Thursday 21 March 2019

velama sutta in kannada ವೇಲಾಮ ಸುತ್ತ

                                          2. ವೇಲಾಮ ಸುತ್ತ


ಆ ಸಮಯದಲ್ಲಿ ಭಗವಾನರು ಶ್ರಾವಸ್ಥಿಯ ಜೇತವನದ ಆನಾಥಪಿಂಡಿಕನ ವಿಹಾರದಲ್ಲಿ ನೆಲೆಸಿದ್ದರು. ಆಗ ಮಹಾಉಪಾಸಕ ಅನಾಥಪಿಂಡಿಕರು ಭಗವಾನರ ಬಳಿಗೆ ಬಂದರು, ಶ್ರದ್ಧಾಪೂರ್ವಕವಾಗಿ ವಂದಿಸಿದರು, ನಂತರ ಒಂದೆಡೆ ಕುಳಿತರು. ಆಗ ಭಗವಾನರು ಆತನಿಗೆ ಹೀಗೆ ಕೇಳಿದರು:
   ಗೃಹಪತಿಯೇ, ನಿಮ್ಮ ಕುಲವು ಈಗಲೂ ದಾನಗಳನ್ನು ನೀಡುತ್ತಿದೆಯೇ?
  ನೀಡುತ್ತಿದೆ ಭಗವಾನ್, ಅದರೆ ಕೇವಲ ಒರಟಾದ ಅಂಬಲಿ ಹಾಗೂ ಉಪ್ಪಿನಕಾಯಿಗಳನ್ನು ನೀಡುತ್ತಿದ್ದೇವೆ.
 ಗೃಹಪತಿಯೇ ದಾನಿಯು ನೀಡುವಂತಹ ಆಹಾರವು ಒರಟಾಗಿರಬಹುದು ಅಥವಾ ಶ್ರೇಷ್ಟವಾಗಿರುವುದೇ ಆಗಿರಬಹುದು, ಅದರೆ ಅವರು ಅಲಕ್ಷವಾಗಿ ನೀಡಿದರೆ, ಮನಸ್ಸಿಡದೇ ನೀಡಿದರೆ, ತಮ್ಮ ಕೈಯಾರೆ ನೀಡದಿದ್ದರೇ, ಉಳಿದಿದ್ದು ನೀಡಿದರೆ, ಕಮ್ಮವಿಪಾಕದ ಅರಿವಿಲ್ಲದೆ ನೀಡಿದರೆ, ಅಂತಹ ದಾನದ ಪರಿಣಾಮದಿಂದಾಗಿ ಸಿಗುವಂತಹ ಫಲಗಳಾದ ಉತ್ತಮ ಆಹಾರವಾಗಿರ ಬಹುದು, ಉತ್ತಮ ವಸ್ತ್ರಗಳಾಗಬಹುದು, ವಾಹನಗಳಾಗಿರಬಹುದು, ಅಥವಾ ಪಂಚವಿಧದ ಕಾಮಸುಖಗಳಾಗಿರಬಹುದು ಅವ್ಯಾವುದರಲ್ಲೂ ಆತನು ಆನಂದಿಸಲಾರನು ಆತನ ಮನಸ್ಸು ಅದರಲ್ಲಿ ಹರಿಯಲಾರದು, ಮತ್ತು ಆತನ ಪತ್ನಿಯಾಗಲಿ ಅಥವಾ ಪುತ್ರರಾಗಲಿ, ಅಥವಾ ಸೇವಕರಾಗಲಿ, ಗುಲಾಮನಾಗಲಿ, ಕೆಲಸಗಾರನಾಗಲಿ, ಯಾರು ಸಹಾ ಆತನ ಮಾತನ್ನು ಕೇಳಲಾರರು, ಅವರ್ಯಾರು ಸಹಾ ಅತನ ಮಾತುಗಳಿಗೆ ಗಮನವೂ ಸಹ ನೀಡುವುದಿಲ್ಲ ಹಾಗೇಯೆ ಅರ್ಥವನ್ನು ಮಾಡಿಕೊಳ್ಳಲು ಸಹಾ ಹೋಗುವುದಿಲ್ಲ. ಏಕೆ ಹೀಗೆ ? ಏಕೆಂದರೆ ಅವರು ದಾನವನ್ನು ನಿರ್ಲಕ್ಷವಾಗಿ ನೀಡಿದ್ದಾರೆ.
