Friday, 29 May 2015

tissa metteyya sutta in kannada 7. ತಿಸ್ಸ ಮೇತ್ತೇಯ್ಯ ಸುತ್ತ

7. ತಿಸ್ಸ ಮೇತ್ತೇಯ್ಯ ಸುತ್ತ
(ಮೈಥುನದ ತ್ಯಾಗ)
1.            ಆಯುಷ್ಮಂತ ತಿಸ್ಸಮೆತ್ತೆಯ - ಹೇ ಮಾರ್ಷರೇ, ಮೈಥುನ ಧರ್ಮದಲ್ಲಿ ಬಿದ್ದಿರುವವನ ಹಾನಿ ತಿಳಿಸಿರಿ. ತಮ್ಮ ಉಪದೇಶ ಕೇಳಿ ಏಕಾಂತ ವಾಸದ ಅಭ್ಯಾಸ ಮಾಡುವೆನು.
2.            ಭಗವಾನರು - ಯಾವ ವ್ಯಕ್ತಿ ಮೈಥುನ ಧರ್ಮದಲ್ಲಿ ತಲ್ಲೀನ ಆಗುತ್ತಾನೆಯೋ, ಆತನಿಗೆ ಉಪದೇಶವು ಮರೆತುಹೋಗುತ್ತದೆ ಮತ್ತು ಆತನು ಮಿಥ್ಯಾ ಮಾರ್ಗದಲ್ಲಿ ಚಲಿಸುತ್ತಾನೆ - ಇದು ಅದರಲ್ಲಿರುವ ಅನಾರ್ಯರ ವಿಷಯವಾಗಿದೆ (ಮಾತಾಗಿದೆ).
3.            ಯಾರು ಮೊದಲು ಏಕಾಂಗಿಯಾಗಿ ವಾಸಿಸಿ ಮತ್ತೆ ಮೈಥುನದ ಸೇವನೆ ಮಾಡುವನೋ, ಆತನು ಭ್ರಾಂತ (ಅನಿಯಂತ್ರಿತ) ರಥದ ಸಮಾನನಾಗಿ ನೀಚ ಹಾಗು ಪ್ರಾಪಂಚಿಕ ಅತಿ ಸಾಮಾನ್ಯ (ಸೋತವನು) ಎನಿಸಿಕೊಳ್ಳುತ್ತಾನೆ.
4.            ಮೊದಲು ಆತನ ಯಾವ ಯಶಸ್ಸು ಮತ್ತು ಕೀತರ್ಿ ಇತ್ತೋ, ಅದೆಲ್ಲವೂ ಇದರಿಂದ ನಷ್ಟವಾಗುತ್ತದೆ. ಇದನ್ನು ಕಂಡಾದರೂ ಮೈಥುನವನ್ನು ತ್ಯಜಿಸುವ ಅಭ್ಯಾಸ ಮಾಡಲಿ.
5.            ಯಾರು ಸಂಕಲ್ಪಗಳಿಗೆ ವಶಿಯಾಗಿದ್ದಾನೋ, ಭಿಕಾರಿಯಂತೆ ಯೋಚಿಸುವನೋ, ಇಂತಹ ವ್ಯಕ್ತಿಯು ಪರರಿಂದ ನಿಂದೆ ಕೇಳಿ ಮೌನವಾಗಿ ಇದ್ದುಬಿಡುತ್ತಾನೆ.
6.            ಪರರು ಅಪವಾದಿಸುವುದರಿಂದ ಆತನು ಉತ್ತೇಜಿತನಾಗಿ ಸುಳ್ಳು ಹೇಳುತ್ತಾನೆ. ಇದು ಒಂದು ಬೃಹತ್ ಬಂಧನವಾಗಿದೆ. ಆತನು (ಇದರಲ್ಲಿ ಬಿದ್ದು) ಸುಳ್ಳು ಹೇಳಲಾರಂಭಿಸುತ್ತಾನೆ.
7.            ಪಂಡಿತರ (ಜ್ಞಾನಿಯ) ರೂಪದಲ್ಲಿ ಪ್ರಸಿದ್ಧರಾಗಿ ಮತ್ತು ಏಕಾಚಯರ್ೆಯಲ್ಲಿ ಪ್ರತಿಷ್ಠಿತರಾದ ಯಾವ ವ್ಯಕ್ತಿಗಳು ಮೈಥುನದಲ್ಲಿ ಆಸಕ್ತರಾಗುವರೋ ಅವರು ಮೂಢರ ರೀತಿ ಕ್ಲೇಶವನ್ನು ಪ್ರಾಪ್ತಿಮಾಡುವರು.
8.            ಮುನಿಯು ಆರಂಭ ಮತ್ತು ಅಂತ್ಯದಲ್ಲಿ ಈ ದುಷ್ಪರಿಣಾಮಗಳನ್ನು ಅರಿತು ಒಂಟಿಯಾಗಿ ದೃಢತೆ ಪೂರ್ವಕವಾಗಿ ವಾಸಿಸಲಿ ಮತ್ತು ಮೈಥುನವನ್ನು ಸೇವಿಸದಿರಲಿ.
9.            ಏಕಾಂತ ಚಿಂತನೆಯ ಅಭ್ಯಾಸ ಮಾಡಲಿ. ಇದು ಆರ್ಯರ ಉತ್ತಮ ವಿಷಯವಾಗಿದೆ. ಅದರಿಂದ ತನ್ನನ್ನು ಶ್ರೇಷ್ಠನೆಂದು ಭಾವಿಸದಿರಲಿ. ಆತನೇ ನಿಬ್ಬಾಣಕ್ಕೆ (ಹತ್ತಿರ) ಸೇರುವವನಾಗುತ್ತಾನೆ.
10.          ಆಸಕ್ತಿಗಳಲ್ಲಿ ರಹಿತನಾಗಿ, ಕಾಮಭೋಗಗಳ ಅಪೇಕ್ಷೆ ಮಾಡದೆ ವಾಸಿಸುವವನಾದ ಭವ-ಪಾರಂಗತ ಮುನಿಯ ಬಗ್ಗೆ ಅಲಕ್ಷವನ್ನು ಇಚ್ಛೆಯನ್ನು ಕಾಮಭೋಗದಲ್ಲಿ ಆಸಕ್ತರಾದ ಜನರು ಮಾಡುವರು.

