Thursday 21 March 2019

kalama sutta in kannada ಕಾಲಾಮ ಸುತ್ತ

1. ಕೇಸಮುಟ್ಟಿ (ಕೇಸಪುತ್ತಿಯ/ಕಾಲಾಮ ಸುತ್ತ) (ವಿಚಾರಶೀಲತೆಯ ಸೂತ್ರ) ಸುತ್ತ


ನಾನು ಹೀಗೆ ಕೇಳಿರುವೆ. ಭಗವಾನರು ಒಮ್ಮೆ ಕೋಸಲ ರಾಜ್ಯದ ಕೇಸಪುತ್ತ ಜಿಲ್ಲೆಗೆ ಬೃಹತ್ ಸಮೂಹದೊಂದಿಗೆ ಬಂದರು. ಕೇಸಪುತ್ತರು ಕಾಲಾಮರಿಗೆ ಭಗವಾನರು ಅಲ್ಲಿಗೆ ಬಂದಿರುವುದು ತಿಳಿಯಿತು. ಕೇಸಪುತ್ತದ ಕಾಲಾಮರು ಹೀಗೆ ಭಗವಾನರ ಖ್ಯಾತಿ ಆಲಿಸಿದ್ದರು. ಏನೆಂದರೆ ಶಾಕ್ಯಪುತ್ರರಾದ ಸಮಣಗೋತಮರು ಕೇಸಪುತ್ತಕ್ಕೆ ಆಗಮಿಸಿದ್ದಾರೆ ಅವರ ಬಗ್ಗೆ ಈ ರೀತಿಯ ಖ್ಯಾತಿಯು ಹಬ್ಬಿದೆ:
ಭಗವಾನರು ಅರಹಂತರು, ಸಮ್ಮಾಸಂಬುದ್ಧರು, ವಿದ್ಯಾಚರಣೆಯ ಸಂಪನ್ನರು, ಸುಗತರು, ಲೋಕವಿದರು, ಅನುತ್ತರರು, ಪುರುಷಧಮ್ಮ ಸಾರಥಿಯು, ದೇವತೆಗಳಿಗೆ ಮತ್ತು ಮಾನವರಿಗೆ ಶಾಸ್ತರು, ಬುದ್ಧರು ಹಾಗೂ ಭಗವಾನರು ಆಗಿದ್ದಾರೆ. ಹೀಗಾಗಿ ಅಂತಹ ಅರಹಂತರನ್ನು ದಶರ್ಿಸುವುದು ಒಳ್ಳೆಯದು ಎಂದು ತಿಮರ್ಾನಿಸಿದರು.
ಹೀಗೆ ಕೇಸಪುತ್ತದ ಕಾಲಾಮರು ಭಗವಾನರಲ್ಲಿಗೆ ಬಂದು ವಂದಿಸಿ, ಕುಶಲಕ್ಷೇಮವನ್ನು ವಿಚಾರಿಸಿ, ಗೌರವಾರ್ಪಣೆ ಮಾಡಿ ಕುಳಿತರು....ಕೆಲವರು ನಿಶ್ಯಬ್ದವಾಗಿ ಕುಳಿತರು.... ಆಗ ಕಾಲಾಮರು ಭಗವಾನರಲ್ಲಿ ಹೀಗೆ ಪ್ರಶ್ನಿಸಿದರು:
ಭಂತೆ ಇಲ್ಲಿಗೆ ಕೆಲವು ಸಮಣ ಬ್ರಾಹ್ಮಣರು ಬರುತ್ತಾರೆ, ತಮ್ಮ ಸಿದ್ಧಾಂತವನ್ನು ವಿವರಿಸುತ್ತಾರೆ, ಬಣ್ಣಿಸುತ್ತಾರೆ. ಆದರೆ ಹಾಗೆಯೇ ಪರರ ಸಿದ್ಧಾಂತಗಳನ್ನು ಖಂಡಿಸುತ್ತಾರೆ, ನಿಂದಿಸುತ್ತಾರೆ, ನಿರಾಕರಿಸುತ್ತಾರೆ. ಅದೇರೀತಿಯಲ್ಲೇ ಬೇರೆ ಕೆಲವು ಸಮಣ ಬ್ರಾಹ್ಮಣರು ಸಹಾ ಬಂದು ಹಾಗೇ ಅದೇರೀತಿ ಮಾಡುತ್ತಾರೆ. ಹೀಗೆ ವಿಭಿನ್ನವಾದ ಸಿದ್ಧಾಂತಗಳಿಂದಾಗಿ ನಮ್ಮಲ್ಲಿ ಧ್ವಂದ್ವ ಉಂಟಾಗಿದೆ, ಸಂಶಯ ಉಂಟಾಗಿದೆ, ನಮಗೆ ಅವರಲ್ಲಿ ಸತ್ಯ ಹೇಳುತ್ತಿರುವವರು ಯಾರು? ಮಿಥ್ಯ ನುಡಿಯುತ್ತಿರುವವರು ಯಾರು? ತಿಳಿಯದಾಗಿದೆ. ಇದನ್ನು ನೀವೇ ನಮಗೆ ಪರಿಹರಿಸಬೇಕು ಭಂತೆ.
ಓ ಕಾಲಾಮರೇ, ನೀವು ಸಂಶಯಸ್ತ ವಿಷಯಗಳಲ್ಲಿಯೇ ಸಂಶಯ ಪಡುತ್ತಿರುವಿರಿ, ದ್ವ್ವಂದ್ವವುಳ್ಳ ವಿಷಯದಲ್ಲೇ ಧ್ವಂದ್ವಪಡುತ್ತಿರುವಿರಿ. ಸಂಶಯಸ್ತ ವಿಷಯಗಳಲ್ಲಿ ದ್ವಂದ್ವತೆ ಆಗುವುದು.
