Saturday 12 June 2021

ಬ್ಯಸನ ಸುತ್ತ (ದುರಂತಗಳ ಸುತ್ತ) (ಅಂ.ನಿ. 11.6) byasana sutta (A.N. 11.6)

  ಬ್ಯಸನ ಸುತ್ತ (ದುರಂತಗಳ ಸುತ್ತ) (ಅಂ.ನಿ. 11.6)



 " ಭಿಕ್ಖುಗಳೇ, ಯಾವುದೇ ಭಿಕ್ಖುವು ಧಾಮರ್ಿಕ ಸಂಗಾತಿಗಳನ್ನು ನಿಂದಿಸುವನೋ, ಅವಮಾನ ಮಾಡುವನೋ, ಉದಾತ್ತರ ಬಗ್ಗೆ ಕೆಟ್ಟದಾಗಿ ಮಾತಾನಾಡುವನೋ ಅಂತಹವನು ನಿಸಂದೇಹವಾಗಿ ಈ 11 ದುರಂತಗಳಲ್ಲಿ ಯಾವುದಾದರೂ ಒಂದನ್ನು ಪಡೆಯುತ್ತಾನೆ."

"  ಯಾವುದವು 11 ?"

  "1. ಅಂತಹವರು ಪ್ರಾಪ್ತಿ ಮಾಡಬೇಕಾಗಿರುವುದನ್ನು ಪ್ರಾಪ್ತಿ ಮಾಡುವುದಿಲ್ಲ.


  2.ಅಥವಾ ಅಂತಹವರು ಯಾವುದನ್ನು ಪ್ರಾಪ್ತಿ ಮಾಡಿರುವರೋ ಅದರಿಂದ ಕೆಳಕ್ಕೆ ಬೀಳುವರು. ಅಂದರೆ ಅವನ್ನು ಕಳೆದುಕೊಳ್ಳುವರು.


   3. ಅಥವಾ ಅಂತಹವರು ಅವರು ತಮ್ಮ ಸದ್ಗುಣಗಳನ್ನು ಪರಿಶುದ್ಧಿಗೊಳಿಸುವುದಿಲ್ಲ.


    4. ಅಥವಾ ಅಂತಹವರು ತಮ್ಮ ಸದ್ಗುಣಗಳ ಬಗ್ಗೆ ಅತಿಯಾಗಿ ಅಂದಾಜು ಮಾಡುತ್ತಾರೆ. ವಾಸ್ತವವಾಗಿ ಹಾಗೆ ವಿಕಾಸವಾಗಿರುವುದಿಲ್ಲ. 


     5. ಅಥವಾ ಅಂತಹವರು ತಮ್ಮ ಧಾಮರ್ಿಕ ಜೀವನವನ್ನು ಅಸಂತುಷ್ಟರಾಗಿ ಜೀವಿಸುತ್ತಾರೆ. 


      6. ಅಥವಾ ಅಂತಹವರು ಭ್ರಷ್ಟ ಅಪರಾದಗಳಲ್ಲಿ ತೊಡಗುತ್ತಾರೆ.


       7. ಅಥವಾ ಅಂತಹವರು ತಮ್ಮ ಶಿಕ್ಷಣಕ್ಕೆ ರಾಜಿನಾಮೆ ನೀಡಿ ನೀಚ ಜೀವನಕ್ಕೆ ಹಿಂತಿರುಗುತ್ತಾರೆ. 


        8. ಅಥವಾ ಅಂತಹವರು ಭೀಕರ ರೋಗಕ್ಕೆ ಗುರಿಯಾಗುತ್ತಾರೆ. 


       9. ಅಥವಾ ಅಂತಹವರು ತಮ್ಮ ಮನಸ್ಸಿನ ನಿಯಂತ್ರಣ ಕಳೆದುಕೊಂಡು ಹುಚ್ಚರಾಗುತ್ತಾರೆ. 


        10. ಅಥವಾ ಅಂತಹವರು ಸಾಯುವಾಗ ನಷ್ಟತನದ ಭಾವವನ್ನು ಹೊಂದುತ್ತಾರೆ. 


        11. ಮತ್ತು ಅಂತಹವರು ಸಾವಿನ ನಂತರ, ಕಾಯವು ಭೇಧವಾದ ನಂತರ ಅಪಾಯಗಳಲ್ಲಿ, ದುರ್ಗತಿಗಳಲ್ಲಿ, ವಿನಿಪಾತಗಳಲ್ಲಿ, ನಿರಯಗಳಲ್ಲಿ ಜನಿಸುತ್ತಾರೆ. "


  "   ಹೀಗೆ ಭಿಕ್ಖುಗಳೇ, ಯಾವುದೇ ಭಿಕ್ಖುವು ಧಾಮರ್ಿಕ ಸಂಗಾತಿಗಳನ್ನು ನಿಂದಿಸುವನೋ, ಅವಮಾನ ಮಾಡುವನೋ, ಉದಾತ್ತರ ಬಗ್ಗೆ ಕೆಟ್ಟದಾಗಿ ಮಾತಾನಾಡುವನೋ ಅಂತಹವನು ನಿಸಂದೇಹವಾಗಿ ಈ 11 ದುರಂತಗಳಲ್ಲಿ ಯಾವುದಾದರೂ ಒಂದನ್ನು ಪಡೆಯುತ್ತಾನೆ.."


