Thursday, 26 July 2018

ಅನತ್ತ ಲಕ್ಖಣ ಸುತ್ತ (ಬುದ್ಧಭಗವಾನರ ಎರಡನೇಯ ಸುತ್ತ) anatta lakkhana sutta in kannada

ಅನತ್ತ ಲಕ್ಖಣ ಸುತ್ತ


(ಬುದ್ಧಭಗವಾನರ ಎರಡನೇಯ ಸುತ್ತ)



ಹೀಗೆ ನಾನು ಕೇಳಿದ್ದೇನೆ ಆಗ ಭಗವಾನರು ಕಾಶಿಯ ಹತ್ತಿರದ ಇಸಿಪತ್ತನದ ಮೃಗದಾಯದ ಬಳಿ ಇದ್ದರು.ಆಗ ಭಗವಾನರು ಪಂಚವಗರ್ೀಯ ಭಿಕ್ಖುಗಳೊಂದಿಗೆ ಹೀಗೆ ಸಂಬೋಧಿಸಿದರು. :
  ಭಿಕ್ಖುಗಳೇ ಆಕಾರವು(ದೇಹವು) ಆತ್ಮವಾಗಿಲ್ಲ(ಸ್ವಯಂವಾಗಿಲ್ಲ), ದೇಹವೇ ಆತ್ಮವಾಗಿದ್ದರೇ ಆಗ ದೇಹವೂ ರೋಗಕ್ಕೆ ಒಳಗಾಗುತ್ತಿರಲ್ಲಿಲ್ಲ. ಮತ್ತು ಆಗ ಇಚ್ಚೆಗೆ ತಕ್ಕಂತೆ ನನ್ನ ಶರೀರ ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಾಗುತ್ತಿತ್ತು.. ಅದರೆ ಭಿಕ್ಖುಗಳೇ ದೇಹವೂ ಆತ್ಮವಲ್ಲದ್ದರಿಂದಾಗಿ ಅದು ರೋಗವನ್ನು ಪಡೆಯುತ್ತದೆ, ಹಾಗೂ ಇಚ್ಚೆಯಂತೆ ನನ್ನ ಶರೀರ ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಿಲ್ಲ.

ಭಿಕ್ಖುಗಳೇ ವೇದನೆಗಳು ಆತ್ಮವಾಗಿಲ್ಲ(ಸ್ವಯಂವಾಗಿಲ್ಲ), ವೇದನೆಗಳೇ ಆತ್ಮವಾಗಿದ್ದರೇ ಆಗ ವೇದನೆಗಳು ನೋವಿಗೆ ಒಳಗಾಗುತ್ತಿರಲ್ಲಿಲ್ಲ. ಮತ್ತು ಆಗ ಇಚ್ಚೆಗೆ ತಕ್ಕಂತೆ ನನ್ನ ವೇದನೆ ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಾಗುತ್ತಿತ್ತು.. ಅದರೆ ಭಿಕ್ಖುಗಳೇ ವೇದನೆಗಳು ಆತ್ಮವಲ್ಲದ್ದರಿಂದಾಗಿ ಅದು ನೋವುಗಳನ್ನು ಪಡೆಯುತ್ತದೆ, ಹಾಗೂ ಇಚ್ಚೆಯಂತೆ ನನ್ನ ವೇದನೆ ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಿಲ್ಲ.

ಭಿಕ್ಖುಗಳೇ ಸಞ್ಞೆಗಳು (ಗ್ರಹಿಕೆಗಳು) ಆತ್ಮವಾಗಿಲ್ಲ (ಸ್ವಯಂವಾಗಿಲ್ಲ), ಸಞ್ಞೆಗಳು (ಗ್ರಹಿಕೆಗಳು) ಆತ್ಮವಾಗಿದ್ದರೇ ಆಗ ಸಞ್ಞೆಗಳು (ಗ್ರಹಿಕೆಗಳು) ನೋವಿಗೆ ಒಳಗಾಗುತ್ತಿರಲ್ಲಿಲ್ಲ. ಮತ್ತು ಆಗ ಇಚ್ಚೆಗೆ ತಕ್ಕಂತೆ ನನ್ನ ಸಞ್ಞೆಗಳು(ಗ್ರಹಿಕೆಗಳು) ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಾಗುತ್ತಿತ್ತು.. ಅದರೆ ಭಿಕ್ಖುಗಳೇ ಸಞ್ಞೆಗಳು (ಗ್ರಹಿಕೆಗಳು) ಆತ್ಮವಲ್ಲದ್ದರಿಂದಾಗಿ ಅದು ನೋವುಗಳನ್ನು ಪಡೆಯುತ್ತದೆ, ಹಾಗೂ ಇಚ್ಚೆಯಂತೆ ನನ್ನ ಸಞ್ಞೆಗಳು (ಗ್ರಹಿಕೆಗಳು) ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಿಲ್ಲ.

ಭಿಕ್ಖುಗಳೇ ಸಂಖಾರಗಳು(ಮನೋನಿಮರ್ಿತಿಗಳು) ಆತ್ಮವಾಗಿಲ್ಲ(ಸ್ವಯಂವಾಗಿಲ್ಲ), ಸಂಖಾರಗಳು(ಮನೋನಿಮರ್ಿತಿಗಳು) ಆತ್ಮವಾಗಿದ್ದರೇ ಆಗ ಸಂಖಾರಗಳು(ಮನೋನಿಮರ್ಿತಿಗಳು) ನೋವಿಗೆ(ಕ್ಲೇಷಗಳಿಗೆ) ಒಳಗಾಗುತ್ತಿರಲ್ಲಿಲ್ಲ.್ಲ. ಮತ್ತು ಆಗ ಇಚ್ಚೆಗೆ ತಕ್ಕಂತೆ ನನ್ನ ಸಂಖಾರಗಳು(ಮನೋನಿಮರ್ಿತಿಗಳು)ೆ ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಾಗುತ್ತಿತ್ತು.. ಅದರೆ ಭಿಕ್ಖುಗಳೇ ಸಂಖಾರಗಳು(ಮನೋನಿಮರ್ಿತಿಗಳು) ಆತ್ಮವಲ್ಲದ್ದರಿಂದಾಗಿ ಅದು ನೋವುಗಳನ್ನು ಪಡೆಯುತ್ತದೆ, ಹಾಗೂ ಇಚ್ಚೆಯಂತೆ ನನ್ನ ಸಂಖಾರಗಳು(ಮನೋನಿಮರ್ಿತಿಗಳು) ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಿಲ್ಲ.


ಭಿಕ್ಖುಗಳೇ ವಿಞ್ಞನಗಳು (ಅರಿಯುವಿಕೆ) ಆತ್ಮವಾಗಿಲ್ಲ (ಸ್ವಯಂವಾಗಿಲ್ಲ), ವಿಞ್ಞನಗಳು (ಅರಿಯುವಿಕೆ) ಆತ್ಮವಾಗಿದ್ದರೇ ಆಗ ವಿಞ್ಞನಗಳು (ಅರಿಯುವಿಕೆ) ನೋವಿಗೆ(ಕ್ಲೇಷಗಳಿಗೆ) ಒಳಗಾಗುತ್ತಿರಲ್ಲಿಲ್ಲ.್ಲ. ಮತ್ತು ಆಗ ಇಚ್ಚೆಗೆ ತಕ್ಕಂತೆ ನನ್ನ ವಿಞ್ಞನಗಳು(ಅರಿಯುವಿಕೆ)ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಾಗುತ್ತಿತ್ತು.. ಅದರೆ ಭಿಕ್ಖುಗಳೇ ವಿಞ್ಞನಗಳು(ಅರಿಯುವಿಕೆ) ಆತ್ಮವಲ್ಲದ್ದರಿಂದಾಗಿ ಅದು ನೋವುಗಳನ್ನು ಪಡೆಯುತ್ತದೆ, ಹಾಗೂ ಇಚ್ಚೆಯಂತೆ ನನ್ನ ವಿಞ್ಞನಗಳು(ಅರಿಯುವಿಕೆ)ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಿಲ್ಲ.

ನೀವು ಹೇಗೆ ಯೋಚಿಸುವಿರಿ ಭಿಕ್ಖುಗಳೇ ದೇಹವೂ ನಿತ್ಯವೋ ಅಥವಾ ಅನಿತ್ಯವೋ
    ಅನಿತ್ಯ ಭಗವಾನ್
    ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?
    ದುಃಖಕಾರಿ ಭಂತೆ
    ಈಗ ಯಾವುದು ಅನಿತ್ಯವೋ, ದುಃಖಕಾರಿಯೋ, ಬದಲಾಗುವ ಧರ್ಮದ್ದೊ ಅದನ್ನು ಇದು ನನ್ನದು, ಇದೇ ನಾನು, ಇದು ನನ್ನ ಆತ್ಮ ಎಂದು ಪರಿಗಣಿಸಬಹುದೇ?
ಖಂಡಿತವಾಗಿಯು ಇಲ್ಲ ಭಗವಾನ್
ನೀವು ಹೇಗೆ ಯೋಚಿಸುವಿರಿ ಭಿಕ್ಖುಗಳೇ ವೇದನೆಗಳು ನಿತ್ಯವೋ ಅಥವಾ ಅನಿತ್ಯವೋ
    ಅನಿತ್ಯ ಭಗವಾನ್
    ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?
    ದುಃಖಕಾರಿ ಭಂತೆ
    ಈಗ ಯಾವುದು ಅನಿತ್ಯವೋ, ದುಃಖಕಾರಿಯೋ, ಬದಲಾಗುವ ಧರ್ಮದ್ದೊ ಅದನ್ನು ಇದು ನನ್ನದು, ಇದೇ ನಾನು, ಇದು ನನ್ನ ಆತ್ಮ ಎಂದು ಪರಿಗಣಿಸಬಹುದೇ?
  ಖಂಡಿತವಾಗಿಯು ಇಲ್ಲ ಭಗವಾನ್.
 ನೀವು ಹೇಗೆ ಯೋಚಿಸುವಿರಿ ಭಿಕ್ಖುಗಳೇ ಸಞ್ಞ(ಗ್ರಹಿಕೆಗಳು) ನಿತ್ಯವೋ ಅಥವಾ ಅನಿತ್ಯವೋ
    ಅನಿತ್ಯ ಭಗವಾನ್
    ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?
    ದುಃಖಕಾರಿ ಭಂತೆ
    ಈಗ ಯಾವುದು ಅನಿತ್ಯವೋ, ದುಃಖಕಾರಿಯೋ, ಬದಲಾಗುವ ಧರ್ಮದ್ದೊ ಅದನ್ನು ಇದು ನನ್ನದು, ಇದೇ ನಾನು, ಇದು ನನ್ನ ಆತ್ಮ ಎಂದು ಪರಿಗಣಿಸಬಹುದೇ?
  ಖಂಡಿತವಾಗಿಯು ಇಲ್ಲ ಭಗವಾನ್.
 ನೀವು ಹೇಗೆ ಯೋಚಿಸುವಿರಿ ಭಿಕ್ಖುಗಳೇ ಸಂಖಾರಗಳು(ಮನೋನಿಮರ್ಿತಿಗಳು) ನಿತ್ಯವೋ ಅಥವಾ ಅನಿತ್ಯವೋ
ಅನಿತ್ಯ ಭಗವಾನ್
ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?
ದುಃಖಕಾರಿ ಭಂತೆ
ಈಗ ಯಾವುದು ಅನಿತ್ಯವೋ, ದುಃಖಕಾರಿಯೋ, ಬದಲಾಗುವ ಧರ್ಮದ್ದೊ ಅದನ್ನು ಇದು ನನ್ನದು, ಇದೇ ನಾನು, ಇದು ನನ್ನ ಆತ್ಮ ಎಂದು ಪರಿಗಣಿಸಬಹುದೇ?
ಖಂಡಿತವಾಗಿಯು ಇಲ್ಲ ಭಗವಾನ್.
  ನೀವು ಹೇಗೆ ಯೋಚಿಸುವಿರಿ ಭಿಕ್ಖುಗಳೇ ವಿಞ್ಞನಗಳು(ಅರಿಯುವಿಕೆಗಳು) ನಿತ್ಯವೋ ಅಥವಾ ಅನಿತ್ಯವೋ
ಅನಿತ್ಯ ಭಗವಾನ್
ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?
ದುಃಖಕಾರಿ ಭಂತೆ
ಈಗ ಯಾವುದು ಅನಿತ್ಯವೋ, ದುಃಖಕಾರಿಯೋ, ಬದಲಾಗುವ ಧರ್ಮದ್ದೊ ಅದನ್ನು ಇದು ನನ್ನದು, ಇದೇ ನಾನು, ಇದು ನನ್ನ ಆತ್ಮ ಎಂದು ಪರಿಗಣಿಸಬಹುದೇ?
ಖಂಡಿತವಾಗಿಯು ಇಲ್ಲ ಭಗವಾನ್.
ಅದ್ದರಿಂದ ಭಿಕ್ಖುಗಳೇ ಯಾವುದೇ ಶರೀರವು ಅದು ಭೂತಕಾಲದ್ದೇ ಅಗಿರಲಿ, ಅಥವಾ ಭವಿಷ್ಯದ್ದೇ ಆಗಿರಲಿ ಅಥವಾ ವರ್ತಮಾನದ್ದೇ ಆಗಿರಲಿ ,ಆಂತರ್ಯದ್ದೇ ಆಗಿರಲಿ ಅಥವಾ ಬಾಹ್ಯದ್ದೇ ಆಗಿರಲಿ, ಸ್ಥೂಲವಾದ್ದೇ ಆಗಿರಲಿ ಅಥವಾ ಸೂಕ್ಷ್ಮವಾದ್ದೇ ಆಗಿರಲಿ,  ಶ್ರೇಷ್ಟವಾದ್ದೇ ಆಗಿರಲಿ ಅಥವ ನೀಚವಾದ್ದೇ ಆಗಿರಲಿ, ದೂರದ್ದೇ ಆಗಿರಲಿ ಅಥವಾ ಹತ್ತಿರದ್ದೇ ಆಗಿರಲಿ , ಆ ಎಲ್ಲಾ ಶರೀರವನ್ನು ಇದು ನನ್ನದ್ದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಪ್ರಜ್ಞಾಪೂರ್ವಕವಾಗಿ, ಯಥಾಭೂತವಾಗಿ ಹೀಗೆ ಅರಿಯಬೇಕು.

