13. ಉದಯ
ಮಾಣವ ಪುಚ್ಛಾ (ಉದಯ ಮಾಣವನ ಪ್ರಶ್ನಾವಳಿ)
1. ಉದಯ- ಧ್ಯಾನಿಯು, ರಜರಹಿತರಾಗಿ
ಆಸೀನರಾದ, ಕರ್ತವ್ಯಗಳನ್ನು ಪೂರೈಸಿದ, ಆಸವರಹಿತರಾದ, ಸರ್ವಧರ್ಮ ಪಾರಂಗತರಾದ,
ಭಗವಾನರೇ ತಮ್ಮಲ್ಲಿ ಪ್ರಶ್ನಿಸಲು ಬಂದಿದ್ದೇನೆ, ಪ್ರಜ್ಞಾವಿಮೋಕ್ಷ ಹಾಗು ಅವಿದ್ಯೆಯ ನಾಶದ ಬಗ್ಗೆ ತಿಳಿಸಿ.
2. ಭಗವಾನರು- ಕಾಮರಾಗಗಳನ್ನು ಮತ್ತು ದುರ್ಮನಸ್ಸು (ದುಃಖ/ವಿರೋಧ ಛಾಯೆಯ
ಚಿತ್ತಸ್ಥಿತಿ) ವಜರ್ಿಸು, ಸೋಮಾರಿತನದ ಜಡತೆಗಳನ್ನೆಲ್ಲಾ
ನಷ್ಟಗೊಳಿಸು. ಸಂದೇಹ ಹಾಗು ಅನಿಧರ್ಾರಗಳನ್ನು ನಿವಾರಿಸಿಕೋ.
3. ಉಪೇಕ್ಷಾಯುತ ಸ್ಮೃತಿವಂತನಾಗು, ಅದರಿಂದ ಉಂಟಾಗುವ ಪರಿಶುದ್ಧತೆಯಿಂದ ಹಾಗು ಧಾಮರ್ಿಕ ವಿಚಾರಗಳಿಂದ ಉತ್ಪನ್ನತೆಯಿಂದಲೇ
ಪ್ರಜ್ಞಾ ವಿಮೋಕ್ಷ ಹಾಗು ಅವಿದ್ಯೆಯ ನಾಶವೆಂದು ಹೇಳುತ್ತೇನೆ.
4. ಉದಯ- ಲೋಕವು ಯಾವುದರಿಂದ ಸಂಯೋಜನಗೊಂಡಿದೆ (ಬಂಧಿತವಾಗಿದೆ), ಯಾವುದರಲ್ಲಿ ಲೋಕವು ವಿಹರಿಸುವುದು (ಆನಂದಿಸುವುದು), ಯಾವುದನ್ನು ತ್ಯಾಗ ಮಾಡುವುದರಿಂದ ನಿಬ್ಬಾಣವು ಪ್ರಾಪ್ತಿಯಾಗುವುದು?
5. ಭಗವಾನರು- ಲೋಕವು ರಾಗದಿಂದ ಬಂಧಿತವಾಗಿದೆ, ಅದರ ಬಗ್ಗೆ ತಕರ್ಿಸುತ್ತಿರುವುದರಲ್ಲಿಯೇ ಅದು ವಿಹರಿಸುವುದು. ತೃಷ್ಣೆಯನ್ನು ತ್ಯಾಗ
ಮಾಡುವುದರಿಂದಲೇ ನಿಬ್ಬಾಣ ಪ್ರಾಪ್ತಿಯಾಗುತ್ತದೆ (ತೃಷ್ಣಾ ತ್ಯಾಗವೇ ನಿಬ್ಬಾಣವೆಂದು
ಹೇಳಲಾಗುತ್ತದೆ).
6. ಉದಯ- ಯಾವರೀತಿಯ ಎಚ್ಚರಿಕೆಯಿಂದ ಸ್ಮೃತಿ ನೆಲೆಸಿದಾಗ, ವಿಞ್ಞಾನದ (ಮನಸ್ಸಿನ/ಅರಿವಿನ) ನಿರೋಧವಾಗುವುದು? ಭಗವಾನರ ಬಳಿ ಪ್ರಶ್ನಿಸಲು ಬಂದಿರುವೆನು. ತಮ್ಮ ಉತ್ತರವನ್ನು ಆಲಿಸಲು
ಇಚ್ಛಿಸುತ್ತೇನೆ.
7. ಭಗವಾನರು- ಅಂತರಂಗದಲ್ಲಾಗಲಿ ಅಥವಾ ಬಾಹ್ಯದಲ್ಲಾಗಲಿ, ಯಾವುದೇ ರೀತಿಯ ವೇದನೆ (ಸಂವೇದನೆ)ಗಳಲ್ಲಿ ಆನಂದಿಸಬೇಡ
(ಅಭಿನಂದಿಸಬೇಡ). ಹೀಗೆ ಸ್ಮೃತಿವಂತನಾಗಿ ವೇದನೆಗಳಿಗೆ ಅತೀತನಾದರೆ ವಿಞ್ಞಾನದ ನಿರೋಧವಾಗುವುದು.
ಇಲ್ಲಿಗೆ ಉದಯ ಮಾಣವ
ಪ್ರಶ್ನಾವಳಿ ಮುಗಿಯಿತು.
No comments:
Post a Comment