Friday 29 May 2015

saariputta sutta in kannada 16. ಸಾರಿಪುತ್ತ ಸುತ್ತ

16. ಸಾರಿಪುತ್ತ ಸುತ್ತ
(ಭಿಕ್ಷುಚಯರ್ಾ)

1.            ಸಾರಿಪುತ್ರರು - ತುಸಿತಾ ಲೋಕದಿಂದ ಮಾನವ ಲೋಕದವರೆಗೂ ಇಂತಹ ಮೃದು ಸುಮಧುರ ಭಾಷಿಯಾದ ಶ್ರೇಷ್ಠ ಗುರುವನ್ನು ನಾನು ಇದುವರೆಗೂ ನೋಡಿರಲಿಲ್ಲ, ಹಾಗೆಯೇ ಕೇಳಿಯೂ ಇರಲಿಲ್ಲ.
2.            ದೇವತೆಗಳ ಸಹಿತ ಲೋಕದಲ್ಲಿ ಹೇಗೆ ಚಕ್ಷುವಂತರು ಕಾಣುತ್ತಾರೆಂದರೆ, ಸರ್ವ ಅಂಧಕಾರವನ್ನು ದೂರ ಮಾಡಿದಂತೆ, ಅವರು ಏಕಾಂತದಲ್ಲಿ ಏಕಾಕಿಯಾಗಿ ಪ್ರವಜ್ರ್ಯಸುಖ ಪ್ರಾಪ್ತಿಯಲ್ಲಿ ಸುಖಿಯಾಗಿರುತ್ತಾರೆ.
3.            ಮಾನವರ ಮಧ್ಯೆ ಬಂದಿರುವ ಅನಾಸಕ್ತ, ಸ್ಥಿರ, ನಿಷ್ಕಪಟ ಬುದ್ಧರಲ್ಲಿ ಬದ್ಧಜೀವಿಗಳ ಪರವಾಗಿ ನಾನು ಅನೇಕ ಪ್ರಶ್ನೆಗಳನ್ನು ಕೇಳುತ್ತಾ ಬಂದಿದ್ದೇನೆ.
4-5. ವೃಕ್ಷ ಮೂಲದಲ್ಲಿ, ಸ್ಮಶಾಣಗಳಲ್ಲಿ, ಪರ್ವತಗಳಲ್ಲಿ ಅಥವಾ ಗುಹೆಗಳಲ್ಲಿ ಏಕಾಂತ ಚಿತ್ತದ ಅಭ್ಯಾಸ ಮಾಡುವ ಅನಾಸಕ್ತ ಭಿಕ್ಷುವು ವಿವಿಧ ಸ್ಥಳಗಳಲ್ಲಿ ಎಷ್ಟೋ ರೀತಿ ಭಯಾನಕ ಶಬ್ದಗಳು ಕೇಳುವವು, ಅವುಗಳಿಂದ ಭಿಕ್ಷುವು ಕಂಪಿತನಾಗದಿರಲಿ.
6.            ನಿಬ್ಬಾಣದ ಹಾದಿಯಲ್ಲಿ ಬರುವ ಎಷ್ಟೇ ಸಂಕಷ್ಟಗಳಿರಲಿ, ಅವನ್ನು ಭಿಕ್ಷುವು ಏಕಾಂತ ಶಯನಾಸನದಲ್ಲಿ ಇದ್ದು ಅವನ್ನು ದೂರಮಾಡಲಿ.
7.            ಸಂಯಮಿ ಭಿಕ್ಖುವಿನ ವಚನಗಳು ಹೇಗಿರುತ್ತವೆ? ಆತನ ಗೋಚರವು ಹೇಗಿರುತ್ತದೆ? ಮತ್ತು ಆತನ ಶೀಲಗಳು ಹೇಗಿರುತ್ತವೆ?
8.            ಏಕಾಂತ ಸೇವಿಯಾದ ಜ್ಞಾನಿ ಮತ್ತು ಸ್ಮೃತಿವಂತ ಭಿಕ್ಖುವು ಯಾವರೀತಿಯಲ್ಲಿ ಶಿಕ್ಷಣವನ್ನು ಗ್ರಹಿಸಿ ಅಕ್ಕಸಾಲಿಗನು ಬೆಳ್ಳಿಯನ್ನು ಶುದ್ದಿಮಾಡುವ ತೆರದಿ ತನ್ನ ಕಲ್ಮಶಗಳನ್ನು ದೂರೀಕರಿಸುತ್ತಾನೆ.
9.            ಭಗವಾನರು - ವಿರಕ್ತಚಿತ್ತನ, ಏಕಾಂತಜೀವಿಯೂ ಧಮರ್ಾನುಸಾರವಾಗಿ ಸಂಬೋಧಿಯ ಇಚ್ಚಿಕನಿಗೆ ಯಾವುದು ಅನುಕೂಲವೋ ಅವುಗಳ ಬಗ್ಗೆ ನಿಮಗೆ ಹೇಳುವೆನು.
10.          ಧೀರನು, ಸ್ಮೃತಿವಂತನು, ಸಂಯಮಗಳ ಆಚರಣೆ ಮಾಡುವಂತಹ ಭಿಕ್ಷುವು 5 ವಿಷಯಗಳಲ್ಲಿ ಭಯಭೀತನಾಗುವುದಿಲ್ಲ. ಅವೆಂದರೆ; ಸೊಳ್ಳೆಗಳು, ಸರ್ಪಗಳು, ಪ್ರಾಣಿಗಳ ಮತ್ತು ಮಾನವರ ಸ್ಪರ್ಶಗಳಲ್ಲಿ ಭಯಭೀತನಾಗಲಾರ.
11.          ಹಾಗೂ ಬೇರೆ ಧಮರ್ಾವಲಂಬಿಗಳ ವೇಷಗಳನ್ನು ಕಂಡು ಭಯಭೀತನಾಗಲಾರ, ಕುಶಲ ಶ್ರಮಿಯು ಬೇರೆ ಅಡಚಣೆಗಳನ್ನು ಎದುರಿಸಲಿ.
12.          ರೋಗ ನೋವುಗಳನ್ನು, ಹಸಿವು, ಶೀತೋಷ್ಣಗಳನ್ನು ಸಹಿಸಲಿ. ಅನೇಕ ವಿಧವಾದ ಪೀಡನೆಗಳನ್ನು ಆ ಅನಿಕೇತನ, ಪರಾಕ್ರಮಿಯು ದೃಢತೆಯಿಂದ ಎದುರಿಸಲಿ. ವೀರ್ಯವನ್ನು (ಪರಿಶ್ರಮ) ದೃಢೀಕರಿಸಲಿ.
13.          ಕಳ್ಳತನ ಮಾಡದಿರಲಿ, ಅಸತ್ಯ ಹೇಳದಿರಲಿ, ದುರ್ಬಲರಲ್ಲಿ ಮತ್ತು ಸಬಲರಲ್ಲಿ ಮೈತ್ರಿ ಇಡಲಿ. ಮನವು ವ್ಯಾಕುಲವಾದರೆ ಅದನ್ನು ಮಾರನ ಪಕ್ಷಪಾತಿ ಎಂದು ಬಗೆದು ಅದನ್ನು ದೂರೀಕರಿಸಲಿ.
14.          ಕ್ರೋಧದ, ಅಭಿಮಾನದ ವಶದಲ್ಲಿ ಸಿಲುಕದಿರಲಿ, ಅವುಗಳ ಮೂಲವನ್ನು ಕಿತ್ತು ಎಸೆಯಲಿ. ನಿಶ್ಚಯವಾಗಿ ಆತನು ಪ್ರಿಯ-ಅಪ್ರಿಯ ಎರಡನ್ನೂ ದೂರಮಾಡಲಿ.
15.          ಪ್ರಜ್ಞಾಪೂರ್ವಕವಾಗಿ ಕಲ್ಯಾಣರತನಾಗಲಿ, ಬಾಧೆಗಳೆಲ್ಲವನ್ನೂ ದೂರಮಾಡಲಿ, ಏಕಾಂತ ಸ್ಥಾನದಲ್ಲಿ ಅರತಿಯ (ಬೇಸರ) ಮೇಲೆ ವಿಜಯ ಸಾಧಿಸಿ, ನಾಲ್ಕು ವಿಲಾಪಗಳ ವಿಷಯಗಳಲ್ಲಿ ವಿಜಯಿಯಾಗಲಿ.
16.          ಏನನ್ನು ತಿನ್ನಲಿ, ಎಲ್ಲಿ ತಿನ್ನಲಿ, ನೆನ್ನೆ ದುಃಖದಿಂದ ನಿದ್ರಿಸಿದ್ದೆ, ಇಂದು ಎಲ್ಲಿ ನಿದ್ರಿಸಲಿ. ಇಂತಹ ವಿಲಾಪಿಸುವಂತಹ ಕ್ಷುದ್ರ ಯೋಚನೆಗಳನ್ನು ಅನಿಕೇತನ, ವಿನಯದಾರಿ ಭಿಕ್ಷುವು ಉಂಟುಮಾಡದಿರಲಿ.
17.          ಸಮಯದಲ್ಲಿ ಸಿಗುವಂತಹ ಅನ್ನ, ವಸ್ತ್ರಗಳಿಂದ ಆತನು ಸಂತೃಪ್ತನಾಗಲಿ, ಅವುಗಳಲ್ಲಿ ಸಂಯಮಿಯಾಗಲಿ, ಸಂಯಮದಿಂದ ಗ್ರಾಮಗಳಲ್ಲಿ ವಿಹರಿಸಲಿ, ದುಷ್ಟವಾಗಿ ನಡೆದುಕೊಂಡರೂ ಆತನು ಕಠೋರ ಮಾತು ಆಡದಿರಲಿ.
18.          ಕೆಳಕ್ಕೆ ಬಾಗಿರುವ ಚಕ್ಷುಗಳಿಂದ ಚಲಿಸಲಿ, ಸದಾ ಸಂಚಾರಿಯೂ ಆಗದಿರಲಿ, ಧ್ಯಾನದಲ್ಲಿ ಲೀನ ಮತ್ತು ಸದಾ ಜಾಗರೂಕನಾಗಲಿ, ಸಮಚಿತ್ತತೆ ಮತ್ತು ಏಕಾಗ್ರಚಿತ್ತದಿಂದ ಕೂಡಿರಲಿ, ಕಾಮ-ಭೋಗ ಸಂಬಂಧಿ ಯೋಚನೆ ಮತ್ತು ಚಂಚಲತೆಗಳನ್ನು ತ್ಯಾಗಮಾಡಲಿ.
19.          ಆಚಾರ್ಯ ಮುಂತಾದವರ ವಚನಗಳಲ್ಲಿ ದೋಷ ಕಂಡಬಂದರೆ ಸ್ಮೃತಿವಂತನು ಅವುಗಳನ್ನು ಸ್ವೀಕಾರ ಮಾಡಲಿ, ಸಹಚರರಲ್ಲಿ ಅಸೂಯೆ, ದ್ವೇಷ ತಾಳದಿರಲಿ. ಕಲ್ಯಾಣಕಾರಿ ಅನುಕೂಲಿಯಾದಂತಹ ಮಾತುಗಳನ್ನು ಆಡಲಿ, ಜನರಲ್ಲಿ ವಿವಾದ ಹುಟ್ಟಿಸುವಂತಹ ಮಾತುಗಳನ್ನು ಯೋಚಿಸುವುದು ಸಹಾ ಬೇಡ.
20.          ಸಂಸಾರದಲ್ಲಿರುವ ಐದು ರಜಗಳನ್ನು ಸ್ಮೃತಿವಂತನು ದೂರಮಾಡುವ ಅಭ್ಯಾಸ ಮಾಡಲಿ, ರೂಪ, ಶಬ್ದ, ಗಂಧ, ರಸ ಮತ್ತು ಸ್ಪರ್ಶಗಳ ರಾಗದಲ್ಲಿ ವಿಜಯಿಯಾಗಲಿ.
21.          ಈ ವಿಷಯಗಳಲ್ಲಿ ರಾಗ ತ್ಯಾಗಮಾಡಿ, ಸ್ಮೃತಿವಂತನಾಗಿ ಮತ್ತು ವಿರಕ್ತಚಿತ್ತನಾಗಿ ನಾನಾವಿಧದಲ್ಲಿ ಧಮರ್ಾನುಶೀಲನಾಗಿ, ಏಕಾಗ್ರಚಿತ್ತನಾಗಿ, ಅಂಧಕಾರವನ್ನು ನಾಶಮಾಡಲಿ.
ಇಲ್ಲಿಗೆ ಸಾರಿಪುತ್ತ ಸುತ್ತ ಮುಗಿಯಿತು.