ಅದ್ದರಿಂದ ಭಿಕ್ಖುಗಳೇ ಯಾವುದೇ ವೇದನೆಯು ಅದು ಭೂತಕಾಲದ್ದೇ ಅಗಿರಲಿ, ಅಥವಾ ಭವಿಷ್ಯದ್ದೇ ಆಗಿರಲಿ ಅಥವಾ ವರ್ತಮಾನದ್ದೇ ಆಗಿರಲಿ ,ಆಂತರ್ಯದ್ದೇ ಆಗಿರಲಿ ಅಥವಾ ಬಾಹ್ಯದ್ದೇ ಆಗಿರಲಿ, ಸ್ಥೂಲವಾದ್ದೇ ಆಗಿರಲಿ ಅಥವಾ ಸೂಕ್ಷ್ಮವಾದ್ದೇ ಆಗಿರಲಿ,  ಶ್ರೇಷ್ಟವಾದ್ದೇ ಆಗಿರಲಿ ಅಥವ ನೀಚವಾದ್ದೇ ಆಗಿರಲಿ, ದೂರದ್ದೇ ಆಗಿರಲಿ ಅಥವಾ ಹತ್ತಿರದ್ದೇ ಆಗಿರಲಿ , ಆ ಎಲ್ಲಾ ವೇದನೆಗಳನ್ನು  ಇದು ನನ್ನದ್ದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಪ್ರಜ್ಞಾಪೂರ್ವಕವಾಗಿ, ಯಥಾಭೂತವಾಗಿ ಹೀಗೆ ಅರಿಯಬೇಕು.

ಅದ್ದರಿಂದ ಭಿಕ್ಖುಗಳೇ ಯಾವುದೇ ಸಞ್ಞೆಯು ಅದು ಭೂತಕಾಲದ್ದೇ ಅಗಿರಲಿ, ಅಥವಾ ಭವಿಷ್ಯದ್ದೇ ಆಗಿರಲಿ ಅಥವಾ ವರ್ತಮಾನದ್ದೇ ಆಗಿರಲಿ ,ಆಂತರ್ಯದ್ದೇ ಆಗಿರಲಿ ಅಥವಾ ಬಾಹ್ಯದ್ದೇ ಆಗಿರಲಿ, ಸ್ಥೂಲವಾದ್ದೇ ಆಗಿರಲಿ ಅಥವಾ ಸೂಕ್ಷ್ಮವಾದ್ದೇ ಆಗಿರಲಿ,  ಶ್ರೇಷ್ಟವಾದ್ದೇ ಆಗಿರಲಿ ಅಥವ ನೀಚವಾದ್ದೇ ಆಗಿರಲಿ, ದೂರದ್ದೇ ಆಗಿರಲಿ ಅಥವಾ ಹತ್ತಿರದ್ದೇ ಆಗಿರಲಿ , ಆ ಎಲ್ಲಾ ಸಞ್ಞೆಗಳನ್ನು  ಇದು ನನ್ನದ್ದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಪ್ರಜ್ಞಾಪೂರ್ವಕವಾಗಿ, ಯಥಾಭೂತವಾಗಿ ಹೀಗೆ ಅರಿಯಬೇಕು.

ಅದ್ದರಿಂದ ಭಿಕ್ಖುಗಳೇ ಯಾವುದೇ ಸಂಖಾರಗಳು ಅದು ಭೂತಕಾಲದ್ದೇ ಅಗಿರಲಿ, ಅಥವಾ ಭವಿಷ್ಯದ್ದೇ ಆಗಿರಲಿ ಅಥವಾ ವರ್ತಮಾನದ್ದೇ ಆಗಿರಲಿ ,ಆಂತರ್ಯದ್ದೇ ಆಗಿರಲಿ ಅಥವಾ ಬಾಹ್ಯದ್ದೇ ಆಗಿರಲಿ, ಸ್ಥೂಲವಾದ್ದೇ ಆಗಿರಲಿ ಅಥವಾ ಸೂಕ್ಷ್ಮವಾದ್ದೇ ಆಗಿರಲಿ,  ಶ್ರೇಷ್ಟವಾದ್ದೇ ಆಗಿರಲಿ ಅಥವ ನೀಚವಾದ್ದೇ ಆಗಿರಲಿ, ದೂರದ್ದೇ ಆಗಿರಲಿ ಅಥವಾ ಹತ್ತಿರದ್ದೇ ಆಗಿರಲಿ , ಆ ಎಲ್ಲಾ ಸಂಖಾರಗಳನ್ನು  ಇದು ನನ್ನದ್ದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಪ್ರಜ್ಞಾಪೂರ್ವಕವಾಗಿ, ಯಥಾಭೂತವಾಗಿ ಹೀಗೆ ಅರಿಯಬೇಕು.

ಅದ್ದರಿಂದ ಭಿಕ್ಖುಗಳೇ ಯಾವುದೇ ವಿಞ್ಞನಗಳು ಗಳು ಅದು ಭೂತಕಾಲದ್ದೇ ಅಗಿರಲಿ, ಅಥವಾ ಭವಿಷ್ಯದ್ದೇ ಆಗಿರಲಿ ಅಥವಾ ವರ್ತಮಾನದ್ದೇ ಆಗಿರಲಿ ,ಆಂತರ್ಯದ್ದೇ ಆಗಿರಲಿ ಅಥವಾ ಬಾಹ್ಯದ್ದೇ ಆಗಿರಲಿ, ಸ್ಥೂಲವಾದ್ದೇ ಆಗಿರಲಿ ಅಥವಾ ಸೂಕ್ಷ್ಮವಾದ್ದೇ ಆಗಿರಲಿ,  ಶ್ರೇಷ್ಟವಾದ್ದೇ ಆಗಿರಲಿ ಅಥವ ನೀಚವಾದ್ದೇ ಆಗಿರಲಿ, ದೂರದ್ದೇ ಆಗಿರಲಿ ಅಥವಾ ಹತ್ತಿರದ್ದೇ ಆಗಿರಲಿ , ಆ ಎಲ್ಲಾ ವಿಞ್ಞನಗಳನ್ನು  ಇದು ನನ್ನದ್ದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಪ್ರಜ್ಞಾಪೂರ್ವಕವಾಗಿ, ಯಥಾಭೂತವಾಗಿ ಹೀಗೆ ಅರಿಯಬೇಕು.

ಓ ಭಿಕ್ಖುಗಳೇ, ಯಾವಾಗ ಸುಶಿಕ್ಷಿತ ಆರ್ಯ ಶ್ರಾವಕನು ಹೀಗೆ ಗಮನಿಸಿದಾಗ ಆತನು ದೇಹದಿಂದ ವಿಕಷರ್ಿತನಾಗುತ್ತಾನೆ , ವೇದನೆಗಳಿಂದ ವಿಕಷರ್ಿತನಾಗುತ್ತಾನೆ,  ಸಞ್ಞಗಳಿಂದ ವಿಕಷರ್ಿತನಾಗುತ್ತಾನೆ , ಸಂಖಾರಗಳಿಂದ ವಿಕಷರ್ಿತನಾಗುತ್ತಾನೆ , ವಿಞ್ಞನಗಳಿಂದ ವಿಕಷರ್ಿತನಾಗುತ್ತಾನೆ ,ವಿಕಷರ್ಿತನಾದ್ದರಿಂದಾಗಿ ವಿರಾಗ ಹೊಂದುತ್ತಾನೆ, ವಿರಾಗ ಹೊಂದಿದ್ದರಿಂದಾಗಿ ವಿಮುಕ್ತನಾಗುತ್ತಾನೆ, ಅದರಿಂದಾಗಿ ವಿಮುಕ್ತಜ್ಞಾನ ಪಡೆಯುತ್ತಾನೆ ಜನ್ಮವೂ ನಾಶವಾಯಿತು, ಬ್ರಹ್ಮಚರ್ಯೆಯ ಜೀವನ ಪೂರ್ಣವಾಯಿತು, ಯಾವುದೆಲ್ಲವನ್ನು ಮಾಡಬೇಕಾಗಿತ್ತೊ ಅವೆಲ್ಲವನ್ನು ಮಾಡಿಯಾಗಿದೆ, ಇನ್ನು ನನಗೆ ಭವವಿಲ್ಲ ಎಂದು ಅರಿಯುತ್ತಾನೆ.

ಭಗವಾನರು ಹೀಗೆ ಬೋಧಿಸಿದಾಗ ಪಂಚವಗರ್ೀಯ ಭಿಕ್ಷುಗಳು ಆನಂದಿತರಾದರು ಹಾಗೂ ಅವರ ಚಿತ್ತಗಳು ಅಸವಗಳಿಂದ ಮುಕ್ತವಾದವು, ಅವರು ಎಲ್ಲಾಬಗೆಯ ಅಂಟುವಿಕೆಯಿಂದ ಮುಕ್ತರಾದರು.

DHAMMACAKKAPAVATTANA SUTTA in kannada ದಮ್ಮಚಕ್ಕಪವತ್ತನ ಸುತ್ತ

 ದಮ್ಮಚಕ್ಕಪವತ್ತನ ಸುತ್ತ




ನಾನು ಹೀಗೆ ಕೇಳಿದ್ದೇನೆ :
ಒಮ್ಮೆ ಭಗವಾನರು ವಾರಾಣಸಿಯ ಇಸಿಪಟ್ಟಣದ ಮಿಗದಾಯದಲ್ಲಿ ವಿಹರಿಸುತ್ತಿದ್ದರು, ಆಗ ಭಗವಾನರು ಪಂಚವಗರ್ೀಯ ಭಿಕ್ಖುಗಳಿಗೆ ಹೀಗೆ ಸಂಭೋದಿಸಿದರು :

 ಎರಡು ಅತಿರೇಕಗಳಿವೆ ಭಿಕ್ಖುಗಳೇ, ಅದನ್ನು ಪಬ್ಬಜಿತನಾದವನು ಸೇವಿಸಬಾರದು, ಯಾವುದವು ಎರಡು ?

