Tuesday 22 October 2019

ಅವಿಜ್ಜ ಸುತ್ತ (ಅವಿದ್ಯೆ/ಅಜ್ಞಾನದ ಸೂತ್ರ)

ಅವಿಜ್ಜ ಸುತ್ತ (ಅವಿದ್ಯೆ/ಅಜ್ಞಾನದ ಸೂತ್ರ)



ಒಬ್ಬ ಭಿಕ್ಷುವು ಭಗವಾನರಲ್ಲಿಗೆ ಹೋಗಿ ವಂದಿಸಿದನು, ನಂತರ ಒಂದು ಪಕ್ಕದಲ್ಲಿ ಕುಳಿತನು ಮತ್ತು ಹೀಗೆ ಹೇಳಿದನು: ಭಗವಾನ್ ಯಾವ ಒಂದು ವಿಷಯವನ್ನು ಭಿಕ್ಷುವು ವಜರ್ಿಸಿದಾಗ, ಆತನಲ್ಲಿನ ಅಜ್ಞಾನವು ಪರಿತ್ಯಜಿಸಲ್ಪಟ್ಟು ಆತನಲ್ಲಿ ಸ್ಪಷ್ಟ ಜ್ಞಾನವು ಉದಯಿಸುತ್ತದೆ?
ಹೌದು ಭಿಕ್ಷು, ಅಂತಹ ವಿಷಯವೊಂದಿದೆ. ಅದನ್ನು ಭಿಕ್ಷುವು ವಜರ್ಿಸಿದಾಗ ಆತನಲ್ಲಿನ ಅಜ್ಞಾನವು ಪರಿತ್ಯಜಿಸಲ್ಪಟ್ಟು ಆತನಲ್ಲಿ ಸ್ಪಷ್ಟ ಜ್ಞಾನವು ಉದಯಿಸುತ್ತದೆ.
ಆ ಒಂದು ವಿಷಯ ಯಾವುದು?
ಅಜ್ಞಾನವೇ ಭಿಕ್ಷುವೆ, ಇದನ್ನು ಭಿಕ್ಷುವು ವಜರ್ಿಸಿದಾಗ ಆತನ ಅಜ್ಞಾನವು ಪರಿತ್ಯಜಿಸಲ್ಪಟ್ಟು, ಆತನಲ್ಲಿ ಸ್ಪಷ್ಟ ಜ್ಞಾನವು ಉದಯಿಸುತ್ತದೆ.
ಆದರೆ ಅಜ್ಞಾನವು ಪರಿತ್ಯಜವಾಯಿತು ಮತ್ತು ಸ್ಪಷ್ಟ ಜ್ಞಾನವು ಉದಯಿಸುತ್ತದೆ ಎಂದು ಭಿಕ್ಷುವು ಹೇಗೆ ಅರಿಯುತ್ತಾನೆ ಮತ್ತು ಕಾಣುತ್ತಾನೆ?
ಒಮ್ಮೆ ಭಿಕ್ಷುವು ಹೀಗೆ ಕೇಳಿರುತ್ತಾನೆ: ಎಲ್ಲಾ ವಿಷಯಗಳು ಅಂಟುವಿಕೆಗೆ ಅನರ್ಹವಾಗಿದೆ. ಆಗ ಆತನಿಗೆ ನೇರವಾಗಿ ಪ್ರತಿಯೊಂದು ಅರಿವಿಗೆ ಬಂದಿರುತ್ತದೆ. ಆತನು ಎಲ್ಲವನ್ನು ಸೂಕ್ಷ್ಮವಾಗಿಯೇ ಗ್ರಹಿಸಿರುತ್ತಾನೆ. ಆತನು ಎಲ್ಲಾ ವಿಷಯಗಳನ್ನು ಯಾವುದೋ ರೀತಿಯಲ್ಲಿ ಪ್ರತ್ಯೇಕವಾಗಿ ಕಾಣುತ್ತಾನೆ.