ಇಲ್ಲಿಗೆ ತಿಸ್ಸ ಮೆತ್ತೆಯ ಸುತ್ತ ಮುಗಿಯಿತು.

jara sutta in kannada 6. ಜರಾ ಸುತ್ತ

6. ಜರಾ ಸುತ್ತ
(ಅನಿತ್ಯತೆಯ ವರ್ಣನೆ)
1.            ಅಹೋ! ಈ ಜೀವನವು ಅತಿ ಅಲ್ಪವಾಗಿದೆ, ನೂರು ವರ್ಷಕ್ಕಿಂತ ಮೊದಲೇ ಮಾನವ ಮೃತ್ಯುವಪ್ಪುತ್ತಾನೆ. ಯಾರು ಇದಕ್ಕಿಂತ ಅಧಿಕವಾಗಿ ಜೀವಿಸುವರೋ ಅವರು ಸಹಾ ವೃದ್ಧಾವಸ್ಥೆ ಪ್ರಾಪ್ತಿಮಾಡಿ ಮೃತ್ಯು ಹೊಂದುತ್ತಾನೆ.
2.            ಮಮತ್ವ (ನನ್ನವರು ಎಂಬ ಭಾವ) ದಲ್ಲಿ ಬಿದ್ದು ಜೀವಿಗಳು (ಜನರು) ಶೋಕಪಡುತ್ತಾರೆ. ಯಾವುದೇ ಪ್ರಕಾರದ ಪರಿಗ್ರಹವೂ (ಸಂಗ್ರಹ) ನಿತ್ಯವಾದುದಲ್ಲ. ಇದರಲ್ಲಿ ವಿಯೋಗವು ಇದ್ದೇ ಇರುತ್ತದೆ. ಈ ರೀತಿ ನೋಡಿ, ಮನೆಯಲ್ಲಿ (ಪ್ರಾಪಂಚಿಕತೆಯಲ್ಲಿ) ಇರದಿರಲಿ.
3.            ಪುರುಷನು ಯಾವುದನ್ನು ತನ್ನದು ಎಂದು ಅರಿಯುತ್ತಾನೋ ಅದನ್ನು ಸಹಾ ಮೃತ್ಯುವಿನ ಅನಂತರ ತ್ಯಜಿಸುತ್ತಾನೆ. ಆದ್ದರಿಂದ ಪಂಡಿತರು ತಮ್ಮನ್ನು ಮಮತೆಯ (ನನ್ನದು ಎಂಬುದರ) ಕಡೆ ವಾಲಿಸದಿರಲಿ.
4.            ಹೇಗೆ ಸ್ವಪ್ನದಲ್ಲಿ ಕಂಡ ವಸ್ತುವನ್ನು ಜಾಗೃತನಾದ ಮೇಲೆ ನೋಡಲಾರನೋ ಅದೇರೀತಿ ಪ್ರಿಯ ಜನರನ್ನು ಮೃತ್ಯುವಿನ ಆನಂತರ ನೋಡಲಾರನು.
5.            ಯಾರನ್ನು ನೋಡಿರುತ್ತೀರೋ ಮತ್ತು ಕೇಳಿರುತ್ತೀರೋ ಅವರ ಚಚರ್ೆ ಆಗುತ್ತದೆ. ಮೃತ ಮನುಷ್ಯನ ಹೆಸರು ಮಾತ್ರ ಅವಶ್ಯಕವಾಗಿ (ಕೆಲವು ಕಾಲ) ಇರುತ್ತದೆ.
6.            ಯಾರು ಬಹು ಲೋಭಿಗಳೋ ಮತ್ತು ಮಮತ್ವವುಳ್ಳವರೋ, ಅಂತಹವರು ಶೋಕವನ್ನು, ವಿಲಾಪವನ್ನು ಮತ್ತು ಜಿಪುಣತನವನ್ನು ಬಿಡಲಾರರು. ಆದ್ದರಿಂದ ಮುನಿಯು ಪರಿಗ್ರಹವನ್ನು ಬಿಟ್ಟು, ನಿಬ್ಬಾಣದಶರ್ಿಯಾಗಿ ಸಂಚರಿಸುತ್ತಾನೆ.
7.            ಏಕಾಗ್ರಚಿತ್ತರಾಗಿ ಸಂಚರಿಸುವವರು ಮತ್ತು ಏಕಾಂತ ಚಿಂತನೆಯಲ್ಲಿ ಲೀನವಾದ ಭಿಕ್ಷುವಿಗೆ ಯೋಗ್ಯವಾದುದು ಏನೆಂದರೆ ಅವರು ಪುನಃ ಪುನರ್ಜನ್ಮದಲ್ಲಿ ಬೀಳದೆ ಇರಲಿ.
8.            ಮುನಿಯು ಸರ್ವಧಾ ಅನಾಸಕ್ತರಾಗಿರುತ್ತಾರೆ. ಆ ಮಹಾವ್ಯಕ್ತಿಯು ಯಾರಿಗೂ ಪ್ರಿಯರನ್ನಾಗಿ ಅಥವಾ ಅಪ್ರಿಯರನ್ನಾಗಿ ಮಾಡುವುದಿಲ್ಲ (ಭಾವಿಸುವುದಿಲ್ಲ). ಹೇಗೆ ಎಲೆಯ ಮೇಲೆ ಜಲವು ಇರುವುದಿಲ್ಲವೋ ಅದೇರೀತಿ ವಿಲಾಪಿಗಳು ಮತ್ತು ಲೋಭಿಗಳು ಅವನಿಗೆ ಪ್ರಭಾವ ಮಾಡಲಾರರು.
9.            ಯಾವರೀತಿ ಕಮಲ ಅಥವಾ ಪದ್ಮದ ಎಲೆಯ ಮೇಲೆ ಜಲವು ನಿಲ್ಲುವುದಿಲ್ಲವೋ ಅದೇರೀತಿ ಮುನಿಯು ದೃಷ್ಟಿಶೃತಿ ಅಥವಾ ವಿಚಾರತೆಯಲ್ಲಿ ಲಿಪ್ತರಾಗುವುದಿಲ್ಲ.
10.          ಶುದ್ಧ ಪುರುಷನು ದೃಷ್ಷಿ ಶ್ರುತಿ ಅಥವಾ ವಿಚಾರತೆ ಸ್ವೀಕರಿಸುವುದಿಲ್ಲ. ಅವನು ಪರರ ಸಹಾಯದಿಂದ ಶುದ್ದಿ ಇಚ್ಛಿಸಲಾರ. ಅವನು ಯಾವುದರಲ್ಲಿಯೂ ರತನೂ ಆಗಲಾರ, ವಿರತನೂ ಆಗಲಾರ.

