Thursday 21 March 2019

pathama mahanama sutta in kannada 7. ಪ್ರಥಮ ಮಹಾನಾಮ ಸುತ್ತ

                                  7. ಪ್ರಥಮ ಮಹಾನಾಮ ಸುತ್ತ



ಆ ಸಮಯದಲ್ಲಿ ಭಗವಾನರು ಶಾಕ್ಯರ ರಾಜ್ಯದಲ್ಲಿ ಇದ್ದರು. ಕಪಿಲವಸ್ತುವಿನ ಸಮೀಪದ ಆಲದಮರದ ವಿಹಾರದಲ್ಲಿ ನೆಲೆಸಿದ್ದರು. ಆ ಸಮಯದಲ್ಲಿ ಕೆಲ ಭಿಕ್ಹುಗಳು ಭಗವಾನರಿಗೆ ಚಿವರ(ಭಿಕ್ಖು ವಸ್ತ್ರ)ವನ್ನು ಸಿದ್ಧಪಡಿಸುತ್ತಿದ್ದರು ಏಕೆಂದರೆ ವಷರ್ಾವಾಸದ ನಂತರ ಭಗವಾನರು ಬೇರೆಡೆ ಸಂಚಾರಕ್ಕೆ ಹೊರಡುವ ಸಾಧ್ಯತೆ ಇತ್ತು.. ಈ ವಿಷಯವನ್ನು ಮಹಾನಾಮ ಶಾಕ್ಯರು ಕೇಳಿದರು.
ಅವರು ಬುದ್ಧರಲ್ಲಿಗೆ ಹೋಗಿ ವಂದಿಸಿದರು ನಂತರ ಒಂದೆಡೆ ಕುಳಿತರು ಮತ್ತು ಹೀಗೆ ಕೇಳಿದರು : ಭಗವಾನ್, ಕೆಲ ಭಿಕ್ಹುಗಳು ಭಗವಾನರಿಗೆ ಚಿವರವನ್ನು ಸಿದ್ಧಪಡಿಸುತ್ತಿದ್ದಾರೆ  ಏಕೆಂದರೆ ವಷರ್ಾವಾಸದ ನಂತರ ತಾವು ಬೇರೆಡೆ ಸಂಚಾರಕ್ಕೆ ಹೊರಡುವ ಸಾಧ್ಯತೆ ಇದೆ ಎಂದು. ಈಗ ನಾವು ನಮ್ಮ ಜೀವನವನ್ನು ಹಲವಾರು ವಿಧದಲ್ಲಿ ಕಳೆಯುತಿಹೆವು, ನಾವು ಯಾವ ರೀತಿಯ  ಸಾಧನೆಯಲ್ಲಿ ತೊಡಗಿದರೆ ನಮಗೆ ಒಳಿತಾಗಬಹುದು.
ಸಾಧು ಸಾಧು ಮಹಾನಾಮ, ತಮ್ಮಂತಹ ಗೌರವಾನ್ವಿತ ವ್ಯಕ್ತಿಗಳು ನನ್ನೊಂದಿಗೆ ಈ ರೀತಿಯಲ್ಲಿ ಬಂದು, ನಾವು ನಮ್ಮ ಜೀವನವನ್ನು ಹಲವಾರು ವಿಧದಲ್ಲಿ ಕಳೆಯುತಿಹೆವು, ನಾವು ಯಾವ ರೀತಿಯ  ಸಾಧನೆಯಲ್ಲಿ ತೊಡಗಿದರೆ ನಮಗೆ ಒಳಿತಾಗಬಹುದು.  ಎಂದು ಕೇಳುವುದು ಅತ್ಯಂತ ಸಮಂಜಸವಾಗಿದೆ.
