Thursday 28 March 2019

dakkhina vibhanga sutta in kannada ದಕ್ಖಿಣಾ ವಿಭಂಗ ಸುತ್ತ (ದಾನದ ವಿಶ್ಲೇಷಣೆಯ ಸುತ್ತ)

                                         ದಕ್ಖಿಣಾ ವಿಭಂಗ ಸುತ್ತ
                                    (ದಾನದ ವಿಶ್ಲೇಷಣೆಯ ಸುತ್ತ)



  

(ಸಂಘಕ್ಕೆ ನೀಡುವ ದಾನವೂ ವೈಯಕ್ತಿಕ ದಾನಕ್ಕಿಂತಲೂ ಅತಿ ಹೆಚ್ಚು ಫಲಯುತ)


ನಾನು ಹೀಗೆ ಕೇಳಿದ್ದೇನೆ, ಆ ಸಮಯದಲ್ಲಿ ಬುದ್ಧ ಭಗವಾನರು ಶಾಕ್ಯರ ನಾಡಿನ ಕಪಿಲವಸ್ತುವಿನ ಆಲದ ಮರಗಳ(ನಿಗ್ರೋಧರಾಮ) ವಿಹಾರದಲ್ಲಿದ್ದರು,  ಆಗ ಮಾತೆಯಾದ ಮಹಾಪಜಾಪತಿ ಗೋತಮಿಯು ಭಗವಾನರ ಬಳಿಗೆ ಒಂದು ಜೋತೆ ವಸ್ತ್ರಗಳೊಂದಿಗೆ ಬಂದರು. ಆಕೆಯು ವಂದಿಸಿ ಒಂದೆಡೆ ಕುಳಿತುಕೊಂಡರು ನಂತರ ಭಗವಾನರೊಂದಿಗೆ ಹೀಗೆ ನುಡಿದರು :
 ಭಂತೆ ಇವನ್ನು ನಾನೇ ಸ್ವತಃ ನೆಯ್ದು ಹಾಗೂ ಹೆಣೆದು ಈ ವಸ್ತ್ರಗಳನ್ನು ಭಗವಾನರಿಗೆಂದೇ ತಂದಿರುವೆ ಭಗವಾನರು ದಯೆಯಿಂದ ಇವನ್ನು ಸ್ವೀಕರಿಸಬೇಕು, ಹೀಗೆ ಆಕೆಯು ನುಡಿದಾಗ ಭಗವಾನರು ಆಕೆಗೆ ಹೀಗೆ ನುಡಿದರು :
   ಸಂಘಕ್ಕೆ ದಾನವ ನೀಡು ಮಾತೆ ಗೋತಮಿ, ಯಾವಾಗ ನೀವು ಸಂಘಕ್ಕೆ ನೀಡುವಿರೊ ಆಗ ಸಂಘ ಹಾಗೂ ನಾನು ಜೋತೆಯಾಗಿಯೇ ಗೌರವಕ್ಕೆ ಪಾತ್ರರಾಗುವೆವು.
 ಆಗ ಆಕೆಯು ಎರಡನೆಯ ಬಾರಿ ಹೀಗೆ ನುಡಿದರು :  ಭಂತೆ ಇವನ್ನು ನಾನೇ ಸ್ವತಃ ನೆಯ್ದು ಹಾಗೂ ಹೆಣೆದು ಈ ವಸ್ತ್ರಗಳನ್ನು ಭಗವಾನರಿಗೆಂದೇ ತಂದಿರುವೆ ಭಗವಾನರು ದಯೆಯಿಂದ ಇವನ್ನು ಸ್ವೀಕರಿಸಬೇಕು, ಹೀಗೆ ಆಕೆಯು ನುಡಿದಾಗ ಭಗವಾನರು ಎರಡನೆಯ ಬಾರಿ ಆಕೆಗೆ ಹೀಗೆ ನುಡಿದರು :
   ಸಂಘಕ್ಕೆ ದಾನವ ನೀಡು ಮಾತೆ ಗೋತಮಿ, ಯಾವಾಗ ನೀವು ಸಂಘಕ್ಕೆ ನೀಡುವಿರೊ ಆಗ ಸಂಘ ಹಾಗೂ ನಾನು ಜೋತೆಯಾಗಿಯೇ ಗೌರವಕ್ಕೆ ಪಾತ್ರರಾಗುವೆವು.
  ಆಗ ಆಕೆಯು ಮೂರನೆೆಯ ಬಾರಿ ಹೀಗೆ ನುಡಿದರು :  ಭಂತೆ ಇವನ್ನು ನಾನೇ ಸ್ವತಃ ನೆಯ್ದು ಹಾಗೂ ಹೆಣೆದು ಈ ವಸ್ತ್ರಗಳನ್ನು ಭಗವಾನರಿಗೆಂದೇ ತಂದಿರುವೆ ಭಗವಾನರು ದಯೆಯಿಂದ ಇವನ್ನು ಸ್ವೀಕರಿಸಬೇಕು, ಹೀಗೆ ಆಕೆಯು ನುಡಿದಾಗ ಭಗವಾನರು ಮೂರನೆಯ ಬಾರಿ ಆಕೆಗೆ ಹೀಗೆ ನುಡಿದರು :
   ಸಂಘಕ್ಕೆ ದಾನವ ನೀಡು ಮಾತೆ ಗೋತಮಿ, ಯಾವಾಗ ನೀವು ಸಂಘಕ್ಕೆ ನೀಡುವಿರೊ ಆಗ ಸಂಘ ಹಾಗೂ ನಾನು ಜೋತೆಯಾಗಿಯೇ ಗೌರವಕ್ಕೆ ಪಾತ್ರರಾಗುವೆವು. ಯಾವಾಗ ಭಗವಾನರು ಹೀಗೆ ನುಡಿದರೋ ಆಗ ಪೂಜ್ಯ ಆನಂದರವರು ಮಧ್ಯೆ ಪ್ರವೇಶಿಸಿ ಹೀಗೆ ನುಡಿದರು :
ಭಗವಾನ್,  ಮಾತೆಯವರಾದ ಮಹಾಪಜಾಪತಿ ಗೋತಮಿಯವರ ಈ ವಸ್ತ್ರಗಳನ್ನು ದಯವಿಟ್ಟು ಸ್ವೀಕರಿಸಿರಿ, ಮಹಾಪಜಾಪತಿ ಗೋತಮಿಯು ತಮಗೆ ಆಪಾರ ಸಹಾಯಗಳನ್ನು ಮಾಡಿರುವರು, ಚಿಕ್ಕಮ್ಮರಾಗಿ ತಮಗೆ ಪೋಷಿಸಿದ್ದಾರೆ, ಲಾಲನೆಪಾಲನೆ ಮಾಡಿದ್ದಾರೆ, ತಮಗೆ ಹಾಲನ್ನು ಉಣಿಸಿದ್ದಾರೆ, ಯಾವಾಗ ಬೋದಿಸತ್ವರ ಮಾತೆಯು ಈ ಲೋಕದಿಂದ ಮೃತ್ಯುವಶರಾದರೋ ಆಗ ಈಕೆಯೇ ತನ್ನ ಸ್ವಪುತ್ರನಂತೆಯೇ ಎಲ್ಲಾ ರೀತಿಯಲ್ಲಿಯು ತಮಗೆ ಪೋಷಿಸಿಹಳು (ಮತ್ತು ಹೀಗಾಗಿ ಬುದ್ಧರು ಸಹಾ ಆಕೆಗೆ ಸಹಾಯ ಮಾಡಲೇಬೇಕು.)

