Saturday, 11 October 2014

pabbajja sutta in kannada

. ಮಹಾ ವಗ್ಗ
1. ಪಬ್ಬಜ್ಜ ಸುತ್ತ
                (ಈ ಸುತ್ತದಲ್ಲಿ ಆಯುಷ್ಮಂತ ಆನಂದರು ಭಗವಾನರ ಪ್ರವಜ್ರ್ಯದ ವರ್ಣನೆ ಮಾಡಿದ್ದಾರೆ. ಇದರಲ್ಲಿ ಭಗವಾನರಿಗೆ ಬಿಂಬಿಸಾರನು ಮಾಡಿದ ಪ್ರಲೋಭನೆ ಆದರೂ ಸಹಾ ಭಗವಾನರು ಮುಕ್ತಿಯ ಅನ್ವೇಷಣೆಯಲ್ಲಿ ಮುಂದುವರೆದಿದ್ದನ್ನು ತಿಳಿಸಿದ್ದಾರೆ.)

1.            ಯಾವರೀತಿ ಚಕ್ಷುವಂತರು ಪ್ರವಜರ್ಿತರಾದರೋ, ಅವರ ಪಬ್ಬಜ್ಜವನ್ನು ನಾನು ವರ್ಣನೆ ಮಾಡುತ್ತೇನೆ. ಹೇಗೆಂದರೆ ಅವರು ಯಾವರೀತಿ ವಿಚಾರಮಾಡಿ ಪಬ್ಬಜ್ಜವನ್ನು ಇಷ್ಟಪಟ್ಟಿದ್ದರು.
2.            ಈ ಗೃಹ, ಗೃಹಸ್ಥರಾಗಿರುವುದರಲ್ಲಿ ಸಂಕಟಪೂರ್ಣವಾಗಿದೆ, ಇದು ಪಾಪದ ಮನೆಯಾಗಿದೆ (ಪಾಪ ಉತ್ಪಾದಕ). ಪಬ್ಬಜ್ಜವಾದರೋ ತೆರೆದ ಆಕಾಶದಂತೆ - ಇದನ್ನು ನೋಡಿ ಅವರು ಪಬ್ಬಜಿತರಾದರು.
3.            ಪಬ್ಬಜ್ಜರಾಗಿ ಅವರು ಶರೀರದಿಂದ ಪಾಪಕರ್ಮ ಮಾಡುವುದನ್ನು ತ್ಯಜಿಸಿದರು. ವಚನದಿಂದಲೂ, ದುಷ್ಕರ್ಮ ತ್ಯಜಿಸಿ ಆಜೀವಕದ ಪರಿಶೋಧನೆ ಪ್ರಾರಂಭಿಸಿದರು.
4.            ಬುದ್ಧರು ಮಗಧದ ಜನಪದದ ರಾಜಧಾನಿ ಗಿರಿವ್ರಜಕ್ಕೆ (ರಾಜಗೃಹ) ಹೊರಟರು. ಆ ಮೂವತ್ತೆರಡು ಮಹಾ ಲಕ್ಷಣದಿಂದ ತುಂಬಿರುವ ಬುದ್ಧರು ಭಿಕ್ಷೆಗೆ ನಗರದಲ್ಲಿ ಪ್ರವೇಶಿಸಿದರು.
5.            ಮಹಲಿನಲ್ಲಿ ನಿಂತು ರಾಜ ಬಿಂಬಿಸಾರನು ಅವರನ್ನು ನೋಡಿದನು. ಆ ದಿವ್ಯ ಲಕ್ಷಣಗಳಿಂದ ಕೂಡಿದ್ದ ಅವರನ್ನು ಕಂಡು ಈ ನುಡಿ ನುಡಿದನು.
6.            ಆಹ್! ಈ ಸುಂದರ, ಎತ್ತರದ ಮೈಕಟ್ಟಿನ ಪವಿತ್ರ ಆಚರಣೆಯಿಂದ ಯುಕ್ತವಾದ ಈ ವ್ಯಕ್ತಿಯನ್ನು ನೋಡಿ, ಆತನು ಕೇವಲ ನಾಲ್ಕು ಕೈಯಷ್ಟು ಮಾತ್ರವೇ (ಯುಗಮಾತ್ರ) ನೋಡುತ್ತಾನೆ.
7.            ಕೆಳಗೆ ಬಾಗಿಸಿರುವ ನೇತ್ರವುಳ್ಳವ, ಸ್ಮೃತಿವಂತ. ಈತನು ನೀಚಕುಲದ ಸಮಾನನಲ್ಲ, ರಾಜದೂತರೇ, ಓಡಿ ಪತ್ತೆಹಚ್ಚಿ, ಈ ಭಿಕ್ಷು ಎಲ್ಲಿ ಹೋಗುವನೆಂದು.
8.            ಕಳುಹಿಸಲ್ಪಟ್ಟಿರುವ ರಾಜದೂತರು (ಭಗವಾನರ) ಹಿಂದೆ ಹಿಂದೆಯೇ ಹಿಂಬಾಲಿಸಿದರು. ಹಾಗು ಈ ಭಿಕ್ಷು ಎಲ್ಲಿ ಹೋಗುವನು ಮತ್ತು ವಾಸಸ್ಥಳ ಎಲ್ಲಿದೆ ಎಂಬುದನ್ನು ಪತ್ತೆಹಚ್ಚಲು ಪ್ರಯತ್ನಿಸಿದರು.
9.            ಇಂದ್ರಿಯಗಳನ್ನು ರಕ್ಷಿಸುವವರು, ಸಂಯಮಿಯು, ಜಾಗರೂಕ, ಸ್ಮೃತಿವಂತರೂ, ಬೋಧಿಸತ್ತರು ಮನೆ ಮನೆಗೆ ಭಿಕ್ಷೆ ಕೇಳಿದಾಗ ಶೀಘ್ರದಲ್ಲೇ ಪಿಂಡಪಾತ್ರೆ ತುಂಬಿತು.
10.          ಭಿಕ್ಷಾಟನೆ ಮುಗಿಸಿ ಆ ಮಹಾಮುನಿಯು ನಗರದಿಂದ ಹೊರಟು, ಪಾಂಡವ ಪರ್ವತವನ್ನು ಅಲ್ಲಿಯೇ ನಿವಾಸಸ್ಥಾನ ಎಂಬಂತೆ ಏರಿದರು.
11.          ಅವರು ಅಲ್ಲಿ ನೆಲೆಯಾಗಿದ್ದನ್ನು ಕಂಡ ದೂತ ಹತ್ತಿರದಲ್ಲೇ ಕುಳಿತನು. ಮತ್ತೊಬ್ಬ ದೂತನು ರಾಜನ ಬಳಿಗೆ ಹೋಗಿ ನಿವೇದನೆ ಅಪರ್ಿಸಿದನು-
12.          ಮಹಾರಾಜರೇ, ಆ ಭಿಕ್ಷು ಶ್ರೇಷ್ಠರು ಪಾಂಡವ ಪರ್ವತದ ಪೂರ್ವದ ಕಡೆ ಕುಳಿತಿದ್ದಾರೆ. ಹೇಗೆಂದರೆ, ವ್ಯಾಘ್ರ ವೃಷಭ ಅಥವಾ ಮಹಾ ಸಿಂಹವೊಂದು ಗುಹೆಯಲ್ಲಿ ಕುಳಿತಂತೆ ಗಾಂಭೀರ್ಯವುಳ್ಳವರಾಗಿದ್ದಾರೆ.
13.          ದೂತನ ವಚನವನ್ನು ಕೇಳಿ ರಾಜನು ಉತ್ತಮ ರಥದಿಂದ ಶೀಘ್ರವೇ ಪಾಂಡವ ಪರ್ವತದ ಬಳಿ ಹೊರಟನು.
14.          ರಥ ಎಲ್ಲಿಯವರೆಗೆ ಹೋಗಬಹುದೋ ಅಲ್ಲಿಯವರೆಗೆ ರಥದಲ್ಲಿ ಹೊರಟನು. ರಥದಿಂದ ಇಳಿದು ರಾಜನು ಬರಿಗಾಲಿನಲ್ಲಿ ಭಗವಾನರ ಬಳಿ ಹೊರಟು ಅವರ ಬಳಿ ಕುಳಿತನು.
15.          ನಂತರ ರಾಜನು ಕುಳಿತು ಕುಶಲ ಮಂಗಳವನ್ನು ಕೇಳಿದನು. ಕುಶಲ ಮಂಗಳವನ್ನು ಕೇಳಿ ಈ ರೀತಿ ನುಡಿದನು-
16.          ಬಿಂಬಿಸಾರ - ತಾವು ನವಯುವಕರಾಗಿದ್ದೀರಿ, ಪ್ರಥಮ ಅವಸ್ಥೆಯ ತರುಣರಾಗಿದ್ದೀರಿ, ತಾವು ರೂಪ ಹಾಗು ಶರೀರದ ಮೈಕಟ್ಟಿನಿಂದ ಕ್ಷತ್ರಿಯರೆಂದು ಭಾಸವಾಗುತ್ತಿರುವಿರಿ.
17.          ನಾನು ಸಂಪತ್ತನ್ನು ನೀಡುತ್ತೇನೆ. ಆನೆಗಳಿಂದ ಒಳಗೊಂಡು ಇಡೀ ಸೇನೆಯನ್ನು ಸುಶೋಭಿತಗೊಳಿಸಿ ಅದರ ಉಪಭೋಗವನ್ನು ಮಾಡಿಕೊಳ್ಳಿ. ಹಾಗು ನನ್ನ ಹೇಳಿಕೆಗೆ ಪ್ರತಿಯಾಗಿ ತಮ್ಮ ಜಾತಿ ಯಾವುದೆಂದು ತಿಳಿಸಿ.
18.          ಮಹಾ ಬೋಧಿಸತ್ವರು - ಹಿಮಾಲಯದ ಕೆಳಪ್ರಾಂತದ ಒಂದು ಜನಪದದಲ್ಲಿ ಕೋಸಲ ದೇಶವಾಸಿ ಸಂಪತ್ತಿನಲ್ಲಿ ಹಾಗು ಪರಾಕ್ರಮದಲ್ಲಿ ತುಂಬಿರುವ ಒಬ್ಬ ಋಜು ರಾಜನಿದ್ದಾನೆ.
19.          ಅವರು ಗೋತ್ರದಲ್ಲಿ ಆದಿತ್ಯ (ಸೂರ್ಯ) ವಂಶಿಗಳಾಗಿದ್ದಾರೆ ಹಾಗು ಶಾಕ್ಯ ಜಾತಿಯುಳ್ಳವರಾಗಿದ್ದಾರೆ. ಹೇ ಮಹಾರಾಜ ನಾನು ಆ ಕುಲದಲ್ಲಿ ಪಬ್ಬಜ್ಜ ಆಗಿದ್ದೇನೆ. ನಾನು ಕಾಮಭೋಗಗಳ ಕಾಮನೆಯನ್ನು ಮಾಡುವುದಿಲ್ಲ.
20.          ಲೋಕದ ಕಾಮಭೋಗಗಳ ದುಷ್ಪರಿಣಾಮಗಳನ್ನು ಹಾಗು ನೈಷ್ಕಮ್ರ್ಯದ (ನೇಕ್ಖಮ್ಮ / ತ್ಯಾಗ) ಕಲ್ಯಾಣವನ್ನು ನೋಡಿ ನಾನು ತಪಸ್ಸು ಮಾಡಲು ಹೊರಟಿದ್ದೇನೆ. ಇದರಲ್ಲೇ ನನ್ನ ಮನವು ಲೀನವಾಗಿದೆ.