ಮಹಾನಾಮ, ಶ್ರದ್ಧಾವಂತನು ಯಶಸ್ವಿಯಾಗುತ್ತಾನೆ ಹೊರತು ಅಶ್ರದ್ಧಾವಂತನಲ್ಲ,
ಧೃಡಯತ್ನಶೀಲನು ಯಶಸ್ವಿಯಾಗುತ್ತಾನೆ ಹೊರತು ಸೋಮಾರಿಯಲ್ಲ, 
ಸ್ಮೃತಿವಂತನು ಯಶಸ್ವಿಯಾಗುತ್ತಾನೆ ಹೊರತು ಸ್ಮೃತಿಹೀನನಲ್ಲ,
ಸಮಾಹಿತನು ಯಶಸ್ವಿಯಾಗುತ್ತಾನೆ ಹೊರತು ಅಸಮಾಹಿತನಲ್ಲ, 
ಪ್ರಜ್ಞಾವಂತನು ಯಶಸ್ವಿಯಾಗುತ್ತಾನೆ ಹೊರತು ದುಪ್ರಜ್ಞನಲ್ಲ, 
ಯಾವಾಗ ನೀವು ಈ ರೀತಿಯಲ್ಲಿ ಈ ಐದು ವಿಷಯಗಳಲ್ಲಿ ನೆಲೆಗೊಂಡಾಗ, ನೀವು ನಂತರ ಆರು ಉನ್ನತ ವಿಷಯಗಳಲ್ಲಿ ಅಭಿವೃದ್ಧಿ ತಾಳಬೇಕು. ಮೊದಲು ನೀವು ತಥಾಗತರ ಅನುಸ್ಮರಣೆ ಹೀಗೆ ಮಾಡಬೇಕು:
     ಭಗವಾನರು ಅರಹಂತರು, ಸಮ್ಮಾಸಂಬುದ್ಧರು, ವಿಧ್ಯಾಚರಣೆಯ ಸಂಪನ್ನರು, ಸುಗತರು, ಲೋಕವಿದರು, ಅನುತ್ತರರು, ಪುರುಷದಮ್ಯ ಸಾರಥಿಯು, ದೇವತೆಗಳಿಗೆ ಮತ್ತು ಮಾನವರಿಗೆ ಶಾಸ್ತರು, ಬುದ್ಧರು ಹಾಗೂ ಭಗವಾನರು ಆಗಿದ್ದಾರೆ.    ಯಾವಾಗ ಹೀಗೆ ಆರ್ಯ ಶಿಷ್ಯನು ತಥಾಗತರನ್ನು ಅನುಸ್ಮೃರಣೆ ಮಾಡುವನೊ ಆಗ ಆತನ ಮನಸ್ಸು ರಾಗಯುತವಾಗಿರುವುದಿಲ್ಲ, ದ್ವೇಷಯುತವಾಗಿರುವುದಿಲ್ಲ ಹಾಗೂ ಮೋಹಯುತವಾಗಿರುವುದಿಲ್ಲ, ಆ ಸಮಯದಲ್ಲಿ ಅವರ ಮನಸ್ಸು ಬುದ್ಧಾನುಸ್ಸತಿಯಲ್ಲಿಯೇ ಅವಿಚಲವಾಗಿರುತ್ತದೆ, ಹೀಗೆ ಅವಿಚಲ ಚಿತ್ತವು ಅರ್ಥಸಹಿತ, ಧಮ್ಮಸಹಿತ  ಆನಂದವಾಗಿರುತ್ತದೆ, ಹೀಗೆ ಧಮ್ಮುಪಸಂಹಿತವಾದ ಚಿತ್ತವು ಪ್ರಮೋದವನ್ನು ತಾಳುತ್ತದೆ, ಪ್ರಮೋದದಿಂದಾಗಿ ಪೀತಿ(ಆನಂದ)ವು ಉಂಟಾಗುತ್ತದೆ, ಆನಂದದಿಂದ ಕಾಯವು ಪ್ರಸನ್ನವಾಗುತ್ತದೆ, ಪ್ರಸನ್ನ ಕಾಯದಿಂದ ಸುಖವು ಉಂಟಾಗುವುದು, ಸುಖಯುತ ಚಿತ್ತದಿಂದ ಸಮಾಧಿಯುಂಟಾಗುವುದು.. ಹೀಗೆ ನೆಲೆಸುವ ಆರ್ಯಶ್ರಾವಕನು ಅವ್ಯವಸ್ಥತೆಯ ಜನರ ಮಧ್ಯೆ ಸಮತೋಲನವಾಗಿರುತ್ತಾನೆ, ಕ್ಷೊಭೆಯುಳ್ಳ ಜನರ ಮಧ್ಯೆ ಅಕ್ಷೊಭನಾಗಿರುತ್ತಾನೆ. ಅವರು ಧಮ್ಮದ ಶ್ರೋತದಲ್ಲಿ ಪ್ರವೇಶಿಸುತ್ತಾರೆ, ಮತ್ತು ಧಮ್ಮದ ಅನುಸ್ಸತಿಯಲ್ಲಿ ಅಭಿವೃದ್ಧಿ ಹೊಂದುತ್ತಾರೆ.