ಇಲ್ಲಿ ಹಲವರು ದಾನದಲ್ಲಿ ನೀಡುವಂತಹ ಆಹಾರವು ಒರಟಾಗಿಯೇ ಇರಲಿ ಅಥವಾ ಶ್ರೇಷ್ಟವಾಗಿಯೇ ಇರಲಿ ಅದರೆ ಅವರು ಜಾಗರೂಕವಾಗಿ ಶ್ರದ್ಧೆಯಿಂದ ನೀಡಿದರೆ, ಮನಸ್ಸಿಟ್ಟು ನೀಡಿದರೆ, ತಮ್ಮ ಕೈಯಾರೆ ನೀಡಿದ್ದರೇ, ಉಳಿದಿದ್ದು ನೀಡದಿದ್ದರೆ, ಕಮ್ಮವಿಪಾಕದ ಅರಿವಿದ್ದು ನೀಡಿದರೆ, ಅಂತಹ ದಾನದ ಪರಿಣಾಮದಿಂದಾಗಿ ಸಿಗುವಂತಹ ಫಲಗಳಾದ ಉತ್ತಮ ಆಹಾರ ವಾಗಿರಬಹುದು, ಉತ್ತಮ ವಸ್ತ್ರಗಳಾಗಬಹುದು, ವಾಹನಗಳಾಗಿರಬಹುದು, ಅಥವಾ ಪಂಚವಿಧದ ಕಾಮಸುಖಗಳಾಗಿರಬಹುದು ಆ ಎಲ್ಲದರಲ್ಲು ಆತನು ಆನಂದಿಸುವನು ಆತನ ಮನಸ್ಸು ಅದರಲ್ಲಿ ಬಾಗುವುದು ಮತ್ತು ಆತನ ಪತ್ನಿಯಾಗಲಿ ಅಥವಾ ಪುತ್ರರಾಗಲಿ, ಅಥವಾ ಸೇವಕರಾಗಲಿ, ಗುಲಾಮನಾಗಲಿ, ಕೆಲಸಗಾರನಾಗಲಿ, ಎಲ್ಲರೂ ಸಹಾ ಆತನ ಮಾತನ್ನು ಕೇಳುವರು. ಎಲ್ಲರೂ ಸಹಾ ಅತನ ಮಾತುಗಳಿಗೆ ಗಮನವೂ ನೀಡುತ್ತಾರೆ ಹಾಗೇಯೆ ಅರ್ಥವನ್ನು ಮಾಡಿಕೊಳ್ಳುತ್ತಾರೆ ಏಕೆ ಹೀಗೆ ? ಏಕೆಂದರೆ ಅವರು ದಾನವನ್ನು ಜಾಗರೂಕವಾಗಿ, ಶ್ರದ್ಧಾಪೂರ್ವಕವಾಗಿ ನೀಡಿದ್ದಾರೆ ಅದರ ಕಮ್ಮಫಲದಿಂದಾಗಿ ಹೀಗಾಗಿದೆ.
ಗೃಹಪತಿಯೇ ಒಂದು ಕಾಲದಲ್ಲಿ ವೇಲಾಮ ಎಂಬ ಹೆಸರಿನ ಬ್ರಾಹ್ಮಣನಿದ್ದನು, ಆತನು ಹೀಗೆ ದಾನವನ್ನು ಮಾಡುತ್ತಿದ್ದನು ಹೇಗೆಂದರೆ 84000 ಸಾವಿರ ಚಿನ್ನದ ಪಾತ್ರೆಗಳು ಬೆಳ್ಳಿಯಿಂದ ತುಂಬಿರುತ್ತಿದ್ದವು, 84000 ಸಾವಿರ ಬೆಳ್ಳಿಪಾತ್ರೆಗಳು ಚಿನ್ನದಿಂದ ತುಂಬಿರುತ್ತಿತ್ತು, 84000 ಕಂಚಿನ ಪಾತ್ರೆಗಳು ಚಿನ್ನದ ನಾಣ್ಯಗಳಿಂದ ತುಂಬಿರುತ್ತ್ತಿತ್ತು. 