ಅಟ್ಠಕ ವಗ್ಗ ಮುಗಿಯಿತು

attadanda sutta in kannada 15. ಅತ್ತದಂಡ ಸುತ್ತ

15. ಅತ್ತದಂಡ ಸುತ್ತ

(ಭಗವಾನರ ಗೃಹತ್ಯಾಗದ ಕಾರಣ)
1.            ತನ್ನ ದುಷ್ಕರ್ಮದಿಂದಲೇ ಭಯ ಉತ್ಪನ್ನವಾಗುತ್ತದೆ. ಕಲಹವಾಡುತ್ತಿರುವ ಜನರನ್ನು ನೋಡಿ, ನಾನು ಸಂವೇಗ (ವೈರಾಗ್ಯ)ದ ಮಾತನ್ನು ಆಡುವೆ. ಹೇಗೆ ನನ್ನಲ್ಲಿ ಸಂವೇಗಪ್ರಾಪ್ತಿ ಆಗಿತ್ತೆಂದು.
2.            ಹೇಗೆ ಅಲ್ಪ ಜಲದಲ್ಲಿ ಮತ್ಸ್ಯಗಳು ಒದ್ದಾಡುತ್ತಿರುತ್ತವೆಯೋ ಹಾಗೆಯೇ ಜನರು ಒದ್ದಾಡುವುದನ್ನು ಒಬ್ಬರ ವಿರುದ್ಧ ಮತ್ತೊಬ್ಬರಾಗಿರುವ ಜನರನ್ನು ನೋಡಿ ನನ್ನಲ್ಲಿ ಭಯ (ಅನುಕಂಪ) ವಾಯಿತು.
3.            ಸರ್ವಲೋಕವು ಅಸಾರವಾಗಿದೆ, ಸರ್ವ ದಿಕ್ಕುಗಳೂ ವಿಚಲಿತವಾಗಿದೆ. ನನಗೆ ಕಲ್ಯಾಣಕಾರಿ ಸ್ಥಾನ ಹುಡುಕುತ್ತಾ ನಾನು ಎಲ್ಲಿಯೂ ಆಪತ್ತಿನಿಂದ ಬರಿದಾದುದನ್ನು ಕಾಣಲಿಲ್ಲ.
4.            ಅಂತ್ಯದಲ್ಲಿ ಸರ್ವತ್ರವು ವಿರೋಧಭಾವವನ್ನು ಕಂಡು ನನಗೆ ವೈರಾಗ್ಯವಾಯಿತು. ಆಗ ನಾನು ನೋಡುವಿಕೆಯಲ್ಲಿ ದುದರ್ುಶ್ಯವನ್ನು ಹಾಗು ಹೃದಯದಲ್ಲಿ ಮುಳ್ಳನ್ನು ನೋಡಿದೆ.
5.            ಯಾವ ಮುಳ್ಳಿನಿಂದ ಚುಚ್ಚಿಸಿಕೊಂಡ ವ್ಯಕ್ತಿ ಹೇಗೆ ಸರ್ವ ದಿಕ್ಕುಗಳಿಗೂ ಓಡುವನೋ, ಅದೇ ಮುಳ್ಳನ್ನು ತೆಗೆದನಂತರ ಆತನು ಓಡುವುದೂ ಇಲ್ಲ ಮತ್ತು ಮುಳುಗುವುದೂ ಇಲ್ಲ.
6.            ಈ ಲೋಕದಲ್ಲಿ ಆಸಕ್ತಿಜನಕವಾದ ಬಹಳಷ್ಟು ಶಿಕ್ಷಣ ನೀಡಲಾಗುತ್ತದೆ. ಅದರಲ್ಲಿ ಅಂಟದಿರಲಿ. ಸರ್ವ ಕಾಮನೆಗಳ ಬಗ್ಗೆ ಉಪೇಕ್ಷೆ ತಾಳಿ ತನ್ನ ಮುಕ್ತಿಗಾಗಿ ಅಭ್ಯಾಸ ಮಾಡಲಿ.
7.            ಮುನಿಯು ಸತ್ಯವಾದಿಯಾಗಲಿ, ಹಠಮಾರಿಯಾಗದಿರಲಿ, ಮಾಯಾವಿಯಾಗದಿರಲಿ, ಚಾಡಿ ಹೇಳುವವನು ಆಗದಿರಲಿ, ಕ್ರೋಧ, ಕೋಭ, ಪಾಪ ಹಾಗು ಸ್ವಾರ್ಥ ರಹಿತನಾಗಿ ವಾಸಿಸಲಿ.
8.            ನಿಬ್ಬಾಣ ಬಯಸುವಂತಹ ವ್ಯಕ್ತಿ ನಿದ್ರೆ, ಜಡತೆ ಹಾಗು ಆಲಸ್ಯವನ್ನು ಜಯಿಸಲಿ. ಅಜಾಗರೂಕನಾಗದಿರಲಿ, ಅಭಿಮಾನದಲ್ಲಿ ಬೀಳದಿರಲಿ.
9.            ಅಸತ್ಯದ ಭಾಷಣ ಮಾಡದಿರಲಿ, ದೇಹದ ಬಗ್ಗೆ ಸ್ನೇಹ ತಾಳದಿರಲಿ, ಅಹಂ ಅನ್ನು ತ್ಯಜಿಸಿಲಿ, ಹಿಂಸೆಯಿಂದ ವಿರತನಾಗಿ ಜೀವಿಸಲಿ.
10.          ಹಳೆಯ ಕಾರ್ಯವನ್ನು ಅಭಿನಂದನೆ ಮಾಡದಿರಲಿ, ಹೊಸದನ್ನು ಬಯಸದಿರಲಿ, ಕಳೆದುಹೋದುದನ್ನು ಚಿಂತೆ ಮಾಡದಿರಿಲಿ ಮತ್ತು ತೃಷ್ಣೆಯಲ್ಲಿ ಲಿಪ್ತನಾಗದಿರಲಿ.
11.          ನಾನು ಲೋಭವನ್ನು ಮಹಾ ಪ್ರವಾಹ ಎನ್ನುತ್ತೇನೆ. ಆಸಕ್ತಿಗೆ ಹರಟೆ ಎನ್ನುತ್ತೇನೆ. ಅವಲಂಬನೆ ಕಂಪನವಾಗಿದೆ ಮತ್ತು ಕಾಮಭೋಗವು ದುಷ್ಕರವಾದ ಕೆಸರಾಗಿದೆ.
12.          ಪರಮಶ್ರೇಷ್ಠ ಮುನಿಯು ಸತ್ಯದಿಂದ ಅಲುಗಾಡದೆ ನಿಬ್ಬಾಣರೂಪಿ ಸ್ಥಳದಲ್ಲಿ ಸ್ಥಿತರಾಗಿರುವರು. ಸರ್ವ ತ್ಯಾಗಿಯಾದ ಅವರು ಅವಶ್ಯಕವಾಗಿ ಶಾಂತರೆಂದು ಕರೆಯಲ್ಪಡುವರು.
13.          ಅವರೇ ವಿದ್ವಾನರಾಗಿರುವರು, ಅವರೇ ಜ್ಞಾನಿಯಾಗಿರುವರು, ಧಮ್ಮವನ್ನು ಅರಿತು ಅನಾಸಕ್ತರಾಗಿ ಯಾವುದನ್ನು ಬಯಸದೆ ಸಮ್ಯಕ್ ರೂಪದಿಂದ ಲೋಕದಲ್ಲಿ ಸಂಚರಿಸುತ್ತಿರುವರು.
14.          ಲೋಕದಲ್ಲಿ ದುಸ್ತರವಾದ ಆಸಕ್ತಿಯಾದ ಕಾಮಭೋಗಗಳನ್ನು ಯಾರು ತ್ಯಾಗ ಮಾಡಿರುವನೋ, ಆತನು ಇಂತಹ ಧಾರೆಯನ್ನು ಕತ್ತರಿಸಿದ್ದಾನೆ. ಆ ಬಂಧನರಹಿತನೂ ಶೋಕಪಡುವುದಿಲ್ಲ ಹಾಗು ಚಿಂತೆಯನ್ನು ಪಡುವುದಿಲ್ಲ.
15.          ಯಾವುದು ಮೊದಲಿನ ಆಸಕ್ತಿಯಾಗಿದೆಯೋ, ಅದನ್ನು ತ್ಯಜಿಸಲಿ. ಹಿಂದೆ ಯಾವುದನ್ನು ಗ್ರಹಣೆ ಮಾಡದಿರಲಿ. ಮಧ್ಯದಲ್ಲೂ ಗ್ರಹಣ ಮಾಡದೆ ಉಪಶಾಂತನಾಗಿ ಜೀವಿಸಲಿ.
16.          ಯಾರಿಗೆ ದೇಹ ಮತ್ತು ಮನಸ್ಸಿನ ಬಗ್ಗೆ ಸರ್ವಸ್ವವು ಮಮತೆಯಿಲ್ಲವೋ, ಯಾರು ಇಲ್ಲದುದಕ್ಕಾಗಿ ಶೋಕಪಡುವುದಿಲ್ಲವೋ ಆತನು ಲೋಕದಲ್ಲಿ ಜನ್ಮಗ್ರಹಣ ಮಾಡುವುದಿಲ್ಲ.
17.          ಯಾರಿಗೆ ಯಾವುದೇ ವಸ್ತುವಿನ ವಿಷಯದಲ್ಲಿ ಇದು ನನ್ನದು ಅಥವಾ ಇದು ಪರರದು ಹೀಗೆ ಆಗುವುದಿಲ್ಲವೋ, ಮಮತ್ವದಲ್ಲಿ ಬೀಳದಿರುವವನು ನನ್ನದಲ್ಲ ಎಂದು ಅರಿತು ಶೋಕಪಡುವುದಿಲ್ಲ.
18.          ಅನಿಷ್ಠುರತೆ, ನಿಲರ್ೊಭತೆ, ವಿತೃಷ್ಣೆ, ಸರ್ವರ್ತ ಸಮಚಿತ್ತತೆ ಇದರಲ್ಲಿರುವವನು, ಕೇಳಿದಾಗ ನಿರ್ಭಯದ ಸುಪರಿಣಾಮವನ್ನು ತಿಳಿಸುತ್ತಾನೆ.
19.          ತೃಷ್ಣಾರಹಿತನಾದ ವಿಜ್ಞನಿಗೆ ಯಾವುದೇ ಸಂಖಾರವಿರುವುದಿಲ್ಲ. ವಿರತನಾಗಿ ಆತನು ಸರ್ವತ್ರ ಕ್ಷೇಮವನ್ನು ಕಾಣುತ್ತಾನೆ.
20.          ಮುನಿಯು ಸಮಾನರಲ್ಲಿ, ನೀಚರಲ್ಲಿ ಅಥವಾ ಶ್ರೇಷ್ಠರಲ್ಲಿ ತನ್ನನ್ನು ಹೋಲಿಸಿಕೊಳ್ಳಲಾರ. ಶಾಂತ, ಸ್ವಾರ್ಥರಹಿತ ಆತನು ಯಾವುದೋ ಗ್ರಹಣೆಯನ್ನು ಮಾಡುವುದಿಲ್ಲ ಅಥವಾ ಬಿಡುವುದು ಇಲ್ಲ.