ಇಲ್ಲಿಗೆ ಜರಾ ಸುತ್ತ ಮುಗಿಯಿತು.

paramatthaka sutta in kannada 5. ಪರಮಟ್ಠಕ ಸುತ್ತ

5. ಪರಮಟ್ಠಕ ಸುತ್ತ
(ಸತ್ಯದಶರ್ಿಯು ಧಾಮರ್ಿಕ ವಿವಾದಗಳಲ್ಲಿ ಬೀಳುವುದಿಲ್ಲ)
1.            ಯಾವ ವ್ಯಕ್ತಿಯು ತನ್ನ ದೃಷ್ಟಿಯನ್ನು (ಸಿದ್ಧಾಂತ) ಸರ್ವಶ್ರೇಷ್ಠ ಎಂದು ನಂಬುತ್ತಾನೋ ಮತ್ತು ಲೋಕದಲ್ಲಿ ಆತನು ಅದರ ಪ್ರಶಂಸೆ ಮಾಡುತ್ತಾನೆ. ಬೇರೆ ಎಲ್ಲಾ ದೃಷ್ಟಿಗಳನ್ನು ಹೀನವೆಂದು ಹೇಳುವನು. ಆದ್ದರಿಂದ ಆತನು ವಿವಾದರಹಿತನಲ್ಲ.
2.            ಯಾರು ತನ್ನ ದೃಷ್ಟಿ, ಶ್ರುತಿ, ಶೀಲವ್ರತ ಅಥವಾ ವಿಚಾರಶೀಲತೆಯಲ್ಲಿ ಗುಣವನ್ನು ಕಾಣುವನೋ, ಆತನು ಅದನ್ನು ಹಿಡಿಯುತ್ತಾನೆ ಮತ್ತು ಸರ್ವ ಅನ್ಯ ದೃಷ್ಟಿಗಳನ್ನು ಕೀಳಾಗಿ ನೋಡುತ್ತಾನೆ.
3.            ಕುಶಲ ವ್ಯಕ್ತಿಗಳು ಆತನನ್ನು ಸಹ ಬಂಧಿ ಎಂದು ಹೇಳುತ್ತಾರೆ, ಯಾರು ತನ್ನ ದೃಷ್ಟಿಯಿಂದ ಬಂಧಿತನಾಗಿ ಪರರ ದೃಷ್ಟಿಯನ್ನು ಕೀಳಾಗಿ ಕಾಣುವನೋ, ಅದರಿಂದ ಭಿಕ್ಷುವು ದೃಷ್ಟಿ, ಶ್ರುತಿ, ವಿಚಾರತೆ ಅಥವಾ ಶೀಲವ್ರತಗಳ ಜಾಲದಲ್ಲಿ ಬೀಳದಿರಲಿ.
4.            ಲೋಕದಲ್ಲಿ ಜ್ಞಾನ ಅಥವಾ ಶೀಲವ್ರತದಿಂದ ಯಾವುದೇ ದೃಷ್ಟಿಯ (ಸಿದ್ಧಾಂತದ) ಕಲ್ಪನೆ ಮಾಡದಿರಲಿ. ತನ್ನನ್ನು ಪರರ ಸಮಾನನೆಂದು ಭಾವಿಸದಿರಲಿ ಮತ್ತು ಅವರಿಗಿಂತ ನೀಚ ಅಥವಾ ಶ್ರೇಷ್ಠ ಎಂದೂ ಭಾವಿಸದಿರಲಿ (ಪರಿಗಣಿಸದಿರಲಿ).
5.            ಯಾರು ಅಹಂ ತ್ಯಜಿಸಿ ಆಸಕ್ತರಹಿತರಾಗಿರುವರೋ, ಅವರು ಜ್ಞಾನದಲ್ಲಿಯೂ ಸಹಾ ಆಶ್ರಯಗ್ರಹಣ ಮಾಡುವುದಿಲ್ಲ. ಅವರು ಸಮೂಹದಲ್ಲಿಯೂ ಯಾರ ಪಕ್ಷವು ಸೇರುವುದಿಲ್ಲ ಮತ್ತು ಯಾವುದೇ ದೃಷ್ಟಿಯಲ್ಲೂ ಬೀಳಲಾರರು.
6.            ಯಾರಲ್ಲಿ ಇಲ್ಲಿ ಎರಡು ಹಂತಗಳಲ್ಲಿ ಮತ್ತು ಈ ಲೋಕ ಹಾಗು ಪರಲೋಕದಲ್ಲಿ ಉತ್ಪನ್ನವಾಗುವ ತೃಷ್ಣೆಯಿಲ್ಲವೋ ಆತನಲ್ಲಿ ಧಾಮರ್ಿಕ, ದೃಢಗ್ರಾಹ್ಯದಿಂದ ಉತ್ಪನ್ನವಾಗುವ ಯಾವುದೇ ರೀತಿಯ ಆಸಕ್ತಿಗಳು ಇರುವುದಿಲ್ಲ.
7.            ಆತನಿಗೆ ಯಾವುದೇ ದೃಷ್ಟಿ, ಶ್ರುತಿ ಅಥವಾ ವಿಚಾರಿತ ವಿಷಯದಲ್ಲಿ ಅಣುಮಾತ್ರವೂ ಕಲ್ಪಿತಧಾರಣೆ ಇರುವುದಿಲ್ಲ. ಯಾವುದೇ ದೃಷ್ಟಿಯಲ್ಲೂ ಅನಾಸಕ್ತನಾದ ಆ ಬ್ರಾಹ್ಮಣನಿಗೆ ಈ ಲೋಕದಲ್ಲಿ ವಿಚಲಿತನನ್ನಾಗಿ ಯಾರು ಮಾಡುವರು?
8.            ಅವರು ಯಾವುದೇ ದೃಷ್ಟಿಗಳನ್ನು ಕಲ್ಪಿಸುವುದಾಗಲಿ, ಅಥವಾ ದೃಷ್ಟಿಗಳಿಗೆ ವಿಶೇಷ ಗ್ರಹಣ ನೀಡುವುದು ಮಾಡುವುದಿಲ್ಲ. ಅವರು ಆ ದೃಷ್ಟಿಗಳನ್ನು ನಂಬುವುದು ಇಲ್ಲ. ಬ್ರಾಹ್ಮಣ ಕೇವಲ ಶೀಲವ್ರತದಿಂದ ಭವಸಾಗರ ದಾಟಲಾರನು. ದಾಟಿರುವ ಅರಹಂತರು ಈ ದೃಷ್ಟಿಗಳಲ್ಲಿ ಬೀಳಲಾರರು.