ಬನ್ನಿ ಕಾಲಾಮರೇ,
1. ಬಹಳಷ್ಟು ಕೇಳಿದ್ದೇವೇ ಎಂದು  ನಂಬದಿರಿ (ಅನುಸ್ಸವವೇನ) 
2. ಸಂಪ್ರದಾಯವೆಂದು (ಪರಂಪರಾ) ನಂಬದಿರಿ 
3. ವದಂತಿಗಳನ್ನು (ಇತಿಕಿರಾಯ) ನಂಬದಿರಿ,  
4. ಧರ್ಮಗ್ರಂಥಗಳಲ್ಲಿದೆ (ಪಿಟಿಕ ಸಂಪಾದನೇನ) ಎಂದು ನಂಬದಿರಿ, 
5. ತರ್ಕ ಸಮ್ಮತ (ತರ್ಕಹೇತು) ಎಂದಾಗಲಿ ನಂಬದಿರಿ, 
6. ಯೋಜನಬದ್ಧವಾಗಿದೆ (ನಯಹೇತು) ಎಂದು ನಂಬದಿರಿ,  
7. ತೋರಿಕೆಯ ತರ್ಕದಿಂದ (ಚೆನ್ನಾಗಿ ಕಾಣುತ್ತಿದೆ) ಸ್ವೀಕಾರಾರ್ಹವಾಗಿದೆ (ಆಕಾರಪರಿವಿತಕ್ಕೇನ) ಎಂದಾಗಲಿ ನಂಬದಿರಿ,
8. ಪಕ್ಷಪಾತ ಅಥವಾ ಪೂವರ್ಾಗ್ರಹ ಪೀಡಿತತೆಯಿಂದಾಗಿ ನಮ್ಮ ಚಿಂತನೆಯಂತಿದೆ ಎಂದು (ದಿಟ್ಠನಿಜ್ಝಾನಕ್ಖನ್ತಿಯಾ)  ನಂಬದಿರಿ, 
9. ಭವ್ಯ ನುರಿತ ತಜ್ಞರಿಂದ ಬಂದಿದೆ (ಭಬ್ಬರೂಪತಾಯ) ಎಂದಾಗಲಿ ನಂಬದಿರಿ, 
10. ಅಥವಾ ಇವರು ನಮ್ಮ ಗೌರವಾರ್ಹ ಸಮಣ ಗುರುವು ಅವರಿಂದ ಬಂದಿದೆ (ಸಮಣೊ ನೊ ಗರೂತಿ) ಎಂದಾಗಲಿ ನಂಬಬೇಡಿ. 
ಆದರೆ ಕಾಲಾಮರೇ, ಯಾವಾಗ ನೀವೇ ಚಿಂತನೆ ಮಾಡಿದಾಗ, ಇವು ಅಕುಶಲವಾದವು, ಇವು ನಿಂದನಾರ್ಹವಾದವು, ಇವು ಅನರ್ಥಕಾರಿ, ನಿಂದನೀಯ, ಜ್ಞಾನಿಗಳಿಂದ ನಿಷೇಧಿಸಲ್ಪಡುತ್ತದೆ ಎಂದು ಗೊತ್ತಾದಾಗ, ಇವುಗಳ ಪಾಲನೆಯಿಂದ ದುಃಖವಾಗುತ್ತದೆ ಎಂದು ಅರಿವಾದಾಗ ಅದನ್ನು ತಿರಸ್ಕರಿಸಿ.
ಈಗ ಕಾಲಾಮರೇ, ಇದರ ಬಗ್ಗೆ ಹೇಗೆ ಯೋಚಿಸುವಿರಿ,? ಒಬ್ಬನಲ್ಲಿ ಲೋಭ ಉಂಟಾದಾಗ ಅದು ಆತನಿಗೆ ಲಾಭಕ್ಷೇಮ ತರುತ್ತದೆಯೋ ಅಥವಾ ಹಾನಿಯನ್ನು ಉಂಟುಮಾಡುತ್ತದೆಯೋ?
ಅದು ಹಾನಿಯನ್ನು ತರುತ್ತದೆ ಭಗವಾನರೇ.
ಕಾಲಾಮರೇ, ಈಗ ಆತನು ಲೋಭಿಯಾದಾಗ, ಲೋಭದಿಂದ ಸೋತಿರುವಾಗ, ಲೋಭದ ಗೀಳನ್ನು ಹೊಂದಿರುವಾಗ,  ಆತನ ಚಿತ್ತವು ನಿಯಂತ್ರಣ ತಪ್ಪುತ್ತದೆ, ಆಗ ಆತನು ಜೀವಹತ್ಯೆ, ಕಳ್ಳತನ, ವ್ಯಭಿಚಾರ, ಸುಳ್ಳು ಹೇಳುವಿಕೆ ಮಾಡುತ್ತಾನೆ, ಹಾಗೆಯೇ ಪರರಿಗೂ ಅದೇ ರೀತಿ ಮಾಡಲು ಪ್ರೋತ್ಸಾಹ ನೀಡುತ್ತಾನೆ. ಅದರಿಂದಾಗಿ ಆತನಿಗೆ ಭವಿಷ್ಯದಲ್ಲಿ ದೀರ್ಘ ದುಃಖ ಮತ್ತು ಹಾನಿ ಉಂಟಾಗುತ್ತದೆ ಅಲ್ಲವೇ?
