Thursday 26 July 2018

ಅನತ್ತ ಲಕ್ಖಣ ಸುತ್ತ (ಬುದ್ಧಭಗವಾನರ ಎರಡನೇಯ ಸುತ್ತ) anatta lakkhana sutta in kannada

ಅನತ್ತ ಲಕ್ಖಣ ಸುತ್ತ


(ಬುದ್ಧಭಗವಾನರ ಎರಡನೇಯ ಸುತ್ತ)



ಹೀಗೆ ನಾನು ಕೇಳಿದ್ದೇನೆ ಆಗ ಭಗವಾನರು ಕಾಶಿಯ ಹತ್ತಿರದ ಇಸಿಪತ್ತನದ ಮೃಗದಾಯದ ಬಳಿ ಇದ್ದರು.ಆಗ ಭಗವಾನರು ಪಂಚವಗರ್ೀಯ ಭಿಕ್ಖುಗಳೊಂದಿಗೆ ಹೀಗೆ ಸಂಬೋಧಿಸಿದರು. :
  ಭಿಕ್ಖುಗಳೇ ಆಕಾರವು(ದೇಹವು) ಆತ್ಮವಾಗಿಲ್ಲ(ಸ್ವಯಂವಾಗಿಲ್ಲ), ದೇಹವೇ ಆತ್ಮವಾಗಿದ್ದರೇ ಆಗ ದೇಹವೂ ರೋಗಕ್ಕೆ ಒಳಗಾಗುತ್ತಿರಲ್ಲಿಲ್ಲ. ಮತ್ತು ಆಗ ಇಚ್ಚೆಗೆ ತಕ್ಕಂತೆ ನನ್ನ ಶರೀರ ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಾಗುತ್ತಿತ್ತು.. ಅದರೆ ಭಿಕ್ಖುಗಳೇ ದೇಹವೂ ಆತ್ಮವಲ್ಲದ್ದರಿಂದಾಗಿ ಅದು ರೋಗವನ್ನು ಪಡೆಯುತ್ತದೆ, ಹಾಗೂ ಇಚ್ಚೆಯಂತೆ ನನ್ನ ಶರೀರ ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಿಲ್ಲ.

ಭಿಕ್ಖುಗಳೇ ವೇದನೆಗಳು ಆತ್ಮವಾಗಿಲ್ಲ(ಸ್ವಯಂವಾಗಿಲ್ಲ), ವೇದನೆಗಳೇ ಆತ್ಮವಾಗಿದ್ದರೇ ಆಗ ವೇದನೆಗಳು ನೋವಿಗೆ ಒಳಗಾಗುತ್ತಿರಲ್ಲಿಲ್ಲ. ಮತ್ತು ಆಗ ಇಚ್ಚೆಗೆ ತಕ್ಕಂತೆ ನನ್ನ ವೇದನೆ ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಾಗುತ್ತಿತ್ತು.. ಅದರೆ ಭಿಕ್ಖುಗಳೇ ವೇದನೆಗಳು ಆತ್ಮವಲ್ಲದ್ದರಿಂದಾಗಿ ಅದು ನೋವುಗಳನ್ನು ಪಡೆಯುತ್ತದೆ, ಹಾಗೂ ಇಚ್ಚೆಯಂತೆ ನನ್ನ ವೇದನೆ ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಿಲ್ಲ.