" ಭಿಕ್ಖುಗಳೇ, ಯಾವುದೇ ಭಿಕ್ಖುವು ಧಾಮರ್ಿಕ ಸಂಗಾತಿಗಳನ್ನು ನಿಂದಿಸುವುದಿಲ್ಲವೋ, ಅವಮಾನ ಮಾಡುವುದಿಲ್ಲವೋ, ಉದಾತ್ತರ ಬಗ್ಗೆ ಕೆಟ್ಟದಾಗಿ ಮಾತಾನಾಡುವುದಿಲ್ಲವೋ, ಅಂತಹವನು ನಿಸಂದೇಹವಾಗಿ ಈ 11 ದುರಂತಗಳಲ್ಲಿ ಯಾವುದೂ ಪಡೆಯುವುದಿಲ್ಲ." .


  


 

Sunday 30 May 2021

ದುತಿಯಪರಿಹಾನಿ ಸುತ್ತ dutiya parihani sutta : ಯಾವ ರೀತಿಯಲ್ಲಿ ಉಪಾಸಕನು (ಗೃಹಸ್ಥ ಬೌದ್ಧ ಅನುಯಾಯಿ) ಅವನತಿಗೆ ಈಡಾಗುತ್ತಾನೆ.

   ದುತಿಯಪರಿಹಾನಿ ಸುತ್ತ


ಯಾವ ರೀತಿಯಲ್ಲಿ ಉಪಾಸಕನು (ಗೃಹಸ್ಥ ಬೌದ್ಧ ಅನುಯಾಯಿ) ಅವನತಿಗೆ ಈಡಾಗುತ್ತಾನೆ.



   ಭಿಕ್ಖುಗಳೇ, ಈ ಏಳು ವಿಷಯಗಳಿಂದ ಉಪಾಸಕನು ಅವನತಿಗೆ ಈಡಾಗುತ್ತಾನೆ ?

  

       ಯಾವುವವು ಏಳು ?


  " 1. ಅವನು ಭಿಕ್ಖುಗಳನ್ನು ದಶರ್ಿಸಲು (ನೋಡಲು) ನಿಲ್ಲಿಸುತ್ತಾನೆ.


    2. ಅವನು ಧಮ್ಮವನ್ನು ಕೇಳಲು ಅಲಕ್ಷಿಸುತ್ತಾ ಇರುತ್ತಾನೆ.


    3. ಅವನು ಉನ್ನತವಾದ (ಪಂಚ)ಶೀಲವನ್ನು ಪಾಲಿಸುವುದಿಲ್ಲ.


     4. ಅವನು ಭಿಕ್ಖುಗಳ ಬಗ್ಗೆ ಅಪಾರವಾಗಿ ಸಂಶಯಸ್ಥನಾಗುತ್ತಾನೆ. ಆ ಭಿಕ್ಖುಗಳು ಹಿರಿಯ ಥೇರರೇ ಆಗಿರಲಿ, ಹೊಸ ಸಮಣೇರರೇ ಆಗಿರಲಿ, ಅಥವಾ ವರ್ಷಗಳು ಸಾಧನೆ ಮಾಡುತ್ತಿರುವ ಭಿಕ್ಖುಗಳೇ ಆಗಿರಲಿ. ಅವರ ಬಗ್ಗೆ ಸಂಶಯಸ್ಥನಾಗಿರುತ್ತಾನೆ.


      5. ಆತನು ಧಮ್ಮವನ್ನು ಆಲಿಸುವಾಗಲೂ ಸಹಾ ಟೀಕಾತ್ಮಕವಾಗಿಯೇ, ತಪ್ಪುಗಳನ್ನು ಹುಡುಕುವ ರೀತಿಯಲ್ಲಿಯೇ ಧಮ್ಮವನ್ನು ಆಲಿಸುತ್ತಾನೆ.


       6. ಆತನು ಆರಿಯರಲ್ಲದ ಉದಾರಲ್ಲದ ವ್ಯಕ್ತಿಗಳಾದ ಹೊರಗಿನವರಿಗೆ ದಾನಕ್ಕೆ, ಆತಿಥ್ಯಕ್ಕೆ, ಜ್ಞಾನಕ್ಕೆ ಅರ್ಹರೆಂದು ಭಾವಿಸಿ ಅವರನ್ನೇ ಹಿಂಬಾಲಿಸುತ್ತಾನೆ. 


       7. ಆತನು ಆ ಉದಾರಲ್ಲದವರಲ್ಲಿಯೇ ಗೌರವ, ಜ್ಙಾನಗಳಿಕೆ, ದಾನ, ಸೇವೆ, ಆತಿಥ್ಯಗಳೆಲ್ಲವನ್ನು ಮಾಡುತ್ತಾನೆ.

  

      ಈ ಏಳು ವಿಷಯಗಳಿಂದ ಉಪಾಸಕನು(ಗೃಹಸ್ಥ ಬೌದ್ಧ ಅನುಯಾಯಿ) ಅವನತಿಗೆ ಈಡಾಗುತ್ತಾನೆ 






 .