ಇಲ್ಲಿಗೆ ಆತ್ತದಂಡ ಸುತ್ತ ಮುಗಿಯಿತು.

tuvataka sutta in kannada 14. ತುವಟಕ ಸುತ್ತ

14. ತುವಟಕ ಸುತ್ತ
(ಭಿಕ್ಷು ಚರ್ಯಾ)

1.            ದೇವತಾ - ಆದಿತ್ಯಬಂಧು! ಮಹಾಋಷಿ! ನಾನು ತಮ್ಮಲ್ಲಿ ವಿವೇಕ ಹಾಗು ಶಾಂತಿಪದದ ವಿಷಯದಲ್ಲಿ ಕೇಳುತ್ತೇನೆ. ಭಿಕ್ಷು ಹೀಗೆ ಲೋಕದಲ್ಲಿ ಯಾವುದರಲ್ಲಿಯೂ ಆಸಕ್ತಿ ತಾಳದೆ ಹೇಗೆ ನೋಡುತ್ತಾ ಶಾಂತನಾಗುತ್ತಾನೆ.
2.            ಭಗವಾನರು - ಸರ್ವ ಪ್ರಪಂಚದ ಬೇರು ಅಹಂಕಾರ ಎಂದು ಅರಿತು ಅದರ ಅಂತ್ಯಮಾಡಿ, ಯಾವುದೆಲ್ಲವೂ ತೃಷ್ಣೆಗಳು ಆಂತರ್ಯದಲ್ಲಿದೆಯೋ, ಅದರಲ್ಲಿ ರಹಿತನಾಗಲು ಸದಾ ಜಾಗರೂಕನಾಗಿರುವಂತೆ ಅಭ್ಯಾಸಿಸು.
3.            ಆಂತರ್ಯದಲ್ಲಾಗಲಿ ಅಥವಾ ಬಾಹ್ಯದಲ್ಲಾಗಲಿ ಯಾವ ಧರ್ಮವನ್ನು ಅರಿತಿರುವಿಯೋ, ಅದರಿಂದ ಅಭಿಮಾನ ಮೂಡದಿರಲಿ. ಸಂತರು ಅಂತಹದಕ್ಕೆ ಶಾಂತಿ ಎನ್ನಲಾರರು.
4.            ಆ ಕಾರಣದಿಂದ ಬೇರೆಯವರನ್ನು ಹೋಲಿಸಿ ತನ್ನನ್ನು ಶ್ರೇಷ್ಠನೆಂದು ಆಗಲಿ, ಸಮಾನ ಅಥವಾ ನೀಚನೆಂದು ಆಗಲಿ ಪರಿಗಣಿಸದಿರು. ಅನೇಕ ಪ್ರಕಾರದ ಸ್ಪರ್ಶವನ್ನು ಅನುಭವಿಸಿದರೂ ತನ್ನನ್ನು ವಿಕಲ್ಪಗಳಿಗೆ ಹಾಕದಿರಲಿ.
5.            ತನ್ನ ಆಂತರ್ಯದಲ್ಲಿ ಶಾಂತನಾಗಿರಲಿ, ಭಿಕ್ಷು ಬೇರೆಯ ಉಪಾಯದಿಂದ ಶಾಂತಿಯನ್ನು (ಬ್ರಹ್ಮಚರ್ಯ) ಅನ್ವೇಷಿಸದಿರಲಿ. ಯಾರು ಆಂತರ್ಯದಲ್ಲಿ ಶಾಂತನಾಗಿರುವನೋ, ಆತನಲ್ಲಿ ತನ್ನತನವೇ ಇಲ್ಲ ಎಂದ ಬಳಿಕ ಪರತ್ವವೆಲ್ಲಿ?
6.            ಹೇಗೆ ಸಮುದ್ರ ಮಧ್ಯೆಯಲ್ಲಿ ಅಲೆಯು ಏಳಲಾರದೋ, ಸ್ಥಿರತೆ ಸ್ಥಾಪಿತವಾಗಿರುತ್ತದೆಯೋ, ಹಾಗೆಯೇ ಸ್ಥಿರತೆ, ಚಂಚಲರಹಿತತೆಯುಳ್ಳ ಭಿಕ್ಷು ತೃಷ್ಣೆಯನ್ನು ಮಾಡದಿರಲಿ.
7.            ದೇವತಾ - ತೆರೆದ ನಯನವುಳ್ಳವರೇ, ತಾವು ಬಂಧನಗಳನ್ನು ದೂರೀಕರಿಸಲು ಸಾಕ್ಷಾತ್ ಧಮ್ಮವನ್ನು ತಿಳಿಸಿದ್ದೀರಿ. ತಮ್ಮ ಭದ್ರ ಪ್ರತಿಪದವನ್ನು ತಿಳಿಸಿ, ಅದರಲ್ಲಿ ಪಾತಿಮೋಕ್ಖ ಮತ್ತು ಸಮಾಧಿಯಿದೆ.
8.            ಭಗವಾನರು - ಚಕ್ಷುವಿನ ವಿಷಯದಲ್ಲಿ ಲೋಲುಪನಾಗದಿರು, ಗ್ರಾಮ್ಯ ಕಥನಗಳಿಂದ ಕಿವಿಯನ್ನು ಮುಚ್ಚಿಕೋ, ಸ್ವಾದದಲ್ಲಿ ಲೋಲುಪನಾಗದಿರು ಮತ್ತು ಲೋಕದಲ್ಲಿ ಯಾವುದನ್ನೂ ಸ್ವೀಕರಿಸಬೇಡ.
9.            ದುಃಖದ ಸ್ಪರ್ಶ ಆದಾಗಲೂ ಸಹಾ ಭಿಕ್ಷು ವಿಲಾಪಿಸದಿರಲಿ, ಭವದ, ತೃಷ್ಣೆ ಮಾಡದಿರಲಿ ಮತ್ತು ಭಯಾನಕತೆಯಿಂದ ಕಂಪಿತನಾಗದಿರಲಿ.
10.          ಅನ್ನ ಅಥವಾ ಪೇಯ, ಖಾದ್ಯ ಅಥವಾ ವಸ್ತ್ರಗಳು ಸಿಕ್ಕಿದಾಗ ಅದರ ಸಂಗ್ರಹ ಮಾಡದಿರಲಿ. ಅದೆಲ್ಲವೂ ಸಿಗದೆ ಇದ್ದಾಗ ಚಿಂತೆ ಮಾಡದಿರಲಿ.
11.          ಧ್ಯಾನಿಯಾಗಲಿ, ತಿರುಗಾಡುವವನು ಆಗದಿರಲಿ, ಸಂದೇಹ ದೂರೀಕರಿಸಲಿ, ಜಾಗರೂಕತೆ ತಪ್ಪದಿರಲಿ, ಭಿಕ್ಷುವು ಶಬ್ದ ಉಂಟುಮಾಡದ ಆಸನಗಳನ್ನು ಮತ್ತು ಶಯ್ಯಗಳನ್ನು ಬಳಸಲಿ.
12.          ಅತಿ ನಿಷ್ಠಾವಂತನಾಗಿರಲಿ, ಪ್ರಯತ್ನಶೀಲನಾಗಲಿ ಹಾಗು ಜಾಗರೂಕನಾಗಲಿ, ತೂಕಡಿಕೆ, ಮಾಯಾವಿತನ, ನಗು, ಹಾಸ್ಯ, ಆಟ, ಮೈಥುನ ಮತ್ತು ಶೃಂಗಾರವನ್ನು ತ್ಯಜಿಸಲಿ.
13.          ತಂತ್ರ-ಮಂತ್ರ ಸ್ವಪ್ನವಿಚಾರ, ಲಕ್ಷಣ ನೋಡುವಿಕೆ ಮತ್ತು ನಕ್ಷತ್ರಗಳ ವಿಶ್ವಾಸವನ್ನು ತ್ಯಜಿಸಲಿ, ಪಶುಪಕ್ಷಿಗಳ ಧ್ವನಿ ನೋಡಿ ಅರ್ಥ ಹೇಳುವಿಕೆ, ಗರ್ಭಧಾರಣೆ ಮಾಡಿಸುವಿಕೆ, ಚಿಕಿತ್ಸೆ ಮಾಡಿಸುವಿಕೆ - ಶ್ರದ್ಧೆಯುಳ್ಳ ಭಿಕ್ಷುವು ಇವುಗಳ ಅಭ್ಯಾಸ ಮಾಡದಿರಲಿ.
14.          ಭಿಕ್ಷುವು ನಿಂದೆಯಿಂದ ವಿಚಲಿತನಾಗದಿರಲಿ, ಪ್ರಶಂಸೆಯಲ್ಲಿ ಪ್ರಫುಲ್ಲಿತನಾಗದಿರಲಿ ಮತ್ತು ಲೋಭ, ಸ್ವಾರ್ಥ, ಕ್ರೋಧ ಹಾಗು ಚಾಡಿತನವನ್ನು ತ್ಯಜಿಸಲಿ.
15.          ಭಿಕ್ಷುವು ಕ್ರಯವಿಕ್ರಯಗಳಲ್ಲಿ ತೊಡಗದಿರಲಿ, ಎಲ್ಲಿಯೂ ಯಾರಿಗೂ ದೂಷಿಸದಿರಲಿ, ಗ್ರಾಮದಲ್ಲಿ ಯಾರಿಗೂ ಬಯ್ಯದಿರಲಿ ಮತ್ತು ಲಾಭದ ಇಚ್ಛೆಯಿಂದ ಜನರನ್ನು ಆಕಷರ್ಿಸದಿರಲಿ (ಮಾತನಾಡದಿರಲಿ).
16.          ಭಿಕ್ಷು ಸ್ವ-ಪ್ರಶಂಸೆಯುಳ್ಳವನಾಗದಿರಲಿ, ಸ್ವಾರ್ಥದ ಮಾತು ಆಡದಿರಲಿ, ಉದ್ದಂಡನಾಗದಿರಲಿ (ಹಠಮಾರಿ) ಮತ್ತು ಜಗಳಗಳ ಮಾತು ಆಡದಿರಲಿ.
17.          ಅಸತ್ಯ ಭಾಷಣ ಮಾಡದಿರಲಿ, ಅರಿತು ಸಹಾ ಮೋಸ ಮಾಡದಿರಲಿ ಮತ್ತು ಜೀವಿಸುವಿಕೆಯಲ್ಲಾಗಲಿ, ಪ್ರಜ್ಞೆಯಲ್ಲಿ ಆಗಲಿ, ಶೀಲವ್ರತಗಳಲ್ಲಿ ಆಗಲಿ, ಪರರಿಗೆ ಅನಾಧರಣೆ ಮಾಡದಿರಲಿ.
18.          ಬಹುಭಾಷಿ ಶ್ರಮಣರ ದೋಷಯುಕ್ತ ಮಾತುಗಳನ್ನು ಕೇಳಿ ಅದಕ್ಕೆ ಕಠೋರವಾದ ಪ್ರತಿನುಡಿ ಆಡದಿರಲಿ, ಸಂತರು ಪ್ರತಿ ಹಿಂಸಕರಾಗಿರುವುದಿಲ್ಲ.
19.          ಈ ಧಮ್ಮವನ್ನು ಅರಿತು ವಿವೇಕಿ ಭಿಕ್ಷು ಸದಾ ಜಾಗರೂಕನಾಗಿರಲು ಅಭ್ಯಾಸಿಸಲಿ, ನಿಬ್ಬಾಣವನ್ನೇ ಶಾಂತಿ ಎಂದರಿತು ಗೌತಮರ ಶಿಕ್ಷಣದಲ್ಲಿ ಜಾಗರೂಕತೆ ತಪ್ಪದಿರಲಿ.
20.          ಆ ವಿಜಯಿಯು ಅಜೇಯವಾದ ಧಮ್ಮವನ್ನು ಸಾಕ್ಷಾತ್ ಅರಿತಿರುವರು. ಆದ್ದರಿಂದ ಜಾಗರೂಕನಾಗಿ ಆ ಭಗವಾನರ ಶಿಕ್ಷಣವನ್ನು ಸಮ್ಮಾನಪೂರ್ವಕ ಅಭ್ಯಾಸ ಮಾಡಲಿ.
ಇಲ್ಲಿಗೆ ತುವಟಕ ಸುತ್ತ ಮುಗಿಯಿತು.


mahaaviyooha sutta in kannada 13. ಮಹಾವಿಯೂಹ ಸುತ್ತ

13. ಮಹಾವಿಯೂಹ ಸುತ್ತ
(ದೃಷ್ಟಿವಾದದಿಂದ ಶುದ್ದಿಯಿಲ್ಲ)

