Friday 29 November 2019

ಅಭಾಸಿತ ಸುತ್ತ abhasita sutta

ಅಭಾಸಿತ ಸುತ್ತ


  ಭಿಕ್ಖುಗಳೇ, ಇವೆರಡು ತಥಾಗತರಿಗೆ ಮಾಡುವ ಅಪನಿಂದೆಗಳಾಗಿವೆ
ಯಾವುವವು ಎರಡು ?

"ತಥಾಗತರು ನುಡಿಯದಿದ್ದರೂ ಹೀಗೆ  ನುಡಿದಿದ್ದಾರೆ ಎಂದು ನಿರೂಪಿಸುವುದು. &
ತಥಾಗತರೂ ನುಡಿದಿದ್ದರೂ ಹೀಗೆ ನುಡಿದಿಲ್ಲ ಎಂದು ನಿರೂಪಿಸುವುದು.

ಹೀಗೆ ತಥಾಗತರಿಗೆ 2 ರೀತಿಯಲ್ಲಿ ಅಪನಿಂದೆ ಮಾಡುವರು.

Tuesday 26 November 2019

ಮಹಾಮೊಗ್ಗಲಾನ ಸುತ್ತ (ಪಾಚಾಲ ಸುತ್ತ/ಚಾಪಾಲ ಸುತ್ತ)

ಮಹಾಮೊಗ್ಗಲಾನ ಸುತ್ತ (ಪಾಚಾಲ ಸುತ್ತ)

ಮಹಾಮೊಗ್ಗಲಾನರವರು ಮಗಧದ ಸಮೀಪದ ಕಲ್ಲವಾಲಪುತ್ತ ಎಂಬ ಹಳ್ಳಿಯಲ್ಲಿ ನೆಲೆಸಿದ್ದರು. ಪಬ್ಬಜ್ಜ ಸ್ವೀಕಾರದ ಏಳು ದಿನಕ್ಕೆ ಕಾಲಿಟ್ಟರು. ಸದಾಕಾಲ ಧ್ಯಾನದಲ್ಲಿ ತೊಡಗಿದರು. ಆದರೂ ಅವರು ಥೀನಮಿದ್ಧ (ಆಲಸ್ಯ, ಜಡತೆ, ನಿದ್ದೆ) ಯಿಂದಾಗಿ ತುಸು ತ್ರಾಸಪಟ್ಟರು.
   ಮೊಗ್ಗಲಾನರವರು ತಮ್ಮ ಧ್ಯಾನ ಸಾಧನೆಗೆ ಮಗಧದ ಸಮೀಪದ ಕಲ್ಲವಲಪುತ್ತ ಎಂಬ ಹಳ್ಳಿಯ ಪಕ್ಕದ ಅರಣ್ಯವನ್ನು ಆಯ್ಕೆ ಮಾಡಿದರು, ಅಲ್ಲಿ ಅವರು ಪದ್ಮಾಸನದಲ್ಲಿ ಹಾಗೂ ನಡಿಗೆಯ ಭಂಗಿಯಲ್ಲಿ ಧ್ಯಾನವನ್ನು ಆರಂಭಿಸಿದರು. ಅದರೂ ಸಹಾ ಅವರು ತೂಗಡಿಕೆಯನ್ನು ಗೆಲ್ಲಲಾರೆದೆ ಹೋದರು.  ಅವರಿಗೆ ನಿದ್ರಿಸಲು ಇಷ್ಟವಿರಲಿಲ್ಲ ಅದರೂ ತಮ್ಮ ಬೆನ್ನು ಹಾಗೂ ಕತ್ತನ್ನು ನೇರವಾಗಿಡಲು ಅಸಮರ್ಥರಾದರು. ಅದರೂ ತಮ್ಮ ಇಚ್ಚಾಶಕ್ತಿಯಿಂದ ಕಣ್ಣುಗಳನ್ನು ಅಗಲವಾಗಿಸಿ ನಿದ್ರೆ ಗೆಲ್ಲಲು ಯತ್ನಿಸಿದರು. ಅದರೂ ಯಶಸ್ವಿಯಾಗದೆ ಹೋಯಿತು, ಅಂದು ಅವರು ಸಂಘಕ್ಕೆ ಸೇರಿ 7ನೆಯ ದಿನವಾಗಿತ್ತು.  ಭಗವಾನರಿಗೆ ಇವರ ಕಷ್ಟಗಳು ಅರ್ಥವಾಗಿ ಅವರ ಮುಂದೆ ತೇಜೋಮಯವಾಗಿ ಪ್ರತ್ಯಕ್ಷವಾದರು. ಹಾಗೂ ಹೀಗೆ ಕೇಳಿದರು.
"ಮೊಗ್ಗಲಾನ ತೂಗಡಿಸುತ್ತಿರುವೆಯಾ.? ಮೊಗ್ಗಲಾನ ತೂಗಡಿಸುತ್ತಿರುವೆಯಾ (ಮಂಪರು)"
"ಹೌದು ಭಗವಾನ್"
"ಸರಿ ಮೊಗ್ಗಲಾನ , ಯಾವಾಗಲಾದರೂ ನಿನಗೆ ನಿದ್ದೆ ಅಥವಾ ತೂಗಡಿಕೆ ಆವರಿಸಿದಾಗ ಆ ಯೋಚನೆ ಅಥವಾ ಆ ಗ್ರಹಿೆಕೆಯೆಡೆಗೆ ಗಮನ ಹರಿಸದಿರು, ಹಾಗೆ ಆ ಗ್ರಹಿಕೆಯೆಡೆ ಗಮನವನ್ನು ಹರಿಸಿದಾಗ ತೂಗಡಿಕೆ ದೂರವಾಗುವುದು."
"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ಆಗ ನೀನೂ ಹಿಂದೆ ಆಲಿಸಿರುವ ಬೋಧನೆಯನ್ನು (ಧಮ್ಮ) ನೆನಪಿಸಿಕೋ ಹಾಗೂ ಅವನ್ನು ವಿಶ್ಲೇಶಿಸಿಕೊ.........."
"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ನೀನೂ ಆಲಿಸಿದ್ದ ಧಮ್ಮವನ್ನು ಪೂರ್ಣ ವಿವರವಾಗಿ ಪುನಾರಾವತರ್ಿತಗೊಳಿಸಿಕೊ.............."
"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ನಿನ್ನ ಕಿವಿಗಳ ಹಾಲೆಗಳನ್ನು ಎಳೆದಾಡು ಮತ್ತು ನಿನ್ನ ಅಂಗಗಳನ್ನು ಉಜ್ಜಲು ಆರಂಭಿಸು,............"
"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ನೀನು ಆಸನದಿಂದ ಎದ್ದೇಳು ಹಾಗೂ ಕಣ್ಣುಗಳನ್ನು ನೀರಿನಿಂದ ತೊಳೆದುಕೊ, ನಂತರ ಎಲ್ಲಾ ದಿಕ್ಕುಗಳ ಕಡೆಗೆ ವೀಕ್ಷಿಸಲು ಆರಂಭಿಸು,   ನಕ್ಷತ್ರಗಳನ್ನು ಹಾಗೂ ನಕ್ಷತ್ರಗಳ ಸಮೂಹ ರಾಶಿಗಳನ್ನು ನೋಡಲು ಆರಂಭಿಸು.........."
"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ಬೆಳಕಿನ ಸಂಜ್ಞೆಯತ್ತ ಗಮನಹರಿಸು, ಹಗಲಿನ ಸಂಜ್ಞೆಯತ್ತ ಗಮನಹರಿಸು, ಅದನ್ನು ರಾತ್ರಿಯಲ್ಲಿ ಅಭ್ಯಾಸಿಸು ಅಂದರೆ ರಾತ್ರಿಯನ್ನು ಹಗಲಿನಂತೆ ಹಾಗೂ ಹಗಲನ್ನು ರಾತ್ರಿಯಂತೆ ಗ್ರಹಿಸುವುದು., ಹೀಗಾದಾಗ ಮನಸ್ಸು ಸ್ವಚ್ಚವಾಗಿ ಜಡರಹಿತವಾಗುವುದು. ಹೀಗೆ ಮನಸ್ಸನ್ನು ಬೆಳಕಿನಂತೆ ಪೂರ್ಣವಾಗಿ ಪ್ರಕಾಶಿಸು........"
"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ಆಗ ಇಂದ್ರಿಯಗಳನ್ನು ಅಂತಮರ್ುಖಗೊಳಿಸಿ,  ಮನಸ್ಸನ್ನು ಬಾಹ್ಯಕ್ಕೆ ದಾರಿತಪ್ಪದಂತೆ ಜಾಗಾರೂಕತೆವಹಿಸಿ, ನಡಿಗೆಯ ಧ್ಯಾನವನ್ನು ಆರಂಭಿಸು, ನಡಿಗೆಯಲ್ಲಿಯೇ ಗಮನವಹಿಸು. ಹಾಗೂ ಹಿಂದೆಯಿರುವುದನ್ನು ಕಲ್ಪಿಸಿಕೊ, ಹಾಗೂ ಹಿಂದೆಯಿದ್ದಾಗ ಮುಂದೆಯಿರುವುದನ್ನು ಕಲ್ಪಿಸಿಕೋ........"
"ಆಗಲೂ ಸಹಾ ತೂಗಡಿಕೆಯು ದೂರವಾಗದಿದ್ದರೆ, ನಿದ್ದೆಯು ಈಗ ಅವಶ್ಯಕವೆಂದು ತಿಳಿದು ಆಗ ಜಾಗಾರೂಕತೆಯಿಂದ, ಸ್ಪಷ್ಟ ಅರಿವಿನಿಂದ, ಸಿಂಹಶಯ್ಯೆಯ ಭಂಗಿಯಲ್ಲಿ ಬಲಮುಖವಾಗಿ ಮಲಗಿ,  ಬಲಗಾಲ ಮೇಲೆ ಎಡಗಾಲನ್ನು ಇಟ್ಟು ನೇರವಾಗಿ ಮಲಗಿ, ಮತ್ತೆ ಮೇಲೆಳುವ ಸಮಯವನ್ನು ನಿಗಧಿತಪಡಿಸಿ, ಅಲ್ಪನಿದ್ದೆಯಲ್ಲಿ ತೃಪ್ತಿತಾಳಿ ನಂತರ ಎಚ್ಚರಗೊಂಡಾಗ ಜಾಗರೂಕತೆ ತಾಳಿ ಈ ಬಗೆಯ ಮನೋಭಾವ ತಾಳುವುದು ನಾನು ಅತಿನಿದ್ದೆಯಲ್ಲಿ ಅಥವಾ ಅತಿವಿಶ್ರಾಂತಿಯ ಸುಖದಲ್ಲಿ ತಲ್ಲೀನಲಾಗಿಲ್ಲ ಹಾಗೂ ತಲ್ಲೀನವಾಗುವುದಿಲ್ಲ. ಹೀಗೆ ಮೊಗ್ಗಾಲಾನ ನೀನು ಸುಶಿಕ್ಷಣಗೊಳಿಸಿಕೊಳ್ಳಬೇಕು."
"ನಂತರ ಮೊಗ್ಗಲಾನ ನೀನು ಹೀಗೆ ಸುಶಿಕ್ಷಣಗೊಳಿಸಿಕೊಳ್ಳಬೇಕು ಹೇಗೆಂದರೆ ನಾನು ನನ್ನ ಅಹಂಕಾರ ಉದಯಿಸುವ ಅಥವಾ ವೃದ್ಧಿಯಾಗುವಂತಹ ಕುಟುಂಬಗಳಿಗೆ ಆಹಾರಕ್ಕೆ ಹೋಗಲಾರೆನು ಏಕೆಂದರೆ ಹಲವಾರು ಪ್ರಾಪಂಚಿಕ ಕಾರ್ಯಗಳಲ್ಲಿ ತೊಡಗಿರುವ ಕುಟುಂಬಗಳಿಗೆ ಹೋದಾಗ ಅವರು  ಗಮನಹರಿಸದೆ ಹೋಗಬಹುದು ಆಗ ಇವರು ನನಗೆ ಇಷ್ಟ ಪಡುತ್ತಿಲ್ಲ, ಏನೂ ದೊರೆಯದೆ ಹೋಯಿತು, ಎಂದು ಲಜ್ಜೆಗೆ ಒಳಗಾಗಿ, ಕ್ಷೊಭೆಗೆ ಒಳಗಾಗಿ, ಅನಿಯಂತ್ರಿತನಾಗಿ, ಸಮಾಧಿಗೆ ದೂರನಾಗುತ್ತಾನೆ. "
"ನಂತರ ಮೊಗ್ಗಲಾನ ನೀನು ಹೀಗೆ ಸುಶಿಕ್ಷಣಗೊಳಿಸಿಕೊಳ್ಳಬೇಕು, ನಾನು ಮುಖಾಮುಖಿ ಅಥವಾ ವಿವಾದಾತ್ಮಕ ವಾದಗಳಲ್ಲಿ ತೊಡಗುವುದಿಲ್ಲ ಏಕೆಂದರೆ ಆಗ ನಾನಾ ಚಚರ್ೆ ವಾದ ವಿವಾದಗಳು ಉಂಟಾಗಿ ಕ್ಷೊಭೆಗೆ ಒಳಗಾಗಿ, ಅನಿಯಂತ್ರಿತನಾಗಿ, ಸಮಾಧಿಗೆ ದೂರನಾಗುತ್ತಾನೆ."
"ಮತ್ತೆ ಮೊಗ್ಗಾಲಾನ ನಾನು ಯಾವುದೇ ಬಗೆಯ ಸಂಸರ್ಗ(ಸ್ನೇಹ)ವನ್ನು ಪ್ರಶಂಸಿಸಲಾರೆನು, ಹಾಗೆಯೇ ನಾನು ಯಾವುದೇ ಬಗೆಯ ಸಂಸರ್ಗ(ಸ್ನೇಹ)ವನ್ನು ಅಪ್ರಶಂಸಿಸಲಾರೆನು ಹಾಗೆಯೇ ಗೃಹಸ್ಥರೊಡನೆಯಾಗಲಿ ಅಥವಾ ಪಬ್ಬಜಿತರೊಡನೆಯಾಗಲಿ ಯಾವುದೇ ಬಗೆಯ ಸಂಸರ್ಗ(ಸ್ನೇಹ)ವನ್ನು ಪ್ರಶಂಸಿಸಲಾರೆನು, ಹಾಗೂ ಯಾವ ಸ್ಥಳಗಳು ನಿಶಬ್ದದಿಂದ ಕೂಡಿವೆಯೋ, ಶಬ್ಧರಹಿತವೂ, ಹಾಗೂ ನಿರ್ಜನ ಪ್ರದೇಶಗಳೋ ಅಂತಹ ಧ್ಯಾನಯೋಗ್ಯ ಪ್ರದೇಶಗಳನ್ನು ನಾನು ಪ್ರಶಂಸಿಸುವೆನು".
ಹೀಗೆ ಭಗವಾನರು ನುಡಿದಾಗ ಮೊಗ್ಗಲಾನರು ಹೀಗೆ ಪ್ರಶ್ನಿಸಿದರು : "ಭಗವಾನ್ ಸಂಕ್ಷಿಪ್ತವಾಗಿ ತಿಳಿಸಿ, ಯಾವ ರೀತಿಯಲ್ಲಿ ಒಬ್ಬನು ತೃಷ್ಣೆಯಿಂದ ಮುಕ್ತನಾಗುವನು, ಪೂರ್ಣವಾಗಿ ಬಂಧನಮುಕ್ತನಾಗುವನು, ಅತ್ಯಂತ ನಿಷ್ಟನು ,ಬ್ರಹ್ಮಚರ್ಯೆಯ ಜೀವನ ಪೂರ್ಣಗೊಳಿಸುವನು, ಅಂತಿಮ ಹಂತವನ್ನು ಪಡೆಯುವನು, ಹಾಗೂ ದೇವ ಮನುಷ್ಯರಲ್ಲಿ ಶ್ರೇಷ್ಟನಾಗುವನು."
"ಇಲ್ಲಿ ಮೊಗ್ಗಾಲಾನ, ಒಬ್ಬನು ಹೀಗೆ ಕೇಳುತ್ತಾನೆ ಏನೆಂದರೆ ಎಲ್ಲಾ ಆಗುಹೋಗುಗಳು ಅಂಟಿಕೊಳ್ಳುವಿಕೆಗೆ ಅರ್ಹವಲ್ಲ ಆಗ ಆತನು ಎಲ್ಲಾ ಬಗೆಯ ಸ್ಥಿತಿಗಳನ್ನು ಅರಿಯುತ್ತಾನೆ, ಯಾವುದೇ ಅನುಭವಗಳಾಗಲಿ ಅದರಲ್ಲಿ ಕ್ಷಣಿಕತೆಯನ್ನು ಅರಿತು, ವಿರಾಗ ತಾಳುತ್ತಾನೆ, ನಿರೋಧ ತಾಳುತ್ತಾನೆ,  ತ್ಯೆಜಿಸುವಿಕೆ ತಾಳುತ್ತಾನೆ, ಹೀಗೆ ಲೋಕದ ಯಾವುದಕ್ಕೂ ಅಂಟಲಾರನು, ಹೀಗೆ ಯಾವುದಕ್ಕೂ ಅಂಟದೆ ತಳಮಳಗೊಳ್ಳಲಾರನು, ತಳಮಳಗೊಳ್ಳದೆ ಆರತರ್ಯದಲ್ಲೇ ಸರಿಯಾಗಿ ಮುಕ್ತನಾಗುತ್ತಾನೆ, ಆಗ ಆತನಲ್ಲಿ ವಿಮುಕ್ತಿ ಜ್ಞಾನವು ಉಂಟಾಗುವುದು, ಜನ್ಮವು ಅಂತ್ಯವಾಯಿತು,  ಬ್ರಹ್ಮಚರ್ಯೆಯ ಜೀವನ ಪೂರ್ಣವಾಯಿತು, ಮಾಡಬೇಕಾದುದೆಲ್ಲಾ ಮಾಡಿಯಾಯಿತು, ಈ ಲೋಕಗಳಿಗೆ ಇನ್ನೇನೂ ಉಳಿದಿಲ್ಲ."
"ಈ ರೀತಿಯಾಗಿ ಮೊಗ್ಗಾಲಾನ ಸಂಕ್ಷಿಪ್ತವಾಗಿ  ಒಬ್ಬನು ತೃಷ್ಣೆಯಿಂದ ಮುಕ್ತನಾಗುವನು, ಪೂರ್ಣವಾಗಿ ಬಂಧನಮುಕ್ತನಾಗುವನು, ಅತ್ಯಂತ ನಿಷ್ಟನು ,ಬ್ರಹ್ಮಚರ್ಯೆಯ ಜೀವನ ಪೂರ್ಣಗೊಳಿಸುವನು, ಅಂತಿಮ ಹಂತವನ್ನು ಪಡೆಯುವನು, ಹಾಗೂ ದೇವ ಮನುಷ್ಯರಲ್ಲಿ ಶ್ರೇಷ್ಟನಾಗುವನು.." (ಪಾಚಾಲ ಸುತ್ತ, ಅಂಗುತ್ತರ ನಿಕಾಯ 7.58)


Wednesday 30 October 2019

ಸತ್ಪುರುಷನನ್ನು ಹೇಗೆ ಅರಿಯಬಹುದು? (ಚೂಲ ಪುಣ್ಣಮ ಸುತ್ತ): cula purnima sutta in kannada

ಸತ್ಪುರುಷನನ್ನು ಹೇಗೆ ಅರಿಯಬಹುದು? (ಚೂಲ ಪುಣ್ಣಮ ಸುತ್ತ):


ಹೀಗೆ ನಾನು ಕೇಳಿದ್ದೇನೆ - ಒಂದು ಸಮಯದಲ್ಲಿ ಭಗವಾನರು ಸಾವತ್ಥಿಯಲ್ಲಿ ಮಿಗಾರಮಾತೆಯ ಪೂರ್ವ ಆರಾಮ (ವಿಹಾರ)ದಲ್ಲಿ ವಿಹರಿಸುತ್ತಿದ್ದರು. ಅಂದು ಪೂಣರ್ಿಮೆಯಾದ್ದರಿಂದ ಉಪೂಸಥ ದಿನವಾಗಿತ್ತು. ಆಗ ಭಗವಾನರು ಹೊರಗೆ ಗಾಳಿಯಲ್ಲಿ ಕುಳಿತಿದ್ದರು. ಅವರ ಸುತ್ತಲು ಭಿಕ್ಷುಗಣವಿತ್ತು. ಭಗವಾನರು ಶಾಂತವಾಗಿದ್ದ ಭಿಕ್ಷು ಸಮೂಹಕ್ಕೆ ಹೀಗೆ ಕೇಳಿದರು:

"ಈಗ ಭಿಕ್ಷುಗಳೇ, ಅಸತ್ಪುರುಷನಿಗೆ ಅಸತ್ಪುರುಷನು ಅರಿಯಲ್ಪಡುವನೇ, ಹೇಗೆಂದರೆ ಈ ವ್ಯಕ್ತಿಯು ಅಸತ್ಪುರುಷನೇ?"

"ಇಲ್ಲ ಭಂತೆ."

"ಒಳ್ಳೆಯದು ಭಿಕ್ಷುಗಳೇ, ಅಸತ್ಪುರುಷನಿಗೆ ಈತನು ಅಸತ್ಪುರುಷ ಎಂದು ತಿಳಿಯಲ್ಪಡುವುದಿಲ್ಲ. ಹಾಗೆಯೇ ಭಿಕ್ಷುಗಳೇ, ಅಸತ್ಪುರುಷನಿಗೆ ಸತ್ಪುರುಷನು ತಿಳಿಯಲ್ಪಡುವನೇ? ಹೇಗೆಂದರೆ ಈ ವ್ಯಕ್ತಿಯು ಸತ್ಪುರುಷನಿರಬಹುದೇ?"
"ಇಲ್ಲ ಭಂತೆ."

"ಒಳ್ಳೆಯದು ಭಿಕ್ಷುಗಳೇ, ಖಂಡಿತವಾಗಿಯು ಅಸತ್ಪುರುಷನಿಗೆ ಈ ವ್ಯಕ್ತಿಯು ಸತ್ಪುರುಷ ಎಂದು ತಿಳಿಯಲಾಗುವುದಿಲ್ಲ. ಆತನಿಗೆ ಅದು ಅಸಾಧ್ಯವಾಗಿದೆ. ಓ ಭಿಕ್ಷುಗಳೇ, ಅಸತ್ಪುರುಷನು ಅಕುಶಲ ಚಿತ್ತಸ್ಥಿತಿಗಳನ್ನು ಹೊಂದಿರುತ್ತಾನೆ. ಆತನು ಕೆಟ್ಟ ಸ್ನೇಹಿತರನ್ನು ಹೊಂದಿರುತ್ತಾನೆ. ಪಾಪಿಗಳಂತೆ ಯೋಚಿಸುತ್ತಾನೆ. ಆತನು ಪಾಪಿಗಳಂತೆಯೇ ಸಲಹೆ ಬುದ್ಧಿವಾದ ನೀಡುತ್ತಾನೆ, ಪಾಪಿಗಳಂತೆ ಮಾತನಾಡುತ್ತಾನೆ, ಪಾಪಿಗಳಂತೆ ಕಾರ್ಯವನ್ನು ಮಾಡುತ್ತಾನೆ. ಅಷ್ಟೇ ಅಲ್ಲ, ಆತನು ಅಸತ್ಪುರುಷರಂತೆಯೇ ದೃಷ್ಟಿಕೋನಗಳನ್ನು ಹೊಂದಿರುತ್ತಾನೆ ಮತ್ತು ಆತನು ಅಸತ್ಪುರುಷರಂತೆಯೇ ದಾನವನ್ನು ಮಾಡುತ್ತಾನೆ."

"ಮತ್ತು ಭಿಕ್ಷುಗಳೇ, ಆತನು ಯಾವ ಅಕುಶಲ ಚಿತ್ತಸ್ಥಿತಿಗಳಿಂದ (ಅಸ್ಸಧಮ್ಮ ಸಮಾನಾಗತೋ) ಕೂಡಿರುತ್ತಾನೆ?" "ಭಿಕ್ಷುಗಳೇ, ಆತನು ಶ್ರದ್ಧಾರಹಿತನಾಗಿರುತ್ತಾನೆ. ಪಾಪಲಜ್ಜೆಯಿಂದ ಕೂಡಿರುವುದಿಲ್ಲ, ಪಾಪಭಯದಿಂದಲೂ ಕೂಡಿರುವುದಿಲ್ಲ. ಆತನು ಅಲ್ಪಶೃತ (ಕಡಿಮೆ ಜ್ಞಾನವನ್ನು ಕೇಳಿರುತ್ತಾನೆ) ನಾಗಿರುತ್ತಾನೆ. ಆತನು ಸೋಮಾರಿ ಆಗಿರುತ್ತಾನೆ. ಸ್ಮೃತಿಹೀನ (ಅಜಾಗರೂಕನು)ನು ಆಗಿರುತ್ತಾನೆ. ಕೆಟ್ಟ ಪ್ರಜ್ಞೆಯುಳ್ಳವ ನಾಗಿರುತ್ತಾನೆ (ಅಲ್ಪಪ್ರಜ್ಞನು). ಭಿಕ್ಷುಗಳೇ, ಈ ರೀತಿಯಲ್ಲಿ ಅಸತ್ಪುರುಷನ ಚಿತ್ತಸ್ಥಿತಿಗಳು ಇರುತ್ತದೆ."

"ಮತ್ತೆ ಭಿಕ್ಷುಗಳೇ, ಆತನು ಯಾರೊಂದಿಗೆ ಸ್ನೇಹದಿಂದಿರುತ್ತಾನೆ?"
"ಭಿಕ್ಷುಗಳೇ, ಯಾರಲ್ಲಿ ಶ್ರದ್ಧೆಯಿಲ್ಲವೋ, ಪಾಪಲಜ್ಜೆಯಿಲ್ಲವೊ, ಪಾಪಭೀತಿಯಿಲ್ಲವೊ, ಯಾರು ಅಲ್ಪಶೃತರೋ, ಯಾರು ಸೋಮಾರಿಗಳೋ, ಅಜಾಗರೂಕರೋ, ಅಲ್ಪ ಪ್ರಜ್ಞರೋ ಅವರೊಂದಿಗೆಯೇ ಆತನು ಬೆರೆಯುತ್ತಾನೆ. ಅವರೊಂದಿಗೆ ಆತನು ಸ್ನೇಹದಿಂದಿರುತ್ತಾನೆ."

"ಮತ್ತೆ ಭಿಕ್ಷುಗಳೇ, ಆತನು ಅಸತ್ಪುರುಷರ ರೀತಿ ಹೇಗೆ ಯೋಚಿಸುತ್ತಾನೆ? ಆತನು ತನಗೆ ಅಹಿತವಾಗುವಂತೆ, ಬಾಧೆಯಾಗುವಂತೆ ಚಿಂತನೆ ಮಾಡುತ್ತಾನೆ. ಹಾಗು ಆತನು ಪರರಿಗೆ ಅಹಿತವಾಗುವಂತೆ ಬಾಧೆಯಾಗುವಂತೆ ಚಿಂತನೆ ಮಾಡುತ್ತಾನೆ. ಆತನು ಉಭಯರಿಗೂ ಬಾಧೆಯಾಗುವಂತೆ ಯೋಚಿಸುತ್ತಾನೆ."

"ಮತ್ತೆ ಭಿಕ್ಷುಗಳೇ, ಆತನ ಅಸತ್ಪುರುಷರ ರೀತಿ ಹೇಗೆ ಬುದ್ಧಿವಾದ ನೀಡುತ್ತಾನೆ? ಆತನು ತನಗೆ ಅಹಿತವಾಗುವಂತೆ, ಬಾಧೆಯಾಗುವಂತೆ ಬುದ್ಧಿವಾದ ಹೇಳಿಕೊಳ್ಳುತ್ತಾನೆ. ಆತನು ಪರರಿಗೆ ಅಹಿತವಾಗುವಂತೆ, ಬಾಧೆಯಾಗುವಂತೆ ಬುದ್ಧಿವಾದ ಹೇಳುತ್ತಾನೆ".

"ಮತ್ತೆ ಭಿಕ್ಷುಗಳೇ, ಆತನು ಅಸತ್ಪುರುಷರ ರೀತಿಯಲ್ಲಿ ಹೇಗೆ ಮಾತನಾಡುತ್ತಾನೆ?"
"ಭಿಕ್ಷುಗಳೇ, ಆತನು ಸುಳ್ಳು ಹೇಳುತ್ತಾನೆ, ಚಾಡಿ ಹೇಳುತ್ತಾನೆ, ನಿಂದಾಯುತ ಕಟುಭಾಷೆ ಮಾತನಾಡುತ್ತಾನೆ, ವ್ಯರ್ಥವಾದ ಹಾನಿಯುತ ಹರಟೆ ಮಾಡುತ್ತಾನೆ."

"ಮತ್ತೆ ಭಿಕ್ಷುಗಳೇ, ಆತನು ಅಸತ್ಪುರುಷರ ರೀತಿಯಲ್ಲಿ ಹೇಗೆ ಕರ್ಮ ಮಾಡುತ್ತಾನೆ?"
"ಇಲ್ಲಿ ಭಿಕ್ಷುಗಳೇ, ಆತನು ಜೀವಹತ್ಯೆಗಳನ್ನು ಮಾಡುತ್ತಾನೆ, ಕಳ್ಳತನ ಮಾಡುತ್ತಾನೆ, ವ್ಯಭಿಚಾರದಲ್ಲಿ ತೊಡಗುತ್ತಾನೆ. ಹೀಗೆ ಭಿಕ್ಷುಗಳೇ, ಆತನು ಅಸತ್ಪುರುಷರ ಕರ್ಮ ಮಾಡುತ್ತಾನೆ".

"ಮತ್ತೆ ಭಿಕ್ಷುಗಳೇ, ಆತನು ಅಸತ್ಪುರುಷ ರೀತಿ ಹೇಗೆ ದೃಷ್ಟಿಗಳನ್ನು ಹೊಂದಿರುತ್ತಾನೆ?"
ಇಲ್ಲಿ ಭಿಕ್ಷುಗಳೇ, ಆತನು ಹೀಗೆ ಹಲವು ದೃಷ್ಟಿಗಳನ್ನು ಹೊಂದಿರುತ್ತಾನೆ. ಅವೆಂದರೆ:
 (1) ದಾನಕ್ಕೆ ಫಲವಿಲ್ಲ, ಅರ್ಪಣೆಗೆ ಫಲವಿಲ್ಲ, ತ್ಯಾಗ ಸತ್ಕಾರಗಳಿಗೆ ಫಲವಿಲ್ಲ.
(2) ಸುಕಾರ್ಯಗಳಿಗೆ ಆಗಲಿ ಅಥವಾ ದುಷ್ಕಾರ್ಯಗಳಿಗಾಗಲಿ ಅಂತಹ ಕರ್ಮಗಳಿಗೆ ಫಲವಿಲ್ಲ
 (3) ಈ ಲೋಕವೂ ಇಲ್ಲ, ಪರಲೋಕವೂ ಇಲ್ಲ.
 (4) ತಾಯ್ತಂದೆಗಳ ಸಲಹುವಿಕೆಯಿಂದ ಯಾವ ಲಾಭವೂ ಇಲ್ಲ
. (5) ತಾಯ್ತಂದೆಗಳಿಲ್ಲದೆಯೇ ತಮಗೆ ತಾವೇ ಹುಟ್ಟುವ (ಓಪಪಾತಿಕ) ಜೀವಿಗಳಿಲ್ಲ.
(6) ಯೋಗ್ಯವಾಗಿ ಜೀವಿಸಿ, ಯೋಗ್ಯವಾಗಿ ಸಾಕ್ಷಾತ್ಕರಿಸಿ, ಅಭಿಜ್ಞಾ ಸಾಕ್ಷಾತ್ಕರಿಸಿ (ಅತೀಂದ್ರಿಯ ಬಲಗಳನ್ನು ಪಡೆದು) ಈ ಲೋಕ ಮತ್ತು ಪರಲೋಕವಿದೆ ಎಂದು ಹೇಳುವ ಸಮಣ ಬ್ರಾಹ್ಮಣರು ಇಲ್ಲ, ಅಂತಹವರು ಇಲ್ಲವೇ ಇಲ್ಲ. ಹೀಗೆ ಭಿಕ್ಷುಗಳೇ, ಅಸತ್ಪುರುಷನು ದೃಷ್ಟಿಕೋನಗಳನ್ನು ಹೊಂದಿರುತ್ತಾನೆ."


"ಮತ್ತೆ ಭಿಕ್ಷುಗಳೇ, ಅಸತ್ಪುರುಷನು ಹೇಗೆ ದಾನವನ್ನು ಮಾಡುತ್ತಾನೆ?"
"ಭಿಕ್ಷುಗಳೇ, ಅಸತ್ಪುರುಷನು ಗೌರವ ಭಕ್ತಿ ಯಾವುದೂ ಇಲ್ಲದೆ ದಾನ ಮಾಡುತ್ತಾನೆ. ಆತನು ತನ್ನ ಕೈಯಿಂದ ದಾನ ಮಾಡುವುದಿಲ್ಲ, ಆತನು ಬಿಸಾಡುವಂತಹದ್ದನ್ನು ದಾನ ಮಾಡುತ್ತಾನೆ. ಆತನು ಅಗತ್ಯವಿಲ್ಲದ್ದನ್ನು, ಅಪೇಕ್ಷೆಪಡದಿದ್ದುದನ್ನು ದಾನ ಮಾಡುತ್ತಾನೆ. ಆತನು ಭವಿಷ್ಯವನ್ನು ಗಣನೆಗೆ ತೆಗೆದುಕೊಳ್ಳದೆ ದಾನ ಮಾಡುತ್ತಾನೆ. ಹೀಗೆ ಭಿಕ್ಷುಗಳೇ, ಅಸತ್ಪುರುಷನು ದಾನ ಮಾಡುತ್ತಾನೆ."