ಭಿಕ್ಖುಗಳೇ ಸಞ್ಞೆಗಳು (ಗ್ರಹಿಕೆಗಳು) ಆತ್ಮವಾಗಿಲ್ಲ (ಸ್ವಯಂವಾಗಿಲ್ಲ), ಸಞ್ಞೆಗಳು (ಗ್ರಹಿಕೆಗಳು) ಆತ್ಮವಾಗಿದ್ದರೇ ಆಗ ಸಞ್ಞೆಗಳು (ಗ್ರಹಿಕೆಗಳು) ನೋವಿಗೆ ಒಳಗಾಗುತ್ತಿರಲ್ಲಿಲ್ಲ. ಮತ್ತು ಆಗ ಇಚ್ಚೆಗೆ ತಕ್ಕಂತೆ ನನ್ನ ಸಞ್ಞೆಗಳು(ಗ್ರಹಿಕೆಗಳು) ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಾಗುತ್ತಿತ್ತು.. ಅದರೆ ಭಿಕ್ಖುಗಳೇ ಸಞ್ಞೆಗಳು (ಗ್ರಹಿಕೆಗಳು) ಆತ್ಮವಲ್ಲದ್ದರಿಂದಾಗಿ ಅದು ನೋವುಗಳನ್ನು ಪಡೆಯುತ್ತದೆ, ಹಾಗೂ ಇಚ್ಚೆಯಂತೆ ನನ್ನ ಸಞ್ಞೆಗಳು (ಗ್ರಹಿಕೆಗಳು) ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಿಲ್ಲ.

ಭಿಕ್ಖುಗಳೇ ಸಂಖಾರಗಳು(ಮನೋನಿಮರ್ಿತಿಗಳು) ಆತ್ಮವಾಗಿಲ್ಲ(ಸ್ವಯಂವಾಗಿಲ್ಲ), ಸಂಖಾರಗಳು(ಮನೋನಿಮರ್ಿತಿಗಳು) ಆತ್ಮವಾಗಿದ್ದರೇ ಆಗ ಸಂಖಾರಗಳು(ಮನೋನಿಮರ್ಿತಿಗಳು) ನೋವಿಗೆ(ಕ್ಲೇಷಗಳಿಗೆ) ಒಳಗಾಗುತ್ತಿರಲ್ಲಿಲ್ಲ.್ಲ. ಮತ್ತು ಆಗ ಇಚ್ಚೆಗೆ ತಕ್ಕಂತೆ ನನ್ನ ಸಂಖಾರಗಳು(ಮನೋನಿಮರ್ಿತಿಗಳು)ೆ ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಾಗುತ್ತಿತ್ತು.. ಅದರೆ ಭಿಕ್ಖುಗಳೇ ಸಂಖಾರಗಳು(ಮನೋನಿಮರ್ಿತಿಗಳು) ಆತ್ಮವಲ್ಲದ್ದರಿಂದಾಗಿ ಅದು ನೋವುಗಳನ್ನು ಪಡೆಯುತ್ತದೆ, ಹಾಗೂ ಇಚ್ಚೆಯಂತೆ ನನ್ನ ಸಂಖಾರಗಳು(ಮನೋನಿಮರ್ಿತಿಗಳು) ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಿಲ್ಲ.


ಭಿಕ್ಖುಗಳೇ ವಿಞ್ಞನಗಳು (ಅರಿಯುವಿಕೆ) ಆತ್ಮವಾಗಿಲ್ಲ (ಸ್ವಯಂವಾಗಿಲ್ಲ), ವಿಞ್ಞನಗಳು (ಅರಿಯುವಿಕೆ) ಆತ್ಮವಾಗಿದ್ದರೇ ಆಗ ವಿಞ್ಞನಗಳು (ಅರಿಯುವಿಕೆ) ನೋವಿಗೆ(ಕ್ಲೇಷಗಳಿಗೆ) ಒಳಗಾಗುತ್ತಿರಲ್ಲಿಲ್ಲ.್ಲ. ಮತ್ತು ಆಗ ಇಚ್ಚೆಗೆ ತಕ್ಕಂತೆ ನನ್ನ ವಿಞ್ಞನಗಳು(ಅರಿಯುವಿಕೆ)ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಾಗುತ್ತಿತ್ತು.. ಅದರೆ ಭಿಕ್ಖುಗಳೇ ವಿಞ್ಞನಗಳು(ಅರಿಯುವಿಕೆ) ಆತ್ಮವಲ್ಲದ್ದರಿಂದಾಗಿ ಅದು ನೋವುಗಳನ್ನು ಪಡೆಯುತ್ತದೆ, ಹಾಗೂ ಇಚ್ಚೆಯಂತೆ ನನ್ನ ವಿಞ್ಞನಗಳು(ಅರಿಯುವಿಕೆ)ಹೀಗಿರಲಿ ಹೀಗೆ ಇರದಿರಲಿ ಎಂದು ಮಾರ್ಪಡಿಸುವುದು ಸಾಧ್ಯವಿಲ್ಲ.