ಇಲ್ಲಿಗೆ ಪಬ್ಬಜ್ಜ ಸುತ್ತ ಮುಗಿಯಿತು.

Wednesday, 1 October 2014

dhammika sutta in kannada

14. ಧಮ್ಮಿಕ ಸುತ್ತ
(ಭಿಕ್ಷುಗಳ ಹಾಗು ಗೃಹಸ್ಥರ ಧರ್ಮ)
                ಹೀಗೆ ನಾನು ಕೇಳಿದ್ದೇನೆ. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿ ಅನಾಥಪಿಂಡಿಕನ ಜೇತವನಾರಾಮದಲ್ಲಿ ವಿಹರಿಸುತ್ತಿದ್ದರು. ಆಗ ಧಮ್ಮಿಕ ಉಪಾಸಕನು ಐದುನೂರು ಉಪಾಸಕರ ಸಂಗಡ ಭಗವಾನರು ಎಲ್ಲಿದ್ದರೊ ಅಲ್ಲಿಗೆ ಬಂದನು. ಭಗವಾನರಿಗೆ ಅಭಿವಂದಿಸಿ ಒಂದುಕಡೆ ಕುಳಿತನು. ಒಂದುಕಡೆ ಕುಳಿತ ಧಮ್ಮಿಕನು ಭಗವಾನರಿಗೆ ಗಾಥೆಗಳಲ್ಲಿ ಈ ರೀತಿ ಹೇಳಿದನು-