"ಭಿಕ್ಷುಗಳೇ, ಯಾವ ಅಸತ್ಪುರುಷನು ಪಾಪಚಿತ್ತ ಸ್ಥಿತಿಗಳನ್ನು, ಪಾಪಿ ಮಿತ್ರರನ್ನು, ಪಾಪ ಯೋಚನೆಗಳನ್ನು, ಪಾಪ ಸಲಹೆಗಳನ್ನು, ಪಾಪಯುತ ಮಾತುಗಳನ್ನು, ಪಾಪಯುತ ಕರ್ಮಗಳನ್ನು ಮತ್ತು ಪಾಪಯುತ ದೃಷ್ಟಿಕೋನಗಳನ್ನು ಹೊಂದಿರುತ್ತಾನೋ, ಆತನು ಮರಣದ ನಂತರ ಅಸತ್ಪುರುಷರೆ ಇರುವಂತಹ ಗತಿಯಲ್ಲಿ ಹುಟ್ಟುತ್ತಾನೆ. ಯಾವುದು ಆ ಗತಿ? ನಿರಯ ಇಲ್ಲವೆ ತಿರಚ್ಚನಯೋನಿ (ಪ್ರಾಣಿಗಳ ಲೋಕ)ಯಲ್ಲಿ ಜನ್ಮಿಸುತ್ತಾನೆ."

"ಈಗ ಭಿಕ್ಷುಗಳೇ, ಸತ್ಪುರುಷನಿಗೆ ಇಂಥಹ ವ್ಯಕ್ತಿಯು ಸತ್ಪುರುಷನು ಎಂದು ಗೊತ್ತಾಗುತ್ತದೆಯೇ?"
"ಹೌದು ಭಂತೆ."

"ಒಳ್ಳೆಯದು ಭಿಕ್ಷುಗಳೇ, ಕೆಲವು ಸನ್ನಿವೇಶಗಳು ಬರುತ್ತವೆ. ಆಗ ಈತನು ಸತ್ಪುರುಷ ಎಂದು ಸತ್ಪುರುಷನಿಗೆ ಗೊತ್ತಾಗುವುದು. ಆದರೆ ಭಿಕ್ಷುಗಳೇ, ಸತ್ಪುರುಷನು ಅಸತ್ಪುರುಷನಿಗೆ ನೋಡಿದಾಗ ಇವನು ಅಸತ್ಪುರುಷ ಎಂದು ಗೊತ್ತಾಗುವುದೇ?"
"ಹೌದು ಭಂತೆ ಗೊತ್ತಾಗುವುದು."

"ಒಳ್ಳೆಯದು ಭಿಕ್ಷುಗಳೇ, ಸನ್ನಿವೇಶಗಳು ಬಂದಾಗ ಸತ್ಪುರುಷನಿಗೆ ಇವನು ಸತ್ಪುರುಷ ಎಂದು ಗೊತ್ತಾಗುತ್ತದೆ. ಭಿಕ್ಷುಗಳೇ, ಸತ್ಪುರುಷನು ಕುಶಲ ಚಿತ್ತ ಸ್ಥಿತಿಗಳನ್ನು ಹೊಂದಿರುತ್ತಾನೆ. ಸತ್ಪುರುಷರ ಜೊತೆಯಲ್ಲಿ ರಮಿಸುತ್ತಾನೆ, ಸತ್ಪುರುಷರ ರೀತಿಯಲ್ಲಿ ಚಿಂತನೆ ಮಾಡುತ್ತಾನೆ. ಸತ್ಪುರುಷ ರೀತಿ ಬೋಧನೆ (ಬುದ್ಧಿವಾದ) ನೀಡುತ್ತಾನೆ. ಸತ್ಪುರುಷರ ರೀತಿ ಮಾತನಾಡುತ್ತಾನೆ. ಸತ್ಪುರುಷರ ರೀತಿ ಕರ್ಮ ಮಾಡುತ್ತಾನೆ, ಸತ್ಪುರುಷರ ರೀತಿಯಲ್ಲಿ ದೃಷ್ಟಿಕೋನಗಳನ್ನು ಹೊಂದಿರುತ್ತಾನೆ. ಸತ್ಪುರುಷ ರೀತಿಯಲ್ಲಿ ದಾನ ಮಾಡುತ್ತಾನೆ ಮತ್ತು ಭಿಕ್ಷುಗಳೇ, ಹೇಗೆ ಸತ್ಪುರುಷನು ಕುಶಲ ಚಿತ್ತಸ್ಥಿತಿಗಳನ್ನು ಹೊಂದಿರುತ್ತಾನೆ? ಇಲ್ಲಿ ಭಿಕ್ಷುಗಳೇ, ಸತ್ಪುರುಷನು ಶ್ರದ್ಧೆಯನ್ನು ಹೊಂದಿರುತ್ತಾನೆ, ಸತ್ಪುರುಷನು ಪಾಪಲಜ್ಜೆ ಹಾಗು ಪಾಪ ಭಯವನ್ನು ಹೊಂದಿರುತ್ತಾನೆ. ಸತ್ಪುರುಷನು ಬಹಳಷ್ಟು ಜ್ಞಾನವನ್ನು ಕೇಳಿರುತ್ತಾನೆ. ಸತ್ಪುರುಷನು ಪ್ರಯತ್ನಶಾಲಿಯಾಗಿರುತ್ತಾನೆ, ಆತನಲ್ಲಿ ಸ್ಮೃತಿಯು ಜಾಗರೂಕತೆಯು ಸ್ಥಾಪಿತವಾಗಿರುತ್ತದೆ. ಸತ್ಪುರುಷನು ಪ್ರಜ್ಞಾವಂತನಾಗಿರುತ್ತಾನೆ. ಈ ರೀತಿಯಾಗಿ ಭಿಕ್ಷುಗಳೇ, ಸತ್ಪುರುಷನು ಕುಶಲ ಸ್ಥಿತಿಗಳನ್ನು ಹೊಂದಿರುತ್ತಾನೆ".

"ಮತ್ತು ಭಿಕ್ಷುಗಳೇ, ಹೇಗೆ ಸತ್ಪುರುಷನು ಸತ್ಪುರುಷರೊಡನೆ ಜೊತೆಯಲ್ಲಿರುತ್ತಾನೆ?"
"ಭಿಕ್ಷುಗಳೇ, ಯಾರಲ್ಲಿ ಶ್ರದ್ಧೆಯಿರುವುದೋ, ಪಾಪಲಜ್ಜೆ, ಪಾಪಭೀತಿಯಿರುವದೋ, ಯಾರು ಬಹುಶೃತರೋ, ಪ್ರಯತ್ನಶಾಲಿಗಳೋ, ಜಾಗೃತರೋ ಮತ್ತು ಪ್ರಜ್ಞಾವಂತರೋ ಅಂತಹವರೊಡನೆ ಸತ್ಪುರುಷನು ಸ್ನೇಹ ಬೆಳೆಸಿ ಅವರೊಂದಿಗಿರುತ್ತಾನೆ."

"ಮತ್ತೆ ಭಿಕ್ಷುಗಳೇ, ಸತ್ಪುರುಷನು ಹೇಗೆ ಸತ್ಪುರುಷರಂತೆ ಚಿಂತನೆ ಮಾಡುತ್ತಾನೆ, ಇಲ್ಲಿ ಭಿಕ್ಷುಗಳೇ, ಸತ್ಪುರುಷನು ತನಗೆ ಬಾಧೆಯನ್ನು ನೀಡುವುದಿಲ್ಲ, ಹಾಗೆಯೇ ಪರರಿಗೂ ಬಾಧೆಯನ್ನು ನೀಡುವುದಿಲ್ಲ. ತನಗೆ ಮತ್ತು ಪರರಿಗೂ ಬಾಧೆ ನೀಡುವುದಿಲ್ಲ. ಹೀಗೆ ಭಿಕ್ಷುಗಳೇ, ಆತನು ಸತ್ಪುರುಷರಂತೆ ಚಿಂತಿಸುತ್ತಾನೆ."

"ಮತ್ತೆ ಭಿಕ್ಷುಗಳೇ, ಹೇಗೆ ಆತನು ಸತ್ಪುರುಷರಂತೆ ಬುದ್ಧಿವಾದ ನೀಡುವನು? ಇಲ್ಲಿ ಭಿಕ್ಷುಗಳೇ, ಸತ್ಪುರುಷನು ತನಗೆ ಹಾನಿಯಾಗುವಂತೆ ಅಥವಾ ಪರರಿಗೆ ಹಾನಿಯಾಗುವಂತೆ ಆಗಲಿ ಅಥವಾ ಈರ್ವರಿಗೂ ಹಾನಿಯಾಗುವಂತೆ ಬುದ್ಧಿವಾದ ನೀಡುವುದಿಲ್ಲ. ಹೀಗೆ ಭಿಕ್ಷುಗಳೇ, ಆತನು ಸತ್ಪುರುಷರಂತೆ ಬುದ್ಧಿವಾದ ನೀಡುತ್ತಾನೆ."

"ಮತ್ತೆ ಭಿಕ್ಷುಗಳೇ, ಹೇಗೆ ಆತನು ಸತ್ಪುರುಷರಂತೆ ಮಾತನಾಡುತ್ತಾನೆ? ಇಲ್ಲಿ ಭಿಕ್ಷುಗಳೇ, ಆತನು ಸುಳ್ಳಿನಿಂದ ದೂರವಾಗುತ್ತಾನೆ, ಚಾಡಿಯಿಂದ, ಕಟುವಾಕ್ಯದಿಂದ, ವ್ಯರ್ಥ ಹರಟೆಯಿಂದ ದೂರವಾಗುತ್ತಾನೆ. ಹೀಗೆ ಭಿಕ್ಷುಗಳೇ, ಸತ್ಪುರುಷನು ಮಾತನಾಡುತ್ತಾನೆ."

"ಮತ್ತೆ ಭಿಕ್ಷುಗಳೇ, ಹೇಗೆ ಆತನು ಸತ್ಪುರುಷರಂತೆ ಕರ್ಮ ಮಾಡುತ್ತಾನೆ? ಇಲ್ಲಿ ಭಿಕ್ಷುಗಳೇ, ಆತನು ಎಲ್ಲಾ ಜೀವಿಗಳ ಜೀವಹತ್ಯೆಯಿಂದ ದೂರನಾಗಿರುತ್ತಾನೆ, ಕಳ್ಳತನದಿಂದ, ವ್ಯಭಿಚಾರದಿಂದ ದೂರವಾಗುತ್ತಾನೆ. ಹೀಗೆ ಭಿಕ್ಷುಗಳೇ, ಸತ್ಪುರುಷನು ಕರ್ಮ ಮಾಡುತ್ತಾನೆ."

"ಮತ್ತೆ ಭಿಕ್ಷುಗಳೇ, ಹೇಗೆ ಆತನು ಸತ್ಪುರುಷರಂತೆ ದೃಷ್ಟಿಕೋನಗಳನ್ನು ಹೊಂದಿರುತ್ತಾನೆ? ಭಿಕ್ಷುಗಳೇ, ಸತ್ಪುರುಷನು ಈ ಕೆಳಕಂಡಂತೆ ಸಮ್ಮಾ ದೃಷ್ಟಿಕೋನಗಳನ್ನು ಹೊಂದಿರುತ್ತಾನೆ: ದಾನಕ್ಕೆ ಫಲವಿದೆ, ಅರ್ಪಣೆಗೆ ಫಲವಿದೆ, ತ್ಯಾಗ ಸತ್ಕಾರಗಳಿಗೆ ಫಲವಿದೆ, ಕುಶಲ ಕರ್ಮಗಳಿಗೆ ಹಾಗು ಪಾಪ ಕರ್ಮಗಳಿಗೆ ಫಲವಿದೆ. ಹೀಗಾಗಿ ಈ ಲೋಕವು ಇದು ಹಾಗೆಯೆ ಪರಲೋಕವೂ ಇದೆ. ತಾಯ್ತಂದೆಯರಿಗೆ ಸೇವೆ ಮಾಡುವುದರಿಂದಾಗಿ ಲಾಭವಿದೆ, ತಾಯಿ-ತಂದೆಯರಿಲ್ಲದೆಯೇ ತಾವಾಗಿಯೇ ಹುಟ್ಟುವಂತಹ ಓಪಪಾತಿಕ ಜೀವಿಗಳೂ ಇದ್ದಾರೆ. ಯೋಗ್ಯವಾಗಿ, ಸರಿಯಾಗಿ ಜೀವಿಸುವ ಸಮಣ ಬ್ರಾಹ್ಮಣರೂ ಇದ್ದಾರೆ. ತಮ್ಮ ಅಭಿಜ್ಞ ಬಲದಿಂದಾಗಿ ಈ ಲೋಕದ ಬಗ್ಗೆ, ಪರಲೋಕದ ಬಗ್ಗೆ ಹೇಳುವಂತಹ ಮಹಾನುಭಾವರು ಲೋಕದಲ್ಲಿರುವರು. ಹೀಗೆ ಭಿಕ್ಷುಗಳೇ, ಸತ್ಪುರುಷರು ಸಮ್ಮಾದೃಷ್ಟಿಗಳನ್ನು ಹೊಂದಿತ್ತಾರೆ."

"ಮತ್ತೆ ಭಿಕ್ಷುಗಳೇ, ಹೇಗೆ ಸತ್ಪುರುಷರು ದಾನವನ್ನು ಮಾಡುತ್ತಾರೆ? ಇಲ್ಲಿ ಭಿಕ್ಷುಗಳೇ, ಸತ್ಪುರುಷರು ಗೌರವಾರ್ಪಣೆಯಿಂದ ದಾನ ಮಾಡುತ್ತಾರೆ. ತಮ್ಮ ಕೈಯಿಂದಲೇ ದಾನವನ್ನು ಮಾಡುತ್ತಾರೆ. ಪ್ರಜ್ಞಾಯುತವಾಗಿ ಶ್ರೇಷ್ಟವಾದುದನ್ನು ದಾನ ಮಾಡುತ್ತಾರೆ. ಪರಿಶುದ್ಧವಾದುದನ್ನೇ ದಾನ ಮಾಡುತ್ತಾರೆ. ಭವಿಷ್ಯವನ್ನು ಗಣನೆಗೆ ತೆಗೆದುಕೊಂಡು ದಾನ ಮಾಡುತ್ತಾರೆ. ಹೀಗೆ ಭಿಕ್ಷುಗಳೇ, ಸತ್ಪುರುಷರು ದಾನ ಮಾಡುತ್ತಾರೆ."

"ಭಿಕ್ಷುಗಳೇ, ಹೀಗೆ ಸತ್ಪುರುಷನು ಕುಶಲಚಿತ್ತ ಸ್ಥಿತಿಗಳನ್ನು ಹೊಂದಿರುತ್ತಾನೆ, ಸತ್ಪುರುಷರ ಜೊತೆಯಲ್ಲಿರುತ್ತಾನೆ, ಸತ್ಪುರುಷರಂತೆ ಚಿಂತಿಸುತ್ತಾನೆ, ಸತ್ಪುರುಷರಂತೆ ಬುದ್ಧಿವಾದನೀಡುತ್ತಾನೆ, ಸತ್ಪುರುಷರಂತೆಯೇ ಮಾತನಾಡುತ್ತಾನೆ, ಸತ್ಪುರುಷರಂತೆಯೇ ಕರ್ಮ ಮಾಡುತ್ತಾನೆ, ಸತ್ಪರುಷರಂತೆಯೇ ದೃಷ್ಟಿಕೋನಗಳನ್ನು ಹೊಂದಿರುತ್ತಾನೆ. ಸತ್ಪುರುಷರಂತೆ ದಾನವನ್ನು ಮಾಡುತ್ತಾನೆ. ಇಂತಹ ಸತ್ಪುರುಷನು ಮರಣದ ನಂತರವೂ ಸತ್ಪುರುಷರು ಇರುವಲ್ಲಿಯೇ ಜನ್ಮ ತಾಳುವನು ಅಂತಹ ಸ್ಥಿತಿ ಯಾವುದು? ಅದೇ ಮಹತ್ತರವಾದ ಸುಗತಿ ಅಥವಾ ಮಾನವರಲ್ಲಿ ಶ್ರೇಷ್ಠ ಸ್ಥಿತಿಯನ್ನು ಹೊಂದುತ್ತಾನೆ."

ಹೀಗೆ ಭಗವಾನರು ಹೇಳಿದಾಗ, ಭಿಕ್ಷುಗಳು ಆನಂದದಿಂದ ಅನುಮೋದನೆ ಮಾಡಿದರು.

Tuesday 22 October 2019

ಅವಿಜ್ಜ ಸುತ್ತ (ಅವಿದ್ಯೆ/ಅಜ್ಞಾನದ ಸೂತ್ರ)

ಅವಿಜ್ಜ ಸುತ್ತ (ಅವಿದ್ಯೆ/ಅಜ್ಞಾನದ ಸೂತ್ರ)



ಒಬ್ಬ ಭಿಕ್ಷುವು ಭಗವಾನರಲ್ಲಿಗೆ ಹೋಗಿ ವಂದಿಸಿದನು, ನಂತರ ಒಂದು ಪಕ್ಕದಲ್ಲಿ ಕುಳಿತನು ಮತ್ತು ಹೀಗೆ ಹೇಳಿದನು: ಭಗವಾನ್ ಯಾವ ಒಂದು ವಿಷಯವನ್ನು ಭಿಕ್ಷುವು ವಜರ್ಿಸಿದಾಗ, ಆತನಲ್ಲಿನ ಅಜ್ಞಾನವು ಪರಿತ್ಯಜಿಸಲ್ಪಟ್ಟು ಆತನಲ್ಲಿ ಸ್ಪಷ್ಟ ಜ್ಞಾನವು ಉದಯಿಸುತ್ತದೆ?
ಹೌದು ಭಿಕ್ಷು, ಅಂತಹ ವಿಷಯವೊಂದಿದೆ. ಅದನ್ನು ಭಿಕ್ಷುವು ವಜರ್ಿಸಿದಾಗ ಆತನಲ್ಲಿನ ಅಜ್ಞಾನವು ಪರಿತ್ಯಜಿಸಲ್ಪಟ್ಟು ಆತನಲ್ಲಿ ಸ್ಪಷ್ಟ ಜ್ಞಾನವು ಉದಯಿಸುತ್ತದೆ.
ಆ ಒಂದು ವಿಷಯ ಯಾವುದು?
ಅಜ್ಞಾನವೇ ಭಿಕ್ಷುವೆ, ಇದನ್ನು ಭಿಕ್ಷುವು ವಜರ್ಿಸಿದಾಗ ಆತನ ಅಜ್ಞಾನವು ಪರಿತ್ಯಜಿಸಲ್ಪಟ್ಟು, ಆತನಲ್ಲಿ ಸ್ಪಷ್ಟ ಜ್ಞಾನವು ಉದಯಿಸುತ್ತದೆ.
ಆದರೆ ಅಜ್ಞಾನವು ಪರಿತ್ಯಜವಾಯಿತು ಮತ್ತು ಸ್ಪಷ್ಟ ಜ್ಞಾನವು ಉದಯಿಸುತ್ತದೆ ಎಂದು ಭಿಕ್ಷುವು ಹೇಗೆ ಅರಿಯುತ್ತಾನೆ ಮತ್ತು ಕಾಣುತ್ತಾನೆ?
ಒಮ್ಮೆ ಭಿಕ್ಷುವು ಹೀಗೆ ಕೇಳಿರುತ್ತಾನೆ: ಎಲ್ಲಾ ವಿಷಯಗಳು ಅಂಟುವಿಕೆಗೆ ಅನರ್ಹವಾಗಿದೆ. ಆಗ ಆತನಿಗೆ ನೇರವಾಗಿ ಪ್ರತಿಯೊಂದು ಅರಿವಿಗೆ ಬಂದಿರುತ್ತದೆ. ಆತನು ಎಲ್ಲವನ್ನು ಸೂಕ್ಷ್ಮವಾಗಿಯೇ ಗ್ರಹಿಸಿರುತ್ತಾನೆ. ಆತನು ಎಲ್ಲಾ ವಿಷಯಗಳನ್ನು ಯಾವುದೋ ರೀತಿಯಲ್ಲಿ ಪ್ರತ್ಯೇಕವಾಗಿ ಕಾಣುತ್ತಾನೆ.
ಆತನು ಕಣ್ಣನ್ನು ಬೇರೆಯಾಗಿ ಕಾಣುತ್ತಾನೆ, ಹಾಗೆಯೇ ದೃಶ್ಯಗಳನ್ನು ಬೇರೆಯಾಗಿ (ಪ್ರತ್ಯೇಕವಾಗಿ) ಕಾಣುತ್ತಾನೆ, ಅವೆರಡರಿಂದ ಉತ್ಪನ್ನವಾಗುವ ಕಣ್ಣಿನಿಂದಾದ ಅರಿವನ್ನು (ಚಕ್ಷು ವಿಞ್ಞಾನ) ಬೇರೆಯಾಗಿಯೇ ಕಾಣುತ್ತಾನೆ. ಹಾಗೆಯೇ ಕಣ್ಣು ಮತ್ತು ದೃಶ್ಯಗಳ ನಡುವಿನ ಸಂಪರ್ಕವನ್ನು (ಪಸ್ಸ/ಸ್ಪರ್ಶ) ಬೇರೆಯಾಗಿಯೇ ಕಾಣುತ್ತಾನೆ ಮತ್ತು ಯಾವುದೆಲ್ಲವು ಕಣ್ಣಿನ ಸಂಪರ್ಕದಿಂದಾಗಿ ಉದಯಿಸಿತೋ ಹೇಳುವುದಾದರೆ ಸುಖ, ದುಃಖ ಅಥವಾ ಸುಖವು-ದುಃಖವೂ ಅಲ್ಲದ, ಅವೆಲ್ಲವನ್ನು ಪ್ರತ್ಯೇಕವಾಗಿ ಕಾಣುತ್ತಾನೆ.
ಹಾಗೆಯೇ ಕಿವಿಯನ್ನು... ಮೂಗನ್ನು... ನಾಲಿಗೆಯನ್ನು... ದೇಹವನ್ನು ಪ್ರತ್ಯೇಕವಾಗಿ ಕಾಣುತ್ತಾನೆ. ಆತನು ಮನಸ್ಸನ್ನು ಪ್ರತ್ಯೇಕವಾಗಿ ಕಾಣುತ್ತಾನೆ, ಹಾಗೆಯೇ ಚಿತ್ತ ವಿಷಯಗಳನ್ನು ಪ್ರತ್ಯೇಕವಾಗಿ ಕಾಣುತ್ತಾನೆ, ಹಾಗೆಯೇ ಮನೋ ವಿಞ್ಞಾನವನ್ನು (ಮನಸ್ಸಿನಿಂದ ಅರಿಯುವಿಕೆಯನ್ನು) ಬೇರೆಯಾಗಿ ಕಾಣುತ್ತಾನೆ. ಮನಸ್ಸಿನ ಮತ್ತು ಮನೋ ವಿಷಯಗಳ ನಡುವಿನ ಸಂಪರ್ಕವನ್ನು ಬೇರೆಯಾಗಿ ಕಾಣುತ್ತಾನೆ. ಹಾಗೆಯೇ ಅಲ್ಲಿಂದ ಉತ್ಪನ್ನವಾದ ಸುಖ-ದುಃಖ, ಸುಖವು ಅಲ್ಲದ, ದುಃಖವು ಅಲ್ಲದ ವೇದನೆಗಳನ್ನು ಬೇರೆಯಾಗಿ ಕಾಣುತ್ತಾನೆ.
ಹೀಗೆ ಓ ಭಿಕ್ಷುವೇ, ಭಿಕ್ಷುವು ಅಜ್ಞಾನವು ಪರಿತ್ಯಜಿತವಾಗಿ, ಸ್ಪಷ್ಟ ಜ್ಞಾನವು ಉದಯಿಸುವುದನ್ನು ಭಿಕ್ಷು ಕಾಣುತ್ತಾನೆ.

Tuesday 13 August 2019

Girimananda sutta in kannada ಗಿರಿಮಾನಂದ ಸುತ್ತ (ರೋಗಿಗಳ ಬಳಿ ಪಠಿಸುವ ಸುತ್ತ)

      ಗಿರಿಮಾನಂದ ಸುತ್ತ (ರೋಗಿಗಳ ಬಳಿ ಪಠಿಸುವ ಸುತ್ತ)

ಒಮ್ಮೆ ಭಗವಾನರು ಶ್ರಾವಸ್ಥಿಯ ಜೇತವನದ ಆನಾಥಪಿಂಡಿಕನ ವಿಹಾರದಲ್ಲಿ ತಂಗಿದ್ದರು. ಆ ಸಮಯದಲ್ಲಿ ಪೂಜ್ಯ ಗಿರಿಮಾನಂದರು ಅಸ್ವಸ್ಥರಾಗಿದ್ದರು. ಅವರ ಆರೋಗ್ಯ ತೀರ ಕೆಟ್ಟಿತ್ತು. ಆಗ ಪೂಜ್ಯ ಆನಂದರವರು ಭಗವಾನರ ಬಳಿಗೆ ಬಂದು ವಂದಿಸಿ ಒಂದೆಡೆ ಕುಳಿತು ಹೀಗೆ ನುಡಿದರು: :
 ಭಗವಾನ್ ಅಯುಷ್ಮಂತ ಗಿರಿಮಾನಂದರು ತೀರ ಅಸ್ವಸ್ಥರಾಗಿದ್ದಾರೆ ಅವರ ಆರೋಗ್ಯ ಗಂಭಿರವಾಗಿದೆ. ಅದ್ದರಿಂದ ಭಗವಾನರು ಅನುಕಂಪೆಯುಳ್ಳವರಾಗಿ ಅಲ್ಲಿಗೆ ಹೋಗುವಂತಾಗಲಿ.
ಆನಂದ ನೀನು ಆಯುಷ್ಮಂತ ಗಿರಿಮಾನಂದನಲ್ಲಿಗೆ ಹೋಗಿ ಈ 10 ಬಗೆಯ ಸಞ್ಞಗಳನ್ನು (ಸಂಜ್ಞೆ/ಗ್ರಹಿಕೆ) ಪಠಿಸಿದ್ದೆ ಆದರೆ , ಅದನ್ನು ಆಲಿಸಿ, ಅದರ ಬಗ್ಗೆ ಮನಸ್ಸು ಹರಿಸಿ ಆತನ ಚಿತ್ತವು ಸಕಾರಾತ್ಮಕವಾಗಿ ಆತನ ರೋಗವು ಆ ಸ್ಥಳದಲ್ಲಿಯೆ ಆ ಕ್ಷಣವೇ ಇಲ್ಲದಂತಾಗುವುದು.

 ಆನಂದ ಯಾವುವವು 10 ?ಅವೆಂದರೆ 

1. ಅನಿತ್ಯದ ಸಂಜ್ಞೆ
2. ಅನತ್ತ (ಆನಾತ್ಮದ ) ಸಂಜ್ಞೆ
3. ಅಶುಭದ ಕುರೂಪ (ಸಂಜ್ಞೆ)
4. ಅದಿನವದ (ಅನಾನುಕೂಲಗಳ) ಸಂಜ್ಞೆ
5. ಪಹಾನದ (ತೇಜಿಸಬೇಕಾದುದರ ಬಗ್ಗೆ ) ಸಂಜ್ಞೆ
6. ವಿರಾಗದ  (ರಾಗರಹಿತನಾಗುವಿಕೆಯ) ಸಂಜ್ಞೆ
7. ನಿರೋಧದ  (ನಿಲ್ಲಿಸುವಿಕೆಯ /ಉದಯಿಸುದಿರುವಿಕೆಯ) ಸಂಜ್ಞೆ
8. ಸಬ್ಬಲೋಕೇ ಅಭಿರತನ (ಎಲ್ಲಾ ಲೋಕಗಳ ಬಗೆಗಿನ ಆಸಕ್ತಿ ಇಲ್ಲದಿರುವಿಕೆಯ )ಸಂಜ್ಞೆ
9. ಸರ್ವ ಸಂಖಾರಗಳಲ್ಲಿ ಅನಿತ್ಯದ ಸಂಜ್ಞೆ
10. ಅನಾಪಾನ ಸತಿ

1.ಮತ್ತೆ ಯಾವುದು ಅನಿತ್ಯದ ಸಂಜ್ಞೆ ? 
ಇಲ್ಲಿ ಭಿಕ್ಖುವು ಅಥವಾ ಸಾಧಕನು ಕಾಡಿಗೆ ಹೋಗಿ ಅಥವಾ ಮರದ ಬುಡಕ್ಕೆ, ಅಥವಾ ಖಾಲಿಯಾದ ಗೃಹದಲ್ಲಿ, ಹೋಗಿ ಹೀಗೆ ಚಿಂತನೆ ಮಾಡುತ್ತಾನೆ ದೇಹವಾಗಲಿ, ಭಾವವೇಶಗಳಾಗಲಿ (ವೇದನೆ), ಸಂಜ್ಞೇಗಳಾಗಲಿ, ಸಂಖಾರಗಳಾಗಲಿ(ಇಚ್ಚೆ) ಮತ್ತು ವಿಜ್ಞಾಣ(ಮನಸ್ಥಿತಿ/ಅರಿವು)ಗಳಾಗಲಿ ಇವೆಲ್ಲವೂ ಅನಿತ್ಯವಾಗಿದೆ ಹೀಗೆ ಆತನು ಪಂಚಖಂದಗಳಲ್ಲಿ ಅನಿತ್ಯಗಳನ್ನು ಧ್ಯಾನದಲ್ಲಿ ಕಾಣುವನು.. ಇದಕ್ಕೆ ಅನಿತ್ಯದ ಸಂಜ್ಞೆ ಎನ್ನುವರು.

 2. ಮತ್ತೆ ಯಾವುದು ಅನತ್ತ (ಆನಾತ್ಮದ ) ಸಂಜ್ಞೆ ? 
ಇಲ್ಲಿ ಭಿಕ್ಖುವು ಅಥವಾ ಸಾಧಕನು ಕಾಡಿಗೆ ಹೋಗಿ ಅಥವಾ ಮರದ ಬುಡಕ್ಕೆ, ಅಥವಾ ಖಾಲಿಯಾದ ಗೃಹದಲ್ಲಿ, ಹೋಗಿ ಹೀಗೆ ಚಿಂತನೆ ಮಾಡುತ್ತಾನೆ : ಕಣ್ನು ಆಗಲಿ ಅಥವಾ ಅವುಗಳಿಂದ ನೋಡಲ್ಪಡುವ ರೂಪಗಳಾಗಲಿ ಹಾಗೆಯೇ ಕಿವಿ ಮತ್ತು ಶಬ್ದಗಳು: ; ಮೂಗು ಮತ್ತು ವಾಸನೆಗಳು ; ನಾಲಿಗೆ ಮತ್ತು ಸ್ವಾದಗಳು :ದೇಹ ಮತ್ತು ಸ್ಪರ್ಷಗಳು ; ಮತ್ತು ಮನಸ್ಸು ಮತ್ತು ಮಾನಸಿಕ ವಿಷಯಗಳು. ಇವು ಯಾವುವು ಸಹಾ ನಾನಲ್ಲ ,ನನ್ನದಲ್ಲ, ನನ್ನ ಆತ್ಮವಲ್ಲ, ಎಂದು ಅರಿಯುವುದು. ಹೀಗೆ ಆರು ಇಂದ್ರಿಯಗಳು ಹಾಗೂ ಅವುಗಳ ವಿಷಯಗಳಲ್ಲಿ ಆನಾತ್ಮವನ್ನು ಕಾಣುವುದು ಅಂದರೆ ಆವು ಯಾವುದರಲ್ಲಿಯೂ ಸಹಾ ಆತ್ಮವನ್ನು (ಸ್ವಯಂ/ನಾನು/ನನ್ನದು) ಕಾಣದಿರುವುದು.