 ಅವೆಂದರೆ ಕಾಮಸುಖಗಳಲ್ಲಿ ತಲ್ಲಿನನಾಗುವಿಕೆ, ಇವು ಹೀನವಾದುದು, ಅಸಭ್ಯವಾದುದು(ಗಮ್ಮೋ), ಪ್ರಾಪಂಚಿಕವಾದುದು(ಪೊಥುಜ್ಜನಿಕೊ), ಉದಾತ್ತವಲ್ಲದ್ದು(ಅನರಿಯೊ), ಮತ್ತು ಅನರ್ಥಕಾರಿಯಾದುದು.


ಇನ್ನೊಂದು ಅತಿರೇಕವೆಂದರೆ ಸ್ವಯಂವನ್ನು(ದೇಹ) ದಂಡಿಸುವಿಕೆ, ಇವು ದುಃಖಕಾರಿ, ಉದಾತ್ತವಲ್ಲದ್ದು, ಮತ್ತು ಅನರ್ಥಕಾರಿಯಾದುದು.

 ಈ ಉಭಯವನ್ನು ವಜರ್ಿಸಿರುವ ತಥಾಗತರು ಮಧ್ಯಮ ಮಾರ್ಗವನ್ನು ಅನ್ವೇಷಿಸಿದ್ದಾರೆ. ಇದು ಚಕ್ಷುಕಾರಕವು, ಜ್ಞಾನಕಾರಕ, ಉಪಶಾಂತತೆ ನೀಡುವಂತಹದ್ದು, ಅಭಿಞ್ಞಕಾರಕ, ಸಂಬೋಧಿದಾಯಕ ಹಾಗೂ ನಿಬ್ಬಾಣದೆಡೆಗೆ ಒಯ್ಯುವಂತಹುದು.

   ಯಾವುದು ಭಿಕ್ಖುಗಳೇ ತಥಾಗತರು ಅನ್ವೇಷಿಸಿರುವ. ಮಧ್ಯಮ ಮಾರ್ಗವು. ಚಕ್ಷುಕಾರಕವು, ಜ್ಞಾನಕಾರಕವು, ಉಪಶಾಂತತೆ ನೀಡುವಂತಹದ್ದು, ಅಭಿಞ್ಞಕಾರಕ, ಸಂಬೋಧಿದಾಯಕ ಹಾಗೂ ನಿಬ್ಬಾಣದೆಡೆಗೆ ಒಯ್ಯುವಂತಹುದು..
 ಅದೇ ಆರ್ಯ ಆಷ್ಟಾಂಗಿಕ ಮಾರ್ಗ ಅಂದರೆ
ಸಮ್ಮಾದೃಷ್ಟಿಕೋನ,
ಸಮ್ಮಾಸಂಕಲ್ಪ,
ಸಮ್ಮಾ ವಾಚ,
ಸಮ್ಮಾ ಕಮ್ಮ,
 ಸಮ್ಮಾ ಜೀವನೋಪಾಯ,
ಸಮ್ಮಾ ಸ್ಮೃತಿ ಮತ್ತು
ಸಮ್ಮಾ ಸಮಾಧಿ.

ಇದು ಚಕ್ಷುಕಾರಕವು, ಜ್ಞಾನಕಾರಕ, ಉಪಶಾಂತತೆ ನೀಡುವಂತಹದ್ದು, ಅಭಿಞ್ಞಕಾರಕ, ಸಂಬೋಧಿದಾಯಕ ಹಾಗೂ ನಿಬ್ಬಾಣದೆಡೆಗೆ ಒಯ್ಯುವಂತಹುದು.
 ಇದೇ ಭಿಕ್ಖುಗಳೇ ದುಃಖ ಆರ್ಯಸತ್ಯ, ಹೇಗೆಂದರೆ ಜನ್ಮವು ದುಃಖಕರ, ಜರಾ(ಮುಪ್ಪು) ದುಃಖಕರ, ವ್ಯಾದಿ ದುಃಖಕರ, ಮರಣ ದುಃಖಕರ, ಅಪ್ರೀಯವಾದುದರ ಸಮಾಗಮ ದುಃಖ, ಪ್ರಿಯವಾದುದರ ವಿಯೋಗ ದುಃಖಕರ, ಇಚ್ಚಿಸುವಂತಹುದು ಅಲಭ್ಯವಾದರೆ ದುಃಖ, ಸಂಕ್ಷೀಪ್ತವಾಗಿ ಹೇಳುವುದಾದರೆ ಐದು ಖಂದಗಳಲ್ಲಿ(ದೇಹ ಮತ್ತು ಮನಸ್ಸುಗೆ) ಅಂಟಿರುವಿಕೆಯೇ ದುಃಖಕರ.

  ಈಗ ಓ ಭಿಕ್ಖುಗಳೇ ಇದೇ ದುಃಖ ಸಮುದಯ(ಉದಯ ಯಾವುದರಿಂದಾಗಿ ಆಗುವುದು ಎಂಬುದರ) ಆರ್ಯ ಸತ್ಯವಾಗಿದೆ. ಇಲ್ಲಿ ತಣ್ಹಾದಿಂದಲೇ ಪುನರ್ಭವಿಸುತ್ತಾನೆ ತಣ್ಹಾವು 3 ವಿಧದ್ದಾಗಿದೆ ಕಾಮತಣ್ಹಾ(ಇಂದ್ರೀಯ ಬೋಗ), ಭವತಣ್ಹಾ(ಶಾಶ್ವತವಾಗಿ ಅಥವಾ ಇರಬೇಕೆಂಬ ತೀವ್ರಬಯಕೆ) ಮತ್ತು ವಿಭವ ತಣ್ಹಾ(ಇರಬಾರದು ಎಂಬ ತೀವ್ರಬಯಕೆ).

ಈಗ ಓ ಭಿಕ್ಖುಗಳೇ ಇದೇ ದುಃಖನಿರೋಧ ಆರ್ಯಸತ್ಯವಾಗಿದೆ. ಅಂದರೆ ಈ ತಣ್ಹಾದಿಂದ ನಿಶ್ಶ್ಯೇಷವಾಗಿ ರಹಿತನಾಗುವಿಕೆ, ವಿರಾಗಹೊಂದುವಿಕೆ, ನಿರೋಧಹೊಂದುವಿಕೆ, ತ್ಯಾಗಮಾಡಿವಿಕೆ, ಬಿಟ್ಟುಬಿಡುವಿಕೆ, ಮುಕ್ತಿ ಹೊಂದುವಿಕೆ ಮತ್ತು ಪೂರ್ಣವಾಗಿ ಅಂಟದೆ ಹೋಗುವಿಕೆ.

          ಈಗ ಓ ಭಿಕ್ಖುಗಳೇ ಇದೇ ದುಃಖನಿರೋಧಕ್ಕೇ ಕೊಂಡುಯ್ಯುವಂತಹ ಮಾರ್ಗದ ಆರ್ಯಸತ್ಯವಾಗಿದೆ. ಅದೇ ಅದೇ ಆರ್ಯ ಆಷ್ಟಾಂಗಿಕ ಮಾರ್ಗ ಅಂದರೆ ಸಮ್ಮಾದೃಷ್ಟಿಕೋನ, ಸಮ್ಮಾಸಂಕಲ್ಪ, ಸಮ್ಮಾ ವಾಚ, ಸಮ್ಮಾ ಕಮ್ಮ, ಸಮ್ಮಾ ಜೀವನೋಪಾಯ, ಸಮ್ಮಾ ಸ್ಮೃತಿ ಮತ್ತು ಸಮ್ಮಾ ಸಮಾಧಿ.

ಇದೇ ದುಃಖದ ಆರಿಯ ಸತ್ಯವಾಗಿದೆ. ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.

 ಈ ದುಃಖ ಆರಿಯ ಸತ್ಯವನ್ನು ಪೂರ್ಣವಾಗಿ ಅರಿಯಲೇಬೇಕು(ಪರಿನೆಯ್ಯ) ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.

 ಈ ದುಃಖ ಆರಿಯ ಸತ್ಯವನ್ನು ಅರಿಯಲಾಗಿದೆ ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.

  ಇದು ದುಃಖಸಮುದಯದ ((ಉದಯ ಯಾವುದರಿಂದಾಗಿ ಆಗುವುದು ಎಂಬುದರ) ಆರಿಯ ಸತ್ಯವಾಗಿದೆ. ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.


 ಈ ದುಃಖದ ಕಾರಣಗಳ(ಉದಯಗಳ) ಸಮೂಹವನ್ನು ನಿಮರ್ೂಲನೆ(ಪಹತಬ್ಬ) ಮಾಡಲೇಬೇಕು. ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.


ಈ ದುಃಖದ ಕಾರಣಗಳ(ಉದಯಗಳ) ಸಮೂಹವನ್ನು ನಿಮರ್ೂಲನೆ(ಪಹತಬ್ಬ) ಮಾಡಿಯಾಗಿದೆ. ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.

 ಇದೇ ದುಃಖನಿರೋಧ ಆರಿಯ ಸತ್ಯ ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.

ಈ ದುಃಖನಿರೋಧ ಆರಿಯ ಸತ್ಯವನ್ನು ಸಾಕ್ಷಾತ್ಕಾರಿಸಲೇಬೇಕು ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.

ಈ ದುಃಖನಿರೋಧ ಆರಿಯ ಸತ್ಯವನ್ನು ಸಾಕ್ಷಾತ್ಕಾರಿಸಲಾಗಿದೆ  ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.


 ಇದೇ ದುಃಖನಿರೋಧದೆಡೆಗೆ ಕೊಂಡುಯ್ಯುವ ಮಾರ್ಗದ ಆರಿಯ ಸತ್ಯವಾಗಿದೆ. ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.

 ಈ ದುಃಖನಿರೋಧದೆಡೆಗೆ ಕೊಂಡುಯ್ಯುವ ಮಾರ್ಗವನ್ನು ಅಭಿವೃದ್ಧಿಗೊಳಿಸಲೇಬೇಕು. . ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.

 ಈ ದುಃಖನಿರೋಧದೆಡೆಗೆ ಕೊಂಡುಯ್ಯುವ ಮಾರ್ಗವನ್ನು ಅಭಿವೃದ್ಧಿಗೊಳಿಸಲಾಗಿದೆ  . ಹೀಗೆ ಓ ಭಿಕ್ಖುಗಳೇ ಈ ವಿಷಯಗಳಿಗೆ ಅನುಗುಣವಾಗಿ ಈ ಹಿಂದೆ ಕೇಳಿರದಂತಹ ಧಮ್ಮಚಕ್ಷುವು ಉದಯಿಸಿತು, ಜ್ಞಾನವು ಉದಯಿಸಿತು, ಪ್ರಜ್ಞಾವು ಉದಯಿಸಿತು, ವಿಧ್ಯೆಯು ಉದಯಿಸಿತು, ಮಹಾಬೆಳಕು(ಅಲೋಕೋ) ಉದಯಿಸಿತು.

 ಭಿಕ್ಖುಗಳೇ ಎಲ್ಲಿಯವರೆಗೆ ಈ ಆರಿಯಸತ್ಯಗಳ ಪರಿಪೂರ್ಣವಾದ ಸಮಗ್ರವಾದ ಜ್ಞಾನವು ಈ ಬಗೆಯ 3 ಅಂಶಗಳಲ್ಲಿ, ಮತ್ತು 12 ವಿಧಾನಗಳಲ್ಲಿ ನನಗೆ ಪರಿಪೂರ್ಣವಾಗಿ ಸ್ಪಷ್ಟವಾಗಲಿಲ್ಲವೋ, ಅಲ್ಲಿಯವರೆಗೆ ನಾನು ದೇವತೆಗಳ ಸಹಿತವಾದ, ಮಾರರ, ಬ್ರಹ್ಮರ, ಸಮಣರ, ಬ್ರ್ರಾಹ್ಮಣರ, ದೇವತೆಗಳ, ಮತ್ತು ಮಾನವರಸಹಿತ ಈ ಲೋಕಗಳಲ್ಲಿ ಅನುತ್ತರವಾದ ಸಂಯಕ್ ಸಂಬೋದಿಯನ್ನು ಪಡೆದಿದ್ದೇನೆ ಎಂದು ಒಪ್ಪಿಕೊಳ್ಳಲ್ಲಿಲ್ಲ.

 ಅದರೆ ಭಿಕ್ಖುಗಳೇ ಯಾವಾಗ ಈ ಆರಿಯಸತ್ಯಗಳ ಪರಿಪೂರ್ಣವಾದ ಸಮಗ್ರವಾದ ಜ್ಞಾನವು ಈ ಬಗೆಯ 3 ಅಂಶಗಳಲ್ಲಿ, ಮತ್ತು 12 ವಿಧಾನಗಳಲ್ಲಿ ನನಗೆ ಪರಿಪೂರ್ಣವಾಗಿ ಸ್ಪಷ್ಟವಾಗಿಹೋಯಿತೋ, ಆಗ ನಾನು ದೇವತೆಗಳ ಸಹಿತವಾದ, ಮಾರರ, ಬ್ರಹ್ಮರ, ಸಮಣರ, ಬ್ರ್ರಾಹ್ಮಣರ, ದೇವತೆಗಳ, ಮತ್ತು ಮಾನವರಸಹಿತ ಈ ಲೋಕಗಳಲ್ಲಿ ಅನುತ್ತರವಾದ ಸಂಯಕ್ ಸಂಬೋದಿಯನ್ನು ಪಡೆದಿದ್ದೇನೆ ಎಂದು ಒಪ್ಪಿಕೊಂಡೆನು.

ಮತ್ತು ಆಗ ನನ್ನಲ್ಲಿ ಈ ಬಗೆಯ ಜ್ಞಾನವೂ ಹಾಗೂ ದರ್ಶನವೂ ಉದಯಿಸಿತು ಅದೇನೆಂದರೆ ; (ನನ್ನ) ಚೇತೋವಿಮುಕ್ತಿಯು ಅಚಲವಾದುದು, ಇದೇ (ನನ್ನ) ಕಟ್ಟಕಡೆಯ ಜನ್ಮ, ಮತ್ತೆ ಪುನರ್ಭವವಿಲ್ಲ.(ಅಸ್ತಿತ್ವವಿಲ್ಲ).


ಹೀಗೆ ಭಗವಾನರು ಸುತ್ತವನ್ನು ಪ್ರವಚಿಸಿದಾಗ ಭಿಕ್ಖುಗಳು ಆನಂದಿತರಾದರು ಹಾಗು ಅಭಿನಂದನೆ ಮಾಡಿದರು. ಯಾವಾಗ ಹೀಗೆ ಸುತ್ತವನ್ನು ಪ್ರವಚಿಸುವಾಗ ಪೂಜ್ಯ ಕೊಂಡನ್ಯರವರಿಗೆ ಹೀಗೆ ವಿರಜವಾದ, ವಿಮಲವಾದ ಧಮ್ಮಚಕ್ಷುವು ಉದಯವಾಯಿತು.: ಯಾವುದೆಲ್ಲಾ ಉದಯ ಧಮ್ಮವನ್ನು ಹೊಂದಿವೆಯೋ ಅವೆಲ್ಲವೂ ನಿರೋಧಧಮ್ಮವನ್ನು ಹೊಂದುತ್ತವೆ.

ಯಾವಾಗ ಬುದ್ಧಭಗವಾನರು ಈ ಧಮ್ಮಚಕ್ಕ ಸುತ್ತವನ್ನು ಪ್ರವಚಿಸಿದರೋ ಆಗ ಭೂಮಿಯಲ್ಲಿನ ದೇವದೇವತೆಗಳೂ ಹೀಗೇ ಹಷರ್ೋಧ್ಗಾರಗಳನ್ನು ಮಾಡಿದವು : ಭಗವಾನರು ವಾರಾಣಸಿಯ ಋಷಿಪಟ್ಟಣದಲ್ಲಿ ಮೃಗದಾಯದ ಬಳಿ ಅನುತ್ತರವಾದ ಧಮ್ಮಚಕ್ರವನ್ನು ಪ್ರವತರ್ಿಸಿದ್ದಾರೆ. ಈ ಬಗೆಯ ಧಮ್ಮಚಕ್ರದ ಚಾಲನೆಯನ್ನು ಈವರೆವಿಗೆ ಈ ಲೋಕಗಳ ಯಾವುದೇ ಸಮಣ ಬ್ರಾಹ್ಮಣರಾಗಲಿ, ದೇವಗಳಾಗಲಿ, ಮಾರರಾಗಲಿ, ಬ್ರಹ್ಮರಾಗಲಿ ಪ್ರವರ್ತನೆ ಮಾಡಿಲ್ಲ  ಈ ದಮ್ಮಚಕ್ಕಪವತ್ತನವನ್ನು ಯಾರು ನಿಲ್ಲಿಸಲು ಸಾಧ್ಯವಿಲ್ಲ ಹಾಗೂ ಯಾರಿಂದಲೂ ಹಿಂದಕ್ಕೆ ತಿರುಗಿಸಲು ಸಾಧ್ಯವಿಲ್ಲ .. ಈ ಬಗೆಯ ಭೂಮಿಯ ದೇವದೇವತೆಗಳ ಶಬ್ದಗಳನ್ನು ಆಲಿಸಿದಂತಹ ಚಾತುಮಹಾರಾಜಿಕಾ ದೇವತೆಗಳುಹೀಗೆಯೇ ಪುನರುಚ್ಚಿಸಿದವು. . . .  . . . . . .ಅವನ್ನು ಕಂಡು . . . .ತಾವತಿಂಸ . .. . . . . .ಯಾಮ. . . . . . ತುಸಿತಾ. . .. . . .ನಿಮ್ಮಾನರತಿ. . .. . . . . .ಪರನಿಮ್ಮಾನರತಿ ದೇವಗಳು ಪುನರುಚ್ಚಿಸಿದವು.. ..  . . .. .. .ಅವರ ಧ್ವನಿ ಆಲಿಸಿದಂತಹ ಬ್ರಹ್ಮಕಾಯಿಕ ದೇವತೆಗಳಾದ ಬ್ರಹ್ಮ ಪರಿಸಜ್ಜ,  . . . ಬ್ರಹ್ಮ ಪುರೋಹಿತ .. . .ಮಹಾಬ್ರಹ್ಮ . . . .ಪರಿತ್ತಭ. .. . . .ಅಪ್ಪಮಾನಾಭ. .. . .ಸುಭಕಿನ್ನ,, . . ..ವೆಹಪ್ಫಲ. . .ಅವಿಹ. . .. ಅತಪ್ಪ. . . ಸುದಸ್ಸ . . . .ಮತ್ತು ಅಕನಿತ್ಥ ಅವರೂ ಸಹಾ ಹೀಗೆಯೇ ಹಷರ್ೋಧ್ಗಾರಗಳನ್ನು ಮಾಡಿದವು
ಹೀಗೇ ಆ ಕ್ಷಣದಲ್ಲಿ ಆ ಸಮಯದಲ್ಲಿ ಈ ಬಗೆಯ ಹಷರ್ೋಧ್ಗಾರಗಳೂ ಬ್ರಹ್ಮಲೋಕಗಳವರೆವಿಗೂ ಹಬ್ಬಿತು. ಆಗ ಹತ್ತುಸಹಸ್ರ ಲೋಕಧಾತುಗಳು ಕಂಪಿಸಿದವು,  ನಡುಗಿದವು, ಭೀಕರವಾಗಿ ಅಲುಗಾಡಿದವು.
ಆಗ ದೇವದೇವತೆಗಳ ಮೀರಿಸಿದ ತೇಜಸ್ಸುಗಳ ಮಹಾ ಬೆಳಗಿನಿಂದಾಗಿ ಲೋಕವೆಲ್ಲಾ ಪ್ರಕಾಶಮಾನವಾಯಿತು. ಆಗ ಭಗವಾನರು ಹೀಗೆ ನುಡಿದರು. :  ಅರಿತಿದ್ದಾನೆ ಕೋಂಡನ್ಯ, ನಿಜವಾಗಿಯು ಆಯುಷ್ಮಂತ ಕೋಂಡನ್ಯ ಜ್ಞಾನವನ್ನು ಪಡೆದಿದ್ದಾನೆ .ಅಥರ್ೈಸಿಕೊಂಡಿದ್ದಾನೆ.

ಅಂದಿನಿಂದ ಪೂಜ್ಯಕೊಂಡನ್ಯನವರಿಗೆ ಅಞ್ಞಸಿ(ಅರಿತಿರುವ) ಕೊಂಡನ್ಯ ಎಂದು ಕರೆಯಲಾರಂಬಿಸಿದರು.

  _____________________________ಸಮಾಪ್ತಿ_______________________________________

Saturday, 14 July 2018

ಅಹುನೇಯ್ಯ ಸುತ್ತ ahuneyya sutta

ಅಹುನೇಯ್ಯ ಸುತ್ತ 



ಭಿಕ್ಖುಗಳೇ,
ಈ 10 ಬಗೆಯ ವ್ಯಕ್ತಿಗಳು ದಾನಗಳಿಗೆ, ಆತಿಥ್ಯಗಳಿಗೆ, ಅರ್ಪಣೆಗಳಿಗೆ,  ಗೌರವಾರ್ಹ ವಂದನೆಗಳಿಗೆ, ಲೋಕದಲ್ಲಿ ಪುಣ್ಯಗಳಿಗೆ ಮಿರಿಸಲಾಗದ ಕ್ಷೇತ್ರವಾಗಿದ್ದಾರೆ.

ಯಾರವರು 10 ಜನರು ?
ಅವರೆಂದರೇ

1.ತಥಾಗತರು ಅರಹಂತರು ಆಗಿರುವಂತಹ  ಸಮ್ಮಸಂಬುಧ್ಧರು
2.ಪಚ್ಚೇಕ ಬುಧ್ಧರು.
3.ಸಮಥ ಹಾಗೂ ವಿಪಸ್ಸನ ಎರಡರಿಂದಲೂ ವಿಮುಕ್ತರಾಗಿರುವವರು.
4.ಪ್ರಜ್ಞೆಯಿಂದ(ವಿಪಸ್ಸನ) ವಿಮುಕ್ತರಾಗಿರುವವರು
5.ಕಾಯವನ್ನು ಸಾಕ್ಷಿಯಾಗಿ ಗಮನಿಸುತ್ತ ಕಾಯಾಗತಾನುಸತಿಯಿಂದ ವಿಮುಕ್ತರಾಗಿರುವವರು.
6.ದರ್ಶನದಿಂದ(ದೃಷ್ಟಿಗಳಿಂದ) ವಿಮುಕ್ತರಾಗಿರುವವರು
7.ಶ್ರಧ್ಧೆಯಿಂದ ವಿಮುಕ್ತರಾಗಿರುವವರು(ಸೋತಪನ್ನ)
8.ಧಮ್ಮಾನುಯಾಯಿ(ಸುಶೀಲರು/ಧರ್ಮದ ಆಚರಣೆಯ ಲ್ಲಿರುವವನು)
9.ತಿರತನದಲ್ಲಿ ಆಪಾರ ಅಚಲ ನಂಬಿಕೆ ಇರುವವವನು(.ಶ್ರಧ್ಹಾನುಸಾರಿ )
10.ಭಿಕ್ಖು (ಗೋತ್ರ್ರಭೂ ಆಗೀರುವವರು ಅಂದ್ರೆ ಇಂದ್ರಿಯ ಲೋಕದಿಂದ ಸಮಾದಿ ಸ್ಥಿತಿ ಅಥವಾ ಅರಿಯ ಸ್ಥಿತಿ  ಹೊಂದಿದವರು ) 

ಈ 10 ಜನರು ದಾನಗಳಿಗೆ, ಆತಿಥ್ಯಗಳಿಗೆ, ಅರ್ಪಣೆಗಳಿಗೆ,  ಗೌರವಾರ್ಹ ವಂದನೆಗಳಿಗೆ, ಲೋಕದಲ್ಲಿ ಪುಣ್ಯಗಳಿಗೆ ಮಿರಿಸಲಾಗದ ಕ್ಷೇತ್ರವಾಗಿದ್ದಾರೆ