1.            ಧಮ್ಮಿಕ ಉಪಾಸಕ - ಹೇ ಮಹಾ ಪ್ರಜ್ಞಾವಂತ ಗೋತಮರೇ, ನಾನು ತಮ್ಮಲ್ಲಿ ಕೇಳುತ್ತಿದ್ದೇನೆ. ಏನೆಂದರೆ ಯಾವರೀತಿಯ ಕರ್ಮ ಮಾಡುವ ಶ್ರಾವಕ ಚೆನ್ನಾಗಿರುತ್ತಾನೆ? ಮನೆಯಿಂದ (ಭಿಕ್ಷು) ಅನಿಕೇತನನಾಗುವವನೋ ಅಥವಾ ಮನೆಯಲ್ಲಿರುವ ಉಪಾಸಕನೋ?
2.            ತಾವು ದೇವಸಹಿತ ಲೋಕದ ಗತಿ ಹಾಗು ವಿಮುಕ್ತಿ ಅರಿತಿರುವಿರಿ. ತಮ್ಮ ಸಮಾನವಾದ ಬೇರಾರು ನಿಪುಣ ಅರ್ಥದಶರ್ಿಯಿಲ್ಲ. ಜನರು ತಮಗೆ ಶ್ರೇಷ್ಠ ಬುದ್ಧರೆನ್ನುವರು. ತಾವು ಧಮ್ಮದ ಸಂಪೂರ್ಣ ಜ್ಞಾನವನ್ನು ಪ್ರಾಪ್ತಿಮಾಡಿ ಸರ್ವಜೀವಿಗಳ ಮೇಲೆ ಅನುಕಂಪ ಉಳ್ಳವರಾಗಿ ಧರ್ಮವನ್ನು ಪ್ರಕಾಶಪಡಿಸಿದ್ದೀರಿ. ತಾವು ತೆರೆದ ಚಾವಣಿಯುಳ್ಳವರು (ಜ್ಞಾನಿ) ಹಾಗು ಸಮಂತಚಕ್ಷುವುಳ್ಳವರು, ಸರ್ವ ಸಂಸಾರದಲ್ಲಿ ನಿರ್ಮಲ ಸ್ವರೂಪದಲ್ಲಿ ಸುಶೋಭಿತರಾಗಿರುವಿರಿ.
4.            ಏರಾವಣ ನಾಗರಾಜನು ಸಹಾ ತಾವು ಜಿನರೆಂದು ಕೇಳಿ ತಮ್ಮ ಬಳಿಬಂದು ತಮ್ಮಲ್ಲಿ ಮಂತ್ರಣ ಮಾಡಿ ಧಮ್ಮವನ್ನು ಕೇಳಿ ಪ್ರಸನ್ನನಾಗಿ ತುಂಬ ಒಳ್ಳೆಯದಾಯಿತು ಎಂದು ಹೇಳಿ ಹೋದನು.
5.            ರಾಜ ವೈಶ್ರವಣ ಕುಬೇರನೂ ಸಹಾ ಧಮ್ಮವನ್ನು ಪ್ರಶ್ನಿಸಲು ತಮ್ಮಲ್ಲಿ ಬಂದನು. ಹೇ ಧೀರರೇ, ಆತನ ಪ್ರಶ್ನೆಗೂ ತಾವು ಉತ್ತರಿಸಿದಿರಿ. ಆತನೂ ತಮ್ಮ ವಾಣಿ ಕೇಳಿ ಪ್ರಸನ್ನನಾಗಿ ಹೊರಟನು.
6.            ವಾದವಿವಾದ ಮಾಡುವ ಎಲ್ಲಾ ತಾಕರ್ಿಕರೂ, ಅಜೀವಕರೂ, ನಿಗಂಠರು (ಜೈನರು) ಎಲ್ಲರೂ ತಮ್ಮ ಪ್ರಜ್ಞೆಯ ಮುಂದೆ ತುಚ್ಛರಾಗಿರುವರು. ಹೇಗೆಂದರೆ ವೇಗವಾಗಿ ನಡೆಯುವವನ ಮುಂದೆ ನಿಂತಿರುವನ ಹಾಗೆ.
7.            ವಾದವಿವಾದ ಮಾಡುವ ಎಷ್ಟೇ ಬ್ರಾಹ್ಮಣರಿರಲಿ, ಎಷ್ಟೇ ವೃದ್ಧ ಬ್ರಾಹ್ಮಣರು ಅಥವಾ ಬೇರೆ ಯಾರೇ ವಾದ ವಿವಾದಗಳಲ್ಲಿ ದಕ್ಷರೆಂದು ಮಾನ್ಯರಾಗಿರುವವರೆಲ್ಲಾ ತಮ್ಮಲ್ಲಿ ಅರ್ಥದ (ಧರ್ಮ) ಬಗ್ಗೆ ಕೇಳಲು ತಮ್ಮಲ್ಲಿಗೆ ಬರುತ್ತಾರೆ.
8.            ಹೇ ಭಗವಾನ್, ತಮ್ಮಿಂದ ಉಪದಿಷ್ಟವಾದ ಯಾವ ಧರ್ಮವಿದೆಯೋ, ಅದು ಅತ್ಯುತ್ತಮವೂ, ಸೌಖ್ಯದಾಯಕವೂ ಆಗಿದೆ. ನಾವೆಲ್ಲರೂ ಅದನ್ನು ಕೇಳಲು ಇಚ್ಛುಕರಾಗಿದ್ದೇವೆ. ಹೇ ಬುದ್ಧಶ್ರೇಷ್ಠರೇ, ನಮ್ಮ ಪ್ರಶ್ನೆಗಳಿಗೆ ಉತ್ತರಿಸಿರಿ.
9.            ಇಲ್ಲಿರುವ ಸರ್ವ ಭಿಕ್ಷುಗಳು ಹಾಗು ಉಪಾಸಕರು ಕೇಳಲು ಕುಳಿತಿರುವರು. ನಿರ್ಮಲ ಬುದ್ಧರ ಅವಗತ ಧರ್ಮವನ್ನು ಕೇಳುತ್ತಾರೆ. ಹೇಗೆಂದರೆ ಇಂದ್ರನ ಉಪದೇಶ ದೇವತೆಗಳು ಕೇಳುವಂತೆ.
ಭಿಕ್ಷು ಧರ್ಮ
10.          ಬುದ್ಧ ಭಗವಾನರು - ಭಿಕ್ಷುಗಳೇ, ನನ್ನ ಮಾತು ಕೇಳಿ, ನಾನು ನಿಮಗೆ ತಿಳಿಸುತ್ತಿದ್ದೇನೆ. ನೀವು ಧಮ್ಮ ಮತ್ತು ಧುತಂಗಗಳನ್ನು ಧಾರಣೆ ಮಾಡಿ, ನಿಮ್ಮ ಆಚರಣೆ ಪ್ರವಜರ್ಿತರಿಗೆ ತಕ್ಕಂತೆ ಅನುಕೂಲವಾಗಿರಲಿ ಹಾಗು ಯಾರು ಅರ್ಥದಶರ್ಿಯೋ, ಬುದ್ಧಿವಂತ ಭಿಕ್ಷುವೋ ಆತನ ಸಂಗದಲ್ಲಿ ಬೆರೆಯಿರಿ.
11.          ಭಿಕ್ಷು ಅಸಮಯದಲ್ಲಿ ತಿರುಗಾಡುವುದು ಮಾಡಬಾರದು. ಸಮಯದಲ್ಲಿ ಭಿಕ್ಷಾಟನೆಗೆ ಗ್ರಾಮದಲ್ಲಿ ಸಂಚರಿಸಲಿ, ಅಸಮಯದಲ್ಲಿ ತಿರುಗಾಡುವವನಿಗೆ ಆಸಕ್ತಿಗಳು ಅಂಟಿಕೊಳ್ಳುತ್ತದೆ. ಆದ್ದರಿಂದ ಅಸಮಯದಲ್ಲಿ ಬುದ್ಧರು ತಿರುಗಾಡುವುದಿಲ್ಲ.
12.          ರೂಪ, ಶಬ್ದ, ಗಂಧ, ರಸ ಹಾಗು ಸ್ಪರ್ಶ - ಇವು ಪ್ರಾಣಿಗಳಿಗೆ ಮೋಹಿತನನ್ನಾಗಿ ಮಾಡುತ್ತದೆ. ಇವುಗಳಲ್ಲಿ ರಾಗ ತ್ಯಜಿಸಿ ಸಮಯದಲ್ಲಿ ಭೋಜನಕ್ಕಾಗಿ ಗ್ರಾಮದಲ್ಲಿ ಪ್ರವೇಶಿಸಲಿ.
13.          ಭಿಕ್ಷು ಸಮಯದಲ್ಲಿ ಪ್ರಾಪ್ತ ಭಿಕ್ಷೆಯನ್ನು ಸೇವಿಸಿ, ಏಕಾಂತದಲ್ಲಿ ಕುಳಿತುಕೊಳ್ಳಲಿ ಹಾಗು ತನ್ನ ಆಂತರಿಕದಲ್ಲೇ ಮನನ ಮಾಡಲಿ. ಮನವು ಬಾಹ್ಯದಲ್ಲಿ ಹೋಗದಿರಲಿ ಮತ್ತು ಚಿತ್ತವನ್ನು ಏಕಾಗ್ರ ಮಾಡಲಿ.
14.          ಒಂದುವೇಳೆ ಯಾರಾದರೂ ಶ್ರಮಣ ಅಥವಾ ಆರ್ಯ ಭಿಕ್ಷುವಿನೊಂದಿಗೆ ಮಾತನಾಡಬೇಕಾದರೆ ಆತನು ಉತ್ತಮವಾದ ಧರ್ಮದ ಮಾತು ಆಡಲಿ. ಅದರ ಹೊರತು ಚಾಡಿ ಅಥವಾ ನಿಂದೆ ಮಾಡದಿರಲಿ.
15.          ಕೆಲವರು ವಾದ-ವಿವಾದ ಮಾಡುತ್ತಿರುತ್ತಾರೆ. ಅಂತಹ ಅಲ್ಪ ಪ್ರಜ್ಞೆವುಳ್ಳವರಿಗೆ ನಾವು ಪ್ರಶಂಸೆ ಮಾಡುವುದಿಲ್ಲ. ಈ ಕಡೆ, ಆ ಕಡೆಗಳಿಂದ ಆಸಕ್ತಿಯು ಅಂಟುತ್ತದೆ ಮತ್ತು ಅವರ ಚಿತ್ತವು ಅಂತಹ ವಾದ ವಿವಾದಗಳಲ್ಲೇ ದೂರದವರೆಗೂ ಹೋಗುತ್ತದೆ.
16.          ಬುದ್ಧರ ಉತ್ತಮ ಪ್ರಜ್ಞೆಯುಳ್ಳ ಶ್ರಾವಕನು ಸುಗತರ ಉಪದಿಷ್ಟ ಧರ್ಮವನ್ನು ಕೇಳಿ ಭಿಕ್ಷೆ, ವಿಹಾರ, ಶಯನಾಸನ, ಜಲ ಹಾಗೂ ಸಂಘಾಟಿಯ ಕೊಳೆಯನ್ನು ತೊಳೆಯುವುದು. ಇವುಗಳನ್ನು ವಿಚಾರ ಪೂರ್ವಕವಾಗಿ ಸೇವಿಸುತ್ತಾನೆ.
17.          ಆದ್ದರಿಂದ ಭಿಕ್ಷೆ, ಶಯನಾಸನ, ಜಲ ಹಾಗು ಸಂಘಾಟಿಯ ಕೊಳೆಯನ್ನು ತೊಳೆಯುವುದರಲ್ಲಿ ಆತನು ಆಸಕ್ತರಹಿತನಾಗಿರುತ್ತಾನೆ. ಹೇಗೆಂದರೆ ಕಮಲಪತ್ರದಲ್ಲಿರುವ ಜಲಬಿಂದುವಿನಂತೆ.
ಗೃಹಸ್ಥ ಧರ್ಮ
18.          ಈಗ ನಾನು ಗೃಹಸ್ಥ ಧರ್ಮ ಹೇಳುತ್ತೇನೆ. ಯಾವ ಕ್ರಿಯೆಗಳನ್ನು ಶ್ರೇಷ್ಠ ಭಿಕ್ಷು ಮಾಡುತ್ತಾನೋ, ಹಾಗು ಯಾವ ಸಂಪೂರ್ಣ ಭಿಕ್ಷು ಧರ್ಮವಿದೆಯೋ ಅದರ ಪಾಲನೆ ಸಪರಿಗ್ರಹಿ ಗೃಹಸ್ಥನಿಂದ ಮಾಡಲಾಗುವುದಿಲ್ಲ.
19.          ಲೋಕದಲ್ಲಿ ಯಾವ ಸ್ಥಿರವಾದ ಹಾಗು ಚಲಿಸುವ ಜೀವಿಗಳಿವೆಯೋ, ಅವುಗಳ ಪ್ರಾಣದ ಹತ್ಯೆ ಮಾಡದಿರಲಿ ಹಾಗು ಮಾಡಿಸದಿರಲಿ ಮತ್ತು ಅವುಗಳ ಹತ್ಯೆಗೆ ಆಜ್ಞೆ ನೀಡದಿರಲಿ. ಸರ್ವ ಜೀವಿಗಳ ಬಗ್ಗೆ ದಂಡ (ಶಸ್ತ್ರ) ತ್ಯಜಿಸಲಿ.
20.          ಪರರ ವಸ್ತುವೆಂದು ಅರಿಯಲ್ಪಡುವ ಯಾವುದೇ ವಸ್ತುವನ್ನು ಅಪಹರಿಸುವುದು ತ್ಯಜಿಸಲಿ, ಕಳ್ಳತನ ಮಾಡದಿರಲಿ ಹಾಗು ಕಳ್ಳತನ ಮಾಡಲು ಪರರಿಗೆ ಅನುಮತಿಯನ್ನು ನೀಡದಿರಲಿ, ಸರ್ವರೀತಿಯ ಕಳ್ಳತನವನ್ನು ತ್ಯಾಗಮಾಡಲಿ.
21.          ಅಬ್ರಹ್ಮಚರ್ಯವನ್ನು ಉರಿಯುತ್ತಿರುವ ಬೆಂಕಿಯ ರಾಶಿಯ ರೀತಿ ತ್ಯಜಿಸಲಿ. ವಿಜ್ಞಪುರುಷನು ಈ ರೀತಿ ವತರ್ಿಸುತ್ತಾನೆ. ಬ್ರಹ್ಮಚರ್ಯದ ಪಾಲನೆ ಮಾಡದಿದ್ದರೂ ಸಹಾ ಪರಸ್ತ್ರೀಯನ್ನು ಸೇವಿಸದಿರಲಿ.
22.          ಸಭೆ ಅಥವಾ ಪರಿಷತ್ತಿನಲ್ಲಿ ಹೋಗಿ ಪರರ ಮೇಲೆ ಸುಳ್ಳು ಹೇಳದಿರಲಿ, ಆತನು ಸಹಾ ಸುಳ್ಳು ಹೇಳದಿರಲಿ ಹಾಗು ಪರರಿಗೆ ಸುಳ್ಳು ಹೇಳಲು ಅನುಮತಿ ನೀಡದಿರಲಿ. ಸರ್ವ ಪ್ರಕಾರದ ಅಸತ್ಯ ಭಾಷಣ (ನುಡಿ) ತ್ಯಾಗಮಾಡಲಿ.
23.          ಯಾವ ಗೃಹಸ್ಥನು ಧರ್ಮವನ್ನು ಇಷ್ಟಪಡುವನೋ, ಆತನು ಮದ್ಯಪಾನ ಮಾಡದಿರಲಿ, ಪರರಿಗೆ ಕುಡಿಸದಿರಲಿ ಹಾಗು ಪರರಿಗೆ ಕುಡಿಯಲು ಅನುಮತಿಯನ್ನು ನೀಡದಿರಲಿ. ಇದು ಉನ್ಮಾದಕರ ಎಂದು ಅರಿತು ತಪ್ಪು ಮಾಡದಿರಲಿ.
24.          ಮೂರ್ಖ ಜನರು ಮದದ ಕಾರಣದಿಂದ ಪಾಪ ಮಾಡುತ್ತಾರೆ ಹಾಗು ಬೇರೆಯ ಪ್ರಮತ್ತ ಜನರಿಂದ ಪಾಪ ಮಾಡಿಸುತ್ತಾರೆ. ಈ ಪಾಪದ ಮನೆಯನ್ನು ತ್ಯಜಿಸಲಿ, ಪಾಪವು ಉನ್ಮಾದಕ, ಮೋಹಕವಾಗಿದೆ ಮತ್ತು ಮೂರ್ಖರಿಗೆ ಪ್ರಿಯವಾಗಿರುತ್ತದೆ.
25.          ಜೀವಹತ್ಯೆ ಮಾಡಬೇಡಿ, ಕಳ್ಳತನ ಮಾಡಬೇಡಿ, ಸುಳ್ಳು ಹೇಳಬೇಡಿ ಮತ್ತು ಮದ್ಯ ಸೇವಿಸಬೇಡಿ. ಅಬ್ರಹ್ಮಚರ್ಯ ಮತ್ತು ಮೈಥುನದಿಂದ ವಿರತರಾಗಿರಿ ಹಾಗು ರಾತ್ರಿಯಲ್ಲಿ ಭೋಜನ ಮಾಡದಿರಿ.
26.          ಮಾಲೆಯನ್ನು ಧರಿಸದಿರಿ, ಗಂಧವನ್ನು ಲೇಪಿಸದಿರಿ, ಕುಚರ್ಿ ಅಥವಾ ಭೂಮಿಯ ಮೇಲೆ ಮಲಗಿ. ಇದನ್ನು ಅಷ್ಠಾಂಗಿಕ ಉಪೋಸಥ ಎನ್ನುತ್ತಾರೆ. ದುಃಖದ ಅಂತ್ಯದ ಪಾರಂಗತ ಬುದ್ಧರಿಂದ ಇದು ಪ್ರಕಾಶಿತವಾಗಿದೆ.
27.          ಪ್ರತ್ಯೇಕ ಪಕ್ಷದ ಚತುರ್ದಶಿ, ಪೂಣರ್ಿಮೆ, ಅಷ್ಟಮಿ ಹಾಗೂ ಪ್ರತಿಹಾರ್ಯ ಪಕ್ಷದಲ್ಲಿ ಪ್ರಸನ್ನ ಮನದಿಂದ ಅಷ್ಠಾಂಗ ಉಪಸೋತದ ಪಾಲನೆ ಮಾಡಿರಿ.
28.          ಆಗ ಎಲ್ಲಾ ಪುರುಷರು ಪ್ರಾತಃ ಉಪೋಸಥವನ್ನು ಗ್ರಹಣ ಮಾಡಿ ತಮ್ಮ ಶಕ್ತಿಗೆ ಅನುಸಾರವಾಗಿ ಶ್ರದ್ಧಾಪೂರ್ವಕವಾಗಿ ಅನುಮೋದನೆ ಮಾಡುತ್ತಾ ಪ್ರಸನ್ನತೆಯಿಂದ ಭಿಕ್ಷು ಸಂಘಕ್ಕೆ ಅನ್ನ ಹಾಗು ಪೇಯದ ದಾನ ನೀಡಲಿ.
29.          ಧರ್ಮದಿಂದ ಮಾತಾಪಿತರ ಪೋಷಣೆ ಮಾಡಲಿ. ಯಾವುದೇ ಧಾಮರ್ಿಕ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಲಿ. ಯಾವ ಅಪ್ರಮತ್ತನು (ಜಾಗರೂಕ) ಈ ವ್ರತವನ್ನು ಪಾಲಿಸುವನೋ ಆತನು ಸ್ವಯಂಪ್ರಭ ಎಂಬ ದೇವಲೋಕದಲ್ಲಿ ಉತ್ಪನ್ನನಾಗುತ್ತಾನೆ.
ಇಲ್ಲಿಗೆ ಧಮ್ಮಿಕ ಸುತ್ತ ಮುಗಿಯಿತು.
ಇಲ್ಲಿಗೆ ಚೂಳ ವಗ್ಗ ಮುಗಿಯಿತು.
ಸಾರಾಂಶ -
                ರತನ, ಗಂಧ, ಹರಿ ಹಾಗು ಮಂಗಲ ಸೂತಿಲೋಮ ಸುತ್ತಗಳು
                ಹಾಗೆಯೆ ಧಮ್ಮಚರಿಯ, ಬ್ರಾಹ್ಮಣ ಸುತ್ತಗಳೊಡನೆ ನಾವಾ, ಕಿಂಸಿಲ, ಉಟ್ಠಾನ ಸುತ್ತಗಳು
                ರಾಹುಲ, ಕಪ್ಪ, ಪರಿಬ್ಬಾಜನಿಯ ಸುತ್ತಗಳು ಕೂಡ