 ಮತ್ತು ಭಗವಾನರೂ ಸಹಾ ಆಕೆಗೆ ತುಂಬ ಸಹಾಯ ಮಾಡುತ್ತಲೇ ಬಂದಿರುವರು, ಭಗವಾನರಿಂದಲೇ ಆಕೆಯು ಬುದ್ಧರಿಗೆ, ಧಮ್ಮಕ್ಕೆ, ಮತ್ತು ಸಂಘಕ್ಕೆ ಶರಣು ಹೋಗಿರುವರು, ಭಗವಾನರಿಂದಲೇ ಆಕೆಯು ಪ್ರಾಣಿಹತ್ಯೆಗಳನ್ನು ಮಾಡುವುದನ್ನು ತೋರೆದಿರುವರು, ಕೋಡದೆ ಇದ್ದುದ್ದನ್ನು ಸ್ವೀಕರಿಸುವುದಿಲ್ಲ, ಬ್ರಹ್ಮಚಾರ್ಯೆಯ ಜೀವನ ನಡೆಸುತಿಹರು, ಸುಳ್ಳು ಹೇಳಲಾರರು, ಮಾದಕ ಪಾನಿಯಗಳನ್ನು ಸ್ವೀಕರಿಸಲಾರರು,

 ತಿರತನಗಳಾದ ತಮಗೆ, ಧಮ್ಮಕ್ಕೆ, ಮತ್ತು ಸಂಘಕ್ಕೆ ಅಪಾರ ಶ್ರದ್ಧೆಯನ್ನು ಇಟ್ಟಿರುವರು, ಹಾಗೂ ಆರ್ಯರ ಶೀಲಗಳನ್ನು ಇಷ್ಟಪಟ್ಟು ಪಾಲಿಸುತಿಹರು. ಭಗವಾನರಿಂದಲೇ ಆಕೆಯು ಆರಿಯ ಸತ್ಯಗಳಾದ ದುಃಖ, ದುಃಖಸಮುದಯ, ದುಃಖನಿರೋಧ, ಮತ್ತು ಆರಿಯ ಅಷ್ಟಾಂಗ ಮಾರ್ಗದ ಬಗೆಗಿನ ಸಂಶಯಗಳನ್ನು ದಾಟಿರುವರು, ಹೀಗಾಗಿ ಭಗವಾನರು ಸಹಾ ಆಕೆಗೆ ಆಪಾರ ಸಹಾಯ ಮಾಡಿರುವರು.

