10. ಕಪ್ಪ
ಮಾಣವ ಪುಚ್ಛಾ (ಕಪ್ಪ ಮಾಣವನ ಪ್ರಶ್ನಾವಳಿ)
1. ಕಪ್ಪ- ಹೇ ಮಾರ್ಷರೇ! ಜಲಾಶಯ ರೂಪದ ಲೋಕದ ಮಧ್ಯೆ ಇರುವಂತಹವರಿಗೆ ಜರಾ
ಹಾಗೂ ಮೃತ್ಯುರೂಪಿ ಮಹಾ ಭಯಾನಕ ಪ್ರವಾಹ ಬರುವಾಗ ಸುರಕ್ಷೆಗಾಗಿ ದ್ವೀಪವನ್ನು ತಿಳಿಸಿ ಹಾಗು ಇಂತಹ
ದ್ವೀಪದ ಬಗ್ಗೆ ತಿಳಿಸಿ, ಅದರಿಂದಾಗಿ ಪುನಃ ದುಃಖ
ಸಿಗದಿರಲಿ.
2. ಭಗವಾನರು- ಹೇ ಕಪ್ಪ ! ಜಲಾಶಯ ರೂಪದ ಲೋಕದ ಮಧ್ಯೆ ಇರುವಂತಹನಿಗೆ ಜರಾ
ಹಾಗು ಮೃತ್ಯುರೂಪಿ ಮಹಾ ಭಯಾನಕ. ಪ್ರವಾಹ ಬರುವಾಗ ಸುರಕ್ಷೆಗಾಗಿ ದ್ವೀಪವನ್ನು ನಿನಗೆ
ತಿಳಿಸುತ್ತಿದ್ದೇನೆ ಆಲಿಸು.
3. ಅದು ಅಕಿಂಚನ (ಶೂನ್ಯತೆ) ಹಾಗು ಅನಾಸಕ್ತಿಯೇ ಆ ಮಹಾ ದ್ವೀಪವಾಗಿದೆ,
ಬೇರ್ಯಾವುದೂ ಅಲ್ಲ. ಜರಾ ಹಾಗು ಮರಣಗಳ ಅಂತ್ಯದ ನಿಬ್ಬಾಣವನ್ನು ಹೀಗೆ
ತಿಳಿಸುತ್ತಿದ್ದೇನೆ.
4. ಇದನ್ನು ಅರಿತಂಥ ಸ್ಮೃತಿವಂತರ ಚಿತ್ತವು/ಜನ್ಮವು ಶಾಂತವಾಗುವುದು.
ಅವರು ಮಾರನ ವಶೀಭೂತಿಗಳಾಗುವುದಿಲ್ಲ. ಹಾಗು ಮಾರನ ಗುಲಾಮರು (ಅನುಗಾಮಿಗಳು) ಆಗುವುದಿಲ್ಲ.
ಇಲ್ಲಿಗೆ ಕಪ್ಪ ಮಾಣವ
ಪ್ರಶ್ನಾವಳಿ ಮುಗಿಯಿತು.
No comments:
Post a Comment