                ಮತ್ತು ಧಮ್ಮಿಕ ಸುತ್ತದೊಂದಿಗೆ ಚೂಳವಗ್ಗದಲ್ಲಿ ಹದಿನಾಲ್ಕು ಸುತ್ತಗಳಿವೆ

samma paribbaajaneeya sutta

13. ಸಮ್ಮಾ ಪರಿಬ್ಬಾಜನೀಯ ಸುತ್ತ
(ಭಿಕ್ಷುಗಳು ಆಚರಣನೀಯ ಧಮ್ಮ)
1.            ಹೇ ಮಹಾಪ್ರಾಜ್ಞರೇ, ಸಂಸಾರ ಸಾಗರವನ್ನು ದಾಟಿ ಮುಕ್ತರಾಗಿರುವ, ಸ್ಥಿರವಾಗಿರುವಂತಹ ಮುನಿಯನ್ನು ನಾವು ಕೇಳುವುದೇನೆಂದರೆ ಕಾಮಭೋಗಗಳ ತ್ಯಾಗಮಾಡಿ, ಮನೆಯನ್ನು ತೊರೆದು ಭಿಕ್ಷು ಹೇಗೆ ಸಮ್ಯಕ್ ಪ್ರಕಾರದಿಂದ ಲೋಕದಲ್ಲಿ ಸಂಚರಿಸುವನು.