ಇದು ಸತ್ಯ, ಆನಂದ. ಯಾವಾಗ ಒಬ್ಬನು ತಿಸರಣುವಿಗೆ ಶರಣು ಹೋಗಲು ಸಹಾಯ ಮಾಡಿರುವನೊ, ಅಂತಹವನಿಗೆ ಋಣ ತೀರಿಸುವುದು ಅಷ್ಟು ಸುಲಭವಲ್ಲ. ತಲೆಬಾಗಿ ವಂದಿಸುವುದರಿಂದಾಗಲಿ, ಮೇಲೇದ್ದು ಗೌರವಿಸುವುದರಿಂದಾಗಲಿ, ಕೈಜೋಡಿಸಿ ನಮಸ್ಕರಿಸುವುದರಿಂದಾಗಲಿ, ಮತ್ತು ವಿನಯವಿಧೇಯತೆಯಿಂದಾಗಲಿ, ಅಂತಹವರಿಗೆ ಚಿವರ ವಸ್ತ್ರಾದಿಗಳಿಂದ ದಾನಮಾಡುವುದರಿಂದಾಗಲಿ, ಆಹಾರ ಪಾನಿಯಗಳ ದಾನದಿಂದಾಗಲಿ, ವಸತಿ ನೀಡುವುದರಿಂದಾಗಲಿ, ರೋಗಿಯಾಗಿದ್ದಾಗ ಔಷಧಿಗಳನ್ನು ನೀಡುವುದರಿಂದಾಗಲಿ, ಅಂತಹವರಿಗೆ ಒಬ್ಬನು ಋಣವನ್ನು ತೀರಿಸಲಾರನು,
   ಮತ್ತೆ ಯಾವಾಗ ಒಬ್ಬನಿಂದಾಗಿ ಪಂಚಶೀಲಗಳಾದ ಪ್ರಾಣಿಹತ್ಯೆಗಳನ್ನು ಮಾಡುವುದನ್ನು ತೋರೆದಿರುವುದು, ಕೋಡದೆ ಇದ್ದುದ್ದನ್ನು ಸ್ವೀಕರಿಸದಿರುವುದು, ಬ್ರಹ್ಮಚಾರ್ಯೆಯ ಜೀವನ ನಡೆಸುವುದು, ಸುಳ್ಳು ಹೇಳದಿರುವುದು, ಮಾದಕ ಪಾನಿಯಗಳನ್ನು ಸ್ವೀಕರಿಸದಿರುವುದು,  ಅಂತಹ ಸಹಾಯ ಮಾಡಿದವರಿಗೆ ಋಣ ತೀರಿಸುವುದು ಅಷ್ಟು ಸುಲಭವಲ್ಲ, ತಲೆಬಾಗಿ ವಂದಿಸುವುದರಿಂದಾಗಲಿ, ಮೇಲೇದ್ದು ಗೌರವಿಸುವುದರಿಂದಾಗಲಿ, ಕೈಜೋಡಿಸಿ ನಮಸ್ಕರಿಸುವುದರಿಂದಾಗಲಿ, ಮತ್ತು ವಿನಯವಿಧೇಯತೆಯಿಂದಾಗಲಿ, ಅಂತಹವರಿಗೆ ಚಿವರ ವಸ್ತ್ರಾದಿಗಳಿಂದ ದಾನಮಾಡುವುದರಿಂದಾಗಲಿ, ಆಹಾರ ಪಾನಿಯಗಳ ದಾನದಿಂದಾಗಲಿ, ವಸತಿ ನೀಡುವುದರಿಂದಾಗಲಿ, ರೋಗಿಯಾಗಿದ್ದಾಗ ಔಷಧಿಗಳನ್ನು ನೀಡುವುದರಿಂದಾಗಲಿ, ಒಬ್ಬನು ಅಂತಹವರಿಗೆ ಋಣವನ್ನು ತೀರಿಸಲಾರನು.

    ಯಾವಾಗ ಒಬ್ಬನಿಂದಾಗಿ ತಿರತನಗಳಾದ ಬುದ್ಧರಿಗೆ, ಧಮ್ಮಕ್ಕೆ, ಮತ್ತು ಸಂಘಕ್ಕೆ ಅಪಾರ ಶ್ರದ್ಧೆಯನ್ನು ಇಟ್ಟಿರುವಂತಾಗುವರೋ, ಹಾಗೂ ಆರ್ಯರ ಶೀಲಗಳನ್ನು ಇಷ್ಟಪಟ್ಟು ಪಾಲಿಸುವಂತವರಾಗಿದ್ದಾರೋ ಅಂತಹ ಸಹಾಯ ಮಾಡಿದವರಿಗೆ ಋಣ ತೀರಿಸುವುದು ಅಷ್ಟು ಸುಲಭವಲ್ಲ, ತಲೆಬಾಗಿ ವಂದಿಸುವುದರಿಂದಾಗಲಿ, ಮೇಲೇದ್ದು ಗೌರವಿಸುವುದರಿಂದಾಗಲಿ, ಕೈಜೋಡಿಸಿ ನಮಸ್ಕರಿಸುವುದರಿಂದಾಗಲಿ, ಮತ್ತು ವಿನಯವಿಧೇಯತೆಯಿಂದಾಗಲಿ, ಅಂತಹವರಿಗೆ ಚಿವರ ವಸ್ತ್ರಾದಿಗಳಿಂದ ದಾನಮಾಡುವುದರಿಂದಾಗಲಿ, ಆಹಾರ ಪಾನಿಯಗಳ ದಾನದಿಂದಾಗಲಿ, ವಸತಿ ನೀಡುವುದರಿಂದಾಗಲಿ, ರೋಗಿಯಾಗಿದ್ದಾಗ ಔಷಧಿಗಳನ್ನು ನೀಡುವುದರಿಂದಾಗಲಿ, ಒಬ್ಬನು ಅಂತಹವರಿಗೆ ಋಣವನ್ನು ತೀರಿಸಲಾರನು.