1.            ದೇವತಾ - ಯಾರಾದರೂ ದೃಷ್ಟಿಗಳನ್ನು ಗ್ರಹಣೆ ಮಾಡಿ ಇದೇ ಸತ್ಯ ಎಂದು ವಿವಾದ ಮಾಡುವರೋ ಅವರೆಲ್ಲರೂ ನಿಂದಿತರಾಗುತ್ತಾರೆಯೇ ಅಥವಾ ಅವರಲ್ಲಿ ಕೆಲವರು ಪ್ರಶಂಸತೆಯನ್ನು ಸಹಾ ಗಳಿಸುತ್ತಾರೆಯೇ?
2.            ಭಗವಾನ್ - ಇದು ಅಲ್ಪವಾಗಿದೆ, ಶಾಂತಿಗಾಗಿ ಪರ್ಯಪ್ತವಾಗಿಲ್ಲ. ನಾನು ವಿವಾದದಲ್ಲಿ ಎರಡೇ ಫಲ ಎಂದು ಹೇಳುತ್ತೇನೆ (ನಿಂದೆ, ಸ್ತುತಿ). ಆದರೆ ನಿಬ್ಬಾಣವನ್ನು ನಿವರ್ಿವಾದ ಭೂಮಿ ಮತ್ತು ಕಲ್ಯಾಣಕರ ಎಂದು ಅರಿತು ವಿವಾದದಲ್ಲಿ ಬೀಳದಿರಲಿ.
3.            ಯಾವ ಸಾಮಾನ್ಯ ಜನರು ನೀಡುವಂತಹ ಮಾನ್ಯತೆಗಳಿವೆಯೋ ಅದರಲ್ಲಿ ಬುದ್ಧಿವಂತ ಬೀಳುವುದಿಲ್ಲ. ದೃಷ್ಟಿ ಹಾಗು ಶ್ರುತಿಯನ್ನು ಗ್ರಹಣ ಮಾಡದವನ ಆಸಕ್ತರಹಿತನಾದ ಆತನು ಏನನ್ನುತ್ತಾನೆ, ಯಾವ ಗ್ರಹಣ ಮಾಡಬಲ್ಲ?
4.            ಶೀಲಗಳನ್ನು ಉತ್ತಮವೆಂದು ಭಾವಿಸುವವರು ಸಂಯಮದಿಂದ ಶುದ್ಧಿ ಎಂದು ಹೇಳುವರು. ಅವರು ವ್ರತಗಳನ್ನು ಗ್ರಹಣ ಮಾಡಿ ತಿಳಿಸುವುದೇನೆಂದರೆ ಆತನ ಶುದ್ಧಿಯನ್ನು ಇಲ್ಲಿಯೇ ಕಲಿಯಲಿ, ಭವದಲ್ಲಿ ಬಿದ್ದಿರುವ ಜನರು ತಮ್ಮನ್ನು ಕುಶಲರೆಂದು ಹೇಳುವರು.
5.            ಒಂದುವೇಳೆ ಆತನು ಶೀಲವ್ರತದಿಂದ ಚ್ಯುತಿ ಹೊಂದಿದರೆ ತನ್ನ ಕರ್ಮವು ಹಾಳಾಯಿತಲ್ಲ ಎಂದು ಕಂಪಿತನಾಗುತ್ತಾನೆ. ಅರ್ಥದಿಂದ ಬೇರೆ ಹೊಂದಿದ ಅಥವಾ ಮನೆಯಿಂದ ಪ್ರವಾಸ ಹೊರಟಿರುವವನ ರೀತಿ ಶೋಕಪಡುತ್ತಾನೆ ಮತ್ತು ಇಲ್ಲಿ ಶುದ್ಧಿ ಬಯಸುವನು.
6.            ಸರ್ವಶೀಲವ್ರತ ಹಾಗು ಸದೋಷ-ನಿದರ್ೊಷ ಕರ್ಮಗಳನ್ನು ತ್ಯಜಿಸಿ, ಶುದ್ಧಿ ಮತ್ತು ಅಶುದ್ಧಿಯ ಕಾಮನೆ ಮಾಡದೆ ಶಾಂತಿಗಾಗಿ ವಿರಕ್ತನಾಗಿ ವಾಸಿಸಲಿ.
7.            ಕೆಲವರಂತು ತಪದಿಂದ ಅಥವಾ ಅಸಹ್ಯ ಕರ್ಮದಿಂದ ಅಥವಾ ದೃಷ್ಟಿಯಿಂದ, ಶ್ರುತಿಯಿಂದ, ಅಥವಾ ವಿಚಾರತೆಯಿಂದ ಶುದ್ಧಿ ಎನ್ನುತ್ತಾ ಪುನರ್ಜನ್ಮಕ್ಕೆ ಕಾರಣವಾದ ತೃಷ್ಣೆಯನ್ನು ತ್ಯಜಿಸದೆಯೇ ತಮ್ಮನ್ನು ಉಚ್ಛಸ್ತರದಿಂದ ಶುದ್ಧರೆಂದು ಹೇಳಿಕೊಳ್ಳುವರು.
8.            ಯಾರು ಕಾಮನೆಯನ್ನು ಮಾಡುವರೋ, ಅವರಲ್ಲಿಯೇ ತೃಷ್ಣೆಯಿರುತ್ತದೆ. ಯಾರು ಉಪಾಯವನ್ನು ಮಾಡುವನೋ ಆತನೇ ಕಂಪಿಸುತ್ತಾನೆ. ಯಾರಿಗೆ ಮೃತ್ಯು ಮತ್ತು ಜನ್ಮವಿಲ್ಲವೋ ಆತನು ಯಾತಕ್ಕಾಗಿ ಮತ್ತು ಎಲ್ಲಿ ಕಂಪಿತನಾಗುತ್ತಾನೆ ಮತ್ತು ಯಾವ ತೃಷ್ಣೆಯನ್ನು ಪಡುತ್ತಾನೆ?
9.            ದೇವತಾ - ಯಾವುದನ್ನು ಕೆಲವರು ಉತ್ತಮ ಧರ್ಮವೆಂದು ಹೇಳುವರೋ ಅದನ್ನೇ ಪರರು ಹೀನವೆಂದು ಹೇಳುವರು. ಇದರಲ್ಲಿ ಯಾವುದು ಸತ್ಯವಾಗಿದೆ? ಇವರೆಲ್ಲರೂ ತಮ್ಮನ್ನು ಕುಶಲರೆಂದು ಹೇಳಿಕೊಳ್ಳುವರು.
10.          ಭಗವಾನರು - ತನ್ನ ಧಮ್ಮವನ್ನು ಪರಿಪೂರ್ಣ ಎಂದೆನ್ನುತ್ತಾ ಮತ್ತು ಪರರ ಧರ್ಮವನ್ನು ಹೀನವೆನ್ನುತ್ತಾರೆ. ಈ ಪ್ರಕಾರದ ಭಿನ್ನಮತದವರು ವಿವಾದ ಮಾಡುತ್ತಾರೆ ಮತ್ತು ತಮ್ಮ ಧಾರಣೆಯನ್ನು ಸತ್ಯವೆನ್ನುತ್ತಾರೆ.