ನೀವು ಹೇಗೆ ಯೋಚಿಸುವಿರಿ ಭಿಕ್ಖುಗಳೇ ದೇಹವೂ ನಿತ್ಯವೋ ಅಥವಾ ಅನಿತ್ಯವೋ
    ಅನಿತ್ಯ ಭಗವಾನ್
    ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?
    ದುಃಖಕಾರಿ ಭಂತೆ
    ಈಗ ಯಾವುದು ಅನಿತ್ಯವೋ, ದುಃಖಕಾರಿಯೋ, ಬದಲಾಗುವ ಧರ್ಮದ್ದೊ ಅದನ್ನು ಇದು ನನ್ನದು, ಇದೇ ನಾನು, ಇದು ನನ್ನ ಆತ್ಮ ಎಂದು ಪರಿಗಣಿಸಬಹುದೇ?
ಖಂಡಿತವಾಗಿಯು ಇಲ್ಲ ಭಗವಾನ್
ನೀವು ಹೇಗೆ ಯೋಚಿಸುವಿರಿ ಭಿಕ್ಖುಗಳೇ ವೇದನೆಗಳು ನಿತ್ಯವೋ ಅಥವಾ ಅನಿತ್ಯವೋ
    ಅನಿತ್ಯ ಭಗವಾನ್
    ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?
    ದುಃಖಕಾರಿ ಭಂತೆ
    ಈಗ ಯಾವುದು ಅನಿತ್ಯವೋ, ದುಃಖಕಾರಿಯೋ, ಬದಲಾಗುವ ಧರ್ಮದ್ದೊ ಅದನ್ನು ಇದು ನನ್ನದು, ಇದೇ ನಾನು, ಇದು ನನ್ನ ಆತ್ಮ ಎಂದು ಪರಿಗಣಿಸಬಹುದೇ?
  ಖಂಡಿತವಾಗಿಯು ಇಲ್ಲ ಭಗವಾನ್.
 ನೀವು ಹೇಗೆ ಯೋಚಿಸುವಿರಿ ಭಿಕ್ಖುಗಳೇ ಸಞ್ಞ(ಗ್ರಹಿಕೆಗಳು) ನಿತ್ಯವೋ ಅಥವಾ ಅನಿತ್ಯವೋ
    ಅನಿತ್ಯ ಭಗವಾನ್
    ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?
    ದುಃಖಕಾರಿ ಭಂತೆ
    ಈಗ ಯಾವುದು ಅನಿತ್ಯವೋ, ದುಃಖಕಾರಿಯೋ, ಬದಲಾಗುವ ಧರ್ಮದ್ದೊ ಅದನ್ನು ಇದು ನನ್ನದು, ಇದೇ ನಾನು, ಇದು ನನ್ನ ಆತ್ಮ ಎಂದು ಪರಿಗಣಿಸಬಹುದೇ?
  ಖಂಡಿತವಾಗಿಯು ಇಲ್ಲ ಭಗವಾನ್.
 ನೀವು ಹೇಗೆ ಯೋಚಿಸುವಿರಿ ಭಿಕ್ಖುಗಳೇ ಸಂಖಾರಗಳು(ಮನೋನಿಮರ್ಿತಿಗಳು) ನಿತ್ಯವೋ ಅಥವಾ ಅನಿತ್ಯವೋ
ಅನಿತ್ಯ ಭಗವಾನ್
ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?
ದುಃಖಕಾರಿ ಭಂತೆ
ಈಗ ಯಾವುದು ಅನಿತ್ಯವೋ, ದುಃಖಕಾರಿಯೋ, ಬದಲಾಗುವ ಧರ್ಮದ್ದೊ ಅದನ್ನು ಇದು ನನ್ನದು, ಇದೇ ನಾನು, ಇದು ನನ್ನ ಆತ್ಮ ಎಂದು ಪರಿಗಣಿಸಬಹುದೇ?
ಖಂಡಿತವಾಗಿಯು ಇಲ್ಲ ಭಗವಾನ್.
  ನೀವು ಹೇಗೆ ಯೋಚಿಸುವಿರಿ ಭಿಕ್ಖುಗಳೇ ವಿಞ್ಞನಗಳು(ಅರಿಯುವಿಕೆಗಳು) ನಿತ್ಯವೋ ಅಥವಾ ಅನಿತ್ಯವೋ
ಅನಿತ್ಯ ಭಗವಾನ್
ಯಾವುದು ಅನಿತ್ಯವೋ ಅದು ದುಃಖಕಾರಿಯೋ ಅಥವಾ ಸುಖಕಾರಿಯೋ?
ದುಃಖಕಾರಿ ಭಂತೆ
ಈಗ ಯಾವುದು ಅನಿತ್ಯವೋ, ದುಃಖಕಾರಿಯೋ, ಬದಲಾಗುವ ಧರ್ಮದ್ದೊ ಅದನ್ನು ಇದು ನನ್ನದು, ಇದೇ ನಾನು, ಇದು ನನ್ನ ಆತ್ಮ ಎಂದು ಪರಿಗಣಿಸಬಹುದೇ?
ಖಂಡಿತವಾಗಿಯು ಇಲ್ಲ ಭಗವಾನ್.
ಅದ್ದರಿಂದ ಭಿಕ್ಖುಗಳೇ ಯಾವುದೇ ಶರೀರವು ಅದು ಭೂತಕಾಲದ್ದೇ ಅಗಿರಲಿ, ಅಥವಾ ಭವಿಷ್ಯದ್ದೇ ಆಗಿರಲಿ ಅಥವಾ ವರ್ತಮಾನದ್ದೇ ಆಗಿರಲಿ ,ಆಂತರ್ಯದ್ದೇ ಆಗಿರಲಿ ಅಥವಾ ಬಾಹ್ಯದ್ದೇ ಆಗಿರಲಿ, ಸ್ಥೂಲವಾದ್ದೇ ಆಗಿರಲಿ ಅಥವಾ ಸೂಕ್ಷ್ಮವಾದ್ದೇ ಆಗಿರಲಿ,  ಶ್ರೇಷ್ಟವಾದ್ದೇ ಆಗಿರಲಿ ಅಥವ ನೀಚವಾದ್ದೇ ಆಗಿರಲಿ, ದೂರದ್ದೇ ಆಗಿರಲಿ ಅಥವಾ ಹತ್ತಿರದ್ದೇ ಆಗಿರಲಿ , ಆ ಎಲ್ಲಾ ಶರೀರವನ್ನು ಇದು ನನ್ನದ್ದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಪ್ರಜ್ಞಾಪೂರ್ವಕವಾಗಿ, ಯಥಾಭೂತವಾಗಿ ಹೀಗೆ ಅರಿಯಬೇಕು.