2.            ಭಗವಾನ್ ಬುದ್ಧ - ಯಾರಲ್ಲಿ ಮಾಂಗಳಿಕ ಕರ್ಮಗಳಾದ (ಉಲ್ಕಾಪಾತ ಇತ್ಯಾದಿ) ಉತ್ಪಾತಗಳ, ಸ್ವಪ್ನಗಳ ಮಾತುಗಳು, ಲಕ್ಷಣ ಹಾಗು ಸಾಮುದ್ರಿಕಾ ಶಾಸ್ತ್ರಗಳ ವಿಶ್ವಾಸ ನಷ್ಟವಾಗಿದೆಯೋ, ಯಾರು ಮಂಗಳ ದೋಷ (ಶಕುನ, ಅಪಶಕುನ)ಗಳಿಂದ ಮುಕ್ತನಾಗಿರುವನೋ, ಆತನೇ ಲೋಕದಲ್ಲಿ ಸಮ್ಯಕ್ ಪ್ರಕಾರದಿಂದ ಸಂಚರಿಸುವನು.
3.            ಯಾವ ಭಿಕ್ಷು ಮಾನವ ಲೋಕದ ಸರ್ವ ಕಾಮಭೋಗಗಳು ಹಾಗು ಸ್ವಗರ್ಿಯ ಲೋಕಗಳ ಬಗ್ಗೆ ರಾಗವನ್ನು ತ್ಯಜಿಸಿರುವನೋ, ಧರ್ಮವನ್ನು ಚೆನ್ನಾಗಿ ಅರಿತಿರುವನೋ ಭವವನ್ನು ದಾಟುವಂತಹ ಆತನೇ ಲೋಕದಲ್ಲಿ ಸಮ್ಯಕ್ ಪ್ರಕಾರದಿಂದ ಸಂಚರಿಸುವನು.
4.            ಯಾವ ಭಿಕ್ಷುವು ಚಾಡಿ, ಕ್ರೋಧವನ್ನು ತ್ಯಜಿಸಿ ಜಿಪುಣತನವನ್ನು ವಜರ್ಿಸಿ, ಅನುರೋಧ-ವಿರೋಧಗಳಿಂದ ರಹಿತನಾಗಿರುವ ಆತನೇ ಈ ಲೋಕದಲ್ಲಿ ಸಮ್ಯಕ್ ಪ್ರಕಾರದಿಂದ ಸಂಚರಿಸುವನು.
5.            ಯಾವ ಭಿಕ್ಷು ಪ್ರಿಯ-ಅಪ್ರಿಯಗಳನ್ನು ವಜರ್ಿಸಿ, ಎಲ್ಲಿಯೂ ಅನುರಾಗ ಅಥವಾ ತೃಷ್ಣೆಯನ್ನು ಮಾಡದೆ ಬಂಧನಗಳಿಂದ ಮುಕ್ತನಾಗಲಿ. ಆತನೇ ಈ ಲೋಕದಲ್ಲಿ ಸಮ್ಯಕ್ ಪ್ರಕಾರದಿಂದ ಸಂಚರಿಸುವನು.
6.            ಯಾವ ಭಿಕ್ಷು ಸಾಂಸಾರಿಕ ಆಸಕ್ತಿಗಳಲ್ಲಿ ಸಾರವನ್ನು ಕಾಣುವುದಿಲ್ಲವೋ, ಪರಿಗ್ರಹದ ವಿಷಯದಲ್ಲಿ ಇಚ್ಛೆ ಅಥವಾ ಆನಂದ ತ್ಯಾಗ ಮಾಡಿರುವನೋ ಮತ್ತು ತೃಷ್ಣಾರಹಿತನಾಗಿರುವನೋ, ಪರರ (ಪ್ರಾಪಂಚಿಕರ) ಅನುಸರಣೆ ಮಾಡುವುದಿಲ್ಲವೋ, ಆತನೇ ಈ ಲೋಕದಲ್ಲಿ ಸಮ್ಯಕ್ ಪ್ರಕಾರದಿಂದ ಸಂಚರಿಸುವನು.
7.            ಯಾವ ಭಿಕ್ಷು ವಚನದಲ್ಲಿ, ಮನದಲ್ಲಿ ಹಾಗು ಕ್ರಿಯೆಯಲ್ಲಿ ವಿರೋಧರಹಿತನಾಗಿರುವನೋ, ಚೆನ್ನಾಗಿ ಧರ್ಮವನ್ನು ಅರಿತು ನಿಬ್ಬಾಣ ಪದಕ್ಕಾಗಿ ಆಕಾಂಕ್ಷಿಸುವನೋ, ಆತನೇ ಈ ಲೋಕದಲ್ಲಿ ಸಮ್ಯಕ್ ಪ್ರಕಾರದಿಂದ ಸಂಚರಿಸುವನು.
8.            ಪರರು ನನಗೆ ವಂದಿಸುತ್ತಾರೆ ಎಂದು ಯೋಚಿಸಿ ಯಾವ ಭಿಕ್ಷು ಗವರ್ಿಸುವುದಿಲ್ಲವೋ, ಆಕ್ರೋಶವನ್ನುಂಟು ಮಾಡಿದರೂ ವೈಮನಸ್ಯ ಮಾಡುವುದಿಲ್ಲವೋ, ಪರರಿಂದ ಭೋಜನ ಗ್ರಹಿಸಿ ಪ್ರಮತ್ತನಾಗುವುದಿಲ್ಲವೋ, ಆತನೇ ಈ ಲೋಕದಲ್ಲಿ ಸಮ್ಯಕ್ ಪ್ರಕಾರದಿಂದ ಸಂಚರಿಸುವನು.
9.            ಯಾವ ಭಿಕ್ಷು ಲೋಭ ಮತ್ತು ತೃಷ್ಣೆಯನ್ನು ತ್ಯಜಿಸಿ ವಧೆ ಬಂಧನದಿಂದ ರಹಿತನಾಗಿರುವನೋ, ಸಂಶಯವನ್ನು ದಾಟಿರುವನೋ, ನಿಷ್ಕಾಮನಾಗಿರುವನೋ, ಆತನೇ ಈ ಲೋಕದಲ್ಲಿ ಸಮ್ಯಕ್ ಪ್ರಕಾರದಿಂದ ಸಂಚರಿಸುವನು.
10.          ಆ ಭಿಕ್ಷುವು ತನ್ನ ಅನುರೂಪತೆಯನ್ನು ಅರಿತು, ಲೋಕದಲ್ಲಿ ಯಾರಿಗೂ ಹಿಂಸೆ ಮಾಡದಿರಲಿ ಹಾಗು ಯಥಾರ್ಥ ರೂಪದಲ್ಲಿ ಧರ್ಮವನ್ನು ಅರಿಯಲಿ. ಆತನೇ ಈ ಲೋಕದಲ್ಲಿ ಸಮ್ಯಕ್ ಪ್ರಕಾರದಿಂದ ಸಂಚರಿಸುತ್ತಾನೆ.
11.          ಯಾವ ಭಿಕ್ಷುವಿನಲ್ಲಿ ಯಾವುದೇ ಪ್ರಕಾರದ ಆಸಕ್ತಿಯಿಲ್ಲವೋ, ಅಕುಶಲದ ಪಾಪ ಮೂಲವು ನಷ್ಟವಾಗಿದೆಯೋ ಹಾಗು ತೃಷ್ಣೆ ಅಥವಾ ಆಸಕ್ತಿರಹಿತನೋ, ಆತನೇ ಈ ಲೋಕದಲ್ಲಿ ಸಮ್ಯಕ್ ಪ್ರಕಾರದಿಂದ ಸಂಚರಿಸುತ್ತಾನೆ.
12.          ಯಾವ ಭಿಕ್ಷು ಆಸವ ಕ್ಷೀಣನೋ, ಅಭಿಮಾನರಹಿತನೋ, ಸಂಪೂರ್ಣ ರಾಗ ಪಥವನ್ನು ದಾಟಿ ಹೋಗಿರುವನೋ, ಯಾರು ದಾಂತನೋ, ಉಪಶಾಂತನೋ ಹಾಗು ಸ್ಥಿರನೋ, ಆತನೇ ಈ ಲೋಕದಲ್ಲಿ ಸಮ್ಯಕ್ ಪ್ರಕಾರದಿಂದ ಸಂಚರಿಸುತ್ತಾನೆ.
13.          ಯಾವ ಭಿಕ್ಷು ಶ್ರದ್ಧಾಶೀಲನೋ, ಶ್ರುತಮಾನನೋ, ನಿಬ್ಬಾಣಪದ ದಶರ್ಿಯೋ, ದಳಗಳಲ್ಲಿ ನಿಷ್ಪಕ್ಷಪಾತಿಯೋ ಮತ್ತು ಯಾವ ಧೀರನೂ, ಲೋಭ, ದ್ವೇಷ ಹಾಗು ಪ್ರತಿಹಿಂಸೆ ಭಾವನೆಯನ್ನು ತ್ಯಜಿಸಿರುವನೋ ಆತನೇ ಈ ಲೋಕದಲ್ಲಿ ಸಮ್ಯಕ್ ಪ್ರಕಾಶದಿಂದ ಸಂಚರಿಸುವನು.
14.          ಯಾವ ಭಿಕ್ಷು ಸುವಿಶುದ್ಧ - ಸ್ವಜಯಿಯೋ, ತೆರೆದ ಚಾವಣಿಯುಳ್ಳವನೋ (ಜ್ಞಾನಿ), ಧರ್ಮಗಳ ವಶಿಪ್ರಾಪ್ತನೋ, ಪಾರಂಗತನೋ, ತೃಷ್ಣಾರಹಿತನೋ ಹಾಗು ಸಂಖಾರಗಳ ನಾಶದಲ್ಲಿ ಕುಶಲನೋ, ಆತನೇ ಈ ಲೋಕದಲ್ಲಿ ಸಮ್ಯಕ್ ಪ್ರಕಾರದಿಂದ ಸಂಚರಿಸುವನು.
15.          ಯಾವ ಭಿಕ್ಷು ಭೂತ ಹಾಗು ಭವಿಷ್ಯಗಳ ಮಾತುಗಳಿಂದ ಬಹುದೂರನೋ, ಯಾರು ಅತ್ಯಂತ ವಿಶುದ್ಧ ಪ್ರಜ್ಞಾವುಳ್ಳವನೋ, ಸರ್ವ ಇಂದ್ರಿಯಗಳಿಂದ ಮುಕ್ತನೋ, ಆತನೇ ಈ ಲೋಕದಲ್ಲಿ ಸಮ್ಯಕ್ ಪ್ರಕಾರದಿಂದ ಸಂಚರಿಸುವನು.
16.          ಯಾವ ಭಿಕ್ಷು ಪದಗಳನ್ನು (ಚತುರಾರ್ಯ ಸತ್ಯಗಳು) ಅರಿತವನೋ, ಧರ್ಮಜ್ಞನೋ, ಆಸವಗಳ ಅಂಗಳದಿಂದ ನಿಬ್ಬಾಣದವರೆಗೂ ಯಥಾರ್ಥವಾಗಿ ನೋಡಿರುವನೋ, ಸರ್ವ ಆಸಕ್ತಿಗಳನ್ನು ನಷ್ಟ ಮಾಡಿರುವನೋ, ಆತನೇ ಈ ಲೋಕದಲ್ಲಿ ಸಮ್ಯಕ್ ಪ್ರಕಾರದಿಂದ ಸಂಚರಿಸುವನು.
17.          ನಿಶ್ಚಯವಾಗಿಯೂ ಭಗವಾನ್, ಇದು ಅಂತಹ ಸಂಗತಿಯಾಗಿದೆ. ಯಾರು ಈ ಪ್ರಕಾರದಿಂದ ವಿಹರಿಸುವನೋ, ಆ ದಾಂತನು ಸರ್ವ ಬಂಧನರಹಿತ ಭಿಕ್ಷು ಆಗಿರುತ್ತಾನೆ. ಆತನೇ ಈ ಲೋಕದಲ್ಲಿ ಸಮ್ಯಕ್ ಪ್ರಕಾರದಿಂದ ಸಂಚರಿಸುತ್ತಾನೆ.