   3. ಮತ್ತೆ ಯಾವುದು ಅಶುಭದ (ಕುರೂಪ )ಸಂಜ್ಞೆ? 
ಇಲ್ಲಿ ಭಿಕ್ಖುವು ಅಥವಾ ಸಾಧಕನು ಕಾಡಿಗೆ ಹೋಗಿ ಅಥವಾ ಮರದ ಬುಡಕ್ಕೆ, ಅಥವಾ ಖಾಲಿಯಾದ ಗೃಹದಲ್ಲಿ, ಹೋಗಿ ಹೀಗೆ ಚಿಂತನೆ ಮಾಡುತ್ತಾನೆ : ಇಲ್ಲಿ ಭಿಕ್ಖುವು ಪಾದತಳದಿಂದ ಹಿಡಿದು ತಲೆಕೂದಲವರೆವಿಗೂ ಈ ಶರೀರವೂ ಚರ್ಮದಿಂದ ಆವೃತವಾದ ಅನೇಕ ಬಗೆಯ ಅಸಹ್ಯತೆಗಳಿಂದ  ಕೂಡಿರುವುದನ್ನು ಹೀಗೆ ಪರಿಕ್ಷಿಸುತ್ತಾನೆ.  ಈ ಶರೀರದಲ್ಲಿ ತಲೆಕೂದಲು, ಶರೀರದ ಕೂದಲು, ಉಗುರುಗಳು, ಹಲ್ಲುಗಳು, ಚರ್ಮ, ಮಾಂಸ, ಸ್ನಾಯುಗಳು, ಮೂಳೆಗಳು,, ಅಸ್ಥಿಮಜ್ಜೆ, , ಮೂತ್ರಪಿಂಡ, ಹೃದಯ, ಯಕೃತ್, ದ್ವನಿಪೆಟ್ಟಿಗೆ, ಗುಲ್ಮ, ಶ್ವಾಸಕೋಶ, ಕರುಳು, ಜಠರ, ಜೀರ್ಣವಾಗದ ಆಹಾರ, ಮಲ, ಪಿತ್ತ,, ಕಫ, ಕೀವು,, ರಕ್ತ, ಬೆವರು, ,ಕೊಬ್ಬು, ಆಶ್ರು, ಮೆದಸ್ಸು, ಜೊಲ್ಲು, ಗೊಣ್ಣೆ, ಕೀಲುಗಳ ಮಧ್ಯೆಯಿರುವ ಎಣ್ಣೆ, ಮೂತ್ರ, ಇತ್ಯಾದಿಗಳು ಇವೆ. ಹೀಗೆ ಶರೀರದ ಕುರೂಪವನ್ನು ಅರಿಯುತ್ತ ಅಸಹ್ಯಕರದ ಸಂಜ್ಞೆಗಳನ್ನು ಅರಿಯುತ್ತ ಬೆಳಸುತ್ತಾನೆ. ಇದನ್ನು ಅಶುಭದ ಸಂಜ್ಞೆ ಎನ್ನುವರು.


   4. ಮತ್ತೆ ಯಾವುದು ಅದಿನವದ (ಅನಾನುಕೂಲಗಳ) ಸಂಜ್ಞೆ ? 
ಇಲ್ಲಿ ಭಿಕ್ಖುವು ಅಥವಾ ಸಾಧಕನು ಕಾಡಿಗೆ ಹೋಗಿ ಅಥವಾ ಮರದ ಬುಡಕ್ಕೆ, ಅಥವಾ ಖಾಲಿಯಾದ ಗೃಹದಲ್ಲಿ, ಹೋಗಿ ಹೀಗೆ ಚಿಂತನೆ ಮಾಡುತ್ತಾನೆ : ಈ ಶರೀರವು ಬಹಳಷ್ಟು ದುಃಖಗಳನ್ನು ಮತ್ತು ಹಲವಾರು ಅನಾನುಕೂಲಗಳನ್ನು ಹೊಂದಿದೆ. ಅದರಿಂದಾಗಿಯೇ ಈ ಶರೀರವು ಬಹಳಷ್ಟು ವಿಧದ ಕಾಯಿಲೆಗಳಿಗೆ ಗುರಿಯಾಗುವುದು, ಉದಾಹರಿಸುವುದಾದರೆ ಕಣ್ಣಿನ ಕಾಯಿಲೆ, ಒಳಕಿವಿಯ ಕಾಯಿಲೆ, ಮೂಗಿನ ಕಾಯಿಲೆ, ನಾಲಿಗೆಗೆ ಸಂಬಂಧ ಪಟ್ಟ ಕಾಯಿಲೆಗಳು, ದೇಹ, ತಲೆ, ಕಿವಿ, ಹಲ್ಲುನೋವು,  ಮತ್ತು ತುಟಿಗಳ ಕಾಯಿಲೆ, ಕೆಮ್ಮು, ಅಸ್ತಮ, ನೆಗಡಿ, ಉರಿ, ಜ್ವರ, ಹೊಟ್ಟೆನೋವು, ತಲೆತಿರುಗುವಿಕೆ, ಆಮಶಂಕೆ, ಜಠರ ನೋವು, ಕಾಲೆರಾ, ಕುಷ್ಠರೋಗ, ಗುಳ್ಳೆಗಳು, ಚರ್ಮರೋಗಗಳು, ಕ್ಷಯರೋಗ, ಮೂಚರ್ೆರೋಗ,, ಸರ್ಪಸುತ್ತು ಚರ್ಮ ರೋಗ, ತುರಿಕೆ, ಕಜ್ಜಿ, ಸಿಡುಬು ರೋಗ, ಹಕ್ಕಳೆ ರೋಗ, ರಕ್ತಸ್ರಾವ, ಮಧುಮೇಹ, ಮೂಲವ್ಯಾಧಿ, ಮೊಡಮೆ, ಮತ್ತು ಕೀವು ವ್ರಣ, ಪಿತ್ತ ಅಥವಾ ಕಫ ಅಥವಾ ವಾತದ ಅವ್ಯವಸ್ಥೆಯಿಂದಾಗುವ ರೋಗಗಳು, ವಾತವರಣದ ಅವ್ಯವಸ್ಥೆಯಿಂದಾಗುವ ರೋಗಗಳು, ನಿರ್ಲಕ್ಷತೆಯಿಂದ ಉಂಟಾಗುವ ರೋಗಗಳು, ಅತಿಶ್ರಮದಿಂದ ಅಥವಾ ಹಿಂದಿನ ಕಮ್ಮಗಳಿಂದ ಉಂಟಾಗುವ ರೋಗಗಳು, ಚಳಿ, ಉಷ,, ಹಸಿವು, ಬಾಯಾರಿಕೆ, ನಿರ್ಜಲಿಕರಣ, ಮೂತ್ರವ್ಯಾದಿಗಳು, ಮತ್ತು ಇತ್ಯಾದಿ. ಹೀಗೆ ಹಲವಾರು ದೋಷಗಳಿಂದ ಕೋಡಿರುವ ಶರೀರವನ್ನು ವೀಕ್ಷಿಸುತ್ತಾನೆ, ಇದಕ್ಕೆ ಶರೀರದ ಅನಾನೂಕಲಗಳ ಸಂಜ್ಞೆ ಎನ್ನುತ್ತಾರೆ.

5. ಮತ್ತೆ ಯಾವುದು ಪಹಾನದ (ತೇಜಿಸಬೇಕಾದುದರ ಬಗ್ಗೆ )ಸಂಜ್ಞೆ ?
 ಇಲ್ಲಿ ಭಿಕ್ಖುವು ಅಥವಾ ಸಾಧಕನು ಕಾಡಿಗೆ ಹೋಗಿ ಅಥವಾ ಮರದ ಬುಡಕ್ಕೆ, ಅಥವಾ ಖಾಲಿಯಾದ ಗೃಹದಲ್ಲಿ, ಹೋಗಿ ಹೀಗೆ ಚಿಂತನೆ ಮಾಡುತ್ತಾನೆ : ಇಲ್ಲಿ ಭಿಕ್ಖುವು ಕಾಮುಕತೆಗಳ ಯೋಚನೆಗಳಾಗಲಿ, ಅಥವಾ ದ್ವೇಷಗಳ ಯೋಚನೆಗಳಾಗಲಿ ಅಥವಾ ಹಿಂಸೆ(ಕ್ರೂರತೆ )ಗಳ ಯೋಚನೆಗಳಾಗಲಿ ಅವು ಉಂಟಾದಾಗ ಸಹಿಸುವುದಿಲ್ಲ, ಅಕುಶಲ ಯೋಚನೆಗಳು ಯಾವುವೇ ಆಗಲಿ ಅವು ಉದಯಿಸುವಾಗ ಸಹಿಸಲಾರನು, ಬದಲಾಗಿ ಅವುಗಳನ್ನು ತೊರೆಯುತ್ತಾನೆ, ತೆಗೆದು ಹಾಕುತ್ತಾನೆ, ಇನ್ನಿಲ್ಲದಂತೆ ಮಾಡುತ್ತಾನೆ, ಮತ್ತು ನಿನರ್ಾಮ ಮಾಡಿಹಾಕುತ್ತಾನೆ, ಇದನ್ನು ತ್ಯೇಜಿಸಬೇಕಾದುದರ ಸಂಜ್ಞೆ ಎನ್ನುತ್ತಾರೆ.

6. ಮತ್ತೆ ಯಾವುದು ವಿರಾಗದ  (ರಾಗರಹಿತನಾಗುವಿಕೆಯ) ಸಂಜ್ಞೆ ?
 ಇಲ್ಲಿ ಭಿಕ್ಖುವು ಅಥವಾ ಸಾಧಕನು ಕಾಡಿಗೆ ಹೋಗಿ ಅಥವಾ ಮರದ ಬುಡಕ್ಕೆ, ಅಥವಾ ಖಾಲಿಯಾದ ಗೃಹದಲ್ಲಿ, ಹೋಗಿ ಹೀಗೆ ಚಿಂತನೆ ಮಾಡುತ್ತಾನೆ : ಇದೇ ಶಾಂತಿಯಾಗಿದೆ, ಇದೇ ಉದಾತ್ತವಾಗಿದೆ,  ಅದೇಂದರೆ ಎಲ್ಲಾ ಚಟುವಟಿಕೆ(ಸಂಖಾರ)ೆಗಳನ್ನು ಸ್ತಬ್ದಗೊಳಿಸುವಿಕೆ, ಎಲ್ಲಾ ಬಗೆಯ ಅಂಟುವಿಕೆಗಳನ್ನು ಬಿಟ್ಟುಬಿಡುವಿಕೆ, ತೃಷ್ಣೆಯ ಕ್ಷಯಗೊಳಿಸುವಿಕೆ, ವಿರಾಗತಾಳುವಿಕೆ, ನಂದಿಸುವಿಕೆ(ನಿಬ್ಬಾಣ). ಇವನ್ನೆ ವಿರಾಗದ ಸಂಜ್ಞೆಗಳು ಎನ್ನುವರು.

7.  ಮತ್ತೆ ಯಾವುದು ನಿರೋಧದ  (ನಿಲ್ಲಿಸುವಿಕೆಯ /ಉದಯಿಸುದಿರುವಿಕೆಯ) ಸಂಜ್ಞೆ ? 
ಇಲ್ಲಿ ಭಿಕ್ಖುವು ಅಥವಾ ಸಾಧಕನು ಕಾಡಿಗೆ ಹೋಗಿ ಅಥವಾ ಮರದ ಬುಡಕ್ಕೆ, ಅಥವಾ ಖಾಲಿಯಾದ ಗೃಹದಲ್ಲಿ, ಹೋಗಿ ಹೀಗೆ ಚಿಂತನೆ ಮಾಡುತ್ತಾನೆ : : ಇದೇ ಶಾಂತಿಯಾಗಿದೆ, ಇದೇ ಉದಾತ್ತವಾಗಿದೆ,  ಅದೇಂದರೆ ಎಲ್ಲಾ ಚಟುವಟಿಕ(ಸಂಖಾರ)ೆಗಳನ್ನು ಸ್ತಬ್ದಗೊಳಿಸುವಿಕೆ, ಎಲ್ಲಾ ಬಗೆಯ ಅಂಟುವಿಕೆಗಳನ್ನು ಬಿಟ್ಟುಬಿಡುವಿಕೆ, ತೃಷ್ಣೆಯ ಕ್ಷಯಗೊಳಿಸುವಿಕೆ, ನಿರೋಧ ತಾಳುವಿಕೆ, ನಂದಿಸುವಿಕೆ(ನಿಬ್ಬಾಣ)ೆ. ಇವನ್ನೆ ನಿರೋಧದ ಸಂಜ್ಞೆಗಳು ಎನ್ನುವರು.

8.  ಮತ್ತೆ ಯಾವುದು ಸಬ್ಬಲೋಕೇ ಅಭಿರತನ (ಎಲ್ಲಾ ಲೋಕಗಳ ಬಗೆಗಿನ ಆಸಕ್ತಿ ಇಲ್ಲದಿರುವಿಕೆಯ )ಸಂಜ್ಞೆ? 
ಇಲ್ಲಿ ಭಿಕ್ಖುವು ಲೋಕಗಳ ಬಗ್ಗೆ ಯಾವುದೇ ರೀತಿಯಲ್ಲೂ ಅಂಟಿಕೊಳ್ಳದೆ, ಈ ಹಿಂದಿನ ಎಲ್ಲವನ್ನು ಬಿಟ್ಟು, ಯಾವುದರಲ್ಲು ಆಕಷರ್ಿತನಾಗದೆ, ಹಿಡಿದುಕೊಳ್ಳದೆ, ಹಾಗೇಯೇ ೆ ಹುದುಗಿರುವ ಅನುಶಯಗಳ ಬಗ್ಗೆ ,ಇಚ್ಚೆಪಡದೆ, ದೃಡನಿಧರ್ಾರ ತಾಳದೆ ಹೀಗೆ ತೊರೆದು ಉಪಾದಿಯಿಲ್ಲದೆ ವಿಹರಿಸುತ್ತಾನೆ, ಇದನ್ನೆ ಸಬ್ಬಲೋಕೇ ಅಭಿರತನ (ಎಲ್ಲಾ ಲೋಕಗಳ ಬಗೆಗಿನ ಆಸಕ್ತಿ ಇಲ್ಲದಿರುವಿಕೆಯ )ಸಂಜ್ಞೆ ಎನ್ನುವರು.

9. ಮತ್ತೆ ಯಾವುದು ಸರ್ವ ಸಂಖಾರಗಳಲ್ಲಿ ಅನಿತ್ಯದ ಸಂಜ್ಞೆ ?
 ಇಲ್ಲಿ ಭಿಕ್ಖುವು ಎಲ್ಲಾ ಸಂಖಾರಗಳಲ್ಲಿ (ಚಟುವಟಿಕೆ) ಭಯಭೀತನಾಗಿ, ವಿಕಷರ್ಿತನಾಗಿ, ಜಿಗುಪ್ಸೆ ತಾಳುತ್ತಾನೆ, ಇದನ್ನೆ ಸರ್ವ ಸಂಖಾರಗಳಲ್ಲಿ ಅನಿತ್ಯದ ಸಂಜ್ಞೆ ಎನ್ನುತ್ತಾರೆ.

10.ಮತ್ತೆ ಯಾವುದು ಅನಾಪಾನ ಸತಿ? 
ಇಲ್ಲಿ ಭಿಕ್ಷುವು ಅರಣ್ಯದಲ್ಲಿ, ಮರದ ಬುಡದಲ್ಲಿ ಅಥವ ಶೂನ್ಯಗೃಹದಲ್ಲಿ, ಪದ್ಮಾಸನದಲ್ಲಿ ಅಸೀನನಾಗಿ, ತನ್ನ ದೇಹವನ್ನು ನೇರವಾಗಿಟ್ಟುಕೊಂಡು ಮತ್ತು ಸದಾ ಉಶ್ವಾಸ ಮತ್ತು ನಿಶ್ವಾಸದಲ್ಲಿಯೇ ಜಾಗರೂಕತೆಯನ್ನು ಸ್ಥಾಪಿಸಿ ಸಾಧನೆ ಮಾಡುತ್ತಿರುತ್ತಾನೆ. 
1. ಉಸಿರಾಟವು ದೀರ್ಘವಾಗಿದ್ದರೆ ನಾನು ದೀರ್ಘವಾದ ಉಸಿರನ್ನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಅರಿಯುತ್ತಿರುತ್ತಾನೆ. 
2. ಉಸಿರಾಟವು ಕಿರಿದಾಗಿದ್ದರೆ ನಾನು ಕಿರಿದಾದ ಉಸಿರನ್ನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಅರಿಯುತ್ತಾನೆ. 
3. ಇಡೀ ಉಸಿರಿನ ಕಾಯವನ್ನು ಅನುಭವಿಸಿದವನಾಗಿ ನಾನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ತನಗೆ ತಾನೇ ಸುಶಿಕ್ಷಣ ಪಡೆಯುತ್ತಾನೆ.
4. ಉಸಿರು ಕಾಯದ ಸಂಖಾರಗಳನ್ನು (ಚಟುವಟಿಕೆ) ಶಾಂತಗೊಳಿಸಿ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ತನಗೆ ತಾನೇ ಸುಶಿಕ್ಷಣ ಪಡೆಯುತ್ತಾನೆ. (ಇವಿಷ್ಟು ಅನುಪಾನ ಕಾಯನುಪಸ್ಸನವಾಗಿದೆ).
5. ಆನಂದವನ್ನು (ಪ್ರೀತಿ) ಅನುಭವಿಸಿದವನಾಗಿ ನಾನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನಗೆ ತಾನೇ ಸುಶಿಕ್ಷಣ ಪಡೆಯುತ್ತಾನೆ.
6. ಶಾಂತತೆಯನ್ನು (ಸುಖ) ಅನುಭವಿಸಿದವನಾಗಿ ನಾನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನಗೆ ತಾನೇ ಸುಶಿಕ್ಷಣ ಪಡೆಯುತ್ತಾನೆ.
7. ಚಿತ್ತದ ಚಟುವಟಿಕೆಗಳನ್ನೆಲ್ಲಾ ಅನುಭವಿಸಿ ನಾನು ಉಶ್ವಾಸಿಸುತ್ತಿರುವೆ ಅಥವಾ ನಿಶ್ವಾಸಿಸುತ್ತಿರುವೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
8. ಚಿತ್ತದ ಚಟುವಟಿಕೆಗಳನ್ನೆಲ್ಲಾ (ಸಂಖಾರಗಳನ್ನು) ಶಾಂತಗೊಳಿಸಿದವನಾಗಿ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ. (ಇವಿಷ್ಟು ಅನಾಪಾನಾ ವೇದನಾನುಪಸ್ಸನವಾಗಿದೆ).
9. ಚಿತ್ತವನ್ನು ಅನುಭವಿಸಿದವನಾಗಿ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಅತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
10. ಚಿತ್ತವನ್ನು ಸಂತೃಪ್ತಿಗೊಳಿಸುತ್ತಾ (ಆನಂದಗೊಳಿಸುತ್ತಾ) ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
11. ಚಿತ್ತವನ್ನು ಸ್ಥಿರ (ಏಕಾಗ್ರ)ಗೊಳಿಸುತ್ತಾ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
12. ಚಿತ್ತವನ್ನು ವಿಮೋಚನೆಗೊಳಿಸುತ್ತಾ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ. (ಇವಿಷ್ಟು ಅನಾಪಾನಾ ಚಿತ್ತಾನುಪಸ್ಸನವಾಗಿದೆ).
13. ಅನಿತ್ಯತೆಯನ್ನು ಗಮನಿಸುತ್ತಾ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
14. ವಿರಾಗವನ್ನು ಗಮನಿಸುತ್ತಾ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
15. ನಿರೋಧವನ್ನು ಗಮನಿಸಿ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
16. ತ್ಯಜಿಸುವಿಕೆ (ಪಟಿನಿಸ್ಸ) ಗಮನಿಸುತ್ತಾ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ. (ಇವಿಷ್ಟು ಅನಾಪಾನಾ ಧಮ್ಮಾನುಪಸ್ಸನವಾಗಿದೆ).

ಹೀಗೆ ನೀವು ಬಿಕ್ಖು ಗಿರಿಮಾನಂದನ ಬಳಿಯಲ್ಲಿ ಈ 10 ಸಂಜ್ಞೆಗಳನ್ನು ಪಠಿಸಿದರೆ , ಇದನ್ನು ಆಲಿಸಿ ಅಥರ್ೈಸಿಕೊಂಡ ನಂತರ ಆ ಕ್ಷಣದಲೇ ಅಲ್ಲಿಯೇ ಆತನ ಕಾಯಿಲೆಯು ನಾಷವಾಗುವುದು.

ನಂತರ ಆನಂದರವರು ಆ ಸುತ್ತವನ್ನು ಭಗವಾನರಿಂದ ಆಲಿಸಿ ನೆನಪಿನಲ್ಲಿಟ್ಟುಕೊಂಡು ಗಿರಿವéಾನಂದರ ಬಳಿಗೆ ಹೋದರು ಹಾಗು ಈ ಸುತ್ತವನ್ನು ಅದರಲ್ಲಿಯ 10 ಸಂಜ್ಞೆಗಳನ್ನು ಪಠಿಸಿದಾಗ ಗಿರಿಮಾನಂದರ ಕಾಯಿಲೆಯು ಆ ಕ್ಷಣದಲ್ಲಿಯೇ ಅಲ್ಲಿಯೇ ಇನ್ನಿಲ್ಲದಂತಾಯಿತು. ಹೀಗೆ ಅವರು ರೋಗದಿಂದ ಮುಕ್ತರಾದರು.
(ಅಂದಿನಿಂದ ಇಲ್ಲಿಯತನಕ ಈ ಸುತ್ತವನ್ನು ರೋಗಿಗಳ ಬಳಿಯಲ್ಲಿ ಪಠಿಸುತ್ತಾರೆ. ಅದನ್ನು ಆಲಿಸಿ ಅಥರ್ೈಸಿಕೊಂಡವರು ರೋಗಗಳಿಂದ ಮುಕ್ತರಾದಂತಹ ಬಹಳಷ್ಡು ನಿದರ್ಶನಗಳು ಇವೆ.)








Thursday 28 March 2019

dakkhina vibhanga sutta in kannada ದಕ್ಖಿಣಾ ವಿಭಂಗ ಸುತ್ತ (ದಾನದ ವಿಶ್ಲೇಷಣೆಯ ಸುತ್ತ)

                                         ದಕ್ಖಿಣಾ ವಿಭಂಗ ಸುತ್ತ
                                    (ದಾನದ ವಿಶ್ಲೇಷಣೆಯ ಸುತ್ತ)



  

(ಸಂಘಕ್ಕೆ ನೀಡುವ ದಾನವೂ ವೈಯಕ್ತಿಕ ದಾನಕ್ಕಿಂತಲೂ ಅತಿ ಹೆಚ್ಚು ಫಲಯುತ)


ನಾನು ಹೀಗೆ ಕೇಳಿದ್ದೇನೆ, ಆ ಸಮಯದಲ್ಲಿ ಬುದ್ಧ ಭಗವಾನರು ಶಾಕ್ಯರ ನಾಡಿನ ಕಪಿಲವಸ್ತುವಿನ ಆಲದ ಮರಗಳ(ನಿಗ್ರೋಧರಾಮ) ವಿಹಾರದಲ್ಲಿದ್ದರು,  ಆಗ ಮಾತೆಯಾದ ಮಹಾಪಜಾಪತಿ ಗೋತಮಿಯು ಭಗವಾನರ ಬಳಿಗೆ ಒಂದು ಜೋತೆ ವಸ್ತ್ರಗಳೊಂದಿಗೆ ಬಂದರು. ಆಕೆಯು ವಂದಿಸಿ ಒಂದೆಡೆ ಕುಳಿತುಕೊಂಡರು ನಂತರ ಭಗವಾನರೊಂದಿಗೆ ಹೀಗೆ ನುಡಿದರು :
 ಭಂತೆ ಇವನ್ನು ನಾನೇ ಸ್ವತಃ ನೆಯ್ದು ಹಾಗೂ ಹೆಣೆದು ಈ ವಸ್ತ್ರಗಳನ್ನು ಭಗವಾನರಿಗೆಂದೇ ತಂದಿರುವೆ ಭಗವಾನರು ದಯೆಯಿಂದ ಇವನ್ನು ಸ್ವೀಕರಿಸಬೇಕು, ಹೀಗೆ ಆಕೆಯು ನುಡಿದಾಗ ಭಗವಾನರು ಆಕೆಗೆ ಹೀಗೆ ನುಡಿದರು :
   ಸಂಘಕ್ಕೆ ದಾನವ ನೀಡು ಮಾತೆ ಗೋತಮಿ, ಯಾವಾಗ ನೀವು ಸಂಘಕ್ಕೆ ನೀಡುವಿರೊ ಆಗ ಸಂಘ ಹಾಗೂ ನಾನು ಜೋತೆಯಾಗಿಯೇ ಗೌರವಕ್ಕೆ ಪಾತ್ರರಾಗುವೆವು.
 ಆಗ ಆಕೆಯು ಎರಡನೆಯ ಬಾರಿ ಹೀಗೆ ನುಡಿದರು :  ಭಂತೆ ಇವನ್ನು ನಾನೇ ಸ್ವತಃ ನೆಯ್ದು ಹಾಗೂ ಹೆಣೆದು ಈ ವಸ್ತ್ರಗಳನ್ನು ಭಗವಾನರಿಗೆಂದೇ ತಂದಿರುವೆ ಭಗವಾನರು ದಯೆಯಿಂದ ಇವನ್ನು ಸ್ವೀಕರಿಸಬೇಕು, ಹೀಗೆ ಆಕೆಯು ನುಡಿದಾಗ ಭಗವಾನರು ಎರಡನೆಯ ಬಾರಿ ಆಕೆಗೆ ಹೀಗೆ ನುಡಿದರು :
   ಸಂಘಕ್ಕೆ ದಾನವ ನೀಡು ಮಾತೆ ಗೋತಮಿ, ಯಾವಾಗ ನೀವು ಸಂಘಕ್ಕೆ ನೀಡುವಿರೊ ಆಗ ಸಂಘ ಹಾಗೂ ನಾನು ಜೋತೆಯಾಗಿಯೇ ಗೌರವಕ್ಕೆ ಪಾತ್ರರಾಗುವೆವು.
  ಆಗ ಆಕೆಯು ಮೂರನೆೆಯ ಬಾರಿ ಹೀಗೆ ನುಡಿದರು :  ಭಂತೆ ಇವನ್ನು ನಾನೇ ಸ್ವತಃ ನೆಯ್ದು ಹಾಗೂ ಹೆಣೆದು ಈ ವಸ್ತ್ರಗಳನ್ನು ಭಗವಾನರಿಗೆಂದೇ ತಂದಿರುವೆ ಭಗವಾನರು ದಯೆಯಿಂದ ಇವನ್ನು ಸ್ವೀಕರಿಸಬೇಕು, ಹೀಗೆ ಆಕೆಯು ನುಡಿದಾಗ ಭಗವಾನರು ಮೂರನೆಯ ಬಾರಿ ಆಕೆಗೆ ಹೀಗೆ ನುಡಿದರು :
   ಸಂಘಕ್ಕೆ ದಾನವ ನೀಡು ಮಾತೆ ಗೋತಮಿ, ಯಾವಾಗ ನೀವು ಸಂಘಕ್ಕೆ ನೀಡುವಿರೊ ಆಗ ಸಂಘ ಹಾಗೂ ನಾನು ಜೋತೆಯಾಗಿಯೇ ಗೌರವಕ್ಕೆ ಪಾತ್ರರಾಗುವೆವು. ಯಾವಾಗ ಭಗವಾನರು ಹೀಗೆ ನುಡಿದರೋ ಆಗ ಪೂಜ್ಯ ಆನಂದರವರು ಮಧ್ಯೆ ಪ್ರವೇಶಿಸಿ ಹೀಗೆ ನುಡಿದರು :
ಭಗವಾನ್,  ಮಾತೆಯವರಾದ ಮಹಾಪಜಾಪತಿ ಗೋತಮಿಯವರ ಈ ವಸ್ತ್ರಗಳನ್ನು ದಯವಿಟ್ಟು ಸ್ವೀಕರಿಸಿರಿ, ಮಹಾಪಜಾಪತಿ ಗೋತಮಿಯು ತಮಗೆ ಆಪಾರ ಸಹಾಯಗಳನ್ನು ಮಾಡಿರುವರು, ಚಿಕ್ಕಮ್ಮರಾಗಿ ತಮಗೆ ಪೋಷಿಸಿದ್ದಾರೆ, ಲಾಲನೆಪಾಲನೆ ಮಾಡಿದ್ದಾರೆ, ತಮಗೆ ಹಾಲನ್ನು ಉಣಿಸಿದ್ದಾರೆ, ಯಾವಾಗ ಬೋದಿಸತ್ವರ ಮಾತೆಯು ಈ ಲೋಕದಿಂದ ಮೃತ್ಯುವಶರಾದರೋ ಆಗ ಈಕೆಯೇ ತನ್ನ ಸ್ವಪುತ್ರನಂತೆಯೇ ಎಲ್ಲಾ ರೀತಿಯಲ್ಲಿಯು ತಮಗೆ ಪೋಷಿಸಿಹಳು (ಮತ್ತು ಹೀಗಾಗಿ ಬುದ್ಧರು ಸಹಾ ಆಕೆಗೆ ಸಹಾಯ ಮಾಡಲೇಬೇಕು.)

 ಮತ್ತು ಭಗವಾನರೂ ಸಹಾ ಆಕೆಗೆ ತುಂಬ ಸಹಾಯ ಮಾಡುತ್ತಲೇ ಬಂದಿರುವರು, ಭಗವಾನರಿಂದಲೇ ಆಕೆಯು ಬುದ್ಧರಿಗೆ, ಧಮ್ಮಕ್ಕೆ, ಮತ್ತು ಸಂಘಕ್ಕೆ ಶರಣು ಹೋಗಿರುವರು, ಭಗವಾನರಿಂದಲೇ ಆಕೆಯು ಪ್ರಾಣಿಹತ್ಯೆಗಳನ್ನು ಮಾಡುವುದನ್ನು ತೋರೆದಿರುವರು, ಕೋಡದೆ ಇದ್ದುದ್ದನ್ನು ಸ್ವೀಕರಿಸುವುದಿಲ್ಲ, ಬ್ರಹ್ಮಚಾರ್ಯೆಯ ಜೀವನ ನಡೆಸುತಿಹರು, ಸುಳ್ಳು ಹೇಳಲಾರರು, ಮಾದಕ ಪಾನಿಯಗಳನ್ನು ಸ್ವೀಕರಿಸಲಾರರು,

 ತಿರತನಗಳಾದ ತಮಗೆ, ಧಮ್ಮಕ್ಕೆ, ಮತ್ತು ಸಂಘಕ್ಕೆ ಅಪಾರ ಶ್ರದ್ಧೆಯನ್ನು ಇಟ್ಟಿರುವರು, ಹಾಗೂ ಆರ್ಯರ ಶೀಲಗಳನ್ನು ಇಷ್ಟಪಟ್ಟು ಪಾಲಿಸುತಿಹರು. ಭಗವಾನರಿಂದಲೇ ಆಕೆಯು ಆರಿಯ ಸತ್ಯಗಳಾದ ದುಃಖ, ದುಃಖಸಮುದಯ, ದುಃಖನಿರೋಧ, ಮತ್ತು ಆರಿಯ ಅಷ್ಟಾಂಗ ಮಾರ್ಗದ ಬಗೆಗಿನ ಸಂಶಯಗಳನ್ನು ದಾಟಿರುವರು, ಹೀಗಾಗಿ ಭಗವಾನರು ಸಹಾ ಆಕೆಗೆ ಆಪಾರ ಸಹಾಯ ಮಾಡಿರುವರು.

ಇದು ಸತ್ಯ, ಆನಂದ. ಯಾವಾಗ ಒಬ್ಬನು ತಿಸರಣುವಿಗೆ ಶರಣು ಹೋಗಲು ಸಹಾಯ ಮಾಡಿರುವನೊ, ಅಂತಹವನಿಗೆ ಋಣ ತೀರಿಸುವುದು ಅಷ್ಟು ಸುಲಭವಲ್ಲ. ತಲೆಬಾಗಿ ವಂದಿಸುವುದರಿಂದಾಗಲಿ, ಮೇಲೇದ್ದು ಗೌರವಿಸುವುದರಿಂದಾಗಲಿ, ಕೈಜೋಡಿಸಿ ನಮಸ್ಕರಿಸುವುದರಿಂದಾಗಲಿ, ಮತ್ತು ವಿನಯವಿಧೇಯತೆಯಿಂದಾಗಲಿ, ಅಂತಹವರಿಗೆ ಚಿವರ ವಸ್ತ್ರಾದಿಗಳಿಂದ ದಾನಮಾಡುವುದರಿಂದಾಗಲಿ, ಆಹಾರ ಪಾನಿಯಗಳ ದಾನದಿಂದಾಗಲಿ, ವಸತಿ ನೀಡುವುದರಿಂದಾಗಲಿ, ರೋಗಿಯಾಗಿದ್ದಾಗ ಔಷಧಿಗಳನ್ನು ನೀಡುವುದರಿಂದಾಗಲಿ, ಅಂತಹವರಿಗೆ ಒಬ್ಬನು ಋಣವನ್ನು ತೀರಿಸಲಾರನು,
   ಮತ್ತೆ ಯಾವಾಗ ಒಬ್ಬನಿಂದಾಗಿ ಪಂಚಶೀಲಗಳಾದ ಪ್ರಾಣಿಹತ್ಯೆಗಳನ್ನು ಮಾಡುವುದನ್ನು ತೋರೆದಿರುವುದು, ಕೋಡದೆ ಇದ್ದುದ್ದನ್ನು ಸ್ವೀಕರಿಸದಿರುವುದು, ಬ್ರಹ್ಮಚಾರ್ಯೆಯ ಜೀವನ ನಡೆಸುವುದು, ಸುಳ್ಳು ಹೇಳದಿರುವುದು, ಮಾದಕ ಪಾನಿಯಗಳನ್ನು ಸ್ವೀಕರಿಸದಿರುವುದು,  ಅಂತಹ ಸಹಾಯ ಮಾಡಿದವರಿಗೆ ಋಣ ತೀರಿಸುವುದು ಅಷ್ಟು ಸುಲಭವಲ್ಲ, ತಲೆಬಾಗಿ ವಂದಿಸುವುದರಿಂದಾಗಲಿ, ಮೇಲೇದ್ದು ಗೌರವಿಸುವುದರಿಂದಾಗಲಿ, ಕೈಜೋಡಿಸಿ ನಮಸ್ಕರಿಸುವುದರಿಂದಾಗಲಿ, ಮತ್ತು ವಿನಯವಿಧೇಯತೆಯಿಂದಾಗಲಿ, ಅಂತಹವರಿಗೆ ಚಿವರ ವಸ್ತ್ರಾದಿಗಳಿಂದ ದಾನಮಾಡುವುದರಿಂದಾಗಲಿ, ಆಹಾರ ಪಾನಿಯಗಳ ದಾನದಿಂದಾಗಲಿ, ವಸತಿ ನೀಡುವುದರಿಂದಾಗಲಿ, ರೋಗಿಯಾಗಿದ್ದಾಗ ಔಷಧಿಗಳನ್ನು ನೀಡುವುದರಿಂದಾಗಲಿ, ಒಬ್ಬನು ಅಂತಹವರಿಗೆ ಋಣವನ್ನು ತೀರಿಸಲಾರನು.

