Friday 29 May 2015

choolaviyooha sutta in kannada 12. ಚೂಳವಿಯೂಹ ಸುತ್ತ

12. ಚೂಳವಿಯೂಹ ಸುತ್ತ
(ಸತ್ಯ ಒಂದೇ ಆಗಿದೆ. ವಿವಾದದಲ್ಲಿ ಬೀಳುವುದು ವ್ಯರ್ಥವಾಗಿದೆ)

1.            ದೇವತಾ - ಜನರು ತಮ್ಮ ತಮ್ಮ ದೃಷ್ಟಿಯಲ್ಲಿ ದೃಢವಾಗಿ ಗ್ರಹಣ ಮಾಡಿ ನಾವು ಕುಶಲರು ಎಂದು ಹೇಳಿ ವಿವಾದ ಮಾಡುವರು ಮತ್ತು ಹೀಗೂ ಹೇಳುವರು. ಏನೆಂದರೆ ಯಾರು ಹೀಗೆ ಅರಿತಿರುವರೋ, ಆತನೇ ಜ್ಞಾನಿ ಹಾಗು ಧರ್ಮದ ಜ್ಞಾತ ಮತ್ತು ಯಾರು ಇದರ ವಿರೋಧ ಮಾಡುವನೋ ಆತನು ಜ್ಞಾನಿಯೇ ಅಲ್ಲ.
2.            ಹೀಗೆಯೇ ಹಠದಲ್ಲಿ ಬಿದ್ದು ವಿವಾದ ಮಾಡುವರು ಮತ್ತು ಪರರು ಮೂರ್ಖರೆಂದು ಮತ್ತು ಅಕುಶಲರೆಂದು ಹೇಳುವರು. ಇದರಲ್ಲಿ ಸತ್ಯವಾದ ಮತ (ಧರ್ಮ) ಯಾವುದು? ಸರ್ವರೂ ತಮ್ಮನ್ನು ಕುಶಲರೆಂದು ಹೇಳುವರು.
3.            ಭಗವಾನರು - ಯಾರು ಪರರ ಧರ್ಮಕ್ಕೆ ಸ್ಥಾನ ನೀಡುವುದಿಲ್ಲವೋ ಆತನು ಮೂರ್ಖ, ಪಶು ಮತ್ತು ಪ್ರಜ್ಞಾವಿಹೀನನಾಗುತ್ತಾನೆ. ಸರ್ವರೂ ಮೂರ್ಖರು ಮತ್ತು ಪ್ರಜ್ಞಾವಿಹೀನರಾಗಿದ್ದಾರೆ. ಹೀಗೆ ಹೇಳುವ ಇವರೆಲ್ಲರೂ ದೃಷ್ಟಿಗಳ ಜಾಲದಲ್ಲಿ ಬಿದ್ದಿರುವರು.
4.            ಒಂದುವೇಳೆ ಜನರ ದೃಷ್ಟಿಯು ಪವಿತ್ರವಾಗಿದ್ದರೆ ಅವರು ಶುದ್ಧರು, ಪ್ರಜ್ಞಾವಂತರು, ಕುಶಲರು ಮತ್ತು ಮತಿವಂತರಾಗುತ್ತಿದ್ದರು. ಅವರಲ್ಲಿ ಯಾರು ಪ್ರಜ್ಞಾವಿಹೀನನಾಗುತ್ತಿರಲಿಲ್ಲ. ಅವರ ದೃಷ್ಟಿಯು ಪರಿಪೂರ್ಣವಾಗಿರುತ್ತದೆ.
5.            ನಾನು ಇದೇ ಸತ್ಯ ಎಂದು ಹೇಳುವುದಿಲ್ಲ. ಅಂತಹ ವಿಷಯ ಎತ್ತಿ ಜನರು ಪರರನ್ನು ಮೂರ್ಖರೆನ್ನುವರು. ಅವರು ತಮ್ಮ ತಮ್ಮ ದೃಷ್ಟಿಯನ್ನು ಸತ್ಯ ಸಿದ್ಧ ಮಾಡುವರು ಮತ್ತು ಪರರನ್ನು ಮೂರ್ಖರೆನ್ನುವರು.