ಅಲ್ಲದೆ ನೀವು ಧಮ್ಮಾನುಸ್ಸತಿಯಲ್ಲಿ ತೊಡಗಬೇಕು ಹೇಗೆಂದರೆ :
ಧಮ್ಮವು (ಬೋಧನೆ) ಭಗವಾನರಿಂದ ತುಂಬ ಚೆನ್ನಾಗಿ ವಿವರಿಸಲ್ಪಟ್ಟಿದೆ (ಸ್ವಾಖ್ವಾತೋ), ಧಮ್ಮವು ಇಲ್ಲಿಯೇ ಈಗಲೇ ದಶರ್ಿಸಲ್ಪಟ್ಟಿದೆ(ಸಂದಿಟ್ಟಿಕೊ), ಕಾಲವಿಳಂಬವಿಲ್ಲದೆ ಫಲಕಾರಿಯು ಮತ್ತು ಸವರ್ಾಕಾಲಿಕವಾದುದು (ಅಕಾಲಿಕೊ), ಬನ್ನಿ ಪರಿಕ್ಷಿಸಿ (ಏಹಿಪಸ್ಸಿಕೊ) ನಂತರ ಸ್ವೀಕರಿಸಿ ಎಂದು ಆಹ್ವಾನಿಸುತ್ತದೆ. ಉನ್ನತಿಯೆಡೆಗೆ (ಓಪನಯಿಕೋ) ಸಾಗಿಸುವಂತಹುದು, ಜ್ಞಾನಿಗಳಾದ ಪ್ರತಿಯೊಬ್ಬರಿಂದಲೂ ಅರಿಯಬಹುದಾಗಿದೆ (ಪಚ್ಚತ್ತಂ ವೇದಿತಬ್ಬೊ ವಿಞ್ಞೋಹಿ ತಿ).
ಯಾವಾಗ ಹೀಗೆ ಆರ್ಯ ಶಿಷ್ಯನು ಧಮ್ಮವನ್ನು ಅನುಸ್ಮೃರಣೆ ಮಾಡುವನೊ ಆಗ ಆತನ ಮನಸ್ಸು ರಾಗಯುತವಾಗಿರುವುದಿಲ್ಲ, ದ್ವೇಷಯುತವಾಗಿರುವುದಿಲ್ಲ ಹಾಗೂ ಮೋಹಯುತವಾಗಿರುವುದಿಲ್ಲ, ಆ ಸಮಯದಲ್ಲಿ ಅವರ ಮನಸ್ಸು ಧಮ್ಮಾನುಸ್ಸತಿಯಲ್ಲಿಯೇ ಅವಿಚಲವಾಗಿರುತ್ತದೆ, ಹೀಗೆ ಅವಿಚಲ ಚಿತ್ತವು ಅರ್ಥಸಹಿತ, ಧಮ್ಮಸಹಿತ  ಆನಂದವಾಗಿರುತ್ತದೆ, ಹೀಗೆ ಧಮ್ಮುಪಸಂಹಿತವಾದ ಚಿತ್ತವು ಪ್ರಮೋದವನ್ನು ತಾಳುತ್ತದೆ, ಪ್ರಮೋದದಿಂದಾಗಿ ಪೀತಿ(ಆನಂದ)ವು ಉಂಟಾಗುತ್ತದೆ, ಆನಂದದಿಂದ ಕಾಯವು ಪ್ರಸನ್ನವಾಗುತ್ತದೆ, ಪ್ರಸನ್ನ ಕಾಯದಿಂದ ಸುಖವು ಉಂಟಾಗುವುದು, ಸುಖಯುತ ಚಿತ್ತದಿಂದ ಸಮಾಧಿಯುಂಟಾಗುವುದು.. ಹೀಗೆ ನೆಲೆಸುವ ಆರ್ಯಶ್ರಾವಕನು ಅವ್ಯವಸ್ಥಿತೆಯ ಜನರ ಮಧ್ಯೆ ಸಮತೋಲನವಾಗಿರುತ್ತಾನೆ, ಕ್ಷೊಭೆಯುಳ್ಳ ಜನರ ಮಧ್ಯೆ ಅಕ್ಷೊಭನಾಗಿರುತ್ತಾನೆ. ಅವರು ಧಮ್ಮದ ಶ್ರೋತದಲ್ಲಿ ಪ್ರವೇಶಿಸುತ್ತಾರೆ, ಮತ್ತು ಧಮ್ಮದ ಅನುಸ್ಸತಿಯಲ್ಲಿ ಅಭಿವೃದ್ಧಿ ಹೊಂದುತ್ತಾರೆ.
ಭಗವಾನರ ಶ್ರಾವಕ ಸಂಘವು ಒಳ್ಳೆಯ ದಾರಿಯಲ್ಲಿ ಹೋಗುತ್ತಿದೆ
ಭಗವಾನರ ಶ್ರಾವಕ ಸಂಘವು ಋಜುವಿನ (ನೇರವಾದ) ದಾರಿಯಲ್ಲಿ. ಹೋಗುತ್ತಿದೆ.
ಭಗವಾನರ ಶ್ರಾವಕ ಸಂಘವು ನ್ಯಾಯವಾದ (ನಿಜ/ಸತ್ಯ) ದಾರಿಯಲ್ಲಿ ಹೋಗುತ್ತಿದೆ.
ಭಗವಾನರ ಶ್ರಾವಕ ಸಂಘವು ಸಮಂಜಸವಾದ ದಾರಿಯಲ್ಲಿ ಹೋಗುತ್ತಿದೆ. ನಾಲ್ಕು ವ್ಯಕ್ತಿಗಳ ಜೋಡಿಗಳಿಂದ ಮತ್ತು ಅಷ್ಟ ವ್ಯಕ್ತಿಗಳಿಂದ ಕೂಡಿರುವುದೇ ಭಗವಾನರ ಶ್ರಾವಕ ಸಂಘವಾಗಿದೆ. ಈ ಪವಿತ್ರವಾದ ಸಂಘವು ದಾನಕ್ಕೆ ಅರ್ಹವಾಗಿದೆ, ಆತಿಥ್ಯಕ್ಕೆ ಅರ್ಹವಾಗಿದೆ, ದಕ್ಷಣೆಗೆ (ಸಮರ್ಪಣೆ) ಅರ್ಹವಾಗಿದೆ. ಅಂಜಲಿಬದ್ಧರಾಗಿ ಅನುತ್ತರವಾದ ಪುಣ್ಯಕ್ಷೇತ್ರವಾಗಿದೆ.