Thursday, 14 June 2018

Eight-fold path of Lord Buddha ಬುದ್ಧಭಗವಾನರ ಆರ್ಯ ಆಷ್ಟಾಂಗ ಮಾರ್ಗ (ಮಗ್ಗ ವಿಭಂಗ ಸುತ್ತ)

       ಬುದ್ಧಭಗವಾನರ ಆರ್ಯ ಆಷ್ಟಾಂಗ ಮಾರ್ಗ   

                (ಮಗ್ಗ ವಿಭಂಗ ಸುತ್ತ)


ಒಮ್ಮೆ ಭಗವಾನರು ಶ್ರಾವಸ್ತಿಯ ಜೇತವನದ ಅನಾಥಪಿಂಡಿಕನ ಆರಾಮದಲ್ಲಿ ನೆಲಸಿದ್ದರು. ಆಗ ಅವರು ಭಿಕ್ಷುಗಳೊಂದಿಗೆ ಹೀಗೆ ಸಂಬೋಧಿಸಿದರು, ಭಿಕ್ಷುಗಳೇ
 ಭಗವಾನ್ ಎಂದು ಪ್ರತಿ ಉತ್ತರಿಸಿದರು.
ಆಗ ಭಗವಾನರು ಹೀಗೆ ನುಡಿದರು, ನಾನು ನಿಮಗಾಗಿ ಆರ್ಯಆಷ್ಟಾಂಗ ಮಾರ್ಗವನ್ನು ಬೋದಿಸುತ್ತಿದ್ದೇನೆ ಹಾಗೂ ವಿಶ್ಲೇಷಿಸುತ್ತಿದ್ದೇನೆ, ಗಮನವಿಟ್ಟು ಆಲಿಸಿರಿ.
 ಹಾಗೆ ಆಗಲಿ ಭಂತೆ.
ಆಗ ಭಗವಾನರು ಹೀಗೆ ಮುಂದುವರೆಸಿದರು, ಈಗ ಭಿಕ್ಖಗಳೇ ಯಾವುದು ಆರ್ಯಆಷ್ಟಾಂಗ ಮಾರ್ಗ ?
ಅದೇಂದರೆ
1 ಸಮ್ಮ ದೃಷ್ಟಿಕೋನ,
2 ಸಮ್ಮಸಂಕಲ್ಪ,
3 ಸಮ್ಮ ವಾಚ,
4 ಸಮ್ಮ ಕಮ್ಮ,
5 ಸಮ್ಮ ಜೀವನೋಪಾಯ,
6 ಸಮ್ಮವ್ಯಾಯಮ,
7 ಸಮ್ಮಸ್ಮೃತಿ, ಮತ್ತು
8 ಸಮ್ಮಸಮಾಧಿ.

                      ಸಮ್ಮ ದೃಷ್ಟಿಕೋನ

    ಮತ್ತೆ ಭಿಕ್ಖುಗಳೇ ಯಾವುದು ಸಮ್ಮದೃಷ್ಟಿಕೋನ ?
 ಭಿಕ್ಖುಗಳೇ ದುಃಖಗಳ ಜ್ಞಾನ, ದುಃಖಗಳ ಉದಯದ ಬಗೆಗಿನ ಜ್ಞಾನ, ದುಃಖಗಳ ನಿರೋಧ ಜ್ಞಾನ, ಮತ್ತು ದುಃಖಗಳ ನಿರೋಧಕ್ಕೆ ತಲುಪಿಸುವ ಮಾರ್ಗದ ಜ್ಞಾನ. ಇವನ್ನೇ ಸಮ್ಮ ದೃಷ್ಟಿಕೋನ ಎನ್ನುತ್ತೇವೆ. .

                        ಸಮ್ಮಸಂಕಲ್ಪ

   ಮತ್ತೇ ಯಾವುದು ಭಿಕ್ಖುಗಳೇ ಸಮ್ಮ ಸಂಕಲ್ಪ ?
 ಭಿಕ್ಖುಗಳೇ ತ್ಯಾಗಗಳ ಸಂಕಲ್ಪ,  ದ್ವೇಷರಹಿತತೆಯ ಸಂಕಲ್ಪ, ಮತ್ತು ಹಿಂಸೆರಹಿತತೆಯ ಸಂಕಲ್ಪ. ಇವನ್ನೇ ಸಮ್ಮ ಸಂಕಲ್ಪ ಎನ್ನುತ್ತೇವೆ.
                           

                        ಸಮ್ಮ ವಾಚ


   ಮತ್ತೇ ಯಾವುದು ಭಿಕ್ಖುಗಳೇ ಸಮ್ಮ ವಾಚ ?
 ಭಿಕ್ಖುಗಳೇ ಸುಳ್ಳಿನಿಂದ ವಿರತನಾಗುವಿಕೆ, ಚಾಡಿಯಿಂದ ವಿರತನಾಗುವಿಕೆ, ಕಠೋರ ನಿಂದಾಮಯ ವಾಚಗಳಿಂದ ವಿರತನಾಗುವಿಕೆ ಮತ್ತು ವ್ಯರ್ಥಹರಟೆಗಳಿಂದ ವಿರತನಾಗುವಿಕೆ. ಇವನ್ನೇ ಸಮ್ಮವಾಚ ಎನ್ನುತ್ತೇವೆ.

                          ಸಮ್ಮ ಕಮ್ಮ 

    ಮತ್ತೇ ಯಾವುದು ಭಿಕ್ಖುಗಳೇ ಸಮ್ಮ ಕಮ್ಮ ?
 ಭಿಕ್ಖುಗಳೇ ಪ್ರಾಣಹತ್ಯೆಗಳಿಂದ ವಿರತನಾಗುವಿಕೆ, ಕೊಡದೆ ಇರುವುದನ್ನು ತಗೆದುಕೊಳ್ಳದಿರುವಿಕೆ, ಅಬ್ರಹ್ಮಚಾರ್ಯದಿಂದ (ಗೃಹಸ್ಥರಾಗಿದ್ದರೆ ಅನೈತಿಕ ಕಾಮುಕತೆಯಿಂದ) ವಿರತನಾಗುವಿಕೆ. ಇವನ್ನೇ ಸಮ್ಮಕಮ್ಮ ಎನ್ನುತ್ತೇವೆ.   
               

                  ಸಮ್ಮ ಜೀವನೋಪಾಯ



        ಮತ್ತೆ ಭಿಕ್ಖುಗಳೇ ಯಾವುದು ಸಮ್ಮ ಜೀವನೋಪಾಯ ?
           ಇಲ್ಲಿ ಭಿಕ್ಖುಗಳೇ ಆರ್ಯಶ್ರಾವಕನು ಅಪ್ರಮಾಣಿಕವಾದಂತಹ ಮಿಥ್ಯಜೀವನೋಪಾಯಗಳನ್ನು ತೋರೆಯಬೇಕು, ಸಮ್ಮ ಮಾರ್ಗಗಳಿಂದಲೇ ಜೀವನೋಪಾಯ ಮಾಡಿಕೋಳ್ಳಬೇಕು. ಇದನ್ನೇ ಭಿಕ್ಖುಗಳೇ ಸಮ್ಮಜೀವನೋಪಾಯ ಎನ್ನುವರು.
     ( ಭಿಕ್ಖುಗಳೇ ಉಪಾಸಕನು 5 ವಿಧವಾದ ವೃತ್ತಿಗಳಲ್ಲಿ ತೋಡಗಬಾರದು, ಯಾವುದದು 5 ?
ಅವೇಂದರೇ ಶಸ್ತ್ರಗಳ ವಾಣಿಜ್ಯ, ಜೀವಿಗಳ ವಾಣಿಜ್ಯ, ಮಾಂಸದ ವಾಣಿಜ್ಯ, ಮಧ್ಯಪಾನದ ವಾಣಿಜ್ಯ ಮತ್ತು ವಿಷಗಳ ವಾಣಿಜ್ಯ/ವ್ಯಾಪಾರ )

                       ಸಮ್ಮವ್ಯಾಯಮ


             ಮತ್ತೇ ಭಿಕ್ಖುಗಳೇ ಯಾವುದು ಸಮ್ಮ ವ್ಯಾಯಾಮ ?
1. ಇಲ್ಲಿ ಭಿಕ್ಖುಗಳೇ, ಭಿಕ್ಖುವು ಅನುತ್ಪನ್ನವಾದ ಪಾಪಯುತವಾದ, ಅಕುಶಲವಾದ ಯೋಚನೆಗಳನ್ನು(ಮಾನಸಿಕ ವಿಷಯ/ಧಮ್ಮ) ಉದಯಿಸದಂತೆ ಆತನು ಇಚ್ಚಶಕ್ತಿಯನ್ನು, ಪ್ರಯತ್ನವನ್ನು ಪಡುತ್ತಾನೆ,
2. ಮತ್ತೇ ಇಲ್ಲಿ ಭಿಕ್ಖುವು ಉತ್ಪನ್ನವಾದ ಪಾಪಯುತವಾದ ಹಾಗೂ ಅಕುಶಲಯುತ ಯೋಚನೆಗಳನ್ನು ತೋರೆಯಲು ಇಚ್ಚಿಸುತ್ತಾನೆ ಹಾಗೂ ಅವನ್ನು ತೋರೆಯಲು ಪ್ರಯತ್ನವನ್ನು ಪಡುತ್ತಾನೆ.
3. ಮತ್ತೇ ಇಲ್ಲಿ ಭಿಕ್ಖುವು ಅನುತ್ಪನ್ನವಾದ ಪುಣ್ಯಕಾರಿಯಾದ, ಕುಶಲವಾದ ಯೋಚನೆಗಳನ್ನು ಉದಯಿಸುವಂತೆ ಆತನು ಇಚ್ಚಶಕ್ತಿಯನ್ನು ಹಾಗೂ ಧೃಡವಾದ ಪ್ರಯತ್ನವನ್ನು ಪಡುತ್ತಾನೆ,
4.   ಮತ್ತೇ ಇಲ್ಲಿ ಭಿಕ್ಖುವು ಉತ್ಪನ್ನವಾದ ಪುಣ್ಯಕಾರಿಯಾದ, ಕುಶಲವಾದ ಯೋಚನೆಗಳನ್ನು ಉಳಿಯುವಂತೆ, ವಿಕಾಸವಾಗುವಂತೆ,  ವ್ಯವಸ್ಥಿತವಾಗಿರುವಂತೆ, ಆತನು ಇಚ್ಚಶಕ್ತಿಯನ್ನು ಹಾಗೂ ಧೃಡವಾದ ಪ್ರಯತ್ನವನ್ನು ಪಡುತ್ತಾನೆ,
               ಇದನ್ನೇ ಭಿಕ್ಖುಗಳೇ ಸಮ್ಮವ್ಯಾಯಾಮ ಎನ್ನುವರು.


                         ಸಮ್ಮಸ್ಮೃತಿ

 ಮತ್ತೇ ಯಾವುದು ಭಿಕ್ಖುಗಳೇ ಸಮ್ಮ ಸ್ಮೃತಿಯು ?
  ಇಲ್ಲಿ ಭಿಕ್ಖುಗಳೇ, ಭಿಕ್ಖುವು ಕಾಯದಲ್ಲಿ ಕಾಯಾನುಪಸ್ಸಿಯಾಗಿ ವಿಹರಿಸುತ್ತಾನೆ ಹೇಗೆಂದರೆ, ಎಚ್ಚರಿಕೆಯಿಂದ, ಉತ್ಸಾಹದಿಂದ, ಜಾಗ್ರತಯಿಂದ, ಅರಿವಿನಿಂದ ಕೂಡಿದ್ದು ಲೋಕದ ಬಗೆಗಿನ ಲೋಭ ಹಾಗು ದೋಮನಸ್ಸುನ್ನು ದೂರಿಕರಿಸುತ್ತಾನೆ.