ಇಲ್ಲಿಗೆ ಪರಮಟ್ಠಕ ಸುತ್ತ ಮುಗಿಯಿತು.

Sunday, 26 April 2015

suddhuttaka sutta in kannada 4. ಸುದ್ಧುಟ್ಠಕ ಸುತ್ತ (ಅನಾಸಕ್ತಿಯಿಂದಲೇ ಮುಕ್ತಿ ಸಾಧ್ಯ)

4. ಸುದ್ಧುಟ್ಠಕ ಸುತ್ತ
(ಅನಾಸಕ್ತಿಯಿಂದಲೇ ಮುಕ್ತಿ ಸಾಧ್ಯ)

1.            ನಾನು ಶುದ್ಧ, ಪರಮಶ್ರೇಷ್ಠ, ಆರೋಗ್ಯ ನೋಡುತ್ತಿದ್ದೇನೆ. ಈ ಬಗೆಯ ದೃಷ್ಠಿಯಿಂದಲೂ ಸಹಾ ವ್ಯಕ್ತಿಯು ಶುದ್ಧನಾಗಲಾರ. ನಾನು ಯಾವುದನ್ನು ಅರಿಯುತ್ತೇನೆಯೋ ಅದೇ ಸರ್ವಶ್ರೇಷ್ಠ. ಹೀಗೆ ಶುದ್ಧತೆಯನ್ನು ನೋಡುವವನು ಅದನ್ನೇ ಪರಮಜ್ಞಾನ ಎಂದು ಅಥರ್ೈಸಿಕೊಳ್ಳುತ್ತಾನೆ.
2.            ಒಂದುವೇಳೆ ದೃಷ್ಟಿಯಿಂದ ಮನುಷ್ಯ ಶುದ್ಧಿ ಆಗುವ ಹಾಗಿದ್ದರೆ ಅಥವಾ ಜ್ಞಾನದಿಂದಲೇ ಆತನ ದುಃಖ ತ್ಯಾಗವಾಗುವ ಹಾಗಿದ್ದರೆ ಆಸಕ್ತ ಪುರುಷನ ಶುದ್ಧಿಯು ಬೇರೆ ರೀತಿಯೇ ಆಗುತ್ತಿತ್ತು. ಆದರೆ ಹೀಗೆ ಆಗುವುದಿಲ್ಲ. ಆತನಂತೂ ಆತನ ದೃಷ್ಠಿಕೋನದಂತೆ ಮಾತನಾಡುತ್ತಾನೆ.
3.            ದೃಷ್ಠಿ, ಶ್ರುತಿ, ಶೀಲವ್ರತ ಮತ್ತು ವಿಚಾರಶೀಲತೆಯಿಂದಲೇ (ಅಥವಾ ಯಾವುದಾದರೂ ಒಂದರಿಂದಲೇ) ಬ್ರಾಹ್ಮಣನೊಬ್ಬನು ಶುದ್ಧಿಯಾಗಲಾರ. ಯಾರು ಪುಣ್ಯ ಮತ್ತು ಪಾಪಗಳಲ್ಲಿ ಲಿಪ್ತನಾಗುವುದಿಲ್ಲವೋ, ಯಾರು ಸ್ವ-ತ್ಯಾಗಿಯೋ ಮತ್ತು ಪುಣ್ಯ ಪಾಪಗಳನ್ನು ಮಾಡದವನೋ ಅವನೇ ಶುದ್ಧನಾಗಿರುವನು.
4.            ಯಾವ ವ್ಯಕ್ತಿಯು ಮೊದಲಿನ ದೃಷ್ಟಿಯನ್ನು ತ್ಯಜಿಸಿ ಮತ್ತೊಂದು ದೃಷ್ಟಿಯನ್ನು ಗ್ರಹಣ ಮಾಡುವನೋ ಅಂತಹ ತೃಷ್ಣಾ ವಶೀಭೂತರೂ ಆಸಕ್ತಿಯನ್ನು ದಾಟುವುದಿಲ್ಲ. ಹೇಗೆ ಮಂಗವು ಮರದ ಒಂದು ರೆಂಬೆಯಿಂದ ಮತ್ತೊಂದು ರೆಂಬೆ ಹಿಡಿಯುವುದೋ ಹಾಗೆಯೇ ಒಂದು ದೃಷ್ಟಿಯನ್ನು ತ್ಯಜಿಸಿ ಮತ್ತೊಂದನ್ನು ಗ್ರಹಣ ಮಾಡುವನು.
