Saturday 17 October 2015

nanda manava pucca of suttanipata in kannada 7. ನಂದ ಮಾಣವ ಪುಚ್ಚ (ನಂದ ಮಾಣವನ ಪ್ರಶ್ನಾವಳಿ)

7. ನಂದ ಮಾಣವ ಪುಚ್ಚ (ನಂದ ಮಾಣವನ ಪ್ರಶ್ನಾವಳಿ)

1.            ನಂದ- ಲೋಕದಲ್ಲಿ ಮುನಿಗಳಿದ್ದಾರೆ ಎನ್ನುವರು, ಹಾಗಿದ್ದರೆ ತಮಗೆ ತಿಳಿದಂತೆ ಜ್ಞಾನದ ಕಾರಣದಿಂದಾಗಿ ಮುನಿ ಎನ್ನುವರೋ ಅಥವಾ ಜೀವನ ಶೈಲಿಯಿಂದ ಮುನಿ ಎನ್ನುವರೋ ಭಗವಾನರು ತಿಳಿಸಬೇಕು.
2.            ಭಗವಾನರು- ನಂದಾ ! ದೃಷ್ಟಿಕೋನಗಳಿಂದಾಗಲಿ, ಶ್ರುತಿಗಳಿಂದಾಗಲಿ (ಕಲಿಕೆ), ಜ್ಞಾನದಿಂದಾಗಲಿ ಕುಶಲರು ಮುನಿಯೆಂದು ಕರೆಯಲಾರರು. ಯಾರು ನಿಶಸ್ತ್ರರೋ, ದ್ವೇಷರಹಿತರೋ, ಶೋಕರಹಿತರೋ, ಪಾಪರಹಿತರೋ ಹಾಗು ಆಸೆಯಿಲ್ಲದವರೋ ಅವರನ್ನು ನಾನು ಮುನಿ ಎನ್ನುವೆನು.
3.            ನಂದ- ಯಾರೆಲ್ಲಾ ಶ್ರಮಣ ಬ್ರಾಹ್ಮಣರು ಇಲ್ಲಿರುವರೋ, ಅವರು ದಶರ್ಿಸುವುದರಿಂದಾಗಿಯು ಹಾಗು ಆಲಿಸುವಿಕೆಯಿಂದಲೂ ಶುದ್ಧಿಯಾಗುವುದು ಎನ್ನುವರು. ಶೀಲವ್ರತಗಳಿಂದಲೂ ಶುದ್ಧಿಯಾಗುವುದು ಎನ್ನುವರು. ಹೀಗೆ ಅನೇಕ ವಿಧವಾಗಿ ಶುದ್ಧಿಯಾಗುವುದು ಎನ್ನುವರು. ಹೇ ಪೂಜ್ಯರೇ, ಈ ರೀತಿಯಾದ ಆಚರಣೆಗಳಿಂದಾಗಿಯೇ ಅವರೆಲ್ಲಾ ಜನ್ಮ ಹಾಗು ಜರಾದಿಂದ ಮುಕ್ತರಾದರೆ? ಭಗವಾನ್ ತಮ್ಮಲ್ಲಿ ವಿನಂತಿಸಿಕೊಂಡು ಕೇಳುತ್ತಿರುವೆ, ಉತ್ತರಿಸಿ.
4.            ಭಗವಾನರು- ಯಾವೆಲ್ಲಾ ಶ್ರಮಣ ಬ್ರಾಹ್ಮಣರು ಇದ್ದಾರೆಯೋ, ಯಾರೆಲ್ಲಾ ನೋಡುವುದರಿಂದ (ದಶರ್ಿಸುವುದರಿಂದ) ಹಾಗು ಕೇಳುವುದರಿಂದ ಶುದ್ಧಿಯಾಗುವುದೆಂದು ಹೇಳುತ್ತಾರೋ, ಹಾಗು ಅನೇಕ ಪ್ರಕಾರದಿಂದ ಶುದ್ಧಿಯಾಗುವುದೆಂದು ಹೇಳುತ್ತಾರೋ, ಅವರು ಕೆಲವು ಹಂತದಲ್ಲಿ ಸಂಯಮಿಗಳಾಗಿದ್ದರೂ ಸಹಾ ಅವರು ಜನ್ಮ ಹಾಗು ಜರಾದಿಂದ ದಾಟಿಹೋಗಿಲ್ಲವೆಂದು ನಾನು ಹೇಳುತ್ತಿದ್ದೇನೆ.