11.          ಒಂದುವೇಳೆ ಪರರ ನಿಂದೆಯಿಂದಲೇ ಹೀನನಾಗುವ ಹಾಗಿದ್ದರೆ, ಧರ್ಮದಲ್ಲಿ ಯಾರು ಶ್ರೇಷ್ಠರಾಗುತ್ತಿರಲಿಲ್ಲ. ಎಲ್ಲರೂ ಪರರನ್ನು ಹೀನ ಎಂದು ಹೇಳುತ್ತಾನೆ ಮತ್ತು ತನ್ನನ್ನು ಹೀನನಲ್ಲ ಎಂದು ಹೇಳುತ್ತಾರೆ.
12.          ಜನರು ಯಾವರೀತಿ ತನ್ನ ಧಮ್ಮ ಮಾರ್ಗವನ್ನು ಪ್ರಶಂಸೆ ಮಾಡುವರೋ, ಅದೇರೀತಿ ಅದರ ಪೂಜೆ ಸಹಾ ಮಾಡುವರು. ಒಂದುವೇಳೆ ಸರ್ವರ ಕಥನ ಹಾಗೇ ಇದ್ದರೆ ಅವರ ಶುದ್ಧಿಯು ತಮ್ಮ ತಮ್ಮಲ್ಲೇ (ಬೇರೆ ಬೇರೆಯಾಗಿ) ಆಗುತ್ತಿತ್ತು.
13.          ಬ್ರಾಹ್ಮಣನು ಬೇರೆಯ ಆಶ್ರಯದಲ್ಲಿರಲಾರ, ಆತನು ಧಾಮರ್ಿಕ ದೃಷ್ಟಿಯಲ್ಲಿ ದೃಢಗ್ರಾಹಿ ಇರುವುದಿಲ್ಲ. ಅದರಿಂದಲೇ ವಿವಾದದಿಂದ ದಾಟಿದ್ದಾನೆ. ಆತನು ಪರರ ಧರ್ಮವನ್ನು ಶ್ರೇಷ್ಠ ಎಂದು ಒಪ್ಪಲಾರ.
14.          ನಾನು ಹಾಗೆಯೇ ಅರಿಯುತ್ತಿದ್ದೇನೆ ಮತ್ತು ನೋಡುತ್ತಿದ್ದೇನೆ ಈ ರೀತಿಯಾಗಿ ಕೆಲವರು ದೃಷ್ಟಿಯಿಂದ ಶುದ್ಧಿ ಹೇಳುವರು. ಒಂದುವೇಳೆ ಅವರು ನೋಡಿದ್ದಾದರೂ ಏನು? ಅವರು ಯಥಾರ್ಥ ಕ್ರಮವನ್ನು ಬಿಟ್ಟು ಬೇರೆ ಕ್ರಮದಿಂದ ಶುದ್ಧಿ ಹೇಳುವರು.
15.          ನೋಡುವ ಮನುಷ್ಯ ದೇಹ-ಮನಸ್ಸನ್ನೇ ನೋಡುತ್ತಾನೆ. ನೋಡುತ್ತಾ ಅದನ್ನು ಒಪ್ಪುತ್ತಾನೆ. ಆತನು ಸಾಕಷ್ಟು ಹೆಚ್ಚು ಅಥವ ಕಡಿಮೆಯೇ ನೋಡಲಿ, ಕುಶಲರು ಇದರಿಂದಲೇ (ಇಷ್ಟರಿಂದಲೇ) ಶುದ್ಧಿ ಎಂದು ಹೇಳಲಾರರು.
16.          ಯಾರು ಯಾವುದಾದರು ವಿಷಯದಲ್ಲಿ ಆಸಕ್ತನೋ, ಆತನು ಶುದ್ಧಿಪ್ರಾಪ್ತಿ ಆಗಲಾರ. ಏಕೆಂದರೆ ಆತನು ಯಾವುದೇ ದೃಷ್ಟಿಗೆ ಒಪ್ಪುತ್ತಾನೆ. ಮನುಷ್ಯ ಯಾವುದರಲ್ಲಿ ಆಸಕ್ತನಾಗುವನೋ ಅದನ್ನೇ ಶುಭ ಎಂದು ಹೇಳುತ್ತಾನೆ, ಅದನ್ನೇ ಶುದ್ಧಿ ಎಂದು ಹೇಳುತ್ತಾನೆ ಮತ್ತು ಅದನ್ನೇ ಸತ್ಯವೆಂದು ನಂಬುತ್ತಾನೆ.
17.          ಬ್ರಾಹ್ಮಣನು ವಿವೇಕಿಯಾಗಿ ತೃಷ್ಣಾದೃಷ್ಟಿಯಲ್ಲಿ ಬೀಳಲಾರ. ಆತನು ದೃಷ್ಟಿಯ ಅನುಸರಣೆ ಮಾಡಲಾರ ಮತ್ತು ಜ್ಞಾನಬಂಧು (ಪ್ರಾಪಂಚಿಕ) ಆಗಲಾರ. ಆತನು ಸಾಮಾನ್ಯ ಜನರ ಧಾರಣೆಯನ್ನು ಮತ್ತು ಯಾವುದನ್ನು ಪರವ್ಯಕ್ತಿಗಳಲ್ಲಿ ಗ್ರಹಣ ಮಾಡಿರುವರೋ ಅದನ್ನೆಲ್ಲಾ ಅರಿತು ಅದರಿಂದ ಉಪೇಕ್ಷೆ (ತ್ಯಜಿಸಿ ಶಾಂತನಾಗುತ್ತಾನೆ) ಯಿಂದ ಇರುತ್ತಾನೆ.
18.          ಮುನಿಯು ಈ ಸಂಸಾರದಲ್ಲಿ ಬಂಧನಗಳನ್ನು ಕತ್ತರಿಸಿ ವಿವಾದ ಮಾಡುವವರ ಪಕ್ಷಧರನಾಗುವುದಿಲ್ಲ. ಆತನು ಅಶಾಂತರಲ್ಲಿ ಶಾಂತನಾಗಿ ಅನ್ಯರು ಯಾವುದನ್ನು ಗ್ರಹಣ ಮಾಡುವರೋ ಅದರ ಉಪೇಕ್ಷೆ ಮಾಡುತ್ತಾನೆ.
19.          ಯಾರು ಹಿಂದಿನ (ಆಸವ) ಕಶ್ಮಲಗಳನ್ನು ತೊರೆದು, ಹೊಸ ಕಶ್ಮಲ (ಆಸವ) ಗಳನ್ನು ಉತ್ಪತ್ತಿ ಮಾಡಲಾರನೋ, ಇಚ್ಛೆರಹಿತನೊ, ವಾದದಲ್ಲಿ ಅನಾಸಕ್ತನೋ ದೃಷ್ಟಿಗಳಲ್ಲಿ ಪೂರ್ಣವಾಗಿ ಮುಕ್ತನಾದ ಆ ಧೀರನು ಸಂಸಾರದಲ್ಲಿ ಲಿಪ್ತನಾಗಲಾರ ಮತ್ತು ಆತನು ತನ್ನ ನಿಂದೆಯನ್ನು ಮಾಡಿಕೊಳ್ಳಲಾರ.
20.          ಯಾವುದೆಲ್ಲವೂ ದೃಷ್ಟಿ, ಶ್ರುತಿ ಅಥವಾ ವಿಚಾರತೆಯಿದೆಯೋ, ಅದೆಲ್ಲದರಿಂದ ಆತನು ವಿಜಯಿಯಾಗಿದ್ದಾನೆ. ಆತನು ಪೂರ್ಣ ರೂಪದಿಂದ ಮುಕ್ತನು, ಭಾರಯುಕ್ತ ಪ್ರಜ್ಞಾವಂತನು ಹಾಗು ಉಪರತಿ ಹಾಗು ತೃಷ್ಣೆಯಿಂದ ರಹಿತನಾಗಿದ್ದಾನೆ.