5.            ವ್ಯಕ್ತಿಯು ಸ್ವಯಂ ವ್ರತಗಳನ್ನು ಧಾರಣೆ ಮಾಡಿ ಆಸಕ್ತಿಗಳು ಇರುವ ಬೇರೆ ಬೇರೆಯ ಉಚ್ಚ ನೀಚ ದೃಷ್ಟಿಗಳಲ್ಲಿ ಬೀಳುತ್ತಾನೆ. ಆದರೆ ಯಾರು ಚೆನ್ನಾಗಿ ಧರ್ಮವನ್ನು ಅರಿತಿರುವರೋ, ಅಂತಹ ಮಹಾಪ್ರಾಜ್ಞರು ಉಚ್ಚ-ನೀಚ ದೃಷ್ಟಿಗಳ ಜಾಲದಲ್ಲಿ ಬೀಳುವುದಿಲ್ಲ.
6.            ಆ ಮಹಾಪ್ರಾಜ್ಞನು ಯಾವುದೆಲ್ಲದರಲ್ಲಿ ದೃಷ್ಟಿ, ಶ್ರುತ ಅಥವ ವಿಚಾರತೆಯಿರುವುದೋ, ಆ ಎಲ್ಲಾ ಧರ್ಮಗಳಲ್ಲಿ ಬೀಳುವುದಿಲ್ಲ. ಆತನು ಸತ್ಯವನ್ನು ನೋಡುತ್ತಾ ಸ್ವತಂತ್ರವಾಗಿ ಸಂಚರಿಸುತ್ತಾನೆ. ಹಾಗಿರುವಾಗ ಈ ಲೋಕದಲ್ಲಿ ಆತನಿಗೆ ಯಾವುದು ತಾನೇ ವಿಚಲಿತನನ್ನಾಗಿ ಮಾಡುತ್ತದೆ.
7.            ಅವರು ಯಾವುದೇ ವಿಷಯವನ್ನು ಕಲ್ಪನೆ ಆಗಲಿ ಅಥವಾ ಗ್ರಹಣ ಆಗಲಿ ಮಾಡುವುದಿಲ್ಲ. ಲೋಕದ ಆಸಕ್ತಿಗಳು ಬಂಧನವನ್ನು ತ್ಯಜಿಸಿ ಲೋಕದಲ್ಲಿ ಎಲ್ಲಿಯೂ ತೃಷ್ಣೆಯಿಡುವುದಿಲ್ಲ.
8.            ಯಾವ ಬ್ರಾಹ್ಮಣನು ಪಾಪವನ್ನು ತ್ಯಾಗಮಾಡಿ ಸೀಮೆಯನ್ನು ದಾಟಿರುವನೋ ಮತ್ತು ಯಾರು ಅರಿತು ದೃಷ್ಟಿಗ್ರಾಹ್ಯವನ್ನು ತ್ಯಜಿಸಿರುವನೋ ಯಾರು ರಾಗದಲ್ಲಿ ಲಿಪ್ತನಾಗುವುದಿಲ್ಲವೋ ಮತ್ತು ವೈರಾಗ್ಯದಲ್ಲೂ ಸಹಾ ಯೋಚನಾತೀತನಾದ ಆತನಿಗೆ ಇಲ್ಲಿ ಕಲಿಯಬೇಕಾಗಿರುವುದು ಉಳಿದಿಲ್ಲ.

ಇಲ್ಲಿಗೆ ಸುದ್ಧುಟ್ಠಕ ಸುತ್ತ ಮುಗಿಯಿತು.

duttattaka sutta in kannada 3. ದುಟ್ಠಟ್ಠಕ ಸುತ್ತ (ಮುನಿಯು ಯಾವುದೇ ದೃಷ್ಟಿ ವಿಶೇಷದಲ್ಲಿ ಬೀಳುವುದಿಲ್ಲ)

3. ದುಟ್ಠಟ್ಠಕ ಸುತ್ತ
(ಮುನಿಯು ಯಾವುದೇ ದೃಷ್ಟಿ ವಿಶೇಷದಲ್ಲಿ ಬೀಳುವುದಿಲ್ಲ)