    ಯಾವಾಗ ಒಬ್ಬನಿಂದಾಗಿ ತಿರತನಗಳಾದ ಬುದ್ಧರಿಗೆ, ಧಮ್ಮಕ್ಕೆ, ಮತ್ತು ಸಂಘಕ್ಕೆ ಅಪಾರ ಶ್ರದ್ಧೆಯನ್ನು ಇಟ್ಟಿರುವಂತಾಗುವರೋ, ಹಾಗೂ ಆರ್ಯರ ಶೀಲಗಳನ್ನು ಇಷ್ಟಪಟ್ಟು ಪಾಲಿಸುವಂತವರಾಗಿದ್ದಾರೋ ಅಂತಹ ಸಹಾಯ ಮಾಡಿದವರಿಗೆ ಋಣ ತೀರಿಸುವುದು ಅಷ್ಟು ಸುಲಭವಲ್ಲ, ತಲೆಬಾಗಿ ವಂದಿಸುವುದರಿಂದಾಗಲಿ, ಮೇಲೇದ್ದು ಗೌರವಿಸುವುದರಿಂದಾಗಲಿ, ಕೈಜೋಡಿಸಿ ನಮಸ್ಕರಿಸುವುದರಿಂದಾಗಲಿ, ಮತ್ತು ವಿನಯವಿಧೇಯತೆಯಿಂದಾಗಲಿ, ಅಂತಹವರಿಗೆ ಚಿವರ ವಸ್ತ್ರಾದಿಗಳಿಂದ ದಾನಮಾಡುವುದರಿಂದಾಗಲಿ, ಆಹಾರ ಪಾನಿಯಗಳ ದಾನದಿಂದಾಗಲಿ, ವಸತಿ ನೀಡುವುದರಿಂದಾಗಲಿ, ರೋಗಿಯಾಗಿದ್ದಾಗ ಔಷಧಿಗಳನ್ನು ನೀಡುವುದರಿಂದಾಗಲಿ, ಒಬ್ಬನು ಅಂತಹವರಿಗೆ ಋಣವನ್ನು ತೀರಿಸಲಾರನು.

     ಮತ್ತು ಯಾರಿಂದಾಗಿ ಆರಿಯ ಸತ್ಯಗಳಾದ ದುಃಖ, ದುಃಖಸಮುದಯ, ದುಃಖನಿರೋಧ, ಮತ್ತು ದುಃಖ ನಿರೋಧದ ಮಾರ್ಗವಾದ ಆರಿಯ ಅಷ್ಟಾಂಗ ಮಾರ್ಗದ ಬಗೆಗಿನ ಮಾಹಿತಿಗಳನ್ನು ತಿಳಿದು ಅವುಗಳ ಬಗೆಗಿನ ಸಂಶಯಗಳನ್ನು ದಾಟಿರುವರೋ ಅಂತಹ ಸಹಾಯ ಮಾಡಿದವರಿಗೆ ಋಣ ತೀರಿಸುವುದು ಅಷ್ಟು ಸುಲಭವಲ್ಲ, ತಲೆಬಾಗಿ ವಂದಿಸುವುದರಿಂದಾಗಲಿ, ಮೇಲೇದ್ದು ಗೌರವಿಸುವುದರಿಂದಾಗಲಿ, ಕೈಜೋಡಿಸಿ ನಮಸ್ಕರಿಸುವುದರಿಂದಾಗಲಿ, ಮತ್ತು ವಿನಯವಿಧೇಯತೆಯಿಂದಾಗಲಿ, ಅಂತಹವರಿಗೆ ಚಿವರ ವಸ್ತ್ರಾದಿಗಳಿಂದ ದಾನಮಾಡುವುದರಿಂದಾಗಲಿ, ಆಹಾರ ಪಾನಿಯಗಳ ದಾನದಿಂದಾಗಲಿ, ವಸತಿ ನೀಡುವುದರಿಂದಾಗಲಿ, ರೋಗಿಯಾಗಿದ್ದಾಗ ಔಷಧಿಗಳನ್ನು ನೀಡುವುದರಿಂದಾಗಲಿ, ಒಬ್ಬನು ಅಂತಹವರಿಗೆ ಋಣವನ್ನು ತೀರಿಸಲಾರನು.

   ಆನಂದ ಹದಿನಾಲ್ಕು ಬಗೆಯ ವೈಯಕ್ತಿಕದಾನಗಳಿವೆ. ಯಾವುವವು 14 ? ಅವೆಂದರೇ ಒಬ್ಬನು ತಥಾಗತರು, ಅರಹಂತರು ಆದ ಸಮ್ಮಸಂಬುದ್ಧರಿಗೆ ದಾನವನ್ನು ನೀಡುತ್ತಾನೆ. ಇದು ಮೊದಲನೆಯ ವೈಯಕ್ತಿಕ ದಾನವಾಗಿದೆ. ಒಬ್ಬನು ಪಚ್ಚೆಕ ಬುದ್ಧರಿಗೆ ದಾನವನ್ನು ನೀಡುತ್ತಾನೆ, ಇದು ಎರಡನೆಯ ವೈಯಕ್ತಿಕದಾನವಾಗಿದೆ. ಒಬ್ಬನು ತಥಾಗತರ ಶ್ರಾವಕರಾದ ಅರಹಂತರಿಗೆ ದಾನವನ್ನು ಮಾಡುತ್ತಾನೆ. ಇದು ಮೂರನೆಯ ವೈಯಕ್ತಿಕ ದಾನವಾಗಿದೆ. ಒಬ್ಬನು ಅರಹಂತ ಫಲವನ್ನು ಸಾಕ್ಷತ್ಕರಿಸುವ ಮಾರ್ಗದಲ್ಲಿರುವವನಿಗೆ ದಾನ ನೀಡುತ್ತಾನೆ. ಇದು ನಾಲ್ಕನೆಯ ವೈಯಕ್ತಿಕದಾನವಾಗಿದೆ.. ಒಬ್ಬನು ಅನಾಗಾಮಿಗೆ ದಾನವನ್ನು ನೀಡುತ್ತಾನೆ, ಇದು ಐದನೆಯ ವೈಯಕ್ತಿಕದಾನವಾಗಿದೆ.. ಒಬ್ಬನು ಅನಾಗಾಮಿ ಪಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ ದಾನ ನೀಡುತ್ತಾನೆ , ಇದು ಆರನೆಯ ವೈಯಕ್ತಿಕ ದಾನವಾಗಿದೆ, ಒಬ್ಬನು ಸಕದಾಗಾಮಿಗೆ ದಾನವನ್ನು ನೀಡುತ್ತಾನೆ, ಇದು ಏಳನೆಯ ವೈಯಕ್ತಿಕದಾನವಾಗಿದೆ.. ಒಬ್ಬನು ಸಕದಾಗಾಮಿ ಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ ದಾನ ನೀಡುತ್ತಾನೆ , ಇದು ಎಂಟನೆಯ ವೈಯಕ್ತಿಕ ದಾನವಾಗಿದೆ, ಒಬ್ಬನು ಸೋತಪನ್ನನಿಗೆ ದಾನವನ್ನು ನೀಡುತ್ತಾನೆ, ಇದು ಒಂಬತ್ತನೆೆಯ ವೈಯಕ್ತಿಕ ದಾನವಾಗಿದೆ.. ಒಬ್ಬನು ಸೋತಪನ್ನ ಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ ದಾನ ನೀಡುತ್ತಾನೆ , ಇದು ಹತ್ತನೆಯ ವೈಯಕ್ತಿಕ ದಾನವಾಗಿದೆ, ಒಬ್ಬನು ಬುದ್ಧ ದಮ್ಮದ ಬಾಹ್ಯದಲ್ಲಿರುವ ನಿಷ್ಕಾಮ ವೀತರಾಗಿಗೆ ದಾನ ನೀಡುತ್ತಾನೆ, ಇದು ಹನ್ನೊಂದನೆಯ ವೈಯಕ್ತಿಕ ದಾನವಾಗಿದೆ, ಒಬ್ಬನು ಶೀಲವಂತ ಸಾಧಾರಣ ಮಾನವನಿಗೆ ದಾನ ನೀಡುತ್ತಾನೆ, ಇದು ಹನ್ನೆರಡನೆಯ ವೈಯಕ್ತಿಕ ದಾನವಾಗಿದೆ, ಒಬ್ಬನು ದುಶ್ಯೀಲ ಮಾನವನಿಗೆ ದಾನ ನೀಡುತ್ತಾನೆ, ಇದು ಹದಿಮೂರನೆಯ ವೈಯಕ್ತಿಕ ದಾನವಾಗಿದೆ, ಒಬ್ಬನು ತಿರಚ್ಛನಗತಿಯುಳ್ಳ ಪ್ರಾಣಿಗಳಿಗೆ ದಾನವನ್ನು ನೀಡುತ್ತಾನೆ, ಇದು ಹದಿನಾಲ್ಕನೆಯ ವೈಯಕ್ತಿಕ ದಾನವಾಗಿದೆ,
      ಈಗ ಆನಂದ , ಈ ಮೇಲಿನ ವ್ಯಕ್ತಿಗಳಿಗೆ ನೀಡಿರುವ ದಾನದಿಂದ ಈ ರೀತಿಯ ಫಲಿತಾಂಶಗಳನ್ನು ನಿರೀಕ್ಷಿಸಬಹುದು. ಪ್ರಾಣಿಗಳಿಗೆ ದಾನ ನೀಡಿದರೆ ನೂರು ಪಟ್ಟು ಫಲ ಸಿಗುತ್ತದೆ.
      ದುಶ್ಯೀಲ ಮಾನವನಿಗೆ ದಾನ ನೀಡಿದರೆ ಸಾವಿರ ಪಟ್ಟು ಫಲ ಹಿಂದಿರುಗಿ ಸಿಗುತ್ತದೆ.
      ಶೀಲವಂತ ಮಾನವನಿಗೆ ದಾನ ನೀಡಿದರೆ ಲಕ್ಷ ಪಟ್ಟು ಫಲ ಹಿಂದಿರುಗಿ ಸಿಗುತ್ತದೆ.
  ಬುದ್ಧ ದಮ್ಮದ ಬಾಹ್ಯದಲ್ಲಿರುವ ನಿಷ್ಕಾಮ ವಿತರಾಗಿಗೆ ದಾನ ನೀಡಿದರೆ 10000000000 ( ಸಾವಿರ ಕೋಟಿ) ಪಟ್ಟು  ಫಲ ಹಿಂದಿರುಗಿ ಸಿಗುತ್ತದೆ.   
      ಸೋತಪನ್ನ ಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ ದಾನ ನೀಡಿದರೆ  ಲೆಕ್ಖಕ್ಕೆ ನಿಲುಕದಂತಹುದು, ಅಳೆಯಲಾಗದಷ್ಟು ಪಟ್ಟು ಫಲ ಹಿಂದಿರುಗಿ ಸಿಗುತ್ತದೆ. ಹೀಗಿರುವಾಗ ಸೋತಪನ್ನರಿಗೆ ದಾನ ನೀಡಿದರೆ ಎಷ್ಟೊಂದು ಪಟ್ಟು ಫಲ ಹಿಂತಿರುಗಿ ಮರಳಬಹುದು,? ಹಾಗೂ ಸಕದಾಗಾಮಿ ಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ, ಸಕದಾಗಾಮಿಗೆ ,ಅನಾಗಾಮಿ ಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ, ಅನಾಗಾಮಿಗೆ ,ಅರಹಂತ ಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ, ಅರಹಂತರಿಗೆ , ಮತ್ತು ಪಚ್ಚೆಕ ಬುದ್ಧರಿಗೆ ದಾನ ನೀಡಿದರೆ ಎಷ್ಟೊಂದು ಪಟ್ಟು ಫಲ ಹಿಂತಿರುಗಿ ಮರಳಬಹುದು,? ಇನ್ನೂ ಸಮ್ಮ ಸಂಬುದ್ಧರಿಗೆ ದಾನ ನೀಡಿದರೇ ಎಷ್ಟೊಂದು ಪಟ್ಟು ಫಲ ಹಿಂತಿರುಗಿ ಮರಳಬಹುದು,?

   ಅದರೆ ಆನಂದ ಏಳು ಬಗೆಯ ದಾನಗಳನ್ನು ಸಂಘಕ್ಕೆ ಸಮಪರ್ಿಸಲಾಗುತ್ತದೆ. ಯಾವುವವು ಏಳು ?

1. ಬುದ್ಧಭಗವಾನರ ಸಹಿತ ಭಿಕ್ಖುಗಳು ಹಾಗು ಭಿಕ್ಖುಣಿಯರ ಸಮೂಹಕ್ಕೆ ಒಬ್ಬನು ದಾನ ನೀಡುವಿಕೆ. ಇದು ಸಂಘಕ್ಕೆ ಸಮಪರ್ಿಸಲಾಗುವ ಮೊದಲನೆಯ ದಾನ.

2.  ಬುದ್ಧಭಗವಾನರು ಮಹಾಪರಿನಿಬ್ಬಾಣ ಪಡೆದ ಬಳಿಕ ಭಿಕ್ಖುಗಳು ಹಾಗು ಭಿಕ್ಖುಣಿಯರ ಸಮೂಹಕ್ಕೆ ಒಬ್ಬನು ದಾನ ನೀಡುವಿಕೆ. ಇದು ಸಂಘಕ್ಕೆ ಸಮಪರ್ಿಸಲಾಗುವ ಎರಡನೆಯ ದಾನ.

3. ಭಿಕ್ಖುಗಳು ಸಮೂಹಕ್ಕೆ ಒಬ್ಬನು ದಾನ ನೀಡುವಿಕೆ. ಇದು ಸಂಘಕ್ಕೆ ಸಮಪರ್ಿಸಲಾಗುವ ಮೂರನೆಯ ದಾನ.

4. ಭಿಕ್ಖುಣಿಯರ ಸಮೂಹಕ್ಕೆ ಒಬ್ಬನು ದಾನ ನೀಡುವಿಕೆ. ಇದು ಸಂಘಕ್ಕೆ ಸಮಪರ್ಿಸಲಾಗುವ ನಾಲ್ಕನೆಯ ದಾನ.

5.  ನನಗಾಗಿ ಸಂಘವು ಅನೇಕ ಭಿಕ್ಖುಗಳು ಹಾಗು ಭಿಕ್ಖುಣಿಯರನ್ನು ದಾನಕ್ಕಾಗಿ ನೇಮಕಮಾಡಬಹುದು ಎಂದು ಯೋಚಿಸಿ ಒಬ್ಬನು ದಾನ ಮಾಡಬಹುದು. ಇದು ಸಂಘಕ್ಕೆ ಸಮಪರ್ಿಸಲಾಗುವ ಐದನೆಯ ದಾನ.

6. ನನಗಾಗಿ ಸಂಘವು ಅನೇಕ ಭಿಕ್ಖುಗಳನ್ನು ದಾನಕ್ಕಾಗಿ ನೇಮಕಮಾಡಬಹುದು ಎಂದು ಯೋಚಿಸಿ ಒಬ್ಬನು ದಾನ ಮಾಡಬಹುದು. ಇದು ಸಂಘಕ್ಕೆ ಸಮಪರ್ಿಸಲಾಗುವ ಆರನೆಯ ದಾನ.

7. ನನಗಾಗಿ ಸಂಘವು ಅನೇಕ ಭಿಕ್ಖುಣಿಯರನ್ನು ದಾನಕ್ಕಾಗಿ ನೇಮಕಮಾಡಬಹುದು ಎಂದು ಯೋಚಿಸಿ ಒಬ್ಬನು ದಾನ ಮಾಡಬಹುದು. ಇದು ಸಂಘಕ್ಕೆ ಸಮಪರ್ಿಸಲಾಗುವ  ಏಳನೆಯ ದಾನ.

  ಮುಂದೊಂದು ಕಾಲ ಬರುವುದು ಆಗ ಸಂಘದ ಸದಸ್ಯರು ಕೇವಲ ಕಾವಿಯ ವಸ್ತ್ರವನ್ನು ತಮ್ಮ ಕುತ್ತಿಗೆಯ ಸುತ್ತಲೂ ಮಾತ್ರ ಧರಿಸುವರು, ಅದರೆ ಅವರು ದುಶ್ಶಿಲರು ಹಾಗೂ ಹೀನಚಾರಿತ್ರ್ಯರು ಆಗಿರುತ್ತಾರೆ, ಅದರೆ ಜನರು ಅವರಿಗೆ ಸಂಘದ ಹೆಸರಿನಲ್ಲಿ ದಾನವನ್ನು ಮಾಡುತ್ತಾರೆ, ಆಗಲೂ ಸಹಾ ನಾನೂ ಹೇಳುತ್ತಿದೇನೆ ಸಂಘಕ್ಕೇ ನೀಡುವ ದಾನವು ಲೆಕ್ಖಕ್ಕೆ ನಿಲುಕದಂತಹುದು ಹಾಗೂ ಅಳೆಯಲಾಗದಂತಹುದು. ಹೀಗಾಗಿ ನಾನೂ ಹೇಳುವುದು ಏನೆಂದರೆ ಸಂಘಕ್ಕೆ ನೀಡುವ ದಾನವೂ ವೈಯಕ್ತಿಕ ದಾನಕ್ಕಿಂತಲೂ ಅತಿ ಹೆಚ್ಚು ಫಲಯುತವಾದದ್ದು.

    ಆನಂದ ದಾನಗಳಿಂದ ನಾಲ್ಕು ವಿಧವಾಗಿ ಪರಿಶುದ್ಧರಾಗುವರು. ಯಾವುವವು ನಾಲ್ಕು ?

1. ಇಲ್ಲಿ ದಾನದಿಂದ ದಾನಿಯು ಪರಿಶುದ್ಧನಾಗುತ್ತಾನೆ ಅದರೆ ಅತಿಥಿಯು(ಸ್ವೀಕರಿಸುವವನು) ಅಲ್ಲ.

2. ಇಲ್ಲಿ ದಾನದಿಂದ ಅತಿಥಿಯು ಪರಿಶುದ್ಧನಾಗುತ್ತಾನೆ ಅದರೆ ದಾನಿಯು ಅಲ್ಲ.

3. ಇಲ್ಲಿ ದಾನದಿಂದ ದಾನಿಯಾಗಲಿ ಅಥವಾ ಅತಿಥಿಯಾಗಲಿ ಈರ್ವರೂ ಪರಿಶುದ್ಧರಾಗುವುದಿಲ್ಲ.

4. ಇಲ್ಲಿ ದಾನದಿಂದ ದಾನಿಯು ಹಾಗೂ ಅತಿಥಿಯು ಈರ್ವರೂ ಪರಿಶುದ್ಧರಾಗುವರು.

 ಮತ್ತು ಇಲ್ಲಿ ಹೇಗೆ ದಾನದಿಂದ ದಾನಿಯು ಪರಿಶುದ್ಧನಾಗುತ್ತಾನೆ ಅದರೆ ಅತಿಥಿಯು(ಸ್ವೀಕರಿಸುವವನು) ಅಲ್ಲ.? ಹೇಗೆಂದರೆ ಇಲ್ಲಿ ದಾನಿಯು ಶೀಲವಂತನಾಗಿರುತ್ತಾನೆ ಸುಚಾರಿತ್ಯವಂತನಾಗಿರುತ್ತಾನೆ ಅದರೆ ಅತಿಥಿಯು ದುಶ್ಶಿಲನು ಹಾಗೂ ಹೀನಚಾರಿತ್ರ್ಯನು ಆಗಿರುತ್ತಾರೆ,

   ಮತ್ತು ಇಲ್ಲಿ ಹೇಗೆ ಇಲ್ಲಿ ದಾನದಿಂದ ಅತಿಥಿಯು ಪರಿಶುದ್ಧನಾಗುತ್ತಾನೆ ಅದರೆ ದಾನಿಯು ಅಲ್ಲ. ? ಹೇಗೆಂದರೆ ಇಲ್ಲಿ ಅತಿಥಿಯು ಶೀಲವಂತನಾಗಿರುತ್ತಾನೆ ಸುಚಾರಿತ್ಯವಂತನಾಗಿರುತ್ತಾನೆ ಅದರೆ ದಾನಿಯು ದುಶ್ಶಿಲನು ಹಾಗೂ ಹೀನಚಾರಿತ್ರ್ಯನು ಆಗಿರುತ್ತಾರೆ,
   ಮತ್ತು ಇಲ್ಲಿ ಹೇಗೆ ದಾನದಿಂದ ದಾನಿಯಾಗಲಿ ಅಥವಾ ಅತಿಥಿಯಾಗಲಿ ಈರ್ವರೂ ಪರಿಶುದ್ಧರಾಗುವುದಿಲ್ಲ. ? ಹೇಗೆಂದರೆ ಇಲ್ಲಿ ದಾನಿಯು ಹಾಗೂ ಅತಿಥಿಯು ಈರ್ವರೂ ದುಶ್ಶಿಲರು ಹಾಗೂ ಹೀನಚಾರಿತ್ರ್ಯರು ಆಗಿರುತ್ತಾರೆ,

   ಮತ್ತು ಇಲ್ಲಿ ಹೇಗೆ ಇಲ್ಲಿ ದಾನದಿಂದ ದಾನಿಯು ಹಾಗೂ ಅತಿಥಿಯು ಈರ್ವರೂ ಪರಿಶುದ್ಧರಾಗುವರು. ? ಹೇಗೆಂದರೆ ಇಲ್ಲಿ ದಾನಿಯು ಹಾಗೂ ಅತಿಥಿಯು ಈರ್ವರೂ ಶೀಲವಂತನಾಗಿರುತ್ತಾರೆ ಮತ್ತು ಸುಚಾರಿತ್ಯವಂತನಾಗಿರುತ್ತಾರೆ.

  ಹೀಗೆ ದಾನದಕ್ಷಣೆಗಳಿಂದ ನಾಲ್ಕು ವಿಧವಾಗಿ ವಿಶುದ್ಧರಾಗುವರು.

ಹೀಗೆ ನುಡಿದ ಭಗವಾನರು ನಂತರ ಸುಗತರು ಆದ ಶಾಸ್ತರು ಹೀಗೆ ನುಡಿದರು:

    ಯಾವಾಗ ಸುಶೀಲನು ಶ್ರದ್ಧಾಯುತ ಪ್ರಸನ್ನಚಿತ್ತದಿಂದ 
  ದುಶ್ಶಿಲನಿಗೆ ಯೋಗ್ಯವಾದ ಉಡುಗೋರೆ ಅಥವಾ ದಾನವನ್ನು 
  ವಿಶಾಲ ವಿಫುಲವಾದ ಭರವಸೆಗಳಿಂದ ನೀಡುವನೋ ಅಂತಹ 
   ದಾನವು ದಾಯಕನ್ನು ವಿಶುದ್ಧಗೊಳಿಸುವುದು.

   ಯಾವಾಗ ದುಶ್ಶಿಲನು ಸಂಶಯ ಚಿತ್ತದಿಂದ 
   ಶೀಲವಂತ ಅತಿಥಿಗೆ ಅಯೋಗ್ಯವಾದಂತಹ ದಾನವನ್ನು
  ಯಾವುದೇ ಫಲಗಳ ಭರವಸೆಗಳಿಲ್ಲದೆ ನೀಡುವನೋ ಅಂತಹ 
   ದಾನವು ಅತಿಥಿಯನ್ನು ವಿಶುದ್ಧಗೊಳಿಸುವುದು.

    ಯಾವಾಗ ದುಶ್ಶಿಲನು ಸಂಶಯ ಚಿತ್ತದಿಂದ 
   ದುಶ್ಶೀಲ ಅತಿಥಿಗೆ ಅಯೋಗ್ಯವಾದಂತಹ ದಾನವನ್ನು
  ಯಾವುದೇ ಫಲಗಳ ಭರವಸೆಗಳಿಲ್ಲದೆ ನೀಡುವನೋ ಅಂತಹ 
   ದಾನವು ಅತ್ಯಂತ ಅಲ್ಪ ಫಲಕಾರಿ ಎಂದು ಘೋಷಿಸುತ್ತೇನೆ.

    ಯಾವಾಗ ಸುಶೀಲನು ಶ್ರದ್ಧಾಯುತ ಪ್ರಸನ್ನಚಿತ್ತದಿಂದ 
  ಶೀಲವಂತನಿಗೆ ಯೋಗ್ಯವಾದ ಉಡುಗೋರೆ ಅಥವಾ ದಾನವನ್ನು 
  ವಿಶಾಲ ವಿಫುಲವಾದ ಭರವಸೆಗಳಿಂದ ನೀಡುವನೋ ಅಂತಹ 
   ದಾನವು ಮಹತ್ಫಲವೆಂದು ಘೋಷಿಸುತ್ತೇನೆ.

   

    ಯಾವಾಗ ವೀತರಾಗಿಯು ವೀತರಾಗಿಗೆ 
    ಪ್ರಸನ್ನಚಿತ್ತದಿಂದ ಯೋಗ್ಯವಾದ ದಾನವನ್ನು 
   ಕಮ್ಮಫಲದ ದೃಷ್ಟಿಕೋನದಿಂದ ನೀಡುವನೋ 
   ಅಂತಹ ದಾನವು  ನಿಜಕ್ಕೂ ಆಮಿಷ ದಾನಗಳಲ್ಲೇ 
         ಶ್ರೇಷ್ಟಕರವಾಗಿರುತ್ತದೆ.


   ಇಲ್ಲಿಗೆ ದಕ್ಖಿಣಾ ವಿಭಂಗ ಸುತ್ತವು ಮುಗಿಯಿತು.
( ಈ ಸುತ್ತದ ಪ್ರವಚನದ ನಂತರ ಎಲ್ಲರಿಗೂ ಭಗವಾನರು ಏತಕ್ಕಾಗಿ ಸಂಘದಾನಕ್ಕೆ ಒತ್ತು ನೀಡಿದರು ಎಂದು ತಿಳಿಯಿತು.)


 
 

 
    

Tuesday 26 March 2019

sacca vibhanga sutta in kannada ಸಚ್ಚ ವಿಭಂಗ ಸುತ್ತ(ಸತ್ಯಗಳ ವಿಶ್ಲೇಷಣೆಯ ಸುತ್ತ)

 
    ಸಚ್ಚ ವಿಭಂಗ ಸುತ್ತ(ಸತ್ಯಗಳ ವಿಶ್ಲೇಷಣೆಯ ಸುತ್ತ)


ನಾನು ಹೀಗೆ ಕೇಳಿದ್ದೇನೆ, ಒಮ್ಮೆ ಭಗವಾನರು ವಾರಣಾಸಿಯ ಇಸಿಪಟ್ಟಣದ ಜಿಂಕೆಗಳ ಉಧ್ಯಾನ(ಮಿಗದಾಯ)ದಲ್ಲಿ ತಂಗಿದ್ದರು, ಆಗ ಭಗವಾನರು ಭಿಕ್ಖುಗಳೊಂದಿಗೆ ಹೀಗೆ ಸಂಬೋಧಿಸಿದರು. :ಭಿಕ್ಖುಗಳೇ
       ಭಗವಾನ್
ಆಗ ಭಗವಾನರು ಹೀಗೆ ನುಡಿದರು : ಭಿಕ್ಖುಗಳೇ ತಥಾಗತರು ಅರಹಂತರು ಹಾಗೂ  ಸಮ್ಮಸಂಬುದ್ಧರಿಂದ ವಾರಣಾಸಿಯ ಋಷಿಪಟ್ಟಣದ ಮಿಗದಾಯದಲ್ಲಿ ಅನುತ್ತರವಾದ ಧಮ್ಮಚಕ್ರವು ಪ್ರವರ್ತನ(ಚಾಲಿತ)ವಾಯಿತು. ಮತ್ತು ಆ ಚಕ್ರವು ಯಾವುದೇ ಸಮಣನಿಂದಾಗಲಿ, ಅಥವಾ ಯಾವುದೇ ಬ್ರಾಹ್ಮಣನಿಂದಾಗಲಿ, ಅಥವಾ ಯಾವುದೇ ದೇವನಿಂದಾಗಲಿ, ಅಥವಾ ಯಾವುದೇ ಮಾರನಿಂದಾಗಲಿ, ಯಾವುದೇ ಬ್ರಹ್ಮನಿಂದಾಗಲಿ, ಅಥವಾ ಲೋಕಗಳಲ್ಲಿ ಯಾರಿಂದಲೇ ಆಗಲಿ ಅಪ್ರವರ್ತನ(ಅಚಾಲಿತ ಅಥವಾ ಹಿಂತಿರುಗಿ ಹೋಗುವಿಕೆ ಅಥವಾ ಸುಳ್ಳೆಂದು ಸಾಬಿತಾಗುವಿಕೆ)ವಾಗುವುದಿಲ್ಲ, ಇದು ಆರ್ಯಸತ್ಯಗಳ ಬೋದನೆಯಾಗಿದೆ, ಪ್ರತಿಪಾದನೆಯಾಗಿದೆ, ಸ್ಥಾಪನೆಯಾಗಿದೆ, ಸ್ಪಷ್ಟತೆಯಾಗಿದೆ, ವಿಶ್ಲೇಷಣೆಯಾಗಿದೆ,
 
    ಯಾವುವವು 4 ಆರ್ಯಸತ್ಯಗಳು ?

ಅವೆಂದರೆ
        1. ದುಃಖ ಆರ್ಯಸತ್ಯ
        2. ದುಃಖದ ಉದಯ(ಕಾರಣ) ಆರ್ಯಸತ್ಯ
        3. ದುಃಖದ ನಿರೋಧ ಆರ್ಯಸತ್ಯ ಮತ್ತು
        4. ದುಃಖದ ನಿರೋಧಕ್ಕೆ ಕೊಂಡೊಯ್ಯುವ ಮಾರ್ಗದ ಆರ್ಯಸತ್ಯ

ಭಿಕ್ಖುಗಳೇ ತಥಾಗತರು ಅರಹಂತರು ಹಾಗೂ  ಸಮ್ಮಸಂಬುದ್ಧರಿಂದ ವಾರಣಾಸಿಯ ಋಷಿಪಟ್ಟಣದ ಮಿಗದಾಯದಲ್ಲಿ ಅನುತ್ತರವಾದ ಧಮ್ಮಚಕ್ರವು ಪ್ರವರ್ತನ(ಚಾಲಿತ)ವಾಯಿತು. ಮತ್ತು ಆ ಚಕ್ರವು ಯಾವುದೇ ಸಮಣನಿಂದಾಗಲಿ, ಅಥವಾ ಯಾವುದೇ ಬ್ರಾಹ್ಮಣನಿಂದಾಗಲಿ, ಅಥವಾ ಯಾವುದೇ ದೇವನಿಂದಾಗಲಿ, ಅಥವಾ ಯಾವುದೇ ಮಾರನಿಂದಾಗಲಿ, ಯಾವುದೇ ಬ್ರಹ್ಮನಿಂದಾಗಲಿ, ಅಥವಾ ಲೋಕಗಳಲ್ಲಿ ಯಾರಿಂದಲೇ ಆಗಲಿ ಅಪ್ರವರ್ತನ(ಅಚಾಲಿತ ಅಥವಾ ಹಿಂತಿರುಗಿ ಹೋಗುವಿಕೆ ಅಥವಾ ಸುಳ್ಳೆಂದು ಸಾಬಿತಾಗುವಿಕೆ)ವಾಗುವುದಿಲ್ಲ, ಇದು ಆರ್ಯಸತ್ಯಗಳ ಬೋದನೆಯಾಗಿದೆ, ಪ್ರತಿಪಾದನೆಯಾಗಿದೆ, ಸ್ಥಾಪನೆಯಾಗಿದೆ, ಸ್ಪಷ್ಟತೆಯಾಗಿದೆ, ವಿಶ್ಲೇಷಣೆಯಾಗಿದೆ,


  ಭಿಕ್ಖುಗಳೇ ನೀವುಗಳು ಸಾರಿಪುತ್ರ ಹಾಗೂ ಮೊಗ್ಗಲಾನರ  ಸೇವನೆ(ಮಿತ್ರತ್ವ)ೆ  ಮಾಡಿರಿ, ಅವರ ಒಡನಾಟದಿಂದ ಬೆರೆಯಿರಿ, ಅವರು ಪಂಡಿತ(ಜ್ಞಾನಿ) ಭಿಕ್ಖುಗಳಾಗಿದ್ದಾರೆ, ಅವರು ಬ್ರಹ್ಮಚರಿಯದ ಶ್ರೇಷ್ಟ ಜೀವನಕ್ಕೆ ಅನುಗ್ರಹ ತೋರುತ್ತಾರೆ, ಅದರಲ್ಲಿ ಸಾರಿಪುತ್ತರು  ಜನ್ಮನೀಡಿದ ಮಾತೆಯ ತರಹ, ಹಾಗೆಯೇ ಮೋಗ್ಗಲಾನರು ಮಗುವನ್ನು ಸಲಹುವಂತಹವರ ತರಹ, ಸಾರಿಪುತ್ತರು ಎಲ್ಲರನ್ನು ಸೋತಪತ್ತಿ ಫಲವನ್ನು ಪಡೆಯುವ ಹಾಗೇ ಮಾರ್ಗದಶರ್ಿತರಾಗುವರು. ಮತ್ತು ಮೊಗ್ಗಲಾನರು ಉನ್ನತ ಗುರಿಯೆಡೆಗೆ ಸಾಗಿಸುವಂತಹವರು. ಸಾರಿಪುತ್ರರು ಆರ್ಯಸತ್ಯಗಳನ್ನು ಬೋದಿಸುವಲ್ಲಿ ಸಮರ್ಥರು ಅವರು ಆರ್ಯಸತ್ಯಗಳನ್ನು ವಿವರಿಸುತ್ತಾರೆ, ಒತ್ತಿಹೇಳುತ್ತಾರೆ, ಸ್ಥಾಪಿಸುತ್ತಾರೆ, ಸ್ಪಷ್ಟಿಕರಿಸುತ್ತಾರೆ, ವಿಶ್ಲೇಷಿಸುತ್ತಾರೆ, ಮತ್ತು ಪ್ರಕಟಪಡಿಸುತ್ತಾರೆ. ಹೀಗೆ ನುಡಿದ ಭಗವಾನರು ತಮ್ಮ ಆಸನದಿಂದ ಎದ್ದು ತಮ್ಮ ವಿಹಾರದೆಡೆಗೆ ವಿಶ್ರಮಿಸಲು ಹೋರಟರು.