     ಮತ್ತು ಯಾರಿಂದಾಗಿ ಆರಿಯ ಸತ್ಯಗಳಾದ ದುಃಖ, ದುಃಖಸಮುದಯ, ದುಃಖನಿರೋಧ, ಮತ್ತು ದುಃಖ ನಿರೋಧದ ಮಾರ್ಗವಾದ ಆರಿಯ ಅಷ್ಟಾಂಗ ಮಾರ್ಗದ ಬಗೆಗಿನ ಮಾಹಿತಿಗಳನ್ನು ತಿಳಿದು ಅವುಗಳ ಬಗೆಗಿನ ಸಂಶಯಗಳನ್ನು ದಾಟಿರುವರೋ ಅಂತಹ ಸಹಾಯ ಮಾಡಿದವರಿಗೆ ಋಣ ತೀರಿಸುವುದು ಅಷ್ಟು ಸುಲಭವಲ್ಲ, ತಲೆಬಾಗಿ ವಂದಿಸುವುದರಿಂದಾಗಲಿ, ಮೇಲೇದ್ದು ಗೌರವಿಸುವುದರಿಂದಾಗಲಿ, ಕೈಜೋಡಿಸಿ ನಮಸ್ಕರಿಸುವುದರಿಂದಾಗಲಿ, ಮತ್ತು ವಿನಯವಿಧೇಯತೆಯಿಂದಾಗಲಿ, ಅಂತಹವರಿಗೆ ಚಿವರ ವಸ್ತ್ರಾದಿಗಳಿಂದ ದಾನಮಾಡುವುದರಿಂದಾಗಲಿ, ಆಹಾರ ಪಾನಿಯಗಳ ದಾನದಿಂದಾಗಲಿ, ವಸತಿ ನೀಡುವುದರಿಂದಾಗಲಿ, ರೋಗಿಯಾಗಿದ್ದಾಗ ಔಷಧಿಗಳನ್ನು ನೀಡುವುದರಿಂದಾಗಲಿ, ಒಬ್ಬನು ಅಂತಹವರಿಗೆ ಋಣವನ್ನು ತೀರಿಸಲಾರನು.