ಹೌದು ಭಂತೆ
ಕಾಲಾಮರೇ, ಈಗ ಆತನು ದ್ವೇಷಿಯಾದಾಗ, ದ್ವೇಷದಿಂದ ಸೋತಿರುವಾಗ, ದ್ವೇಷದ ಗೀಳನ್ನು ಹೊಂದಿರುವಾಗ,  ಆತನ ಚಿತ್ತವು ನಿಯಂತ್ರಣ ತಪ್ಪುತ್ತದೆ, ಆಗ ಆತನು ಜೀವಹತ್ಯೆ, ಕಳ್ಳತನ, ವ್ಯಭಿಚಾರ, ಸುಳ್ಳು ಹೇಳುವಿಕೆ ಮಾಡುತ್ತಾನೆ, ಹಾಗೆಯೇ ಪರರಿಗೂ ಅದೇರೀತಿ ಮಾಡಲು ಪ್ರೋತ್ಸಾಹ ನೀಡುತ್ತಾನೆ. ಅದರಿಂದಾಗಿ ಆತನಿಗೆ ಭವಿಷ್ಯದಲ್ಲಿ ದೀರ್ಘ ದುಃಖ ಮತ್ತು ಹಾನಿ ಉಂಟಾಗುತ್ತದೆ ಅಲ್ಲವೇ?
ಹೌದು ಭಂತೆ
ಕಾಲಾಮರೇ, ಈಗ ಆತನು ಮೋಹಿಯಾದಾಗ, ಮೋಹದಿಂದ ಸೋತಿರುವಾಗ, ಮೋಹದ ಗೀಳನ್ನು ಹೊಂದಿರುವಾಗ,  ಆತನ ಚಿತ್ತವು ನಿಯಂತ್ರಣ ತಪ್ಪುತ್ತದೆ, ಆಗ ಆತನು ಜೀವಹತ್ಯೆ, ಕಳ್ಳತನ, ವ್ಯಭಿಚಾರ, ಸುಳ್ಳು ಹೇಳುವಿಕೆ ಮಾಡುತ್ತಾನೆ, ಹಾಗೆಯೇ ಪರರಿಗೂ ಅದೇರೀತಿ ಮಾಡಲು ಪ್ರೋತ್ಸಾಹ ನೀಡುತ್ತಾನೆ. ಅದರಿಂದಾಗಿ ಆತನಿಗೆ ಭವಿಷ್ಯದಲ್ಲಿ ದೀರ್ಘ ದುಃಖ ಮತ್ತು ಹಾನಿ ಉಂಟಾಗುತ್ತದೆ ಅಲ್ಲವೇ?
ಹೌದು ಭಂತೆ
ಈಗ ಕಾಲಾಮರೇ, ಇದರ ಬಗ್ಗೆ ಹೇಗೆ ಯೋಚಿಸುವಿರಿ,? ಈ ವಿಷಯಗಳು ಕುಶಲವೋ ಅಥವಾ ಅಕುಶಲವೋ?
ಅಕುಶಲ ಭಂತೆ
ಇವು ನಿಂದನೀಯವೋ ಅಥವಾ ನಿಂದನಾತೀತವೋ?
ನಿಂದನೀಯವಾದುದು ಭಗವಾನ್.
ಇವು ಜ್ಞಾನಿಗಳಿಂದ ನಿಷೇಧಿಸಲ್ಪಡುವುದೋ ಅಥವಾ ಪ್ರಶಂಸನೀಯವೋ ?
ನಿಷೇಧಿಸಲ್ಪಡುವುದು ಭಗವಾನ್.
ಇವುಗಳನ್ನು ಸ್ವೀಕರಿಸಿ, ಪರಿಪಾಲಿಸಿದಾಗ ದೀರ್ಘಕಾಲ ಹಾನಿ, ದುಃಖ, ಉಂಟಾಗುತ್ತದೆ ಅಲ್ಲವೇ? ಇದನ್ನು ಹೇಗೆ ತೆಗೆದುಕೊಳ್ಳುವಿರಿ?
ಇವುಗಳನ್ನು ಸ್ವೀಕರಿಸಿ, ಪರಿಪಾಲಿಸಿದಾಗ ದೀರ್ಘಕಾಲ ಹಾನಿ, ದುಃಖ, ಉಂಟಾಗುತ್ತದೆ. ಇದನ್ನು ನಾವು ಹೀಗೆ ತೆಗೆದುಕೊಳ್ಳುವೆವು.