ಇಲ್ಲಿಗೆ ಮಹಾವಿಯೂಹ ಸುತ್ತ ಮುಗಿಯಿತು.

choolaviyooha sutta in kannada 12. ಚೂಳವಿಯೂಹ ಸುತ್ತ

12. ಚೂಳವಿಯೂಹ ಸುತ್ತ
(ಸತ್ಯ ಒಂದೇ ಆಗಿದೆ. ವಿವಾದದಲ್ಲಿ ಬೀಳುವುದು ವ್ಯರ್ಥವಾಗಿದೆ)

1.            ದೇವತಾ - ಜನರು ತಮ್ಮ ತಮ್ಮ ದೃಷ್ಟಿಯಲ್ಲಿ ದೃಢವಾಗಿ ಗ್ರಹಣ ಮಾಡಿ ನಾವು ಕುಶಲರು ಎಂದು ಹೇಳಿ ವಿವಾದ ಮಾಡುವರು ಮತ್ತು ಹೀಗೂ ಹೇಳುವರು. ಏನೆಂದರೆ ಯಾರು ಹೀಗೆ ಅರಿತಿರುವರೋ, ಆತನೇ ಜ್ಞಾನಿ ಹಾಗು ಧರ್ಮದ ಜ್ಞಾತ ಮತ್ತು ಯಾರು ಇದರ ವಿರೋಧ ಮಾಡುವನೋ ಆತನು ಜ್ಞಾನಿಯೇ ಅಲ್ಲ.
2.            ಹೀಗೆಯೇ ಹಠದಲ್ಲಿ ಬಿದ್ದು ವಿವಾದ ಮಾಡುವರು ಮತ್ತು ಪರರು ಮೂರ್ಖರೆಂದು ಮತ್ತು ಅಕುಶಲರೆಂದು ಹೇಳುವರು. ಇದರಲ್ಲಿ ಸತ್ಯವಾದ ಮತ (ಧರ್ಮ) ಯಾವುದು? ಸರ್ವರೂ ತಮ್ಮನ್ನು ಕುಶಲರೆಂದು ಹೇಳುವರು.
3.            ಭಗವಾನರು - ಯಾರು ಪರರ ಧರ್ಮಕ್ಕೆ ಸ್ಥಾನ ನೀಡುವುದಿಲ್ಲವೋ ಆತನು ಮೂರ್ಖ, ಪಶು ಮತ್ತು ಪ್ರಜ್ಞಾವಿಹೀನನಾಗುತ್ತಾನೆ. ಸರ್ವರೂ ಮೂರ್ಖರು ಮತ್ತು ಪ್ರಜ್ಞಾವಿಹೀನರಾಗಿದ್ದಾರೆ. ಹೀಗೆ ಹೇಳುವ ಇವರೆಲ್ಲರೂ ದೃಷ್ಟಿಗಳ ಜಾಲದಲ್ಲಿ ಬಿದ್ದಿರುವರು.
4.            ಒಂದುವೇಳೆ ಜನರ ದೃಷ್ಟಿಯು ಪವಿತ್ರವಾಗಿದ್ದರೆ ಅವರು ಶುದ್ಧರು, ಪ್ರಜ್ಞಾವಂತರು, ಕುಶಲರು ಮತ್ತು ಮತಿವಂತರಾಗುತ್ತಿದ್ದರು. ಅವರಲ್ಲಿ ಯಾರು ಪ್ರಜ್ಞಾವಿಹೀನನಾಗುತ್ತಿರಲಿಲ್ಲ. ಅವರ ದೃಷ್ಟಿಯು ಪರಿಪೂರ್ಣವಾಗಿರುತ್ತದೆ.
5.            ನಾನು ಇದೇ ಸತ್ಯ ಎಂದು ಹೇಳುವುದಿಲ್ಲ. ಅಂತಹ ವಿಷಯ ಎತ್ತಿ ಜನರು ಪರರನ್ನು ಮೂರ್ಖರೆನ್ನುವರು. ಅವರು ತಮ್ಮ ತಮ್ಮ ದೃಷ್ಟಿಯನ್ನು ಸತ್ಯ ಸಿದ್ಧ ಮಾಡುವರು ಮತ್ತು ಪರರನ್ನು ಮೂರ್ಖರೆನ್ನುವರು.
6.            ದೇವತಾ - ಕೆಲವರು ಯಾವುದನ್ನು ಸತ್ಯ ಎನ್ನುವರೋ, ಪರರು ಅದನ್ನೇ ಪ್ರಲಾಪ ಮತ್ತು ಅಸತ್ಯವೆನ್ನುವರು.  ಈ ರೀತಿಯಿಂದಲೂ ಹಠ ಹಿಡಿದು ವಿವಾದ ಮಾಡುವರು. ಸಮಣರು ಒಂದೇ ರೀತಿಯಾದ ವಿಷಯವನ್ನು ಏಕೆ ತಿಳಿಸುವುದಿಲ್ಲ?
7.            ಭಗವಾನರು - ಸತ್ಯವು ಒಂದೇ ಆಗಿದೆ, ಬೇರೆಯದಲ್ಲ (ದ್ವಿತೀಯವಲ್ಲ) ಯಾವ ವಿಷಯದಲ್ಲಿ ವ್ಯಕ್ತಿ ವ್ಯಕ್ತಿಗಳು ವಿವಾದಿತರಾಗಿರುತ್ತಾರೋ ಅವರೆಲ್ಲರೂ ಸ್ವಯಂ ನಾನಾ ಸತ್ಯಗಳ ಪ್ರಶಂಸೆ ಮಾಡುತ್ತಾರೆ. ಆದ್ದರಿಂದಲೇ ಸಮಣರು ಒಂದೇ ವಿಷಯ ತಿಳಿಸುವುದಿಲ್ಲ.
8.            ದೇವತಾ - ಏತಕ್ಕಾಗಿ ಜನರು ನಾನಾ ಸತ್ಯಗಳನ್ನು ತಿಳಿಸುವರು? ಅವರು ತಮ್ಮನ್ನು ಕುಶಲರೆಂದು ಹೇಳಿ ವಿವಾದ ಮಾಡುವರು. ಏನು ಕೇಳಿರುವ ಸತ್ಯ ನಾನಾ ಪ್ರಕಾರವುಳ್ಳದ್ದು ಹಾಗು ಬಹುವಿದೆಯೋ? ಅಥವಾ ಅವರು ತರ್ಕದ ಅನುಸಾರವಾಗಿ ಹೇಳುವರೋ?