ಇಲ್ಲಿಗೆ ಸಮ್ಮಾ ಪರಿಬ್ಬಾಜನೀಯ ಸುತ್ತ ಮುಗಿಯಿತು.

vangeesa sutta in kannada

12. ವಂಗೀಸ ಸುತ್ತ
                ಹೀಗೆ ನಾನು ಕೇಳಿದ್ದೇನೆ, ಒಮ್ಮೆ ಭಗವಾನರು ಅಳವಿಯ ಅಗ್ಗಾಲವ ಚೈತ್ಯದಲ್ಲಿ ವಿಹರಿಸುತ್ತಿದ್ದರು. ಆಗ ಆಯುಷ್ಮಂತ ವಂಗೀಶನ ಉಪಾಧ್ಯಾಯ ನ್ಯುಗ್ರೋಧಕಲ್ಪನೆಂಬ ಸ್ಥವಿರರು ಕೆಲವು ದಿನಗಳ ಹಿಂದೆ ಅಗ್ಗಾಲವ ಚೈತ್ಯದಲ್ಲಿ ಪರಿನಿಬ್ಬಾಣ ಪ್ರಾಪ್ತಿಮಾಡಿದ್ದರು. ಆಗ ಆಯುಷ್ಮಂತ ವಂಗೀಸನಿಗೆ ಏಕಾಂತದಲ್ಲಿ ಧ್ಯಾನನಿರತನಾಗಿದ್ದಾಗ ಚಿತ್ತದಲ್ಲಿ ಈ ವಿತರ್ಕ ಉಂಟಾಯಿತು- ನನ್ನ ಉಪಾಧ್ಯಾಯರ ಪರಿನಿಬ್ಬಾಣ ಆಯಿತೋ ಅಥವಾ ಇಲ್ಲವೋ ಎಂದು. ಆಗ ಆಯುಷ್ಮಂತ ವಂಗೀಸ ಸಾಯಂಕಾಲ ಧ್ಯಾನದಿಂದೆದ್ದು, ಭಗವಾನರು ಎಲ್ಲಿದ್ದರೋ ಅಲ್ಲಿ ಬಂದನು. ಒಂದುಕಡೆ ಕುಳಿತ ಆಯುಷ್ಮಂತ ವಂಗೀಸನು ಭಗವಾನರಿಗೆ ಈ ರೀತಿ ಹೇಳಿದನು- ಭಂತೆ, ನನಗೆ ಏಕಾಂತದಲ್ಲಿ ಧ್ಯಾನನಿರತನಾಗಿದ್ದಾಗ ಈ ರೀತಿ ವಿತರ್ಕ ಉಂಟಾಯಿತು. ಏನೆಂದರೆ ನನ್ನ ಉಪಾಧ್ಯಾಯರ ಪರಿನಿಬ್ಬಾಣ ಆಯಿತೋ ಅಥವಾ ಇಲ್ಲವೋ ಎಂದು. ಗಾಥೆಗಳಲ್ಲಿ ಈ ರೀತಿ ಹೇಳಿದನು -