84000 ಆನೆಗಳು ಚಿನ್ನಾಭರಣಗಳಿಂದ, ಧ್ವಜಗಳಿಂದ ಕೂಡಿರುತ್ತಿತ್ತು, 84000 ರಥಗಳು ಸಿಂಹಗಳ, ಹುಲಿಗಳ, ಚಿರತೆಗಳ ಚರ್ಮಗಳಿಂದ ಮತ್ತು ನಯವಾದ ರತ್ನಕಂಬಳಿಗಳಿಂದ, ಚಿನ್ನವಸ್ತ್ರಗಳಿಂದ, ಚಿನ್ನದ ಧ್ವಜಗಳಿಂದ ಅಲಂಕೃತವಾಗಿರುತ್ತಿದ್ದವು, ಚಿನ್ನದ ಬಲೆಗಳಿಂದ ಕೂಡಿರುತ್ತಿದ್ದವು. ಹಾಗೇಯೆ  ಹಾಲನ್ನು ನೀಡುವಂತಹ 84000 ಹಸುಗಳಿಗೆ ರೇಷ್ಮೆಯ ಮೂಗುದಾರವು ಹಾಗೂ ಹತೋಟಿಯ ರೇಷ್ಮೆಯ ಹಗ್ಗವು ಇರುತ್ತಿತ್ತು, ಹಾಗೇಯೇ 84000 ಕನ್ಯೆಯರು ರತ್ನಾಭರಣಗಳಿಂದ ಅಭೂಷಿತರಾಗಿದ್ದರು, 84000 ಪಲ್ಲಕ್ಕಿಗಳು ರತ್ನಗಂಬಳಿಗಳಿಂದ, ಹೂವು ಇತ್ಯಾದಿಗಳಿಂದ ಜಿಂಕೆಯ ಚರ್ಮಗಳಿಂದ ಅಲಂಕೃತವಾಗಿ ಅವರಿಸಿದ್ದವು, ಅದರಲ್ಲಿ ಕೆಂಪು ದಿಂಬುಗಳು ಸಹಾ ಇದ್ದವು, ಹಾಗೆಯೇ 84000000000 ಗಳಷ್ಟು ಲಿನೀನ್ನ, ರೇಷ್ಮೇಯ, ಉಣ್ಣೆಯ, ಮತ್ತು ಹತ್ತಿಯ ಉಡುಗೆಗಳು ಸಹಾ ಇದ್ದವು. ಮತ್ತು ಇನ್ನು ಊಟ, ಪಾನಿಯ, ತಿಂಡಿ, ಆಹಾರಗಳು, ಭೋಜನಗಳು ಇತ್ಯಾದಿಗಳ ಬಗ್ಗೆ ಹೇಳಲೇ ಬೇಕಾಗಿಲ್ಲ, ಏಕೆಂದರೆ , ಅವೆಲ್ಲಾ ನದಿಯಂತೆ ಹರಿಯುತ್ತಿದ್ದವು.
ಗೃಹಪತಿಯೇ ನೀನು ಹೀಗೆ ಯೋಚಿಸಬಹುದು: ಖಂಡಿತವಾಗಿ ಈ ಬ್ರಾಹ್ಮಣ ಆ ಕಾಲದಲ್ಲಿ ಬೇರೆ ಯಾರೋ ಇದ್ದಿರಬಹುದು! ಎಂದು. ಅದರೆ ಹಾಗೇ ಭಾವಿಸದಿರಿ. ನಾನೇ ಆ ಕಾಲದಲ್ಲಿ ವೇಲಾಮ ಬ್ರಾಹ್ಮಣ ನಾಗಿದ್ದೇನು. ನಾನೇ ಆಗ ಆ ಮಟ್ಟದ ದಾನಗಳನ್ನು ಮಾಡಿದ್ದೆನು!, ಅದರೆ ಆ ಕಾಲದಲ್ಲಿ ಯಾರು ಸಹಾ ಅಂತಹ ದಾನ ಸ್ವೀಕಾರಕ್ಕೆ ಅರ್ಹರು ಇರಲಿಲ್ಲ. ಹೀಗಾಗಿ ಅಂತಹ ದಾನದಿಂದ ಯಾರು ಸಹಾ ಪರಿಶುದ್ಧರಾಗಲಿಲ್ಲ.
ಗೃಹಪತಿಯೇ ವೇಲಾಮ ಬ್ರಾಹ್ಮಣ ಮಹಾದಾನವನ್ನೇ ಮಾಡಿರ ಬಹುದು, ಅದರೆ ಒಬ್ಬ ದೃಷ್ಟಿಸಂಪನ್ನನಿಗೆ (ಸೋತಪನ್ನ) ಬೋಜನದಾನ ಮಾಡಿಸಿದರೆ ಅದು ಈ ಹಿಂದೆ ವೇಲಾಮ ಮಾಡಿದ ಅಷ್ಟು ಮಹಾದಾನಕ್ಕಿಂತಲೂ ಮಹತ್ಫಲವಾಗುತ್ತದೆ.