ಓ ಕಾಲಾಮರೇ, ಹೀಗಾಗಿ
ಬನ್ನಿ ಕಾಲಾಮರೇ,
1. ಬಹಳಷ್ಟು ಕೇಳಿದ್ದೇವೇ ಎಂದು  ನಂಬದಿರಿ (ಅನುಸ್ಸವವೇನ)
2. ಸಂಪ್ರದಾಯವೆಂದು (ಪರಂಪರಾ) ನಂಬದಿರಿ
3. ವದಂತಿಗಳನ್ನು (ಇತಿಕಿರಾಯ) ನಂಬದಿರಿ, 
4. ಧರ್ಮಗ್ರಂಥಗಳಲ್ಲಿದೆ (ಪಿಟಿಕ ಸಂಪಾದನೇನ) ಎಂದು ನಂಬದಿರಿ,
5. ತರ್ಕ ಸಮ್ಮತ (ತರ್ಕಹೇತು) ಎಂದಾಗಲಿ ನಂಬದಿರಿ,
6. ಯೋಜನಬದ್ಧವಾಗಿದೆ (ನಯಹೇತು) ಎಂದು ನಂಬದಿರಿ, 
7. ತೋರಿಕೆಯ ತರ್ಕದಿಂದ (ಚೆನ್ನಾಗಿ ಕಾಣುತ್ತಿದೆ) ಸ್ವೀಕಾರಾರ್ಹವಾಗಿದೆ (ಆಕಾರಪರಿವಿತಕ್ಕೇನ) ಎಂದಾಗಲಿ ನಂಬದಿರಿ,
8. ಪಕ್ಷಪಾತ ಅಥವಾ ಪೂವರ್ಾಗ್ರಹಪೀಡಿತತೆಯಿಂದಾಗಿ ನಮ್ಮ ಚಿಂತನೆಯಂತಿದೆ ಎಂದು (ದಿಟ್ಠನಿಜ್ಝಾನಕ್ಖನ್ತಿಯಾ)  ನಂಬದಿರಿ,
9. ಭವ್ಯನುರಿತ ತಜ್ಞರಿಂದ ಬಂದಿದೆ (ಭಬ್ಬರೂಪತಾಯ) ಎಂದಾಗಲಿ ನಂಬದಿರಿ,
10. ಅಥವಾ ಇವರು ನಮ್ಮ ಗೌರವಾರ್ಹ ಸಮಣ ಗುರುವು ಅವರಿಂದ ಬಂದಿದೆ (ಸಮಣೊ ನೊ ಗರೂತಿ) ಎಂದಾಗಲಿ ನಂಬಬೇಡಿ. 
ಆದರೆ ಕಾಲಾಮರೇ, ಯಾವಾಗ ನೀವೇ ಚಿಂತನೆ ಮಾಡಿದಾಗ, ಇವು ಅಕುಶಲವಾದವು, ಇವು ನಿಂದನಾರ್ಹವಾದವು ,ಇವು ಅನರ್ಥಕಾರಿ, ನಿಂದನೀಯ, ಜ್ಞಾನಿಗಳಿಂದ ನಿಷೇಧಿಸಲ್ಪಡುತ್ತದೆ ಎಂದು ಗೊತ್ತಾದಾಗ, ಇವುಗಳ ಪಾಲನೆಯಿಂದ ದುಃಖವಾಗುತ್ತದೆ ಎಂದು ಅರಿವಾದಾಗ ಅದನ್ನು ತಿರಸ್ಕರಿಸಿ ,ಅದಕ್ಕಾಗಿಯೇ ಹೀಗೆ ಹೇಳಿದ್ದೇನೆ.
ಬನ್ನಿ ಕಾಲಾಮರೇ,
1. ಬಹಳಷ್ಟು ಕೇಳಿದ್ದೇವೇ ಎಂದು  ನಂಬದಿರಿ (ಅನುಸ್ಸವವೇನ)
2. ಸಂಪ್ರದಾಯವೆಂದು (ಪರಂಪರಾ) ನಂಬದಿರಿ
3. ವದಂತಿಗಳನ್ನು (ಇತಿಕಿರಾಯ) ನಂಬದಿರಿ, 
4. ಧರ್ಮಗ್ರಂಥಗಳಲ್ಲಿದೆ (ಪಿಟಿಕ ಸಂಪಾದನೇನ) ಎಂದು ನಂಬದಿರಿ,
5. ತರ್ಕ ಸಮ್ಮತ (ತರ್ಕಹೇತು) ಎಂದಾಗಲಿ ನಂಬದಿರಿ,
6. ಯೋಜನಬದ್ಧವಾಗಿದೆ (ನಯಹೇತು) ಎಂದು ನಂಬದಿರಿ, 
7. ತೋರಿಕೆಯ ತರ್ಕದಿಂದ (ಚೆನ್ನಾಗಿ ಕಾಣುತ್ತಿದೆ) ಸ್ವೀಕಾರಾರ್ಹವಾಗಿದೆ (ಆಕಾರಪರಿವಿತಕ್ಕೇನ) ಎಂದಾಗಲಿ ನಂಬದಿರಿ,
8. ಪಕ್ಷಪಾತ ಅಥವಾ ಪೂವರ್ಾಗ್ರಹಪೀಡಿತತೆಯಿಂದಾಗಿ ನಮ್ಮ ಚಿಂತನೆಯಂತಿದೆ ಎಂದು (ದಿಟ್ಠನಿಜ್ಝಾನಕ್ಖನ್ತಿಯಾ)  ನಂಬದಿರಿ,
9. ಭವ್ಯನುರಿತ ತಜ್ಞರಿಂದ ಬಂದಿದೆ (ಭಬ್ಬರೂಪತಾಯ) ಎಂದಾಗಲಿ ನಂಬದಿರಿ,
10. ಅಥವಾ ಇವರು ನಮ್ಮ ಗೌರವಾರ್ಹ ಸಮಣ ಗುರುವು ಅವರಿಂದ ಬಂದಿದೆ (ಸಮಣೊ ನೊ ಗರೂತಿ) ಎಂದಾಗಲಿ ನಂಬಬೇಡಿ.