1.            ಆಯುಷ್ಮಂತ ವಂಗೀಸ - ಈ ಜನ್ಮದಲ್ಲಿ ಯಾರು ಮಹಾ ಪ್ರಜ್ಞಾವಂತರು ಹಾಗು ಸಂಶಯಗಳನ್ನು ದೂರಮಾಡುವ ಶಾಸ್ತರಿರುವರೋ (ಬುದ್ಧ) ಅವರಿಂದ ನಾನು ಆ ಪ್ರಸಿದ್ಧ, ಯಶಸ್ವಿ, ಶಾಂತಚಿತ್ತ ಭಿಕ್ಷುವಿನ ಸಂಬಂಧದಲ್ಲಿ ಕೇಳುತ್ತಿದ್ದೇನೆ, ಅವರ ದೇಹಾಂತವು ಅಗ್ಗಾಲವದಲ್ಲಿ ಆಗಿತ್ತು.
2.            ಹೇ ಭಗವಾನ್ ತಾವೇ ಆ ಬ್ರಾಹ್ಮಣರಿಗೆ ನಿಗ್ರೋಧಕಲ್ಪ ಎಂದು ಹೆಸರು ಕೊಟ್ಟಿದ್ದೀರಿ. ಆ ಪರಿಶ್ರಮಿ, ದೃಢ ಧರ್ಮದಶರ್ಿಯು ಮುಕ್ತಿಯ ಕಾಮನೆಯಿಂದ ತಮಗೆ ನಮಸ್ಕರಿಸುತ್ತ ಸಂಚರಿಸುತ್ತಿದ್ದರು.
3.            ಹೇ ಸಮಂತ ಚಕ್ಷುವುಳ್ಳ ಶಾಕ್ಯರೇ, ನಾವು ಆ ಶ್ರಾವಕನ ಬಗ್ಗೆ ಅರಿಯಲು ಇಚ್ಛಿಸುತ್ತೇವೆ. ನಮ್ಮ ಕಿವಿಗಳು ಕೇಳಲು ಸಿದ್ಧವಾಗಿದೆ. ತಾವು ನಮ್ಮ ಶಾಸ್ತರಾಗಿದ್ದೀರಿ. ತಾವು ಸವರ್ೊತ್ತಮರು ಆಗಿದ್ದೀರಿ.
4.            ಹೇ ಮಹಾಪ್ರಾಜ್ಞರೇ, ನಮ್ಮ ಸಂಶಯಗಳನ್ನು ದೂರಮಾಡಿ, ತಾವು ಅವರ ಪರಿನಿಬ್ಬಾಣವನ್ನು ಪಡೆದಿದ್ದಾರೆಯೆ ಎಂಬುದನ್ನು ತಿಳಿಸಿ. ಹೇ ಸಮಂತ ಚಕ್ಷು, ಯಾವರೀತಿ ಸಹಸ್ರ ನೇತ್ರ ಇಂದ್ರ ದೇವಲೋಕದ ಮಧ್ಯೆ ನುಡಿಯುವನೋ, ಅದೇರೀತಿ ತಾವು ಸದಾ ನಮ್ಮ ಮಧ್ಯೆ ನುಡಿಯಿರಿ.
5.            ಇಲ್ಲಿ ಮೋಹದ ಕಡೆ ಕರೆದುಕೊಂಡು ಹೋಗುವ, ಅಜ್ಞಾನ ಸಂಬಂಧಿ, ಸಂಶಯ ಉತ್ಪತ್ತಿ ಯಾವ ಗ್ರಂಥಿಗಳಿವೆಯೋ, ಅವೆಲ್ಲವೂ ತಥಾಗತರ ಬಳಿ ಸೇರಿದ ನಂತರ ಸರ್ವವೂ ನಷ್ಟವಾಗುತ್ತವೆ. ತಥಾಗತರೇ ಮನುಷ್ಯರಲ್ಲಿ ಅತ್ಯುತ್ತಮ ಚಕ್ಷು ಆಗಿದ್ದಾರೆ.
6.            ಹೇಗೆ ಆಕಾಶದಲ್ಲಿ ಗಾಳಿಯು ಮೋಡಗಳನ್ನು ದೂರೀಕರಿಸುವುದೋ, ಹಾಗೆಯೇ ತಮ್ಮ ಸಮಾನವಾಗಿ ಮನುಷ್ಯರಲ್ಲಿ ವಾಸನೆಗಳನ್ನು ದೂರ ಮಾಡದಿದ್ದರೆ ಲೋಕವು ಮೋಹದಿಂದ, ಆವೃತವಾಗುತ್ತದೆ ಮತ್ತು ಪ್ರಜ್ಞಾವಂತ ಪುರುಷನು ಬೆಳಗುವುದಿಲ್ಲ.
7.            ಧೀರರು ಪ್ರಕಾಶ ನೀಡಬಲ್ಲವರಾಗಿರುತ್ತಾರೆ. ಹೇ ಧೀರರೇ, ನಾನು ತಮ್ಮನ್ನು ಹಾಗೆಯೇ ತಿಳಿಯುತ್ತೇನೆ. ನಾವು ಭಗವಾನರನ್ನು ಸರ್ವದಶರ್ಿ ಎಂದು ತಿಳಿಯಬಂದಿದ್ದೇವೆ. ಈ ಪರಿಷತ್ತಿಗೆ ನ್ಯುಗ್ರೋಧಕಲ್ಪರ ವಿಷಯವಾಗಿ ತಿಳಿಸಿರಿ.
8.            ಯಾವರೀತಿ ಹಂಸವು ಬೇಗ ಬೇಗ ಮಧುರವಾಣಿಯಲ್ಲಿ ಹೇಳುತ್ತದೋ, ಹಾಗೆಯೇ ತಾವು ಸಹಾ ಶೀಘ್ರವಾಗಿ ಸ್ಪಷ್ಟರೂಪದಲ್ಲಿ ಮಧುರ-ಮಧುರ ವಾಣಿಯಲ್ಲಿ ಹೇಳಿರಿ. ನಾವೆಲ್ಲರೂ ಅದನ್ನು ಧ್ಯಾನಪೂರ್ವಕ ಕೇಳುತ್ತೇವೆ.
9.            ತಾವು ಸಂಪೂರ್ಣ ಜನ್ಮ-ಮೃತ್ಯುವಿನ ನಾಶ ಮಾಡಿದ್ದೀರಿ. ನಾನು ಸುಪರಿಶುದ್ಧರಾದ ತಮ್ಮಲ್ಲಿ ಉಪದೇಶಕ್ಕಾಗಿ ಅನುರೋಧ ಮಾಡುತ್ತೇನೆ. ಸಾಮಾನ್ಯ ಜನರ ಇಚ್ಛೆಗಳು ಪೂರ್ಣವಾಗುವುದಿಲ್ಲ. ತಥಾಗತರಂತು ಪ್ರಜ್ಞಾನುಸಾರವಾಗಿ ಕ್ರಿಯೆ ಮಾಡುತ್ತಾರೆ.
10.          ಹೇ ರುಜು ಪ್ರಜ್ಞಾ ತಮ್ಮ ಈ ಸಂಪೂರ್ಣ ಕಥನವನ್ನು ನಾವು ಸರಿಯಾಗಿ ಗ್ರಹಿಸಿದ್ದೇವೆ. ಇದು ನನ್ನ ಅಂತಿಮ ಪ್ರಣಾಮವಾಗಿದೆ. ಹೇ ಮಹಾಪ್ರಾಜ್ಞರೇ, ನಮ್ಮನ್ನು ಭ್ರಮೆಯಲ್ಲಿ ಇರಿಸದಿರಿ.
11.          ಮಹಾಪ್ರಾಜ್ಞರೇ, ಆರಂಭದಿಂದ ಅಂತ್ಯದವರೆಗೆ ಆರ್ಯ ಧರ್ಮವನ್ನು ಅರಿತು ತಾವು ನಮಗೆ ಭ್ರಮೆಯಲ್ಲಿ ಇರಿಸದಿರಿ. ಯಾವರೀತಿ ಬೇಸಿಗೆಯಲ್ಲಿ ಉಷ್ಠ ಪೀಡಿತನೊಬ್ಬನು ನೀರಿಗಾಗಿ ಹಾತೊರೆಯುತ್ತಾನೋ, ಅದೇರೀತಿಯಲ್ಲಿ ತಮ್ಮ ವಚನಕ್ಕಾಗಿ ಆಕಾಂಕ್ಷೆಪಡುತ್ತಿದ್ದೇನೆ. ತಾವು ನುಡಿ ವರ್ಷವನ್ನು ಸುರಿಸಿರಿ.
12.          ಕಪ್ಪಾಯನರು (ನಿಗ್ರೋಧಕಲ್ಪ) ಯಾವ ಆಕಾಂಕ್ಷೆಯಿಂದ ಬ್ರಹ್ಮಚರ್ಯವನ್ನು ಪಾಲಿಸಿದರೋ ಅದು ಸಫಲವಾಯಿತೇ? ಅವರು ಏನು ಅನುಪಾದಿಶೇಷ ನಿಬ್ಬಾಣವನ್ನು ಪ್ರಾಪ್ತಿಮಾಡಿದರೆ? ಅವರು ಹೇಗೆ ವಿಮುಕ್ತರಾದರೋ, ಅದನ್ನು ತಿಳಿಸಿ, ನಾವು ಕೇಳಲು ಬಯಸುತ್ತೇವೆ.
13.          ಭಗವಾನ್ ಬುದ್ಧರು - ಆತನು ನಾಮರೂಪದ ತೃಷ್ಣಾರೂಪಿ, ದೀರ್ಘ ಕಾಲದಿಂದ ಹರಿಯುವ ಮಾರನ ನದಿಯನ್ನು ನಾಶಮಾಡಿ, ಸರ್ವ ಜನ್ಮ-ಮೃತ್ಯುವಿನಿಂದ ದೂರ ಹೋಗಿದ್ದಾನೆ ಪ್ರಜ್ಞಾ ಶ್ರೇಷ್ಠ ಭಗವಾನರು ಹೀಗೆ ಹೇಳಿದರು.
14.          ವಂಗೀಸ - ಹೇ ಏಳನೆಯ ಋಷಿ (ವಿಪಸ್ಸಿ ಬುದ್ಧರ ನಂತರದ ಏಳನೆಯ ಬುದ್ಧರು) ತಮ್ಮ ನುಡಿ ಆಲಿಸಿ ನಾನು ಪ್ರಸನ್ನನಾಗಿದ್ದೇನೆ. ನನ್ನ ಪ್ರಶ್ನೆಯು ನಿರರ್ಥಕವಾಗಲಿಲ್ಲ. ಬ್ರಾಹ್ಮಣರಾದ ತಾವು ನನಗೆ ವಂಚಿಸಲಿಲ್ಲ.
15.          ಬುದ್ಧರ ಶಿಷ್ಯರು ಯಥಾವಾದಿಗಳು, ತಥಾಕಾರಿಗಳಾಗಿರುತ್ತಾರೆ. ಅವರು ಮಾರನಿಂದ ವಿಸ್ತ್ರುತವಾದ ಮಾಯಾವಿತನದ ದೃಢ ಬಲೆಯನ್ನು ಕತ್ತರಿಸಿದ್ದಾರೆ.
16.          ಭಗವಾನ್, ಕಪ್ಪಿಯನರು ತೃಷ್ಣೆಯ ಕಾರಣವನ್ನು ಅರಿತುಬಿಟ್ಟರು. ಕಪ್ಪಿಯನರು ಅತಿ ದುಷ್ಕರವಾದ ಮೃತ್ಯು ರಾಜ್ಯವನ್ನು ದಾಟಿ ಹೋಗಿದ್ದಾರೆ.

