Saturday 17 October 2015

kappa manava pucca of suttanipata in kannada 10. ಕಪ್ಪ ಮಾಣವ ಪುಚ್ಛಾ (ಕಪ್ಪ ಮಾಣವನ ಪ್ರಶ್ನಾವಳಿ)

10. ಕಪ್ಪ ಮಾಣವ ಪುಚ್ಛಾ (ಕಪ್ಪ ಮಾಣವನ ಪ್ರಶ್ನಾವಳಿ)

1.            ಕಪ್ಪ- ಹೇ ಮಾರ್ಷರೇ! ಜಲಾಶಯ ರೂಪದ ಲೋಕದ ಮಧ್ಯೆ ಇರುವಂತಹವರಿಗೆ ಜರಾ ಹಾಗೂ ಮೃತ್ಯುರೂಪಿ ಮಹಾ ಭಯಾನಕ ಪ್ರವಾಹ ಬರುವಾಗ ಸುರಕ್ಷೆಗಾಗಿ ದ್ವೀಪವನ್ನು ತಿಳಿಸಿ ಹಾಗು ಇಂತಹ ದ್ವೀಪದ ಬಗ್ಗೆ ತಿಳಿಸಿ, ಅದರಿಂದಾಗಿ ಪುನಃ ದುಃಖ ಸಿಗದಿರಲಿ.
2.            ಭಗವಾನರು- ಹೇ ಕಪ್ಪ ! ಜಲಾಶಯ ರೂಪದ ಲೋಕದ ಮಧ್ಯೆ ಇರುವಂತಹನಿಗೆ ಜರಾ ಹಾಗು ಮೃತ್ಯುರೂಪಿ ಮಹಾ ಭಯಾನಕ. ಪ್ರವಾಹ ಬರುವಾಗ ಸುರಕ್ಷೆಗಾಗಿ ದ್ವೀಪವನ್ನು ನಿನಗೆ ತಿಳಿಸುತ್ತಿದ್ದೇನೆ ಆಲಿಸು.
3.            ಅದು ಅಕಿಂಚನ (ಶೂನ್ಯತೆ) ಹಾಗು ಅನಾಸಕ್ತಿಯೇ ಆ ಮಹಾ ದ್ವೀಪವಾಗಿದೆ, ಬೇರ್ಯಾವುದೂ ಅಲ್ಲ. ಜರಾ ಹಾಗು ಮರಣಗಳ ಅಂತ್ಯದ ನಿಬ್ಬಾಣವನ್ನು ಹೀಗೆ ತಿಳಿಸುತ್ತಿದ್ದೇನೆ.
4.            ಇದನ್ನು ಅರಿತಂಥ ಸ್ಮೃತಿವಂತರ ಚಿತ್ತವು/ಜನ್ಮವು ಶಾಂತವಾಗುವುದು. ಅವರು ಮಾರನ ವಶೀಭೂತಿಗಳಾಗುವುದಿಲ್ಲ. ಹಾಗು ಮಾರನ ಗುಲಾಮರು (ಅನುಗಾಮಿಗಳು) ಆಗುವುದಿಲ್ಲ.

ಇಲ್ಲಿಗೆ ಕಪ್ಪ ಮಾಣವ ಪ್ರಶ್ನಾವಳಿ ಮುಗಿಯಿತು.

No comments:

Post a Comment