15. ಮೋಘರಾಜ
ಮಾಣವ ಪುಚ್ಛಾ (ಮೋಘರಾಜ ಮಾಣವನ ಪ್ರಶ್ನಾವಳಿ)
1. ಮೋಘರಾಜ- ಹೇ ಶಕ್ರರೇ! ನಾನು ಎರಡುಬಾರಿ ವಿಭಿನ್ನ ಸನ್ನಿವೇಶದಲ್ಲಿ
ತಮ್ಮಲ್ಲಿ ಪ್ರಶ್ನಿಸಿದೆನು. ಆದರೆ ಚಕ್ಷುವಂತರೇ, ತಾವು ಉತ್ತರವನ್ನು
ನೀಡಲಿಲ್ಲ. ದೇವಷರ್ಿಗಳು 3ನೇ ಬಾರಿ ಖಂಡಿತವಾಗಿ
ಉತ್ತರಿಸುವರು ಎಂದು ಕೇಳಿದ್ದೇನೆ.
2. ಈ ಲೋಕ, ಪರಲೋಕ ಹಾಗು
ದೇವತೆಗಳ ಸಹಿತ ಬ್ರಹ್ಮಲೋಕಗಳಿವೆ. ಇವುಗಳ ಬಗ್ಗೆ ಯಶಸ್ವಿಗಳಾದ ಗೋತಮರ ದೃಷ್ಟಿಕೋನ ಏನು ಎಂಬುದು
ನನಗೆ ತಿಳಿದಿಲ್ಲ.
3. ಹೇ ಪರಮಪ್ರಜ್ಞಾದ ವಿಶುದ್ಧಿದಶರ್ಿಗಳೆ, ನಾನು ತಮ್ಮಲ್ಲಿ ಈ ಪ್ರಶ್ನೆ ಕೇಳಲೇ ಬಂದಿರುವೆನು. ಲೋಕವನ್ನು ಯಾವರೀತಿ ನೋಡುವುದರಿಂದಾಗಿ
(ಗ್ರಹಿಸುವುದರಿಂದ) ಅಂತಹನಿಗೆ ಮೃತ್ಯುರಾಜ ನೋಡಲಾಗುವುದಿಲ್ಲ.
4. ಭಗವಾನರು- ಹೇ ಮೋಘರಾಜ! ಸದಾ ಸ್ಮೃತಿವಂತನಾಗಿ, ಶೂನ್ಯಭಾವದಿಂದ ನೋಡುವಂತಾಗು, ಈ ರೀತಿಯಾಗಿ ಆತ್ಮ-ದೃಷ್ಟಿಗಳ ನಾಶ ಮಾಡಿದರೆ ಮೃತ್ಯುರಾಜನನ್ನು ದಾಟಿಹೋಗುವೆ. ಈ ರೀತಿಯಾಗಿ
(ಶೂನ್ಯಭಾವದಿಂದ) ಲೋಕವನ್ನು ನೋಡುವವನಿಗೆ ಮೃತ್ಯುರಾಜ ನೋಡಲಾಗುವುದಿಲ್ಲ.
ಇಲ್ಲಿಗೆ ಮೋಘರಾಜ ಮಾಣವ
ಪ್ರಶ್ನಾವಳಿ ಮುಗಿಯಿತು.
No comments:
Post a Comment