1.            ಕೆಲವರು ದುಷ್ಟಮನದಿಂದ ನಿಂದಿಸುತ್ತಾರೆ ಮತ್ತು ಕೆಲವರು ಸತ್ಯಮನದಿಂದ ನಿಂದಿಸುತ್ತಾರೆ. ಮುನಿಯು ಈ ಉಪವಾದಗಳಲ್ಲಿ ಬೀಳುವುದಿಲ್ಲ. ಆದ್ದರಿಂದಲೇ ಮುನಿಗೆ ಲೋಕದಲ್ಲಿ ರಾಗಾದಿಗಳ ಮುಳ್ಳು ಇಲ್ಲವಾಗಿದೆ.
2.            ರಾಗಾದಿಗಳಲ್ಲಿ ಬಿದ್ದಿರುವ, ಮನಸ್ಸಿನಲ್ಲಿ ಅತಿ ಪ್ರಿಯವಾಗಿ ಹಚ್ಚಿಕೊಂಡಿರುವ ವ್ಯಕ್ತಿ ತನ್ನ ದೃಷ್ಠಿಯನ್ನು ಹೇಗೆತಾನೇ ತ್ಯಜಿಸುತ್ತಾನೆ? ಸ್ವಯಂ ಗ್ರಹಣೆಯಿಂದ ದೃಷ್ಟಿಗೆ ಅನುಸಾರವಾಗಿ ಕಾರ್ಯ ಮಾಡುವ ಆತನು ಹೇಗೆ ಅರಿಯುತ್ತಾನೋ ಹಾಗೆಯೇ ಹೇಳುತ್ತಾನೆ.
3.            ಯಾವ ವ್ಯಕ್ತಿಯು ತನ್ನ ಶೀಲವ್ರತಗಳ ಬಗ್ಗೆ ಕೇಳಿದಾಗ, ಬೇರೆಯವರದನ್ನು ಹೇಳುತ್ತಾನೋ, ಅದನ್ನು ಕುಶಲ ವ್ಯಕ್ತಿಗಳು ಅನಾರ್ಯ ಧರ್ಮವೆಂದು ಹೇಳುತ್ತಾರೆ. ಏಕೆಂದರೆ ಆತನು ತನ್ನ ಸಂಬಂಧವಾಗಿ ಸ್ವಯಂ ಹೇಳಿಕೊಳ್ಳುತ್ತಾನೆ.
4.            ಯಾವ ಭಿಕ್ಷು ಶಾಂತನೋ, ಉಪಶಾಂತನೋ ಮತ್ತು ತನ್ನ ಶೀಲಗಳು ಹೇಳುವುದಿಲ್ಲವೋ, ಯಾರಿಗೆ ಸಂಸಾರದಲ್ಲಿ ಎಲ್ಲಿಯೂ ರಾಗವಿಲ್ಲವೋ, ಅದನ್ನು ಕುಶಲ ವ್ಯಕ್ತಿಗಳು ಆರ್ಯ ಧರ್ಮ ಎನ್ನುತ್ತಾರೆ.
5.            ಯಾರ ಧರ್ಮವು ಕೃತಕವೋ ಮತ್ತು ಕಲ್ಪಿತವೋ, ಯಾರು ತೃಷ್ಣೆಯಿಂದ ಉತ್ಪನ್ನನೋ, ಆತನು ತನ್ನ ಯಾವ ಗುಣವನ್ನು ಕಾಣುತ್ತಾನೋ ಅದರ ಆಸರೆಯಿಂದಲೇ, ಅದರ ಕಾರಣದಿಂದಲೇ ಆತನು ಹೇಳುವನು.
6.            ದೃಷ್ಠಿಗಳ (ಸಿದ್ಧಾಂತಗಳ) ಗ್ರಹಣವನ್ನು ಸುಲಭವಾಗಿ ಬಿಡಲಾಗುವುದಿಲ್ಲ. ಏಕೆಂದರೆ ನಿರ್ಣಯ ಮಾಡಿಯೇ ಯಾವುದೇ ದೃಷ್ಟಿಯನ್ನು ಗ್ರಹಿಸಲಾಗುತ್ತದೆ. ಆದ್ದರಿಂದಲೇ ಆ ವ್ಯಕ್ತಿಯು ಆ ದೃಷ್ಟಿಗಳಲ್ಲಿ ಇರುತ್ತಾ ಧರ್ಮವನ್ನು ಅನೇಕಬಾರಿ ಬಿಡುತ್ತಾ ಹಾಗು ಹಿಡಿಯುತ್ತಾ (ಗ್ರಹಣ ಮಾಡುತ್ತಾ) ಇರುತ್ತಾನೆ.
7.            ಶುದ್ಧ ವ್ಯಕ್ತಿಯು ಲೋಕದಲ್ಲಿ ಎಲ್ಲಿಯೂ ಕಲ್ಪಿತ ದೃಷ್ಠಿ ಹೊಂದಿರಲಾರನು. ಆ ಶುದ್ಧ ವ್ಯಕ್ತಿಯು ಮಾಯಾ ಮತ್ತು ಅಭಿಮಾನವನ್ನು ತ್ಯಜಿಸಿ ಅನಾಸಕ್ತನಾಗಿ ಮತ್ತೆ ಯಾವ ಕಾರಣಕ್ಕಾಗಿ ವಿವಾದದಲ್ಲಿ ಬೀಳಬೇಕು?
8.            ಆಸಕ್ತನಾದ ವ್ಯಕ್ತಿಯೇ ಧರ್ಮಸಂಬಂಧಿ ವಿವಾದಗಳಲ್ಲಿ ಬೀಳುತ್ತಾನೆ. ಯಾರು ಆಸಕ್ತಿರಹಿತನೋ, ಆತನು ಯಾವ ಕಾರಣದಿಂದ ಮತ್ತು ಹೇಗೆ ವಿವಾದದಲ್ಲಿ ಬೀಳುವನು? ಆತನಲ್ಲಿ ಆತ್ಮದೃಷ್ಠಿಯಾಗಲಿ ಹಾಗು ಉಚ್ಛದ (ಲೋಕಾಯುತ) ದೃಷ್ಟಿಯಾಗಲಿ ಇರುವುದಿಲ್ಲ. ಆತನು ಇಲ್ಲಿಯೇ ಸರ್ವ ದೃಷ್ಟಿಗಳನ್ನು ನಷ್ಟಪಡಿಸಿರುವನು.