ಆದರೆ ಕಾಲಾಮರೇ, ಯಾವಾಗ ನೀವೇ ಚಿಂತನೆ ಮಾಡಿದಾಗ, ಇವು ಕುಶಲವಾದವು, ಇವು ನಿಂದಾತೀತವಾದವು ,ಇವು ಅರ್ಥಕಾರಿ, ನಿಂದತೀತವಾದವು ಜ್ಞಾನಿಗಳಿಂದ ಪ್ರಶಂಶಿಲ್ಪಡುತ್ತದೆ ಎಂದು ಗೊತ್ತಾದಾಗ, ಇವುಗಳ ಪಾಲನೆಯಿಂದ ಸುಖವಾಗುತ್ತದೆ ಮತ್ತು ಕ್ಷೇಮವಾಗುತ್ತದೆ ಎಂದು ಅರಿವಾದಾಗ ಅವನ್ನು ಸ್ವೀಕರಿಸಿರಿ, ಪಾಲಿಸಿರಿ, ಜೀವಿಸಿರಿ.
ಈಗ ಕಾಲಾಮರೇ, ಇದರ ಬಗ್ಗೆ ಹೇಗೆ ಯೋಚಿಸುವಿರಿ?,  ಅಲೋಭವು ವ್ಯಕ್ತಿಯಲ್ಲಿ ಉದಯಿಸಿದರೆ ಆತನಿಗೆ ಕ್ಷೇಮವಾಗುತ್ತದೋ ಅಥವಾ ಹಾನಿಯಾಗುತ್ತದೋ?
ಕ್ಷೇಮವಾಗುತ್ತದೆ ಭಂತೆ.
ಈಗ ಮನುಷ್ಯನು ಲೋಭಮುುಕ್ತನಾದಾಗ, ಲೋಭದಿಂದ ಸೋಲದಿದ್ದಾಗ, ಲೋಭದಿಂದ ಆವೃತವಾಗದೇ ಇದ್ದಾಗ, ಆತನು ಜೀವಹತ್ಯೆ ಮಾಡಲಾರನು, ಕಳ್ಳತನವಾಗಲಿ, ವ್ಯಭಿಚಾರವಾಗಲಿ ಮಾಡಲಾರನು ಸುಳ್ಳಾಗಲಿ ನುಡಿಯಲಾರನು,  ಹಾಗೆಯೇ ಪರರಿಗೂ ಇದನ್ನೇ ಪ್ರೋತ್ಸಾಹಿಸಿ ಆತನು ಅವರಿಗೆ ದಾರಿ ತಪ್ಪಿಸಲಾರನು. ಇದರಿಂದಾಗಿ  ಆತನಿಗೆ ಕ್ಷೇಮವು ಮತ್ತು ಸುಖವು ದೀರ್ಘಕಾಲ ಇರುತ್ತದೆಯಲ್ಲವೇ ?
ಹೌದು ಭಂತೆ.
ಈಗ ಕಾಲಾಮರೇ, ಇದರ ಬಗ್ಗೆ ಹೇಗೆ ಯೋಚಿಸುವಿರಿ,  ಅದ್ವೇಷವು ವ್ಯಕ್ತಿಯಲ್ಲಿ ಉದಯಿಸಿದರೆ ಆತನಿಗೆ ಕ್ಷೇಮವಾಗುತ್ತದೋ ಅಥವಾ ಹಾನಿಯಾಗುತ್ತದೋ?
ಕ್ಷೇಮವಾಗುತ್ತದೆ ಭಂತೆ.
ಈಗ ಮನುಷ್ಯನು ದ್ವೇಷಮುಕ್ತನಾದಾಗ,  ದ್ವೇಷದಿಂದ ಸೋಲದಿದ್ದಾಗ, ದ್ವೇಷದಿಂದ ಆವೃತವಾಗದೇ ಇದ್ದಾಗ, ಆತನು ಜೀವಹತ್ಯೆ ಮಾಡಲಾರನು, ಕಳ್ಳತನವಾಗಲಿ, ವ್ಯಭಿಚಾರವಾಗಲಿ ಮಾಡಲಾರನು ಸುಳ್ಳಾಗಲಿ ನುಡಿಯಲಾರನು,  ಹಾಗೆಯೇ ಪರರಿಗೂ ಪ್ರೋತ್ಸಾಹಿಸಿ ಆತನು ಅವರಿಗೆ ದಾರಿ ತಪ್ಪಿಸಲಾರನು. ಇದರಿಂದಾಗಿ ಆತನಿಗೆ ಕ್ಷೇಮವು ಮತ್ತು ಸುಖವು ದೀರ್ಘಕಾಲ ಇರುತ್ತದೆಯಲ್ಲವೇ ?
    ಹೌದು ಭಂತೆ.
ಈಗ ಕಾಲಾಮರೇ, ಇದರ ಬಗ್ಗೆ ಹೇಗೆ ಯೋಚಿಸುವಿರಿ,  ಅಮೋಹವು ವ್ಯಕ್ತಿಯಲ್ಲಿ ಉದಯಿಸಿದರೆ ಆತನಿಗೆ ಕ್ಷೇಮವಾಗುತ್ತದೋ ಅಥವಾ ಹಾನಿಯಾಗುತ್ತದೋ?
ಕ್ಷೇಮವಾಗುತ್ತದೆ ಭಂತೆ.
