11. ವಿಜಯ ಸುತ್ತ
(ದೇಹದ ಅನಿತ್ಯತೆಯ ಮನನ)
1. ಚಲಿಸುತ್ತಾ ಅಥವಾ ನಿಂತಿರುವ, ಕುಳಿತುಕೊಳ್ಳುತ್ತಾ ಅಥವಾ ಮಲಗುತ್ತಾ ಯಾವ ಶರೀರವನ್ನು ಮಡಚುತ್ತಾ ಅಥವಾ ವಿಸ್ತರಿಸುತ್ತಾ ಇರುವನೊ, ಇದೇ ಕಾಯದ ಅವಸ್ಥೆ (ಗತಿ) ಯಾಗಿದೆ.
2. ಮೂಳೆ ಹಾಗು ಸ್ಮಾಯುಗಳಿಂದ ಕೂಡಿ ಚರ್ಮ ಹಾಗು ಮಾಂಸದಿಂದ ಕೂಡಿರುವ, ತೆಳುವಾದ ಚರ್ಮದಿಂದ ಮುಚ್ಚಿರುವ ಈ ಶರೀರದ ಯತಾರ್ಥ ಸ್ವರೂಪ ಹಾಗೆಯೇ ಕಾಣಿಸುವುದಿಲ್ಲ.
3-4. ಈ ಶರೀರವು ಒಳಗೆ ತುಂಬಿಹೋಗಿದೆ. ಹೊಟ್ಟೆಯು ತುಂಬಿದೆ, ಯಕೃತ್, ವಸ್ತಿ, ಹೃದಯ, ವುಪ್ಪಸ, ವೃಕ್ಕ, ಪ್ಲೀಹಾ, ಎಂಜಲು, ಬೆವರು, ಮೇದಸ್ಸು, ರಕ್ತ, ಕೀವು, ಪಿತ್ತಾ ಹಾಗು ಕೊಬ್ಬಿನಿಂದ ಕೂಡಿದೆ
5. ನವರಂಧ್ರಗಳಿಂದ ಸದಾ ಮಲಿನತೆಯು ಸುರಿಯುತ್ತಿರುತ್ತದೆ. ಕಣ್ಣಿನಿಂದ ಪಿಸರು, ಕಿವಿಯಿಂದ ಕೊಳೆ...
6. ಮೂಗಿನಿಂದ ಸಿಂಬಳ, ಕೆಲವೊಮ್ಮೆ ಬಾಯಿಂದ ವಾಂತಿ, ಪಿತ್ತ ಹಾಗು ಕಫದ ವಿಸರ್ಜನೆ, ಶರೀರದಿಂದ ಬೆವರು ಹಾಗು ಮಲವು ವಿಸಜರ್ಿತವಾಗುತ್ತದೆ.
7. ಇದರ ಬರಿದಾದ ತುದಿಯು ಮಲದಿಂದ ತುಂಬಿದೆ, ಅವಿದ್ಯೆಯ ಕಾರಣದಿಂದ ಮೂರ್ಖನು ಇದರಲ್ಲಿ ಸೌಂದರ್ಯ ಕಾಣುತ್ತಾನೆ.
8. ಎಂದು ಆತನು ಸತ್ತು ಹೋಗುವನೊ, ಆಗ ಕಟ್ಟಿಗೆಯಂತೆ ಬಿದ್ದಿರುತ್ತಾನೆ, ಕಡುಬಣ್ಣಕ್ಕೆ ಶರೀರ ತಿರುಗುತ್ತದೆ. ಸ್ಮಶಾನದಲ್ಲಿ ಆತನನ್ನು ಎಸೆಯುತ್ತಾರೆ ಹಾಗು ಸೋದರ-ಬಂಧುಗಳಿಂದ ಅಪೇಕ್ಷಾರಹಿತನಾಗುತ್ತಾನೆ.
9. ಆತನನ್ನು ನಾಯಿಗಳು, ನರಿಗಳು, ಗೆದ್ದಲು, ಕೀಟಗಳು, ಕಾಗೆಗಳು, ಹದ್ದುಗಳು ಹಾಗು ಅನ್ಯ ಪ್ರಾಣಿಗಳು ತಿನ್ನುತ್ತವೆ.
10. ಪ್ರಜ್ಞಾವಂತ ಭಿಕ್ಷುವು ಬುದ್ಧ ವಚನವನ್ನು ಕೇಳಿ, ಶರೀರದ ಸ್ವಭಾವವನ್ನು ಸರಿಯಾಗಿ ಅರಿಯುತ್ತಾನೆ ಹಾಗು ಅದರ ಯತಾರ್ಥ ಸ್ವರೂಪ ನೋಡುತ್ತಾನೆ.