ಇಲ್ಲಿ ಭಿಕ್ಖುಗಳೇ, ಭಿಕ್ಖುವು ಚಿತ್ತಗಳಲ್ಲಿ ಚಿತ್ತಾನುಪಸ್ಸಿಯಾಗಿ ಸಮಚಿತ್ತತೆಯಿಂದ ವಿಹರಿಸುತ್ತಾನೆ ಹೇಗೆಂದರೆ, ಎಚ್ಚರಿಕೆಯಿಂದ, ಉತ್ಸಾಹದಿಂದ, ಜಾಗ್ರತಯಿಂದ, ಅರಿವಿನಿಂದ ಕೂಡಿದ್ದು ಲೋಕದ ಬಗೆಗಿನ ಲೋಭ ಹಾಗು ದೋಮನಸ್ಸುನ್ನು ದೂರಿಕರಿಸುತ್ತಾನೆ.
ಇಲ್ಲಿ ಭಿಕ್ಖುಗಳೇ, ಭಿಕ್ಖುವು ವೇದನೆಗಳಲ್ಲಿ ವೇದಾನುನುಪಸ್ಸಿಯಾಗಿ ಸಮಚಿತ್ತತೆಯಿಂದ ವಿಹರಿಸುತ್ತಾನೆ ಹೇಗೆಂದರೆ, ಎಚ್ಚರಿಕೆಯಿಂದ, ಉತ್ಸಾಹದಿಂದ, ಜಾಗ್ರತಯಿಂದ, ಅರಿವಿನಿಂದ ಕೂಡಿದ್ದು ಲೋಕದ ಬಗೆಗಿನ ಲೋಭ ಹಾಗು ದೋಮನಸ್ಸುನ್ನು ದೂರಿಕರಿಸುತ್ತಾನೆ.
ಇಲ್ಲಿ ಭಿಕ್ಖುಗಳೇ, ಭಿಕ್ಖುವು ಧಮ್ಮಗಳಲ್ಲಿ(ಮಾನಸಿಕ ವಿಷಯಗಳಲ್ಲಿ) ಧಮ್ಮಾನುಪಸ್ಸಿಯಾಗಿ ಸಮಚಿತ್ತತೆಯಿಂದವಿಹರಿಸುತ್ತಾನೆ ಹೇಗೆಂದರೆ, ಎಚ್ಚರಿಕೆಯಿಂದ, ಉತ್ಸಾಹದಿಂದ, ಜಾಗ್ರತಯಿಂದ, ಅರಿವಿನಿಂದ ಕೂಡಿದ್ದು ಲೋಕದ ಬಗೆಗಿನ ಲೋಭ ಹಾಗು 
ದೋಮನಸ್ಸುನ್ನು ದೂರಿಕರಿಸುತ್ತಾನೆ.   
ಇದನ್ನೇ ಭಿಕ್ಖುಗಳೇ ಸಮ್ಮಸತಿ ಎನ್ನುವರು.
             

                      ಸಮ್ಮಸಮಾದಿ

       ಮತ್ತೇ ಯಾವುದು ಭಿಕ್ಖುಗಳೇ ಸಮ್ಮ ಸಮಾಧಿಯು?
                              ಪ್ರಥಮ ಸಮಾಧಿ
ಇಲ್ಲಿ ಭಿಕ್ಖುಗಳೇ ಭಿಕ್ಖುವು ಎಲ್ಲಾ ಬಗೆಯ ಕಾಮಗಳಿಂದ(ಆಸೆ) ಹಾಗೂ ಅಕುಶಲ ಮಾನಸಿಕ ವಿಷಯಗಳಿಂದ ದೂರವಾಗಿ ಸುವಿತರ್ಕ ಹಾಗೂ ಸುವಿಚಾರಗಳನ್ನು ಹೊಂದಿರುವ ಮತ್ತು  ಆದರಿಂದ ಉದಯಿಸುವ ಆನಂದ ಹಾಗೂ ಸುಖಯುತದ ಪ್ರಥಮ ಸಮಾಧಿ ಪ್ರವೇಶಿಸಿ ಅದರಲ್ಲಿ ನೆಲೆಸುತ್ತಾನೆ.
                   
                        ದ್ವಿತೀಯ ಸಮಾಧಿ
   ನಂತರ ಇಲ್ಲಿ ಭಿಕ್ಖುಗಳೇ ಭಿಕ್ಖುವು  ಸುವಿತರ್ಕ ಹಾಗೂ ಸುವಿಚಾರಗಳನ್ನು ದೂರಿಕರಿಸಿ ಆದರಿಂದ ಉದಯಿಸುವ ಆನಂದ ಹಾಗೂ ಸುಖಯುತದ ಅಂತರಿಕದ ಶ್ರದ್ಧಾಯುತ ಏಕೋಭಾವದ ದ್ವಿತೀಯ ಸಮಾಧಿ ಪ್ರವೇಶಿಸಿ ಅದರಲ್ಲಿ ನೆಲೆಸುತ್ತಾನೆ.
                           
                               ತ್ರಿತೀಯ ಸಮಾಧಿ
ನಂತರ ಇಲ್ಲಿ ಭಿಕ್ಖುಗಳೇ ಭಿಕ್ಖುವು ಆನಂದದಲ್ಲಿ ವಿರಾಗವನ್ನು ಹೊಂದಿ, ಆನಂದವನ್ನು ಮೀರಿಹೋಗಿ ದಾಟಿ, ಸದಾ ಉಪೇಕ್ಖಯುತ(ಸಮಚಿತ್ತತೆಯುತ), ಎಚ್ಚರಿಕೆಯಿಂದ, ಅರಿವಿನಿಂದ ಕೂಡಿದ ಆ ಸುಖಯುತದ ತ್ರಿತೀಯ ಸಮಾಧಿ ಪ್ರವೇಶೀಸಿ ಅದರಲ್ಲಿ ನೆಲೆಸುತ್ತಾನೆ. ಸುಖದಿಂದ ಇಡಿ ಕಾಯವು ದಿವ್ಯಾನುಭವವನ್ನು ಹೊಂದಿ ಅಂತಹ ವಿಶೇಷ ಧ್ಯಾನವನ್ನು ಆರ್ಯರು ಜಾಗರೂಕತೆ ಹಾಗೂ ಸಮಚಿತ್ತತೆಯುತ ಸುಖದ ಸ್ಥಿತಿಯಲ್ಲಿ ನೆಲೆಗೊಂಡವ ಎನ್ನುವರು.

                                ಚತುರ್ಥ ಸಮಾಧಿ
ನಂತರ ಇಲ್ಲಿ ಭಿಕ್ಷುಗಳೇ ಭಿಕ್ಖುವು ಸುಖದ ಅನುಭವಗಳನ್ನು ಮೀರಿ, ದುಃಖದ ಅನುಭವಗಳನ್ನು ಮೀರಿ ಹಿಂದಿನ ಸೋಮನಸ್ಸು ಹಾಗೂ ದೋಮನಸ್ಸುಗಳನ್ನು ದಾಟಿ ಅದುಃಖಅಸುಖಯುತ ಸಮಚಿತ್ತತೆಯ ಸ್ಮೃತಿಯುತ ಪರಿಶುದ್ಧವಾದ ಚತುರ್ಥ ಝಾನದಲ್ಲಿ(ಧ್ಯಾನ) ಪ್ರವೇಶಿಸಿ ನೆಲೆಸುತ್ತಾನೆ.
ಇದನ್ನೇ ಭಿಕ್ಖುಗಳೇ ಸಮ್ಮಸಮಾಧಿ ಎನ್ನುವರು.
   
  ಭಗವಾನರ ಈ ಸುತ್ತದಿಂದ ಭಿಕ್ಖುಗಳು ಆನಂದಿತರಾದರು.


     