ಹಾಗೆಯೇ ಗೃಹಪತಿಯೇ ,  ಒಬ್ಬ ಸಕದಾಗಾಮಿ(ಜ್ಞಾನೋದಯದ 2ನೇಯ ಹಂತದವನಿ)ಗೆ ಭೋಜನದಾನ ಮಾಡಿಸಿದರೆ ಅದು ನೂರು  ದೃಷ್ಟಿಸಂಪನ್ನರಿಗೆ ಮಾಡಿದ ಮಹಾದಾನಕ್ಕಿಂತಲೂ ಮಹತ್ಫಲವಾಗುತ್ತದೆ.
ಹಾಗೆಯೇ ಗೃಹಪತಿಯೇ,  ಒಬ್ಬ ಅನಾಗಾಮಿ(ಜ್ಞಾನೋದಯದ 3ನೇಯ ಹಂತದವನಿ)ಗೆ ಭೋಜನದಾನ ಮಾಡಿಸಿದರೆ ಅದು ನೂರು  ಸಕದಾಗಾಮಿಯರಿಗೆ ಮಾಡಿದ ಮಹಾದಾನಕ್ಕಿಂತಲೂ ಮಹತ್ಫಲವಾಗುತ್ತದೆ.
ಹಾಗೆಯೇ ಗೃಹಪತಿಯೇ,  ಒಬ್ಬ ಅರಹಂತಗೆ(ಜ್ಞಾನೋದಯ ಪೂರ್ಣ)  ಭೋಜನದಾನ ಮಾಡಿಸಿದರೆ ಅದು ನೂರು ಅನಾಗಾಮಿಯರಿಗೆ ಮಾಡಿದ ಮಹಾದಾನಕ್ಕಿಂತಲೂ ಮಹತ್ಫಲವಾಗುತ್ತದೆ. 
ಹಾಗೆಯೇ ಗೃಹಪತಿಯೇ,  ಒಬ್ಬ ಪಚ್ಚೇಕಬುದ್ಧರಿಗೆ ಭೋಜನದಾನ ಮಾಡಿಸಿದರೆ ಅದು ನೂರು ಅರಹಂತರಿಗೆ ಮಾಡಿದ ಮಹಾದಾನಕ್ಕಿಂತಲೂ ಮಹತ್ಫಲವಾಗುತ್ತದೆ. 
ಹಾಗೆಯೇ ಗೃಹಪತಿಯೇ, ಒಬ್ಬ ತಥಾಗತರು, ಅರಹಂತರು ಹಾಗೂ ಸಮ್ಮಸಂಬುದ್ಧರು ಆಗಿರುವ ಅವರಿಗೆ ಭೋಜನದಾನ ಮಾಡಿದರೆ ಅದು ನೂರು ಪಚ್ಚೇಕಬುದ್ಧರಿಗೆ ಮಾಡಿದ ಮಹಾದಾನಕ್ಕಿಂತಲೂ ಮಹತ್ಫಲವಾಗುತ್ತದೆ.
ಹಾಗೆಯೇ ಗೃಹಪತಿಯೇ ಭಿಕ್ಖುಸಂಘಸಹಿತ ,ಒಬ್ಬ ತಥಾಗತರು, ಅರಹಂತರು ಹಾಗೂ ಸಮ್ಮಸಂಬುದ್ಧರು ಆಗಿರುವ ಅವರಿಗೆ ಬೋಜನದಾನ ಮಾಡಿದರೆ ಅದು ಒಬ್ಬ ತಥಾಗತರು, ಅರಹಂತರು ಹಾಗೂ ಸಮ್ಮಸಂಬುದ್ಧರು ಮಾಡಿದ ಮಹಾದಾನಕ್ಕಿಂತಲೂ ಮಹತ್ಫಲವಾಗುತ್ತದೆ.
ಹಾಗೇಯೇ ನಾಲ್ಕು ದಿಕ್ಕುಗಳಲ್ಲಿರುವ ಸಂಘಕ್ಕೇ ವಿಹಾರವನ್ನು(ವಾಸ ಸ್ಥಳ) ಕಟ್ಟಿಸುವುದು  ಭಿಕ್ಖುಸಂಘಸಹಿತ ಒಬ್ಬ ತಥಾಗತರು, ಅರಹಂತರು ಹಾಗೂ ಸಮ್ಮಸಂಬುದ್ಧರು ಆಗಿರುವ ಅವರಿಗೆ ಬೋಜನದಾನ ಮಾಡಿಸುವುದಕ್ಕಿಂತಲೂ ಮಹತ್ಫಲವಾಗಿರುತ್ತದೆ.