6.            ದೇವತಾ - ಕೆಲವರು ಯಾವುದನ್ನು ಸತ್ಯ ಎನ್ನುವರೋ, ಪರರು ಅದನ್ನೇ ಪ್ರಲಾಪ ಮತ್ತು ಅಸತ್ಯವೆನ್ನುವರು.  ಈ ರೀತಿಯಿಂದಲೂ ಹಠ ಹಿಡಿದು ವಿವಾದ ಮಾಡುವರು. ಸಮಣರು ಒಂದೇ ರೀತಿಯಾದ ವಿಷಯವನ್ನು ಏಕೆ ತಿಳಿಸುವುದಿಲ್ಲ?
7.            ಭಗವಾನರು - ಸತ್ಯವು ಒಂದೇ ಆಗಿದೆ, ಬೇರೆಯದಲ್ಲ (ದ್ವಿತೀಯವಲ್ಲ) ಯಾವ ವಿಷಯದಲ್ಲಿ ವ್ಯಕ್ತಿ ವ್ಯಕ್ತಿಗಳು ವಿವಾದಿತರಾಗಿರುತ್ತಾರೋ ಅವರೆಲ್ಲರೂ ಸ್ವಯಂ ನಾನಾ ಸತ್ಯಗಳ ಪ್ರಶಂಸೆ ಮಾಡುತ್ತಾರೆ. ಆದ್ದರಿಂದಲೇ ಸಮಣರು ಒಂದೇ ವಿಷಯ ತಿಳಿಸುವುದಿಲ್ಲ.
8.            ದೇವತಾ - ಏತಕ್ಕಾಗಿ ಜನರು ನಾನಾ ಸತ್ಯಗಳನ್ನು ತಿಳಿಸುವರು? ಅವರು ತಮ್ಮನ್ನು ಕುಶಲರೆಂದು ಹೇಳಿ ವಿವಾದ ಮಾಡುವರು. ಏನು ಕೇಳಿರುವ ಸತ್ಯ ನಾನಾ ಪ್ರಕಾರವುಳ್ಳದ್ದು ಹಾಗು ಬಹುವಿದೆಯೋ? ಅಥವಾ ಅವರು ತರ್ಕದ ಅನುಸಾರವಾಗಿ ಹೇಳುವರೋ?
9.            ಭಗವಾನರು - ಸಂಜ್ಞೆಯ ಅತಿರಿಕ್ತವಾಗಿ ಲೋಕದಲ್ಲಿ ಬಹಳ ಹಾಗು ವಿಭಿನ್ನ ಪ್ರಕಾರದ ಸತ್ಯಗಳಿವೆ ಹಾಗು ನಿತ್ಯವಾಗಿಲ್ಲ. ದೃಷ್ಟಿಗಳಲ್ಲಿ ತರ್ಕವು ಸೇರಿಸಿ ಸತ್ಯ ಹಾಗು ಅಸತ್ಯ ಈ ಎರಡು ಧರ್ಮಗಳು ಹೇಳುವರು.
10.          ದೃಷ್ಟಿ, ಶೃತಿ, ಶೀಲವ್ರತ, ವಿಚಾರತೆ - ಇವುಗಳ ಕಾರಣ ಬೇರೆಯವರ ಅನಾದರ ಮಾಡುತ್ತಾ ಪ್ರಸನ್ನತೆಯಿಂದ ಯಾವುದೋ ನಿರ್ಣಯದಲ್ಲಿ ಸ್ಥಿತರಾಗಿ ಜನರು ಬೇರೆಯವರನ್ನು ಮುರ್ಖರೆಂದು ಮತ್ತು ಅಕುಶಲರೆಂದು ಹೇಳುವರು.
11.          ವ್ಯಕ್ತಿ ಯಾವ ಕಾರಣದಿಂದ ಪರರನ್ನು ಮೂರ್ಖ ಎಂದು ಹೇಳುವನೋ ಅದರಿಂದಲೇ ತನ್ನನ್ನು ಕುಶಲ ಎಂದು ತೋರಿಸಿಕೊಳ್ಳುವನು. ತನ್ನನ್ನು ಕುಶಲ ಎಂದು ತೋರಿಸುತ್ತಲೇ ಆತನು ಪರರನ್ನು ಅನಾಧರಣೆ ಮಾಡುತ್ತಾನೆ.