     ಅವರು ಹೋರಟ ನಂತರ ಸಾರಿಪುತ್ತರು ಎದ್ದು ಭಿಕ್ಖುಗಳೊಂದಿಗೆ ಹೀಗೆ ಸಂಬೋದಿಸಿದರು : ಅಯುಷ್ಮಂತ ಭಿಕ್ಖುಗಳೇ,
ಆಗ ಪ್ರತಿಯಾಗಿ ಭಿಕ್ಖುಗಳು ಸಹಾ ಆಯುಷ್ಮಂತರೇ ಎಂದರು. ಆಗ ಸಾರಿಪುತ್ತರು ಹೀಗೆ ನುಡಿದರು : ಭಿಕ್ಖುಗಳೇ ತಥಾಗತರು ಅರಹಂತರು ಹಾಗೂ  ಸಮ್ಮಸಂಬುದ್ಧರುರಿಂದ ವಾರಣಾಸಿಯ ಋಷಿಪಟ್ಟಣದ ಮಿಗದಾಯದಲ್ಲಿ ಅನುತ್ತರವಾದ ಧಮ್ಮಚಕ್ರವು ಪ್ರವರ್ತನ(ಚಾಲಿತ)ವಾಯಿತು. ಮತ್ತು ಆ ಚಕ್ರವು ಯಾವುದೇ ಸಮಣನಿಂದಾಗಲಿ, ಅಥವಾ ಯಾವುದೇ ಬ್ರಾಹ್ಮಣನಿಂದಾಗಲಿ, ಅಥವಾ ಯಾವುದೇ ದೇವನಿಂದಾಗಲಿ, ಅಥವಾ ಯಾವುದೇ ಮಾರನಿಂದಾಗಲಿ, ಯಾವುದೇ ಬ್ರಹ್ಮನಿಂದಾಗಲಿ, ಅಥವಾ ಲೋಕಗಳಲ್ಲಿ ಯಾರಿಂದಲೇ ಆಗಲಿ ಅಪ್ರವರ್ತನ(ಅಚಾಲಿತ ಅಥವಾ ಹಿಂತಿರುಗಿ ಹೋಗುವಿಕೆ ಅಥವಾ ಸುಳ್ಳೆಂದು ಸಾಬಿತಾಗುವಿಕೆ)ವಾಗುವುದಿಲ್ಲ, ಇದು ಆರ್ಯಸತ್ಯಗಳ ಬೋದನೆಯಾಗಿದೆ, ಪ್ರತಿಪಾದನೆಯಾಗಿದೆ, ಸ್ಥಾಪನೆಯಾಗಿದೆ, ಸ್ಪಷ್ಟತೆಯಾಗಿದೆ, ವಿಶ್ಲೇಷಣೆಯಾಗಿದೆ,
 
    ಯಾವುವವು 4 ಆರ್ಯಸತ್ಯಗಳು ?




       ಅವೆಂದರೆ
        1. ದುಃಖ ಆರ್ಯಸತ್ಯ
        2. ದುಃಖದ ಉದಯ(ಕಾರಣ) ಆರ್ಯಸತ್ಯ
        3. ದುಃಖದ ನಿರೋಧ ಆರ್ಯಸತ್ಯ ಮತ್ತು
        4. ದುಃಖದ ನಿರೋಧಕ್ಕೆ ಕೊಂಡೊಯ್ಯುವ ಮಾರ್ಗದ ಆರ್ಯಸತ್ಯ

      ಮತ್ತೆ ಯಾವುದು ದುಃಖ ಆರ್ಯ ಸತ್ಯ ?
   ಜನ್ಮವು ದುಃಖ, ಜರಾವು ದುಃಖ, ಮರಣವು ದುಃಖ, ಶೋಕ ಪ್ರಲಾಪವು ದುಃಖ, ನೋವು ದುಃಖ, ಚಿಂತೆ ಯಾತನೆಗಳು ದುಃಖ, ಅಪ್ರಿಯವಾದುದರ ಸಮಾಗಮ ದುಃಖ, ಪ್ರಿಯವಾದುದರ ವಿಯೋಗ ದುಃಖ, ಇಷ್ಟ(ಇಚ್ಚೆ)ಪಟ್ಟಿದ್ದು ದೊರೆಯದಿದ್ದಾಗ ದುಃಖ, ಒಟ್ಟಾರೆ ಸಂಕ್ಷಿಪ್ತವಾಗಿ ಹೇಳುವುದಾದರೆ ಪಂಚ ಉಪಾದಾನ ಖಂದಗಳು( 5 ರಾಶಿಗಳಿಗೆ(ದೇಹ ಮತ್ತು ಮನಸ್ಸಿಗೆ) ಅಂಟುವಿಕೆಯೇ) ದುಃಖಕರ.

  ಮತ್ತು ಜನ್ಮ ಎಂದರೇನು?
     ಆಯುಷ್ಮಂತರೇ, ಎಲ್ಲಾ ಜೀವಿಗಳ ವರ್ಗಗಳಲ್ಲಿ ಜೀವಿಗಳ ಜನ್ಮ, ಆರಂಭ, ಪುನರ್ಜನ್ಮ, ಖಂದಗಳ ಸ್ಥಾಪನೆ, ಮತ್ತು ಇಂದ್ರೀಯಗಳ ಪಡೆಯುವಿಕೆಯನ್ನು ಜನ್ಮ ಎನ್ನುತ್ತಾರೆ.

   ಮತ್ತು ಜರಾ ಎಂದರೇನು ?
     ಆಯುಷ್ಮಂತರೇ, ಎಲ್ಲಾ ಜೀವಿಗಳ ವರ್ಗಗಳಲ್ಲಿ ಜೀವಿಗಳ ವೃದ್ಧಾಪ್ಯ, ವಯಸ್ಸಿನಿಂದ ದುರ್ಬಲವಾಗುವಿಕೆ, ಮುರಿದ ಹಲ್ಲುಗಳು, ನೆರತಕೂದಲು, ಸುಕ್ಕುಗಟ್ಟಿದ ಚರ್ಮ, ಶಕ್ತಿಗುಂದುವಿಕೆ, ಇಂದ್ರೀಯಗಳ ಶಿಥಿಲತೆಯನ್ನು ಜರಾ ಎನ್ನುತ್ತಾರೆ.

   ಮತ್ತು ಮರಣ ಎಂದರೇನು ?
     ಆಯುಷ್ಮಂತರೇ, ಎಲ್ಲಾ ಜೀವಿಗಳ ವರ್ಗಗಳಲ್ಲಿ ಮರಣಿಸುವಿಕೆ, ನಾಷವಾಗುವಿಕೆ, ವಿಯೋಗ, ಅಂತ್ಯವಾಗುವಿಕೆ, ಮೃತ್ಯುವಶವಾಗುವಿಕೆ, ಸಾವು,  ಖಂದಗಳ ಬೇರ್ಪಡೆಯಾಗುವಿಕೆ, ಶವವಾಗುವಿಕೆ, ಜೀವಿಂದ್ರೀಯದ ಕತ್ತರಿಸುವಿಕೆಯನ್ನು ಮರಣ ಎನ್ನುವರು.

     ಮತ್ತು ಶೋಕ ಎಂದರೇನು?
   ಆಯುಷ್ಮಂತರೇ, ಶೋಕ, ಶೋಕಿಸುವಿಕೆ, ಶೋಕಸ್ಥಿತಿ, ಅಂತರ್ಯದ ದುಃಖ, ದೌಭರ್ಾಗ್ಯ ಅಥವಾ ದುರ್ಘಟನೆಗೆ ಈಡಾಗಿರುವವರಲ್ಲಿನ ಆಂತರ್ಯದ ಆಳ ನೋವು, ಶೋಕವನ್ನು ಅನುಭವಿಸುತ್ತಿರುವಿಕೆ, ಇವನೆಲ್ಲಾ ಶೋಕ ಎನ್ನುವರು.

     ಮತ್ತು ಪ್ರಲಾಪ ಎಂದರೇನು ?
 ಆಯುಷ್ಮಂತರೇ ಅಳುವಿಕೆ, ಪ್ರಲಾಪಿಸುವಿಕೆ, ಯಾರದರೂ ದುಃಖಭರಿತ ಸನ್ನಿವೇಶದಲ್ಲಿದ್ದಾಗ ಅಥವಾ ತಾವೇ ಅಂತಹ ಸನ್ನಿವೇಶದಲ್ಲಿದ್ದಾಗ ಅತ್ತು ಪ್ರಲಾಪಿಸುವುದನ್ನು ಪ್ರಲಾಪವೆನ್ನುತ್ತೇವೆ.

       ಮತ್ತು ನೋವು(ಕಾಯದ ದುಃಖ) ಎಂದರೇನು ?
 ಅಯುಷ್ಮಂತರೇ ಶಾರೀರಿಕ ನೋವು, ಶಾರೀರಿಕ ಅಸಂತೋಷ, ಶರೀರಕ್ಕೆ ಸಂಪರ್ಕವಾಗಿ ಉಂಟಾಗುವ ನೋವುಭರಿತ, ಅಪ್ರೀಯ ವೇದನೆಗಳನ್ನು ನೋವು(ಕಾಯದ ದುಃಖ) ಎನ್ನುತ್ತಾರೆ.

        ಮತ್ತು ದೋಮನಸ್ಸು ಎಂದರೇನು ?
     ಆಯುಷ್ಮಂತರೇ, ಮಾನಸಿಕ ದುಃಖ, ಮಾನಸಿಕ ಅಸಂತುಷ್ಟತೆ, ಮನಸ್ಸಿಗೆ ಮಾನಸಿಕ ವಿಷಯಗಳಾದ ಚೇತಸಿಕಗಳು ಸಂಪರ್ಕವಾದಾಗ ಉಂಟಾಗುವ ಅಪ್ರಿಯ ವೇದನೆಗಳನ್ನು ದೋಮನಸ್ಸು ಎನ್ನುತ್ತೇವೆ.

         ಮತ್ತು ಉಪಯಾಸೋ(ಖಿನ್ನತೆ/ಚಿಂತೆ) ಎಂದರೇನು ?
   ಆಯುಷ್ಮಂತರೇ, ಒತ್ತಡ, ಯಾತನೆ, ಯಾವಾಗ ಒಬ್ಬನು ದುಃಖಭರಿತ ಅಥವಾ ನಷ್ಟಭರಿತ ಸನ್ನಿವéೇಷದಲ್ಲಿದ್ದಾಗ ಆತನು ಅನುಭವಿಸುವ ದುಃಖವನ್ನು ಉಪಯಾಸೋ ಎನ್ನುತ್ತೇವೆ.

          ಮತ್ತು ಇಷ್ಟ(ಇಚ್ಚೆ)ಪಟ್ಟಿದ್ದು ದೊರೆಯದಿರುವುದೇ ದುಃಖ ಎಂದರೇನು ?
    ಇಲ್ಲಿ ಅಯುಷ್ಮಂತರೇ, ಇದಕ್ಕೆ ಉದಾಹರಿಸುವುದಾದರೆ ಯಾವ ಜೀವಿಗಳು ಪುನರ್ಜನ್ಮಿಸುವ ಖಚಿತತೆ ಹೊಂದಿವೆಯೊ ಅವರಲ್ಲಿ ಇಂತಹ ಇಚ್ಚೆ ಉಂಟಾಗಬಹುದು ಎನೆಂದರೇ ಒಹ್ ನಾವು ಮಾತ್ರ ಪುನರ್ಜನ್ಮ ತಾಳದಿದ್ದರೆ ಹೇಗೆ !, ನಮಗೆ ಮಾತ್ರ ಪುನರ್ಜನ್ಮವಾಗದಿರಲಿ! ಅದರೆ ಹಾಗೇ ಬಯಸಿದ ಮಾತ್ರಕ್ಕೆ ಒಬ್ಬರಿಗೆ ಪುನರ್ಜನ್ಮ ಸಿಗದೇ ಹೋಗುವುದಿಲ್ಲ. ಬಯಸಿದ ಮಾತ್ರಕ್ಕೆ ಹಾಗಾವುದಿಲ್ಲ. ಆಗ ಆತನು ಹಾಗೇ ಆಗಲಿಲ್ಲವಲ್ಲ ಎಂದು ದುಃಖಿಸುವನು, ಇದನ್ನೇ ಇಚ್ಚಿಸಿದ ಮಾತ್ರಕ್ಕೆ ಹಾಗೇ ಆಗದಿದ್ದಾಗ ಸಿಗುವ ದುಃಖ ಎನ್ನುವರು. ಜೀವಿಗಳಲ್ಲಿ ಯಾರೆಲ್ಲಾ ವೃದ್ಧಾವಸ್ಥೆಗೆ.....ರೋಗಕ್ಕೆ........ಮರಣಕ್ಕೆ.........ಶೋಕಕ್ಕೆ......ಪ್ರಲಾಪಕ್ಕೆ......ನೋವಿಗೆ.......ದೋಮನಸ್ಸಿಗೆ......ಮತ್ತು, ಚಿಂತೆಗೆ ಗುರಿಯಾಗಬಾರದು ಎಂದು ಇಚ್ಚಿಸುತ್ತೇವೆ, ಅದರೆ ಕೇವಲ ಇಚ್ಚಿಸಿದ ಮಾತ್ರಕ್ಕೆ ನೀವು ಅವೆಲ್ಲಾವನ್ನು ತಡೆಯಲು ಸಾಧ್ಯವೇ ?.ಇದನ್ನೇ ಇಚ್ಚಿಸಿದ ಮಾತ್ರಕ್ಕೆ ಹಾಗೇ ಆಗದಿದ್ದಾಗ ಸಿಗುವ ದುಃಖ ಎನ್ನುವರು.
   
        ಮತ್ತು ಆಯುಷ್ಮಂತರೇ ಪಂಚ ಉಪಾದಾನಖಂದಗಳು ದುಃಖ ಎಂದರೇನು?
  ಇಲ್ಲಿ  5 ರೀತಿಯ ಅಂಟುವಿಕೆಗಳಿವೆ ಅವೆಂದರೆ ದೇಹಕ್ಕೆ, ವೇದನೆಗಳಿಗೆ, ಗ್ರಹಿಕೆಗಳಿಗೆ, ಸಂಖಾರಗಳಿಗೆ, ಮತ್ತು ವಿಞ್ಞಆನಗಳಿಗೆ ಅಂಟಿಕೊಂಡಿರುವುದು. ಇದನ್ನು ಸಂಕ್ಷಿಪ್ತವಾಗಿ 5 ಖಂದಗಳಿಗೆ ಅಂಟಿರುವುದೇ ದುಃಖ ಎಂದು ಹೇಳಲಾಗಿದೆ, ಇದೇ ಆರ್ಯರ ದುಃಖ ಸತ್ಯವಾಗಿದೆ. 

      ಮತ್ತು ಆಯುಷ್ಮಂತರೇ ಆರ್ಯರ ದುಃಖದ ಸಮುದಯ(ಕಾರಣ/ಉದಯ) ಸತ್ಯ ಎಂದರೇನು ?
   ಇಲ್ಲಿ ತೃಷ್ಣೆಯೇ ಪುನರ್ಜನ್ಮಗಳ ಕಡೆಗೆ ಕರೆದೊಯ್ಯುತ್ತದೆ, ಇದು ಆನಂದ ಹಾಗೂ ರಾಗದಿಂದ ಕೂಡಿದ್ದು, ಸದಾ ವಿವಿಧ ವಲಯಗಳಲ್ಲಿ, ಕ್ಷೇತ್ರಗಳಲ್ಲಿ ಸುಖಭೋಗಗಳನ್ನು ಹುಡುಕುತ್ತಿರುತ್ತದೆ. ಅವೆಂದರೆ ಕಾಮತನ್ಹಾ(ಇಂದ್ರೀಯಸುಖಗಳ ಬೋಗಾಸಕ್ತಿ), ಭವತನ್ಹಾ(ಶಾಶ್ವತವಾಗಿ ಇರಬೇಕು ಎನ್ನುವ ತೀವ್ರಬಯಕೆ), ಮತ್ತು ವಿಭವ ತನ್ಹಾ(ಇರಲೇಬಾರದು ಎಂಬ ತೀವ್ರ ಬಯಕೆ). ಇದನ್ನೇ ಆರ್ಯರ ದುಃಖದ ಸಮುದಯ(ಕಾರಣ/ಉದಯ) ಸತ್ಯ ಎನ್ನುತ್ತಾರೆ.


      ಮತ್ತು ಆಯುಷ್ಮಂತರೇ ಆರ್ಯರ ದುಃಖ ನಿರೋಧ(ಅಂತ್ಯ/ಸಮಾಪ್ತಿ/ಇಲ್ಲವಾಗುವಿಕೆ) ಎಂದರೇನು ?
  ದುಃಖಕ್ಕೆ ಕಾರಣವಾದ ತನ್ಹಾವನ್ನು (ತೀವ್ರಬಯಕೆಗಳನ್ನು) ನಿಶ್ಶೇಷವಾಗಿ ವಿರಾಗತೋರುವುದು(ಮರೆಮಾಡುವುದು/ವಿಕರ್ಷಣವಾಗುವುದು), ನಿರೋಧಗೊಳಿಸುವುದು(ಅಂತ್ಯ), ತ್ಯಾಗಮಾಡುವುದು, ಪಟಿನಿಸ್ಸ(ಬಿಟ್ಟುಬಿಡುವುದು)ಮಾಡುವುದು, ಮುಕ್ತವಾಗುವುದು, ಅನಾಲಯಗೊಳ್ಳುವುದು(ಅಂಟದೆ ಇರುವುದು), ಇದನ್ನೇ ಆಯುಷ್ಮಂತರೇ ಆರ್ಯರ ದುಃಖನಿರೋಧ ಎನ್ನುತ್ತಾರೆ.

   
     ಮತ್ತು ಆಯುಷ್ಮಂತರೇ ಆರ್ಯರ ದುಃಖ ನಿರೋಧಕ್ಕೆ ಕೊಂಡೊಯ್ಯುವ ಮಾರ್ಗಸತ್ಯ ಎಂದರೇನು ?
ಅದೇ ಆರ್ಯ ಆಷ್ಟಾಂಗ ಮಾರ್ಗ ಅಂದರೆ

ಸಮ್ಮಾ ದಿಟ್ಟಿ
ಸಮ್ಮಾ ಸಂಕಲ್ಪ
ಸಮ್ಮಾ ವಾಚಾ
ಸಮ್ಮಾ ಕಮ್ಮ
ಸಮ್ಮಾ ಜೀವನೋಪಾಯ
ಸಮ್ಮಾ ವ್ಯಾಯಾಮ
ಸಮ್ಮಾ ಸ್ಮೃತಿ
ಸಮ್ಮಾ ಸಮಾಧಿ

ಮತ್ತು ಆಯುಷ್ಮಂತರೇ ಸಮ್ಮಾ ದಿಟ್ಟಿ(ದೃಷ್ಟಿಕೋನ) ಎಂದರೇನು?
  ದುಃಖ ಆರ್ಯ ಸತ್ಯ, ದುಃಖ ಸಮುದಯ ಆರ್ಯ ಸತ್ಯ, ದುಃಖ ನಿರೋಧ ಆರ್ಯ ಸತ್ಯ, ಮತ್ತು ದುಃಖ ನಿರೋಧಕ್ಕೆ ಕೊಂಡೊಯ್ಯುನ ಮಾರ್ಗ. ಇವುಗಳನ್ನು ಯಾತಾರ್ಥವಾಗಿ ಅರಿಯುವುದೇ ಸಮ್ಮಾ ದಿಟ್ಟಿಯಾಗಿದೆ.


ಮತ್ತು ಆಯುಷ್ಮಂತರೇ ಸಮ್ಮಾಸಂಕಲ್ಪ ಎಂದರೇನು?
  ತ್ಯಾಗದ ಸಂಕಲ್ಪಗಳು, ಅದ್ವೇಷದ ಸಂಕಲ್ಪಗಳು, ಅಹಿಂಸೆಯ ಸಂಕಲ್ಪಗಳು ಇಂಥವುಗಳನ್ನು ಆಯುಷ್ಮಂತರೇ ಸಮ್ಮಾ ಸಂಕಲ್ಪ ಎನ್ನುವರು.

ಮತ್ತು ಆಯುಷ್ಮಂತರೇ ಸಮ್ಮಾವಾಚಾ ಎಂದರೇನು?
  ಸುಳ್ಳುಮಾತುಗಳಿಂದ ವಿರತನಾಗುವಿಕೆ , ಚಾಡಿತನಗಳಿಂದ ವಿರತನಾಗುವಿಕೆ, ಕಠೋರ ಮಾತುಗಳಿಂದ ವಿರತನಾಗುವಿಕೆ , ಮತ್ತು ಅಸಂಬದ್ಧಮಾತುಗಳಿಂದ ವಿರತನಾಗುವಿಕೆ ಇಂಥವುಗಳನ್ನು ಆಯುಷ್ಮಂತರೇ ಸಮ್ಮಾವಾಚಾ ಎನ್ನುವರು.


      ಮತ್ತು ಆಯುಷ್ಮಂತರೇ ಸಮ್ಮಾಕಮ್ಮ ಎಂದರೇನು?
  ಪ್ರಾಣಿಹತ್ಯೆಗಳಿಂದ ವಿರತನಾಗುವಿಕೆ, ಕಳ್ಳತನಗಳಿಂದ ವಿರತನಾಗುವಿಕೆ, ಮತ್ತು ಅನೈತಿಕ ಕಾಮುಕತೆಯಿಂದ ವಿರತನಾಗುವಿಕೆ ಇಂಥವುಗಳನ್ನು ಆಯುಷ್ಮಂತರೇ ಸಮ್ಮಾಕಮ್ಮ ಎನ್ನುವರು.

       ಮತ್ತು ಆಯುಷ್ಮಂತರೇ ಸಮ್ಮಾಜೀವನೊಪಾಯ ಎಂದರೇನು?
   ಇಲ್ಲಿ ಆರ್ಯಶ್ರಾವಕನು ಮಿಥ್ಯಜೀವನೋಪಯಗಳನ್ನು ತೊರೆದು ಸಮ್ಮಜೀವನೊಪಾಯದಿಂದ ಜೀವಿಸಿದರೆ ಇಂಥವುಗಳನ್ನು ಆಯುಷ್ಮಂತರೇ ಸಮ್ಮಾಕಮ್ಮ ಎನ್ನುವರು.

       ಮತ್ತು ಆಯುಷ್ಮಂತರೇ ಸಮ್ಮಾವ್ಯಾಯಮವು ಯಾವುದು ?
   ಇಲ್ಲಿ ಆರ್ಯಶ್ರಾವಕನು ಇನ್ನು ಉತ್ಪನ್ನವಾಗದಿರುವ ಪಾಪಯುತವಾದ ಮತ್ತು ಅಕುಶಲವಾದ ಮಾನಸಿಕ ಸ್ಥಿತಿ(ಯೋಚನೆ)ಗಳನ್ನು ಉದಯಿಸದಂತೆ ಮಾಡಲು ಇಚ್ಚೆಯುಳ್ಳವನಾಗುತ್ತಾನೆ, ಉತ್ಸಾಹಿತನಾಗುತ್ತಾನೆ, ಪ್ರಯತ್ನಿಸುತ್ತಾನೆ, ಮತ್ತು ಅದರಲ್ಲಿ ಯಶಸ್ವಿಯಾಗುತ್ತಾನೆ.  ಹಾಗೇಯೇ ಇಲ್ಲಿ ಆರ್ಯಶ್ರಾವಕನು ಉತ್ಪನ್ನವಾಗಿರುವ ಪಾಪಯುತವಾದ ಮತ್ತು ಅಕುಶಲವಾದ ಮಾನಸಿಕ ಸ್ಥಿತಿ(ಯೋಚನೆ)ಗಳನ್ನು ಇನ್ನಿಲ್ಲದಂತೆ ಮಾಡಲು ಇಚ್ಚೆಯುಳ್ಳವನಾಗುತ್ತಾನೆ, ಉತ್ಸಾಹಿತನಾಗುತ್ತಾನೆ, ಪ್ರಯತ್ನಿಸುತ್ತಾನೆ, ಮತ್ತು ಅದರಲ್ಲಿ ಯಶಸ್ವಿಯಾಗುತ್ತಾನೆ. ಹಾಗೇಯೆ ಇಲ್ಲಿ ಆರ್ಯಶ್ರಾವಕನು ಇನ್ನು ಉತ್ಪನ್ನವಾಗದಿರುವ ಪುಣ್ಯಭರಿತವಾದ ಮತ್ತು ಕುಶಲವಾದ ಮಾನಸಿಕ ಸ್ಥಿತಿ(ಯೋಚನೆ)ಗಳನ್ನು ಉದಯಿಸುವಂತೆ ಮಾಡಲು ಇಚ್ಚೆಯುಳ್ಳವನಾಗುತ್ತಾನೆ, ಉತ್ಸಾಹಿತನಾಗುತ್ತಾನೆ, ಪ್ರಯತ್ನಿಸುತ್ತಾನೆ, ಮತ್ತು ಅದರಲ್ಲಿ ಯಶಸ್ವಿಯಾಗುತ್ತಾನೆ. ಹಾಗೆಯೇ ಇಲ್ಲಿ ಆರ್ಯಶ್ರಾವಕನು ಉತ್ಪನ್ನವಾಗಿರುವ ಪುಣ್ಯಭರಿತವಾದ ಮತ್ತು ಕುಶಲವಾದ ಮಾನಸಿಕ ಸ್ಥಿತಿ(ಯೋಚನೆ)ಗಳನ್ನು ಕಳೆದುಹೋಗದಂತೆ, ವೃದ್ಧಿಸುವಂತೆ, ವಿಕಸಿಸುವಂತೆ, ಮಾಡಲು ಇಚ್ಚೆಯುಳ್ಳವನಾಗುತ್ತಾನೆ, ಉತ್ಸಾಹಿತನಾಗುತ್ತಾನೆ, ಪ್ರಯತ್ನಿಸುತ್ತಾನೆ, ಮತ್ತು ಅದರಲ್ಲಿ ಯಶಸ್ವಿಯಾಗುತ್ತಾನೆ. ಇಂಥವುಗಳನ್ನು ಆಯುಷ್ಮಂತರೇ ಸಮ್ಮಾವ್ಯಾಯಾಮ ಎನ್ನುವರು. 

        ಮತ್ತು ಆಯುಷ್ಮಂತರೇ ಸಮ್ಮಾ ಸ್ಮೃತಿಯು ಯಾವುದು ? 
  ಇಲ್ಲಿ ಆಯುಷ್ಮಂತರೇ, ಭಿಕ್ಖುವು ಕಾಯದಲ್ಲಿ ಕಾಯಾನುಪಸ್ಸಿಯಾಗಿ ವಿಹರಿಸುತ್ತಾನೆ, ಉತ್ಸಾಹಿತನಾಗಿ ಎಚ್ಚರಿಕೆಯಿಂದ ಪೂರ್ಣಅರಿವಿನಿಂದ ಲೋಕದ ಯಾವುದಕ್ಕೂ ಆಸೆಯಾಗಲಿ, ದ್ವೇಷವಾಗಲಿ ತಾಳದೆ ವಿಕ್ಷಿಸುವವನಾಗುತ್ತಾನೆ. ಅದೇ ರೀತಿಯಲ್ಲಿ ವೇದನೆಗಳಲ್ಲಿ ವೇದನೂಪಸ್ಸಿಯಾಗಿ ವಿಹರಿಸುತ್ತಾನೆ. ಉತ್ಸಾಹಿತನಾಗಿ ಎಚ್ಚರಿಕೆಯಿಂದ ಪೂರ್ಣಅರಿವಿನಿಂದ ಲೋಕದ ಯಾವುದಕ್ಕೂ ಆಸೆಯಾಗಲಿ, ದ್ವೇಷವಾಗಲಿ ತಾಳದೆ ವಿಕ್ಷಿಸುವವನಾಗುತ್ತಾನೆ. ಹಾಗೆಯೇ ಚಿತ್ತಗಳಲ್ಲಿ ಚಿತ್ತಾನುಪಸ್ಸಿಯಾಗಿ ವಿಹರಿಸುತ್ತಾನೆ, ಉತ್ಸಾಹಿತನಾಗಿ ಎಚ್ಚರಿಕೆಯಿಂದ ಪೂರ್ಣಅರಿವಿನಿಂದ ಲೋಕದ ಯಾವುದಕ್ಕೂ ಆಸೆಯಾಗಲಿ, ದ್ವೇಷವಾಗಲಿ ತಾಳದೆ ವಿಕ್ಷಿಸುವವನಾಗುತ್ತಾನೆ. ಅದೇ ರೀತಿಯಲ್ಲಿ ಧಮ್ಮಗಳಲ್ಲಿ ಧಮ್ಮಾನುಪಸ್ಸಿಯಾಗಿ ವಿಹರಿಸುತ್ತಾನೆ, ಉತ್ಸಾಹಿತನಾಗಿ ಎಚ್ಚರಿಕೆಯಿಂದ ಪೂರ್ಣಅರಿವಿನಿಂದ ಲೋಕದ ಯಾವುದಕ್ಕೂ ಆಸೆಯಾಗಲಿ, ದ್ವೇಷವಾಗಲಿ ತಾಳದೆ ವಿಕ್ಷಿಸುವವನಾಗುತ್ತಾನೆ. ಇಂಥವುಗಳನ್ನು ಆಯುಷ್ಮಂತರೇ ಸಮ್ಮಾಸತಿ ಎನ್ನುವರು. 


          ಮತ್ತು ಆಯುಷ್ಮಂತರೇ ಸಮ್ಮಾ ಸ್ಮೃಮಾಧಿಯು ಯಾವುದು ?  

    ಇಲ್ಲಿ ಆಯುಷ್ಮಂತರೇ ಭಿಕ್ಖುವು ಇಂದ್ರೀಯಸುಖಗಳ ಯೋಚನೆಗಳಿಂದ ರಹಿತನಾಗಿ(ಬರಿದಾಗಿ) ಹಾಗೆಯೇ ಅಕುಶಲ ಮಾನಸಿಕ ಸ್ಥಿತಿಗಳಿಂದ ರಹಿತನಾಗಿ, ವಿತರ್ಕ(ಮನಸ್ಸನ್ನು ಕೇಂದ್ರಿಕರಿಸುವಿಕೆ), ವಿಚಾರ(ಆ ದಿಕ್ಕಿನಲ್ಲಿಯೇ ಮನಸ್ಸನ್ನು ಹರಿಸುವಿಕೆ),  ಹಾಗೂ ಏಕಾಗ್ರತೆಗಳಿಂದ ಹುಟ್ಟಿದ  ಆನಂದ ಮತ್ತು ಸುಖದಿಂದ ಕೂಡಿದ ಪ್ರಥಮ ಸಮಾದಿಯಲ್ಲಿ ನೆಲೆಸುತ್ತಾನೆ.

 ನಂತರ ವಿತರ್ಕ ಮತ್ತು ವಿಚಾರಗಳಿಂದ ರಹಿತನಾಗಿ, ಅವುಗಳಿಗೆ ಅತೀತನಾಗಿ  ದ್ವೀತೀಯ ಸಮಾಧಿಯಲ್ಲಿ ನೆಲೆಸುತ್ತಾನೆ, ಆ ಸಮಾಧಿಯು ವಿತರ್ಕ ಮತ್ತು ವಿಚಾರಗಳಿಂದ ರಹಿತವಾದ ಆನಂದ ಹಾಗೂ ಸುಖಗಳಿಂದ ಕೂಡಿರುತ್ತದೆ. ಜೋತೆಗೆ ಅಂತರಿಕ ಸ್ಪಷ್ಟತೆ ಹಾಗೂ ಶ್ರದ್ಧೆಯಿಂದ ಕೂಡಿದ್ದು ಚಿತ್ತದ ಏಕೋಭಾವದಿಂದ ಕೂಡಿರುತ್ತದೆ.