   ಆನಂದ ಹದಿನಾಲ್ಕು ಬಗೆಯ ವೈಯಕ್ತಿಕದಾನಗಳಿವೆ. ಯಾವುವವು 14 ? ಅವೆಂದರೇ ಒಬ್ಬನು ತಥಾಗತರು, ಅರಹಂತರು ಆದ ಸಮ್ಮಸಂಬುದ್ಧರಿಗೆ ದಾನವನ್ನು ನೀಡುತ್ತಾನೆ. ಇದು ಮೊದಲನೆಯ ವೈಯಕ್ತಿಕ ದಾನವಾಗಿದೆ. ಒಬ್ಬನು ಪಚ್ಚೆಕ ಬುದ್ಧರಿಗೆ ದಾನವನ್ನು ನೀಡುತ್ತಾನೆ, ಇದು ಎರಡನೆಯ ವೈಯಕ್ತಿಕದಾನವಾಗಿದೆ. ಒಬ್ಬನು ತಥಾಗತರ ಶ್ರಾವಕರಾದ ಅರಹಂತರಿಗೆ ದಾನವನ್ನು ಮಾಡುತ್ತಾನೆ. ಇದು ಮೂರನೆಯ ವೈಯಕ್ತಿಕ ದಾನವಾಗಿದೆ. ಒಬ್ಬನು ಅರಹಂತ ಫಲವನ್ನು ಸಾಕ್ಷತ್ಕರಿಸುವ ಮಾರ್ಗದಲ್ಲಿರುವವನಿಗೆ ದಾನ ನೀಡುತ್ತಾನೆ. ಇದು ನಾಲ್ಕನೆಯ ವೈಯಕ್ತಿಕದಾನವಾಗಿದೆ.. ಒಬ್ಬನು ಅನಾಗಾಮಿಗೆ ದಾನವನ್ನು ನೀಡುತ್ತಾನೆ, ಇದು ಐದನೆಯ ವೈಯಕ್ತಿಕದಾನವಾಗಿದೆ.. ಒಬ್ಬನು ಅನಾಗಾಮಿ ಪಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ ದಾನ ನೀಡುತ್ತಾನೆ , ಇದು ಆರನೆಯ ವೈಯಕ್ತಿಕ ದಾನವಾಗಿದೆ, ಒಬ್ಬನು ಸಕದಾಗಾಮಿಗೆ ದಾನವನ್ನು ನೀಡುತ್ತಾನೆ, ಇದು ಏಳನೆಯ ವೈಯಕ್ತಿಕದಾನವಾಗಿದೆ.. ಒಬ್ಬನು ಸಕದಾಗಾಮಿ ಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ ದಾನ ನೀಡುತ್ತಾನೆ , ಇದು ಎಂಟನೆಯ ವೈಯಕ್ತಿಕ ದಾನವಾಗಿದೆ, ಒಬ್ಬನು ಸೋತಪನ್ನನಿಗೆ ದಾನವನ್ನು ನೀಡುತ್ತಾನೆ, ಇದು ಒಂಬತ್ತನೆೆಯ ವೈಯಕ್ತಿಕ ದಾನವಾಗಿದೆ.. ಒಬ್ಬನು ಸೋತಪನ್ನ ಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ ದಾನ ನೀಡುತ್ತಾನೆ , ಇದು ಹತ್ತನೆಯ ವೈಯಕ್ತಿಕ ದಾನವಾಗಿದೆ, ಒಬ್ಬನು ಬುದ್ಧ ದಮ್ಮದ ಬಾಹ್ಯದಲ್ಲಿರುವ ನಿಷ್ಕಾಮ ವೀತರಾಗಿಗೆ ದಾನ ನೀಡುತ್ತಾನೆ, ಇದು ಹನ್ನೊಂದನೆಯ ವೈಯಕ್ತಿಕ ದಾನವಾಗಿದೆ, ಒಬ್ಬನು ಶೀಲವಂತ ಸಾಧಾರಣ ಮಾನವನಿಗೆ ದಾನ ನೀಡುತ್ತಾನೆ, ಇದು ಹನ್ನೆರಡನೆಯ ವೈಯಕ್ತಿಕ ದಾನವಾಗಿದೆ, ಒಬ್ಬನು ದುಶ್ಯೀಲ ಮಾನವನಿಗೆ ದಾನ ನೀಡುತ್ತಾನೆ, ಇದು ಹದಿಮೂರನೆಯ ವೈಯಕ್ತಿಕ ದಾನವಾಗಿದೆ, ಒಬ್ಬನು ತಿರಚ್ಛನಗತಿಯುಳ್ಳ ಪ್ರಾಣಿಗಳಿಗೆ ದಾನವನ್ನು ನೀಡುತ್ತಾನೆ, ಇದು ಹದಿನಾಲ್ಕನೆಯ ವೈಯಕ್ತಿಕ ದಾನವಾಗಿದೆ,
      ಈಗ ಆನಂದ , ಈ ಮೇಲಿನ ವ್ಯಕ್ತಿಗಳಿಗೆ ನೀಡಿರುವ ದಾನದಿಂದ ಈ ರೀತಿಯ ಫಲಿತಾಂಶಗಳನ್ನು ನಿರೀಕ್ಷಿಸಬಹುದು. ಪ್ರಾಣಿಗಳಿಗೆ ದಾನ ನೀಡಿದರೆ ನೂರು ಪಟ್ಟು ಫಲ ಸಿಗುತ್ತದೆ.
      ದುಶ್ಯೀಲ ಮಾನವನಿಗೆ ದಾನ ನೀಡಿದರೆ ಸಾವಿರ ಪಟ್ಟು ಫಲ ಹಿಂದಿರುಗಿ ಸಿಗುತ್ತದೆ.
      ಶೀಲವಂತ ಮಾನವನಿಗೆ ದಾನ ನೀಡಿದರೆ ಲಕ್ಷ ಪಟ್ಟು ಫಲ ಹಿಂದಿರುಗಿ ಸಿಗುತ್ತದೆ.
  ಬುದ್ಧ ದಮ್ಮದ ಬಾಹ್ಯದಲ್ಲಿರುವ ನಿಷ್ಕಾಮ ವಿತರಾಗಿಗೆ ದಾನ ನೀಡಿದರೆ 10000000000 ( ಸಾವಿರ ಕೋಟಿ) ಪಟ್ಟು  ಫಲ ಹಿಂದಿರುಗಿ ಸಿಗುತ್ತದೆ.   
      ಸೋತಪನ್ನ ಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ ದಾನ ನೀಡಿದರೆ  ಲೆಕ್ಖಕ್ಕೆ ನಿಲುಕದಂತಹುದು, ಅಳೆಯಲಾಗದಷ್ಟು ಪಟ್ಟು ಫಲ ಹಿಂದಿರುಗಿ ಸಿಗುತ್ತದೆ. ಹೀಗಿರುವಾಗ ಸೋತಪನ್ನರಿಗೆ ದಾನ ನೀಡಿದರೆ ಎಷ್ಟೊಂದು ಪಟ್ಟು ಫಲ ಹಿಂತಿರುಗಿ ಮರಳಬಹುದು,? ಹಾಗೂ ಸಕದಾಗಾಮಿ ಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ, ಸಕದಾಗಾಮಿಗೆ ,ಅನಾಗಾಮಿ ಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ, ಅನಾಗಾಮಿಗೆ ,ಅರಹಂತ ಫಲವನ್ನು ಸಾಕ್ಷಾತ್ಕರಿಸುವ ಮಾರ್ಗದಲ್ಲಿರುವವನಿಗೆ, ಅರಹಂತರಿಗೆ , ಮತ್ತು ಪಚ್ಚೆಕ ಬುದ್ಧರಿಗೆ ದಾನ ನೀಡಿದರೆ ಎಷ್ಟೊಂದು ಪಟ್ಟು ಫಲ ಹಿಂತಿರುಗಿ ಮರಳಬಹುದು,? ಇನ್ನೂ ಸಮ್ಮ ಸಂಬುದ್ಧರಿಗೆ ದಾನ ನೀಡಿದರೇ ಎಷ್ಟೊಂದು ಪಟ್ಟು ಫಲ ಹಿಂತಿರುಗಿ ಮರಳಬಹುದು,?