ಇಲ್ಲಿಗೆ ದುಟ್ಠಟ್ಠ ಸುತ್ತ ಮುಗಿಯಿತು.

guhatthaka sutta in kannada 2. ಗುಹಟ್ಠಕ ಸುತ್ತ (ಸಂಸಾರದ ಅಸಾರತೆ)

2. ಗುಹಟ್ಠಕ ಸುತ್ತ
(ಸಂಸಾರದ ಅಸಾರತೆ)

1.            ಶರೀರದಲ್ಲಿ ಆಸಕ್ತನಾದ, ಅನೇಕ ಕಾಮನೆಗಳಲ್ಲಿ ಆಚ್ಚಾದಿತನಾದ, ಮೋಹದಲ್ಲಿ ಸಂಲಗ್ನನಾದ ವ್ಯಕ್ತಿಯು ಏಕಾಂತ ಚಿಂತನೆಯಿಂದ ದೂರವೇ ಉಳಿಯುತ್ತಾನೆ. ಸಂಸಾರದಲ್ಲಿ ಕಾಮ-ಭೋಗಗಳನ್ನು ತ್ಯಜಿಸುವುದು ಬಹು ಕಠಿಣವಾಗಿದೆ.
2.            ಯಾರು ಇಚ್ಛೆಗಳಿಗೆ ವಶೀಭೂತರೋ, ಸಾಂಸಾರಿಕ ಸುಖಗಳಲ್ಲಿ ಬಂಧಿತರೋ, ಅವರ ಮುಕ್ತಿ ಅತಿ ಕಠಿಣವಾಗಿದೆ. ಏಕೆಂದರೆ ಅವರು ಬೇರೆಯವರಿಂದ ಮುಕ್ತಿ ಹೊಂದಲಾರರು. ಅವರು ಭೂತ ಹಾಗು ಭವಿಷ್ಯದ ಮಾತುಗಳಿಗೆ ಉಪೇಕ್ಷೆ ಮಾಡುತ್ತಾರೆ. ವರ್ತಮಾನದ ಕಾಮನೆಗಳಿಗೆ ಹಾತೊರೆಯುತ್ತಾರೆ.
3.            ಯಾರು ಕಾಮಗಳ ಕಾಮನೆ ಮಾಡುವರೋ, ಅದರಲ್ಲೇ ಸಂಲಗ್ನವಾಗುವರೋ ಮತ್ತು ಅದರಲ್ಲಿ ಮೋಹಿತರೋ, ಯಾರು ಜಿಪುಣರೋ, ವಿಷಮತೆಯಲ್ಲಿ ತಲ್ಲೀನರೋ ಅವರು ದುಃಖದಲ್ಲಿ ಬಿದ್ದು ಒದ್ದಾಡುವರು. ಹಾಗು ಮೃತ್ಯುವಿನ ನಂತರ ತಮ್ಮ ಗತಿ ಏನು ಎಂದು ವಿಲಾಪಿಸುವರು.
4.            ಆದ್ದರಿಂದ ಮನುಷ್ಯರಿಗೆ ಬೇಕಾಗಿರುವುದು ಏನೆಂದರೆ ಲೋಕದಲ್ಲಿರುವ ವಿಷಮತೆಯನ್ನು ಅರಿಯುವುದು ಹಾಗು ವಿಷಮತೆಯ ಆಚರಣೆ ಮಾಡದಿರುವುದು ಏಕೆಂದರೆ ಧೀರರು ಜೀವನವನ್ನು ಅಲ್ಪವೆಂದು ಹೇಳಿದ್ದಾರೆ.
5.            ಲೋಕದಲ್ಲಿ ತೃಷ್ಣೆಯಿಂದ ಸಿಕ್ಕಿ ಒದ್ದಾಡುತ್ತಿರುವವರನ್ನು ನಾನು ನೋಡುತ್ತಿರುವೆನು. ಸಾಂಸಾರಿಕ ತೃಷ್ಣೆಯಲ್ಲಿ ಸಿಕ್ಕ ಹೀನರು ಮೃತ್ಯುವಿನ ಮುಖದಲ್ಲಿ ಬಿದ್ದು ವಿಲಾಪಿಸುತ್ತಾರೆ.
6.            ಅಲ್ಪಜಲದ ಜಲಾಶಯದಲ್ಲಿ ಮತ್ಸ್ಯಗಳು ಒದ್ದಾಡುವ ಹಾಗೆ ತೃಷ್ಣೆಗೆ ವಶೀಭೂತರಾಗಿ ಒದ್ದಾಡುವುದನ್ನು ನೋಡಿ ಅವರನ್ನು ನೋಡಿಯಾದರೂ ಇಂದ್ರಿಯ ವಿಷಯಗಳಲ್ಲಿ ಆಸಕ್ತಿರಹಿತರಾಗಿ, ತೃಷ್ಣಾರಹಿತರಾಗಿ ಸಂಚರಿಸಲಿ.
7.            ಅತಿರೇಕಗಳ ಎರಡು ಹಂತಗಳ ಇಚ್ಛೆಯನ್ನು ದೂರೀಕರಿಸಿ, ಇಂದ್ರಿಯಗಳ ಸ್ಪರ್ಶವನ್ನು ಚೆನ್ನಾಗಿ ಅರಿತು, ವಿಷಯ ಲೋಲುಪತನಾಗದೆ, ಸ್ವ-ನಿಂದೆಯ ಮಾತು ಆಡದೆ, ಆ ಧೀರನು ದೃಷ್ಟಿಗಳಲ್ಲಿ ಹಾಗು ಶ್ರುತಿಗಳಲ್ಲಿ ಲಿಪ್ತನಾಗುವುದಿಲ್ಲ.
8.            ಮುನಿಯು ಸಂಗ್ರಹದಲ್ಲಿ ಲಿಪ್ತನಾಗದಿರಲಿ, ಗ್ರಹಿಕೆಗಳನ್ನು ಚೆನ್ನಾಗಿ ಅರಿಯಲಿ, ಭವಸಾಗರವನ್ನು ದಾಟಿ ಹೋಗಲಿ. ಕಾಮನ ರೂಪವಾದ ಬಾಣವನ್ನು ತೆಗೆಯಲಿ, ಅಪ್ರಮತ್ತನಾಗಿ ಸಂಚರಿಸುವವನು ಈ ಲೋಕ ಅಥವಾ ಪರಲೋಕದ ಇಚ್ಛೆ ಮಾಡುವುದಿಲ್ಲ.