    ನಂತರ ಆನಂದವನ್ನು ಮೀರಿದ ತ್ರಿತೀಯ ಸಮಾಧಿಯಲ್ಲಿ ನೆಲೆಸುತ್ತಾನೆ. ಅಲ್ಲಿ ಅವರು ಸಮಚಿತ್ತತೆಯಿಂದ, ಸ್ಮೃತಿ ಹಾಗೂ ಎಚ್ಚರಿಕೆಯಿಂದ ಕೂಡಿದ ಸುಖದಲ್ಲಿ ನೆಲಸಿರುತ್ತಾರೆ, ಯಾವುದನ್ನು ಕುರಿತು ಆರ್ಯರು ಹೀಗೆ ನುಡಿದಿದ್ದಾರೊ : ಉಪೇಕ್ಖ(ಸಮಚಿತ್ತತೆ) ಹಾಗೂ ಸ್ಮೃತಿ(ಎಚ್ಚರಿಕೆ)ಯಿಂದ ಕೂಡಿದ ಸುಖಯುತ ಸಮಾಧಿಯಲ್ಲಿ ನೆಲಸುತ್ತಾನೆ. ಅದರಲ್ಲಿ ನೆಲಸುತ್ತಾನೆ.

    ನಂತರ ಸುಖಗಳನ್ನು ಹಾಗೂ ನೋವುಗಳನ್ನು ತ್ಯೇಜಿಸಿ, ಹಿಂದಿನ ಸುಖ ಹಾಗೂ ಶೋಕಗಳನ್ನು ಮೀರಿ, ಆತನು ಚತುರ್ಥ ಸಮಾಧಿಯಲ್ಲಿ ಪ್ರವೇಶಿಸಿ ನೆಲಸುತ್ತಾನೆ, ಅಲ್ಲಿ ಶುದ್ಧವಾದ ಸಮಚಿತ್ತತೆ ಹಾಗೂ ಸ್ಮೃತಿಯು ಇರುತ್ತದೆ. ಇದನ್ನೇ ಆಯುಷ್ಮಂತರೇ ಸಮ್ಮ ಸಮಾಧಿ ಎನ್ನುವರು. ಇದನ್ನೇ ಆಯುಷ್ಮಂತರೇ ದುಃಖನಿರೋಧಗಾಮಿನಿಯ ಮಾರ್ಗದ ಆರಿಯ ಸತ್ಯ ಎನ್ನುವರು.

    ಅಯುಷ್ಮಂತರೇ ತಥಾಗತರು ಅರಹಂತರು ಹಾಗೂ  ಸಮ್ಮಸಂಬುದ್ಧರಿಂದ ವಾರಣಾಸಿಯ ಋಷಿಪಟ್ಟಣದ ಮಿಗದಾಯದಲ್ಲಿ ಅನುತ್ತರವಾದ ಧಮ್ಮಚಕ್ರವು ಪ್ರವರ್ತನ(ಚಾಲಿತ)ವಾಯಿತು. ಮತ್ತು ಆ ಚಕ್ರವು ಯಾವುದೇ ಸಮಣನಿಂದಾಗಲಿ, ಅಥವಾ ಯಾವುದೇ ಬ್ರಾಹ್ಮಣನಿಂದಾಗಲಿ, ಅಥವಾ ಯಾವುದೇ ದೇವನಿಂದಾಗಲಿ, ಅಥವಾ ಯಾವುದೇ ಮಾರನಿಂದಾಗಲಿ, ಯಾವುದೇ ಬ್ರಹ್ಮನಿಂದಾಗಲಿ, ಅಥವಾ ಲೋಕಗಳಲ್ಲಿ ಯಾರಿಂದಲೇ ಆಗಲಿ ಅಪ್ರವರ್ತನ(ಅಚಾಲಿತ ಅಥವಾ ಹಿಂತಿರುಗಿ ಹೋಗುವಿಕೆ ಅಥವಾ ಸುಳ್ಳೆಂದು ಸಾಬಿತಾಗುವಿಕೆ)ವಾಗುವುದಿಲ್ಲ, ಇದು ಆರ್ಯಸತ್ಯಗಳ ಬೋದನೆಯಾಗಿದೆ, ಪ್ರತಿಪಾದನೆಯಾಗಿದೆ, ಸ್ಥಾಪನೆಯಾಗಿದೆ, ಸ್ಪಷ್ಟತೆಯಾಗಿದೆ, ವಿಶ್ಲೇಷಣೆಯಾಗಿದೆ,

  ಹೀಗೆ ಅಯುಷ್ಮಂತರಾದ ಸಾರಿಪುತ್ತರು ನುಡಿದರು. ಇದನ್ನು ಅಲಿಸಿ ಆನಂದಿತರಾಗಿದಂತಹ ಭಿಕ್ಕೂಗಳು ಸಾರಿಪುತ್ತರ ಬೊಧನೆಗೆ ಅಭಿನಂದನೆ ಮಾಡಿದರು.

   ಇಲ್ಲಿಗೆ ಹನ್ನೊಂದನೆಯ ಸಚ್ಚವಿಭಂಗ ಸುತ್ತವು ಮುಗಿಯಿತು.






   

 

 










































Thursday 21 March 2019

pathama mahanama sutta in kannada 7. ಪ್ರಥಮ ಮಹಾನಾಮ ಸುತ್ತ

                                  7. ಪ್ರಥಮ ಮಹಾನಾಮ ಸುತ್ತ



ಆ ಸಮಯದಲ್ಲಿ ಭಗವಾನರು ಶಾಕ್ಯರ ರಾಜ್ಯದಲ್ಲಿ ಇದ್ದರು. ಕಪಿಲವಸ್ತುವಿನ ಸಮೀಪದ ಆಲದಮರದ ವಿಹಾರದಲ್ಲಿ ನೆಲೆಸಿದ್ದರು. ಆ ಸಮಯದಲ್ಲಿ ಕೆಲ ಭಿಕ್ಹುಗಳು ಭಗವಾನರಿಗೆ ಚಿವರ(ಭಿಕ್ಖು ವಸ್ತ್ರ)ವನ್ನು ಸಿದ್ಧಪಡಿಸುತ್ತಿದ್ದರು ಏಕೆಂದರೆ ವಷರ್ಾವಾಸದ ನಂತರ ಭಗವಾನರು ಬೇರೆಡೆ ಸಂಚಾರಕ್ಕೆ ಹೊರಡುವ ಸಾಧ್ಯತೆ ಇತ್ತು.. ಈ ವಿಷಯವನ್ನು ಮಹಾನಾಮ ಶಾಕ್ಯರು ಕೇಳಿದರು.
ಅವರು ಬುದ್ಧರಲ್ಲಿಗೆ ಹೋಗಿ ವಂದಿಸಿದರು ನಂತರ ಒಂದೆಡೆ ಕುಳಿತರು ಮತ್ತು ಹೀಗೆ ಕೇಳಿದರು : ಭಗವಾನ್, ಕೆಲ ಭಿಕ್ಹುಗಳು ಭಗವಾನರಿಗೆ ಚಿವರವನ್ನು ಸಿದ್ಧಪಡಿಸುತ್ತಿದ್ದಾರೆ  ಏಕೆಂದರೆ ವಷರ್ಾವಾಸದ ನಂತರ ತಾವು ಬೇರೆಡೆ ಸಂಚಾರಕ್ಕೆ ಹೊರಡುವ ಸಾಧ್ಯತೆ ಇದೆ ಎಂದು. ಈಗ ನಾವು ನಮ್ಮ ಜೀವನವನ್ನು ಹಲವಾರು ವಿಧದಲ್ಲಿ ಕಳೆಯುತಿಹೆವು, ನಾವು ಯಾವ ರೀತಿಯ  ಸಾಧನೆಯಲ್ಲಿ ತೊಡಗಿದರೆ ನಮಗೆ ಒಳಿತಾಗಬಹುದು.
ಸಾಧು ಸಾಧು ಮಹಾನಾಮ, ತಮ್ಮಂತಹ ಗೌರವಾನ್ವಿತ ವ್ಯಕ್ತಿಗಳು ನನ್ನೊಂದಿಗೆ ಈ ರೀತಿಯಲ್ಲಿ ಬಂದು, ನಾವು ನಮ್ಮ ಜೀವನವನ್ನು ಹಲವಾರು ವಿಧದಲ್ಲಿ ಕಳೆಯುತಿಹೆವು, ನಾವು ಯಾವ ರೀತಿಯ  ಸಾಧನೆಯಲ್ಲಿ ತೊಡಗಿದರೆ ನಮಗೆ ಒಳಿತಾಗಬಹುದು.  ಎಂದು ಕೇಳುವುದು ಅತ್ಯಂತ ಸಮಂಜಸವಾಗಿದೆ.
ಮಹಾನಾಮ, ಶ್ರದ್ಧಾವಂತನು ಯಶಸ್ವಿಯಾಗುತ್ತಾನೆ ಹೊರತು ಅಶ್ರದ್ಧಾವಂತನಲ್ಲ,
ಧೃಡಯತ್ನಶೀಲನು ಯಶಸ್ವಿಯಾಗುತ್ತಾನೆ ಹೊರತು ಸೋಮಾರಿಯಲ್ಲ, 
ಸ್ಮೃತಿವಂತನು ಯಶಸ್ವಿಯಾಗುತ್ತಾನೆ ಹೊರತು ಸ್ಮೃತಿಹೀನನಲ್ಲ,
ಸಮಾಹಿತನು ಯಶಸ್ವಿಯಾಗುತ್ತಾನೆ ಹೊರತು ಅಸಮಾಹಿತನಲ್ಲ, 
ಪ್ರಜ್ಞಾವಂತನು ಯಶಸ್ವಿಯಾಗುತ್ತಾನೆ ಹೊರತು ದುಪ್ರಜ್ಞನಲ್ಲ, 
ಯಾವಾಗ ನೀವು ಈ ರೀತಿಯಲ್ಲಿ ಈ ಐದು ವಿಷಯಗಳಲ್ಲಿ ನೆಲೆಗೊಂಡಾಗ, ನೀವು ನಂತರ ಆರು ಉನ್ನತ ವಿಷಯಗಳಲ್ಲಿ ಅಭಿವೃದ್ಧಿ ತಾಳಬೇಕು. ಮೊದಲು ನೀವು ತಥಾಗತರ ಅನುಸ್ಮರಣೆ ಹೀಗೆ ಮಾಡಬೇಕು:
     ಭಗವಾನರು ಅರಹಂತರು, ಸಮ್ಮಾಸಂಬುದ್ಧರು, ವಿಧ್ಯಾಚರಣೆಯ ಸಂಪನ್ನರು, ಸುಗತರು, ಲೋಕವಿದರು, ಅನುತ್ತರರು, ಪುರುಷದಮ್ಯ ಸಾರಥಿಯು, ದೇವತೆಗಳಿಗೆ ಮತ್ತು ಮಾನವರಿಗೆ ಶಾಸ್ತರು, ಬುದ್ಧರು ಹಾಗೂ ಭಗವಾನರು ಆಗಿದ್ದಾರೆ.    ಯಾವಾಗ ಹೀಗೆ ಆರ್ಯ ಶಿಷ್ಯನು ತಥಾಗತರನ್ನು ಅನುಸ್ಮೃರಣೆ ಮಾಡುವನೊ ಆಗ ಆತನ ಮನಸ್ಸು ರಾಗಯುತವಾಗಿರುವುದಿಲ್ಲ, ದ್ವೇಷಯುತವಾಗಿರುವುದಿಲ್ಲ ಹಾಗೂ ಮೋಹಯುತವಾಗಿರುವುದಿಲ್ಲ, ಆ ಸಮಯದಲ್ಲಿ ಅವರ ಮನಸ್ಸು ಬುದ್ಧಾನುಸ್ಸತಿಯಲ್ಲಿಯೇ ಅವಿಚಲವಾಗಿರುತ್ತದೆ, ಹೀಗೆ ಅವಿಚಲ ಚಿತ್ತವು ಅರ್ಥಸಹಿತ, ಧಮ್ಮಸಹಿತ  ಆನಂದವಾಗಿರುತ್ತದೆ, ಹೀಗೆ ಧಮ್ಮುಪಸಂಹಿತವಾದ ಚಿತ್ತವು ಪ್ರಮೋದವನ್ನು ತಾಳುತ್ತದೆ, ಪ್ರಮೋದದಿಂದಾಗಿ ಪೀತಿ(ಆನಂದ)ವು ಉಂಟಾಗುತ್ತದೆ, ಆನಂದದಿಂದ ಕಾಯವು ಪ್ರಸನ್ನವಾಗುತ್ತದೆ, ಪ್ರಸನ್ನ ಕಾಯದಿಂದ ಸುಖವು ಉಂಟಾಗುವುದು, ಸುಖಯುತ ಚಿತ್ತದಿಂದ ಸಮಾಧಿಯುಂಟಾಗುವುದು.. ಹೀಗೆ ನೆಲೆಸುವ ಆರ್ಯಶ್ರಾವಕನು ಅವ್ಯವಸ್ಥತೆಯ ಜನರ ಮಧ್ಯೆ ಸಮತೋಲನವಾಗಿರುತ್ತಾನೆ, ಕ್ಷೊಭೆಯುಳ್ಳ ಜನರ ಮಧ್ಯೆ ಅಕ್ಷೊಭನಾಗಿರುತ್ತಾನೆ. ಅವರು ಧಮ್ಮದ ಶ್ರೋತದಲ್ಲಿ ಪ್ರವೇಶಿಸುತ್ತಾರೆ, ಮತ್ತು ಧಮ್ಮದ ಅನುಸ್ಸತಿಯಲ್ಲಿ ಅಭಿವೃದ್ಧಿ ಹೊಂದುತ್ತಾರೆ.
ಅಲ್ಲದೆ ನೀವು ಧಮ್ಮಾನುಸ್ಸತಿಯಲ್ಲಿ ತೊಡಗಬೇಕು ಹೇಗೆಂದರೆ :
ಧಮ್ಮವು (ಬೋಧನೆ) ಭಗವಾನರಿಂದ ತುಂಬ ಚೆನ್ನಾಗಿ ವಿವರಿಸಲ್ಪಟ್ಟಿದೆ (ಸ್ವಾಖ್ವಾತೋ), ಧಮ್ಮವು ಇಲ್ಲಿಯೇ ಈಗಲೇ ದಶರ್ಿಸಲ್ಪಟ್ಟಿದೆ(ಸಂದಿಟ್ಟಿಕೊ), ಕಾಲವಿಳಂಬವಿಲ್ಲದೆ ಫಲಕಾರಿಯು ಮತ್ತು ಸವರ್ಾಕಾಲಿಕವಾದುದು (ಅಕಾಲಿಕೊ), ಬನ್ನಿ ಪರಿಕ್ಷಿಸಿ (ಏಹಿಪಸ್ಸಿಕೊ) ನಂತರ ಸ್ವೀಕರಿಸಿ ಎಂದು ಆಹ್ವಾನಿಸುತ್ತದೆ. ಉನ್ನತಿಯೆಡೆಗೆ (ಓಪನಯಿಕೋ) ಸಾಗಿಸುವಂತಹುದು, ಜ್ಞಾನಿಗಳಾದ ಪ್ರತಿಯೊಬ್ಬರಿಂದಲೂ ಅರಿಯಬಹುದಾಗಿದೆ (ಪಚ್ಚತ್ತಂ ವೇದಿತಬ್ಬೊ ವಿಞ್ಞೋಹಿ ತಿ).
ಯಾವಾಗ ಹೀಗೆ ಆರ್ಯ ಶಿಷ್ಯನು ಧಮ್ಮವನ್ನು ಅನುಸ್ಮೃರಣೆ ಮಾಡುವನೊ ಆಗ ಆತನ ಮನಸ್ಸು ರಾಗಯುತವಾಗಿರುವುದಿಲ್ಲ, ದ್ವೇಷಯುತವಾಗಿರುವುದಿಲ್ಲ ಹಾಗೂ ಮೋಹಯುತವಾಗಿರುವುದಿಲ್ಲ, ಆ ಸಮಯದಲ್ಲಿ ಅವರ ಮನಸ್ಸು ಧಮ್ಮಾನುಸ್ಸತಿಯಲ್ಲಿಯೇ ಅವಿಚಲವಾಗಿರುತ್ತದೆ, ಹೀಗೆ ಅವಿಚಲ ಚಿತ್ತವು ಅರ್ಥಸಹಿತ, ಧಮ್ಮಸಹಿತ  ಆನಂದವಾಗಿರುತ್ತದೆ, ಹೀಗೆ ಧಮ್ಮುಪಸಂಹಿತವಾದ ಚಿತ್ತವು ಪ್ರಮೋದವನ್ನು ತಾಳುತ್ತದೆ, ಪ್ರಮೋದದಿಂದಾಗಿ ಪೀತಿ(ಆನಂದ)ವು ಉಂಟಾಗುತ್ತದೆ, ಆನಂದದಿಂದ ಕಾಯವು ಪ್ರಸನ್ನವಾಗುತ್ತದೆ, ಪ್ರಸನ್ನ ಕಾಯದಿಂದ ಸುಖವು ಉಂಟಾಗುವುದು, ಸುಖಯುತ ಚಿತ್ತದಿಂದ ಸಮಾಧಿಯುಂಟಾಗುವುದು.. ಹೀಗೆ ನೆಲೆಸುವ ಆರ್ಯಶ್ರಾವಕನು ಅವ್ಯವಸ್ಥಿತೆಯ ಜನರ ಮಧ್ಯೆ ಸಮತೋಲನವಾಗಿರುತ್ತಾನೆ, ಕ್ಷೊಭೆಯುಳ್ಳ ಜನರ ಮಧ್ಯೆ ಅಕ್ಷೊಭನಾಗಿರುತ್ತಾನೆ. ಅವರು ಧಮ್ಮದ ಶ್ರೋತದಲ್ಲಿ ಪ್ರವೇಶಿಸುತ್ತಾರೆ, ಮತ್ತು ಧಮ್ಮದ ಅನುಸ್ಸತಿಯಲ್ಲಿ ಅಭಿವೃದ್ಧಿ ಹೊಂದುತ್ತಾರೆ.
ಭಗವಾನರ ಶ್ರಾವಕ ಸಂಘವು ಒಳ್ಳೆಯ ದಾರಿಯಲ್ಲಿ ಹೋಗುತ್ತಿದೆ
ಭಗವಾನರ ಶ್ರಾವಕ ಸಂಘವು ಋಜುವಿನ (ನೇರವಾದ) ದಾರಿಯಲ್ಲಿ. ಹೋಗುತ್ತಿದೆ.
ಭಗವಾನರ ಶ್ರಾವಕ ಸಂಘವು ನ್ಯಾಯವಾದ (ನಿಜ/ಸತ್ಯ) ದಾರಿಯಲ್ಲಿ ಹೋಗುತ್ತಿದೆ.
ಭಗವಾನರ ಶ್ರಾವಕ ಸಂಘವು ಸಮಂಜಸವಾದ ದಾರಿಯಲ್ಲಿ ಹೋಗುತ್ತಿದೆ. ನಾಲ್ಕು ವ್ಯಕ್ತಿಗಳ ಜೋಡಿಗಳಿಂದ ಮತ್ತು ಅಷ್ಟ ವ್ಯಕ್ತಿಗಳಿಂದ ಕೂಡಿರುವುದೇ ಭಗವಾನರ ಶ್ರಾವಕ ಸಂಘವಾಗಿದೆ. ಈ ಪವಿತ್ರವಾದ ಸಂಘವು ದಾನಕ್ಕೆ ಅರ್ಹವಾಗಿದೆ, ಆತಿಥ್ಯಕ್ಕೆ ಅರ್ಹವಾಗಿದೆ, ದಕ್ಷಣೆಗೆ (ಸಮರ್ಪಣೆ) ಅರ್ಹವಾಗಿದೆ. ಅಂಜಲಿಬದ್ಧರಾಗಿ ಅನುತ್ತರವಾದ ಪುಣ್ಯಕ್ಷೇತ್ರವಾಗಿದೆ.
ಯಾವಾಗ ಹೀಗೆ ಆರ್ಯ ಶಿಷ್ಯನು ಸಂಘವನ್ನು ಅನುಸ್ಮೃರಣೆ ಮಾಡುವನೊ ಆಗ ಆತನ ಮನಸ್ಸು ರಾಗಯುತವಾಗಿರುವುದಿಲ್ಲ, ದ್ವೇಷಯುತವಾಗಿರುವುದಿಲ್ಲ ಹಾಗೂ ಮೋಹಯುತವಾಗಿರುವುದಿಲ್ಲ, ಆ ಸಮಯದಲ್ಲಿ ಅವರ ಮನಸ್ಸು ಸಂಘಾನುಸ್ಸತಿಯಲ್ಲಿಯೇ ಅವಿಚಲವಾಗಿರುತ್ತದೆ, ಹೀಗೆ ಅವಿಚಲ ಚಿತ್ತವು ಅರ್ಥಸಹಿತ, ಧಮ್ಮಸಹಿತ  ಆನಂದವಾಗಿರುತ್ತದೆ, ಹೀಗೆ ಧಮ್ಮುಪಸಂಹಿತವಾದ ಚಿತ್ತವು ಪ್ರಮೋದವನ್ನು ತಾಳುತ್ತದೆ, ಪ್ರಮೋದದಿಂದಾಗಿ ಪೀತಿ(ಆನಂದ)ವು ಉಂಟಾಗುತ್ತದೆ, ಆನಂದದಿಂದ ಕಾಯವು ಪ್ರಸನ್ನವಾಗುತ್ತದೆ, ಪ್ರಸನ್ನ ಕಾಯದಿಂದ ಸುಖವು ಉಂಟಾಗುವುದು, ಸುಖಯುತ ಚಿತ್ತದಿಂದ ಸಮಾಧಿಯುಂಟಾಗುವುದು.. ಹೀಗೆ ನೆಲೆಸುವ ಆರ್ಯಶ್ರಾವಕನು ಅವ್ಯವಸ್ಥಿತೆಯ ಜನರ ಮಧ್ಯೆ ಸಮತೋಲನವಾಗಿರುತ್ತಾನೆ, ಕ್ಷೊಭೆಯುಳ್ಳ ಜನರ ಮಧ್ಯೆ ಅಕ್ಷೊಭನಾಗಿರುತ್ತಾನೆ. ಅವರು ಧಮ್ಮದ ಶ್ರೋತದಲ್ಲಿ ಪ್ರವೇಶಿಸುತ್ತಾರೆ, ಮತ್ತು ಧಮ್ಮದ ಅನುಸ್ಸತಿಯಲ್ಲಿ ಅಭಿವೃದ್ಧಿ ಹೊಂದುತ್ತಾರೆ.
ಅಲ್ಲದೆ ನೀವು ಶೀಲಾನುನುಸ್ಸತಿಯಲ್ಲಿ ತೊಡಗಬೇಕು ಹೇಗೆಂದರೆ ?:
ನಾನು ಶೀಲಗಳನ್ನು ಅಭಂಗವಾಗಿ ಪಾಲಿಸಿದ್ದೇನೆ
ನಾನು ಶೀಲಗಳನ್ನು ಅಛಿದ್ರವಾಗಿ ಪಾಲಿಸಿದ್ದೇನೆ
ನಾನು ಶೀಲಗಳನ್ನು ಕಲೆರಹಿತವಾಗಿ ಪಾಲಿಸಿದ್ದೇನೆ
ನಾನು ಶೀಲಗಳನ್ನು ಅಮಲಿನವಾಗಿ ಪಾಲಿಸಿದ್ದೇನೆ
ನಾನು ಶೀಲಗಳನ್ನು ಅಖಂಡವಾಗಿ ಪಾಲಿಸಿದ್ದೇನೆ 
ನಾನು ಸೀಲಗಳನ್ನು ಸ್ವತಂತ್ರಗಳಿಸುವ ರೀತಿಯಲ್ಲಿ ಪಾಲಿಸಿದ್ದೆನೆ,
ನಾನು ಶೀಲಗಳನ್ನು ಜ್ಞಾನಿಗಳೂ ಸಹಾ ಪ್ರಶಂಶಿಸುವ ರೀತಿಯಲಿ ಪಾಲಿಸಿದ್ದೇನೆ,
ನಾನು  ಶೀಲಗಳನ್ನು ಸಮಾಧಿಯು ಗಳಿಸುವ ರೀತಿಯಲ್ಲಿ ಪಾಲಿಸಿದ್ದೇನೆ. ಎಂದು ಆನಂದಿಸುತ್ತಾನೆ.
ಯಾವಾಗ ಹೀಗೆ ಆರ್ಯ ಶಿಷ್ಯನು ಶೀಲವನ್ನು ಅನುಸ್ಮೃರಣೆ ಮಾಡುವನೊ ಆಗ ಆತನ ಮನಸ್ಸು ರಾಗಯುತವಾಗಿರುವುದಿಲ್ಲ, ದ್ವೇಷಯುತವಾಗಿರುವುದಿಲ್ಲ ಹಾಗೂ ಮೋಹಯುತವಾಗಿರುವುದಿಲ್ಲ, ಆ ಸಮಯದಲ್ಲಿ ಅವರ ಮನಸ್ಸು  ಶೀಲಾನುಸ್ಸತಿಯಲ್ಲಿಯೇ ಅವಿಚಲವಾಗಿರುತ್ತದೆ, ಹೀಗೆ ಅವಿಚಲ ಚಿತ್ತವು ಅರ್ಥಸಹಿತ, ಧಮ್ಮಸಹಿತ  ಆನಂದವಾಗಿರುತ್ತದೆ, ಹೀಗೆ ಧಮ್ಮುಪಸಂಹಿತವಾದ ಚಿತ್ತವು ಪ್ರಮೋದವನ್ನು ತಾಳುತ್ತದೆ, ಪ್ರಮೋದದಿಂದಾಗಿ ಪೀತಿ(ಆನಂದ)ವು ಉಂಟಾಗುತ್ತದೆ, ಆನಂದದಿಂದ ಕಾಯವು ಪ್ರಸನ್ನವಾಗುತ್ತದೆ, ಪ್ರಸನ್ನ ಕಾಯದಿಂದ ಸುಖವು ಉಂಟಾಗುವುದು, ಸುಖಯುತ ಚಿತ್ತದಿಂದ ಸಮಾಧಿಯುಂಟಾಗುವುದು.. ಹೀಗೆ ನೆಲೆಸುವ ಆರ್ಯಶ್ರಾವಕನು ಅವ್ಯವಸ್ಥಿತೆಯ ಜನರ ಮಧ್ಯೆ ಸಮತೋಲನವಾಗಿರುತ್ತಾನೆ, ಕ್ಷೊಭೆಯುಳ್ಳ ಜನರ ಮಧ್ಯೆ ಅಕ್ಷೊಭನಾಗಿರುತ್ತಾನೆ. ಅವರು ಧಮ್ಮದ ಶ್ರೋತದಲ್ಲಿ ಪ್ರವೇಶಿಸುತ್ತಾರೆ, ಮತ್ತು ಧಮ್ಮದ ಅನುಸ್ಸತಿಯಲ್ಲಿ ಅಭಿವೃದ್ಧಿ ಹೊಂದುತ್ತಾರೆ.
ಅಲ್ಲದೆ ನೀವು ಚಾಗಾ(ತ್ಯಾಗಾ)ನುನುಸ್ಸತಿಯಲ್ಲಿ ತೊಡಗಬೇಕು ಹೇಗೆಂದರೆ:
ನಾನು ಅತ್ಯಂತ ಲಾಭವಂತ, ಭಾಗ್ಯಶಾಲಿ, ಪುಣ್ಯವಂತನಾಗಿದ್ದೇನೆ, ಏಕೆಂದರೆ ಸ್ವಾರ್ಥಮಲ ಹೊಂದಿರುವ ಜನರ ನಡುವೆ ನಿಃಸ್ವಾರ್ಥತತೆಯಿಂದ ಸ್ವತಂತ್ರವಾಗಿ, ದಾನಿಯಾಗಿ, ತೆರೆದಹಸ್ತವುಳ್ಳವವಾಗಿ, ತ್ಯಾಗದಲ್ಲಿ ಪ್ರೀತಿಸುವವನಾಗಿ, ದಾನಶೀಲತೆಯಲ್ಲಿ ಬದ್ಧನಾಗಿ, ನೀಡುವುದರಲ್ಲಿ , ಹಂಚುವುದರಲ್ಲ್ಲಿ ಆನಂದಿಸುವವನಾಗಿದ್ದೇನೆ
ಯಾವಾಗ ಹೀಗೆ ಆರ್ಯ ಶಿಷ್ಯನು ತ್ಯಾಗವನ್ನು ಅನುಸ್ಮೃರಣೆ ಮಾಡುವನೊ ಆಗ ಆತನ ಮನಸ್ಸು ರಾಗಯುತವಾಗಿರುವುದಿಲ್ಲ, ದ್ವೇಷಯುತವಾಗಿರುವುದಿಲ್ಲ ಹಾಗೂ ಮೋಹಯುತವಾಗಿರುವುದಿಲ್ಲ, ಆ ಸಮಯದಲ್ಲಿ ಅವರ ಮನಸ್ಸು  ತ್ಯಾಗಾನುಸ್ಸತಿಯಲ್ಲಿಯೇ ಅವಿಚಲವಾಗಿರುತ್ತದೆ, ಹೀಗೆ ಅವಿಚಲ ಚಿತ್ತವು ಅರ್ಥಸಹಿತ, ಧಮ್ಮಸಹಿತ  ಆನಂದವಾಗಿರುತ್ತದೆ, ಹೀಗೆ ಧಮ್ಮುಪಸಂಹಿತವಾದ ಚಿತ್ತವು ಪ್ರಮೋದವನ್ನು ತಾಳುತ್ತದೆ, ಪ್ರಮೋದದಿಂದಾಗಿ ಪೀತಿ(ಆನಂದ)ವು ಉಂಟಾಗುತ್ತದೆ, ಆನಂದದಿಂದ ಕಾಯವು ಪ್ರಸನ್ನವಾಗುತ್ತದೆ, ಪ್ರಸನ್ನ ಕಾಯದಿಂದ ಸುಖವು ಉಂಟಾಗುವುದು, ಸುಖಯುತ ಚಿತ್ತದಿಂದ ಸಮಾಧಿಯುಂಟಾಗುವುದು.. ಹೀಗೆ ನೆಲೆಸುವ ಆರ್ಯಶ್ರಾವಕನು ಅವವ್ಯಸ್ಥಿತೆಯ ಜನರ ಮಧ್ಯೆ ಸಮತೋಲನವಾಗಿರುತ್ತಾನೆ, ಕ್ಷೊಭೆಯುಳ್ಳ ಜನರ ಮಧ್ಯೆ ಅಕ್ಷೊಭನಾಗಿರುತ್ತಾನೆ. ಅವರು ಧಮ್ಮದ ಶ್ರೋತದಲ್ಲಿ ಪ್ರವೇಶಿಸುತ್ತಾರೆ, ಮತ್ತು ಧಮ್ಮದ ಅನುಸ್ಸತಿಯಲ್ಲಿ ಅಭಿವೃದ್ಧಿ ಹೊಂದುತ್ತಾರೆ.
 ಅಲ್ಲದೆ ನೀವು ದೇವತಾನುನುಸ್ಸತಿಯಲ್ಲಿ ತೊಡಗಬೇಕು. ಹೇಗೆಂದರೆ?  :ಚತುರ್ ಮಹಾರಾಜಿಕ ದೇವತೆಗಳಿದ್ದಾರೆ, ತಾವತಿಂಸ ದೇವತೆಗಳಿದ್ದಾರೆ, ತುಸಿತಾ ದೇವತೆಗಳಿದ್ದಾರೆ, ನಿಮರ್ಾಣರತಿ ದೇವತೆಗಳಿದ್ದಾರೆ, ಪರನಿಮರ್ಾಣರತಿ ದೇವತೆಗಳಿದ್ದಾರೆ, ಬ್ರಹ್ಮ ದೇವತೆಗಳಿದ್ದಾರೆ ಮತ್ತು ಬೇರೆಯ ಉನ್ನತ ರೀತಿಯ ದೇವತೆಗಳಿದ್ದಾರೆ. ಯಾವಾಗ ಈ ದೇವತೆಗಳು ಇಲ್ಲಿಂದ ಚ್ಯುತಿ ಹೊಂದುವವು ಆಗ ಅವು ಇಲ್ಲಿಂದ ಬೇರೆಡೆ ದೇವ ಪುನರ್ಜನ್ಮ ತಾಳುವವು, ಇವರೆಲ್ಲರ ಬಳಿ ಶ್ರದ್ಧೆ, ದಾನ, ಶೀಲ, ಧ್ಯಾನ, ಕಲಿಯುವಿಕೆ, ಪ್ರಜ್ಞಾ ಗುಣವು ಇದ್ದು ಈಗ ಅವುಗಳ ಫಲದಿಂದ ದೇವತೆಗಳಾಗಿದ್ದಾರೆ. ನನ್ನಲ್ಲೂ ಸಹಾ ಆ ಗುಣಗಳಿವೆ. ನಾನು ಆ ಗುಣಗಳನ್ನು ವೃದ್ಧಿಸುವೆ.
ಯಾವಾಗ ಹೀಗೆ ಆರ್ಯ ಶಿಷ್ಯನು ದೇವತಾನುಸತಿಯನ್ನು ಅನುಸ್ಮೃರಣೆ ಮಾಡುವನೊ ಆಗ ಆತನ ಮನಸ್ಸು ರಾಗಯುತವಾಗಿರುವುದಿಲ್ಲ, ದ್ವೇಷಯುತವಾಗಿರುವುದಿಲ್ಲ ಹಾಗೂ ಮೋಹಯುತವಾಗಿರುವುದಿಲ್ಲ, ಆ ಸಮಯದಲ್ಲಿ ಅವರ ಮನಸ್ಸು  ದೇವತಾನುಸ್ಸತಿಯಲ್ಲಿಯೇ ಅವಿಚಲವಾಗಿರುತ್ತದೆ, ಹೀಗೆ ಅವಿಚಲ ಚಿತ್ತವು ಅರ್ಥಸಹಿತ, ಧಮ್ಮಸಹಿತ  ಆನಂದವಾಗಿರುತ್ತದೆ, ಹೀಗೆ ಧಮ್ಮುಪಸಂಹಿತವಾದ ಚಿತ್ತವು ಪ್ರಮೋದವನ್ನು ತಾಳುತ್ತದೆ, ಪ್ರಮೋದದಿಂದಾಗಿ ಪೀತಿ(ಆನಂದ)ವು ಉಂಟಾಗುತ್ತದೆ, ಆನಂದದಿಂದ ಕಾಯವು ಪ್ರಸನ್ನವಾಗುತ್ತದೆ, ಪ್ರಸನ್ನ ಕಾಯದಿಂದ ಸುಖವು ಉಂಟಾಗುವುದು, ಸುಖಯುತ ಚಿತ್ತದಿಂದ ಸಮಾಧಿಯುಂಟಾಗುವುದು..
ಹೀಗೆ ನೆಲೆಸುವ ಆರ್ಯಶ್ರಾವಕನು ಅವ್ಯವಸ್ಥಿತೆಯ ಜನರ ಮಧ್ಯೆ ಸಮತೋಲನವಾಗಿರುತ್ತಾನೆ, ಕ್ಷೊಭೆಯುಳ್ಳ ಜನರ ಮಧ್ಯೆ ಅಕ್ಷೊಭನಾಗಿರುತ್ತಾನೆ. ಅವರು ಧಮ್ಮದ ಶ್ರೋತದಲ್ಲಿ ಪ್ರವೇಶಿಸುತ್ತಾರೆ, ಮತ್ತು ಧಮ್ಮದ ಅನುಸ್ಸತಿಯಲ್ಲಿ ಅಭಿವೃದ್ಧಿ ಹೊಂದುತ್ತಾರೆ.