   ಅದರೆ ಆನಂದ ಏಳು ಬಗೆಯ ದಾನಗಳನ್ನು ಸಂಘಕ್ಕೆ ಸಮಪರ್ಿಸಲಾಗುತ್ತದೆ. ಯಾವುವವು ಏಳು ?

1. ಬುದ್ಧಭಗವಾನರ ಸಹಿತ ಭಿಕ್ಖುಗಳು ಹಾಗು ಭಿಕ್ಖುಣಿಯರ ಸಮೂಹಕ್ಕೆ ಒಬ್ಬನು ದಾನ ನೀಡುವಿಕೆ. ಇದು ಸಂಘಕ್ಕೆ ಸಮಪರ್ಿಸಲಾಗುವ ಮೊದಲನೆಯ ದಾನ.

2.  ಬುದ್ಧಭಗವಾನರು ಮಹಾಪರಿನಿಬ್ಬಾಣ ಪಡೆದ ಬಳಿಕ ಭಿಕ್ಖುಗಳು ಹಾಗು ಭಿಕ್ಖುಣಿಯರ ಸಮೂಹಕ್ಕೆ ಒಬ್ಬನು ದಾನ ನೀಡುವಿಕೆ. ಇದು ಸಂಘಕ್ಕೆ ಸಮಪರ್ಿಸಲಾಗುವ ಎರಡನೆಯ ದಾನ.

3. ಭಿಕ್ಖುಗಳು ಸಮೂಹಕ್ಕೆ ಒಬ್ಬನು ದಾನ ನೀಡುವಿಕೆ. ಇದು ಸಂಘಕ್ಕೆ ಸಮಪರ್ಿಸಲಾಗುವ ಮೂರನೆಯ ದಾನ.

4. ಭಿಕ್ಖುಣಿಯರ ಸಮೂಹಕ್ಕೆ ಒಬ್ಬನು ದಾನ ನೀಡುವಿಕೆ. ಇದು ಸಂಘಕ್ಕೆ ಸಮಪರ್ಿಸಲಾಗುವ ನಾಲ್ಕನೆಯ ದಾನ.

5.  ನನಗಾಗಿ ಸಂಘವು ಅನೇಕ ಭಿಕ್ಖುಗಳು ಹಾಗು ಭಿಕ್ಖುಣಿಯರನ್ನು ದಾನಕ್ಕಾಗಿ ನೇಮಕಮಾಡಬಹುದು ಎಂದು ಯೋಚಿಸಿ ಒಬ್ಬನು ದಾನ ಮಾಡಬಹುದು. ಇದು ಸಂಘಕ್ಕೆ ಸಮಪರ್ಿಸಲಾಗುವ ಐದನೆಯ ದಾನ.

6. ನನಗಾಗಿ ಸಂಘವು ಅನೇಕ ಭಿಕ್ಖುಗಳನ್ನು ದಾನಕ್ಕಾಗಿ ನೇಮಕಮಾಡಬಹುದು ಎಂದು ಯೋಚಿಸಿ ಒಬ್ಬನು ದಾನ ಮಾಡಬಹುದು. ಇದು ಸಂಘಕ್ಕೆ ಸಮಪರ್ಿಸಲಾಗುವ ಆರನೆಯ ದಾನ.

7. ನನಗಾಗಿ ಸಂಘವು ಅನೇಕ ಭಿಕ್ಖುಣಿಯರನ್ನು ದಾನಕ್ಕಾಗಿ ನೇಮಕಮಾಡಬಹುದು ಎಂದು ಯೋಚಿಸಿ ಒಬ್ಬನು ದಾನ ಮಾಡಬಹುದು. ಇದು ಸಂಘಕ್ಕೆ ಸಮಪರ್ಿಸಲಾಗುವ  ಏಳನೆಯ ದಾನ.