ಅದ್ದರಿಂದ ಭಿಕ್ಖುಗಳೇ ಯಾವುದೇ ವೇದನೆಯು ಅದು ಭೂತಕಾಲದ್ದೇ ಅಗಿರಲಿ, ಅಥವಾ ಭವಿಷ್ಯದ್ದೇ ಆಗಿರಲಿ ಅಥವಾ ವರ್ತಮಾನದ್ದೇ ಆಗಿರಲಿ ,ಆಂತರ್ಯದ್ದೇ ಆಗಿರಲಿ ಅಥವಾ ಬಾಹ್ಯದ್ದೇ ಆಗಿರಲಿ, ಸ್ಥೂಲವಾದ್ದೇ ಆಗಿರಲಿ ಅಥವಾ ಸೂಕ್ಷ್ಮವಾದ್ದೇ ಆಗಿರಲಿ,  ಶ್ರೇಷ್ಟವಾದ್ದೇ ಆಗಿರಲಿ ಅಥವ ನೀಚವಾದ್ದೇ ಆಗಿರಲಿ, ದೂರದ್ದೇ ಆಗಿರಲಿ ಅಥವಾ ಹತ್ತಿರದ್ದೇ ಆಗಿರಲಿ , ಆ ಎಲ್ಲಾ ವೇದನೆಗಳನ್ನು  ಇದು ನನ್ನದ್ದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಪ್ರಜ್ಞಾಪೂರ್ವಕವಾಗಿ, ಯಥಾಭೂತವಾಗಿ ಹೀಗೆ ಅರಿಯಬೇಕು.