11. ಈ ಶರೀರ ಹೇಗಿದೆಯೋ ಅದು ಹಾಗೆಯೆ. ಇದು (ಈ ಶರೀರ) ಹೇಗಿದೆಯೊ, ಹಾಗೆಯೇ ಅದು (ಪರರ ಶರೀರ) ಸಹಾ. ಆದ್ದರಿಂದ ತನ್ನ ಅಥವಾ ಪರರ ಶರೀರದ ಬಗ್ಗೆ ರಾಗವನ್ನು ತ್ಯಜಿಸಲಿ.
12. ಯಾವ ಭಿಕ್ಷು ಪ್ರಜ್ಞಾವಂತಿಕೆಯಿಂದ ಇಚ್ಛೆ ಹಾಗು ರಾಗದಿಂದ ರಹಿತನೊ, ಆತನು ಅಮರತ್ವ, ಶಾಂತಿ, ಅತ್ಯುನ್ನತವಾದ ನಿಬ್ಬಾಣವನ್ನು ಪ್ರಾಪ್ತಿಮಾಡುತ್ತಾನೆ.
13. ಅಪವಿತ್ರವಾದ, ನಾನಾ ಮಲಗಳಿಂದ ಪೂರ್ಣತೆ ಹೊಂದಿದ ಶರೀರ ಹಾಗು ಎರಡು ಕಾಲುಗಳ ಅವನು ದುರ್ಗಂಧವನ್ನು ಹೊತ್ತಿರುತ್ತಾನೆ ಮತ್ತು ಸ್ಥಳದಿಂದ ಸ್ಥಳಕ್ಕೆ ದುರ್ಗಂಧ ಹಬ್ಬಿಸುತ್ತಾ ತಿರುಗುತ್ತಾನೆ.
14. ಈ ರೀತಿಯ ಶರೀರದಿಂದ ಯಾವಾತನು ಅಹಂಕಾರಪಡುತ್ತಾನೋ, ಅಥವಾ ಪರರ ಅನಾಧರಣೆ ಮಾಡುವನೊ, ಅಂತಹವನು ಅಜ್ಞಾನದ ವಿನಃ ಮತ್ತಾವ ಕಾರಣನಾಗಿದ್ದಾನೆ?
ಇಲ್ಲಿಗೆ ವಿಜಯ ಸುತ್ತ ಮುಗಿಯಿತು.
(ದೇಹದ ಅನಿತ್ಯತೆಯ ಮನನ)
1. ಚಲಿಸುತ್ತಾ ಅಥವಾ ನಿಂತಿರುವ, ಕುಳಿತುಕೊಳ್ಳುತ್ತಾ ಅಥವಾ ಮಲಗುತ್ತಾ ಯಾವ ಶರೀರವನ್ನು ಮಡಚುತ್ತಾ ಅಥವಾ ವಿಸ್ತರಿಸುತ್ತಾ ಇರುವನೊ, ಇದೇ ಕಾಯದ ಅವಸ್ಥೆ (ಗತಿ) ಯಾಗಿದೆ.
2. ಮೂಳೆ ಹಾಗು ಸ್ಮಾಯುಗಳಿಂದ ಕೂಡಿ ಚರ್ಮ ಹಾಗು ಮಾಂಸದಿಂದ ಕೂಡಿರುವ, ತೆಳುವಾದ ಚರ್ಮದಿಂದ ಮುಚ್ಚಿರುವ ಈ ಶರೀರದ ಯತಾರ್ಥ ಸ್ವರೂಪ ಹಾಗೆಯೇ ಕಾಣಿಸುವುದಿಲ್ಲ.
3-4. ಈ ಶರೀರವು ಒಳಗೆ ತುಂಬಿಹೋಗಿದೆ. ಹೊಟ್ಟೆಯು ತುಂಬಿದೆ, ಯಕೃತ್, ವಸ್ತಿ, ಹೃದಯ, ವುಪ್ಪಸ, ವೃಕ್ಕ, ಪ್ಲೀಹಾ, ಎಂಜಲು, ಬೆವರು, ಮೇದಸ್ಸು, ರಕ್ತ, ಕೀವು, ಪಿತ್ತಾ ಹಾಗು ಕೊಬ್ಬಿನಿಂದ ಕೂಡಿದೆ
5. ನವರಂಧ್ರಗಳಿಂದ ಸದಾ ಮಲಿನತೆಯು ಸುರಿಯುತ್ತಿರುತ್ತದೆ. ಕಣ್ಣಿನಿಂದ ಪಿಸರು, ಕಿವಿಯಿಂದ ಕೊಳೆ...