  ಮುಂದೊಂದು ಕಾಲ ಬರುವುದು ಆಗ ಸಂಘದ ಸದಸ್ಯರು ಕೇವಲ ಕಾವಿಯ ವಸ್ತ್ರವನ್ನು ತಮ್ಮ ಕುತ್ತಿಗೆಯ ಸುತ್ತಲೂ ಮಾತ್ರ ಧರಿಸುವರು, ಅದರೆ ಅವರು ದುಶ್ಶಿಲರು ಹಾಗೂ ಹೀನಚಾರಿತ್ರ್ಯರು ಆಗಿರುತ್ತಾರೆ, ಅದರೆ ಜನರು ಅವರಿಗೆ ಸಂಘದ ಹೆಸರಿನಲ್ಲಿ ದಾನವನ್ನು ಮಾಡುತ್ತಾರೆ, ಆಗಲೂ ಸಹಾ ನಾನೂ ಹೇಳುತ್ತಿದೇನೆ ಸಂಘಕ್ಕೇ ನೀಡುವ ದಾನವು ಲೆಕ್ಖಕ್ಕೆ ನಿಲುಕದಂತಹುದು ಹಾಗೂ ಅಳೆಯಲಾಗದಂತಹುದು. ಹೀಗಾಗಿ ನಾನೂ ಹೇಳುವುದು ಏನೆಂದರೆ ಸಂಘಕ್ಕೆ ನೀಡುವ ದಾನವೂ ವೈಯಕ್ತಿಕ ದಾನಕ್ಕಿಂತಲೂ ಅತಿ ಹೆಚ್ಚು ಫಲಯುತವಾದದ್ದು.

    ಆನಂದ ದಾನಗಳಿಂದ ನಾಲ್ಕು ವಿಧವಾಗಿ ಪರಿಶುದ್ಧರಾಗುವರು. ಯಾವುವವು ನಾಲ್ಕು ?

1. ಇಲ್ಲಿ ದಾನದಿಂದ ದಾನಿಯು ಪರಿಶುದ್ಧನಾಗುತ್ತಾನೆ ಅದರೆ ಅತಿಥಿಯು(ಸ್ವೀಕರಿಸುವವನು) ಅಲ್ಲ.

2. ಇಲ್ಲಿ ದಾನದಿಂದ ಅತಿಥಿಯು ಪರಿಶುದ್ಧನಾಗುತ್ತಾನೆ ಅದರೆ ದಾನಿಯು ಅಲ್ಲ.

3. ಇಲ್ಲಿ ದಾನದಿಂದ ದಾನಿಯಾಗಲಿ ಅಥವಾ ಅತಿಥಿಯಾಗಲಿ ಈರ್ವರೂ ಪರಿಶುದ್ಧರಾಗುವುದಿಲ್ಲ.

4. ಇಲ್ಲಿ ದಾನದಿಂದ ದಾನಿಯು ಹಾಗೂ ಅತಿಥಿಯು ಈರ್ವರೂ ಪರಿಶುದ್ಧರಾಗುವರು.

 ಮತ್ತು ಇಲ್ಲಿ ಹೇಗೆ ದಾನದಿಂದ ದಾನಿಯು ಪರಿಶುದ್ಧನಾಗುತ್ತಾನೆ ಅದರೆ ಅತಿಥಿಯು(ಸ್ವೀಕರಿಸುವವನು) ಅಲ್ಲ.? ಹೇಗೆಂದರೆ ಇಲ್ಲಿ ದಾನಿಯು ಶೀಲವಂತನಾಗಿರುತ್ತಾನೆ ಸುಚಾರಿತ್ಯವಂತನಾಗಿರುತ್ತಾನೆ ಅದರೆ ಅತಿಥಿಯು ದುಶ್ಶಿಲನು ಹಾಗೂ ಹೀನಚಾರಿತ್ರ್ಯನು ಆಗಿರುತ್ತಾರೆ,

   ಮತ್ತು ಇಲ್ಲಿ ಹೇಗೆ ಇಲ್ಲಿ ದಾನದಿಂದ ಅತಿಥಿಯು ಪರಿಶುದ್ಧನಾಗುತ್ತಾನೆ ಅದರೆ ದಾನಿಯು ಅಲ್ಲ. ? ಹೇಗೆಂದರೆ ಇಲ್ಲಿ ಅತಿಥಿಯು ಶೀಲವಂತನಾಗಿರುತ್ತಾನೆ ಸುಚಾರಿತ್ಯವಂತನಾಗಿರುತ್ತಾನೆ ಅದರೆ ದಾನಿಯು ದುಶ್ಶಿಲನು ಹಾಗೂ ಹೀನಚಾರಿತ್ರ್ಯನು ಆಗಿರುತ್ತಾರೆ,
   ಮತ್ತು ಇಲ್ಲಿ ಹೇಗೆ ದಾನದಿಂದ ದಾನಿಯಾಗಲಿ ಅಥವಾ ಅತಿಥಿಯಾಗಲಿ ಈರ್ವರೂ ಪರಿಶುದ್ಧರಾಗುವುದಿಲ್ಲ. ? ಹೇಗೆಂದರೆ ಇಲ್ಲಿ ದಾನಿಯು ಹಾಗೂ ಅತಿಥಿಯು ಈರ್ವರೂ ದುಶ್ಶಿಲರು ಹಾಗೂ ಹೀನಚಾರಿತ್ರ್ಯರು ಆಗಿರುತ್ತಾರೆ,

   ಮತ್ತು ಇಲ್ಲಿ ಹೇಗೆ ಇಲ್ಲಿ ದಾನದಿಂದ ದಾನಿಯು ಹಾಗೂ ಅತಿಥಿಯು ಈರ್ವರೂ ಪರಿಶುದ್ಧರಾಗುವರು. ? ಹೇಗೆಂದರೆ ಇಲ್ಲಿ ದಾನಿಯು ಹಾಗೂ ಅತಿಥಿಯು ಈರ್ವರೂ ಶೀಲವಂತನಾಗಿರುತ್ತಾರೆ ಮತ್ತು ಸುಚಾರಿತ್ಯವಂತನಾಗಿರುತ್ತಾರೆ.