ಇಲ್ಲಿಗೆ ವಂಗೀಸ ಸುತ್ತ ಮುಗಿಯಿತು.

rahula sutta in kannada

11. ರಾಹುಲ ಸುತ್ತ
(ಭಗವಾನ ಬುದ್ಧರಿಂದ ರಾಹುಲನಿಗೆ ಉಪದೇಶ)
1.            ಭಗವಾನ ಬುದ್ಧರು - ಏನು ಸದಾ ಪಂಡಿತರ (ಸಾರಿಪುತ್ರ) ಜೊತೆಯಲ್ಲಿ ಇರುವುದರಿಂದ ಅವರ ಅನಾಧರಣೆ ಮಾಡುವುದಿಲ್ಲ ತಾನೆ? ಏನು ಮಾನವರಲ್ಲಿ ಉಲ್ಕೆ (ಪಂಜು) ಯನ್ನು ಧರಿಸಿರುವವರು (ಸಾರಿಪುತ್ರ) ನಿನ್ನಿಂದ ಪೂಜಿತರಾಗಿರುವರೇ?
2.            ರಾಹುಲ - ನಾನು ಸದಾ ಜೊತೆಯಲ್ಲಿರುವ ಕಾರಣ ಪಂಡಿತರ ಅನಾಧರಣೆ ಮಾಡುವುದಿಲ್ಲ. ಮನುಷ್ಯರಲ್ಲಿ ಉಲ್ಕೆ ಧರಿಸಿರುವವರು ನನ್ನಿಂದ ಪೂಜಿತರಾಗಿರುವರು.
3.            ಭಗವಾನ್ ಬುದ್ಧರು - ಐದು ರೀತಿಯ ಪ್ರಿಯವಾದ ಹಾಗು ಮನೋಹರವಾದ ಕಾಮ-ಭೋಗಗಳನ್ನು ತ್ಯಜಿಸಿ ಶ್ರದ್ಧಾಪೂರ್ವಕವಾಗಿ ಗೃಹದಿಂದ ಹೊರಬಂದು ದುಃಖದ ಅಂತ್ಯ ಮಾಡುವವನಾಗು.
4.            ಉತ್ತಮ ಮಿತ್ರರ ಸಂಗತಿ ಬೆರೆಯುವಂತಾಗು, ಏಕಾಂತ ಹಾಗು ಶಬ್ದರಹಿತ ಗ್ರಾಮದಿಂದಲೂ ದೂರ ಶಾಂತ ಸ್ಥಳದಲ್ಲಿ ಶಯನಾಸನ ಹಾಕಿಕೋ ಹಾಗು ಭೋಜನದಲ್ಲಿ ಮಿತಿ ಅರಿಯುವವನಾಗು.
5.            ಚೀವರ, ಪಿಂಡಪಾತ (ಭೋಜನ), ಪ್ರತ್ಯಯ (ಔಷಧಿ) ಹಾಗು ಶಯನಾಸನ ಇವುಗಳಲ್ಲಿ ತೃಷ್ಣೆ ಮಾಡದಿರು. ಈ ಲೋಕಗಳಲ್ಲಿ ಮತ್ತೆ ಬಾರದಿರು.
6.            ಪಾತಿಮೋಕ್ಖ (ನಿಯಮ)ಗಳಲ್ಲಿ ಸಂಯಮದಿಂದಿರು, ಐದು ಇಂದ್ರಿಯಗಳಲ್ಲಿ ಕಾಯಾನುಗತಾಸ್ಮೃತಿ ಸ್ಥಾಪಿಸಿರಲಿ, ವೈರಾಗ್ಯ ವೃದ್ಧಿಸುವವನಾಗು.
7.            ರಾಗಯುಕ್ತವಾದ ಸೌಂದರ್ಯದ ನಿಮಿತ್ತ (ಸಂಕೇತ-ಗ್ರಹಿಕೆ)ಗಳನ್ನು ತ್ಯಜಿಸು, ಏಕಾಗ್ರ ಹಾಗು ಸಮಾಧಿಸ್ಥನಾಗು, ಅಶುಭದ ಭಾವನೆಯಲ್ಲಿ ಚಿತ್ತವನ್ನು ನಿಲ್ಲಿಸು.
8.            ಅನಿಮಿತ್ತದ (ಶೂನ್ಯ / ಅತಿ ಸೂಕ್ಷ್ಮ ಚಿತ್ತಾವಸ್ಥೆ) ಅಭಿವೃದ್ಧಿಗೊಳಿಸು, ಅಭಿಮಾನದ ಅನುಶಯ (ಚಿತ್ತವೃತ್ತಿ) ತೆಗೆದುಬಿಡು. ಆಗ ಅಭಿಮಾನದ ಅಂತ್ಯಮಾಡಿ ಉಪಶಾಂತನಾಗಿ ವಿಹರಿಸುವೆ (ಸಂಚರಿಸುವೆ).
                ಈ ರೀತಿಯಾಗಿ ಭಗವಾನ್ ಬುದ್ಧರು ಆಯುಷ್ಮಂತ ರಾಹುಲನಿಗೆ ಈ ಗಾಥೆಗಳಿಂದ ನಿತ್ಯವೂ ಉಪದೇಶಿಸುತ್ತಿದ್ದರು.

ಇಲ್ಲಿಗೆ ರಾಹುಲ ಸುತ್ತ ಮುಗಿಯಿತು

utthana sutta in kannada

.110. ಉಟ್ಠಾನ ಸುತ್ತ
(ಎದ್ದೇಳು, ಕುಳಿತುಕೋ ಹಾಗು ಚುಚ್ಚಿಕೊಂಡ ಮುಳ್ಳುಗಳನ್ನು ಕಿತ್ತು ಬಿಸಾಡು)
1.            ಎದ್ದೇಳು, ಕುಳಿತುಕೋ, ಮಲಗುವುದರಿಂದ (ನಿದ್ರಿಸುವುದರಿಂದ) ನಿನಗೇನು ಲಾಭ? ಮುಳ್ಳುಗಳಿಂದ ಚುಚ್ಚಿಸಿಕೊಂಡ ಪೀಡಿತ ರೋಗಿಗೆ ನಿದ್ರೆ ಏತಕ್ಕಾಗಿ ?
2.            ಎದ್ದೇಳು, ಕುಳಿತುಕೋ, ದೃಢತೆಯ ಸಹಿತ ಶಾಂತಿ (ನಿಬ್ಬಾಣ)ಗಾಗಿ ಪರಿಶ್ರಮಿಸು. ನಿನ್ನನ್ನು ಪ್ರಮತ್ತನೆಂದು ಅರಿತು, ಮೃತ್ಯುರಾಜನು ಮೋಹಿತನನ್ನಾಗಿ ಮಾಡಿ ತನ್ನ ವಶಕ್ಕೆ ತೆಗೆದುಕೊಳ್ಳದಿರಲಿ.
3.            ಯಾವ ತೃಷ್ಣೆಯಿಂದ ಬಂಧಿತರಾಗಿ, ದೇವತೆಗಳೂ ಹಾಗು ಮಾನವರು ಸದಾ ತಿರುಗುತ್ತಿದ್ದಾರೋ, ಅದನ್ನು ದಾಟಿಹೋಗು, ನಿನ್ನ ಕ್ಷಣವು ಕಳೆದುಹೋಗದಿರಲಿ, ಅಮೂಲ್ಯ ಕ್ಷಣವನ್ನು ಕಳೆದುಕೊಂಡವರು ದುರ್ಗತಿಯಲ್ಲಿ ಬಿದ್ದು ಶೋಕಿಸುವರು.
4.            ಪ್ರಮಾದವು (ಅಜಾಗರೂಕತೆ, ಅಲಕ್ಷತೆ) ರಜವಾಗಿದೆ (ಕಶ್ಮಲ), ಪ್ರಮಾದದ ಕಾರಣದಿಂದ ರಜ ಉತ್ಪನ್ನ ಆಗುತ್ತದೆ. ಅಪ್ರಮಾದಿ (ಜಾಗರೂಕ) ಹಾಗು ವಿದ್ಯೆಯಿಂದ ತನ್ನ ಮುಳ್ಳುಗಳನ್ನು (ದುಃಖ, ಜನ್ಮ) ಕಿತ್ತಿ ಬಿಸಾಡಲಿ.

ಇಲ್ಲಿಗೆ ಉಟ್ಠಾನ ಸುತ್ತ ಮುಗಿಯಿತು.