9.            ಭಗವಾನರು - ಸಂಜ್ಞೆಯ ಅತಿರಿಕ್ತವಾಗಿ ಲೋಕದಲ್ಲಿ ಬಹಳ ಹಾಗು ವಿಭಿನ್ನ ಪ್ರಕಾರದ ಸತ್ಯಗಳಿವೆ ಹಾಗು ನಿತ್ಯವಾಗಿಲ್ಲ. ದೃಷ್ಟಿಗಳಲ್ಲಿ ತರ್ಕವು ಸೇರಿಸಿ ಸತ್ಯ ಹಾಗು ಅಸತ್ಯ ಈ ಎರಡು ಧರ್ಮಗಳು ಹೇಳುವರು.
10.          ದೃಷ್ಟಿ, ಶೃತಿ, ಶೀಲವ್ರತ, ವಿಚಾರತೆ - ಇವುಗಳ ಕಾರಣ ಬೇರೆಯವರ ಅನಾದರ ಮಾಡುತ್ತಾ ಪ್ರಸನ್ನತೆಯಿಂದ ಯಾವುದೋ ನಿರ್ಣಯದಲ್ಲಿ ಸ್ಥಿತರಾಗಿ ಜನರು ಬೇರೆಯವರನ್ನು ಮುರ್ಖರೆಂದು ಮತ್ತು ಅಕುಶಲರೆಂದು ಹೇಳುವರು.
11.          ವ್ಯಕ್ತಿ ಯಾವ ಕಾರಣದಿಂದ ಪರರನ್ನು ಮೂರ್ಖ ಎಂದು ಹೇಳುವನೋ ಅದರಿಂದಲೇ ತನ್ನನ್ನು ಕುಶಲ ಎಂದು ತೋರಿಸಿಕೊಳ್ಳುವನು. ತನ್ನನ್ನು ಕುಶಲ ಎಂದು ತೋರಿಸುತ್ತಲೇ ಆತನು ಪರರನ್ನು ಅನಾಧರಣೆ ಮಾಡುತ್ತಾನೆ.
12.          ಆ ವ್ಯಕ್ತಿಯು ತನ್ನ ಆ ದೃಷ್ಟಿಯನ್ನು ಪೂರ್ಣ ಎಂದು ನಂಬುತ್ತಾನೆ ಮತ್ತು ಆತನು ಅಹಂಕಾರದಿಂದ ಪರಿಪೂರ್ಣ ಅಭಿಮಾನಿಯಾಗುತ್ತಾನೆ. ಆತನು ತನ್ನನ್ನು ಜ್ಞಾನಿ ಎಂದು ಭಾವಿಸುವನು. ಏಕೆಂದರೆ ಆತನ ದೃಷ್ಟಿಯೇ ಆ ರೀತಿ ಇರುತ್ತದೆ.
13.          ಒಂದುವೇಳೆ ಹೇಳುವುದರಿಂದಲೇ ಪರರನ್ನು ಹೀನರನ್ನಾಗಿ ಮಾಡುವುದು ಸಾಧ್ಯವಾಗಿದ್ದರೆ ಆತನು ಸ್ವಯಂ ಸಹಾ ಪ್ರಜ್ಞಾವಿಹೀನನಾಗುತ್ತಿದ್ದನು. ಒಂದುವೇಳೆ ತಾನು ಹೇಳುವುದರಿಂದಲೇ ಯಾರಾದರೂ ಜ್ಞಾನಿ ಹಾಗು ಧೀರರು ಆಗುವ ಹಾಗಿದ್ದರೆ, ಶ್ರಮಣರಲ್ಲಿ ಯಾರೂ ಸಹಾ ಮೂರ್ಖರಾಗುತ್ತಿರಲಿಲ್ಲ.
14.          ಯಾರು ಇದರ ವಿಪರೀತವಾಗಿ ಪರದೃಷ್ಟಿ ಹೇಳುವರೋ ಮತ್ತು ಯಾರು ಶುದ್ಧಿ ಮಾರ್ಗದಿಂದ ವಿಚಲಿತರಾಗಿದ್ದರೋ ಅವರು ಅಕೇವಲಿಗಳು (ಅಜ್ಞಾನಿ). ಹೀಗೆ ಪ್ರಾಯಶಃ ತಾಕರ್ಿಕ (ಅನ್ಯ ಮತದವರು) ಹೇಳುವರು. ಏಕೆಂದರೆ ಅವರು ತಮ್ಮ ದೃಷ್ಟಿರಾಗದಲ್ಲಿ ರತರಾಗಿದ್ದಾರೆ.
15.          ಶುದ್ಧಿ ಇಲ್ಲಿ ಮಾತ್ರವಿದೆ. ಪರಧರ್ಮದಲ್ಲಿ ಶುದ್ಧಿಯಿಲ್ಲ - ಹೀಗೆ ಪ್ರಾಯಶಃ ತೀರ್ಥಕರು ತಮ್ಮ ದೃಷ್ಟಿಯಲ್ಲಿ ಸ್ಥಿತರಾಗಲಿ ಮತ್ತು ದೃಢರಾಗಲೆಂದು ಹೇಳುವರು.
16.          ಯಾರು ತಮ್ಮ ದೃಷ್ಟಿಗೆ ದೃಢತಾಪೂರ್ವಕವಾಗಿ ಗ್ರಹಣ ಮಾಡಿ ಪರರನ್ನು ಮೂರ್ಖರನ್ನಾಗಿ ಹೇಳುವನೋ, ಪರಧರ್ಮವನ್ನು ಮೂರ್ಖ ಹಾಗು ಅಶುದ್ಧಿ ಮಾಡುವವ. ಆತನು ಸ್ವಯಂ ಕಲಹಕ್ಕೆ ಆಹ್ವಾನ ನೀಡುತ್ತಾನೆ.
                17.          ಆತನು ತನ್ನ ದೃಷ್ಟಿಯಲ್ಲಿ ಸ್ಥಿತನಾಗಿ, ಸ್ವಯಂ (ಪರರ ಶಾಸ್ತರಿಗೆ) ತುಲನೆ ಮಾಡಿ ಲೋಕದಲ್ಲಿ ವಿವಾದ ಮಾಡುವನು. ಆದರೆ ಜ್ಞಾನಿ ಪುರುಷರು ಸರ್ವ ದೃಷ್ಟಿಗಳನ್ನು ತ್ಯಜಿಸಿ ಲೋಕದಲ್ಲಿ ಕಲಹ ಉಂಟುಮಾಡುವುದಿಲ್ಲ.

ಇಲ್ಲಿಗೆ ಚೂಳವಿಯೂಹ ಸುತ್ತ ಮುಗಿಯಿತು.