6. ಮೂಗಿನಿಂದ ಸಿಂಬಳ, ಕೆಲವೊಮ್ಮೆ ಬಾಯಿಂದ ವಾಂತಿ, ಪಿತ್ತ ಹಾಗು ಕಫದ ವಿಸರ್ಜನೆ, ಶರೀರದಿಂದ ಬೆವರು ಹಾಗು ಮಲವು ವಿಸಜರ್ಿತವಾಗುತ್ತದೆ.
7. ಇದರ ಬರಿದಾದ ತುದಿಯು ಮಲದಿಂದ ತುಂಬಿದೆ, ಅವಿದ್ಯೆಯ ಕಾರಣದಿಂದ ಮೂರ್ಖನು ಇದರಲ್ಲಿ ಸೌಂದರ್ಯ ಕಾಣುತ್ತಾನೆ.
8. ಎಂದು ಆತನು ಸತ್ತು ಹೋಗುವನೊ, ಆಗ ಕಟ್ಟಿಗೆಯಂತೆ ಬಿದ್ದಿರುತ್ತಾನೆ, ಕಡುಬಣ್ಣಕ್ಕೆ ಶರೀರ ತಿರುಗುತ್ತದೆ. ಸ್ಮಶಾನದಲ್ಲಿ ಆತನನ್ನು ಎಸೆಯುತ್ತಾರೆ ಹಾಗು ಸೋದರ-ಬಂಧುಗಳಿಂದ ಅಪೇಕ್ಷಾರಹಿತನಾಗುತ್ತಾನೆ.
9. ಆತನನ್ನು ನಾಯಿಗಳು, ನರಿಗಳು, ಗೆದ್ದಲು, ಕೀಟಗಳು, ಕಾಗೆಗಳು, ಹದ್ದುಗಳು ಹಾಗು ಅನ್ಯ ಪ್ರಾಣಿಗಳು ತಿನ್ನುತ್ತವೆ.
10. ಪ್ರಜ್ಞಾವಂತ ಭಿಕ್ಷುವು ಬುದ್ಧ ವಚನವನ್ನು ಕೇಳಿ, ಶರೀರದ ಸ್ವಭಾವವನ್ನು ಸರಿಯಾಗಿ ಅರಿಯುತ್ತಾನೆ ಹಾಗು ಅದರ ಯತಾರ್ಥ ಸ್ವರೂಪ ನೋಡುತ್ತಾನೆ.
11. ಈ ಶರೀರ ಹೇಗಿದೆಯೋ ಅದು ಹಾಗೆಯೆ. ಇದು (ಈ ಶರೀರ) ಹೇಗಿದೆಯೊ, ಹಾಗೆಯೇ ಅದು (ಪರರ ಶರೀರ) ಸಹಾ. ಆದ್ದರಿಂದ ತನ್ನ ಅಥವಾ ಪರರ ಶರೀರದ ಬಗ್ಗೆ ರಾಗವನ್ನು ತ್ಯಜಿಸಲಿ.
12. ಯಾವ ಭಿಕ್ಷು ಪ್ರಜ್ಞಾವಂತಿಕೆಯಿಂದ ಇಚ್ಛೆ ಹಾಗು ರಾಗದಿಂದ ರಹಿತನೊ, ಆತನು ಅಮರತ್ವ, ಶಾಂತಿ, ಅತ್ಯುನ್ನತವಾದ ನಿಬ್ಬಾಣವನ್ನು ಪ್ರಾಪ್ತಿಮಾಡುತ್ತಾನೆ.
13. ಅಪವಿತ್ರವಾದ, ನಾನಾ ಮಲಗಳಿಂದ ಪೂರ್ಣತೆ ಹೊಂದಿದ ಶರೀರ ಹಾಗು ಎರಡು ಕಾಲುಗಳ ಅವನು ದುರ್ಗಂಧವನ್ನು ಹೊತ್ತಿರುತ್ತಾನೆ ಮತ್ತು ಸ್ಥಳದಿಂದ ಸ್ಥಳಕ್ಕೆ ದುರ್ಗಂಧ ಹಬ್ಬಿಸುತ್ತಾ ತಿರುಗುತ್ತಾನೆ.
14. ಈ ರೀತಿಯ ಶರೀರದಿಂದ ಯಾವಾತನು ಅಹಂಕಾರಪಡುತ್ತಾನೋ, ಅಥವಾ ಪರರ ಅನಾಧರಣೆ ಮಾಡುವನೊ, ಅಂತಹವನು ಅಜ್ಞಾನದ ವಿನಃ ಮತ್ತಾವ ಕಾರಣನಾಗಿದ್ದಾನೆ?
ಇಲ್ಲಿಗೆ ವಿಜಯ ಸುತ್ತ ಮುಗಿಯಿತು.
No comments:
Post a Comment