ಅದ್ದರಿಂದ ಭಿಕ್ಖುಗಳೇ ಯಾವುದೇ ಸಞ್ಞೆಯು ಅದು ಭೂತಕಾಲದ್ದೇ ಅಗಿರಲಿ, ಅಥವಾ ಭವಿಷ್ಯದ್ದೇ ಆಗಿರಲಿ ಅಥವಾ ವರ್ತಮಾನದ್ದೇ ಆಗಿರಲಿ ,ಆಂತರ್ಯದ್ದೇ ಆಗಿರಲಿ ಅಥವಾ ಬಾಹ್ಯದ್ದೇ ಆಗಿರಲಿ, ಸ್ಥೂಲವಾದ್ದೇ ಆಗಿರಲಿ ಅಥವಾ ಸೂಕ್ಷ್ಮವಾದ್ದೇ ಆಗಿರಲಿ,  ಶ್ರೇಷ್ಟವಾದ್ದೇ ಆಗಿರಲಿ ಅಥವ ನೀಚವಾದ್ದೇ ಆಗಿರಲಿ, ದೂರದ್ದೇ ಆಗಿರಲಿ ಅಥವಾ ಹತ್ತಿರದ್ದೇ ಆಗಿರಲಿ , ಆ ಎಲ್ಲಾ ಸಞ್ಞೆಗಳನ್ನು  ಇದು ನನ್ನದ್ದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಪ್ರಜ್ಞಾಪೂರ್ವಕವಾಗಿ, ಯಥಾಭೂತವಾಗಿ ಹೀಗೆ ಅರಿಯಬೇಕು.

ಅದ್ದರಿಂದ ಭಿಕ್ಖುಗಳೇ ಯಾವುದೇ ಸಂಖಾರಗಳು ಅದು ಭೂತಕಾಲದ್ದೇ ಅಗಿರಲಿ, ಅಥವಾ ಭವಿಷ್ಯದ್ದೇ ಆಗಿರಲಿ ಅಥವಾ ವರ್ತಮಾನದ್ದೇ ಆಗಿರಲಿ ,ಆಂತರ್ಯದ್ದೇ ಆಗಿರಲಿ ಅಥವಾ ಬಾಹ್ಯದ್ದೇ ಆಗಿರಲಿ, ಸ್ಥೂಲವಾದ್ದೇ ಆಗಿರಲಿ ಅಥವಾ ಸೂಕ್ಷ್ಮವಾದ್ದೇ ಆಗಿರಲಿ,  ಶ್ರೇಷ್ಟವಾದ್ದೇ ಆಗಿರಲಿ ಅಥವ ನೀಚವಾದ್ದೇ ಆಗಿರಲಿ, ದೂರದ್ದೇ ಆಗಿರಲಿ ಅಥವಾ ಹತ್ತಿರದ್ದೇ ಆಗಿರಲಿ , ಆ ಎಲ್ಲಾ ಸಂಖಾರಗಳನ್ನು  ಇದು ನನ್ನದ್ದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಪ್ರಜ್ಞಾಪೂರ್ವಕವಾಗಿ, ಯಥಾಭೂತವಾಗಿ ಹೀಗೆ ಅರಿಯಬೇಕು.

