6. ಉಪಸೀವ
ಮಾಣವ ಪುಚ್ಚ (ಉಪಸೀವ ಮಾಣವನ ಪ್ರಶ್ನಾವಳಿ)
1. ಉಪಸೀವ- ಹೇ ಶ್ರೇಷ್ಠರೇ ! ನಾನು ಒಬ್ಬೊಂಟಿಯಾಗಿದ್ದೇನೆ. ಇದು
ನಿಜಕ್ಕೂ ದೊಡ್ಡ ಪ್ರವಾಹವಾಗಿದೆ. ಸಹಾಯದ ಹೊರತು ಇದನ್ನು ನಾನು ದಾಟಲು ಸಾಮರ್ಥನಾಗಿಲ್ಲ. ಹೇ
ಸರ್ವವನ್ನು ಅರಿಯುವಂತಹ ಸಮಂತ ಚಕ್ಷುವಂತರೇ, ಯಾವುದಾದರೂ
ಅವಲಂಬನೆ ತಿಳಿಸಿ. ಅದರ ಸಹಾಯದಿಂದ ನಾನು ಈ ಪ್ರವಾಹದಿಂದ ಪಾರಾಗುವಂತಾಗಲಿ.
2. ಭಗವಾನರು- ಅಕಿಂಚಾಯತನವನ್ನು (ಏನೂ ಇಲ್ಲ ಎಂಬ ಸ್ಥಿತಿಯನ್ನು)
ನೋಡುತ್ತಾ, ಸ್ಮೃತಿವಂತನಾಗು. ಏನೂ ಇಲ್ಲ (ಶೂನ್ಯ) ಎಂಬುದನ್ನು
ಅವಲಂಬನೆ ಮಾಡುತ್ತಾ ಈ ಸಂಸಾರದ ಪ್ರವಾಹವನ್ನು ದಾಟಿಹೋಗು. ಕಾಮಗಳನ್ನು ತ್ಯಾಗಮಾಡಿ, ಸಂಶಯಗಳಿಂದ (ಕಥನಗಳಿಂದ) ವಿರತನಾಗು. ಅಹೋರಾತ್ರಿ ತಣ್ಹಾ ಕ್ಷಯದಲ್ಲಿ
ತೊಡಗುವಂತಾಗು.
3. ಉಪಸೀವ- ಯಾವಾಗ ಒಬ್ಬನು ಕಾಮಗಳಿಂದ ವಿರಕ್ತನಾಗುತ್ತಾನೋ, ಯಾರು ಅಕಿಂಚಾಯತನದ ಸಹಾಯದಿಂದ ಅನ್ಯವೆಲ್ಲವನ್ನು ತ್ಯಾಗ ಮಾಡಿದ್ದಾನೋ,
(7) ಸಂಜ್ಞಾ ವಿಮೋಕ್ಖಗಳಲ್ಲಿ ಪರಮ ವಿಮುಕ್ತವಾದ ಅಕಿಂಚಾಯತನದಲ್ಲಿ
ವಿಮುಕ್ತನಾಗಿರುತ್ತಾನೋ ಅಂತಹವನು ಅಲ್ಲಿಗೆ ಹೋಗದೆಯೇ ಇರಬಲ್ಲನೇ?
4. ಭಗವಾನರು- ಯಾರು ಸರ್ವ ಕಾಮನೆಗಳಿಂದ ವಿರಕ್ತನೋ, ಯಾರು ಅಕಿಂಚಾಯತನದ ಸಹಾಯದಿಂದ ಬೇರೆಲ್ಲವನ್ನು ತ್ಯಾಗ ಮಾಡಿರುವನೋ (7)
ಸಂಜ್ಞಾ ವಿಮೋಕ್ಖಗಳಲ್ಲೇ ಪರಮೋತ್ತಮವಾದ ಅಕಿಂಚಾಯತನದಲ್ಲಿ
ವಿಮುಕ್ತನಾಗಿರುವನೋ, ಅಂತಹವ ಅಲ್ಲಿಗೆ ಹೋಗದೆಯೂ ಇರಬಲ್ಲನು.
5. ಉಪಸೀವ- ಹೇ ಸಮಂತ ಚಕ್ಷುವಂತರೇ, ಆತನು ಅಲ್ಲಿಗೆ ಹೋಗದೆಯೇ ಅನೇಕ ವರ್ಷಗಳವರೆಗೆ ಇರಬಲ್ಲವನಾದರೆ, ಅಂತಹವನ ವಿಞ್ಞಾನವು (ಅರಿವು) ನಿರೋಧವಾಗುವುದೇ? ಹಾಗು ಅಲ್ಲಿಯೇ ಆತನು ವಿಮುಕ್ತನಾಗುವನೇ?
6. ಭಗವಾನರು- ಹೇಗೆ ಮಿನುಗುತ್ತಿರುವ ಜ್ವಾಲೆಯು ವಾಯು ವೇಗದಿಂದ
ಆರಿಹೋಗುವುದೋ, ಪುನಃ ಕಾಣುವುದಿಲ್ಲವೋ,
ಅದೇರೀತಿಯಲ್ಲಿ ಮುನಿಯು ನಾಮಕಾಯ (ಮನಸ್ಸಿನಿಂದ) ದಿಂದ ವಿಮುಕ್ತನಾಗಿ
ಆರಿಹೋಗುತ್ತಾನೆ. ಪುನಃ ಯಾವುದೇ ರೀತಿಯಲ್ಲೂ ಕಾಣುವುದಿಲ್ಲ.
7. ಉಪಸೀವ- ಈ ರೀತಿಯಲ್ಲಿ ಆರಿಹೋಗಿರುವವನು ಪುನಃ ಉದಯಿಸುವುದಿಲ್ಲವೇ
ಅಥವಾ ಉದಯಿಸಿ ಶಾಶ್ವತನಾಗುವನೇ, ನಿತ್ಯ
ಆರೋಗ್ಯವಾಗಿರುವನೇ ಅಥವಾ ಇಲ್ಲದೆಯೇ ಹೋಗುವನೇ? ಹೇ ಮುನಿಗಳೇ,
ತಾವೇ ಧಮ್ಮವನ್ನು ಸಾಕ್ಷಾತ್ಕರಿಸಿರುವುದರಿಂದಾಗಿ ತಾವೇ ವಿವರಿಸಿ,
ನನಗೆ ಸ್ಪಷ್ಟಪಡಿಸುವಂತಾಗಲಿ.
8. ಭಗವಾನರು- ಆರಿಹೋಗಿರುವುದರ ಬಗ್ಗೆ ಯಾವುದೇ ಪ್ರಮಾಣವಿಲ್ಲ
(ಅಳೆಯಲಾಗುವುದಿಲ್ಲ), ಯಾವುದರಿಂದ (ದೇಹ-ಮನಸ್ಸು)
ಆತನನ್ನು ತಿಳಿಸಲಾಗುತ್ತಿತ್ತೋ, ಅದ್ಯಾವುದೂ
ಅಲ್ಲಿಲ್ಲ. ಸರ್ವ ಧಮ್ಮಗಳು ಶಾಂತವಾದ ಮೇಲೆ ವಾದಪಥವೂ (ವಿವರಣೆ) ಶಾಂತವಾಗುತ್ತದೆ.
ಉಪಸೀವ ಮಾಣವ ಪ್ರಶ್ನಾವಳಿ
ಮುಗಿಯಿತು.
No comments:
Post a Comment