ಯಾವಾಗ ಹೀಗೆ ಆರ್ಯ ಶಿಷ್ಯನು ಸಂಘವನ್ನು ಅನುಸ್ಮೃರಣೆ ಮಾಡುವನೊ ಆಗ ಆತನ ಮನಸ್ಸು ರಾಗಯುತವಾಗಿರುವುದಿಲ್ಲ, ದ್ವೇಷಯುತವಾಗಿರುವುದಿಲ್ಲ ಹಾಗೂ ಮೋಹಯುತವಾಗಿರುವುದಿಲ್ಲ, ಆ ಸಮಯದಲ್ಲಿ ಅವರ ಮನಸ್ಸು ಸಂಘಾನುಸ್ಸತಿಯಲ್ಲಿಯೇ ಅವಿಚಲವಾಗಿರುತ್ತದೆ, ಹೀಗೆ ಅವಿಚಲ ಚಿತ್ತವು ಅರ್ಥಸಹಿತ, ಧಮ್ಮಸಹಿತ  ಆನಂದವಾಗಿರುತ್ತದೆ, ಹೀಗೆ ಧಮ್ಮುಪಸಂಹಿತವಾದ ಚಿತ್ತವು ಪ್ರಮೋದವನ್ನು ತಾಳುತ್ತದೆ, ಪ್ರಮೋದದಿಂದಾಗಿ ಪೀತಿ(ಆನಂದ)ವು ಉಂಟಾಗುತ್ತದೆ, ಆನಂದದಿಂದ ಕಾಯವು ಪ್ರಸನ್ನವಾಗುತ್ತದೆ, ಪ್ರಸನ್ನ ಕಾಯದಿಂದ ಸುಖವು ಉಂಟಾಗುವುದು, ಸುಖಯುತ ಚಿತ್ತದಿಂದ ಸಮಾಧಿಯುಂಟಾಗುವುದು.. ಹೀಗೆ ನೆಲೆಸುವ ಆರ್ಯಶ್ರಾವಕನು ಅವ್ಯವಸ್ಥಿತೆಯ ಜನರ ಮಧ್ಯೆ ಸಮತೋಲನವಾಗಿರುತ್ತಾನೆ, ಕ್ಷೊಭೆಯುಳ್ಳ ಜನರ ಮಧ್ಯೆ ಅಕ್ಷೊಭನಾಗಿರುತ್ತಾನೆ. ಅವರು ಧಮ್ಮದ ಶ್ರೋತದಲ್ಲಿ ಪ್ರವೇಶಿಸುತ್ತಾರೆ, ಮತ್ತು ಧಮ್ಮದ ಅನುಸ್ಸತಿಯಲ್ಲಿ ಅಭಿವೃದ್ಧಿ ಹೊಂದುತ್ತಾರೆ.
ಅಲ್ಲದೆ ನೀವು ಶೀಲಾನುನುಸ್ಸತಿಯಲ್ಲಿ ತೊಡಗಬೇಕು ಹೇಗೆಂದರೆ ?:
ನಾನು ಶೀಲಗಳನ್ನು ಅಭಂಗವಾಗಿ ಪಾಲಿಸಿದ್ದೇನೆ
ನಾನು ಶೀಲಗಳನ್ನು ಅಛಿದ್ರವಾಗಿ ಪಾಲಿಸಿದ್ದೇನೆ
ನಾನು ಶೀಲಗಳನ್ನು ಕಲೆರಹಿತವಾಗಿ ಪಾಲಿಸಿದ್ದೇನೆ
ನಾನು ಶೀಲಗಳನ್ನು ಅಮಲಿನವಾಗಿ ಪಾಲಿಸಿದ್ದೇನೆ
ನಾನು ಶೀಲಗಳನ್ನು ಅಖಂಡವಾಗಿ ಪಾಲಿಸಿದ್ದೇನೆ 
ನಾನು ಸೀಲಗಳನ್ನು ಸ್ವತಂತ್ರಗಳಿಸುವ ರೀತಿಯಲ್ಲಿ ಪಾಲಿಸಿದ್ದೆನೆ,
ನಾನು ಶೀಲಗಳನ್ನು ಜ್ಞಾನಿಗಳೂ ಸಹಾ ಪ್ರಶಂಶಿಸುವ ರೀತಿಯಲಿ ಪಾಲಿಸಿದ್ದೇನೆ,
ನಾನು  ಶೀಲಗಳನ್ನು ಸಮಾಧಿಯು ಗಳಿಸುವ ರೀತಿಯಲ್ಲಿ ಪಾಲಿಸಿದ್ದೇನೆ. ಎಂದು ಆನಂದಿಸುತ್ತಾನೆ.