ಅದ್ದರಿಂದ ಭಿಕ್ಖುಗಳೇ ಯಾವುದೇ ವಿಞ್ಞನಗಳು ಗಳು ಅದು ಭೂತಕಾಲದ್ದೇ ಅಗಿರಲಿ, ಅಥವಾ ಭವಿಷ್ಯದ್ದೇ ಆಗಿರಲಿ ಅಥವಾ ವರ್ತಮಾನದ್ದೇ ಆಗಿರಲಿ ,ಆಂತರ್ಯದ್ದೇ ಆಗಿರಲಿ ಅಥವಾ ಬಾಹ್ಯದ್ದೇ ಆಗಿರಲಿ, ಸ್ಥೂಲವಾದ್ದೇ ಆಗಿರಲಿ ಅಥವಾ ಸೂಕ್ಷ್ಮವಾದ್ದೇ ಆಗಿರಲಿ,  ಶ್ರೇಷ್ಟವಾದ್ದೇ ಆಗಿರಲಿ ಅಥವ ನೀಚವಾದ್ದೇ ಆಗಿರಲಿ, ದೂರದ್ದೇ ಆಗಿರಲಿ ಅಥವಾ ಹತ್ತಿರದ್ದೇ ಆಗಿರಲಿ , ಆ ಎಲ್ಲಾ ವಿಞ್ಞನಗಳನ್ನು  ಇದು ನನ್ನದ್ದಲ್ಲ, ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಪ್ರಜ್ಞಾಪೂರ್ವಕವಾಗಿ, ಯಥಾಭೂತವಾಗಿ ಹೀಗೆ ಅರಿಯಬೇಕು.

ಓ ಭಿಕ್ಖುಗಳೇ, ಯಾವಾಗ ಸುಶಿಕ್ಷಿತ ಆರ್ಯ ಶ್ರಾವಕನು ಹೀಗೆ ಗಮನಿಸಿದಾಗ ಆತನು ದೇಹದಿಂದ ವಿಕಷರ್ಿತನಾಗುತ್ತಾನೆ , ವೇದನೆಗಳಿಂದ ವಿಕಷರ್ಿತನಾಗುತ್ತಾನೆ,  ಸಞ್ಞಗಳಿಂದ ವಿಕಷರ್ಿತನಾಗುತ್ತಾನೆ , ಸಂಖಾರಗಳಿಂದ ವಿಕಷರ್ಿತನಾಗುತ್ತಾನೆ , ವಿಞ್ಞನಗಳಿಂದ ವಿಕಷರ್ಿತನಾಗುತ್ತಾನೆ ,ವಿಕಷರ್ಿತನಾದ್ದರಿಂದಾಗಿ ವಿರಾಗ ಹೊಂದುತ್ತಾನೆ, ವಿರಾಗ ಹೊಂದಿದ್ದರಿಂದಾಗಿ ವಿಮುಕ್ತನಾಗುತ್ತಾನೆ, ಅದರಿಂದಾಗಿ ವಿಮುಕ್ತಜ್ಞಾನ ಪಡೆಯುತ್ತಾನೆ ಜನ್ಮವೂ ನಾಶವಾಯಿತು, ಬ್ರಹ್ಮಚರ್ಯೆಯ ಜೀವನ ಪೂರ್ಣವಾಯಿತು, ಯಾವುದೆಲ್ಲವನ್ನು ಮಾಡಬೇಕಾಗಿತ್ತೊ ಅವೆಲ್ಲವನ್ನು ಮಾಡಿಯಾಗಿದೆ, ಇನ್ನು ನನಗೆ ಭವವಿಲ್ಲ ಎಂದು ಅರಿಯುತ್ತಾನೆ.

ಭಗವಾನರು ಹೀಗೆ ಬೋಧಿಸಿದಾಗ ಪಂಚವಗರ್ೀಯ ಭಿಕ್ಷುಗಳು ಆನಂದಿತರಾದರು ಹಾಗೂ ಅವರ ಚಿತ್ತಗಳು ಅಸವಗಳಿಂದ ಮುಕ್ತವಾದವು, ಅವರು ಎಲ್ಲಾಬಗೆಯ ಅಂಟುವಿಕೆಯಿಂದ ಮುಕ್ತರಾದರು.

No comments:

Post a Comment