  ಹೀಗೆ ದಾನದಕ್ಷಣೆಗಳಿಂದ ನಾಲ್ಕು ವಿಧವಾಗಿ ವಿಶುದ್ಧರಾಗುವರು.

ಹೀಗೆ ನುಡಿದ ಭಗವಾನರು ನಂತರ ಸುಗತರು ಆದ ಶಾಸ್ತರು ಹೀಗೆ ನುಡಿದರು:

    ಯಾವಾಗ ಸುಶೀಲನು ಶ್ರದ್ಧಾಯುತ ಪ್ರಸನ್ನಚಿತ್ತದಿಂದ 
  ದುಶ್ಶಿಲನಿಗೆ ಯೋಗ್ಯವಾದ ಉಡುಗೋರೆ ಅಥವಾ ದಾನವನ್ನು 
  ವಿಶಾಲ ವಿಫುಲವಾದ ಭರವಸೆಗಳಿಂದ ನೀಡುವನೋ ಅಂತಹ 
   ದಾನವು ದಾಯಕನ್ನು ವಿಶುದ್ಧಗೊಳಿಸುವುದು.

   ಯಾವಾಗ ದುಶ್ಶಿಲನು ಸಂಶಯ ಚಿತ್ತದಿಂದ 
   ಶೀಲವಂತ ಅತಿಥಿಗೆ ಅಯೋಗ್ಯವಾದಂತಹ ದಾನವನ್ನು
  ಯಾವುದೇ ಫಲಗಳ ಭರವಸೆಗಳಿಲ್ಲದೆ ನೀಡುವನೋ ಅಂತಹ 
   ದಾನವು ಅತಿಥಿಯನ್ನು ವಿಶುದ್ಧಗೊಳಿಸುವುದು.

    ಯಾವಾಗ ದುಶ್ಶಿಲನು ಸಂಶಯ ಚಿತ್ತದಿಂದ 
   ದುಶ್ಶೀಲ ಅತಿಥಿಗೆ ಅಯೋಗ್ಯವಾದಂತಹ ದಾನವನ್ನು
  ಯಾವುದೇ ಫಲಗಳ ಭರವಸೆಗಳಿಲ್ಲದೆ ನೀಡುವನೋ ಅಂತಹ 
   ದಾನವು ಅತ್ಯಂತ ಅಲ್ಪ ಫಲಕಾರಿ ಎಂದು ಘೋಷಿಸುತ್ತೇನೆ.

    ಯಾವಾಗ ಸುಶೀಲನು ಶ್ರದ್ಧಾಯುತ ಪ್ರಸನ್ನಚಿತ್ತದಿಂದ 
  ಶೀಲವಂತನಿಗೆ ಯೋಗ್ಯವಾದ ಉಡುಗೋರೆ ಅಥವಾ ದಾನವನ್ನು 
  ವಿಶಾಲ ವಿಫುಲವಾದ ಭರವಸೆಗಳಿಂದ ನೀಡುವನೋ ಅಂತಹ 
   ದಾನವು ಮಹತ್ಫಲವೆಂದು ಘೋಷಿಸುತ್ತೇನೆ.

   

    ಯಾವಾಗ ವೀತರಾಗಿಯು ವೀತರಾಗಿಗೆ 
    ಪ್ರಸನ್ನಚಿತ್ತದಿಂದ ಯೋಗ್ಯವಾದ ದಾನವನ್ನು 
   ಕಮ್ಮಫಲದ ದೃಷ್ಟಿಕೋನದಿಂದ ನೀಡುವನೋ 
   ಅಂತಹ ದಾನವು  ನಿಜಕ್ಕೂ ಆಮಿಷ ದಾನಗಳಲ್ಲೇ 
         ಶ್ರೇಷ್ಟಕರವಾಗಿರುತ್ತದೆ.


   ಇಲ್ಲಿಗೆ ದಕ್ಖಿಣಾ ವಿಭಂಗ ಸುತ್ತವು ಮುಗಿಯಿತು.
( ಈ ಸುತ್ತದ ಪ್ರವಚನದ ನಂತರ ಎಲ್ಲರಿಗೂ ಭಗವಾನರು ಏತಕ್ಕಾಗಿ ಸಂಘದಾನಕ್ಕೆ ಒತ್ತು ನೀಡಿದರು ಎಂದು ತಿಳಿಯಿತು.)


 
 

 
    

No comments:

Post a Comment