ಯಾವಾಗ ಹೀಗೆ ಆರ್ಯ ಶಿಷ್ಯನು ಶೀಲವನ್ನು ಅನುಸ್ಮೃರಣೆ ಮಾಡುವನೊ ಆಗ ಆತನ ಮನಸ್ಸು ರಾಗಯುತವಾಗಿರುವುದಿಲ್ಲ, ದ್ವೇಷಯುತವಾಗಿರುವುದಿಲ್ಲ ಹಾಗೂ ಮೋಹಯುತವಾಗಿರುವುದಿಲ್ಲ, ಆ ಸಮಯದಲ್ಲಿ ಅವರ ಮನಸ್ಸು  ಶೀಲಾನುಸ್ಸತಿಯಲ್ಲಿಯೇ ಅವಿಚಲವಾಗಿರುತ್ತದೆ, ಹೀಗೆ ಅವಿಚಲ ಚಿತ್ತವು ಅರ್ಥಸಹಿತ, ಧಮ್ಮಸಹಿತ  ಆನಂದವಾಗಿರುತ್ತದೆ, ಹೀಗೆ ಧಮ್ಮುಪಸಂಹಿತವಾದ ಚಿತ್ತವು ಪ್ರಮೋದವನ್ನು ತಾಳುತ್ತದೆ, ಪ್ರಮೋದದಿಂದಾಗಿ ಪೀತಿ(ಆನಂದ)ವು ಉಂಟಾಗುತ್ತದೆ, ಆನಂದದಿಂದ ಕಾಯವು ಪ್ರಸನ್ನವಾಗುತ್ತದೆ, ಪ್ರಸನ್ನ ಕಾಯದಿಂದ ಸುಖವು ಉಂಟಾಗುವುದು, ಸುಖಯುತ ಚಿತ್ತದಿಂದ ಸಮಾಧಿಯುಂಟಾಗುವುದು.. ಹೀಗೆ ನೆಲೆಸುವ ಆರ್ಯಶ್ರಾವಕನು ಅವ್ಯವಸ್ಥಿತೆಯ ಜನರ ಮಧ್ಯೆ ಸಮತೋಲನವಾಗಿರುತ್ತಾನೆ, ಕ್ಷೊಭೆಯುಳ್ಳ ಜನರ ಮಧ್ಯೆ ಅಕ್ಷೊಭನಾಗಿರುತ್ತಾನೆ. ಅವರು ಧಮ್ಮದ ಶ್ರೋತದಲ್ಲಿ ಪ್ರವೇಶಿಸುತ್ತಾರೆ, ಮತ್ತು ಧಮ್ಮದ ಅನುಸ್ಸತಿಯಲ್ಲಿ ಅಭಿವೃದ್ಧಿ ಹೊಂದುತ್ತಾರೆ.