ಹಾಗೇಯೇ ಶ್ರದ್ಧಾಯುತ ಹೃದಯದಿಂದ ಬುದ್ಧರಿಗೆ, ಧಮ್ಮಕ್ಕೇ, ಮತ್ತು ಸಂಘಕ್ಕೇ ಶರಣು ಹೋಗುವುದು ನಾಲ್ಕು ದಿಕ್ಕುಗಳಲ್ಲಿರುವ ಸಂಘಕ್ಕೇ ವಿಹಾರವನ್ನು(ವಾಸ ಸ್ಥಳ) ಕಟ್ಟಿಸುವುದಕ್ಕಿಂತಲೂ ಹೆಚ್ಚು ಮಹತ್ಪಲವನ್ನು ನೀಡುತ್ತದೆ.
ಹಾಗೆಯೇ ಪಂಚಶೀಲಗಳಾದ (- ಜೀವಹತ್ಯೆ ಮಾಡದಿರುವುದು, ಕಳ್ಳತನ ಮಾಡದಿರುವುದು, ಅನೈತಿಕ ಕಾಮುಕತೆಯಲ್ಲಿ ತೊಡಗದಿರುವುದು, ಸುಳ್ಳು ಹೇಳದಿರುವುದು ಮತ್ತು ಮತ್ತನ್ನುಂಟುಮಾಡುವ ಮಾದಕ ದ್ರವ್ಯಗಳನ್ನು ಸೇವಿಸದಿರುವುದು -ಇವುಗಳ) ಪಾಲನೆಯು ಶ್ರದ್ಧಾಯುತ ಹೃದಯದಿಂದ ಬುದ್ಧರಿಗೆ, ಧಮ್ಮಕ್ಕೇ, ಮತ್ತು ಸಂಘಕ್ಕೇ ಶರಣು ಹೋಗುವುದಕ್ಕಿಂತಲೂ ಹೆಚ್ಚು ಮಹತ್ಪಲವನ್ನು ನೀಡುತ್ತದೆ.
ಹಾಗೇಯೇ ಹಸುವಿನಿಂದ ಹಾಲು ಕರೆಯುವ ಕಾಲದಷ್ಟು ಮೆತ್ತಾ (ಸರ್ವರ ಮೇಲಿನ ಪರಿಶುದ್ಧ ಪ್ರೀತಿ) ಧ್ಯಾನವು ಮಾಡಿದರೆ ಅದು ಪಂಚಶೀಲಗಳಾದ (ಜೀವಹತ್ಯೆ ಮಾಡದಿರುವುದು, ಕಳ್ಳತನ ಮಾಡದಿರುವುದು, ಅನೈತಿಕ ಕಾಮುಕತೆಯಲ್ಲಿ ತೋಡಗದಿರುವುದು, ಸುಳ್ಳು ಹೇಳದಿರುವುದು ಮತ್ತು ಮತ್ತನ್ನುಂಟುಮಾಡುವ ಮಾದಕ ದ್ರವ್ಯಗಳನ್ನು ಸೇವಿಸದಿರುವುದು -ಇವುಗಳ) ಪಾಲನೆಗಿಂತಲೂ ಹೆಚ್ಚು ಮಹತ್ಫಲವನ್ನು ನೀಡುತ್ತದೆ.   
ಹಾಗೇಯೇ ನಿಮಿಷಗಳ ಕಾಲದ ಅನಿತ್ಯತೆಯ ಸಂಜ್ಞೇಯ ಧ್ಯಾನವನ್ನು ಮಾಡಿದರೆ ಅದು  ಹಸುವಿನಿಂದ ಹಾಲು ಕರೆಯುವ ಕಾಲದಷ್ಟು ಮೆತ್ತಾ (ಸರ್ವರ ಮೇಲಿನ ಪರಿಶುದ್ಧ ಪ್ರೀತಿ) ಭಾವನ (ಧ್ಯಾನ)ವು ಮಾಡಿದುದಕ್ಕಿಂತಲೂ ಹೆಚ್ಚು ಮಹತ್ಫಲ ನೀಡುತ್ತದೆ .ಇದು ಇವೆಲ್ಲಕ್ಕೂ ಹೆಚ್ಚು ಮಹತ್ಫಲವಾಗಿದೆ .

                                             ಇಲ್ಲಿಗೆ ವೇಲಾಮ ಸುತ್ತವು ಮುಗಿಯಿತು 

No comments:

Post a Comment