Saturday, 17 October 2015

parayana sutta of suttanipata in kannada ಪಾರಾಯಣ ಸುತ್ತ

ಪಾರಾಯಣ ಸುತ್ತ

                ಭಗವಾನರು ಮಗಧದಲ್ಲಿ ಪಾಸಾಣ ಚೈತ್ಯದಲ್ಲಿ ವಿಹರಿಸುತ್ತಿರುವ ಸಮಯದಲ್ಲಿ ಇದನ್ನು ಬೋಧಿಸಿದ್ದರು. ಬಾವರಿಯ ಹದಿನಾರು ಶಿಷ್ಯರಿಂದ ಕೇಳಲ್ಪಟ್ಟ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಯಾವುದೇ ಒಂದೇ ಒಂದು ಪ್ರಶ್ನೆಯ ಅರ್ಥ ಹಾಗು ಅದಕ್ಕೆ ಪ್ರತಿಯಾಗಿ ನೀಡಿದ ಧಮ್ಮೋಪದೇಶದ ಉತ್ತರ ಅರಿತರೂ ಹಾಗು ಧಮ್ಮಾನುಧಮ್ಮವನ್ನು ಅರಿತು ಅದರಂತೆ ಜೀವಿಸಿದರೂ ಖಂಡಿತವಾಗಿಯೂ ಜನ್ಮ ಹಾಗು ಮುದಿತನದಿಂದ ಪಾರಾಗಿಬಿಡುತ್ತಾರೆ. ಇನ್ನು ಎಲ್ಲರ ಪ್ರಶ್ನೆಗೆ ಹೇಳುವುದೇನಿದೆ? ಇದು ಪಾರುಮಾಡುವಂತಹ ಧಮ್ಮವಾಗಿದೆ. ಈ ತೀರದಿಂದ ಆ ತೀರಕ್ಕೆ ಇರುವ ನಿಬ್ಬಾಣಕ್ಕೆ ಕೊಂಡೊಯ್ಯುವ ಧಮ್ಮವಾಗಿದೆ. ಆದ್ದರಿಂದಾಗಿ ಈ ಧಮ್ಮೋಪದೇಶಕ್ಕೆ ಪಾರಾಯಣ ಸುತ್ತ ಎಂಬ ಹೆಸರಿದೆ.
1-3. ಅಜೀತ, ತಿಸ್ಸಮೆತ್ತೆಯ್ಯ, ಪುಣ್ಣಕ, ಮೆತ್ತಗೂ, ದೋತಕ, ಉಪಸೀವ, ನಂದ, ಹೇಮಕ, ತೊದೆಯ್ಯ, ಕಪ್ಪ ಹಾಗು ಪಂಡಿತ ಜಾತುಕಣ್ಣಿ, ಭದ್ರಾವುಧ, ಉದಯ ಹಾಗು ಪೋಸಾಲ ಬ್ರಾಹ್ಮಣ ಬುದ್ಧಿವಂತ ಮೋಘರಾಜ ಹಾಗು ಮಹಷರ್ಿ ಪಿಂಗಿಯ - ಇವರೆಲ್ಲಾ ಋಷಿಗಳಲ್ಲೇ ಶ್ರೇಷ್ಠರಾದ ಸದಾಚಾರಿ ಋಷಿಯಾದ ಬುದ್ಧರ ಬಳಿಗೆ ಸಮೀಪಿಸುತ್ತಾರೆ. ನಿಪುಣವಾದ ಪ್ರಶ್ನೆಗಳಿಂದ ಶ್ರೇಷ್ಠರಾದ ಬುದ್ಧರಿಗೆ ಸಮೀಪವಾಗುತ್ತಾರೆ.
4.            ಬುದ್ಧ ಭಗವಾನರು ಸಹಾ ಅವರು ಕೇಳಿದ ಪ್ರಶ್ನೆಗಳಿಗೆ ಯತಾರ್ಥವಾಗಿ ಉತ್ತರಿಸಿದರು. ಮಹಾಮುನಿಯಾದ ಬುದ್ಧರು ಆ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ನೀಡಿ, ಆ ಬ್ರಾಹ್ಮಣರಿಗೆ ಸಂತುಷ್ಟಗೊಳಿಸುತ್ತಾರೆ.
5.            ಆದಿತ್ಯಬಂಧು ಚಕ್ಷುವಂತರಾಗಿರುವ ಬುದ್ಧರಿಂದ ಸಂತುಷ್ಟರಾದ ಮೇಲೆ, ಅವರೆಲ್ಲಾ ಶ್ರೇಷ್ಠ ಪ್ರಾಜ್ಞರಾದ ಬುದ್ಧರ ಬಳಿ ಬ್ರಹ್ಮಚರ್ಯದ ಪಾಲನೆ ಮಾಡಿದರು.
6.            ಒಂದೊಂದು ಪ್ರಶ್ನೆಗೂ ಹೇಗೆ ಬುದ್ಧರು ಉತ್ತರಿಸಿದರೋ ಹಾಗೇ ಆಚರಿಸಿದವರೆಲ್ಲಾ ಈ ತೀರದಿಂದ ಆ ತೀರಕ್ಕೆ (ನಿಬ್ಬಾಣ) ಹೋಗಿಬಿಡುವರು.
7.            ಉತ್ತಮ ಮಾರ್ಗವನ್ನು ಅಭ್ಯಸಿಸುತ್ತಿರುವ ಆತನು ಈ ತೀರದಿಂದ ಆ ತೀರಕ್ಕೆ ಹೋಗಿಬಿಡುವನು. ಇದು ದಾಟಲು, ಪಾರಾಗುವಂತಹ ಮಾರ್ಗವಾಗಿದೆ. ಆದ್ದರಿಂದ ಇದಕ್ಕೆ ಪಾರಾಯಣ ಎಂದು ಹೆಸರಿಸಲಾಗಿದೆ.
8.            ಪಿಂಗಿಯ- ನಾನು ಈ ಪಾರಾಯಣದ (ದಾಟಲು ಸಮರ್ಥವಾದ) ಧಮ್ಮದ ವರ್ಣನೆ ಮಾಡುವೆನು. ಯಾವ ವಿಮಲವಾದ ಭೂರಿಮೇದಸ್ಸಿ (ಮಹಾಪ್ರಾಜ್ಞರು) ರವರು ಹೀಗೆ ವೀಕ್ಷಿಸಿದರೋ ಹಾಗೆಯೇ ಬೋಧಿಸಿದರು. ಮಹಾಮಹಿಮರಾದಂತಹ ಶಾಸ್ತರು ನಿಷ್ಕಾಮಿಗಳಾಗಿದ್ದಾರೆ, ತೃಷ್ಣಾರಹಿತರಾಗಿದ್ದಾರೆ, ಅಂತಹವರು ಅಸತ್ಯವನ್ನಾದರೂ ಹೇಗೆತಾನೆ ನುಡಿಯಲು ಸಾಧ್ಯ?
9.            ಮೋಹ ಮಲರಹಿತರಾದ, ಅಹಂಕಾರರಹಿತರೂ ಹಾಗು ಮಾಯಾವಿತನವಿಲ್ಲದವರೂ ಆದ ಭಗವಾನರ ಮಧುರ ಸ್ವರದ ವರ್ಣನೆಯನ್ನು ನಾನು ಮಾಡುವೆ.
10.          ಹೇ ಬ್ರಾಹ್ಮಣರೇ ! ಅಂಧಕಾರವನ್ನು ದೂರಮಾಡುವಂತಹ ಬುದ್ಧರು, ಸರ್ವವನ್ನು ವೀಕ್ಷಿಸುವಂತ ಸಮಂತ ಚಕ್ಷುವಂತರು, ಲೋಕದ ಅಂತ್ಯವನ್ನು ಅರಿತು ಸರ್ವ ಭವಗಳನ್ನು ದಾಟಿ ಹೋಗಿರುವರು, ಅನಾಸವರಾದಂತಹ, ಸರ್ವ ದುಃಖಗಳಿಗೆ ಪ್ರಹಾರ ಮಾಡುವಂತಹ, ಅಂತಹ ಸತ್ಯದ ನಾಮಧೇಯರಾದಂತಹ ಅವರು ನನ್ನಿಂದ ಆರಾಧಿಸಲ್ಪಟ್ಟಿದ್ದಾರೆ.
11.          ಹೇಗೆ ಪಕ್ಷಿಯು ಚಿಕ್ಕ ವನವನ್ನು ಬಿಟ್ಟು, ಅಪಾರ ಫಲಾವೃತವಾಗಿರುವ ಅರಣ್ಯದಲ್ಲಿ ನೆಲೆಸುವುದೋ, ಅದೇರೀತಿ ನಾನು ಅಲ್ಪ ದಾರ್ಶನಿಕರನ್ನು ಬಿಟ್ಟು ಮಹಾ ಜಲಾಶಯವಾದ ಸರೋವರದತ್ತ ಹೋಗುವ ಹಂಸದ ರೀತಿ ಬುದ್ಧರ ಬಳಿಗೆ ಬಂದೆನು.
12.          ಗೋತಮ ಬುದ್ಧರ ಶಾಸನ ಬಗ್ಗೆ ಹೊರಗೆ ಮೊದಲು ಹೀಗೆ ಹೇಳಲಾಗುತ್ತಿತ್ತು- ಹೀಗಿತ್ತು, ಹೀಗಾಗುವುದು. ಆದರೆ ಅವೆಲ್ಲಾ ದಾರ್ಶನಿಕತ್ವವು ಕಾಲ್ಪನಿಕವಾಗಿತ್ತು. ಅವೆಲ್ಲವೂ ತಕರ್ಾಧಾರಿತವಾಗಿತ್ತು.
13.          ಅಂಧಕಾರವನ್ನು ದೂರ ಮಾಡುವಂತಹ ಪರಮಶ್ರೇಷ್ಠರು ಅವರೊಬ್ಬರೇ ಆಗಿದ್ದರು. ಅವರು ಪ್ರಕಾಶ ನೀಡುವ ಪ್ರಚಾರಕರು. ಗೋತಮರು ಮಹಾ ಜ್ಞಾನಿಯಾಗಿದ್ದಾರೆ (ಭೂರಿಪನ್ಯಾನೋ). ಗೋತಮರು ಮಹಾ ಪ್ರಜ್ಞಾವಂತರಾಗಿದ್ದಾರೆ (ಭೂರಿಮೇಧನೋ).
14.          ಅವರು ನನಗೆ ಈಗಲೇ ಇಲ್ಲಿಯೇ ತಕ್ಷಣವೇ ಫಲ ನೀಡುವಂತಹ, ಪ್ರತ್ಯಕ್ಷವಾಗಿಯೇ ಮುಂದೆ ಇರುವಂತಹ, ತೃಷ್ಣಾದ ನಾಶ ಮಾಡುವಂತಹ ಹಾಗು ದುಃಖವನ್ನು ದೂರ ಮಾಡುವಂತಹ ಧಮ್ಮದ ಉಪದೇಶ ನೀಡಿದರು. ಅಂತಹುದರ ಉಪಮೆಯನ್ನು ಯಾವುದರಿಂದಲೂ ಹೋಲಿಸಲು ಆಗದು.
15.          ಬಾವರಿ- ಹೇ ಪಿಂಗಿಯಾ! ನೀನು ಅಂತಹ ಮಹಾಜ್ಞಾನಿ ಗೋತಮರ, ಮಹಾಪ್ರಜ್ಞಾವಂತರಾದ ಗೋತಮರಿಂದ ಕ್ಷಣಮಾತ್ರವೂ ದೂರ ಇರಬಲ್ಲೆಯಾ?
16.          ಯಾರು ನಿನಗೆ ಕಣ್ಣ ಮುಂದೆಯೇ, ತಕ್ಷಣವೇ ಫಲಕಾರಿಯಾದ, ತೃಷ್ಣೆಯನ್ನು ನಾಶಗೊಳಿಸುವಂತಹ, ದುಃಖವನ್ನು ದೂರಗೊಳಿಸುವಂತಹ ಉಪದೇಶವನ್ನು ನೀಡಿದ್ದಾರೆ. ಅಂತಹವರ ಸಾಮ್ಯತೆ ಎಲ್ಲಿಯೂ ಸಿಗದು. ಯಾವುದರಿಂದಲೂ ಹೋಲಿಸಲು ಆಗದು.
17.          ಪಿಂಗಿಯಾ- ಓ ಬ್ರಾಹ್ಮಣ, ನಾನು ಅಂತಹ ಮಹಾಪ್ರಾಜ್ಞ ಗೋತಮರ, ಅಂತಹ ಮಹಾಮೇಧಾವಿ ಗೋತಮರನ್ನು ಅಗಲಿ ಕ್ಷಣಮಾತ್ರವೂ ಇರಲಾರೆ.
18.          ಅವರು ನನ್ನ ಚಕ್ಷುಗಳ ಮುಂದೆಯೇ ಕಾಲವಿಳಂಬವಿಲ್ಲದೆ ಫಲ ನೀಡುವ, ತೃಷ್ಣಾ ನಾಶಕಾರಿಯಾದ, ದುಃಖ ನಿರೋಧಗೊಳಿಸುವ, ಧಮ್ಮೋಪದೇಶ ನೀಡಿದ್ದಾರೆ. ಅದರ ತುಲನೆಯನ್ನು ಯಾವುದರಿಂದಲೂ ಮಾಡಲಾಗದು.
19.          ಹೇ ಬ್ರಾಹ್ಮಣ! ನಾನು ಅಹೋರಾತ್ರಿ ಅಪ್ರಮತ್ತನಾಗಿ ಚಿತ್ತ ಚಕ್ಷುವಿನಿಂದಲೇ ಅವರನ್ನು ಕಾಣುತ್ತಿದ್ದೇನೆ. ನಾಮ ಸ್ಮರಿಸುತ್ತಲೇ ನಾನು ರಾತ್ರಿಯನ್ನು ಕಳೆಯುತ್ತಿದ್ದೇನೆ. ಹೀಗಾಗಿ ನಾನು ಅವರಿಂದ ಬೇರೆ ಇದ್ದೇನೆಂದು ತಿಳಿಯುತ್ತಿಲ್ಲ.
20.          ನನ್ನ ಶ್ರದ್ಧೆಯಾಗಲಿ, ಭಕ್ತಿಯಾಗಲಿ, ಆನಂದವಾಗಲಿ, ಮನಸ್ಸಾಗಲಿ, ಸ್ಮೃತಿಯೇ ಆಗಲಿ, ಗೋತಮರ ಶಿಕ್ಷಣದಿಂದ ಅಣುಮಾತ್ರವೂ ದೂರ ಹೋಗದು. ಎಲ್ಲಿ ಯಾವ ದಿಕ್ಕಿನೆಡೆಗೆ ಆ ಮಹಾಪ್ರಾಜ್ಞರು ಹೋಗುತ್ತಾರೋ, ಆ ದಿಕ್ಕಿನೆಡೆಗೆಲ್ಲಾ ಶಿರಬಾಗಿ ನಮಸ್ಕರಿಸುತ್ತೇನೆ.
21.          ಜೀರ್ಣಗೊಂಡಿರುವ, ಬಲಹೀನವಾದ ನನ್ನ ಶರೀರವು ಅವರಿರುವೆಡೆಯಲ್ಲಿ ಹೋಗಲಾರದು. ಆದರೂ ಮಾನಸಿಕವಾಗಿ ನಿತ್ಯವೂ ಅವರಿರುವೆಡೆಗೆ ಹೋಗುತ್ತೇನೆ. ಹೀಗಾಗಿ ಹೇ ಬ್ರಾಹ್ಮಣ, ನನ್ನ ಮನಸ್ಸು ಅವರ ಜೊತೆಯಲ್ಲೇ ಇದೆ.
22.          ಕಾಮ ಭೋಗಗಳ ಕೆಸರಿನಲ್ಲಿ ಹೊರಳಾಡುತ್ತಿದ್ದ ನಾನು ಒಂದು ದ್ವೀಪದಿಂದ ಇನ್ನೊಂದು ದ್ವೀಪದೆಡೆಗೆ ಗುರುವನ್ನು ಅರಸುತ್ತಾ ಹೋಗುತ್ತಿದ್ದೆನು. ಆಗ ನಾನು ಲೋಕದ ಬೃಹತ್ ಪ್ರವಾಹವನ್ನು ದಾಟಿರುವ, ಅನಾಸವರಾದ ಸಮ್ಮಾಸಂಬುದ್ಧರನ್ನು ಕಂಡೆನು.
23.          ಆಗ ಅಲ್ಲಿ ಪ್ರತ್ಯಕ್ಷರಾದ ಭಗವಾನರು ಹೀಗೆ ನುಡಿದರು- ಯಾವರೀತಿಯಲ್ಲಿ ವಕ್ಕಲಿ, ಭದ್ರಾವುಧ ಹಾಗು ಆಳವಿಯು ತಥಾಗತರ ಮೇಲಿನ ಶ್ರದ್ಧೆಯಿಂದಲೇ ಮುಕ್ತರಾದರೋ, ಅದೇರೀತಿಯಲ್ಲಿ ನೀನು ಸಹಾ ಶ್ರದ್ಧೆಯನ್ನು ವೃದ್ಧಿಗೊಳಿಸು ಪಿಂಗಿಯಾ! ಆಗ ನೀನು ಸಹ ಮೃತ್ಯುರಾಜನಿಂದ ದೂರವಾಗುವೆ.
24.          ಮುನಿಗಳ ಈ ವಚನವನ್ನು ಆಲಿಸಿ ನಾನು ಅತ್ಯಧಿಕವಾಗಿ ಪ್ರಸನ್ನಗೊಂಡೆನು. ಓ ತೆರೆದ ಜ್ಞಾನವಂತರೇ, ಸಮ್ಮಾಸಂಬುದ್ಧರೇ, ತಾವು ನಿಜಕ್ಕೂ ನಿರ್ಮಲಚಿತ್ತದವರಾಗಿದ್ದೀರಿ ಹಾಗು ಮಹಾಜ್ಞಾನಿಗಳಾಗಿದ್ದೀರಿ.
25.          ತಾವು ದೇವತೆಗಳಿಂದ ಅತೀತ ಶ್ರೇಷ್ಠ ಧಮ್ಮವನ್ನು ಸಾಕ್ಷಾತ್ಕರಿಸಿ ಯಾವುದನ್ನೂ ಬಿಡದೆ ಸರ್ವವನ್ನೂ, ಸರ್ವ ಲೋಕಗಳನ್ನು ಅರಿತಿರುವಿರಿ. ಸಂದೇಹಸ್ಥರ ಹಾಗು ಜ್ಞಾನಿಗಳ ಸರ್ವ ಪ್ರಶ್ನೆಗಳನ್ನು ತಮ್ಮ ಉತ್ತರದಿಂದ ಅಂತ್ಯ ಮಾಡುವವರಾಗಿದ್ದೀರಿ.
26.          ನಿಬ್ಬಾಣವು ಅಕಂಪನಮಯವೂ ಅಜೇಯವಾಗಿದೆ! ಸ್ಥಿರವಾಗಿದೆ, ಯಾವುದರಿಂದಲೂ ಅದರ ಉಪಮೆ ನೀಡಲಾಗದು. ನಾನು ಖಂಡಿತವಾಗಿ ಆ ಅಚಲತೆಯ ಪ್ರಾಪ್ತಿಮಾಡುವೆ. ಈ ವಿಷಯದಲ್ಲಿ ನನಗೆ ಯಾವ ಸಂದೇಹವೂ ಇಲ್ಲ. ಈ ರೀತಿಯಾಗಿ ನನ್ನನ್ನು ಧಾರಣೆ ಮಾಡಿಕೊಳ್ಳಿ, ಓ ಪೂರ್ಣ ಚಿತ್ತವಿಮುಕ್ತ ಭಗವಾನರೇ!
ಇಲ್ಲಿಗೆ ಪಾರಾಯಣ ಸುತ್ತ ಮುಗಿಯಿತು.
ಎಂಟು ಬಾಣವಾರಗಳಿಗೆ ಸಮನಾದ ಸುತ್ತನಿಪಾತವು ಮುಗಿಯಿತು.
ಐದು ವರ್ಗಗಳ, ಎಂಟು ಬಾಣವಾರಗಳ ಹಾಗು 72 ಸುತ್ತಗಳಲ್ಲಿ ಸಂಗ್ರಹಿತವಾದ