ಅಲ್ಲದೆ ನೀವು ಚಾಗಾ(ತ್ಯಾಗಾ)ನುನುಸ್ಸತಿಯಲ್ಲಿ ತೊಡಗಬೇಕು ಹೇಗೆಂದರೆ:
ನಾನು ಅತ್ಯಂತ ಲಾಭವಂತ, ಭಾಗ್ಯಶಾಲಿ, ಪುಣ್ಯವಂತನಾಗಿದ್ದೇನೆ, ಏಕೆಂದರೆ ಸ್ವಾರ್ಥಮಲ ಹೊಂದಿರುವ ಜನರ ನಡುವೆ ನಿಃಸ್ವಾರ್ಥತತೆಯಿಂದ ಸ್ವತಂತ್ರವಾಗಿ, ದಾನಿಯಾಗಿ, ತೆರೆದಹಸ್ತವುಳ್ಳವವಾಗಿ, ತ್ಯಾಗದಲ್ಲಿ ಪ್ರೀತಿಸುವವನಾಗಿ, ದಾನಶೀಲತೆಯಲ್ಲಿ ಬದ್ಧನಾಗಿ, ನೀಡುವುದರಲ್ಲಿ , ಹಂಚುವುದರಲ್ಲ್ಲಿ ಆನಂದಿಸುವವನಾಗಿದ್ದೇನೆ
ಯಾವಾಗ ಹೀಗೆ ಆರ್ಯ ಶಿಷ್ಯನು ತ್ಯಾಗವನ್ನು ಅನುಸ್ಮೃರಣೆ ಮಾಡುವನೊ ಆಗ ಆತನ ಮನಸ್ಸು ರಾಗಯುತವಾಗಿರುವುದಿಲ್ಲ, ದ್ವೇಷಯುತವಾಗಿರುವುದಿಲ್ಲ ಹಾಗೂ ಮೋಹಯುತವಾಗಿರುವುದಿಲ್ಲ, ಆ ಸಮಯದಲ್ಲಿ ಅವರ ಮನಸ್ಸು  ತ್ಯಾಗಾನುಸ್ಸತಿಯಲ್ಲಿಯೇ ಅವಿಚಲವಾಗಿರುತ್ತದೆ, ಹೀಗೆ ಅವಿಚಲ ಚಿತ್ತವು ಅರ್ಥಸಹಿತ, ಧಮ್ಮಸಹಿತ  ಆನಂದವಾಗಿರುತ್ತದೆ, ಹೀಗೆ ಧಮ್ಮುಪಸಂಹಿತವಾದ ಚಿತ್ತವು ಪ್ರಮೋದವನ್ನು ತಾಳುತ್ತದೆ, ಪ್ರಮೋದದಿಂದಾಗಿ ಪೀತಿ(ಆನಂದ)ವು ಉಂಟಾಗುತ್ತದೆ, ಆನಂದದಿಂದ ಕಾಯವು ಪ್ರಸನ್ನವಾಗುತ್ತದೆ, ಪ್ರಸನ್ನ ಕಾಯದಿಂದ ಸುಖವು ಉಂಟಾಗುವುದು, ಸುಖಯುತ ಚಿತ್ತದಿಂದ ಸಮಾಧಿಯುಂಟಾಗುವುದು.. ಹೀಗೆ ನೆಲೆಸುವ ಆರ್ಯಶ್ರಾವಕನು ಅವವ್ಯಸ್ಥಿತೆಯ ಜನರ ಮಧ್ಯೆ ಸಮತೋಲನವಾಗಿರುತ್ತಾನೆ, ಕ್ಷೊಭೆಯುಳ್ಳ ಜನರ ಮಧ್ಯೆ ಅಕ್ಷೊಭನಾಗಿರುತ್ತಾನೆ. ಅವರು ಧಮ್ಮದ ಶ್ರೋತದಲ್ಲಿ ಪ್ರವೇಶಿಸುತ್ತಾರೆ, ಮತ್ತು ಧಮ್ಮದ ಅನುಸ್ಸತಿಯಲ್ಲಿ ಅಭಿವೃದ್ಧಿ ಹೊಂದುತ್ತಾರೆ.
 ಅಲ್ಲದೆ ನೀವು ದೇವತಾನುನುಸ್ಸತಿಯಲ್ಲಿ ತೊಡಗಬೇಕು. ಹೇಗೆಂದರೆ?  :ಚತುರ್ ಮಹಾರಾಜಿಕ ದೇವತೆಗಳಿದ್ದಾರೆ, ತಾವತಿಂಸ ದೇವತೆಗಳಿದ್ದಾರೆ, ತುಸಿತಾ ದೇವತೆಗಳಿದ್ದಾರೆ, ನಿಮರ್ಾಣರತಿ ದೇವತೆಗಳಿದ್ದಾರೆ, ಪರನಿಮರ್ಾಣರತಿ ದೇವತೆಗಳಿದ್ದಾರೆ, ಬ್ರಹ್ಮ ದೇವತೆಗಳಿದ್ದಾರೆ ಮತ್ತು ಬೇರೆಯ ಉನ್ನತ ರೀತಿಯ ದೇವತೆಗಳಿದ್ದಾರೆ. ಯಾವಾಗ ಈ ದೇವತೆಗಳು ಇಲ್ಲಿಂದ ಚ್ಯುತಿ ಹೊಂದುವವು ಆಗ ಅವು ಇಲ್ಲಿಂದ ಬೇರೆಡೆ ದೇವ ಪುನರ್ಜನ್ಮ ತಾಳುವವು, ಇವರೆಲ್ಲರ ಬಳಿ ಶ್ರದ್ಧೆ, ದಾನ, ಶೀಲ, ಧ್ಯಾನ, ಕಲಿಯುವಿಕೆ, ಪ್ರಜ್ಞಾ ಗುಣವು ಇದ್ದು ಈಗ ಅವುಗಳ ಫಲದಿಂದ ದೇವತೆಗಳಾಗಿದ್ದಾರೆ. ನನ್ನಲ್ಲೂ ಸಹಾ ಆ ಗುಣಗಳಿವೆ. ನಾನು ಆ ಗುಣಗಳನ್ನು ವೃದ್ಧಿಸುವೆ.