kalahavivaada sutta in kannada 11. ಕಲಹ ವಿವಾದ ಸುತ್ತ

11. ಕಲಹ ವಿವಾದ ಸುತ್ತ

(ಕಲಹದ ಕಾರಣ)
1.            ದೇವತಾ - ನಮಗೆ ಇದನ್ನು ತಿಳಿಸಿರಿ. ಕಲಹ, ವಿವಾದ, ವಿಲಾಪ, ಶೋಕ, ಜಿಪುಣತನ, ಅಹಂ, ಅಭಿಮಾನ ಅಥವಾ ಚಾಡಿತನ ಎಲ್ಲಿ ಉತ್ಪನ್ನವಾಗುತ್ತದೆ.
2.            ಭಗವಾನರು - ಕಲಹ, ವಿವಾದ, ವಿಲಾಪ, ಶೋಕ, ಜಿಪುಣತನ, ಅಹಂ, ಅಭಿಮಾನ ಮತ್ತು ಚಾಡಿತನ ಪ್ರಿಯವಾದುದರಿಂದ ಉತ್ಪನ್ನವಾಗುತ್ತದೆ. ಕಲಹವು ಮತ್ತು ವಿವಾದ ಸ್ವಾರ್ಥದಿಂದ ಯುಕ್ತವಾಗಿದೆ ಮತ್ತು ವಿವಾದ ಉತ್ಪನ್ನದಿಂದ ಚಾಡಿತನವು ಆಗುತ್ತದೆ.
3.            ದೇವತಾ - ಲೋಕದಲ್ಲಿ ಪ್ರಿಯವಾದುದು ಎಲ್ಲಿ ಉತ್ಪನ್ನವಾಗುತ್ತದೆ? ಅಥವಾ ಲೋಭದ ಕಾರಣದಿಂದ ಲೋಕದಲ್ಲಿ ಸಂಚರಿಸುತ್ತಿರುವವರು ಎಲ್ಲಿಂದ ಉತ್ಪನ್ನರಾಗುತ್ತಾರೆ? ಯಾವುದು ಮನುಷ್ಯನ ಪುನರ್ಜನ್ಮದ ಹೇತುವಾಗಿದೆಯೋ ಅ ಇಚ್ಛೆಗಳೂ ಮತ್ತು ಅದರ ಪೂತರ್ಿ ಹೇಗೆ ಆಗುವುದು.
4.            ಭಗವಾನರು - ಪ್ರಿಯದ ಕಾರಣ ರಾಗವಾಗಿದೆ ಅಥವಾ ಲೋಭದ ಕಾರಣದಿಂದ ಜನರು ಲೋಕದಲ್ಲಿ ಸಂಚರಿಸುತ್ತಿರುವರು. ಇಚ್ಛೆಯ ಮತ್ತು ಅದರ ಪೂತರ್ಿಯ ಹೇತು (ಮೂಲ) ಇದೇ ಆಗಿದೆ. ಇದೇ ಮಾನವ ಪುನರ್ಜನ್ಮದ ಹೇತುವಾಗಿದೆ.
5.            ದೇವತಾ - ಮಹಾ ಸಮಣರು (ಬುದ್ಧರು) ಯಾವ ಧರ್ಮವನ್ನು ತಿಳಿಸಿರುವಿರೋ, ಅದರ ಅನುಸಾರವಾಗಿ ಇಚ್ಛೆಗಳು ಎಲ್ಲಿ ಉತ್ಪನ್ನವಾಗುತ್ತದೆ? ಅಥವಾ ವಿನಿಶ್ರಯ, ಕ್ರೋಧ, ಅಸತ್ಯ ಭಾಷಣ ಹಾಗು ಸಂದೇಹ ಎಲ್ಲಿ ಉತ್ಪನ್ನವಾಗುತ್ತದೆ?
6.            ಭಗವಾನರು - ಲೋಕದಲ್ಲಿ ಯಾವ ಪ್ರಿಯ ಮತ್ತು ಅಪ್ರಿಯ ವಸ್ತುಗಳಿವೆಯೋ, ಅದರ ಕಾರಣದಿಂದಲೇ ಇಚ್ಛೆಯು ಉತ್ಪನ್ನವಾಗುತ್ತದೆ. ದೇಹದ ವಿನಾಶ ಹಾಗು ಉತ್ಪತ್ತಿಯನ್ನು ಕಂಡು ಜನರು ಇಲ್ಲಿ ನಿಶ್ಚಯಕ್ಕೆ ಬರುತ್ತಾರೆ.
7.            ಸಮಣರು ಅರಿತು ಇದನ್ನು ಹೇಳುವುದು ಅದೇನೆಂದರೆ ಕ್ರೋಧ, ಅಸತ್ಯ ಭಾಷಣ ಮತ್ತು ಸಂದೇಹ - ಈ ಧರ್ಮಗಳು ಎರಡು ವಿಷಯದಿಂದ (ರಾಗ, ದ್ವೇಷ) ಉತ್ಪನ್ನವಾಗುತ್ತದೆ. ಸಂದೇಹದಿಂದ ಕೂಡಿದ ವ್ಯಕ್ತಿಯು ಜ್ಞಾನಪಥದ ಅಭ್ಯಾಸ ಮಾಡಬೇಕು.
8.            ದೇವತಾ - ನನಗೆ ಇವುಗಳ ಉತ್ಪತ್ತಿಯ ಕಾರಣ ತಿಳಿಸಿ, ಸುಖ ಹಾಗು ದುಃಖ ವೇದನೆಗಳು ಎಲ್ಲಿಂದ ಉತ್ಪನ್ನವಾಗುತ್ತದೆ? ಯಾವುದರ ಇಲ್ಲವಾಗಿಕೆಯಿಂದ ಇವು ಇರುವುದಿಲ್ಲ. ನಾಶ ಹಾಗು ಉತ್ಪತ್ತಿ ಯಾವುದನ್ನು ಹೇಳಿರುವಿರೋ ಅದರ ಕಾರಣವನ್ನು ತಿಳಿಸಿ.
9.            ಭಗವಾನರು - ಸ್ಪರ್ಶದ (ಇಂದ್ರಿಯ ವಿಷಯಗಳ) ಕಾರಣದಿಂದ ಸುಖ ಮತ್ತು ದುಃಖ ವೇದನೆಗಳು ಆಗುತ್ತದೆ. ಸ್ಪರ್ಶ ಇಲ್ಲದಿದ್ದರೆ ಇವು ಆಗುವುದಿಲ್ಲ. ಯಾವುದು ವಿನಾಶ ಮತ್ತು ಉತ್ಪತ್ತಿಯೆಂದು ಹೇಳಿದೆಯೋ, ಅವುಗಳ ಕಾರಣವನ್ನು ಇದೇ (ಸ್ಪರ್ಶ) ಎಂದು ಹೇಳುತ್ತೇನೆ.
10.          ದೇವತಾ - ಲೋಕದಲ್ಲಿ ಸ್ಪರ್ಶವು ಎಲ್ಲಿಂದ ಉತ್ಪನ್ನವಾಗುತ್ತದೆ? ಪರಿಗ್ರಹವು ಎಲ್ಲಿಂದ ಉತ್ಪನ್ನವಾಗುತ್ತದೆ? ಯಾವುದು ಇಲ್ಲದಿದ್ದರೆ ಮಮತ್ವವು ಇರುವುದಿಲ್ಲ? ಯಾವುದು ಇರದಿದ್ದರೆ ಸ್ಪರ್ಶ ಇರುವುದಿಲ್ಲ?
11.          ಭಗವಾನರು - ದೇಹ ಮತ್ತು ಮನಸ್ಸಿನಿಂದ ಸ್ಪರ್ಶವಾಗುತ್ತದೆ. ಇಚ್ಛೆಯಿಂದ ಪರಿಗ್ರಹವಾಗುತ್ತದೆ. ಇಚ್ಛೆಯಿಲ್ಲದಿದ್ದರೆ ಮಮತ್ವವೂ ಇರುವುದಿಲ್ಲ ಮತ್ತು ದೇಹ (ಹಾಗು ಮನಸ್ಸು) ಇಲ್ಲದಿದ್ದರೆ ಸ್ಪರ್ಶವೂ ಆಗಲಾರದು.
12.          ದೇವತಾ - ಹೇಗೆ ಕಾರ್ಯ ಮಾಡುವವನ ದೇಹವು ಇರುವುದಿಲ್ಲ ಅಥವಾ ಸುಖ ಮತ್ತು ದುಃಖವು ಹೇಗೆ ಇರುವುದಿಲ್ಲ? ಇವು ಹೇಗೆ ಇಲ್ಲವಾಗುವುವೋ ನನಗೆ ತಿಳಿಸಿ. ನಮ್ಮ ಇಚ್ಛೆ ಅದನ್ನು ಅರಿಯುವುದಾಗಿದೆ.
13.          ಭಗವಾನರು - ಯಾರು ಸಂಞ್ಞಾ (ಗ್ರಹಿಕೆ)ಗಳಲ್ಲಿ ಇಲ್ಲವೋ, ಯಾರು ಸಞ್ಞಾರಹಿತರಲ್ಲವೋ ಮತ್ತು ಯಾರು ಅಸಂಞ್ಞರು (ಅಗ್ರಹಿಕೆಯುಳ್ಳವರು) ಅಲ್ಲವೂ ಹಾಗು ಯಾರು (ಸಮಾಧಿಯ ಅಗ್ರ ಸ್ಥಿತಿಯಾದ) ಸಞ್ಞಾವನ್ನು ಅತಿಕ್ರಮಣ ಮಾಡಿರುವರೋ, ಹಾಗೆ ಆಗುವುದರಿಂದ ದೇಹ ಇರುವುದಿಲ್ಲ. ಸಂಞ್ಞಾ ಕಾರಣದಿಂದಲೇ ಸರ್ವಪ್ರಪಂಚ (ಅಸ್ತಿತ್ವ) ಉತ್ಪನ್ನವಾಗುತ್ತದೆ.
14.          ದೇವತಾ - ನಾವು ಏನನ್ನೆಲ್ಲಾ ಕೇಳಿದೆವೋ, ಅದೆಲ್ಲವನ್ನು ತಾವು ನಮಗೆ ತಿಳಿಸಿದಿರಿ. ಈಗ ನಾವು ಬೇರೆಯದನ್ನು ಕೇಳುತ್ತೇವೆ. ಅದನ್ನು ನಮಗೆ ತಿಳಿಸಿರಿ. ಕೆಲವು ಜ್ಞಾನಿಗಳು ಇದನ್ನೇ (ಗ್ರಹಿಕೆ ಇಲ್ಲ, ಗ್ರಹಿಕೆ ಇಲ್ಲದೆಯೂ ಇಲ್ಲ ಎಂಬ ಅಗ್ರ ಸಮಾಧಿ) ವ್ಯಕ್ತಿಯ ಶುದ್ಧಿಗಾಗಿ ಶ್ರೇಷ್ಠವೆನ್ನುವರು. ಅಥವಾ ಇದಕ್ಕಿಂತ ಬೇರೆಯದು ತಿಳಿಸುವಿರೇ?
15.          ಭಗವಾನರು - ಕೆಲವು ಜ್ಞಾನಿಗಳು (ಪಂಡಿತರು) ವ್ಯಕ್ತಿಯ ಶುದ್ಧತೆಯನ್ನು ಇಷ್ಟರಿಂದಲೇ ಎಂದು ಹೇಳುವರು. ಕೆಲವರು ಅವರ ಉಚ್ಚೇದ (ನಾಶ) ದ ಮಾತು ಆಡುವರು. ಆದರೆ ಕುಶಲ ವ್ಯಕ್ತಿಗಳು ನಿಬ್ಬಾಣವನ್ನು ಮಾತ್ರ ಶುದ್ಧಿ ಎಂದು ಹೇಳುವರು.
16.          ಈ ದೃಷ್ಟಿಗಳನ್ನು ಗ್ರಹಣ ಮಾಡಿ ಅದರಲ್ಲಿ (ಬಂಧಿತರಾಗಿ) ಸಿಕ್ಕಿರುವರು. ಹೀಗೆ ಮುನಿಯು (ಬುದ್ಧರು) ವಿವೇಕಾಪೂರ್ವಕವಾಗಿ ಅರಿತು ವಿಮುಕ್ತರಾಗಿರುವರು. ಅವರು ವಿವಾದದಲ್ಲಿ ಬೀಳುವುದಿಲ್ಲ ಮತ್ತು ಧೀರರು ಉತ್ಪತ್ತಿ ಮತ್ತು ವಿನಾಶದ ಜಾಲದಲ್ಲಿ ಬೀಳಲಾರರು.

ಇಲ್ಲಿಗೆ ಕಲಹ ವಿವಾದ ಸುತ್ತ ಮುಗಿಯಿತು.