅವರು ಸಮಚಿತ್ತತೆಯಿಂದ, ಸ್ಮೃತಿ ಹಾಗೂ ಎಚ್ಚರಿಕೆಯಿಂದ ಕೂಡಿದ ಸುಖದಲ್ಲಿ ನೆಲಸಿರುತ್ತಾರೆ, ಯಾವುದನ್ನು ಕುರಿತು ಆರ್ಯರು ಹೀಗೆ ನುಡಿದಿದ್ದಾರೊ : ಉಪೇಕ್ಖ(ಸಮಚಿತ್ತತೆ) ಹಾಗೂ ಸ್ಮೃತಿ(ಎಚ್ಚರಿಕೆ)ಯಿಂದ ಕೂಡಿದ ಸುಖಯುತ ಸಮಾಧಿಯಲ್ಲಿ ನೆಲಸುತ್ತಾನೆ. ಅದರಲ್ಲಿ ನೆಲಸುತ್ತಾನೆ.

    ನಂತರ ಸುಖಗಳನ್ನು ಹಾಗೂ ನೋವುಗಳನ್ನು ತ್ಯೇಜಿಸಿ, ಹಿಂದಿನ ಸುಖ ಹಾಗೂ ಶೋಕಗಳನ್ನು ಮೀರಿ, ಆತನು ಚತುರ್ಥ ಸಮಾಧಿಯಲ್ಲಿ ಪ್ರವೇಶಿಸಿ ನೆಲಸುತ್ತಾನೆ, ಅಲ್ಲಿ ಶುದ್ಧವಾದ ಸಮಚಿತ್ತತೆ ಹಾಗೂ ಸ್ಮೃತಿಯು ಇರುತ್ತದೆ. ಇದನ್ನೇ ಆಯುಷ್ಮಂತರೇ ಸಮ್ಮ ಸಮಾಧಿ ಎನ್ನುವರು. ಇದನ್ನೇ ಆಯುಷ್ಮಂತರೇ ದುಃಖನಿರೋಧಗಾಮಿನಿಯ ಮಾರ್ಗದ ಆರಿಯ ಸತ್ಯ ಎನ್ನುವರು.

    ಅಯುಷ್ಮಂತರೇ ತಥಾಗತರು ಅರಹಂತರು ಹಾಗೂ  ಸಮ್ಮಸಂಬುದ್ಧರಿಂದ ವಾರಣಾಸಿಯ ಋಷಿಪಟ್ಟಣದ ಮಿಗದಾಯದಲ್ಲಿ ಅನುತ್ತರವಾದ ಧಮ್ಮಚಕ್ರವು ಪ್ರವರ್ತನ(ಚಾಲಿತ)ವಾಯಿತು. ಮತ್ತು ಆ ಚಕ್ರವು ಯಾವುದೇ ಸಮಣನಿಂದಾಗಲಿ, ಅಥವಾ ಯಾವುದೇ ಬ್ರಾಹ್ಮಣನಿಂದಾಗಲಿ, ಅಥವಾ ಯಾವುದೇ ದೇವನಿಂದಾಗಲಿ, ಅಥವಾ ಯಾವುದೇ ಮಾರನಿಂದಾಗಲಿ, ಯಾವುದೇ ಬ್ರಹ್ಮನಿಂದಾಗಲಿ, ಅಥವಾ ಲೋಕಗಳಲ್ಲಿ ಯಾರಿಂದಲೇ ಆಗಲಿ ಅಪ್ರವರ್ತನ(ಅಚಾಲಿತ ಅಥವಾ ಹಿಂತಿರುಗಿ ಹೋಗುವಿಕೆ ಅಥವಾ ಸುಳ್ಳೆಂದು ಸಾಬಿತಾಗುವಿಕೆ)ವಾಗುವುದಿಲ್ಲ, ಇದು ಆರ್ಯಸತ್ಯಗಳ ಬೋದನೆಯಾಗಿದೆ, ಪ್ರತಿಪಾದನೆಯಾಗಿದೆ, ಸ್ಥಾಪನೆಯಾಗಿದೆ, ಸ್ಪಷ್ಟತೆಯಾಗಿದೆ, ವಿಶ್ಲೇಷಣೆಯಾಗಿದೆ,

  ಹೀಗೆ ಅಯುಷ್ಮಂತರಾದ ಸಾರಿಪುತ್ತರು ನುಡಿದರು. ಇದನ್ನು ಅಲಿಸಿ ಆನಂದಿತರಾಗಿದಂತಹ ಭಿಕ್ಕೂಗಳು ಸಾರಿಪುತ್ತರ ಬೊಧನೆಗೆ ಅಭಿನಂದನೆ ಮಾಡಿದರು.

   ಇಲ್ಲಿಗೆ ಹನ್ನೊಂದನೆಯ ಸಚ್ಚವಿಭಂಗ ಸುತ್ತವು ಮುಗಿಯಿತು.