12.          ಆ ವ್ಯಕ್ತಿಯು ತನ್ನ ಆ ದೃಷ್ಟಿಯನ್ನು ಪೂರ್ಣ ಎಂದು ನಂಬುತ್ತಾನೆ ಮತ್ತು ಆತನು ಅಹಂಕಾರದಿಂದ ಪರಿಪೂರ್ಣ ಅಭಿಮಾನಿಯಾಗುತ್ತಾನೆ. ಆತನು ತನ್ನನ್ನು ಜ್ಞಾನಿ ಎಂದು ಭಾವಿಸುವನು. ಏಕೆಂದರೆ ಆತನ ದೃಷ್ಟಿಯೇ ಆ ರೀತಿ ಇರುತ್ತದೆ.
13.          ಒಂದುವೇಳೆ ಹೇಳುವುದರಿಂದಲೇ ಪರರನ್ನು ಹೀನರನ್ನಾಗಿ ಮಾಡುವುದು ಸಾಧ್ಯವಾಗಿದ್ದರೆ ಆತನು ಸ್ವಯಂ ಸಹಾ ಪ್ರಜ್ಞಾವಿಹೀನನಾಗುತ್ತಿದ್ದನು. ಒಂದುವೇಳೆ ತಾನು ಹೇಳುವುದರಿಂದಲೇ ಯಾರಾದರೂ ಜ್ಞಾನಿ ಹಾಗು ಧೀರರು ಆಗುವ ಹಾಗಿದ್ದರೆ, ಶ್ರಮಣರಲ್ಲಿ ಯಾರೂ ಸಹಾ ಮೂರ್ಖರಾಗುತ್ತಿರಲಿಲ್ಲ.
14.          ಯಾರು ಇದರ ವಿಪರೀತವಾಗಿ ಪರದೃಷ್ಟಿ ಹೇಳುವರೋ ಮತ್ತು ಯಾರು ಶುದ್ಧಿ ಮಾರ್ಗದಿಂದ ವಿಚಲಿತರಾಗಿದ್ದರೋ ಅವರು ಅಕೇವಲಿಗಳು (ಅಜ್ಞಾನಿ). ಹೀಗೆ ಪ್ರಾಯಶಃ ತಾಕರ್ಿಕ (ಅನ್ಯ ಮತದವರು) ಹೇಳುವರು. ಏಕೆಂದರೆ ಅವರು ತಮ್ಮ ದೃಷ್ಟಿರಾಗದಲ್ಲಿ ರತರಾಗಿದ್ದಾರೆ.
15.          ಶುದ್ಧಿ ಇಲ್ಲಿ ಮಾತ್ರವಿದೆ. ಪರಧರ್ಮದಲ್ಲಿ ಶುದ್ಧಿಯಿಲ್ಲ - ಹೀಗೆ ಪ್ರಾಯಶಃ ತೀರ್ಥಕರು ತಮ್ಮ ದೃಷ್ಟಿಯಲ್ಲಿ ಸ್ಥಿತರಾಗಲಿ ಮತ್ತು ದೃಢರಾಗಲೆಂದು ಹೇಳುವರು.
16.          ಯಾರು ತಮ್ಮ ದೃಷ್ಟಿಗೆ ದೃಢತಾಪೂರ್ವಕವಾಗಿ ಗ್ರಹಣ ಮಾಡಿ ಪರರನ್ನು ಮೂರ್ಖರನ್ನಾಗಿ ಹೇಳುವನೋ, ಪರಧರ್ಮವನ್ನು ಮೂರ್ಖ ಹಾಗು ಅಶುದ್ಧಿ ಮಾಡುವವ. ಆತನು ಸ್ವಯಂ ಕಲಹಕ್ಕೆ ಆಹ್ವಾನ ನೀಡುತ್ತಾನೆ.
                17.          ಆತನು ತನ್ನ ದೃಷ್ಟಿಯಲ್ಲಿ ಸ್ಥಿತನಾಗಿ, ಸ್ವಯಂ (ಪರರ ಶಾಸ್ತರಿಗೆ) ತುಲನೆ ಮಾಡಿ ಲೋಕದಲ್ಲಿ ವಿವಾದ ಮಾಡುವನು. ಆದರೆ ಜ್ಞಾನಿ ಪುರುಷರು ಸರ್ವ ದೃಷ್ಟಿಗಳನ್ನು ತ್ಯಜಿಸಿ ಲೋಕದಲ್ಲಿ ಕಲಹ ಉಂಟುಮಾಡುವುದಿಲ್ಲ.

ಇಲ್ಲಿಗೆ ಚೂಳವಿಯೂಹ ಸುತ್ತ ಮುಗಿಯಿತು.

No comments:

Post a Comment