ಯಾವಾಗ ಹೀಗೆ ಆರ್ಯ ಶಿಷ್ಯನು ದೇವತಾನುಸತಿಯನ್ನು ಅನುಸ್ಮೃರಣೆ ಮಾಡುವನೊ ಆಗ ಆತನ ಮನಸ್ಸು ರಾಗಯುತವಾಗಿರುವುದಿಲ್ಲ, ದ್ವೇಷಯುತವಾಗಿರುವುದಿಲ್ಲ ಹಾಗೂ ಮೋಹಯುತವಾಗಿರುವುದಿಲ್ಲ, ಆ ಸಮಯದಲ್ಲಿ ಅವರ ಮನಸ್ಸು  ದೇವತಾನುಸ್ಸತಿಯಲ್ಲಿಯೇ ಅವಿಚಲವಾಗಿರುತ್ತದೆ, ಹೀಗೆ ಅವಿಚಲ ಚಿತ್ತವು ಅರ್ಥಸಹಿತ, ಧಮ್ಮಸಹಿತ  ಆನಂದವಾಗಿರುತ್ತದೆ, ಹೀಗೆ ಧಮ್ಮುಪಸಂಹಿತವಾದ ಚಿತ್ತವು ಪ್ರಮೋದವನ್ನು ತಾಳುತ್ತದೆ, ಪ್ರಮೋದದಿಂದಾಗಿ ಪೀತಿ(ಆನಂದ)ವು ಉಂಟಾಗುತ್ತದೆ, ಆನಂದದಿಂದ ಕಾಯವು ಪ್ರಸನ್ನವಾಗುತ್ತದೆ, ಪ್ರಸನ್ನ ಕಾಯದಿಂದ ಸುಖವು ಉಂಟಾಗುವುದು, ಸುಖಯುತ ಚಿತ್ತದಿಂದ ಸಮಾಧಿಯುಂಟಾಗುವುದು..
ಹೀಗೆ ನೆಲೆಸುವ ಆರ್ಯಶ್ರಾವಕನು ಅವ್ಯವಸ್ಥಿತೆಯ ಜನರ ಮಧ್ಯೆ ಸಮತೋಲನವಾಗಿರುತ್ತಾನೆ, ಕ್ಷೊಭೆಯುಳ್ಳ ಜನರ ಮಧ್ಯೆ ಅಕ್ಷೊಭನಾಗಿರುತ್ತಾನೆ. ಅವರು ಧಮ್ಮದ ಶ್ರೋತದಲ್ಲಿ ಪ್ರವೇಶಿಸುತ್ತಾರೆ, ಮತ್ತು ಧಮ್ಮದ ಅನುಸ್ಸತಿಯಲ್ಲಿ ಅಭಿವೃದ್ಧಿ ಹೊಂದುತ್ತಾರೆ.

                                                         ಇಲ್ಲಿಗೆ ಪ್ರಥಮ ಮಹಾನಾಮ ಮುಗಿಯಿತು 

No comments:

Post a Comment