ಈಗ ಮನುಷ್ಯನು ಮೋಹಮುಕ್ತನಾದಾಗ,  ಮೋಹದಿಂದ ಸೋಲದಿದ್ದಾಗ, ಮೋಹದಿಂದ ಆವೃತವಾಗದೇ ಇದ್ದಾಗ, ಆತನು ಜೀವಹತ್ಯೆ ಮಾಡಲಾರನು, ಕಳ್ಳತನವಾಗಲಿ, ವ್ಯಭಿಚಾರವಾಗಲಿ ಮಾಡಲಾರನು ಸುಳ್ಳಾಗಲಿ ನುಡಿಯಲಾರನು,  ಹಾಗೆಯೇ ಪರರಿಗೂ ಪ್ರೋತ್ಸಾಹಿಸಿ ಆತನು ಅವರಿಗೆ ದಾರಿ ತಪ್ಪಿಸಲಾರನು. ಇದರಿಂದಾಗಿ ಆತನಿಗೆ ಕ್ಷೇಮವು ಮತ್ತು ಸುಖವು ದೀರ್ಘಕಾಲ ಇರುತ್ತದೆಯಲ್ಲವೇ ?
    ಹೌದು ಭಂತೆ.
ಈಗ ಕಾಲಾಮರೇ, ಇದರ ಬಗ್ಗೆ ಹೇಗೆ ಯೋಚಿಸುವಿರಿ, ಈ ವಿಷಯಗಳು ಕುಶಲವೋ ಅಥವಾ ಅಕುಶಲವೋ,?
ಕುಶಲ ಭಂತೆ
ಇವು ನಿಂದನೀಯವೋ ಅಥವಾ ನಿಂದನತೀತವೋ ?.
ನಿಂದನಾತೀತವಾದುದು ಭಗವಾನ್.
ಇವು ಜ್ಞಾನಿಗಳಿಂದ ನಿಷೇಧಿಸಲ್ಪಡುವುದೋ ಅಥವಾ ಪ್ರಶಂಸನೀಯವೋ ?
ಪ್ರಶಂಸಿಸಲ್ಪಡುವುದು ಭಗವಾನ್.
ಇವುಗಳನ್ನು ಸ್ವೀಕರಿಸಿ, ಪರಿಪಾಲಿಸಿದಾಗ ದೀರ್ಘಕಾಲ ಸುಖ, ಕ್ಷೇಮ ಉಂಟಾಗುತ್ತದೆ ಅಥವಾ ಅಲ್ಲವೇ ಇದನ್ನು ಹೇಗೆ ತೆಗೆದುಕೊಳ್ಳುವಿರಿ ?
ಇವುಗಳನ್ನು ಸ್ವೀಕರಿಸಿ, ಪರಿಪಾಲಿಸಿದಾಗ ದೀರ್ಘಕಾಲ ಸುಖ, ಕ್ಷೇಮ ಉಂಟಾಗುತ್ತದೆ. ಇದನ್ನು ನಾವು ಹೀಗೆ ತೆಗೆದುಕೊಳ್ಳುವೆವು.
ಬನ್ನಿ ಕಾಲಾಮರೇ,
1. ಬಹಳಷ್ಟು ಕೇಳಿದ್ದೇವೇ ಎಂದು  ನಂಬದಿರಿ (ಅನುಸ್ಸವವೇನ)
2. ಸಂಪ್ರದಾಯವೆಂದು (ಪರಂಪರಾ) ನಂಬದಿರಿ
3. ವದಂತಿಗಳನ್ನು (ಇತಿಕಿರಾಯ) ನಂಬದಿರಿ, 
4. ಧರ್ಮಗ್ರಂಥಗಳಲ್ಲಿದೆ (ಪಿಟಿಕ ಸಂಪಾದನೇನ) ಎಂದು ನಂಬದಿರಿ,
5. ತರ್ಕ ಸಮ್ಮತ (ತರ್ಕಹೇತು) ಎಂದಾಗಲಿ ನಂಬದಿರಿ,
6. ಯೋಜನಬದ್ಧವಾಗಿದೆ (ನಯಹೇತು) ಎಂದು ನಂಬದಿರಿ, 
7. ತೋರಿಕೆಯ ತರ್ಕದಿಂದ (ಚೆನ್ನಾಗಿ ಕಾಣುತ್ತಿದೆ) ಸ್ವೀಕಾರಾರ್ಹವಾಗಿದೆ (ಆಕಾರಪರಿವಿತಕ್ಕೇನ) ಎಂದಾಗಲಿ ನಂಬದಿರಿ,
8. ಪಕ್ಷಪಾತ ಅಥವಾ ಪೂವರ್ಾಗಹ್ರಪೀಡಿತತೆಯಿಂದಾಗಿ ನಮ್ಮ ಚಿಂತನೆಯಂತಿದೆ ಎಂದು (ದಿಟ್ಠನಿಜ್ಝಾನಕ್ಖನ್ತಿಯಾ)  ನಂಬದಿರಿ,
9. ಭವ್ಯನುರಿತ ತಜ್ಞರಿಂದ ಬಂದಿದೆ (ಭಬ್ಬರೂಪತಾಯ) ಎಂದಾಗಲಿ ನಂಬದಿರಿ,
10. ಅಥವಾ ಇವರು ನಮ್ಮ ಗೌರವಾರ್ಹ ಸಮಣ ಗುರುವು ಅವರಿಂದ ಬಂದಿದೆ (ಸಮಣೊ ನೊ ಗರೂತಿ) ಎಂದಾಗಲಿ ನಂಬಬೇಡಿ.