                                                         ಇಲ್ಲಿಗೆ ಪ್ರಥಮ ಮಹಾನಾಮ ಮುಗಿಯಿತು 

velama sutta in kannada ವೇಲಾಮ ಸುತ್ತ

                                          2. ವೇಲಾಮ ಸುತ್ತ


ಆ ಸಮಯದಲ್ಲಿ ಭಗವಾನರು ಶ್ರಾವಸ್ಥಿಯ ಜೇತವನದ ಆನಾಥಪಿಂಡಿಕನ ವಿಹಾರದಲ್ಲಿ ನೆಲೆಸಿದ್ದರು. ಆಗ ಮಹಾಉಪಾಸಕ ಅನಾಥಪಿಂಡಿಕರು ಭಗವಾನರ ಬಳಿಗೆ ಬಂದರು, ಶ್ರದ್ಧಾಪೂರ್ವಕವಾಗಿ ವಂದಿಸಿದರು, ನಂತರ ಒಂದೆಡೆ ಕುಳಿತರು. ಆಗ ಭಗವಾನರು ಆತನಿಗೆ ಹೀಗೆ ಕೇಳಿದರು:
   ಗೃಹಪತಿಯೇ, ನಿಮ್ಮ ಕುಲವು ಈಗಲೂ ದಾನಗಳನ್ನು ನೀಡುತ್ತಿದೆಯೇ?
  ನೀಡುತ್ತಿದೆ ಭಗವಾನ್, ಅದರೆ ಕೇವಲ ಒರಟಾದ ಅಂಬಲಿ ಹಾಗೂ ಉಪ್ಪಿನಕಾಯಿಗಳನ್ನು ನೀಡುತ್ತಿದ್ದೇವೆ.
 ಗೃಹಪತಿಯೇ ದಾನಿಯು ನೀಡುವಂತಹ ಆಹಾರವು ಒರಟಾಗಿರಬಹುದು ಅಥವಾ ಶ್ರೇಷ್ಟವಾಗಿರುವುದೇ ಆಗಿರಬಹುದು, ಅದರೆ ಅವರು ಅಲಕ್ಷವಾಗಿ ನೀಡಿದರೆ, ಮನಸ್ಸಿಡದೇ ನೀಡಿದರೆ, ತಮ್ಮ ಕೈಯಾರೆ ನೀಡದಿದ್ದರೇ, ಉಳಿದಿದ್ದು ನೀಡಿದರೆ, ಕಮ್ಮವಿಪಾಕದ ಅರಿವಿಲ್ಲದೆ ನೀಡಿದರೆ, ಅಂತಹ ದಾನದ ಪರಿಣಾಮದಿಂದಾಗಿ ಸಿಗುವಂತಹ ಫಲಗಳಾದ ಉತ್ತಮ ಆಹಾರವಾಗಿರ ಬಹುದು, ಉತ್ತಮ ವಸ್ತ್ರಗಳಾಗಬಹುದು, ವಾಹನಗಳಾಗಿರಬಹುದು, ಅಥವಾ ಪಂಚವಿಧದ ಕಾಮಸುಖಗಳಾಗಿರಬಹುದು ಅವ್ಯಾವುದರಲ್ಲೂ ಆತನು ಆನಂದಿಸಲಾರನು ಆತನ ಮನಸ್ಸು ಅದರಲ್ಲಿ ಹರಿಯಲಾರದು, ಮತ್ತು ಆತನ ಪತ್ನಿಯಾಗಲಿ ಅಥವಾ ಪುತ್ರರಾಗಲಿ, ಅಥವಾ ಸೇವಕರಾಗಲಿ, ಗುಲಾಮನಾಗಲಿ, ಕೆಲಸಗಾರನಾಗಲಿ, ಯಾರು ಸಹಾ ಆತನ ಮಾತನ್ನು ಕೇಳಲಾರರು, ಅವರ್ಯಾರು ಸಹಾ ಅತನ ಮಾತುಗಳಿಗೆ ಗಮನವೂ ಸಹ ನೀಡುವುದಿಲ್ಲ ಹಾಗೇಯೆ ಅರ್ಥವನ್ನು ಮಾಡಿಕೊಳ್ಳಲು ಸಹಾ ಹೋಗುವುದಿಲ್ಲ. ಏಕೆ ಹೀಗೆ ? ಏಕೆಂದರೆ ಅವರು ದಾನವನ್ನು ನಿರ್ಲಕ್ಷವಾಗಿ ನೀಡಿದ್ದಾರೆ.
ಇಲ್ಲಿ ಹಲವರು ದಾನದಲ್ಲಿ ನೀಡುವಂತಹ ಆಹಾರವು ಒರಟಾಗಿಯೇ ಇರಲಿ ಅಥವಾ ಶ್ರೇಷ್ಟವಾಗಿಯೇ ಇರಲಿ ಅದರೆ ಅವರು ಜಾಗರೂಕವಾಗಿ ಶ್ರದ್ಧೆಯಿಂದ ನೀಡಿದರೆ, ಮನಸ್ಸಿಟ್ಟು ನೀಡಿದರೆ, ತಮ್ಮ ಕೈಯಾರೆ ನೀಡಿದ್ದರೇ, ಉಳಿದಿದ್ದು ನೀಡದಿದ್ದರೆ, ಕಮ್ಮವಿಪಾಕದ ಅರಿವಿದ್ದು ನೀಡಿದರೆ, ಅಂತಹ ದಾನದ ಪರಿಣಾಮದಿಂದಾಗಿ ಸಿಗುವಂತಹ ಫಲಗಳಾದ ಉತ್ತಮ ಆಹಾರ ವಾಗಿರಬಹುದು, ಉತ್ತಮ ವಸ್ತ್ರಗಳಾಗಬಹುದು, ವಾಹನಗಳಾಗಿರಬಹುದು, ಅಥವಾ ಪಂಚವಿಧದ ಕಾಮಸುಖಗಳಾಗಿರಬಹುದು ಆ ಎಲ್ಲದರಲ್ಲು ಆತನು ಆನಂದಿಸುವನು ಆತನ ಮನಸ್ಸು ಅದರಲ್ಲಿ ಬಾಗುವುದು ಮತ್ತು ಆತನ ಪತ್ನಿಯಾಗಲಿ ಅಥವಾ ಪುತ್ರರಾಗಲಿ, ಅಥವಾ ಸೇವಕರಾಗಲಿ, ಗುಲಾಮನಾಗಲಿ, ಕೆಲಸಗಾರನಾಗಲಿ, ಎಲ್ಲರೂ ಸಹಾ ಆತನ ಮಾತನ್ನು ಕೇಳುವರು. ಎಲ್ಲರೂ ಸಹಾ ಅತನ ಮಾತುಗಳಿಗೆ ಗಮನವೂ ನೀಡುತ್ತಾರೆ ಹಾಗೇಯೆ ಅರ್ಥವನ್ನು ಮಾಡಿಕೊಳ್ಳುತ್ತಾರೆ ಏಕೆ ಹೀಗೆ ? ಏಕೆಂದರೆ ಅವರು ದಾನವನ್ನು ಜಾಗರೂಕವಾಗಿ, ಶ್ರದ್ಧಾಪೂರ್ವಕವಾಗಿ ನೀಡಿದ್ದಾರೆ ಅದರ ಕಮ್ಮಫಲದಿಂದಾಗಿ ಹೀಗಾಗಿದೆ.
ಗೃಹಪತಿಯೇ ಒಂದು ಕಾಲದಲ್ಲಿ ವೇಲಾಮ ಎಂಬ ಹೆಸರಿನ ಬ್ರಾಹ್ಮಣನಿದ್ದನು, ಆತನು ಹೀಗೆ ದಾನವನ್ನು ಮಾಡುತ್ತಿದ್ದನು ಹೇಗೆಂದರೆ 84000 ಸಾವಿರ ಚಿನ್ನದ ಪಾತ್ರೆಗಳು ಬೆಳ್ಳಿಯಿಂದ ತುಂಬಿರುತ್ತಿದ್ದವು, 84000 ಸಾವಿರ ಬೆಳ್ಳಿಪಾತ್ರೆಗಳು ಚಿನ್ನದಿಂದ ತುಂಬಿರುತ್ತಿತ್ತು, 84000 ಕಂಚಿನ ಪಾತ್ರೆಗಳು ಚಿನ್ನದ ನಾಣ್ಯಗಳಿಂದ ತುಂಬಿರುತ್ತ್ತಿತ್ತು. 84000 ಆನೆಗಳು ಚಿನ್ನಾಭರಣಗಳಿಂದ, ಧ್ವಜಗಳಿಂದ ಕೂಡಿರುತ್ತಿತ್ತು, 84000 ರಥಗಳು ಸಿಂಹಗಳ, ಹುಲಿಗಳ, ಚಿರತೆಗಳ ಚರ್ಮಗಳಿಂದ ಮತ್ತು ನಯವಾದ ರತ್ನಕಂಬಳಿಗಳಿಂದ, ಚಿನ್ನವಸ್ತ್ರಗಳಿಂದ, ಚಿನ್ನದ ಧ್ವಜಗಳಿಂದ ಅಲಂಕೃತವಾಗಿರುತ್ತಿದ್ದವು, ಚಿನ್ನದ ಬಲೆಗಳಿಂದ ಕೂಡಿರುತ್ತಿದ್ದವು. ಹಾಗೇಯೆ  ಹಾಲನ್ನು ನೀಡುವಂತಹ 84000 ಹಸುಗಳಿಗೆ ರೇಷ್ಮೆಯ ಮೂಗುದಾರವು ಹಾಗೂ ಹತೋಟಿಯ ರೇಷ್ಮೆಯ ಹಗ್ಗವು ಇರುತ್ತಿತ್ತು, ಹಾಗೇಯೇ 84000 ಕನ್ಯೆಯರು ರತ್ನಾಭರಣಗಳಿಂದ ಅಭೂಷಿತರಾಗಿದ್ದರು, 84000 ಪಲ್ಲಕ್ಕಿಗಳು ರತ್ನಗಂಬಳಿಗಳಿಂದ, ಹೂವು ಇತ್ಯಾದಿಗಳಿಂದ ಜಿಂಕೆಯ ಚರ್ಮಗಳಿಂದ ಅಲಂಕೃತವಾಗಿ ಅವರಿಸಿದ್ದವು, ಅದರಲ್ಲಿ ಕೆಂಪು ದಿಂಬುಗಳು ಸಹಾ ಇದ್ದವು, ಹಾಗೆಯೇ 84000000000 ಗಳಷ್ಟು ಲಿನೀನ್ನ, ರೇಷ್ಮೇಯ, ಉಣ್ಣೆಯ, ಮತ್ತು ಹತ್ತಿಯ ಉಡುಗೆಗಳು ಸಹಾ ಇದ್ದವು. ಮತ್ತು ಇನ್ನು ಊಟ, ಪಾನಿಯ, ತಿಂಡಿ, ಆಹಾರಗಳು, ಭೋಜನಗಳು ಇತ್ಯಾದಿಗಳ ಬಗ್ಗೆ ಹೇಳಲೇ ಬೇಕಾಗಿಲ್ಲ, ಏಕೆಂದರೆ , ಅವೆಲ್ಲಾ ನದಿಯಂತೆ ಹರಿಯುತ್ತಿದ್ದವು.
ಗೃಹಪತಿಯೇ ನೀನು ಹೀಗೆ ಯೋಚಿಸಬಹುದು: ಖಂಡಿತವಾಗಿ ಈ ಬ್ರಾಹ್ಮಣ ಆ ಕಾಲದಲ್ಲಿ ಬೇರೆ ಯಾರೋ ಇದ್ದಿರಬಹುದು! ಎಂದು. ಅದರೆ ಹಾಗೇ ಭಾವಿಸದಿರಿ. ನಾನೇ ಆ ಕಾಲದಲ್ಲಿ ವೇಲಾಮ ಬ್ರಾಹ್ಮಣ ನಾಗಿದ್ದೇನು. ನಾನೇ ಆಗ ಆ ಮಟ್ಟದ ದಾನಗಳನ್ನು ಮಾಡಿದ್ದೆನು!, ಅದರೆ ಆ ಕಾಲದಲ್ಲಿ ಯಾರು ಸಹಾ ಅಂತಹ ದಾನ ಸ್ವೀಕಾರಕ್ಕೆ ಅರ್ಹರು ಇರಲಿಲ್ಲ. ಹೀಗಾಗಿ ಅಂತಹ ದಾನದಿಂದ ಯಾರು ಸಹಾ ಪರಿಶುದ್ಧರಾಗಲಿಲ್ಲ.
ಗೃಹಪತಿಯೇ ವೇಲಾಮ ಬ್ರಾಹ್ಮಣ ಮಹಾದಾನವನ್ನೇ ಮಾಡಿರ ಬಹುದು, ಅದರೆ ಒಬ್ಬ ದೃಷ್ಟಿಸಂಪನ್ನನಿಗೆ (ಸೋತಪನ್ನ) ಬೋಜನದಾನ ಮಾಡಿಸಿದರೆ ಅದು ಈ ಹಿಂದೆ ವೇಲಾಮ ಮಾಡಿದ ಅಷ್ಟು ಮಹಾದಾನಕ್ಕಿಂತಲೂ ಮಹತ್ಫಲವಾಗುತ್ತದೆ.
ಹಾಗೆಯೇ ಗೃಹಪತಿಯೇ ,  ಒಬ್ಬ ಸಕದಾಗಾಮಿ(ಜ್ಞಾನೋದಯದ 2ನೇಯ ಹಂತದವನಿ)ಗೆ ಭೋಜನದಾನ ಮಾಡಿಸಿದರೆ ಅದು ನೂರು  ದೃಷ್ಟಿಸಂಪನ್ನರಿಗೆ ಮಾಡಿದ ಮಹಾದಾನಕ್ಕಿಂತಲೂ ಮಹತ್ಫಲವಾಗುತ್ತದೆ.
ಹಾಗೆಯೇ ಗೃಹಪತಿಯೇ,  ಒಬ್ಬ ಅನಾಗಾಮಿ(ಜ್ಞಾನೋದಯದ 3ನೇಯ ಹಂತದವನಿ)ಗೆ ಭೋಜನದಾನ ಮಾಡಿಸಿದರೆ ಅದು ನೂರು  ಸಕದಾಗಾಮಿಯರಿಗೆ ಮಾಡಿದ ಮಹಾದಾನಕ್ಕಿಂತಲೂ ಮಹತ್ಫಲವಾಗುತ್ತದೆ.
ಹಾಗೆಯೇ ಗೃಹಪತಿಯೇ,  ಒಬ್ಬ ಅರಹಂತಗೆ(ಜ್ಞಾನೋದಯ ಪೂರ್ಣ)  ಭೋಜನದಾನ ಮಾಡಿಸಿದರೆ ಅದು ನೂರು ಅನಾಗಾಮಿಯರಿಗೆ ಮಾಡಿದ ಮಹಾದಾನಕ್ಕಿಂತಲೂ ಮಹತ್ಫಲವಾಗುತ್ತದೆ. 
ಹಾಗೆಯೇ ಗೃಹಪತಿಯೇ,  ಒಬ್ಬ ಪಚ್ಚೇಕಬುದ್ಧರಿಗೆ ಭೋಜನದಾನ ಮಾಡಿಸಿದರೆ ಅದು ನೂರು ಅರಹಂತರಿಗೆ ಮಾಡಿದ ಮಹಾದಾನಕ್ಕಿಂತಲೂ ಮಹತ್ಫಲವಾಗುತ್ತದೆ. 
ಹಾಗೆಯೇ ಗೃಹಪತಿಯೇ, ಒಬ್ಬ ತಥಾಗತರು, ಅರಹಂತರು ಹಾಗೂ ಸಮ್ಮಸಂಬುದ್ಧರು ಆಗಿರುವ ಅವರಿಗೆ ಭೋಜನದಾನ ಮಾಡಿದರೆ ಅದು ನೂರು ಪಚ್ಚೇಕಬುದ್ಧರಿಗೆ ಮಾಡಿದ ಮಹಾದಾನಕ್ಕಿಂತಲೂ ಮಹತ್ಫಲವಾಗುತ್ತದೆ.
ಹಾಗೆಯೇ ಗೃಹಪತಿಯೇ ಭಿಕ್ಖುಸಂಘಸಹಿತ ,ಒಬ್ಬ ತಥಾಗತರು, ಅರಹಂತರು ಹಾಗೂ ಸಮ್ಮಸಂಬುದ್ಧರು ಆಗಿರುವ ಅವರಿಗೆ ಬೋಜನದಾನ ಮಾಡಿದರೆ ಅದು ಒಬ್ಬ ತಥಾಗತರು, ಅರಹಂತರು ಹಾಗೂ ಸಮ್ಮಸಂಬುದ್ಧರು ಮಾಡಿದ ಮಹಾದಾನಕ್ಕಿಂತಲೂ ಮಹತ್ಫಲವಾಗುತ್ತದೆ.
ಹಾಗೇಯೇ ನಾಲ್ಕು ದಿಕ್ಕುಗಳಲ್ಲಿರುವ ಸಂಘಕ್ಕೇ ವಿಹಾರವನ್ನು(ವಾಸ ಸ್ಥಳ) ಕಟ್ಟಿಸುವುದು  ಭಿಕ್ಖುಸಂಘಸಹಿತ ಒಬ್ಬ ತಥಾಗತರು, ಅರಹಂತರು ಹಾಗೂ ಸಮ್ಮಸಂಬುದ್ಧರು ಆಗಿರುವ ಅವರಿಗೆ ಬೋಜನದಾನ ಮಾಡಿಸುವುದಕ್ಕಿಂತಲೂ ಮಹತ್ಫಲವಾಗಿರುತ್ತದೆ.
ಹಾಗೇಯೇ ಶ್ರದ್ಧಾಯುತ ಹೃದಯದಿಂದ ಬುದ್ಧರಿಗೆ, ಧಮ್ಮಕ್ಕೇ, ಮತ್ತು ಸಂಘಕ್ಕೇ ಶರಣು ಹೋಗುವುದು ನಾಲ್ಕು ದಿಕ್ಕುಗಳಲ್ಲಿರುವ ಸಂಘಕ್ಕೇ ವಿಹಾರವನ್ನು(ವಾಸ ಸ್ಥಳ) ಕಟ್ಟಿಸುವುದಕ್ಕಿಂತಲೂ ಹೆಚ್ಚು ಮಹತ್ಪಲವನ್ನು ನೀಡುತ್ತದೆ.
ಹಾಗೆಯೇ ಪಂಚಶೀಲಗಳಾದ (- ಜೀವಹತ್ಯೆ ಮಾಡದಿರುವುದು, ಕಳ್ಳತನ ಮಾಡದಿರುವುದು, ಅನೈತಿಕ ಕಾಮುಕತೆಯಲ್ಲಿ ತೊಡಗದಿರುವುದು, ಸುಳ್ಳು ಹೇಳದಿರುವುದು ಮತ್ತು ಮತ್ತನ್ನುಂಟುಮಾಡುವ ಮಾದಕ ದ್ರವ್ಯಗಳನ್ನು ಸೇವಿಸದಿರುವುದು -ಇವುಗಳ) ಪಾಲನೆಯು ಶ್ರದ್ಧಾಯುತ ಹೃದಯದಿಂದ ಬುದ್ಧರಿಗೆ, ಧಮ್ಮಕ್ಕೇ, ಮತ್ತು ಸಂಘಕ್ಕೇ ಶರಣು ಹೋಗುವುದಕ್ಕಿಂತಲೂ ಹೆಚ್ಚು ಮಹತ್ಪಲವನ್ನು ನೀಡುತ್ತದೆ.
ಹಾಗೇಯೇ ಹಸುವಿನಿಂದ ಹಾಲು ಕರೆಯುವ ಕಾಲದಷ್ಟು ಮೆತ್ತಾ (ಸರ್ವರ ಮೇಲಿನ ಪರಿಶುದ್ಧ ಪ್ರೀತಿ) ಧ್ಯಾನವು ಮಾಡಿದರೆ ಅದು ಪಂಚಶೀಲಗಳಾದ (ಜೀವಹತ್ಯೆ ಮಾಡದಿರುವುದು, ಕಳ್ಳತನ ಮಾಡದಿರುವುದು, ಅನೈತಿಕ ಕಾಮುಕತೆಯಲ್ಲಿ ತೋಡಗದಿರುವುದು, ಸುಳ್ಳು ಹೇಳದಿರುವುದು ಮತ್ತು ಮತ್ತನ್ನುಂಟುಮಾಡುವ ಮಾದಕ ದ್ರವ್ಯಗಳನ್ನು ಸೇವಿಸದಿರುವುದು -ಇವುಗಳ) ಪಾಲನೆಗಿಂತಲೂ ಹೆಚ್ಚು ಮಹತ್ಫಲವನ್ನು ನೀಡುತ್ತದೆ.   
ಹಾಗೇಯೇ ನಿಮಿಷಗಳ ಕಾಲದ ಅನಿತ್ಯತೆಯ ಸಂಜ್ಞೇಯ ಧ್ಯಾನವನ್ನು ಮಾಡಿದರೆ ಅದು  ಹಸುವಿನಿಂದ ಹಾಲು ಕರೆಯುವ ಕಾಲದಷ್ಟು ಮೆತ್ತಾ (ಸರ್ವರ ಮೇಲಿನ ಪರಿಶುದ್ಧ ಪ್ರೀತಿ) ಭಾವನ (ಧ್ಯಾನ)ವು ಮಾಡಿದುದಕ್ಕಿಂತಲೂ ಹೆಚ್ಚು ಮಹತ್ಫಲ ನೀಡುತ್ತದೆ .ಇದು ಇವೆಲ್ಲಕ್ಕೂ ಹೆಚ್ಚು ಮಹತ್ಫಲವಾಗಿದೆ .