ಇಲ್ಲಿಗೆ ಗೃಹಟ್ಠಕ ಸುತ್ತ ಮುಗಿಯಿತು.

atthaka vagga -kama sutta in kannada ಅಟ್ಠಕ ವಗ್ಗ 1. ಕಾಮ ಸುತ್ತ

ಅಟ್ಠಕ ವಗ್ಗ
1. ಕಾಮ ಸುತ್ತ
(ಕಾಮಭೋಗಗಳ ದುಷ್ಪರಿಣಾಮಗಳು)

1.            ಒಂದುವೇಳೆ ಭೋಗವಿಲಾಸ ಇಚ್ಛೆವುಳ್ಳವನ ಇಚ್ಛೆಗಳು ಪೂರ್ಣವಾದರೆ ಆ ವ್ಯಕ್ತಿಯು ಅವಶ್ಯಕವಾಗಿ ತನ್ನ ಇಚ್ಛೆಗಳು ಪೂರ್ಣವಾದುದನ್ನು ಕಂಡು ಪ್ರಸನ್ನ ಮನದವನಾಗುತ್ತಿದ್ದನು.
2.            ಒಂದುವೇಳೆ ಇಚ್ಛಿಸುವವನು, ತೃಷ್ಣೆಗೆ ವಶೀಭೂತನು ಆದ ಅವನ ಕಾಮಭೋಗಗಳು ವಸ್ತುಗಳು (ವ್ಯಕ್ತಿ) ನಷ್ಟವಾದರೆ ಆತನು ಬಾಣವು ಚುಚ್ಚಿದಂತೆ ಪೀಡಿತನಾಗುತ್ತಾನೆ.
3.            ಸರ್ಪದ ಹೆಡೆಯಿಂದ ಕಾಲುಗಳನ್ನು ರಕ್ಷಿಸುವ ಹಾಗೆ ಯಾರು ಕಾಮಭೋಗಗಳನ್ನು ತ್ಯಜಿಸುವನೋ, ಆತನು ಈ ಸಂಸಾರದಲ್ಲಿ ಸ್ಮೃತಿಯಿಂದ (ಎಚ್ಚರಿಕೆಯಿಂದ) ವಿಷಪೂರಿತದಂತಿರುವ ಬಯಕೆಯನ್ನು ತ್ಯಜಿಸುವನು.
4.            ಮನುಷ್ಯನು ಹೊಲಗದ್ದೆ, ಹೊನ್ನು, ಗೋವುಗಳು, ಕುದುರೆ, ಧನ, ಸ್ತ್ರೀಯರು ಅಥವಾ ಬಂಧು ಸಂಬಂಧಿ ಹೀಗೆ ಅನೇಕ ರೀತಿಯಲ್ಲಿ ಭೋಗಭಿಲಾಷೆಯಲ್ಲಿ ಸಿಕ್ಕಿಕೊಳ್ಳುತ್ತಾನೆ.
5.            ಆಗ ಆತನಿಗೆ ವಾಸನೆಗಳು ಅಧುಮುತ್ತವೆ ಮತ್ತು ತೊಂದರೆಗಳು ಮದರ್ಿಸುತ್ತವೆ. ಹೇಗೆ ಒಡೆದ ನೌಕೆಯಲ್ಲಿ ನೀರು ನುಗ್ಗುವುದೋ ಹಾಗೆಯೇ ಅದರ ಹಿಂದೆ ದುಃಖವನ್ನು ಪಡೆಯುತ್ತಾನೆ.
6.            ಆದ್ದರಿಂದ ವ್ಯಕ್ತಿಯು ಸದಾ ಸ್ಮೃತಿವಂತನಾಗಿ ಕಾಮಭೋಗಗಳನ್ನು ಪರಿತ್ಯಜಿಸಬೇಕು. ಅವುಗಳನ್ನು ತ್ಯಜಿಸಲಿ, ನಾವೆಯಿಂದ ನೀರನ್ನು ಬರಿದುಮಾಡಿ ಭವಸಾಗರವನ್ನು ದಾಟಿಹೋಗುತ್ತಾನೆ.

ಇಲ್ಲಿಗೆ ಕಾಮ ಸುತ್ತ ಮುಗಿಯಿತು.