ಆದರೆ ಕಾಲಾಮರೇ, ಯಾವಾಗ ನೀವೇ ಚಿಂತನೆ ಮಾಡಿದಾಗ, ಇವು ಕುಶಲವಾದವು, ಇವು ನಿಂದನಾತೀತವಾದವು ,ಇವು ಅರ್ಥಕಾರಿ,  ಜ್ಞಾನಿಗಳಿಂದ ಪ್ರಶಂಶಿಸಲ್ಪಡುತ್ತದೆ ಎಂದು ಗೊತ್ತಾದಾಗ, ಇವುಗಳ ಸ್ವೀಕಾರ ಹಾಗು ಪಾಲನೆಯಿಂದ ದೀರ್ಘಕಾಲಸುಖವಾಗುತ್ತದೆ ಎಂದು ಅರಿವಾದಾಗ ಅದನ್ನು ಪುರಸ್ಕರಿಸಿ, ಪಾಲಿಸಿರಿ ಮತ್ತು ಜೀವಿಸಿರಿ ಅದಕ್ಕಾಗಿಯೇ ಹೀಗೆ ಹೇಳಲಾಗಿದೆ.
ಈಗ ಕಾಲಾಮರೇ, ಯಾವ ಆರ್ಯ ಶ್ರಾವಕನು ಹೀಗೆ ಲೋಭದಿಂದ, ದ್ವೇಷದಿಂದ ಮತ್ತು ಮೋಹದಿಂದ ಮುಕ್ತನಾದಾಗ ಆತನು ದಿಗ್ಭ್ರಮೆಪಡುವುದಿಲ್ಲ. ಸ್ಪಷ್ಟವಾಗಿ ಅರಿಯುವವನಾಗುತ್ತಾನೆ,  ಮತ್ತು ಸ್ಮೃತಿವಂತನಾಗುತ್ತಾನೆ ಮತ್ತು ಚಿತ್ತದಲ್ಲಿ ಮೈತ್ರಿಯಿಂದ ಕೂಡಿರುತ್ತಾನೆ, ಹೀಗೇ ಸ್ಥಾಪಿತವಾದ ಮೆತ್ತಾಯುತವಾದ ಚಿತ್ತದಿಂದ ಒಂದು ದಿಕ್ಕಿನತ್ತ ಮೆತ್ತವನ್ನು ಪ್ರಸರಿಸುತ್ತಾನೆ.......... ಕರುಣೆಯಿಂದ ಕೂಡಿರುತ್ತಾನೆ.......... ಮುದಿತಾದಿಂದ ಕೂಡಿರುತ್ತಾನೆ......... ಸಮಚಿತ್ತತೆಯಿಂದ ಕೂಡಿರುತ್ತಾನೆ. ಇದೇರೀತಿಯ ಭಾವನೆಯಿಂದ ಆತನು ಒಂದು ದಿಕ್ಕಿಗೆ ಹರಡುತ್ತಾನೆ. ಹಾಗೆಯೇ ಎರಡನೇಯ ದಿಕ್ಕಿಗೂ, ಮೂರನೆಯ ದಿಕ್ಕಿಗೂ, ನಾಲ್ಕನೇಯ ದಿಕ್ಕಿಗೂ, ಹೀಗೆಯೇ ಮೇಲೆ, ಕೆಳಗೆ, ಸುತ್ತಲೂ, ಎಲ್ಲಾ ದಿಕ್ಕುಗಳಿಗೂ ಸಮಚಿತ್ತತೆಯನ್ನು ಹರಡುತ್ತ ನೆಲೆಸುತ್ತಾನೆ. ಹೀಗೆ ಆತನು ವ್ಯಾಪಕವಾದ, ಉನ್ನತವಾದ, ಅಪರಿಮಿತವಾದ,  ದ್ವೇಷರಹಿತವಾದ, ಚಿತ್ತದಿಂದ ಕೂಡಿರುತ್ತಾನೆ.
ಕಾಲಾಮರೇ ಈ ರೀತಿಯಾಗಿ ಆರ್ಯಶ್ರಾವಕನು ಚಿತ್ತದಿಂದ, ದ್ವೇಷ, ವಿರೋಧ, ಚಿತ್ತಕ್ಲೇಶಗಳಿಂದ ಮುಕ್ತನಾಗಿ, ಪರಿಶುದ್ಧನಾಗುತ್ತಾನೆ. ಅಂತಹುದರಿಂದ ಈ ಜನ್ಮದಲ್ಲೇ ನಾಲ್ಕು ಸಮಾಧಾನವನ್ನು ಭರವಸೆಗಳನ್ನು ಕಾಣಬಹುದು.
1. ಮೊದಲ ಭರವಸೆ ಏನೆಂದರೆ, ಒಂದು ವೇಳೆ ಪರಲೋಕವಿದ್ದರೆ ಒಳ್ಳೆಯ ಹಾಗೂ ಕೆಟ್ಟ ಕರ್ಮಗಳಿಗೆ ಕರ್ಮಫಲವು ಸಿಗುವುದಿದ್ದರೆ  ನಮ್ಮ ಒಳ್ಳೆಯ ಕಾರ್ಯಗಳನ್ನು ಮಾಡಿರುವೆ, ನನಗೆ ಸಾವಿನ ನಂತರ ಸುಗತಿಯೇ ಸಿಗುವುದು.
2. ಎರಡನೆಯ ಭರವಸೆ ಏನೆಂದರ,ೆ ಪರಲೋಕವಿಲ್ಲದಿದ್ದರೆ, ಒಳ್ಳೆಯ ಹಾಗೂ ಕೆಟ್ಟ ಕರ್ಮಗಳಿಗೆ ಕರ್ಮಫಲ ಸಿಗದಿದ್ದರೆ, ಅದರೂ ಈ ಜನ್ಮದಲ್ಲೇ ದ್ವೇಷರಹಿತನಾಗಿ, ದುಃಖರಹಿತನಾಗಿ, ಕ್ಲೇಷರಹಿತನಾಗಿ ಸುಖಿಯಾಗಿ ಇರುತ್ತೇನೆ.