                                             ಇಲ್ಲಿಗೆ ವೇಲಾಮ ಸುತ್ತವು ಮುಗಿಯಿತು 

kalama sutta in kannada ಕಾಲಾಮ ಸುತ್ತ

1. ಕೇಸಮುಟ್ಟಿ (ಕೇಸಪುತ್ತಿಯ/ಕಾಲಾಮ ಸುತ್ತ) (ವಿಚಾರಶೀಲತೆಯ ಸೂತ್ರ) ಸುತ್ತ


ನಾನು ಹೀಗೆ ಕೇಳಿರುವೆ. ಭಗವಾನರು ಒಮ್ಮೆ ಕೋಸಲ ರಾಜ್ಯದ ಕೇಸಪುತ್ತ ಜಿಲ್ಲೆಗೆ ಬೃಹತ್ ಸಮೂಹದೊಂದಿಗೆ ಬಂದರು. ಕೇಸಪುತ್ತರು ಕಾಲಾಮರಿಗೆ ಭಗವಾನರು ಅಲ್ಲಿಗೆ ಬಂದಿರುವುದು ತಿಳಿಯಿತು. ಕೇಸಪುತ್ತದ ಕಾಲಾಮರು ಹೀಗೆ ಭಗವಾನರ ಖ್ಯಾತಿ ಆಲಿಸಿದ್ದರು. ಏನೆಂದರೆ ಶಾಕ್ಯಪುತ್ರರಾದ ಸಮಣಗೋತಮರು ಕೇಸಪುತ್ತಕ್ಕೆ ಆಗಮಿಸಿದ್ದಾರೆ ಅವರ ಬಗ್ಗೆ ಈ ರೀತಿಯ ಖ್ಯಾತಿಯು ಹಬ್ಬಿದೆ:
ಭಗವಾನರು ಅರಹಂತರು, ಸಮ್ಮಾಸಂಬುದ್ಧರು, ವಿದ್ಯಾಚರಣೆಯ ಸಂಪನ್ನರು, ಸುಗತರು, ಲೋಕವಿದರು, ಅನುತ್ತರರು, ಪುರುಷಧಮ್ಮ ಸಾರಥಿಯು, ದೇವತೆಗಳಿಗೆ ಮತ್ತು ಮಾನವರಿಗೆ ಶಾಸ್ತರು, ಬುದ್ಧರು ಹಾಗೂ ಭಗವಾನರು ಆಗಿದ್ದಾರೆ. ಹೀಗಾಗಿ ಅಂತಹ ಅರಹಂತರನ್ನು ದಶರ್ಿಸುವುದು ಒಳ್ಳೆಯದು ಎಂದು ತಿಮರ್ಾನಿಸಿದರು.
ಹೀಗೆ ಕೇಸಪುತ್ತದ ಕಾಲಾಮರು ಭಗವಾನರಲ್ಲಿಗೆ ಬಂದು ವಂದಿಸಿ, ಕುಶಲಕ್ಷೇಮವನ್ನು ವಿಚಾರಿಸಿ, ಗೌರವಾರ್ಪಣೆ ಮಾಡಿ ಕುಳಿತರು....ಕೆಲವರು ನಿಶ್ಯಬ್ದವಾಗಿ ಕುಳಿತರು.... ಆಗ ಕಾಲಾಮರು ಭಗವಾನರಲ್ಲಿ ಹೀಗೆ ಪ್ರಶ್ನಿಸಿದರು:
ಭಂತೆ ಇಲ್ಲಿಗೆ ಕೆಲವು ಸಮಣ ಬ್ರಾಹ್ಮಣರು ಬರುತ್ತಾರೆ, ತಮ್ಮ ಸಿದ್ಧಾಂತವನ್ನು ವಿವರಿಸುತ್ತಾರೆ, ಬಣ್ಣಿಸುತ್ತಾರೆ. ಆದರೆ ಹಾಗೆಯೇ ಪರರ ಸಿದ್ಧಾಂತಗಳನ್ನು ಖಂಡಿಸುತ್ತಾರೆ, ನಿಂದಿಸುತ್ತಾರೆ, ನಿರಾಕರಿಸುತ್ತಾರೆ. ಅದೇರೀತಿಯಲ್ಲೇ ಬೇರೆ ಕೆಲವು ಸಮಣ ಬ್ರಾಹ್ಮಣರು ಸಹಾ ಬಂದು ಹಾಗೇ ಅದೇರೀತಿ ಮಾಡುತ್ತಾರೆ. ಹೀಗೆ ವಿಭಿನ್ನವಾದ ಸಿದ್ಧಾಂತಗಳಿಂದಾಗಿ ನಮ್ಮಲ್ಲಿ ಧ್ವಂದ್ವ ಉಂಟಾಗಿದೆ, ಸಂಶಯ ಉಂಟಾಗಿದೆ, ನಮಗೆ ಅವರಲ್ಲಿ ಸತ್ಯ ಹೇಳುತ್ತಿರುವವರು ಯಾರು? ಮಿಥ್ಯ ನುಡಿಯುತ್ತಿರುವವರು ಯಾರು? ತಿಳಿಯದಾಗಿದೆ. ಇದನ್ನು ನೀವೇ ನಮಗೆ ಪರಿಹರಿಸಬೇಕು ಭಂತೆ.
ಓ ಕಾಲಾಮರೇ, ನೀವು ಸಂಶಯಸ್ತ ವಿಷಯಗಳಲ್ಲಿಯೇ ಸಂಶಯ ಪಡುತ್ತಿರುವಿರಿ, ದ್ವ್ವಂದ್ವವುಳ್ಳ ವಿಷಯದಲ್ಲೇ ಧ್ವಂದ್ವಪಡುತ್ತಿರುವಿರಿ. ಸಂಶಯಸ್ತ ವಿಷಯಗಳಲ್ಲಿ ದ್ವಂದ್ವತೆ ಆಗುವುದು.
ಬನ್ನಿ ಕಾಲಾಮರೇ,
1. ಬಹಳಷ್ಟು ಕೇಳಿದ್ದೇವೇ ಎಂದು  ನಂಬದಿರಿ (ಅನುಸ್ಸವವೇನ) 
2. ಸಂಪ್ರದಾಯವೆಂದು (ಪರಂಪರಾ) ನಂಬದಿರಿ 
3. ವದಂತಿಗಳನ್ನು (ಇತಿಕಿರಾಯ) ನಂಬದಿರಿ,  
4. ಧರ್ಮಗ್ರಂಥಗಳಲ್ಲಿದೆ (ಪಿಟಿಕ ಸಂಪಾದನೇನ) ಎಂದು ನಂಬದಿರಿ, 
5. ತರ್ಕ ಸಮ್ಮತ (ತರ್ಕಹೇತು) ಎಂದಾಗಲಿ ನಂಬದಿರಿ, 
6. ಯೋಜನಬದ್ಧವಾಗಿದೆ (ನಯಹೇತು) ಎಂದು ನಂಬದಿರಿ,  
7. ತೋರಿಕೆಯ ತರ್ಕದಿಂದ (ಚೆನ್ನಾಗಿ ಕಾಣುತ್ತಿದೆ) ಸ್ವೀಕಾರಾರ್ಹವಾಗಿದೆ (ಆಕಾರಪರಿವಿತಕ್ಕೇನ) ಎಂದಾಗಲಿ ನಂಬದಿರಿ,
8. ಪಕ್ಷಪಾತ ಅಥವಾ ಪೂವರ್ಾಗ್ರಹ ಪೀಡಿತತೆಯಿಂದಾಗಿ ನಮ್ಮ ಚಿಂತನೆಯಂತಿದೆ ಎಂದು (ದಿಟ್ಠನಿಜ್ಝಾನಕ್ಖನ್ತಿಯಾ)  ನಂಬದಿರಿ, 
9. ಭವ್ಯ ನುರಿತ ತಜ್ಞರಿಂದ ಬಂದಿದೆ (ಭಬ್ಬರೂಪತಾಯ) ಎಂದಾಗಲಿ ನಂಬದಿರಿ, 
10. ಅಥವಾ ಇವರು ನಮ್ಮ ಗೌರವಾರ್ಹ ಸಮಣ ಗುರುವು ಅವರಿಂದ ಬಂದಿದೆ (ಸಮಣೊ ನೊ ಗರೂತಿ) ಎಂದಾಗಲಿ ನಂಬಬೇಡಿ. 
ಆದರೆ ಕಾಲಾಮರೇ, ಯಾವಾಗ ನೀವೇ ಚಿಂತನೆ ಮಾಡಿದಾಗ, ಇವು ಅಕುಶಲವಾದವು, ಇವು ನಿಂದನಾರ್ಹವಾದವು, ಇವು ಅನರ್ಥಕಾರಿ, ನಿಂದನೀಯ, ಜ್ಞಾನಿಗಳಿಂದ ನಿಷೇಧಿಸಲ್ಪಡುತ್ತದೆ ಎಂದು ಗೊತ್ತಾದಾಗ, ಇವುಗಳ ಪಾಲನೆಯಿಂದ ದುಃಖವಾಗುತ್ತದೆ ಎಂದು ಅರಿವಾದಾಗ ಅದನ್ನು ತಿರಸ್ಕರಿಸಿ.
ಈಗ ಕಾಲಾಮರೇ, ಇದರ ಬಗ್ಗೆ ಹೇಗೆ ಯೋಚಿಸುವಿರಿ,? ಒಬ್ಬನಲ್ಲಿ ಲೋಭ ಉಂಟಾದಾಗ ಅದು ಆತನಿಗೆ ಲಾಭಕ್ಷೇಮ ತರುತ್ತದೆಯೋ ಅಥವಾ ಹಾನಿಯನ್ನು ಉಂಟುಮಾಡುತ್ತದೆಯೋ?
ಅದು ಹಾನಿಯನ್ನು ತರುತ್ತದೆ ಭಗವಾನರೇ.
ಕಾಲಾಮರೇ, ಈಗ ಆತನು ಲೋಭಿಯಾದಾಗ, ಲೋಭದಿಂದ ಸೋತಿರುವಾಗ, ಲೋಭದ ಗೀಳನ್ನು ಹೊಂದಿರುವಾಗ,  ಆತನ ಚಿತ್ತವು ನಿಯಂತ್ರಣ ತಪ್ಪುತ್ತದೆ, ಆಗ ಆತನು ಜೀವಹತ್ಯೆ, ಕಳ್ಳತನ, ವ್ಯಭಿಚಾರ, ಸುಳ್ಳು ಹೇಳುವಿಕೆ ಮಾಡುತ್ತಾನೆ, ಹಾಗೆಯೇ ಪರರಿಗೂ ಅದೇ ರೀತಿ ಮಾಡಲು ಪ್ರೋತ್ಸಾಹ ನೀಡುತ್ತಾನೆ. ಅದರಿಂದಾಗಿ ಆತನಿಗೆ ಭವಿಷ್ಯದಲ್ಲಿ ದೀರ್ಘ ದುಃಖ ಮತ್ತು ಹಾನಿ ಉಂಟಾಗುತ್ತದೆ ಅಲ್ಲವೇ?
ಹೌದು ಭಂತೆ
ಕಾಲಾಮರೇ, ಈಗ ಆತನು ದ್ವೇಷಿಯಾದಾಗ, ದ್ವೇಷದಿಂದ ಸೋತಿರುವಾಗ, ದ್ವೇಷದ ಗೀಳನ್ನು ಹೊಂದಿರುವಾಗ,  ಆತನ ಚಿತ್ತವು ನಿಯಂತ್ರಣ ತಪ್ಪುತ್ತದೆ, ಆಗ ಆತನು ಜೀವಹತ್ಯೆ, ಕಳ್ಳತನ, ವ್ಯಭಿಚಾರ, ಸುಳ್ಳು ಹೇಳುವಿಕೆ ಮಾಡುತ್ತಾನೆ, ಹಾಗೆಯೇ ಪರರಿಗೂ ಅದೇರೀತಿ ಮಾಡಲು ಪ್ರೋತ್ಸಾಹ ನೀಡುತ್ತಾನೆ. ಅದರಿಂದಾಗಿ ಆತನಿಗೆ ಭವಿಷ್ಯದಲ್ಲಿ ದೀರ್ಘ ದುಃಖ ಮತ್ತು ಹಾನಿ ಉಂಟಾಗುತ್ತದೆ ಅಲ್ಲವೇ?
ಹೌದು ಭಂತೆ
ಕಾಲಾಮರೇ, ಈಗ ಆತನು ಮೋಹಿಯಾದಾಗ, ಮೋಹದಿಂದ ಸೋತಿರುವಾಗ, ಮೋಹದ ಗೀಳನ್ನು ಹೊಂದಿರುವಾಗ,  ಆತನ ಚಿತ್ತವು ನಿಯಂತ್ರಣ ತಪ್ಪುತ್ತದೆ, ಆಗ ಆತನು ಜೀವಹತ್ಯೆ, ಕಳ್ಳತನ, ವ್ಯಭಿಚಾರ, ಸುಳ್ಳು ಹೇಳುವಿಕೆ ಮಾಡುತ್ತಾನೆ, ಹಾಗೆಯೇ ಪರರಿಗೂ ಅದೇರೀತಿ ಮಾಡಲು ಪ್ರೋತ್ಸಾಹ ನೀಡುತ್ತಾನೆ. ಅದರಿಂದಾಗಿ ಆತನಿಗೆ ಭವಿಷ್ಯದಲ್ಲಿ ದೀರ್ಘ ದುಃಖ ಮತ್ತು ಹಾನಿ ಉಂಟಾಗುತ್ತದೆ ಅಲ್ಲವೇ?
ಹೌದು ಭಂತೆ
ಈಗ ಕಾಲಾಮರೇ, ಇದರ ಬಗ್ಗೆ ಹೇಗೆ ಯೋಚಿಸುವಿರಿ,? ಈ ವಿಷಯಗಳು ಕುಶಲವೋ ಅಥವಾ ಅಕುಶಲವೋ?
ಅಕುಶಲ ಭಂತೆ
ಇವು ನಿಂದನೀಯವೋ ಅಥವಾ ನಿಂದನಾತೀತವೋ?
ನಿಂದನೀಯವಾದುದು ಭಗವಾನ್.
ಇವು ಜ್ಞಾನಿಗಳಿಂದ ನಿಷೇಧಿಸಲ್ಪಡುವುದೋ ಅಥವಾ ಪ್ರಶಂಸನೀಯವೋ ?
ನಿಷೇಧಿಸಲ್ಪಡುವುದು ಭಗವಾನ್.
ಇವುಗಳನ್ನು ಸ್ವೀಕರಿಸಿ, ಪರಿಪಾಲಿಸಿದಾಗ ದೀರ್ಘಕಾಲ ಹಾನಿ, ದುಃಖ, ಉಂಟಾಗುತ್ತದೆ ಅಲ್ಲವೇ? ಇದನ್ನು ಹೇಗೆ ತೆಗೆದುಕೊಳ್ಳುವಿರಿ?
ಇವುಗಳನ್ನು ಸ್ವೀಕರಿಸಿ, ಪರಿಪಾಲಿಸಿದಾಗ ದೀರ್ಘಕಾಲ ಹಾನಿ, ದುಃಖ, ಉಂಟಾಗುತ್ತದೆ. ಇದನ್ನು ನಾವು ಹೀಗೆ ತೆಗೆದುಕೊಳ್ಳುವೆವು.
ಓ ಕಾಲಾಮರೇ, ಹೀಗಾಗಿ
ಬನ್ನಿ ಕಾಲಾಮರೇ,
1. ಬಹಳಷ್ಟು ಕೇಳಿದ್ದೇವೇ ಎಂದು  ನಂಬದಿರಿ (ಅನುಸ್ಸವವೇನ)
2. ಸಂಪ್ರದಾಯವೆಂದು (ಪರಂಪರಾ) ನಂಬದಿರಿ
3. ವದಂತಿಗಳನ್ನು (ಇತಿಕಿರಾಯ) ನಂಬದಿರಿ, 
4. ಧರ್ಮಗ್ರಂಥಗಳಲ್ಲಿದೆ (ಪಿಟಿಕ ಸಂಪಾದನೇನ) ಎಂದು ನಂಬದಿರಿ,
5. ತರ್ಕ ಸಮ್ಮತ (ತರ್ಕಹೇತು) ಎಂದಾಗಲಿ ನಂಬದಿರಿ,
6. ಯೋಜನಬದ್ಧವಾಗಿದೆ (ನಯಹೇತು) ಎಂದು ನಂಬದಿರಿ, 
7. ತೋರಿಕೆಯ ತರ್ಕದಿಂದ (ಚೆನ್ನಾಗಿ ಕಾಣುತ್ತಿದೆ) ಸ್ವೀಕಾರಾರ್ಹವಾಗಿದೆ (ಆಕಾರಪರಿವಿತಕ್ಕೇನ) ಎಂದಾಗಲಿ ನಂಬದಿರಿ,
8. ಪಕ್ಷಪಾತ ಅಥವಾ ಪೂವರ್ಾಗ್ರಹಪೀಡಿತತೆಯಿಂದಾಗಿ ನಮ್ಮ ಚಿಂತನೆಯಂತಿದೆ ಎಂದು (ದಿಟ್ಠನಿಜ್ಝಾನಕ್ಖನ್ತಿಯಾ)  ನಂಬದಿರಿ,
9. ಭವ್ಯನುರಿತ ತಜ್ಞರಿಂದ ಬಂದಿದೆ (ಭಬ್ಬರೂಪತಾಯ) ಎಂದಾಗಲಿ ನಂಬದಿರಿ,
10. ಅಥವಾ ಇವರು ನಮ್ಮ ಗೌರವಾರ್ಹ ಸಮಣ ಗುರುವು ಅವರಿಂದ ಬಂದಿದೆ (ಸಮಣೊ ನೊ ಗರೂತಿ) ಎಂದಾಗಲಿ ನಂಬಬೇಡಿ. 
ಆದರೆ ಕಾಲಾಮರೇ, ಯಾವಾಗ ನೀವೇ ಚಿಂತನೆ ಮಾಡಿದಾಗ, ಇವು ಅಕುಶಲವಾದವು, ಇವು ನಿಂದನಾರ್ಹವಾದವು ,ಇವು ಅನರ್ಥಕಾರಿ, ನಿಂದನೀಯ, ಜ್ಞಾನಿಗಳಿಂದ ನಿಷೇಧಿಸಲ್ಪಡುತ್ತದೆ ಎಂದು ಗೊತ್ತಾದಾಗ, ಇವುಗಳ ಪಾಲನೆಯಿಂದ ದುಃಖವಾಗುತ್ತದೆ ಎಂದು ಅರಿವಾದಾಗ ಅದನ್ನು ತಿರಸ್ಕರಿಸಿ ,ಅದಕ್ಕಾಗಿಯೇ ಹೀಗೆ ಹೇಳಿದ್ದೇನೆ.
ಬನ್ನಿ ಕಾಲಾಮರೇ,
1. ಬಹಳಷ್ಟು ಕೇಳಿದ್ದೇವೇ ಎಂದು  ನಂಬದಿರಿ (ಅನುಸ್ಸವವೇನ)
2. ಸಂಪ್ರದಾಯವೆಂದು (ಪರಂಪರಾ) ನಂಬದಿರಿ
3. ವದಂತಿಗಳನ್ನು (ಇತಿಕಿರಾಯ) ನಂಬದಿರಿ, 
4. ಧರ್ಮಗ್ರಂಥಗಳಲ್ಲಿದೆ (ಪಿಟಿಕ ಸಂಪಾದನೇನ) ಎಂದು ನಂಬದಿರಿ,
5. ತರ್ಕ ಸಮ್ಮತ (ತರ್ಕಹೇತು) ಎಂದಾಗಲಿ ನಂಬದಿರಿ,
6. ಯೋಜನಬದ್ಧವಾಗಿದೆ (ನಯಹೇತು) ಎಂದು ನಂಬದಿರಿ, 
7. ತೋರಿಕೆಯ ತರ್ಕದಿಂದ (ಚೆನ್ನಾಗಿ ಕಾಣುತ್ತಿದೆ) ಸ್ವೀಕಾರಾರ್ಹವಾಗಿದೆ (ಆಕಾರಪರಿವಿತಕ್ಕೇನ) ಎಂದಾಗಲಿ ನಂಬದಿರಿ,
8. ಪಕ್ಷಪಾತ ಅಥವಾ ಪೂವರ್ಾಗ್ರಹಪೀಡಿತತೆಯಿಂದಾಗಿ ನಮ್ಮ ಚಿಂತನೆಯಂತಿದೆ ಎಂದು (ದಿಟ್ಠನಿಜ್ಝಾನಕ್ಖನ್ತಿಯಾ)  ನಂಬದಿರಿ,
9. ಭವ್ಯನುರಿತ ತಜ್ಞರಿಂದ ಬಂದಿದೆ (ಭಬ್ಬರೂಪತಾಯ) ಎಂದಾಗಲಿ ನಂಬದಿರಿ,
10. ಅಥವಾ ಇವರು ನಮ್ಮ ಗೌರವಾರ್ಹ ಸಮಣ ಗುರುವು ಅವರಿಂದ ಬಂದಿದೆ (ಸಮಣೊ ನೊ ಗರೂತಿ) ಎಂದಾಗಲಿ ನಂಬಬೇಡಿ.
ಆದರೆ ಕಾಲಾಮರೇ, ಯಾವಾಗ ನೀವೇ ಚಿಂತನೆ ಮಾಡಿದಾಗ, ಇವು ಕುಶಲವಾದವು, ಇವು ನಿಂದಾತೀತವಾದವು ,ಇವು ಅರ್ಥಕಾರಿ, ನಿಂದತೀತವಾದವು ಜ್ಞಾನಿಗಳಿಂದ ಪ್ರಶಂಶಿಲ್ಪಡುತ್ತದೆ ಎಂದು ಗೊತ್ತಾದಾಗ, ಇವುಗಳ ಪಾಲನೆಯಿಂದ ಸುಖವಾಗುತ್ತದೆ ಮತ್ತು ಕ್ಷೇಮವಾಗುತ್ತದೆ ಎಂದು ಅರಿವಾದಾಗ ಅವನ್ನು ಸ್ವೀಕರಿಸಿರಿ, ಪಾಲಿಸಿರಿ, ಜೀವಿಸಿರಿ.
ಈಗ ಕಾಲಾಮರೇ, ಇದರ ಬಗ್ಗೆ ಹೇಗೆ ಯೋಚಿಸುವಿರಿ?,  ಅಲೋಭವು ವ್ಯಕ್ತಿಯಲ್ಲಿ ಉದಯಿಸಿದರೆ ಆತನಿಗೆ ಕ್ಷೇಮವಾಗುತ್ತದೋ ಅಥವಾ ಹಾನಿಯಾಗುತ್ತದೋ?
ಕ್ಷೇಮವಾಗುತ್ತದೆ ಭಂತೆ.
ಈಗ ಮನುಷ್ಯನು ಲೋಭಮುುಕ್ತನಾದಾಗ, ಲೋಭದಿಂದ ಸೋಲದಿದ್ದಾಗ, ಲೋಭದಿಂದ ಆವೃತವಾಗದೇ ಇದ್ದಾಗ, ಆತನು ಜೀವಹತ್ಯೆ ಮಾಡಲಾರನು, ಕಳ್ಳತನವಾಗಲಿ, ವ್ಯಭಿಚಾರವಾಗಲಿ ಮಾಡಲಾರನು ಸುಳ್ಳಾಗಲಿ ನುಡಿಯಲಾರನು,  ಹಾಗೆಯೇ ಪರರಿಗೂ ಇದನ್ನೇ ಪ್ರೋತ್ಸಾಹಿಸಿ ಆತನು ಅವರಿಗೆ ದಾರಿ ತಪ್ಪಿಸಲಾರನು. ಇದರಿಂದಾಗಿ  ಆತನಿಗೆ ಕ್ಷೇಮವು ಮತ್ತು ಸುಖವು ದೀರ್ಘಕಾಲ ಇರುತ್ತದೆಯಲ್ಲವೇ ?
ಹೌದು ಭಂತೆ.
ಈಗ ಕಾಲಾಮರೇ, ಇದರ ಬಗ್ಗೆ ಹೇಗೆ ಯೋಚಿಸುವಿರಿ,  ಅದ್ವೇಷವು ವ್ಯಕ್ತಿಯಲ್ಲಿ ಉದಯಿಸಿದರೆ ಆತನಿಗೆ ಕ್ಷೇಮವಾಗುತ್ತದೋ ಅಥವಾ ಹಾನಿಯಾಗುತ್ತದೋ?
ಕ್ಷೇಮವಾಗುತ್ತದೆ ಭಂತೆ.
ಈಗ ಮನುಷ್ಯನು ದ್ವೇಷಮುಕ್ತನಾದಾಗ,  ದ್ವೇಷದಿಂದ ಸೋಲದಿದ್ದಾಗ, ದ್ವೇಷದಿಂದ ಆವೃತವಾಗದೇ ಇದ್ದಾಗ, ಆತನು ಜೀವಹತ್ಯೆ ಮಾಡಲಾರನು, ಕಳ್ಳತನವಾಗಲಿ, ವ್ಯಭಿಚಾರವಾಗಲಿ ಮಾಡಲಾರನು ಸುಳ್ಳಾಗಲಿ ನುಡಿಯಲಾರನು,  ಹಾಗೆಯೇ ಪರರಿಗೂ ಪ್ರೋತ್ಸಾಹಿಸಿ ಆತನು ಅವರಿಗೆ ದಾರಿ ತಪ್ಪಿಸಲಾರನು. ಇದರಿಂದಾಗಿ ಆತನಿಗೆ ಕ್ಷೇಮವು ಮತ್ತು ಸುಖವು ದೀರ್ಘಕಾಲ ಇರುತ್ತದೆಯಲ್ಲವೇ ?
    ಹೌದು ಭಂತೆ.
ಈಗ ಕಾಲಾಮರೇ, ಇದರ ಬಗ್ಗೆ ಹೇಗೆ ಯೋಚಿಸುವಿರಿ,  ಅಮೋಹವು ವ್ಯಕ್ತಿಯಲ್ಲಿ ಉದಯಿಸಿದರೆ ಆತನಿಗೆ ಕ್ಷೇಮವಾಗುತ್ತದೋ ಅಥವಾ ಹಾನಿಯಾಗುತ್ತದೋ?
ಕ್ಷೇಮವಾಗುತ್ತದೆ ಭಂತೆ.
ಈಗ ಮನುಷ್ಯನು ಮೋಹಮುಕ್ತನಾದಾಗ,  ಮೋಹದಿಂದ ಸೋಲದಿದ್ದಾಗ, ಮೋಹದಿಂದ ಆವೃತವಾಗದೇ ಇದ್ದಾಗ, ಆತನು ಜೀವಹತ್ಯೆ ಮಾಡಲಾರನು, ಕಳ್ಳತನವಾಗಲಿ, ವ್ಯಭಿಚಾರವಾಗಲಿ ಮಾಡಲಾರನು ಸುಳ್ಳಾಗಲಿ ನುಡಿಯಲಾರನು,  ಹಾಗೆಯೇ ಪರರಿಗೂ ಪ್ರೋತ್ಸಾಹಿಸಿ ಆತನು ಅವರಿಗೆ ದಾರಿ ತಪ್ಪಿಸಲಾರನು. ಇದರಿಂದಾಗಿ ಆತನಿಗೆ ಕ್ಷೇಮವು ಮತ್ತು ಸುಖವು ದೀರ್ಘಕಾಲ ಇರುತ್ತದೆಯಲ್ಲವೇ ?
    ಹೌದು ಭಂತೆ.
ಈಗ ಕಾಲಾಮರೇ, ಇದರ ಬಗ್ಗೆ ಹೇಗೆ ಯೋಚಿಸುವಿರಿ, ಈ ವಿಷಯಗಳು ಕುಶಲವೋ ಅಥವಾ ಅಕುಶಲವೋ,?
ಕುಶಲ ಭಂತೆ
ಇವು ನಿಂದನೀಯವೋ ಅಥವಾ ನಿಂದನತೀತವೋ ?.
ನಿಂದನಾತೀತವಾದುದು ಭಗವಾನ್.
ಇವು ಜ್ಞಾನಿಗಳಿಂದ ನಿಷೇಧಿಸಲ್ಪಡುವುದೋ ಅಥವಾ ಪ್ರಶಂಸನೀಯವೋ ?
ಪ್ರಶಂಸಿಸಲ್ಪಡುವುದು ಭಗವಾನ್.
ಇವುಗಳನ್ನು ಸ್ವೀಕರಿಸಿ, ಪರಿಪಾಲಿಸಿದಾಗ ದೀರ್ಘಕಾಲ ಸುಖ, ಕ್ಷೇಮ ಉಂಟಾಗುತ್ತದೆ ಅಥವಾ ಅಲ್ಲವೇ ಇದನ್ನು ಹೇಗೆ ತೆಗೆದುಕೊಳ್ಳುವಿರಿ ?
ಇವುಗಳನ್ನು ಸ್ವೀಕರಿಸಿ, ಪರಿಪಾಲಿಸಿದಾಗ ದೀರ್ಘಕಾಲ ಸುಖ, ಕ್ಷೇಮ ಉಂಟಾಗುತ್ತದೆ. ಇದನ್ನು ನಾವು ಹೀಗೆ ತೆಗೆದುಕೊಳ್ಳುವೆವು.
ಬನ್ನಿ ಕಾಲಾಮರೇ,
1. ಬಹಳಷ್ಟು ಕೇಳಿದ್ದೇವೇ ಎಂದು  ನಂಬದಿರಿ (ಅನುಸ್ಸವವೇನ)
2. ಸಂಪ್ರದಾಯವೆಂದು (ಪರಂಪರಾ) ನಂಬದಿರಿ
3. ವದಂತಿಗಳನ್ನು (ಇತಿಕಿರಾಯ) ನಂಬದಿರಿ, 
4. ಧರ್ಮಗ್ರಂಥಗಳಲ್ಲಿದೆ (ಪಿಟಿಕ ಸಂಪಾದನೇನ) ಎಂದು ನಂಬದಿರಿ,
5. ತರ್ಕ ಸಮ್ಮತ (ತರ್ಕಹೇತು) ಎಂದಾಗಲಿ ನಂಬದಿರಿ,
6. ಯೋಜನಬದ್ಧವಾಗಿದೆ (ನಯಹೇತು) ಎಂದು ನಂಬದಿರಿ, 
7. ತೋರಿಕೆಯ ತರ್ಕದಿಂದ (ಚೆನ್ನಾಗಿ ಕಾಣುತ್ತಿದೆ) ಸ್ವೀಕಾರಾರ್ಹವಾಗಿದೆ (ಆಕಾರಪರಿವಿತಕ್ಕೇನ) ಎಂದಾಗಲಿ ನಂಬದಿರಿ,
8. ಪಕ್ಷಪಾತ ಅಥವಾ ಪೂವರ್ಾಗಹ್ರಪೀಡಿತತೆಯಿಂದಾಗಿ ನಮ್ಮ ಚಿಂತನೆಯಂತಿದೆ ಎಂದು (ದಿಟ್ಠನಿಜ್ಝಾನಕ್ಖನ್ತಿಯಾ)  ನಂಬದಿರಿ,
9. ಭವ್ಯನುರಿತ ತಜ್ಞರಿಂದ ಬಂದಿದೆ (ಭಬ್ಬರೂಪತಾಯ) ಎಂದಾಗಲಿ ನಂಬದಿರಿ,
10. ಅಥವಾ ಇವರು ನಮ್ಮ ಗೌರವಾರ್ಹ ಸಮಣ ಗುರುವು ಅವರಿಂದ ಬಂದಿದೆ (ಸಮಣೊ ನೊ ಗರೂತಿ) ಎಂದಾಗಲಿ ನಂಬಬೇಡಿ.
ಆದರೆ ಕಾಲಾಮರೇ, ಯಾವಾಗ ನೀವೇ ಚಿಂತನೆ ಮಾಡಿದಾಗ, ಇವು ಕುಶಲವಾದವು, ಇವು ನಿಂದನಾತೀತವಾದವು ,ಇವು ಅರ್ಥಕಾರಿ,  ಜ್ಞಾನಿಗಳಿಂದ ಪ್ರಶಂಶಿಸಲ್ಪಡುತ್ತದೆ ಎಂದು ಗೊತ್ತಾದಾಗ, ಇವುಗಳ ಸ್ವೀಕಾರ ಹಾಗು ಪಾಲನೆಯಿಂದ ದೀರ್ಘಕಾಲಸುಖವಾಗುತ್ತದೆ ಎಂದು ಅರಿವಾದಾಗ ಅದನ್ನು ಪುರಸ್ಕರಿಸಿ, ಪಾಲಿಸಿರಿ ಮತ್ತು ಜೀವಿಸಿರಿ ಅದಕ್ಕಾಗಿಯೇ ಹೀಗೆ ಹೇಳಲಾಗಿದೆ.
ಈಗ ಕಾಲಾಮರೇ, ಯಾವ ಆರ್ಯ ಶ್ರಾವಕನು ಹೀಗೆ ಲೋಭದಿಂದ, ದ್ವೇಷದಿಂದ ಮತ್ತು ಮೋಹದಿಂದ ಮುಕ್ತನಾದಾಗ ಆತನು ದಿಗ್ಭ್ರಮೆಪಡುವುದಿಲ್ಲ. ಸ್ಪಷ್ಟವಾಗಿ ಅರಿಯುವವನಾಗುತ್ತಾನೆ,  ಮತ್ತು ಸ್ಮೃತಿವಂತನಾಗುತ್ತಾನೆ ಮತ್ತು ಚಿತ್ತದಲ್ಲಿ ಮೈತ್ರಿಯಿಂದ ಕೂಡಿರುತ್ತಾನೆ, ಹೀಗೇ ಸ್ಥಾಪಿತವಾದ ಮೆತ್ತಾಯುತವಾದ ಚಿತ್ತದಿಂದ ಒಂದು ದಿಕ್ಕಿನತ್ತ ಮೆತ್ತವನ್ನು ಪ್ರಸರಿಸುತ್ತಾನೆ.......... ಕರುಣೆಯಿಂದ ಕೂಡಿರುತ್ತಾನೆ.......... ಮುದಿತಾದಿಂದ ಕೂಡಿರುತ್ತಾನೆ......... ಸಮಚಿತ್ತತೆಯಿಂದ ಕೂಡಿರುತ್ತಾನೆ. ಇದೇರೀತಿಯ ಭಾವನೆಯಿಂದ ಆತನು ಒಂದು ದಿಕ್ಕಿಗೆ ಹರಡುತ್ತಾನೆ. ಹಾಗೆಯೇ ಎರಡನೇಯ ದಿಕ್ಕಿಗೂ, ಮೂರನೆಯ ದಿಕ್ಕಿಗೂ, ನಾಲ್ಕನೇಯ ದಿಕ್ಕಿಗೂ, ಹೀಗೆಯೇ ಮೇಲೆ, ಕೆಳಗೆ, ಸುತ್ತಲೂ, ಎಲ್ಲಾ ದಿಕ್ಕುಗಳಿಗೂ ಸಮಚಿತ್ತತೆಯನ್ನು ಹರಡುತ್ತ ನೆಲೆಸುತ್ತಾನೆ. ಹೀಗೆ ಆತನು ವ್ಯಾಪಕವಾದ, ಉನ್ನತವಾದ, ಅಪರಿಮಿತವಾದ,  ದ್ವೇಷರಹಿತವಾದ, ಚಿತ್ತದಿಂದ ಕೂಡಿರುತ್ತಾನೆ.
ಕಾಲಾಮರೇ ಈ ರೀತಿಯಾಗಿ ಆರ್ಯಶ್ರಾವಕನು ಚಿತ್ತದಿಂದ, ದ್ವೇಷ, ವಿರೋಧ, ಚಿತ್ತಕ್ಲೇಶಗಳಿಂದ ಮುಕ್ತನಾಗಿ, ಪರಿಶುದ್ಧನಾಗುತ್ತಾನೆ. ಅಂತಹುದರಿಂದ ಈ ಜನ್ಮದಲ್ಲೇ ನಾಲ್ಕು ಸಮಾಧಾನವನ್ನು ಭರವಸೆಗಳನ್ನು ಕಾಣಬಹುದು.
1. ಮೊದಲ ಭರವಸೆ ಏನೆಂದರೆ, ಒಂದು ವೇಳೆ ಪರಲೋಕವಿದ್ದರೆ ಒಳ್ಳೆಯ ಹಾಗೂ ಕೆಟ್ಟ ಕರ್ಮಗಳಿಗೆ ಕರ್ಮಫಲವು ಸಿಗುವುದಿದ್ದರೆ  ನಮ್ಮ ಒಳ್ಳೆಯ ಕಾರ್ಯಗಳನ್ನು ಮಾಡಿರುವೆ, ನನಗೆ ಸಾವಿನ ನಂತರ ಸುಗತಿಯೇ ಸಿಗುವುದು.
2. ಎರಡನೆಯ ಭರವಸೆ ಏನೆಂದರ,ೆ ಪರಲೋಕವಿಲ್ಲದಿದ್ದರೆ, ಒಳ್ಳೆಯ ಹಾಗೂ ಕೆಟ್ಟ ಕರ್ಮಗಳಿಗೆ ಕರ್ಮಫಲ ಸಿಗದಿದ್ದರೆ, ಅದರೂ ಈ ಜನ್ಮದಲ್ಲೇ ದ್ವೇಷರಹಿತನಾಗಿ, ದುಃಖರಹಿತನಾಗಿ, ಕ್ಲೇಷರಹಿತನಾಗಿ ಸುಖಿಯಾಗಿ ಇರುತ್ತೇನೆ.
3. ಮೂರನೆಯ ಭರವಸೆ ಏನೆಂದರೆ, ಕರ್ಮಫಲ ಇರುವುದಾದರೆ, ಪಾಪಿಗೇ ಮಾತ್ರ ಕೆಡಕಾಗುತ್ತದೆ,  ನಾನು ಯಾವುದೇ ಕೆಟ್ಟ ಇಚ್ಚೆಗಳನ್ನು ಯಾರ ಮೇಲೆಯೂ ಹೊಂದಿಲ್ಲ,  ಹೀಗೆ ಯಾವ ಪಾಪವೂ ಮಾಡದ  ನನಗೆ ಹೇಗೆತಾನೆ  ದುಃಖವು ತಟ್ಟಿತು?.
4. ನಾಲ್ಕನೆಯ ಭರವಸೆ ಏನೆಂದರೆ, ಕೆಟ್ಟಕಮ್ಮ ಮಾಡುವವನಿಗೂ ಕರ್ಮಫಲ ಸಿಗುವುದಿಲ್ಲ ಎನ್ನುವುವಾದರೆ, ನನ್ನಿಂದ ಯಾವ ಪಾಪವು ನಡೆದಿಲ್ಲ, ಹೀಗೆ ಎರಡು ರೀತಿಯಲ್ಲಿಯೂ ಪರಿಶುದ್ಧನಾಗಿಯೇ ಇರುವೆನು.
ಹೀಗೆ ಕಾಲಾಮರೆ, ಆ ಆರ್ಯಶ್ರಾವಕನು ಚಿತ್ತಕ್ಲೇಷಗಳಿಂದ, ದ್ವೇಷದಿಂದ, ವಿಮುಕ್ತನಾಗಿ ನಿರ್ಮಲನಾಗಿ ಈ ಜೀವಿತದಲ್ಲೇ ಈ ನಾಲ್ಕು ಸಮಾಧಾನ ಪಡೆಯುತ್ತಾನೆ.
ಇದು ಹೀಗೆಯೇ ಭಗವಾನ್ ಇದು ಸರಿಯಾಗಿಯೇ ಇದೆ, ಸುಗತರೇ, ಆ ಆರ್ಯಶ್ರಾವಕನು ಚಿತ್ತಕ್ಲೇಷಗಳಿಂದ, ದ್ವೇಷದಿಂದ, ವಿಮುಕ್ತನಾಗಿ ನಿರ್ಮಲನಾಗಿ ಈ ಜೀವಿತದಲ್ಲೇ ಈ ನಾಲ್ಕು ಸಮಾಧಾನ ಪಡೆಯುತ್ತಾನೆ.
ಮೊದಲ ಭರವಸೆ ಏನೆಂದರೆ ಒಂದು ವೇಳೆ ಪರಲೋಕವಿದ್ದರೆ ಒಳ್ಳೆಯ ಹಾಗೂ ಕೆಟ್ಟ ಕರ್ಮಗಳಿಗೆ ಕರ್ಮಫಲವು ಸಿಗುವುದಿದ್ದರೆ  ನಾನು ಒಳ್ಳೆಯ ಕಾರ್ಯಗಳನ್ನು ಮಾಡಿರುವೆ, ನನಗೆ ಸಾವಿನ ನಂತರ ಸುಗತಿಯೇ ಸಿಗುವುದು.............. ನಾಲ್ಕನೆಯ ಭರವಸೆ ಏನೆಂದರೆ ಕೆಟ್ಟಕಮ್ಮ ಮಾಡುವವನಿಗೂ ಕರ್ಮಫಲ ಸಿಗುವುದಿಲ್ಲ ಎಂದರೂ ನನ್ನಿಂದ ಯಾವ ಪಾಪವು ನಡೆದಿಲ್ಲ, ಹೀಗೆ ಎರಡು ರೀತಿಯಲ್ಲಿಯೂ ಪರಿಶುದ್ಧನಾಗಿಯೇ ಇರುವೆನು. ಇದು ಹೀಗೆಯೇ ಭಗವಾನ್ ಇದು ಸರಿಯಾಗಿಯೇ ಇದೆ, ಸುಗತರೇ, ಆ ಆರ್ಯಶ್ರಾವಕನು ಚಿತ್ತಕ್ಲೇಷಗಳಿಂದ, ದ್ವೇಷದಿಂದ, ವಿಮುಕ್ತನಾಗಿ ನಿರ್ಮಲನಾಗಿ ಈ ಜೀವಿತದಲ್ಲೇ ಈ ನಾಲ್ಕು ಸಮಾಧಾನ ಪಡೆಯುತ್ತಾನೆ.
ಅದ್ಭುತ ಭಂತೆ! ......... ನಾವು ಭಗವಾನರಿಗೆ ಶರಣು ಹೋಗುವೆವು, ಧಮ್ಮಕ್ಕೂ ಶರಣು ಹೋಗುವೆವು, ಸಂಘಕ್ಕೂ ಶರಣು ಹೋಗುವೆವು. ನಮ್ಮನ್ನು ಭಗವಾನರು ಇಂದಿನಿಂದ ಜೀವನ ಪರ್ಯಂತ ಉಪಾಸಕರೆಂದು ಪರಿಗಣಿಸಲಿ.
                                                              - ಂ0ಂ