ಖುದ್ದಕನಿಕಾಯದಲ್ಲಿ ಅಂತರ್ಗತವಾಗಿರುವ ಸುತ್ತನಿಪಾತವು ಮುಗಿಯಿತು

pingiya manava pucca of suttanipata in kannada 16. ಪಿಂಗಿಯ ಮಾಣವ ಪುಚ್ಛಾ (ಪಿಂಗಿಯ ಮಾಣವನ ಪ್ರಶ್ನೆಗಳು)

16. ಪಿಂಗಿಯ ಮಾಣವ ಪುಚ್ಛಾ (ಪಿಂಗಿಯ ಮಾಣವನ ಪ್ರಶ್ನೆಗಳು)

1.            ಪಿಂಗಿಯಾ- ನಾನು ಜೀಣರ್ಾವಸ್ಥೆಯಲ್ಲಿಹೆನು, ದುರ್ಬಲನೂ ಹೌದು. ನನ್ನ ಸುಂದರತೆ ಹೋಗುತ್ತಲಿದೆ. ನನ್ನ ಕಂಗಳು ಸರಿಯಾಗಿ ಕಾಣಿಸುತ್ತಿಲ್ಲ. ಕಿವಿಗಳು ಸಹಾ ಸ್ಪಷ್ಟವಾಗಿ ಆಲಿಸದು. ನನಗೆ ಧಮ್ಮೋಪದೇಶ ನೀಡಿ. ಅದರಿಂದಾಗಿ ನಾನು ಜನ್ಮ ಜರಾ ಬಂಧನದಿಂದ ಪಾರಾಗುವಂತಾಗಲಿ. ಹಾಗು ಮಧ್ಯದಲ್ಲಿ ಮೋಹದ ಜೊತೆಯಲ್ಲಿಯೇ ಸಾಯದೆ ಹೋಗುವಂತಾಗಲಿ.
2.            ಭಗವಾನರು- ದೇಹದ ಕಾರಣದಿಂದಾಗಿ ಚಿಂತಿತರಾಗಿರುವ, ದೇಹದ ಕಾರಣದಿಂದಲೇ ನಾಶವಾಗುತ್ತಿರುವ ಅಜಾಗರೂಕ ಜನತೆಯನ್ನು ನೋಡುತ್ತಾ ಓ ಪಿಂಗಿಯಾ! ಅಪ್ರಮತ್ತನಾಗು, ಜಾಗರೂಕನಾಗಿ ದೇಹದ ಮೋಹವನ್ನು ಅಂತ್ಯಗೊಳಿಸು. ಅದರಿಂದಾಗಿ ಭವ ಅಂತ್ಯವಾಗಲಿ.
3.            ಪಿಂಗಿಯ- ನಾಲ್ಕು ದಿಕ್ಕುಗಳು, ಮತ್ತೆ ನಾಲ್ಕು ಅನು ದಿಕ್ಕುಗಳು (ಮೂಲೆ ದಿಕ್ಕುಗಳು) ಊದ್ರ್ವ ಹಾಗೂ ಅಧೋ ದಿಕ್ಕು. ಹೀಗೆ ಯಾವೆಲ್ಲಾ ಲೋಕಗಳಲ್ಲಿ ದಿಕ್ಕುಗಳಿವೆಯೋ, ಅವುಗಳಲ್ಲೆಲ್ಲಾ ಯಾವುದು ಸಹಾ ತಮ್ಮಿಂದ ಅದೃಷ್ಯವಾಗಿಲ್ಲ (ಎಲ್ಲವನ್ನು ನೋಡಿದ್ದೀರಿ), ಅಶ್ರುತವಾಗಿಲ್ಲ (ಎಲ್ಲವನ್ನು ಅರಿತಿದ್ದೀರಿ), ಅಪರಿಚಿತವಾಗಿಲ್ಲ ಅಥವಾ ಅಜ್ಞಾತವಾಗಿಲ್ಲ. ಆದ್ದರಿಂದ ತಾವು ನನಗೆ ಧಮ್ಮ ತಿಳಿಸಿ. ಅದನ್ನು ಅರಿತು ನಾನು ಜನ್ಮ ಹಾಗು ಜರಾಗಳ ಅಂತ್ಯ ಮಾಡುವಂತಾಗಲಿ.
4.            ಭಗವಾನರು- ಹೇ ಪಿಂಗಿಯಾ! ತೃಷ್ಣೆಗೆ ವಶೀಭೂತರಾಗಿರುವ ಹೀಗೆಯೇ ಸಾಗಿ ದುಃಖಿತರಾಗಿರುವ, ವೃದ್ಧಾಪ್ಯದಿಂದಾಗಿ ಚಿಂತಾಕ್ರಾಂತರಾಗಿರುವ ಈ ಮನುಜರನ್ನು ನೋಡಿ, ನೀನು ಪಿಂಗಿಯಾ! ಅಪ್ರಮತ್ತನಾಗು. ಪುನಃ ಪುನಃ ಜನ್ಮ ತಾಳದಿರಲು ಈ ತೃಷ್ಣೆಯನ್ನು ತ್ಯಾಗ ಮಾಡಿಬಿಡು.

ಇಲ್ಲಿಗೆ ಪಿಂಗಿಯ ಮಾಣವ ಪ್ರಶ್ನೆಗಳು ಮುಗಿಯಿತು.

mogharaja manava pucca of suttanipata in kannada 15. ಮೋಘರಾಜ ಮಾಣವ ಪುಚ್ಛಾ (ಮೋಘರಾಜ ಮಾಣವನ ಪ್ರಶ್ನಾವಳಿ)

15. ಮೋಘರಾಜ ಮಾಣವ ಪುಚ್ಛಾ (ಮೋಘರಾಜ ಮಾಣವನ ಪ್ರಶ್ನಾವಳಿ)

1.            ಮೋಘರಾಜ- ಹೇ ಶಕ್ರರೇ! ನಾನು ಎರಡುಬಾರಿ ವಿಭಿನ್ನ ಸನ್ನಿವೇಶದಲ್ಲಿ ತಮ್ಮಲ್ಲಿ ಪ್ರಶ್ನಿಸಿದೆನು. ಆದರೆ ಚಕ್ಷುವಂತರೇ, ತಾವು ಉತ್ತರವನ್ನು ನೀಡಲಿಲ್ಲ. ದೇವಷರ್ಿಗಳು 3ನೇ ಬಾರಿ ಖಂಡಿತವಾಗಿ ಉತ್ತರಿಸುವರು ಎಂದು ಕೇಳಿದ್ದೇನೆ.
2.            ಈ ಲೋಕ, ಪರಲೋಕ ಹಾಗು ದೇವತೆಗಳ ಸಹಿತ ಬ್ರಹ್ಮಲೋಕಗಳಿವೆ. ಇವುಗಳ ಬಗ್ಗೆ ಯಶಸ್ವಿಗಳಾದ ಗೋತಮರ ದೃಷ್ಟಿಕೋನ ಏನು ಎಂಬುದು ನನಗೆ ತಿಳಿದಿಲ್ಲ.
3.            ಹೇ ಪರಮಪ್ರಜ್ಞಾದ ವಿಶುದ್ಧಿದಶರ್ಿಗಳೆ, ನಾನು ತಮ್ಮಲ್ಲಿ ಈ ಪ್ರಶ್ನೆ ಕೇಳಲೇ ಬಂದಿರುವೆನು. ಲೋಕವನ್ನು ಯಾವರೀತಿ ನೋಡುವುದರಿಂದಾಗಿ (ಗ್ರಹಿಸುವುದರಿಂದ) ಅಂತಹನಿಗೆ ಮೃತ್ಯುರಾಜ ನೋಡಲಾಗುವುದಿಲ್ಲ.
4.            ಭಗವಾನರು- ಹೇ ಮೋಘರಾಜ! ಸದಾ ಸ್ಮೃತಿವಂತನಾಗಿ, ಶೂನ್ಯಭಾವದಿಂದ ನೋಡುವಂತಾಗು, ಈ ರೀತಿಯಾಗಿ ಆತ್ಮ-ದೃಷ್ಟಿಗಳ ನಾಶ ಮಾಡಿದರೆ ಮೃತ್ಯುರಾಜನನ್ನು ದಾಟಿಹೋಗುವೆ. ಈ ರೀತಿಯಾಗಿ (ಶೂನ್ಯಭಾವದಿಂದ) ಲೋಕವನ್ನು ನೋಡುವವನಿಗೆ ಮೃತ್ಯುರಾಜ ನೋಡಲಾಗುವುದಿಲ್ಲ.

ಇಲ್ಲಿಗೆ ಮೋಘರಾಜ ಮಾಣವ ಪ್ರಶ್ನಾವಳಿ ಮುಗಿಯಿತು.