5.            ನಂದ- ಯಾವ ಹಲವಾರು ಶ್ರಮಣ ಬ್ರಾಹ್ಮಣರಿದ್ದಾರೋ, ಅವರಲ್ಲಿ ಕೆಲವರು ದೃಷ್ಟಿಗಳಿಂದ, ಆಲಿಸುವುದರಿಂದಾಗಿ ಶುದ್ಧವೆಂದು ಹೇಳುತ್ತಿದ್ದಾರೆ. ಕೆಲವರು ಶೀಲಾದಿವ್ರತಗಳಿಂದ (ಮೂಢಾಚರಣೆ) ಶುದ್ಧಿಯಾಗುವುದೆಂದು ಹೇಳುತ್ತಿದ್ದಾರೆ ಹಲವರು ಅನೇಕ ವಿಧಗಳಿಂದ ಶುದ್ಧಿಯಾಗುವುದೆಂದು ಹೇಳುತ್ತಿದ್ದಾರೆ. ಆದರೆ ಓ ಮುನಿಗಳೇ! ತಾವು ಅವರೆಲ್ಲಾ ಜನ್ಮ ಹಾಗು ಜರಾದ ಪ್ರವಾಹದಿಂದ ಮುಕ್ತಿಯಾಗಿಲ್ಲ ಎಂದು ಹೇಳುತ್ತಿದ್ದೀರಿ. ಹಾಗಿದ್ದರೆ ಹೇ ಪರಮಪೂಜ್ಯರೇ, ಈ ದೇವಮನುಷ್ಯ ಲೋಕದಲ್ಲಿ ಯಾರು ಜನ್ಮ ಜರಾಗಳನ್ನು ದಾಟಿದ್ದಾರೆ. ಹೇ ಭಗವಾನ್, ನನಗೆ ದಯವಿಟ್ಟು ಉತ್ತರಿಸಿ, ನಾನು ಕೇಳುತ್ತಿದ್ದೇನೆ.
6.            ಭಗವಾನರು- ನಾನು ಸರ್ವ ಶ್ರಮಣ ಬ್ರಾಹ್ಮಣರಿಗೆ ಜನ್ಮ ಹಾಗು ಜರಾದಿಂದ ಕೂಡಿದ್ದಾರೆ ಎಂದು ಹೇಳುವುದಿಲ್ಲ. ಆದರೆ ದೃಷ್ಟಿಸುವುದರಿಂದಾಗಿ, ಕೇಳುವುದರಿಂದಾಗಿ, ಮೂಢಾಚರಣೆಗಳನ್ನು ಯಾರೆಲ್ಲಾ ತ್ಯಾಗ ಮಾಡಿದ್ದಾರೋ, ಸರ್ವ ರೂಪಗಳನ್ನು ದಾಟಿರುವರೋ, ತೃಷ್ಣೆಯೇ ದುಃಖದ ಪ್ರತಿರೂಪವೆಂದು ಅರಿತು ಆಸವರಹಿತರಾಗಿರುವರೋ ಅಂತಹ ಶ್ರಮಣ ಬ್ರಾಹ್ಮಣರನ್ನು ನಾನು ಪ್ರವಾಹವನ್ನು ದಾಟಿದ್ದಾರೆ ಎನ್ನುತ್ತೇನೆ.
7.            ನಂದ- ಮಹಷರ್ಿಯೇ, ಈ ಮಾತಿಗೆ ನಾನು ಅಭಿನಂದನೆ ಮಾಡುವೆನು. ಹೇ ಗೋತಮರೇ, ತಾವು ನಿಬ್ಬಾಣವನ್ನು ಅತಿ ಸುಂದರವಾಗಿ ನಿರೂಪಿಸಿದ್ದೀರಿ. ಯಾರೆಲ್ಲಾ ಇಲ್ಲಿ ದೃಷ್ಟಿಸುವುದರಿಂದ, ಆಲಿಸುವುದರಿಂದ ಎಲ್ಲಾ ರೀತಿಯ ಮೌಡ್ಯದ ಆಚರಣೆಗಳನ್ನು ತ್ಯಾಗ ಮಾಡಿದ್ದಾರೋ, ಅಂತಹ ಅನೇಕ ರೂಪಗಳನ್ನು ತ್ಯಾಗ ಮಾಡಿರುವರೋ, ಅವರು ತೃಷ್ಣೆಯನ್ನು ಅರ್ಥಮಾಡಿಕೊಂಡು ಆಸವರಹಿತರಾಗಿರುವರೋ ಅವರೇ ಜನ್ಮದ ಪ್ರವಾಹವನ್ನು ದಾಟಿದ್ದಾರೆ ಇದು ಅತಿ ಸುಂದರವಾದ ನಿರೂಪಣೆಯಾಗಿದೆ.

ಇಲ್ಲಿಗೆ ನಂದ ಮಾಣವ ಪ್ರಶ್ನಾವಳಿ ಮುಗಿಯಿತು.

No comments:

Post a Comment