3. ಮೂರನೆಯ ಭರವಸೆ ಏನೆಂದರೆ, ಕರ್ಮಫಲ ಇರುವುದಾದರೆ, ಪಾಪಿಗೇ ಮಾತ್ರ ಕೆಡಕಾಗುತ್ತದೆ,  ನಾನು ಯಾವುದೇ ಕೆಟ್ಟ ಇಚ್ಚೆಗಳನ್ನು ಯಾರ ಮೇಲೆಯೂ ಹೊಂದಿಲ್ಲ,  ಹೀಗೆ ಯಾವ ಪಾಪವೂ ಮಾಡದ  ನನಗೆ ಹೇಗೆತಾನೆ  ದುಃಖವು ತಟ್ಟಿತು?.
4. ನಾಲ್ಕನೆಯ ಭರವಸೆ ಏನೆಂದರೆ, ಕೆಟ್ಟಕಮ್ಮ ಮಾಡುವವನಿಗೂ ಕರ್ಮಫಲ ಸಿಗುವುದಿಲ್ಲ ಎನ್ನುವುವಾದರೆ, ನನ್ನಿಂದ ಯಾವ ಪಾಪವು ನಡೆದಿಲ್ಲ, ಹೀಗೆ ಎರಡು ರೀತಿಯಲ್ಲಿಯೂ ಪರಿಶುದ್ಧನಾಗಿಯೇ ಇರುವೆನು.
ಹೀಗೆ ಕಾಲಾಮರೆ, ಆ ಆರ್ಯಶ್ರಾವಕನು ಚಿತ್ತಕ್ಲೇಷಗಳಿಂದ, ದ್ವೇಷದಿಂದ, ವಿಮುಕ್ತನಾಗಿ ನಿರ್ಮಲನಾಗಿ ಈ ಜೀವಿತದಲ್ಲೇ ಈ ನಾಲ್ಕು ಸಮಾಧಾನ ಪಡೆಯುತ್ತಾನೆ.
ಇದು ಹೀಗೆಯೇ ಭಗವಾನ್ ಇದು ಸರಿಯಾಗಿಯೇ ಇದೆ, ಸುಗತರೇ, ಆ ಆರ್ಯಶ್ರಾವಕನು ಚಿತ್ತಕ್ಲೇಷಗಳಿಂದ, ದ್ವೇಷದಿಂದ, ವಿಮುಕ್ತನಾಗಿ ನಿರ್ಮಲನಾಗಿ ಈ ಜೀವಿತದಲ್ಲೇ ಈ ನಾಲ್ಕು ಸಮಾಧಾನ ಪಡೆಯುತ್ತಾನೆ.
ಮೊದಲ ಭರವಸೆ ಏನೆಂದರೆ ಒಂದು ವೇಳೆ ಪರಲೋಕವಿದ್ದರೆ ಒಳ್ಳೆಯ ಹಾಗೂ ಕೆಟ್ಟ ಕರ್ಮಗಳಿಗೆ ಕರ್ಮಫಲವು ಸಿಗುವುದಿದ್ದರೆ  ನಾನು ಒಳ್ಳೆಯ ಕಾರ್ಯಗಳನ್ನು ಮಾಡಿರುವೆ, ನನಗೆ ಸಾವಿನ ನಂತರ ಸುಗತಿಯೇ ಸಿಗುವುದು.............. ನಾಲ್ಕನೆಯ ಭರವಸೆ ಏನೆಂದರೆ ಕೆಟ್ಟಕಮ್ಮ ಮಾಡುವವನಿಗೂ ಕರ್ಮಫಲ ಸಿಗುವುದಿಲ್ಲ ಎಂದರೂ ನನ್ನಿಂದ ಯಾವ ಪಾಪವು ನಡೆದಿಲ್ಲ, ಹೀಗೆ ಎರಡು ರೀತಿಯಲ್ಲಿಯೂ ಪರಿಶುದ್ಧನಾಗಿಯೇ ಇರುವೆನು. ಇದು ಹೀಗೆಯೇ ಭಗವಾನ್ ಇದು ಸರಿಯಾಗಿಯೇ ಇದೆ, ಸುಗತರೇ, ಆ ಆರ್ಯಶ್ರಾವಕನು ಚಿತ್ತಕ್ಲೇಷಗಳಿಂದ, ದ್ವೇಷದಿಂದ, ವಿಮುಕ್ತನಾಗಿ ನಿರ್ಮಲನಾಗಿ ಈ ಜೀವಿತದಲ್ಲೇ ಈ ನಾಲ್ಕು ಸಮಾಧಾನ ಪಡೆಯುತ್ತಾನೆ.
ಅದ್ಭುತ ಭಂತೆ! ......... ನಾವು ಭಗವಾನರಿಗೆ ಶರಣು ಹೋಗುವೆವು, ಧಮ್ಮಕ್ಕೂ ಶರಣು ಹೋಗುವೆವು, ಸಂಘಕ್ಕೂ ಶರಣು ಹೋಗುವೆವು. ನಮ್ಮನ್ನು ಭಗವಾನರು ಇಂದಿನಿಂದ ಜೀವನ ಪರ್ಯಂತ ಉಪಾಸಕರೆಂದು ಪರಿಗಣಿಸಲಿ.
                                                              - ಂ0ಂ  

No comments:

Post a Comment