ಆತನು ಕಣ್ಣನ್ನು ಬೇರೆಯಾಗಿ ಕಾಣುತ್ತಾನೆ, ಹಾಗೆಯೇ ದೃಶ್ಯಗಳನ್ನು ಬೇರೆಯಾಗಿ (ಪ್ರತ್ಯೇಕವಾಗಿ) ಕಾಣುತ್ತಾನೆ, ಅವೆರಡರಿಂದ ಉತ್ಪನ್ನವಾಗುವ ಕಣ್ಣಿನಿಂದಾದ ಅರಿವನ್ನು (ಚಕ್ಷು ವಿಞ್ಞಾನ) ಬೇರೆಯಾಗಿಯೇ ಕಾಣುತ್ತಾನೆ. ಹಾಗೆಯೇ ಕಣ್ಣು ಮತ್ತು ದೃಶ್ಯಗಳ ನಡುವಿನ ಸಂಪರ್ಕವನ್ನು (ಪಸ್ಸ/ಸ್ಪರ್ಶ) ಬೇರೆಯಾಗಿಯೇ ಕಾಣುತ್ತಾನೆ ಮತ್ತು ಯಾವುದೆಲ್ಲವು ಕಣ್ಣಿನ ಸಂಪರ್ಕದಿಂದಾಗಿ ಉದಯಿಸಿತೋ ಹೇಳುವುದಾದರೆ ಸುಖ, ದುಃಖ ಅಥವಾ ಸುಖವು-ದುಃಖವೂ ಅಲ್ಲದ, ಅವೆಲ್ಲವನ್ನು ಪ್ರತ್ಯೇಕವಾಗಿ ಕಾಣುತ್ತಾನೆ.
ಹಾಗೆಯೇ ಕಿವಿಯನ್ನು... ಮೂಗನ್ನು... ನಾಲಿಗೆಯನ್ನು... ದೇಹವನ್ನು ಪ್ರತ್ಯೇಕವಾಗಿ ಕಾಣುತ್ತಾನೆ. ಆತನು ಮನಸ್ಸನ್ನು ಪ್ರತ್ಯೇಕವಾಗಿ ಕಾಣುತ್ತಾನೆ, ಹಾಗೆಯೇ ಚಿತ್ತ ವಿಷಯಗಳನ್ನು ಪ್ರತ್ಯೇಕವಾಗಿ ಕಾಣುತ್ತಾನೆ, ಹಾಗೆಯೇ ಮನೋ ವಿಞ್ಞಾನವನ್ನು (ಮನಸ್ಸಿನಿಂದ ಅರಿಯುವಿಕೆಯನ್ನು) ಬೇರೆಯಾಗಿ ಕಾಣುತ್ತಾನೆ. ಮನಸ್ಸಿನ ಮತ್ತು ಮನೋ ವಿಷಯಗಳ ನಡುವಿನ ಸಂಪರ್ಕವನ್ನು ಬೇರೆಯಾಗಿ ಕಾಣುತ್ತಾನೆ. ಹಾಗೆಯೇ ಅಲ್ಲಿಂದ ಉತ್ಪನ್ನವಾದ ಸುಖ-ದುಃಖ, ಸುಖವು ಅಲ್ಲದ, ದುಃಖವು ಅಲ್ಲದ ವೇದನೆಗಳನ್ನು ಬೇರೆಯಾಗಿ ಕಾಣುತ್ತಾನೆ.
ಹೀಗೆ ಓ ಭಿಕ್ಷುವೇ, ಭಿಕ್ಷುವು ಅಜ್ಞಾನವು ಪರಿತ್ಯಜಿತವಾಗಿ, ಸ್ಪಷ್ಟ ಜ್ಞಾನವು ಉದಯಿಸುವುದನ್ನು ಭಿಕ್ಷು ಕಾಣುತ್ತಾನೆ.

No comments:

Post a Comment